Kannada Paryaya
Monday, September 7, 2026
PARYAYA: ಹಳೆಯ ಡೀಸೆಲ್ ಲಾರಿಗಳಿಗೆ ಹೊಸ ಜೀವ: ಐಐಟಿ-ದೆಹಲಿಯ ಕ್ರಾಂತಿ...
Saturday, September 5, 2026
PARYAYA: ಶ್ರೀ ಕೃಷ್ಣ ಜನ್ಮಾಷ್ಟಮಿ
ಶ್ರೀ ಕೃಷ್ಣ ಜನ್ಮಾಷ್ಟಮಿ
ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ೨೦೨೬ ಸೆಪ್ಟೆಂಬರ್ ೪ರ ಶುಕ್ರವಾರ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಶ್ರದ್ಧಾ ಭಕ್ತಿಯೊಂದಿಗೆ ಆಚರಿಸಲಾಯಿತು.
ಕಥಾ ಶ್ರವಣ, ಪೂಜೆ, ಕುಂಕುಮಾರ್ಚನೆಯನ್ನೂ ನೆರವೇರಿಸಲಾಯಿತು. ಶ್ರೀ ಕೃಷ್ಣೋಜಿರಾವ್ ಮತ್ತು ಕುಟುಂಬ ಸದಸ್ಯರು ಅಲಂಕಾರ, ಪ್ರಸಾದ ಸೇವೆಯ ವ್ಯವಸ್ಥೆ ಮಾಡಿದ್ದರು.
ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪೂಜೆ, ಭಜನೆ, ಕುಂಕುಮಾರ್ಚನೆಯಲ್ಲಿ ಪಾಲ್ಗೊಂಡರು. ಪುಟಾಣಿ ಮಕ್ಕಳು ಬಾಲಕೃಷ್ಣ, ರಾಧೆ ವೇಷಗಳನ್ನು ಧರಿಸಿ ಆಗಮಿಸಿದ್ದರು.
ಈ ಸಂದರ್ಭದ ಕೆಲವು ಚಿತ್ರಗಳು ಹಾಗೂ ವಿಡಿಯೋ ಇಲ್ಲಿದೆ.
Friday, August 28, 2026
PARYAYA: ಶ್ರಾವಣ ಮಾಸದ ಸತ್ಯ ನಾರಾಯಣ ಪೂಜೆ
ಶ್ರಾವಣ ಮಾಸದ ಸತ್ಯ ನಾರಾಯಣ ಪೂಜೆ
ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ೨೦೨೬ ಆಗಸ್ಟ್ ೨೭ರ ಗುರುವಾರ ಶ್ರಾವಣ ಮಾಸದ ಸತ್ಯನಾರಾಯಣ ಪೂಜೆಯನ್ನು ಶ್ರದ್ಧಾ ಭಕ್ತಿಯೊಂದಿಗೆ ನೆರವೇರಿಸಲಾಯಿತು.
ಶ್ರೀ ಕೃಷ್ಣೋಜಿ ರಾವ್ ಕುಟುಂಬದವರು ಅಲಂಕಾರ ಹಾಗೂ ಶ್ರೀ ಮಹೇಶ್ ಕುಟುಂಬದವರು ಪ್ರಸಾದ ಸೇವಾ ವ್ಯವಸ್ಥೆ ಮಾಡಿದ್ದರು.
ಈ ಸಂದರ್ಭದ ಕೆಲವು ಚಿತ್ರಗಳು ಹಾಗೂ ವಿಡಿಯೋಗಳು ಇಲ್ಲಿವೆ.
Tuesday, August 25, 2026
PARYAYA: ಪತಂಜಲಿ ಯೋಗ ತರಗತಿ ಆರಂಭ
ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ., ಅಭಯ ಆಂಜನೇಯ ಸ್ವಾಮಿ ದೇವಸ್ಥಾನದ ಚಟುವಟಿಕೆಗಳಿಗೆ, 2026 ಆಗಸ್ಟ್ 24ರ ಸೋಮವಾರ ಯೋಗ ತರಗತಿಗಳ ಆರಂಭದೊಂದಿಗೆ ಹೊಸ ಮಜಲು ಸೇರ್ಪಡೆಯಾಯಿತು.
ಆಗಸ್ಟ್ 24ರಂದು ಪತಂಜಲಿ ಯೋಗ ಸಮಿತಿಯು ದೇವಸ್ಥಾನದ ಆವರಣದಲ್ಲಿ ಉಚಿತ ಯೋಗ ತರಗತಿಗಳನ್ನು ಆರಂಭಿಸಿತು.
ಪತಂಜಲಿ ಯೋಗ ಸಮಿತಿಯು ಬೆಂಗಳೂರಿನ ಉತ್ತರ ಭಾಗದಲ್ಲಿ ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಉಚಿತ ಯೋಗ ತರಗತಿಗಳನ್ನು ಆರಂಭಿಸಿತ್ತು. ಪ್ರಸ್ತುತ ಸಮಿತಿಯು ಈ ಭಾಗದಲ್ಲಿ ಸುಮಾರು 30 ಉಚಿತ ಯೋಗ ತರಗತಿಗಳನ್ನು ನಡೆಸುತ್ತಿದೆ.
ಶ್ರೀ ಬಾಲಾಜಿ ಮಹಾಗಣಪತಿ ದೇವಸ್ಥಾನ ಸೇವಾ ಸಮಿತಿಯು ನಡೆಸುತ್ತಿರುವ ಈ ದೇವಸ್ಥಾನದಲ್ಲಿ ಭಾನುವಾರ ನಡೆದ ಯೋಗ ತರಗತಿ ಆರಂಭ ಕಾರ್ಯಕ್ರಮದಲ್ಲಿ ಯೋಗ ಸಮಿತಿಯ ಸುಧಾಮ, ಆನಂದ್ ಮತ್ತಿತರರು ಯೋಗದ ಬಗ್ಗೆ ವಿವರಗಳನ್ನು ನೀಡಿದರು.
ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿಗೆ ಪೂಜೆ ನೆರವೇರಿಸುವ ಮೂಲಕ ಯೋಗ ತರಗತಿಯ ಶುಭಾರಂಭವನ್ನು ಮಾಡಲಾಯಿತು.
ದೇವಸ್ಥಾನ ಸೇವಾ ಸಮಿತಿ ಟ್ರಸ್ಟಿನ ಅಧ್ಯಕ್ಷ ಚೌಡರೆಡ್ಡಿ, ಟ್ರಸ್ಟಿಗಳಾದ ಸುಗುಣನ್, ನೆತ್ರಕೆರೆ ಉದಯಶಂಕರ, ಯೋಗಸಮಿತಿಯ ತರಬೇತಿದಾರರಾದ ಉಮಾ ಜಯಶಂಕರ್ ಮತ್ತಿತರರೂ ಈ ಸಂದರ್ಭದಲ್ಲಿ ಹಾಜರಿದ್ದರು.
ದೇವಸ್ಥಾನದ ಆವರಣದಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನವೂ ಸಂಜೆ 5.30ರಿಂದ 6.30ರವರೆಗೆ ಉಚಿತ ಯೋಗ ತರಗತಿಗಳು ನಡೆಯಲಿವೆ.
ದೇವಸ್ಥಾನದ ಆವರಣದಲ್ಲಿ ಈಗಾಗಲೇ ಯಕ್ಷ ಕಲಾ ಕೌಸ್ತುಭ, ಬೆಂಗಳೂರು ತಂಡದ ವತಿಯಿಂದ ಯಕ್ಷಗುರು ಉಮೇಶರಾಜ್ ಮಂದಾರ್ತಿ ಅವರ ನೇತೃತ್ವದಲ್ಲಿ ಯಕ್ಷಗಾನ ತರಗತಿಗಳು ನಡೆಯುತ್ತಿವೆ.
Friday, August 21, 2026
PARYAYA: ವರ ಮಹಾಲಕ್ಷ್ಮಿ ಪೂಜಾ
ವರ ಮಹಾಲಕ್ಷ್ಮಿ ಪೂಜಾ
ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ೨೦೨೬ ಆಗಸ್ಟ್ ೨೧ ಶುಕ್ರವಾರ ಶ್ರೀ ವರ ಮಹಾಲಕ್ಷ್ಮಿ ಪೂಜೆಯನ್ನು ಶ್ರದ್ಧಾ ಭಕ್ತಿಯೊಂದಿಗೆ ನೆರವೇರಿಸಲಾಯಿತು.
ವರಲಕ್ಷ್ಮಿ ವ್ರತದ ಮಹತ್ವವನ್ನು ಅರುಹುವ ಕಥಾ ಶ್ರವಣ, ವರ ಮಹಾಲಕ್ಷ್ಮಿಗೆ ಮಹಿಳೆಯರಿಂದ ಕುಂಕುಮಾರ್ಚನೆ, ಸಂಗೀತ ಸೇವೆ ನಡೆಯಿತು. ಶ್ರೀ ಮುನಿರಾಜು, ಶ್ರೀ ಕೃಷ್ಣೋಜಿರಾವ್, ಶ್ರೀ ಕಾರಿಯಪ್ಪ ಕುಟುಂಬದವರು ಅಲಂಕಾರ, ತಾಂಬೂಲ, ಪ್ರಸಾದದ ವ್ಯವಸ್ಥೆ ಮಾಡಿದ್ದರು.
ಈ ಸಂದರ್ಭದ ಕೆಲವು ಚಿತ್ರಗಳು ಹಾಗೂ ವಿಡಿಯೋ ಇಲ್ಲಿದೆ.
Monday, August 17, 2026
PARYAYA: ಫ್ರೀಡಂ ಹಬ್ಬ: ಇದು ʼಸುವರ್ಣ ನೋಟʼ
ಫ್ರೀಡಂ ಹಬ್ಬ: ಇದು ʼಸುವರ್ಣ ನೋಟʼ
೨೦೨೬ರ ಆಗಸ್ಟ್ ೧೫ರಂದು ನಡೆದ ೮೦ನೇ ಸ್ವಾತಂತ್ರ್ಯೋತ್ಸವವನ್ನು ವಿಧಾನ ಸೌಧದ ಮುಂಭಾಗದಲ್ಲಿ ʼಫ್ರೀಡಂ ಹಬ್ಬʼ ಆಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಕಣ್ಮನ ಸೆಳೆದ ದೃಶ್ಯಗಳನ್ನು ಹಿರಿಯ ಪತ್ರಿಕಾ ಛಾಯಾಗ್ರಾಹಕ ವಿಶ್ವನಾಥ ಸುವರ್ಣ ಅವರು ಸೆರೆ ಹಿಡಿದದ್ದು ಹೀಗೆ.
ವಿಡಿಯೋ ನೋಡಿ.
ಯೂಟ್ಯೂಬ್ ವಿಡಿಯೋ ನೋಡಲು ಕೆಳಗಿನ ಚಿತ್ರ ಕ್ಲಿಕ್ ಮಾಡಿ.

PARYAYA: ಫ್ರೀಡಂ ಹಬ್ಬ: ಇದು ʼಸುವರ್ಣ ನೋಟʼ: ಫ್ರೀಡಂ ಹಬ್ಬ: ಇದು ʼ ಸುವರ್ಣ ನೋಟ ʼ ೨೦೨೬ ರ ಆಗಸ್ಟ್ ೧೫ರಂದು ನಡೆದ ೮೦ನೇ ಸ್ವಾತಂತ್ರ್ಯೋತ್ಸವವನ್ನು ವಿಧಾನ ಸೌಧದ ಮುಂಭಾಗದಲ್ಲಿ ʼ ಫ್ರೀಡಂ ಹಬ್ಬ ʼ ಆಗಿ ಆಚರಿಸಲಾಯ...
Saturday, August 15, 2026
PARYAYA: ಸ್ವಾತಂತ್ರ್ಯೋತ್ಸವ ಸಡಗರ ೨೦೨೬
ಸ್ವಾತಂತ್ರ್ಯೋತ್ಸವ ಸಡಗರ ೨೦೨೬
ದೇಶದ ಇತರೆಡೆಗಳಂತೆ ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿಯೂ ೨೦೨೬ ಆಗಸ್ಟ್ ೧೬ರ ಶನಿವಾರ ಭಾರತದ ೮೦ನೇ ಸ್ವಾತಂತ್ರ್ಯೋತ್ಸವವನ್ನು ಸಡಗರದೊಂದಿಗೆ ಆಚರಿಸಲಾಯಿತು.
ನಿವೃತ್ತ ಯೋಧ, ಬಡಾವಣೆಯ ನಿವಾಸಿ ಕೆ. ಥೋಮಸ್ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ತ್ರಿವರ್ಣ ಧ್ವಜವನ್ನು ಅರಳಿಸಿದರು. ಈ ಸಂದರ್ಭದಲ್ಲಿ ಶ್ರೀ ಥೋಮಸ್ ಮತ್ತು ಅವರ ಪತ್ನಿಯನ್ನು ಸನ್ಮಾನಿಸಲಾಯಿತು.
ಬಡಾವಣೆಯ ಹಿರಿಯ ಸದಸ್ಯ, ಶ್ರೀ ಬಾಲಾಜಿ ಮಹಾಗಣಪತಿ ದೇವಸ್ಥಾನ ಸೇವಾ ಸಮಿತಿಯ ಅಧ್ಯಕ್ಷ ಶ್ರೀ ಚೌಡರೆಡ್ಡಿ ಮತ್ತು ಶ್ರೀ ಬಾಲಾಜಿ ಕೃಪಾ ನಿವಾಸಿಗಳ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಶ್ರೀ ರಾಜೇಶ ಹೆಗಡೆ ಅವರು ಮಹಾತ್ಮ ಗಾಂಧಿ ಮತ್ತು ಡಾ. ಅಂಬೇಡ್ಕರ್ ಭಾವಚಿತ್ರಗಳಿಗೆ ಪುಷ್ಟಾರ್ಚನೆ ಮಾಡಿದರು.
ಬಡಾವಣೆಯ ಹಿರಿಯ ನಿವಾಸಿ ಶ್ರೀ ಶಿವಪ್ಪ ಶಾಂತಪ್ಪನವರ ಸ್ವಾತಂತ್ರ್ಯದ ಮಹತ್ವ ಕುರಿತು ಮಾತನಾಡಿದರು. ಶ್ರೀ ರಾಜೇಶ ಹೆಗಡೆ ಅಧ್ಯಕ್ಷ ಭಾಷಣ ಮಾಡಿದರು. ಶ್ರೀ ನೆತ್ರಕೆರೆ ಉದಯಶಂಕರ ಕಾರ್ಯಕ್ರಮ ನಿರ್ವಹಿಸಿದರು.
ಬಡಾವಣೆಯ ಹಿರಿಯ ಸದಸ್ಯ ವಕೀಲ ಮುನಿರಾಜು ಅವರು ಉಪಾಹಾರದ ವ್ಯವಸ್ಥೆ ಮಾಡಿದ್ದರು. ಶ್ರೀ ಎಚ್.ವಿ. ಉದಯಶಂಕರ್, ಶ್ರೀ ರಾಘವೇಂದ್ರ ಕಾಮತ್, ಹಂಪಣ್ಣ, ರಶ್ಮಿ, ಸ್ವಾತಿ ಮತ್ತಿತರರು ಕಾರ್ಯಕ್ರಮ ಸಂಘಟಿಸುವಲ್ಲಿ ನೆರವಾಗಿದ್ದರು. ಬಡಾವಣೆಯ ಮತ್ತು ಆಸುಪಾಸಿನ ಪ್ರದೇಶಗಳ ನಿವಾಸಿಗಳು ಕಾರ್ಯಕ್ರಮದಲ್ಲಿ ಸಡಗರದೊಂದಿಗೆ ಪಾಲ್ಗೊಂಡರು.
ಈ ಸಂದರ್ಭದ ವಿಡಿಯೋ ನೋಡಲು ಕೆಳಗೆ ಕ್ಲಿಕ್ ಮಾಡಿ.



















