Sunday, June 7, 2026

PARYAYA: ₹642 vs ₹2,411: ಜಾಗತಿಕ ಏರಿಳಿತದಲ್ಲೂ ಭಾರತದಲ್ಲಿ ಅಡುಗೆ...

 ₹642 vs ₹2,411: ಜಾಗತಿಕ ಏರಿಳಿತದಲ್ಲೂ ಭಾರತದಲ್ಲಿ ಅಡುಗೆ ಅನಿಲ ಅಗ್ಗ ಏಕೆ?

ಕೇಂದ್ರ ಸರ್ಕಾರವು ಅಡುಗೆ ಅನಿಲ ದರವನ್ನು ಮತ್ತೊಮ್ಮೆ ಏರಿಸಿದೆ. ಎಲ್‌ ಪಿಜಿ ಸಿಲಿಂಡರ್‌ ದರ ಮತ್ತೆ 29 ರೂಪಾಯಿಗಳಷ್ಟು ಏರಿದೆ. ಅಂದರೆ ದೆಹಲಿಯಲ್ಲಿ 14.2 ಕೆಜಿ ಎಲ್‌ ಪಿಜಿ ಸಿಲಿಂಡರ್‌ ದರ 913 ರೂಗಳಿಂದ 942ರೂಪಾಯಿಗೆ ಏರಿಕೆಯಾಗಿದೆ. ಕೇಂದ್ರದ ಈ ಕ್ರಮ ವಿರೋಧ ಪಕ್ಷಗಳ ಕೆಂಗಣ್ಣಿಗೂ ಸಹಜವಾಗಿಯೇ ಗುರಿಯಾಗಿದೆ. ಆದರೂ, ಜಾಗತಿಕ ಇಂಧನ ದರಗಳಿಗೆ ಹೋಲಿಸಿದರೆ ಭಾರತದಲ್ಲೇ ಅಡುಗೆ ಅನಿಲ ಅತ್ಯಂತ ಅಗ್ಗವಾಗಿದೆ. ಅದು ಹೇಗೆ ಎಂಬುದನ್ನು ಕೇರಳಂನ ʼಮಾತೃಭೂಮಿʼ ವಿವರಿಸಿದೆ.

ಜಾಗತಿಕವಾಗಿ ಇಂಧನ ದರಗಳು ಗಗನಕ್ಕೇರುತ್ತಿವೆ. ಇದಕ್ಕೆ ಪ್ರಮುಖ ಕಾರಣ ಪಶ್ಚಿಮ ಏಷ್ಯಾದಲ್ಲಿ ಸಂಘರ್ಷಗಳು. ಇದರಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಮತ್ತು ಅನಿಲದ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿ ಬೆಲೆಗಳು ಏರಿಕೆಯಾಗಿವೆ.  ಆದರೂ,
ಭಾರತದ ಅಡುಗೆಮನೆಗಳಲ್ಲಿನ ಎಲ್‌ಪಿಜಿ (LPG) ದರಗಳು ಏಕೆ ನಿಯಂತ್ರಣದಲ್ಲಿವೆ. ಇತರೆ ದೇಶಗಳಿಗೆ ಹೋಲಿಸಿದರೆ ಭಾರತದ ಗ್ರಾಹಕರು ಪಾವತಿಸುತ್ತಿರುವ ಬೆಲೆ ಅತ್ಯಂತ ಕಡಿಮೆ.

ವಾಸ್ತವಿಕ ಬೆಲೆ ವರ್ಸಸ್ ಗ್ರಾಹಕರು ಪಾವತಿಸುವ ಬೆಲೆ

ದೆಹಲಿಯಲ್ಲಿ ಈಗ 14.2 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆ ₹913 ರಿಂದ ₹942 ಕ್ಕೆ ಏರಿಕೆಯಾಗಿದೆ. ಆದರೆ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಪ್ರಕಾರ, ಒಂದು ಸಿಲಿಂಡರನ್ನು ಗ್ರಾಹಕರ ಮನೆಗೆ ತಲುಪಿಸುವ ನಿಜವಾದ ವೆಚ್ಚವು ₹1,600 ಕ್ಕಿಂತ ಹೆಚ್ಚಿದೆ. ಅಂದರೆ, ಅಂತಾರಾಷ್ಟ್ರೀಯ ಮಾರುಕಟ್ಟೆಯ ಸಂಪೂರ್ಣ ಹೊರೆಯನ್ನು ಗ್ರಾಹಕರ ಮೇಲೆ ಹಾಕದೆ, ಸರ್ಕಾರ ಮತ್ತು ತೈಲ ಮಾರಾಟ ಕಂಪನಿಗಳು ಆ ಹೊರೆಯ ಬಹುಪಾಲನ್ನು ಭರಿಸುತ್ತಿವೆ.

ಉಜ್ವಲ ಫಲಾನುಭವಿಗಳಿಗೆ ವಿಶೇಷ ರಿಯಾಯಿತಿ

ಪ್ರಧಾನ ಮಂತ್ರಿ ಉಜ್ವಲ ಯೋಜನೆ (PMUY) ಫಲಾನುಭವಿಗಳಿಗೆ ಸರ್ಕಾರ ವಿಶೇಷ ಬೆಂಬಲ ನೀಡುತ್ತಿದೆ. ಪ್ರತಿ ವರ್ಷ ಮೊದಲ ನಾಲ್ಕು ರೀಫಿಲ್‌ಗಳ ಮೇಲೆ ₹300 ನೇರ ನಗದು ವರ್ಗಾವಣೆ (DBT) ಸೌಲಭ್ಯವಿರುವುದರಿಂದ, ಅರ್ಹ ಕುಟುಂಬಗಳು ಕೇವಲ ₹642 ಕ್ಕೆ ಸಿಲಿಂಡರ್ ಪಡೆಯುತ್ತಿದ್ದಾರೆ.

ಜಾಗತಿಕ ಹೋಲಿಕೆ: ಭಾರತದ ಸ್ಥಿತಿ ಏನು?

ಭಾರತದ ಎಲ್‌ಪಿಜಿ ದರಗಳು ನೆರೆಯ ದೇಶಗಳು ಮತ್ತು ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗಿಂತ ಎಷ್ಟು ಭಿನ್ನವಾಗಿವೆ ಎಂಬುದನ್ನು ಈ ಕೆಳಗಿನ ಕೋಷ್ಟಕದಲ್ಲಿ ಗಮನಿಸಬಹುದು:

ದೇಶ / ಮಾರುಕಟ್ಟೆ

14.2 ಕೆಜಿ ಸಿಲಿಂಡರ್ ಬೆಲೆ (₹)

 ಭಾರತದ ಉಜ್ವಲ ದರಕ್ಕೆ ಹೋಲಿಸಿದರೆ ವ್ಯತ್ಯಾಸ

ಭಾರತ (ಉಜ್ವಲ ಫಲಾನುಭವಿ)

642

--

ಪಾಕಿಸ್ತಾನ

1,046

~63% ಹೆಚ್ಚು

ನೇಪಾಳ

1,207

~88% ಹೆಚ್ಚು

ಬಾಂಗ್ಲಾದೇಶ

1,225

~91% ಹೆಚ್ಚು

ಶ್ರೀಲಂಕಾ

1,241

~93% ಹೆಚ್ಚು

ಅಮೆರಿಕ

1,755

~173% ಹೆಚ್ಚು

ಆಸ್ಟ್ರೇಲಿಯಾ

1,765

~175% ಹೆಚ್ಚು

ಕೆನಡಾ

2,411

~276% ಹೆಚ್ಚು

ಸರ್ಕಾರದ ರಕ್ಷಣಾ ಕವಚ

  • ಉಜ್ವಲ ಫಲಾನುಭವಿಗಳು: ಇವರು ಅಂತರಾಷ್ಟ್ರೀಯ ಮಟ್ಟದ ಬೆಲೆಗಿಂತ ಸುಮಾರು 60% ಕಡಿಮೆ ದರದಲ್ಲಿ ಅನಿಲವನ್ನು ಪಡೆಯುತ್ತಿದ್ದಾರೆ.
  • ಸಾಮಾನ್ಯ ಗ್ರಾಹಕರು: ಪಿಎಂಜಿಯುವೈ ವ್ಯಾಪ್ತಿಗೆ ಬಾರದ ಗ್ರಾಹಕರು ಕೂಡ ಮಾರುಕಟ್ಟೆಯ ನಿಜವಾದ ವೆಚ್ಚಕ್ಕಿಂತ ಸುಮಾರು 45% ಕಡಿಮೆ ಬೆಲೆಯನ್ನು ಪಾವತಿಸುತ್ತಿದ್ದಾರೆ.

ಹಾರ್ಮುಜ್ ಜಲಸಂಧಿಯಂತಹ ಪ್ರಮುಖ ಸಾಗರ ಮಾರ್ಗಗಳಲ್ಲಿನ ಅನಿಶ್ಚಿತತೆಯು ಜಾಗತಿಕ ಇಂಧನ ಪೂರೈಕೆಯ ಮೇಲೆ ಭಾರಿ ಒತ್ತಡ ಹೇರುತ್ತಿದ್ದರೂ, ಭಾರತದ ಕೇಂದ್ರ ಸರ್ಕಾರವು ಸಬ್ಸಿಡಿ ಮತ್ತು ಬೆಲೆ ನಿಯಂತ್ರಣ ಕ್ರಮಗಳ ಮೂಲಕ ದೇಶದ ಜನಸಾಮಾನ್ಯರ ಮೇಲೆ ಆರ್ಥಿಕ ಹೊರೆ ಬೀಳದಂತೆ ಸಮರ್ಥವಾಗಿ ರಕ್ಷಿಸುತ್ತಿದೆ ಎಂದು ʼಮಾತೃಭೂಮಿʼ ವರದಿ ತಿಳಿಸಿದೆ.

PARYAYA: ₹642 vs ₹2,411: ಜಾಗತಿಕ ಏರಿಳಿತದಲ್ಲೂ ಭಾರತದಲ್ಲಿ ಅಡುಗೆ...:   ₹642 vs ₹2,411: ಜಾಗತಿಕ ಏರಿಳಿತದಲ್ಲೂ ಭಾರತದಲ್ಲಿ ಅಡುಗೆ ಅನಿಲ ಅಗ್ಗ ಏಕೆ ? ಕೇಂ ದ್ರ ಸರ್ಕಾರವು ಅಡುಗೆ ಅನಿಲ ದರವನ್ನು ಮತ್ತೊಮ್ಮೆ ಏರಿಸಿದೆ. ಎಲ್‌ ಪಿಜಿ ಸಿಲಿಂಡ...

Saturday, June 6, 2026

PARYAYA: ಬ್ರಹ್ಮಾವರದಲ್ಲಿ ವಿಶ್ವ ಪರಿಸರ ದಿನ

ಬ್ರಹ್ಮಾವರದಲ್ಲಿ ವಿಶ್ವ ಪರಿಸರ ದಿನ 


ಡುಪಿ ಜಿಲ್ಲೆಯ ಬ್ರಹ್ಮಾವರದ ಮಿನಿ ವಿಧಾನಸೌಧದ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ೨೦೨೬ ಜೂನ್‌ -೫ರ ಶುಕ್ರವಾರ ಆಚರಿಸಲಾಯಿತು. ಬ್ರಹ್ಮಾವರ ಜಯಂಟ್ಸ್‌ ಗ್ರೂಪ್‌ ವತಿಯಿಂದ ವಿವಿಧ ಜಾತಿಯ ಗಿಡಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆಯ ಸಂದೇಶವನ್ನು ಸಾರಲಾಯಿತು.
ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ಶ್ರೀಮತಿ ಅನುಷಾ ಭಟ್‌ ನೆತ್ರಕೆರೆ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಪರಿಸರ ಸಂರಕ್ಷಣೆ ಮತ್ತು ಗಿಡ ನೆಡುವಿಕೆಯ ಮಹತ್ವವನ್ನು ವಿವರಿಸಿದರು. ಬ್ರಹ್ಮಾವರ ಉಪ ತಹಶೀಲ್ದಾರ್‌ ಶ್ರೀ ಅಶೋಕ ಎನ್‌ ಭಟ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪರಿಸರ ಸಂರಕ್ಷಣೆಯಲ್ಲಿ ಪ್ರತಿಯೊಬ್ಬ ನಾಗರಿಕನ ಪಾತ್ರ ಹೇಗೆ ಮಹತ್ವ ಪೂರ್ಣ ಎಂದು ವಿವರಿಸಿದರು. ಈ ಸಂದರ್ಭದ ಚಿತ್ರಗಳು ಹಾಗೂ ಸ್ಥಳೀಯ PublicNext  ವೆಬ್‌ ಸೈಟ್‌ ಪುಟಗಳಲ್ಲಿ ಬಂದ ವರದಿ, ವಿಡಿಯೋ ಇಲ್ಲಿದೆ. 
ವರದಿಗಳ ಸಮೀಪ ನೋಟಕ್ಕೆ ಮೇಲಿನ ಬರಹ ಚಿತ್ರಗಳನ್ನು ಕ್ಲಿಕ್‌ ಮಾಡಿ.  ಪರ್ಯಾಯ.ಕಾಮ್ ವೆಬ್‌ ಸೈಟಿನ ʼವಾಟ್‌-ಸುದ್ದಿʼ ಪುಟ ಕ್ಲಿಕ್‌ ಮಾಡಿ.
PARYAYA: ವಿಶ್ವ ಪರಿಸರ ದಿನ: ಬ್ರಹ್ಮಾವರದಲ್ಲಿ ವಿಶ್ವ ಪರಿಸರ ದಿನ  ಉ ಡುಪಿ ಜಿಲ್ಲೆಯ ಬ್ರಹ್ಮಾವರದ ಮಿನಿ ವಿಧಾನಸೌಧದ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ೨೦೨೬ ಜೂನ್‌ -೫ರ ಶುಕ್ರವಾರ ಆಚರಿಸಲಾ...

Wednesday, June 3, 2026

PARYAYA: ಇಂದಿನ ಇತಿಹಾಸ History Today ಜೂನ್‌ 03

ಇಂದಿನ ಇತಿಹಾಸ History Today ಜೂನ್‌ 03

2026: ಬೆಂಗಳೂರು: ದೊಡ್ಡಾಲಹಳ್ಳಿ ಕೆಂಪೇಗೌಡ ಶಿವಕುಮಾರ್‌ (ಡಿ.ಕೆ. ಶಿವಕುಮಾರ್)‌ ಅವರು ಕರ್ನಾಟಕದ 24ನೇ ಮುಖ್ಯಮಂತ್ರಿಯಾಗಿ ಈದಿನ (2026 ಜೂನ್‌ 3ರ ಬುಧವಾರ) ಸಂಜೆ 4.15 ಗಂಟೆಗೆ ಪ್ರಮಾಣವಚನ ಸ್ವೀಕರಿಸಿದರು. ಕಾಂಗ್ರೆಸ್‌ ಹೈಕಮಾಂಡ್‌ ಸೂಚನೆಯಂತೆ ಮೇ 28ರಂದು ರಾಜೀನಾಮೆ ನೀಡಿದ ಸಿದ್ದರಾಮಯ್ಯ ಅವರ ಸ್ಥಾನಕ್ಕೆ ಶಿವಕುಮಾರ್‌ ಅವರು ಆಯ್ಕೆಯಾಗಿದ್ದಾರೆ. ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರು ಬೆಂಗಳೂರಿನ ಲೋಕಭವನದ ಗಾಜಿನಮನೆಯಲ್ಲಿ ನಡೆದ ಸಮಾರಂಭದಲ್ಲಿ ಶಿವಕುಮಾರ್‌ ಅವರಿಗೆ ಪ್ರಮಾಣವಚನ ಬೋಧಿಸಿದರು. ಶಿವಕುಮಾರ್‌ ಅವರೊಂದಿಗೆ ಡಾ. ಜಿ. ಪರಮೇಶ್ವರ ಸಹಿತವಾಗಿ 13 ಮಂದಿ ಶಾಸಕರೂ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಪರಮೇಶ್ವರ್‌ ಅವರು ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಪ್ರಮಾಣ ವಚನ ಸ್ವೀಕರಿಸಿದ ಇತರರು: ಕೆ.ಎಚ್.‌ ಮುನಿಯಪ್ಪ, ಕೆ.ಜೆ. ಜಾರ್ಜ್‌, ಎಂ.ಬಿ. ಪಾಟೀಲ, ರಾಮಲಿಂಗಾ ರೆಡ್ಡಿ, ಸತೀಶ ಜಾರಕಿಹೊಳಿ, ಕೃಷ್ಣ ಬೈರೇಗೌಡ, ಪ್ರಿಯಾಂಕ್‌ ಖರ್ಗೆ, ಯು.ಟಿ. ಖಾದರ್‌, ಈಶ್ವರ್‌ ಖಂಡ್ರೆ, ಯತೀಂದ್ರ ಸಿದ್ದರಾಮಯ್ಯ, ಬೈರತಿ ಸುರೇಶ್‌, ಶರಣ ಪ್ರಕಾಶ ಪಾಟೀಲ.  ಕಾಂಗ್ರೆಸ್‌ ಪಕ್ಷದ ಪ್ರಮುಖರಾದ ರಾಹುಲ್‌ ಗಾಂಧಿ, ಮಲ್ಲಿಕಾರ್ಜುನ ಖರ್ಗೆ,  ಸಿದ್ದರಾಮಯ್ಯ, ಕೆ.ಸಿ. ವೇಣುಗೋಪಾಲ್‌, ರಣದೀಪ್‌ ಸಿಂಗ್‌ ಸುರ್ಜೆವಾಲಾ,  ಕಾಂಗ್ರೆಸ್‌ ಅಧಿಕಾರಾರೂಢ ರಾಜ್ಯಗಳ ಹಲವು ಮುಖ್ಯಮಂತ್ರಿಗಳು, ವಿವಿಧ ಸ್ವಾಮೀಜಿಗಳು, ಫಾದರ್‌ ಹಾಗೂ ಮೌಲ್ವಿಗಳು ಸೇರಿದಂತೆ ಹಲವಾರು ಗಣ್ಯರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

2026: ಕೋಲ್ಕತ: ತೃಣ ಮೂಲ ಕಾಂಗ್ರೆಸ್‌ ಪಕ್ಷದ ಉಚ್ಛಾಟಿತ ಶಾಸಕ ರಿತಬ್ರತ ಬ್ಯಾನರ್ಜಿ ಅವರನ್ನು ಪಶ್ಚಿಮ ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿ ಈದಿನ ನೇಮಿಸಲಾಯಿತು. ರಿತಬ್ರತ ಬ್ಯಾನರ್ಜಿ ಅವರು ಚುನಾಯಿತ 80 ಟಿಎಂಸಿ ಶಾಸಕರ ಪೈಕಿ 58 ಮಂದಿಯ ಬೆಂಬಲ ಇರುವುದನ್ನು ಸಾಬೀತು ಪಡಿಸಿದ ಪತ್ರ ಸಲ್ಲಿಸಿದ ಬಳಿಕ ವಿಧಾನ ಸಭಾಧ್ಯಕ್ಷರು ಈ ನೇಮಕ ಮಾಡಿದರು. ಇನ್ನಿಬ್ಬರು ಶಾಸಕರೂ ಈ ಗುಂಪಿನ ಜೊತೆಗಿದ್ದು ಸದ್ಯಕ್ಕೆ ಅವರು ನಗರದಿಂದ ಹೊರಗಿದ್ದಾರೆ ಎನ್ನಲಾಗಿದೆ. ಶಾಸಕಾಂಗ ಪಕ್ಷದ ಮುಖ್ಯ ಸಲಹೆಗಾರರಾಗಿ ಮಾರ್ಗದರ್ಶನ ಮಾಡುವಂತೆ ಇದೇ ಸಂದರ್ಭದಲ್ಲಿ ರಿತಬ್ರತ ಅವರು ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರಿಗೆ ಮನವಿ ಮಾಡಿದರು.

2026: ಕೋಲ್ಕತ: ಚುನಾವಣೆ ಫಲಿತಾಂಶ ಪ್ರಕಟಗೊಂಡ ಒಂದೇ ತಿಂಗಳ ಒಳಗೆ ಪಶ್ಚಿಮ ಬಂಗಾಳದ  ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣ ಮೂಲ ಕಾಂಗ್ರೆಸ್‌ (ಟಿಎಂಸಿ) ಇಬ್ಭಾಗಗೊಂಡಿದ್ದು, 60 ಶಾಸಕರ ಒಂದು ಬಣ ಅವರೆಲ್ಲರ ಸಹಿ ಸಹಿತವಾದ ಪತ್ರದೊಂದಿಗೆ ರಿತಭ್ರತ ಬ್ಯಾನರ್ಜಿ ನೇತೃತ್ವದಲ್ಲಿ ಈ ದಿನ ವಿಧಾನಸಭೆಯಲ್ಲಿ ಈ ಬಣವು ರಿತಭ್ರತ ಬ್ಯಾನರ್ಜಿ ಅವರನ್ನು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿಯೂ, ಸಾಂದೀಪನ್‌ ಸಹಾ ಅವರು ವಿರೋಧ ಪಕ್ಷದ ಉಪನಾಯಕರಾಗಿಯೂ ಮಾನ್ಯ ಮಾಡುವಂತೆ ಕೋರಿ ವಿಧಾನಸಭಾಧ್ಯಕ್ಷರಿಗೆ ಪತ್ರ ಸಲ್ಲಿಸಲು ಸಜ್ಜಾಯಿತು. ವಿಧಾನಸಭಾ ಚುನಾವಣೆಯಲ್ಲಿ  ಭಾರೀ ಬಹುಮತದೊಂದಿಗೆ ಗದ್ದುಗೆ ಏರಿದ ಬಿಜೆಪಿಯ ನಾಯಕ ಸುವೇಂದು ಅಧಿಕಾರಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ 2026 ಮೇ 9ರ ಶನಿವಾರ ಪ್ರಮಾಣವಚನ ಸ್ವೀಕರಿಸಿದ್ದರು.

2020: ಬೀಜಿಂಗ್: ಭಾರತದ ಕೋವಿಡ್ -೧೯ ಪ್ರಕರಣಗಳು ಜೂನ್ ಮಧ್ಯಭಾಗದಲ್ಲಿ ದಿನಕ್ಕೆ ೧೫,೦೦೦ ದಾಟಲಿವೆ ಎಂದು ಚೀನಾ 2020 ಜೂನ್  03ರ ಬುಧವಾರ ಭವಿಷ್ಯ ನುಡಿಯಿತು.  ಜೂನ್ ತಿಂಗಳಲ್ಲಿ ಭಾರತವು ಕೋವಿಡ್ -೧೯ ಪ್ರಕರಣಗಳಲ್ಲಿ ಸ್ಥಿರ ಏರಿಕೆ ಕಾಣುವ ಸಾಧ್ಯತೆಯಿದೆ, ದೈನಂದಿನ ಹೆಚ್ಚಳವು ತಿಂಗಳ ಮಧ್ಯಭಾಗದಲ್ಲಿ ದಿನಕ್ಕೆ ೧೫,೦೦೦ ದಾಟಲಿದೆ ಎಂದು ಚೀನಾದ ಸಂಶೋಧಕರು ಸಿದ್ಧಪಡಿಸಿದ ಕೊರೋನವೈರಸ್ ಸಾಂಕ್ರಾಮಿಕ ರೋಗದ ಜಾಗತಿಕ ಮುನ್ಸೂಚನೆ ಮಾದರಿ ಭವಿಷ್ಯ ನುಡಿಯಿತು. ವಾಯುವ್ಯ ಚೀನಾದ ಗನ್ಸು ಪ್ರಾಂತ್ಯದ ಲ್ಯಾನ್ ಝೋವು ವಿಶ್ವವಿದ್ಯಾಲಯವು ಸ್ಥಾಪಿಸಿದಗ್ಲೋಬಲ್ ಕೋವಿಡ್ -೧೯ ಪ್ರಿಡಿಕ್ಟ್ ಸಿಸ್ಟಮ್೧೮೦ ದೇಶಗಳಿಗೆ ದೈನಂದಿನ ಮುನ್ಸೂಚನೆಯನ್ನು ನೀಡುತ್ತದೆ. ಜೂನ್ ರಂದು ಭಾರತದಲ್ಲಿ ,೨೯೧ ಹೊಸ ಕೊರೋನಾ ಪಾಸಿಟಿವ್ ಪ್ರಕರಣಗಳ ಬಗ್ಗೆ ಸಂಶೋಧನಾ ಗುಂಪಿನ ಮುನ್ಸೂಚನೆ ಮಾದರಿಯು ಭವಿಷ್ಯ ನುಡಿದಿತ್ತು. ಭಾರತ ಸರ್ಕಾರದ ಅಧಿಕೃತ ಮಾಹಿತಿ ಪ್ರಕಾರ ಕಳೆದ ೨೪ ಗಂಟೆಗಳಲ್ಲಿ ,೯೦೯ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಇದು ಈವರೆಗಿನ ಪ್ರಮಾಣಕ್ಕೆ ಹೋಲಿಸಿದರೆ ಅತ್ಯಂತ ಹೆಚ್ಚಿನ ಪ್ರಮಾಣವಾಗಿದೆ. ಬುಧವಾರದಿಂದ, ಮುಂದಿನ ನಾಲ್ಕು ದಿನಗಳವರೆಗೆ ೯೬೭೬, ೧೦,೦೭೮, ೧೦,೪೯೮ ಮತ್ತು ೧೦,೯೩೬ ದೈನಂದಿನ ಹೊಸ ಪ್ರಕರಣಗಳ ಮುನ್ಸೂಚನೆಯನ್ನು ಸಂಸ್ಥೆ ನೀಡಿದೆ.  (ವಿವರಗಳಿಗೆ  ಇಲ್ಲಿ  ಕ್ಲಿಕ್   ಮಾಡಿರಿ)

2020: ನವದೆಹಲಿ: ದೆಹಲಿ ಗಲಭೆ ಪ್ರಕರಣದ ಪ್ರಮುಖ ಸಂಚುಕೋರ ಫೈಸಲ್ ಫಾರೂಕ್, ಫೆಬ್ರವರಿ ಗಲಭೆ ನಡೆಯುತ್ತಿರುವಾಗ ತಬ್ಲಿಘಿ ಜಮಾತ್ ಮುಖ್ಯಸ್ಥ ಮೌಲಾನಾ ಮೊಹಮ್ಮದ್ ಸಾದ್ ಅವರ ಆಪ್ತ ಸಹವರ್ತಿ ಎಂದು ವರ್ಣಿಸಲಾದ ಅಬ್ದುಲ್ ಅಲೀಮ್ ಅವರೊಂದಿಗೆ ನಿಕಟ ಸಂಪರ್ಕದಲ್ಲಿದ್ದರು ಎಂದು ದೆಹಲಿ ಪೊಲೀಸರು ದೆಹಲಿ ನ್ಯಾಯಾಲಯಕ್ಕೆ  2020 ಜೂನ್ 03ರ ಬುಧವಾರ ಸಲ್ಲಿಸಿದ ಚಾರ್ಜ್ಶೀಟ್ನಲ್ಲಿ ತಿಳಿಸಿದ್ದಾರೆ. ‘ಗಲಭೆಯಲ್ಲಿ ಫೈಸಲ್ ಫಾರೂಕ್ ಅವರ ಪಾತ್ರದ ಬಗ್ಗೆ ತನಿಖೆಯ ಭಾಗವಾಗಿ ಪೊಲೀಸರು ಅವರ ಫೋನಿನ ವಿವರವಾದ ಕರೆ ವಿಶ್ಲೇಷಣೆಯನ್ನು ನಡೆಸಿದ್ದರು. ಫೈಸಲ್ ಫಾರೂಕ್ ಅವರು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ, ಪಿಂಜ್ರಾ ಟಾಡ್ ಗುಂಪು, ಜಾಮಿಯಾ ಸಮನ್ವಯ ಸಮಿತಿ ಮತ್ತು ಹಜರತ್ ನಿಜಾಮುದ್ದೀನ್ ಮಾರ್ಕಾಜ್ ಅವರ ಪ್ರಮುಖ ಸದಸ್ಯರೊಂದಿಗೆ ಸಂಪರ್ಕದಲ್ಲಿದ್ದರು ಎಂದು ವಿಶ್ಲೇಷಣೆ ತಿಳಿಸಿದೆ. ದಯಾಳಪುರದಲ್ಲಿ ರಾಜಧಾನಿ ಶಾಲೆಯನ್ನು ಹೊಂದಿರುವ ಫೈಸಲ್ ಫಾರೂಕ್, ತನ್ನ ಶಾಲೆಯ ಸುತ್ತಲಿನ ಗಲಭೆಗಾಗಿ ಅಪರಾಧ ವಿಭಾಗದಿಂದ ಬಂಧಿಸಲ್ಪಟ್ಟ ೧೮ ಜನರಲ್ಲಿ ಒಬ್ಬನಾಗಿದ್ದಾನೆ. ಗಲಭೆಕೋರರ ಆರಂಭಿಕ ಗುರಿಗಳಲ್ಲಿ ಒಂದು ಫಾರೂಕ್ ನಡೆಸುತ್ತಿದ್ದ ಶಾಲೆಯ ಪಕ್ಕದ ಡಿಆರ್ಪಿ ಕಾನ್ವೆಂಟ್ ಶಾಲೆಯಾಗಿತ್ತು. ತನಿಖೆಯ ಸಮಯದಲ್ಲಿ, ಫೈಸಲ್ ಫಾರೂಕ್ ರಾಜಧಾನಿ ಶಾಲೆಯಲ್ಲಿ ಮತ್ತು ಸುತ್ತಮುತ್ತಲಿನ ಗಲಭೆಗಳನ್ನು ಉಲ್ಬಣಗೊಳಿಸುವ ಪಿತೂರಿ ನಡೆಸಿದ್ದುದು ತಿಳಿದುಬಂದಿದೆ. ಫೈಸಲ್ ಸೂಚನೆಯ ಮೇರೆಗೆ ಪಕ್ಕದ ಮತ್ತು ಪ್ರತಿಸ್ಪರ್ಧಿ ಡಿಆರ್ಪಿ ಕಾನ್ವೆಂಟ್ ಶಾಲೆಯನ್ನು ಜನಸಮೂಹ ನಾಶಪಡಿಸಿತ್ತು ಎಂದು ದೋಷಾರೋಪ ಪಟ್ಟಿ ಹೇಳಿದೆ. (ವಿವರಗಳಿಗೆ  ಇಲ್ಲಿ  ಕ್ಲಿಕ್   ಮಾಡಿರಿ)

2020: ನವದೆಹಲಿ/ ಮುಂಬೈ:  ‘ನಿಸರ್ಗಚಂಡಮಾರುತವು ಮಹಾರಾಷ್ಟ್ರದ ರಾಯಗಡ ಜಿಲ್ಲೆಯಲ್ಲಿ 2020 ಜೂನ್ 03ರ ಬುಧವಾರ ಮಧ್ಯಾಹ್ನ ನೆಲಕ್ಕೆ ಅಪ್ಪಳಿಸಿ, ಮಹಾರಾಷ್ಟ್ರದಲ್ಲಿ ಹಲವಾರು ಮರಗಳು, ವಿದ್ಯುತ್ ಕಂಬಗಳನ್ನು ಧರೆಗೆ ಉರುಳಿಸಿತು.  ಮುಂಬೈಯಿಂದ ಹುಬ್ಬಳ್ಳಿಯವರೆಗೆ ಭಾರೀ ಗಾಳಿ ಸಹಿತವಾಗಿ ಅಬ್ಬರದ ಮಳೆ ಸುರಿದಿದ್ದು, ಒಂದು ಲಕ್ಷ ಜನರನ್ನು ಸ್ಥಳಾಂತರಿಸಲಾಗಿದೆ. ಮುಂಬೈ ಸಮೀಪದ ಅಲಿಬಾಗ್ ಉಮ್ಟೆ ಗ್ರಾಮದಲ್ಲಿ ವಿದ್ಯುತ್ ಕಂಬವೊಂದು ಬಿದ್ದು ೫೮ ವರ್ಷದ ವ್ಯಕ್ತಿಯೊಬ್ಬರು ಮೃತರಾದರು.  ಒಂದು ಸಾವನ್ನು ಹೊರತು ಪಡಿಸಿ ಮಹಾರಾಷ್ಟ್ರದಲ್ಲಿ ಈವರೆಗೆ ಬೇರೆ ಯಾವುದೇ ಸಾವುನೋವುಗಳು ವರದಿಯಾಗಿಲ್ಲ ಎಂದು ರಾಯಗಢ ಜಿಲ್ಲಾಧಿಕಾರಿ ನಿಧಿ ಚೌಧರಿ ತಿಳಿಸಿದರು. ‘ಅಲಿಬಾಗ್ನಿಂದ ಒಂದು ಸಾವು ವರದಿಯಾಗಿದೆ. ಅಲಿಬಾಗ್ ಉಮ್ಟೆ ಗ್ರಾಮದಲ್ಲಿ ವಿದ್ಯುತ್ ಕಂಬ ಬಿದ್ದು ೫೮ ವರ್ಷದ ವ್ಯಕ್ತಿಯೊಬ್ಬರು ಮೃತರಾಗಿದ್ದಾರೆ. ಜಿಲ್ಲೆಯಾದ್ಯಂತ ಇದುವರೆಗೆ ಯಾವುದೇ ಸಾವು ಸಂಭವಿಸಿಲ್ಲಎಂದು ಚೌಧರಿ ನುಡಿದರು. ಅಲಿಬಾಗ್ಗೆ ಸಮೀಪದಲ್ಲಿರುವ ಮಹಾರಾಷ್ಟ್ರದ ರಾಯಗಡ್ ಜಿಲ್ಲೆಯಲ್ಲಿ ಹಲವಾರು ಮರಗಳು ಬಿರುಗಾಳಿಗೆ ಉರುಳಿ ಬಿದ್ದಿವೆ. ಹಲವಾರು ವಿದ್ಯುತ್ ಕಂಬಗಳೂ ನೆಲಕ್ಕೆ ಒರಗಿವೆ. ಅಲಿಬಾಗ್ ಸಮೀಪ ಚಂಡಮಾರುತವು  ಬುಧವಾರ ಮಧ್ಯಾಹ್ನ ನೆಲಕ್ಕೆ ಅಪ್ಪಳಿಸಿತು. ಅಧಿಕಾರಿಗಳ ಪ್ರಕಾರ, ಚಂಡಮಾರುv ಅಬ್ಬರಕ್ಕೆ ಸುಮಾರು ೮೫ ದೊಡ್ಡ ಮರಗಳು ಉರುಳಿದ್ದು, ಅವುಗಳಲ್ಲಿ ಕೆಲವು ಮನೆಗಳ ಮೇಲೆ ಬಿದ್ದ. ಹನ್ನೊಂದು ವಿದ್ಯುತ್ ಕಂಬಗಳೂ ಧರೆಗುರುಳಿದವು. ಮಹಾರಾಷ್ಟ್ರ ಕರಾವಳಿಗೆ ೧೨೦ ಕಿ.ಮೀ ವೇಗದೊಂದಿಗೆ ಅಪ್ಪಳಿಸಿದ ಬಳಿಕನಿರ್ಗಚಂಡಮಾರುತವು ದುರ್ಬಲಗೊಳ್ಳಲು ಪ್ರಾರಂಭಿಸಿದೆ ಮತ್ತು ಸಂಜೆಯಾಗುತ್ತಿದ್ದಂತೆಯೇ ಅದರ ತೀವ್ರತೆಯು ಮತ್ತಷ್ಟು ಕಡಿಮೆಯಾಗುತ್ತದೆ ಎಂದು ಭಾರತ ಹವಾಮಾನ ಇಲಾಖೆ ತಿಳಿಸಿತು. (ವಿವರಗಳಿಗೆ  ಇಲ್ಲಿ  ಕ್ಲಿಕ್   ಮಾಡಿರಿ)

2020: ಮುಂಬೈ: ಮುಂಬೈಯಿಂದ ೯೫ ಕಿಮೀ ದೂರದಲ್ಲಿರುವ ಅಲಿಬಾಗ್ನಲ್ಲಿನಿಸರ್ಗಚಂಡಮಾರುತವು ನೆಲಕ್ಕೆ ಅಪ್ಪಳಿಸುವುದರೊಂದಿಗೆ ಮುಂಬೈ ಮಹಾನಗರ ಹಾಗೂ ಗುಜರಾತ್ಪ್ರಕೃತಿನರ್ತನದ  ಮಹಾವಿಪತ್ತಿನಿಂದ ಪಾರಾದವು.  ಚಂಡಮಾರುತವು ಮುಂಬೈನ ಆಗ್ನೇಯಕ್ಕೆ ೭೫ ಕಿ.ಮೀ ಮತ್ತು ಪುಣೆಯ ಪಶ್ಚಿಮಕ್ಕೆ ೬೫ ಕಿ.ಮೀ ದೂರದಲ್ಲಿದ್ದು ದುರ್ಬಲಗೊಳ್ಳಲು ಪ್ರಾರಂಭಿಸಿದೆ. ಗಾಳಿಯ ವೇಗವು ಪ್ರಸ್ತುತ ಗಂಟೆಗೆ ೯೦-೧೦೦ ಕಿ.ಮೀ. ಮತ್ತು ಸಂಜೆಯ ಹೊತ್ತಿಗೆ ತೀವ್ರತೆಯು ಮತ್ತಷ್ಟು ಕಡಿಮೆಯಾಗುತ್ತದೆ" ಎಂದು ಅಧಿಕಾರಿಗಳು ಹೇಳಿದರು.  ನಿಸರ್ಗ ಚಂಡಮಾರುತವು ನೆಲಕ್ಕೆ ಅಪ್ಪಳಿಸುವುದರೊಂದಿಗೆ ಬೀಸಿದ ಭಾರೀ ಗಾಳಿ ಮತ್ತು ಮಳೆಯನ್ನು ಅನುಸರಿಸಿ ಮುಂಬೈ ವಿಮಾನ ನಿಲ್ದಾಣದ ಕಾರ್ಯಾಚರಣೆಯನ್ನು ಸಂಜೆ ಗಂಟೆಯವರೆಗೆ ಮುಚ್ಚಲಾಯಿತು. "ಫೆಡೆಕ್ಸ್ ಎಂಡಿ ೧೧ ವಿಮಾನ (ಎನ್ ೫೮೩ ಎಫ್) ಬುಧವಾರ ಮುಂಬೈನಲ್ಲಿ ರನ್ವೇ ೧೪ ರಲ್ಲಿ ಸುತ್ತುತ್ತಿದೆ. ವಿಮಾನವು ರನ್ವೇ ಅಂತ್ಯದಿಂದ ಮೀಟರ್ ದೂರದಲ್ಲಿದೆ. ವಿಮಾನ ಮೂಲಸೌಕರ್ಯ ಮತ್ತು ವಿಮಾನಗಳಿಗೆ ಯಾವುದೇ ಹಾನಿಯಾಗಿಲ್ಲ" ಎಂದು ವರದಿಗಳು ಹೇಳಿವೆ  ಮಧ್ಯೆ, ಪುಣೆಯಲ್ಲಿ ೬೦ ಮರಗಳು ಬೇರು ಸಹಿತವಾಗಿ ನೆಲಕ್ಕೆ ಉರುಳಿರುದ್ದು, ಪುಣೆ ಅಗ್ನಿಶಾಮಕ ಇಲಾಖೆಗೆ ಕಡೆಗಳಲ್ಲಿ ತಗ್ಗು ಪ್ರದೇಶಗಳು ಜಲಾವೃತಗೊಂಡಿರುವ ಬಗ್ಗೆ ಕರೆಗಳು ಬಂದಿವೆ. ಮರಗಳು ಉರುಳಿರುವ ಬಗ್ಗೆ ಬಂದ ೬೦ ಕರೆಗಳು ಮತ್ತು ಜಲಾವೃತಗೊಂಡಿರುವ ಬಗ್ಗೆ ಬಂದ ಕರೆಗಳಿಗೆ ಅಗ್ನಿಶಾಮಕ ಇಲಾಖೆ ಮತ್ತು ಪುಣೆ ಮಹಾನಗರ ಪಾಲಿಕೆ ಸ್ಪಂದಿಸಿದವು.  (ವಿವರಗಳಿಗೆ  ಇಲ್ಲಿ  ಕ್ಲಿಕ್   ಮಾಡಿರಿ)

2020: ಭರೂಚ್: ಗುಜರಾತಿನ ಭರೂಚ್ ಜಿಲ್ಲೆಯ ದಹೇಜ್ನಲ್ಲಿ ರಾಸಾಯನಿಕ ಕಾರ್ಖಾನೆಯ ಬಾಯ್ಲರ್ನಲ್ಲಿ 2020 ಜೂನ್ 03ರ ಬುಧವಾರ ಸಂಭವಿಸಿದ ಭಾರಿ ಸ್ಫೋಟ ಹಾಗೂ ಬೆಂಕಿಯಲ್ಲಿ  ಐವರು ಕಾರ್ಮಿಕರು ಸಾವನ್ನಪ್ಪಿದ್ದಾರೆ ಮತ್ತು ೫೭ ಮಂದಿ ಗಾಯಗೊಂಡಿದ್ದಾರೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿತು. ಘಟನೆ ನಡೆದ ಸ್ಥಳದಲ್ಲಿ ಇನ್ನೂ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ವರದಿ ತಿಳಿಸಿತು.  ಇಲ್ಲಿಯವರೆಗೆ ನಾವು ಐವರು ಉದ್ಯೋಗಿಗಳ ಸಾವನ್ನು ದೃಢ ಪಡಿಸಿದ್ದೇವೆ. ಕೆಲವು ಶವಗಳನ್ನು ಕಾರ್ಖಾನೆಯಿಂದ ಹೊರತರಲಾಗಿದ್ದು, ಕೆಲವರು ಆಸ್ಪತ್ರೆಯಲ್ಲಿ ಮೃತರಾಗಿದ್ದಾರೆ. ರಕ್ಷಣಾ ಕಾರ್ಯಾಚರಣೆ ಇನ್ನೂ ನಡೆಯುತ್ತಿದೆಎಂದು ಭರೂಚ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ವಿ.ಚುದಾಸಮಾ ತಿಳಿಸಿದರು.  ಬುಧವಾರ ಮಧ್ಯಾಹ್ನ ಭರೂಚ್ ದಹೇಜ್ ಇಂಡಸ್ಟ್ರಿಯಲ್ ಎಸ್ಟೇಟ್ನಲ್ಲಿರುವ ಯಶಶ್ವಿ ರಸಾಯನ್ ಪ್ರೈವೇಟ್ ಲಿಮಿಟೆಡ್ನಲ್ಲಿನ ಟ್ಯಾಂಕ್ನಲ್ಲಿ ಸಂಭವಿಸಿದ ಸ್ಫೋಟ ಹಾಗೂ ಬೆಂಕಿಯಲ್ಲಿ ಸಿಲುಕಿ ಐವರು ಜನರು ಪ್ರಾಣ ಕಳೆದುಕೊಂಡರು ಮತ್ತು ೫೭ ಜನರು ಗಾಯಗೊಂಡಿದ್ದಾರೆಎಂದು ಭರೂಚ್ ಜಿಲ್ಲಾಧಿಕಾರಿ ಡಾ ಎಂಡಿ ಮೋಡಿಯಾ ತಿಳಿಸಿದರು.  (ವಿವರಗಳಿಗೆ  ಇಲ್ಲಿ  ಕ್ಲಿಕ್   ಮಾಡಿರಿ)

ಇಂದಿನ ಇತಿಹಾಸ  History Today ಜೂನ್  03  (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

-
ಸಂಗ್ರಹ: ನೆತ್ರಕೆರೆ ಉದಯಶಂಕರ
PARYAYA: ಇಂದಿನ ಇತಿಹಾಸ History Today ಜೂನ್‌ 03: ಇಂದಿನ ಇತಿಹಾಸ History Today ಜೂನ್‌ 03 2026: ಬೆಂಗಳೂರು: ದೊಡ್ಡಾಲಹಳ್ಳಿ ಕೆಂಪೇಗೌಡ ಶಿವಕುಮಾರ್‌ (ಡಿ.ಕೆ. ಶಿವಕುಮಾರ್)‌ ಅವರು ಕರ್ನಾಟಕದ 24ನೇ ಮುಖ್ಯಮಂತ್ರಿಯಾಗಿ...

Monday, June 1, 2026

PARYAYA: ಕಥೆ ಹೇಳುವ ಕಲ್ಲುಗಳು…!

 ಕಥೆ ಹೇಳುವ ಕಲ್ಲುಗಳು…!

ಲ್ಲುಗಳು ಕಥೆ ಹೇಳುತ್ತವಾ? ಹೌದು ಅನ್ನುತ್ತಾರೆ ಈ ವ್ಯಕ್ತಿ. ಚಿತ್ರದುರ್ಗಕ್ಕೆ ಈ ಹೆಸರು ಬರಲು ಕಾರಣ ಏನು ಎಂಬುದನ್ನು ಇವರ ಬಾಯಿಯಿಂದಲೇ ಕೇಳಬೇಕು. ಇವರಿಗೆ ಇರುವ ಇತಿಹಾಸ ಜ್ಞಾನಕ್ಕೆ ಕೈ ಮುಗಿಯಬೇಕು. ತಿಳಿಯಲು  ಪರ್ಯಾಯ.ಕಾಮ್‌ ವೆಬ್‌ ಸೈಟಿನ ʼವಾಟ್‌ - ಸುದ್ದಿʼ ಪುಟಕ್ಕೆ ಭೇಟಿ ಕೊಡಿ.

PARYAYA: ಕಥೆ ಹೇಳುವ ಕಲ್ಲುಗಳು…!:   ಕಥೆ ಹೇಳುವ ಕಲ್ಲುಗಳು…! ಕ ಲ್ಲುಗಳು ಕಥೆ ಹೇಳುತ್ತವಾ? ಹೌದು ಅನ್ನುತ್ತಾರೆ ಈ ವ್ಯಕ್ತಿ. ಚಿತ್ರದುರ್ಗಕ್ಕೆ ಈ ಹೆಸರು ಬರಲು ಕಾರಣ ಏನು ಎಂಬುದನ್ನು ಇವರ ಬಾಯಿಯಿಂದಲೇ ಕೇ...

Sunday, May 31, 2026

PARYAYA: ಜ್ಯೇಷ್ಠ ಮಾಸದ ಶ್ರೀ ಸತ್ಯನಾರಾಯಣ ಪೂಜಾ

 ಜ್ಯೇಷ್ಠ ಮಾಸದ ಶ್ರೀ ಸತ್ಯನಾರಾಯಣ ಪೂಜಾ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ೨೦೨೬ ಮೇ ೩೦ರ ಶನಿವಾರ ಜ್ಯೇಷ್ಠ ಮಾಸದ ಶ್ರೀ ಸತ್ಯನಾರಾಯಣ ಪೂಜೆಯನ್ನು ಭಕ್ತಿ ಭಾವದೊಂದಿಗೆ ನೆರವೇರಿಸಲಾಯಿತು.

ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದ ಕೆಲವು ಚಿತ್ರಗಳು ಹಾಗೂ ವಿಡಿಯೋಗಳು ಇಲ್ಲಿವೆ. ಮಹಾಮಂಗಳಾರತಿಯ ವಿಡಿಯೋ ನೋಡಲು ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ.


ದೇವಸ್ಥಾನದಲ್ಲಿ ಶೀಘ್ರದಲ್ಲಿಯೇ ಆರಂಭವಾಗಲಿದೆ - ಹೊಸ ತಂಡಕ್ಕೆ ಯಕ್ಷಗಾನ ತರಬೇತಿ 

PARYAYA: ಜ್ಯೇಷ್ಠ ಮಾಸದ ಶ್ರೀ ಸತ್ಯನಾರಾಯಣ ಪೂಜಾ:   ಜ್ಯೇಷ್ಠ ಮಾಸದ ಶ್ರೀ ಸತ್ಯನಾರಾಯಣ ಪೂಜಾ ಬೆಂ ಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾ...

Friday, May 29, 2026

PARYAYA: ಛಾಯಾಚಿತ್ರ ನೆನಪು ಮೂಡಿಸಿದಾಗ

 ಛಾಯಾಚಿತ್ರ ನೆನಪು ಮೂಡಿಸಿದಾಗ

ಕಿರು ಲೇಖನ-1

ನಾನು ಹೇಳಲು ಹೊರಟಿರುವುದು 94-95ರ ಸಮಯದ ಘಟನೆ.ಪರಿಸರದ ವಿಷಯದಲ್ಲಿ  ಸ್ವಯಂ ಪ್ರೇರಣೆಯಿಂದ ಒಂದಷ್ಟು ಕೆಲಸ ಮಾಡುತ್ತಿದ್ದುದರ ನೆನಪು.ಪತ್ರಿಕೆಗಳಲ್ಲಿ ಲೇಖನಗಳನ್ನು ಬರೆಯುತ್ತಿದ್ದುದರ ನೆನಪು.

ವಿಶೇಷವಾಗಿ ಪಾಲಿಥೀನ್ ಚೀಲದಿಂದ ಪರಿಸರಕ್ಕೆ ಆಗುತ್ತಿರುವ ಹಾನಿ.ಆಗಿನ್ನೂ ಪ್ಲಾಸ್ಟಿಕ್ ಬಗ್ಗೆ ಯಾರಿಗೂ ಅಷ್ಟು ತಿಳಿದಿರಲಿಲ್ಲ.

ಅದರ ಸಂಬಂಧ ಒಂದು ರೀತಿಯ ಸಂಶೋಧನೆಯನ್ನೇ ನಡೆಸಿದ್ದೆ ಎನ್ನಬಹುದು.ಎಲ್ಲೆಲ್ಲೂ ಪಾಲಿಥೀನ್ ಚೀಲಗಳನ್ನು ಬಿಸಾಡಲ್ಪಟ್ಟು ರಸ್ತೆ,ಸ್ಥಳಗಳು ಅಸಹ್ಯ ಪರಿಸರವನ್ನು ನಿರ್ಮಿಸಿರುವುದನ್ನು ನೋಡಿ ಮನಸು ಖೇದವಾಗುತ್ತಿತ್ತು. ಈಗ ಬಹಳ ಜಾಗೃತಿ ಬಂದಿದೆ ಅಂತೇನಿಲ್ಲ.ಅದರ ಇನ್ನೊಂದು ಭಯಾನಕ ರೂಪ.

ಇದರ ಬಗ್ಗೆ ವಿಪರೀತವಾದ ಚರ್ಚೆಗಳು ನಡೆಯುತ್ತಿದ್ದವು.ನಿರ್ವಹಣೆ ವಿಷಯದಲ್ಲಿ ಹಲವಾರು ಉತ್ಸಾಹಿ ನಾಗರಿಕರು ಡಾಕ್ಟರ್ ಗಳು
ಸ್ವಚ್ಛ ಬೆಂಗಳೂರಿಗೆ ಸಾಕಷ್ಟು ಕೆಲಸ ಮಾಡುತ್ತಿದ್ದರು. ಇದರ ಸಂಬಂಧ ನನ್ನ ಪುಸ್ತಕ "ಫನತ್ಯಾಜ್ಯ ನಿರ್ವಹಣೆ"ಯಲ್ಲಿ ಸಂಪೂರ್ಣ ಮಾಹಿತಿ ಬರೆದಿದ್ದೇನೆ.

ಪಾಲಿಥೀನ್ ಚೀಲಕ್ಕೆ ಪರ್ಯಾಯ ಇದನ್ನು ಹುಡುಕುತ್ತಾ ಬೇಟಿ ನೀಡಿದ ಪ್ಲಾಸ್ಟಿಕ್ ತಯಾರು ಮಾಡುವ ಕಾರ್ಖಾನೆಗಳು ಎಷ್ಟೋ !

ಸಂಶೋಧನೆಯ ಸಂಸ್ಥೆಗಳೆಷ್ಟೊ!

ಮಾಲಿನ್ಯ ನಿಯಂತ್ರಣ ಮಂಡಳಿ,ಸೆಂಟರ್ ಫಾರ್ ಎನ್ವಿರಾನ್ಮೆಂಟ್ ಎಜುಕೇಶನ್ ,ಟಾಟಾ ಇನ್ಸ್ಟಿಟ್ಯೂಟ್ ಹೀಗೆ ಹಲವು.ಎಲ್ಲೂ ಇದರ ಬಗ್ಗೆ ಸಂಶೋಧನೆ ನಡೆದಿರಲಿಲ್ಲ.ಕೇವಲ ಪ್ಲಾಸ್ಟಿಕ್ ಉಪಯೋಗದ ಬಗ್ಗೆ ಸಾಕಷ್ಟು ಮಾಹಿತಿ ಸಿಗುತ್ತಿತ್ತು.

ಆಗ ಪಾಲಿಥೀನ್ ಚೀಲಕ್ಕೆ ಪರ್ಯಾಯ ಏನಾಗಬಹುದು!! ಎನ್ನುವ ಕುತೂಹಲ ಪ್ರಶ್ನೆ ಪತ್ರಿಕೆಗಳಲ್ಲಿ ಬರುತ್ತಿದ್ದವು.

ಕೆಲವಷ್ಟು ಜನ ತಮ್ಮದೇ ರೀತಿಯಲ್ಲಿ ವಾದಮಾಡುತ್ತಿದ್ದರು .ಅವು ಕೇವಲ ವಾದವಾಗಿರುತ್ತಿತ್ತು ಅಷ್ಟೆ.

ಆಗಷ್ಟೇ ಬಯೋ ಡಿ ಗ್ರೇಡಬಲ್ ಪ್ಲಾಸ್ಟಿಕ್ ಪರ್ಯಾಯ ಆಗಬಹುದು ಎನ್ನುವ ರೀತಿಯಲ್ಲಿ ಪ್ರಯತ್ನಗಳು ನಡೆಯುತ್ತಿತ್ತು.

ಆಗ ಮೈಸೂರು ರಸ್ತೆಯ ನಾಯಿಂಡನ ಹಳ್ಳಿ,ಮಾಗಡಿ ರಸ್ತೆ,ಬೆಂಗಳೂರಿನ ವಿಜಯನಗರದ ರೈಲ್ವೇ ಕಂಬಿಗಳ ಎರಡು ಪಕ್ಕದಲ್ಲಿ ರಾಶಿ,ರಾಶಿ ಪ್ಲಾಸ್ಟಿಕ್ ಚೀಲಗಳು ಬೆಟ್ಟದಂತೆ ಕಾಣಿಸುತ್ತಿದ್ದವು. 

ಹಸುಗಳು ಈ ಪ್ಲಾಸ್ಟಿಕ್ ಗಳನ್ನು ತಿನ್ನುತ್ತಿದ್ದವು. ಅವುಗಳ ಹೊಟ್ಟೆಯಲ್ಲಿ ಪ್ಲಾಸ್ಟಿಕ್ ಸೇರಿ ಸಾಯುತ್ತಿದ್ದವು.ಕೊಳಚೆ ನೀರು ಹರಿದು ಹೋಗುವ ಮೋರಿಗಳಲ್ಲಿ ಈ ಪಾಲಿಥೀನ್ ಚೀಲಗಳು ಸಿಲುಕಿ ರಸ್ತೆಯೆಲ್ಲಾ ಅಸಹ್ಯ ಪರಿಸರ ಸೃಷ್ಟಿಯಾಗುತ್ತಿತ್ತು.

ಇದರ ನೂರಾರು ವರದಿಗಳು ಬರುತ್ತಿದ್ದವು .

ಮಾಮೂಲಿನಂತೆ ಸರಿಯಾದ ಗುರಿ ಇಲ್ಲದ ಅಧಿಕಾರ,ಲಂಚ, ಭ್ರಷ್ಟಾಚಾರ ಇವುಗಳಿಂದ ಪರಿಸರ ನಲುಗಿತು,ನಲುಗುತ್ತಿದೆ.

ಆಗ ಕೆಲವು ಸ್ವಯಂಸೇವಾ ಸಂಘಗಳು ಈ ವಿಷಯದಲ್ಲಿ  ಕೆಲಸಮಾಡಲು ಸಾಕಷ್ಟು ಪ್ರಯತ್ನಿಸುತ್ತಿದ್ದವು .ಇದರ ವಿವರಣೆಯನ್ನು ನನ್ನ "ಘನ ತ್ಯಾಜ್ಯ ನಿರ್ವಹಣೆ"ಪುಸ್ತಕದಲ್ಲಿ ಸಂಪೂರ್ಣ ವಿವರಣೆ ನೀಡಿದ್ದೇನೆ.

ಮೈಸೂರಿನಲ್ಲಿ ಡಾ!! ಜಗದೀಶ, ಈಗ ನಿವೃತ್ತ ಪ್ರಾಧ್ಯಾಪಕರು ,ಪಾಲಿಮರ್ ವಿಜ್ಞಾನದಲ್ಲಿ ಪರಿಣಿತರು.ಹಲವಾರು ಪರಿಸರ ಸಂಬಂಧಿ ಕಾರ್ಯಕ್ರಮಗಳನ್ನು ಮೈಸೂರಿನಲ್ಲಿ ನಡೆಸುತ್ತಿದ್ದರು.

ನಾನು  ದೂರದರ್ಶನಲ್ಲಿ ಇದರ ಸಂಬಂಧ ಚರ್ಚೆ ನಡೆಸುತ್ತಿದ್ದೆ. ಇದರಲ್ಲಿ  ಸ್ನೇಹಿತರಾದ ಡಾ !!ಜಗದೀಶ್, ಕೆಲವು ಪರಿಣಿತರು ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಕಾರ್ಪೊರೇಷನ್ ಅಧಿಕಾರಿಗಳು ಭಾಗಿಯಾಗುತ್ತಿದ್ದರು.

ನಂತರ ನಾನು :"ಪ್ಲಾಸ್ಟಿಕ್ ಮತ್ತು ಪರಿಸರ "ಎನ್ನುವ ಸಾಕ್ಷ್ಯ ಚಿತ್ರ ತಯಾರಿಸಿದ್ದೆ.ಇದು ದೂರದರ್ಶನದಲ್ಲಿ 30_40 ಬಾರಿ ಪ್ರಸಾರವಾಗುತ್ತು.

ವಿಷಯ ಸ್ವಲ್ಪ ಹೊಸದಾದ್ದರಿಂದ ನಾನು ಪದಗಳನ್ನು ಹುಡುಕಿ,ಸೃಷ್ಟಿಸಿ ಬಳಸುತ್ತಿದ್ದುದೂ ಉಂಟು.ಈಗ ಇವೆಲ್ಲ ಇತಿಹಾಸ.

 - ಎಂ.ನರಸಿಂಹಮೂರ್ತಿ


ಇದನ್ನೂ ಓದಿ: (ಪರ್ಯಾಯ.ಕಾಮ್‌ ವೆಬ್‌ ಸೈಟಿನ ಲೇಖನಗಳು ಪುಟಕ್ಕೆ ಭೇಟಿ ಕೊಡಿ)

ಪ್ಲಾಸ್ಟಿಕ್ ಬಾಟಲಿ ನೀರು ವಿಷಕಾರಿ, ಪರಿಸರಕ್ಕೆ ಹಾನಿಕರ; ಪರ್ಯಾಯ ಹುಡುಕಿ: ಕೇಂದ್ರಕ್ಕೆ ಮದ್ರಾಸ್ ಹೈ ಸೂಚನೆ

PARYAYA: ಛಾಯಾಚಿತ್ರ ನೆನಪು ಮೂಡಿಸಿದಾಗ:   ಛಾಯಾಚಿತ್ರ ನೆನಪು ಮೂಡಿಸಿದಾಗ ಕಿರು ಲೇಖನ-1 ನಾ ನು ಹೇಳಲು ಹೊರಟಿರುವುದು 94-95 ರ ಸಮಯದ ಘಟನೆ.ಪರಿಸರದ ವಿಷಯದಲ್ಲಿ   ಸ್ವಯಂ ಪ್ರೇರಣೆಯಿಂದ ಒಂದಷ್ಟು ಕೆಲಸ ಮಾಡುತ್...