Wednesday, May 27, 2026

PARYAYA: ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆ ಸಿಂಧು: ಸುಪ್ರೀಂಕೋರ್ಟ್‌

 ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆ ಸಿಂಧು: ಸುಪ್ರೀಂಕೋರ್ಟ್‌

ವದೆಹಲಿ: ದೇಶದ ಮತದಾರರ ಪಟ್ಟಿಯನ್ನು ಶುದ್ಧೀಕರಿಸುವ ನಿಟ್ಟಿನಲ್ಲಿ ಭಾರತೀಯ ಚುನಾವಣಾ ಆಯೋಗ (ECI) ಕೈಗೊಂಡಿರುವ 'ವಿಶೇಷ ಸಮಗ್ರ ಪರಿಷ್ಕರಣೆ' (Special Intensive Revision - SIR) ಪ್ರಕ್ರಿಯೆಗೆ ಸುಪ್ರೀಂ ಕೋರ್ಟ್ ಮಾನ್ಯತೆ ನೀಡಿದೆ. ಈ ಪ್ರಕ್ರಿಯೆಯು ಸಾಂವಿಧಾನಿಕವಾಗಿ ಮತ್ತು ಶಾಸನ ಬದ್ಧವಾಗಿ ಸಿಂಧುವಾಗಿದೆ ಎಂದು ಸುಪ್ರೀಂ ಕೋರ್ಟ್ ೨೦೨೬ ಮೇ ೨೭ರ ಬುಧವಾರ ಮಹತ್ವದ ತೀರ್ಪು ನೀಡಿದೆ.

ತೀರ್ಪಿನ ಮುಖ್ಯಾಂಶಗಳು:

  • ಆಯೋಗದ ಅಧಿಕಾರ ಬಿಹಾರದಲ್ಲಿ ನಡೆದ ಮತದಾರರ ಪಟ್ಟಿಯ ಪರಿಷ್ಕರಣೆಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಆಯೋಗದ ಕ್ರಮದಲ್ಲಿ ಯಾವುದೇ ಸಂವಿಧಾನಿಕ ಉಲ್ಲಂಘನೆಯಾಗಿಲ್ಲ ಎಂದು ಸ್ಪಷ್ಟಪಡಿಸಿದೆ.
  • ಪೌರತ್ವದ ವಿಚಾರದಲ್ಲಿ ಮಹತ್ವದ ಸೂಚನೆ: ಪರಿಷ್ಕರಣೆಯ ವೇಳೆ ಪೌರತ್ವವನ್ನು ಪರಿಶೀಲಿಸುವ ಅಧಿಕಾರ ಆಯೋಗಕ್ಕೆ ಇದೆ. ಆದರೆ, ಪಟ್ಟಿಯಿಂದ ಹೆಸರು ತೆಗೆದುಹಾಕಿದ ತಕ್ಷಣ ಅವರಿಗೆ ಪೌರತ್ವ ಇಲ್ಲ ಎಂದರ್ಥವಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.
  • ಸಂತ್ರಸ್ತರಿಗೆ ನ್ಯಾಯಾಂಗ ರಕ್ಷಣೆ: ಪೌರತ್ವ ಸಾಬೀತುಪಡಿಸಲು ವಿಫಲರಾದವರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಿದರೆ, ಅಂತಹ ಪ್ರಕರಣಗಳನ್ನು ಸೂಕ್ತ ಪ್ರಾಧಿಕಾರಕ್ಕೆ ಕಳುಹಿಸಿ, ಹೆಚ್ಚಿನ ಕಾನೂನು ವಿಚಾರಣೆ ನಡೆಸುವಂತೆ ಆಯೋಗಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.
  • ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ: ಮತದಾರರ ಪಟ್ಟಿಯ ಪರಿಷ್ಕರಣೆಯು ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗೆ ಅವಶ್ಯಕ ಎಂದು ಅಭಿಪ್ರಾಯಪಟ್ಟಿರುವ ಕೋರ್ಟ್, ಪ್ರಜಾ ಪ್ರಾತಿನಿಧ್ಯ ಕಾಯ್ದೆಯಡಿ ಆಯೋಗಕ್ಕೆ ಈ ಅಧಿಕಾರವಿರುವುದನ್ನು ದೃಢಪಡಿಸಿದೆ.

ಏನಿದು SIR?

ನಕಲಿ, ಮೃತ ವ್ಯಕ್ತಿಗಳು ಮತ್ತು ಅನರ್ಹ ಮತದಾರರನ್ನು (ಅಕ್ರಮ ವಲಸಿಗರು ಸೇರಿದಂತೆ) ಮತದಾರರ ಪಟ್ಟಿಯಿಂದ ಕೈಬಿಡಲು ಮತ್ತು ಪಟ್ಟಿಯನ್ನು ಪಾರದರ್ಶಕವಾಗಿಸಲು ಕಳೆದ ವರ್ಷ ಜೂನ್‌ನಲ್ಲಿ ಆಯೋಗವು ಬಿಹಾರದಲ್ಲಿ ಈ ಪ್ರಕ್ರಿಯೆಯನ್ನು ಆರಂಭಿಸಿತ್ತು. ಆ ಬಳಿಕ ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು, ಅಸ್ಸಾಂ ರಾಜ್ಯಗಳಲ್ಲೂ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯನ್ನು ನಡೆಸಲಾಗಿತ್ತು. ಇದಕ್ಕೆ ಕಾಂಗ್ರೆಸ್‌ ಸಹಿತ ಪ್ರತಿ ಪಕ್ಷಗಳಿಂದ ತೀವ್ರ ಟೀಕೆ, ವಿರೋಧ ವ್ಯಕ್ತವಾಗಿತ್ತು.

ಕರ್ನಾಟಕದಲ್ಲಿ

ಕರ್ನಾಟಕದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಜೂನ್ 20 ರಿಂದ ಪ್ರಾರಂಭವಾಗಲಿದೆ. ಜೂನ್ 30 ರಿಂದ ಜುಲೈ 29 ರವರೆಗೆ ಮನೆ ಮನೆಗೆ ಭೇಟಿ ನೀಡುವ ಅಭಿಯಾನ ನಡೆಯಲಿದ್ದು, ಅಕ್ಟೋಬರ್ 7 ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲು ವೇಳಾಪಟ್ಟಿ ನಿಗದಿಪಡಿಸಲಾಗಿದೆ.

ಈ ವಿಚಾರದಲ್ಲಿ ಕಟ್ಟೆಚ್ಚರ ವಹಿಸಲು ಕರ್ನಾಟಕದ ಕಾಂಗ್ರೆಸ್‌ ಸರ್ಕಾರ ಇತ್ತೀಚೆಗೆ ನಿರ್ಧರಿಸಿದೆ.


PARYAYA: ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆ ಸಿಂಧು: ಸುಪ್ರೀಂಕೋರ್ಟ್‌:   ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆ ಸಿಂಧು : ಸುಪ್ರೀಂ ಕೋರ್ಟ್‌ ನ ವದೆಹಲಿ: ದೇಶದ ಮತದಾರರ ಪಟ್ಟಿಯನ್ನು ಶುದ್ಧೀಕರಿಸುವ ನಿಟ್ಟಿನಲ್ಲಿ ಭಾರತೀಯ ಚುನಾವಣಾ ಆಯೋಗ ( ECI...

Tuesday, May 26, 2026

PARYAYA: ಶ್ರೀ ಆಂಜನೇಯ ಹೋಮ: ಶಕ್ತಿ ಮತ್ತು ಧೈರ್ಯಕ್ಕಾಗಿ

 ಶ್ರೀ ಆಂಜನೇಯ ಹೋಮ: ಶಕ್ತಿ ಮತ್ತು ಧೈರ್ಯಕ್ಕಾಗಿ

ನುಮದ್ವಂದನೆ ಅಥವಾ ಆಂಜನೇಯ ಹೋಮವು ಸಾಕ್ಷಾತ್ ವಾಯುಪುತ್ರ, ಅಪ್ರತಿಮ ಶೌರ್ಯ ಮತ್ತು ಅಪಾರ ಶಕ್ತಿಯ ಸಂಕೇತವಾಗಿರುವ ಶ್ರೀ ಹನುಮಂತನ ಕೃಪೆಗೆ ಪಾತ್ರವಾಗಲು ನೆರವೇರಿಸುವ ಅತ್ಯಂತ ಪವಿತ್ರವಾದ ಒಂದು ಆಚರಣೆ.

ಜೀವನದ ಹಾದಿಯಲ್ಲಿ ಎದುರಾಗುವ ನಕಾರಾತ್ಮಕ ಶಕ್ತಿಗಳನ್ನು ತೊಲಗಿಸಿ, ಅಡೆತಡೆಗಳನ್ನು ನಿವಾರಿಸಲು ಹಾಗೂ ಎಲ್ಲ ಬಗೆಯ ದುಃಖ-ಕಷ್ಟಗಳಿಂದ ಮುಕ್ತಿ ಪಡೆಯಲು ಈ ಹೋಮವನ್ನು ಮಾಡಲಾಗುತ್ತದೆ. ಜೀವನದ ಸವಾಲುಗಳನ್ನು ಎದುರಿಸಲು ಹನುಮಂತನ ದಿವ್ಯ ರಕ್ಷಾಕವಚ ಮತ್ತು ಆಶೀರ್ವಾದವನ್ನು ಪಡೆಯುವುದೇ ಇದರ ಮುಖ್ಯ ಉದ್ದೇಶ.

ಆಂಜನೇಯ ಹೋಮದ ಆಚರಣೆಯು ಭಕ್ತರಲ್ಲಿ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ದೃಢತೆಯನ್ನು ಹೆಚ್ಚಿಸುತ್ತದೆ. ಇದು ಮನಸ್ಸಿನಲ್ಲಿದ್ದ ಭೀತಿಯನ್ನು ಹೋಗಲಾಡಿಸಿ, ಜೀವನದ ವಿವಿಧ ಮಜಲುಗಳಲ್ಲಿ ಯಶಸ್ಸಿನ ಪತಾಕೆಯನ್ನು ಹಾರಿಸಲು ದಾರಿಯಾಗುತ್ತದೆ.

ಈ ಪವಿತ್ರ ವಿಧಿಯಲ್ಲಿ ಹನುಮಂತನ ಮೂಲಮಂತ್ರ ಸಹಿತ ಶಕ್ತಿಶಾಲಿ ಮಂತ್ರಗಳನ್ನು ಪಠಿಸಲಾಗುತ್ತದೆ. ಹೋಮ ಕುಂಡದಲ್ಲಿ ಪವಿತ್ರ ಹವಿಸ್ಸನ್ನು ಅರ್ಪಿಸುವ ಮೂಲಕ, ಹನುಮದೇವನ ದಿವ್ಯ ಶಕ್ತಿಯೊಂದಿಗೆ ಸಂಪರ್ಕ ಸಾಧಿಸಿ, ಸಕಲ ಅಭೀಷ್ಟಗಳನ್ನು ಈಡೇರಿಸಿಕೊಳ್ಳುವ ಸುಂದರ ಪ್ರಕ್ರಿಯೆ ಇದು.

ಹನುಮ ಜಯಂತಿಯಂತಹ ಅತ್ಯಂತ ಮಂಗಳಕರ ಸಂದರ್ಭಗಳಲ್ಲಿ ಈ ಹೋಮವನ್ನು ನೆರವೇರಿಸುವುದರಿಂದ ವಿಶೇಷ ಫಲಗಳು ಲಭ್ಯವಾಗುತ್ತವೆ. ಇದು ನಿಮ್ಮ ಆಧ್ಯಾತ್ಮಿಕ ಅನುಭವವನ್ನು ಮತ್ತಷ್ಟು ಉನ್ನತಗೊಳಿಸಿ, ಭಗವಂತನ ಕೃಪೆಗೆ ಪಾತ್ರರನ್ನಾಗಿ ಮಾಡುತ್ತದೆ.

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶ್ರೀ ವಿನಾಯಕ ಶಾಸ್ತ್ರಿ ಮತ್ತು ಅವರ ಸಹ ಋತ್ವಿಜರು ೨೦೨೬ ಮೇ ೨೬ರ ಮಂಗಳವಾರ ಅಭಯ ಆಂಜನೇಯನ ಸನ್ನಿಧಾನದಲ್ಲಿ ಕೌಟುಂಬಿಕ ಸಂಕಲ್ಪಕ್ಕೆ ಅನುಗುಣವಾಗಿ ದಶದ್ರವ್ಯ ಆಹುತಿಯೊಂದಿಗೆ ಈ ಆಂಜನೇಯ ಹೋಮವನ್ನು ನೆರವೇರಿಸಿದರು. ಈ ಸಂದರ್ಭದ ಕೆಲವು ಚಿತ್ರಗಳು ಹಾಗೂ ವಿಡಿಯೋಗಳು ಇಲ್ಲಿವೆ.



PARYAYA: ಶ್ರೀ ಆಂಜನೇಯ ಹೋಮ: ಶಕ್ತಿ ಮತ್ತು ಧೈರ್ಯಕ್ಕಾಗಿ:   ಶ್ರೀ ಆಂಜನೇಯ ಹೋಮ: ಶಕ್ತಿ ಮತ್ತು ಧೈರ್ಯ ಕ್ಕಾಗಿ ಹ ನುಮದ್ವಂದನೆ ಅಥವಾ ಆಂಜನೇಯ ಹೋಮವು ಸಾಕ್ಷಾತ್ ವಾಯುಪುತ್ರ , ಅಪ್ರತಿಮ ಶೌರ್ಯ ಮತ್ತು ಅಪಾರ ಶಕ್ತಿಯ ಸಂಕೇತವಾಗಿರು...

Sunday, May 24, 2026

PARYAYA: ಬಸ್ಸನ್ನು ತಡೆದ ಮಂಗ ಕೇಳಿದ್ದು ಏನನ್ನು?

 ಬಸ್ಸನ್ನು ತಡೆದ ಮಂಗ ಕೇಳಿದ್ದು ಏನನ್ನು?

ಇದೊಂದು ಮನ ಕಲಕುವ ಸನ್ನಿವೇಶ

ಹಾರಾಷ್ಟ್ರದ ವಿದರ್ಭದಲ್ಲಿ ಅದೊಂದು ಮನ ಕಲಕುವ ಸನ್ನಿವೇಶ. ಬಸ್ಸೊಂದು ರಸ್ತೆಯಲ್ಲಿ ಮುಂದಕ್ಕೆ ಸಾಗುತ್ತಿತ್ತು. ಹಠಾತ್ತನೆ ಕೋತಿಯೊಂದು ಬಂದು ಬಸ್ಸಿನ ಮುಂದೆ ನಿಂತುಕೊಂಡಿತು.

ಚಾಲಕನಿಗೆ ಮುಂದೆ ಸಾಗಲು ಸಾಧ್ಯವಾಗಲಿಲ್ಲ. ಬಸ್ಸನ್ನು ನಿಲ್ಲಿಸಿದ. ಶ್..‌ ಶ್‌.. ಎಂದು ಬಾಯಿಯಲ್ಲೇ ಸದ್ದು ಮಾಡಿದ.

ಮಂಗ ಕದಲಲಿಲ್ಲ. ನಿಂತಲ್ಲೇ ನಿಂತುಕೊಂಡಿತ್ತು. ಇದೇನೋ ವಿಲಕ್ಷಣ ಪರಿಸ್ಥಿತಿ ಎಂದು ಬಸ್ಸಿನಲ್ಲಿದ್ದ ಕೆಲವರು ಕೆಳಕ್ಕೆ ಇಳಿದರು. ಆದರೂ ಕೋತಿ ಅಲ್ಲೇ ನಿಂತಿತ್ತು. ತನ್ನದೇ ಮೂಕಭಾಷೆಯಲ್ಲಿ ಕೈ ಅಲ್ಲಾಡಿಸುತ್ತಿತ್ತು.

ಅದಕ್ಕೆ ಬಹುಶಃ ನೀರು ಬೇಕಾಗಿರಬಹುದು ಎಂದು ಪ್ರಯಾಣಿಕರಲ್ಲಿ ಒಬ್ಬರಿಗೆ ಅನ್ನಿಸಿತು. ಅವರು ತತ್‌ ಕ್ಷಣವೇ ತನ್ನ ಬ್ಯಾಗಿನಲ್ಲಿದ್ದ ಪ್ಲಾಸ್ಟಿಕ್‌ ಬಾಟಲಿಯ ಮುಚ್ಚಳ ತೆಗೆದು ಮಂಗನ ಮುಂದೆ ಹಿಡಿದರು. ಮಂಗ ಬಾಯಿ ತೆರೆದು ಗಟಗಟನೆ ನೀರು ಕುಡಿಯಿತು.

ಅಷ್ಟರಲ್ಲಿ ಇನ್ನಷ್ಟು ಮಂಗಗಳು ಆಸು ಪಾಸಿನಿಂದ ಓಡಿ ಬಂದು ಕೈ ಚಾಚ ತೊಡಗಿದವು. ಬಸ್ಸಿನಲ್ಲಿದ್ದವರು ತಮ್ಮ ಬ್ಯಾಗುಗಳಿಂದ ನೀರಿನ ಬಾಟಲಿಗಳನ್ನು ತೆಗೆದು ಕೆಳಗಿದ್ದವರ ಕೈಗಳಿಗೆ ಕೊಟ್ಟರು. ಮಹಿಳೆಯರೂ ಹಿಂದು ಮುಂದು ನೋಡದೆ ತಮ್ಮ ನೀರಿನ ಬಾಟಲಿಗಳನ್ನು ನೀಡಿದರು.

ಮಂಗಗಳ ಹಿಂಡೇ ಬಾಟಲಿಗಳಿಂದ ನೀರು ಕುಡಿದು ಖುಷಿ ಪಟ್ಟವು.

ನೀರು ಸಿಗದೆ ಅದೆಷ್ಟು ದಿನಗಳಿಂದ ಬಾಯಾರಿದ್ದವೋ ಏನೋ. ಮಂಗಗಳಿಗೆ ಅಮೃತ ಸಿಕ್ಕಂತಾಗಿತ್ತು.

ಈ ಮನ ಕಲಕುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಮೇಲೆ ಕ್ಲಿಕ್‌ ಮಾಡಿ ವಿಡಿಯೋ ನೋಡಿ.

ಮರೆಯಬೇಡಿ. ನಿಮ್ಮ ಮನೆ, ಕಚೇರಿಯ ಆಸುಪಾಸಿನಲ್ಲೂ ಪಶು ಪಕ್ಷಿಗಳು ಈ ಬೇಸಗೆಯಲ್ಲಿ ನೀರು ಸಿಗದೆ ಕಂಗಾಲಾಗಿರಬಹುದು. ಅವುಗಳಿಗೆ ಸಿಗುವಂತೆ ನೀರು ಸಿಗುವ ವ್ಯವಸ್ಥೆ ಮಾಡಿ. ಮೂಕ ಪ್ರಾಣಿ, ಪಕ್ಷಿಗಳ ದಾಹ ತಣಿಸಿ.PARYAYA: ಬಸ್ಸನ್ನು ತಡೆದ ಮಂಗ ಕೇಳಿದ್ದು ಏನನ್ನು?:   ಬಸ್ಸನ್ನು ತಡೆದ ಮಂಗ ಕೇಳಿದ್ದು ಏನನ್ನು? ಇದೊಂದು ಮನ ಕಲಕುವ ಸನ್ನಿವೇಶ ಮ ಹಾರಾಷ್ಟ್ರದ ವಿದರ್ಭದಲ್ಲಿ ಅದೊಂದು ಮನ ಕಲಕುವ ಸನ್ನಿವೇಶ. ಬಸ್ಸೊಂದು ರಸ್ತೆಯಲ್ಲಿ ಮುಂದಕ...

Thursday, May 21, 2026

PARYAYA: ಗೋಹತ್ಯೆಯು ಇಸ್ಲಾಂ / ಈದ್ ಹಬ್ಬಕ್ಕೆ ಅತ್ಯಗತ್ಯವಲ್ಲ: ಕೋರ್ಟ್

 ಗೋಹತ್ಯೆಯು ಇಸ್ಲಾಂ / ಈದ್ ಹಬ್ಬಕ್ಕೆ ಅತ್ಯಗತ್ಯವಲ್ಲ: ಕೋರ್ಟ್

ಕೋಲ್ಕತ: ಬಕ್ರೀದ್ ಹಬ್ಬಕ್ಕಿಂತ ಮುಂಚಿತವಾಗಿ, ಹಬ್ಬದ ಸಂದರ್ಭದಲ್ಲಿ ಪ್ರಾಣಿ ಬಲಿ ನೀಡುವುದಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಸರ್ಕಾರ ವಿಧಿಸಿದ್ದ ನಿರ್ಬಂಧಗಳನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಕಲ್ಕತ್ತಾ ಹೈಕೋರ್ಟ್ ೨೦೨೬ ಮೇ ೨೧ರ ಗುರುವಾರ ವಜಾ ಮಾಡಿದೆ.

ಗೋಹತ್ಯೆಯು (ಹಸುವಿನ ಬಲಿ) ಇಸ್ಲಾಂ ಧರ್ಮದ ಅಥವಾ ಬಕ್ರೀದ್ ಆಚರಣೆಯ ಅತ್ಯಗತ್ಯ ಭಾಗವಲ್ಲ ಎಂದು ಅವಲೋಕಿಸಿದ ನ್ಯಾಯಾಲಯವು, ಸಾರ್ವಜನಿಕ ಹಿತದೃಷ್ಟಿಯಿಂದ ಪ್ರಾಣಿ ಹತ್ಯೆಯನ್ನು ನಿಯಂತ್ರಿಸುವ ಅಥವಾ ನಿರ್ಬಂಧಿಸುವ ಅಧಿಕಾರ ರಾಜ್ಯ ಸರ್ಕಾರಕ್ಕಿದೆ ಎಂದು ಹೇಳಿದೆ.

ಮುಕ್ತ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಪ್ರಾಣಿ ಬಲಿ ಮತ್ತು ಹತ್ಯೆ ಮಾಡುವಂತಿಲ್ಲ ಹಾಗೂ ಇದನ್ನು ಕೇವಲ ನಿಗದಿಪಡಿಸಿದ ಮತ್ತು ಸುರಕ್ಷಿತ ಸ್ಥಳಗಳಲ್ಲಿ ಮಾತ್ರ ನಡೆಸಬೇಕು ಎಂದು ಹೈಕೋರ್ಟ್ ನಿರ್ದೇಶಿಸಿದೆ. ಅದೇ ಸಮಯದಲ್ಲಿ, ಇತರ ಪ್ರಾಣಿಗಳ ಬಲಿಗೆ ಸಂಬಂಧಿಸಿದಂತೆ ನಿಯಮ ಸಡಿಲಿಕೆಯನ್ನು ಪರಿಗಣಿಸುವಂತೆ ನ್ಯಾಯಾಲಯವು ರಾಜ್ಯ ಸರ್ಕಾರಕ್ಕೆ ತಿಳಿಸಿದೆ.

ಪ್ರಾಣಿಗಳ ಕಡ್ಡಾಯ ವೈದ್ಯಕೀಯ ತಪಾಸಣೆ ಮತ್ತು ಹತ್ಯೆಗೂ ಮುನ್ನ ಅಧಿಕಾರಿಗಳಿಂದ ಪ್ರಮಾಣೀಕರಣವನ್ನು ಪಡೆದುಕೊಳ್ಳುವುದೂ ಸೇರಿದಂತೆ ಪಶ್ಚಿಮ ಬಂಗಾಳ ಸರ್ಕಾರವು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದ ಬೆನ್ನಲ್ಲೇ ಈ ಆದೇಶ ಹೊರಬಿದ್ದಿದೆ.

PARYAYA: ಗೋಹತ್ಯೆಯು ಇಸ್ಲಾಂ / ಈದ್ ಹಬ್ಬಕ್ಕೆ ಅತ್ಯಗತ್ಯವಲ್ಲ: ಕೋರ್ಟ್:   ಗೋಹತ್ಯೆಯು ಇಸ್ಲಾಂ / ಈದ್ ಹಬ್ಬಕ್ಕೆ ಅತ್ಯಗತ್ಯವಲ್ಲ : ಕೋರ್ಟ್ ಕೋ ಲ್ಕತ: ಬಕ್ರೀದ್ ಹಬ್ಬ ಕ್ಕಿಂತ ಮುಂಚಿತವಾಗಿ, ಹಬ್ಬದ ಸಂದರ್ಭದಲ್ಲಿ ಪ್ರಾಣಿ ಬಲಿ ನೀಡುವುದಕ್ಕೆ...

Wednesday, May 20, 2026

PARYAYA: ಬಂಗ್ಲೆ ಗುಡ್ಡೆಯಲ್ಲೋ ... ಬಾಕೀಮಾರಿನಲ್ಲೋ ಕೂತು ಕೇಳಿ..

ಬಂಗ್ಲೆ ಗುಡ್ಡೆಯಲ್ಲೋ ... ಬಾಕೀಮಾರಿನಲ್ಲೋ ಕೂತು ಕೇಳಿ..
ಸಮೀಪ ನೋಟಕ್ಕೆ ಚಿತ್ರವನ್ನು ಕ್ಲಿಕ್‌ ಮಾಡಿ. ಪೂರ್ತಿ ಓದಲು  ಪರ್ಯಾಯ ವೆಬ್‌ ಸೈಟಿನ ಹವ್ಯಕ ಪುಟಕ್ಕೆ ಭೇಟಿ ಕೊಡಿ.
PARYAYA: ಬಂಗ್ಲೆ ಗುಡ್ಡೆಯಲ್ಲೋ ... ಬಾಕೀಮಾರಿನಲ್ಲೋ ಕೂತು ಕೇಳಿ..:   ಬಂಗ್ಲೆ ಗುಡ್ಡೆಯಲ್ಲೋ ... ಬಾಕೀಮಾರಿನಲ್ಲೋ ಕೂತು ಕೇ ಳಿ.. ಸಮೀಪ ನೋಟಕ್ಕೆ ಚಿತ್ರವನ್ನು ಕ್ಲಿಕ್‌ ಮಾಡಿ. ಪೂರ್ತಿ ಓದಲು ಈ ಪರ್ಯಾಯ ವೆಬ್‌ ಸೈಟಿನ ಹವ್ಯಕ ಪುಟಕ್ಕೆ ಭ...

Tuesday, May 19, 2026

PARYAYA: ಇದು ಭಾರತದ ಅತಿ ತಾಪದ ಜಿಲ್ಲೆ: ಬೆಂಕಿಯ ಉಂಡೆಯಾದ ಬಂದಾ

 ಇದು ಭಾರತದ ಅತಿ ತಾಪದ ಜಿಲ್ಲೆ:  ಬೆಂಕಿಯ ಉಂಡೆಯಾದ ಬಂದಾ

ಮಾನವನ ದುರಾಸೆಗೆ ಬಲಿಯಾದ ಹಸಿರು

ಭಾರತದ ಅತ್ಯಂತ ಬಿಸಿಲಿನ ಜಿಲ್ಲೆ ಎಂಬ ಕುಖ್ಯಾತಿಗೆ ಪಾತ್ರವಾಗಿರುವ ಉತ್ತರ ಪ್ರದೇಶದ 'ಬಂದಾ' ಜಿಲ್ಲೆ ಈಗ ಅಕ್ಷರಶಃ ಕೆಂಡದಂತಾಗಿದೆ. ಬೆಳಿಗ್ಗೆ 10 ಗಂಟೆಯಾಗುತ್ತಿದ್ದಂತೆ ಇಡೀ ಜಿಲ್ಲೆ ಸ್ಮಶಾನ ಮೌನಕ್ಕೆ ಜಾರುತ್ತದೆ. ರಸ್ತೆಗಳು ಬಿಕೋ ಎನ್ನುತ್ತವೆ, ಅಂಗಡಿ ಮುಂಗಟ್ಟುಗಳು ಮುಚ್ಚುತ್ತವೆ. ಅತ್ತಾರಾ ಪಟ್ಟಣದ ಒಡವೆ ವ್ಯಾಪಾರಿ ಲಖನ್ ಗುಪ್ತಾ, ಬಿಸಿಲಿನ ಬೇಗೆಯಿಂದ ತಪ್ಪಿಸಿಕೊಳ್ಳಲು ಬೆಳಿಗ್ಗೆ 6 ಗಂಟೆಗೇ ಕೆಲಸಕ್ಕೆ ಹೊರಟು, 9 ಗಂಟೆಗೆಲ್ಲ ಮನೆ ಸೇರುತ್ತಾರೆ. "ಏಪ್ರಿಲ್‌ನಿಂದ ವ್ಯಾಪಾರ ಪೂರ್ತಿ ತಣ್ಣಗಾಗಿದೆ. 10 ಗಂಟೆಯ ನಂತರ ಇಡೀ ಬಂದಾ ನಗರ ನಿರ್ಜನ ಪ್ರದೇಶವಾಗುತ್ತದೆ" ಎನ್ನುತ್ತಾರೆ ಅವರು.

2026 ಮೇ 20ರ ಮಂಗಳವಾರ ಇಲ್ಲಿನ ತಾಪಮಾನ ಬರೋಬ್ಬರಿ 48.2°C ದಾಖಲಾಗುವ ಮೂಲಕ ಸಾರ್ವಕಾಲಿಕ ದಾಖಲೆ ಬರೆದಿದೆ. ರಾಜಸ್ಥಾನದ ಚುರು, ಜೈಸಲ್ಮೇರ್ ನಗರಗಳನ್ನು ಮೀರಿಸುವಂತೆ ಬಂದಾ ಬೆಂದು ಹೋಗುತ್ತಿದೆ. ಆದರೆ, ಈ ವಿನಾಶಕ್ಕೆ ಕೇವಲ ಜಾಗತಿಕ ಹವಾಮಾನ ಬದಲಾವಣೆ ಮಾತ್ರ ಕಾರಣವಲ್ಲ; ಬದಲಿಗೆ ಸ್ಥಳೀಯವಾಗಿ ನಡೆದ ಪರಿಸರ ಮಾರಣಹೋಮ ಮತ್ತು ಅರಣ್ಯ ನಾಶವೇ ಇದಕ್ಕೆ ಮುಖ್ಯ ಕಾರಣ ಎಂದು ಸಂಶೋಧಕರು ಆತಂಕ ವ್ಯಕ್ತಪಡಿಸಿದ್ದಾರೆ.

ಹಸಿರು ಕಸಿದುಕೊಂಡ ಕಾಂಕ್ರೀಟ್ ಕಾಡು: ಅರಣ್ಯ ನಾಶದ ಕರಾಳ ಮುಖ

ಬಂದಾ ಕೃಷಿ ವಿಶ್ವವಿದ್ಯಾಲಯದ ಅರ್ಜುನ್ ಪಿ. ವರ್ಮಾ ಅವರ ಸಂಶೋಧನೆಯ ಪ್ರಕಾರ, ಕಳೆದ ಮೂರು ದಶಕಗಳಲ್ಲಿ (1991 ರಿಂದ 2022) ಬಂದಾ ಜಿಲ್ಲೆಯು ತನ್ನ ಶೇ. 16ರಷ್ಟು ದಟ್ಟ ಅರಣ್ಯ ಪ್ರದೇಶವನ್ನು ಕಳೆದುಕೊಂಡಿದೆ. ಇತ್ತೀಚಿನ ಮತ್ತೊಂದು ವರದಿಯ ಪ್ರಕಾರ, ಕೇವಲ 20 ವರ್ಷಗಳಲ್ಲಿ ಹಸಿರು ಹೊದಿಕೆ 120 ಚದರ ಕಿಲೋಮೀಟರ್‌ನಿಂದ 95 ಚದರ ಕಿಲೋಮೀಟರ್‌ಗೆ ಕುಸಿದಿದೆ.

ಅರಣ್ಯ ನಾಶಕ್ಕೆ ಮುಖ್ಯ ಕಾರಣಗಳು:

  • ಬೃಹತ್ ಪ್ರಮಾಣದ ಗಣಿಗಾರಿಕೆ: ಗಣಿಗಾರಿಕೆಗಾಗಿ ಕಾಡುಗಳನ್ನು ನಿರ್ದಾಕ್ಷಿಣ್ಯವಾಗಿ ಕತ್ತರಿಸಲಾಗುತ್ತಿದೆ.
  • ಕೃಷಿ ಒತ್ತುವರಿ: ಅರಣ್ಯ ಭೂಮಿಯನ್ನು ಕೃಷಿ ಭೂಮಿಯನ್ನಾಗಿ ಪರಿವರ್ತಿಸುತ್ತಿರುವುದು ಹಸಿರು ವಲಯವನ್ನು ನುಂಗಿ ಹಾಕಿದೆ.
  • ಧೂಳಿನ ಕವಚ: ಕಲ್ಲು ಪುಡಿ ಮಾಡುವ ಕ್ರಷರ್ ಘಟಕಗಳಿಂದ ಏಳುವ ಧೂಳು ಇಡೀ ಮಣ್ಣು ಮತ್ತು ಸಸ್ಯ ಸಂಕುಲದ ಮೇಲೆ ಆವರಿಸಿ, ಗಿಡಮರಗಳು ಉಸಿರುಗಟ್ಟುವಂತೆ ಮಾಡಿದೆ.

ಹಸಿರು ನಾಶವಾಗಿರುವುದರಿಂದ ಮಣ್ಣಿನಲ್ಲಿ ತೇವಾಂಶ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಸಂಪೂರ್ಣ ಉಡುಗಿಹೋಗಿದೆ.

ಬೆಟ್ಟಗಳ ಬಲಿ ಮತ್ತು ನದಿಗಳ ಲೂಟಿ: ನೈಸರ್ಗಿಕ ರಕ್ಷಾಕವಚ ಧ್ವಂಸ

ಒಂದು ಕಾಲದಲ್ಲಿ ಇಲ್ಲಿನ ಹವಾಮಾನವನ್ನು ಸಮತೋಲನದಲ್ಲಿಡುತ್ತಿದ್ದ ವಿಂಧ್ಯ ಪರ್ವತ ಶ್ರೇಣಿಯ ಶೇ. 25ರಷ್ಟು ಭಾಗ ಇಂದು ಅಕ್ರಮ ಗಣಿಗಾರಿಕೆ ಮತ್ತು ಸ್ಫೋಟಗಳಿಂದಾಗಿ ಕಣ್ಮರೆಯಾಗಿದೆ! ಈ ಬೆಟ್ಟಗಳಲ್ಲಿದ್ದ ಮರಳುಗಲ್ಲುಗಳು ಮಳೆನೀರನ್ನು ಇಂಗಿಸಿ, ಅಂತರ್ಜಲವನ್ನು ವೃದ್ಧಿಸುತ್ತಿದ್ದವು. ಆದರೆ ಅತಿಯಾದ ಸ್ಫೋಟಗಳಿಂದಾಗಿ ಈ ನೈಸರ್ಗಿಕ ಜಲ ಮರುಪೂರಣ ವ್ಯವಸ್ಥೆಯೇ ಧ್ವಂಸಗೊಂಡಿದೆ.

ಮತ್ತೊಂದೆಡೆ, ಇಲ್ಲಿನ ಜೀವನಾಡಿಯಾದ 'ಕೇನ್' ನದಿಯಿಂದ ಪ್ರತಿದಿನ ಬರೋಬ್ಬರಿ 55,000 ಟನ್ ಕೆಂಪು ಮರಳನ್ನು ಬೃಹತ್ ಯಂತ್ರಗಳ ಮೂಲಕ ಅಕ್ರಮವಾಗಿ ಲೂಟಿ ಮಾಡಲಾಗುತ್ತಿದೆ. ಎನ್‌ಜಿಟಿ (ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ) ನಿಯಮಗಳನ್ನು ಗಾಳಿಗೆ ತೂರಿ ನಡೆಯುತ್ತಿರುವ ಈ ಮರಳು ದಂಧೆಯಿಂದಾಗಿ ನದಿ ಪಾತ್ರಗಳು ಬರಿದಾಗಿವೆ. ಮರಳು ನಾಶವಾಗಿ ಬಂಡೆಗಳು ಹೊರಬಿದ್ದಿರುವುದರಿಂದ, ಸೂರ್ಯನ ಶಾಖಕ್ಕೆ ಇಡೀ ನದಿ ಪಾತ್ರ ಕಾದ ಹೆಂಚಿನಂತಾಗುತ್ತಿದೆ. ಪರಿಣಾಮವಾಗಿ ಬಾವಿಗಳು ಬೇಗನೇ ಬತ್ತುತ್ತಿವೆ, ಬೋರ್‌ವೆಲ್‌ಗಳು ಪಾತಾಳ ಮುಟ್ಟುತ್ತಿವೆ.

"ಹೀಗೇ ಮುಂದುವರಿದರೆ ಮುಂದಿನ 20 ವರ್ಷಗಳಲ್ಲಿ ಬಂದಾ ಮರುಭೂಮಿಯಾಗಲಿದೆ"

ಲಕ್ನೋ ವಿಶ್ವವಿದ್ಯಾಲಯದ ಭೂವಿಜ್ಞಾನ ವಿಭಾಗದ ಪ್ರೊ. ಧ್ರುವ ಸೇನ್ ಸಿಂಗ್ ಪರಿಸ್ಥಿತಿಯನ್ನು ಹೀಗೆ ವಿವರಿಸುತ್ತಾರೆ:

"ಬಂದಾ ಇಂದು ಒಂದು 'ಹೀಟ್ ಐಲ್ಯಾಂಡ್' (ಉಷ್ಣದ ದ್ವೀಪ) ಆಗಿ ಮಾರ್ಪಟ್ಟಿದೆ. ಹಸಿರು ಇಲ್ಲ, ತೇವಾಂಶ ಇಲ್ಲ, ಜಲಮೂಲಗಳೂ ಇಲ್ಲ. ಹಗಲಿಡೀ ಕಾಯುವ ಭೂಮಿ, ರಾತ್ರಿಯಿಡೀ ಆ ಶಾಖವನ್ನು ಹೊರಹಾಕುತ್ತದೆ. ಆ ಶಾಖ ತಣ್ಣಗಾಗುವ ಮುನ್ನವೇ ಮತ್ತೆ ಸೂರ್ಯ ಉದಯಿಸುತ್ತಾನೆ. ಇದೊಂದು ಕರಗಲಾರದ ವಿಷವರ್ತುಲ."

ಬದಲಾದ ಜನರ ಬದುಕು:

  • ರಾತ್ರಿ ಕೃಷಿ: ಮಧ್ಯಾಹ್ನದ ಬಿಸಿಲು ತಡೆಯಲಾಗದೆ ರೈತರು ರಾತ್ರಿ ವೇಳೆ ಎಲ್‌ಇಡಿ ಲೈಟ್ ಹಾಕಿಕೊಂಡು ಹೊಲ ಉಳುವ ಪರಿಸ್ಥಿತಿ ಬಂದಿದೆ.
  • ಕೂಲಿ ನಷ್ಟ: ಕಾರ್ಮಿಕರು ಮಧ್ಯಾಹ್ನ ಕೆಲಸ ಮಾಡಲು ಸಾಧ್ಯವಾಗದೆ ತಮ್ಮ ಶೇ. 40ರಷ್ಟು ಕೂಲಿಯನ್ನು ಕಳೆದುಕೊಳ್ಳುತ್ತಿದ್ದಾರೆ.
  • ಅವಧಿಗೂ ಮುನ್ನ ವಲಸೆ: ಬದುಕಲು ದಾರಿಯಿಲ್ಲದೆ ಜನ ನಗರಗಳತ್ತ ವಲಸೆ ಹೋಗುತ್ತಿದ್ದಾರೆ.
  • ಟ್ರಾನ್ಸ್‌ಫಾರ್ಮರ್‌ಗಳಿಗೂ ನೀರು: ಅತಿಯಾದ ಶಾಖದಿಂದಾಗಿ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗಳು ಸ್ಫೋಟಗೊಳ್ಳುತ್ತಿದ್ದು, ಅವುಗಳನ್ನು ತಂಪಾಗಿಸಲು ಇಲಾಖೆಯ ಸಿಬ್ಬಂದಿ ದಿನವಿಡೀ ನೀರು ಸುರಿಯುತ್ತಿದ್ದಾರೆ.

ಸಂಜೆ ಸೂರ್ಯ ಮುಳುಗಿದ ಮೇಲಷ್ಟೇ ಇಲ್ಲಿ ಮತ್ತೆ ಜೀವಕಳೆ ಮರುಕಳಿಸುತ್ತದೆ. "ಈಗಲೇ ನಾವು ಎಚ್ಚೆತ್ತುಕೊಳ್ಳದಿದ್ದರೆ, ಮುಂದಿನ ದಿನಗಳಲ್ಲಿ ಬಂದಾ ಜಿಲ್ಲೆ ಮನುಷ್ಯರು ವಾಸಿಸಲು ಯೋಗ್ಯವಲ್ಲದ ಜಾಗವಾಗಲಿದೆ" ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಹಸಿರು ನಾಶ ಮತ್ತು ಮರಳು ದಂಧೆಗೆ ಬ್ರೇಕ್ ಬೀಳದಿದ್ದರೆ ಬಂದಾ ಮಾತ್ರವಲ್ಲ, ನಮ್ಮ ಮುಂದಿನ ನಗರಗಳ ಕಥೆಯೂ ಇದೇ ಆಗಲಿದೆ ಎಂಬುದಕ್ಕೆ ಇದೊಂದು ಎಚ್ಚರಿಕೆಯ ಗಂಟೆ.

ಮಾಹಿತಿ ಸೌಜನ್ಯ: ಹಿಂದುಸ್ಥಾನ್‌ ಟೈಮ್ಸ್

PARYAYA: ಇದು ಭಾರತದ ಅತಿ ತಾಪದ ಜಿಲ್ಲೆ: ಬೆಂಕಿಯ ಉಂಡೆಯಾದ ಬಂದಾ:   ಇದು ಭಾರತದ ಅತಿ ತಾಪದ ಜಿಲ್ಲೆ:   ಬೆಂಕಿಯ ಉಂಡೆಯಾದ ಬಂದಾ ಮಾನವನ ದುರಾಸೆಗೆ ಬಲಿಯಾದ ಹಸಿರು ಭಾ ರತದ ಅತ್ಯಂತ ಬಿಸಿಲಿನ ಜಿಲ್ಲೆ ಎಂಬ ಕುಖ್ಯಾತಿಗೆ ಪಾತ್ರವಾಗಿರುವ ಉತ...

Friday, May 15, 2026

PARYAYA: ಈ ನಿರ್ಧಾರವನ್ನು ಎಐ ಹೇಗೆ ಗ್ರಹಿಸಿತು ಗೊತ್ತಾ?

 ಈ ನಿರ್ಧಾರವನ್ನು ಎಐ ಹೇಗೆ ಗ್ರಹಿಸಿತು ಗೊತ್ತಾ?

ರಾಜ್ಯದ ಶಾಲೆಗಳಲ್ಲಿ ಜನಿವಾರ, ಹಿಜಬ್‌, ಉಡುದಾರ, ಪೇಟಗಳನ್ನು ಧರಿಸಲು ಕರ್ನಾಟಕ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಈ ಸುದ್ದಿಯನ್ನು ಎಐ ಹೇಗೆ ಗ್ರಹಿಸಿದೆ  ಗೊತ್ತಾ?

ಮೇಲಿನ ಚಿತ್ರವನ್ನು ಪೂರ್ತಿಯಾಗಿ ನೋಡಿ.

PARYAYA: ಈ ನಿರ್ಧಾರವನ್ನು ಎಐ ಹೇಗೆ ಗ್ರಹಿಸಿತು ಗೊತ್ತಾ?:   ಈ ನಿರ್ಧಾರವನ್ನು ಎಐ ಹೇಗೆ ಗ್ರಹಿಸಿತು ಗೊತ್ತಾ? ರಾಜ್ಯದ ಶಾಲೆಗಳಲ್ಲಿ ಜನಿವಾರ, ಹಿಜಬ್‌, ಉಡುದಾರ, ಪೇಟಗಳನ್ನು ಧರಿಸಲು ಕರ್ನಾಟಕ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಈ ಸ...