Thursday, November 29, 2018

ಇಂದಿನ ಇತಿಹಾಸ History Today ನವೆಂಬರ್ ೨೯


ಇಂದಿನ ಇತಿಹಾಸ History Today ನವೆಂಬರ್ ೨೯

೨೦೧೮: ಶ್ರೀಹರಿಕೋಟಾ: ಭಾರತೀಯ ಬಾಹ್ಯಾ ಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಮತ್ತೊಂದು ಮೈಲಿಗಲ್ಲು ಸಾಧಿಸಿದ್ದು, ಹೈಪರ್ ಸ್ಪೆಕ್ಟ್ರಲ್ ಇಮೇಜಿಂಗ್ (ಹೈಸಿಸ್) ಒಳಗೊಂಡ ಒಟ್ಟು ೩೧ ಉಪಗ್ರಹಗಳನ್ನು ಗುರುವಾರ ಶ್ರೀಹರಿಕೋಟಾದಿಂದ ಯಶ ಸ್ವಿಯಾಗಿ ಉಡಾವಣೆ ಮಾಡಿತು. ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಬೆಳಗ್ಗೆ .೫೮ರಲ್ಲಿ ರಾಕೆಟನ್ನು ನಭಕ್ಕೆ ಯಶಸ್ವಿಯಾಗಿ ಉಡ್ಡಯನ ಮಾಡಲಾ ಯಿತು. ಪಿಎಸ್ಎಲ್ವಿ-ಸಿ೪೩ ರಾಕೆಟ್ ಉಪ ಗ್ರಹ ಹೈಸಿಸ್ ಮತ್ತು ೩೦ ವಿದೇಶಿ ಪುಟ್ಟ ಉಪಗ್ರಹಗಳನ್ನು ಹೊತ್ತು ಬೆಂಕಿ ಕಾರುತ್ತ ನಭಕ್ಕೆ ಹಾರಿತು. ಭೂಮಿಯ ಮೇಲ್ಮೈನ ಅಧ್ಯಯನ, ಸಂವಹನ ಸೇವೆ, ಇಂಟರ್ನೆಟ್ ಆಫ್ ಥಿಂಗ್ಸ್ (ಐಒಟಿ), ವೈಜ್ಞಾನಿಕ ಸಂಶೋಧನೆ ಸೇರಿ ಮಾಹಿತಿ ಕ್ರಾಂತಿಯನ್ನು ಸೃಷ್ಟಿಸಬಲ್ಲ ಉಪಗ್ರಹಗಳು ಇವಾಗಿವೆ. ಭೂ ವಿಚಕ್ಷಣಾ (ಹೈಸಿಸ್) ಉಪಗ್ರಹ ೩೮೦ ಕೆ.ಜಿ.ತೂಕ ಹೊಂದಿದೆ. ಅಮೆರಿಕದ ೨೩ ಉಪಗ್ರಹ ಸೇರಿ ಸ್ಪೇನ್, ಕೆನಡಾ, ಫಿನ್ಲ್ಯಾಂಡ್, ಮಲೇಶ್ಯಾ,, ಆಸ್ಟ್ರೇಲಿಯಾ, ಕೊಲಂಬಿಯಾ, ನೆದರ್ಲೆಂಡ್ನ ತಲಾ ಒಂದು ಉಪಗ್ರಹ ಗಳು ಇದರಲ್ಲಿ ಸೇರಿವೆ. ಪಿಎಸ್ಎಲ್ವಿ, ೩೧ ಉಪಗ್ರಹ ಗಳನ್ನು ಪ್ರತ್ಯೇಕ ಕಕ್ಷೆಗಳಿಗೆ ಸೇರಿಸಲಿದೆ. ಮೊದಲು ಭೂಮಿಯಿಂದ ೬೩೬ ಕಿ.ಮೀ ಮೇಲೆ ಭಾರತದ ಸ್ಯಾಟ್ಲೈಟ್ ಕಕ್ಷೆಗೆ ಸೇರಿಸಲಾಗುತ್ತದೆ. ನಂತರ, ರಾಕೆಟ್ನ ಕೊನೆಯ ಹಂತವನ್ನು ಎರಡು ಬಾರಿ ರೀ- ಇಗ್ನೈಟ್ ಮಾಡಿ, ೫೦೪ ಕಿ.ಮೀಗೆ ಕೆಳಗೆ ಬರುವಂತೆ ಮಾಡಿ ಉಳಿದ ಸಣ್ಣ ಉಪ ಗ್ರಹಗಳನ್ನ ಕಕ್ಷೆಗೆ ಸೇರಿಸಲಾಗುತ್ತದೆ. ಇಡೀ ಪ್ರಕ್ರಿಯೆಗೆ ೧೧೨ ನಿಮಿ?ಗಳು ಬೇಕಾ ಗುತ್ತದೆ. ಹೈಸಿಸ್, ಇಸ್ರೋ ಅಭಿವೃದ್ಧಿಪಡಿಸಿರುವ ಅರ್ತ್ ಅಬ್ಸರ್ವೇ?ನ್ ಉಪಗ್ರಹವಾಗಿದೆ. ಇದು ಪಿಎಸ್ಎಲ್ವಿ-ಸಿ೪೩ ಮಿ?ನ್ನ ಪ್ರಾಥಮಿಕ ಉಪಗ್ರಹ. ಉಪಗ್ರಹದ ಮಿ?ನ್ ಅವಧಿ ?ಗಳು ಎಂದು ಇಸ್ರೋ ಹೇಳಿತು.


೨೦೧೮: ನವದೆಹಲಿ: ಕೇಂದ್ರೀಯ ತನಿಖಾ ದಳ (ಸಿಬಿಐ) ನಿರ್ದೇಶಕರನ್ನು ಆಯ್ಕೆ ಮಾಡುವ ಅಂತಿಮ ಪ್ರಾಧಿಕಾರಿ ಕೇಂದ್ರ ಸರ್ಕಾರವೇ ಹೊರತು ಆಯ್ಕೆ ಸಮಿತಿ ಅಲ್ಲ ಎಂದು ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಅವರು ಸುಪ್ರೀಂಕೋರ್ಟಿಗೆ ತಿಳಿಸಿದರು. ಕಡ್ಡಾಯ ರಜೆಯ ಮೇಲೆ ಕಳುಹಿಸಲಾಗಿರುವ ಸಿಬಿಐ ಮುಖ್ಯಸ್ಥ ಅಲೋಕ್ ವರ್ಮ ಅವರು ತಮ್ಮನ್ನು ಅಧಿಕಾರ ಮುಕ್ತಗೊಳಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿ ಮತ್ತು ಇತರರು ಇದೇ ವಿಷಯಕ್ಕೆ ಸಂಬಂಧಿಸಿದಂತೆ ಸಲ್ಲಿಸಿದ ಅರ್ಜಿಗಳ ವಿಚಾರಣೆ ವೇಳೆಯಲ್ಲಿ ಅಟಾರ್ನಿ ಜನರಲ್ ಅವರು ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ನೇತೃತ್ವದ ಸುಪ್ರೀಂಕೋರ್ಟ್ ಪೀಠಕ್ಕೆ  ವಿಚಾರವನ್ನು ಹೇಳಿದರು. ಆಯ್ಕೆ ಸಮಿತಿಯು ಸಿಬಿಐ ನಿರ್ದೇಶಕ ಸ್ಥಾನಕ್ಕೆ ನೇಮಕಮಾಡಲು ಅಭ್ಯರ್ಥಿಗಳ ಸಮೂಹವೊಂದನ್ನು ಆಯ್ಕೆ ಮಾಡುತ್ತದೆ ಮತ್ತು ಅದನ್ನು ಸರ್ಕಾರದ ಮುಂದೆ ಇಡುತ್ತದೆ. ಬಳಿಕ ಹೆಸರುಗಳಿಂದ ಸಮರ್ಪಕ ಅಭ್ಯರ್ಥಿಯನ್ನು ನೇಮಕ ಮಾಡುವುದು ಸರ್ಕಾರದ್ದೇ ಅಧಿಕಾರ ಎಂದು ವೇಣುಗೋಪಾಲ್ ನುಡಿದರು. ಅಟಾರ್ನಿ ಜನರಲ್ ಅವರ ಅಹವಾಲು ಆಲಿಕೆಯ ಬಳಿಕ ಪ್ರಕರಣವನ್ನು ಡಿಸೆಂಬರ್ ೫ಕ್ಕೆ ಮುಂದೂಡಲಾಯಿತು. ಸಿಬಿಐ ನಿರ್ದೇಶಕ ಅಲೋಕ್ ವರ್ಮ ಮತ್ತು ಅವರ ಸಹಾಯಕ ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನ ಅವರನ್ನು ಅಕ್ಟೋಬರ್ ೨೩ರಂದು ಮಧ್ಯರಾತ್ರಿಯ ಆದೇಶದ ಮೇರೆಗೆ ಅಧಿಕಾರ ಮುಕ್ತರನ್ನಾಗಿ ಮಾಡಿ ಕಡ್ಡಾಯ ರಜೆಯಲ್ಲಿ ಕಳುಹಿಸಲಾಗಿತ್ತು. ಭ್ರಷ್ಟಾಚಾರ ಆಪಾದನೆಗಳಿಗೆ ಸಂಬಂಧಿಸಿದಂತೆ ಸಿಬಿಐಯ ಉಭಯ ಅಧಿಕಾರಿಗಳ ಆಂತರಿಕ ಜಗಳ ತೀವ್ರಗೊಂಡು, ಕೊನೆಗೆ ಇಬ್ಬರ ಅಧಿಕಾರ ಚ್ಯುತಿಯೊಂದಿಗೆ ಅದು ಪರ್ಯವಸಾನಗೊಂಡಿತ್ತುಸಿಬಿಐ ನಿರ್ದೇಶಕರನ್ನು ರೀತಿಯಾಗಿ ಅಧಿಕಾರ- ಜವಾಬ್ದಾರಿ ಮುಕ್ತಗೊಳಿಸಿದ ಕ್ರಮ ಸಿಂಧುವೇ ಎಂಬುದಾಗಿ ಪ್ರಶ್ನಿಸಿ ಸಲ್ಲಿಸಲಾದ ವಿವಿಧ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್ ನಡೆಸಿತುಅಧಿಕಾರಚ್ಯುತ ಸಿಬಿಐ ನಿರ್ದೇಶಕ ಅಲೋಕ್ ವರ್ಮ, ಲಾಭರಹಿತ ಸರ್ಕಾರೇತರ ಸಂಘಟನೆ ಕಾಮನ್ ಕಾಸ್ ಮತ್ತು ಲೋಕಸಭೆಯ  ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಅರ್ಜಿಗಳ ಮೂಲಕ ಕೇಂದ್ರ ಸರ್ಕಾರದ ಕ್ರಮವನ್ನು ಪ್ರಶ್ನಿಸಿದ್ದರು. ವರ್ಮ ಅವರನ್ನು ಪ್ರತಿನಿಧಿಸಿದ ವಕೀಲ ಫಾಲಿ ಎಸ್. ನಾರಿಮನ್ ಅವರು ಸರ್ಕಾರವು ನೇಮಕಾತಿಗೆ ಒಪ್ಪಿಗೆ ನೀಡಿದ್ದ ಉನ್ನತಾಧಿಕಾರ ಸಮಿತಿಯ ಮಂಜೂರಾತಿ ಪಡೆಯದೆ ಅಲೋಕ್ ವರ್ಮ ಅವರನ್ನು ವರ್ಗಾವಣೆ ಮಾಡಬಾರದಾಗಿತ್ತು ಎಂದು ವಾದಿಸಿದರು. ಸಮಿತಿಯ ಸಭೆ ಕರೆಯದೆ ಸರ್ಕಾರವು ಅಲೋಕ್ ವರ್ಮ ಅವರನ್ನು ಸರ್ಕಾರ ಹೇಗೆ ಅಧಿಕಾರ ಮುಕ್ತಗೊಳಿಸಲು ಸಾಧ್ಯ? ಇದಕ್ಕೆ ಅವಕಾಶ ನೀಡಿದರೆ, ಸಿಬಿಐಯ ಸ್ವಾಯತ್ತತೆ ಮತ್ತು ಸ್ವಾತಂತ್ರ್ಯದ ಗತಿ ಏನಾಗುತ್ತದೆ?’ ಎಂದು ನಾರಿಮನ್ ನ್ಯಾಯಾಲಯದಲ್ಲಿ ವಾದಿಸಿದರು. ಪೀಠದ ಇನ್ನೊಬ್ಬ ನ್ಯಾಯಮೂರ್ತಿ ಕೆ.ಎಂ. ಜೋಸೆಫ್ ಅವರುಸಿಬಿಐ ಮುಖ್ಯಸ್ಥರು ಲಂಚ ತೆಗೆದುಕೊಳ್ಳುವಾಗ ಮಾಲು ಸಮೇತ (ರೆಡ್ ಹ್ಯಾಂಡ್ ಆಗಿ) ಸಿಕ್ಕಿಬಿದ್ದರೆ, ಅವರ ವಿರುದ್ಧ ಕ್ರಮ ಕೈಗೊಳ್ಳಲು ಸಮಿತಿಯನ್ನು ಸಂಪರ್ಕಿಸಬೇಕೆ?’ ಎಂದು ಪ್ರಶ್ನಿಸಿದರು. ಇದಕ್ಕೆ ನಾರಿಮನ್ ಅವರುಇಂತಹ ಸಂದರ್ಭದಲ್ಲಿ ಕೂಡಾ ಸಮಿತಿಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಮತ್ತು ನ್ಯಾಯಾಲಯ ಮಾತ್ರವೇ ನಿರ್ದೇಶಕನ ಹಣೆಬರಹವನ್ನು ನಿರ್ಧರಿಸಬಹುದು ಎಂದು ಉತ್ತರಿಸಿದರು. ಕಾಮನ್ ಕಾಸ್ ಸಂಘಟನೆಯನ್ನು ಪ್ರತಿನಿಧಿಸಿದ ದುಷ್ಯಂತ ದವೆ ಅವರು ನೇಮಕಾತಿಗಳ ಸಮಿತಿಯ ಜೊತೆ ಸಮಾಲೋಚಿಸಲದೆ ವರ್ಗಾವಣೆ ಮಾಡಬಾರದಾಗಿತ್ತು ಎಂದು ವಾದಿಸಿದರು. ಆದೇಶವು ಕಾನೂನಿನ ಆಳ್ವಿಕೆಗೆ ವಿರುದ್ದವಾದುದು. ಇದೇ ಕಾರಣಕ್ಕಾಗಿಯೇ ಮಧ್ಯಂತರ ನಿರ್ದೇಶಕರಾಗಿ ಎಂ. ನಾಗೇಶ್ವರ ರಾವ್ ಅವರ ನೇಮಕಾತಿಯನ್ನೂ ರದ್ದು ಪಡಿಸಬೇಕು ಎಂದು ದುಷ್ಯಂತ ದವೆ ವಾದಿಸಿದರು.  ’ ವಿಷಯವು ಸಮಿತಿಗೆ ಹೋಗಬೇಕು. ಬಳಿಕ ಸಮಿತಿಯು ದಾಖಲೆಗಳನ್ನು ಆಧರಿಸಿ ನಿರ್ಧಾರ ಕೈಗೊಳ್ಳಬಹುದು ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರತಿನಿಧಿಸಿದ ವಕೀಲ ಕಪಿಲ್ ಸಿಬಲ್ ಹೇಳಿದರು. ಕೇಂದ್ರೀಯ ಜಾಗೃತಾ ಆಯೋಗದ (ಸಿವಿಸಿ) ಮೇಲ್ವಿಚಾರಣೆಯ ವ್ಯಾಪ್ತಿ ಸೀಮಿತವಾದದ್ದು. ಅವರು ಇದನ್ನು ಸಿಬಿಐ ನಿರ್ದೇಶಕರನ್ನು ಕಿತ್ತು ಹಾಕಲು ಅಥವಾ ಅವರ ಕಚೇರಿಯನ್ನು ವಶ ಪಡಿಸಿಕೊಳ್ಳಲು ಬಳಸುವಂತಿಲ್ಲ ಎಂದು ಸಿಬಲ್ ನುಡಿದರುಸಿಬಿಐ ಮುಖ್ಯಸ್ಥರನ್ನು ಆಯ್ಕೆ ಮಾಡುವ  ತ್ರಿಸದಸ್ಯ ಆಯ್ಕೆ ಸಮಿತಿಯ ಸದಸ್ಯರಲ್ಲಿ ಒಬ್ಬರಾಗಿರುವ ಹಿನ್ನೆಲೆಯಲ್ಲಿ ಅರ್ಜಿ ಸಲ್ಲಿಸಿದ ಕಾಂಗ್ರೆಸ್ ನಾಯಕ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ಆದೇಶ ನೀಡುವ ಮುನ್ನ ತಮ್ಮ ವಾದವನ್ನು ಆಲಿಸಬೇಕು ಎಂದು ಮನವಿ ಮಾಡಿದ್ದರು. ಸಿಬಿಐ ನಿರ್ದೇಶಕರನ್ನು ಪ್ರಧಾನಿ, ಮುಖ್ಯ ನ್ಯಾಯಮೂರ್ತಿ ಮತ್ತು ವಿರೋಧ ಪಕ್ಷ ನಾಯಕರು ಸದಸ್ಯರಾಗಿರುವ ತ್ರಿಸದಸ್ಯ ಆಯ್ಕೆ ಸಮಿತಿಯು ನೇಮಕ ಮಾಡುತ್ತದೆ. ವಿಚಾರಣೆಯ ಪ್ರಾರಂಭದಲ್ಲೇ ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನ ವಿರುದ್ಧದ ತನಿಖೆಯಲ್ಲಿ ಎನ್ ಎಸ್ ಅಜಿತ್ ದೋವಲ್ ಮತ್ತು ಕೇಂದ್ರ ಸಚಿವ ಹರಿಭಾಯಿ ಪಾರ್ಥಿಭಾಯಿ ಚೌಧರಿ ಹಸ್ತಕ್ಷೇಪ ಮಾಡಿದ್ದರು ಎಂಬುದಾಗಿ ಡಿಐಜಿ ಮನಿಶ್ ಕುಮಾರ ಸಿನ್ಹ ಮಾಡಿದ್ದ ಆರೋಪಗಳಿಂದ ಅಲೋಕ್ ವರ್ಮ ದೂರ ಸರಿದರು. ತಾವು ಅಕ್ಟೋಬರ್ ೨೩-೨೬ರ ನಡುವಣ ಅವಧಿಯಲ್ಲಿ ಕೈಗೊಂಡ ನಿರ್ಧಾರಗಳ ಬಗ್ಗೆ ಸಿಬಿಐ ಹಂಗಾಮೀ ನಿರ್ದೇಶಕ ಎಂ ನಾಗೇಶ್ವರ ರಾವ್ ಅವರು ಮೊಹರಾದ ಲಕೋಟೆಯಲ್ಲಿ ಸಲ್ಲಿಸಿದ ವರದಿ, ಸಿವಿಸಿ ತನಿಖಾ ವರದಿಗೆ ಅಲೋಕ್ ವರ್ಮ ಅವರು ಮೊಹರಾದ ಲಕೋಟೆಯಲ್ಲಿ ನೀಡಿದ ಉತ್ತರವನ್ನೂ ಪೀಠ ಪರಿಶೀಲಿಸಲಿದೆ. ಸರ್ಕಾರೇತರ ಸಂಘಟನೆ ಕಾಮನ್ ಕಾಸ್ ಸಿಬಿಐ ಅಧಿಕಾರಿಗಳ ವಿರುದ್ಧ ವಿಶೇಷ ತಂಡದಿಂದ ತನಿಖೆ ನಡೆಸುವಂತೆ ಕೋರಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನೂ ಸುಪ್ರೀಂಕೋರ್ಟ್ ಪರಿಶೀಲಿಸಲಿದೆನವೆಂಬರ್ ೨೦ರಂದು ಸುಪ್ರೀಂಕೋರ್ಟ್ ಪೀಠವು ತಮ್ಮ ವಿರುದ್ಧದ ಸಿವಿಸಿ ತನಿಖಾ ವರದಿ ಬಗ್ಗೆ ಸುಪ್ರೀಂಕೋರ್ಟಿಗೆ ಮೊಹರಾದ ಲಕೋಟೆಯಲ್ಲಿ ಸಲ್ಲಿಸಿದ್ದ ವರದಿ ಅಂತರ್ಜಾಲಕ್ಕೆ ಸೋರಿಕೆಯಾದುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು. ಹಾಗೆಯೇ ಡಿಐಜಿ ಮನಿಶ್ ಕುಮಾರ್ ಸಿನ್ಹ ಅವರು ಪ್ರತ್ಯೇಕ ಮನವಿಯಲ್ಲಿ ಮಾಡಿದ್ದ ಆರೋಪಗಳು ಮಾಧ್ಯಮಗಳಲ್ಲಿ ಪ್ರಕಟಗೊಂಡದ್ದಕ್ಕೂ ಆಕ್ರೋಶ ವ್ಯಕ್ತ ಪಡಿಸಿತ್ತು. ’ತನಿಖಾ ಸಂಸ್ಥೆಯ ಘನತೆ ಗೌರವದ ರಕ್ಷಣೆಗಾಗಿ ಸಿಬಿಐ ನಿರ್ದೇಶಕರ ಉತ್ತರವನ್ನು ಗೌಪ್ಯವಾಗಿ ಇಡಲು ತಾನು ಬಯಸಿದ್ದುದಾಗಿ ಹೇಳಿದ ಪೀಠನೀವ್ಯಾರೂ ವಾದ ಆಲಿಕೆಗೆ ಯೋಗ್ಯರಲ್ಲ ಎಂಬುದಾಗಿ ಹೇಳಿ ಪ್ರಕರಣವನ್ನು ನವೆಂಬರ್ ೨೯ಕ್ಕೆ ಮುಂದೂಡಿತ್ತು.


೨೦೧೮: ಇಸ್ಲಾಮಾಬಾದ್: ’ಭೂತಕಾಲದಲ್ಲಿ ಬದುಕುವುದು ಬೇಡ ಎಂಬುದಾಗಿ ಇಲ್ಲಿ ಹೇಳಿದ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ಊಭಯ ರಾಷ್ಟ್ರಗಳ ನಡುವೆ ಶಾಂತಿ ಮಾತುಕತೆಗೆ ಮುಂದಾಗುವಂತೆ ಭಾರತಕ್ಕೆ ಪುನಃ ಮನವಿ ಮಾಡಿದರು. ’ಏಕಮುಖ ಪ್ರಯತ್ನಗಳು ದೀರ್ಘಕಾಲ ಉಳಿಯುವುದಿಲ್ಲ. ನಾವು ಚುನಾವಣೆಗಳು (ಭಾರತದಲ್ಲಿ) ಮುಗಿಯುವವರೆಗೂ ಕಾಯುತ್ತೇವೆ. ಆಗಲಾದರೂ ಭಾರತ ಸ್ಪಂದಿಸಬೇಕು ಎಂದು ಅವರು ನುಡಿದರು. ’ನಮ್ಮ ನೆಲವನ್ನು ಭಯೋತ್ಪಾದನೆಗಾಗಿ ಬಳಸಲು ಅವಕಾಶ ನೀಡುವುದು ಪಾಕಿಸ್ತಾನದ ಹಿತಕ್ಕೆ ಒಳ್ಳೆಯದಲ್ಲ ಎಂದು ಅವರು ಹೇಳಿದರು. ಭಾರತದ ಜೊತೆಗೆ ಉತ್ತಮ ಬಾಂಧವ್ಯ ಸ್ಥಾಪನೆ ವಿಚಾರವಾಗಿ ತಮ್ಮ ರಾಷ್ಟ್ರದ ನಾಗರಿಕ ಮತ್ತು ಸೇನಾ ನಾಯಕತ್ವದಲ್ಲಿ ಏಕತೆ ಇದೆ ಎಂದು ಖಾನ್ ಹೇಳಿದ್ದರು. ಆದರೆ ಪಾಕಿಸ್ತಾನಕ್ಕೆ ಭೇಟಿ ನೀಡಿದ ಭಾರತೀಯ ಪತ್ರಕರ್ತರ ತಂಡದ ಜೊತೆಗೆ ಪ್ರಧಾನಿ ಕಚೇರಿಯಲ್ಲಿ ಮಾತನಾಡುತ್ತಾ ಖಾನ್ ಅವರುಪಾಕಿಸ್ತಾನ ಪ್ರಯತ್ನವನ್ನಷ್ಟೇ ಮಾಡಬಹುದು ಎಂದು ಹೇಳಿದರು. ’ನಾವು ಪ್ರಯತ್ನಿಸಬಹುದು. ಉಳಿದದ್ದು ಭಾರತಕ್ಕೆ ಬಿಟ್ಟದ್ದು. ನಾವು ಬೇರೆ ಏನು ಮಾಡಲು ಸಾಧ್ಯ?’ ಎಂದು ಪ್ರಧಾನಿಯಾಗಿ ೧೦೦ ದಿನಗಳನ್ನು ಪೂರೈಸಿದ ಇಮ್ರಾನ್ ಖಾನ್ ನುಡಿದರು.  ’ನೆರೆ ರಾಷ್ಟ್ರವು ಭಾರತದಲ್ಲಿ ಭಯೋತ್ಪಾದನೆಗೆ ನೆರವು ನೀಡುವುದನ್ನು ಮೊದಲು ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿ ಭಾರತವು ಮಾತುಕತೆ ಪುನಾರಂಭಕ್ಕೆ ನಿರಾಕರಿಸಿತ್ತು. ಇಸ್ಲಾಮಾಬಾದಿನಲ್ಲಿ ನಡೆಯಲಿರುವ ಸಾರ್ಕ್ ಶೃಂಗಸಭೆಯಲ್ಲಿ ಭಾರತವು ಪಾಲ್ಗೊಳ್ಳುವುದು ಭಯೋತ್ಪಾದನೆಗೆ ಸಂಬಂಧಿಸಿದಂತೆ ಪಾಕಿಸ್ತಾನ ಯಾವ ಧೋರಣೆಯನ್ನು ತಾಳುತ್ತದೆ ಎಂಬುದನ್ನು ಅವಲಂಬಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಬುಧವಾರ ಸಾರ್ಕ್ ಶೃಂಗಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸುವ ಬಗೆಗಿನ ಪಾಕ್ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಸ್ಪಷ್ಟ ಪಡಿಸಿದ್ದರು. ದ್ವಿಪಕ್ಷೀಯ ಮಾತುಕತೆ ಪುನಾರಂಭಕ್ಕೆ ಕರ್ತಾರಪುರ ಕಾರಿಡಾರ್ ಕೊಡುಗೆ ಸಾಕಾಗುವುದಿಲ್ಲ ಎಂದು ಅವರು ಹೇಳಿದ್ದರು. ಮುಂದಿನ ವರ್ಷ ನಡೆಯಲಿರುವ ಮಹಾಚುನಾವಣೆಯ ರಾಜಕೀಯ ಒತ್ತಡಗಳು ಬಿಜೆಪಿ ನೇತೃತ್ವದ ಮೈತ್ರಿಕೂಟದ ಮೇಲೆ ಪ್ರಭಾವ ಬೀರಿರುವುದರಿಂದ ಭಾರತವು ಮಾತುಕತೆ ಪುನಾರಂಭಕ್ಕೆ ಆಸಕ್ತಿ ಹೊಂದಿಲ್ಲ ಎಂದು ಇಸ್ಲಾಮಾಬಾದ್ ಹಿಂದೆ ಹೇಳಿತ್ತುಮುಂಬೈ ಮೇಲಿನ ೨೬/೧೧ರ ಭಯೋತ್ಪಾದಕ ದಾಳಿ ಸಂಚಿನ ಸೂತ್ರಧಾರಿ ಹಫೀಜ್ ಸಯೀದ್ ವಿರುದ್ಧ ಪಾಕಿಸ್ತಾನ ಕೈಗೊಂಡ ಕ್ರಮದ ಬಗ್ಗೆ ಕೇಳಲಾದ ಪ್ರಶ್ನೆಗೆಆತನ ಹಾಗೂ ಆತನ ಸಮೂಹದ ವಿರುದ್ಧ ೧೨೬೭ರ ಅಡಿಯಲ್ಲಿ ವಿಶ್ವಸಂಸ್ಥೆಯ ದಿಗ್ಬಂಧನ ಇದೆ ಎಂದು ಪ್ರಧಾನಿ ಹೇಳಿದರು. ’ನನಗೆ ಇದು ಪೂರ್ವಜರಿಂದ ಬಂದಿದೆ. ಆದರೆ ನಮ್ಮ ನೆಲವನ್ನು ಭಯೋತ್ಪಾದನೆಗೆ ಬಳಸುವುದು ನಮ್ಮ ಹಿತಕ್ಕೆ ಒಳ್ಳೆಯದಲ್ಲ ಎಂದು ಅವರು ನುಡಿದರು. ’ಆತನ ಚಟುವಟಿಕೆಗಳನ್ನು ಮಿತಿಗೊಳಿಸಲು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ನುಡಿದರು. ಮುಂಬೈ ಭಯೋತ್ಪಾದಕ ದಾಳಿಗಳ ಪ್ರಕರಣ ನ್ಯಾಯಾಲಯದಲ್ಲಿದೆ ಮತ್ತು ವಿಷಯ  ನ್ಯಾಯಾಂಗದ ಆಧೀನ (ಸಬ್ ಜುಡೀಸ್) ಆಗುತ್ತದೆ ಎಂದು ಖಾನ್ ಪ್ರಶ್ನೆಗೆ ಉತ್ತರಿಸಿದರು. ತಾವು ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗೆ ಮಾತನಾಡಿದ್ದು, ಅವರ ಜೊತೆಗೆ ಯಾವುದೇ ಸಮಯದಲ್ಲಿ ಮಾತನಾಡಲು ತಮಗೆ ಸಂತಸವಿದೆ ಎಂದು ಖಾನ್ ಹೇಳಿದರು. ’ಮೋದಿ ಅವರ ಜೊತೆಗಿನ ಮೊದಲ ಸಂಭಾಷಣೆ ನನಗೆ ನೆನಪಿನಲ್ಲಿದೆ. ಅದು ಅತ್ಯಂತ ಒಳ್ಳೆಯ ಸಂಭಾಷಣೆಯಾಗಿತ್ತು ಎಂದು ಪಾಕ್ ಪ್ರಧಾನಿ ಹೇಳಿದರು. ಭಾರತಕ್ಕೆ ಬೇಕಾಗಿರುವ ಭಯೋತ್ಪಾದಕ ದಾವೂದ್ ಇಬ್ರಾಹಿಂ ಕುರಿತ ಪ್ರಶ್ನೆಯೊಂದಕ್ಕೆ ಇಮ್ರಾನ್ ಖಾನ್ ಅವರುವಿಷಯಗಳಿಗೆ ಯಾವಾಗಲೂ ಭೂತಕಾಲ ಅಡ್ಡಿಯಾಗುತ್ತದೆ. ನಾವು ಭೂತಕಾಲದಲ್ಲಿ ಬದುಕಬಾರದು, ಆದರೆ ಅದರಿಂದ ಕಲಿಯಬೇಕು ಎಂದು ನುಡಿದರು. ಕರ್ತಾರಪುರ ಕಾರಿಡಾರ್ ಶಿಲಾನ್ಯಾಸ ಸಮಾರಂಭದಲ್ಲಿ ಇಮ್ರಾನ್ ಖಾನ್ ಅವರು ಉಭಯ ರಾಷ್ಟ್ರಗಳ ನಡುವಣ ಏಕೈಕ ವಿಷಯ ಕಾಶ್ಮೀರವಾಗಿದೆ ಎಂದು ಹೇಳಿದ್ದರು. ಮತ್ತೆ ಮಾತುಕತೆಗೆ ಕರೆ ನೀಡಿದ ಅವರುನಾವು ಮಾತನಾಡೋಣ. ನಾವು ಯಾವುದೇ ವಿಷಯದ ಬಗ್ಗೆ ಮಾತುಕತೆಗೆ ಸಿದ್ಧನಿದ್ದೇನೆ. ಕಾಶ್ಮೀರಕ್ಕೆ ಸೇನಾ ಪರಿಹಾರ ಇರಲು ಸಾಧ್ಯವಿಲ್ಲ ಎಂದು ಹೇಳಿದ್ದರು.
  
೨೦೧೮: ನವದೆಹಲಿ/ ಬೆಂಗಳೂರು: ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮಕ್ಕೆ (ಎನ್ ಎಂಡಿಸಿ) ನೀಡಲಾಗಿರುವ ದೋಣಿಮಲೈ ಕಬ್ಬಿಣದ ಅದಿರು ಗಣಿಗಾರಿಕೆಯ ಗುತ್ತಿಗೆಯನ್ನು ಕರ್ನಾಟಕ ಸರ್ಕಾರವು ವರ್ಷದ ನವೆಂಬರ್ ೨ರಿಂದ ಅನ್ವಯವಾಗುವಂತೆ ಮುಂದಿನ ೨೦ ವರ್ಷಗಳ ಅವಧಿಗೆ ವಿಸ್ತರಿಸಿದೆ. ಆದರೆ ರಾಜ್ಯ ಸರ್ಕಾರವು ಪ್ರೀಮಿಯಂ ದರ ಹೆಚ್ಚಳ ಮಾಡಿದ್ದರಿಂದ ಬಿಕ್ಕಟ್ಟು ಸೃಷ್ಟಿಯಾಗಿದೆ ಎಂದು ನಿಗಮದ ಮೂಲಗಳು ತಿಳಿಸಿದವು. ಖನಿಜ ಅಭಿವೃದ್ಧಿ ನಿಗಮವು ಕಬ್ಬಿಣದ ಅದಿರಿನ ಒಟ್ಟು ಮಾರಾಟ ಬೆಲೆಯ ಶೇಕಡಾ ೮೦ರಷ್ಟನ್ನು ಪ್ರೀಮಿಯಂ ದರವಾಗಿ ಪಾವತಿ  ಮಾಡಬೇಕು ಎಂದು ರಾಜ್ಯ ಸರ್ಕಾರವು ಬೇಡಿಕೆ ಇಟ್ಟಿದೆ ಎಂದು ಮೂಲಗಳು ಹೇಳಿದವು. ರಾಜ್ಯ ಸರ್ಕಾರ ಮತ್ತು ನಿಗಮದ ನಡುವಣಪ್ರೀಮಿಯಂ ದರ ಬಿಕ್ಕಟ್ಟಿನ ಇತ್ಯರ್ಥಕ್ಕಾಗಿ ನಿಗಮದ ಅಧಿಕಾರಿಗಳು ಸರ್ಕಾರದ ಜೊತೆ ಮಾತುಕತೆಗಳನ್ನು ನಡೆಸುತ್ತಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿದವು. ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮವು ಕಳೆದ ೫೦ ವರ್ಷಗಳಿಂದ (೧೯೬೮ರಿಂದ) ಖನಿಜ ಸಮೃದ್ಧ ಬಳ್ಳಾರಿಯಲ್ಲಿನ ದೋಣಿಮಲೈ ಗಣಿಗಾರಿಕೆಯ ಗುತ್ತಿಗೆಯನ್ನು ಹೊಂದಿದೆ. ‘ಗಣಿಗಳು ಮತ್ತು ಖನಿಜಗಳು ( ನಿಯಂತ್ರಣ ಮತ್ತು ಅಭಿವೃದ್ಧಿ) ಕಾಯಿದೆ ೨೦೧೫ ಹಾಗೂಖನಿಜಗಳು ( ಸರ್ಕಾರದ ಸಂಸ್ಥೆಗಳಿಂದ ಗಣಿಗಾರಿಕೆ) ನಿಯಮಗಳು ೨೦೧೫ ಅನ್ವಯ ಗಣಿಗಾರಿಕೆಯ ಗುತ್ತಿಗೆಯನ್ನು ವಿಸ್ತರಿಸಲಾಗಿದ್ದು, ಪ್ರಸ್ತುತ ರಾಜ್ಯ ಸರ್ಕಾರವು ನಿಗದಿ ಪಡಿಸಿದ ಶೇಕಡಾ ೮೦ ರಷ್ಟು ಪ್ರೀಮಿಯಂ ದರವು ಕಾನೂನು ಬದ್ಧ ದರಕ್ಕಿಂತ ಬಹಳಷ್ಟು ಅಧಿಕವಾಗಿದೆ ಎಂದು ಹೇಳಲಾಯಿತು.  ದೋಣಿಮಲೈ ಗಣಿಗಾರಿಕೆಯಲ್ಲಿ, ವಾರ್ಷಿಕ ೭೦ ಲಕ್ಷ ಟನ್ ಕಬ್ಬಿಣದ ಅದಿರು ಉತ್ಪಾದನೆಯಾಗುತ್ತಿದ್ದು, ಕಬ್ಬಿಣದ ಅದಿರನ್ನು ಚೀನಾ ಮತ್ತು ಜಪಾನ್ ದೇಶಗಳಿಗೆ ರಫ್ತು ಮಾಡಲಾಗುತ್ತದೆ.  ನಿಗಮ ಮತ್ತು ಕರ್ನಾಟಕ ಸರ್ಕಾರದ ನಡುವಣ ಬಿಕ್ಕಟ್ಟನ್ನು ಬಗೆಹರಿಸಲು ಕೇಂದ್ರ ಉಕ್ಕು ಸಚಿವಾಲಯವು ಮಧ್ಯಪ್ರವೇಶ ಮಾಡಿ ಉಭಯರ ನಡುವೆ ಮಾತುಕತೆ ನಡೆಸುತ್ತಿದೆ. ನಿಟ್ಟಿನಲ್ಲಿ, ಸಂಬಂಧಪಟ್ಟ ಎಲ್ಲರ  ಸಭೆಯೊಂದನ್ನು ನವದೆಹಲಿಯಲ್ಲಿ ನವೆಂಬರ್ ೨೨ರಂದು ನಡೆಸಲಾಗಿತ್ತು. ಸಭೆಯಲ್ಲಿ ಕೇಂದ್ರದ ಗಣಿಗಾರಿಕೆ ಸಚಿವಾಲಯ, ಎನ್.ಎಮ್.ಡಿ.ಸಿ. ಮತ್ತು ಕರ್ನಾಟಕ ಸರ್ಕಾರದ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಕರ್ನಾಟಕ ಸರ್ಕಾರದ ಕ್ರಮದ ಪರಿಣಾಮವಾಗಿ ಬಿಕ್ಕಟ್ಟು ಇತ್ಯರ್ಥವಾಗದೇ ಗಣಿಗಾರಿಕೆ ಸ್ಥಗಿತಗೊಂಡಲ್ಲಿ ಟನ್ನಿಗೆ ೧೩೪೮ ರೂಪಾಯಿಗಳಂತೆ ವಾರ್ಷಿಕ ೯೪೪ ಕೋಟಿ ರೂಪಾಯಿಗಳಷ್ಟು ನಷ್ಟವಾಗುವ ಸಾಧ್ಯತೆ ಇದೆ ಎಂದು ನಿಗಮದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
  
೨೦೧೮: ನವದೆಹಲಿ: ಮುಂಬೈ ನಗರದ ಗೋರೆಗಾಂವ್ ಚಿತ್ರನಗರಿಯಲ್ಲಿ ಶಾರುಖ್ ಖಾನ್ ಅವರ ನಟಿಸುತ್ತಿರುವಝೀರೋ ಚಲನಚಿತ್ರದ ಸೆಟ್ ನಲ್ಲಿ ಅಗ್ನಿ ದುರಂತ ಸಂಭವಿಸಿತು. ನಾಲ್ಕು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿದವು. ಸಂಜೆ ಅಗ್ನಿ ದುರಂತ ಸಂಭವಿಸಿದಾಗ ಶಾರುಖ್ ಖಾನ್ ಅವರು ಘಟನಾ ಸ್ಥಳದಲ್ಲಿ ಹಾಜರಿದ್ದರು, ಆದರೆ ಅಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ಸುದ್ದಿ ಸಂಸ್ಥೆಗೆ ತಿಳಿಸಿದರು. ಅಗ್ನಿ ದುರಂತದಿಂದ ಎಲೆಕ್ಟ್ರಿಕ್ ವಯರುಗಳು, ಎಲೆಕ್ಟ್ರಿಕ್ ಇನ್ಸ್ಟಲೇಶನ್, ಲೈಟುಗಳು, ಚಿತ್ರೀಕರಣ ಉಪಕರಣಗಳು, ಹಗ್ಗಗಳು ಹಾಗೂ ಪರದೆಗಳು ಬೆಂಕಿಗೆ ಆಹುತಿಯಾಗಿವೆ ಎಂದು ಉಪ ಪೊಲೀಸ್ ಕಮೀಷನರ್ ವಿನಯ್ ರಾಥೋಡ್ ಸುದ್ದಿ ಸಂಸ್ಥೆಗೆ ತಿಳಿಸಿದರು. ಚಿತ್ರ ನಗರಿಯ ಹೊರಗಿನಿಂದ ನೋಡುವವರಿಗೆ ದಟ್ಟ ಹೊಗೆ ಕಾಣಿಸಿತು. ಆದರೆ ದುರಂತದಲ್ಲಿ ಯಾರೂ ಗಾಯಗೊಂಡಿಲ್ಲ. ಅನಾಹುತಕ್ಕೆ ಕಾರಣವೇನು ಎಂಬುದು ಸ್ಪಷ್ಟವಾಗಿಲ್ಲ ಎಂದು ರಾಥೋಡ್ ನುಡಿದರು. ಶಾರುಖ್ ಖಾನ್, ಕತ್ರೀನಾ ಕೈಫ್ ಮತ್ತು ಅನುಷ್ಕಾ ಶರ್ಮ ನಟಿಸಿರುವಝೀರೋ ಚಿತ್ರ ಡಿಸೆಂಬರ್ ೨೧ರಂದು ಬಿಡುಗಡೆಯಾಗಲಿದೆ ಎಂದು ಪ್ರಕಟಿಸಲಾಗಿತ್ತು. ಆದರೆ ಚಿತ್ರ ಬಿಡುಗಡೆಗೆ ಮುನ್ನವೇ ವಿವಾದ ಉಂಟಾಗಿದ್ದು, ಶಾರುಖ್ ಖಾನ್ ಅವರು ಸಿಕ್ಖರ ಪವಿತ್ರ ಸಂಕೇತವಾದ ಕೃಪಾಣವನ್ನು ಧರಿಸಿದ್ದಾರೆ ಎಂದು ಕೆಲವು ಸಿಖ್ ಸಂಘಟನೆಗಳು ಆಕ್ಷೇಪಿಸಿವೆ. ಶಾರುಖ್ ಖಾನ್ ಅವರು ಕೃಪಾಣ ಧರಿಸಿದ ದೃಶ್ಯಗಳನ್ನು ಕಿತ್ತುಹಾಕಬೇಕು ಎಂದು ಆಗ್ರಹಿಸಿ ಅಮೃತಪಾಲ್ ಸಿಂಗ್ ಖಾಲ್ಸಾ ಅವರು ಬಾಂಬೆ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದರು. ಶಾರುಖ್ ಖಾನ್ ಮತ್ತು ಚಿತ್ರ ನಿರ್ಮಾಪಕರ ವಿರುದ್ಧ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆಯನ್ನು ಬಾಂಬೆ ಹೈಕೋರ್ಟ್ ನವೆಂಬರ್ ೩೦ರಂದು ನಡೆಸಲಿದೆ. ಆನಂದ್ ಎಲ್ ರೈ ಅವರು ಚಿತ್ರವನ್ನು ನಿರ್ದೇಶಿಸಿದ್ದರು.
  
೨೦೧೮: ಲಕ್ನೋ: ವಿಚಿತ್ರ ಸನ್ನಿವೇಶವೊಂದರಲ್ಲಿ ಸಮಾಜವಾದಿ ಪಕ್ಷದ ಮಾಜಿ ನಾಯಕ ಮತ್ತು ರಾಜ್ಯಸಭಾ ಸಂಸದ ಅಮರ್ ಸಿಂಗ್, ತಮ್ಮ ಪೂರ್ವಿಕರಿಗೆ ಸೇರಿದ ಕೋಟ್ಯಾಂತರ ರೂ. ಮೌಲ್ಯದ ಆಸ್ತಿಯನ್ನು ಆರ್ಎಸ್ಎಸ್ ಸಹ ಸಂಘಟನೆಗೆ ದೇಣಿಗೆ ನೀಡಿದರು.  ಹೌದು, ಅಮರ್ ಸಿಂಗ್ ಆಜಮ್ ಗಡ್ ಜಿಲ್ಲೆಯಲ್ಲಿರುವ ಸುಮಾರು ೧೫ ಕೋಟಿ ರೂ. ಬೆಲೆ ಬಾಳುವ ತಮ್ಮ ಪೂರ್ವಿಕರ ಆಸ್ತಿಯನ್ನು ಆರ್ಎಸ್ಎಸ್ ಸಹ ಸಂಘಟನೆ ಸೇವಾ ಭಾರತಿಗೆ ದಾನ ನೀಡಿದರು. ಅಮರ್ಸಿಂಗ್ ಸುಮಾರು ಕೋಟಿ ರೂ. ಬೆಲೆ ಬಾಳುವ ತಮ್ಮ ಪೂರ್ವಿಕರ ಮನೆ, ೧೦ ಕೋಟಿ ಬೆಲೆ ಬಾಳುವ ಜಮೀನನ್ನು ಸೇವಾ ಭಾರತಿ ಹೆಸರಿಗೆ ಬರೆದುಕೊಟ್ಟರು. ಕುರಿತು ಪ್ರತಿಕ್ರಿಯೆ ನೀಡಿರುವ ಅಮರ್ಸಿಂಗ್, ಸಮಾಜ ಕಟ್ಟುವ ಕಾಯಕದಲ್ಲಿ ನಿರತವಾಗಿರುವ ಆರ್ಎಸ್ಎಸ್ ಮತ್ತು ಅದರ ಸಹ ಸಂಘಟನೆಗಳಿಗೆ ಬೆಂಬಲವಾಗಿ ತಾವು ಸಣ್ಣ ಸಹಾಯ ಮಾಡಿರುವುದಾಗಿ ಹೇಳಿದರು.  ಅಮರ್ ಸಿಂಗ್ ನಡೆಯನ್ನು ಖಂಡಿಸಿರುವ ಪ್ರತಿಪಕ್ಷಗಳು, ಅಮರ್ ಸಿಂಗ್ ಬಿಜೆಪಿ ಪಕ್ಷ ಸೇರುವ ಪ್ರಯತ್ನದಲ್ಲಿದ್ದು, ಕೇಸರಿಪಡೆಯನ್ನು ಒಲಿಸಿಕೊಳ್ಳಲು ಆಸ್ತಿ ದಾನದ ನಾಟಕವಾಡುತ್ತಿದ್ದಾರೆ ಎಂದು ಹರಿಹಾಯ್ದರು.

೨೦೧೭: ಮೊರ್ಬಿ (ಗುಜರಾತ್): ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ)ಯನ್ನು "ಗಬ್ಬರ್ ಸಿಂಗ್ ಟ್ಯಾಕ್ಸ್ ಎಂದು ಹೀಯಾಳಿಸಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಮಾತಿನೇಟು ಕೊಟ್ಟಿರುವ ಪ್ರಧಾನಿ ನರೇಂದ್ರ ಮೋದಿ, "ದೇಶ ಲೂಟಿ ಮಾಡಿದ ಜನರಿಗೆ ಡಕಾಯಿತರ ಹೆಸರುಗಳೇ ನೆನಪಿಗೆ ಬರುತ್ತವೆ ಎಂದು ಕಿಡಿಕಾರಿದರು. ಗುಜರಾತ್ ಚುನಾವಣೆಯಲ್ಲಿ ಪಟೇಲರ ಹಿಡಿತವಿರುವ ಮೊರ್ಬಿಯಲ್ಲಿ ನಡೆದ ಬೃಹತ್ ಪ್ರದರ್ಶನದಲ್ಲಿ ಮಾತನಾಡಿದ ಮೋದಿ, ಜಿಎಸ್ಟಿ ಬಗ್ಗೆ ರಾಹುಲ್ ಅವರ ಇತ್ತೀಚಿನ ವಿಶ್ಲೇಷಣೆ, ಘೋಷಣೆಗಳ ವಿರುದ್ಧ ಹರಿಹಾಯ್ದರು. ಅಲ್ಲದೆ ರಾಹುಲ್ ಅವರ ಗಬ್ಬರ್ ಸಿಂಗ್ ಟ್ಯಾಕ್ ಎಂಬ ಹೋಲಿಕೆಯ ಬದಲಾಗಿ, ಗ್ರ್ಯಾಂಡ್ ಸ್ಟುಪಿಡ್ ಥಾಟ್ ಎಂದು ವ್ಯಂಗ್ಯವಾಡಿದರು. "ತಾವು ಅಧಿಕಾರಕ್ಕೆ ಬಂದರೆ ಸದ್ಯಕ್ಕಿರುವ ಜಿಎಸ್ಟಿಯ ನಾಲ್ಕು ತೆರಿಗೆ ಹಂತಗಳನ್ನು ತೆಗೆದುಹಾಕಿ, ಶೇ. ೧೮ರ ಒಂದೇ ತೆರಿಗೆ ಅಳ ವಡಿಸುವುದಾಗಿ ರಾಹುಲ್ ಹೇಳಿದ್ದಾರೆ. ಇದು ಜಾರಿಗೆ ಬಂದರೆ ಒಂದು ಕೆಜಿ ಉಪ್ಪಿಗೂ ಕೋಟಿ ರೂ. ಮೌಲ್ಯದ ಐಷಾರಾಮಿ ಕಾರಿಗೂ ಒಂದೇ ತೆರಿಗೆ ಕಟ್ಟಬೇಕಾಗುತ್ತದೆ. ಹೀಗಾದಾಗ ಅಗತ್ಯ ವಸ್ತುಗಳ ಬೆಲೆ ಏರಿ, ಸಿಗರೇಟು, ಮದ್ಯದ ಬೆಲೆ ಇಳಿಕೆಯಾಗುತ್ತದೆ. ಇದು ರಾಹುಲ್ ಗಾಂಧಿಯವರ "ಗ್ರ್ಯಾಂಡ್ ಸ್ಟುಪಿಡ್ ಥಾಟ್ (ಜಿಎಸ್ಟಿ) ಎಂದು ವ್ಯಂಗ್ಯವಾಡಿದರು. ಸರ್ದಾರರ ಹಠ: ಜವಾಹರಲಾಲ್ ನೆಹರೂ ವಿರುದ್ಧ ಹರಿಹಾಯ್ದ ಅವರು, "ನಮ್ಮ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ, ಸೋಮನಾಥ ದೇಗುಲ ಕಟ್ಟಲು ಒಪ್ಪಿರಲಿಲ್ಲ. ಸರ್ದಾರ್ ಪಟೇಲ್ ಹಠದಿಂದ ದೇಗುಲ ನಿರ್ಮಾಣವಾಯಿತು ಎಂದರು. ಹಿಂದೆ ಸೌರಾಷ್ಟ್ರ ಬರಗಾಲದಿಂದ ತತ್ತರಿಸಿ ದ್ದಾಗ, ಕಾಂಗ್ರೆಸ್ ಇಲ್ಲಿ ಪಂಪ್ಸೆಟ್ ನೀಡಿ ಸುಮ್ಮನಾಗಿತ್ತು. ಆದರೆ, ಬಿಜೆಪಿ ನರ್ಮದಾ ನದಿಯಿಂದ ದೊಡ್ಡ ಪೈಪುಗಳ ಮೂಲಕ ನೀರು ಹರಿಸಿದೆ ಎಂದು ನೆನಪಿಸಿದರು. ಇಂದಿರಾ ಮತ್ತು ಕಚ್ಸೀಪು!: ಇಂದಿರಾ ಗಾಂಧಿಯವರನ್ನು ಟೀಕಿಸಿದ ಮೋದಿ, "ಮೊರ್ಬಿಯಲ್ಲಿ ೧೯೭೯ರಲ್ಲಿ ಮಚ್ಚು ಅಣೆಕಟ್ಟು ಒಡೆದು ಸಾವಿರಾರು ಮಂದಿ ಸಾವನ್ನಪ್ಪಿದ್ದಾಗ ಅಲ್ಲಿಗೆ ಭೇಟಿ ನೀಡಿದ್ದ ಇಂದಿರಾ ಬೆನ್, ಪ್ರಾಂತ್ಯ ದಲ್ಲೆಲ್ಲ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಶವಗಳ ಕೊಳೆತ ವಾಸನೆ ಸಹಿಸಿಕೊಳ್ಳದೆ ತಮ್ಮ ಮೂಗನ್ನು  ಕರವಸ್ತ್ರದಿಂದ ಮುಚ್ಚಿ ಕೊಂಡಿದ್ದರು. ಮರುಕ ಹುಟ್ಟಿಸುತ್ತಿದ್ದ ಸನ್ನಿವೇಶ ಅವರ ಪಾಲಿಗೆ ನರಕವಾಗಿದ್ದರೆ, ತಿಂಗಳುಗಟ್ಟಲೆ ಅಲ್ಲಿನ ಬೀದಿಬೀದಿಗಳಲ್ಲಿ ಆರೆಸ್ಸೆಸ್, ಜನಸಂಘದ ಸ್ವಯಂ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿದ ನಮಗೆ ಅದು ಮಾನವತೆಯ ಸುಗಂಧವಾಗಿತ್ತು ಎಂದರು.

೨೦೧೭: ಧರ್ಮಸ್ಥಳ: ?ಯಕ್ಸೆಸ್ ಇಂಡಿಯಾ ನೀಡುವ ಪ್ರತಿಷ್ಠಿತ ಇನ್ಕ್ಲೂಸಿವ್ ಫೈನಾನ್ಸ್ ಇಂಡಿಯಾ ಪ್ರಶಸ್ತಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರನ್ನು ಆಯ್ಕೆ ಮಾಡಲಾಯಿತು. ಮೈಕ್ರೋಫೈನಾನ್ಸ್ ವಲಯದಲ್ಲಿ ಅತ್ಯುನ್ನತ ಸೇವೆ ಸಲ್ಲಿಸಿದ ಮತ್ತು ವಲಯದ ಅಭಿವೃದ್ಧಿಗೆ ಮಹತ್ವದ ಕಾಣಿಕೆ ನೀಡಿದ ವ್ಯಕ್ತಿಗಳು ಮತ್ತು ಸಂಘ ಸಂಸ್ಥೆಗಳಿಗೆ ನೀಡುವ ಮಹತ್ವದ ಪ್ರಶಸ್ತಿ ಇದಾಗಿದ್ದು, ಕಳೆದ ವರ್ಷಗಳಿಂದ ನೀಡಲಾಗುತ್ತಿದೆ. ಹಿಂದೆ ಮೈಕ್ರೋ ಫೈನಾನ್ಸ್ ಪ್ರಶಸ್ತಿ ಎಂದು ಹೆಸರಾಗಿದ್ದ ಗೌರವಕ್ಕೆ ಎಚ್ಎಸ್ಬಿಸಿ ಸಹಕಾರ ನೀಡುತ್ತಿದೆ.

೨೦೧೭: ದಾವಣಗೆರೆ: ದಾವಣಗೆರೆ ನಗರದ ದಾವಣಗೆರೆ-ಹರಿಹರ ಅರ್ಬನ್ ಬ್ಯಾಂಕ್ ಅಧ್ಯಕ್ಷ ಎನ್.ಎಂ.ಜೆ.ಬಿ. ಆರಾಧ್ಯ (೮೫) ಅವರು ರಾತ್ರಿ ನಿಧನರಾದರು. ಮೃತರು ಇಬ್ಬರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದರು. ಆರಾಧ್ಯ ಅವರು ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಾಗಿದ್ದರು. ‘ಸಹಕಾರ ರಂಗದಲ್ಲಿ ಅಧಿಕಾರದ ಕುರ್ಚಿ ಮೇಲೆ ಕೂತವರು ಪ್ರತಿ ಕ್ಷಣವೂ ಸಂಸ್ಥೆಯ ಅಭಿವೃದ್ಧಿಯ ಬಗ್ಗೆ ಚಿಂತಿಸಬೇಕು. ಎಂತಹ ಸಂದರ್ಭದಲ್ಲೂ ಸ್ವಾರ್ಥಕ್ಕೆ ಅವಕಾಶ ನೀಡಬಾರದು. ಸಮಗ್ರ ದೃಷ್ಟಿಯ ಇಚ್ಛಾಶಕ್ತಿ ಇರಬೇಕು. ಸಹಕಾರ ಸಂಸ್ಥೆಯನ್ನು ಕಟ್ಟಿದಾಗ ಜನರು ಠೇವಣಿ ಇಡುವ ಮುನ್ನ ಯಾರು ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ ಎಂಬುದನ್ನೂ ಗಮನಿಸುತ್ತಾರೆ. ನಂಬಿಕೆ ವಿಶ್ವಾಸದ ಮೇಲೆ ಎಲ್ಲ ಸಹಕಾರ ಸಂಸ್ಥೆಗಳ ಭವಿಷ್ಯ ನಿಂತಿರುತ್ತದೆ. ನಂಬಿಕೆಯೇ ಸಹಕಾರ ಕ್ಷೇತ್ರದ ಬುನಾದಿ. ಅದನ್ನು ಹಾಳು ಮಾಡಿದರೆ ಸಂಸ್ಥೆ ಅವಸಾನದತ್ತ ಸಾಗಿತೆಂದೇ ಅರ್ಥ ಎಂದು ನಂಬಿದ್ದವರು ಎನ್.ಎಂ.ಜೆ.ಬಿ.ಆರಾಧ್ಯ. 

೨೦೧೬: ಜಮ್ಮು/ ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ನಗ್ರೊಟಾ ಕಂಟೋನ್ಮೆಂಟ್ ಪ್ರದೇಶದಲ್ಲಿ

ಸಂಭವಿಸಿದ ಭೀಕರ ಗುಂಡಿನ ಕದನದಲ್ಲಿ ಇಬ್ಬರು ಸೇನಾ ಅಧಿಕಾರಿಗಳು ಮತ್ತು ಐವರು ಯೋಧರು ಸೇರಿದಂತೆ ಒಟ್ಟು ಮಂದಿ ಭಾರತೀಯ ಯೋಧರು ಹುತಾತ್ಮರಾದರೆ, ಭಯೋತ್ಪಾದಕರನ್ನು ಸೈನಿಕರು ಹತ್ಯೆಗೈದರು. ಗುಂಡಿನ ಘರ್ಷಣೆ ಸಂಜೆಯ ವೇಳೆಗೆ ಅಂತ್ಯಗೊಂಡಿದ್ದು, ಶೋಧ ಕಾರ್ಯಾಚರಣೆ ಮುಂದುವರೆದಿವೆ ಎಂದು ವರದಿಗಳು ಹೇಳಿದವು. ಇತ್ತೀಚಿನ ತಿಂಗಳುಗಳಲ್ಲಿ ಸೇನಾ ಸವಲತ್ತಿನ ಮೇಲೆ ನಡೆದಿರುವ ಎರಡನೇ ದಾಳಿ ಇದು.. ಸೇನಾ ಶಿಬಿರಕ್ಕೆ  ಪರಿಸ್ಥಿತಿ ನಿಯಂತ್ರಣಕ್ಕಾಗಿ ವಿಶೇಷ ಪಡೆಗಳನ್ನು ರವಾನಿಸಲಾಯಿತು.  ಸೈನಿಕರು ಹುತಾತ್ಮರಾಗಿರುವ ಬಗ್ಗೆ ರಕ್ಷಣಾ ಪಿಆರ್  ಮನಿಷ್ ಮೆಹ್ತಾ ಅವರು ರಾತ್ರಿ ಮಾಹಿತಿ ನೀಡಿದರು. ನಗ್ರೋಟಾದಿಂದ ೭೦ ಕಿಮೀ ದೂರದ ಸಾಂಬಾ ಜಿಲ್ಲೆಯ ರಾಮಗಢ ಉಪವಿಭಾಗದ ಚಮಿಲಿಯಾಲ್ ಪ್ರದೇಶದಲ್ಲಿ ಸಂಭವಿಸಿದ ಇನ್ನೊಂದು ಗುಂಡಿನ ಘರ್ಷಣೆಯಲ್ಲಿ ಮಂದಿ ನುಸುಳುಕೋರರನ್ನು ಕೊಲ್ಲಲಾಗಿದ್ದು, ಒಬ್ಬ ಡಿಐಜಿ ಸೇರಿದಂತೆ ಆರು ಮಂದಿ ಬಿಎಸ್ಎಫ್ ಯೋಧರು ಗಾಯಗೊಂಡರು. ನಗ್ರೋಟಾ ದಾಳಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾಹಿತಿ ನೀಡಲಾಗಿದೆ. ದಾಳಿ ನಾಗರಿಕ ಪ್ರದೇಶಗಳನ್ನು ಗುರಿಯಾಗಿರಿಸಿ ನಡೆದ ದಾಳಿಯಲ್ಲ ಎಂದು ರಕ್ಷಣಾ ಸಚಿವ ಮನೋಹರ ಪರಿಕ್ಕರ್ ಹೇಳಿದರು. ಮೂರರಿಂದ ನಾಲ್ಕು ಮಂದಿ ಇದ್ದ ಭಯೋತ್ಪಾದಕರ ಗುಂಪು ನಸುಕಿನ ೩ರಿಂದ ಗಂಟೆ ನಡುವಣ ವೇಳೆಯಲ್ಲಿ ಸೇನಾ ಶಿಬಿರದ ಮೇಲೆ ದಾಳಿ ನಡೆಸಿತು ಎಂದು ವರದಿಗಳು ಹೇಳಿದವು.
 ೨೦೧೬: ಮೆಡಿಲ್ಲಿನ್: ಕಿರಿಯ ದರ್ಜೆಯ ಫುಟ್ಬಾಲ್ ಆಟಗಾರರನ್ನು ಹೊತ್ತೊಯ್ಯುತ್ತಿದ್ದ ವಿಮಾನ

ಕೊಲಂಬಿಯಾ ಸಮೀಪ ಪತನಗೊಂಡಿತು. ವಿಮಾನದಲ್ಲಿದ್ದವರಲ್ಲಿ ೭೬ ಮಂದಿ ಸಾವನ್ನಪ್ಪಿದ್ದು, ಐವರನ್ನು ರಕ್ಷಿಸಲಾಗಿದೆ ಎಂದು ಮೆಡಿಲ್ಲಿನ್ ವ್ಯಾಪ್ತಿಯ ಪೊಲೀಸರು ಮಾಹಿತಿ ನೀಡಿದರು.  ವಿಮಾನದಲ್ಲಿ ಆಟಗಾರರು, ತಂಡದ ಅಧಿಕಾರಿಗಳು ಹಾಗೂ ವಿಮಾನ ಸೇವಾ ಸಿಬ್ಬಂದಿ ಸೇರಿ ಒಟ್ಟು ೮೧ ಮಂದಿ ಸದಸ್ಯರು ಇದ್ದರು. ವಿಮಾನ ಬ್ರೆಜಿಲಿನಿಂದ ಕೊಲಂಬಿಯಾ ಕಡೆಗೆ ಪ್ರಯಾಣ ಬೆಳೆಸಿತ್ತು.  ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ವಿಮಾನ ಪತನಗೊಂಡಿದೆ ಎಂದು ಪ್ರಾಥಮಿಕ ವರದಿ ತಿಳಿಸಿತು. ಅಪಘಾತಕ್ಕೆ ತುತ್ತಾದ ವಿಮಾನ ಬ್ರಿಟಿಷ್ ಏರೋಸ್ಪೇಸ್ ಸಂಸ್ಥೆಗೆ  ಸೇರಿದ್ದಾಗಿದ್ದು, ಮಧ್ಯಾಹ್ನ .೩೦ ಸುಮಾರಿಗೆ ಪ್ರಯಾಣ ಬೆಳೆಸಿತ್ತು. ತತ್ ಕ್ಷಣದ ಮಾಹಿತಿಯಂತೆ ಇಂಧನ ಕೊರತೆಯಿಂದಾಗಿ ದುರಂತ ಸಂಭವಿಸಿರಬೇಕೆನ್ನುವ ಶಂಕೆ ವ್ಯಕ್ತಗೊಂಡಿತು.
೨೦೧೬ : ನವದೆಹಲಿ: ಭ್ರಷ್ಟಾಚಾರ, ಕಪ್ಪುಹಣ, ನಕಲಿ ನೋಟು ಮಟ್ಟಹಾಕಲು ಅಧಿಕ ಮುಖಬೆಲೆಯ

ನೋಟುಗಳ ರದ್ಧತಿ ಆದೇಶ ಹೊರಡಿಸಲಾದ ನವೆಂಬರ್ ೮ರಿಂದ ಡಿಸೆಂಬರ್ ೩೧ರವರೆಗಿನ ತಮ್ಮ ಬ್ಯಾಂಕ್ ಖಾತಾ ವಹಿವಾಟುಗಳ ಸಂಪೂರ್ಣ ವಿವರವನ್ನು ಸಲ್ಲಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿಯ ಎಲ್ಲ ಸಂಸತ್ ಸದಸ್ಯರು, ಶಾಸಕರಿಗೆ ಸೂಚನೆ ನೀಡಿದರು.  ತಮ್ಮ ಎಲ್ಲ ಬ್ಯಾಂಕಿಂಗ್ ವ್ಯವಹಾರಗಳ ವಿವರವನ್ನು ಜನವರಿ ೧ರ ಒಳಗಾಗಿ ಬಿಜೆಪಿಯ ಎಲ್ಲ ಸಂಸತ್ ಸದಸ್ಯರು ಮತ್ತು ಎಲ್ಲ ರಾಜ್ಯಗಳ ವಿಧಾನ ಮಂಡಲಗಳ ಸದಸ್ಯರು ಪಕ್ಷದ ಅಧ್ಯಕ್ಷ ಅಮಿತ್ ಷಾ ಅವರಿಗೆ ಸಲ್ಲಿಸಬೇಕು ಎಂದು ಪ್ರಧಾನಿ ಸೂಚಿಸಿದರು. ನೋಟು ರದ್ದು ವಿಚಾರ ಬಗ್ಗೆ ಬಿಜೆಪಿ ಪ್ರಮುಖರಿಗೆ ಮುಂಚಿತವಾಗಿಯೇ ಮಾಹಿತಿ ನೀಡಲಾಗಿತ್ತು. ಆದ್ದರಿಂದ ಅವರು ತಮಗೆ ಬೇಕಾದ ಬಂದೋಬಸ್ತ್ ಮಾಡಿಕೊಂಡಿದ್ದಾರೆ ಎಂದು ವಿರೋಧ ಪಕ್ಷಗಳು ನಿರಂತರವಾಗಿ ಆಪಾದಿಸುತ್ತಿದ್ದು, ಹಿನ್ನೆಲೆಯಲ್ಲಿ ಮೋದಿ ಸೂಚನೆ ಮಹತ್ವ ಪಡೆಯಿತು.
 ೨೦೧೬: ಗಾಂಧಿನಗರ: ಕಪ್ಪು ಹಣ, ಭ್ರಷ್ಟಾಚಾರ ಮತ್ತು ನಕಲಿ ನೋಟು ನಿಗ್ರಹಕ್ಕಾಗಿ ೫೦೦ ಮತ್ತು ೧೦೦೦ ರೂಪಾಯಿ ಮುಖಬೆಲೆಯ ನೋಟುಗಳ ರದ್ದು ನಿರ್ಣಯದ ಬಳಿಕ ಗುಜರಾತ್ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಬಿಜೆಪಿ ಪ್ರಚಂಡ ವಿಜಯ ಸಾಧಿಸಿತು. ಮಹಾರಾಷ್ಟ್ರದ ಚುನಾವಣೆಗಳಲ್ಲಿ ಹಿಂದಿನ ದಿನ ವಿಜಯಗಳಿಸಿದ ವರದಿಗಳ ಬೆನ್ನಲ್ಲೇ ಈದಿನ ಗುಜರಾತಿನಲ್ಲೂ ಬಿಜೆಪಿ ಪ್ರಚಂಡ ಜಯಭೇರಿ ಭಾರಿಸಿತು. ಗುಜರಾತಿನ ೧೬ ಜಿಲ್ಲೆಗಳ ನಗರಸಭೆ, ಜಿಲ್ಲಾ ಪಂಚಾಯತಿಗಳ ೧೨೬ ಸ್ಥಾನಗಳ ಪೈಕಿ ೧೦೯ ಸ್ಥಾನಗಳನ್ನು ಬಿಜೆಪಿ ಗೆದ್ದಿತು. ಇವುಗಳ ಪೈಕಿ ೪೦ ಸ್ಥಾನಗಳನ್ನು ಪಕ್ಷವು ಕಾಂಗ್ರೆಸ್ಸಿನಿಂದ ಕಿತ್ತುಕೊಂಡಿತು.  ಕಾಂಗ್ರೆಸ್ ಪಕ್ಷವು ಕೇವಲ ೧೭ ಸ್ಥಾನಗಳನ್ನು ಗೆಲ್ಲಲು ಶಕ್ತವಾಯಿತು. ಇನ್ನೊಂದು ವರ್ಷದಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಬೇಕಾಗಿರುವ ಗುಜರಾತಿನಲ್ಲಿ ಈದಿನದ ಚುನಾವಣಾ ಫಲಿತಾಂಶ ಬಿಜೆಪಿಗೆ ಬಲು ದೊಡ್ಡ ಹುಮ್ಮಸ್ಸನ್ನು ತಂದುಕೊಟ್ಟಿತು. ’ಭಾರತದ ಜನತೆ ನೋಟು ನಿಷೇಧವನ್ನು ಬೆಂಬಲಿಸಿದ್ದಾರೆ. ಎರಡು ರಾಜ್ಯಗಳಲ್ಲಿ ನಡೆದಿರುವ ಚುನಾವಣಾ ಫಲಿತಾಂಶಗಳು ದೇಶದ ಹಾಲಿ ಅಭಿಮತವನ್ನು ವ್ಯಕ್ತ ಪಡಿಸಿವೆ. ಜನತೆ ನಮ್ಮೊಂದಿಗಿದ್ದಾರೆ ಎಂಬುದರ ಅರಿವು ನಮಗೆ ಆಗಿದೆ ಎಂದು ಕೇಂದ್ರ ಸಚಿವ ಪ್ರಕಾಶ ಜಾವಡೇಕರ್ ನುಡಿದರು. ಮಹಾರಾಷ್ಟ್ರದಲ್ಲಿ ಆಡಳಿತಾರೂಢ ಬಿಜೆಪಿಯು ೧೪೭ ನಗರಸಭೆ ಮತ್ತು ೧೭ಪಂಚಾಯತುಗಳ ೩೭೦೫ ಸ್ಥಾನಗಳ ಪೈಕಿ ೮೫೧ ಸ್ಥಾನಗಳನ್ನು ಗೆದ್ದಿತ್ತು.
 ೨೦೧೬: ನವದೆಹಲಿ: ಮದುವೆಯಾಗಿರಲಿ ಅಥವಾ ಮದುವೆಯಾಗಿರದೇ ಇರಲಿ, ಪುತ್ರನಿಗೆ ತನ್ನ ಹೆತ್ತವರ ಸ್ವಯಾರ್ಜಿತ ಮನೆಯಲ್ಲಿ ವಾಸಿಸುವ ಕಾನೂನುಬದ್ಧ ಹಕ್ಕು ಇಲ್ಲ, ಅವರ ಕೃಪೆಯ ಮೇರೆಗೆ ಮಾತ್ರವೇ ಆತ ಮನೆಯಲ್ಲಿ ವಾಸವಾಗಿರಬಹುದು ಎಂದು ದೆಹಲಿ ಹೈಕೋರ್ಟ್ ತೀರ್ಪು ನೀಡಿತು.  ಸೌಹಾರ್ದಯುತ ಬಾಂಧವ್ಯ ಇರುವವರೆಗೂ ಹೆತ್ತವರು ಮಗನಿಗೆ ತಮ್ಮ ಸ್ವಯಾರ್ಜಿತ ಮನೆಯಲ್ಲಿ ವಾಸವಾಗಿರಲು ಅವಕಾಶ ನೀಡಬಹುದು. ಆದರೆ ಅದರ ಅರ್ಥ ಜೀವಮಾನಪೂರ್ತಿ ಆತನ ಹೊರೆಯನ್ನು ಪಾಲಕರು ಹೊತ್ತುಕೊಳ್ಳಬೇಕು ಎಂದು ಅಲ್ಲ ಎಂದು ಹೈಕೋರ್ಟ್ ಸ್ಪಷ್ಟ ಪಡಿಸಿತು. ವಿಚಾರಣಾ ನ್ಯಾಯಾಲಯವು ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಒಬ್ಬ ವ್ಯಕ್ತಿ ಮತ್ತು ಆತನ ಪತ್ನಿ ಮಾಡಿದ್ದ ಮೇಲ್ಮನವಿಯನ್ನು ವಜಾ ಮಾಡುತ್ತಾ ದೆಹಲಿ ಹೈಕೋರ್ಟ್ ಮಹತ್ವದ ತೀರ್ಪನ್ನು ನೀಡಿತು. ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯವು ಮೇಲ್ಮನವಿದಾರನ ಹೆತ್ತವರ ಪರವಾಗಿ ತೀರ್ಪು ನೀಡಿತ್ತು. ತಮ್ಮ ಸ್ವಾಧೀನದಲ್ಲಿ ಇರುವ ಮನೆಯ ಮಹಡಿಯನ್ನು ತೆರವುಗೊಳಿಸುವಂತೆ ತನ್ನ ಪುತ್ರ ಹಾಗೂ ಸೊಸೆಗೆ ನಿರ್ದೇಶನ ನೀಡಬೇಕು ಎಂದು ಕೋರಿ ಹೆತ್ತವರು ವಿಚಾರಣಾ ನ್ಯಾಯಾಲಯದಲ್ಲಿ ಖಟ್ಲೆ ಹೂಡಿದ್ದರು. ಪಾಲಕರಿಬ್ಬರು ಹಿರಿಯ ನಾಗರಿಕರಾಗಿದ್ದು, ತಮ್ಮ ಜೊತೆಗೆ ವಾಸವಾಗಿರುವ ಮಗ ಮತ್ತು ಸೊಸೆ ತಮ್ಮ ಜೀವನವನ್ನುನರಕವನ್ನಾಗಿ ಮಾಡಿದ್ದಾರೆ ಎಂದು ಹೆತ್ತವರು ನ್ಯಾಯಾಲಯದಲ್ಲಿ ದೂರಿದ್ದರು. ತಮಗೆ ತೊಂದರೆ ಕೊಡುತ್ತಿದ್ದ ಹಿನ್ನೆಲೆಯಲ್ಲಿ ತಮ್ಮ ಸ್ವಯಾರ್ಜಿತ ಆಸ್ತಿಯನ್ನು ತೆರವುಗೊಳಿಸುವಂತೆ ಪೊಲೀಸರಿಗೆ ದೂರು ನೀಡಿದ್ದಲ್ಲದೆ, ಸಾರ್ವಜನಿಕ ಪ್ರಕಟಣೆಯನ್ನು ನೀಡಲಾಗಿತ್ತು. ಬಳಿಕ ಅವರ ಕಿರುಕುಳ ಜಾಸ್ತಿಯಾಯಿತು ಎಂದು ಹೆತ್ತವರು ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯಲ್ಲಿ ಆಪಾದಿಸಿದ್ದರು.
 ೨೦೧೬: ನವದೆಹಲಿ: ಮೊಹಾಲಿಯಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ವಿಕೆಟ್ ಜಯ ಸಾಧಿಸಿತು. ಇದರೊಂದಿಗೆ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ - ಮುನ್ನಡೆ ದಾಖಲಿಸಿತು. ತನ್ನ ಸೆಕೆಂಡ್ ಇನಿಂಗ್ಸಿನಲ್ಲಿ  ೨೩೮ ರನ್ ಗಳಿಸುವ ಮೂಲಕ ಇಂಗ್ಲೆಂಡ್ ನೀಡಿದ ೧೦೩ ರನ್ ಗುರಿಯನ್ನು ಭಾರತ ಅನಾಯಾಸವಾಗಿ ಸಾಧಿಸಿತು. ಪಾರ್ಥಿವ್ ಪಟೇಲ್ ಅವರು ೬೭ ರನ್ನುಗಳೊಂದಿಗೆ ಅಜೇಯವಾಗಿ ಉಳಿದರು. ರವಿಂದ್ರ ಜಡೇಜಾ ಅವರು ಮ್ಯಾನ್ ಆಫ್ ದಿ ಮ್ಯಾಚ್ ಹೆಗ್ಗಳಿಕೆಗೆ ಪಾತ್ರರಾದರು.

೨೦೧೬:  ನವದೆಹಲಿ: ವೈರಲ್ ಜ್ವರದಿಂದ ಅಸ್ವಸ್ಥರಾದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ದೆಹಲಿಯ ಸರ್ ಗಂಗಾರಾಮ್ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆಗಸ್ಟ್ ತಿಂಗಳಲ್ಲೂ ವೈರಲ್ ಜ್ವರ ಪರಿಣಾಮವಾಗಿ ಸೋನಿಯಾ ಗಾಂಧಿ ಅವರು ಹಲವಾರು ದಿನಗಳ ಕಾಲ ಆಸ್ಪತ್ರೆಗೆ ದಾಖಲಾಗಿದ್ದರು.

 ೨೦೧೬: ಬೆಂಗಳೂರು: ದೇಶಾದ್ಯಂತ ತಲ್ಲಣ ಮೂಡಿಸಿದ್ದ .೩೭ ಕೋಟಿ ರೂ. ಲೂಟಿ ಪ್ರಕರಣದ ಪ್ರಮುಖ ಆರೋಪಿ ಡಾಮ್ನಿಕ್ ಸೆಲ್ವರಾಜ್ ರಾಯ್ ನನ್ನು ಪೊಲೀಸರು  ಮುಂಜಾನೆ ಬಂಧಿಸಿದರು. ಬಾಣಸವಾಡಿಯಲ್ಲಿ ಪತ್ನಿ ಎಲ್ವಿನ್ಳನ್ನು ಬಂಧಿಸಿದ ಬೆನ್ನಲ್ಲೇ ಡಾಮ್ನಿಕ್ ರಾಯ್ನನ್ನೂ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾದರು.  ಬಂಧನಕ್ಕೊಳಗಾದ ಎಲ್ವಿನ್ಳಿಂದ ಪೊಲೀಸರು ಸೋಮವಾರವೇ ೭೯.೦೮ ಲಕ್ಷ ರೂ. ಜಪ್ತಿಮಾಡಿ, ತೀವ್ರ ವಿಚಾರಣೆಗೆ ಒಳಪಡಿಸಿದ್ದರು. ಅಲ್ಲದೇ ಲೂಟಿಗೆ ಒಂದು ವಾರ ಮೊದಲೇ ಸ್ಕೆಚ್ ಹಾಕಲಾಗಿತ್ತು ಎನ್ನುವುದನ್ನು ಒಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ಹೇಳಿದರು. ಖಚಿತ ಮಾಹಿತಿ ಮೇರೆಗೆ ಸ್ಥಳದಲ್ಲಿ ಕಾದು ಕುಳಿತಿದ್ದ ಪೊಲೀಸರು ಕೆ.ಆರ್.ಪುರದ ಟಿನ್ ಫ್ಯಾಕ್ಟರಿ ಬಳಿ ಬಂಧಿಸಿದರು. ನವೆಂಬರ್ ೨೩ರಂದು ಮಧ್ಯಾಹ್ನ ಕೆ.ಜಿ.ರಸ್ತೆ ಬ್ಯಾಂಕ್ ಆಫ್ ಇಂಡಿಯಾ ಆವರಣದಿಂದ .೩೭ ಕೋಟಿ ರೂ. ತುಂಬಿದ್ದ ವಾಹನದೊಂದಿದೆ ಡಾಮ್ನಿಕ್ ಪರಾರಿಯಾಗಿದ್ದ. ಇದಾಗಿ ಕೆಲವೇ ಗಂಟೆಗಳಲ್ಲಿ ತನ್ನ ಪತ್ನಿ ಮತ್ತು ಮಗನೊಂದಿಗೆ ರಾಜ್ಯದಿಂದಲೇ ಕಾಲುಕಿತ್ತಿದ್ದ.
೨೦೧೬: ಮುಂಬೈ: ಮಹಿಳೆಯರು ದರ್ಗಾಗಳಿಗೆ ಪ್ರವೇಶ ಪಡೆಯಲು ಸ್ವತಂತ್ರರು ಎಂದು ಸುಪ್ರೀಂ ಕೋರ್ಟ್ ತೀರ್ಪು ಪ್ರಕಟಿಸಿದ ನಂತರ ಈದಿನ  ೮೦ ಮಂದಿ ಮುಸ್ಲಿಂ ಮಹಿಳಾ ಹೋರಾಟಗಾರರ ಗುಂಪು ಪ್ರಖ್ಯಾತ ಹಾಜಿ ಅಲಿ ದರ್ಗಾ ಪ್ರವೇಶಿಸಿತು. ‘ಮಹಿಳೆಯರು ದರ್ಗಾಗಳಿಗೆ ಪ್ರವೇಶ ಪಡೆಯುವುದು ಸಾಮಾನ್ಯವಾಗಬೇಕು. ದರ್ಗಾ ಪ್ರವೇಶಿಸಿ ನಮ್ಮ ಪ್ರಾರ್ಥನೆಯನ್ನು ಸಲ್ಲಿಸುವುದು ನಮ್ಮ ಹಕ್ಕು ಎಂದು ಭಾರತೀಯ ಮುಸ್ಲಿಂ ಮಹಿಳಾ ಆಂದೋಲನದ ಸಹ ಸಂಸ್ಥಾಪಕಿ ನೂರ್ಜಹಾನ್ ಎಸ್ ನಯಾಜ್ ಹೇಳಿದರು. ಸುಪ್ರೀಂ ಕೋರ್ಟ್ ಅಕ್ಟೋಬರ್ ೨೪ ರಂದು ದರ್ಗಾಗಳು ಮಹಿಳೆಯರಿಗೆ ಪ್ರವೇಶ ಅವಕಾಶ ಕಲ್ಪಿಸಬೇಕು ಎಂದು ತೀರ್ಪು ನೀಡಿತ್ತು. ಸಮುದಾಯದ ನಾಯಕರು ಹಾಗು ಟ್ರಸ್ಟ್ ಮುಖ್ಯಸ್ಥರು ಸಾಂಪ್ರದಾಯಿಕ ನೀತಿನಿಯಮಗಳಲ್ಲಿ ಬದಲಾವಣೆಗಳನ್ನು ತರುವ ಮತ್ತು ಮಹಿಳೆಯರಿಗೆ ವಿಶೇಷ ವ್ಯವಸ್ಥೆಗಳನ್ನು ಕಲ್ಪಿಸುವ ಸಲುವಾಗಿ ನಾಲ್ಕು ವಾರಗಳ ಅವಕಾಶ ನೀಡುವಂತೆ ಕೇಳಿಕೊಂಡಿದ್ದರು. ‘ನಮ್ಮ ಹೋರಾಟ ಸಮಾನತೆಗಾಗಿ ಅದು ಕೊನೆಯಾಗುವುದು ಲಿಂಗ ತಾರತಮ್ಯಗಳ ಅಂತ್ಯದ ಜೊತೆಗೆ ಸುಪ್ರೀಂ ಕೋರ್ಟ್ ತೀರ್ಪಿನಿಂದಾಗಿ ದರ್ಗಾ ಪ್ರವೇಶದ ಅವಕಾಶ ದೊರೆತಿರುವುದು ಸಂತಸ ತಂದಿದೆ ಎಂದು ನಯಾಜ್ ತಿಳಿಸಿದರು.

೨೦೧೬: ವರ್ಬೇನಿಯಾ: ಇಟೆಲಿಯ ಪೀಡ್ಮೌಂಟ್ ಪ್ರದೇಶದಲ್ಲಿ ಕ್ರಿ.. ೧೮೯೯ರ ನವೆಂಬರ್ ೨೯

ರಂದು ಜನಿಸಿದ ಎಮ್ಮಾ ಮೊರಾನೋ ಎಂಬುವವರು ಜಗತ್ತಿನ ಅತ್ಯಂತ ಹಿರಿಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ೧೧೭ನೇ ವರ್ಷದ ಜನುಮದಿನದ ಸಂಭ್ರಮದಲ್ಲಿರುವ ಈಕೆ ೧೯ ನೇ ಶತಮಾನದ ಏಕೈಕ ವ್ಯಕ್ತಿಯೆಂಬ ಗರಿಮೆಯನ್ನೂ ಹೊಂದಿದ್ದಾರೆ. ಮೊದಲ ಮಹಾಯುದ್ದ ಕಾಲದಲ್ಲಿ ರಕ್ತದ ಕೊರತೆ ?ಸಮಸ್ಯೆಯಿಂದ ಬಳಲಿದ್ದ ಎಮ್ಮಾ ತಮ್ಮ೧೫ನೇ ವಯಸ್ಸಿನಿಂದಲೇ ಮಿತ ಆಹಾರ ಕ್ರಮವನ್ನು ರೂಢಿಸಿಕೊಂಡು, ಪ್ರತಿನಿತ್ಯವೂ ಕೇವಲ ಮೂರು ಮೊಟ್ಟೆ ಹಾಗೂ ಅಲ್ಪ ಪ್ರಮಾಣದ ಹಣ್ಣು ತರಕಾರಿಯನ್ನು ಸೇವಿಸುವುದರೊಂದಿಗೆ ಉತ್ತಮ ಆರೋಗ್ಯವನ್ನು ಕಾಪಾಡಿಕೊಂಡಿದ್ದಾರೆ. ‘ಪ್ರತಿನಿತ್ಯ ಅಲ್ಪ ಪ್ರಮಾಣದ ತರಕಾರಿ, ಹಣ್ಣು  ಹಾಗೂ ಮೊಟ್ಟೆಯ ಜೊತೆಗೆ ರಾತ್ರಿ ವೇಳೆಗೆ ಸ್ವಲ್ಪ ಚಿಕನ್ ಸವಿಯುತ್ತಾರೆ. ಕೇವಲ ಮಿತ ಆಹಾರ ಸೇವನೆಯ ಹೊರತಾಗಿಯೂ ಉತ್ತಮ ಆರೋಗ್ಯ ಕಾಪಾಡಿಕೊಂಡಿರುವುದು ಆಶ್ಚರ್ಯದ ಸಂಗತಿ ಎಂದು ಎಮ್ಮಾ ಅವರ ಆರೋಗ್ಯದ ಗುಟ್ಟು ಬಿಚ್ಚಿಟ್ಟರು ಕಳೆದ ೨೭ ವರ್ಷದಿಂದ ಹಿರಿಯಜ್ಜಿಗೆ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸೆ ನೀಡುತ್ತಿರುವ ಕಾರ್ಲೋ ಬಾವ. ತಮ್ಮ ೩೯ನೇ ವಯಸ್ಸಿನಲ್ಲಿ ಸಾಂಸಾರಿಕ ಜೀವನದಲ್ಲಿ ಬೇಸರಗೊಂಡು ಪತಿಯಿಂದ ದೂರಾಗಿ ಒಬ್ಬಂಟಿಗರಾಗಿ  ಜೀವನ ಮುಂದುವರಿಸಿದ ಎಮ್ಮಾ ೨೬ನೇ  ವಯಸ್ಸಿನಲ್ಲಿ ವಿವಾಹವಾಗಿದ್ದರು.


೨೦೧೪: ಬೆಂಗಳೂರು: ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನಿರ್ವಿ?ಸಿರುವ ಡಾ. ರಾಜ್ ಸ್ಮಾರಕವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಈದಿನ ಲೋಕಾರ್ಪಣೆ ಮಾಡಿದರು. ಸಮಾಧಿಯಿಂದ ತುಸು ದೂರದಲ್ಲಿ ಪ್ರತಿಷ್ಠಾಪನೆಗೊಂಡಿರುವ ಡಾ. ರಾಜ್ ಅವರ ಕಂಚಿನ ಪುತ್ಥಳಿಯನ್ನು ಅನಾವರಣ ಮಾಡಲಾಯಿತು. ಡಾ. ರಾಜ್ಕುಮಾರ್ ನಡೆದು ಬಂದ ಹಾದಿ ಚಿತ್ರ ಸಂಪುಟ ಪುಸ್ತಕವನ್ನು ಸೂಪರ್ ಸ್ಟಾರ್ ರಜನಿಕಾಂತ್ ಬಿಡುಗಡೆ ಮಾಡಿದರು ಮತ್ತು ರಾಜ್ಕುಮಾರ್ ಕುರಿತ ಸಾಕ್ಷ್ಯಚಿತ್ರವನ್ನು ಮೆಗಾಸ್ಟಾರ್ ಚಿರಂಜೀವಿ ಬಿಡುಗಡೆ ಮಾಡಿದರು. ರಾಜ್ಯ ಸರ್ಕಾರದ ಸಚಿವರು, ಶಾಸಕರು, ಲೋಕಸಭಾ ಸದಸ್ಯರು, ಚಿತ್ರರಂಗದ ಗಣ್ಯರು ಹಾಜರಿದ್ದರು.

೨೦೧೪: ಕೈರೋ: ಈಜಿಪ್ಟಿನ ಪದಚ್ಯುತ ಅಧ್ಯಕ್ಷ ಹೊಸ್ನಿ ಮುಬಾರಕ್ ವಿರುದ್ಧ ದಾಖಲಾಗಿದ್ದ ಕೊಲೆ ಪ್ರಕರಣ ಸಾಬೀತಾಗದ ಹಿನ್ನೆಲೆಯಲ್ಲಿ ಸ್ಥಳೀಯ ನ್ಯಾಯಾಲಯ ಅವರನ್ನು ದೋಷಮುಕ್ತಗೊಳಿಸಿತು. ೨೦೧೧ರಲ್ಲಿ ನಡೆದ ಕ್ಷಿಪ್ರಕ್ರಾಂತಿಯ ವೇಳೆ ನೂರಾರು ಪ್ರತಿಭಟನಕಾರರನ್ನು ಹತ್ಯೆಗೈದ ಆರೋಪವನ್ನು ಮುಬಾರಕ್ ವಿರುದ್ಧ ಹೊರಿಸಲಾಗಿತ್ತು. ಹಿಂದೆ ನ್ಯಾಯಾಲಯ ಮುಬಾರಕ್ ವಿರುದ್ಧದ ಆರೋಪವನ್ನು ಎತ್ತಿ ಹಿಡಿದು ಜೀವಾವಧಿ ಶಿಕ್ಷೆಯನ್ನು ವಿಧಿಸಿತ್ತು. ಇದೇ ವೇಳೆ ಮುಬಾರಕ್ ಅವರ

ಕಮಾಂಡರ್ಗಳನ್ನೂ ದೋಷಮುಕ್ತಿಗೊಳಿಸಿರುವ ನ್ಯಾಯಾಧೀಶ ಕಾಮೆಲ್ ಅಲ್-ರಶೀದ್ ಅವರು ಇಸ್ರೇಲಿಗೆ ಗ್ಯಾಸ್ನ್ನು ರಫ್ತು ಮಾಡಿದ ಹಿನ್ನೆಲೆಯಲ್ಲಿ ಹೊರಿಸಲಾಗಿದ್ದ ಭಷ್ಟಾಚಾರ ಪ್ರಕರಣದಲ್ಲಿಯೂ ಮುಬಾರಕ್ ಅವರನ್ನು ನಿರ್ದೋಷಿ ಎಂದು ಸಾರಿದರು. ಹೋಸ್ನಿ ಮುಬಾರಕ್ ಅವರ ಸಂಪುಟದಲ್ಲಿ ಒಳಾಡಳಿತ ಖಾತೆಯ ಸಚಿವರಾಗಿದ್ದ ಹಬೀಬ್ ಅಲ್-ಅಡ್ಲ್ಪಿ ಸೇರಿದಂತೆ ಮುಬಾರಕ್ ಅವರ ಏಳು ಮಂದಿ ಮಾಜಿ ಕಮಾಂಡರ್ಗಳ ವಿರುದ್ಧ ದಾಖಲಿಸಲಾಗಿದ್ದ ಸರಕಾರ ವಿರೋಧಿ ಪ್ರತಿಭಟನಕಾರರ ಹತ್ಯೆ ಪ್ರಕರಣದಲ್ಲಿ ಅಮಾಯಕರಾಗಿದ್ದಾರೆ ಎಂದು ನ್ಯಾಯಾಧೀಶರು ತೀರ್ಪಿತ್ತರು. ಮುಬಾರಕ್ ಅವರ ಈರ್ವರು ಪುತ್ರರ ವಿರುದ್ಧ ದಾಖಲಾಗಿದ್ದ ಎಲ್ಲಾ ಭ್ರಷ್ಟಾಚಾರ ಪ್ರಕರಣಗಳಿಂದಲೂ ನ್ಯಾಯಾಲಯ ದೋಷಮುಕ್ತಗೊಳಿಸಿತು. ೨೦೧೧ರಲ್ಲಿ ನಡೆದ ಕ್ರಾಂತಿಯ ವೇಳೆ ಸರಕಾರ ವಿರೋಧಿ ಪ್ರತಿಭಟನಕಾರರನ್ನು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ೨೦೧೨ರ ಜೂನ್ನಲ್ಲಿ ಮುಬಾರಕ್ ಮತ್ತವರ ಸಹಚರರನ್ನು ದೋಷಿಗಳೆಂದು ಸಾರಿದ್ದ ನ್ಯಾಯಾಲಯ ಜೀವಾವಧಿ ಶಿಕ್ಷೆಯನ್ನು ವಿಧಿಸಿತ್ತು. ತೀರ್ಪಿನ ವಿರುದ್ಧ ಮುಬಾರಕ್ ಸಲ್ಲಿಸಿದ್ದ ಮೇಲ್ಮನವಿಯನ್ನು ಇದೀಗ ನ್ಯಾಯಾಲಯ ಪುರಸ್ಕರಿಸಿ ಕೆಳ ನ್ಯಾಯಾಲಯ ನೀಡಿದ್ದ ಶಿಕ್ಷೆಯನ್ನು ರದ್ದುಗೊಳಿಸಿದ್ದೇ ಅಲ್ಲದೆ ದೋಷಮುಕ್ತಗೊಳಿಸಿತು. ಆದರೆ ಸಾರ್ವಜನಿಕ ನಿಧಿಯನ್ನು ದುರುಪಯೋಗಪಡಿಸಿಕೊಂಡ ಪ್ರಕರಣದಲ್ಲಿ ಮುಬಾರಕ್ ಇದೀಗ ದಕ್ಷಿಣ ಕೈರೋದ ಹೊರಭಾಗದಲ್ಲಿರುವ ಮಿಲಿಟರಿ ಆಸ್ಪತ್ರೆಯಲ್ಲಿ ಮೂರು ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ.

೨೦೧೪: ರಾಯ್ಸೆನ್: ಮಧ್ಯಪ್ರದೇಶದ ಭೋಪಾಲ್ನ ರಾಯ್ಸೆನ್ ಕೈಗಾರಿಕಾ ಪ್ರದೇಶದಲ್ಲಿ ಕ್ಲೋರಿನ್ ಅನಿಲ ಸೋರಿಕೆಯಾಗಿ ೩೯ ಕಾರ್ವಿ?ಕರು ಅಸ್ವಸ್ಥಗೊಂಡ ಘಟನೆ ಈದಿನ ಮಧ್ಯಾಹ್ನ ಘಟಿಸಿತು. ಘಟನೆಯಲ್ಲಿ ಅಸ್ವಸ್ಥಗೊಂಡವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ದೃಷ್ಟಿಯ ಮೇಲೆ ಪರಿಣಾಮ ಬೀರಿರುವ ಸಾಧ್ಯತೆ ಇದೆ ಎನ್ನಲಾಯಿತು. ಅನಿಲ ಸೋರಿಕೆಯಾಗಿ ಕೆಲ ಗಂಟೆಗಳಲ್ಲೇ ಕಣ್ಣು ಉರಿ ಮತ್ತು ವಾಂತಿ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಎಲ್ಲಾ ಕಾರ್ವಿ?ಕರನ್ನು ಆಸ್ಪತ್ರೆಗೆ ಸೇರಿಸಲಾಯಿತು ಎಂದು ಸ್ಥಳೀಯರು ಮಾಹಿತಿ ನೀಡಿದರು.


೨೦೧೪: ಬೀಜಿಂಗ್: ಕ್ಸಿನ್ಜಿಯಾಂಗ್ನ ವಾಯವ್ಯ ಭಾಗದಲ್ಲಿರುವ ಸಾಕೆ ಕೌಂಟಿಯಲ್ಲಿ ಉಗ್ರಗಾಮಿಗಳ ಬಾಂಬ್ ದಾಳಿಯಲ್ಲಿ ದಾಳಿಕೋರರು ಸೇರಿ ೧೫ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದರು. ೧೦ಕ್ಕೂ ಹೆಚ್ಚು ಮಂದಿ ತೀವ್ರವಾಗಿ  ಗಾಯಗೊಂಡರು. ವಾಹನದಲ್ಲಿ ಸ್ಥಳಕ್ಕೆ ಆಗಮಿಸಿದ ದಾಳಿಕೋರರು ಜನಸೇರುವ ಸಮಯ ನೋಡಿ ಕೃತ್ಯವೆಸಗಿದರು. ದಾಳಿಯಲ್ಲಿ ಸಾವನ್ನಪ್ಪಿರುವವರಲ್ಲಿ ೧೦ಕ್ಕೂ ಹೆಚ್ಚು ಮಂದಿ ದಾಳಿಕೋರರು ಸೇರಿದ್ದಾರೆ ಎನ್ನಲಾಯಿತು. ಉಯಿಗರ್ ಮುಸ್ಲಿಮ ಸಮೂದಾಯದವರೇ ಹೆಚ್ಚಿರುವ ಭಾಗದಲ್ಲಿ ವಲಸಿಗರಾದ ಹಾನ್ ಚೀನಿಸ್ ಮತ್ತು ಸ್ಥಳೀಯರ ನಡುವೆ ಸಂಘರ್ಷವಿದ್ದು, ಹಿನ್ನೆಲೆಯಲ್ಲಿ ದಾಳಿ ನಡೆದಿದೆ ಎನ್ನಲಾಯಿತು. ಈಸ್ಟ್ ಟರ್ಕಿಸ್ಥಾನ್ ಇಸ್ಲಾಮಿಕ್ ಕೂಡ ಹಿಂಸಾತ್ಮಕ ದಾಳಿ ನಡೆಸಿದ ಉದಾಹರಣೆಗಳಿದ್ದು, ಈಗ ಸಂಘಟನೆ ಕೂಡ ನಡೆಸಿರಬಹುದಾದ ಸಾಧ್ಯತೆ ಇದೆ ಎಂದು ಶಂಕಿಸಲಾಯಿತು.

೨೦೧೪:ನವದೆಹಲಿ: ಹಾಡಹಗಲೇ ಖಾಸಗಿ ಬ್ಯಾಂಕ್ನ ವಾಹನದ ಮೇಲೆ ದಾಳಿ ನಡೆಸಿದ ದುಷ್ಕರ್ವಿ?ಗಳು . ಕೋಟಿಯಷ್ಟು ಹಣವನ್ನು ದೋಚಿದ ಘಟನೆ ನವದೆಹಲಿಯಲ್ಲಿ ನಡೆದಿದ್ದು, ದೆಹಲಿಯ ಪ್ರಮುಖ ನಗರಗಳಲ್ಲಿ ನಾಕಾಬಂದಿ ಹಾಕಲಾಯಿತು. ಘಟನೆ ಜನತೆಯಲ್ಲಿ ಸಾಕಷ್ಟು ಭಯ ಹುಟ್ಟಿಸಿತು. ಎಟಿಎಂಗೆ ಹಣ ಭರ್ತಿ ಮಾಡಲೇಂದು ಬಂದಿದ್ದ ವಾಹನದ ಮೇಲೆ ದಾಳಿ ನಡೆಸಿದ ದರೋಡೆಕೋರರು ತಡೆಯಲು ಬಂದ ಬ್ಯಾಂಕ್ ಮತ್ತು ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದರು. ಆದರೂ ಜೀವದ ಹಂಗಿಲ್ಲದೇ ಅವರನ್ನು ತಡೆಯಲು ಮುಂದಾದಾಗ ಹಠಾತ್ ಗುಂಡಿನ ದಾಳಿ ನಡೆಸಿ ಅಂದಾಜು ಒಂದುವರೆ ಕೋಟಿ ರೂ. ದೋಚಿ ಪರಾರಿಯಾದರು



೨೦೧೪: ಹುಬ್ಬಳ್ಳಿ:  ಹುಬ್ಬಳ್ಳಿ ನಗರದ ಚುಕ್ಬುಕ್ ಸಂಸ್ಥೆಯಿಂದ ಜೂ.೨೮ರಂದು ಆಯೋಜಿಸಿದ್ದ ದೇಶದ ಅತೀ ಉದ್ದನೆಯ ಮಕ್ಕಳ ರೈಲು ಬಂಡಿಯು ೨೦೧೫ರ ಲಿಮ್ಕಾ ರಾಷ್ಟ್ರೀಯ ದಾಖಲೆ ಪುಸ್ತಕದ ಪ್ರಶಂಸೆಗೆ ಪಾತ್ರವಾಯಿತು. ನಗರದ ವಿವಿಧ ಶಾಲೆಗಳ ೬ರಿಂದ ೧೨ ವರ್ಷದ ,೬೦೦ ಮಕ್ಕಳು ಗೋಕುಲ ರಸ್ತೆಯಲ್ಲಿ ೭೦೦ ಮೀ. ಉದ್ದದ ರೈಲಿನಂತೆ ಸಂಚರಿಸಿ ಸಾಧನೆಗೆ ಕಾರಣರಾಗಿದ್ದಾರೆ ಎಂದು ಸಂಸ್ಥೆಯ ಸಹ ಸಂಸ್ಥಾಪಕ ಅರುಣ ಚಿಕ್ಕೊಪ್ಪ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದರು. ಮಕ್ಕಳ ಒಳ ಉಡುಪುಗಳ ತಯಾರಿಕೆ ಕ್ಷೇತ್ರದಲ್ಲಿ ಸಕ್ರಿಯವಾಗಿರುವ ಚುಕ್ಬುಕ್ ಸಂಸ್ಥೆ ವಿಶಿಷ್ಟ ಕಾರ್ಯಕ್ರಮ ಮೂಲಕ ಹುಬ್ಬಳ್ಳಿಗೆ ಕೀರ್ತಿ ತಂದಿದ್ದು, ಇನ್ನು ಮುಂದೆ ಸಂಸ್ಥೆಯ ಲಾಭಾಂಶದಲ್ಲಿ ಶೇ.೧೦ ಹಣವನ್ನು ಸಮಾಜ ಸೇವೆಗೆ ಮೀಸಲಿಡಲಾಗುವುದು ಎಂದು ಚಿಕ್ಕೊಪ್ಪ ಹೇಳಿದರು.


೨೦೧೪: ಬೆಂಗಳೂರು: ಬೆಲ್ಜಿಯಂನ ವೆಂಡಿ ಜಾನ್ಸ್ ಐಬಿಎಸ್ಎಫ್ ವಿಶ್ವ ಸ್ನೂಕರ್ ಚಾಂಪಿಯನ್ಷಿಪ್ನ ಮಹಿಳಾ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಇದರಿಂದ ವೆಂಡಿ ಜಾನ್ಸ್ ೩ನೇ ಬಾರಿಗೆ ವಿಶ್ವ ಸ್ನೂಕರ್ ಚಾಂಪಿಯನ್ ಕಿರೀಟಕ್ಕೆ ಮುತ್ತಿಕ್ಕಿದರು. ಮೊದಲು ೨೦೦೬ ಹಾಗೂ ೨೦೧೨ರಲ್ಲಿ ಪ್ರಶಸ್ತಿ ಗೆದ್ದಿದ್ದರು. ಶ್ರೀ ಕಂಠೀರವ ಒಳಾಂಗಣ ಸ್ಟೇಡಿಯಂನಲ್ಲಿ ಈದಿನ ನಡೆದ ಫ್ರೇಮ್ಳ ಫೈನಲ್ ಪಂದ್ಯದಲ್ಲಿ ವೆಂಡಿ ಜಾನ್ಸ್ - (೩೧-೭೬, ೭೨-, ೨೫-೬೫, ೭೪-೩೫, ೭೨-೩೨, ೮೨-೨೩, ೬೦-೩೧)ರಿಂದ ರಷ್ಯಾದ ಅನಾಸ್ತೇಷಿಯಾ ನೆಚಾವೆಯಾ ವಿರುದ್ಧ ಜಯ ಸಾಧಿಸಿದರು. ೧೯೯೮ರಿಂದಲೂ ಬೆಲ್ಜಿಯಂನ ಸ್ನೂಕರ್ನಲ್ಲಿ ಪಾರಮ್ಯ ಮೆರೆಯುತ್ತಿರುವ ವೆಂಡಿ ಜಾನ್ಸ್, ಅಲ್ಲಿನ ರಾಷ್ಟ್ರೀಯ ಚಾಂಪಿಯನ್ಷಿಪ್ನಲ್ಲಿ ಸತತವಾಗಿ ಬಾರಿಗೆ ಸೇರಿದಂತೆ ಒಟ್ಟು ೧೨ ಬಾರಿ ಚಾಂಪಿಯನ್ಪಟ್ಟ ಅಲಂಕರಿಸಿದ್ದಾರೆ.


೨೦೧೪: ಇಸ್ಲಾಮಾಬಾದ್: ಪಾಕಿಸ್ಥಾನದ ವಾಯವ್ಯ ಪ್ರಾಂತ್ಯದಲ್ಲಿನ ಉಗ್ರರ ಅಡಗುದಾಣಗಳನ್ನು ಗುರಿಯಾಗಿಸಿ ಪಾಕಿಸ್ಥಾನಿ ವಾಯುಪಡೆಯ ಸಮರ ವಿಮಾನಗಳು ನಡೆಸಿದ ವಾಯು ದಾಳಿಗಳಿಗೆ ಕನಿಷ್ಠ ೧೧ ಉಗ್ರರು ಬಲಿಯಾದರು. ಖೈಬರ್ ಬುಡಕಟ್ಟು ಜಿಲ್ಲೆಯ ತಿರಾಹ್ ಕಣಿವೆ ಪ್ರದೇಶದಲ್ಲಿನ ತಾಲಿಬಾನಿಗಳೊಂದಿಗೆ ನಂಟು ಹೊಂದಿರುವ ಉಗ್ರರ ಹಲವು ಅಡಗುದಾಣಗಳನ್ನು ಗುರಿಯಾಗಿಸಿ ಪಾಕಿಸ್ಥಾನ ಸೇನೆಯ ಸಮರ ವಿಮಾನಗಳು ದಾಳಿ ನಡೆಸಿದುವು. ತಾರಿಕ್ ಅಫ್ರಿದಿ ಉಗ್ರಗಾಮಿ ಗುಂಪಿಗೆ ಸೇರಿದ ಎಂಟು ಮಂದಿ ಉಗ್ರರು ಮತ್ತು ಲಷ್ಕರೆ ಇಸ್ಲಾಮ್ಗೆ ಸೇರಿದ ಮೂವರು ಉಗ್ರರು ದಾಳಿಯಲ್ಲಿ ಹತರಾದರು. ಪ್ರದೇಶದಲ್ಲಿನ ಉಗ್ರರ ಹಲವಾರು ಅಡಗುದಾಣಗಳನ್ನು ಸಂಪೂರ್ಣವಾಗಿ ನಾಶ ಪಡಿಸಲಾಗಿದೆ ಎಂದು ಭದ್ರತಾ ಪಡೆಯ ಅಧಿಕಾರಿಗಳು ತಿಳಿಸಿದರು.

೨೦೦೮: ಎರಡೂವರೆ ದಿನಗಳ ಕಾಲ ಮುಂಬೈ ಮಹಾನಗರವನ್ನು ಭಯದ ನೆರಳಿಗೆ ತಳ್ಳಿದ್ದ ಭಯೋತ್ಪಾದಕರನ್ನು ಸತತ ಕಾರ್ಯಾಚರಣೆ ಬಳಿಕ ಈದಿನ ಬೆಳಿಗ್ಗೆ ೮ರ ಹೊತ್ತಿಗೆ ಸಂಪೂರ್ಣ ಸದೆ ಬಡಿಯುವಲ್ಲಿ ಕಮಾಂಡೋಗಳು ಯಶಸ್ವಿಯಾದರು. ಅಮೆರಿಕದ ಅವಳಿ ಕಟ್ಟಡ ನಾಶದ ರೀತಿಯಲ್ಲಿ ತಾಜ್ ಹೋಟೆಲನ್ನೇ ಸಂಪೂರ್ಣ ಧ್ವಂಸಗೊಳಿಸುವ ಮತ್ತು ಕನಿಷ್ಠ ಸಾವಿರ ಜನರನ್ನು ಕೊಲ್ಲುವ ಹುನ್ನಾರವನ್ನು ಉಗ್ರರು ರೂಪಿಸಿದ್ದು ಇದರೊಂದಿಗೇ ಬಯಲಿಗೆ ಬಂತು. ತಾಜ್ ಹೋಟೆಲಿನಲ್ಲಿ ಕೇವಲ ಒಬ್ಬ ಉಗ್ರ ಮಾತ್ರ ಇದ್ದಾನೆ ಎಂಬ ನಂಬಿಕೆಯನ್ನು ಹುಸಿಗೊಳಿಸಿ, ಮೂವರು ಉಗ್ರರನ್ನು ಅತ್ಯಂತ ಯೋಜನಾ ಬದ್ಧವಾಗಿ ಮುಗಿಸುತ್ತ ಬಂದ ಎನ್ಎಸ್ಜಿ ಕಮಾಂಡೋಗಳು, ಬೆಳಿಗ್ಗೆ ಗಂಟೆಯ ಹೊತ್ತಿಗೆ ವಿಜಯದ ನಗೆ ಬೀರಿದರು. ಉಗ್ರರ ಅಟ್ಟಹಾಸಕ್ಕೆ ಸಿಲುಕಿ ೨೨ ಮಂದಿ ವಿದೇಶಿಯರು, ೧೫ ಮಂದಿ ಮಹಾರಾಷ್ಟ್ರ ಪೊಲೀಸರು, ಇಬ್ಬರು ಎನ್ಎಸ್ಜಿ ಕಮಾಂಡೋಗಳು, ೧೪೧ ಮಂದಿ ನಾಗರಿಕರ ಸಹಿತ ಒಟ್ಟು ೧೮೩ ಮಂದಿ ಪ್ರಾಣ ಕಳೆದುಕೊಂಡು ೩೨೭ ಮಂದಿ ಗಾಯಗೊಂಡರು.

೨೦೦೮: ಮುಂಬೈ ನಗರದಲ್ಲಿ ನಡೆದ ೬೦ ಗಂಟೆಗಳ ಕಾಲದ ಭಯೋತ್ಪಾದನಾ ದಾಳಿಯಿಂದಾಗಿ, ದೇಶದ ವಾಣಿಜ್ಯ ರಾಜಧಾನಿಗೆ ರೂ ೪೦೦೦ ಕೋಟಿ ಯಷ್ಟು ನಷ್ಟದ ಹೊಡೆತ ಬಿದ್ದಿದೆ ಎಂದು  ಉದ್ಯಮ ಪರಿಣತರು ತಿಳಿಸಿದರು.

ನು ಮತ್ತು ಸುವ್ಯವಸ್ಥೆ) ಎಂ.ಆರ್.ಪೂಜಾರ್, ಮೈಸೂರು ನಗರ (ಕಾನೂನು ಮತ್ತು ಸುವ್ಯವಸ್ಥೆ) ಡಿಸಿಪಿ ವಿ.ಎಸ್.ಡಿಸೋಜ, ಗುಪ್ತದಳ ಮಂಗಳೂರು ಎಸ್ಪಿ ಮಹಂತೇಶ್, ನಿವೃತ್ತ ಡಿವೈಎಸ್ಪಿ ಹಿರೇಮಠ್, ನಿವೃತ್ತ ಎಸ್ಪಿ ಅಪ್ಪಣ್ಣ ಅವರ ತಂಡ ಪ್ರಕರಣದ ತನಿಖೆ ನಡೆಸಿತ್ತು. ಸರಣಿ ಇಗರ್ಜಿ (ಚರ್ಚ್) ಸ್ಫೋಟ ಪ್ರಕರಣಕ್ಕೆ ಮರಣದಂಡನೆಗೆ ಗುರಿಯಾದವರು: ಬೆಂಗಳೂರಿನ ಮಹಮ್ಮದ್ ಇಬ್ರಾಹಿಂ (೪೦), ಅಮಾನತ್ ಹುಸೇನ್ ಮುಲ್ಲಾ (೫೮), ಚಿಕ್ಕಬಳ್ಳಾಪುರದ ಅಬ್ದುಲ್ ರಹಮಾನ್ ಸೇಠ್ (೫೦), ಹುಬ್ಬಳ್ಳಿಯ ಸೈಯದ್ ಮುನಿರುದ್ದೀನ್ ಮುಲ್ಲಾ (೪೦), ಆಂಧ್ರಪ್ರದೇಶದವರಾದ ಹಸ್ನುಜಾಮಾ (೫೫), ಶೇಖ್ ಹಷಂ ಅಲಿ (೩೦), ಮಹಮ್ಮದ್ ಶಫುದ್ದೀನ್ (೩೭), ಮಹಮ್ಮದ್ ಅಖಿಲ್ ಅಹಮ್ಮದ್ (೨೯), ಇಜಹಾರ್ ಬೇಗ್ (೩೨), ಸೈಯದ್ ಅಬ್ಬಾಸ್ ಅಲಿ (೨೮), ಮಹಮ್ಮದ್ ಖಾಲಿದ್ ಚೌದರಿ (೩೨). ಜೀವಾವಧಿ ಶಿಕ್ಷೆಗೆ ಗುರಿಯಾದವರು: ಚಿಕ್ಕಬಳ್ಳಾಪುರದ ಮಹಮ್ಮದ್ ಸಿದ್ದಿಕಿ (೪೫), ಆಂಧ್ರಪ್ರದೇಶದ ಮಹಮ್ಮದ್ ಡಿ ಫಾರೂಕ್ ಅಲಿ (೩೦), ಅಬ್ದುಲ್ ಹಬೀಬ್ (೪೮), ಷಂಷುಜಮಾ (೪೯), ಶೇಖ್ ಫರ್ದೀನ್ ವಲಿ (೪೫), ಸೈಯದ್ ಅಬ್ದುಲ್ ಖಾದರ್ ಜಿಲಾನಿ (೩೬), ಮಹಮ್ಮದ್ ಜಿಯಾಸುದ್ದೀನ್ (೩೫), ಹುಬ್ಬಳ್ಳಿಯ ರಿಷ್ ಹಿರೇಮಠ್ (೪೦), ಕೊಕಟನೂರಿನ ಬಷೀರ್ ಅಹಮ್ಮದ್ (೫೨), ಮಹಾರಾಷ್ಟ್ರದ ಮಹಮ್ಮದ್ ಹುಸೇನ್ (೪೫), ಭಟಕುರ್ಕಿಯ ಸಾಂಗಿ ಬಲಬಾಷಾ (೪೫) ಮತ್ತು ಮೀರಾಸಾಬ್ ಕೌಜಲಗಿ (೪೯). ತಲೆಮರೆಸಿಕೊಂಡ ಭಯೋತ್ಪಾದಕರು: ಜಿಯಾವುಲ್ ಹಸನ್ ಮತ್ತು ಆತನ ಮಕ್ಕಳಾದ ಸೈಯದ್ ಖಾಲಿದ್ ಪಾಷಾ, ಜಯೇದ್ ಉಲ್ ಹಸನ್, ಶಬಿ ಉಲ್ ಹಸನ್, ಖಲೀಲ್ ಪಾಷಾ ಇವರು ಪಾಕಿಸ್ಥಾನದಲ್ಲಿ ತಲೆ ಮರೆಸಿಕೊಂಡಿದ್ದಾರೆ ಎಂದು ನಂಬಲಾಯಿತು. ಶೇಖ್ ಅಮಿರ್ ಮತ್ತು ಚಾಹಬ್ ಸಹ ನಾಪತ್ತೆಯಾದವರಲ್ಲಿ ಒಬ್ಬ.
           
೨೦೦೮: ನಿಶಾ ಚಂಡ ಮಾರುತದ ಪರಿಣಾಮವಾಗಿ  ತಮಿಳುನಾಡಿನಲ್ಲಿ ಐದು ದಿನಗಳಿಂದ ಸುರಿದ ಭಾರಿ  ಮಳೆಗೆ ಈವರೆಗೆ  ಒಟ್ಟು ೧೦೩ ಜೀವಗಳು ಬಲಿಯಾಗಿವೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿ ಹೇಳಿದರು. ಭಾರಿ ಮಳೆಗೆ ೪೫೦ಕ್ಕೂ ಹೆಚ್ಚು ಜಾನುವಾರುಗಳೂ ಪಾಣ ಕಳೆದುಕೊಂಡಿದ್ದು, ೫೦,೮೯೦ ಮನೆಗಳು ಹಾನಿಗೊಂಡಿವೆ ಎಂದು ಅವರು ನುಡಿದರು.

೨೦೦೮: ಬ್ರೆಜಿಲ್ ದೇಶಾದ್ಯಂತ ಚಂಡಮಾರುತಕ್ಕೆ ಬಲಿಯಾದವರ ಸಂಖ್ಯೆ ೧೦೦ಕ್ಕೆ ಏರಿತು.

೨೦೦೮:  ದಕ್ಷಿಣ ಆಫ್ಘಾನಿಸ್ಥಾನದಲ್ಲಿ ಆಫ್ಘನ್ ಯೋಧರು ಹಾಗೂ ಅಮೆರಿಕ ನೇತೃತ್ವದ ಜಂಟಿ ಪಡೆಗಳು ನಡೆಸಿದ ವಾಯು ಮತ್ತು ಭೂಮಿಯ ಮೇಲಿನ ದಾಳಿಗಳಲ್ಲಿ  ಒಬ್ಬ ಕಮಾಂಡರ್ ಸೇರಿದಂತೆ ೫೩ ತಾಲಿಬಾನ್ ಉಗ್ರರು ಮೃತರಾದರು.

೨೦೦೭: ಪಾಕಿಸ್ಥಾನದ ಅಧ್ಯಕ್ಷರಾಗಿ ಜನರಲ್ ಪರ್ವೇಜ್ ಮುಷರಫ್ ಅವರು ಸತತ ಎರಡನೇ ಅವಧಿಗಾಗಿ ಇಸ್ಲಾಮಾಬಾದಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಐವಾನ್- ಎ -  ಅಧ್ಯಕ್ಷರ ಅರಮನೆಯಲ್ಲಿ ಮುಖ್ಯ ನ್ಯಾಯಮೂರ್ತಿ ಅಬ್ದುಲ್ ಹಮೀದ್ ದೋಗರ್ ಅವರು ಮುಷರಫ್ ಅವರಿಗೆ ಅಧಿಕಾರ ಗೌಪ್ಯತೆಯ ಪ್ರಮಾಣ ವಚನವನ್ನು ಬೋಧಿಸಿದರು. ಅಂತಾರಾಷ್ಟ್ರೀಯ ಹಾಗೂ ದೇಶದಲ್ಲಿ ಒತ್ತಡಗಳು ಹೆಚ್ಚಾದ ಹಿನ್ನೆಲೆಯಲ್ಲಿ ಮುಷರಫ್ ಅವರು ಇದಕ್ಕೆ ಒಂದು ದಿನ ಮೊದಲು ಸೇನಾ ಮುಖ್ಯಸ್ಥನ ಹುದ್ದೆಯನ್ನು ತೊರೆದಿದ್ದರು.


೨೦೦೭: ಕಂಪೆನಿಯ ಮುಖ್ಯಸ್ಥರ ವಿರುದ್ಧ ಜನಾಂಗೀಯ ನಿಂದನೆ ಆರೋಪ ದಾಖಲಿಸಿದ್ದ ಭಾರತೀಯ ಮೂಲದ ಕಾಲ್ ಸೆಂಟರ್ ಉದ್ಯೋಗಿ ನಾರ್ಥ್ಯಾಂಪ್ಟನ್  ನಿವಾಸಿ ಚೇತನ್ ಕುಮಾರ್ ಮೆಶ್ರಾಮ್ ಅವರಿಗೆ ಪರಿಹಾರವಾಗಿ ೫ ಸಾವಿರ ಪೌಂಡುಗಳನ್ನು ನೀಡಲು ಸಂಬಂಧಿಸಿದ ಕಂಪೆನಿಗೆ ನಾರ್ಥ್ಯಾಂಪ್ಟನ್ ಜನಾಂಗೀಯ ಸಮಾನತೆ ಮಂಡಳಿ ಲಂಡನ್ನಿನಲ್ಲಿ ಆದೇಶಿಸಿತು. ಬ್ರಿಟಿಷರಂತೆ ಇಂಗ್ಲಿಷಿನಲ್ಲಿ ಮಾತನಾಡದ ಕಾರಣವೊಡ್ಡಿ ಕಂಪೆನಿಯ ಮುಖ್ಯಸ್ಥರು ತನ್ನನ್ನು ಕೆಲಸದಿಂದ ಕಿತ್ತುಹಾಕಿರುವುದಾಗಿ ಚೇತನ್ ಕುಮಾರ್ ಮೆಶ್ರಾಮ್ ಅವರು ಮಂಡಳಿಗೆ ದೂರು ಸಲ್ಲಿಸಿದ್ದರು.

೨೦೦೭: ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಹತ್ಯೆಗೆ ಪ್ರತೀಕಾರವಾಗಿ ೧೯೮೪ರಲ್ಲಿ ನಡೆದ ಸಿಖ್ ವಿರೋಧಿ ದಂಗೆಯಲ್ಲಿ ಕಾಂಗ್ರೆಸ್ ನಾಯಕ ಜಗದೀಶ್ ಟೈಟ್ಲರ್ ಪಾತ್ರದ ಕುರಿತು ಸಾಕ್ಷ್ಯ ಹೇಳುವುದಾಗಿ ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿದ ಜಸ್ಬೀರ್ ಸಿಂಗ್ ಪ್ರಕಟಿಸಿದರು. ಇದರಿಂದ ಇಡೀ ಪ್ರಕರಣಕ್ಕೆ ಹೊಸ ತಿರುವು ಲಭಿಸಿತು. ಸಿಖ್ಖರ ವಿರುದ್ಧ ದೌರ್ಜನ್ಯ, ಹಲ್ಲೆಗೆ ಪ್ರಚೋದನೆ ನೀಡಿದ್ದರು ಎಂಬ ಆರೋಪ ಟೈಟ್ಲರ್ ಮೇಲಿದ್ದು, ಅಕ್ಟೋಬರ್  ತಿಂಗಳಲ್ಲಷ್ಟೇ ಸಿಬಿಐ ಅವರ ವಿರುದ್ಧ ತನಗೆ ಯಾವುದೇ ಸಾಕ್ಷ್ಯ ಲಭಿಸಿಲ್ಲ ಎಂದು ಹೇಳಿತ್ತು.

೨೦೦೭: ಅಖಿಲ ಭಾರತ ವೈದ್ಯ ವಿಜ್ಞಾನ ಸಂಸ್ಥೆ (ಏಮ್ಸ್) ನಿರ್ದೇಶಕ ಪಿ.ವೇಣುಗೋಪಾಲ್ ನಿವೃತ್ತಿ ವಯೋಮಿತಿಯನ್ನು ೬೫ ವರ್ಷಕ್ಕ್ಕೆ ನಿಗದಿಗೊಳಿಸುವ ವಿವಾದಾತ್ಮಕ ಮಸೂದೆ ವಿರೋಧಿಸಿ ಆರಂಭಿಸಿದ್ದ ತಮ್ಮ ಮುಷ್ಕರವನ್ನು ಏಮ್ಸ್ ವೈದ್ಯರು ಹೈಕೋರ್ಟ್ ಆದೇಶದ ಮೇರೆಗೆ ಹಿಂತೆಗೆದುಕೊಂಡರು.

೨೦೦೭:  ಮಿತ ‘ವೈನ್ ಸೇವನೆ ಹೃದಯಕ್ಕೆ ಒಳ್ಳೆಯದು ಎಂಬ ಮಾತಿದೆ. ಆದರೆ ಈ ತೆರನಾದ ‘ವೈನ್ ಸೇವನೆಯು ಮಹಿಳೆಯರ ರಕ್ತನಾಳದ ಉರಿಯನ್ನು ತಂಪಾಗಿ ಇಡುತ್ತದಂತೆ..! ಸ್ಪೇನ್ ದೇಶದ ಸಂಶೋಧಕರು ಒಂದು ತಿಂಗಳ ಕಾಲ ನಡೆಸಿದ ಪ್ರಯೋಗವೊಂದರಲ್ಲಿ ಕಂಡುಬಂದ ಸತ್ಯಾಂಶವಿದು. ಕೆಲವು ಮಹಿಳೆಯರಿಗೆ ನಿತ್ಯವೂ ಎರಡು ಲೋಟಗಳಷ್ಟು ‘ಕೆಂಪು ವೈನ್ ಅನ್ನು ನಾಲ್ಕು ವಾರಗಳ ಕಾಲ ನೀಡಲಾಯಿತು. ಆ ಒಂದು ತಿಂಗಳ ನಂತರ ಅವರನ್ನು ಪರೀಕ್ಷೆಗೆ ಒಳಪಡಿಸಿದಾಗ ಅವರ ರಕ್ತದಲ್ಲಿ ಉರಿ ಉಂಟು ಮಾಡುವ ಅಂಶದಲ್ಲಿ ಗಣನೀಯ ಇಳಿತ  ಕಂಡುಬಂದಿತು.

೨೦೦೭: ಕನ್ನಡ ಪುಸ್ತಕ ಪ್ರಾಧಿಕಾರದ ೨೦೦೬ನೇ ಸಾಲಿನ ‘ಪುಸ್ತಕ ಸೊಗಸು ಬಹುಮಾನಕ್ಕೆ ಆಯ್ಕೆಯಾದ ೪ ಕೃತಿಗಳ ಪೈಕಿ ಮೊದಲ ಬಹುಮಾನವು ಬೆಂಗಳೂರಿನ ಅಸೀಮ ಪ್ರತಿಷ್ಠಾನ ಪ್ರಕಾಶಿಸಿದ ಹರೀಶ್ ಆರ್. ಭಟ್ ಮತ್ತು ಪ್ರಮೋದ್ ಸುಬ್ಬರಾವ್ ಅವರ ‘ಪಕ್ಷಿ ಪ್ರಪಂಚ ಪುಸ್ತಕದ ಪಾಲಾಯಿತು. ಬೆಂಗಳೂರಿನ ಚಾರ್ವಾಕ ಪ್ರಕಾಶನ ಹೊರತಂದ ಈರಪ್ಪ ಎಂ. ಕಂಬಳಿ ಅವರ ‘ಚಾಚಾ ನೆಹರು ಮತ್ತು ಈಚಲು ಮರ ಕೃತಿಗೆ ೨ನೇ ಬಹುಮಾನ, ಅಂಕಿತ ಪುಸ್ತಕ ಹೊರತಂದ ಜಯಂತ ಕಾಯ್ಕಿಣಿ ಅವರ ‘ಶಬ್ದತೀರ ಕೃತಿಗೆ ೩ನೇ ಬಹುಮಾನ ಹಾಗೂ ಅಭಿನವ ಪ್ರಕಾಶನ ಹೊರತಂದ ಭಾಗೀರಥಿ ಹೆಗಡೆ ಅವರ ‘ಗುಬ್ಬಿಯ ಸ್ವರ್ಗ ಕೃತಿಗೆ ಮಕ್ಕಳ ಪುಸ್ತಕ ಬಹುಮಾನ ಲಭಿಸಿತು.

೨೦೦೭: ಸರ್ಕಾರಕ್ಕೆ ಪಾವತಿ ಮಾಡಬೇಕಾದ ಸುಮಾರು ೨೦.೩ ಕೋಟಿ ರೂಪಾಯಿಯ ವಾಣಿಜ್ಯ ತೆರಿಗೆ ಬಾಕಿ ಉಳಿಸಿಕೊಂಡಿರುವ ಹಿನ್ನೆಲೆಯಲ್ಲಿ ಚಿತ್ರನಟ ಹಾಗೂ ನಿರ್ದೇಶಕ ಸಂಜಯ್ ಖಾನ್ ಅವರು ನಿರ್ದೇಶಕರಾಗಿರುವ ನಗರದಲ್ಲಿನ ‘ವರ್ಲ್ಡ್ ರೆಸಾರ್ಟ್ ಕಂಪೆನಿಗೆ ಕರ್ನಾಟಕ ಹೈಕೋರ್ಟ್ ಒಂದು ಲಕ್ಷ ರೂಪಾಯಿ ದಂಡ ವಿಧಿಸಿತು.

೨೦೦೭: ವಿದೇಶ ಯಾತ್ರೆ ಹಾಗೂ ವಿದೇಶ ವಾಸಕ್ಕೆ ಶಾಸ್ತ್ರ ಹಾಗೂ ಸಂಪ್ರದಾಯಗಳಲ್ಲಿ ವಿರೋಧವಿರುವುದರಿಂದ ಯಾವುದೇ ಕಾರಣಕ್ಕೂ ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥರು ಪರ್ಯಾಯ ವೇಳೆ ಕೃಷ್ಣನ ಪೂಜೆ ಮಾಡುವಂತಿಲ್ಲ ಎಂದು ಉಡುಪಿ ಅಷ್ಟಮಠಗಳ ಯತಿಗಳು ತಾಕೀತು ಮಾಡಿದರು. ಕೃಷ್ಣಮಠದಲ್ಲಿ ತುರ್ತುಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ಪ್ರಕಟಿಸಿದ ಪೇಜಾವರ ಮಠಾಧೀಶ ವಿಶ್ವೇಶತೀರ್ಥರು, ವಿದೇಶ ಯಾತ್ರೆ ಮಾಡಿದವರಿಗೆ ಕೃಷ್ಣನ ಪೂಜೆಗೆ ಈ ತನಕ ಅವಕಾಶ ನೀಡಲಾಗಿಲ್ಲ. ಆ ನಿಯಮವನ್ನು ಪುತ್ತಿಗೆ ಶ್ರೀಗಳೂ ಪಾಲಿಸಬೇಕಾಗಿದೆ ಎಂದು ಹೇಳಿದರು.

೨೦೦೭: ದೇಶದ ಎರಡನೇ ಅತಿದೊಡ್ಡ ಬ್ಯಾಂಕ್ ಐಸಿಐಸಿಐ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಕೆ. ವಿ. ಕಾಮತ್ ಅವರನ್ನು  ಫೋಬ್ಸ್  ಏಷ್ಯಾ ‘ವರ್ಷದ ಉದ್ಯಮಿ ಎಂಬುದಾಗಿ ಗುರುತಿಸಿತು.

೨೦೦೬: ಇಂಡೋನೇಷ್ಯದ ಮೊಲುಕಾಸ್ ದ್ವೀಪದ ಸಾಗರ ತಳದಲ್ಲಿ ಬೆಳಗ್ಗೆ ೭ ಗಂಟೆ ವೇಳೆಗೆ ಶಕ್ತಿಶಾಲಿ ಭೂಕಂಪ ಸಂಭವಿಸಿತು. ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ ೬.೧ರಷ್ಟಿತ್ತು.

೨೦೦೬: ತಮಿಳುನಾಡಿನ ಮದುರೈಯಲ್ಲಿ ಜನಿಸಿದ ಚಿತ್ರಾ ಭರೂಚ ಅವರು ಬಿಬಿಸಿಯ ಪ್ರಪ್ರಥಮ ಮಹಿಳಾ ಮುಖ್ಯಸ್ಥೆಯಾಗಿ ನೇಮಕಗೊಂಡರು. ಬಿಬಿಸಿ ಅಧ್ಯಕ್ಷ ಮೈಕೆಲ್ ಗ್ರೇಡ್ ರಾಜೀನಾಮೆ ಕಾರಣ ಭರೂಚ ಅವರು ಹಂಗಾಮಿ ಮುಖ್ಯಸ್ಥೆಯಾಗಿ ಅಧಿಕಾರ ವಹಿಸಿಕೊಂಡರು.

೨೦೦೬: ಭಾರತೀಯ ಕ್ರಿಕೆಟ್ ತಂಡದ ಮಾಜಿ ಟೆಸ್ಟ್ ಆಟಗಾರ ಹನುಮಂತ ಸಿಂಗ್ (೬೭) ಮುಂಬೈಯಲ್ಲಿ ನಿಧನರಾದರು.

೨೦೦೬: ವೈಜ್ಞಾನಿಕ ಸಂಶೋಧನೆಗಳಿಗಾಗಿ ಪ್ರತಿವರ್ಷ ನೀಡಲಾಗುವ ಜಿ.ಡಿ. ಬಿರ್ಲಾ ಪ್ರಶಸ್ತಿಗೆ ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರದ ಭೌತಶಾಸ್ತ್ರ ವಿಜ್ಞಾನಿ ಪ್ರೋ. ಶ್ರೀರಾಮ್ ರಾಮಸ್ವಾಮಿ ಆಯ್ಕೆಯಾದರು.

೨೦೦೬: ಮಣಿಪಾಲ ಕೆ.ಎಂ.ಸಿ.ಯ ಪ್ರಾಕ್ತನ ವಿದ್ಯಾರ್ಥಿ, ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಡಾ. ರಾಧಾಕೃಷ್ಣ ಸುಧಾಕರ ಶಾನಭಾಗ ಅವರು ಇಂಗ್ಲೆಂಡಿನ ಮ್ಯಾಜಿಸ್ಟ್ರೇಟ್ ಹುದ್ದೆಗೆ ನೇಮಕಗೊಂಡರು. ಇಂಗ್ಲೆಂಡಿನ ಲಾರ್ಡ್ ಚಾನ್ಸಲರ್ ಅವರು ಈ ನೇಮಕ ಮಾಡಿದ್ದು, ಇಂಗ್ಲೆಂಡಿನಲ್ಲಿ ಈ ಹ್ದುದೆಗೆ ನೇಮಕ ಗೊಂಡ ಪ್ರಥಮ ಕನ್ನಡಿಗ ಎಂಬ ಹೆಗ್ಗಳಿಕೆಗೆ ಶಾನಭೋಗ ಪಾತ್ರರಾದರು.

೨೦೦೬: ಕೇರಳದ ನಿಲಕ್ಕಲ್ ಎಕ್ಯುಮಾನಿಕಲ್ ಟ್ರಸ್ಟ್ ಸ್ಥಾಪಿಸಿದ ಧಾರ್ಮಿಕ ಸದ್ಭಾವನಾ ಪ್ರಶಸ್ತಿಗೆ ಖ್ಯಾತ ಸಾಹಿತಿ ಡಾ. ಯು.ಆರ್. ಅನಂತಮೂರ್ತಿ ಮತ್ತು ಆರ್ಚ್ ಬಿಷಪ್ ಮಾರ್ ಜೋಸೆಫ್ ಪೊವಾಥಿಲ್ ಆಯ್ಕೆಯಾದರು.

೨೦೦೫: ಕುದುರೆಮುಖ ಕಬ್ಬಿಣದ ಅದಿರು ಗಣಿಯನ್ನು ೨೦೦೫ರ ಡಿಸೆಂಬರ್ ೩೧ರ ಒಳಗೆ ಕಾಯಂ ಆಗಿ ಮುಚ್ಚುವಂತೆ ಕರ್ನಾಟಕ ಸರ್ಕಾರಕ್ಕೆ ನೀಡಿದ ಆದೇಶವನ್ನು ಪುನರ್ವಿಮರ್ಶಿಸಬೇಕು ಎಂದು ಕೋರಿ ಕುದುರೆಮುಖ ಶ್ರಮಶಕ್ತಿ ಸಂಘಟನೆ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ತಳ್ಳಿಹಾಕಿತು.

೨೦೦೫: ಬೆಂಗಳೂರು ಕಾನೂನು ವಿಶ್ವ ವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕ ಡಾ. ಶ್ರೀಪಾದ್ ಗಣಪ ಭಟ್ ಅವರು ಕೇರಳದ ಎರ್ನಾಕುಳಂನಲ್ಲಿ ಸ್ಥಾಪನೆಗೊಂಡಿರುವ ನ್ಯಾಷನಲ್ ಯುನಿವರ್ಸಿಟಿ ಆಫ್ ಅಡ್ವಾನ್ಸಡ್ ಲೀಗಲ್ ಸ್ಟಡೀಸ್ನ ಪ್ರಥಮ ಕುಲಪತಿಯಾಗಿ ನೇಮಕಗೊಂಡರು.

೨೦೦೫: ದೂರದರ್ಶಿತ್ವ, ವೈಯಕ್ತಿಕ ಪ್ರತಿಭೆ ಹಾಗೂ ೨೧ನೇ ಶತಮಾನದಲ್ಲಿ ವಿಶ್ವಶಾಂತಿಯೆಡೆಗೆ ತೋರಿದ ಆಸಕ್ತಿಗಾಗಿ ಪಾಕಿಸ್ಥಾನದ ಮಾಜಿ ಪ್ರಧಾನಿ, ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ ಅಧ್ಯಕ್ಷೆ ಬೆನಜೀರ್ ಭುಟ್ಟೋ ಅವರಿಗೆ ೨೦೦೫ರ ಸಾಲಿನ ‘ವಿಶ್ವ ಸಹಿಷ್ಣುತೆ ಪ್ರಶಸ್ತಿಯನ್ನು ಜರ್ಮನಿಯ ಬರ್ಲಿನ್ನಿನಲ್ಲಿ ಪ್ರದಾನ ಮಾಡಲಾಯಿತು. ರಷ್ಯಾದ ಮಾಜಿ ಅಧ್ಯಕ್ಷ ಮಿಖಾಯಿಲ್ ಗೊರ್ಬಚೆವ್ ಪ್ರಶಸ್ತಿ ಪ್ರದಾನ ಮಾಡಿದರು.

೨೦೦೫: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷರಾಗಿ ಕೇಂದ್ರ ಸಚಿವ ಶರದ್ ಪವಾರ್ ಆಯ್ಕೆಯಾದರು. ಹಾಲಿ ಅಧ್ಯಕ್ಷ ಜಗನ್ ಮೋಹನ್ ದಾಲ್ಮಿಯಾ ಬಣದ ರಣಬೀರ್ ಸಿಂಗ್ ಮಹೇಂದ್ರ ಅವರು ಪವಾರ್ ಕೈಯಲ್ಲಿ ಸೋಲು ಅನುಭವಿಸಿದರು.

೨೦೦೫: ಹಿರಿಯ ಯಕ್ಷಗಾನ ಹಾಸ್ಯ ಕಲಾವಿದ ವೇಣೂರು ಸುಂದರ ಆಚಾರ್ಯ (೬೫) ಅಲ್ಪ ಕಾಲದ ಅನಾರೋಗ್ಯದಿಂದ ನಿಧನರಾದರು.

೨೦೦೧: ಖ್ಯಾತ ಗಾಯಕ ಜಾರ್ಜ್ ಹ್ಯಾರಿಸನ್ ತಮ್ಮ ೫೮ನೇ ವಯಸ್ಸಿನಲ್ಲಿ ಲಾಸ್ ಏಂಜೆಲಿಸ್ನಲ್ಲಿ ಗಂಟಲ ಕ್ಯಾನ್ಸರ್ ಪರಿಣಾಮವಾಗಿ ನಿಧನರಾದರು.

೧೯೯೩: ಭಾರತೀಯ ಕೈಗಾರಿಕೋದ್ಯಮಿ ಹಾಗೂ ಭಾರತದಲ್ಲಿ ವಿಮಾನಯಾನದ ಮೊದಲಿಗರಾದ ಜೆ. ಆರ್. ಡಿ. ಟಾಟಾ (hಣಣಠಿ://eಟಿ.ತಿiಞiಠಿeಜiಚಿ.oಡಿg/ತಿiಞi/ಎ._ಖ._ಆ._ಖಿಚಿಣಚಿ) ಅವರು ಜಿನೇವಾದಲ್ಲಿ ತಮ್ಮ ೮೯ನೇ ವಯಸ್ಸಿನಲ್ಲಿ ನಿಧನರಾದರು. ಪ್ಯಾರಿಸ್ಸಿನ ಅತ್ಯಂತ ದೊಡ್ಡದಾದ ಹಾಗೂ ಹೆಸರುವಾಸಿಯಾದ ಪೇರೆ ಲಾಚೈಸ್ನ ರುದ್ರಭೂಮಿಯಲ್ಲಿ ಅವರ ಅಂತ್ಯಕ್ರಿಯೆ ನೆರವೇರಿಸಲಾಯಿತು. ಬಲ್ಜಾಕ್, ಪಿಸ್ಸಾರೊ, ಚೋಪಿನ್ ಮತ್ತು ಸರಾಹ ಬೆರ್ನಾರ್ಡ್ ಅವರ ಸಾಲಿನಲ್ಲೇ ಟಾಟಾ ಸಮಾಧಿಯನ್ನೂ ನಿರ್ಮಿಸಲಾಯಿತು.

೧೯೮೮: ಪ್ರಧಾನಿ ಸ್ಥಾನಕ್ಕೆ ರಾಜೀವಗಾಂಧಿ ರಾಜೀನಾಮೆ ನೀಡಿದರು.

೧೯೭೭: ಭಾರತದ ಮೈಕೆಲ್ ಫರೀರಾ ಅವರು ತಮ್ಮ ಮೂರು ವಿಶ್ವ ಬಿಲಿಯರ್ಡ್ಸ್ ಅಮೆಚೂರ್ ಚಾಂಪಿಯನ್ ಶಿಪ್ ಗಳ ಪೈಕಿ ಮೊದಲನೆಯದನ್ನು ಮೆಲ್ಬೋರ್ನಿನಲ್ಲಿ ಗೆದ್ದುಕೊಂಡರು. ೧೯೮೧ರಲ್ಲಿ ನವದೆಹಲಿಯಲ್ಲಿ ಹಾಗೂ ೧೯೮೩ರಲ್ಲಿ ಮಾಲ್ಟಾದಲ್ಲೂ ಅವರು ವಿಶ್ವ ಬಿಲಿಯರ್ಡ್ಸ್ ಹವ್ಯಾಸಿ ಚಾಂಪಿಯನ್ ಶಿಪ್ ಗಳನ್ನು ತಮ್ಮ ಹೆಗಲಿಗೆ ಏರಿಸಿಕೊಂಡರು.

೧೯೭೭: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಈ ದಿನವನ್ನು ಅಂತಾರಾಷ್ಟ್ರೀಯ ಸಾಮರಸ್ಯ ದಿನವಾಗಿ ಆಚರಿಸಲು ಪ್ರಾರಂಭಿಸಿತು. ಈ ದಿನ ಪ್ಯಾಲೆಸ್ಟೈನ್ ವಿಭಜನೆ ಕರಡನ್ನು ಸಭೆ ಅಂಗೀಕರಿಸಿತು. ಸ್ವತಂತ್ರ ಯಹೂದ್ಯ ಮತ್ತು ಅರಬ್ ರಾಜ್ಯವಾಗಿ ಪ್ಯಾಲೆಸ್ಟೈನನ್ನು  ವಿಭಜಿಸಲಾಯಿತು. ಪ್ಯಾಲೆಸ್ಟೈನ್ ಜನರಿಗೆ ಸ್ವಾತಂತ್ರ್ಯ ಹಾಗೂ ಪ್ರಜಾಪ್ರಭುತ್ವ ಲಭಿಸಿತು.

೧೯೬೦: ಸಾಹಿತಿ ಚಂದ್ರಿಕಾ ಪುರಾಣಿಕ ಜನನ.

೧೯೫೧: ಭಾಷಾಶಾಸ್ತ್ರ, ಕನ್ನಡ ಶೈಲಿ ಶಾಸ್ತ್ರದಲ್ಲಿ ವಿದ್ವಾಂಸರಾದ ಡಾ. ಬಿ. ಮಲ್ಲಿಕಾರ್ಜುನ ಅವರು ಆರ್. ಭದ್ರಣ್ಣ- ತಾಯಮ್ಮ ದಂಪತಿಯ ಮಗನಾಗಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ಜನಿಸಿದರು.

೧೯೪೭: ಪ್ಯಾಲೆಸ್ಟೈನನ್ನು ಅರಬರು ಮತ್ತು ಯಹೂದ್ಯರ ಮಧ್ಯೆ ವಿಭಜನೆ ಮಾಡಲು ಕರೆ ನೀಡುವ ಗೊತ್ತುವಳಿಯನ್ನು ವಿಶ್ವಸಂಸ್ಥೆ ಜನರಲ್ ಅಸೆಂಬ್ಲಿಯು ಅಂಗೀಕರಿಸಿತು.

೧೯೪೫: ಯುಗೋಸ್ಲಾವಿಯಾವು ಗಣರಾಜ್ಯವಾಯಿತು.

೧೯೨೪: ಇಟಲಿಯ ಖ್ಯಾತ ಒಪೇರಾ ಗಾಯಕ ಗಿಯಾಕೊಮೊ ಪುಸ್ಸಿನಿ ಗಂಟಲ್ ಕ್ಯಾನ್ಸರ್ ಪರಿಣಾಮವಾಗಿ ಬ್ರಸ್ಸೆಲ್ಸಿನಲ್ಲಿ ತಮ್ಮ ೬೫ನೇ ವಯಸ್ಸಿನಲ್ಲಿ ಮೃತರಾದರು. ಲಾ ಬೊಹೇಮ್ ಮತ್ತು ಮ್ಯಾಡೇಮ್ ಬಟರ್ ಫ್ಲೈ ಹಾಡುಗಳು ಅವರಿಗೆ ಖ್ಯಾತಿ ತಂದುಕೊಟ್ಟಿದ್ದವು.



No comments:

Post a Comment