Thursday, January 31, 2019

ಇಂದಿನ ಇತಿಹಾಸ History Today ಜನವರಿ 31

ಇಂದಿನ ಇತಿಹಾಸ History Today ಜನವರಿ 31

2018: ನವದೆಹಲಿ: ಚಳಿಗಾಲ ಕೊನೆಯ ಹಂತಕ್ಕೆ ಬರುತ್ತಿದ್ದರೂ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ನೆಟ್ ಜಾಲಾಡುವ ಮಂದಿನೆಟಿಜನ್ನರು ಅಂತರ್ಜಾಲದಲ್ಲಿ ಜಾಕೆಟ್ಗಳ ಬೆಲೆ ಹುಡುಕಾಡುವಂತೆ ಮಾಡಿದರು. ಒಂದ್ನಿಮಿಷ... ಕೊಳ್ಳುವ ಸಲುವಾಗಿ ಅಲ್ಲ.. ಶಿಲ್ಲಾಂಗ್ ಕಾರ್ಯಕ್ರಮವೊಂದರಲ್ಲಿ ರಾಹುಲ್ ಗಾಂಧಿ ಅವರುದುಬಾರಿ ಜಾಕೆಟ್ ತೊಟ್ಟುಕೊಂಡ ಪರಿಣಾಮವಾಗಿ ನೆಟಿಜೆನ್ನರು ಅಂತರ್ಜಾಲದಲ್ಲಿ ಜಾಕೆಟ್ ಗಳ ಬೆಲೆ ಎಷ್ಟೆಂದು ಹುಡುಕಾಟ ನಡೆಸಿದರು.  ನೆಟಿಜನ್ನರು ಜಾಕೆಟ್ ಬೆಲೆಗಳ ತಡಕಾಟ ನಡೆಸುತ್ತಿರುವಾಗ ಇದರ ಲಾಭ ಪಡೆದ ಬಿಜೆಪಿ ರಾಹುಲ್ ಗಾಂಧಿ ಅವರು ಧರಿಸಿದ ಜಾಕೆಟ್ ಬೆಲೆ ಸುಮಾರು ೭೦,೦೦೦ ರೂಪಾಯಿಗಳು ಎಂದು ಪ್ರತಿಪಾದಿಸಿ ಟ್ವೀಟ್ ಮಾಡಿತು. ‘ಆರ್ ಜಿ ಅವರೇ    ಸೂಟ್ (ಪನ್ ಉದ್ದೇಶಪೂರ್ವಕ!) -ಬೂಟ್ ಮೇಘಾಲಯದ ಸರ್ಕಾರ ಭ್ರಷ್ಟಾಚಾರದಿಂದ ಬೊಕ್ಕಸಕ್ಕೆ ಸೇರಿಸಿದ ಹಣದ್ದೇ? ನಮ್ಮ ಕಥೆಗಳನ್ನು ಹೇಳುವ ಬದಲು ನಿಮ್ಮ ಅದಕ್ಷ ಮೇಘಾಲಯ ಸರ್ಕಾರದ ರಿಪೋರ್ಟ್ ಕಾರ್ಡನ್ನು ನೀವು ನೀಡಬೇಕಿತ್ತು. ನಿಮ್ಮ ಉದಾಸೀನತೆ ನಮ್ಮನ್ನು ಗೇಲಿ ಮಾಡುತ್ತಿದೆ!’ ಎಂದು ಮೇಘಾಲಯ ಬಿಜೆಪಿ ಟ್ವಿಟ್ಟರ್ ಖಾತೆಯು ರಾಹುಲ್ ಗಾಂಧಿ ಅವರು ಧರಿಸಿದ್ದ ಜಾಕೆಟ್ ಮತ್ತು ಅದರ ಬೆಲೆಯನ್ನು ನಮೂದಿಸಿ ಟ್ವೀಟ್ ಮಾಡಿತು. ೨೦೧೫ರಲ್ಲಿ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಅವರ ಜೊತೆಗಿನ ಭೇಟಿ ಕಾಲದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದುಬಾರಿ ಸೂಟ್ ಧರಿಸಿದ್ದನ್ನು ತರಾಟೆಗೆ ತೆಗೆದುಕೊಂಡಿದ್ದ ರಾಹುಲ್ ಗಾಂಧಿ ಅವರುಸೂಟ್ ಬೂಟಿನ ಸರ್ಕಾರ ಎಂದು ಲೇವಡಿ ಮಾಡಿದ್ದಕ್ಕೆ ಬಿಜೆಪಿ ರೀತಿ ಸೇಡು ತೀರಿಸಿಕೊಂಡಿತು. ಮೋದಿ ಅವರ ಸೂಟ್ ಮೂಲ ಬೆಲೆ ೧೧ ಲಕ್ಷ ರೂಪಾಯಿಯಾಗಿತ್ತು. ಹರಾಜಿನಲ್ಲಿ .೩೧ ಕೋಟಿ ರೂಪಾಯಿಗಳಿಗೆ ಮಾರಾಟವಾಗಿತ್ತು. ಬಿಜೆಪಿಯ ಟ್ವೀಟಿಗೆ ಸ್ಪಂದಿಸಿದ ನೆಟಿಜನ್ನರು ಸಾಲುಸಾಲಾಗಿ ರಾಹುಲ್ ಗಾಂಧಿ ಅವರ ಬೂಟಾಟಿಕೆಯನ್ನು ನೆನಪಿಸಿಟ್ವೀಟಾರತಿ ಮಾಡಿದರು. ರಾಹುಲ್ ಗಾಂಧಿ ಅವರ ಸಾವಿರ ಡಾಲರ್ ಬೆಲೆಯ ಬುರ್ಬೆರ್ರಿ ಕ್ವಿಲ್ಟೆಡ್ ಜಾಕೆಟ್ ನನಗೆ ಸೋನಿಯಾ ಗಾಂಧಿ ಅವರು ಸೇಬ್ಲ್ ಕೋಟ್ನ್ನು ನೆನಪಿಸುತ್ತದೆ. ಭಾರತದ ಜನಸಂಖ್ಯೆಯ ಶೇಕಡಾ ೧ರಷ್ಟು ಜನರ ಬಳಿ ದೇಶದ ಶೇಕಡಾ ೭೩ರಷ್ಟು ಸಂಪತ್ತು ಸೇರುತ್ತಿದೆ ಎಂಬ ಸ್ವಯಂ  ಹೇಳಿಕೆಯನ್ನು ಆರ್ ಜಿ ದೃಢಪಡಿಸಿದ್ದಾರೆ ಎಂದು ಕಂಚನ್ ಗುಪ್ತ ಎಂಬವರು ಟ್ವೀಟ್ ಮಾಡಿದರು. ರಾಹುಲ್ ಗಾಂಧಿ ಟ್ರೋಲ್ ಆಗುತ್ತಿದ್ದಂತೆಯೇ ಹಿರಿಯ ಕಾಂಗ್ರೆಸ್ ನಾಯಕಿ ರೇಣುಕಾ ಚೌಧರಿ ಅವರು ರಾಹುಲ್ ಗಾಂಧಿ ಅವರ ರಕ್ಷಣೆಗೆ ಮುಂದಾದರು. ರಾಹುಲ್ ಗಾಂಧಿ ಅವರು ೭೦,೦೦೦ ರೂ. ಬೆಲೆಯ ಜಾಕೆಟ್ ಧರಿಸಿದ್ದಾರೆ ಎಂಬುದು ನಗು ತರಿಸುತ್ತದೆ. ಇಂತಹುದೇ ಜಾಕೆಟನ್ನು ನರೇಂದ್ರ ಮೋದಿ ಅವರಿಗಾಗಿ ನಾನು ಕೇವಲ ೭೦೦ ರೂಪಾಯಿಗಳಿಗೆ ತಂದುಕೊಡುತ್ತೇನೆ ಎಂದು ಚೌಧರಿ ಟ್ವೀಟ್ ಮಾಡಿ ಪ್ರತಿಕ್ರಿಯಿಸಿದರು. ರಾಹುಲ್ ಗಾಂಧಿ ಅವರು ಜಾಕೆಟ್ ಖರೀದಿಸಿದಾಗಿನ ಬಿಲ್ಲನ್ನು ನೀವು ನೋಡಿದ್ದೀರಾ? ಇದರ ಬೆಲೆ ಅವರಿಗೆ ಹೇಗೆ ಗೊತ್ತು? ಇಂತಹ ಮುಖ್ಯ ಹುದ್ದೆಯಲ್ಲಿದ್ದುಕೊಂಡು ಇಷ್ಟೊಂದು ಸರಳ ಜೀವನ ನಡೆಸುವಂತಹ ರಾಹುಲ್ ಭಾಯಿಯಂತಹ ವ್ಯಕ್ತಿಯನ್ನು ನಾನು ಎಂದೂ ನೋಡಿಲ್ಲ ಎಂದು ನವಜೋತ್ ಸಿಂಗ್ ಸಿಧು ಪಕ್ಷಾಧ್ಯಕ್ಷರನ್ನು ಸಮರ್ಥಿಸಿದರು.




2018: ನವದೆಹಲಿ: ದೃಷ್ಟಿ ವಿಶೇಷ ಚೇತನರಿಗೆ 50 ಮತ್ತು 200 ರೂ.ಮುಖಬೆಲೆಯ ನೂತನ ನೋಟುಗಳನ್ನು ಗುರ್ತಿಸಲು ಕಷ್ಟವಾಗುತ್ತಿದೆ ಎನ್ನುವ ದೂರುಗಳಿವೆ. ವಿಷಯವನ್ನು ಪರಿಶೀಲಿಸಿ ಎಂದು ಕೇಂದ್ರ ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕಿಗೆ (ಆರ್ಬಿಐ) ದೆಹಲಿ ಹೈಕೋರ್ಟ್ಸೂಚಿಸಿತು. ಹೈಕೋರ್ಟ್ಪೀಠದ ಹಂಗಾಮಿ ಮುಖ್ಯ ನ್ಯಾಯಾಧೀಶರಾದ ಗೀತಾ ಮಿತ್ತಲ್ಮತ್ತು ನ್ಯಾಯಮೂರ್ತಿ ಸಿ.ಹರಿಶಂಕರ್ಅವರು, ಹೊಸ ನೋಟುಗಳ ಆಕಾರ ಮತ್ತು ಸ್ಪರ್ಶದ ಗುರುತುಗಳ ಬಗ್ಗೆ ಪರಿಶೀಲನೆ ನಡೆಸುವಂತೆ ಸೂಚಿಸಿದರು.  '' ಸಮಸ್ಯೆಯನ್ನು ನೀವು (ಸರ್ಕಾರ ಮತ್ತು ಆರ್ಬಿಐ) ಇತ್ಯರ್ಥಗೊಳಿಸುವ ಅಗತ್ಯವಿದೆ. ಇಬ್ಬರೂ ಒಟ್ಟಿಗೆ ಸೇರಿ ಅರ್ಜಿದಾರರ ದೂರನ್ನು ಬಗೆಹರಿಸಿ,'' ಎಂದು ನ್ಯಾಯಪೀಠ ಹೇಳಿತು. ಹೊಸ ನೋಟುಗಳನ್ನು ದೃಷ್ಟಿ ವಿಶೇಷಚೇತನರು ಗುರ್ತಿಸಲು ಕಷ್ಟವಾಗುತ್ತಿದೆ ಎಂದು ಮೂವರು ವಕೀಲರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. '''ಹೊಸ 50 ರೂ. ಮುಖಬೆಲೆಯ ನೋಟನ್ನು ದೃಷ್ಟಿ ವಿಶೇಷಚೇತನರು ಗುರ್ತಿಸುವುದು ಕಷ್ಟ. ಏಕೆಂದರೆ ಅದರಲ್ಲಿ ಯಾವುದೇ ಗುರುತಿನ ಚಿಹ್ನೆಗಳಿಲ್ಲ. ಇದರ ಮುದ್ರಣವನ್ನು ಸ್ಥಗಿತಗೊಳಿಸಬೇಕು,'' ಎಂದು ಅರ್ಜಿದಾರರಲ್ಲಿ ಒಬ್ಬರಾದ ರೋಹಿತ್ಒತ್ತಾಯಿಸಿದ್ದರು.  ಅಲ್ಲದೇ, ಆರ್ಬಿಐ ಇತ್ತೀಚೆಗೆ ಬಿಡುಗಡೆ ಮಾಡಿರುವ 2000, 500, 200 ಮತ್ತು 50 ರೂ. ನೋಟುಗಳು ದೃಷ್ಟಿ ವಿಶೇಷಚೇತನರು ಬಳಕೆ ಮಾಡಲು ಅನುಕೂಲವಾಗುವಂತೆ ಮುದ್ರಣಗೊಂಡಿಲ್ಲ. ಹಿಂದಿನ ಹಳೆಯ ನೋಟುಗಳನ್ನು ಸುಲಭವಾಗಿ ಗುರ್ತಿಸಬಹುದಿತ್ತು. ಹೊಸ ನೋಟುಗಳನ್ನು ಗುರ್ತಿಸಲು ಆಗುತ್ತಿಲ್ಲ,'' ಎಂದು ದೂರಿನಲ್ಲಿ ತಿಳಿಸಲಾಗಿತ್ತು.  ವಿಚಾರಣೆಯನ್ನು ಫೆ.16ಕ್ಕೆ ಮುಂದೂಡಲಾಯಿತು.
2018: ಕಾಸ್ ಗಂಜ್(ಉತ್ತರಪ್ರದೇಶ): ಉತ್ತರಪ್ರದೇಶ ಕಾಸ್ ಗಂಜ್ ನಲ್ಲಿ ಸಂಭವಿಸಿದ್ದ ಕೋಮುದಳ್ಳುರಿಗೆ ಚಂದನ್ ಗುಪ್ತಾ(22ವರ್ಷ) ಎಂಬ ಯುವಕ ಗುಂಡೇಟಿಗೆ ಬಲಿಯಾಗಿದ್ದ. ಹಿನ್ನೆಲೆಯಲ್ಲಿ ಪೊಲೀಸರ ನಡೆಸಿದ ಕಾರ್ಯಾಚರಣೆಯಲ್ಲಿ ಗಲಭೆಯ ಪ್ರಮುಖ ಆರೋಪಿಯನ್ನು ಬಂಧಿಸಿರುವುದಾಗಿ ತಿಳಿಸಿದರು. ಕಳೆದ ಜನವರಿ 26ರ ಶುಕ್ರವಾರ ಕೋಮುಗಲಭೆಯಲ್ಲಿ ಚಂದನ್ ಗುಪ್ತಾನನ್ನು ಗುಂಡಿಟ್ಟು ಕೊಂದಿದ್ದ ಕಾಸ್ ಗಂಜ್ ಸಲೀಂ ಎಂಬಾತನನ್ನು ಪೊಲೀಸರು ಬಂಧಿಸಿದರು. ಈತ ಕಾಸ್ ಗಂಜ್ ನಲ್ಲಿ ಬಟ್ಟೆ ಅಂಗಡಿ ನಡೆಸುತ್ತಿರುವುದಾಗಿ ವರದಿ ತಿಳಿಸಿತು. ಸಲೀಂ ತನ್ನ ಮನೆಯ ಬಾಲ್ಕನಿಯಿಂದ ಗುಂಡಿನ ದಾಳಿ ನಡೆಸಿರುವುದಾಗಿ ಕೆಲವು ಪ್ರತ್ಯಕ್ಷದರ್ಶಿಗಳು ಪೊಲೀಸರಿಗೆ ಹೇಳಿಕೆ ನೀಡಿದ್ದರು. ಕಳೆದ 2 ದಿನಗಳಲ್ಲಿ ಪೊಲೀಸರು ಕೆಲವು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದರು. ವೇಳೆ ಚಂದನ್ ದೇಹ ಹೊಕ್ಕಿದ್ದ ಬುಲೆಟ್ ಗೂ, ವಶಪಡಿಸಿಕೊಂಡಿದ್ದ ಪಿಸ್ತೂಲಿನಲ್ಲಿದ್ದ ಬುಲೆಟ್ ಗೂ ಹೊಂದಾಣಿಯಾಗಿದ್ದು ಪತ್ತೆಯಾಗಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿ ಆನಂದ್ ಕುಮಾರ್ ತಿಳಿಸಿದರು. ಏತನ್ಮಧ್ಯೆ ಸಲೀಂ ಅಪರಾಧ ಹಿನ್ನೆಲೆ ಹೊಂದಿದ್ದಾನೆಯೇ ಎಂಬುದು ಸ್ಪಷ್ಟವಾಗಿಲ್ಲ ಎಂದು ವರದಿ ಹೇಳಿತು. ಗಣರಾಜ್ಯೋತ್ಸವ ದಿನದಂದು ತಿರಂಗಾ ಯಾತ್ರೆ ನಡೆಯುತ್ತಿದ್ದ ವೇಳೆ ಚಂದನ್ ಗುಪ್ತಾನನ್ನು ತಡೆದು ರಾಷ್ಟ್ರಧ್ವಜವನ್ನು ಕಿತ್ತೆಸೆದಿದ್ದರು. ಬಳಿಕ ಗನ್ ಪಾಯಿಂಟ್ ಬೆದರಿಕೆಯಲ್ಲಿ ಪಾಕ್ ಪರ ಘೋಷಣೆ ಕೂಗುವಂತೆ ಒತ್ತಾಯಿಸಿದ್ದರು. ಆದರೆ ತನ್ನ ಮಗ ಘೋಷಣೆ ಕೂಗಲು ನಿರಾಕರಿಸಿದಾಗ ತಲೆಗೆ ಗುಂಡಿಟ್ಟು ಕೊಂದಿರುವುದಾಗಿ ಗುಪ್ತಾ ತಂದೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದರು.
2018: ನವದೆಹಲಿ: ದೆಹಲಿ ಸೇರಿದಂತೆ ಉತ್ತರಭಾರತದ ಹಲವು ರಾಜ್ಯಗಳು, ಪಾಕಿಸ್ತಾನ ಮತ್ತು ಆಫ್ಘಾನಿಸ್ಥಾನದಲ್ಲಿ ರಿಕ್ಟರ್ ಮಾಪಕದಲ್ಲಿ . ತೀವ್ರತೆಯ ಭೂಕಂಪನ ಮಧ್ಯಾಹ್ನ ಸಂಭವಿಸಿತು.  ಆಫ್ಘಾನಿಸ್ತಾನದ ಹಿಂದೂಕುಶ್ ಪರ್ವತ ಪ್ರದೇಶ ಕಂಪನದ ಕೇಂದ್ರಬಿಂದುವಾಗಿತ್ತು ಎಂದು ವರದಿ ತಿಳಿಸಿತು. ಭೂಕಂಪನಕ್ಕೆ ಪಾಕಿಸ್ತಾನದಲ್ಲಿ ಬಾಲಕಿಯೊಬ್ಬಳು ಬಲಿಯಾಗಿದ್ದು, ಇತರ ೧೧ ಮಂದಿ ಗಾಯಗೊಂಡರು ಎಂದು ವರದಿಗಳು ಹೇಳಿದವು. ಮಧ್ಯಾಹ್ನ ೧೨.೪೨ರ ಸುಮಾರಿಗೆ ಭೂಮಿ ಕಂಪಿಸಿದ ಅನುಭವವಾಗಿರುವುದಾಗಿ ದೆಹಲಿ ಹಾಗೂ ಸುತ್ತಮುತ್ತ ಪ್ರದೇಶದ ಜನರು ತಿಳಿಸಿದ್ದು, ವೇಳೆಯಲ್ಲಿ ದೆಹಲಿ, ಜಮ್ಮು-ಕಾಶ್ಮೀರ, ಪಂಜಾಬ್, ಹಿಮಾಚಲ ಪ್ರದೇಶ, ಹರಿಯಾಣ, ರಾಜಸ್ಥಾನ, ಪಾಕಿಸ್ತಾನ, ಅಫ್ಘಾನಿಸ್ತಾನಗಳಲ್ಲಿ ಭೂಮಿ ಕಂಪಿಸಿತು ಎಂದು ಸುದ್ದಿ ಮೂಲಗಳು ಹೇಳಿದವು.  ಮಧ್ಯಾಹ್ನ ದೆಹಲಿ-ಎನ್ಸಿಆರ್ ಪ್ರಾಂತ್ಯ, ಕಾಶ್ಮೀರ ಕಣಿವೆಯಲ್ಲಿ ಭೂಮಿ ಕಂಪಿಸಿದಾಗ ಜನತೆ ಆತಂಕಗೊಂಡು ಸುರಕ್ಷತೆಗಾಗಿ ಕಟ್ಟಡಗಳಿಂದ ಹೊರಕ್ಕೆ ಓಡಿದರು.  ಭೂಕಂಪದಿಂದ ಯಾವುದೇ ಹಾನಿ ಸಂಭವಿಸಿದ ಬಗ್ಗೆ ಇದುವರೆಗೆ ವರದಿಯಾಗಿಲ್ಲ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದರು. ಭೂಕಂಪನದ ಕೇಂದ್ರ ಬಿಂದು ಅಫ್ಘಾನಿಸ್ತಾನ- ತಜಕಿಸ್ತಾನದ ಗಡಿಭಾಗದಲ್ಲಿ ಹಿಂದೂಕುಶ್ ಪರ್ವತಗಳ ಅಡಿಯಲ್ಲಿ ೧೯೦ ಕಿ.ಮೀ ಆಳದಲ್ಲಿತ್ತುಎಂದು ಶ್ರೀನಗರದಲ್ಲಿ ಅಧಿಕಾರಿಗಳು ತಿಳಿಸಿದರು. ಆಫ್ಘಾನಿಸ್ಥಾನ- ತಾಜಿಕಿಸ್ತಾನ ಗಡಿ ಪ್ರದೇಶದಲ್ಲಿ . ತೀವ್ರತೆಯ ಭೂಕಂಪನ ಸಂಭವಿಸಿದ ಬಳಿಕ ರಾಜಸ್ಥಾನದ ಹಲವಡೆ ಲಘು ಭೂಕಂಪನಗಳು ಸಂಭವಿಸಿ, ಜನ ಗಾಭರಿಯಿಂದ ಕಟ್ಟಡಗಳಿಂದ ಹೊರಕ್ಕೆ ಹಾರಿದ ಘಟನೆಗಳು ಘಟಿಸಿದವು. ರಾಜಸ್ಥಾನದಲ್ಲಿ ಮಧ್ಯಾಹ್ನ ಕೆಲವು ಸೆಕೆಂಡುಗಳ ಕಾಲ ಭೂಮಿ ಕಂಪಿಸಿತು. ಜೈಪುರ, ಜೋಧ್ ಪುರ, ಅಜ್ಮೀರ್ ಮತ್ತು ನಾಗಪುರದಲ್ಲಿ ಕಂಪನದ ಅನುಭವವಾಯಿತು.  ಪಾಕಿಸ್ತಾನದಲ್ಲಿ ಇಸ್ಲಾಮಾಬಾದ್, ಪೇಶಾವರ, ಲಾಹೋರ್ ಮತ್ತಿತರ ಕಡೆ ಭೂಮಿ ಕಂಪಿಸಿತು.  ಪಾಕಿಸ್ತಾನದ ಕ್ವೆಟ್ಟಾ ಪಟ್ಟಣದಲ್ಲಿ ಭೂಕುಸಿತದಿಂದ ಮನೆಯ ಛಾವಣಿ ಕುಸಿದು ಒಳಗಿದ್ದ ಬಾಲಕಿ ಸಾವನ್ನಪ್ಪಿದಳು. ಇತರ ಘಟನೆಗಳಲ್ಲಿ ಕನಿಷ್ಠ ಒಂದು ಡಜನ್ ಮಂದಿ ಗಾಯಗೊಂಡರು.  ಬಲೂಚಿಸ್ಥಾನ ಪ್ರಾಂತ್ಯದಲ್ಲಿ ಭೂಮಿ ಕಂಪಿಸಿದ ಅನುಭವ ಆಯಿತು.  ಗಾಯಾಳುಗಳನ್ನು ಆಸ್ಪತ್ರೆಗಳಿಗೆ ದಾಖಲಿಸಲಾಯಿತು. ಭೂಕಂಪನದ ಸುದ್ದಿ ಬರುತ್ತಿದ್ದಂತೆಯೇ ಖೈಬರ್ ಫಕ್ತೂಂಖ್ವಾ ಪ್ರಾಂತ್ಯಕ್ಕೆ ರಕ್ಷಣಾ ತಂಡಗಳನ್ನು ಕಳುಹಿಸಲಾಯಿತು. ಅದುರಿದ ಸೇತುವೆ:  ಶ್ರೀನಗರದಲ್ಲಿ ಭೂಕಂಪನದ ಪರಿಣಾಮವಾಗಿ ಜೆಹಾಂಗೀರ್ ಚೌಕ-ರಾಮ್ ಬಾಗ್ ಮೇಲ್ಸೇತುವೆ ಅದುರಿದ ಪರಿಣಾಮವಾಗಿ ಅಲೂಚಿಬಾಗ್ ನಲ್ಲಿ ನಿರ್ಮಾಣ ಹಂತದಲ್ಲಿದ್ದ ಸೇತುವೆಯ ಸ್ತಂಭವೊಂದರ ಮೇಲಿನ ಬೀಮ್ ಜಾರಿ ಕೆಳಕ್ಕೆ ಬಿತ್ತು ಎಂದು ಅಧಿಕಾರಿಗಳು ತಿಳಿಸಿದರು.  ಘಟನೆಯಲ್ಲಿ ಯಾವುದೇ ಸಾವುನೋವು ಸಂಭವಿಸಲಿಲ್ಲ. ಸ್ತಂಭಗಳಿಂದ ಜಾರಿದ ಬೀಮ್ ಕ್ರೇನ್ ಮೇಲಕ್ಕೆ ಬಿತ್ತು ಎಂದು ಸಚಿವ ನಯೀಮ್ ಅಖ್ತರ್ ತಿಳಿಸಿದರು. ಬೀಮ್ ನ್ನು ಸೇತುವೆಯ ಸ್ತಂಭಗಳ ಮೇಲೆ ಇಡಲಾಗಿತ್ತು, ಆದರೆ ಬಿಗಿಗೊಳಿಸಿರಲಿಲ್ಲ. ಭೂಕಂಪದಿಂದ ಸೇತುವೆಗೆ ಬೇರಾವುದೇ ಹಾನಿ ಉಂಟಾಗಿಲ್ಲ ಎಂದು ಅಖ್ತರ್ ಹೇಳಿದರು. ೨೦೧೫ರ ಭೀಕರ ಭೂಕಂಪ: ೨೦೧೫ರ ಅಕ್ಟೋಬರ್ ತಿಂಗಳಲ್ಲಿ ಆಫ್ಘಾನಿಸ್ಥಾನದಲ್ಲಿ ಸಂಭವಿಸಿದ್ದ . ತೀವ್ರತೆಯ ಭೀಕರ ಭೂಕಂಪದಲ್ಲಿ ಭಾರಿ ಕುಸಿತಗಳು, ಕಟ್ಟಡ ನಾಶ ಸಂಭವಿಸಿ ೩೮೦ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು. ಭೂಕಂಪದ ಕೇಂದ್ರ ಬಿಂದು ಅಫ್ಘಾನಿಸ್ಥಾನದ ಜರ್ಮ್ನಲ್ಲಿ ಇತ್ತು.
2018: ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಶೋಪಿಯಾನ್ ಕಲ್ಲುತೂರಾಟ ಮತ್ತು ಗುಂಡು ಹಾರಾಟದ ಘಟನೆಗೆ ಸಂಬಂಧಿಸಿದಂತೆ ಮೆಹಬೂಬಾ ಮುಫ್ತಿ ಸರ್ಕಾರದ ನಿರ್ದೇಶನದ ಮೇರೆಗೆ ಪೊಲೀಸರು ಮೇಜರ್ ಸೇರಿದಂತೆ ತನ್ನ ಸಿಬ್ಬಂದಿ ವಿರುದ್ಧ ಪೊಲೀಸರು ಕೊಲೆ ಪ್ರಕರಣ ದಾಖಲಿಸಿದ ಬೆನ್ನಲ್ಲೇ ಸೇನೆಯು ಪ್ರತಿ ಪ್ರಕರಣ (ಎಫ್ ಐಆರ್) ದಾಖಲಿಸಿತು. ಜನವರಿ ೨೭ರಂದು ದಕ್ಷಿಣ ಕಾಶ್ಮೀರ ಜಿಲ್ಲೆಯಲ್ಲಿ ಕಲ್ಲುತೂರಾಟ ನಡೆಸುತ್ತಿದ್ದ ಗುಂಪಿನ ವಿರುದ್ಧ ಸೇನೆ ಗುಂಡು ಹಾರಿಸಿತ್ತು.  ಗುಂಪಿನಿಂದ ಕಲ್ಲು ತೂರಾಟ ನಡೆದು ತನ್ನ ಸಿಬ್ಬಂದಿ ಗಾಯಗೊಂಡ ಬಳಿಕ ಅಂತಿಮ ಪ್ರಚೋದನೆಯನ್ನು ಎದುರಿಸುವ ಸಲುವಾಗಿ ತನ್ನ ಸೈನಿಕರು ಆತ್ಮರಕ್ಷಣೆಗಾಗಿ ಗುಂಡು ಹಾರಿಸಬೇಕಾಯಿತು ಎಂದು ಸೇನೆ ತನ್ನ ಎಫ್ ಐಆರ್ನಲ್ಲಿ ತಿಳಿಸಿತು. ಸೇನೆಯ ಗೋಲಿಬಾರಿನಲ್ಲಿ ಇಬ್ಬರು ಯುವಕರು ಸಾವನ್ನಪ್ಪಿ, ಒಬ್ಬ ವ್ಯಕ್ತಿಗಾಯಗೊಂಡು ಬುಧವಾರ (ಈದಿನ) ಸಾವನ್ನಪ್ಪಿದ್ದ. ಘಟನೆಯಲ್ಲಿ ಇತರ ಎಂಟು ಮಂದಿ ನಾಗರಿಕರೂ ಗಾಯಗೊಂಡಿದ್ದರು. ಘಟನೆ ಬಗ್ಗೆ ಸಾರ್ವಜನಿಕ ಆಕ್ರೋಶಕ್ಕೆ ಪ್ರತಿಕ್ರಿಯೆಯಾಗಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರು ಪೊಲೀಸರು ಗುಂಡುಹಾರಾಟ ನಡೆಸಿದ ಸೇನಾ ಯೋಧರ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಪ್ರಕಟಿಸಿದ್ದರು. ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷವಾದ ಬಿಜೆಪಿಯು ಪ್ರಕರಣ ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿದ್ದರೂ, ಪ್ರಕರಣವು ತಾರ್ಕಿಕ ಅಂತ್ಯ ಕಾಣಲಿದೆ ಎಂದು ಮೆಹಬೂಬಾ ಹೇಳಿದ್ದರು. ಮೆಹಬೂಬಾ ನಿರ್ದೇಶನದ ಮೇರೆಗೆ ಪೊಲೀಸರು ಸೇನೆಯ ಗರ್ವಾಲ್ ಘಟಕದ ಸಿಬ್ಬಂದಿ ವಿರುದ್ಧ ದಂಡ ಸಂಹಿತೆಯ ಸೆಕ್ಷನ್ ೩೦೨ (ಕೊಲೆ) ಮತ್ತು ೩೦೭ (ಕೊಲೆಯತ್ನ) ಅಡಿ ಎಫ್ ಐಆರ್ ದಾಖಲಿಸಿದ್ದರು. ಶೋಪಿಯಾನ್ ಘಟನೆಗೆ ಸಂಬಂಧಿಸಿದಂತೆ ಎಫ್ ಐಆರ್ ದಾಖಲಾತಿ ತನಿಖೆಯ ಅರಂಭ ಮಾತ್ರ, ಸೇನೆಯ ಪ್ರತಿಪಾದನೆಯನ್ನೂ ಗಮನಕ್ಕೆ ತೆಗೆದುಕೊಳ್ಳಲಾಗುವುದು ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮುಖ್ಯಸ್ಥ ಎಸ್ ಪಿಉ ವೈದ್ ಸೋಮವಾರ ಹೇಳಿದ್ದರು. ಸತ್ಯ ಹೊರ ಬರುವ ಬಗ್ಗೆ ತಮಗೆ ಪೂರ್ಣ ವಿಶ್ವಾಸವಿದೆ ಎಂದು ಉತ್ತರ ಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ ದೇವರಾಜ್ ಅನ್ಬು ಹೇಳಿದರು. ಪ್ರಾಥಮಿಕ ತನಿಖೆಗೂ ಮುನ್ನ ಸೇನಾ ಅಧಿಕಾರಿಗಳ ಹೆಸರನ್ನು ಎಫ್ ಐಆರ್ ಗೆ ಸೇರಿಸಿರುವುದು ಅಪ್ರಬುದ್ಧ ಕ್ರಮ ಎಂದು ಅವರು ನುಡಿದರು.  ಕಲ್ಲು ತೂರಾಟ ನಡೆಸುತ್ತಿದ್ದ ಜನರ ಗುಂಪು ಜ್ಯೂನಿಯರ್ ಕಮೀಶನ್ಡ್ ಅಧಿಕಾರಿಯೊಬ್ಬರನ್ನು ಕೊಲ್ಲಲು ಯತ್ನಿಸಿ ಅವರ ಶಸ್ತ್ರವನ್ನು ಕಿತ್ತುಕೊಂಡಾಗ ಪಡೆಗಳು ಗುಂಡು ಹಾರಿಸಿದವು ಎಂದು ರಕ್ಷಣಾ ವಕ್ತಾರರು ಶ್ರೀನಗರದಲ್ಲಿ ಹೇಳಿದರು.  ಸೇನೆಯ ಆಡಳಿತ ತುಕಡಿಯು ಗಣೋವ್ ಪೋರ ಮೂಲಕ ಹಾದು ಹೋಗುತ್ತಿದ್ದಾಗ ೧೦೦-೧೨೦ ಮಂದಿ ಇದ್ದ ಜನರ ಗುಂಪು ಅಪ್ರಚೋದಿತ ಕಲ್ಲು ತೂರಾಟ ಆರಂಭಿಸಿತು. ಕ್ಷಣ ಮಾತ್ರದಲ್ಲೇ ಅವರ ಸಂಖ್ಯೆ ೨೦೦ರಿಂದ ೨೫೦ಕ್ಕೆ ಏರಿತುಎಂದು ವಕ್ತಾರರು ನುಡಿದರು. ಕೇವಲ ನಾಲ್ಕು ವಾಹನಗಳಿದ್ದ ಸೇನಾ ತುಕಡಿಯನ್ನು ಸುತ್ತುವರಿದ ಕಲ್ಲು ತೂರಾಟಗಾರರ ಗುಂಪು, ವಾಹನಗಳನ್ನು ತೀವ್ರ ಹಾನಿಗೊಳಿಸಿದ್ದಲ್ಲದೆ ಕಿಚ್ಚಿಡಲೂ ಯತ್ನಿಸಿದವು ಎಂದು ವಕ್ತಾರರು ನುಡಿದರು.

2018: ಬಹ್ರಾಂಪುರ: ಮುರ್ಶಿದಾಬಾದ್ ಕಾಲುವೆಗೆ ಜನವರಿ ೨೯ರಂದು ಬಿದ್ದ ಬಸ್ ದುರಂತದಲ್ಲಿ ಸತ್ತವರ ಸಂಖ್ಯೆ ೪೩ಕ್ಕೆ ಏರಿತು. ಕಾಲುವೆಯಿಂದ  ಈದಿನ ಇನ್ನೊಂದು ಶವವನ್ನು ಮೇಲೆತ್ತಲಾಯಿತು ಎಂದು ವರದಿಗಳು ತಿಳಿಸಿದವು. ಬಸ್ ದುರಂತದ ಬಳಿಕ ಕಣ್ಮರೆಯಾದ ಐದು ಮಂದಿಯ ಕುಟುಂಬ ಸದಸ್ಯರು ಕಣ್ಮರೆಯಾದವರ ಪತ್ತೆಗಾಗಿ ನೆರವು ಕೋರಿದ್ದು, ಕಾಲುವೆಯಲ್ಲಿ ಇನ್ನೂ ಶೋಧ ಮುಂದುವರೆಸಲಾಗಿದೆ ಎಂದು ಅಧಿಕಾರಿಗಳು ಹೇಳಿದರು.  ಜನವರಿ ೨೯ರ ಬೆಳಗ್ಗೆ ದುರಂತ ಸಂಭವಿಸಿದ್ದು, ಸಂಜೆಯ ವೇಳೆಗೆ ೨೦ ಪುರುಷರು, ೧೦ ಮಹಿಳೆಯರು, ಇಬ್ಬರು ಮಕ್ಕಳು ಸೇರಿ ೩೨ ಮಂದಿಯ ಶವಗಳನ್ನು ಪತ್ತೆ ಹಚ್ಚಲಾಗಿತ್ತು. ರಾತ್ರಿಯ ವೇಳೆಗೆ ಇನ್ನೂ ನಾಲ್ವರ ಶವಗಳು ಪತ್ತೆಯಾಗಿದ್ದವು. ಜನವರಿ ೩೦ರಂದು ಮತ್ತೆ ಶವಗಳನ್ನು ಕಾಲುವೆಯಿಂದ ಹೊರ ತೆಗೆಯಲಾಗಿತ್ತು. ದುರಂತದಲ್ಲಿ ಇತರ ಮಂದಿ ಗಾಯಗೊಂಡಿದ್ದರು. ಜಿಲ್ಲೆಯ ಬಲಿರ್ಘಾಟ್ ಪ್ರದೇಶದ ಗೋಗ್ರಾ ಕಾಲುವೆಯಲ್ಲಿ ದುರಂತ ಸಂಭವಿಸಿತ್ತು.
2018: ನವದೆಹಲಿ: ರಾಷ್ಟ್ರೀಯ ಮಹತ್ವದ ಪ್ರಕರಣಗಳನ್ನು ಭಾರತದ ಮುಖ್ಯ ನ್ಯಾಯಮೂರ್ತಿಯವರುಆಯ್ದಕೆಲವು ಪೀಠಗಳಿಗೆಆದ್ಯತೆನೀಡಿ ವಹಿಸುತ್ತಿದ್ದಾರೆ ಎಂಬುದಾಗಿ ಸುಪ್ರೀಂಕೋರ್ಟಿನ ನಾಲ್ವರು ಹಿರಿಯ ನ್ಯಾಯಮೂರ್ತಿಗಳು ಆಪಾದಿಸಿದ ಪ್ರಕರಣದ ಸುಳಿಗೆ ಸಿಲುಕಿದ ನ್ಯಾಯಮೂರ್ತಿ  ಅರುಣ್ ಮಿಶ್ರ ಅವರು ಪ್ರಕರಣಗಳನ್ನು ಆಲಿಸುವ ವೇಳೆಯಲ್ಲಿ ತಮ್ಮ ಅಸಮಾಧಾನವನ್ನು ಸ್ಫೋಟಿಸಿದ ಘಟನೆಗಳು ಘಟಿಸಿದವು. ಇದು ಸಣ್ಣ ಕೋರ್ಟ್ .. ನಾವು ಸಣ್ಣ ವ್ಯಕ್ತಿಗಳು.. ಕಿರಿಯ ನ್ಯಾಯಾಧೀಶರು. ನಾವು ನಿಮ್ಮ ಪ್ರಕರಣದ ವಿಚಾರಣೆಯನ್ನು ನಡೆಸಬೇಕು ಎಂಬ ಬಗ್ಗೆ ನಿಮಗೆ ಖಾತರಿ ಇದೆಯೇ?’ ಎಂದು ನ್ಯಾಯಮೂರ್ತಿ ಮಿಶ್ರ ಅವರು ಮಂಗಳವಾರ ಪ್ರಕರಣವೊಂದನ್ನು ಆಲಿಸುವ ಸಂದರ್ಭದಲ್ಲಿ ವಕೀಲರೊಬ್ಬರನ್ನು ಪ್ರಶ್ನಿಸಿದ್ದರು. ಇದೇ ರೀತಿ ಕೆಲ ದಿನಗಳ ಹಿಂದೆ  ಆಮ್ರಪಾಲಿ ಸಮೂಹದಿಂದ ಮನೆಗಳನ್ನು ಖರೀದಿಸಿದ ಅಸಂತೃಪ್ತ ಗ್ರಾಹಕರು ಸಲ್ಲಿಸಿದ್ದ ಅರ್ಜಿಗಳ ಸಮೂಹ ಒಂದರ ವಿಚಾರಣೆ ಕಾಲದಲ್ಲಿಯೂ ನ್ಯಾಯಮೂರ್ತಿ ಮಿಶ್ರ ಅವರುನಾನು ಕಿರಿಯ ನ್ಯಾಯಾಧೀಶಎಂದು ಹೇಳಿದ್ದರು. ’ಇಲ್ಲಿ ಇಷ್ಟೊಂದು ಗುಂಪು ಏಕಿದೆ? ನಾನೊಬ್ಬ ಕಿರಿಯ ನ್ಯಾಯಾಧೀಶ. ಜನ ಯಾಕೆ ಕೆಲವುಹಿರಿಯ ನ್ಯಾಯಾಧೀಶ ನ್ಯಾಯಾಲಯಗಳಿಗೆಹೋಗಬಾರದು? ಎಂದು ಕೊಠಡಿ ಸಂಖ್ಯೆ ೧೦ರಲ್ಲಿ ವಿಚಾರಣೆ ನಡೆಸುತ್ತಿದ್ದ ನ್ಯಾಯಮೂರ್ತಿ ಅರುಣ್ ಮಿಶ್ರ ಕೆಲವು ವಕೀಲರನ್ನು ಪ್ರಶ್ನಿಸಿದ್ದರು.  ಇದೂ ಅಲ್ಲದೆ, ಇನ್ನೊಂದು ಸಂದರ್ಭದಲ್ಲಿ ನ್ಯಾಯಮೂರ್ತಿ ಅರುಣ್ ಮಿಶ್ರ ಅವರು ಹಿರಿಯ ವಕೀಲರೊಬ್ಬರ ಬಳಿನಿಮಗೆ ಇದು ಅತ್ಯಂತ ಮಹತ್ವದ ಪ್ರಕರಣ ಎಂಬ ಅಭಿಪ್ರಾಯ ಇದ್ದರೆ, ’ಕಿರಿಯನ್ಯಾಯಾಧೀಶರ ನಿರ್ಧಾರವನ್ನು ಎದುರಿಸಲು ನೀವು ಸಿದ್ಧರಾಗಿರ ಬೇಕಾಗುತ್ತದೆಎಂದು ಹೇಳಿದ್ದರು. ಹಿರಿಯ ನ್ಯಾಯಮೂರ್ತಿಗಳಾದ ಜೆ. ಚೆಲಮೇಶ್ವರ್, ರಂಜನ್ ಗೊಗೋಯಿ, ಮದನ್ ಬಿ ಲೋಕುರ್ ಮತ್ತು ಕುರಿಯನ್ ಜೋಸೆಫ್ ಅವರು ಜನವರಿ ೧೨ರಂದು ಅಭೂತಪೂರ್ವ ಪತ್ರಿಕಾಗೋಷ್ಠಿ ನಡೆಸಿದ ಬಳಿಕ, ನ್ಯಾಯಮೂರ್ತಿ ಅರುಣ್ ಮಿಶ್ರ ಅವರು ತಮ್ಮ ಸಾಮರ್ಥ್ಯವನ್ನು ಪ್ರಶ್ನಿಸಿದ್ದಕ್ಕೆ ಮತ್ತು ಪತ್ರಕರ್ತರ ಮುಂದೆ ತಮ್ಮನ್ನುಕಿರಿಯನ್ಯಾಯಾಧೀಶ ಎಂಬುದಾಗಿ ಬಿಂಬಿಸಿದ್ದಕ್ಕೆ ಸುಪ್ರೀಂಕೋರ್ಟಿನ ನ್ಯಾಯಮೂರ್ತಿಗಳ ಅನೌಪಚಾರಿಕ ಸಭೆಗಳಲ್ಲಿ ಅಸಹನೆ ವ್ಯಕ್ತ ಪಡಿಸಿದ್ದರು.. ಮೂಲಗಳ ಪ್ರಕಾರ ನ್ಯಾಯಮೂರ್ತಿ ಅರುಣ್ ಮಿಶ್ರ ಅವರು ೨೫ ನ್ಯಾಯಮೂರ್ತಿಗಳ ಸಭೆಯೊಂದರಲ್ಲಿ ತಮ್ಮನ್ನು ಅನಗತ್ಯವಾಗಿ ವಿವಾದದಲ್ಲಿ ಎಳೆಯಲಾಗಿದೆ ಎಂದು ಅಸಹನೆ ವ್ಯಕ್ತ ಪಡಿಸಿದ್ದರು.  ನಾನು ೨೦೧೪ರ  ಜುಲೈ ತಿಂಗಳಿನಿಂದ ಸಿಜೆಐ ಆದೇಶದ ಮೇರೆಗೆ ತಮಗೆ ವಹಿಸಲಾದ ಪ್ರಕರಣಗಳನ್ನು ಇತ್ಯರ್ಥ ಪಡಿಸುವ ಕರ್ತವ್ಯ ನಿರ್ವಹಿಸುತ್ತಿರುವಾಗ, ತಮ್ಮನ್ನು ವಿವಾದಕ್ಕೆ ಎಳೆದದ್ದು ಏಕೆ ಎಂದು ಅವರು ಪ್ರಸ್ನಿಸಿದ್ದಾರೆ ಎಂದು ಮೂಲಗಳು ಹೇಳಿದವು. ಏನಿದ್ದರೂ ಸಿಬಿಐ ನ್ಯಾಯಮೂರ್ತಿ ಬಿಎಚ್ ಲೋಯ ಸಾವಿಗೆ ಸಂಬಂಧಿಸಿದ ಪ್ರಕರಣ ಕೋರ್ಟ್ ಸಂಖ್ಯೆ ೧೦ರ ಮುಂದೆ ಬಂದಾಗ, ಅದಕ್ಕೆ ಸಂಬಂಧಿಸಿದಂತೆ ವಿವಾದ ಉಂಟಾದ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಅರುಣ್ ಮಿಶ್ರ ಅವರು ಪ್ರಕರಣದ ತನಿಖೆಯಿಂದ ಹಿಂದೆ ಸರಿದಿದ್ದರು. ನ್ಯಾಯಮೂರ್ತಿ ಲೋಯ ಅವರು ಸೊಹ್ರಾಬುದ್ದೀನ್ ಶೇಕ್ ಎನ್ ಕೌಂಟರ್ ಪ್ರಕರಣದ ತನಿಖೆ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಲೋಯ ಸಾವಿಗೆ ಸಂಬಂಧಿಸಿದಂತೆ ಸ್ವತಂತ್ರ ತನಿಖೆ ನಡೆಯಬೇಕು ಎಂಬುದಾಗಿ ಕೋರಿದ ಮನವಿಯ ಪ್ರಕರಣ ಅತ್ಯಂತ ಸೂಕ್ಷ್ಮ ಪ್ರಕರಣ ಎಂಬುದಾಗಿ ಪರಿಗಣಿಸಲ್ಪಟ್ಟಿತ್ತು. ನ್ಯಾಯಮೂರ್ತಿ ಅರುಣ್ ಮಿಶ್ರ ಅವರು ಸುಪ್ರೀಂಕೋರ್ಟಿನ ಹಿರಿತನದ ಪಟ್ಟಿಯಲ್ಲಿ ಸಿಜೆಐ ಬಳಿಕ ೯ನೇ ಸ್ಥಾನದಲ್ಲಿದ್ದು ಅವರಿಗೆ ೨೦೨೦ ಸೆಪ್ಟೆಂಬರ್ ೨ರವರೆಗೆ ಸೇವಾ ಅವಧಿ ಇದೆ.

2017: ನವದೆಹಲಿ
: ಕಪ್ಪುಹಣ, ಭ್ರಷ್ಟಾಚಾರ, ಭಯೋತ್ಪಾದನೆಯ ನಿಗ್ರಹಕ್ಕಾಗಿ ಕೇಂದ್ರ ಸರ್ಕಾರ ಕೈಗೊಂಡ ಉಪಕ್ರಮಗಳನ್ನು ಮುಂಗಡಪತ್ರ ಅಧಿವೇಶನದ ಆರಂಭದ ದಿನ ಉಭಯ ಸದನಗಳ ಜಂಟಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡುತ್ತಾ ಮುಕ್ತ ಕಂಠದಿಂದ ಪ್ರಶಂಸಿಸಿದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರುಸರ್ವರ ಸಹಯೋಗ, ಸರ್ವರ ವಿಕಾಸಕ್ಕೆ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು. 500, 1000 ರೂಪಾಯಿ ಮುಖಬೆಲೆಯ ನೋಟುಗಳ ರದ್ದತಿ ಹಾಗೂ ಗಡಿ ನಿಯಂತ್ರಣ ರೇಖೆ ದಾಟಿ ಭಯೋತ್ಪಾದಕರ ನೆಲೆಗಳ ಮೇಲೆ ನಡೆಸಲಾದ ಸರ್ಜಿಕಲ್ ದಾಳಿಗಳನ್ನು ಪ್ರಸ್ತಾಪಿಸಿದ ರಾಷ್ಟ್ರಪತಿ ಯೋಧರ ಪರಾಕ್ರಮವನ್ನು ಕೊಂಡಾಡಿ, ಹೆಮ್ಮೆ ವ್ಯಕ್ತ ಪಡಿಸಿದರು.
2017: ನವದೆಹಲಿ: ಅಮೆರಿಕದ ಸಂಸತ್ತಿನಲ್ಲಿ (ಯುಎಸ್ ಹೌಸ್ ಆಫ್ ರೆಪ್ರಸೆಂಟೇಟಿವ್ಸ್) ಎಚ್-1ಬಿ ವೀಸಾದಾರರಿಗೆ ಕನಿಷ್ಠ ವೇತನವನ್ನು ದುಪ್ಪಟ್ಟಿಗಿಂತಲೂ ಹೆಚ್ಚು ಅಂದರೆ 60,000 ಡಾಲರ್ನಿಂದ 1,30,000 ಡಾಲರ್ಗಳಿಗೆ ಏರಿಸಲು ಕರೆ ನೀಡಿದ ಎಚ್-1ಬಿ ವೀಸಾ ಸುಧಾರಣಾ ಮಸೂದೆ ಮಂಡನೆ ಬಳಿಕ ಷೇರು ಮಾರುಕಟ್ಟೆ ಕುಸಿದ ಪರಿಣಾಮವಾಗಿ ಭಾರತದ 5 ಐಟಿ ಕಂಪನಿಗಳು 50,000 ಕೋಟಿ ರೂಪಾಯಿಗೂ ಹೆಚ್ಚಿನ ನಷ್ಟ ಅನುಭವಿಸಿದವು. ಕನಿಷ್ಠ ವೇತನವನ್ನು ದುಪ್ಪಟ್ಟುಗೊಳಿಸುವ ಮಸೂದೆ ಅಂಗೀಕೃತವಾದರೆ ಭಾರತೀಯ ಐಟಿ ಕಂಪನಿಗಳು ಅಮೆರಿಕದಲ್ಲಿನ ತಮ್ಮ ಯೋಜನೆಗಳಿಗಾಗಿ ಕೆಲಸ ಮಾಡಲು ಎಚ್-1ಬಿ ವೀಸಾದಡಿಯಲ್ಲಿ ನೌಕರರನ್ನು ಪಡೆಯುವುದು ಕಷ್ಟವಾಗುತ್ತದೆ. ಏಕೆಂದರೆ ವೇತನ ಮೊತ್ತ ಭಾರತೀಯ ಐಟಿ ರಂಗದ ರಫ್ತು ಆದಾಯದ ಶೇಕಡಾ 60ರಷ್ಟು ಆಗುತ್ತದೆ. ಮಸೂದೆ ಮಂಡನೆಯಾಗುತ್ತಿದ್ದಂತೆಯೇ ಬಿಎಸ್ ಐಟಿ ಸೂಚ್ಯಂಕ ಶೇಕಡಾ 4ರಷ್ಟು ಕುಸಿಯಿತು. ಹೊರಗುತ್ತಿಗೆ ಕಂಪನಿ ಟಿಸಿಎಸ್ ಷೇರು ಬೆಲೆ ಶೇಕಡಾ 5.6ರಷ್ಟು ಇಳಿಯಿತು. ಟೆಕ್ ಮಹೀಂದ್ರ ಷೇರು ಬೆಲೆ ಶೇಕಡಾ 9.7ರಷ್ಟು ಕುಸಿಯಿತು. ಎಚ್ಸಿಎಲ್ ಟೆಕ್ ಷೇರು ಬೆಲೆ 6.3ರಷ್ಟು, ಇನ್ಫೋಸಿಸ್ ಷೇರು ಬೆಲೆ ಶೇಕಡಾ 4.6ರಷ್ಟು ಮತ್ತು ವಿಪ್ರೋ ಷೇರು ಬೆಲೆ ಶೇಕಡಾ 4.23ರಷ್ಟು ಕುಸಿಯಿತು. ಎಚ್-1ಬಿ ವೀಸಾ ನಿಯಂತ್ರಣಗಳ ಹಿನ್ನೆಲೆಯಲ್ಲಿ ಭಾರತೀಯ ಕಂಪನಿಗಳು ಅಮೆರಿಕದ ಪ್ರಜೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಹೊರಗುತ್ತಿಗೆಗೆ ಪಡೆಯುತ್ತಿವೆ. ಆದರೆ ಅಮೆರಿಕ ಪ್ರಜೆಗಳ ನೇಮಕದಿಂದ ಭಾರತೀಯ ಹೊರಗುತ್ತಿಗೆಗಳ ವೆಚ್ಚ ಗಣನೀಯವಾಗಿ ಹೆಚ್ಚುತ್ತದೆ. ಹೀಗಾದಾಗ ಒಟ್ಟಾರೆ ಲಾಭ ಕಡಿಮೆಯಾಗುತ್ತದೆ. ಎಚ್ 1-ಬಿ ವೀಸಾದಂತಹ ಹಲವಾರು ಯೋಜನೆಗಳ ಪರಿಷ್ಕರಣೆಗಾಗಿ ಎಕ್ಸಿಕ್ಯೂಟಿವ್ ಆದೇಶಕ್ಕೆ ಅಧ್ಯಕ್ಷ ರೊನಾಲ್ಡ್ ಟ್ರಂಪ್ ಈಗಾಗಲೇ ಸಹಿ ಹಾಕಿದ್ದರು.
2017: ರಾವಲ್ಪಿಂಡಿ/ಲಾಹೋರ್: ಮುಂಬೈ ಭಯೋತ್ಪಾದನಾ ದಾಳಿಯ ಸಂಚುಕೋರ ಹಫೀಜ್ ಸಯೀದ್ಗೆ .30ರಿಂದ 90 ದಿನಗಳ ಕಾಲ ಪಾಕಿಸ್ತಾನ ಗೃಹಬಂಧನ ವಿಧಿಸಿದ್ದು, ಇದಕ್ಕೆ ಭಾರತ ಪ್ರಧಾನಿ ನರೇಂದ್ರ ಮೋದಿ ಅವರ ಒತ್ತಡವೇ ಕಾರಣ ಎಂದು ಹಫೀಜ್ ಆರೋಪಿಸಿದ. ಪ್ರತೀಕಾರವಾಗಿ ಕಾಶ್ಮೀರದಲ್ಲಿ ಹಿಂಸಾಚಾರ ಮತ್ತಷ್ಟು ಹೆಚ್ಚಲಿದೆ ಎಂದು ಹೇಳಿಕೆ ನೀಡಿದ. ಹಫೀಜ್ ಗೃಹಬಂಧನ ಕುರಿತು ಪ್ರತಿಕ್ರಿಯಿಸಿರುವ ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯ ವಕ್ತಾರ ವಿಕಾಸ್ ಸ್ವರೂಪ್, ಪಾಕಿಸ್ತಾನ ಹಿಂದೆಯೂ ಹಫೀಜ್ಗೆ ಗೃಹಬಂಧನ ವಿಧಿಸಿತ್ತು. ಇದೊಂದು ಕೇವಲ ತೋರಿಕೆಯ ಪ್ರಕ್ರಿಯೆಯಾಗಿದೆ. ಉಗ್ರ ಹಫೀಜ್ ವಿರುದ್ಧ ಕಠಿಣ ನಿಲುವು ತಾಳಬೇಕಾದ ಅಗತ್ಯವಿದೆ ಎಂದು ಹೇಳಿದರು.. ಮಧ್ಯೆ ಸರ್ಕಾರ ಈಗ ವಿಧಿಸಿರುವ 90 ದಿನಗಳ ಗೃಹಬಂಧನವನ್ನು ಅಗತ್ಯವಿದ್ದಲ್ಲಿ ಮತ್ತಷ್ಟು ದಿನಗಳಿಗೆ ವಿಸ್ತರಿಸಲಾಗುತ್ತದೆ ಎಂದು ಪಾಕ್ ಸರ್ಕಾರ ಹೇಳಿದತು. ಹಫೀಜ್ ಗೃಹಬಂಧನ ವಿರೋಧಿಸಿ ಬೆಂಬಲಿಗರು ಪಾಕಿಸ್ತಾನದ ವಿವಿಧೆಡೆ ಪ್ರತಿಭಟನೆ ನಡೆಸಿದರು. ಟ್ರಂಪ್ ವಿರುದ್ಧ ಕಿಡಿ: ಜನವರಿ 30ರಂದು ಗೃಹಬಂಧನಕ್ಕೆ ಒಳಗಾದ ಬಳಿಕ ಹೇಳಿಕೆ ನೀಡಿರುವ ಉಗ್ರ ಹಫೀಜ್, ಗೃಹಬಂಧನ ವಿಧಿಸಲು ಪ್ರಧಾನಿ ಮೋದಿ ಅವರ ಒತ್ತಡ ಕಾರಣ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡಾ ನನ್ನ ಬಂಧನಕ್ಕೆ ಸೂಚಿಸಿದ್ದಾರೆ. ಪಾಕ್ ಸರ್ಕಾರ ಅವರು ಹೇಳಿದಂತೆ ಕೇಳಿದೆ. ನನ್ನ ಗೃಹಬಂಧನದ ಆದೇಶ ಬಂದಿರುವುದು ಇಸ್ಲಾಮಾಬಾದ್ನಿಂದಲ್ಲ, ಬದಲಾಗಿ ವಾಷಿಂಗ್ಟನ್ನಿಂದ. ಸರ್ಕಾರದ ಮತ್ತು ಇಬ್ಬರು ನಾಯಕರ ಒತ್ತಡಕ್ಕೆ ಮಣಿದು ಹೊಂದಾಣಿಕೆ ಮಾಡಿಕೊಂಡಿರುವುದರಿಂದ ಗೃಹಬಂಧನದಲ್ಲಿ ಇರಬೇಕಾಗಿದೆ. ಆದರೆ ಕಾಶ್ಮೀರದ ವಿಚಾರದಲ್ಲಿ ನಾವು ನಡೆಸುತ್ತಿರುವ ಹೋರಾಟ ನಿಲ್ಲುವುದಿಲ್ಲ ಎಂದು ಹೇಳಿದ. ಹಫೀಜ್ ಜತೆಗೆ ಆತನ ಸಹಚರರಾದ ಅಬ್ದುಲ್ಲಾ ಉಬೇದ್, ಝಾಫರ್ ಇಕ್ಬಾಲ್, ಅಬ್ದುಲ್ ರೆಹಮಾನ್ ಅಬೀದ್ ಮತ್ತು ಖಾಜಿ ಕಾಶಿಫ್ ನಿಯಾಜ್ಗೂ ಗೃಹಬಂಧನ ಹೇರಿದ್ದು, ಲಾಹೋರ್ ಜೆಯುಡಿ ಮುಖ್ಯಕಚೇರಿ ಸಮೀಪದ ಚಾಬುರ್ಜಿಯ ಮನೆಯಲ್ಲಿ ಇರಿಸಲಾಗಿದೆ. ಹಫೀಜ್ನನ್ನು ಲಾಹೋರ್ ಜೌಹಾರ್ ಟೌನ್ ನಿವಾಸದಲ್ಲಿ ಇರಿಸಲಾಗಿದೆ. 2008 ನವೆಂಬರ್ ಮುಂಬೈ ದಾಳಿ ನಡೆದ ಬಳಿಕ ಉಗ್ರ ಹಫೀಜ್ನನ್ನು ಗೃಹಬಂಧನದಲ್ಲಿ ಇರಿಸಲಾಗಿತ್ತಾದರೂ, 2009ರಲ್ಲಿ ಕೋರ್ಟ್ ಮೂಲಕ ಆತ ಬಿಡುಗಡೆ ಪಡೆದುಕೊಂಡಿದ್ದ.
2017: ನವದೆಹಲಿ: ಸಂಸತ್ತಿನಲ್ಲಿ ಜಂಟಿ ಅಧಿವೇಶನದಲ್ಲಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಭಾಷಣ ಮಾಡುತ್ತಿದ್ದ ಸಂದರ್ಭ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಸಂಸದ ಹಾಗೂ ಮಾಜಿ ಕೇಂದ್ರ ಸಚಿವ . ಅಹಮದ್ ಅವರು ಕುಸಿದು ಬಿದ್ದ ಘಟನೆ ಘಟಿಸಿತು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.  ಆಸ್ಪತ್ರೆಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ, ಅಹಮದ್ ಅವರ ಆರೋಗ್ಯ ವಿಚಾರಿಸಿದರು. 1991ರಲ್ಲಿ ಮೊದಲ ಬಾರಿ ಚುನಾವಣೆ ಗೆದ್ದಿದ್ದ ಅಹಮದ್ ಅನೇಕ ಬಾರಿ ಸಂಸದರಾಗಿದ್ದರು. ಅವರು ಪ್ರಸ್ತುತ ಕೇರಳದ ಮಲಪ್ಪುರಂ ಲೋಕಸಭಾ ಕ್ಷೇತ್ರದ  ಪ್ರತಿನಿಧಿ. 
2009: ಚುನಾವಣಾ ಆಯುಕ್ತ ಹಾಗೂ ತಮ್ಮ ಸಹೋದ್ಯೋಗಿ ನವೀನ್ ಚಾವ್ಲಾ ಅವರನ್ನು
ವಜಾಗೊಳಿಸಲು ಶಿಫಾರಸು ಮಾಡಿ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಎನ್.ಗೋಪಾಲಸ್ವಾಮಿ ಅವರು ಕೇಂದ್ರಕ್ಕೆ ಪತ್ರ ಬರೆಯುವುದರೊಂದಿಗೆ ಆಯೋಗದ ಸದಸ್ಯರಲ್ಲಿನ ಭಿನ್ನಮತ ತಾರಕಕ್ಕೆ ಏರಿತು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅತ್ಯಂತ ಮಹತ್ವ ಮತ್ತು ಘನತೆ ಹೊಂದಿದ ಚುನಾವಣಾ ಆಯೋಗದ ಈ ಬಿಕ್ಕಟ್ಟು ಹಾಗೂ ಮುಖ್ಯ ಆಯುಕ್ತರ ಪತ್ರ ಸಂವೈಧಾನಿಕ ಹಾಗೂ ರಾಜಕೀಯ ವಲಯದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿತು. ಗೋಪಾಲಸ್ವಾಮಿ ಅವರ ಅಧಿಕಾರಾವಧಿ ಏ.20ಕ್ಕೆ ಮುಗಿಯುವುದು. ಅದಕ್ಕೆ ಕೇವಲ 70 ದಿನಗಳ ಮುನ್ನ ಹಾಗೂ ಸಾರ್ವತ್ರಿಕ ಲೋಕ ಸಭಾ ಚುನಾವಣೆ ಸಮೀಪಿಸುತ್ತಿ ರುವಾಗ ಅವರು ಈ ಪತ್ರ ಬರೆದರು. ಚಾವ್ಲಾ ಅವರು ಕಾಂಗ್ರೆಸ್ ಪರ ಪಕ್ಷಪಾತ ಧೋರಣೆ ಹೊಂದಿದ್ದಾರೆ ಎಂದು ಆರೋಪಿಸಿ ಬಿಜೆಪಿ ನೀಡಿದ್ದ ಲಿಖಿತ ದೂರಿನ ಮೇರೆಗೆ ಈ ಕ್ರಮ ಕೈಗೊಂಡರು ಎನ್ನಲಾಯಿತು. ಮೂವರು ಸದಸ್ಯರನ್ನೊಳಗೊಂಡ ಆಯೋಗದಲ್ಲಿ ಈ ಹಿಂದೆಯೇ ಭಿನ್ನ ಮತ ಕಾಣಿಸಿಕೊಂಡಿತ್ತು. ಅಲ್ಲದೆ, ಮಹತ್ವದ ನಿರ್ಧಾರಗಳ ಬಗ್ಗೆ ಸದಸ್ಯರಲ್ಲಿ ಒಮ್ಮತವಿಲ್ಲವೆಂಬುದೂ ಆಗಾಗ ಬಹಿರಂಗವಾಗುತ್ತಿತ್ತು. ಕಳೆದ ಮೇ ತಿಂಗಳಲ್ಲಿ ಕರ್ನಾಟಕದಲ್ಲಿ ವಿಧಾನ ಸಭಾ ಚುನಾವಣೆ ನಡೆಸುವ ಬಗ್ಗೆ ಕೂಡ ನವೀನ್ ಚಾವ್ಲಾ ಕೂಡಾ ಗಂಭೀರ ಆಕ್ಷೇಪಗಳನ್ನು ಎತ್ತಿದ್ದರು.

2009: ತಮಿಳು ಚಿತ್ರರಂಗದ ಖ್ಯಾತ ಹಾಸ್ಯನಟ ಹಾಗೂ ಸಾವಿರಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿ ದಾಖಲೆ ಸ್ಥಾಪಿಸಿರುವ ತಾಯ್ ನಾಗೇಶ್ (76) ದೀರ್ಘಕಾಲದ ಅನಾರೋಗ್ಯದಿಂದ ಚೆನ್ನೈಯಲ್ಲಿ ನಿಧನರಾದರು. ನಾಗೇಶ್ ಅವರು ನಟ ಆನಂದ ಬಾಬು ಸೇರಿದಂತೆ ಮೂವರು ಪುತ್ರರನ್ನು ಅಗಲಿದರು. ಹಾಸ್ಯ ಪಾತ್ರಕ್ಕೆ ನಾಗೇಶ್ ಅದೆಷ್ಟರ ಮಟ್ಟಿಗೆ ಜೀವ ತುಂಬುತ್ತೊದ್ದರೆಂದರೆ ಚಿತ್ರರಂಗಕ್ಕೆ ಕಾಲಿಟ್ಟ ಆರಂಭಿಕ ವರ್ಷಗಳಲ್ಲಿ ಇವರನ್ನು ಹಾಲಿವುಡ್ ನಟ ಡ್ಯಾನಿ ಕಯೆ ಅವರೊಂದಿಗೆ ಹೋಲಿಸಲಾಗುತ್ತಿತ್ತು. 1933 ರಲ್ಲಿ ತಿಪಟೂರಿನಲ್ಲಿ ಕನ್ನಡ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ನಾಗೇಶ್ ಅಲಿಯಾಸ್ ಗುಂಡೂರಾವ್, 60 ಮತ್ತು 70 ರ ದಶಕದ ಮಧ್ಯಾವಧಿಯಲ್ಲಿ ತಮಿಳು ಚಿತ್ರರಂಗದ ಬಹುಬೇಡಿಕೆಯ ಹಾಸ್ಯ ನಟರಾಗಿದ್ದರು. ಕನ್ನಡದಲ್ಲೂ 'ಪೆದ್ದಗೆದ್ದ' ಸೇರಿದಂತೆ ಹಲವಾರು ಚಿತ್ರಗಳಲ್ಲಿ ಅವರು ಅಭಿನಯಿಸಿದ್ದರು. ಬಣ್ಣದ ಬದುಕಿನತ್ತ ಆಕರ್ಷಿತರಾಗುವ ಮುನ್ನ ಅವರು ರೈಲ್ವೆ ಇಲಾಖೆಯಲ್ಲಿ ಕ್ಲರ್ಕ್ ಆಗಿದ್ದರು. ರಂಗಭೂಮಿ ಕಲಾವಿದರಾಗಿ ಗುರುತಿಸಿಕೊಂಡಿದ್ದ ನಾಗೇಶ್ ತಾಯ್ ನಾಟಕದಿಂದ ಪ್ರಸಿದ್ಧರಾದ ಕಾರಣ ಅವರಿಗೆ ತಾಯ್‌ ನಾಗೇಶ್ ಎಂಬ ಹೆಸರು ಬಂದಿತು. ಸುಮಾರು 5 ದಶಕಗಳ ಕಾಲ ತಮಿಳು ಚಿತ್ರರಂಗದಲ್ಲಿ ತಮ್ಮ ಛಾಪು ಮೂಡಿಸಿದ್ದರು. ಈ ಅವಧಿಯಲ್ಲಿ ಅವರು ಅಭಿನಯಿಸಿದ ಚಿತ್ರಗಳು ಸಾವಿರಕ್ಕೂ ಹೆಚ್ಚು. ಎಂಜಿಆರ್, ಶಿವಾಜಿ ಗಣೇಶನ್, ರಜನೀಕಾಂತ್ ಹಾಗೂ ಕಮಲಹಾಸನ್ ಅವರಂಥ ಮೇರು ನಟರೊಂದಿಗೆ ಸಹ ನಟನಾಗಿ ಅಭಿನಯಿಸಿದ ಹೆಗ್ಗಳಿಕೆ ಇವರದು. ಕಮಲಹಾಸನ್ ಅವರ 'ದಶಾವತಾರಂ' ನಾಗೇಶ್ ನಟಿಸಿದ ಕೊನೆಯ ಚಿತ್ರ. ನಾಗೇಶ್ ಪ್ರತಿಭೆಯನ್ನು ಗುರುತಿಸಿದ ನಿರ್ದೇಶಕ ಕೆ.ಬಾಲಚಂದರ್, ಅನೇಕ ಚಿತ್ರಗಳಲ್ಲಿ ಇವರು ನಾಯಕ ನಟರಾಗಿ ಮಿಂಚಲು ಕಾರಣರಾದರು. 'ಎದಿರ್ ನೀಚಲ್'. 'ನೀರ್ ಕುಮಿಳಿ', 'ಸರ್ವರ್ ಸುಂದರಂ' ಮೊದಲಾದ ಚಿತ್ರಗಳಲ್ಲಿ ನಾಗೇಶ್ ಅವರ ಅಭಿನಯ ವಿಶ್ವ ವಿಖ್ಯಾತ ಹಾಸ್ಯನಟ ಚಾರ್ಲಿ ಚಾಪ್ಲಿನ್ ಅವರನ್ನು ನೆನಪಿಸುತ್ತಿದ್ದವು. (ಈ ಎಲ್ಲ ಚಿತ್ರಗಳೂ ಕನ್ನಡಕ್ಕೆ ರೀಮೇಕ್ ಆಗಿದ್ದವು). ಶಿವಾಜಿ ಗಣೇಶನ್ ಅವರೊಂದಿಗೆ ನಾಗೇಶ್ ನಟಿಸಿದ 'ತಿಲ್ಲಾನ ಮೋಹನಾಂಬಾಳ್' ಹಾಗೂ 'ತಿರುವಿಳೈಯಾಡಲ್' ಚಿತ್ರಗಳನ್ನಂತೂ ಚಿತ್ರಪ್ರೇಮಿಗಳು ಎಂದೂ ಮರೆಯಲಾಗದು. 'ಆಯಿತ್ತಿಲ್ ಒರುವನ್' ಸೇರಿದಂತೆ ಎಂಜಿಆರ್ ಜತೆಗೂ ನಾಗೇಶ್ ಅನೇಕ ಚಿತ್ರಗಳಲ್ಲಿ ಅಭಿನಯಿಸಿದ್ದರು. ಎಂಜಿಆರ್ ಹಾಗೂ ಶಿವಾಜಿ ಗಣೇಶನ್ ಅಭಿನಯದ ಬಹುತೇಕ ಚಿತ್ರಗಳಲ್ಲಿ ಅಭಿನಯಿಸಿದ ಕೆಲವೇ ಕೆಲವು ಹಾಸ್ಯ ನಟರಲ್ಲಿ ಇವರೂ ಒಬ್ಬರು. ತಮ್ಮ ನಟನೆಯಿಂದ ಹೊಟ್ಟೆ ಹುಣ್ಣಾಗುವಷ್ಟು ನಗಿಸುತ್ತಿದ್ದ ನಾಗೇಶ್ ಅವರು ಅನೇಕ ವರ್ಷಗಳ ಕಾಲ ಕುಡಿತದ ದಾಸರಾಗಿ ಚಿತ್ರೋದ್ಯಮದ ಅನಾದರಕ್ಕೆ ಒಳಗಾದರು. ಆದರೆ ಈ ವ್ಯಸನದಿಂದ ಹೊರಬಂದ ಬಳಿಕ ಮತ್ತೆ ಚಿತ್ರರಂಗಕ್ಕೆ ಮರುಪ್ರವೇಶ ಮಾಡಿದರು. ಇವರು ಕೇವಲ ಹಾಸ್ಯ ನಟರಾಗಿ ಮಾತ್ರವಲ್ಲ ಖಳನಾಯಕ, ಪೋಷಕ ಪಾತ್ರಗಳಲ್ಲೂ ಮಿಂಚಿದ್ದರು.

2009: ಭಾರತದ ಯೂಕಿ ಭಾಂಬ್ರಿ ಅವರು ಆಸ್ಟ್ರೇಲಿಯಾ ಓಪನ್ ಗ್ರ್ಯಾಂಡ್ ಸ್ಲಾಮ್ ಟೆನಿಸ್ ಚಾಂಪಿಯನ್‌ಶಿಪ್‌ನ ಜೂನಿಯರ್ ಬಾಲಕರ ಸಿಂಗಲ್ಸ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದು ಹೊಸ ಇತಿಹಾಸ ನಿರ್ಮಿಸಿದರು. ಮೆಲ್ಬರ್ನ್ ಪಾರ್ಕ್‌ನ ರಾಡ್ ಲೇವರ್ ಅರೆನಾದಲ್ಲಿ ನಡೆದ ಫೈನಲ್‌ನಲ್ಲಿ ಯೂಕಿ 6-3, 6-1 ರಲ್ಲಿ ಜರ್ಮನಿಯ ಅಲೆಕ್ಸಾಂಡ್ರೊಸ್ ಫರ್ಡಿನಾಂಡೊಸ್ ಅವರನ್ನು ಮಣಿಸಿದರು. 57 ನಿಮಿಷಗಳ ಹೋರಾಟದ ಕೊನೆಗೆ ಗೆಲುವು ಲಭಿಸುತ್ತಿದ್ದಂತೆಯೇ ಯೂಕಿ ತಮ್ಮ ಮುಷ್ಠಿಯನ್ನು ಗಾಳಿಯಲ್ಲಿ ಗುದ್ದಿ ಸಂಭ್ರಮಿಸಿದರು. ಆ ಕ್ಷಣ ಭಾರತದ ಟೆನಿಸ್ ಅಭಿಮಾನಿಗಳ ರೋಮಾಂಚನಕ್ಕೆ ಕಾರಣವಾಯಿತು. ಆಸ್ಟ್ರೇಲಿಯಾ ಓಪನ್ ಗ್ರ್ಯಾಂಡ್ ಸ್ಲಾಮ್‌ನ ಜೂನಿಯರ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದ ಭಾರತದ ಮೊದಲ ಆಟಗಾರ ಎಂಬ ಹೆಗ್ಗಳಿಕೆಯನ್ನು ದೆಹಲಿಯ 16ರ ಹರೆಯದ ಯೂಕಿ ತಮ್ಮದಾಗಿಸಿದರು. ಅದೇ ರೀತಿ ಜೂನಿಯರ್ ಗ್ರ್ಯಾಂಡ್ ಸ್ಲಾಮ್ನಲ್ಲಿ ಪ್ರಶಸ್ತಿ ಜಯಿಸಿದ ಭಾರತದ ನಾಲ್ಕನೇ ಆಟಗಾರನಾಗಿ ಯೂಕಿ ಇತಿಹಾಸದ ಪುಟಗಳಲ್ಲಿ ಸ್ಥಾನ ಪಡೆದರು. ರಾಮನಾಥನ್ ಕೃಷ್ಣನ್ (1954ರ ವಿಂಬಲ್ಡನ್ ಜೂನಿಯರ್ ಪ್ರಶಸ್ತಿ), ಅವರ ಪುತ್ರ ರಮೇಶ್ ಕೃಷ್ಣನ್ (1979ರ ವಿಂಬಲ್ಡನ್ ಮತ್ತು ಫ್ರೆಂಚ್ ಓಪನ್) ಹಾಗೂ ಲಿಯಾಂಡರ್ ಪೇಸ್ (1990ರ ವಿಂಬಲ್ಡನ್ ಮತ್ತು ಯುಎಸ್ ಓಪನ್) ಅವರು ಈ ಹಿಂದೆ ಭಾರತಕ್ಕೆ ಜೂನಿಯರ್ ಗ್ರ್ಯಾಂಡ್‌ಸ್ಲಾಮ್ ಪ್ರಶಸ್ತಿ ತಂದಿತ್ತಿದ್ದರು. ಕಳೆದ ಬಾರಿ ಇಲ್ಲಿ ಸೆಮಿಫೈನಲಿನಲ್ಲಿ ಸೋಲು ಅನುಭವಿಸಿದ್ದ ಯೂಕಿ ಫೈನಲಿನಲ್ಲಿ ಎಲ್ಲ ವಿಭಾಗಗಲ್ಲೂ ಮೇಲುಗೈ ಸಾಧಿಸಿದರು. ಮೊದಲ ಸೆಟ್‌ನ ನಾಲ್ಕನೇ ಗೇಮಿನಲ್ಲಿ ಎದುರಾಳಿಯ ಸರ್ವ್ ಮುರಿದ ಅವರು 3-1 ರಲ್ಲಿ ಮುನ್ನಡೆ ಸಾಧಿಸಿದರು. ಅದೇ ಲಯವನ್ನು ಕಾಪಾಡಿಕೊಂಡರಲ್ಲದೆ, 31 ನಿಮಿಷಗಳಲ್ಲಿ ಸೆಟ್ ಗೆದ್ದರು. ಎರಡನೇ ಸೆಟ್ ಗೆಲ್ಲಲು ಕೇವಲ 26 ನಿಮಿಷಗಳನ್ನು ವ್ಯಯಿಸಿದ ಯೂಕಿ ಚೊಚ್ಚಲ ಗ್ರ್ಯಾಂಡ್ ಸ್ಲಾಮ್ ಟ್ರೋಫಿಗೆ ಮುತ್ತಿಕ್ಕಿದರು. ಅಮೆರಿಕದ ಸೆರೆನಾ ವಿಲಿಯಮ್ಸ್ ಇದೇ ಚಾಂಪಿಯನ್‌ಶಿಪ್ನ ಮಹಿಳೆಯರ ಸಿಂಗಲ್ಸ್ ವಿಭಾಗದ ಪ್ರಶಸ್ತಿ ತಮ್ಮದಾಗಿಸಿಕೊಂಡರು. ರಾಡ್ ಲೇವರ್ ಅರೆನಾದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಸೆರೆನಾ 6-0, 6-3 ರಲ್ಲಿ ರಷ್ಯಾದ ದಿನಾರ ಸಫಿನಾ ವಿರುದ್ಧ ಜಯ ಪಡೆದರು. ಇದು ಸೆರೆನಾ ಅವರ ವೃತ್ತಿಜೀವನದ 10ನೇ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯಾಗಿದೆ. ಈ ಗೆಲುವಿನ ಮೂಲಕ ಅವರು ರಾಂಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದರು.

2009: ಸುಪ್ರೀಂಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಮತ್ತು ನಿವೃತ್ತ ಲೋಕಾಯುಕ್ತ ಎನ್.ವೆಂಕಟಾಚಲ ಬೆಂಗಳೂರಿನಲ್ಲಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಡಿ.ವಿ.ಸದಾನಂದಗೌಡರ ಸಮ್ಮುಖದಲ್ಲಿ ಈದಿನ ಅಧಿಕೃತವಾಗಿ ಬಿಜೆಪಿ ಸೇರಿದರು.

2009: ತೆಲುಗು ನಟಿ ವಿಜಯಶಾಂತಿ ತನ್ನ ತಲ್ಲಿ ತೆಲಂಗಾಣ ಪಕ್ಷವನ್ನು ಹೈದರಾಬಾದಿನಲ್ಲಿ ತೆಲಂಗಾಣ ರಾಷ್ಟ್ರೀಯ ಸಮಿತಿ (ಟಿಆರ್‌ಎಸ್) ಪಕ್ಷದೊಂದಿಗೆ ವಿಲೀನಗೊಳಿಸಿದರು. ಅವರು ಟಿಆರ್‌ಎಸ್ ಮುಖ್ಯಸ್ಥ ಕೆ.ಚಂದ್ರಶೇಖರ ರಾವ್ ಅವರ ಮನೆಗೆ ತೆರಳಿ ಪಕ್ಷದ ಸದಸ್ಯರಾದರು. ನಂತರ ಅವರು ಟಿಆರ್‌ಎಸ್‌ನೊಂದಿಗೆ ತಮ್ಮ ಪಕ್ಷದ ವಿಲೀನವನ್ನು ಘೋಷಿಸಿದರು.

2009: ಕೋಸಿ ನದಿ ಪ್ರವಾಹ ಸಂತ್ರಸ್ತರ ಪುನರ್‌ವಸತಿಗೆಂದು ಮುಖ್ಯಮಂತ್ರಿ ಪರಿಹಾರ ನಿಧಿಯ ಮೂಲಕ ನೆರವು ನೀಡಿದ ಕರ್ನಾಟಕದ ಜನತೆಗೆ ಅದರಲ್ಲೂ ವಿಶೇಷವಾಗಿ 'ಡೆಕ್ಕನ್ ಹೆರಾಲ್ಡ್' ಮತ್ತು 'ಪ್ರಜಾವಾಣಿ' ಪತ್ರಿಕೆಗಳಿಗೆ ಬಿಹಾರ ಮುಖ್ಯಮಂತ್ರಿ ನಿತೀಶ ಕುಮಾರ್ ಅವರು ಅಭಿನಂದನೆ ಸಲ್ಲಿಸಿದರು. ಪಟ್ನಾದಲ್ಲಿ 'ಡೆಕ್ಕನ್ ಹೆರಾಲ್ಡ್' ಹಾಗೂ 'ಪ್ರಜಾವಾಣಿ' ಸಂಪಾದಕರಾದ ಕೆ.ಎನ್. ತಿಲಕ್ ಕುಮಾರ್ ಅವರು ಕಳುಹಿಸಿಕೊಟ್ಟ 2ನೇ ಕಂತಿನ 12, 09,497 ರೂಪಾಯಿಗಳ ಡಿ.ಡಿ ಯನ್ನು ಪಟ್ನಾದ 'ಡೆಕ್ಕನ್ ಹೆರಾಲ್ಡ್' ವರದಿಗಾರ ಅಭಯ್ ಕುಮಾರ್ ಅವರು ತಮಗೆ ಸಲ್ಲಿಸಿದ ಸಂದರ್ಭದಲ್ಲಿ ಅವರು ಈ ಧನ್ಯವಾದ ಸಮರ್ಪಿಸಿದರು. ಅಕ್ಟೋಬರ 30 ರಂದು ಸಂಪಾದಕ ಕೆ. ಎನ್. ತಿಲಕ್ ಕುಮಾರ್ ಅವರು ಬಿಹಾರ ಮುಖ್ಯಮಂತ್ರಿ ಪರಿಹಾರ ನಿಧಿಗೆ ಓದುಗರಿಂದ ಸಂಗ್ರಹವಾದ ಮೊದಲ ಕಂತಿನ 51,32,00 ರೂಪಾಯಿಗಳ ಡಿ.ಡಿ.ಯನ್ನು ಖುದ್ದಾಗಿ ನೀಡಿದ್ದರು.

2009: ಆಹಾರ ಪದಾರ್ಥಗಳ ಪ್ಯಾಕ್ ಮಾಡಲು ಬಳಸುವ, ರಸಗೊಬ್ಬರ, ಜವಳಿ, ಪೀಠೋಪಕರಣಗಳ ಮೆತ್ತೆ ಹಾಗೂ ಸ್ತ್ರೀಯರ ಖಾಸಗಿ ಉಪಯೋಗದ ಬಹುತೇಕ ವಸ್ತುಗಳಲ್ಲಿ ಅತಿಯಾಗಿ ಬಳಕೆಯಾಗುವ ರಾಸಾಯನಿಕ ಅಂಶಗಳು ಮಹಿಳೆಯರ ಬಂಜೆತನಕ್ಕೆ ಕಾರಣವಾಗಬಲ್ಲವು ಎಂದು ಅಧ್ಯಯನವೊಂದು ತಿಳಿಸಿತು. ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ ಹಾಗೂ ಲಾಸ್ ಏಂಜಲೀಸಿನ ಸಾರ್ವಜನಿಕ ಆರೋಗ್ಯ ಶಾಲೆಗಳು ನಡೆಸಿದ ಸಂಶೋಧನೆಯಲ್ಲಿ ಈ ಅಂಶ ವ್ಯಕ್ತವಾಯಿತು. ಈ ವಸ್ತುಗಳ ಬಳಕೆಯಿಂದಾಗಿ ಮಹಿಳೆಯರ ದೇಹದಲ್ಲಿನ ರಕ್ತದಲ್ಲಿ ಪರ್‌ಫ್ಯ್ಲೂರೊಆಕ್ಟೇನ್ ಹಾಗೂ ಪರ್‌ಫ್ಯ್ಲೂರೊಆಕ್ಟೇನ್ ಸಲ್ಫೋನೇಟ್ ಮಟ್ಟ ಹೆಚ್ಚಾಗುತ್ತದೆ. ಇಂತಹ ಅಂಶಗಳುಳ್ಳ ಮಹಿಳೆಯರು ಗರ್ಭಧರಿಸಲು ಸಾಮಾನ್ಯ ಮಹಿಳೆಯರು ತೆಗೆದುಕೊಳ್ಳುವ ಅವಧಿಗಿಂತಲೂ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಾರೆ ಎಂದು ಸಂಶೋಧಕರು ಅಭಿಪ್ರಾಯಪಟ್ಟರು.

2009: ಭಾರತೀಯ ಮೂಲದ ಹಾಸ್ಯ ಬರಹಗಾರ ಶರತ್ ಸರ್ದಾನಾ (40) ಲಂಡನ್ನಿನಲ್ಲಿ ನಿಧನರಾದರು. ಬ್ರಿಟನ್ನಿನಲ್ಲಿನ ಭಾರತೀಯರ ಮನೋಧರ್ಮಗಳನ್ನು ಬದಲಾಯಿಸುವಲ್ಲಿ ಇವರ ಕ್ರಾಂತಿಕಾರಿ ಹಾಸ್ಯ (ಕಾಮಿಕ್) ಬರಹಗಳು ಇವರಿಗೆ ಅತ್ಯಂತ ಖ್ಯಾತಿಯನ್ನು ತಂದುಕೊಟ್ಟಿದ್ದವು. ಸಾಮಾಜಿಕ ಹವ್ಯಾಸಗಳಿಂದ ಜನಾಂಗೀಯ ನೀತಿಗಳವೆರೆಗಿನ ಇವರ ಹಾಸ್ಯ ಬರಹಗಳು ಬ್ರಿಟನ್ ದೃಶ್ಯ ಮಾಧ್ಯಮದಲ್ಲೂ ಭಾರಿ ಬೇಡಿಕೆ ಹೊಂದಿದ್ದವು. ಅಂತೆಯೇ ಶರತ್ ಮತ್ತು ರಿಚರ್ಡ್ ಪಿಂಟೊ ಜೋಡಿ ಭಾರಿ ಖ್ಯಾತಿ ಗಳಿಸಿತ್ತು.

2008: ಕರ್ನಾಟಕ ರಾಜ್ಯದ ವಿವಿಧೆಡೆಗಳಲ್ಲಿ ಹತ್ತು ಅಧಿಕಾರಿಗಳ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು, ಅಪಾರ ಪ್ರಮಾಣದ ಅಕ್ರಮ ಆಸ್ತಿಯನ್ನು ಪತ್ತೆ ಹಚ್ಚಿದರು. ಆದರೆ ಈ ದಾಳಿಯ ಬಗ್ಗೆ ವಿವರ ನೀಡಲು ಲೋಕಾಯುಕ್ತ್ತ ಎನ್. ಸಂತೋಷ ಹೆಗ್ಡೆ ನಿರಾಕರಿಸಿದರು. ಐಎಎಸ್ ಅಧಿಕಾರಿ ಡಾ. ಬಾಬುರಾವ್ ಮುಡಬಿ, ಬಳ್ಳಾರಿಯ ಹೆಚ್ಚುವರಿ ಎಸ್ಪಿ ಡಾ.ಡಿ.ಸಿ. ರಾಜಪ್ಪ, ಉಪ ಅರಣ್ಯ ಸಂರಕ್ಷಣಾಧಿಕಾರಿ ರಾಜಶೇಖರ್, ಗುಲ್ಬರ್ಗದ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಎಸ್ಪಿ ಪಿತಾಂಬರ ಹೆರಾಜೆ, ಬೆಳಗಾವಿಯ ಪೊಲೀಸ್ ಇಲಾಖೆಯ ಅಬಕಾರಿ ವಿಚಕ್ಷಣ ದಳದ ಡಿ ವೈ ಎಸ್ ಪಿ ಪಿ.ಜಿ. ವಾಂಡ್ ಕರ, ದಾವಣಗೆರೆ ಜಿಲ್ಲೆ ಜಗಳೂರಿನ ಪೊಲೀಸ್ ಇನ್ಸ್ ಪೆಕ್ಟರ್ ರೇವಣ್ಣ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ತಾಂತ್ರಿಕ ನಿರ್ದೇಶಕ ಎಸ್.ಪಿ. ಕೊಲ್ಹಾರ, ಕೋಲಾರದ ಕೈಗಾರಿಕಾ ಇಲಾಖೆ ಅಧಿಕಾರಿ ಸುಬ್ರಹ್ಮಣ್ಯ ಮತ್ತಿತರರು ದಾಳಿಗೆ ಒಳಗಾದ ಅಧಿಕಾರಿಗಳಲ್ಲಿ ಸೇರಿದ್ದರು. ಲೋಕಾಯುಕ್ತರು, ಉಪಲೋಕಾಯುಕ್ತ ಪತ್ರಿ ಬಸವನಗೌಡ ಮತ್ತು ಸಂಸ್ಥೆಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ರೂಪಕ್ ಕುಮಾರ್ ದತ್ತ ಅವರ ಮಾರ್ಗದರ್ಶನದಲ್ಲಿ ಈ ದಾಳಿ ನಡೆಯಿತು.

2008: ಇಂಟರ್ನೆಟ್ ಸಂಪರ್ಕ ಕಲ್ಪಿಸುವ ಮೆಡಿಟರೇನಿಯನ್ ಸಾಗರದೊಳಗಿನ ಎರಡು ಕೇಬಲುಗಳು ಜಖಂಗೊಂಡಿರುವುದರಿಂದ ಪಶ್ಚಿಮ ಏಷ್ಯಾದ ಬಹುತೇಕ ಭಾಗ ಹಾಗೂ ಭಾರತದಲ್ಲಿ ಇಂಟರ್ನೆಟ್ ಸೇವೆಯಲ್ಲಿ ವ್ಯತ್ಯಯ ಉಂಟಾಯಿತು. ಕೇಬಲುಗಳು ತುಂಡಾದದ್ದರಿಂದ ಭಾರತದ ಅಂತರ್ಜಾಲ ಸೇವೆಯಲ್ಲಿ ಶೇ 60ರಷ್ಟು ಹಾಗೂ ಈಜಿಪ್ತಿನಲ್ಲಿ ಶೇ 70 ರಷ್ಟು ವ್ಯತ್ಯಯ ಉಂಟಾಯಿತು. ಸಂಯುಕ್ತ ಅರಬ್ ರಾಷ್ಟ್ರ, ಕುವೈತ್ ಹಾಗೂ ಸೌದಿ ಅರೇಬಿಯಾ ಕೂಡ ಈ ತೊಂದರೆ ಅನುಭವಿಸಿದವು.

2008: ಸಂಗೀತ ಸಾಮ್ರಾಜ್ಞಿ ಡಾ. ಗಂಗೂಬಾಯಿ ಹಾನಗಲ್, ಇತಿಹಾಸ ತಜ್ಞ ಪ್ರೊ. ಬಿ.ಷೇಕ್ ಅಲಿ, ವಿಜ್ಞಾನ ಲೇಖಕ ಪ್ರೊ.ಜಿ.ಟಿ. ನಾರಾಯಣರಾವ್ ಹಾಗೂ ಕಾನೂನು ತಜ್ಞ-ಸ್ವಾತಂತ್ರ್ಯ ಹೋರಾಟಗಾರ ಕೋ. ಚೆನ್ನಬಸಪ್ಪ ಅವರಿಗೆ 8ನೆಯ ಘಟಿಕೋತ್ಸವದಲ್ಲಿ ಗೌರವ ಡಿ.ಲಿಟ್ ಪದವಿ ನೀಡಲು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ನಿರ್ಧರಿಸಿತು. ವಿ.ವಿ ಕುಲಪತಿ ಪ್ರೊ.ಬಿ.ಎ. ವಿವೇಕ್ ರೈ ಈ ವಿಷಯ ಪ್ರಕಟಿಸಿದರು.

2008: ಬೆಂಗಳೂರಿನ ಬನಶಂಕರಿಯ ವಿದ್ಯುತ್ ಚಿತಾಗಾರದಲ್ಲಿ ದಿವಂಗತ ವ್ಯಾಸರಾಯ ಬಲ್ಲಾಳ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಈದಿನ ಮಧ್ಯಾಹ್ನ 12.30ರ ಸುಮಾರಿಗೆ ನಡೆಯಿತು. ಸಾಹಿತಿಗಳು ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಬಂಧು ಬಳಗದವರು ಪಾಲ್ಗೊಂಡಿದ್ದರು.

2008: ಹಾಲಿವುಡ್ಡಿನ ಆಂಜೋಲಿನಾ ಜೋಲಿ ಹಾಗೂ ಬಾಲಿವುಡ್ಡಿನ ಐಶ್ವರ್ಯ ರೈ ಪೂರ್ವಜರು ಒಂದೇ ಮೂಲಕ್ಕೆ ಸೇರಿದವರು ಎಂಬ ಅಂಶವನ್ನು ಲಂಡನ್ ವಿಜ್ಞಾನಿಗಳು ಬಹಿರಂಗಪಡಿಸಿದರು. ಸುಮಾರು 10 ಸಾವಿರ ವರ್ಷಗಳ ಹಿಂದೆ ಕಪ್ಪು ಸಮುದ್ರ ಪ್ರದೇಶದಲ್ಲಿ ಬದುಕಿದ್ದ ನೀಲಿ ಕಣ್ಣುಗಳ ಪೂರ್ವಜರ ಪೀಳಿಗೆಯೇ ಇವರದು ಎಂದು ಸಂಶೋಧಕರು ಹೇಳಿದರು. ಕಣ್ಣುಗಳ ಬಣ್ಣದ ಕುರಿತು ಸುಮಾರು 800 ಜನರ ಮೇಲೆ ಸಂಶೋಧನೆ ಕೈಗೊಂಡ ಕೊಪನ್ ಹೇಗನ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಇಂತಹ ಸಾಧ್ಯತೆಯನ್ನು ಬಯಲಿಗೆಳೆದರು. ಇವರ ಪ್ರಕಾರ ನೀಲಿ ಕಣ್ಣುಗಳನ್ನು ಹೊಂದಿದ ಶೇ 99.5ರಷ್ಟು ಜನರ ಡಿ ಎನ್ ಎ (ವಂಶವಾಹಿ ತಳಿ ನಕ್ಷೆ) ಒಂದೇ ರೀತಿಯದ್ದಾಗಿರುತ್ತದೆ. ಇವರ ಕಣ್ಣುಗಳ ಪೊರೆಯ ಬಣ್ಣ ನಿರ್ಧರಿಸುವ ಜೀನುಗಳ (ವಂಶವಾಹಿ) ಮಾರ್ಪಾಡು ಒಂದೇ ರೀತಿಯಾಗಿದೆ.

2008: ಪ್ರವಾದಿ ಮೊಹಮ್ಮದ್ ಅವರ ಕುರಿತ ಕ್ಯಾರಿಕೇಚರುಗಳನ್ನು (ಅಣಕು ಚಿತ್ರಣದ ಕಲಾಕೃತಿ) ಸಂರಕ್ಷಿಸಿ ಇಡಲು ಡೆನ್ಮಾರ್ಕ್ ರಾಷ್ಟ್ರೀಯ ಗ್ರಂಥಾಲಯ ನಿರ್ಧರಿಸಿತು. ಎರಡು ವರ್ಷಗಳ ಹಿಂದೆ ಈ ಕಲಾಕೃತಿಗಳು ಇಸ್ಲಾಮೀ ಜಗತ್ತಿನಲ್ಲಿ ಭಾರಿ ವಿವಾದವನ್ನು ಎಬ್ಬಿಸಿದ್ದವು. ಕೆಲವು ಮುಸ್ಲಿಮ್ ನಾಯಕರ ಆಕ್ಷೇಪಗಳ ನಡುವೆಯೂ ಮೊಹಮ್ಮದರನ್ನು ಕುರಿತ ಕ್ಯಾರಿಕೇಚರುಗಳನ್ನು ಅಧ್ಯಯನ ದೃಷ್ಟಿಯಿಂದ ಸಂರಕ್ಷಿಸಲಾಗುವುದು ಎಂದು ಗ್ರಂಥಾಲಯದ ವಕ್ತಾರ ಜೆಟ್ಟೆ ಜಾಯಿರ್ಗಾರ್ಡ್ ತಿಳಿಸಿದರು.

2008: ಗಣರಾಜ್ಯೋತ್ಸವ ಪೆರೇಡಿನಲ್ಲಿ ಪಾಲ್ಗೊಂಡಿದ್ದ ಕರ್ನಾಟಕದ `ಬೇಲೂರು ಚನ್ನಕೇಶವ ದೇವಾಲಯ' ಸ್ತಬ್ಧಚಿತ್ರ ಸಮಗ್ರ ರೂಪದ ಎರಡನೇ ಅತ್ಯುತ್ತಮ ಪ್ರಶಸ್ತಿ ಸೇರಿದಂತೆ ಮೂರು ಪ್ರಶಸ್ತಿಗಳನ್ನು ಗಳಿಸಿತು. ಸ್ತಬ್ಧಚಿತ್ರದ ಮೆರವಣಿಗೆಗೆ ಹಿಮ್ಮೇಳವಾಗಿ ನಾದಸ್ವರ ನುಡಿಸಿದ ಕೋಲಾರ ಜಿಲ್ಲೆಯ ಬೇತಮಂಗಲದ ಗಂಗಾಧರ ನಾದಸ್ವರ ಗುರುಕುಲದ ಕಲಾವಿದರು `ಉತ್ತಮ ಪ್ರಸ್ತುತಿ ಪ್ರಶಸ್ತಿ' ಗಳಿಸಿದರು. ಸ್ತಬ್ಧಚಿತ್ರವನ್ನು ತಯಾರಿಸಿದ ಬೆಂಗಳೂರಿನ `ಸಂಜಯ್ ಮಾರ್ಕೆಟಿಂಗ್ ಮತ್ತು ಸರ್ವೀಸಸ್' ಸಂಸ್ಥೆ `ಉತ್ತಮ ರಚನಾ ಪ್ರಶಸ್ತಿ' ಯನ್ನು ಪಡೆಯಿತು.

2008: ಅನಿಲ್ ಕುಂಬ್ಳೆ ಅವರನ್ನು ಈ ಬಾರಿಯ `ಎಸ್ಸೆಲ್ ಕರ್ನಾಟಕದ ಶ್ರೇಷ್ಠ ಕ್ರೀಡಾ ವ್ಯಕ್ತಿ -2008' ವಿಶೇಷ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು. `ಜೀವಮಾನದ ಶ್ರೇಷ್ಠ ಸಾಧಕ' ಪ್ರಶಸ್ತಿ ಭಾರತ ಫುಟ್ಬಾಲ್ ತಂಡದ ಮಾಜಿ ನಾಯಕ ಕೆ.ವಿ. ವರದರಾಜ್ ಅವರಿಗೆ ಲಭಿಸಿತು. ಇವರಿಬ್ಬರಲ್ಲದೆ ಅನೂಪ್ ಶ್ರೀಧರ್ (ಬ್ಯಾಡ್ಮಿಂಟನ್), ಚಿತ್ರಾ ಮಗಿಮೈರಾಜ್ (ಬಿಲಿಯರ್ಡ್ಸ್), ಗಿರೀಶ್ ಎ ಕೌಶಿಕ್ (ಚೆಸ್), ಹೆಲೆನ್ ಮೇರಿ ಇನೊಸೆಂಟ್ (ಹಾಕಿ) ಮತ್ತು ಶಿಖಾ ಟಂಡನ್ (ಈಜು) ಇವರನ್ನೂ ಶ್ರೇಷ್ಠ ಸಾಧಕ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು.

2007: ಇಂಗ್ಲೆಂಡ್ ಮೂಲದ `ಕೋರಸ್' ಉಕ್ಕು ಕಂಪೆನಿ ಖರೀದಿಗೆ ಭಾರತದ ಟಾಟಾ ಸ್ಟೀಲ್ಸ್ ಮತ್ತು ಬ್ರೆಜಿಲಿನ ಸಿ ಎಸ್ ಎನ್ ಕಂಪೆನಿಗಳ ನಡುವೆ ನಾಲ್ಕು ತಿಂಗಳುಗಳಿಂದ ನಡೆದಿದ್ದ ಜಿದ್ದಾಜಿದ್ದಿನ ಪೈಪೋಟಿ ಈ ದಿನ ಕೊನೆಗೊಂಡು, ಟಾಟಾ ಸ್ಟೀಲ್ಸ್ ಗೆಲುವಿನ ನಗೆ ಬೀರುವುದರೊಂದಿಗೆ ಭಾರತೀಯ ಔದ್ಯಮಿಕ ಇತಿಹಾಸದಲ್ಲಿ ದಾಖಲೆ ನಿರ್ಮಾಣಗೊಂಡಿತು. ಭಾರತೀಯ ಔದ್ಯಮಿಕ ಇತಿಹಾಸದಲ್ಲೇ ದಾಖಲೆ ಎನ್ನಬಹುದಾದ ಈ ಖರೀದಿ ಒಪ್ಪಂದದಿಂದಾಗಿ ಜಗತ್ತಿನ ಉಕ್ಕು ಉದ್ಯಮದಲ್ಲಿ ಭಾರತೀಯ ಕಂಪೆನಿಗಳ ಹಿಡಿತ ಇನ್ನಷ್ಟು ಬಿಗಿಗೊಂಡಿತು. ಪ್ರಸ್ತುತ ಟಾಟಾ ಸ್ಟೀಲ್ಸಿನ ವಾರ್ಷಿಕ ಉತ್ಪಾದನೆ ಐವತ್ತು ಲಕ್ಷ ಟನ್ ಇದ್ದು, `ಕೋರಸ್' ನ ಉತ್ಪಾದನೆ 1.82 ಕೋಟಿ ಟನ್ ಇದೆ. ಈ ಖರೀದಿಯಿಂದಾಗಿ ಟಾಟಾ ಸ್ಟೀಲ್ಸ್ ಈಗ 23.2 ಮೆಟ್ರಿಕ್ ಟನ್ ವಾರ್ಷಿಕ ಉತ್ಪಾದನೆಯ ಕಂಪೆನಿಯಾಗಲಿದ್ದು, ಜಗತ್ತಿನ ಐದನೇ ದೊಡ್ಡ ಉಕ್ಕು ಉತ್ಪಾದನೆ ಕಂಪೆನಿ ಎಂಬ ಹೆಗ್ಗಳಿಕೆಗೂ ಪಾತ್ರವಾಗುವುದು. ಟಾಟಾ ಮತ್ತು ಸಿ ಎಸ್ ಎನ್ ಕಂಪೆನಿಗಳೆರಡೂ `ಕೋರಸ್' ನ್ನು ತಮ್ಮ ತೆಕ್ಕೆಗೆ ಪಡೆಯಲು ಎಲ್ಲಿಲ್ಲದ ಕಸರತ್ತು ನಡೆಸಿದ್ದರಿಂದ ಅಂತಿಮವಾಗಿ ಬಹಿರಂಗ ಹರಾಜು ನಡೆಸಲು ನಿರ್ಧರಿಸಲಾಗಿತ್ತು. ಜನವರಿ 30ರ ರಾತ್ರಿಯಿಂದ 31ರ ಬೆಳಗಿನವರೆಗೆ ನಡೆದ ಒಂಬತ್ತು ಸುತ್ತಿನ ಬಹಿರಂಗ ಹರಾಜಿನಲ್ಲಿ `ಕೋರಸ್' ನ ಪ್ರತಿ ಷೇರಿಗೆ 608 ಪೆನ್ನಿಗಳನ್ನು ನೀಡಲು ಮುಂದಾದ ಟಾಟಾ ಸ್ಟೀಲ್ಸ್ ಗೆ ಜಯ ಸಿಕ್ಕಿತು. ಸಿ ಎಸ್ ಎನ್ ಪ್ರತಿ ಷೇರಿಗೆ 603 ಪೆನ್ನಿವರೆಗೆ ಕೊಡಲು ತಯಾರಾಗಿತ್ತು. ಆದರೆ, 608 ಪೆನ್ನಿ ನೀಡಲು ಟಾಟಾ ಸ್ಟೀಲ್ಸ್ ಮುಂದಾದಾಗ ಸಿ ಎಸ್ ಎನ್ ಕೈ ಚೆಲ್ಲಿತು. ಕೋರಸ್ ಕಂಪೆನಿಗಾಗಿ ಒಟ್ಟು 1,130 ಕೋಟಿ ಡಾಲರ್ನ್ನು ಸಂಪೂರ್ಣ ನಗದು ನೀಡಲು ಟಾಟಾ ಒಪ್ಪಿಕೊಂಡಿದ್ದು, ಇದು 50,850 ಕೋಟಿ ರೂಪಾಯಿಯಾಗುತ್ತದೆ. ಈ ಸಾಲಿನಲ್ಲಿ ಕೋರಸ್ ನ ಪ್ರತಿ ಷೇರು 550 ಪೆನ್ನಿಗಳ ಮೌಲ್ಯದಲ್ಲಿ ಮಾರಾಟವಾಗುತ್ತಿದ್ದು, ಟಾಟಾ ಸ್ಟೀಲ್ 608 ಪೆನ್ನಿ ನೀಡಲು ಮುಂದಾಗಿದ್ದರಿಂದ ಕೋರಸ್ ಷೇರುದಾರರಿಗೆ ಭಾರೀ ಲಾಭವಾಯಿತು.

2007: ಕಾವೇರಿ ನದಿ ದಂಡೆಯ ಮೇಲಿರುವ ಟಿ. ನರಸೀಪುರದ ಅಗಸ್ತ್ಯೇಶ್ವರ ದೇವಾಲಯದಲ್ಲಿ ಬೆಳಗ್ಗೆ ಕಲಶ ಸ್ಥಾಪನೆ, ಗಣಹೋಮ ಹಾಗೂ ಸಂಜೆ ಗಂಗಾಪೂಜೆ, ಯಾಗ ಶಾಲೆ ಪ್ರವೇಶ ಮಾಡುವುದರೊಂದಿಗೆ ಏಳನೇ ಮಹಾಕುಂಭಮೇಳ ವಿಧ್ಯುಕ್ತವಾಗಿ ಆರಂಭಗೊಂಡಿತು.

2007: ಕೇವಲ ಮಹಿಳೆಯರೇ ಇರುವ ಭಾರತೀಯ ಪೊಲೀಸ್ ತುಕಡಿ ಆಫ್ರಿಕದ ಪಶ್ಚಿಮ ಭಾಗದಲ್ಲಿರುವ ಲೈಬೀರಿಯಾ ಶಾಂತಿಪಾಲನಾ ಕಾರ್ಯ ನಿರ್ವಹಿಸುವ ಸಲುವಾಗಿ ಲೈಬೀರಿಯಾವನ್ನು ತಲುಪುವ ಮೂಲಕ ಇತಿಹಾಸ ಸೃಷ್ಟಿಸಿತು. ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯ ಭಾಗವಾಗಿ ಸೇರ್ಪಡೆಗೊಳ್ಳುವ ಈ ತುಕಡಿಯಲ್ಲಿ 103 ಮಂದಿ ಮಹಿಳಾ ಸಿಬ್ಬಂದಿ ಇದ್ದು, ವಿಶ್ವಸಂಸ್ಥೆ ಶಾಂತಿಪಾಲನಾ ಪಡೆಯ ಕಾರ್ಯಕ್ರಮದ ಇತಿಹಾಸದಲ್ಲಿ ಪೂರ್ಣ ಪ್ರಮಾಣದ ಮಹಿಳಾ ತುಕಡಿಯ ಸೇರ್ಪಡೆ ಇದೇ ಮೊದಲು.

2007: ಸ್ನಾತಕೋತ್ತರ ವೈದ್ಯಕೀಯ ಕೋರ್ಸಿನಲ್ಲಿ (ಪಿಜಿ) ಪರಿಶಿಷ್ಟ ಜಾತಿ, ಪಂಗಡದ ಅಭ್ಯರ್ಥಿಗಳಿಗೆ ಶೇಕಡಾ 22.5ರಷ್ಟು ಮೀಸಲಾತಿ ಜಾರಿಗೊಳಿಸಲು ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಅನುಮತಿ ನೀಡಿತು.

2007: ವರ್ಣಭೇದ ನೀತಿ ವಿರುದ್ಧ ಸಿಡಿದು ನಿಂತ ಹಾಗೂ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಪರಿವರ್ತನೆಗೆ ಅಹಿಂಸೆ, ಗಾಂಧಿ ತತ್ವಗಳ ಮೂಲಕ ಶ್ರಮಿಸಿದ ದಕ್ಷಿಣ ಆಫ್ರಿಕದ ಆರ್ಚ್ ಬಿಷಪ್ ಡೆಸ್ಮಂಡ್ ಟುಟು ಅವರಿಗೆ ನವದೆಹಲಿಯಲ್ಲಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ `ಗಾಂಧಿ ಪ್ರಶಸ್ತಿ' ಪ್ರದಾನ ಮಾಡಿದರು. ಈ ಪ್ರಶಸ್ತಿಯು 1 ಕೋಟಿ ರೂಪಾಯಿ ನಗದು ಹಣ ಮತ್ತು ಪುರಸ್ಕಾರ ಪತ್ರವನ್ನು ಹೊಂದಿದೆ.

2007: ಬ್ರಾಡ್ ವೇ ರಂಗಭೂಮಿ, ಚಲನಚಿತ್ರ ಮತ್ತು ಟೆಲಿವಿಷನ್ ಕ್ಷೇತ್ರಗಳಲ್ಲಿ ಮಾಡಿದ ಸಾಧನೆಗಾಗಿ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದ ಕಾದಂಬರಿಕಾರ ಸಿಡ್ನಿ ಶೆಲ್ಡನ್ (89) ಅವರು ಲಾಸ್ ಏಂಜೆಲಿಸ್ನಲ್ಲಿ ನಿಧನರಾದರು.

2007: ಮಂಗಳೂರಿನ ಸಂಸ್ಕೃತಿ ಮತ್ತು ಶಿಕ್ಷಣ ಪ್ರತಿಷ್ಠಾನವು ಕನ್ನಡ ಸಾಹಿತ್ಯ ಪ್ರಶಸ್ತಿಗೆ ನೀಡುವ `ಸಂದೇಶ' ಪ್ರಶಸ್ತಿಗೆ `ನಾಡೋಜ' ಪ್ರಶಸ್ತಿ ಪುರಸ್ಕೃತ ಡಾ. ಚನ್ನವೀರ ಕಣವಿ ಆಯ್ಕೆಯಾದರು.

2005: ಖ್ಯಾತ ಶಿಕ್ಷಣ ತಜ್ಞ, ಸ್ವಾತಂತ್ರ್ಯ ಹೋರಾಟಗಾರ ಹಾಗೂ ಭೌತಶಾಸ್ತ್ರಜ್ಞ ಡಾ. ಎಚ್. ನರಸಿಂಹಯ್ಯ (1920-2005) ಈದಿನ ನಿಧನರಾದರು.

1971: ಆಲನ್ ಶೆಫರ್ಡ್, ಸ್ಟುವರ್ಟ್ ರೂಸಾ ಮತ್ತು ಎಡ್ಗರ್ ಮಿಶೆಲ್ (mitchell) ಅವರನ್ನು ಹೊತ್ತ ಅಪೋಲೋ 14 ಬಾಹ್ಯಾಕಾಶ ನೌಕೆಯನ್ನು ಗಗನಕ್ಕೆ ಹಾರಿ ಬಿಡಲಾಯಿತು. ಶೆಫರ್ಡ್ ಮತ್ತು ಮಿಶೆಲ್ ಅವರು ಈ ಯಾನದ ಮೂಲಕ ಮೂರನೇ ಬಾರಿ ಚಂದನಲ್ಲಿ ಇಳಿದರು.

1963: ನವಿಲನ್ನು ಭಾರತದ `ರಾಷ್ಟ್ರೀಯ ಪಕ್ಷಿ' ಎಂಬುದಾಗಿ ಘೋಷಿಸಲಾಯಿತು.

1958: ಅಮೆರಿಕಾದ ಮೊದಲ ಉಪಗ್ರಹ `ಎಕ್ಸ್ ಪ್ಲೋರರ್ -1' ಕೇಪ್ ಕೆನವರಾಲ್ನಿಂದ ಉಡ್ಡಯನಗೊಂಡಿತು.

1950: ಅಮೆರಿಕಾ ಅಧ್ಯಕ್ಷ ಹ್ಯಾರಿ ಎಸ್. ಟ್ರೂಮನ್ ಅವರು ಜಲಜನಕ ಬಾಂಬ್ (ಹೈಡ್ರೋಜನ್ ಬಾಂಬ್) ಅಭಿವೃದ್ಧಿ ಪಡಿಸಲು ತಾವು ಆಜ್ಞಾಪಿಸಿರುವುದಾಗಿ ಪ್ರಕಟಿಸಿದರು.

1943: ಸ್ಟಾಲಿನ್ ಗಾರ್ಡಿನಲ್ಲಿ ಹಿಟ್ಲರನ ಆದೇಶಗಳನ್ನು ಉಲ್ಲಂಘಿಸಿ ಫೀಲ್ಡ್ ಮಾರ್ಷಲ್ ಪೌಲಸ್ ಜರ್ಮನ್ 6ನೇ ಸೇನಾ ತುಕಡಿಯೊಂದಿಗೆ ರಷ್ಯಕ್ಕೆ ಶರಣಾಗತರಾದರು.

1938: ರಾಗ ಸಂಯೋಜಕ, ಸಂಗೀತ ತಜ್ಞ ಬೆಂಗಳೂರು ಎಸ್. ಮುಕುಂದ್ ಅವರು ರೆವಿನ್ಯೂ ಕಮೀಷನರ್ ಶ್ರೀನಿವಾಸನ್ - ತಮಿಳು ಲೇಖಕಿ ಜಯಲಕ್ಷ್ಮಿ ದಂಪತಿಯ ಮಗನಾಗಿ ಬೆಂಗಳೂರಿನಲ್ಲಿ ಜನಿಸಿದರು.

1923: ಅಮೆರಿಕಾದ ಕಾದಂಬರಿಕಾರ ನಾರ್ಮನ್ ಮೈಲರ್ ಹುಟ್ಟಿದರು. ಕಾದಂಬರಿಯ ಕಲ್ಪನೆ ಹಾಗೂ ವಿಷಯ ಸಮೃದ್ಧಿಯೊಂದಿಗೆ ನೈಜ ಘಟನೆಗಳನ್ನು ನಿರೂಪಿಸುವ ಪತ್ರಿಕೋದ್ಯಮ ವಿಧಾನವನ್ನು ಇವರು ರೂಪಿಸಿದರು.

1918: ಸೋವಿಯತ್ ಒಕ್ಕೂಟದಲ್ಲಿ ಆಗ ಬಳಕೆಯಲ್ಲಿದ್ದ ಜ್ಯೂಲಿಯನ್ ಕ್ಯಾಲೆಂಡರಿನ ಕೊನೆಯ ದಿನ. ಮರುದಿನದಿಂದ ಅಲ್ಲಿ ಗ್ರೆಗೋರಿಯನ್ ಕ್ಯಾಲೆಂಡರ್ ಬಳಕೆಗೆ ಬಂತು. ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ ಮರುದಿನವನ್ನು `ಫೆಬ್ರುವರಿ 14' ಎಂಬುದಾಗಿ ಪರಿಗಣಿಸಲಾಯಿತು. ಈ ಎರಡು ದಿನಾಂಕಗಳ ನಡುವಣ ವ್ಯತ್ಯಾಸ ಸರಿಪಡಿಸುವ ಸಲುವಾಗಿ ಮಧ್ಯದ ದಿನಾಂಕಗಳನ್ನು ಕಿತ್ತು ಹಾಕಲಾಯಿತು.

1896: ಖ್ಯಾತ ಸಾಹಿತಿ, ಕಾವ್ಯವಾಚನದ ಗಾರುಡಿಗ ದತ್ತಾತ್ರೇಯ ರಾಮಚಂದ್ರ ಬೇಂದ್ರೆ (ದ.ರಾ.ಬೇಂದ್ರೆ- ಅಂಬಿಕಾತನಯದತ್ತ) (1896-1981) ಅವರು ರಾಮಚಂದ್ರ ಪಂತ- ಅಂಬೂತಾಯಿ ದಂಪತಿಯ ಮಗನಾಗಿ ಧಾರವಾಡದ ಪೋತನೀಸರ ಗಲ್ಲಿಯಲ್ಲಿ ಜನಿಸಿದರು. ಜ್ಞಾನಪೀಠ ಪ್ರಶಸ್ತಿ (ನಾಕುತಂತಿ ಕವನ ಸಂಗ್ರಹ) ಪಡೆದ ಕನ್ನಡದ ಮೇರು ಸಾಹಿತಿಗಳ ಪೈಕಿ ಇವರು ಒಬ್ಬರು.

1882: ಫ್ರಾಂಕ್ಲಿನ್ ಡೆಲಾನೊ ರೂಸ್ ವೆಲ್ಟ್ (1882-1945) ಹುಟ್ಟಿದ ದಿನ. ಅಮೆರಿಕದ 32ನೇ ಅಧ್ಯಕ್ಷರಾದ ಇವರು 1933-1945ರ ಅವಧಿಯಲ್ಲಿ ಅಧ್ಯಕ್ಷರಾಗಿದ್ದರು. ಇವರ ಆಳ್ವಿಕೆ ಕಾಲದಲ್ಲೇ ಎರಡನೇ ಜಾಗತಿಕ ಸಮರ ನಡೆಯಿತು.

(ಸಂಗ್ರಹ: ನೆತ್ರಕೆರೆ ಉದಯಶಂಕರ)