Sunday, March 29, 2026

PARYAYA: ಭಾರತೀಯ ಸಿಟಿಯಲ್ಲಿ ಲವ ಕುಶ ಕಾಳಗ

 ಭಾರತೀಯ ಸಿಟಿಯಲ್ಲಿ ಲವ ಕುಶ ಕಾಳಗ

ಮುಗಿಲೆತ್ತರಕ್ಕೆ ಚಾಚಿದ ಅಪಾರ್ಟ್‌ಮೆಂಟುಗಳು, ಬೃಹತ್‌ ಐಟಿ ಕಂಪೆನಿಗಳು. ಮಧ್ಯೆ ಮಧ್ಯೆ ಅಂಕುಡೊಂಕಿನ ಸಿಮೆಂಟ್‌ ರಸ್ತೆಗಳು. ಅವುಗಳ ಬದಿಯಲ್ಲಿ ಹಸಿರಿಗಾಗಿ ನೆಟ್ಟ ಗಿಡಗಳು. ಎಲ್ಲಿ ನೋಡಿದರೂ ಬಹುತೇಕ ಹಿಂದಿ ಭಾಷೆಯಲ್ಲಿ ಇಲ್ಲವೇ ಇಂಗ್ಲೀಷಿನಲ್ಲೇ ಮಾತನಾಡುವ ಮಂದಿ.

ಇದು ಬೆಂಗಳೂರು ರಾಮಕೃಷ್ಣ ಹೆಗಡೆ ನಗರ ಸಮೀಪದ ಭಾರತೀಯ ಸಿಟಿ.

೨೦೨೬ ಮಾರ್ಚ್‌ ೨೭ರ ರಾಮನವಮಿಯ ದಿನ. ಇಲ್ಲಿ ರಾಮೋತ್ಸವ ಸಡಗರ. ಭಜನೆ, ನೃತ್ಯ, ಹಾಡುಗಳ ಸಂಭ್ರಮ. ಇವೆಲ್ಲದರ ಮಧ್ಯೆ ಅಲ್ಲಿದ್ದ ಎಲ್ಲರನ್ನೂ ಸೂಜಿಗಲ್ಲಿನಂತೆ ಗಮನ ಸೆಳೆದದ್ದು, ಚೆಂಡೆ- ಮದ್ದಳೆಯ ಸದ್ದು, ಯಕ್ಷಗಾನದ ನೃತ್ಯ, ಭಾಗವತರ ಕಂಚಿನ ಕಂಠದ ಹಾಡುಗಳು.

ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಕಳೆದ ಕೆಲವು ದಿನಗಳಿಂದ ಅಭ್ಯಾಸ ನಡೆಸುತ್ತಿದ್ದ ಯಕ್ಷ ಕಲಾ ಕೌಸ್ತುಭ ತಂಡದ ಮಕ್ಕಳು, ಅವರ ಅಮ್ಮಂದಿರು ಕಾಲಿಗೆ ಗೆಜ್ಜೆ ಕಟ್ಟಿಕೊಂಡು ಕುಣಿದು ಸಂಭ್ರಮದೊಂದಿಗೆ ಈ ಯಕ್ಷಗಾನ ಪ್ರದರ್ಶನ ನೀಡಿದವರು.

ಅವರು ಪ್ರದರ್ಶಿಸಿದ್ದು ರಾಮಾಯಣದ ಉತ್ತರ ಕಾಂಡದಲ್ಲಿ ಬರುವ ʼಲವ ಕುಶ ಕಾಳಗʼದ ಪ್ರಸಂಗ. ಈ ಪ್ರಸಂಗದ ವಿವರವನ್ನು ಸಂಘಟಕರ ಜೊತೆಗೆ ತಂಡದ ಸದಸ್ಯರೇ ಆದ ಶಿವಾಂಶ್‌ ಮತ್ತು ಉಮಾ ದೇವಿ ಎನ್.‌ ಅವರು ಹಿಂದಿ ಮತ್ತು ಇಂಗ್ಲಿಷಿನಲ್ಲಿ ವಿವರ ನೀಡಿದರು.

ʼಯಕ್ಷ ಕಲಾ ಕೌಸ್ತುಭʼದ ಯಕ್ಷಗುರು ಉಮೇಶ ರಾಜ್‌ ಮಂದಾರ್ತಿ ಅವರ ನಿರ್ದೇಶನದಲ್ಲಿ ಶ್ರೀರಾಮನಾಗಿ ಉಮಾದೇವಿ ಎನ್,
ಸೀತಾಮಾತೆಯಾಗಿ ಅರ್ಚನಾ ಬಂಗೇರಲವಕುಮಾರನಾಗಿ ಆದ್ಯಾ ಶ್ರೀವಲ್ಲಿಕುಶಕುಮಾರನಾಗಿ ಆದ್ಯ ಎಂ ಕಶ್ಯಪ್ಶತ್ರುಘ್ನನಾಗಿ ಆದ್ಯ ಭಟ್  ಮತ್ತು ವಾಲ್ಮೀಕಿ ಮಹರ್ಷಿಯಾಗಿ ಪ್ರಣೀತಾ ರೈ ಮಿಂಚಿದರು.

ವೆಂಕಟೇಶ್ ಪ್ರಭು ಅವರು ಮದ್ದಳೆ,  ಸುಬ್ರಹ್ಮಣ್ಯ ಗಾಣಿಗ ಸಾಸ್ತಾನ ಚೆಂಡೆಯೊಂದಿಗೆ ಉಮೇಶರಾಜ್‌ ಅವರಿಗೆ ಸಾಥ್‌ ನೀಡಿದರು. ಚೌಕಿಯಲ್ಲಿ ಹಲವು ತಾಸುಗಳ ಮೊದಲೇ ಬಣ್ಣ ಹಚ್ಚಿಕೊಂಡು, ವೇಷಭೂಷಣ ಧರಿಸಿ ಸಿದ್ದರಾಗುವಲ್ಲಿ ಪ್ರಸನ್ನ ಮಯ್ಯ ಮತ್ತು ಉಮೇಶ ಮಂದಾರ್ತಿ ಸಹಕರಿಸಿದರು.

ಉಮೇಶ ರಾಜ್‌ ಮಂದಾರ್ತಿ ಅವರು ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಪ್ರತಿ ಭಾನುವಾರ ಮಕ್ಕಳಿಗೆ ಯಕ್ಷಗಾನ ಹೇಳಿಕೊಡುತ್ತಿದ್ದಾರೆ.

ರಂಗಸ್ಥಳದ ಸಮೀಪ ʼಚೌಕಿʼಯಲ್ಲಿ ಮಕ್ಕಳು ವೇಷಭೂಷಣ ತೊಟ್ಟುಕೊಳ್ಳುತ್ತಿದ್ದ ಸಡಗರದ ಚಿತ್ರಗಳು, ಚೌಕಿ ಪೂಜೆಯ ವಿಡಿಯೋ ಸೇರಿದಂತೆ ʼಲವ ಕುಶ ಕಾಳಗʼದ ಎರಡು ಭಾಗಗಳು ಇಲ್ಲಿವೆ.

ಮೇಲಿನ ಮತ್ತು ಕೆಳಗಿನ ಚಿತ್ರಗಳನ್ನು ಕ್ಲಿಕ್‌ ಮಾಡುವ ಮೂಲಕ ಈ ಯಕ್ಷಗಾನ ಪ್ರಸಂಗವನ್ನು ಪೂರ್ತಿಯಾಗಿ ಇಲ್ಲಿ ವೀಕ್ಷಿಸಿ.

ಅಥವಾ ಪರ್ಯಾಯ.ಕಾಮ್ ವೆಬ್‌ ಸೈಟಿನಲ್ಲಿ ಮೇಲಿರುವ ಯಕ್ಷಗಾನ/ತಾಳಮದ್ದಳೆ ಪುಟಕ್ಕೆ ಭೇಟಿ ಕೊಡಿ.
PARYAYA: ಭಾರತೀಯ ಸಿಟಿಯಲ್ಲಿ ಲವ ಕುಶ ಕಾಳಗ:   ಭಾರತೀಯ ಸಿಟಿಯಲ್ಲಿ ಲವ ಕುಶ ಕಾಳಗ ಮು ಗಿಲೆತ್ತರಕ್ಕೆ ಚಾಚಿದ ಅಪಾರ್ಟ್‌ಮೆಂಟುಗಳು, ಬೃಹತ್‌ ಐಟಿ ಕಂಪೆನಿಗಳು. ಮಧ್ಯೆ ಮಧ್ಯೆ ಅಂಕುಡೊಂಕಿನ ಸಿಮೆಂಟ್‌ ರಸ್ತೆಗಳು. ಅವುಗಳ...

Friday, March 27, 2026

PARYAYA: ಶ್ರೀರಾಮ ನವಮಿ

 ಶ್ರೀರಾಮ ನವಮಿ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಮಹಾಗಣಪತಿವೆಂಕಟೇಶ್ವರಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ೨೦೨೬ ಮಾರ್ಚ್‌ ೨೭ರ ಶುಕ್ರವಾರ ಶ್ರೀ ರಾಮ ನವಮಿಯನ್ನು ಶ್ರದ್ಧಾ ಭಕ್ತಿಯೊಂದಿಗೆ ಆಚರಿಸಲಾಯಿತು.

ಶ್ರೀ ರಾಮ ಚಂದ್ರನಿಗೆ ವಿಶೇಷ ಪೂಜೆ, ಭಕ್ತರಿಗೆ ಪಾನಕ, ಕೋಸಂಬರಿ, ಮಜ್ಜಿಗೆ ನೀರಿನ ವಿತರಣೆ ನಡೆಯಿತು. ಈ ಸಂದರ್ಭದ ಕೆಲವು ಚಿತ್ರಗಳು ಹಾಗೂ ವಿಡಿಯೋ ಇಲ್ಲಿದೆ.

ವಿಡಿಯೋ ನೋಡಲು ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ




ಇದನ್ನೂ ನೋಡಿರಿ:
PARYAYA: ಶ್ರೀರಾಮ ನವಮಿ:   ಶ್ರೀರಾಮ ನವಮಿ ಬೆಂ ಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಮಹಾಗಣಪತಿ , ವೆಂಕಟೇಶ್ವರ , ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ೨೦೨೬ ಮಾರ್...

Sunday, March 22, 2026

PARYAYA: ಗೀತಾ ರಾಮಾಯಣ

 ಗೀತಾ ರಾಮಾಯಣ

ದು ಗೀತಾ ರಾಮಾಯಣದ ಒಂದು ದೃಶ್ಯ. ಬೆಂಗಳೂರಿನ ಯಕ್ಷ ಕಲಾ ಕೌಸ್ತುಭ ತಂಡದ ಮಕ್ಕಳು ಪ್ರದರ್ಶಿಸುತ್ತಿರುವುದು. ಇದು ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿವೆಂಕಟೇಶ್ವರಅಭಯ ಆಂಜನೇಯ ದೇವಸ್ಥಾನದಲ್ಲಿ ಅಭ್ಯಾಸ ನಡೆಸುತ್ತಿದ್ದಾಗಿನ ದೃಶ್ಯ. (ಸಮೀಪ ನೋಟಕ್ಕೆ ಮೇಲಿನ ಚಿತ್ರ ಕ್ಲಿಕ್‌ ಮಾಡಿ.)

ಅವರು ಅಭ್ಯಾಸ ಮಾಡುತ್ತಿದ್ದದು ಲವಕುಶ ಕಾಳಗದ ಒಂದು ದೃಶ್ಯ.

ಈ ಕಥೆ ಯಾವುದು, ಅದನ್ನು ಹೇಳುತ್ತಿರುವುದು ಏಕೆ? ಹೇಳುತ್ತಿರುವುದು ಯಾರು ಇವೆಲ್ಲ ಪ್ರಶ್ನೆಗಳಿಗೆ ಉತ್ತರ: ಬೆಂಗಳೂರಿನ ರಾಮಕೃಷ್ಣ ಹೆಗಡೆ ನಗರ ಸಮೀಪದ ಭಾರತೀಯ ಸಿಟಿಯ ನಿಕೂ ಹೋಮ್ಸ್‌ ನಲ್ಲಿ 2026 ಮಾರ್ಚ್‌ 27ರ ಸಂಜೆ 6.45 ಗಂಟೆಗೆ.

ಪೂರ್ತಿ ವಿಡಿಯೋ ನೋಡಲು ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ.


ಪರ್ಯಾಯ.ಕಾಮ್ ವೆಬ್‌ ಸೈಟಿನ ʼಯಕ್ಷಗಾನ ತಾಳಮದ್ದಳೆʼ ಪುಟಕ್ಕೆ ಭೇಟಿ ಕೊಡಿ

PARYAYA: ಗೀತಾ ರಾಮಾಯಣ:   ಗೀತಾ ರಾಮಾಯಣ ಇ ದು ಗೀತಾ ರಾಮಾಯಣದ ಒಂದು ದೃಶ್ಯ. ಬೆಂಗಳೂರಿನ ಯಕ್ಷ ಕಲಾ ಕೌಸ್ತುಭ ತಂಡದ ಮಕ್ಕಳು ಪ್ರದರ್ಶಿಸುತ್ತಿರುವುದು. ಇದು ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್...

Friday, March 20, 2026

PARYAYA: ಯಕ್ಷರಂಗದ ಭೀಷ್ಮ, 'ದಶಾವತಾರಿ' ಸೂರಿಕುಮೇರು ಕೆ. ಗೋವಿಂದ ಭ...

ಯಕ್ಷರಂಗದ ಭೀಷ್ಮ, 'ದಶಾವತಾರಿಸೂರಿಕುಮೇರು ಕೆ. ಗೋವಿಂದ ಭಟ್ ಇನ್ನಿಲ್ಲ

ತೆಂಕುತಿಟ್ಟು ಯಕ್ಷಗಾನ ಲೋಕದ ಅಪ್ರತಿಮ ಮೇರು ಕಲಾವಿದ'ಕಲಾತಪಸ್ವಿ' ಎಂದೇ ಖ್ಯಾತರಾಗಿದ್ದ ಸೂರಿಕುಮೇರು ಕೆ. ಗೋವಿಂದ ಭಟ್ (90) ಅವರು 2026 ಮಾರ್ಚ್‌ 20 ಶುಕ್ರವಾರ ರಾತ್ರಿ ಶಿವಮೊಗ್ಗದ ತೀರ್ಥಹಳ್ಳಿಯಲ್ಲಿರುವ ತಮ್ಮ ಪುತ್ರನ ನಿವಾಸದಲ್ಲಿ ದೈವಾಧೀನರಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರುಯಕ್ಷಗಾನದ ಒಂದು ಸುದೀರ್ಘ ಮತ್ತು ಸುವರ್ಣ ಯುಗಕ್ಕೆ ತೆರೆ ಎಳೆದಿದ್ದಾರೆ.

ನಡೆದಾಡುವ ವಿಶ್ವಕೋಶದ ಸಾಧನೆಯ ಹಾದಿ

ಬಡತನದ ಬೇಗೆಯಲ್ಲೂ ಕಲೆಯನ್ನು ಅಪ್ಪಿಕೊಂಡ ಭಟ್ಟರುಯಕ್ಷಗಾನದ 'ನಡೆದಾಡುವ ವಿಶ್ವಕೋಶ' ಎಂದೇ ಪ್ರಸಿದ್ಧರು.

  • ಹುಟ್ಟು:
     1940ರ ಮಾರ್ಚ್ 22ರಂದು ಬಂಟ್ವಾಳ ತಾಲೂಕಿನ ಕೋಡಪದವು ಸಮೀಪದ ಕುಕ್ಕೆಮನೆ ಕುಟುಂಬದಲ್ಲಿ ಜನನ.
  • ಆರಂಭ: ಕಡುಬಡತನದ ಬದುಕು. 1951ರಲ್ಲಿ ಧರ್ಮಸ್ಥಳ ಮೇಳದ 'ಬಾಲಗೋಪಾಲವೇಷದ ಮೂಲಕ ಕಲಾ ಪಯಣ ಆರಂಭ.
  • ದಾಖಲೆ: ಒಂದೇ ಮೇಳದಲ್ಲಿ (ಧರ್ಮಸ್ಥಳ) ಸತತ 54 ವರ್ಷಗಳ ಕಾಲ ಸೇವೆ ಸಲ್ಲಿಸಿದ ಅಪರೂಪದ ದಾಖಲೆ ಇವರದ್ದು.
  • ಪರಕಾಯ ಪ್ರವೇಶ: ರಕ್ತಬೀಜಾಸುರಇಂದ್ರಜಿತುಭೀಷ್ಮಕೌರವನಂತಹ ಪಾತ್ರಗಳಿಗೆ ಇವರು ಜೀವ ತುಂಬುತ್ತಿದ್ದ ರೀತಿ ಅದ್ಭುತ.

ಸಾಹಿತ್ಯ ಮತ್ತು ಕಲಾ ಸೇವೆ

ಕೇವಲ ನಟನೆಯಷ್ಟೇ ಅಲ್ಲದೆಇವರು ಒಬ್ಬ ಶ್ರೇಷ್ಠ ಅರ್ಥಧಾರಿ ಹಾಗೂ ಪ್ರಸಂಗಕರ್ತರೂ ಹೌದು.

  • ಕೃತಿಗಳು: 'ಮಣಿಮೇಖನೆ', 'ಕಾವೇರಿ ಮಹಾತ್ಮೆ', 'ಮಹಾವೀರ ಸಾಮ್ರಾಟ ಅಶೋಕಮುಂತಾದ ಪ್ರಸಂಗಗಳನ್ನು ರಚಿಸಿದ್ದಾರೆ.
  • ಪ್ರಶಸ್ತಿಗಳ ಗರಿ: 2008ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, 2016ರಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪುರಸ್ಕಾರ ಸೇರಿದಂತೆ ಹತ್ತು ಹಲವು ಗೌರವಗಳು ಇವರಿಗೆ ಲಭಿಸಿವೆ.

ಹುಟ್ಟೂರು 

ಗೋವಿಂದ ಭಟ್ಟರ ಹುಟ್ಟೂರಿನ ಬಗ್ಗೆ ವಿವಿಧೆಡೆ ಬೇರೆ ಬೇರೆ ಹೆಸರುಗಳು ಕೇಳಿಬರುತ್ತವೆಯಾದರೂಅವೆಲ್ಲವೂ ಭೌಗೋಳಿಕವಾಗಿ ಹತ್ತಿರದ ಪ್ರದೇಶಗಳೇ ಆಗಿವೆ:

ಸ್ಥಳ

ವಿವರಣೆ

ಕೋಡಪದವು

ಇವರು ಜನಿಸಿದ ಮೂಲ ಗ್ರಾಮ (ಬಂಟ್ವಾಳ ತಾಲೂಕು).

ಸೂರಿಕುಮೇರು

ಇವರು ವಾಸವಿದ್ದ ಮತ್ತು ಗುರುತಿಸಿಕೊಂಡಿದ್ದ ಪ್ರಸಿದ್ಧ ಸ್ಥಳ (ಮಂಗಳೂರು-ಪುತ್ತೂರು ಹೆದ್ದಾರಿಯಲ್ಲಿದೆ).

ಕುಕ್ಕೆಮನೆ

ಇವರ ಮನೆತನದ ಹೆಸರು ಅಥವಾ ಕುಟುಂಬದ ನೆಲೆ (ಇಡ್ಕಿದು/ಸೂರಿಕುಮೇರು ಸಮೀಪ).

ಸೂರಿಕುಮೇರು/ಇಡ್ಕಿದು ಪ್ರದೇಶದಿಂದ ಕೋಡಪದವು ಅಂದಾಜು ರಿಂದ ಕಿ.ಮೀ. ಅಂತರದಲ್ಲಿದೆ. ವಾಹನದಲ್ಲಿ ಸಾಗಿದರೆ ಕೇವಲ 10-15 ನಿಮಿಷಗಳ ಹಾದಿ. ಆದ್ದರಿಂದಲೇ ಪತ್ರಿಕೆಗಳಲ್ಲಿ ಈ ಮೂರೂ ಹೆಸರುಗಳು ಅದಲುಬದಲಾಗಿ ಬಳಕೆಯಾಗುತ್ತಿರುತ್ತವೆ. ಇವೆಲ್ಲವೂ ವಿಟ್ಲದ ಆಸುಪಾಸಿನಲ್ಲೇ ಇವೆ.

ಕಣ್ಣಿನ ದೃಷ್ಟಿ ಮಂಜಾಗುತ್ತಿದ್ದರೂಶರೀರ ದಣಿಯುತ್ತಿದ್ದರೂ ರಂಗಸ್ಥಳವೇ ನನ್ನ ಗತಿ ಎಂದು ಕೊನೆಯವರೆಗೂ ಕಲಾ ಸೇವೆಯನ್ನೇ ಉಸಿರಾಗಿಸಿಕೊಂಡ ಈ ಮಹಾನ್ ಚೇತನಕ್ಕೆ ನಮೋ ನಮಃ.

ಚಿತ್ರಕೃಪೆ: https://ruthumana.com/2017/06/18/kashameru_soorikumeru_govinda-bhat/

ಪರ್ಯಾಯ.ಕಾಮ್ ವೆಬ್‌ ಸೈಟಿನ ʼಯಕ್ಷಗಾನ ತಾಳಮದ್ದಳೆʼ ಪುಟಕ್ಕೆ ಭೇಟಿ ಕೊಡಿ

PARYAYA: ಯಕ್ಷರಂಗದ ಭೀಷ್ಮ, 'ದಶಾವತಾರಿ' ಸೂರಿಕುಮೇರು ಕೆ. ಗೋವಿಂದ ಭ...: ಯಕ್ಷರಂಗದ ಭೀಷ್ಮ , ' ದಶಾವತಾರಿ ' ಸೂರಿಕುಮೇರು ಕೆ. ಗೋವಿಂದ ಭಟ್ ಇನ್ನಿಲ್ಲ ತೆಂ ಕುತಿಟ್ಟು ಯಕ್ಷಗಾನ ಲೋಕದ ಅಪ್ರತಿಮ ಮೇರು ಕಲಾವಿದ , ' ಕಲಾತಪಸ್ವಿ ...

Thursday, March 19, 2026

PARYAYA: ಯುಗಾದಿ ಉತ್ಸವ ಆಚರಣೆ

 ಯುಗಾದಿ ಉತ್ಸವ ಆಚರಣೆ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ ಸೇವಾ ಸಮಿತಿಯ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಾಲಯದಲ್ಲಿ ೨೦೨೬ ಮಾರ್ಚ್‌ ೧೯ರ ಗುರುವಾರ ಪರಾಭವ ಸಂವತ್ಸರದ ಯುಗಾದಿ ಉತ್ಸವವನ್ನು ಸಡಗರದೊಂದಿಗೆ ಆಚರಿಸಲಾಯಿತು.

ಹೊಸ ವರ್ಷದ ಸಲುವಾಗಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ಹಾಗೂ ಸಪರಿವಾರ ದೇವರನ್ನು ವಿಶೇಷವಾಗಿ ಹೂ ಹಾರಗಳಿಂದ ಅಲಂಕರಿಸಲಾಗಿತ್ತು.

ಪುಷ್ಪಾಲಂಕಾರ ಸೇವೆಯನ್ನು ಶ್ರೀ ಮುನಿರಾಜು ಮತ್ತು ಕುಟುಂಬ, ವಸ್ತ್ರ ಸೇವೆಯನ್ನು ಶ್ರೀ ನಾರಾಯಣ ಸ್ವಾಮಿ ಮತ್ತು ಕುಟುಂಬದವರು ಕೈಗೊಂಡಿದ್ದರು. ದೇವಾಲಯದ ಅರ್ಚಕ ಶ್ರೀ ನಾಗೇಂದ್ರ ಭಟ್‌ ಅವರು ಪಂಚಾಂಗದ ಫಲಾಫಲಗಳನ್ನು ವಿವರಿಸಿ, ಬಳಿಕ ಪೂಜಾ ಕೈಂಕರ್ಯ ನೆರವೇರಿಸಿದರು.

ಭಕ್ತರಿಂದ ಭಜನಾ ಸೇವೆ ನಡೆಯಿತು. ಬೇವು-ಬೆಲ್ಲ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.

ಈ ಸಂದರ್ಭದ ವಿಡಿಯೋ, ಕೆಲವು ಚಿತ್ರಗಳು ಇಲ್ಲಿವೆ. ವಿಡಿಯೋ ನೋಡಲು ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ.

PARYAYA: ಯುಗಾದಿ ಉತ್ಸವ ಆಚರಣೆ:   ಯುಗಾದಿ ಉತ್ಸವ ಆಚರಣೆ ಬೆಂ ಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ ಸೇವಾ ಸಮಿತಿಯ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇ...

Sunday, March 15, 2026

PARYAYA: ಕೇಂದ್ರದ ಮಹತ್ವದ ಆದೇಶ: ಪಿಎನ್‌ ಜಿ (PNG) ಇದ್ದರೆ ಎಲ್‌ಪಿ...

 ಕೇಂದ್ರದ ಮಹತ್ವದ ಆದೇಶ: ಪಿಎನ್‌ಜಿ (PNG) ಇದ್ದರೆ ಎಲ್‌ಪಿಜಿ (LPG) ಇಲ್ಲ

ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಒಂದು ಪ್ರಮುಖ ಅಧಿಸೂಚನೆಯನ್ನು ಹೊರಡಿಸಿದ್ದುಪೈಪ್‌ಡ್ ನ್ಯಾಚುರಲ್ ಗ್ಯಾಸ್ (PNG) ಸೌಲಭ್ಯ ಹೊಂದಿರುವ ಗ್ರಾಹಕರು ತಮ್ಮಲ್ಲಿರುವ ಎಲ್‌ಪಿಜಿ ಸಂಪರ್ಕವನ್ನು ಕೂಡಲೇ ಸರ್ಕಾರಕ್ಕೆ ಒಪ್ಪಿಸಬೇಕೆಂದು ಆದೇಶಿಸಿದೆ. ಈ ವಿಚಾರವನ್ನು ಸರ್ಕಾರವು 2026 ಮಾರ್ಚ್‌ 14ರ ಶನಿವಾರ ಅಧಿಸೂಚನೆ ಮೂಲಕ ಪ್ರಕಟಿಸಿದೆ.

ಪ್ರಮುಖ ಮಾರ್ಗಸೂಚಿಗಳು:

  • ಒಂದೇ ಸಂಪರ್ಕಕ್ಕೆ ಅವಕಾಶ: PNG ಸಂಪರ್ಕ ಹೊಂದಿರುವವರು ಇನ್ನು ಮುಂದೆ ಗೃಹಬಳಕೆಯ LPG ಸಿಲಿಂಡರ್‌ಗಳನ್ನು ಹೊಂದುವಂತಿಲ್ಲ ಅಥವಾ ರೀಫಿಲ್ ಪಡೆಯುವಂತಿಲ್ಲ.
  • ಹೊಸ ಸಂಪರ್ಕಕ್ಕೆ ತಡೆ: ಈಗಾಗಲೇ ಪೈಪ್‌ಲೈನ್ ಅನಿಲ ಸೌಲಭ್ಯ ಇರುವವರಿಗೆ ಭವಿಷ್ಯದಲ್ಲಿ ಹೊಸ LPG ಸಂಪರ್ಕವನ್ನು ನೀಡಲಾಗುವುದಿಲ್ಲ.
  • ತೈಲ ಕಂಪನಿಗಳಿಗೆ ಸೂಚನೆ: ಸರ್ಕಾರದ ಸ್ವಾಮ್ಯದ ತೈಲ ಕಂಪನಿಗಳು ಮತ್ತು ವಿತರಕರು ಅಂತಹ ಗ್ರಾಹಕರಿಗೆ ಸಿಲಿಂಡರ್ ಪೂರೈಕೆ ಮಾಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಈ ಕ್ರಮ ಏಕೆ?
ಅಡುಗೆ ಅನಿಲದ ಪೂರೈಕೆಯಲ್ಲಿನ ದ್ವಿಗುಣತೆಯನ್ನು ತಡೆಯಲು ಮತ್ತು PNG ಸೌಲಭ್ಯವಿಲ್ಲದ ಮನೆಗಳಿಗೆ LPG ಸಿಲಿಂಡರ್‌ಗಳು ಸುಲಭವಾಗಿ ಸಿಗುವಂತೆ ಮಾಡಲು ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಪಶ್ಚಿಮ ಏಷ್ಯಾದಲ್ಲಿನ ಬಿಕ್ಕಟ್ಟಿನಿಂದಾಗಿ ಇಂಧನ ಪೂರೈಕೆಯಲ್ಲಿ ಉಂಟಾಗಿರುವ ವ್ಯತ್ಯಯವೂ ಇದಕ್ಕೆ ಒಂದು ಕಾರಣವಾಗಿದೆ.

ಕಡಲ ಬಿಕ್ಕಟ್ಟಿನ ನಡುವೆ ಸಿಹಿ ಸುದ್ದಿ: ಭಾರತದ ಹಡಗುಗಳಿಗೆ ಸುರಕ್ಷಿತ ಹಾದಿ

ಭಾರತದ ರಾಜತಾಂತ್ರಿಕ ಪ್ರಯತ್ನಗಳ ಫಲವಾಗಿಇರಾನ್ ದೇಶವು ಪರ್ಷಿಯನ್ ಕೊಲ್ಲಿಯ 'ಹಾರ್ಮುಜ್ ಜಲಸಂಧಿಮೂಲಕ ಭಾರತದ ಎರಡು LPG ಹಡಗುಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟಿದೆ.

  • ಶಿವಾಲಿಕ್ ಮತ್ತು ನಂದಾದೇವಿ: ಈ ಎರಡು ಬೃಹತ್ ಹಡಗುಗಳು ಸುಮಾರು 92,700 ಟನ್ ಅಡುಗೆ ಅನಿಲದೊಂದಿಗೆ ಗುಜರಾತಿನ ಮುದ್ರಾ ಮತ್ತು ಕಾಂಡ್ಲಾ ಬಂದರುಗಳತ್ತ ಸಾಗಿವೆ.
  • ಇವು ಮಾರ್ಚ್ 16 ಅಥವಾ 17 ರಂದು ಭಾರತವನ್ನು ತಲುಪಲಿವೆ.
  • ಇನ್ನೂ ಬಾಕಿ ಉಳಿದಿರುವ 22 ಭಾರತೀಯ ಹಡಗುಗಳ ಸುರಕ್ಷಿತ ಸಂಚಾರಕ್ಕಾಗಿ ಸರ್ಕಾರ ಮಾತುಕತೆ ನಡೆಸುತ್ತಿದೆ.

ಸಾರ್ವಜನಿಕರಲ್ಲಿ ಮನವಿ: ಗಾಬರಿ ಬೇಡ!

ಪೆಟ್ರೋಲಿಯಂ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ ಅವರು ನಾಗರಿಕರಲ್ಲಿ ವಿಶೇಷ ಮನವಿ ಮಾಡಿದ್ದಾರೆ:

  1. ಪ್ಯಾನಿಕ್ ಬುಕಿಂಗ್ ಬೇಡ: ಅಗತ್ಯವಿದ್ದಾಗ ಮಾತ್ರ ಸಿಲಿಂಡರ್ ಬುಕ್ ಮಾಡಿಗಾಬರಿಯಿಂದ ಮುಂಗಡ ಬುಕಿಂಗ್ ಮಾಡಬೇಡಿ.
  2. ವಾಣಿಜ್ಯ ಸಿಲಿಂಡರ್ ಲಭ್ಯತೆ: ರಾಜ್ಯ ಸರ್ಕಾರಗಳ ಬಳಿ ಸಾಕಷ್ಟು ವಾಣಿಜ್ಯ ಸಿಲಿಂಡರ್‌ಗಳ ದಾಸ್ತಾನು ಇದ್ದುಈಗಾಗಲೇ 29 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ವಿತರಣೆ ಆರಂಭವಾಗಿದೆ.

    ‌                      https://www.paryaya.com/search?q=%E0%B2%87%E0%B2%B0%E0%B2%BE%E0%B2%A8%E0%B3%8D&updated-max=2020-01-09T01:03:00%2B05:30&max-results=20&start=2&by-date=false
PARYAYA: ಕೇಂದ್ರದ ಮಹತ್ವದ ಆದೇಶ: ಪಿಎನ್‌ ಜಿ (PNG) ಇದ್ದರೆ ಎಲ್‌ಪಿ...:   ಕೇಂದ್ರದ ಮಹತ್ವದ ಆದೇಶ: ಪಿಎನ್‌ಜಿ ( PNG) ಇದ್ದರೆ ಎಲ್‌ಪಿಜಿ ( LPG) ಇಲ್ಲ ಕೇಂ ದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಒಂದು ಪ್ರಮುಖ ಅಧಿಸೂಚನೆಯನ್...

Thursday, March 12, 2026

PARYAYA: ಭಾರತದಲ್ಲಿ ʼಬೆಂಕಿʼ: ಸುಳ್ಳು ಸುದ್ದಿ ಎಂದು ಸ್ಪಷ್ಟ ಪಡಿಸಿ...

 ಭಾರತದಲ್ಲಿ ʼಬೆಂಕಿʼ: ಸುಳ್ಳು ಸುದ್ದಿ ಎಂದು ಸ್ಪಷ್ಟ ಪಡಿಸಿದ ಸರ್ಕಾರ

ವದೆಹಲಿ: ದೆಹಲಿಯ ಭಾರತ-ಇಸ್ರೇಲ್ ಜಂಟಿ ರಕ್ಷಣಾ ಸೌಲಭ್ಯದಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದೆ ಮತ್ತು ಎರಡೂ ದೇಶಗಳ ಹಲವಾರು ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಸುದ್ದಿಗಳನ್ನು ಸರ್ಕಾರ ೨೦೨೬ ಮಾರ್ಚ್‌ ೧೨ರ ಗುರುವಾರ ತಳ್ಳಿಹಾಕಿದೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯದ
 ಫ್ಯಾಕ್ಟ್ ಚೆಕ್ ಯುನಿಟ್ (Fact Check Unit) ಈ ಪೋಸ್ಟ್‌ಗಳು ಸುಳ್ಳೆಂದು ಸ್ಪಷ್ಟಪಡಿಸಿದೆ ಮತ್ತು ಇಂತಹ ಆಧಾರರಹಿತ ವದಂತಿಗಳ ಬಗ್ಗೆ ಜಾಗರೂಕರಾಗಿರುವಂತೆ ಜನರಿಗೆ ಸೂಚಿಸಿದೆ.
ಭಾರತೀಯ ಮಾಧ್ಯಮಗಳು ಈ ಘಟನೆಗೆ ಭಾರತದಲ್ಲಿರುವ ಇರಾನ್ ಬೆಂಬಲಿಗರನ್ನು ದೂಷಿಸುತ್ತಿವೆ ಎಂಬ ಸಾಮಾಜಿಕ ಜಾಲತಾಣಗಳ ಪ್ರತಿಪಾದನೆಗಳನ್ನೂ ಸಹ ಸಚಿವಾಲಯವು "ನಕಲಿ" ಎಂದು ಕರೆದಿದೆ.

ಹಾರ್ಮುಜ್ ಜಲಸಂಧಿ ಭಾರತೀಯ ಟ್ಯಾಂಕರ್‌ಗಳಿಗೆ ಸುರಕ್ಷಿತ ಮಾರ್ಗ

ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತು ಅವರ ಇರಾನಿನ ಸಹವರ್ತಿ ಅಬ್ಬಾಸ್ ಅರಾಗ್ಚಿ ನಡುವಿನ ಮಾತುಕತೆಯ ನಂತರಇರಾನ್ ಭಾರತೀಯ ಧ್ವಜವಿರುವ ಟ್ಯಾಂಕರ್‌ಗಳಿಗೆ ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗಲು ಅನುಮತಿ ನೀಡಿದೆ. ಅಮೆರಿಕಯುರೋಪ್ ಮತ್ತು ಇಸ್ರೇಲ್‌ನ ಹಡಗುಗಳು ಈ ಆಯಕಟ್ಟಿನ ಜಲಮಾರ್ಗದಲ್ಲಿ ನಿರ್ಬಂಧಗಳನ್ನು ಎದುರಿಸುತ್ತಿದ್ದರೆಭಾರತೀಯ ಟ್ಯಾಂಕರ್‌ಗಳಾದ ಪುಷ್ಪಕ್’ ಮತ್ತು ಪರಿಮಳ್’ ಸುರಕ್ಷಿತವಾಗಿ ಸಂಚರಿಸುತ್ತಿವೆ.

೨೦೨೬ ಮಾರ್ಚ್‌ ೧೦ರ ಮಂಗಳವಾರ ಜೈಶಂಕರ್ ಮತ್ತು ಅರಾಗ್ಚಿ ನಡುವೆ ನಡೆದ ಸಂಭಾಷಣೆಯಲ್ಲಿ ಹಾರ್ಮುಜ್ ಜಲಸಂಧಿಯ ಮೂಲಕ ಟ್ಯಾಂಕರ್‌ಗಳ ಸುರಕ್ಷಿತ ಸಂಚಾರದ ಬಗ್ಗೆ ಪ್ರಮುಖವಾಗಿ ಚರ್ಚಿಸಲಾಗಿತ್ತು. ಉಭಯ ನಾಯಕರು ಪಶ್ಚಿಮ ಏಷ್ಯಾದಲ್ಲಿ ಬದಲಾಗುತ್ತಿರುವ ಪರಿಸ್ಥಿತಿಯ ಬಗ್ಗೆ ಚರ್ಚಿಸಿದ್ದರು. ಇರಾನ್ ಯುದ್ಧ ಆರಂಭವಾದ ನಂತರ ಇವರಿಬ್ಬರ ನಡುವೆ ನಡೆದ ಮೂರನೇ ಸಂಭಾಷಣೆ ಇದು.

ಏಷ್ಯಾದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿರುವ ಭಾರತವು ತನ್ನ ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲ ಆಮದಿನ ಅರ್ಧಕ್ಕಿಂತ ಹೆಚ್ಚು ಭಾಗಕ್ಕೆ ಈ ಕಿರಿದಾದ ಜಲಮಾರ್ಗವನ್ನೇ ಅವಲಂಬಿಸಿದೆ. ಶಿಪ್ಪಿಂಗ್ ಮಹಾನಿರ್ದೇಶನಾಲಯದ ಪ್ರಕಾರಈ ಪ್ರದೇಶದಲ್ಲಿ ಸಂಘರ್ಷ ಆರಂಭವಾದಾಗಿನಿಂದ ಭಾರತೀಯ ಧ್ವಜವಿರುವ 28 ಹಡಗುಗಳು ಹಾರ್ಮುಜ್ ಜಲಸಂಧಿ ಅಥವಾ ಅದರ ಸಮೀಪದಲ್ಲಿ ಕಾರ್ಯನಿರ್ವಹಿಸುತ್ತಿವೆ. ವಿಶ್ವದ ಅತ್ಯಂತ ನಿರ್ಣಾಯಕ ಕಡಲ ಇಂಧನ ಮಾರ್ಗಗಳಲ್ಲಿ ಭದ್ರತಾ ಕಾಳಜಿಗಳು ಮುಂದುವರಿಯುತ್ತಿರುವುದರಿಂದ ಅಧಿಕಾರಿಗಳು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.

https://www.paryaya.com/search?q=%E0%B2%87%E0%B2%B0%E0%B2%BE%E0%B2%A8%E0%B3%8D&updated-max=2020-01-09T01:03:00%2B05:30&max-results=20&start=2&by-date=false
PARYAYA: ಭಾರತದಲ್ಲಿ ʼಬೆಂಕಿʼ: ಸುಳ್ಳು ಸುದ್ದಿ ಎಂದು ಸ್ಪಷ್ಟ ಪಡಿಸಿ...:   ಭಾರತದಲ್ಲಿ ʼ ಬೆಂಕಿ ʼ: ಸುಳ್ಳು ಸುದ್ದಿ ಎಂದು ಸ್ಪಷ್ಟ ಪಡಿಸಿದ ಸರ್ಕಾರ ನ ವದೆಹಲಿ: ದೆಹಲಿಯ ಭಾರತ-ಇಸ್ರೇಲ್ ಜಂಟಿ ರಕ್ಷಣಾ ಸೌಲಭ್ಯದಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದ...