Saturday, December 30, 2023

PARYAYA: ಅಯೋಧ್ಯೆಯ ಮೀರಾ ಮಾಂಝಿ ಮನೆಗೆ ಪ್ರಧಾನಿ ಮೋದಿ

 ಅಯೋಧ್ಯೆಯ ಮೀರಾ ಮಾಂಝಿ ಮನೆಗೆ ಪ್ರಧಾನಿ ಮೋದಿ

ಈಕೆ 10,00,00,000ನೇ ಉಜ್ವಲಾ ಫಲಾನುಭವಿ!


ಯೋಧ್ಯೆ: ಪ್ರಧಾನಿ ನರೇಂದ್ರ ಮೋದಿ ಅವರು 2023 ಡಿಸೆಂಬರ್‌  30ರ ಶನಿವಾರ ಅಯೋಧ್ಯೆಗೆ ಭೇಟಿ ನೀಡಿದರು. ಈ ಸಮಯದಲ್ಲಿ ಅವರು ಉಜ್ವಲ ಫಲಾನುಭವಿ ಮೀರಾ ಮಾಂಝಿ ಅವರ ಮನೆಗೆ ಭೇಟಿ ನೀಡಿದರು. ಅವರ ಮನೆಯಲ್ಲಿ ಕುಶಲ ಮಾತುಕತೆ ನಡೆಸಿ ಅಲ್ಲಿಯೇ ಚಹಾ ಸೇವಿಸಿದರು.

ಮೀರಾ ಮಾಂಝಿ ಅವರು ಪ್ರಧಾನಮಂತ್ರಿ ಉಜ್ವಲಾ ಯೋಜನೆಯ 10,00,00,000ನೇ (10 ಕೋಟಿ) ಫಲಾನುಭವಿಯಾಗಿದ್ದಾರೆ.

ರೈಲು ನಿಲ್ದಾಣದಿಂದ ಹೋಗುವಾಗ ಪ್ರಧಾನಿ ಮೋದಿ ಮೀರಾ ಮಾಂಝಿ ಅವರ ಮನೆಯ ಒಳಕ್ಕೆ ನಡೆದರು. ಪ್ರಧಾನಿ ಅವರು ಮೀರಾ ಮನೆಗೆ ತೆರಳಿ ಅಲ್ಲಿ ಮಾತುಕತೆ ನಡೆಸಿದ ವಿಡಿಯೋವನ್ನು ಸುದ್ದಿ ಸಂಸ್ಥೆ ಎ ಎನ್‌ ಐ (ANI) ಹಂಚಿಕೊಂಡಿದೆ.

ಈ ವಿಡಿಯೋದಲ್ಲಿ ಪ್ರಧಾನಿ ಮೋದಿ ಅವರು ಮೀರಾ ಅವರ ಕುಟುಂಬ ಸದಸ್ಯರುಪತಿಅತ್ತೆ-ಮಾವಂದಿರು ಮತ್ತು ಮಗುವಿನೊಂದಿಗೆ ಮಾತುಕತೆ ನಡೆಸುತ್ತಿರುವುದನ್ನು ಕಾಣಬಹುದು. ಮನೆಗೆ ಬರುತ್ತಿದ್ದಂತೆಯೇ ಮೀರಾ ಮತ್ತಿತರರು ಪ್ರಧಾನಿ ಮೋದಿಯವರ ಪಾದಗಳನ್ನು ಮುಟ್ಟಲು ಮುಂದಾದರು. ತತ್‌ ಕ್ಷಣ ಅವರನ್ನು ತಡೆದ ಪ್ರಧಾನಿ ಅವರೊಂದಿಗೆ ಮಾತುಕತೆಗೆ ಕುಳಿತರು. "ನಾನೇಕೆ ಇಲ್ಲಿಗೆ ಬಂದಿದ್ದೇನೆ ಗೊತ್ತಾ ಮೀರಾನಾವು ದೇಶದಲ್ಲಿ 10 ಕೋಟಿ ಗ್ಯಾಸ್ ಸಂಪರ್ಕವನ್ನು ನೀಡಿದ್ದೇವೆ. ನಾನು 10 ನೇ ಕೋಟಿ ಫಲಾನುಭವಿಯನ್ನು ಭೇಟಿ ಮಾಡಲು ನಿರ್ಧರಿಸಿದೆ. ಅದು ನೀವೇ ಮತ್ತು ನೀವು ಅಯೋಧ್ಯೆಯಲ್ಲಿ ಇದ್ದೀರಿ ಎಂದು ಗೊತ್ತಾಯಿತು” ಎಂದು ಪ್ರಧಾನಿ ಮೋದಿ ಹೇಳಿದರು.

"ನೀವು ಗ್ಯಾಸಿನಿಂದ ಏನು ಬೇಯಿಸುತ್ತೀರಿ?" ಎಂದು ಪ್ರಧಾನಿ ಮೋದಿ ಕೇಳಿದರು.. "ಇಂದು ನಾನು ಅಕ್ಕಿಉದ್ದು ಮತ್ತು ತರಕಾರಿಗಳನ್ನು ಬೇಯಿಸಿದ್ದೇನೆ ಮತ್ತು ನಿಮಗಾಗಿ ಚಹಾವನ್ನು ಸಹ ತಯಾರಿಸಿದ್ದೇನೆ" ಎಂದು ಮೀರಾ ಉತ್ತರಿಸಿದರು.

"ಪಿಲಾವ್ ನಾ ಫಿರ್ (ಹಾಗಾದರೆ ಚಹಾ ನೀಡಿ)" ಎಂದು ಪ್ರಧಾನಿ ಮೋದಿ ಹೇಳಿದರು. ಮೀರಾ ಅಡುಗೆ ಮನೆಗೆ ಹೋಗಿ ಪ್ರಧಾನಿಯವರಿಗೆ  ಚಹಾ ತಂದರು. ʼಇದು ಹಾಲಿನ ಚಹಾʼ ಎಂದ ಪ್ರಧಾನಿ ಮೋದಿ ನಿಮಗೆ ಹಾಲು ಎಲ್ಲಿ ಸಿಗುತ್ತದೆ ಎಂದು ಪ್ರಶ್ನಿಸಿದರು. "ನೀವು ತುಂಬಾ ಸಿಹಿಯಾದ ಚಹಾ ಸೇವಿಸುವ ಅಭ್ಯಾಸ ಇಟ್ಟುಕೊಂಡಿದ್ದೀರಿʼ ಮೋದಿ ಹೇಳಿದರು.

ಗ್ಯಾಸ್‌ ಬಳಸಲು ನಿಮಗೆ ಗೊತ್ತಾ ಎಂದು ಮೋದಿ ಕೇಳಿದಾಗ ಮೀರಾ ಮಾಂಝಿ ಅವರು ಒಂದು ದಿನದೊಳಗೆ ಗ್ಯಾಸ್ ಬಳಸಲು ಕಲಿತೆ ಎಂದು ಉತ್ತರಿಸಿದರು.  "ನಿಮಗೆ ಮನೆವಿದ್ಯುತ್ನೀರು ಮತ್ತು ಈಗ ಗ್ಯಾಸ್ ಸಿಕ್ಕಿದೆ. ಸರ್ಕಾರದ ಯೋಜನೆಯಿಂದ ಆಹಾರಧಾನ್ಯವೂ ಸಿಗುತ್ತದೆಯೇ?" ಎಂದು ಪ್ರಧಾನಿ ಕೇಳಿದರು. ಸರ್ಕಾರದಿಂದ 10 ಕೆಜಿ ಧಾನ್ಯ ಸಿಗುತ್ತದೆ ಎಂದರು ಮೀರಾ.

ಒಂದು ಹಂತದಲ್ಲಿ ಮೀರಾ ಅವರ ಕುಟುಂಬದ ಸದಸ್ಯರು ಪ್ರಧಾನಿ ಮೋದಿ ಅವರಿಗೆ ʼನೀವು ದೇವರಿದ್ದಂತೆʼ ಎಂದು ಹೇಳಿದರು. ಅದಕ್ಕೆ ಪ್ರಧಾನಿ ಮೋದಿ, "ಇಲ್ಲ ಇಲ್ಲ, ದೇವರು ಶ್ರೀರಾಮ" ಎಂದು ಹೇಳಿದರು.

ಸಂವಾದದ ಸಮಯದಲ್ಲಿಪ್ರಧಾನಿ ಮೋದಿ ಅವರು ಮೀರಾ ಅವರಿಗೆ ವಸತಿ ಯೋಜನೆಯಲ್ಲಿ ಎಷ್ಟು ಹಣವನ್ನು ಪಡೆದರು ಮತ್ತು ಅದಕ್ಕಾಗಿ ನೀವು ಯಾರಿಗಾದರೂ ಲಂಚ ನೀಡಬೇಕಾಯಿತೇ ಎಂದು ವಿಚಾರಿಸಿದರು.

ಬಿಪಿಎಲ್ ಕುಟುಂಬಗಳಿಗೆ ಎಲ್‌ಪಿಜಿ ಸಂಪರ್ಕಕ್ಕಾಗಿ ಆರ್ಥಿಕ ನೆರವು ನೀಡುವ ಸರ್ಕಾರದ ಉಜ್ವಲ ಯೋಜನೆಯ 10 ನೇ ಕೋಟಿ ಫಲಾನುಭವಿಯಾಗಿರುವ ಮೀರಾ ಮಾಂಝಿ ಅಯೋಧ್ಯೆಯ ಮನೆಗೆ ಪ್ರಧಾನಿ ನರೇಂದ್ರ ಮೋದಿ ನಡೆದರು. ಹಿಂದಿನ ದಿನವಷ್ಟೇ (ಶುಕ್ರವಾರ) ಕುಟುಂಬದವರು ಗ್ಯಾಸ್ ಸಂಪರ್ಕ ಪಡೆದಿದ್ದರು.

ಪ್ರಧಾನಿ ಮೋದಿಯವರು ಅಲ್ಲಿ ಒಂದು ಕಪ್ ಚಹಾವನ್ನು ಸೇವಿಸುತ್ತಿದ್ದಂತೆ, "ಚಹಾ ನಿಜವಾಗಿಯೂ ಚೆನ್ನಾಗಿದೆ. ಮತ್ತು ನಾನು ಚಾಯ್ವಾಲಾ ಆಗಿದ್ದರಿಂದ ನನಗೆ ತಿಳಿದಿದೆ" ಎಂದು ಹೇಳಿದರು.

ಜನವರಿ 22 ರಂದು ರಾಮಮಂದಿರ ಉದ್ಘಾಟನೆಗೆ ಮುನ್ನ ಪ್ರಧಾನಿ ಮೋದಿ ಅವರು ಶನಿವಾರ ಅಯೋಧ್ಯೆಯಲ್ಲಿ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದರು. ಅಯೋಧ್ಯೆಯ ಹೊಸ ಮಹರ್ಷಿ ವಾಲ್ಮೀಕಿ ವಿಮಾನ ನಿಲ್ದಾಣನವೀಕರಿಸಿದ ರೈಲು ನಿಲ್ದಾಣ ಮತ್ತು 15,700 ಕೋಟಿ ರೂಪಾಯಿಗಳ ವಿವಿಧ ಯೋಜನೆಗಳನ್ನು ಪ್ರಧಾನಿ ಮೋದಿ ಉದ್ಘಾಟಿಸಿದರು.

ವಿಡಿಯೋ ನೋಡಲು ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ:




PARYAYA: ಅಯೋಧ್ಯೆಯ ಮೀರಾ ಮಾಂಝಿ ಮನೆಗೆ ಪ್ರಧಾನಿ ಮೋದಿ:   ಅಯೋಧ್ಯೆಯ ಮೀರಾ ಮಾಂಝಿ ಮನೆಗೆ ಪ್ರಧಾನಿ ಮೋದಿ ಈಕೆ 10,00,00,000ನೇ ಉಜ್ವಲಾ ಫಲಾನುಭವಿ! ಅ ಯೋಧ್ಯೆ: ಪ್ರಧಾನಿ ನರೇಂದ್ರ ಮೋದಿ ಅವರು 2023 ಡಿಸೆಂಬರ್‌   30ರ ಶನ...

Thursday, December 28, 2023

PARYAYA: ಈ ಹಕ್ಕಿ ಕೊಕ್ಕಿನ ಬಣ್ಣ ಬದಲಾಯಿಸುತ್ತದೆ..!

 ಈ ಹಕ್ಕಿ ಕೊಕ್ಕಿನ ಬಣ್ಣ ಬದಲಾಯಿಸುತ್ತದೆ..!

ಇದು ಸುವರ್ಣ ನೋಟ

ಹೌದು. ಇದೊಂದು ವಿಶಿಷ್ಟ ಹಕ್ಕಿ. ಇದರ ಹೆಸರು ಕೆಂಪು ರಾಟವಾಳ. ಕೆಂಪು ಮುನಿಯ ಎಂಬುದಾಗಿಯೂ ಇದನ್ನು ಕರೆಯುತ್ತಾರೆ. ಇಂಗ್ಲೀಷಿನಲ್ಲಿ ಇದನ್ನು ʼರೆಡ್‌ ಮುನಿಯʼ ಎಂಬುದಾಗಿ ಕರೆಯುತ್ತಾರೆ. ಈ ಹಕ್ಕಿಯ ವೈಜ್ಞಾನಿಕ ಹೆಸರು ʼಸ್ಟ್ರಾಬೆರಿ ಪಿಂಚ್‌ʼ ಅಥವಾ ʼಅಮಾಂಡವʼ ಅಂತ.

ಇದೊಂದು ಪುಟ್ಟ ಹಕ್ಕಿ. ಕೆಂಪು ಕೊಕ್ಕು ಮತ್ತು ಬಾಲದ ಸುತ್ತ ಇರುವ ಕಪ್ಪು ಬಣ್ಣದಿಂದ ಇದನ್ನು ಗುರುತಿಸಬಹುದು. ಗಂಡು ಹಕ್ಕಿಯದ್ದು ಸಾಮಾನ್ಯವಾಗಿ ಮಂಕು ಬಣ್ಣ, ಆದರೆ ಬಾಲದ ಕೆಳಗೆ ಕೆಂಪು ಇರುತ್ತದೆ. ಹೆಣ್ಣು ಹಕ್ಕಿಯ ಬಣ್ಣ ಯಾವಾಗಲೂ ಮಂಕು. ರೆಕ್ಕೆಯ ಗರಿಗಳ ಮೇಲೆ ಬಿಳಿಯ ಚುಕ್ಕೆಗಳು ಸ್ವಲ್ಪ ಅಸ್ಪಷ್ಟವಾಗಿ ಕಾಣುತ್ತಿರುತ್ತವೆ.

ಮೈದಾನ, ಎತ್ತರವಾಗಿ ಬೆಳೆದ ಹುಲ್ಲುಗಾವಲು ಪ್ರದೇಶಗಳಲ್ಲಿ ಸಾಮಾನ್ಯವಾಗಿ ಕೆಂಪು ಮುನಿಯ ಕಂಡು ಬರುತ್ತವೆ. ಕೆಲವೊಮ್ಮೆ ನೀರಿನ ಬಳಿ ಇರುವ ಪ್ರದೇಶಗಳಲ್ಲಿ ಇರುವುದೂ ಉಂಟು. ಭಾರತ ಬಿಟ್ಟರೆ, ಬಾಂಗ್ಲಾದೇಶ, ಶ್ರೀಲಂಕಾ, ನೇಪಾಳ ಮತ್ತು ಪಾಕಿಸ್ತಾನದಲ್ಲಿ ಈ ಹಕ್ಕಿಯ ವಿವಿಧ ಜಾತಿಗಳು ಕಂಡು ಬರುತ್ತವೆ. ಬರ್ಮಾ, ಚೀನಾ, ಥೈಲ್ಯಾಂಡ್‌, ಇಂಡೋನೇಷಿಯಾ ಮತ್ತು ಕಾಂಬೋಡಿಯಾದಲ್ಲೂ ಇವು ಕಂಡು ಬರುತ್ತವೆ.

ಕಾಳು ಮತ್ತು ಗೆದ್ದಲು ಹುಳಗಳು ಈ ಹಕ್ಕಿಗೆ ಆಹಾರ. ಮುಂಗಾರು ಶುರುವಾಯಿತು ಎಂದರೆ ಸಾಕು ಈ ಹಕ್ಕಿಗಳಿಗೆ ಮಿಲನ ಸಂಭ್ರಮ. ಗಂಡು- ಹೆಣ್ಣು ಹಕ್ಕಿಗಳು ಜೊತೆ ಜೊತೆಯಾಗಿಯೇ ಇರುತ್ತವೆ. ಈ ಸಮಯದಲ್ಲಿ ಗಂಡು ಹಕ್ಕಿಯ ಮೈ ಕೆಂಪು ಬಣ್ಣಕ್ಕೆ ತಿರುಗುತ್ತದೆ. ರೆಕ್ಕೆಗಳು ಕೂಡಾ ವಿವಿಧ ಬಣ್ಣಗಳನ್ನು ಪಡೆಯುತ್ತವೆ.

ಮೊದಲೇ ಹೇಳಿದೆನಲ್ಲ? ಈ ಹಕ್ಕಿಯ ಇನ್ನೊಂದು ವಿಶೇಷವೆಂದರೆ ಕೊಕ್ಕಿನ ಬಣ್ಣವನ್ನು ಕೂಡಾ ಬದಲಿಸಿಕೊಳ್ಳುವುದು. ಅಂದರೆ ಮುಂಗಾರುವಿಗೆ ಮೊದಲು ಅಂದರೆ ಸಾಮಾನ್ಯವಾಗಿ ಏಪ್ರಿಲ್‌ ತಿಂಗಳಲ್ಲಿ ಈ ಹಕ್ಕಿಯ ಕೊಕ್ಕು ಪೂರ್ತಿ ಕಪ್ಪಗೆ ಇರುತ್ತದೆ. ಮುಂಗಾರು ಆಗಮನದ ಹೊತ್ತಿಗೆ ಅಂದರೆ ಮೇ ತಿಂಗಳಲ್ಲಿ ಕೊಕ್ಕು ಕೆಂಪು ಬಣ್ಣಕ್ಕೆ ತಿರುಗುತ್ತದೆ. ಮುಂಗಾರು ಮಳೆಯ ಕಾಲ ಮುಗಿದು ಚಳಿಗಾಲ ಬರುವ ಹೊತ್ತಿಗೆ ಅಂದರೆ ನವೆಂಬರ್‌ ಡಿಸೆಂಬರ್‌ ವೇಳೆಗೆ ಕೊಕ್ಕು ಮತ್ತೆ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಎಂತಹ ಚೋದ್ಯ ಅಲ್ಲವೇ?

ಎತ್ತರವಾಗಿ ಬೆಳೆದ ಹುಲ್ಲಿನ ಮಧ್ಯೆ ಇರುವುದರಿಂದ ಮತ್ತು ಅತ್ಯಂತ ವೇಗವಾಗಿ ರೆಕ್ಕೆಗಳನ್ನು ಬಡಿಯುತ್ತಾ ಹಾರುವುದರಿಂದ ಈ ಪುಟ್ಟ ಹಕ್ಕಿಗಳು ನೋಡಲು ಸಿಗುವುದು ಅಪರೂಪ.

ಆದರೆ ನಮ್ಮ ಹಿರಿಯ ಪತ್ರಿಕಾ ಛಾಯಾಗ್ರಾಹಕ ವಿಶ್ವನಾಥ ಸುವರ್ಣ ಇದ್ದಾರಲ್ಲ? ಅವರು ಹುಲ್ಲಿನ ಮಧ್ಯೆ ತೂರಿಯಾದರೂ ಫೋಟೋ ಹೊಡೆಯುತ್ತಾರೆ. ಅಂತಹ ಒಂದು ಸಂದರ್ಭದಲ್ಲಿ ನೋಡಿ ಅವರ ಕ್ಯಾಮರಾದಲ್ಲಿ ಈ ರೆಡ್‌ ಮುನಿಯ ಜೋಡಿ ಬಂಧಿಯಾಗಿ ಬಿಟ್ಟವು. ಹೀಗಾಗಿ ಈಗ ನಮಗೆಲ್ಲರಿಗೂ ಅವುಗಳ ಸೊಬಗು ಸವಿಯುವ ಸಂಭ್ರಮ.

ಈ ಹಕ್ಕಿಯ ಸಮೀಪ ನೋಟಕ್ಕೆ ಇಲ್ಲಿರುವ ಫೊಟೋಗಳನ್ನು ಕ್ಲಿಕ್ಕಿಸಿ.
ಈ ಲೇಖನವನ್ನು ಕೇಳಲು ಕೆಳಗೆ  ಕ್ಲಿಕ್‌ ಮಾಡಿರಿ:

ವಿಡಿಯೋ ನೋಡುತ್ತಾ ಈ ಲೇಖನವನ್ನು ಓದಲು ಕೆಳಗಿನ ಚಿತ್ರವನ್ನು ಕ್ಲಿಕ್‌ ಮಾಡಿ.:

 ಬರಹ: ನೆತ್ರಕೆರೆ ಉದಯಶಂಕರ

-      ಚಿತ್ರಗಳು: ವಿಶ್ವನಾಥ ಸುವರ್ಣ      

ಇವುಗಳನ್ನೂ ಓದಿರಿ:

ಎಲ್ಲಿ ಮಾರಾಯರೇ ಈ ಆಟ? ಇದು ಸುವರ್ಣ ನೋಟ

PARYAYA: ಈ ಹಕ್ಕಿ ಕೊಕ್ಕಿನ ಬಣ್ಣ ಬದಲಾಯಿಸುತ್ತದೆ..!:   ಈ ಹಕ್ಕಿ ಕೊಕ್ಕಿನ ಬಣ್ಣ ಬದಲಾಯಿಸುತ್ತದೆ..! ಇದು ಸುವರ್ಣ ನೋಟ ಹೌ ದು. ಇದೊಂದು ವಿಶಿಷ್ಟ ಹಕ್ಕಿ. ಇದರ ಹೆಸರು ಕೆಂಪು ರಾಟವಾಳ. ಕೆಂಪು ಮುನಿಯ ಎಂಬುದಾಗಿಯೂ ಇದನ್ನು ...

Monday, December 25, 2023

PARYAYA: ಇಂದಿನ ಇತಿಹಾಸ History Today ಡಿಸೆಂಬರ್ 25

ಇಂದಿನ ಇತಿಹಾಸ

ಡಿಸೆಂಬರ್ 25

2023: ಕ್ರಿಮಿನಲ್‌ ಅಪರಾಧಗಳಿಗೆ ಸಂಬಂಧಿಸಿದಂತೆ ಆಮೂಲಾಗ್ರ ಬದಲಾವಣೆ ತರುವ ಉದ್ದೇಶದ ಮೂರು ಕ್ರಿಮಿನಲ್‌ ಮಸೂದೆಗಳಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಸಹಿ ಹಾಕಿದರು. ಇದರೊಂದಿಗೆ ಈ ಮೂರು ಮಸೂದೆಗಳು ಈ ದಿನದಿಂದ ಕಾನೂನಾಗಿ ಜಾರಿಯಾದವು. ಭಾರತೀಯ ನ್ಯಾಯ (ಎರಡನೆಯ) ಸಂಹಿತಾ ಮಸೂದೆ, ಭಾರತೀಯ ನಾಗರಿಕ ಸುರಕ್ಷಾ (ಎರಡನೆಯ)  ಮಸೂದೆ ಮತ್ತು ಭಾರತೀಯ ಸಾಕ್ಷ್ಯ (ಎರಡನೇಯ) ಸಂಹಿತಾ ಮಸೂದೆ ಇವು ಈದಿನ ರಾಷ್ಟ್ರಪತಿಯವರ ಅಂಕಿತ ಬಿದ್ದಿರುವ ಮೂರು ಮಸೂದೆಗಳು. ಮೂರೂ ಮಸೂದೆಗಳಿಗೆ ಸಂಸತ್ತಿನ ಉಭಯ ಸದನಗಳು ಇತ್ತೀಚೆಗೆ ಅಂಗೀಕಾರ ನೀಡಿದ್ದವು.

2008: ಪಾಕಿಸ್ಥಾನ ಒಂದು ಜವಾಬ್ದಾರಿಯುತ ರಾಷ್ಟ್ರವಾಗಿದ್ದು ಭಾರತದೊಂದಿಗೆ ಯುದ್ಧ ನಡೆಸಲು ಬಯಸಿಲ್ಲ ಎಂದು ಪಾಕ್ ಪ್ರಧಾನಿ ಯೂಸುಫ್ ರಾಜಾ ಜಿಲಾನಿ ಇಸ್ಲಾಮಾಬಾದಿನಲ್ಲಿ ಪ್ರಕಟಿಸಿದರು. ಉಭಯ ದೇಶಗಳ ಗಡಿಯಲ್ಲಿ ಯುದ್ಧದ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವ ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ದೇಶವನ್ನು ಅಸ್ಥಿರಗೊಳಿಸಲು ಬಯಸಿರುವ ಮತ್ತು ತನ್ನ ನೆಲವನ್ನು ಭಯೋತ್ಪಾದನಾ ಚಟುವಟಿಕೆಗಳಿಗೆ ಬಳಸುವ ರಾಷ್ಟ್ರ-ವಿರೋಧಿ ಶಕ್ತಿಗಳಿಗೆ ಪಾಕ್ ಸರ್ಕಾರ ಅವಕಾಶ ನೀಡುವುದಿಲ್ಲ' ಎಂದೂ ಘೋಷಿಸಿದರು. 'ನಮಗೆ ಪಾಕ್ ಜೊತೆ ಯುದ್ಧ ಬೇಕಿಲ್ಲ, ಉಗ್ರರ ವಿರುದ್ಧ ಕ್ರಮ ಕೈಗೊಂಡರೆ ಸಾಕು' ಎಂದು ಭಾರತದ ಪ್ರಧಾನಿ ಮನಮೋಹನ್ ಸಿಂಗ್ ಹೇಳಿರುವುದಕ್ಕೆ ಅವರು ಈ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದರು.

2008: ದೀರ್ಘಕಾಲದ ಗಿನಿಯಾದ ಸರ್ವಾಧಿಪತ್ಯ ವಹಿಸಿದ್ದ ಲಾಂಸಾನಾ ಕಾಂಟೆ ನಿಧನದ ಹಿನ್ನೆಲೆಯಲ್ಲಿ ತಾನು ಅಧ್ಯಕ್ಷ ಎಂದು ಕ್ಯಾಪ್ಟನ್ ಮೌಸ್ಸಾ ದಡಿಸ್ ಕಮರಾ ಸ್ವಯಂ ಘೋಷಣೆ ಮಾಡಿಕೊಂಡರು. 24 ಗಂಟೆಗಳಲ್ಲಿ ಸರ್ಕಾರದ ಸದಸ್ಯರು ತಮ್ಮ ಸ್ಥಾನ ಬಿಡಬೇಕೆಂದೂ ಅವರು ಆದೇಶ ನೀಡಿದರು. 1984ರಿಂದ ಅಧಿಕಾರದಲ್ಲಿದ್ದ ಕಾಂಟೆ ಈಚೆಗೆ ನಿಧನರಾಗಿದ್ದರು.

2008: 1984ರ ದೆಹಲಿ ಸಿಖ್ ನರಮೇಧಕ್ಕೆ ಸಂಬಂಧಿಸಿ ಪ್ರಮುಖ ಸಾಕ್ಷಿಗಳಿಂದ ಮಾಹಿತಿ ಸಂಗ್ರಹಿಸಲು ನ್ಯೂಯಾರ್ಕಿಗೆ ಆಗಮಿಸಿದ ಸಿಬಿಐ ಅಧಿಕಾರಿಗಳ ತಂಡ, ಮುಖ್ಯ ಸಾಕ್ಷಿ ಜಸ್ಬಿಂದರ್ ಸಿಂಗ್ ಹೇಳಿಕೆಯನ್ನು ದಾಖಲಿಸಿಕೊಂಡಿತು. ನಂತರ ತಂಡವು ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿರುವ ಜಸ್ಬೀರ್ ಸಿಂಗ್ ಹೇಳಿಕೆಯನ್ನು ದಾಖಲಿಸಿಕೊಳ್ಳಲು ಸ್ಯಾನ್‌ಫ್ರಾನ್ಸಿಸ್ಕೊಗೆ ತೆರಳಿತು. ಸಿಖ್ ನರಮೇಧದಲ್ಲಿ ಕೇಂದ್ರದ ಮಾಜಿ ಸಚಿವ ಜಗದೀಶ್ ಟೈಟ್ಲರ್ ಕೈವಾಡವಿದೆ ಎಂದು ಇವರು ಆರೋಪಿಸಿದ್ದರು.

2007: ಅಪಘಾತ ಪ್ರಕರಣಕ್ಕೆ ಸಂಬಂಧಿಸಿ ಅಪರೂಪದ ತೀರ್ಪು ನೀಡಿದ ಸುಪ್ರೀಂಕೋರ್ಟ್, ವಿಮೆ ಹಣ ತುಂಬಿರದಿದ್ದರೂ, ನೊಂದ ಕುಟುಂಬಕ್ಕೆ ಪರಿಹಾರ ನೀಡಿ, ಆ ಮೊತ್ತವನ್ನು ವಾಹನ ಮಾಲೀಕನಿಂದ ವಸೂಲು ಮಾಡಿಕೊಳ್ಳುವಂತೆ ನ್ಯಾಶನಲ್ ಇನ್ಸೂರೆನ್ಸ್ ಕಂಪೆನಿಗೆ ಆದೇಶಿಸಿತು. ಕರ್ನಾಟಕ ರಾಜ್ಯ ಕೊಪ್ಪಳದ ಗಂಗಾವತಿ ತಾಲ್ಲೂಕಿನಲ್ಲಿ ಸಂಭವಿಸಿದ ಅಪಘಾತದಲ್ಲಿ ಟೆಂಪೊ ಒಂದು ಗುಡಿಸಲಿಗೆ ನುಗ್ಗಿದ್ದರಿಂದ ಶಾಂತಮ್ಮ ಎಂಬಾಕೆ ಸ್ಥಳದಲ್ಲಿಯೇ ಮೃತಳಾಗಿದ್ದಳು. ಪ್ರಕರಣದ ವಿಚಾರಣೆಯಲ್ಲಿ ಟೆಂಪೊ ಮಾಲೀಕ ಗೋಕುರ್ ಸಾಬ್ ಎಂಬಾತ ವಾಹನ ವಿಮೆ ನವೀಕರಣ ಮಾಡಿಸಿರಲಿಲ್ಲ ಎಂಬುದು ಪತ್ತೆಯಾಯಿತು. ಈ ಹಿನ್ನೆಲೆಯಲ್ಲಿ ಅಪಘಾತದಲ್ಲಿ ಮಡಿದ ಮಹಿಳೆಯ ತಂದೆ, ದೊಡ್ಡಪ್ಪನಿಗೆ ಪರಿಹಾರದ ಹಣ ನೀಡಲು ವಿಮಾ ಕಂಪೆನಿ ನಿರಾಕರಿಸಿತು. ಆದರೆ ವಾಹನ ಅಪಘಾತ ನ್ಯಾಯಮಂಡಳಿ ಹಾಗೂ ರಾಜ್ಯ ಹೈಕೋರ್ಟ್ ಮೃತರ ಕುಟುಂಬಕ್ಕೆ ರೂ 1.58 ಲಕ್ಷ ಪರಿಹಾರ ನೀಡುವಂತೆ ನ್ಯಾಶನಲ್ ಇನ್ಸೂರೆನ್ಸ್ ಕಂಪೆನಿಗೆ ಆದೇಶಿಸಿದವು. ಇದನ್ನು ಪ್ರಶ್ನಿಸಿ ಕಂಪೆನಿ ಸುಪ್ರೀಂಕೋರ್ಟ್ ಮೊರೆ ಹೋಗಿತ್ತು. ಸಂತ್ರಸ್ತ ಕುಟುಂಬದ ಸದಸ್ಯರು ಸಮಾಜದ ಕೆಳ ಹಂತದವರು ಎಂಬುದನ್ನು ಗಮನಿಸಿ ಹೈಕೋರ್ಟ್ ಆದೇಶವನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿಯಿತು. ಪ್ರಕರಣದ ಹಿನ್ನೆಲೆ ಆಧಾರದ ಮೇಲೆ ಹಾಗೂ ನ್ಯಾಯಾಲಯಕ್ಕೆ 142ನೇ ಅಧಿನಿಯಮದಡಿ ಇರುವ ಅಧಿಕಾರ ಬಳಸಿ, ಪರಿಹಾರ ನೀಡುವಂತೆ ಆದೇಶಿಸುತ್ತಿರುವುದಾಗಿ ತಿಳಿಸಿತು. ಈ ಹಣವನ್ನು ವಾಹನದ ಮಾಲೀಕನಿಂದ ವಸೂಲು ಮಾಡಿಕೊಳ್ಳುವಂತೆಯೂ ಅದು ಆದೇಶಿಸಿತು.

2007: ಹಿಂದಿನ ದಿನ ರಾತ್ರಿ ನಿಧನರಾದ ಬಾಲಿವುಡ್ಡಿನ ಹಿರಿಯ ನಿರ್ಮಾಪಕ - ನಿರ್ದೇಶಕ ಜಿ.ಪಿ.ಸಿಪ್ಪಿ (93) ಅವರ ಅಂತ್ಯಕ್ರಿಯೆ ಮುಂಬೈಯ ಚಂದನವಾಡಿಯಲ್ಲಿ ನಡೆಯಿತು. ವಯೋ ಸಹಜವಾದ ಅನಾರೋಗ್ಯದಿಂದ ಬಳಲುತ್ತಿದ್ದ ಸಿಪ್ಪಿ ಅವರು ಹಿಂದಿನ ರಾತ್ರಿ ನಿಧನರಾಗಿದ್ದರು. ಅಗರ್ಭ ಶ್ರೀಮಂತ ಸಿಂಧಿ ಕುಟುಂಬದಲ್ಲಿ ಜನಿಸಿದ ಸಿಪ್ಪಿ ಅವರು 1955ರಲ್ಲಿ `ಮರೈನ್ ಡ್ರೈವ್' ಚಿತ್ರ ನಿರ್ಮಿಸುವ ಮೂಲಕ ಬಾಲಿವುಡ್ಡಿಗೆ ಪದಾರ್ಪಣೆ ಮಾಡಿದ್ದರು. ಹಲವು ವರ್ಷಗಳವರೆಗೆ ಚಿತ್ರ ನಿರ್ಮಾಣದಲ್ಲಿ ತೊಡಗಿದ್ದ ಅವರು ಮನೆಮಾತಾದದ್ದು 1975ರಲ್ಲಿ `ಶೋಲೆ' ಚಿತ್ರ ನಿರ್ಮಾಣದ ಮೂಲಕ. ಈ ಚಿತ್ರವನ್ನು ಅವರ ಮಗ ರಮೇಶ್ ನಿರ್ದೇಶಿಸಿದ್ದು ಮತ್ತೊಂದು ವಿಶೇಷ. `ಶೋಲೆ' ಭಾರತೀಯ ಚಿತ್ರರಂಗದಲ್ಲಿಯೇ ಹಲವು ದಾಖಲೆಗಳನ್ನು ನಿರ್ಮಿಸಿತು. ಪ್ರಮುಖ ಚಿತ್ರನಟರನ್ನು ಹಾಕಿಕೊಂಡು ಚಿತ್ರ ನಿರ್ಮಿಸುತ್ತಿದ್ದ ಅವರು, ಅದ್ದೂರಿತನಕ್ಕೆ ವಿಶೇಷ ಗಮನ ನೀಡುತ್ತಿದ್ದರು. ಶ್ರೀಮತಿ 420, ಅಂದಾಜ್, ಸೀತಾ ಔರ್ ಗೀತಾ, ಶಾನ್, ಸಾಗರ್, ರಾಜು ಬನ್ ಗಯಾ ಜಂಟಲ್ ಮ್ಯಾನ್ ಸೇರಿದಂತೆ 19 ಚಿತ್ರಗಳನ್ನು ನಿರ್ಮಿಸಿದರು. ಫಿಲ್ಮಫೇರ್ ಸೇರಿದಂತೆ ಹಲವು ಪ್ರತಿಷ್ಠಿತ ಪ್ರಶಸ್ತಿಗಳು ಅವರ ಹೆಗಲಿಗೇರಿದ್ದವು.

2007: ಅಹಮದಾಬಾದಿನ ಸರ್ದಾರ್ ಪಟೇಲ್ ಕ್ರೀಡಾಂಗಣದಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಬಿಜೆಪಿಯ ನರೇಂದ್ರ ಮೋದಿ ಸತತ 3ನೇ ಬಾರಿಗೆ ಗುಜರಾತ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಲಕ್ಷಾಂತರ ಜನರ ಜಯ ಘೋಷಗಳ ನಡುವೆ ಸಮಾರಂಭ ನಡೆಯಿತು. ಸಾಂಪ್ರದಾಯಿಕ ಕೇಸರಿ ವರ್ಣದ ಕುರ್ತಾ ಹಾಗೂ ಬಿಳಿ ಬಣ್ಣದ ಪೈಜಾಮ ಧರಿಸಿದ್ದ 57 ವರ್ಷ ವಯಸ್ಸಿನ ಮೋದಿ ಮಧ್ಯಾಹ್ನ 1.50ಕ್ಕೆ ರಾಜ್ಯದ 14ನೇ ಮುಖ್ಯಮಂತ್ರಿಯಾಗಿ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ನವಲ್ ಕಿಶೋರ್ ಶರ್ಮಾ ಪ್ರಮಾಣ ವಚನ ಬೋಧಿಸಿದರು. ಬಿಜೆಪಿಯ ಹಿರಿಯ ನಾಯಕ ಎಲ್. ಕೆ. ಅಡ್ವಾಣಿ, ಪಕ್ಷದ ಅಧ್ಯಕ್ಷ ರಾಜನಾಥ್ ಸಿಂಗ್, ಸಾಧುಗಳು, ಹಾಗೂ ಪಕ್ಷ ಕಾರ್ಯಕರ್ತರು ಸೇರಿದಂತೆ ಒಂದು ಲಕ್ಷಕ್ಕೂ ಹೆಚ್ಚು ಜನರು ಸಮಾರಂಭದಲ್ಲಿ ಪಾಲ್ಗೊಂಡರು. ಮೋದಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಬಿಜೆಪಿ ಗುಜರಾತಿನಲ್ಲಿ ಸತತ ನಾಲ್ಕನೇ ಬಾರಿಗೆ ಸರ್ಕಾರ ರಚಿಸಿತು. ಇದಕ್ಕೂ ಮುಂಚೆ 1995, 1998 ಹಾಗೂ 2002ರಲ್ಲಿ ಬಿಜೆಪಿ ಸರ್ಕಾರ ರಚಿಸಿತ್ತು.

2007: ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ರಘುವಂಶ ಪ್ರಸಾದ್ ಸಿಂಗ್ ಯಾದವ್ ಅವರ ಹಿರಿಯ ಸೋದರ ಬಾಲ ಕಾರ್ಮಿಕರನ್ನು ಬಳಸಿಕೊಂಡು ಕೃಷಿ ಚಟುವಟಿಕೆ ಕೈಗೊಂಡಿರುವುದು ನಿಜವೆಂದು ತನಿಖಾ ತಂಡ ಪಟ್ನಾದಲ್ಲಿ ಬಹಿರಂಗಪಡಿಸಿತು. ಬಿಹಾರದ ಎನ್ ಡಿ ಎ ಸರ್ಕಾರ ಪ್ರಕರಣದ ಸತ್ಯಾಸತ್ಯತೆಯನ್ನು ತಿಳಿಯಲು ಈ ತನಿಖಾ ತಂಡವನ್ನು ರಚಿಸಿತ್ತು. ಕಾರ್ಮಿಕ ಇಲಾಖೆಯ ಆಯುಕ್ತ ವಿಮ್ಲಾನಂದ ಝಾ ನೇತೃತ್ವದ ಉನ್ನತ ಮಟ್ಟದ ತಂಡ ಶಹಾಪುರಕ್ಕೆ ತೆರಳಿ ತನಿಖೆ ನಡೆಸಿತು. ಕೇಂದ್ರ ಸಚಿವರ ಸಹೋದರ ಬಾಲಕಾರ್ಮಿಕರನ್ನು ಬಳಸಿಕೊಂಡು ಕೃಷಿ ಚಟುವಟಿಕೆ ನಡೆಸಿರುವ ಬಗ್ಗೆ ಟಿವಿ ಚಾನೆಲ್ ಮಾಡಿದ ವರದಿ ನಿಜವೆಂದು ತಂಡ ವರದಿ ನೀಡಿದೆ ಎಂದು ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಸುದ್ದಿಗಾರರಿಗೆ ತಿಳಿಸಿದರು.

2007: ಕ್ರಿಸ್ಮಸ್ ದಿನಾಚರಣೆ ದಿನ ಒರಿಸ್ಸಾದ ರೂರ್ಕೆಲಾ ವಿಭಾಗದ ಚಿಕಿತಾ ಗ್ರಾಮದಲ್ಲಿ ವಿಶ್ವ ಹಿಂದೂ ಪರಿಷತ್ (ವಿ ಎಚ್ ಪಿ) ಏರ್ಪಡಿಸಿದ್ದ ಕಾರ್ಯಕ್ರಮ ಒಂದರಲ್ಲಿ ಕ್ರೈಸ್ತ ಧರ್ಮಕ್ಕೆ ಸೇರಿದ್ದ 187 ಮಂದಿ ಹಿಂದೂ ಧರ್ಮಕ್ಕೆ ಮರುಮತಾಂತರ ಹೊಂದಿದರು. ಮರುಮತಾಂತರ ಹೊಂದಿದವರಲ್ಲಿ 103 ಮಂದಿ ಪುರುಷರು ಮತ್ತು 84 ಮಂದಿ ಮಹಿಳೆಯರು. ಕಾರ್ಯಕ್ರಮದಲ್ಲಿ ರೂರ್ಕೆಲಾ ವಿಭಾಗದ ವಿ ಎಚ್ ಪಿ ಅಧ್ಯಕ್ಷ ಮಿತ್ರಭಾನು ಪಾಂಡಾ, ಧರ್ಮ ಪ್ರಚಾರಕ ಮಕರಧ್ವಜ ಮೊಹಾಂತೊ, ಗಧಾದರ್ ಸಾಹು ಮತ್ತಿತರರು ಹಾಜರಿದ್ದರು.

2007: ಏಷ್ಯಾ ಮೋಟಾರ್ ವರ್ಕ್ಸ್ ಲಿಮಿಟೆಡ್ (ಎಎಂಡಬ್ಲ್ಯು), ಭಾರಿ ತೂಕದ ಸರಕು ಸಾಗಣೆ ವಿಭಾಗದಲ್ಲಿ ಹೊಸ `4930 ಟ್ರಕ್'ನ್ನು ಮುಂಬೈಯಲ್ಲಿ ಮಾರುಕಟ್ಟೆಗೆ ಪರಿಚಯಿಸಿತು.

2007: ಇತರ ಬ್ಯಾಂಕುಗಳ ಎಟಿಎಂ ಬಳಕೆಗೆ ಗ್ರಾಹಕರಿಗೆ ವಿಧಿಸಲಾಗುತ್ತಿರುವ ದುಬಾರಿ ಸೇವಾ ಶುಲ್ಕ ಕಡಿಮೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿ ಐ), ವಾಣಿಜ್ಯ ಬ್ಯಾಂಕುಗಳಿಗೆ ಆದೇಶ ನೀಡಿತು. ಇತರ ಬ್ಯಾಂಕುಗಳ ಎಟಿಎಂ ಕೇಂದ್ರಗಳಿಂದ ಸ್ವಂತ ಖಾತೆಯ ಹಣ ಪಡೆಯುವುದೂ ಸೇರಿದಂತೆ, ಖಾತೆಯಲ್ಲಿನ ಹಣದ ವಿವರ ಪಡೆಯುವುದಕ್ಕೆ ಮುರಿದುಕೊಳ್ಳುವ ಗರಿಷ್ಠ ಪ್ರಮಾಣದ ಸೇವಾ ಶುಲ್ಕ ವಸೂಲಿ ನಿಲ್ಲಿಸಲು ಆರ್ ಬಿ ಐ ಸೂಚಿಸಿತು.

2007: ತಮಿಳಿನ ಉದಯೋನ್ಮುಖ ಚಲನಚಿತ್ರ ನಟ ಪ್ರವೀಣ್ ಕುಮಾರ್ (26) ಚೆನ್ನೈಯ ತಮ್ಮ ಮನೆಯಲ್ಲಿಯೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡರು. ತಮ್ಮ 36 ವರ್ಷದ ಪತ್ನಿ ನಿಷಾ ಜತೆ ವೈಮನಸ್ಸು ಉಂಟಾದದ್ದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡರು ಎಂದು ಪೊಲೀಸರು ತಿಳಿಸಿದರು. ಪ್ರವೀಣ್ ತಾಯಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಷಾ ವಿರುದ್ಧ ನೀಡಿದ ದೂರನ್ನು ಪೊಲೀಸರು ದಾಖಲಿಸಿಕೊಂಡರು.

2006: ಸ್ವಯಂಘೋಷಿತ `ಆತ್ಮರಕ್ಷಕ' (ಗಾಡ್ಫಾದರ್ ಆಫ್ ಸೋಲ್) ಗಾಯಕ ಜೇಮ್ಸ್ ಬ್ರೌನ್ (73) ಅಟ್ಲಾಂಟಾದಲ್ಲಿ ನಿಧನರಾದರು. ತೀವ್ರ ವಿಷಮಶೀತ ಜ್ವರದಿಂದ ಬಳಲುತ್ತಿದ್ದ ಬ್ರೌನ್ ಅವರನ್ನು ಕಳೆದ ವಾರಾಂತ್ಯದಲ್ಲಿಅಟ್ಲಾಂಟಾದ ಎಮೊರಿ ಕ್ರಾಫರ್ಡ್ ಲಾಂಗ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. `ಮಿಸ್ಟರ್ ಡೈನಮೈಟ್' ಎಂದೇ ಖ್ಯಾತರಾಗಿದ್ದ ಬ್ರೌನ್, ಸಂಗೀತದಲ್ಲಿ ಹೊಸ ತಲೆಮಾರಿನ ಮೇಲೆ ಪ್ರಭಾವ ಬೀರಿದ ಹಾಡುಗಾರ. ಬ್ರೌನ್ ಅವರ `ಸೇ ಇಟ್ ಲೌಡ್ (ಐ ಆ್ಯಮ್ ಬ್ಲ್ಯಾಕ್ ಅಂಡ್ ಐ ಆ್ಯಮ್ ಪ್ರೌಡ್) ಹಾಡಂತೂ 1960ರಲ್ಲಿ ನಾಗರಿಕ ಹಕ್ಕುಗಳ ಹಾಡಾಗಿ ಜನಪ್ರಿಯಗೊಂಡಿತ್ತು. 1968ರಲ್ಲಿ ಬ್ರೌನ್ ಅವರು ಈ ಹಾಡನ್ನು ರಿಚರ್ಡ್ ನಿಕ್ಸನ್ ಸಮ್ಮುಖದಲ್ಲೂ ಹಾಡಿದ್ದರು. 1990ರಲ್ಲಿ ಜೀವಮಾನದ ಸಾಧನೆಗಾಗಿ ಪ್ರತಿಷ್ಠಿತ `ಗ್ರಾಮ್ಮಿ' ಪ್ರಶಸ್ತಿಯನ್ನು ಪಡೆದ ಬ್ರೌನ್ ಅವರು, 119ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದು, 50 ಆಲ್ಬಂಗಳು ಪ್ರಕಟಗೊಂಡಿವೆ.

2006: ಬಿಜೆಪಿ ಜೊತೆ ಮೈತ್ರಿಗೆ ಕಾಂಗ್ರೆಸ್ ಪಕ್ಷದ ದುಷ್ಟ ಸಂಚು ಕಾರಣ ಎಂಬುದಾಗಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಮತ್ತು 38 ಸದಸ್ಯರು ನೀಡಿದ ವಿವರಣೆಗೆ ತೃಪ್ತಿ ವ್ಯಕ್ತಪಡಿಸಿದ ಜೆಡಿಎಸ್ ರಾಷ್ಟ್ರೀಯ ಕಾರ್ಯಕಾರಿಣಿ ಅವರ ವಿರುದ್ಧದ ಅಮಾನತನ್ನು ಹಿಂದೆ ಪಡೆಯಿತು.

2006: ವಿಶ್ವ ಗೋ ಸಮ್ಮೇಳನದ ಪ್ರಯುಕ್ತ ಶಿವಮೊಗ್ಗ ಜಿಲ್ಲೆ ಹೊಸನಗರದಲ್ಲಿ ಕಾಮಧೇನು ಮಹಾಯಾಗದ ಆರಂಭಕ್ಕೆ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ಚಾಲನೆ ನೀಡಿದರು.

2006: ಹಿರಿಯ ಪತ್ರಕರ್ತ ಟಿಂಗರ ಬುಡ್ಡಣ್ಣ ಖ್ಯಾತಿಯ ಜಿ.ಎಚ್. ರಾಘವೇಂದ್ರ (59) ಅವರು ಹುಬ್ಬಳ್ಳಿಯಲ್ಲಿ ನಿಧನರಾದರು. ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಸಹಾಯಕ ಸಂಪಾದಕರಾಗಿ ನಿವೃತ್ತಿ ಹೊಂದಿದ್ದ ರಾಘವೇಂದ್ರ ನಾಟಕಕಾರ ಹಾಗೂ ಹಾಸ್ಯ ಸಾಹಿತಿಯಾಗಿ ಖ್ಯಾತಿ ಪಡೆದವರು. ಚುಚ್ಚೇಂದ್ರ ಹೆಸರಿನಲ್ಲಿ ಅವರು ಬರೆಯುತ್ತಿದ್ದ `ಟಿಂಗರ ಬುಡ್ಡಣ್ಣ' ಸಂಯುಕ್ತ ಕರ್ನಾಟಕದಲ್ಲಿ ಅತ್ಯಂತ ಜನಪ್ರಿಯ ಅಂಕಣವಾಗಿತ್ತು.

2005: ಪಾಕಿಸ್ಥಾನದ ಇಸ್ಲಾಮಾಬಾದ್, ಉತ್ತರ ಪಾಕಿಸ್ಥಾನದ ನಗರಗಳು ಮತ್ತು ಭಾರತದ ಶ್ರೀನಗರದಲ್ಲಿ ಈದಿನ ಮಧ್ಯಾಹ್ನ 1 ಗಂಟೆಗೆ ರಿಕ್ಟರ್ ಮಾಪಕದಲ್ಲಿ 5.2ರಷ್ಟು ತೀವ್ರತೆಯ ಭೂಕಂಪ ಸಂಭವಿಸಿ ಜನರನ್ನು ದಿಕ್ಕೆಡಿಸಿತು. ಅಕ್ಟೋಬರ್ 8ರಂದು ಸಂಭವಿಸಿದ ಭೀಕರ ಭೂಕಂಪದಲ್ಲಿ ಪಾಕಿಸ್ಥಾನದ ಪಾಕ್ ಆಕ್ರಮಿತ ಕಾಶ್ಮೀರದ ರಾಜಧಾನಿ ಮುಜಾಫರಾಬಾದ್, ಬಾಲ್ ಕೋಟ್ ಸೇರಿದಂತೆ ಪಾಕಿಸ್ಥಾನ ವಾಯವ್ಯ ಪ್ರಾಂತ್ಯದಲ್ಲಿ 80,000ಕ್ಕೂ ಹೆಚ್ಚು ಜನ ಮೃತರಾಗಿ 35 ಲಕ್ಷಕ್ಕೂ ಹೆಚ್ಚು ಜನ ನಿರಾಶ್ರಿತರಾಗಿದ್ದರು.

2005: ಅಸ್ಸಾಂನ ಮಾಜಿ ಮುಖ್ಯಮಂತ್ರಿ ರಾಷ್ಟ್ರೀಯ ಕಾಂಗ್ರೆಸ್ಸಿನ ಹಿರಿಯ ನಾಯಕ ಶರತ್ ಚಂದ್ರ ಸಿನ್ಹ (92) ಗುವಾಹಟಿಯಲ್ಲಿ ನಿಧನರಾದರು.

1997: ಇಂದೋರಿನಲ್ಲಿ ನಡೆಯಬೇಕಿದ್ದ ಭಾರತ ಮತ್ತು ಶ್ರೀಲಂಕಾ ನಡುವಣ ಎರಡನೇ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವು ಮೂರು ಓವರುಗಳ ನಂತರ ಕೆಟ್ಟ ಪಿಚ್ ಕಾರಣಕ್ಕಾಗಿ ರದ್ದಾಯಿತು. ಕ್ರಿಕೆಟ್ ಇತಿಹಾಸದಲ್ಲೇ ಈ ಕಾರಣಕ್ಕಾಗಿ ಪಂದ್ಯ ರದ್ದಾದ ಪ್ರಕರಣ ಇದೇ ಮೊತ್ತ ಮೊದಲನೆಯದು.

1994: ಭಾರತದ ಮಾಜಿ ರಾಷ್ಟ್ರಪತಿ ಗಿಯಾನಿ ಜೈಲ್ ಸಿಂಗ್ (1916-1994) ಅವರು ತಮ್ಮ 78ನೇ ವಯಸಿನಲ್ಲಿ ಚಂಡೀಗಢದಲ್ಲಿ ನಿಧನರಾದರು. ಅವರು ನವೆಂಬರಿನಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದರು. ಇವರು ಭಾರತದ ಮೊತ್ತ ಮೊದಲ ಸಿಖ್ ರಾಷ್ಟ್ರಪತಿ.

1991: ಸೋವಿಯತ್ ಅಧ್ಯಕ್ಷ ಮಿಖಾಯಿಲ್ ಗೊರ್ಬಚೆವ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದರು. ಸೋವಿಯತ್ ಯೂನಿಯನ್ ಇತಿಹಾಸ ಗರ್ಭದಲ್ಲಿ ಸೇರಿ ಹೋಯಿತು. 1991ರ ಡಿಸೆಂಬರ್ 31ರಂದು ಕಾನೂನುಬದ್ಧವಾಗಿ ಸೋವಿಯತ್ ಯೂನಿಯನ್ ಅಂತ್ಯಗೊಂಡಿತು.

1989: ಜನರ ದಂಗೆಯಲ್ಲಿ ಪದಚ್ಯುತಿಗೊಂಡ ರೊಮೇನಿಯಾದ ಅಧ್ಯಕ್ಷ ನಿಕೋಲಾಯ್ ಸಿಯಾಸ್ಕು ಮತ್ತು ಅವರ ಪತ್ನಿ ಎಲೆನಾ ಅವರನ್ನು ಮರಣದಂಡನೆಗೆ ಗುರಿಪಡಿಸಲಾಯಿತು.

1977: ಸಿನಿಮಾ ರಂಗದಲ್ಲಿ ಅಂತಾರಾಷ್ಟ್ರೀಯ ಖ್ಯಾತಿ ಗಳಿಸಿದ ಹಾಸ್ಯ-ನಿರ್ದೇಶಕ ಸರ್ ಚಾರ್ಲ್ಸ್ ಚಾಪ್ಲಿನ್ (ಚಾರ್ಲಿ ಚಾಪ್ಲಿನ್ 1889-1977) ಸ್ವಿಟ್ಸರ್ ಲ್ಯಾಂಡಿನ ಕೊರ್ಸೀರ್-ಸುರ್-ವಿವೀಯಲ್ಲಿ ತಮ್ಮ 88ನೇ ವಯಸ್ಸಿನಲ್ಲಿ ಮೃತರಾದರು. (1978ರಲ್ಲಿ ಪೋಲ್ ಮತ್ತು ಬಲ್ಗೇರಿಯಾದ ವ್ಯಕ್ತಿ ಸೇರಿಕೊಂಡು ಚಾಪ್ಲಿನ್ ಅವರ ಪಾರ್ಥಿ ಶರೀರವನ್ನು ಸ್ಮಶಾನದಿಂದ ಕದ್ದು 60,000 ಫ್ರಾಂಕುಗಳಿಗೆ ಮಾರಿದರು. ಅವರಿಗೆ ಗ್ಯಾರೇಜ್ ವ್ಯವಹಾರಕ್ಕೆ ಹಣಬೇಕಾಗಿದ್ದ ಕಾರಣ ಈ ಕೃತ್ಯ ಎಸಗಿದ್ದಾಗಿನಂತರ ಅವರು ಹೇಳಿದರು.)

1972: ಭಾರತದ ಸ್ವಾತಂತ್ರ್ಯ ಯೋಧ ಚಕ್ರವರ್ತಿ ರಾಜಗೋಪಾಲಾಚಾರಿ `ರಾಜಾಜಿ' (1879-1972) ತಮ್ಮ 93ನೇ ವಯಸ್ಸಿನಲ್ಲಿ ನಿಧನರಾದರು. ಸ್ವತಂತ್ರ ಭಾರತದ ಏಕೈಕ ಗವರ್ನರ್ ಜನರಲ್ ಆಗಿದ್ದ ಇವರು ಸ್ವತಂತ್ರ ಪಕ್ಷವನ್ನು ಸ್ಥಾಪಿಸಿದವರು.

1924: ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹುಟ್ಟಿದ ದಿನ. 1996ರಲ್ಲಿ ಕೇವಲ 13 ದಿನಗಳ ಅವಧಿಗೆ ಭಾರತದ ಪ್ರಧಾನಿಯಾದ ಅವರು 1998ರಿಂದ 2004ರ ಅವಧಿಯಲ್ಲಿ ಎರಡು ಬಾರಿ ಚುನಾವಣೆಯಲ್ಲಿ ಗೆದ್ದು ಮತ್ತೆ ಪ್ರಧಾನಿಯಾಗಿದ್ದರು.

1643: ಭೌತತಜ್ಞ ಹಾಗೂ ಗಣಿತ ತಜ್ಞ ಸರ್ ಐಸಾಕ್ ನ್ಯೂಟನ್ (1643-1727) ಹುಟ್ಟಿದ ದಿನ. ಇವರ ಚಲನೆಯ ನಿಯಮಗಳು ಮುಂದೆ ವಿಶ್ವದ ಗುರುತ್ವಾಕರ್ಷಣೆಯ ನಿಯಮ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದವು.

1861: ಭಾರತೀಯ ಸ್ವಾತಂತ್ರ್ಯ ಹೋರಾಟಗಾರ ಪಂಡಿತ್ ಮದನ ಮೋಹನ ಮಾಳವೀಯ (1861-1946) ಅವರು ಜನಿಸಿದರು. ಬನಾರಸ್ ಹಿಂದೂ ವಿಶ್ವ ವಿದ್ಯಾಲಯ ಸ್ಥಾಪನೆಗೆ ನೆರವಾದವರಲ್ಲಿ ಇವರು ಪ್ರಮುಖರು.

1876: ಪಾಕಿಸ್ಥಾನದ ಸ್ಥಾಪಕ ಮಹಮ್ಮದ್ ಅಲಿ ಜಿನ್ನಾ (1876-1948) ಹುಟ್ಟಿದ ದಿನ.
PARYAYA: ಇಂದಿನ ಇತಿಹಾಸ History Today ಡಿಸೆಂಬರ್ 25: ಇಂದಿನ ಇತಿಹಾಸ ಡಿಸೆಂಬರ್ 25 2023 : ಕ್ರಿಮಿನಲ್‌ ಅಪರಾಧಗಳಿಗೆ ಸಂಬಂಧಿಸಿದಂತೆ ಆಮೂಲಾಗ್ರ ಬದಲಾವಣೆ ತರುವ ಉದ್ದೇಶದ ಮೂರು ಕ್ರಿಮಿನಲ್‌ ಮಸೂದೆಗಳಿಗೆ ರಾಷ್ಟ್ರಪತಿ ದ್ರೌಪ...

Sunday, December 24, 2023

PARYAYA: ಅಜಾತಶತ್ರು ಅಟಲ್‌ ೯೯ ನೇ ಜನ್ಮದಿನ

 ಅಜಾತಶತ್ರು ಅಟಲ್‌: ೯೯ ನೇ ಜನ್ಮದಿನ

ಭಾರತದ ಮಾಜಿ ಪ್ರಧಾನಿ, ಅಜಾತಶತ್ರು ಅಟಲ್‌ ಬಿಹಾರಿ ವಾಜಪೇಯಿ ಅವರ ೯೯ನೇ ಜನ್ಮದಿನದ ಅಂಗವಾಗಿ ೨೦೨೩ ಡಿಸೆಂಬರ್‌ ೨೫ರ ಸೋಮವಾರ ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ ಜಗದೀಪ್‌ ಧನ್‌ ಕರ್‌, ಪ್ರಧಾನಿ ನರೇಂದ್ರ ಮೋದಿ ಮತ್ತಿತರ ಗಣ್ಯರು ʼಸದೈವ ಅಟಲ್‌ʼ ಸಮಾಧಿಗೆ ತೆರಳಿ ಪುಷ್ಟ ನಮನ ಸಲ್ಲಿಸುವ ಮೂಲಕ ಗೌರವ ಸಲ್ಲಿಸಿದರು.

ಈ  ಸಂದರ್ಭದ ಒಂದು ವಿಡಿಯೋ ಇಲ್ಲಿದೆ:

ವಾಜಪೇಯಿ ಅವರ ಜನ್ಮದಿನವನ್ನು ಭಾರತ ಸರ್ಕಾರವು ʼಉತ್ತಮ ಆಡಳಿತದ ದಿನʼವಾಗಿ ಆಚರಿಸಿಕೊಂಡು ಬರುತ್ತಿದೆ. ವಾಜಪೇಯಿ ಅವರ ಕುರಿತು ಪ್ರಧಾನಿ ಮೋದಿ ಅವರು ಟ್ವಟ್ಟರಿನಲ್ಲಿ ಹಂಚಿಕೊಂಡಿರುವ ʼಅಟಲ್‌ ಸ್ಮರಣೆʼ ಕುರಿತ ವಿಡಿಯೋ ಇಲ್ಲಿವೆ:


PARYAYA: ಅಜಾತಶತ್ರು ಅಟಲ್‌ ೯೯ ನೇ ಜನ್ಮದಿನ:   ಅಜಾತಶತ್ರು ಅಟಲ್‌: ೯೯ ನೇ ಜನ್ಮದಿನ ಭಾರತದ ಮಾಜಿ ಪ್ರಧಾನಿ, ಅಜಾತಶತ್ರು ಅಟಲ್‌ ಬಿಹಾರಿ ವಾಜಪೇಯಿ ಅವರ ೯೯ನೇ ಜನ್ಮದಿನದ ಅಂಗವಾಗಿ ೨೦೨೩ ಡಿಸೆಂಬರ್‌ ೨೫ರ ಸೋಮವಾರ ರಾಷ್...

PARYAYA: ಬೆಳಗ್ಗೆ ಎದ್ದು ಮನೆಯಿಂದ ಹೊರಬಂದರೆ ಕಂಡದ್ದೇನು?

ಬೆಳಗ್ಗೆ ಎದ್ದು ಮನೆಯಿಂದ ಹೊರಬಂದರೆ ಕಂಡದ್ದೇನು?

 ಬೆಳಗ್ಗೆ ಎದ್ದು ಮನೆಯಿಂದ ಹೊರಬಂದರೆ ಕಂಡದ್ದೇನು?

ಬೆಳ್ಳಂ ಬೆಳಗ್ಗೆ ಎದ್ದು ಮನೆಯಿಂದ ಹೊರಕ್ಕೆ ಬಂದೆ. ಇಷ್ಟು ದಿನಗಳ ವಾತಾವರಣ ಇಂದು ಇರಲಿಲ್ಲ. ಚುಮು ಚುಮು ಚಳಿಯ ಮಧ್ಯೆ ಅಕ್ಕ ಪಕ್ಕದ ಮನೆ ಕಾಣದಷ್ಟು ಹಿಮ/ ಮಂಜು.

ಹಾಗೆಯೇ ಕೆಳಗಿಳಿದು ರಸ್ತೆಗೆ ಬಂದೆ.

ಆಗ ಕಂಡದ್ದೇನು?

ಮೇಲಿನ ಚಿತ್ರ ಕ್ಲಿಕ್‌ ಮಾಡಿರಿ

PARYAYA: ಬೆಳಗ್ಗೆ ಎದ್ದು ಮನೆಯಿಂದ ಹೊರಬಂದರೆ ಕಂಡದ್ದೇನು?:   ಬೆಳಗ್ಗೆ ಎದ್ದು ಮನೆಯಿಂದ ಹೊರಬಂದರೆ ಕಂಡದ್ದೇನು ? ಬೆಳ್ಳಂ ಬೆಳಗ್ಗೆ ಎದ್ದು ಮನೆಯಿಂದ ಹೊರಕ್ಕೆ ಬಂದೆ. ಇಷ್ಟು ದಿನಗಳ ವಾತಾವರಣ ಇಂದು ಇರಲಿಲ್ಲ. ಚುಮು ಚುಮು ಚಳಿಯ ಮಧ್...

Tuesday, December 12, 2023

PARYAYA: ಪುಸ್ತಕಗಳ ಬಿಡುಗಡೆ ಹೀಗಾಯ್ತು ನೋಡಿ…

 ಪುಸ್ತಕಗಳ ಬಿಡುಗಡೆ ಹೀಗಾಯ್ತು ನೋಡಿ…


ಸಂಪೂರ್ಣ ಸ್ವರಾಜ್‌ ಫೌಂಡೇಷನ್ನಿನ ಸಂಸ್ಥಾಪಕವ್ಯವಸ್ಥಾಪಕ ಟ್ರಸ್ಟಿ ಡಾ. ಶಂಕರ ಕೆ. ಪ್ರಸಾದ್‌ ಅವರು ಬರೆದ ʼ21ನೇ ಶತಮಾನದ ಆತ್ಮ ನಿರ್ಭರ ಗ್ರಾಮ ಪಂಚಾಯಿತಿʼ ಮತ್ತು ಅದರ ಆಂಗ್ಲ ಆವೃತ್ತಿ ʼರಿಬೂಟಿಂಗ್‌ ಡೆಮಾಕ್ರಸಿ ಇನ್‌ ಗ್ರಾಮ್‌ ಪಂಚಾಯತ್ಸ್‌ʼ (Rebooting Democracy in Gram Panchayats) ಪುಸ್ತಕಗಳನ್ನು ಮಾಜಿ ಮಾಹಿತಿ ತಂತ್ರಜ್ಞಾನ ಸಚಿವ ಪ್ರೊ. ಬಿ.ಕೆ. ಚಂದ್ರಶೇಖರ್‌ ಅವರು 2023 ಡಿಸೆಂಬರ್‌ 9ರ ಶನಿವಾರ ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಚಿತ್ರಕಲಾ ಪರಿಷತ್‌ ಅಧ್ಯಕ್ಷ
ವಿಧಾನ ಪರಿಷತ್ತಿನ ಮಾಜಿ ಸಭಾಪತಿ ಬಿ.ಎಲ್.‌ ಶಂಕರ್‌ಅಜೀಮ್‌ ಪ್ರೇಮ್‌ ಜಿ ವಿಶ್ವವಿದ್ಯಾಲಯದ ಸಂಶೋಧನಾ ಪ್ರಾಧ್ಯಾಪಕ ಡಾ. ಶಾಮ್‌ ಕಶ್ಯಪ್‌ ಹಾಜರಿದ್ದರು. ಚಾಣಕ್ಯ ವಿಶ್ವ ವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಪ್ರೊ.ಸದಾನಂದ ಜಾನೆಕೆರೆ ಅಧ್ಯಕ್ಷತೆ ವಹಿಸಿದ್ದರು.

ಚಿತ್ರದ ಸಮೀಪ ನೋಟಕ್ಕೆ ಮೇಲಿನ ಚಿತ್ರ ಕ್ಲಿಕ್‌ ಮಾಡಿರಿ,

ವಿಡಿಯೋ ನೋಡಲು ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ:


ಕೆಳಗಿನ ಸುದ್ದಿಗಳನ್ನೂ ಓದಿರಿ:

ಭ್ರಷ್ಟಾಚಾರ, ಮಧ್ಯವರ್ತಿ ನಿವಾರಣೆಗೆ ತಂತ್ರಜ್ಞಾನ ಪರಿಹಾರ

ಏನಿದೆ ಈ ಪುಸ್ತಕಗಳಲ್ಲಿ?


PARYAYA: ಪುಸ್ತಕಗಳ ಬಿಡುಗಡೆ ಹೀಗಾಯ್ತು ನೋಡಿ…:   ಪುಸ್ತಕಗಳ ಬಿಡುಗಡೆ ಹೀಗಾಯ್ತು ನೋಡಿ… ಸಂಪೂರ್ಣ ಸ್ವರಾಜ್‌ ಫೌಂಡೇಷನ್ನಿನ ಸಂಸ್ಥಾಪಕ , ವ್ಯವಸ್ಥಾಪಕ ಟ್ರಸ್ಟಿ ಡಾ. ಶಂಕರ ಕೆ. ಪ್ರಸಾದ್‌ ಅವರು ಬರೆದ ʼ21 ನೇ ಶತಮಾನದ ...

Sunday, December 10, 2023

PARYAYA: ಭ್ರಷ್ಟಾಚಾರ, ಮಧ್ಯವರ್ತಿ ನಿವಾರಣೆಗೆ ತಂತ್ರಜ್ಞಾನ ಪರಿಹಾರ

 ಭ್ರಷ್ಟಾಚಾರಮಧ್ಯವರ್ತಿ ನಿವಾರಣೆಗೆ ತಂತ್ರಜ್ಞಾನ ಪರಿಹಾರ

ಬೆಂಗಳೂರು: ಭ್ರಷ್ಟಾಚಾರ ಮತ್ತು ಮಧ್ಯವರ್ತಿಗಳ ಹಾವಳಿಯಿಂದಾಗಿ ಪ್ರಾತಿನಿಧಿಕ ಪ್ರಜಾಪ್ರಭುತ್ವ ಎಂಬುದು ಇಂದು ಒಂದು ಕಟ್ಟುಕಥೆಯಂತಾಗಿದೆ. ಇದರ ನಿವಾರಣೆಗೆ ತಂತ್ರಜ್ಞಾನಗಳ ಅಳವಡಿಕೆ ಉತ್ತಮ ಪರಿಹಾರ ಆಗಬಲ್ಲುದು ಎಂದು ಮಾಜಿ ಮಾಹಿತಿ ತಂತ್ರಜ್ಞಾನಸಚಿವ ಪ್ರೊಫೆಸರ್‌ ಬಿ‌ ಕೆ ಚಂದ್ರಶೇಖರ್‌ ಅವರು 2023 ಡಿಸೆಂಬರ್‌ 9ರ ಶನಿವಾರ ಇಲ್ಲಿ ಹೇಳಿದರು.

ಸಂಪೂರ್ಣ ಸ್ವರಾಜ್‌ ಫೌಂಡೇಷನ್‌ ಸಂಸ್ಥಾಪಕವ್ಯವಸ್ಥಾಪಕ ಟ್ರಸ್ಟಿ ಡಾಕ್ಟರ್ ಶಂಕರ ಕೆ ಪ್ರಸಾದ್‌ ಅವರು ಬರೆದ ʼ21ನೇ ಶತಮಾನದ ಆತ್ಮನಿರ್ಭರ ಗ್ರಾಮ ಪಂಚಾಯಿತಿʼ ಮತ್ತು ಅದರ ಆಂಗ್ಲ ಆವೃತ್ತಿ ʼರಿಬೂಟಿಂಗ್‌ ಡೆಮಾಕ್ರೆಸಿ ಇನ್‌ ಗ್ರಾಮ್‌ ಪಂಚಾಯತ್ಸ್‌ʼ ಪುಸ್ತಕಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡುತ್ತಿದ್ದರು.

ಭ್ರಷ್ಟಾಚಾರ ಮತ್ತು ದಲ್ಲಾಳಿಗಳ ಪರಿಣಾಮವಾಗಿ ಕೇಂದ್ರ ಸರ್ಕಾರದಿಂದ ಬಿಡುಗಡೆಯಾಗುವ ಅನುದಾನಗ್ರಾಮಗಳಿಗೆ ತಲುಪುವಾಗ ಶೇಕಡಾ 15ಕ್ಕಿಂತಲೂ ಕೆಳಗಿನ ಪ್ರಮಾಣಕ್ಕೆ ಇಳಿಯುತ್ತದೆ ಎಂಬ ಕಾರಣಕ್ಕಾಗಿಯೇ ಇದರ ನಿವಾರಣೆಗೆ ಅಧಿಕಾರ ವಿಕೇಂದ್ರೀಕರಣವೇ ಮದ್ದು ಎಂದು ಯೋಚಿಸಿ ರಾಜ್ಯದಲ್ಲಿ ಆಗಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಕೇಂದ್ರದಲ್ಲಿ ಆಗಿನ ಪ್ರಧಾನಿ ರಾಜೀವ ಗಾಂಧಿ ಅವರು ಗ್ರಾಮ ಪಂಚಾಯಿತಿ ಕಾಯ್ದೆಗಳನ್ನು ತಂದರು. ಆದರೆ ಅದರ ಆಶಯಗಳು ಈಡೇರಲಿಲ್ಲ ಎಂದು ಅವರು ಹೇಳಿದರು.

ಜನರಿಗೆ ಅತ್ಯಂತ ಸಮೀಪದ ಸಂಸ್ಥೆ ಗ್ರಾಮ ಸಭೆ. ಆದರೆ ಗ್ರಾಮಗಳ ಜನರಿಗೆಚುನಾಯಿತ ಪ್ರತಿನಿಧಿಗಳಿಗೆ ಗ್ರಾಮ ಸಭೆಗೆ ಇರುವ ಅಧಿಕಾರಅಲ್ಲಿಗೆ ಬರುವ ಅನುದಾನಗಳುಸಂಪನ್ಮೂಲ ಕ್ರೋಡೀಕರಣದ ಬಗ್ಗೆ ಗೊತ್ತಿರುವುದಿಲ್ಲ. ಗ್ರಾಮ ಸಭೆಗಳಿಗೆ ಜನ ಬರುವುದೂ ಇಲ್ಲ. ಅವುಗಳನ್ನು ಬಲಪಡಿಸಲು ಸರ್ಕಾರದ ಬೆಂಬಲ ಅಗತ್ಯ ಎಂದು ಅವರು ನುಡಿದರು.

ಇಂಗಾಲ ಮುಕ್ತ ಪರಿಸರದ ನಿರ್ಮಾಣವನ್ನು ಪ್ರತಿಪಾದಿಸಿದ ಅವರು ಇದು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಆಗಬೇಕು.. ಗ್ರಾಮ ಪಂಚಾಯಿತಿಗಳು ಇಂಗಾಲ ಮುಕ್ತ ಗ್ರಾಮ ಪಂಚಾಯಿತಿಗಳಾಗಬೇಕು ಎಂದು ಹೇಳಿದರು.

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದ ವಿಧಾನ ಪರಿಷತ್ತಿನ ಮಾಜಿ ಸಭಾಪತಿ ಬಿಎಲ್‌ ಶಂಕರ್‌ ಅವರು ಮಾತನಾಡಿ ʼಕೇಂದ್ರ ಸರ್ಕಾರರಾಜ್ಯ ಸರ್ಕಾರಗಳ ಬದಲಿಗೆ ಗಾಮ ಪಂಚಾಯಿತಿಗಳೇ ಅಭಿವೃದ್ಧಿಯ ಕೇಂದ್ರವಾಗಬೇಕು. ಗ್ರಾಮಗಳಲ್ಲಿನ ಅಭಿವೃದ್ಧಿಯ ಎಲ್ಲ ಸಂಸ್ಥೆಗಳು ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಅಡಿಯಲ್ಲಿ ಬರಬೇಕು. ಆದರೆ ಸ್ವಾತಂತ್ರ್ಯ ಲಭಿಸಿ 75 ವರ್ಷಗಳಾದರೂ ನಮ್ಮ ಜನಪ್ರತಿನಿಧಿಗಳಿಗೇ ಈ ಬಗ್ಗೆ ಸ್ಪಷ್ಟತೆ ಇಲ್ಲ ಎಂದು ನುಡಿದರು.

ಗ್ರಾಮ ಪಂಚಾಯಿತಿಗಳ ಮಹತ್ವವನ್ನು ಸಮರ್ಪಕವಾಗಿ ಮನಗಂಡಿದ್ದವರು ಮಹಾತ್ಮ ಗಾಂಧೀಜಿ. 73 ಮತ್ತು 74ನೇ ತಿದ್ದುಪಡಿಗಳನ್ನು ರಾಜೀವ ಗಾಂಧಿಯವರು ತಂದರೂ ಅದು ವಿಫಲವಾಯಿತು. ಈ ನಿಟ್ಟಿನಲ್ಲಿ ಮಹತ್ವದ ಕೆಲಸ ಮಾಡಿದ್ದು ಪಿ ವಿ ನರಸಿಂಹ ರಾವ್.‌ ಅದಕ್ಕೂ ಮುನ್ನ ರಾಮಕೃಷ್ಣ ಹೆಗಡೆ ಅವರು ತಂದಿದ್ದ ಪಂಚಾಯಿತಿ ವ್ಯವಸ್ಥೆ ಇಂದಿನ ಪಂಚಾಯಿತಿ ವ್ಯವಸ್ಥೆಗಿಂತ ಉತ್ತಮವಾಗಿತ್ತು ಎಂಬುದು ಹಳ್ಳಿ ಜನರಿಗೂ ಗೊತ್ತು ಎಂದು ಅವರು ಹೇಳಿದರು.

ತಂತ್ರಜ್ಞಾನ ಬಳಕೆಯಿಂದ ಅನುಕೂಲ ಎಂಬುದು ನಿರ್ವಿವಾದ. ಆದರೆ ಗ್ರಾಮ ಪಂಚಾಯಿತಿಗಳ ವೈಫಲ್ಯಕ್ಕೆ ನಮ್ಮ ಜನಪ್ರತಿನಿಧಿಗಳುಶಾಸಕರ ಅಧಿಕಾರ ಬಿಟ್ಟುಕೊಡಲು ಮನಸ್ಸಿಲ್ಲದ ಮಾನಸಿಕತೆಯೇ ಕಾರಣ. ಎಲ್ಲರೂ ಸೇರಿ ದೇಶ ಕಟ್ಟುವ ಮನೋಭಾವ ಬೇಕು ಎಂದು ಅವರು ನುಡಿದರು. ಇಂಗಾಲ ಮುಕ್ತ ಗ್ರಾಮಗಳ ರಚನೆಯ ಅಗತ್ಯವನ್ನು ಶಂಕರ್‌ ಅವರೂ ಪ್ರತಿಪಾದಿಸಿದರು.

ಸಮಾರಂಭದಲ್ಲಿ ಅತಿಥಿಯಾಗಿ ಪಾಲ್ಗೊಂಡಿದ್ದ ಅಜೀಮ್‌ ಪ್ರೇಮ್‌ಜಿ ವಿಶ್ವವಿದ್ಯಾಲಯದ ಸಂಶೋಧನಾ ಪ್ರಾಧ್ಯಾಪಕ ಡಾಕ್ಟರ್‌ ಶಾಮ್‌ ಕಶ್ಯಪ್‌ ಅವರು ತಂತ್ರಜ್ಞಾನಗಳ ಬಳಕೆಯಿಂದ ಗ್ರಾಮ ಪಂಚಾಯಿತಿಗಳ ಸಾಮರ್ಥ್ಯ ಹೆಚ್ಚುತ್ತದೆ ಎಂದರು. ಚಿಕ್ಕಬಳ್ಳಾಪುರದ ಗ್ರಾಮ ಪಂಚಾಯ್ತಿಯೊಂದರ ಮಾಜಿ ಅಧ್ಯಕ್ಷೆ ಗಾಯತ್ರಿ ನ್ಯಾವಿಗೇಷನ್‌ ಲರ್ನಿಂಗ್‌ ತಂತ್ರಜ್ಞಾನದ ಉಪಯುಕ್ತತೆ ಬಗ್ಗೆ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಚಾಣಕ್ಯ ವಿಶ್ವ ವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಪ್ರೊಫೆಸರ್‌ ಸದಾನಂದ ಜಾನೆಕೆರೆ ಅವರು ಶಂಕರ ಪ್ರಸಾದ್‌ ಅವರು ಚಾಣಕ್ಯ ವಿಶ್ವವಿದ್ಯಾಲಯದಲ್ಲಿ ಪ್ರವಚನ ನೀಡುವ ಮೂಲಕ ತಂತ್ರಜ್ಞಾನಗಳನ್ನು ವಿದ್ಯಾರ್ಥಿಗಳ ಮಟ್ಟಕ್ಕೆ ಒಯ್ಯಲಿದ್ದಾರೆ ಎಂದು ಹೇಳಿದರು.

ಡಾಕ್ಟರ್ ಶಂಕರ ಪ್ರಸಾದ್‌ ಅವರು ಸಂಪೂರ್ಣ ಸ್ವರಾಜ್‌ ಫೌಂಡೇಷನ್‌ ಕಳೆದ ಒಂದು ದಶಕದ ಅವಧಿಯಲ್ಲಿ ಮಾಡಿದ ಕಾರ್ಯಗಳ ಪ್ರಾತ್ಯಕ್ಷಿಕೆಯನ್ನೂ ನೀಡಿದರು. ಕೇಶವ ಪ್ರಸಾದ್‌ ಅವರು ಕಾರ್ಯಕ್ರಮ ನಿರ್ವಹಿಸಿದರು.

ಸುದ್ದಿಯನ್ನು ಆಲಿಸಲು ಕೆಳಗೆ ಕ್ಲಿಕ್‌ ಮಾಡಿರಿ. ಚಿತ್ರಗಳ ಸಮೀಪ ನೋಟಕ್ಕಾಗಿ ಮೇಲಿನ ಚಿತ್ರಗಳನ್ನು ಕ್ಲಿಕ್‌  ಮಾಡಿರಿ.

 

ಕೆಳಗಿನ ಸುದ್ದಿಗಳನ್ನೂ ಓದಿರಿ:

ಏನಿದೆ ಈ ಪುಸ್ತಕಗಳಲ್ಲಿ?

PARYAYA: ಭ್ರಷ್ಟಾಚಾರ, ಮಧ್ಯವರ್ತಿ ನಿವಾರಣೆಗೆ ತಂತ್ರಜ್ಞಾನ ಪರಿಹಾರ:   ಭ್ರಷ್ಟಾಚಾರ , ಮಧ್ಯವರ್ತಿ ನಿವಾರಣೆಗೆ ತಂತ್ರಜ್ಞಾನ ಪರಿಹಾರ ಬೆಂಗಳೂರು: ಭ್ರಷ್ಟಾಚಾರ ಮತ್ತು ಮಧ್ಯವರ್ತಿಗಳ ಹಾವಳಿಯಿಂದಾಗಿ ಪ್ರಾತಿನಿಧಿಕ ಪ್ರಜಾಪ್ರಭುತ್ವ ಎಂಬುದು ಇ...