ನಾನು ಮೆಚ್ಚಿದ ವಾಟ್ಸಪ್

Monday, November 5, 2018

ಶಬರಿಮಲೈ ನಿರ್ಬಂಧಗಳು ತಾರತಮ್ಯವಲ್ಲ: ಇತಿಹಾಸಕಾರ

ಶಬರಿಮಲೈ ನಿರ್ಬಂಧಗಳು ತಾರತಮ್ಯವಲ್ಲ:ಇತಿಹಾಸಕಾರ

ವಿಧಿನಿಯಮಗಳು ಭಾರತದ ಪರಂಪರೆಯ ಅವಿಭಾಜ್ಯ ಅಂಗ
ಪಟ್ಟಣಂತಿಟ್ಟ:  ಶಬರಿಮಲೈ ಅಯ್ಯಪ್ಪ ದೇವಸ್ಥಾನಕ್ಕೆ ಋತುಮತಿ ವಯೋಮಾನದ ಮಹಿಳೆಯರಿಗೆ ಪ್ರವೇಶ ನಿರಾಕರಣೆ ಶತಮಾನಗಳಷ್ಟು ಹಳೆಯದಾಗಿದ್ದು, ಕಟ್ಟುನಿಟ್ಟಾದ ತಾಂತ್ರಿಕ ಪರಿಕಲ್ಪನೆಯ ಶುದ್ಧತೆ ಮತ್ತು ಮಾಲಿನ್ಯಕ್ಕೆ ಅನುಗುಣವಾದದ್ದು. ಈ ನಿರ್ಬಂಧಗಳು ಯಾವುದೇ ತಾರತಮ್ಯವಲ್ಲ ಎಂದು ಕೇರಳದ ಖ್ಯಾತ ಇತಿಹಾಸಕಾರರನ್ನು ಉಲ್ಲೆಖಿಸಿ ‘ದಿ ಹಿಂದೂ’ ನವೆಂಬರ್ ೨೦೧೮ರ ಸೋಮವಾರ ವರದಿ ಮಾಡಿದೆ.
.
ಪ್ರಖ್ಯಾತ ಇತಿಹಾಸಕಾರ ಮತ್ತು ಜನಗಣತಿ ಕಾರ್ಯಾಚರಣೆಯ ಮಾಜಿ ಉಪ ನಿರ್ದೇಶಕ ಎಸ್.ಜಯಶಂಕರ್ ಅವರನ್ನು ಉಲ್ಲೇಖಿಸಿ, ’ಇದು ಯಾವುದೇ ರೀತಿಯ ಲೈಂಗಿಕ ತಾರತಮ್ಯವನ್ನು ಹೊಂದಿಲ್ಲಎಂದು ವರದಿ ಹೇಳಿದೆ.

"ಶುದ್ಧತೆ ಮತ್ತು ಮಾಲಿನ್ಯ" ಎಂಬ ಹಿಂದೂ ಪರಿಕಲ್ಪನೆಯು ವಿಶಾಲ ಮತ್ತು ಸಂಕೀರ್ಣವಾಗಿದೆ ಎಂದು ಶ್ರೀ ಜಯಶಂಕರ್ ಹೇಳಿದರು. ಇದು ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಒಂದು ಅವಿಭಾಜ್ಯ ಅಂಗವಾಗಿದೆ ಮತ್ತು ಪ್ರದೇಶಗಳು ಮತ್ತು ಪಂಗಡಗಳ ನಡುವೆ ಗಣನೀಯ ಭಿನ್ನತೆಯನ್ನು ಹೊಂದಿದೆ ಎಂದು ವರದಿ ಹೇಳಿದೆ.

೮೪ರ ಹರೆಯದ  ಇತಿಹಾಸಕಾರರು ಭಾರತ ಸರ್ಕಾರದ  ಜನಗಣತಿ ಇಲಾಖೆಯಿಂದ ಪ್ರಕಟವಾಗಿರುವ "ಕೇರಳದ ದೇವಾಲಯಗಳು" ಪ್ರಕಟಣೆಯ ೧೩ ಸಂಪುಟಗಳನ್ನು ಬರೆದಿದ್ದಾರೆ.

೧೯೫೬ರ ಅಧಿಸೂಚನೆ:

೧೯೫೬ ನವೆಂಬರ್ ೨೭ ರಂದು ಕೇರಳ ಸರ್ಕಾರ  ಪ್ರಕಟಿಸಿದ್ದ ಅಧಿಸೂಚನೆ ಪ್ರಕಾರ, "ಶಬರಿಮಲೈ, ಅಯ್ಯಪ್ಪಸ್ವಾಮಿಯ (ಭಕ್ತರು) ಪೂಜ್ಯ ಪವಿತ್ರ ಮತ್ತು ಪ್ರಾಚೀನ ದೇವಸ್ಥಾನದ ಮೂಲಭೂತ ಪ್ರತಿಷ್ಠಾ’ (ಸ್ಥಾಪನೆಯ) ನಿಯಮಗಳ   ಪ್ರಕಾರ, ಸಾಮಾನ್ಯ ನಿಯಮಗಳನ್ನು ಪಾಲಿಸದ ಮತ್ತು ಋತುಮತಿಯರಾದ ಮಹಿಳೆಯರು  ಅಯ್ಯಪ್ಪ ಸ್ವಾಮಿಯ ದರ್ಶನಕ್ಕಾಗಿ  ಪದಿನೆಟ್ಟಾಂಪಡಿ’ [೧೮ ಮೆಟ್ಟಿಲುಗಳನ್ನು] ಹತ್ತಿ ದೇವಾಲಯದೊಳಗೆ ಪ್ರವೇಶಿಸುವ ಅಭ್ಯಾಸ ಇರಲಿಲ್ಲ’ ಎಂದು ಜಯಶಂಕರ್ ಉಲ್ಲೇಖಿಸಿದ್ದಾರೆ.

ವಿಧಿ ವಿಧಾನಗಳ ಉಲ್ಲಂಘನೆಯಾಗದಂತೆ ನೋಡಿಕೊಳ್ಳಲು  ಮತ್ತು ಯಾವುದೇ ರೀತಿಯ ‘ಮಾಲಿನ್ಯ’ ನಿವಾರಿಸುವ ಸಲುವಾಗಿ ದೇವಾಲಯದ ಮಹಿಳಾ ಉದ್ಯೋಗಿಗಳಿಗೆ ತಮ್ಮ ಮುಟ್ಟಿನ ಅವಧಿಯಲ್ಲಿ, ಕಡ್ಡಾಯವಾಗಿ ವಿಶೇಷ ರಜೆ ನೀಡುತ್ತಿದ್ದರು. ಈ ಅಭ್ಯಾಸವನ್ನು ತಿರುವಾಂಕೂರು ದೇವಸ್ವಂ ಮಂಡಳಿಯು ಈಗಲೂ ಅನುಸರಿಸುತ್ತಿದೆ.

ಇತಿಹಾಸಕಾರ ಜಯಶಂಕರ್ ಅವರ ಪ್ರಕಾರ, ದೇವಸ್ಥಾನದ ಅಧಿದೇವತೆ ಕೂಡಾ ಕೆಲವು ಮೂಲಭೂತ ಹಕ್ಕುಗಳನ್ನು ಹೊಂದಿದೆ. ನಿಷಿದ್ಧ ಮಹಿಳೆಯರು ದೇವತೆಯ ಸನ್ನಿಧಾನವನ್ನು ಪ್ರವೇಶಿಸುವ ಮೂಲಕ ವಿಧಿ ವಿಧಾನವನ್ನು ಉಲ್ಲಂಘಿಸಿದರೆ ಅದು ಅಧಿದೇವತೆಯ ಮೂಲಭೂತ ಹಕ್ಕಿಗೆ ಚ್ಯುತಿ ಉಂಟು ಮಾಡುತ್ತದೆ. ಹೀಗಾಗಿ ಅಧಿದೇವತೆಯ ಹಕ್ಕನ್ನು ಸಂಪೂರ್ಣವಾಗಿ ರಕ್ಷಣೆ ಮಾಡಬೇಕು ಎಂದು ಅವರು ಹೇಳಿದರು.

ವಿವರಗಳಿಗೆ ಕೆಳಗಿನ ಚಿತ್ರ ಕ್ಲಿಕ್ಕಿಸಿ:





No comments:

Post a Comment