Sunday, May 10, 2026

PARYAYA: ತಾರಾ ಎಂಬ ಎಲೆಮರೆಯ ಕುಸುಮ

 ತಾರಾ ಎಂಬ ಎಲೆಮರೆಯ ಕುಸುಮ

ಮೊನ್ನೆ ಮೊನ್ನೆ ಗಿರಿನಗರದ ಶ್ರೀ ಮಹಾಗಣಪತಿಯ ಜಾತ್ರೆಯ ಆರಂಭದ ದಿನ. ನನ್ನ ಅತ್ತೆಯವರಿಗೆ ಸ್ವಲ್ಪ ಮೈ ಹುಶಾರಿಲ್ಲ ಎಂದು ಗಿರಿನಗರದ ಆಸ್ಪತ್ರೆಗೆ ದಾಖಲಿಸಿದ್ದೆವು. ಅದರ ಮರುದಿನ ಮಧ್ಯಾಹ್ನ ವೈದ್ಯರ ಸಲಹೆಯಂತೆ ಒಂದಷ್ಟು ಔಷಧಗಳನ್ನು ತರಲೆಂದು ಮೇಲಿನ ಮಹಡಿಯಿಂದ ಕೆಳಕ್ಕೆ ಇಳಿದು ಬರುತ್ತಿದ್ದೆವು.

ನೆಲ ಮಹಡಿಯಲ್ಲಿ ಲಿಫ್ಟಿನ ಎದುರಲ್ಲೇ ಆಕೆ ಗಾಲಿ ಕುರ್ಚಿಯಲ್ಲಿ ಕುಳಿತಿದ್ದಳು. ಅಚ್ಚರಿಯಾಯಿತು. ʼಏನಮ್ಮ ಇದು? ಏಕೆ ಇಲ್ಲಿ?ʼ ಅಂತ ಪ್ರಶ್ನೆ ಮಾಡಿದೆ. ʼಏನೋಪ್ಪ. ನಿನ್ನೆ ರಾತ್ರಿಯಿಂದಲೂ ಒಂದೇ ಸಮನೆ ವಾಂತಿ ಭೇದೀಪ್ಪ. ಏನ್‌ ಕಥೇನೋ ಗೊತ್ತಿಲ್ಲʼ ಅಂದಳು ಆಕೆ. ಮುಖದಲ್ಲಿ ಎಂದಿನತೆಯೇ ನಗು ಇತ್ತು, ಆದರೆ ಅದು ಕ್ಷೀಣವಾಗಿತ್ತು. ಬಳಲಿಕೆಯ ಚಿಹ್ನೆ ಎದ್ದು ಕಾಣುತ್ತಿತ್ತು. ಅಷ್ಟರಲ್ಲಿ ನರ್ಸ್‌ ಆಕೆಯನ್ನು ಮಹಡಿಗೆ ಕರೆದೊಯ್ದಳು.

ಒಂದು ಕ್ಷಣ. ಮನಸ್ಸು ನೆನಪಿನ ಆಳಕ್ಕೆ ಸರಿಯಿತು..

ನಮ್ಮ ನಿವೇಶನಗಳ ಹೋರಾಟ ಉತ್ತುಂಗದಲ್ಲಿದ್ದ ಸಮಯ. ಪ್ರಕರಣ ಹೈಕೋರ್ಟಿನಲ್ಲಿತ್ತು. ಅದಕ್ಕೂ ಮುನ್ನ ಕರ್ನಾಟಕ ಮೇಲ್ಮನವಿ ಟ್ರಿಬ್ಯೂನಲ್ಲಿನಲ್ಲಿ ತೀರ್ಪು ನಮಗೆ ವಿರುದ್ಧವಾಗಿತ್ತು. ಆ ತೀರ್ಪಿನಲ್ಲಿ ನ್ಯಾಯಾಧೀಶರು, ನಮ್ಮೆದುರು ಬಂದಿದ್ದ ಈಕೆಯ ಹೆಸರನ್ನೇ ಉಲ್ಲೇಖಿಸಿದ್ದರು. ತಪ್ಪು ಕಲ್ಪನೆಯಿಂದ ಇದ್ದಿರಬಹುದು. ಆದರೆ ಆ ಪ್ರಕರಣದಲ್ಲಿ ಇದ್ದದ್ದು ಈಕೆಯಲ್ಲ. ಪ್ರಕರಣದಲ್ಲಿ ಇದ್ದದ್ದು ಅದೇ ಹೆಸರಿನ ಬೇರೊಬ್ಬ ಮಹಿಳೆ.

ಹೈಕೋರ್ಟಿನಲ್ಲಿ ಇದೇ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲಾಗಿತ್ತು. ಸುದೀರ್ಘ ವಾದ ವಿವಾದಗಳ ಬಳಿಕ ನ್ಯಾಯಮೂರ್ತಿಗಳು ಕೆಳಗಿನ ನ್ಯಾಯಾಲಯದ ತೀರ್ಪು ಹಾಗೂ ಅದಕ್ಕೂ ಕೆಳಗಿನ ಎಸಿಯವರ (ಅಸಿಸ್ಟೆಂಟ್‌ ಕಮೀಷನರ್)‌ ಆದೇಶವನ್ನು ರದ್ದು ಪಡಿಸಿದರು. ಆದರೆ… ಪ್ರಕರಣವನ್ನು ಮತ್ತೆ ಮರುವಿಚಾರಣೆಗೆಂದು ಕೆಳಗಿನ ಕೋರ್ಟಿಗೇ ವಾಪಸ್‌ ಕಳಿಸಿ ಆದೇಶ ಮಾಡಿದ್ದರು.

ಈ ತೀರ್ಪು ನಾವು ಅಪೇಕ್ಷಿದ್ದಲ್ಲ. ನಮಗೆ ನ್ಯಾಯಬೇಕಿತ್ತು. ದಶಕಗಳ ಹೋರಾಟದ ಈ ಪ್ರಕರಣಕ್ಕೆ ಒಂದು ಅಂತಿಮತೆ ಬೇಕಿತ್ತು.. ನೂರಾರು ಮಂದಿ ನಿವೇಶನದಾರರಿಗೆ ನೆಮ್ಮದಿ ಬೇಕಿತ್ತು. ಆದರೆ ನಿವೇಶನ ನೀಡಿದ್ದ ಸೊಸೈಟಿಯ ಬದಲಾಗಿದ್ದ ಆಡಳಿತ ಮಂಡಳಿ ಹಾಗೂ ನಮ್ಮ ಪರ ವಾದಿಸುತ್ತಿದ್ದ ವಕೀಲರ ಹೊಂದಾಣಿಕೆಯ ನಿಲುವಿನ ಪರಿಣಾಮವಾಗಿ ನ್ಯಾಯಾಲಯದಿಂದ ಈ ತೀರ್ಪು ಬಂದಿತ್ತು. ಅದನ್ನು ನಾವ್ಯಾರೂ ನಿರೀಕ್ಷಿಸಿರಲಿಲ್ಲ.

ಆ ಕ್ಷಣ ಅಯೋಮಯವಾಗಿತ್ತು. ಮುಂದೇನು ಮಾಡಬೇಕು ಎಂಬ ಸ್ಪಷ್ಟತೆ ಇರಲಿಲ್ಲ. ಸೊಸೈಟಿಯ ಬದಲಾಗಿದ್ದ ಆಡಳಿತ ಮಂಡಳಿ ತಾನು ಗೆದ್ದೆನೆಂದು ಬೀಗುತ್ತಿತ್ತು.

ಆ ಕ್ಷಣದಲ್ಲಿ ನಮ್ಮ ನೆರವಿಗೆ ಬಂದಿದ್ದುದು ಇದೇ ಮಹಿಳೆ. ಈಕೆ ನೇರವಾಗಿ ಹಿರಿಯ ಅನುಭವೀ ವಕೀಲರಾಗಿದ್ದ ಸುಬ್ರಹ್ಮಣ್ಯ ಜೋಯಿಸರ ಬಳಿಗೆ ಹೋಗಿದ್ದಳು. ಅವರ ಬಳಿ ನಮ್ಮ ಕಥೆ ಹೇಳಿದ್ದರು. ಇಂತಹ ಹೊತ್ತಿನಲ್ಲಿ ಏನು ಮಾಡಬಹುದು ಎಂದು ಅವರನ್ನು ಕೇಳಿದ್ದಳು.

ಅವರು ಸಮಾಧಾನದಿಂದ ʼಮತ್ತೆ ಕೆಳಕ್ಕೆ ಹೋಗುವುದು ಸರಿಯಲ್ಲ. ಏನಿದ್ದರೂ ನ್ಯಾಯಾಲಯಗಳ ಹೋರಾಟದಲ್ಲಿ ಮೇಲಕ್ಕೆ ಹೋಗುವುದು ಉತ್ತಮ. ನನ್ನನ್ನು ಬೇಟಿಯಾಗುವಂತೆ ಅವರಿಗೆ ಹೇಳುʼ ಎಂದು ಹೇಳಿ ಈಕೆಯನ್ನು ನಮ್ಮ ಬಳಿಗೆ ಕಳುಹಿಸಿದ್ದರು.

ಬಳಿಕ ನಾವು ಸುಬ್ರಹ್ಮಣ್ಯ ಜೋಯಿಸರನ್ನು ಬೇಟಿ ಮಾಡಿದ್ದೆವು. ʼಭೂ ವಿವಾದಗಳಲ್ಲಿ ಅತ್ಯಂತ ಅನುಭವ ಇರುವ ಒಬ್ಬ ಹಿರಿಯ ವಕೀಲರಿದ್ದಾರೆ. ಕೃಷ್ಣಭಟ್‌ ಅಂತ ಅವರನ್ನು ಭೇಟಿ ಮಾಡಿʼ ಎಂದು ಸಲಹೆ ಮಾಡಿದ್ದರು.ವಯೋವೃದ್ಧ  ಕೃಷ್ಣಭಟ್‌ ಅವರನ್ನು ಭೇಟಿ ಮಾಡಿದಾಗ ಪ್ರಕರಣವನ್ನು ಹೈಕೋರ್ಟಿನ ವಿಭಾಗೀಯ ಪೀಠಕ್ಕೆ ಒಯ್ಯಲು ಅವರು ಒಪ್ಪಿದರು.

ವಿಭಾಗೀಯ ಪೀಠದಲ್ಲಿ ತಮ್ಮ ವಾಕ್ಚಾತುರ್ಯದಿಂದ ಪೀಠದ ಮನ ಒಲಿಸಿದರು. ಪ್ರಕರಣವನ್ನು ಮತ್ತೆ ಹಿಂದಕ್ಕೆ ಕಳುಹಿಸುವಂತೆ ಆಜ್ಞಾಪಿಸಿದ್ದ ಹೈಕೋರ್ಟ್‌ ಏಕ ಸದಸ್ಯ ಪೀಠದ ತೀರ್ಪನ್ನು ರದ್ದು ಪಡಿಸಿ, ಹೈಕೋರ್ಟ್‌ ಏಕ ಸದಸ್ಯ ಪೀಠವೇ ಪ್ರಕರಣದ ವಿಚಾರಣೆ ನಡೆಸಿ ಪ್ರಕರಣವನ್ನು ಇತ್ಯರ್ಥ ಪಡಿಸಬೇಕು ಎಂದು ವಿಭಾಗೀಯ ಪೀಠ ತೀರ್ಪು ನೀಡಿತು.

ಬಳಿಕ ಹಲವಾರು ವರ್ಷಗಳ ವಿಚಾರಣೆಯ ಬಳಿಕ ಏಕಸದಸ್ಯ ಪೀಠವೇ ಈ ಪ್ರಕರಣಕ್ಕೆ ಮುಕ್ತಾಯ ಹಾಡಿತು.

ಈ ನಿವೇಶನದಾರರಿಗೆ ಅನ್ಯಾಯವಾಗಬಾರದು ಎಂಬ ಕಾಳಜಿ ಈ ಮಹಿಳೆಗೆ ಎಷ್ಟಿತ್ತು ಎಂದರೆ, ವಿಭಾಗೀಯ ಪೀಠದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದ್ದಾಗ ತನ್ನ ಮಗನ ಜೊತೆಗೆ ತಾನೂ ಬಂದು ಕುಳಿತುಕೊಂಡು ನ್ಯಾಯಾಲಯದ ಕಲಾಪ ವೀಕ್ಷಿಸುತ್ತಿದ್ದಳು. ಬರಲು ಸಾಧ್ಯವಾಗದಿದ್ದರೆ ಅದೇ ದಿನ ಸಂಜೆ ಫೋನ್‌ ಮೂಲಕ ವಿಚಾರಿಸಿಕೊಳ್ಳುತ್ತಿದ್ದಳು.

ಗಿರಿಯನ್ನು ಒಂದು ಸುಸಜ್ಜಿತ ನಗರವನ್ನಾಗಿ ಮಾಡುವಲ್ಲಿ ತನ್ನ ಅಪ್ಪನಿಗೆ ಇದ್ದ ಕಾಳಜಿಯ ಗುಣಗಳೇ ಈಕೆಯಲ್ಲೂ ಮೂಡಿ ಬಂದಿದ್ದವು. ದಶಕಗಳ ಹಿಂದಿನ ಆ ದಿನಗಳಲ್ಲಿ ಈಕೆಯ ಅಪ್ಪ, ಕೇವಲ ಕುರುಚಲು ಗಿಡಗಳಿದ್ದ ಗಿರಿಯಲ್ಲಿ ಕೊಳವೆ ಬಾವಿಗಳನ್ನು ಕೊರೆಸಿ, ಅವುಗಳ ನೀರನ್ನು ಬಾವಿಯೊಂದರಲ್ಲಿ ಸಂಗ್ರಹಿಸಿ, ಟ್ಯಾಂಕಿಗೆ ಏರಿಸಿ ಕಟ್ಟಿದ ಸುಸಜ್ಜಿತ ಬಡಾವಣೆಗೆ ನೀರು ಒದಗಿಸಲು ಪಟ್ಟಿದ್ದ ಕಷ್ಟ, ರಾತ್ರಿ ಹಗಲೆನ್ನದೆ ಸೊಳ್ಳೆಗಳಿಂದ ಕಚ್ಚಿಸಿಕೊಳ್ಳುತ್ತಾ ಆ ನಗರದ ಐದು ಹಂತಗಳನ್ನು ನಿರ್ಮಿಸಿದ್ದ ಶ್ರಮ ಎಷ್ಟೆಂಬುದು ಆ ಕೆಲಸಗಳನ್ನು ಕಂಡಿದ್ದವರಿಗಷ್ಟೇ ಗೊತ್ತು. ಅವರು ನೆಟ್ಟಿದ್ದ ಮರಗಳೇ ಇಂದೂ ಈ ಪ್ರದೇಶದಲ್ಲಿ ತಂಪಾದ ನೆರಳನ್ನು ಕೊಡುತ್ತಿರುವುದು.

ಅದನ್ನೆಲ್ಲ ಕಂಡಿದ್ದ ಈಕೆ, ತನ್ನಪ್ಪ ನಿರ್ಮಿಸಿದ್ದ ಈ ನಗರಗಳಲ್ಲಿ ವಾಸವಾಗಿರಲು ಬಯಸಿದವರಿಗೆ ನೆಮ್ಮದಿ ಬಯಸಿ, ಅದೇ ಕಾಳಜಿಯೊಂದಿಗೆ ಎಲೆಮರೆಯ ಕಾಯಿಯಂತೆ ತನ್ನ ಕಾರ್ಯ ನಿರ್ವಹಿಸಿದ್ದುದು ಬಹುಮಂದಿಗೆ ಗೊತ್ತಿರಲಾರದು. ನಗರ ಕಟ್ಟುವಲ್ಲಿ ಅಪ್ಪನಿಗಿದ್ದ ದೂರದೃಷ್ಟಿ ಈಕೆಯಲ್ಲೂ ಮೈಗೂಡಿತ್ತು. ನಿವಾಸಿಗಳ ಆ ಹೋರಾಟದ ಕಥೆ ಏನೆಂಬುದು ನಮ್ಮ ʼಚಕ್ರವ್ಯೂಹʼ ಪುಸ್ತಕದಲ್ಲಿ ಇದೆ. ಆಸಕ್ತರು ಕ್ಲಿಕ್‌ ಮಾಡಿ ನೋಡಬಹುದು, ಕೊಳ್ಳಬಹುದು.

ಕೆಲ ಸಮಯದ ಹಿಂದೆ ಪತಿಯೊಂದಿಗೆ ಬೈಕಿನಲ್ಲಿ ಬರುತ್ತಿದ್ದಾಗ, ಬಿಪಿ ಇಳಿದು ಕುಸಿದು ಬಿದ್ದ ಪತಿಯನ್ನು ಸ್ವತಃ ರಿಕ್ಷಾಕ್ಕೆ ಏರಿಸಿಕೊಂಡು ಆಸ್ಪತ್ರೆಗೆ ಓಡಿ ಬಂದಿದ್ದಳು. ಆಕೆಯ ಪ್ರಸಂಗಾವಧಾನತೆಯ ಪರಿಣಾಮವಾಗಿ ಪತಿಗೆ ಪುನರ್‌ ಜನ್ಮ ಸಿಕ್ಕಿದಂತಾಗಿತ್ತು.

ಮನೆ, ತೋಟದ ಎರಡರ ವ್ಯವಹಾರಗಳನ್ನೂ ನಿಭಾಯಿಸುತ್ತಿದ್ದ ಈಕೆ ತನ್ನ ತೋಟದಿಂದಲೇ ತಂದು ತಯಾರಿಸುತ್ತಿದ್ದ ಅಪ್ಪೆ ಮಿಡಿಯ ಉಪ್ಪಿನಕಾಯಿ ಎಂದರೆ ಅಸುಪಾಸಿನವರಿಗೆಲ್ಲ ಅಚ್ಚು ಮೆಚ್ಚು. ನನ್ನ ಮಗ ಆಸ್ಪತ್ರೆಗೆ ದಾಖಲಾಗಿದ್ದ ಸಂದರ್ಭದಲ್ಲಿ ತಾನೇ ಊಟ ತಿಂಡಿ ತಯಾರಿಸಿ ಅವನಿಗೆ ಕಳುಹಿಸಿ ಕೊಡುತ್ತಿದ್ದಳು.

ಅಂದ ಹಾಗೆ, ಈಕೆ ಗಾಲಿ ಕುರ್ಚಿಯಲ್ಲಿ ಕಂಡ ಕಥೆ ಹೇಳ ಹೊರಟಿದ್ದೆನಲ್ಲ. ಹೌದು. ಅಂದು ಆಸ್ಪತ್ರೆಯಲ್ಲಿ ಗಾಲಿ ಕುರ್ಚಿಯಲ್ಲಿ ಕಂಡಿದ್ದ ಆಕೆ ಆ ದಿನ ಇಡೀ ಅದೇ ಆಸ್ಪತ್ರೆಯಲ್ಲಿ ಇದ್ದಳು. ಬಳಿಕ ಆರೋಗ್ಯ ಇನ್ನಷ್ಟು ಹದಗೆಟ್ಟಿತು ಎಂದು ಬೇರೊಂದು ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ಸೇರಿಸಿದರು.

ಆರನೇ ದಿನ ೨೦೨೬ ಏಪ್ರಿಲ್‌ ೨೮ರ ಮಂಗಳವಾರದ ದಿನ, ʼಇಲ್ಲಿರುವುದು ಸುಮ್ಮನೇ, ಅಲ್ಲಿ ಇಹುದು ನಮ್ಮನೆʼ ಎಂದು ಈಕೆ, ಪತಿ, ತಮ್ಮಂದಿರು, ಪುತ್ರ, ಸೊಸೆ, ಮೊಮ್ಮಗನನ್ನು ಬಿಟ್ಟು ತಾರಾಲೋಕಕ್ಕೆ ಪಯಣ ಬೆಳೆಸಿದ್ದಳು- ಮಲಗಿದ್ದ ವ್ಯಕ್ತಿ ಚಾಪೆಯಿಂದ ಎದ್ದು ನಡೆದುಹೋದ ಹಾಗೆ, ಈಗಲೂ ನಂಬಲೂ ಸಾಧ್ಯವಾಗದ ರೀತಿ!.

ಈಕೆಯ ಹೆಸರು ಹೇಳಲಿಲ್ಲವಲ್ಲ? ಈಕೆಯ ಹೆಸರು ಬಿ.ಕೆ. ತಾರಾ. ಅಂತಿಮ ನಮನಗಳು ತಾರಾ.

-ನೆತ್ರಕೆರೆ ಉದಯಶಂಕರ

PARYAYA: ತಾರಾ ಎಂಬ ಎಲೆಮರೆಯ ಕುಸುಮ:   ತಾರಾ ಎಂಬ ಎಲೆಮರೆಯ ಕುಸುಮ ಮೊ ನ್ನೆ ಮೊನ್ನೆ ಗಿರಿನಗರದ ಶ್ರೀ ಮಹಾಗಣಪತಿಯ ಜಾತ್ರೆಯ ಆರಂಭದ ದಿನ. ನನ್ನ ಅತ್ತೆಯವರಿಗೆ ಸ್ವಲ್ಪ ಮೈ ಹುಶಾರಿಲ್ಲ ಎಂದು ಗಿರಿನಗರದ ಆಸ್ಪತ್...

Tuesday, May 5, 2026

PARYAYA: ಅಂಗಾರಕ ಸಂಕಷ್ಟಿ ಪೂಜಾ

 ಅಂಗಾರಕ ಸಂಕಷ್ಟಿ ಪೂಜಾ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ೨೦೨೬ ಮೇ ೫ರ ಮಂಗಳವಾರ ವೈಶಾಖ ಮಾಸದ ಶ್ರೀ ಅಂಗಾರಕ ಸಂಕಷ್ಟಿ ಪೂಜೆಯನ್ನು ಶ್ರದ್ಧಾ ಭಕ್ತಿಯೊಂದಿಗೆ ನೆರವೇರಿಸಲಾಯಿತು.


ಭಕ್ತರು ಶ್ರೀ ಮಹಾಗಣಪತಿಗೆ ಮೋದಕ ಹಾರ, ಕರ್ಜಿಕಾಯಿ ಹಾರ ಅರ್ಪಣೆಯೊಂದಿಗೆ ಸಂಗೀತ ಸೇವೆಯನ್ನೂ ಸಲ್ಲಿಸಿದರು.


೨೦೨೬ ಮೇ ೧ರ ಶುಕ್ರವಾರ ಹುಣ್ಣಿಮೆಯ ದಿನ ದೇವಸ್ಥಾನದಲ್ಲಿ ವೈಶಾಖ ಮಾಸದ ಶ್ರೀ ಸತ್ಯ ನಾರಾಯಣ ಪೂಜೆಯನ್ನೂ ನೆರವೇರಿಸಲಾಗಿತ್ತು.

ಭಕ್ತರು ಭಾರೀ ಸಂಖ್ಯೆಯಲ್ಲಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು.


ಈ ಸಂದರ್ಭದ ಕೆಲವು ಚಿತ್ರಗಳು ಹಾಗೂ ವಿಡಿಯೋ ಇಲ್ಲಿವೆ. ಮಹಾಮಂಗಳಾರತಿಯವಿಡಿಯೋ ನೋಡಲು ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ.

PARYAYA: ಅಂಗಾರಕ ಸಂಕಷ್ಟಿ ಪೂಜಾ:   ಅಂಗಾರಕ ಸಂಕಷ್ಟಿ ಪೂಜಾ ಬೆಂ ಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್...

Sunday, April 26, 2026

PARYAYA: ಗಿರಿನಗರ ಶ್ರೀ ಮಹಾಗಣಪತಿ ರಥೋತ್ಸವ

 ಗಿರಿನಗರ ಶ್ರೀ ಮಹಾಗಣಪತಿ ರಥೋತ್ಸವ

ಬೆಂಗಳೂರು ಗಿರಿನಗರದ ಒಡೆಯ ಶ್ರೀ ಮಹಾಗಣಪತಿಯ ರಥೋತ್ಸವವು ೨೦೨೬ ಏಪ್ರಿಲ್‌ ೨೬ರ ಭಾನುವಾರ ಸಡಗರದೊಂದಿಗೆ ನೆರವೇರಿತು.

ಶ್ರೀ ರಾಮಚಂದ್ರಾಪುರ ಮಠದ ಶ್ರೀ ಮಹಾಗಣಪತಿ ದೇವಾಲಯದಲ್ಲಿ ಶ್ರೀ ಮಹಾಗಣಪತಿ ಜಾತ್ರೆಯ ಪ್ರಯುಕ್ತ ಏಪ್ರಿಲ್‌ ೨೨ರಿಂದ ವಿವಿಧ ಕಾರ್ಯಕ್ರಮಗಳು ನಡೆದವು. ಏಪ್ರಿಲ್‌ ೨೨ರಂದು ನವಗ್ರಹ ಶಾಂತಿ ಹೋಮ, ಅಥರ್ವ ಶೀರ್ಷ ಹೋಮ, ಏಪ್ರಿಲ್‌ ೨೩ರಂದು ಅಥರ್ವ ಶೀರ್ಷ ಹೋಮ, ದುರ್ಗಾ ದೀಪ ನಮಸ್ಕಾರ, ಏಪ್ರಿಲ್‌ ೨೪ರಂದು ಸುಬ್ರಹ್ಮಣ್ಯ ಹೋಮ, ರಂಗಪೂಜೆ, ಏಪ್ರಿಲ್‌ ೨೫ರಂದು ನಾಗಮೂಲಮಂತ್ರ ಹೋಮ, ಆಶ್ಲೇಷಬಲಿ, ಪಲ್ಲಕ್ಕಿ ಉತ್ಸವ ನಡೆದವು.

ಏಪ್ರಿಲ್‌ ೨೬ರಂದು ಅಥರ್ವಶೀರ್ಷ ಹೋಮ, ರಥೋತ್ಸವ, ದೇವನೃತ್ಯ ಕಾರ್ಯಕ್ರಮಗಳು ನಡೆದವು. ಏಪ್ರಿಲ್‌ ೨೭ರಂದು ಸಹಸ್ರಮೋದಕ ಅಥರ್ವಶೀರ್ಷ ಹವನ ಹಾಗೂ ಅವಭೃತದೊಂದಿಗೆ ಜಾತ್ರೆ ಮುಕ್ತಾಯ.

ಭಾನುವಾರ ನಡೆದ ಸಂಭ್ರಮದ ರಥೋತ್ಸವದಲ್ಲಿ ಭಾರೀ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡರು.

ಈ ಸಂದರ್ಭದ ಕೆಲವು ವಿಡಿಯೋಗಳು ಹಾಗೂ ಚಿತ್ರಗಳು ಇಲ್ಲಿವೆ.

PARYAYA: ಗಿರಿನಗರ ಶ್ರೀ ಮಹಾಗಣಪತಿ ರಥೋತ್ಸವ:   ಗಿರಿನಗರ ಶ್ರೀ ಮಹಾಗಣಪತಿ ರಥೋತ್ಸವ ಬೆಂ ಗಳೂರು ಗಿರಿನಗರದ ಒಡೆಯ ಶ್ರೀ ಮಹಾಗಣಪತಿಯ ರಥೋತ್ಸವವು ೨೦೨೬ ಏಪ್ರಿಲ್‌ ೨೬ರ ಭಾನುವಾರ ಸಡಗರದೊಂದಿಗೆ ನೆರವೇರಿತು. ಶ್ರೀ ರಾಮ...

Saturday, April 25, 2026

PARYAYA: ಸೋಲಾರ್‌ ಕ್ಷೇತ್ರಲ್ಲಿ ದೊಡ್ಡ ಕ್ರಾಂತಿ: ಬೆಶಿಲಿದ್ದರೂ ಕರೆ...

ಸೋಲಾರ್‌ ಕ್ಷೇತ್ರಲ್ಲಿ ದೊಡ್ಡ ಕ್ರಾಂತಿ: ಬೆಶಿಲಿದ್ದರೂ ಕರೆಂಟು,
  
ಮಳೆ ಬಂದರೂ ಕರೆಂಟು!

ಸೋಲಾರ್‌ ಕ್ಷೇತ್ರಲ್ಲಿ ದೊಡ್ಡ ಕ್ರಾಂತಿ: ಬೆಶಿಲಿದ್ದರೂ ಕರೆಂಟು,
  
ಮಳೆ ಬಂದರೂ ಕರೆಂಟು!

ಬ್ಯಾಟ್ರಿಯ ಚಾರ್ಜು ಮಾಡಿ ಉಪಯೋಗಿಸುವ ಹಾಂಗೆ ಮತ್ತೆ ಮತ್ತೆ ಉಪಯೋಗಿಸುಲೆ ಸಾಧ್ಯ ಅಪ್ಪಂತ ಇಂಧನದ ವಿಷಯಲ್ಲಿ ಹವಾಮಾನ ಹೇಳ್ತದು ಯಾವಾಗಲೂ ಒಂದು ದೊಡ್ಡ ಸವಾಲು. ಸಾಧಾರಣ ಮೋಡ ಕವಿದ ವಾತಾವರಣ ಇಪ್ಪಗ ಅಥವಾ ಮಳೆ ಬಪ್ಪಗ ಸೋಲಾರ್ ಪ್ಯಾನೆಲುಗ ಕೈಕೊಡ್ತವು ಹೇಳ್ತದು ಎಂಗೊಗೆಲ್ಲ ಗೊಂತಿಪ್ಪ ವಿಷಯವೇ. ಆದರೆ ಈಗ ವಿಜ್ಞಾನಿಗೋ ಇದಕ್ಕೆ ಒಂದು ಬಾರಿ ಲಾಯ್ಕದ ಉಪಾಯ ಕಂಡುಹಿಡುದ್ದವು. ಬೆಶಿಲು ಇಪ್ಪಗ ಸೂರ್ಯಂದ, ಮಳೆ ಬಪ್ಪಗ ಮಳೆ ನೀರ ಹನಿಂದ ಕರೆಂಟ್ ತಯಾರು ಮಾಡುವ ಹೈಬ್ರಿಡ್ []

ಮುಂದೆ ಓದಿ »

ಇಲ್ಲವೇ ಪರ್ಯಾಯ.ಕಾಮ್‌ ವೆಬ್‌ ಸೈಟಿನ ಹವ್ಯಕ ಪುಟ ನೋಡಿ 

ಚಂದ್ರನ ಪ್ರವಾಸ ಯಶಸ್ವಿ

ಮೊನ್ನೆ ನಾವೊಂದು ಸುದ್ದಿ ಮಾತಾಡಿದ್ದಪ್ಪೋ, ಅಮೆರಿಕದ ಬಾಹ್ಯಾಕಾಶ ಅಧ್ಯಯನ ಸಂಸ್ಥೆ, ನಾಸಾ ಚಂದ್ರನ ಪ್ರವಾಸಕ್ಕೆ ಹೇಳಿ ನಾಲ್ಕು ಜನರ ಕಳಿಸಿದ್ದು ಹೇಳಿ. ಪ್ರವಾಸ ಯಶಸ್ವಿ ಆಯಿದು. ನಾಲ್ಕು ಜೆನವೂ ಯಶಸ್ವಿಯಾಗಿ ಭೂಮಿಗೆ ಬೈಂದವು. ಇದು ಜಗತ್ತಿನ ಬಾಹ್ಯಾಕಾಶ ಕ್ಷೇತ್ರಲ್ಲಿ ಒಂದು ಐತಿಹಾಸಿಕ ಮೈಲಿಗಲ್ಲು. 2028ಕ್ಕೆ ಚಂದ್ರನ ನೆಲಲ್ಲಿ ಇಳಿವಲೆ, ನಂತ್ರ ಮಂಗಳ ಗ್ರಹದ ಹೊಡೆಂಗೆ ಹೋಪಲೆ ಪ್ರವಾಸಂದ ನಾಸಾಕ್ಕೆ ಅನುಕೂಲ ಆವುತ್ತು. ಆರ್ಟೆಮಿಸ್‌-2 ಹೇಳ್ತ ಯೋಜನೆಯ ಭಾಗವಾಗಿ ಕ್ರಿಸ್ಟಿನಾ ಕೋಚ್‌, ಜೆರೆಮಿ ಹ್ಯಾನ್ಸನ್‌, […]

ಮುಂದೆ ಓದಿ »

 ಇಲ್ಲವೇ ಪರ್ಯಾಯ.ಕಾಮ್‌ ವೆಬ್‌ ಸೈಟಿನ ಹವ್ಯಕ ಪುಟ ನೋಡಿ

PARYAYA: ಸೋಲಾರ್‌ ಕ್ಷೇತ್ರಲ್ಲಿ ದೊಡ್ಡ ಕ್ರಾಂತಿ: ಬೆಶಿಲಿದ್ದರೂ ಕರೆ...:   ಸೋಲಾರ್‌ ಕ್ಷೇತ್ರಲ್ಲಿ ದೊಡ್ಡ ಕ್ರಾಂತಿ: ಬೆಶಿಲಿದ್ದರೂ ಕರೆಂಟು ,  ಮಳೆ ಬಂದರೂ ಕರೆಂಟು! ಸೋಲಾರ್‌ ಕ್ಷೇತ್ರಲ್ಲಿ ದೊಡ್ಡ ಕ್ರಾಂತಿ: ಬೆಶಿಲಿದ್ದರೂ ಕರೆಂಟು ,...

Monday, April 20, 2026

PARYAYA: ಮಳೆಯ ಹನಿಯಿಂದಲೂ ವಿದ್ಯುತ್! ಸೌರಶಕ್ತಿ ಕ್ಷೇತ್ರದಲ್ಲಿ ಹೊಸ...

 ಮಳೆಯ ಹನಿಯಿಂದಲೂ ವಿದ್ಯುತ್ಸೌರಶಕ್ತಿ ಕ್ಷೇತ್ರದಲ್ಲಿ ಹೊಸ ಕ್ರಾಂತಿ!

ವೀಕರಿಸಬಹುದಾದ ಇಂಧನ ಮೂಲಗಳ ಬಳಕೆಯಲ್ಲಿ ಹವಾಮಾನವು ಯಾವಾಗಲೂ ಒಂದು ದೊಡ್ಡ ಸವಾಲು. ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಅಥವಾ ಮಳೆ ಬಂದರೆ ಸೋಲಾರ್ ಪ್ಯಾನೆಲುಗಳು ಕೈಕೊಡುತ್ತವೆ ಎಂಬುದು ನಮಗೆಲ್ಲರಿಗೂ ತಿಳಿದಿರುವ ವಿಷಯಆದರೆ ಈಗ ಸಂಶೋಧಕರು  ಸಮಸ್ಯೆಗೆ ಅದ್ಭುತ ಪರಿಹಾರ ಕಂಡುಕೊಂಡಿದ್ದಾರೆಬಿಸಿಲಿದ್ದಾಗ ಸೂರ್ಯನಿಂದಮಳೆ ಬಂದಾಗ ನೀರಿನ ಹನಿಗಳಿಂದ ವಿದ್ಯುತ್ ತಯಾರಿಸುವ 'ಹೈಬ್ರಿಡ್ ಎನರ್ಜಿ ಹಾರ್ವೆಸ್ಟಿಂಗ್ ಸಿಸ್ಟಮ್' ಅಭಿವೃದ್ಧಿಪಡಿಸಿದ್ದಾರೆ!

ಮಳೆ ಹನಿಯಿಂದ ವಿದ್ಯುತ್ ಹೇಗೆ ಸಾಧ್ಯ?

ಸೌರಶಕ್ತಿಯು ಕೇವಲ ಬಿಸಿಲಿಗೆ ಸೀಮಿತ ಎಂಬ ಕಾಲ ಈಗ ಹೋಯಿತು ಹೊಸ ಹೈಬ್ರಿಡ್ ಪ್ಯಾನಲ್‌ಗಳು 'ಟ್ರೈಬೋಎಲೆಕ್ಟ್ರಿಕ್ ಎಫೆಕ್ಟ್' (Triboelectric Effect) ಎಂಬ ತಂತ್ರಜ್ಞಾನದ ಮೇಲೆ ಕೆಲಸ ಮಾಡುತ್ತವೆ.

  • ಮಳೆಯ ಹನಿಗಳು ಪ್ಯಾನೆಲಿನ ವಿಶೇಷ ಮೇಲ್ಮೈಗೆ ಬಡಿದಾಗ ಉಂಟಾಗುವ ಘರ್ಷಣೆಯಿಂದ (Friction) ವಿದ್ಯುತ್ ಉತ್ಪತ್ತಿಯಾಗುತ್ತದೆ.
  • ಕೇವಲ 100 ನ್ಯಾನೋಮೀಟರ್ ದಪ್ಪದ ಪೇಟೆಂಟ್ ಪಡೆದ ತೆಳುವಾದ ಫಿಲ್ಮನ್ನು  ಪ್ಯಾನೆಲುಗಳ ಮೇಲೆ ಅಳವಡಿಸಲಾಗಿದ್ದುಇದು ಮಳೆಯ ಒಂದೇ ಒಂದು ಹನಿಯಿಂದ ಬರೋಬ್ಬರಿ 110 ವೋಲ್ಟ್ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.
  • ಇದು ಪ್ಯಾನೆಲಿನ ಒಳಗಿನ ಸೂಕ್ಷ್ಮ ಭಾಗಗಳಿಗೆ ನೀರು ತಗುಲದಂತೆ ರಕ್ಷಣೆ ನೀಡುವುದಲ್ಲದೆಮಳೆಯ ಸಮಯದಲ್ಲಿಯೂ ಸ್ಥಿರವಾದ ವಿದ್ಯುತ್ ಪೂರೈಕೆಯನ್ನು ಖಚಿತಪಡಿಸುತ್ತದೆ.

ಪೆರೋವ್‌ಸ್ಕೈಟ್ (Perovskite) ಎಂಬ ಅದ್ಭುತ ವಸ್ತು

 ಹೈಬ್ರಿಡ್ ವ್ಯವಸ್ಥೆಯಲ್ಲಿ ಸಾಂಪ್ರದಾಯಿಕ ಸಿಲಿಕಾನ್ ಬದಲಿಗೆ 'ಹ್ಯಾಲೈಡ್ ಪೆರೋವ್‌ಸ್ಕೈಟ್' ಎಂಬ ಸಂಶ್ಲೇಷಿತ ವಸ್ತುಗಳನ್ನು ಬಳಸಲಾಗಿದೆ.

  • ಹೆಚ್ಚಿನ ದಕ್ಷತೆ: ಇವು ಸಾಮಾನ್ಯ ಸೋಲಾರ್ ಪ್ಯಾನೆಲುಗಳಿಗಿಂತ ವೇಗವಾಗಿ ಮತ್ತು ಹೆಚ್ಚು ಪರಿಣಾಮಕಾರಿಯಾಗಿ ಸೌರಶಕ್ತಿಯನ್ನು ಹೀರಿಕೊಳ್ಳುತ್ತವೆ.
  • ರಕ್ಷಣಾತ್ಮಕ ಕವಚ: ಸೆವಿಲ್ಲೆ ಇನ್ಸ್ಟಿಟ್ಯೂಟ್ ಆಫ್ ಮೆಟೀರಿಯಲ್ಸ್ ಸೈನ್ಸ್ (ICMS) ಸಂಶೋಧಕರು ವಿಶೇಷ 'ಪ್ಲಾಸ್ಮಾ-ವರ್ಧಿತತಂತ್ರಜ್ಞಾನದ ಮೂಲಕ  ಪ್ಯಾನೆಲುಗಳ ಮೇಲೆ ರಕ್ಷಣಾತ್ಮಕ ಪದರವನ್ನು ನಿರ್ಮಿಸಿದ್ದಾರೆಇದರಿಂದ ಪ್ಯಾನೆಲುಗಳು ಮಳೆಯಲ್ಲಿ ನೆನೆದರೂ ಹಾಳಾಗುವುದಿಲ್ಲ ಮತ್ತು ಸೂರ್ಯನ ಬೆಳಕನ್ನು ಸಮರ್ಥವಾಗಿ ಬಳಸಿಕೊಳ್ಳುತ್ತವೆ.

ಸ್ಮಾರ್ಟ್ ಸಿಟಿಗಳಿಗೆ  ತಂತ್ರಜ್ಞಾನ ವರದಾನ

 ಹೈಬ್ರಿಡ್ ಪ್ಯಾನಲ್‌ಗಳು ಭವಿಷ್ಯದ 'ಸ್ಮಾರ್ಟ್ ಸಿಟಿ'ಗಳ ಬೆನ್ನೆಲುಬಾಗಲಿವೆಇವುಗಳ ಪ್ರಮುಖ ಉಪಯೋಗಗಳು ಹೀಗಿವೆ:

  1. ನಿರಂತರ ವಿದ್ಯುತ್: ಹವಾಮಾನ ಯಾವುದೇ ಇರಲಿಇವು ನಿರಂತರವಾಗಿ ಕೆಲಸ ಮಾಡುತ್ತವೆ.
  2. ಸ್ವಯಂಚಾಲಿತ ಸೆನ್ಸರ್ಸ್: ಹವಾಮಾನ ಕೇಂದ್ರಗಳು ಮತ್ತು ರಸ್ತೆ ದೀಪಗಳು ಮಳೆ ಅಥವಾ ಬಿಸಿಲು ಎನ್ನದೆ ಕಾರ್ಯನಿರ್ವಹಿಸಲು ಇದು ಸಹಕಾರಿ.
  3. ದೂರದ ಪ್ರದೇಶಗಳಿಗೆ ಅನುಕೂಲ: ಸಮುದ್ರದ ಮಧ್ಯದಲ್ಲಿರುವ ಸಂಶೋಧನಾ ಕೇಂದ್ರಗಳು ಅಥವಾ ತಲುಪಲು ಕಷ್ಟವಿರುವ ಸೇತುವೆಗಳ ತಪಾಸಣಾ ಸಾಧನಗಳಿಗೆ ಇದು ನಿರಂತರ ವಿದ್ಯುತ್ ಒದಗಿಸುತ್ತದೆ.

ಪರಿಸರ ಸ್ನೇಹಿ ಮತ್ತು ಬಾಳಿಕೆ ಬರುವ ತಂತ್ರಜ್ಞಾನ

ಯುರೋಪಿಯನ್ ರಿಸರ್ಚ್ ಕೌನ್ಸಿಲ್ (ERC) ಪ್ರಕಾರ ತಂತ್ರಜ್ಞಾನವು ಸಾಂಪ್ರದಾಯಿಕ ಬ್ಯಾಟರಿಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆಬ್ಯಾಟರಿಗಳು ಪರಿಸರಕ್ಕೆ ಹಾನಿಕಾರಕ ಮತ್ತು ಅವುಗಳ ಜೀವಿತಾವಧಿ ಕಡಿಮೆಆದರೆ  ಹೈಬ್ರಿಡ್ ಪ್ಯಾನೆಲುಗಳು ನೈಸರ್ಗಿಕ ಮೂಲಗಳಿಂದಲೇ (ಬಿಸಿಲು ಮತ್ತು ಮಳೆನೇರವಾಗಿ ಇಂಧನ ಪಡೆಯುವುದರಿಂದಇದು ಸುಸ್ಥಿರ ಮತ್ತು ನಂಬಿಕಸ್ತ ಇಂಧನ ಮೂಲವಾಗಿದೆ.

ನೋಡ್ತಾ ಇರಿ.. ಮಳೆ ಬಂದರೆ ಪವರ್ ಕಟ್ ಆಗುವ ಕಾಲ ಹೋಗಿಮಳೆ ಬಂದಷ್ಟೂ ಹೆಚ್ಚು ವಿದ್ಯುತ್ ಸಿಗುವ ಕಾಲ ಹತ್ತಿರದಲ್ಲಿದೆಹವಾಮಾನದ ಹಂಗಿಲ್ಲದ  'ಸ್ವಾಯತ್ತ ಇಂಧನ ವ್ಯವಸ್ಥೆ'ಯು ಇಂಧನ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲಾಗಲಿದೆ.

ಆದರೆ ಒಂದು ಪ್ರಶ್ನೆ ಮೂಡುವುದು ಸಹಜ.

ಇದನ್ನು ಪ್ರಾಯೋಗಿಕವಾಗಿ ರುಜುವಾತು ಪಡಿಸಲಾಗಿದೆಯೇ?

ಹೌದು ತಂತ್ರಜ್ಞಾನವನ್ನು ಕೇವಲ ಸೈದ್ಧಾಂತಿಕವಾಗಿ ಮಾತ್ರವಲ್ಲದೆಪ್ರಾಯೋಗಿಕವಾಗಿ ರುಜುವಾತು ಪಡಿಸಲಾಗಿದೆ.

ಇದಕ್ಕೆ ಸಂಬಂಧಿಸಿದ ಸಂಶೋಧನೆಯನ್ನು ಪ್ರಮುಖವಾಗಿ ಸ್ಪೇನ್ ದೇಶದ ವಿಜ್ಞಾನಿಗಳ ತಂಡ ಯಶಸ್ವಿಯಾಗಿ ನಡೆಸಿದೆಅದರ ವಿವರಗಳು ಇಲ್ಲಿವೆ:

ಯಾರು ಸಂಶೋಧನೆ ನಡೆಸಿದ್ದಾರೆ?

 ಯೋಜನೆಯನ್ನು ಸ್ಪೇನ್‌ ದೇಶದ ಹೆಸರಾಂತ ಸಂಶೋಧನಾ ಸಂಸ್ಥೆಗಳ ವಿಜ್ಞಾನಿಗಳ ತಂಡ ಜಂಟಿಯಾಗಿ ಕೈಗೊಂಡಿದೆ:

  1. ಸೆವಿಲ್ಲೆ ಇನ್ಸ್ಟಿಟ್ಯೂಟ್ ಆಫ್ ಮೆಟೀರಿಯಲ್ಸ್ ಸೈನ್ಸ್ (ICMS): ಇದು ಸ್ಪ್ಯಾನಿಷ್ ನ್ಯಾಷನಲ್ ರಿಸರ್ಚ್ ಕೌನ್ಸಿಲ್ (CSIC) ಮತ್ತು ಸೆವಿಲ್ಲೆ ವಿಶ್ವವಿದ್ಯಾಲಯದ ಜಂಟಿ ಸಂಶೋಧನಾ ಕೇಂದ್ರವಾಗಿದೆ.
  2. ತಂಡದ ನೇತೃತ್ವ: ಮುಖ್ಯವಾಗಿ ಸೆವಿಲ್ಲೆ ವಿಶ್ವವಿದ್ಯಾಲಯದ ಪ್ರೊಫೆಸರ್ ಅಗುಸ್ಟಿನ್ ರೊಡ್ರಿಗಸ್ ಗ್ಯಾನ್ (Agustín Rodríguez González) ಮತ್ತು ಅವರ ತಂಡ  ಸಂಶೋಧನೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ.

ಎಲ್ಲಿ ಮತ್ತು ಹೇಗೆ ರುಜುವಾತುಪಡಿಸಲಾಯಿತು?

  • ಸ್ಥಳ: ಸ್ಪೇನ್‌ನ ಸೆವಿಲ್ಲೆಯಲ್ಲಿರುವ ICMS ಪ್ರಯೋಗಾಲಯಗಳಲ್ಲಿ  ಪರೀಕ್ಷೆಗಳನ್ನು ನಡೆಸಲಾಗಿದೆ.
  • ಪ್ರಯೋಗದ ವಿಧಾನ: ವಿಜ್ಞಾನಿಗಳು ಪ್ಲಾಸ್ಮಾ ತಂತ್ರಜ್ಞಾನವನ್ನು (Plasma-enhanced chemical vapour deposition - PECVD) ಬಳಸಿ ಸೌರ ಕೋಶಗಳ ಮೇಲೆ ಕೇವಲ 100 ನ್ಯಾನೋಮೀಟರ್ ದಪ್ಪದ ರಕ್ಷಣಾತ್ಮಕ ಪದರವನ್ನು ನಿರ್ಮಿಸಿದರುಇದು ಮಳೆಯ ಹನಿ ಬಿದ್ದಾಗ 'ಟ್ರೈಬೋಎಲೆಕ್ಟ್ರಿಕ್ಪರಿಣಾಮವನ್ನು ಉಂಟುಮಾಡಿ ವಿದ್ಯುತ್ ಉತ್ಪಾದಿಸುವುದನ್ನು ಸಾಬೀತುಪಡಿಸಿತು.
  • ಫಲಿತಾಂಶ: ಕೇವಲ ಒಂದು ಮಳೆಯ ಹನಿಯಿಂದ 110 ವೋಲ್ಟ್‌ಗಳಿಗಿಂತ ಹೆಚ್ಚು ವಿದ್ಯುತ್ ಉತ್ಪತ್ತಿಯಾಗುವುದನ್ನು ಅವರು ದಾಖಲಿಸಿದ್ದಾರೆ ಸಂಶೋಧನೆಯು ಅತ್ಯಂತ ಪ್ರತಿಷ್ಠಿತ ವಿಜ್ಞಾನ ಪತ್ರಿಕೆಯಾದ 'ನ್ಯಾನೋ ಎನರ್ಜಿ' (Nano Energy) ಯಲ್ಲಿ ಪ್ರಕಟಗೊಂಡಿದೆ.

ಪ್ರಮುಖ ಸಂಸ್ಥೆಗಳ ಬೆಂಬಲ

 ಸಂಶೋಧನೆಗೆ ಯುರೋಪಿಯನ್ ರಿಸರ್ಚ್ ಕೌನ್ಸಿಲ್ (ERC) ಧನಸಹಾಯ ನೀಡಿದೆಇದು  ತಂತ್ರಜ್ಞಾನದ ಅಧಿಕೃತತೆ ಮತ್ತು ಮಹತ್ವವನ್ನು ಪುಷ್ಟೀಕರಿಸುತ್ತದೆಸದ್ಯಕ್ಕೆ ಇದು ಪ್ರಯೋಗಾಲಯ ಮಟ್ಟದಲ್ಲಿ ಯಶಸ್ವಿಯಾಗಿದ್ದುಇದನ್ನು ಬೃಹತ್ ಪ್ರಮಾಣದಲ್ಲಿ ವಾಣಿಜ್ಯ ಬಳಕೆಗೆ ತರುವ ಪ್ರಯತ್ನಗಳು ನಡೆಯುತ್ತಿವೆ.

ನೆತ್ರಕೆರೆ ಉದಯಶಂಕರ

ಇಲ್ಲವೇ ಪರ್ಯಾಯ.ಕಾಮ್‌ ವೆಬ್‌ ಸೈಟಿನ ಲೇಖನಗಳು ಪುಟ ಕ್ಲಿಕ್‌ ಮಾಡಿರಿ.
PARYAYA: ಮಳೆಯ ಹನಿಯಿಂದಲೂ ವಿದ್ಯುತ್! ಸೌರಶಕ್ತಿ ಕ್ಷೇತ್ರದಲ್ಲಿ ಹೊಸ...:   ಮಳೆಯ ಹನಿಯಿಂದಲೂ ವಿದ್ಯುತ್ ! ಸೌರಶಕ್ತಿ ಕ್ಷೇತ್ರದಲ್ಲಿ ಹೊಸ ಕ್ರಾಂತಿ ! ನ ವೀಕರಿಸಬಹುದಾದ ಇಂಧನ ಮೂಲಗಳ ಬಳಕೆಯಲ್ಲಿ ಹವಾಮಾನವು ಯಾವಾಗಲೂ ಒಂದು ದೊಡ್ಡ ...