Friday, May 29, 2026

PARYAYA: ಛಾಯಾಚಿತ್ರ ನೆನಪು ಮೂಡಿಸಿದಾಗ

 ಛಾಯಾಚಿತ್ರ ನೆನಪು ಮೂಡಿಸಿದಾಗ

ಕಿರು ಲೇಖನ-1

ನಾನು ಹೇಳಲು ಹೊರಟಿರುವುದು 94-95ರ ಸಮಯದ ಘಟನೆ.ಪರಿಸರದ ವಿಷಯದಲ್ಲಿ  ಸ್ವಯಂ ಪ್ರೇರಣೆಯಿಂದ ಒಂದಷ್ಟು ಕೆಲಸ ಮಾಡುತ್ತಿದ್ದುದರ ನೆನಪು.ಪತ್ರಿಕೆಗಳಲ್ಲಿ ಲೇಖನಗಳನ್ನು ಬರೆಯುತ್ತಿದ್ದುದರ ನೆನಪು.

ವಿಶೇಷವಾಗಿ ಪಾಲಿಥೀನ್ ಚೀಲದಿಂದ ಪರಿಸರಕ್ಕೆ ಆಗುತ್ತಿರುವ ಹಾನಿ.ಆಗಿನ್ನೂ ಪ್ಲಾಸ್ಟಿಕ್ ಬಗ್ಗೆ ಯಾರಿಗೂ ಅಷ್ಟು ತಿಳಿದಿರಲಿಲ್ಲ.

ಅದರ ಸಂಬಂಧ ಒಂದು ರೀತಿಯ ಸಂಶೋಧನೆಯನ್ನೇ ನಡೆಸಿದ್ದೆ ಎನ್ನಬಹುದು.ಎಲ್ಲೆಲ್ಲೂ ಪಾಲಿಥೀನ್ ಚೀಲಗಳನ್ನು ಬಿಸಾಡಲ್ಪಟ್ಟು ರಸ್ತೆ,ಸ್ಥಳಗಳು ಅಸಹ್ಯ ಪರಿಸರವನ್ನು ನಿರ್ಮಿಸಿರುವುದನ್ನು ನೋಡಿ ಮನಸು ಖೇದವಾಗುತ್ತಿತ್ತು. ಈಗ ಬಹಳ ಜಾಗೃತಿ ಬಂದಿದೆ ಅಂತೇನಿಲ್ಲ.ಅದರ ಇನ್ನೊಂದು ಭಯಾನಕ ರೂಪ.

ಇದರ ಬಗ್ಗೆ ವಿಪರೀತವಾದ ಚರ್ಚೆಗಳು ನಡೆಯುತ್ತಿದ್ದವು.ನಿರ್ವಹಣೆ ವಿಷಯದಲ್ಲಿ ಹಲವಾರು ಉತ್ಸಾಹಿ ನಾಗರಿಕರು ಡಾಕ್ಟರ್ ಗಳು
ಸ್ವಚ್ಛ ಬೆಂಗಳೂರಿಗೆ ಸಾಕಷ್ಟು ಕೆಲಸ ಮಾಡುತ್ತಿದ್ದರು. ಇದರ ಸಂಬಂಧ ನನ್ನ ಪುಸ್ತಕ "ಫನತ್ಯಾಜ್ಯ ನಿರ್ವಹಣೆ"ಯಲ್ಲಿ ಸಂಪೂರ್ಣ ಮಾಹಿತಿ ಬರೆದಿದ್ದೇನೆ.

ಪಾಲಿಥೀನ್ ಚೀಲಕ್ಕೆ ಪರ್ಯಾಯ ಇದನ್ನು ಹುಡುಕುತ್ತಾ ಬೇಟಿ ನೀಡಿದ ಪ್ಲಾಸ್ಟಿಕ್ ತಯಾರು ಮಾಡುವ ಕಾರ್ಖಾನೆಗಳು ಎಷ್ಟೋ !

ಸಂಶೋಧನೆಯ ಸಂಸ್ಥೆಗಳೆಷ್ಟೊ!

ಮಾಲಿನ್ಯ ನಿಯಂತ್ರಣ ಮಂಡಳಿ,ಸೆಂಟರ್ ಫಾರ್ ಎನ್ವಿರಾನ್ಮೆಂಟ್ ಎಜುಕೇಶನ್ ,ಟಾಟಾ ಇನ್ಸ್ಟಿಟ್ಯೂಟ್ ಹೀಗೆ ಹಲವು.ಎಲ್ಲೂ ಇದರ ಬಗ್ಗೆ ಸಂಶೋಧನೆ ನಡೆದಿರಲಿಲ್ಲ.ಕೇವಲ ಪ್ಲಾಸ್ಟಿಕ್ ಉಪಯೋಗದ ಬಗ್ಗೆ ಸಾಕಷ್ಟು ಮಾಹಿತಿ ಸಿಗುತ್ತಿತ್ತು.

ಆಗ ಪಾಲಿಥೀನ್ ಚೀಲಕ್ಕೆ ಪರ್ಯಾಯ ಏನಾಗಬಹುದು!! ಎನ್ನುವ ಕುತೂಹಲ ಪ್ರಶ್ನೆ ಪತ್ರಿಕೆಗಳಲ್ಲಿ ಬರುತ್ತಿದ್ದವು.

ಕೆಲವಷ್ಟು ಜನ ತಮ್ಮದೇ ರೀತಿಯಲ್ಲಿ ವಾದಮಾಡುತ್ತಿದ್ದರು .ಅವು ಕೇವಲ ವಾದವಾಗಿರುತ್ತಿತ್ತು ಅಷ್ಟೆ.

ಆಗಷ್ಟೇ ಬಯೋ ಡಿ ಗ್ರೇಡಬಲ್ ಪ್ಲಾಸ್ಟಿಕ್ ಪರ್ಯಾಯ ಆಗಬಹುದು ಎನ್ನುವ ರೀತಿಯಲ್ಲಿ ಪ್ರಯತ್ನಗಳು ನಡೆಯುತ್ತಿತ್ತು.

ಆಗ ಮೈಸೂರು ರಸ್ತೆಯ ನಾಯಿಂಡನ ಹಳ್ಳಿ,ಮಾಗಡಿ ರಸ್ತೆ,ಬೆಂಗಳೂರಿನ ವಿಜಯನಗರದ ರೈಲ್ವೇ ಕಂಬಿಗಳ ಎರಡು ಪಕ್ಕದಲ್ಲಿ ರಾಶಿ,ರಾಶಿ ಪ್ಲಾಸ್ಟಿಕ್ ಚೀಲಗಳು ಬೆಟ್ಟದಂತೆ ಕಾಣಿಸುತ್ತಿದ್ದವು. 

ಹಸುಗಳು ಈ ಪ್ಲಾಸ್ಟಿಕ್ ಗಳನ್ನು ತಿನ್ನುತ್ತಿದ್ದವು. ಅವುಗಳ ಹೊಟ್ಟೆಯಲ್ಲಿ ಪ್ಲಾಸ್ಟಿಕ್ ಸೇರಿ ಸಾಯುತ್ತಿದ್ದವು.ಕೊಳಚೆ ನೀರು ಹರಿದು ಹೋಗುವ ಮೋರಿಗಳಲ್ಲಿ ಈ ಪಾಲಿಥೀನ್ ಚೀಲಗಳು ಸಿಲುಕಿ ರಸ್ತೆಯೆಲ್ಲಾ ಅಸಹ್ಯ ಪರಿಸರ ಸೃಷ್ಟಿಯಾಗುತ್ತಿತ್ತು.

ಇದರ ನೂರಾರು ವರದಿಗಳು ಬರುತ್ತಿದ್ದವು .

ಮಾಮೂಲಿನಂತೆ ಸರಿಯಾದ ಗುರಿ ಇಲ್ಲದ ಅಧಿಕಾರ,ಲಂಚ, ಭ್ರಷ್ಟಾಚಾರ ಇವುಗಳಿಂದ ಪರಿಸರ ನಲುಗಿತು,ನಲುಗುತ್ತಿದೆ.

ಆಗ ಕೆಲವು ಸ್ವಯಂಸೇವಾ ಸಂಘಗಳು ಈ ವಿಷಯದಲ್ಲಿ  ಕೆಲಸಮಾಡಲು ಸಾಕಷ್ಟು ಪ್ರಯತ್ನಿಸುತ್ತಿದ್ದವು .ಇದರ ವಿವರಣೆಯನ್ನು ನನ್ನ "ಘನ ತ್ಯಾಜ್ಯ ನಿರ್ವಹಣೆ"ಪುಸ್ತಕದಲ್ಲಿ ಸಂಪೂರ್ಣ ವಿವರಣೆ ನೀಡಿದ್ದೇನೆ.

ಮೈಸೂರಿನಲ್ಲಿ ಡಾ!! ಜಗದೀಶ, ಈಗ ನಿವೃತ್ತ ಪ್ರಾಧ್ಯಾಪಕರು ,ಪಾಲಿಮರ್ ವಿಜ್ಞಾನದಲ್ಲಿ ಪರಿಣಿತರು.ಹಲವಾರು ಪರಿಸರ ಸಂಬಂಧಿ ಕಾರ್ಯಕ್ರಮಗಳನ್ನು ಮೈಸೂರಿನಲ್ಲಿ ನಡೆಸುತ್ತಿದ್ದರು.

ನಾನು  ದೂರದರ್ಶನಲ್ಲಿ ಇದರ ಸಂಬಂಧ ಚರ್ಚೆ ನಡೆಸುತ್ತಿದ್ದೆ. ಇದರಲ್ಲಿ  ಸ್ನೇಹಿತರಾದ ಡಾ !!ಜಗದೀಶ್, ಕೆಲವು ಪರಿಣಿತರು ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಕಾರ್ಪೊರೇಷನ್ ಅಧಿಕಾರಿಗಳು ಭಾಗಿಯಾಗುತ್ತಿದ್ದರು.

ನಂತರ ನಾನು :"ಪ್ಲಾಸ್ಟಿಕ್ ಮತ್ತು ಪರಿಸರ "ಎನ್ನುವ ಸಾಕ್ಷ್ಯ ಚಿತ್ರ ತಯಾರಿಸಿದ್ದೆ.ಇದು ದೂರದರ್ಶನದಲ್ಲಿ 30_40 ಬಾರಿ ಪ್ರಸಾರವಾಗುತ್ತು.

ವಿಷಯ ಸ್ವಲ್ಪ ಹೊಸದಾದ್ದರಿಂದ ನಾನು ಪದಗಳನ್ನು ಹುಡುಕಿ,ಸೃಷ್ಟಿಸಿ ಬಳಸುತ್ತಿದ್ದುದೂ ಉಂಟು.ಈಗ ಇವೆಲ್ಲ ಇತಿಹಾಸ.

 - ಎಂ.ನರಸಿಂಹಮೂರ್ತಿ


ಇದನ್ನೂ ಓದಿ: (ಪರ್ಯಾಯ.ಕಾಮ್‌ ವೆಬ್‌ ಸೈಟಿನ ಲೇಖನಗಳು ಪುಟಕ್ಕೆ ಭೇಟಿ ಕೊಡಿ)

ಪ್ಲಾಸ್ಟಿಕ್ ಬಾಟಲಿ ನೀರು ವಿಷಕಾರಿ, ಪರಿಸರಕ್ಕೆ ಹಾನಿಕರ; ಪರ್ಯಾಯ ಹುಡುಕಿ: ಕೇಂದ್ರಕ್ಕೆ ಮದ್ರಾಸ್ ಹೈ ಸೂಚನೆ

PARYAYA: ಛಾಯಾಚಿತ್ರ ನೆನಪು ಮೂಡಿಸಿದಾಗ:   ಛಾಯಾಚಿತ್ರ ನೆನಪು ಮೂಡಿಸಿದಾಗ ಕಿರು ಲೇಖನ-1 ನಾ ನು ಹೇಳಲು ಹೊರಟಿರುವುದು 94-95 ರ ಸಮಯದ ಘಟನೆ.ಪರಿಸರದ ವಿಷಯದಲ್ಲಿ   ಸ್ವಯಂ ಪ್ರೇರಣೆಯಿಂದ ಒಂದಷ್ಟು ಕೆಲಸ ಮಾಡುತ್...

Thursday, May 28, 2026

PARYAYA: ಇಂದಿನ ಇತಿಹಾಸ History Today ಮೇ 28

ಇಂದಿನ ಇತಿಹಾಸ History Today ಮೇ 28 

2026: ಬೆಂಗಳೂರು: ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೈಕಮಾಂಡ್‌ ನಿರ್ದೇಶನದ ಮೇರೆಗೆ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದರು. ಮಧ್ಯಾಹ್ನ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದರು. ರಾಜ್ಯಪಾಲರು ಇಲ್ಲದೇ ಇದ್ದುದರಿಂದ ಕಚೇರಿಯಲ್ಲಿ ರಾಜೀನಾಮೆ ಪತ್ರವನ್ನು ಸಲ್ಲಿಸಿದರು. ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯಸಭೆಗೆ ಬರುವಂತೆ ವರಿಷ್ಠರು ಆಹ್ವಾನ ನೀಡಿದ್ದರೂ ತಾವು ಅದನ್ನು ಸ್ವೀಕರಿಸುವುದಿಲ್ಲ. ರಾಜ್ಯದಲ್ಲಿಯೇ ಶಾಸಕನಾಗಿ ಉಳಿದು ಸೇವೆ ಸಲ್ಲಿಸುವೆ ಎಂದು ಪ್ರಕಟಿಸಿದರು. ಹಿಂದಿನ ದಿನ ದೆಹಲಿಯಲ್ಲಿ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು ಸಿದ್ದರಾಮಯ್ಯ ಅವರಿಗೆ ರಾಜೀನಾಮೆ ಸಲ್ಲಿಸುವಂತೆ ಸೂಚಿಸಿದ್ದರು. ಸಿದ್ದರಾಮಯ್ಯ ರಾಜೀನಾಮೆಯೊಂದಿಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಮುಖ್ಯಮಂತ್ರಿ ಗಾದಿಯ ಸಮೀಪಕ್ಕೆ ಬಂದರು.

2020: ನವದೆಹಲಿ: ಕೊರೋನಾವೈರಸ್ ದಿಗ್ಬಂಧನದಿಂದಾಗಿ (ಲಾಕ್ ಡೌನ್) ದೇಶಾದ್ಯಂತ ಸಿಕ್ಕಿಹಾಕಿಕೊಂಡಿರುವ ವಲಸೆ ಕಾರ್ಮಿಕರಿಂದ ರೈಲು ಅಥವಾ ಬಸ್ಸು ಟಿಕೆಟ್ ದರ ವಸೂಲಿ ಮಾಡಬಾರದು ಮತ್ತು ಅವರಿಗೆ ಆಹಾರ ಮತ್ತು ನೀರನ್ನು ಒದಗಿಸಬೇಕು ಎಂದು ಸುಪ್ರೀಂಕೋರ್ಟ್ 2020 ಮೇ 28ರ ಗುರುವಾರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡಿತು.ಸ್ವ ಇಚ್ಛೆಯಿಂದ ದಾಖಲಿಸಿದ ಪ್ರಕರಣದಲ್ಲಿ, ಮಧ್ಯಂತರ ನಿರ್ದೇಶನ ನೀಡಿದ ನ್ಯಾಯಮೂರ್ತಿ ಅಶೋಕ ಭೂಷಣ್ ನೇತೃತ್ವದ ಪೀಠವು, ಸಿಕ್ಕಿಹಾಕಿಕೊಂಡಿರುವ ಎಲ್ಲ ವಲಸೆ ಕಾರ್ಮಿಕರಿಗೆ ಆಯಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಪ್ರಕಟಿತ ಮತ್ತು ಘೋಷಿತ ಸ್ಥಳಗಳಲ್ಲಿ ಅವರಿಗೆ ರೈಲು ಅಥವಾ ಬಸ್ಸು ಏರಲು ಸಾಧ್ಯವಾಗುವವರೆಗೂ ಆಹಾರ ಮತ್ತು ನೀರಿನ ವ್ಯವಸ್ಥೆ ಮಾಡಬೇಕು ಎಂದು ಹೇಳಿತು. ಪಯಣ ಆರಂಭವಾಗುವ ರಾಜ್ಯವು ನಿಲ್ದಾಣಗಳಲ್ಲಿಯೇ ಊಟ ಮತ್ತು ನೀರನ್ನು ಒದಗಿಸಬೇಕು, ಭಾರತೀಯ ರೈಲ್ವೇಯು ಪಯಣದ ವೇಳೆಯಲ್ಲಿ ಅವರಿಗೆ ಆಹಾರ ನೀರನ್ನು ಒದಗಿಸಬೇಕು. ಬಸ್ಸು ಪಯಣದಲ್ಲೂ ಅವರಿಗೆ ಊಟ, ನೀರಿನ ವ್ಯವಸ್ಥೆ ಮಾಡಬೇಕು ಎಂದು ಪೀಠ ಸೂಚಿಸಿತು. ವಲಸೆ ಕಾರ್ಮಿಕರಿಗೆ ಆದಷ್ಟೂ ಬೇಗನೆ ರೈಲು ಅಥವಾ ಬಸ್ಸು ಪಯಣ ಮಾಡಲು ಸಾಧ್ಯವಾಗುವಂತೆ ಸೂಕ್ತ ವ್ಯವಸ್ಥೆಗಳನ್ನು ರಾಜ್ಯಗಳು ಮಾಡಬೇಕು. ನಿಟ್ಟಿನ ಸಂಪೂರ್ಣ ಮಾಹಿತಿಯನ್ನು ಸಂಬಂಧಪಟ್ಟ ಪ್ರತಿಯೊಬ್ಬರಿಗೂ ಒದಗಿಸಬೇಕು ಎಂದು ನ್ಯಾಯಮೂರ್ತಿಗಳಾದ ಎಸ್‌ಕೆ ಕೌಲ್ ಮತ್ತು ಎಂಆರ್ ಶಾ ಅವರನ್ನೂ ಒಳಗೊಂಡ ಪೀಠ ನಿರ್ದೇಶನ ನೀಡಿತು. (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)

2020: ಕೋಚಿ (ಕೇರಳ): ಬಂಗಾಳ ಕೊಲ್ಲಿಯಲ್ಲಿ ಎದ್ದಿದ್ದ  ಅಂಫಾನ್ ಚಂಡಮಾರುತದಿಂದ ಮುಂಗಾರು ಮಾರುತದ ಚಲನೆಗೆ ಉಂಟಾಗಿದ್ದ ಅಡಚಣೆ ನಿವಾರಣೆಯಾಗಿದ್ದು, ಇದೀಗ ನೈಋತ್ಯ ಮುಂಗಾರು ಮಾರುತವು ಅರಬ್ಬಿ ಸಮುದ್ರದಲ್ಲಿ ಕೇರಳ ತೀರದತ್ತ ಪಯಣ ಮುಂದುವರೆಸಿವೆ ಎಂದು ವರದಿಗಳು 2020 ಮೇ 28ರ  ಗುರುವಾರ ತಿಳಿಸಿದವು. ಜೂನ್ ೧ರ ವೇಳೆಗೆ ಮುಂಗಾರು ಮಾರುತ ಕೇರಳ ತೀರ ಪ್ರವೇಶಿಸಲಿವೆ. ಮೇ ೩೧ರಿಂದ ಜೂನ್ ೪ರವರೆಗೆ ನೈಋತ್ಯ ಭಾಗದಲ್ಲಿ ಕಡಿಮೆ ಒತ್ತಡ ಉಂಟಾಗಲಿದೆ. ಹೀಗಾಗಿ ಮುಂಗಾರು ಮಳೆ ತರುವ ನೈಋತ್ತ ಮುಂಗಾರು ಮಾರುತದ ಚಲನೆ ತಡೆರಹಿತವಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿತು. ನೈಋತ್ಯ ಮುಂಗಾರು ಮಾರುತವು ಗುರುವಾರ ಮಾಲ್ಡೀವ್ಸ್, ಕೊಮೊರಿನ್ ಪ್ರದೇಶ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಸಮೀಪಕ್ಕೆ ಪ್ರವೇಶ ಮಾಡಿವೆ. ಮುಂದಿನ ೪೮ ಗಂಟೆಗಳಲ್ಲಿ ವಾಯುಭಾರ ಕುಸಿತ ಉಂಟಾಗುವ ಲಕ್ಷಣ ಇದ್ದು, ಮುಂಗಾರು ಮಾರುತವು ಆಗ್ನೇಯ ದಿಕ್ಕಿನತ್ತ ಚಲಿಸಲಿದೆ. ಮುಂದಿನ ಮೂರು ದಿನಗಳಲ್ಲಿ ದಕ್ಷಿಣ ಒಮಾನ್ ಮತ್ತು ಪೂರ್ವ ಯೆಮನ್ ತೀರ ತಲುಪಲಿವೆ ಎಂದು ಹವಾಮಾನ ವರದಿ ಹೇಳಿದೆ. ಮೀನುಗಾರರಿಗೆ ಎಚ್ಚರಿಕೆ: ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆಗೆ ಇಳಿಯುವ ಮೀನುಗಾರರು ಮೇ ೨೯ರಿಂದ ಜೂನ್ ೪ರ ವರೆಗೆ ಸಮುದ್ರಕ್ಕೆ ಇಳಿಯಬಾರದು ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿತು. (ವಿವರಗಳಿಗೆ  ಇಲ್ಲಿ  ಕ್ಲಿಕ್   ಮಾಡಿರಿ)

2020:  ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಅವಿಗುಂಡ್ ರಾಜ್‌ಪೊರಾ ಪ್ರದೇಶದಲ್ಲಿ ಕಾರಿನಿಂದ ಪ್ರಬಲ ಐಇಡಿ ಸ್ಫೋಟಕವನ್ನು ಪತ್ತೆ ಹಚ್ಚಿ ಸ್ಫೋಟಿಸುವ ಮೂಲಕ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಹಾಗೂ ಸೇನೆಯ ಬಾಂಬ್ ವಿಲೇವಾರಿ ದಳ ಸಂಭವಿಸಬಹುದಾಗಿದ್ದ ಪುಲ್ವಾಮಾ ಮಾದರಿಯ ಭಾರೀ ಭಯೋತ್ಪಾದಕ ದಾಳಿಯನ್ನು 2020 ಮೇ 28ರ ಗುರುವಾರ  ತಪ್ಪಿಸಿದವು. ಪುಲ್ವಾಮಾ ಪ್ರದೇಶದಲ್ಲಿ ಸ್ಫೋಟಕ ತುಂಬಿದ ಸ್ಯಾಂಟ್ರೊ ಕಾರಿನೊಂದಿಗೆ ಭಯೋತ್ಪಾದಕನು ಸಂಚರಿಸುತ್ತಿದ್ದಾನೆ ಎಂಬ ಮಾಹಿತಿಯನ್ನು ಅನುಸರಿಸಿ ಶೋಧ ಆರಂಭಿಸಿದ ಪೊಲೀಸರು ವಾಹನವನ್ನು ತಡೆದರು. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತಂಡ ಮತ್ತು ಸಿಆರ್ ಪಿಎಫ್ ಕೂಡಾ ಪೊಲೀಸರ ನೆರವಿಗೆ ಬಂದವು. ಪೊಲೀಸರು ಮತ್ತು ಎನ್‌ಐಎ ಸಿಬ್ಬಂದಿ ಮುತ್ತಿಗೆ ಹಾಕಿ ಕೆಲವು ಸುತ್ತುಗಳ ಗುಂಡು ಹಾರಿಸಿದವು. ಬಳಿಕ ಹಿಜ್ಬುಲ್ ಮುಜಾಹಿದ್ದೀನ್ (ಎಚ್‌ಎಂ) ಸಂಘಟನೆಯ ಉಗ್ರ ಎಂಬುದಾಗಿ ಶಂಕಿಸಲಾಗಿರುವ ಉಗ್ರ ವಾಹನವನ್ನು ಬಿಟ್ಟು ಪರಾರಿಯಾಗಿದ್ದಾನೆ ಎಂದು ವರದಿಗಳು ತಿಳಿಸಿದವು. "ಜೈಶ್--ಮೊಹಮ್ಮದ್ ಉಗ್ರಗಾಮಿ ಸಂಘಟನೆ ಭಯೋತ್ಪಾದಕ ಕಾರ್ಯಾಚರಣೆ ನಡೆಸಲಿದೆ ಎಂಬ ಮಾಹಿತಿ ನಮಗೆ ಬಂದಿತ್ತು. ಆದ್ದರಿಂದ ಐಇಡಿ ಇದ್ದ ಹಿಜ್ಬುಲ್ ಮುಜಾಹಿದೀನ್ ಉಗ್ರ ಎಂಬುದಾಗಿ ಶಂಕಿಸಲಾಗಿರುವ ಕಾರಿನ ಚಾಲಕ ಅದಿಲ್ ಜೈಶ್-- ಮೊಹಮ್ಮದ್ ಜೊತೆ ಸಂಪರ್ಕದಲ್ಲಿದ್ದಾನೆಎಂಬ ಅನುಮಾನ ನಮಗಿದೆ ಎಂದು ಕಾಶ್ಮೀರ ಐಜಿ ವಿಜಯಕುಮಾರ್ ಹೇಳಿದರು. ಭದ್ರತಾ ಪಡೆಗಳ ವಾಹನಗಳನ್ನು ಗುರಿಯಾಗಿಸುವ ಉದ್ದೇಶವನ್ನು ಅವರು ಹೊಂದಿದ್ದರು ಎಂದು ವಿಜಯ ಕುಮಾರ್ ನುಡಿದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಕೋವಿಡ್ -೧೯ ಹಿನ್ನೆಲೆಯಲ್ಲಿ ವಿದೇಶದಲ್ಲಿ ಸಿಲುಕಿರುವ ಒಂದು ಲಕ್ಷ ಭಾರತೀಯರನ್ನು ವಂದೇ ಭಾರತ್ ಮಿಷನ್‌ನ ಎರಡನೇ ಹಂತ ಮುಕ್ತಾಯದ ವೇಳೆಗೆ ಮರಳಿ ಭಾರತಕ್ಕೆ ಕರೆ ತರಲಾಗುವುದು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮೂಲಗಳು  2020 ಮೇ 28ರ ಗುರುವಾರ ತಿಳಿಸಿದವು.  ವಂದೇ ಭಾರತ ಮಿಷನ್ ಹಂತ ಜೂನ್ ೧೩ ರಂದು ಕೊನೆಗೊಳ್ಳಲಿದೆ. ಕೋವಿಡ್ -೧೯ ಸಾಂಕ್ರಾಮಿP ಹಿನ್ನೆಲೆಯಲ್ಲಿ ಮನೆಗೆ ಮರಳಲು ಸುಮಾರು ,೦೮,೨೦೦ ಭಾರತೀಯರು ವಿದೇಗಳಲ್ಲಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ವಿದೇಶಗಳಲ್ಲಿ ಸಿಕ್ಕಿಹಾಕಿಕೊಂಡಿರುವ ಭಾರತೀಯರನ್ನು ಮರಳಿ ಕರೆತರಲು ನೌಕಾಪಡೆಯು ಶ್ರೀಲಂಕಾ, ಮಾಲ್ಡೀವ್ಸ್ ಮತ್ತು ಇರಾನ್‌ಗೆ ನಾಲ್ಕು ವಿಮಾನಗಳನ್ನು ಕಳುಹಿಸಲಿದೆ. ಕನಿಷ್ಠ ೫೦೦೦ ಭಾರತೀಯರು ಇತ್ತೀಚೆಗೆ ನೆರೆಯ ನೇಪಾಳ ಮತ್ತು ಬಾಂಗ್ಲಾದೇಶದಿಂದ ಭಾರತಕ್ಕೆ ಹಿಂತಿರುಗಿದ್ದಾರೆ. (ವಿವರಗಳಿಗೆ  ಇಲ್ಲಿ ಕ್ಲಿಕ್ ಮಾಡಿರಿ)

2020:  ನವದೆಹಲಿ: ದೇಶಾದ್ಯಂತ ಕೊರೋನಾ ಸಾಂಕ್ರಾಮಿಕ ಸೋಂಕಿನ ಪ್ರಕರಣಗಳು ,೫೮,೩೩೩ಕ್ಕೇ ಏರಿದ್ದು ಸಾವಿನ ಸಂಖ್ಯೆ ೪೫೩೧ಕ್ಕೆ ತಲುಪಿದೆ. ಇದೇ ವೇಳೆಗೆ ಕರ್ನಾಟಕವು ರಾಜ್ಯದಲ್ಲಿ ಸೋಂಕು ಹರಡುವಿಕೆಯನ್ನು ತಡೆಯಲು ಮಹಾರಾಷ್ಟ್ರ, ಗುಜರಾತ್, ತಮಿಳುನಾಡು, ಮಧ್ಯಪ್ರದೇಶ ಮತ್ತು ರಾಜಸ್ಥಾ- ಐದು ರಾಜ್ಯಗಳಿಂದ ವಿಮಾನ, ರೈಲು ಮತ್ತು ಇತರ ವಾಹನಗಳ ಆಗಮನವನ್ನು  2020 ಮೇ 28ರ ಗುರುವಾರ ಅಮಾನತುಗೊಳಿಸಿತು. ಐದು ರಾಜ್ಯಗಳ ಪೈಕಿ ಮಹಾರಾಷ್ಟ್ರದಲ್ಲಿ ದೇಶದಲ್ಲೇ ಅತ್ಯಂತ ಹೆಚ್ಚಿನ ಪ್ರಮಾಣದ ಕೊರೋನಾ ಸೋಂಕು ಇದ್ದು, ಅಲ್ಲಿ ಸೋಂಕಿನ ಪ್ರಕರಣಗಳ ಸಂಖ್ಯೆ ೫೬,೦೦೦ ಇದೆ. ತಮಿಳುನಾಡಿನಲ್ಲಿ ೧೮,೦೦೦ ಸೋಂಕು ಪ್ರಕರಣಗಳು ಇದ್ದರೆ ಗುಜರಾತಿನಲ್ಲಿ ೧೫,೦೦೦ಕ್ಕಿಂತಲೂ ಹೆಚ್ಚಿನ ಸೋಂಕು ಪ್ರಕರಣಗಳಿವೆ. ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ತಲಾ ೭೦೦೦ಕ್ಕಿಂತ ಹೆಚ್ಚು ಸೋಂಕು ಪ್ರಕರಣಗಳಿವೆ. ಕರ್ನಾಟಕದಲ್ಲಿ ಗುರುವಾರ ಕೋವಿಡ್-೧೯ ಸೋಂಕಿನ ೧೧೫ ಹೊಸ ಪ್ರಕರಣಗಳು ವರದಿಯಾಗಿದ್ದು ಇದರೊಂದಿಗೆ ರಾಜ್ಯದಲ್ಲಿ ಸೋಂಕಿನ ಪ್ರಕರಣಗಳ ಸಂಖ್ಯೆ ೨೫೩೩ಕ್ಕೆ ಏರಿಕೆಯಾಗಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ತಿಳಿಸಿತು. ಭಾರತದಲ್ಲಿ ದೇಶೀ ವಿಮಾನಯಾನ ಎರಡು ತಿಂUಳುಗಳ ಲಾಕ್ ಡೌನ್ ಅವಧಿಯ ಬಳಿಕ ಸೋಮವಾರ ಆರಂಭವಾಗಿದೆ. ಆದರೆ ಈಗ ಯಾವುದೇ ವಿಮಾನ ಐದು ರಾಜ್ಯಗಳಿಂದ ಬೆಂಗಳೂರಿಗೆ ಬರುವಂತಿಲ್ಲ. ರೈಲುಗಳ ಪೈಕಿ ಬಹುತೇಕ ಶ್ರಮಿಕ ವಿಶೇಷ ರೈಲುಗಳು ದೇಶದ ವಿವಿಧ ಭಾಗಗಳಲ್ಲಿ ಸಿಕ್ಕಿಹಾಕಿಕೊಂಡ ವಲಸೆ ಕಾರ್ಮಿಕರನ್ನು ಅವರವರ ಹುಟ್ಟೂರುಗಳಿಗೆ ಒಯ್ಯುತ್ತಿವೆ. ಕಪ್ಪು ಪಟ್ಟಿಗೆ ಸೇರಿಸಲಾಗಿರುವ ಐದು ರಾಜ್ಯಗಳ ಪೈಕಿ ಮಹಾರಾಷ್ಟ್ರ ಮತ್ತು ತಮಿಳುನಾಡಿನ ಜೊತೆಗೆ ಕರ್ನಾಟಕ ಗಡಿಗಳನ್ನು ಹಂಚಿಕೊಂಡಿದೆ. (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)
PARYAYA: ಇಂದಿನ ಇತಿಹಾಸ History Today ಮೇ 28: ಇಂದಿನ ಇತಿಹಾಸ History Today ಮೇ 28  2026: ಬೆಂಗಳೂರು: ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೈಕಮಾಂಡ್‌ ನಿರ್ದೇಶನದ ಮೇರೆಗೆ ತಮ್ಮ ಹುದ್ದೆಗೆ ರಾಜೀನಾಮೆ ಸ...

Wednesday, May 27, 2026

PARYAYA: ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆ ಸಿಂಧು: ಸುಪ್ರೀಂಕೋರ್ಟ್‌

 ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆ ಸಿಂಧು: ಸುಪ್ರೀಂಕೋರ್ಟ್‌

ವದೆಹಲಿ: ದೇಶದ ಮತದಾರರ ಪಟ್ಟಿಯನ್ನು ಶುದ್ಧೀಕರಿಸುವ ನಿಟ್ಟಿನಲ್ಲಿ ಭಾರತೀಯ ಚುನಾವಣಾ ಆಯೋಗ (ECI) ಕೈಗೊಂಡಿರುವ 'ವಿಶೇಷ ಸಮಗ್ರ ಪರಿಷ್ಕರಣೆ' (Special Intensive Revision - SIR) ಪ್ರಕ್ರಿಯೆಗೆ ಸುಪ್ರೀಂ ಕೋರ್ಟ್ ಮಾನ್ಯತೆ ನೀಡಿದೆ. ಈ ಪ್ರಕ್ರಿಯೆಯು ಸಾಂವಿಧಾನಿಕವಾಗಿ ಮತ್ತು ಶಾಸನ ಬದ್ಧವಾಗಿ ಸಿಂಧುವಾಗಿದೆ ಎಂದು ಸುಪ್ರೀಂ ಕೋರ್ಟ್ ೨೦೨೬ ಮೇ ೨೭ರ ಬುಧವಾರ ಮಹತ್ವದ ತೀರ್ಪು ನೀಡಿದೆ.

ತೀರ್ಪಿನ ಮುಖ್ಯಾಂಶಗಳು:

  • ಆಯೋಗದ ಅಧಿಕಾರ ಬಿಹಾರದಲ್ಲಿ ನಡೆದ ಮತದಾರರ ಪಟ್ಟಿಯ ಪರಿಷ್ಕರಣೆಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಆಯೋಗದ ಕ್ರಮದಲ್ಲಿ ಯಾವುದೇ ಸಂವಿಧಾನಿಕ ಉಲ್ಲಂಘನೆಯಾಗಿಲ್ಲ ಎಂದು ಸ್ಪಷ್ಟಪಡಿಸಿದೆ.
  • ಪೌರತ್ವದ ವಿಚಾರದಲ್ಲಿ ಮಹತ್ವದ ಸೂಚನೆ: ಪರಿಷ್ಕರಣೆಯ ವೇಳೆ ಪೌರತ್ವವನ್ನು ಪರಿಶೀಲಿಸುವ ಅಧಿಕಾರ ಆಯೋಗಕ್ಕೆ ಇದೆ. ಆದರೆ, ಪಟ್ಟಿಯಿಂದ ಹೆಸರು ತೆಗೆದುಹಾಕಿದ ತಕ್ಷಣ ಅವರಿಗೆ ಪೌರತ್ವ ಇಲ್ಲ ಎಂದರ್ಥವಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.
  • ಸಂತ್ರಸ್ತರಿಗೆ ನ್ಯಾಯಾಂಗ ರಕ್ಷಣೆ: ಪೌರತ್ವ ಸಾಬೀತುಪಡಿಸಲು ವಿಫಲರಾದವರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಿದರೆ, ಅಂತಹ ಪ್ರಕರಣಗಳನ್ನು ಸೂಕ್ತ ಪ್ರಾಧಿಕಾರಕ್ಕೆ ಕಳುಹಿಸಿ, ಹೆಚ್ಚಿನ ಕಾನೂನು ವಿಚಾರಣೆ ನಡೆಸುವಂತೆ ಆಯೋಗಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.
  • ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ: ಮತದಾರರ ಪಟ್ಟಿಯ ಪರಿಷ್ಕರಣೆಯು ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗೆ ಅವಶ್ಯಕ ಎಂದು ಅಭಿಪ್ರಾಯಪಟ್ಟಿರುವ ಕೋರ್ಟ್, ಪ್ರಜಾ ಪ್ರಾತಿನಿಧ್ಯ ಕಾಯ್ದೆಯಡಿ ಆಯೋಗಕ್ಕೆ ಈ ಅಧಿಕಾರವಿರುವುದನ್ನು ದೃಢಪಡಿಸಿದೆ.

ಏನಿದು SIR?

ನಕಲಿ, ಮೃತ ವ್ಯಕ್ತಿಗಳು ಮತ್ತು ಅನರ್ಹ ಮತದಾರರನ್ನು (ಅಕ್ರಮ ವಲಸಿಗರು ಸೇರಿದಂತೆ) ಮತದಾರರ ಪಟ್ಟಿಯಿಂದ ಕೈಬಿಡಲು ಮತ್ತು ಪಟ್ಟಿಯನ್ನು ಪಾರದರ್ಶಕವಾಗಿಸಲು ಕಳೆದ ವರ್ಷ ಜೂನ್‌ನಲ್ಲಿ ಆಯೋಗವು ಬಿಹಾರದಲ್ಲಿ ಈ ಪ್ರಕ್ರಿಯೆಯನ್ನು ಆರಂಭಿಸಿತ್ತು. ಆ ಬಳಿಕ ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು, ಅಸ್ಸಾಂ ರಾಜ್ಯಗಳಲ್ಲೂ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯನ್ನು ನಡೆಸಲಾಗಿತ್ತು. ಇದಕ್ಕೆ ಕಾಂಗ್ರೆಸ್‌ ಸಹಿತ ಪ್ರತಿ ಪಕ್ಷಗಳಿಂದ ತೀವ್ರ ಟೀಕೆ, ವಿರೋಧ ವ್ಯಕ್ತವಾಗಿತ್ತು.

ಕರ್ನಾಟಕದಲ್ಲಿ

ಕರ್ನಾಟಕದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಜೂನ್ 20 ರಿಂದ ಪ್ರಾರಂಭವಾಗಲಿದೆ. ಜೂನ್ 30 ರಿಂದ ಜುಲೈ 29 ರವರೆಗೆ ಮನೆ ಮನೆಗೆ ಭೇಟಿ ನೀಡುವ ಅಭಿಯಾನ ನಡೆಯಲಿದ್ದು, ಅಕ್ಟೋಬರ್ 7 ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲು ವೇಳಾಪಟ್ಟಿ ನಿಗದಿಪಡಿಸಲಾಗಿದೆ.

ಈ ವಿಚಾರದಲ್ಲಿ ಕಟ್ಟೆಚ್ಚರ ವಹಿಸಲು ಕರ್ನಾಟಕದ ಕಾಂಗ್ರೆಸ್‌ ಸರ್ಕಾರ ಇತ್ತೀಚೆಗೆ ನಿರ್ಧರಿಸಿದೆ.


PARYAYA: ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆ ಸಿಂಧು: ಸುಪ್ರೀಂಕೋರ್ಟ್‌:   ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆ ಸಿಂಧು : ಸುಪ್ರೀಂ ಕೋರ್ಟ್‌ ನ ವದೆಹಲಿ: ದೇಶದ ಮತದಾರರ ಪಟ್ಟಿಯನ್ನು ಶುದ್ಧೀಕರಿಸುವ ನಿಟ್ಟಿನಲ್ಲಿ ಭಾರತೀಯ ಚುನಾವಣಾ ಆಯೋಗ ( ECI...

Tuesday, May 26, 2026

PARYAYA: ಶ್ರೀ ಆಂಜನೇಯ ಹೋಮ: ಶಕ್ತಿ ಮತ್ತು ಧೈರ್ಯಕ್ಕಾಗಿ

 ಶ್ರೀ ಆಂಜನೇಯ ಹೋಮ: ಶಕ್ತಿ ಮತ್ತು ಧೈರ್ಯಕ್ಕಾಗಿ

ನುಮದ್ವಂದನೆ ಅಥವಾ ಆಂಜನೇಯ ಹೋಮವು ಸಾಕ್ಷಾತ್ ವಾಯುಪುತ್ರ, ಅಪ್ರತಿಮ ಶೌರ್ಯ ಮತ್ತು ಅಪಾರ ಶಕ್ತಿಯ ಸಂಕೇತವಾಗಿರುವ ಶ್ರೀ ಹನುಮಂತನ ಕೃಪೆಗೆ ಪಾತ್ರವಾಗಲು ನೆರವೇರಿಸುವ ಅತ್ಯಂತ ಪವಿತ್ರವಾದ ಒಂದು ಆಚರಣೆ.

ಜೀವನದ ಹಾದಿಯಲ್ಲಿ ಎದುರಾಗುವ ನಕಾರಾತ್ಮಕ ಶಕ್ತಿಗಳನ್ನು ತೊಲಗಿಸಿ, ಅಡೆತಡೆಗಳನ್ನು ನಿವಾರಿಸಲು ಹಾಗೂ ಎಲ್ಲ ಬಗೆಯ ದುಃಖ-ಕಷ್ಟಗಳಿಂದ ಮುಕ್ತಿ ಪಡೆಯಲು ಈ ಹೋಮವನ್ನು ಮಾಡಲಾಗುತ್ತದೆ. ಜೀವನದ ಸವಾಲುಗಳನ್ನು ಎದುರಿಸಲು ಹನುಮಂತನ ದಿವ್ಯ ರಕ್ಷಾಕವಚ ಮತ್ತು ಆಶೀರ್ವಾದವನ್ನು ಪಡೆಯುವುದೇ ಇದರ ಮುಖ್ಯ ಉದ್ದೇಶ.

ಆಂಜನೇಯ ಹೋಮದ ಆಚರಣೆಯು ಭಕ್ತರಲ್ಲಿ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ದೃಢತೆಯನ್ನು ಹೆಚ್ಚಿಸುತ್ತದೆ. ಇದು ಮನಸ್ಸಿನಲ್ಲಿದ್ದ ಭೀತಿಯನ್ನು ಹೋಗಲಾಡಿಸಿ, ಜೀವನದ ವಿವಿಧ ಮಜಲುಗಳಲ್ಲಿ ಯಶಸ್ಸಿನ ಪತಾಕೆಯನ್ನು ಹಾರಿಸಲು ದಾರಿಯಾಗುತ್ತದೆ.

ಈ ಪವಿತ್ರ ವಿಧಿಯಲ್ಲಿ ಹನುಮಂತನ ಮೂಲಮಂತ್ರ ಸಹಿತ ಶಕ್ತಿಶಾಲಿ ಮಂತ್ರಗಳನ್ನು ಪಠಿಸಲಾಗುತ್ತದೆ. ಹೋಮ ಕುಂಡದಲ್ಲಿ ಪವಿತ್ರ ಹವಿಸ್ಸನ್ನು ಅರ್ಪಿಸುವ ಮೂಲಕ, ಹನುಮದೇವನ ದಿವ್ಯ ಶಕ್ತಿಯೊಂದಿಗೆ ಸಂಪರ್ಕ ಸಾಧಿಸಿ, ಸಕಲ ಅಭೀಷ್ಟಗಳನ್ನು ಈಡೇರಿಸಿಕೊಳ್ಳುವ ಸುಂದರ ಪ್ರಕ್ರಿಯೆ ಇದು.

ಹನುಮ ಜಯಂತಿಯಂತಹ ಅತ್ಯಂತ ಮಂಗಳಕರ ಸಂದರ್ಭಗಳಲ್ಲಿ ಈ ಹೋಮವನ್ನು ನೆರವೇರಿಸುವುದರಿಂದ ವಿಶೇಷ ಫಲಗಳು ಲಭ್ಯವಾಗುತ್ತವೆ. ಇದು ನಿಮ್ಮ ಆಧ್ಯಾತ್ಮಿಕ ಅನುಭವವನ್ನು ಮತ್ತಷ್ಟು ಉನ್ನತಗೊಳಿಸಿ, ಭಗವಂತನ ಕೃಪೆಗೆ ಪಾತ್ರರನ್ನಾಗಿ ಮಾಡುತ್ತದೆ.

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶ್ರೀ ವಿನಾಯಕ ಶಾಸ್ತ್ರಿ ಮತ್ತು ಅವರ ಸಹ ಋತ್ವಿಜರು ೨೦೨೬ ಮೇ ೨೬ರ ಮಂಗಳವಾರ ಅಭಯ ಆಂಜನೇಯನ ಸನ್ನಿಧಾನದಲ್ಲಿ ಕೌಟುಂಬಿಕ ಸಂಕಲ್ಪಕ್ಕೆ ಅನುಗುಣವಾಗಿ ದಶದ್ರವ್ಯ ಆಹುತಿಯೊಂದಿಗೆ ಈ ಆಂಜನೇಯ ಹೋಮವನ್ನು ನೆರವೇರಿಸಿದರು. ಈ ಸಂದರ್ಭದ ಕೆಲವು ಚಿತ್ರಗಳು ಹಾಗೂ ವಿಡಿಯೋಗಳು ಇಲ್ಲಿವೆ.



PARYAYA: ಶ್ರೀ ಆಂಜನೇಯ ಹೋಮ: ಶಕ್ತಿ ಮತ್ತು ಧೈರ್ಯಕ್ಕಾಗಿ:   ಶ್ರೀ ಆಂಜನೇಯ ಹೋಮ: ಶಕ್ತಿ ಮತ್ತು ಧೈರ್ಯ ಕ್ಕಾಗಿ ಹ ನುಮದ್ವಂದನೆ ಅಥವಾ ಆಂಜನೇಯ ಹೋಮವು ಸಾಕ್ಷಾತ್ ವಾಯುಪುತ್ರ , ಅಪ್ರತಿಮ ಶೌರ್ಯ ಮತ್ತು ಅಪಾರ ಶಕ್ತಿಯ ಸಂಕೇತವಾಗಿರು...

Sunday, May 24, 2026

PARYAYA: ಬಸ್ಸನ್ನು ತಡೆದ ಮಂಗ ಕೇಳಿದ್ದು ಏನನ್ನು?

 ಬಸ್ಸನ್ನು ತಡೆದ ಮಂಗ ಕೇಳಿದ್ದು ಏನನ್ನು?

ಇದೊಂದು ಮನ ಕಲಕುವ ಸನ್ನಿವೇಶ

ಹಾರಾಷ್ಟ್ರದ ವಿದರ್ಭದಲ್ಲಿ ಅದೊಂದು ಮನ ಕಲಕುವ ಸನ್ನಿವೇಶ. ಬಸ್ಸೊಂದು ರಸ್ತೆಯಲ್ಲಿ ಮುಂದಕ್ಕೆ ಸಾಗುತ್ತಿತ್ತು. ಹಠಾತ್ತನೆ ಕೋತಿಯೊಂದು ಬಂದು ಬಸ್ಸಿನ ಮುಂದೆ ನಿಂತುಕೊಂಡಿತು.

ಚಾಲಕನಿಗೆ ಮುಂದೆ ಸಾಗಲು ಸಾಧ್ಯವಾಗಲಿಲ್ಲ. ಬಸ್ಸನ್ನು ನಿಲ್ಲಿಸಿದ. ಶ್..‌ ಶ್‌.. ಎಂದು ಬಾಯಿಯಲ್ಲೇ ಸದ್ದು ಮಾಡಿದ.

ಮಂಗ ಕದಲಲಿಲ್ಲ. ನಿಂತಲ್ಲೇ ನಿಂತುಕೊಂಡಿತ್ತು. ಇದೇನೋ ವಿಲಕ್ಷಣ ಪರಿಸ್ಥಿತಿ ಎಂದು ಬಸ್ಸಿನಲ್ಲಿದ್ದ ಕೆಲವರು ಕೆಳಕ್ಕೆ ಇಳಿದರು. ಆದರೂ ಕೋತಿ ಅಲ್ಲೇ ನಿಂತಿತ್ತು. ತನ್ನದೇ ಮೂಕಭಾಷೆಯಲ್ಲಿ ಕೈ ಅಲ್ಲಾಡಿಸುತ್ತಿತ್ತು.

ಅದಕ್ಕೆ ಬಹುಶಃ ನೀರು ಬೇಕಾಗಿರಬಹುದು ಎಂದು ಪ್ರಯಾಣಿಕರಲ್ಲಿ ಒಬ್ಬರಿಗೆ ಅನ್ನಿಸಿತು. ಅವರು ತತ್‌ ಕ್ಷಣವೇ ತನ್ನ ಬ್ಯಾಗಿನಲ್ಲಿದ್ದ ಪ್ಲಾಸ್ಟಿಕ್‌ ಬಾಟಲಿಯ ಮುಚ್ಚಳ ತೆಗೆದು ಮಂಗನ ಮುಂದೆ ಹಿಡಿದರು. ಮಂಗ ಬಾಯಿ ತೆರೆದು ಗಟಗಟನೆ ನೀರು ಕುಡಿಯಿತು.

ಅಷ್ಟರಲ್ಲಿ ಇನ್ನಷ್ಟು ಮಂಗಗಳು ಆಸು ಪಾಸಿನಿಂದ ಓಡಿ ಬಂದು ಕೈ ಚಾಚ ತೊಡಗಿದವು. ಬಸ್ಸಿನಲ್ಲಿದ್ದವರು ತಮ್ಮ ಬ್ಯಾಗುಗಳಿಂದ ನೀರಿನ ಬಾಟಲಿಗಳನ್ನು ತೆಗೆದು ಕೆಳಗಿದ್ದವರ ಕೈಗಳಿಗೆ ಕೊಟ್ಟರು. ಮಹಿಳೆಯರೂ ಹಿಂದು ಮುಂದು ನೋಡದೆ ತಮ್ಮ ನೀರಿನ ಬಾಟಲಿಗಳನ್ನು ನೀಡಿದರು.

ಮಂಗಗಳ ಹಿಂಡೇ ಬಾಟಲಿಗಳಿಂದ ನೀರು ಕುಡಿದು ಖುಷಿ ಪಟ್ಟವು.

ನೀರು ಸಿಗದೆ ಅದೆಷ್ಟು ದಿನಗಳಿಂದ ಬಾಯಾರಿದ್ದವೋ ಏನೋ. ಮಂಗಗಳಿಗೆ ಅಮೃತ ಸಿಕ್ಕಂತಾಗಿತ್ತು.

ಈ ಮನ ಕಲಕುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಮೇಲೆ ಕ್ಲಿಕ್‌ ಮಾಡಿ ವಿಡಿಯೋ ನೋಡಿ.

ಮರೆಯಬೇಡಿ. ನಿಮ್ಮ ಮನೆ, ಕಚೇರಿಯ ಆಸುಪಾಸಿನಲ್ಲೂ ಪಶು ಪಕ್ಷಿಗಳು ಈ ಬೇಸಗೆಯಲ್ಲಿ ನೀರು ಸಿಗದೆ ಕಂಗಾಲಾಗಿರಬಹುದು. ಅವುಗಳಿಗೆ ಸಿಗುವಂತೆ ನೀರು ಸಿಗುವ ವ್ಯವಸ್ಥೆ ಮಾಡಿ. ಮೂಕ ಪ್ರಾಣಿ, ಪಕ್ಷಿಗಳ ದಾಹ ತಣಿಸಿ.PARYAYA: ಬಸ್ಸನ್ನು ತಡೆದ ಮಂಗ ಕೇಳಿದ್ದು ಏನನ್ನು?:   ಬಸ್ಸನ್ನು ತಡೆದ ಮಂಗ ಕೇಳಿದ್ದು ಏನನ್ನು? ಇದೊಂದು ಮನ ಕಲಕುವ ಸನ್ನಿವೇಶ ಮ ಹಾರಾಷ್ಟ್ರದ ವಿದರ್ಭದಲ್ಲಿ ಅದೊಂದು ಮನ ಕಲಕುವ ಸನ್ನಿವೇಶ. ಬಸ್ಸೊಂದು ರಸ್ತೆಯಲ್ಲಿ ಮುಂದಕ...

Thursday, May 21, 2026

PARYAYA: ಗೋಹತ್ಯೆಯು ಇಸ್ಲಾಂ / ಈದ್ ಹಬ್ಬಕ್ಕೆ ಅತ್ಯಗತ್ಯವಲ್ಲ: ಕೋರ್ಟ್

 ಗೋಹತ್ಯೆಯು ಇಸ್ಲಾಂ / ಈದ್ ಹಬ್ಬಕ್ಕೆ ಅತ್ಯಗತ್ಯವಲ್ಲ: ಕೋರ್ಟ್

ಕೋಲ್ಕತ: ಬಕ್ರೀದ್ ಹಬ್ಬಕ್ಕಿಂತ ಮುಂಚಿತವಾಗಿ, ಹಬ್ಬದ ಸಂದರ್ಭದಲ್ಲಿ ಪ್ರಾಣಿ ಬಲಿ ನೀಡುವುದಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಸರ್ಕಾರ ವಿಧಿಸಿದ್ದ ನಿರ್ಬಂಧಗಳನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಕಲ್ಕತ್ತಾ ಹೈಕೋರ್ಟ್ ೨೦೨೬ ಮೇ ೨೧ರ ಗುರುವಾರ ವಜಾ ಮಾಡಿದೆ.

ಗೋಹತ್ಯೆಯು (ಹಸುವಿನ ಬಲಿ) ಇಸ್ಲಾಂ ಧರ್ಮದ ಅಥವಾ ಬಕ್ರೀದ್ ಆಚರಣೆಯ ಅತ್ಯಗತ್ಯ ಭಾಗವಲ್ಲ ಎಂದು ಅವಲೋಕಿಸಿದ ನ್ಯಾಯಾಲಯವು, ಸಾರ್ವಜನಿಕ ಹಿತದೃಷ್ಟಿಯಿಂದ ಪ್ರಾಣಿ ಹತ್ಯೆಯನ್ನು ನಿಯಂತ್ರಿಸುವ ಅಥವಾ ನಿರ್ಬಂಧಿಸುವ ಅಧಿಕಾರ ರಾಜ್ಯ ಸರ್ಕಾರಕ್ಕಿದೆ ಎಂದು ಹೇಳಿದೆ.

ಮುಕ್ತ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಪ್ರಾಣಿ ಬಲಿ ಮತ್ತು ಹತ್ಯೆ ಮಾಡುವಂತಿಲ್ಲ ಹಾಗೂ ಇದನ್ನು ಕೇವಲ ನಿಗದಿಪಡಿಸಿದ ಮತ್ತು ಸುರಕ್ಷಿತ ಸ್ಥಳಗಳಲ್ಲಿ ಮಾತ್ರ ನಡೆಸಬೇಕು ಎಂದು ಹೈಕೋರ್ಟ್ ನಿರ್ದೇಶಿಸಿದೆ. ಅದೇ ಸಮಯದಲ್ಲಿ, ಇತರ ಪ್ರಾಣಿಗಳ ಬಲಿಗೆ ಸಂಬಂಧಿಸಿದಂತೆ ನಿಯಮ ಸಡಿಲಿಕೆಯನ್ನು ಪರಿಗಣಿಸುವಂತೆ ನ್ಯಾಯಾಲಯವು ರಾಜ್ಯ ಸರ್ಕಾರಕ್ಕೆ ತಿಳಿಸಿದೆ.

ಪ್ರಾಣಿಗಳ ಕಡ್ಡಾಯ ವೈದ್ಯಕೀಯ ತಪಾಸಣೆ ಮತ್ತು ಹತ್ಯೆಗೂ ಮುನ್ನ ಅಧಿಕಾರಿಗಳಿಂದ ಪ್ರಮಾಣೀಕರಣವನ್ನು ಪಡೆದುಕೊಳ್ಳುವುದೂ ಸೇರಿದಂತೆ ಪಶ್ಚಿಮ ಬಂಗಾಳ ಸರ್ಕಾರವು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದ ಬೆನ್ನಲ್ಲೇ ಈ ಆದೇಶ ಹೊರಬಿದ್ದಿದೆ.

PARYAYA: ಗೋಹತ್ಯೆಯು ಇಸ್ಲಾಂ / ಈದ್ ಹಬ್ಬಕ್ಕೆ ಅತ್ಯಗತ್ಯವಲ್ಲ: ಕೋರ್ಟ್:   ಗೋಹತ್ಯೆಯು ಇಸ್ಲಾಂ / ಈದ್ ಹಬ್ಬಕ್ಕೆ ಅತ್ಯಗತ್ಯವಲ್ಲ : ಕೋರ್ಟ್ ಕೋ ಲ್ಕತ: ಬಕ್ರೀದ್ ಹಬ್ಬ ಕ್ಕಿಂತ ಮುಂಚಿತವಾಗಿ, ಹಬ್ಬದ ಸಂದರ್ಭದಲ್ಲಿ ಪ್ರಾಣಿ ಬಲಿ ನೀಡುವುದಕ್ಕೆ...

Wednesday, May 20, 2026

PARYAYA: ಬಂಗ್ಲೆ ಗುಡ್ಡೆಯಲ್ಲೋ ... ಬಾಕೀಮಾರಿನಲ್ಲೋ ಕೂತು ಕೇಳಿ..

ಬಂಗ್ಲೆ ಗುಡ್ಡೆಯಲ್ಲೋ ... ಬಾಕೀಮಾರಿನಲ್ಲೋ ಕೂತು ಕೇಳಿ..
ಸಮೀಪ ನೋಟಕ್ಕೆ ಚಿತ್ರವನ್ನು ಕ್ಲಿಕ್‌ ಮಾಡಿ. ಪೂರ್ತಿ ಓದಲು  ಪರ್ಯಾಯ ವೆಬ್‌ ಸೈಟಿನ ಹವ್ಯಕ ಪುಟಕ್ಕೆ ಭೇಟಿ ಕೊಡಿ.
PARYAYA: ಬಂಗ್ಲೆ ಗುಡ್ಡೆಯಲ್ಲೋ ... ಬಾಕೀಮಾರಿನಲ್ಲೋ ಕೂತು ಕೇಳಿ..:   ಬಂಗ್ಲೆ ಗುಡ್ಡೆಯಲ್ಲೋ ... ಬಾಕೀಮಾರಿನಲ್ಲೋ ಕೂತು ಕೇ ಳಿ.. ಸಮೀಪ ನೋಟಕ್ಕೆ ಚಿತ್ರವನ್ನು ಕ್ಲಿಕ್‌ ಮಾಡಿ. ಪೂರ್ತಿ ಓದಲು ಈ ಪರ್ಯಾಯ ವೆಬ್‌ ಸೈಟಿನ ಹವ್ಯಕ ಪುಟಕ್ಕೆ ಭ...