Monday, November 26, 2018

ಇಂದಿನ ಇತಿಹಾಸ History Today ನವೆಂಬರ್ 26

ಇಂದಿನ ಇತಿಹಾಸ History Today ನವೆಂಬರ್  26


2018: ನವದೆಹಲಿ: ಗುಜರಾತಿನಲ್ಲಿ ದೇವಾಲಯ ಭೇಟಿಯ ಬಳಿಕ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ತಾವುಜನಿವಾರ ಧರಿಸುವ ಬ್ರಾಹ್ಮಣ ಎಂಬುದಾಗಿ ಹೇಳಿದ್ದು, ಮಾನಸ ಸರೋವರ ಯಾತ್ರೆಯ ಬಳಿಕ ತಾವು ಶಿವನ ಅನುಯಾಯಿ ಎಂದು ಹೇಳಿದ್ದರು. ಈಗ ರಾಜಸ್ಥಾನದಲ್ಲಿ  ಬ್ರಹ್ಮ ದೇವಾಲಯದ ಮುಖ್ಯ ಅರ್ಚಕರ ಬಳಿ ರಾಹುಲ್ ಗಾಂಧಿ ತಮ್ಮಗೋತ್ರವನ್ನು ಬಹಿರಂಗ ಪಡಿಸಿದರು. ಪುಷ್ಕರ ದೇವಾಲಯದ ಮುಖ್ಯ ಅರ್ಚಕರ ಬಳಿ ರಾಹುಲ್ ಗಾಂಧಿ ಅವರು ತಾವು ಕೌಲ್ ಬ್ರಾಹ್ಮಣರಾಗಿದ್ದು ‘ದತ್ತಾತ್ರೇಯ ಗೋತ್ರ’ದವರು ಎಂಬುದಾಗಿ ಹೇಳಿದರು.  ಪುಷ್ಕರದಲ್ಲಿ ರಾಹುಲ್ ಗಾಂಧಿ ಅವರು ಪೂಜಾ ವಿಧಿ ನೆರವೇರಿಸಿದ ಬಳಿಕ ಮುಖ್ಯ ಅರ್ಚಕರು ರಾಹುಲ್ ಗಾಂಧಿ ಅವರ ಗೋತ್ರವನ್ನು ಬಹಿರಂಗಕ್ಕೆ ತಂದರು. ಧಾರ್ಮಿಕ ವಿಧಿಯಲ್ಲಿ ಪಾಲ್ಗೊಂಡ ಬಳಿಕ ರಾಹುಲ್ ಗಾಂಧಿ ಅವರು ತಮ್ಮ ಗೋತ್ರವನ್ನು ಮಾಧ್ಯಮಗಳಿಗೆ ತಿಳಿಸಲಿಲ್ಲ.  ಬದಲಿಗೆ ಮುಖ್ಯ ಅರ್ಚಕ ರಾಜನಾಥ್ ಕೌಲ್ ಅವರು ಪುಷ್ಕರದಲ್ಲಿ ವಿಚಾರವನ್ನು ಸಾಕ್ಷ್ಯ ಸಹಿತವಾಗಿ ಬಹಿರಂಗ ಪಡಿಸಿದರು.. ರಾಹುಲ್ ಗಾಂಧಿ ಅವರು ಹಿರಿಯರ ದಾಖಲೆಗಳನ್ನು ತಾವು ನೋಡಿದ್ದು ಮೋತಿಲಾಲ್ ನೆಹರೂ ಅವರಿಂದ ಇಂದಿರಾಗಾಂಧಿ ಅವರವರೆಗೆ ಮತ್ತು ರಾಹುಲ್ ತಂದೆ ರಾಜೀವ ಗಾಂಧಿ ಅವರೂ ಕೌಲ್ ಬ್ರಾಹ್ಮಣರಾಗಿದ್ದು  ದತ್ತಾತ್ರೇಯ  ಗೋತ್ರಕ್ಕೆ ಸೇರಿದ್ದಾರೆ ಎಂದು ಅರ್ಚಕ ನುಡಿದರು. ರಾಹುಲ್ ಅವರು ಸ್ವತಃ ತಮ್ಮ ಗೋತ್ರವನ್ನು ತಿಳಿಸಿದ್ದಾರೆ ಎಂದು ಅವರು ಹೇಳಿದರುರಾಜಸ್ಥಾನ ಚುನಾವಣೆ ಸಂದರ್ಭದಲ್ಲಿ ವಿವರಗಳು ಭಾರೀ ಮಹತ್ವ ಪಡೆದಿವೆ. ಕಾಂಗ್ರೆಸ್ ನಾಯಕ ಸಿಪಿ ಜೋಶಿ ಅವರು ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಸಂಸದೆ ಉಮಾಭಾರತಿ, ಹಿಂದೂ ಕಾರ್ಯಕರ್ತೆ ಸಾಧ್ವಿ ಋತಂಭರಾ ಅವರುಕೆಳ ಜಾತಿಯವರಾಗಿದ್ದು ಅವರಿಗೆ ಹಿಂದೂ ಧರ್ಮದ ಬಗ್ಗೆ ಏನೂ ಗೊತ್ತಿಲ್ಲ. ಬ್ರಾಹ್ಮಣರು ಮಾತ್ರವೇ ಹಿಂದುತ್ವದ ಬಗ್ಗೆ ಮಾತನಾಡಬಹುದು ಎಂದಿದ್ದರು. ರಾಹುಲ್ ಗಾಂಧಿಯವರು ತತ್ ಕ್ಷಣವೇ ಜೋಶಿ ಹೇಳಿಕೆಯನ್ನು ಖಂಡಿಸಿ, ಪ್ರಧಾನಿಯ ಕ್ಷಮೆಯಾಚನೆ ಮಾಡುವಂತೆ ಸೂಚಿಸಿದ್ದರುಇದೀಗ ಬಿಜೆಪಿ ಹಿಂದೂ ಪರ ನಿಲುವಿನ ಹಿನ್ನೆಲೆಯಲ್ಲೇ ರಾಜಸ್ಥಾನದ ಅರ್ಚಕರು ರಾಹುಲ್ ಗಾಂಧಿ ಅವರ ಗೋತ್ರವನ್ನು ಬಹಿರಂಗ ಪಡಿಸಿದ್ದಾರೆ ಎಂದು ರಾಜಕೀಯ ವಲಯದಲ್ಲಿ ಅರ್ಥೈಸಲಾಯಿತು. ಹಿಂದೂ ಮತಗಳನ್ನು ಸೆಳೆಯುವುದಕ್ಕಾಗಿ ಮಾತ್ರವೇ ರಾಹುಲ್ ಗಾಂಧಿ ಅವರು ಜನಿವಾರ ಧರಿಸುತ್ತಿದ್ದಾರೆ ಎಂದು ಬಿಜೆಪಿ ಪ್ರತಿಪಾದಿಸಿತ್ತು.  ‘ರಾಹುಲ್ ಗಾಂಧಿ ಜನಿವಾರ ಧರಿಸುತ್ತಿದ್ದರೆ ಅವರು ಎಂತಹ ಜನಿವಾರ ಧರಿಸುತ್ತಿದ್ದಾರೆ, ಅವರ ಗೋತ್ರ ಯಾವುದು?’ ಎಂದ ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಇಂದೋರ್ ಚುನಾವಣಾ ಸಭೆಯಲ್ಲಿ  ಪ್ರಶ್ನಿಸಿದ್ದರುರಾಹುಲ್ ಗಾಂಧಿ ಅವರ ಅಜ್ಜ ಫಿರೋಜ್ ಗಾಂಧಿ ಪಾರ್ಸಿ ಸಮುದಾಯ ದವರಾಗಿದ್ದು, ಪಾರ್ಸಿ ಸಮುದಾಯದವರಿಗೆ ಯಾವುದೇ ಗೋತ್ರ ಇರುವುದಿಲ್ಲ ಎಂದು ಹಲವಾರು ಅರ್ಚಕರು ಹೇಳುತ್ತಾರೆ. ಹೀಗಾಗಿ ರಾಹುಲ್ ಗಾಂಧಿ ಅವರು ತಮ್ಮ ಅಜ್ಜಿ ಇಂದಿರಾಗಾಂಧಿ ಅವರಿಂದ ತಮ್ಮ ಗೋತ್ರವನ್ನು ಪಡೆದಿದ್ದಾರೆ ಎನ್ನಲಾಗಿದೆ. ರಾಹುಲ್ ಗಾಂಧಿ ಕುಟುಂಬವು ತನ್ನ ಗೋತ್ರವನ್ನ ಹೇಳಿಕೊಂಡಿರುವುದು ಇದೇ ಪ್ರಪ್ರಥಮ.

2018: ನವದೆಹಲಿ: ಹತ್ತು ವರ್ಷ ಹಿಂದಿನ ಮುಂಬೈ ಮೇಲಿನ ೨೬/೧೧ರ ಭಯೋತ್ಪಾದಕ ದಾಳಿ ಹಿಂದಿನ ದುಷ್ಕರ್ಮಿಗಳನ್ನು ನ್ಯಾಯಾಲಯದ ಕಟಕಟೆಗೆ ತರುವಲ್ಲಿ ಪಾಕಿಸ್ತಾನವು ಪ್ರಾಮಾಣಿಕತೆಯನ್ನು ಪ್ರದರ್ಶಿಸುತ್ತಿಲ್ಲ ಎಂದು ಆಪಾದಿಸಿದ ಭಾರತ, ’ದಾಳಿಯನ್ನು ರೂಪಿಸಿದ್ದ ಪಾತಕಿಗಳು ಪಾಕಿಸ್ತಾನದ ರಸ್ತೆಗಳಲ್ಲಿ ಈಗಲೂ ನಿಭರ್ಯದಿಂದ ರಾಜಾರೋಷವಾಗಿ ಅಡ್ಡಾಡುತ್ತಿದ್ದಾರೆ ಎಂದು ಹೇಳಿತು.   ‘೨೬/೧೧ರ ದಾಳಿಯನ್ನು ಪಾಕಿಸ್ತಾನದ ನೆಲದಲ್ಲೇ ಯೋಜಿಸಿ, ಅಲ್ಲಿಂದಲೇ ಜಾರಿಗೊಳಿಸಲಾಯಿತು. ಪಾಕಿಸ್ತಾನದ ಮಾಜಿ ಪ್ರಧಾನಿಯವರೇ ವರ್ಷಾರಂಭದಲ್ಲಿ ಇದನ್ನು ಒಪ್ಪಿಕೊಂಡು ಪಾಕಿಸ್ತಾನದ ನೆಲದಿಂದಲೇ ಭಯೋತ್ಪಾದಕರನ್ನು ಕಳುಹಿಸಲಾಗಿತ್ತು ಎಂದು ಹೇಳಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿತು.  ‘ಪಾಕಿಸ್ತಾನವು ದ್ವಿಮುಖ ನೀತಿಯನ್ನು ಬಿಡಬೇಕು ಮತ್ತು ಭಯಾನಕ ದಾಳಿಯ ದುಷ್ಕರ್ಮಿಗಳನ್ನು ತುರ್ತಾಗಿ ನ್ಯಾಯಾಂಗದ ಕಟಕಟೆಗೆ ತಂದು ನ್ಯಾಯ ಒದಗಿಸಬೇಕು ಎಂದು ನಾವು ಮತ್ತೊಮ್ಮೆ ಆಗ್ರಹಿಸುತ್ತಿದ್ದೇವೆ. ಇದು ಭಯೋತ್ಪಾದಕ ಕೃತ್ಯಕ್ಕೆ ಬಲಿಯಾದ ಮುಗ್ದ ವ್ಯಕ್ತಿಗಳ ಕುಟುಂಬಗಳಿಗೆ  ಪಾಕಿಸ್ತಾನದ ಉತ್ತರದಾಯಿತ್ವದ ಪ್ರಶ್ನೆ ಮಾತ್ರವೇ ಅಲ್ಲ, ಅಂತಾರಾಷ್ಟ್ರೀಯ ಬದ್ಧತೆ ಕೂಡಾ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿತು. ದೋಣಿ ಮೂಲಕ ಮುಂಬೈಗೆ ನುಸುಳಿ, ಮೂರು ದಿನಗಳ ಕಾಲ ಮುಂಬೈಯ ವಿವಿಧ ಸ್ಥಳಗಳಲ್ಲಿ ಯದ್ವಾತದ್ವ ಗುಂಡಿನ ದಾಳಿ ಮತ್ತು ಗ್ರೆನೇಡ್ ದಾಳಿ ನಡೆಸಿದ್ದ ಲಷ್ಕರ್--ತೊಯ್ಬಾದ ಭಯೋತ್ಪಾದಕ ದಾಳಿಗೆ ಅಮೆರಿಕದ ಮಂದಿ ಸೇರಿದಂತೆ ೧೬೬ ಮಂದಿ ಬಲಿಯಾಗಿದ್ದರು. ಮಂದಿ ದಾಳಿಕೋರರು ಪೊಲೀಸ್ ಗುಂಡೇಟಿಗೆ ಸಿಲುಕಿ ಸಾವನ್ನಪ್ಪಿದ್ದರು. ಬದುಕಿ ಉಳಿದ ಏಕೈಕ ಭಯೋತ್ಪಾದಕ ಅಜ್ಮಲ್ ಕಸಬ್ನನ್ನು ಸೆರೆ ಹಿಡಿಯಲಾಗಿತ್ತು. ವಿಚಾರಣೆಯ ಬಳಿಕ ಭಾರತದ ನ್ಯಾಯಾಲಯ ಕಸಬ್ ಗೆ ಮರಣ ದಂಡನೆ ವಿಧಿಸಿತ್ತು೨೦೦೮ರ ನವೆಂಬರ್ ೨೬ರ ಮುಂಬೈ ಭಯೋತ್ಪಾದಕ ದಾಳಿಗೆ ಕಾರಣವಾದ ಲಷ್ಕರ್--ತೊಯ್ಬಾ ಮತ್ತು ಅದರ ಆಧೀನ ಸಂಘಟನೆಗಳು ಸೇರಿದಂತೆ ಭಯೋತ್ಪಾದಕರ ವಿರುದ್ಧದ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ದಿಗ್ಬಂಧನ ಬದ್ಧತೆಯನ್ನು ಜಾರಿಗೊಳಿಸುವಂತೆ  ಪಾಕಿಸ್ತಾನಕ್ಕೆ ಸೂಚಿಸುವುದಗಿ ಅಮೆರಿಕ ನೀಡಿದ ಹೇಳಿಕೆಯನ್ನೂ ಭಾರತ ಸ್ವಾಗತಿಸಿತುಭಯೋತ್ಪಾದಕ ದಾಳಿಯ ಸಂತ್ರಸ್ಥರು ಮತ್ತು ಹುತಾತ್ಮರ ಕುಟುಂಬಗಳಿಗೆ ನ್ಯಾಯ ದೊರಕಿಸಿಕೊಡುವ ತನ್ನ ಯತ್ನಗಳನ್ನು ಭಾರತ ಸರ್ಕಾರವು ಮುಂದುವರೆಸುವುದು ಎಂದು ಹೇಳಿಕೆ ತಿಳಿಸಿತು. ಹೇಯ ಭಯೋತ್ಪಾದಕ ದಾಳಿಯ ೧೦ ವರ್ಷಗಳ ಬಳಿಕವೂ, ೧೫ ರಾಷ್ಟ್ರಗಳ ೧೬೬ ಮಂದಿ ಮೃತರ ಕುಟುಂಬಗಳಿಗೆ ಇದು ಅತ್ಯಂತ ಆಳವಾದ ದುಃಖದ ವಿಚಾರವಾಗಿದೆ. ವಿಚಾರ ನ್ಯಾಯೋಚಿತವಾಗಿ ಮುಕ್ತಾಯಗೊಳ್ಳಬೇಕು ಎಂದು ಅವರೆಲ್ಲರೂ ಬಯಸುತ್ತಿದ್ದಾರೆ ಎಂದು ಹೇಳಿಕೆ ತಿಳಿಸಿತು.

2018: ರಾಯ್ ಪುರ: ಛತ್ತೀಸ್ಗಢದ ಸುಕ್ಮಾ ಜಿಲ್ಲೆಯಲ್ಲಿ ಮಧ್ಯಾಹ್ನ ಸಂಭವಿಸಿದ ಗುಂಡಿನ ಘರ್ಷಣೆಯಲ್ಲಿ ರಾಜ್ಯದ ಇಬ್ಬರು ಪೊಲೀಸ್ ಸಿಬ್ಬಂದಿ ಹುತಾತ್ಮರಾದರೆ, ಮಂದಿ ಮಾವೋವಾದಿ ನಕ್ಸಲೀಯರು ಹತರಾದರು. ಕಿಸ್ತಾರಾಮ್ ಪೊಲೀಸ್ ಠಾಣೆ ವ್ಯಾಪ್ತಿಯ ಸಕ್ಲರ್ ಗ್ರಾಮದ ಸಮೀಪ ಗುಂಡಿನ ಘರ್ಷಣೆ ಸಂಭವಿಸಿತು.  ‘ಈವರೆಗೆ ಒಟ್ಟು ಮಾವೋವಾದಿಗಳ ಶವ ನಮಗೆ ಲಭಿಸಿದೆ. ಸಂಖ್ಯೆ ಇನ್ನಷ್ಟು ಹೆಚ್ಚಬಹುದು ಎಂದು ವಿಶೇಷ ಪೊಲೀಸ್ ಮಹಾ ನಿರ್ದೇಶಕ (ನಕ್ಸಲ್ ನಿಗ್ರಹ ಕಾರ್ಯಾಚರಣೆ) ಡಿ.ಎಂ.ಅವಸ್ತಿ ಹೇಳಿದರು.  
ಜಿಲ್ಲಾ ಮೀಸಲು ಗಾರ್ಡ್ (ಡಿಆರ್ಜಿ), ಸಿಆರ್ಪಿಎಫ್ ಮತ್ತು ವಿಶೇಷ ಕಾರ್ಯಪಡೆಗಳ (ಎಸ್ಟಿಎಫ್) ಜಂಟಿತಂಡ ಪ್ರದೇಶಕ್ಕೆ ಮುತ್ತಿಗೆ ಹಾಕಿದ್ದು ಘರ್ಷಣೆ ಮುಂದುವರೆದಿದೆ ಎಂದು ಅವರು ನುಡಿದರು. ಮಾವೊವಾದಿಗಳ ಜೊತೆಗಿನ ಘರ್ಷಣೆಯಲ್ಲಿ ಇಬ್ಬರು ಡಿಆರ್ಜಿ ಸಿಬ್ಬಂದಿ ಹುತಾತ್ಮರಾದರು ಎಂದು ಅವರು ಹೇಳಿದರು.

2018: ನವದೆಹಲಿ: ಕೇಂದ್ರದ ಮಾಜಿ ವಿತ್ತ ಸಚಿವ ಪಿ. ಚಿದಂಬರಂ ಅವರನ್ನು ವಿಚಾರಣೆಗೆ ಗುರಿಪಡಿಸುವ ನಿಟ್ಟಿನಲ್ಲಿ ಮುಂದುವರೆಯುವಂತೆ ಕೇಂದ್ರ ಸರ್ಕಾರವು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಸಮ್ಮತಿ ನೀಡಿತು. ದೆಹಲಿ ನ್ಯಾಯಾಲಯ ಒಂದಕ್ಕೆ ಸಿಬಿಐ ವಿಚಾರವನ್ನು ತಿಳಿಸಿತುಏರ್ಸೆಲ್ ಮ್ಯಾಕ್ಸಿಸ್ ಪ್ರಕರಣದಲ್ಲಿ ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಅವರನ್ನು ತನಿಖೆಗೆ ಗುರಿಪಡಿಸಲು ಸಂಬಂಧ ಪಟ್ಟ ಪ್ರಾಧಿಕಾರದಿಂದ ಅಗತ್ಯ ಒಪ್ಪಿಗೆಯನ್ನು ತಾನು ಪಡೆದುಕೊಂಡಿರುವುದಾಗಿ ಸಿಬಿಐ ನ್ಯಾಯಾಲಯಕ್ಕೆ ಹೇಳಿತು. ಏನಿದ್ದರೂ ಪ್ರಕರಣದ ಇತರ ಆರೋಪಿಗಳ ವಿಚಾರಣೆಗೆ ಒಪ್ಪಿಗೆ ಪಡೆಯಲು ತನಗೆ ಇನ್ನೂ ಎರಡು ವಾರಗಳ ಅವಧಿ ಬೇಕು ಎಂಬುದಾಗಿ ಕೇಂದ್ರೀಯ ತನಿಖಾ ದಳ ತಿಳಿಸಿದ್ದನ್ನು ಅನುಸರಿಸಿ ಚಿದಂಬರಂ ಮತ್ತು ಕಾರ್ತಿ ಅವರನ್ನು ಬಂಧಿಸದಂತೆ ನೀಡಲಾಗಿದ್ದ ರಕ್ಷಣೆಯನ್ನು ನ್ಯಾಯಾಲಯ ಡಿಸೆಂಬರ್ ೧೮ರವರೆಗೆ ವಿಸ್ತರಿಸಿತು. ಚಿದಂಬರಂ ಮತ್ತು ಅವರ ಪುತ್ರ ಕಾರ್ತಿ ಚಿದಂಬರಂ ಅವರ ವಿರುದ್ಧ ಜಾರಿ ನಿರ್ದೇಶನಾಲಯವು ಕಳೆದ ತಿಂಗಳು ಹಣ ವರ್ಗಾವಣೆ ಸಂಬಂಧ ದೋಷಾರೋಪ ಹೊರಿಸಿತ್ತು. ಸಿಬಿಐ ವರ್ಷ ಜುಲೈಯಲ್ಲಿ ಅವರ ವಿರುದ್ಧ ದೋಷಾರೋಪ ದಾಖಲಿಸಿತ್ತು.
ಇಂಡಿಯನ್ ಟೆಲ್ಕೊ ಏರ್ ಸೆಲ್ ಲಿಮಿಟೆಡ್ ನಲ್ಲಿ ಮಲೇಶ್ಯಾದ ಮ್ಯಾಕ್ಸಿಸ್ ಕಮ್ಯೂನಿಕೇಷನ್ಸ್ ೨೦೦೬ರಲ್ಲಿ ಹೂಡಿಕೆ ಮಾಡಿದ್ದಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಹೂಡಿಕೆಯು ಆಗ ಜಾರಿಯಲ್ಲಿದ್ದ ವಿದೇಶೀ ಹೂಡಿಕೆ ಕಾನೂನಿನ ಉಲ್ಲಂಘನೆಯಾಗಿದೆ ಎಂದು ಸಿಬಿಐ ಹೇಳಿದೆಮ್ಯಾಕ್ಸಿಕ್ ಕಂಪೆನಿಯು ಏರ್ಸೆಲ್ ನಲ್ಲಿ ವಾಸ್ತವವಾಗಿ ೮೦೦ ಮಿಲಿಯನ್ (೮೦೦೦ ಲಕ್ಷ) ಡಾಲರ್ (೩೫೦೦ ಕೋಟಿ ರೂಪಾಯಿಗಳಿಗೂ ಹೆಚ್ಚು) ಹಣ ಹೂಡಿಕೆ ಮಾಡಿದ್ದರೂ, ಹೂಡಿಕೆ ಪ್ರಸ್ತಾವಕ್ಕೆ ಮಂಜೂರಾತಿ ನೀಡಲು ಅಧಿಕಾರ ಹೊಂದಿದ್ದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು ಕೇವಲ ೧೮೦ ಕೋಟಿ ರೂಪಾಯಿ ಹೂಡಿಕೆ ಪ್ರಕರಣ ಇದು ಎಂಬುದಾಗಿ ಹೇಳಿತ್ತು ಮತ್ತು ಆಗಿನ ಹಣಕಾಸು ಸಚಿವ ಪಿ.ಚಿದಂಬರಂ ಅವರು ಪ್ರಸ್ತಾವಕ್ಕೆ ಒಪ್ಪಿಗೆ ನೀಡಿದ್ದರು. ಏರ್ಸೆಲ್ ಕಂಪೆನಿಯು ಅಡ್ವಾಂಟೇಜ್ ಸ್ಟ್ರಾಟಜಿಕ್ ಕನ್ಸಲ್ಟಿಂಗ್ ಪ್ರೈವೇಟ್ ಲಿಮಿಟೆಡ್ಗೆ ಸುಮಾರು ೨೬ ಲಕ್ಷ ರೂಪಾಯಿಗಳನ್ನು ೨೦೦೬ರ ಏಪ್ರಿಲ್ ೧೧ರಂದು ಪಾವತಿ ಮಾಡಿದ್ದು, ಕಂಪೆನಿಯು ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ನಿಯಂತ್ರಣದಲ್ಲಿತ್ತು ಎಂದು ತನಿಖೆಗಾರರು ಆಪಾದಿಸಿದ್ದರು.  ಕಾರ್ತಿ ಚಿದಂಬರಂ ಅವರ ಇನ್ನೊಂದು ಕಂಪೆನಿಯಾದ ಚೆಸ್ ಮ್ಯಾನೇಜ್ ಮೆಂಟ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ ,೦೦,೦೦೦ ಡಾಲರ್ ಹಣವನ್ನು ಮ್ಯಾಕ್ಸಿಸ್ ಜೊತೆ ಸಂಪರ್ಕ ಹೊಂದಿದ ಬಮಿ ಅರ್ಮಡಾ ಬೆರ್ಹಾಡ್ ಮತ್ತು ಅಸ್ಟ್ರೋ ಆಲ್ ಏಷ್ಯಾ ನೆಟ್ ವರ್ಕ್ಸ್ ಪಿಎಲ್ಸಿಯಂತಹ ಕಂಪೆನಿಗಳಿಂದಲೂ ೨೦೦೭ ಮತ್ತು ೨೦೧೨ರ ನಡುವಣ ಅವಧಿಯಲ್ಲಿ ಪಡೆದಿದೆ ಎಂದೂ ತನಿಖೆಗಾರರು ಆಪಾದಿಸಿದ್ದರು.  ತಾವು ಅಕ್ರಮವಾಗಿ ಅನುಮೋದನೆ ನೀಡಿರುವುದಾಗಿ ಮಾಡಲಾಗಿರುವ ಆರೋಪವನ್ನು ಚಿದಂಬರಂ ಅವರು ನಿರಾಕರಿಸಿದ್ದಾರೆ ಮತ್ತು ಉನ್ನತ ನಾಗರಿಕ ಸೇವಕರನ್ನು ಒಳಗೊಂಡ ವಿದೇಶೀ ಉನ್ನತ ಹೂಡಿಕಾ ಸಮಿತಿಯು ವಿದೇಶೀ ಹೂಡಿಕೆ ಸಂಬಂಧಿ ಪ್ರಕರಣಗಳಿಗೆ ಅನುಮತಿ ನೀಡುವ ಅಧಿಕಾರ ಹೊಂದಿದೆ ಮತ್ತು ಬಗ್ಗೆ ನಿರ್ಧರಿಸುತ್ತದೆ ಎಂದು ಪ್ರತಿಪಾದಿಸಿದ್ದರು. ಲೋಕಸಭೆಯಲ್ಲಿ ಸರ್ಕಾರದ ವಿರುದ್ಧ ಮಂಡಿಸಲಾಗಿದ್ದ ಅವಿಶ್ವಾಸ ನಿರ್ಣಯದ ಚರ್ಚೆಗೆ ನಿಗದಿಯಾಗಿದ್ದ ದಿನಕ್ಕಿಂತ ಒಂದು ದಿನ ಮೊದಲು ಜುಲೈ ೧೯ರಂದು ಸಲ್ಲಿಸಿದ ದೋಷಾರೋಪ ಪಟ್ಟಿಯಲ್ಲಿ ಸಿಬಿಐ ಪಿ. ಚಿದಂಬರಂ ಮತ್ತು ಅವರ ಪುತ್ರ ಕಾರ್ತಿ ಚಿದಂಬರಂ ಅವರನ್ನು ಹೆಸರಿಸಿತ್ತುಏರ್ಸೆಲ್ ಮ್ಯಾಕ್ಸಿಸ್ ವ್ಯವಹಾರಕ್ಕೆ ವಿದೇಶೀ ಹೂಡಿಕೆ ಅಭಿವೃದ್ಧಿ ಮಂಡಳಿ (ಎಫ್ಐಪಿಬಿ) ಒಪ್ಪಿಗೆ ಪಡೆಯವಲ್ಲಿ ಲಂಚ ನೀಡಿಕೆ ಸಂಬಂಧ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯವು ಸೆಪ್ಟೆಂಬರ್ ತಿಂಗಳಲ್ಲಿ ಕಾರ್ತಿ ಅವರಿಗೆ ಸೇರಿದ .೧೬ ಕೋಟಿ ರೂಪಾಯಿ ಮೌಲ್ಯದ ಆಸ್ತಿಪಾಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿತ್ತುಎಫ್ಐಪಿಬಿ ಅನುಮೋದನೆಯನ್ನು ವಾಸ್ತವವಾಗಿ ಆರ್ಥಿಕ ವ್ಯವಹಾರಗಳ ಸಂಪುಟ ಉಪಸಮಿತಿಯೇ ನಿರ್ಧರಿಸಬೇಕು, ಆದರೆ ಪ್ರಕರಣದಲ್ಲಿ ಚಿದಂಬರಂ ಅವರು ಸ್ವತಃ ಅನುಮೋದನೆ ನೀಡಿದರು ಮತ್ತು ಎಫ್ಐಪಿಬಿ ಒಪ್ಪಿಗೆಗಾಗಿ ವ್ಯವಹಾರದ ಮೊತ್ತಕ್ಕೆ ಸಂಬಂಧಿಸಿದ ವಾಸ್ತವಾಂಶಗಳನ್ನು ಮುಚ್ಚಿಡಲಾಗಿತ್ತು ಎಂದು ಆಪಾದಿಸಲಾಗಿತ್ತು.

2018: ಗುರುದಾಸಪುರ (ಪಂಜಾಬ್): ’ನಮ್ಮ ದೀರ್ಘಕಾಲದ ಬೇಡಿಕೆಯನ್ನು ಪಾಕಿಸ್ತಾನ ಅಂಗೀಕರಿಸಿರುವುದಕ್ಕಾಗಿ ನಮಗೆ ಸಂತಸವಾಗಿದೆ. ಇನ್ನು ನೀವು ಪವಿತ್ರ ಕರ್ತಾರಪುರ ಸಂದರ್ಶನಕ್ಕೆ ನೇರವಾಗಿ ಹೋಗಲು ಸಾಧ್ಯವಾಗಲಿದೆ, ಅಟ್ಟಾರಿ ಗಡಿಯ ಮೂಲಕ ಸುದೀರ್ಘವಾದ ಮತ್ತು ಕಷ್ಟಕರವಾಧ ಮಾರ್ಗವನ್ನು ಕ್ರಮಿಸಬೇಕಾಗಿಲ್ಲ ಎಂದು ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರು  ಇಲ್ಲಿ ಹೇಳಿದರು. ಪಂಜಾಬಿನ ಡೇರಾ ಬಾಬಾ ನಾನಕ್ನಿಂದ ಪಾಕಿಸ್ತಾನದ ಪಂಜಾಬಿನಲ್ಲಿರುವ ಕರ್ತಾರಪುರಕ್ಕೆ ಕಿಮೀ ದೂರದ ಕಾರಿಡಾರ್ ನಿರ್ಮಾಣಕ್ಕೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಮತ್ತು ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಒಟ್ಟಾಗಿ ಶಿಲ್ಯಾನ್ಯಾಸ ನೆರವೇರಿಸಿದರು. ಆದರೆ ಇದೇ ವೇಳೆಗೆ ಉಭಯ ನಾಯಕರೂ ಭಾರತ ವಿರುದ್ಧದ ಭಯೋತ್ಪಾದನೆ, ಭಯೋತ್ಪಾದಕರ ನುಸುಳುವಿಕೆ ವಿರುದ್ಧ ಪಾಕಿಸ್ತಾನಕ್ಕೆ ಕಠಿಣ ಎಚ್ಚರಿಕೆ ನೀಡಿದರು.   ‘ಇದು ಶಾಂತಿ, ಸೌಹಾರ್ದ ಮತ್ತು ಮಾನವೀಯತೆಯ ಮಂದಿರದ ಕಾರಿಡಾರ್. ವಿಶ್ವವೇ ಕುಟುಂಬ  ಕಲ್ಪನೆಯೆಡೆಗಿನ ಕಾರಿಡಾರ್, ಮಾನವೀಯತೆಯ ಸೇವೆಯ ಕಾರಿಡಾರ್ ಎಂದು ಉಪರಾಷ್ಟ್ರಪತಿ ನುಡಿದರು.
 ’ ಕಾರಿಡಾರ್ ಹೊಸ ಬಾಗಿಲುಗಳನ್ನು ತೆರೆಯುತ್ತಿದೆ., ಹೊಸ ಸಾಧ್ಯತೆಗಳ ದಾರಿಯನ್ನು ತೆರೆಯುತ್ತಿದೆ. ಸಂಕುಚಿತ ದೃಷ್ಟಿಕೋನ ಧರ್ಮಾಂಧತೆ ಮತ್ತು ತತ್ವ ಸಿದ್ಧಾಂತಗಳಿಂದ ಜಗತ್ತು ಛಿದ್ರವಾಗುತ್ತಿರುವ ಹೊತ್ತಿನಲ್ಲಿ, ಜಗತ್ತು ಅನಗತ್ಯ ಹಿಂಸೆ ಮತ್ತು ಅಂತ್ಯವಿಲ್ಲದ ಘರ್ಷಣೆಗಳನ್ನು ಎದುರಿಸುತ್ತಿರುವ ಹೊತ್ತಿನಲ್ಲಿ ಕತ್ತಲು ತೊಡೆದುಹಾಕುವಂತಹ ಶಕ್ತಿ ನಮಗೆಲ್ಲರಿಗೂ ಬೇಕಾಗಿದೆ ಎಂದು ವೆಂಕಯ್ಯ ನಾಯ್ಡು  ಹೇಳಿದರು.  ‘ನಮಗೆ ನಮ್ಮ ಎಲ್ಲ ನೆರೆಹೊರೆಯವರೊಂದಿಗೆ ಉತ್ತಮ ಬಾಂಧವ್ಯ ಬೇಕಾಗಿದೆ ಎಂದು ಹೇಳಿದ ಅವರು, ಶಾಂತಿಯ ಸದಿಚ್ಛೆ ಇಟ್ಟುಕೊಂಡು ಪ್ರಧಾನಿ ಮೋದಿ ಅವರು ಲಾಹೋರಿಗೆ ಭೇಟಿ ನೀಡಿದ್ದುದನ್ನು ಉಲ್ಲೇಖಿಸಿದರು. ’ಆದರೆ ಭಾರತವು ಎಂದಿಗೂ ಭಯೋತ್ಪಾದನೆಯನ್ನು ಅಂಗೀಕರಿಸುವುದಿಲ್ಲ, ಇಲ್ಲಿಗೆ ಭಯೋತ್ಪಾದಕರನ್ನು ಕಳುಹಿಸುವವರಿಗೆ ಅದು ನೆರವು ನೀಡುವುದಿಲ್ಲ ಎಂದು ಉಪರಾಷ್ಟ್ರಪತಿ ನುಡಿದರುಕ್ಯಾಪ್ಟನ್ ಸಿಂಗ್ ಎಚ್ಚರಿಕೆ: ’ನಾನು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಆಭಾರಿಯಾಗಿದ್ದೇನೆ ಎಂದು ನುಡಿದ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರುನಮ್ಮ ಸೇನೆ ಹೇಗೆ ಯೋಚನೆ ಮಾಡುತ್ತದೆ ಎಂಬುದು ನನಗೆ ಗೊತ್ತಿದೆ. ಅದು ಹಾಗೆ ಚಿಂತಿಸುವುದು ರಾಷ್ಟ್ರದ ರಕ್ಷಣೆಗಾಗಿ. ಆದರೆ ಪಾಕಿಸ್ತಾನದ ಸೇನೆಯು ಗಡಿಯಲ್ಲಿ ನಮ್ಮ ಯೋಧರನ್ನು ಗುಂಡಿಟ್ಟು ಕೊಂದಿದೆ.. ನಾವು ಶಾಂತಿಯ ಸಂದೇಶದೊಂದಿಗೆ ಬಂದಿದ್ದೇವೆ ಮತ್ತು ಪಾಕಿಸ್ತಾನವು ಇದಕ್ಕೆ ಸೂಕ್ತವಾಗಿ ಸ್ಪಂದಿಸಬೇಕು ಎಂದು ಬಯಸುತ್ತೇವೆ ಎಂದು ಹೇಳಿದರು.  ಪಾಕಿಸ್ತಾನದ ಸೇನಾ ಮುಖ್ಯಸ್ಥ ಬಜ್ವಾ ಅವರತ್ತ ಗುರಿ ಇಟ್ಟ ಅಮರೀಂದರ್ ಸಿಂಗ್, ’ಪಂಜಾಬ್ ೨೦ ವರ್ಷಗಳಿಂದ ಭಯೋತ್ಪಾದನೆಯಿಂದ ನರಳುತ್ತಿದೆ ಮತ್ತು ಅದರ ಪರಿಣಾಮವಾಗಿ ಈಗಲೂ ಅಭಿವೃದ್ಧಿಯ ಕೊರತೆಯಿಂದ ನಲುಗಿದೆ. ಹಿಂಸಾಚಾರ ಕೊನೆಕೊಳ್ಳದ ವಿನಃ ನಾನು ಪಾಕಿಸ್ತಾನಕ್ಕೆ ಹೋಗದೇ ಇರಲು ಇದೇ ಕಾರಣ ಎಂದು ಅವರು ನುಡಿದರು.  ‘ಪಾಕಿಸ್ತಾನದ ಸೇನಾ ಮುಖ್ಯಸ್ಥ ಖಮರ್ ಬಜ್ವಾ ಅವರಿಗೆ ನಾನು ಯೋಧನಾಗಿಯೇ ಕೇಳ ಬಯಸುತ್ತೇನೆ. ಯಾವ ಸೇನೆ ಕದನವಿರಾಮವನ್ನು ಉಲ್ಲಂಘಿಸಿ ಇನ್ನೊಂದು ದೇಶದ ಯೋಧರನ್ನು ಕೊಲ್ಲಲು ಕಲಿಸುತ್ತದೆ? ಯಾವ ಸೇನೆ ಪಠಾನ್ ಕೋಟ್ ಮತ್ತು ಅಮೃತಸರಕ್ಕೆ ದಾಳಿ ನಡೆಸಲು ಜನರನ್ನು ಕಳುಹಿಸಲು ಕಲಿಸುತ್ತದೆ? ಇದು ಹೇಡಿತನ ಎಂದೂ ಸೇನಾ ಯೋಧನೂ ಆಗಿರುವ ಕ್ಯಾಪ್ಟನ್ ಸಿಂಗ್ ಹೇಳಿದರು.   ನಾನು ನಿಮಗೆ (ಬಜ್ವಾ) ಎಚ್ಚರಿಕೆ ನೀಡಬಯಸುತ್ತೇನೆ. ನಾವು ಪಂಜಾಬಿಗಳು ಕೂಡಾ. ನಿಮಗೆ ಇಲ್ಲಿಗೆ ಪ್ರವೇಶಿಸಲು ಮತ್ತು ಇಲ್ಲಿನ ಪರಿಸ್ಥಿತಿಯನ್ನು ಹಾಳುಗೆವಲು ನಾವು ಅವಕಾಶ ನೀಡುವುದಿಲ್ಲ ಎಂದು ಮುಖ್ಯಮಂತ್ರಿ ಹೇಳಿದರು.  ‘ಶಾಂತಿ ನೆಲೆಸುವವರೆಗೂ ನಾನು ಪಾಕಿಸ್ತಾನಕ್ಕೆ ಹೋಗುವುದಿಲ್ಲ ಎಂದು ಅವರು ಘೋಷಿಸಿದರು. ವೇದಿಕೆಯಲ್ಲಿ ಅವರ ಪಕ್ಕದಲ್ಲೇ ಕುಳಿತಿದ್ದ ಕೇಂದ್ರ ಸಚಿವರಾದ ಹರದೀಪ್ ಸಿಂಗ್ ಪುರಿ ಮತ್ತು ಹರಿಸಿಮ್ರತ್ ಕೌರ್ ಬಾದಲ್ ಅವರು ಪಾಕಿಸ್ತಾನದಲ್ಲಿ ಕರ್ತಾರಪುರ ಕಾರಿಡಾರ್ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸುವಂತೆ ನೀಡಿದ ಆಹ್ವಾನವನ್ನು ಸ್ವೀಕರಿಸಿದ್ದಾರೆ.
ಕೇಂದ್ರ ಸಚಿವೆ ಹರಿಸಿಮ್ರತ್ ಕೌರ್ ಬಾದಲ್ ಅವರು ಸಿಖ್ ಯಾತ್ರಿಕರಿಗಾಗಿ ಉಭಯ ರಾಷ್ಟ್ರಗಳ ನಡುವಣ ಕಟುತ್ವವನ್ನು ಬದಿಗಿಟ್ಟದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಧನ್ಯವಾದ ಸಲ್ಲಿಸಿದರು. ಪಾಕಿಸ್ತಾನದಲ್ಲಿರುವ ಕರ್ತಾರಪುರ ಸಾಹಿಬ್ ಪಂಜಾಬಿನ ಗುರುದಾಸಪುರ ಜಿಲ್ಲೆಯಲ್ಲಿನ ಡೇರಾ ಬಾಬಾ ನಾನಕ್ ಮಂದಿರದಿಂದ ಕಿಮೀ ದೂರದಲ್ಲಿರುವ ರಾವಿ ನದಿಯ ದಂಡೆಯಲ್ಲಿದೆ. ಸಿಖ್ ಪಂಥದ ಗುರುಗಳು ೧೫೨೨ರಲ್ಲಿ ಇದನ್ನು ಸ್ಥಾಪಿಸಿದ್ದರು. ಗುರುನಾನ್ ದೇವ್ ಅವರು ಇಹಲೋಕ ತ್ಯಜಿಸಿದ ಜಾಗದಲ್ಲಿಯೇ ಮೊತ್ತ ಮೊದಲನೆಯ ಗುರುದ್ವಾರವಾದ ಕರ್ತಾರಪುರ ಸಾಹಿಬ್ನ್ನು ನಿರ್ಮಿಸಲಾಗಿತ್ತು. ಬುಧವಾರ ಪಾಕಿಸ್ತಾನದ ಕಡೆಯಲ್ಲಿ ನಡೆಯಲಿರುವ ಕಾರಿಡಾರ್ ನಿರ್ಮಾಣದ ಶಿಲಾನ್ಯಾಸ ಸಮಾರಂಭದಲ್ಲಿ ಭಾರತದ ಇಬ್ಬರು ಸಚಿವರ ಜೊತೆಗೆ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರೂ ಪಾಲ್ಗೊಳ್ಳಲಿದ್ದಾರೆ೨೦೧೯ಕ್ಕೆ ಸಿದ್ಧ: ಭಾರತದಿಂದ ಬರುವ ಕಾರಿಡಾರ್ ಜೊತೆಗೆ ಸಂಪರ್ಕ ಹೊಂದಲಿರುವ ಕಾರಿಡಾರ್ ಮೂಲಕ ಭಾರತದಿಂದ ಯಾತ್ರಿಕರು ಪವಿತ್ರವಾದ ಕರ್ತಾರಪುರ ಸಾಹಿಬ್ ಗುರುದ್ವಾರಕ್ಕೆ (ಸಿಖ್ ಮಂದಿರ) ೨೦೧೯ರ ನವೆಂಬರಿನಲ್ಲಿ ನಡೆಯಲಿರುವ ಗುರುನಾನ್ ಅವರ ೫೫೦ನೇ ಜನ್ಮದಿನದ ವೇಳೆಗೆ ಸಂದರ್ಶಿಸಲು ಸಾಧ್ಯವಾಗಲಿದೆ. ೨೦೧೬ರಲ್ಲಿ ಸಾರ್ಕ್ ಶೃಂಗಸಭೆ ಕಾಲದಲ್ಲಿ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಭೇಟಿ ನೀಡಿದ ಬಳಿಕ ಇಲ್ಲಿಯವರೆಗೂ ಭಾರತದ ಯಾವ ಸಚಿವರೂ ಪಾಕಿಸ್ತಾನಕ್ಕೆ ಭೇಟಿ ನೀಡಿರಲಿಲ್ಲ. ಉರಿ ಮೇಲಿನ ದಾಳಿಗಳನ್ನು ಅನುಸರಿಸಿ ಭಾರತವು ಪಾಕಿಸ್ತಾನಕ್ಕೆ ಭೇಟಿ ರದ್ದು ಪಡಿಸಿತ್ತು ವಿದ್ಯಮಾನವು ಭಾರತ-ಪಾಕಿಸ್ತಾನ ಬಾಂಧವ್ಯ ಅತ್ಯಂತ ತ್ವರಿತವಾಗಿ ಬದಲಾಗಬಲ್ಲುದು ಎಂಬುದನ್ನು ತೋರಿಸಿದೆ ಎಂದು ಪಾಕಿಸ್ತಾನದಲ್ಲಿನ ಭಾರತದ ಮಾಜಿ ಹೈಕಮೀಷನರ್ ಟಿಸಿಎ ರಾಘವನ್ ಪ್ರತಿಕ್ರಿಯಿಸಿದರು. ಕದನ ವಿರಾಮ ಉಲ್ಲಂಘನೆ ಮತ್ತು ನುಸಳುವಿಕೆ ಯತ್ನಗಳ ಹಿನ್ನೆಲೆಯಲ್ಲಿ ಉಭಯ ರಾಷ್ಟ್ರಗಳ ಬಾಂಧವ್ಯ ನಶಿಸಿರುವುದರ ಮಧ್ಯೆ, ಸಿಖ್ ಯಾತ್ರಿಕರಿಗೆ ಪಾಕಿಸ್ತಾನದಲ್ಲಿನ ಚಾರಿತ್ರಿಕ ಗುರುದ್ವಾರ ದರ್ಬಾರ್ ಸಾಹಿಬ್ ಗೆ ಭೇಟಿ ನೀಡಲು ಅವಕಾಶ ಕಲ್ಪಿಸುವ ಕಾರಿಡಾರ್ ನಿರ್ಮಾಣದ ನಿರ್ಧಾರವು ಉಭಯ ರಾಷ್ಟ್ರಗಳ ನಡುವಣ ವೈರತ್ವವನ್ನು ಕರಗಿಸಬಲ್ಲ ಅಪರೂಪದ ಬೆಳವಣಿಗೆಯಾಗಿದೆ.  ಗುರುದಾಸಪುರ ಜಿಲ್ಲೆಯ ಡೇರಾ ಬಾಬಾ ನಾನಕ್ ನಿಂದ ಅಂತಾರಾಷ್ಟ್ರೀಯ ಗಡಿಗೆ ಸುರಕ್ಷಿತ ಕಾರಿಡಾರ್ ನಿರ್ಮಿಸುವ ನಿರ್ಧಾರವನ್ನು ಕೇಂದ್ರ ಸಚಿವ ಸಂಪುಟವು ನವೆಂಬರ್ ೨೨ರಂದು ಕೈಗೊಂಡಿತ್ತು.

2018: ಬೆಂಗಳೂರು: ಮೂಡಣದ ಸೂರ್ಯ, ಪಡುವ ಣದಲ್ಲಿ, ಅಸ್ತಂಗತ ವಾಗುತ್ತಿ ದ್ದಂತೆ, ನಾಲ್ಕೂವರೆ ದಶಕ ಗಳ ಕಾಲ ಕನ್ನಡ ಚಿತ್ರರಂಗದಲ್ಲಿ ಅನಭಿಷಿಕ್ತ ದೊರೆಯಾಗಿ, ಕಲಿಯುಗದ ದಾನಶೂರ ಕರ್ಣ, ಅಭಿಮಾನಿಗಳ ಪಾಲಿನ ಮಂಡ್ಯದ ಗಂಡು, ಅಂಬರೀಶ್ ಪಂಚಭೂತಗಳಲ್ಲಿ ಲೀನವಾಗುವುದ ರೊಂದಿಗೆ ಇನ್ನೆಂದೂ ಬಾರದ ಲೋಕಕ್ಕೆ ಪಯ ಣಿಸಿದರು.  ಈದಿನ ಸಂಜೆ ೫.೫೫ಕ್ಕೆ ಸರಿಯಾಗಿ ಅಂಬರೀಶ್ ಪುತ್ರ ಅಭಿಷೇಕ್ ಚಿತೆಗೆ ಅಗ್ನಿ ಸ್ಪರ್ಶ ಮಾಡುತ್ತಿದ್ದಂತೆ ನೆರೆದಿದ್ದ ಸಹಸ್ರಾರು ಸಂಖ್ಯೆಯ ಅಭಿಮಾನಿಗಳ ಕಣ್ಣುಗಳು ಜಿನುಗುತ್ತಿದ್ದವು. ಅಣ್ಣ ಮತ್ತೇ ಹುಟ್ಟಿ ಬಾ, ಮಂಡ್ಯದ ಗಂಡು ಅಮರ ರಹೇ ಎನ್ನುತ್ತಲೇ ಭಾರವಾದ ಹೃದಯದಿಂದ ಬೀಳ್ಕೊಟ್ಟರು.  ಕನ್ನಡ ಚಿತ್ರರಂಗದ ಪಾಲಿಗೆ ಮೂರನೇ ಅಣ್ಣ ನಂತಿದ್ದ ಅಂಬರೀಶ್ ಅವರ ಅಂತ್ಯಸಂಸ್ಕಾರವನ್ನು ವರನಟ ಡಾ. ರಾಜ್ ಕುಮಾರ್ ಅವರ ಸಮಾಧಿಯ ಎದುರಿನ ಬಲಭಾಗದಲ್ಲಿ ಸಕಲ ಸರ್ಕಾರಿ ಗೌರವಾ ಧಾರಗಳೊಂದಿಗೆ ಅಂತ್ಯಸಂಸ್ಕಾರವನ್ನು ನೆರವೇರಿ ಸಲಾಯಿತು.   ಒಂದು ಕಾಲದಲ್ಲಿ ಒಡಹುಟ್ಟಿದವರು ಚಿತ್ರದಲ್ಲಿ ಅಣ್ಣ- ತಮ್ಮನಾಗಿ ಅಭಿನಯಿಸಿದ್ದ ರಾಜ್ ಕುಮಾರ್ ಹಾಗೂ ಅಂಬರೀಶ್ ಇಂದು ಅದೇ ಕಂಠೀರವ ಸ್ಟುಡಿ ಯೋದಲ್ಲಿ ಅಕ್ಕಪಕ್ಕದ ಸಮಾಧಿಯಲ್ಲಿ ಚಿರನಿದ್ರೆಗೆ ಜಾರಿರುವುದು ಕಾಕತಾಳೀಯ ಅನ್ನದೆ ಬೇರೆ ವಿಧಿಯಿಲ್ಲ. ಅಂಬರೀ? ಅವರ ಪತ್ನಿ ಸುಮಲತಾ ಅವರ ಮಾರ್ಗದರ್ಶನದಲ್ಲಿ ಒಕ್ಕಲಿಗರ ಸಂಪ್ರದಾ ಯದಂತೆ ಅಭಿಷೇಕ್ ಹಾಗೂ ಕುಟುಂಬದವರು ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಿದರು.  ಅಗ್ನಿ ಸ್ಪರ್ಶಕ್ಕೆ ೫೦೦ ಕೆಜಿಯ ೩೦೦ ಗಂಧದ ಮರಗಳ ತುಂಡುಗಳು ಸೇರಿದಂತೆ ೭ ರೀತಿಯ ಸೌದೆ, ಬೆರಣಿ, ತುಪ್ಪ, ಬೆಣ್ಣೆ, ಧೂಪಗಳನ್ನು ಬಳಸಲಾಯಿತು. ಮದ್ದೂರು ಮೂಲದ ಹುಚ್ಚಯ್ಯ ಕೋಣಪ್ಪ ಅಂತಿಮ ವಿಧಿ ವಿಧಾನಗಳನ್ನು ನಡೆಸಿಕೊಟ್ಟರು.  ಅಂಬಿ ಪಾರ್ಥಿವ ಶರೀರವನ್ನು ಮಲಗಿಸಿ, ಪತ್ನಿ ಸುಮಲತಾ ಮತ್ತು ಸಾಂಪ್ರದಾಯಿಕವಾಗಿ ಕುಟುಂಬಸ್ಥರು ಶಾಸ್ತ್ರ ನೆರವೇರಿಸಿದ ಬಳಿಕ ಪುತ್ರ ಅಭಿ?ಕ್ ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಅಗ್ನಿಸ್ಪರ್ಶ ಮಾಡುತ್ತಿದ್ದಂತೆ ಅಲ್ಲಿ ನೆರದಿದ್ದ ಅಂಬಿಯ ಸಾವಿರಾರು ಅಭಿಮಾನಿಗಳು ಅಣ್ಣಾ, ಮತ್ತೊಮ್ಮೆ ಹುಟ್ಟಿ ಬಾ ಎಂದು ಕೂಗಿ ಕಂಬನಿ ಮಿಡಿದರು. ಆ ಕ್ಷಣ ಅಲ್ಲಿದ್ದ ಹಿರಿಯ ನಾಯಕರು, ಚಿತ್ರರಂಗದ ನಟರು, ನಟಿಯರು ಮತ್ತು ಅಭಿಮಾನಿಗಳನ್ನು ಶೋಕ ಸಾಗರದಲ್ಲಿ ಮುಳುಗಿಸಿತು.  ರಾಜಕಾರಣಿ ಹಾಗೂ ಕನ್ನಡ ಸಿನಿ ಕ್ಷೇತ್ರದ ದಿಗ್ಗಜ ನಟರಾಗಿದ್ದ ಅಂಬರೀಶ್‌ಗೆ ಮೊದಲು ಖಾಕಿ ಪಡೆಯು ಕುಶಾಲತೋಪು ಹಾರಿಸಿ ಗೌರವ ಸೂಚಿಸಿದ್ದು, ಸಕಲ ಸರ್ಕಾರಿ ಗೌರವಗಳೊಂದಿಗೆ ಬೀಳ್ಕೊಡಲಾಯಿತು. ಬಳಿಕ ಪಾರ್ಥೀವ ಶರೀರವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.   ಹುಟ್ಟೂರಿನಿಂದಲೇ ಕೊನೆಯ ವಿದಾಯ ಹೇಳಿದ ಮಂಡ್ಯದ ಗಂಡು ಅಂಬಿ ಅಂತಿಮ ಸಂಸ್ಕಾರದಲ್ಲಿ ಇಡೀ ದಕ್ಷಿಣ ಭಾರತದ ಚಿತ್ರರಂಗವೇ ಪಾಲ್ಗೊಂ ಡಿತ್ತು. ಕಂಠೀರವ ಕ್ರೀಡಾಂಗಣದಿಂದ ೧೩ ಕಿಲೋ ಮೀಟರ್ ವರೆಗೆ ಪು?ಲಂಕೃತ ವಾಹನದಲ್ಲಿ ಮೆರವಣಿಗೆಯಲ್ಲಿ ಸಾಗಿ ಕಂಠೀರವ ಸ್ಟುಡಿಯೋಕ್ಕೆ ತರಲಾಗಿತ್ತು. ಅಂಬಿ ಅಂತಿಮಯಾತ್ರೆಯಲ್ಲಿ ಜನ ಸಾಗರವೇ ಹರಿದು ಬಂದಿತ್ತು. ಮುಂಜಾಗ್ರತಾ ಕ್ರಮವಾಗಿ ೧೧ ಸಾವಿರ ಪೊಲೀಸರನ್ನು ನಿಯೋಜಿ ಸಲಾಗಿತ್ತು.


2018: ಬೆಂಗಳೂರು: ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಸಚಿವ ಜಾಫರ್  ಷರೀಫ್ ಅವರ ಅಂತ್ಯ ಸಂಸ್ಕಾರವು ಖುದ್ದೂಸ್ ಸಾಹೇಬ್ ಖಬರಸ್ತಾನ್‌ನಲ್ಲಿ ಮುಸ್ಲಿಂ ಸಂಪ್ರದಾಯದಂತೆ  ಈದಿನ ನೆರವೇರಿತು. ಕೋಲ್ಸ್ ಪಾರ್ಕ್ ನ ಷರೀಫ್ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ನಂತರ ಜಾಫರ್ ಷರೀಫ್ ಅವರ ಪಾರ್ಥಿವ ಶರೀರ ವನ್ನು ಖಾದ್ರಿಯಾ ಮಸ್ಜಿದ್‌ಗೆ ತರಲಾಯಿತು.  ಮುಖ್ಯಮಂತ್ರಿ. ಹೆಚ್.ಡಿ. ಕುಮಾರಸ್ವಾಮಿ, ಡಿಸಿಎಂ ಪರಮೇಶ್ವರ್. ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ ವೇಣುಗೋಪಾಲ್, ಸಚಿವ ಯು.ಟಿ. ಖಾದರ್, ಎಐಸಿಸಿ ಮುಖಂಡ ಗುಲಾಂ ನಬಿ ಅಜಾದ್, ಸಚಿವ ಜಮೀರ್ ಅಹ್ಮದ್, ರಿಜ್ವಾನ್ ಅರ್ಷದ್, ಎಸ್.ಆರ್ ಪಾಟೀಲ್, ಯಲಹಂಕ ಶಾಸಕ ಎಸ್. ಆರ್. ವಿಶ್ವನಾಥ್ ಸೇರಿದಂತೆ ಅನೇಕ ಗಣ್ಯರು ಷರೀಫ್ ಅವರಿಗೆ ಅಂತಿಮ ನಮನ ಸಲ್ಲಿಸಿದರು. ಖಾದ್ರಿಯಾ ಮಸೀದಿಯಲ್ಲಿ ಷರೀಫ್ ಅವರಿಗೆ ಗೌರವ ರಕ್ಷೆ ನೀಡಲಾಯಿತು. ಆ ಬಳಿಕ ನಮಾಝ್ ನೆರವೇರಿಸಿ ಖುದ್ದೂಸ್ ಸಾಬ್ ಖಬ್ರಸ್ಥಾನಕ್ಕೆ ಷರೀಫ್ ಅವರ ಪಾರ್ಥಿವ ಶರೀರ ಕೊಂಡೊಯ್ದು, ಅಲ್ಲಿ ಅವರನ್ನ ದಫನ್ ಮಾಡಲಾಯಿತು. ಕಾಂಗ್ರೆಸ್ ಕಚೇರಿಯಲ್ಲಿ ಅಂತಿಮ ನಮನ ಹಲವು ಕಾಂಗ್ರೆಸ್ ಮುಖಂಡರು ಅಗಲಿದ ನಾಯಕನಿಗೆ ಅಂತಿಮ ನಮನ ಸಲ್ಲಿಸಿದರು.
 

2017: ಥಾಣೆ (ಮಹಾರಾಷ್ಟ್ರ): ಮಾಫಿಯಾ ದೊರೆ ಮತ್ತು ೧೯೯೩ರ ಮುಂಬೈ ಸ್ಫೋಟಗಳ ಸಂಚುಕೋರ ದಾವೂದ್ ಇಬ್ರಾಹಿಂ ಕಸ್ಕರ್ ಮಾನಸಿಕ ರೋಗಿಯಾಗಿದ್ದಾನೆ ಮತ್ತು ಖಿನ್ನತೆಯಿಂದ ನರಳುತ್ತಿದ್ದಾನೆ. ಆತನ ಏಕೈಕ ಪುತ್ರಮೌಲಾನಾಆಗಲು ಹೊರಟಿರುವುದು ಮತ್ತು ಕುಟುಂಬದ ವ್ಯವಹಾರಗಳ ನೊಗ ಹೊರಲು ನಿರಾಕರಿಸಿರುವುದು ಇದಕ್ಕೆ ಕಾರಣ ಎಂದು ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿರುವ ವರದಿಯೊಂದು ತಿಳಿಸಿತು. ಮಾಫಿಯಾ ದೊರೆಯ ಏಕೈಕ ಪುತ್ರ ಮೊಯಿನ್ ನವಾಜ್ ಡಿ-ಕಸ್ಕರ್ ೩೧ರ ಹರೆಯದ ಯುವಕನಾಗಿದ್ದು ಅಪ್ಪಟ ಮುಸ್ಲಿಂ ದೈವಭಕ್ತನಾಗಿದ್ದಾನೆ ಎಂದು ವರದಿ ಹೇಳಿತು. ‘ಮೊಯಿನ್ ಇಡೀ ಕುಟುಂಬಕ್ಕೆ ವಿಶ್ವವ್ಯಾಪಿ ಕುಖ್ಯಾತಿಯನ್ನು ತಂದುಕೊಟ್ಟಿರುವ ಅಪ್ಪನ ಅಕ್ರಮ ಚಟುವಟಿಕೆಗಳ ಕಟ್ಟಾ ವಿರೋಧಿಯಾಗಿದ್ದಾನೆಎಂದು ಥಾಣೆ ಸುಲಿಗೆ ನಿಗ್ರಹ ಸೆಲ್ ಮುಖ್ಯಸ್ಥ ಪ್ರದೀಪ ಶರ್ಮಾ ಅವರನ್ನು ಉಲ್ಲೇಖಿಸಿರುವ ವರದಿ ತಿಳಿಸಿತು. ದಾವೂದ್ ಇಬ್ರಾಹಿಂನ ಕಿರಿಯ ಸಹೋದರ ಇಕ್ಬಾಲ್ ಇಬ್ರಾಹಿಂ ಕಸ್ಕರ್ ವಿಚಾರಣೆ ಕಾಲದಲ್ಲಿ ಕುಟುಂಬದೊಳಗಿನ ಬಿಕ್ಕಟ್ಟಿನ ಮಾಹಿತಿ ಎಳೆ ಎಳೆಯಾಗಿ ಹೊರ ಬರುತ್ತಿದೆ ಎಂದು ಶರ್ಮಾ ಹೇಳಿದರು.  ಕಳೆದ ಸೆಪ್ಟೆಂಬರಿನಲ್ಲಿ ಇಕ್ಬಾಲ್ ಕಸ್ಕರ್ ನನ್ನು ಮೂರು ಸುಲಿಗೆ ಪ್ರಕರಣಗಳ ಸಂಬಂಧ ಥಾಣೆ ಪೊಲೀಸರು ಬಂಧಿಸಿದ್ದರು. ದಾವೂದ್ ಇಬ್ರಾಹಿಂ ತನ್ನ ಬಳಿಕ ತಾನು ಕಟ್ಟಿದ ಭೂಗತ ಸಾಮ್ರಾಜ್ಯದ ಹೊಣೆಯನ್ನು ಯಾರು ಹೊರುತ್ತಾರೆ ಎಂದು ಅತಿಯಾಗಿ ಚಿಂತಿತನಾಗಿದ್ದಾನೆ ಎಂದು ಇಕ್ಬಾಲ್ ಕಸ್ಕರ್ ಸುಲಿಗೆ ಪ್ರಕರಣಗಳ ತನಿಖೆಗಾರರಿಗೆ ತಿಳಿಸಿದ್ದಾನೆ. ದಾವೂದ್ ಸಹೋದರ ಅನೀಸ್ ಇಬ್ರಾಹಿಂ ಕಸ್ಕರ್ ಪ್ರಸ್ತುತ ವಯಸ್ಸಾಗಿರುವುದರಿಂದ ಆರೋಗ್ಯ ಹದಗೆಟ್ಟಿದೆ. ಇತರ ಸಹೋದರರು ಮೃತರಾಗಿದ್ದಾರೆ. ಹೀಗಾಗಿ ಆತನ ಭೂಗತ ಸಾಮ್ಯಾಜ್ಯದ ಹೊಣೆ ಹೊರಲು ಸೂಕ್ತ ನಿಕಟ ಬಂಧುಗಳಿಲ್ಲ. ದಾವೂದ್ ಪುತ್ರ ಕಳೆದ ಕೆಲವು ವರ್ಷಗಳಿಂದ ಕುಟುಂಬದಿಂದ ಮತ್ತು ಕುಟುಂಬದ ವ್ಯವಹಾರಗಳಿಂದ ದೂರವಾಗಿದ್ದಾನೆ. ಆದರೆ ಆತನಿಗೂ ಆತನ ತಂದೆಗೂ ಮಾತುಕತೆ ಇದೆಯೇ ಎಂಬುದು ಸ್ಪಷ್ಟವಾಗಿಲ್ಲಎಂದು ಶರ್ಮಾ ಹೇಳಿದ್ದಾರೆ. ಶರ್ಮಾ ಅವರು ಕುಖ್ಯಾತ ಮಾಫಿಯಾ ವಿರುದ್ಧದ ಎನ್ ಕೌಂಟರ್ ತಜ್ಞ ಎಂದೇ ಖ್ಯಾತಿ ಪಡೆದವರು. ದಾವೂದ್ ಪುತ್ರ ಮೊಯಿನ್ ಕಸ್ಕರ್ ಈಗ ಗೌರವಾನ್ವಿತ ಮತ್ತು ಅರ್ಹ ಮೌಲಾನಾ ಆಗಿದ್ದು, ಪವಿತ್ರ ಖುರಾನ್ ಎಲ್ಲ ,೨೩೬ ಶ್ಲೋಕಗಳನ್ನು ಕಲಿತು ನೆನಪಿಟ್ಟುಕೊಳ್ಳುವ ಮೂಲಕಹಫೀಜ್-- ಖುರಾನ್ಹೆಸರಿಗೂ ಪಾತ್ರನಾಗಿದ್ದಾನೆ ಎಂದು ಇಕ್ಬಾಲ್ ಕಸ್ಕರ್ ಹೇಳಿದ್ದಾನೆ. ಇದಕ್ಕೂ ಹೆಚ್ಚಾಗಿ ಮೊಯಿನ್ ಕರಾಚಿ ಹೊರವಲಯದ ಸದ್ದಾರ್ ನಲ್ಲಿ ಇರುವ ಕುಟುಂಬದ ಅರಮನೆ ಸದೃಶ ಬಂಗಲೆ ಸೇರಿದಂತೆ ಎಲ್ಲ ಸವಲತ್ತುಗಳನ್ನು ತ್ಯಜಿಸಿದ್ದಾನೆ ಮತ್ತು ಮನೆಗೆ ಸಮೀಪದ ಮಸೀದಿಯೊಂದರಲ್ಲಿ ಯಾಚಕನ ಬದುಕು ನಡೆಸುತ್ತಿದ್ದಾನೆ ಎಂದು ಇಕ್ಬಾಲ್ ಹೇಳಿದ್ದಾನೆ. ಮೊಯಿನ್ ಪತ್ನಿ ಸನಿಯಾ ಮತ್ತು ಮೂವರು ಮಕ್ಕಳು ಅವನ ಜೊತೆಗೇ ಮಸೀದಿಯ ಆಡಳಿತ ಮಂಡಳಿ ಒದಗಿಸಿದ ಸಣ್ಣ ಕ್ವಾರ್ಟರ್ಸ್ ಒಂದರಲ್ಲಿ ವಾಸವಾಗಿದ್ದಾರೆ ಎಂದು ಆತ ತಿಳಿಸಿದ್ದಾನೆ. ಮೊಯಿನ್ ಅಪ್ಪನ ಆಸ್ತಿಪಾಸ್ತಿಯ ವಾರಸುದಾರನಾಗಿ ಐಷಾರಾಮಿ ಬದುಕು ನಡೆಸಬಹುದಾಗಿತ್ತು. ಆದರೆ ಆತ ಅದೆಲ್ಲವನ್ನೂ ಬಿಟ್ಟುದೇವರ ಮನುಷ್ಯನಾಗಿ ಬದುಕಲು ಹೊರಟಿದ್ದಾನೆ ಎಂದು ಶರ್ಮಾ ಹೇಳಿದರು.
2017: ವಾಷಿಂಗ್ಟನ್: ಪಾಕಿಸ್ತಾನದ ಯುದ್ಧತಂತ್ರ ಅಣ್ವಸ್ತ್ರ ಕಾರ್ಯಕ್ರಮವು ಪ್ರದೇಶದ ಸುರಕ್ಷತೆ ಮತ್ತು ಭದ್ರತೆಗೆ ಗಂಡಾಂತರಕಾರಿಯಷ್ಟೇ ಅಲ್ಲ, ಪರಂಪರಾಗತ ಸಮರವನ್ನು ಅಣ್ವಸ್ತ್ರ ಮಟ್ಟಕ್ಕೆ ಒಯ್ಯಬಹುದಾದಂತಹ ಖಚಿತ ಮಾರ್ಗವೂ ಆಗಿದೆ ಎಂಬುದಾಗಿ ಅಮೆರಿಕದ ಚಿಂತನ ಕೊಳ (ಥಿಂಕ್ ಟ್ಯಾಂಕ್) ವರದಿಯೊಂದು ಹೇಳಿತು.ದ್ವಿತೀಯ ಅಣ್ವಸ್ತ್ರ ಯುಗದಲ್ಲಿ ಏಷ್ಯಾ’ ಶೀರ್ಷಿಕೆಯ ತನ್ನ ವರದಿಯಲ್ಲಿ ಅಟ್ಲಾಂಟಿಕ್ ಕೌನ್ಸಿಲ್ ವಿಚಾರವನ್ನು ತಿಳಿಸಿತು.  ಏನಿದ್ದರೂ ಪಾಕಿಸ್ತಾನ ತನ್ನ ಯುದ್ಧತಂತ್ರ ಅಣ್ವಸ್ತ್ರ ಕಾರ್ಯಕ್ರಮವನ್ನು ಇನ್ನೂ ಕಾರ್ಯಾಚರಣೆಗೆ ಇಳಿಸಿದಂತೆ ಕಾಣುತ್ತಿಲ್ಲ ಎಂದು ವರದಿ ಹೇಳಿತು. ಪ್ರದೇಶದಲ್ಲಿ ಅತ್ಯಂತ ದೊಡ್ಡ ಅಪಾಯವು ದೊಡ್ಡ ಪ್ರಮಾಣದಲ್ಲಿ ಅತ್ಯಾಧುನಿಕ ಮತ್ತು ವೈವಿಧ್ಯಮಯ ಪರಮಾಣು ಶಸ್ತ್ರಾಸ್ತ್ರ ಅಭಿವೃದ್ಧಿಯಿಂದ ಬಾರದು, ಆದರೆ ಅವುಗಳನ್ನು ಸಂರಕ್ಷಿಸುವ ಸಂಸ್ಥೆಗಳ ಸ್ಥಿರತೆಯನ್ನು ಅವಲಂಬಿಸಿದೆ ಎಂದು ವರದಿ ಹೇಳಿತು. ಈ ನಿಟ್ಟಿನಲ್ಲಿ ಪಾಕಿಸ್ತಾನದ ಭವಿಷ್ಯದ ಸ್ಥಿರತೆಯು ಊಹಿಸಲಾಗದಂತಹುದು ಎಂದು ಅದು ತಿಳಿಸಿತು.
ಕಳೆದ ನಾಲ್ಕು ದಶಕಗಳಲ್ಲಿ, ಪಾಕಿಸ್ತಾನವು ಆಫ್ಘಾನಿಸ್ತಾನ ಮತ್ತು ಭಾರತದ ಜೊತೆಗೆ ರಾಷ್ಟ್ರ ರಹಿತ ಜೆಹಾದಿಗಳ ಮೂಲಕ ಪರೋಕ್ಷ ಘರ್ಷಣೆ ನಡೆಸುತ್ತಿದ್ದು, ಇದು ಸ್ವತಃ ಪಾಕಿಸ್ತಾನಕ್ಕೆ ತಿರುಗುಬಾಣವಾಗುವಂತಹ  ಪರಿಣಾಮಗಳನ್ನು ಬೀರಿದೆ ಎಂದು ವರದಿ ಹೇಳಿತು. ಪಾಕಿಸ್ತಾನ ರಾಷ್ಟ್ರ ಮತ್ತು ಸಮಾಜ ಭಯೋತ್ಪಾದಕ ದಾಳಿಗಳಿಗೆ ಗುರಿಯಾಗಿರುವುದರತ್ತ ಬೊಟ್ಟು ಮಾಡಿರುವ ವರದಿ, ಕೆಲವು ದಾಳಿಗಳು ಒಳಗಿನವರ ನೆರವಿನೊಂದಿಗೆ ಅಣ್ವಸ್ತ್ರಗಳನ್ನು ಸಂಗ್ರಹಿಸಿ ಇಟ್ಟಿರಬಹುದಾದ ಸೂಕ್ಷ್ಮ ಸೇನಾ ನೆಲೆಗಳ ಮೇಲೆ ನಡೆದಿದೆ ಎಂದು ಹೇಳಿತು. ಪಾಕಿಸ್ತಾನದ ಸೇನೆಯು ಪರಮಾಣು ಕಮಾಂಡ್ ಮೇಲೆ ನಿಯಂತ್ರಣ ಇರಿಸಿಕೊಳ್ಳುವಲ್ಲಿ ವಿಫಲವಾಗಬಹುದಾದ ಕಾರಣ ಪಾಕಿಸ್ತಾನದ ಅಣ್ವಸ್ತ್ರಗಳು ಕಳವಾಗುವ ಸಾಧ್ಯತೆ ಇದೆ ಎಂದೂ ವರದಿ ಹೇಳಿತು.  ಗೌರವ ಕಂಪಾನಿ ಮತ್ತು ಭರತ್ ಗೋಪಾಲಸ್ವಾಮಿ ಅವರನ್ನೂ ಒಳಗೊಂಡಿರುವ ಚಿಂತನಕೊಳವು, ಭಾರತ- ಫೆಸಿಫಿಕ್ ಪ್ರದೇಶದಲ್ಲಿ ಭಾರತ ಮತ್ತು ಪಾಕಿಸ್ತಾನ ಎರಡೂ ರಾಷ್ಟ್ರಗಳು ಅಣ್ವಸ್ತ್ರಗಳನ್ನು ಅಭಿವೃದ್ಧಿ ಪಡಿಸುತ್ತಿರುವುದು ಗಮನಾರ್ಹ ಎಂದು ಹೇಳಿತು. ಈ ಅಣ್ವಸ್ತ್ರಗಳ ವಿಲೇವಾರಿಯು ತಮ್ಮ ಮಹತ್ವಾಕಾಂಕ್ಷೆಗಳ ಈಡೇರಿಕೆಗಾಗಿ ಅವು ಯಾವ ತಂತ್ರಜ್ಞಾನವನ್ನು ಆಯ್ದುಕೊಳ್ಳುತ್ತವೆ ಎಂಬುದನ್ನು ಅವಲಂಬಿಸಿದೆ. ಉಭಯ ರಾಷ್ಟ್ರಗಳೂ ತಮ್ಮ ಅಸ್ತಿತ್ವಕ್ಕಾಗಿ ಎರಡನೇ ಬಾರಿಗೆ ದಾಳಿ ನಡೆಸುವ ಖಚಿತ ಶಕ್ತಿ ಹೊಂದಿರುವಂತಹ ತಂತ್ರಜ್ಞಾನಕ್ಕೆ ಒತ್ತು ನೀಡುತ್ತವೆ. ಇದು ಚೀನಾದ ಗುರಿಯೂ ಆಗಿದೆ. ವಾಸ್ತವವಾಗಿ ಮೂರೂ ರಾಷ್ಟ್ರಗಳು ಅಣ್ವಸ್ತ್ರಗಳನ್ನು ಆಧುನೀಕರಿಸುತ್ತಿವೆಯಷ್ಟೇ ಅಲ್ಲ ಅವುಗಳ ಬಳಕೆ ಸಂಬಂಧ ಹೊಸ ಹೊಸ ದಾರಿಗಳನ್ನು ಅಳವಡಿಸಿಕೊಳ್ಳುತ್ತಿವೆ ಎಂದು ವರದಿ ಹೇಳಿತು.
2017: ಮುಂಬೈ: ಮುಂಬೈ ಮೇಲೆ ನಡೆದ ೨೬/೧೧ರ ಭಯೋತ್ಪಾದಕ ದಾಳಿಯ ಬಳಿಕ ಕಳೆದ ಎರಡು ವರ್ಷಗಳಲ್ಲಿ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳವು (ಎಟಿಎಸ್) ದಾರಿ ತಪ್ಪಿದ  ೮೬ ಮಂದಿ ಯುವಕರನ್ನು ಉಗ್ರವಾದದಿಂದ ವಿಮುಖಗೊಳಿಸಿ ಸಮಾಜದ ಮುಖ್ಯಪ್ರವಾಹಕ್ಕೆ ಕರೆತಂದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.  ಮುಖ್ಯಪ್ರವಾಹಕ್ಕೆ ಬಂದಿರುವವರಲ್ಲಿ ವಿದ್ಯಾವಂತ ಯುವ ಜೋಡಿ ಸೇರಿದ್ದಾರೆ. ಇವರಿಬ್ಬರೂ ಫಾರ್ಮೆಸಿ ಸ್ನಾತಕೋತ್ತರ ಪದವೀಧರರಾಗಿದ್ದರೆ, ಕೆಲವರು ಏರೋನಾಟಿಕಲ್ ಎಂಜಿನಿಯರ್ ಮತ್ತು ಐಟಿ ಪದವೀಧರರೂ ಇದ್ದಾರೆ ಎಂದು ಅವರು ನುಡಿದರು. ಜಿಹಾದ್ ಹೆಸರಿನಲ್ಲಿ ದಾರಿ ತಪ್ಪಿದ ಯುವಕರನ್ನು ಮತ್ತೆ ಮಾಮೂಲಿ ಬದುಕಿನತ್ತ ತರುವಲ್ಲಿ ದಳ ಯಶಸ್ವಿಯಾಗಿದೆ ಎಂದು ಎಟಿಎಸ್ ಅಧಿಕಾರಿ ಹೇಳಿದರು. ಎಂಟು ಮಹಿಳೆಯರು ಸೇರಿದಂತೆ ಎಲ್ಲ ವ್ಯಕ್ತಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಉಗ್ರಗಾಮಿಗಳ ಸಂಪರ್ಕಕ್ಕೆ ಬಂದಿದ್ದರು. ಅವರೆಲ್ಲ ಉಗ್ರಗಾಮಿ ಸಂಘಟನೆ ಐಸಿಸ್ ಸೇರುವ ಹಂತದಲ್ಲಿದ್ದರು ಅಥವಾ ಅದಕ್ಕಾಗಿ ಕೆಲಸ ಮಾಡಲು ಸನ್ನದ್ಧರಾಗಿದ್ದರು. ಆದರೆ ಕಾನೂನು ಜಾರಿ ಸಂಘಟನೆಗಳು ಮೌನವಾಗಿ ಅವರ ಚಟುವಟಿಕೆಗಳ ಮೇಲೆ ನಿಗಾ ಇಟ್ಟುಕೊಂಡು ಅವರನ್ನು ಮಾಮೂಲಿ ಬದುಕಿಗೆ ಕರೆತರುವಲ್ಲಿ ಯಶಸ್ವಿಯಾದವು ಎಂದು ಅಧಿಕಾರಿ ನುಡಿದರು. ಎಟಿಎಸ್ ವ್ಯಕ್ತಿಗಳ ಕುಟುಂಬ ಸದಸ್ಯರನ್ನು ಸಂಪರ್ಕಿಸಿದ್ದಲ್ಲದೆ, ಅವರ ಸಮುದಾಯದ ಧಾರ್ಮಿಕ ಮುಖ್ಯಸ್ಥರು ಮತ್ತು ಸಲಹೆಗಾರರ ಮೂಲಕ ಯುವಕರನ್ನು ತಮ್ಮ ಸಂಪರ್ಕಕ್ಕೆ ತಂದುಕೊಂಡರು. ಪ್ರತಿ ಪ್ರಕರಣದಲ್ಲೂ ಎರಡು ತಿಂಗಳುಗಳಿಗೂ ಹೆಚ್ಚಿನ ಪ್ರಯತ್ನದ ಬಳಿಕ ಇವರೆಲ್ಲರನ್ನೂ ಉಗ್ರವಾದದಿಂದ ವಿಮುಖರನ್ನಾಗಿಸಲು ಮತ್ತು ಮುಖ್ಯಪ್ರವಾಹಕ್ಕೆ ಮತ್ತೆ ಕರೆತರಲು ಸಾಧ್ಯವಾಯಿತು ಎಂದು ಅಧಿಕಾರಿ ಹೇಳಿದರು. ೨೬/೧೧ರ ಮುಂಬೈ ಭಯೋತ್ಪಾದಕ ದಾಳಿಯ ಬಳಿಕ ಭಯೋತ್ಪಾದನೆ ನಿಗ್ರಹಕ್ಕೆ ಎಟಿಎಸ್ ಹಲವಾರು ಕಾರ್ಯಕ್ರಮಗಳನ್ನು ಹಾಕಿಕೊಂಡಿತ್ತು. ಅವುಗಳಲ್ಲಿ ಅತ್ಯಂತ ಮುಖ್ಯವಾದ ಒಂದು ಕಾರ್ಯಕ್ರಮ ಅಲ್ಪಸಂಖ್ಯಾತ ಸಮುದಾಯದ ಯುವಕರ ಅಂತರ್ಜಾಲ ಚಟುವಟಿಕೆಗಳ ಮೇಲೆ ಕಣ್ಣಿಡುವುದಾಗಿತ್ತು. ಫಾರ್ಮೆಸಿಯಲ್ಲಿ ಸ್ನಾತಕೋತ್ತರ ಮುಗಿಸಿದ ಯುವ ಜೋಡಿಯೊಂದು ಅಂತರ್ಜಾಲದ ಮೂಲಕ ಉಗ್ರವಾದದತ್ತ ಸೆಳೆಯಲ್ಪಟ್ಟು, ಉಗ್ರಗಾಮಿ ಸಂಘಟನೆ ಸೇರಲು ದೇಶದಿಂದ ಹೊರಕ್ಕೆ ಹೊರಟಿತ್ತು. ಆದರೆ ಅವರ ಮೇಲೆ ನಿಗಾ ಇರಿಸಿದ್ದ ಕಾನೂನು ಜಾರಿ ಸಂಸ್ಥೆಗಳು ಅವರನ್ನು ಯಶಸ್ವಿಯಾಗಿ ದೇಶಕ್ಕೆ ವಾಪಸ್ ಕರೆತಂದವು ಎಂದು ಅವರು ನುಡಿದರು. ಸಾಮಾನ್ಯ ಬದುಕು ಸಾಗಿಸಲು ನೆರವಾಗುವ ಮೂಲಕ ನಾವು ಅವರನ್ನು ಉಗ್ರವಾದದಿಂದ ವಿಮುಖಗೊಳಿಸಿದೆವು. ಆದರೆ ಅವರು ಮತ್ತೆ ಉಗ್ರವಾದಿಗಳ ಬಲೆಗೆ ಬೀಳದಂತೆಯೂ ನಾವು ಅವರ ಮೇಲೆ ನಿಗಾ ಇರಿಸಿದ್ದೇವೆ ಎಂದು ಅವರು ಹೇಳಿದರು. ಪೊಲೀಸರ ಪ್ರಕಾರ, ೨೦೧೧ರಲ್ಲಿ ಥಾಣೆ ಜಿಲ್ಲೆಗೆ ಸಮೀಪದ ಕಲ್ಯಾಣ ಪಟ್ಟಣದಿಂದ ನಾಲ್ವರು ಯಾತ್ರೆಯ ಹೆಸರಿನಲ್ಲಿ ದೇಶದಿಂದ ಹೊರಹೋಗಿ ಐಸಿಸ್ ಸೇರಲು ಇರಾಕ್ಗೆ ತೆರಳಿದ್ದರು. ಅವರೆಲ್ಲರನ್ನೂ ಜಿಹಾದ್ ಗಾಗಿ ಉಗ್ರವಾದಿಗಳನ್ನಾಗಿ ಮಾಡಲಾಗಿತ್ತು. ಇದು ಅಪಾಯಕಾರಿ ಬೆಳವಣಿಗೆ ಎಂಬುದನ್ನು ಗಮನಕ್ಕೆ ತೆಗೆದುಕೊಂಡ ಕಾನೂನು ಜಾರಿ ಅಧಿಕಾರಿಗಳು ಅಂತರ್ಜಾಲ ಚಟುವಟಿಕೆಗಳ ಮೇಲೆ ನಿಗಾ ಇರಿಸಿದರು. ೨೦೧೫ರ ಡಿಸೆಂಬರಿನಲ್ಲಿ ಎಟಿಎಸ್ ಪುಣೆ ಮೂಲದ ಯುವತಿಯೊಬ್ಬಳು ಐಸಿಸ್ ಬಗ್ಗೆ ಅನುಕಂಪ ಹೊಂದಿದ್ದುದನ್ನು ಗಮನಿಸಿದರು. ತನಿಖೆ ವೇಳೆಯಲ್ಲಿ ಹುಡುಗಿ ರಾಷ್ಟ್ರತ್ಯಜಿಸಿ ಉಗ್ರಗಾಮಿ ಸಂಘಟನೆ ಸೇರಲು ಸಜ್ಜಾಗಿದ್ದುದು ಸ್ಪಷ್ಟವಾಯಿತು. ಇಂತಹ ವ್ಯಕ್ತಿಗಳನ್ನು ಮರಳಿ ಮುಖ್ಯಪ್ರವಾಹಕ್ಕೆ ಕರೆತರುವ ಸಲುವಾಗಿ ಎಟಿಎಸ್ ಸರ್ಕಾರದ ನೆರವು ಪಡೆದುಕೊಂಡು ಕೆಲವು ಪ್ರಮುಖ ಕ್ರಮಗಳನ್ನು ಕೈಗೊಂಡಿತು. ಇಂತಹವರಿಗೆ ಸಣ್ಣ ಸಾಲದ ವ್ಯವಸ್ಥೆ ಮಾಡಿ, ಸೂಕ್ತ ಉದ್ಯೋಗ ಲಭಿಸುವಂತೆ ಮಾಡುವುದು, ಗ್ರಾಮೀಣಾಭಿವೃದ್ಧಿ ಸಚಿವಾಲಯದ ನೆರವಿನೊಂದಿಗೆ ಸಣ್ಣ ಸ್ವಂತ ಉದ್ಯೋಗ ಆರಂಭಿಸಲು ಮತ್ತು ಗೌರವಯುತ ಬದುಕು ಸಾಗಿಸಲು ಅನುವು ಮಾಡಿಕೊಡುವುದೇ ಇತ್ಯಾದಿ ಯೋಜನೆಗಳ ನೆರವನ್ನೂ ಪಡೆಯಿತು ಎಂದು ಅಧಿಕಾರಿ ನುಡಿದರು.
2017: ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾ ಜಿಲ್ಲೆಯಲ್ಲಿ ಹಿಂದಿನ ದಿನ ತಡರಾತ್ರಿ ಉಗ್ರಗಾಮಿಗಳು ಕಾಂಗ್ರೆಸ್ ನಾಯಕ ಇಮ್ತಿಯಾಜ್ ಪಾರೆ ಮನೆಯ ಮೇಲೆ ದಾಳಿ ನಡೆಸಿದರು. ಕಾಂಗ್ರೆಸ್ ನಾಯಕ ಮತ್ತು ಬಂಡಾಯ ವಿರೋಧಿ ಕಮಾಂಡರ್ ಕುಕಾ ಪಾರ್ರೆ ಪುತ್ರ ಇಮ್ತಿಯಾಜ್ ಮನೆ ಸಮೀಪ ತಡರಾತ್ರಿಯಲ್ಲಿ ಗುಂಡು ಹಾರಾಟದ ಸದ್ದುಗಳು ಕೇಳಿ ಬಂದವು. ಘಟನೆ ಸಂಬಂಧಿತ ವಾಸ್ತವಾಂಶಗಳನ್ನು ನಾವು ಇನ್ನೂ ಅಂದಾಜು ಮಾಡುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದರು. ಗುಂಡಿನ ದಾಳಿ ನಡೆದಾಗ ಇಮ್ತಿಯಾಜ್ ಪಾರೆ ಮನೆಯಲ್ಲೇ ಇದ್ದರು. ಉಗ್ರಗಾಮಿಗಳು ಗುಂಡು ಹಾರಿಸುವುದರ ಜೊತೆಗೆ ಅವರ ಮನೆಯತ್ತ ಗ್ರೆನೇಡನ್ನೂ ಎಸೆದರು ಎಂದು ಪೊಲೀಸರು ಹೇಳಿದರು. ಅದೃಷ್ಟವಶಾತ್ ದಾಳಿ ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲ ಎಂದು ಪಾರ್ರೆ ಹೇಳಿದರು.
2017: ನವದೆಹಲಿ: ಜಾಗತಿಕ ಬೆದರಿಕೆ ಒಡ್ಡಿರುವ ಭಯೋತ್ಪಾದನೆ ಬಹುತೇಕ ದಿನಚರಿ ಎಂಬಂತಾಗಿದ್ದು, ಇದರ ವಿರುದ್ಧ ಸಂಯುಕ್ತ ಹೋರಾಟದ ಅಗತ್ಯ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಇಲ್ಲಿ ಕರೆ ನೀಡಿದರು. ಒಂಭತ್ತು ವರ್ಷಗಳ ಹಿಂದೆ ಮುಂಬೈ ಭಯೋತ್ಪಾದಕ ದಾಳಿ ಕಾಲದಲ್ಲಿ ಬಲಿದಾನ ಮಾಡಿದ ಧೈರ್ಯಶಾಲಿ ನಾಗರಿಕರನ್ನು ನೆನಪಿಸಿದ ಪ್ರಧಾನಿ, ’ಕೆಲವು ವರ್ಷಗಳ ಹಿಂದೆ ಭಾರತ ಭಯೋತ್ಪಾದನೆಯ ಬೆದರಿಕೆ ಬಗ್ಗೆ ಮಾತನಾಡುವಾಗ ಜಗತ್ತಿನಲ್ಲಿ ಹಲವರು ಅದನ್ನು ಗಂಭೀರವಾಗಿ ತೆಗೆದುಕೊಳ್ಳಲೂ ಸಿದ್ಧರಿರಲಿಲ್ಲ. ಈಗ ಭಯೋತ್ಪಾದನೆ ಅವರ ಬಾಗಿಲುಗಳನ್ನೇ ಬಡಿಯುತ್ತಿದ್ದು, ಮಾನವೀಯತೆ, ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇರುವ ಜಗತ್ತಿನ ಪ್ರತಿಯೊಂದು ಸರ್ಕಾರವೂ ಇದೊಂದು ದೊಡ್ಡ ಸವಾಲು ಎಂದು ಕಂಡುಕೊಂಡಿದೆ ಎಂದು ತಮ್ಮಮನ್ ಕಿ ಬಾತ್ಬಾನುಲಿ ಕಾರ್ಯಕ್ರಮದಲ್ಲಿ ಮೋದಿ ನುಡಿದರು. ಭಯೋತ್ಪಾದನೆ ಈಗ ವಿಶ್ವಾದ್ಯಂತ ಮಾನವೀಯತೆಗೇ ಬೆದರಿಕೆ ಒಡ್ಡಿದೆ ಎಂದು ಅವರು ಹೇಳಿದರು. ಭಯೋತ್ಪಾದನೆ ತನ್ನ ಕೊಳಕು ರೂಪವನ್ನು ತೋರಿಸುತ್ತಿದೆ. ಹೆಚ್ಚು ಕಡಿಮೆ ದಿನಚರಿಯಂತೆ ಜಾಗತಿಕ ಬೆದರಿಕೆಯನ್ನು ಒಡ್ಡಿದೆ. ಅದು ಮಾನವೀಯತೆಗೆ ಸವಾಲು ಹಾಕಿದೆ. ಮಾನವೀಯ ಶಕ್ತಿಗಳನ್ನು ನಾಶ ಪಡಿಸಲು ಕಟಿಬದ್ಧವಾಗಿದೆ. ಆದ್ದರಿಂದ ಭಾರತ ಮಾತ್ರವೇ ಅಲ್ಲ ಎಲ್ಲ ಮಾನವೀಯ ಶಕ್ತಿಗಳೂ ಒಂದಾಗಿ ಭಯೋತ್ಪಾದನೆಯ ಹಾವಳಿಯನ್ನು ಪರಾಭವಗೊಳಿಸಲು ಹೋರಾಟ ನಡೆಸಬೇಕು ಎಂದು ಅವರು ನುಡಿದರು. ಭಾರತವು ಭಗವಾನ್ ಬುದ್ಧ, ಭಗವಾನ್ ಮಹಾವೀರ, ಗುರು ನಾನಕ್ ಮತ್ತು ಮಹಾತ್ಮ ಗಾಂಧಿಯಂತಹ ಜಗತ್ತಿಗೆ ಪ್ರೇಮ ಮತ್ತು ಅಹಿಂಸೆಯ ಸಂದೇಶ ನೀಡಿದವರ ನಾಡು ಎಂದು ಅವರು ನೆನಪಿಸಿದರು. ನವೆಂಬರ್ ೨೬ರ ದಿನವನ್ನು ಸಂವಿಧಾನ ದಿನವಾಗಿ ಆಚರಿಸಲಾಗುತ್ತದೆ. ಇದೇ ವೇಳೆಗೆ ಒಂಭತ್ತು ವರ್ಷಗಳ ಹಿಂದೆ ಇದೇ ದಿನ ಭಯೋತ್ಪಾದಕರು ಮುಂಬೈ ಮೇಲೆ ದಾಳಿ ನಡೆಸಿದರು ಎಂಬುದನ್ನು ಮರೆಯಲಾಗದು. ದಾಳಿ ಕಾಲದಲ್ಲಿ ಬಲಿದಾನ ಮಾಡಿದ ಪೌರರು, ಪೊಲೀಸರು, ಭದ್ರತಾ ಸಿಬ್ಬಂದಿ ಮತ್ತಿತರ ಪ್ರತಿಯೊಬ್ಬರನ್ನೂ ರಾಷ್ಟ್ರ ನೆನಪಿಡುತ್ತದೆ. ಅವರ ಬಲಿದಾನವನ್ನು ರಾಷ್ಟ್ರ ಎಂದಿಗೂ ಮರೆಯುವುದಿಲ್ಲಎಂದು ಪ್ರಧಾನಿ ನುಡಿದರು. ಸಮರ ಮತ್ತು ಶಾಂತಿಕಾಲದಲ್ಲಿ ಭಾರತೀಯ ನೌಕಾದಳ ವಹಿಸುವ ಪಾತ್ರವನ್ನೂ ನೆನಪಿಸಿದ ಪ್ರಧಾನಿ, ಡಿಸೆಂಬರ್ ೪ರಂದು ನೌಕಾದಿನ ಎಂಬುದನ್ನು ಮರೆಯುವಂತಿಲ್ಲ. ವಿಶ್ವದ ಬಹುತೇಕ ನೌಕಾಪಡೆಗಳು ತಮ್ಮ ಸಮರನೌಕೆಗಳಲ್ಲಿ ಮಹಿಳೆಯರಿಗೆ ಅವಕಾಶ ಕಲ್ಪಿಸುತ್ತವೆ. ಆದರೆ ಭಾರತದಲ್ಲಿ ಚೋಳರ ನೌಕಾಪಡೆ ೮೦೦ ಅಥವಾ ೯೦೦ ವರ್ಷಗಳಷ್ಟು ಹಿಂದೆಯೇ ಬಹಿಳೆಯರಿಗೆ ಪ್ರಮುಖ ಪಾತ್ರಗಳನ್ನು ವಹಿಸಿತ್ತು ಎಂದು ಮೋದಿ ಹೇಳಿದರು.  ನೌಕಾಪಡೆಯು ಸಮರದಲ್ಲಿ ವಹಿಸುವ ಪಾತ್ರವನ್ನು ಹಲವರು ನೆನಪಿಡುತ್ತಾರೆ. ಆದರೆ ಅದು ಭಾರತದ ನೆರೆಯ ರಾಷ್ಟ್ರಗಳಿಗೆ ಮಾನವೀಯ ನೆರವು ನೀಡುವಲ್ಲಿ ಮಹತ್ವದ ಪಾತ್ರವಹಿಸಿತ್ತು ಎಂಬುದನ್ನೂ ಮರೆಯುವಂತಿಲ್ಲ ಎಂದು ಅವರು ನುಡಿದರು.
2017: ನವದೆಹಲಿ: ಹೆಚ್ಚುತ್ತಿರುವ ಮಾಲಿನ್ಯದ ಹಿನ್ನೆಲೆಯಲ್ಲಿ ಸಂಚಾರಿ ಪೊಲೀಸರ ಆರೋಗ್ಯ ಕಾಪಾಡುವ ಸಲುವಾಗಿ ಕೆಲಸ ಮಾಡುವ ಸ್ಥಳದಲ್ಲಿ ಸಂಚಾರಿ ಪೊಲೀಸರಿಗೆ ರೊಟೇಷನ್ ವ್ಯವಸ್ಥೆ ಕಲ್ಪಿಸಬೇಕು ಎಂದು ಕೋರಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿತು. ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ಮತ್ತು ನ್ಯಾಯಮೂರ್ತಿಗಳಾದ ಎಎಂ ಖಾನ್ವಿಲ್ಕರ್ ಮತ್ತು ಡಿವೈ ಚಂದ್ರಚೂಡ್ ಅವರನ್ನು ಒಳಗೊಂಡ ಪೀಠವು ವೈದ್ಯ ಸಂಜಯ್ ಕುಲಶ್ರೇಷ್ಠ ಅವರು ಸಲ್ಲಿಸಿದ ಅರ್ಜಿಯನ್ನು ತಳ್ಳಿ ಹಾಕಿತು. ಟ್ರಾಫಿಕ್ ಪೊಲೀಸರಿಗೆ ಮಾಲಿನ್ಯದಿಂದಾಗಿ ಉಂಟಾಗುವ ರೋಗಗಳಿಗೆ ಸೂಕ್ತ ಚಿಕಿತ್ಸೆ ಒದಗಿಸುವ ಸಲುವಾಗಿ ಕಾಲಕಾಲಕ್ಕೆ ವೈದ್ಯಕೀಯ ತಪಾಸಣೆ ವ್ಯವಸ್ಥೆ ಮಾಡಬೇಕು ಎಂದೂ ಸಂಜಯ್ ತಮ್ಮ ಅರ್ಜಿಯಲ್ಲಿ ಕೋರಿದ್ದರು.  ಸಂಚಾರ ದಟ್ಟಣೆಯ ಪ್ರದೇಶದಲ್ಲಿ ಮತ್ತು ಸಂಚಾರ ದಟ್ಟಣೆ ರಹಿತ ಪ್ರದೇಶಗಳಲ್ಲಿ ಸಂಚಾರಿ ಪೊಲೀಸರನ್ನು ರೊಟೇಷನ್ ಆಧಾರದಲ್ಲಿ ನಿಯೋಜಿಸಬೇಕು ಎಂದೂ ಅರ್ಜಿ ಕೋರಿತ್ತು.  ಇದೆಂತಹ ಪ್ರಾರ್ಥನೆ? ಸುಪ್ರೀಂಕೋರ್ಟ್ ಟ್ರಾಫಿಕ್ ಪೊಲೀಸರ ಡ್ಯೂಟಿ ರೋಸ್ಟರ್ ಮೇಲೆ ನಿಗಾ ಇಡಬೇಕು ಎಂದು ನೀವು ಬಯಸುತ್ತೀರಾ?’ ಎಂದು ಪ್ರಶ್ನಿಸಿದ ಪೀಠ, ಪ್ರಕರಣವನ್ನು ವಜಾ ಮಾಡಿದೆ ಎಂದು ಹೇಳಿತು.  ಭಾರತದ ರಸ್ತೆಗಳಲ್ಲಿನ ತೀವ್ರ ವಾಹನ ಮಾಲಿನ್ಯದ ಹಿನ್ನೆಲೆಯಲ್ಲಿ ಆರೋಗ್ಯ ಸಮಸ್ಯೆಗಳನ್ನು ನಿಭಾಯಿಸಲು ಅನುಕೂಲವಾಗುವಂತೆ ಸಂಚಾರಿ ಪೊಲೀಸರಿಗೆ ಪರಿಹಾರ ಕಲ್ಪಿಸುವಂತಹ ವ್ಯವಸ್ಥೆ ಮಾಡಬೇಕು. ನಿಟ್ಟಿನಲ್ಲಿ ಕೇಂದ್ರ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಅರ್ಜಿ ಕೋರಿತ್ತು. ನ್ಯಾಯಾಲಯಕ್ಕೆ ಬರುವ ಮುನ್ನ ಅರ್ಜಿದಾರರು ಸಂಚಾರಿ ಪೊಲೀಸರಿಗೆ ಮಾಲಿನ್ಯ ಅಪಾಯಗಳ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಗಳು ಒದಗಿಸಿರುವ ಹೆಚ್ಚುವರಿ ಭತ್ಯೆ ಅಥವಾ ಸವಲತ್ತುಗಳ ಬಗ್ಗೆ ಮಾಹಿತಿ ಹಕ್ಕು ಕಾಯ್ದೆಯ ಅಡಿಯಲ್ಲಿ ವಿವರ ಸಂಗ್ರಹಿಸಲು ಯತ್ನಿಸಿದ್ದರು. ಬಹುತೇಕ ರಾಜ್ಯ ಸರ್ಕಾರಗಳು ಇಂತಹ ಸವಲತ್ತುಗಳನ್ನು ಕಲ್ಪಿಸಿಲ್ಲ ಎಂಬುದು ಆರ್ಟಿಐ ಮಾಹಿತಿಯಿಂದ ದೃಢಪಟ್ಟಿತ್ತು ಎಂದು ಅರ್ಜಿ ತಿಳಿಸಿತ್ತು.  ವಾಯುಮಾಲಿನ್ಯವು ಭಾರತದಲ್ಲಿ ಸಂಚಾರಿ ಪೊಲೀಸರಿಗೆ ಆರೋಗ್ಯಕ್ಕೆ ಸಂಬಂಧಿಸಿದಂತೆ ಬಹುದೊಡ್ಡ ವೃತ್ತಿ ಸಮಸ್ಯೆಯಾಗಿದೆ. ಕೇವಲ ಐದಾರು ವರ್ಷಗಳಲ್ಲಿ ಸಂಚಾರಿ ಪೊಲೀಸರು ಮಾಲಿನ್ಯ ಸಂಬಂಧಿತ ರೋಗಗಳಿಗೆ ಹೆಚ್ಚು ತುತ್ತಾಗಿ ನರಳುತ್ತಿದ್ದಾರೆ ಎಂದೂ ಅರ್ಜಿ ವಿವರಿಸಿತ್ತು.

2016: ಹವಾನಾ: ಕ್ಯೂಬಾದ ಮಾಜಿ ಅಧ್ಯಕ್ಷ ಫಿಡೆಲ್ ಕ್ಯಾಸ್ಟ್ರೋ (90) ನಿಧನರಾದರು. ದೀರ್ಘ ಕಾಲದಿಂದ ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಫಿಡೆಲ್ ಕ್ಯಾಸ್ಟ್ರೋ 2008 ರಲ್ಲಿ ಅಧಿಕಾರ ತ್ಯಜಿಸಿ ತಮ್ಮ ಸಹೋದರ ರೌಲ್ ಕ್ಯಾಸ್ಟ್ರೋಗೆ ಅಧಿಕಾರ ಹಸ್ತಾಂತರಿಸಿದ್ದರು. ಕ್ಯಾಸ್ಟ್ರೋ 1959 ರಿಂದ 1976ರವರೆಗೆ ಹಾಗೂ 1976 ರಿಂದ 2008ರವರೆಗೆ ಅಧ್ಯಕ್ಷರಾಗಿದ್ದರು. ಕ್ಯಾಸ್ಟ್ರೋ ಕ್ಯೂಬಾದಲ್ಲಿ ಕಮ್ಯೂನಿಸ್ಟ್ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಮೆರಿಕಕ್ಕೆ ಸೆಡ್ಡು ಹೊಡೆದಿದ್ದರು.
 2016: ನವದೆಹಲಿ: ನ್ಯಾಯಾಧೀಶರ ನೇಮಕಾತಿ ವಿಚಾರ ಮತ್ತೆ ಕೇಂದ್ರ- ನ್ಯಾಯಾಂಗ ಘರ್ಷಣೆಯ
ಮುಂಚೂಣಿಗೆ ಬಂದಿತು. ಭಾರತದ ಮುಖ್ಯ ನ್ಯಾಯಮೂರ್ತಿ ಟಿ.ಎಸ್. ಠಾಕೂರ್ ಅವರು ಹೈಕೋರ್ಟುಗಳಲ್ಲಿ ಖಾಲಿ ಬಿದ್ದಿರುವ 500 ನ್ಯಾಯಾಧೀಶರ ಹುದ್ದೆಗಳಿಗೆ ನೇಮಕಾತಿ ಆಗದೇ ಇರುವುದಕ್ಕಾಗಿ ಕೇಂದ್ರದ ಮೇಲೆ ಮತ್ತೆ ವಾಕ್ಪ್ರಹಾರ ನಡೆಸಿದರು.  ಆದರೆ ಕಾನೂನು ಸಚಿವ ರವಿಶಂಕರ ಪ್ರಸಾದ್ ಇದನ್ನು ನಿರಾಕರಿಸಿ ವರ್ಷ 120 ನ್ಯಾಯಾದೀಶರ ನೇಮಕ ಮಾಡಲಾಗಿದೆ ಎಂದು ಪ್ರತಿಪಾದಿಸಿದ್ದಾರೆ. ‘ಹೈಕೋರ್ಟುಗಳಲ್ಲಿ ಸುಮಾರು 500 ನ್ಯಾಯಮೂರ್ತಿಗಳ ಹುದ್ದೆಗಳು ಖಾಲಿ ಬಿದ್ದಿವೆ. ಟ್ರಿಬ್ಯೂನಲ್ಲುಗಳಿಗೆ ಯಾವುದೇ ಮೂಲ ಸವಲತ್ತುಗಳನ್ನೂ ಒದಗಿಸಲಾಗುತ್ತಿಲ್ಲ. ಹೀಗಾಗಿ ಹಲವಾರು ಟ್ರಿಬ್ಯೂನಲ್ಲುಗಳೂ ಖಾಲಿ ಬಿದ್ದಿವೆ. ಮೂಲಸವಲತ್ತುಗಳು ಇಲ್ಲದ ಕಾರಣ ನಿವೃತ್ತ ನ್ಯಾಯಮೂರ್ತಿಗಳೂ ಟ್ರಿಬ್ಯೂನಲ್ ಮುಖ್ಯಸ್ಥರ ಹುದ್ದೆಗಳನ್ನು ಒಪ್ಪಿಕೊಳ್ಳದಂತಹ ಪರಿಸ್ಥಿತಿ ಬಂದಿದೆ. ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಟ್ರಿಬ್ಯೂನಲ್ ಮುಖ್ಯಸ್ಥರಾಗಲು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳೇ ಇಲ್ಲ ಎಂಬ ಸನ್ನಿವೇಶ ಸೃಷ್ಟಿಯಾಗಬಹುದು ಎಂದು ನ್ಯಾಯಮೂರ್ತಿ ಠಾಕೂರ್ ಎಚ್ಚರಿಸಿದರು. ನ್ಯಾಯಮೂರ್ತಿ ಠಾಕೂರ್ ಮಾತುಗಳನ್ನು ಒಪ್ಪದ ರವಿ ಶಂಕರ ಪ್ರಸಾದ್ ಅವರು ನಾವು ಗೌರವಾದರಗಳ ಜೊತೆಗೇ ಅವರ (ಮುಖ್ಯ ನ್ಯಾಯಮೂರ್ತಿ) ಮಾತುಗಳನ್ನು ಒಪ್ಪುವುದಿಲ್ಲ. ನಾವು ವರ್ಷ 120 ನೇಮಕಾತಿಗಳನ್ನು ಮಾಡಿದ್ದೇವೆ. 1990ರಿಂದೀಚೆಗೆ ಕೇವಲ 80 ನೇಮಕಾತಿಗಳನ್ನು ಮಾಡಲಾಗಿತ್ತು. ಕೆಳಗಿನ ನ್ಯಾಯಾಲಯಗಳಲ್ಲಿ 5000 ಹುದ್ದೆಗಳು ಖಾಲಿ ಇವೆ. ಆದರೆ ನೇಮಕಾತಿಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಪಾತ್ರವೇನೂ ಇಲ್ಲ. ಹುದ್ದೆಗಳ ಭರ್ತಿಗೆ ನ್ಯಾಯಾಂಗವೇ ಕ್ರಮ ಕೈಗೊಳ್ಳಬೇಕು. ಮೂಲಸವಲತ್ತಿನ ವಿಚಾರದಲ್ಲಿ ನಿರಂತರ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ಹೇಳಿದರು.
2016: ಟೆಹರಾನ್: ಇರಾನಿನ ಉತ್ತರ ಭಾಗದಲ್ಲಿ ಎರಡು ರೈಲುಗಳು ಡಿಕ್ಕಿ ಹೊಡೆದ ಪರಿಣಾಮ ಬೋಗಿಗಳಿಗೆ ಬೆಂಕಿ ಹೊತ್ತಿಕೊಂಡು 44 ಜನರು ಮೃತರಾಗಿ ಹಲವರು ಗಾಯಗೊಂಡರು. ಇರಾನಿನ ರಾಜಧಾನಿ ಟೆಹರಾನ್ ಮತ್ತು ಮಶಹದ್ ನಗರದ ನಡುವಿನ ರೈಲ್ವೆ ಮಾರ್ಗದಲ್ಲಿ ದುರ್ಘಟನೆ ಘಟಿಸಿತು. ಇರಾನಿನ ಉತ್ತರ ಭಾಗದ ಸೇಮನನ್ ಪ್ರಾಂತ್ಯದಲ್ಲಿ ಅಪಘಾತ ಸಂಭವಿಸಿತು. ಡಿಕ್ಕಿ ಹೊಡೆದ ರಭಸಕ್ಕೆ 2 ಬೋಗಿಗಳಿಗೆ ಬೆಂಕಿ ಹೊತ್ತಿಕೊಂಡಿತು. ಜತೆಗೆ ಹಲವು ಬೋಗಿಗಳು ಹಳಿ ತಪ್ಪಿದವು. 82 ಜನರಿಗೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.  ಘಟನೆಗೆ ನಿರ್ಲಕ್ಷ್ಯವೇ ಕಾರಣ ಎಂಬುದು ಮೇಲ್ನೋಟಕ್ಕೆ ತಿಳಿದು ಬರುತ್ತಿದೆ. ರೈಲ್ವೆ ಮಾರ್ಗದಲ್ಲಿ ಒಂದು ರೈಲು ತೆರಳುತ್ತಿದ್ದಾಗ ಅದೇ ಮಾರ್ಗದಲ್ಲಿ ಮತ್ತೊಂದು ರೈಲಿಗೆ ತೆರಳಲು ಅವಕಾಶ ಮಾಡಿಕೊಡಲಾಗಿತ್ತು. ಸಂಬಂಧ ತನಿಖೆ ನಡೆಸಲಾಗುತ್ತಿದೆ ಎಂದು ಇರಾನ್ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದರು.
 2016: ಪಟನಾ: ಕೇಂದ್ರ ಸರ್ಕಾರದ ನೋಟು ರದ್ಧತಿ ಕ್ರಮಕ್ಕೆ ತಮ್ಮ ಬೆಂಬಲವನ್ನು ಪುನರುಚ್ಚರಿಸಿದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಬೇನಾಮಿ ಆಸ್ತಿಗಳ ಮೇಲೆ ದಾಳಿ ನಡೆಸಲೂ ಇದು ಸಕಾಲ ಎಂದು ಹೇಳಿದರು. ನೋಟು ರದ್ಧತಿ ಕ್ರಮದ ಬಳಿಕ ಸರ್ಕಾರ ಬೇನಾಮಿ ಆಸ್ತಿ ಮೇಲೂ ದಾಳಿ ನಡೆಸಬೇಕು ಮತ್ತು ಮದ್ಯ ನಿಷೇಧ ಜಾರಿಗೊಳಿಸಬೇಕು. ಏಕೆಂದರೆ ಇವು ಕಪ್ಪು ಹಣದ ಮುಖ್ಯ ಮೂಲಗಳು ಎಂದು ನಿತೀಶ್ ಕುಮಾರ್ ಪ್ರತಿಪಾದಿಸಿದರು.
 2016: ಮುಂಬೈ: 2008 ನವೆಂಬರ್ 26 ರಂದು ಮುಂಬೈ ಮಹಾನಗರದ ಮೇಲೆ ಉಗ್ರರು ದಾಳಿ
ನಡೆಸಿ 166 ಜನರನ್ನು ಬಲಿ ತೆಗೆದುಕೊಂಡಿದ್ದರು. ದುರ್ಘಟನೆ ನಡೆದು 8 ವರ್ಷ ಕಳೆದಿದ್ದು, ದೇಶಾದ್ಯಂತ ಉಗ್ರರದಾಳಿಯಲ್ಲಿ ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಪ್ರಧಾನಿ ನರೇಂದ್ರ ಮೋದಿ ಅವರು ಹೈದರಾಬಾದಿನ ಸರ್ದಾರ್ ವಲ್ಲಭ ಭಾಯಿ ಪಟೇಲ್ ನ್ಯಾಷನಲ್ ಪೊಲೀಸ್ ಅಕಾಡೆಮಿಯಲ್ಲಿ ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ದಾಳಿಯಲ್ಲಿ ಹುತಾತ್ಮರಾದ ಭದ್ರತಾ ಸಿಬ್ಬಂದಿ ಮತ್ತು ಮೃತರಾದ ನಾಗರಿಕರಿಗೆ ಮುಂಬೈಯಲ್ಲಿ ನಮನ ಸಲ್ಲಿಸಿದರು. ಉಗ್ರ ದಾಳಿಯಲ್ಲಿ ಮೃತರಾದವರಿಗೆ ನಾವು ನಮನ ಸಲ್ಲಿಸುತ್ತೇವೆ. 8 ವರ್ಷಗಳಲ್ಲಿ ಪೊಲೀಸ್ ಇಲಾಖೆ ಮತ್ತಷ್ಟು ಬಲಗೊಂಡಿದ್ದು, ಯಾವುದೇ ದಾಳಿಯನ್ನು ಸಮರ್ಥವಾಗಿ ಎದುರಿಸುವ ಸಾಮರ್ಥ್ಯ ಪಡೆದಿದೆ ಎಂದು ಫಡ್ನವಿಸ್ ತಿಳಿಸಿದರು. ಸಮಾರಂಭದಲ್ಲಿ ರಾಜ್ಯಪಾಲ ವಿದ್ಯಾಸಾಗರ ರಾವ್, ಶಿವ ಸೇನೆ ಅಧ್ಯಕ್ಷ ಉದ್ಧವ್ ಠಾಕ್ರೆ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು. ಜತೆಗೆ ದಾಳಿಯಲ್ಲಿ ಮೃತರಾದವರ ಕುಟುಂಬಸ್ಥರು ಪಾಲ್ಗೊಂಡಿದ್ದರು. ಮುಂಬೈಯ ಮಿಥಿಬಾಯಿ ಕಾಲೇಜಿನ 2000 ವಿದ್ಯಾರ್ಥಿಗಳು ನಗರದಲ್ಲಿ ಶಾಂತಿ ಮೆರವಣಿಗೆ ನಡೆಸಿದರು. ಮುಂಬೈ ಮಹಾನಗರದ ಮೇಲೆ 10 ಉಗ್ರರು ನಡೆಸಿದ ದಾಳಿಯಲ್ಲಿ ಕನ್ನಡಿಗ ವೀರ ಯೋಧ ಸಂದೀಪ್ ಉನ್ನಿಕೃಷ್ಣನ್, ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕೆರೆ, ಪೊಲೀಸ್ ಅಧಿಕಾರಿಗಳಾದ ಅಶೋಕ್ ಕಮ್ಟೆ, ವಿಜಯ್ ಸಲ್ಸಾಕರ್ ಸೇರಿದಂತೆ ಒಟ್ಟು 18 ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದರು. ದಾಳಿಯಲ್ಲಿ 144 ನಾಗರಿಕರು ಮೃತರಾದರೆ, 300 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಉಗ್ರರು ನವೆಂಬರ್ 26 ರಂದು ಛತ್ರಪತಿ ಶಿವಾಜಿ ರೈಲ್ವೆ ನಿಲ್ದಾಣ, ಒಬೆರಾಯ್ ಹೋಟೆಲ್, ತಾಜ್ ಪ್ಯಾಲೆಸ್, ಲೆಪರ್ಡ್ ಕೆಫೆ, ಕಾಮಾ ಆಸ್ಪತ್ರೆ, ನಾರಿಮನ್ ಹೌಸ್ ಸೇರಿದಂತೆ ಹಲವೆಡೆ ದಾಳಿ ನಡೆಸಿದ್ದರು. ನವೆಂಬರ್ 29 ರವರೆಗೆ ಕಾರ್ಯಾಚರಣೆ ನಡೆಸಿ ಎಲ್ಲಾ ಉಗ್ರರನ್ನು ಹೊಡೆದುರುಳಿಸಲಾಗಿತ್ತು. ದಾಳಿ ಸಂದರ್ಭದಲ್ಲಿ ಜೀವಂತವಾಗಿ ಸೆರೆಹಿಡಿಯಲಾಗಿದ್ದ ಉಗ್ರ ಕಸಬ್ ನನ್ನು 2012 ನವೆಂಬರ್ 21 ರಂದು ಗಲ್ಲಿಗೇರಿಸಲಾಗಿತ್ತು.

2008: ದೇಶದ ವಾಣಿಜ್ಯ ರಾಜಧಾನಿ ಮುಂಬೈಯಲ್ಲಿ ಉಗ್ರರು ಮತ್ತೆ ಅಟ್ಟಹಾಸ ಮೆರೆದರು. ದಕ್ಷಿಣ ಮುಂಬೈನ ಹಲವೆಡೆ ಈದಿನ ರಾತ್ರಿ ಅವರು ನಡೆಸಿದ ಸರಣಿ ಸ್ಪೋಟ ಮತ್ತು ಗುಂಡಿನ ಕಾಳಗಗಳಲ್ಲಿ 80ಕ್ಕೂ ಹೆಚ್ಚು ಮಂದಿ ಪ್ರಾಣತೆತ್ತು, ನೂರಾರು ಮಂದಿ ಗಾಯಗೊಂಡರು. ಇಬ್ಬರು ಉಗ್ರರನ್ನು ಹೊಡೆದುರುಳಿಸುವಲ್ಲಿ ಪೊಲೀಸ್ ಪಡೆಗಳು ಯಶಸ್ವಿಯಾದವು. ಒಬ್ಬ ಉಗ್ರ ತೀವ್ರ ಗಾಯಗೊಂಡು ಸೆರೆ ಸಿಕ್ಕಿದ. ಮೂವರು ಉಗ್ರರು ಕಪ್ಪು ಬಣ್ಣದ ಕಾರೊಂದರಲ್ಲಿ ಪರಾರಿಯಾದರು. ಭಯೋತ್ಪಾದನೆ ನಿಗ್ರಹ ಪಡೆಯ ಮುಖ್ಯಸ್ಥ ಹೇಮಂತ್ ಕರ್ಕರೆ, ಎನ್‌ಕೌಂಟರ್ ತಜ್ಞ ವಿಜಯ್ ಸಾಲುಸ್ಕರ್ ಸೇರಿದಂತೆ ಇಬ್ಬರು ಹಿರಿಯ ಪೊಲೀಸ್ ಅಧಿಕಾರಿಗಳು ಸಾವನ್ನಪ್ಪಿದರು. ಜನನಿಬಿಡ ಛತ್ರಪತಿ ಶಿವಾಜಿ ರೈಲ್ವೆ ನಿಲ್ದಾಣ (ಹಿಂದಿನ ವಿಕ್ಟೋರಿಯಾ ಟರ್ಮಿನಸ್), ಪ್ರತಿಷ್ಠಿತ ತಾಜ್ ಮತ್ತು ಟ್ರೈಡೆಂಟ್ (ಹಿಂದಿನ ಒಬೆರಾಯ್) ಹೋಟೆಲ್‌ಗಳಲ್ಲಿ ನಡೆದ ಸ್ಪೋಟಗಳು, ಗುಂಡಿನ ದಾಳಿಗಳಲ್ಲಿ ಹಲವಾರು ಮಂದಿ ಬಲಿಯಾದರು. ಕೊಲ್ಗಾ, ನಾರಿಮನ್ ಪಾಯಿಂಟ್ ಸೇರಿದಂತೆ 8 ಕಡೆಗಳಲ್ಲಿ ಈ ವಿಧ್ವಂಸಕ ಕೃತ್ಯಗಳು ನಡೆದವು. ಅತ್ಯಾಧುನಿಕ ಬಂದೂಕು ಮತ್ತು ಗ್ರೆನೇಡುಗಳೊಂದಿಗೆ ಎರಡು ತಂಡಗಳಲ್ಲಿ ಬಂದ ಉಗ್ರರು ನಡೆಸಿದ ಈ ಯೋಜಿತ ದಾಳಿಗಳಿಂದ ಇಡೀ ದೇಶ ಬೆಚ್ಚಿಬಿದ್ದಿತು.
(ಇತ್ತೀಚಿನ ಸರಣಿ ಸ್ಫೋಟಗಳು
ಅಕ್ಟೋಬರ್ 2007: ರಾಜಸ್ಥಾನದ ಅಜ್ನೀರ್ ಶರೀಫ್ ದರ್ಗಾದಲ್ಲಿ ರಂಜಾನ್ ಸಂದರ್ಭ ಸ್ಫೋಟ: ಇಬ್ಬರ ಸಾವು.
ಆಗಸ್ಟ್ 2007: ಹೈದರಾಬಾದಿನಲ್ಲಿ ಉಗ್ರರ ದಾಳಿ: 30 ಸಾವು 60 ಮಂದಿಗೆ ಗಾಯ.
ಮೇ 2007: ಹೈದರಾಬಾದಿನ ಮೆಕ್ಕಾ ಮಸೀದಿಯಲ್ಲಿ ಬಾಂಬ್ ಸ್ಫೋಟ: 11 ಜನರ ಸಾವು.
ಫೆಬ್ರುವರಿ 19, 2007: ಭಾರತದಿಂದ ಪಾಕಿಸ್ಥಾನಕ್ಕೆ ತೆರಳಿದ ರೈಲಿನಲ್ಲಿ ಎರಡು ಬಾಂಬ್ ಸ್ಫೋಟ:  66 ಪ್ರಯಾಣಿಕರು ಬೆಂಕಿಗೆ ಆಹುತಿ. ಇವರಲ್ಲಿ ಬಹುತೇಕರು ಪಾಕಿಸ್ಥಾನಿಗಳು.
ಸೆಪ್ಟೆಂಬರ್ 2006: ಮಾಲೆಗಾಂವ್‌ ಮಸೀದಿಯಲ್ಲಿ ಅವಳಿ ಸ್ಫೋಟ: 30 ಸಾವು 100 ಮಂದಿಗೆ  ಗಾಯ.
ಜುಲೈ 2006: ಮುಂಬೈ ರೈಲುಗಳಲ್ಲಿ ಏಳು ಬಾಂಬ್ ಸ್ಪೋಟ: 200ಕ್ಕೂ ಹೆಚ್ಚು ಸಾವು. ಇತರ 700 ಮಂದಿಗೆ ಗಾಯ.
ಮಾರ್ಚ್ 2006: ವಾರಣಾಸಿಯ ರೈಲು ನಿಲ್ದಾಣ ಮತ್ತು ದೇವಾಲಯದಲ್ಲಿ ಅವಳಿ ಬಾಂಬ್ ಸ್ಫೋಟ:  20 ಜನರ ಸಾವು.
ಅಕ್ಟೋಬರ್ 2005: ದೀಪಾವಳಿಯ ಮುನ್ನಾದಿನ ನವದೆಹಲಿಯ ಜನನಿಬಿಡ ಮಾರುಕಟ್ಟೆಗಳಲ್ಲಿ  ಮೂರು ಬಾಂಬ್ ಸ್ಫೋಟ: 62 ಸಾವು. ನೂರಾರು ಮಂದಿಗೆ ಗಾಯ. )

2008: ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದ ಪರಿಣಾಮದಿಂದಾಗಿ ತಮಿಳುನಾಡಿನ ಹಲವಾರು ಜಿಲ್ಲೆಗಳಲ್ಲಿ 4 ದಿನಗಳಿಂದ ಸುರಿದ ಭಾರಿ ಮಳೆಗೆ 36 ಜನ ಬಲಿಯಾದರು. ಪ್ರವಾಹ, ಮನೆಗಳ ಗೋಡೆ ಕುಸಿತ ಮತ್ತು ವಿದ್ಯುತ್ ಸ್ಪರ್ಶವೇ ಬಹುತೇಕ ಸಾವುಗಳಿಗೆ ಕಾರಣವೆಂದು ಪೊಲೀಸರು ತಿಳಿಸಿದರು.

2008: ಲಂಡನ್ನಿನ ವ್ಯಕ್ತಿಯೊಬ್ಬ ತನ್ನ ಇಬ್ಬರು ಪುತ್ರಿಯರ ಮೇಲೆ 20 ವರ್ಷಗಳ ಕಾಲ ಅತ್ಯಾಚಾರ ನಡೆಸಿ ಮಾನಸಿಕ ಹಿಂಸೆ ನೀಡಿದ ಅಮಾನುಷ ಕೃತ್ಯಕ್ಕಾಗಿ ಏಕಕಾಲಕ್ಕೆ 25 ಜೀವಾವಧಿ ಶಿಕ್ಷೆಗಳಿಗೆ ಗುರಿಯಾದ. ಐವತ್ತಾರು ವರ್ಷದ ಈ ವ್ಯಕ್ತಿ ತನ್ನ ಹಿರಿಯ ಮಗಳು 12 ಬಾರಿ ಗರ್ಭಿಣಿಯಾಗಲು ಕಾರಣನಾದ. ಅಲ್ಲದೆ ಇಬ್ಬರು ಮಕ್ಕಳ ತಂದೆಯೂ ಆದ. ಈ ನಡುವೆ ಇಬ್ಬರು ಮಕ್ಕಳು ಮೃತವಾಗಿವೆ. ಕಿರಿಯ ಮಗಳು 12 ಬಾರಿ ಗರ್ಭಿಣಿಯಾಗಿ, ಏಳು ಮಕ್ಕಳಿಗೆ ಜನ್ಮ ನೀಡಿದಳು. ಕಳೆದ ವರ್ಷ ಈತ  ಚಿಕಿತ್ಸೆಗಾಗಿ ಆಸ್ಪತ್ರೆ ಸೇರಿದ್ದಾಗ ಹಿರಿಯ ಮಗಳು ಮನೆಯಿಂದ ತಪ್ಪಿಸಿಕೊಂಡು ಬಂದ ನಂತರ ಪ್ರಕರಣ ಬೆಳಕಿಗೆ ಬಂತು. ಈ ದುಷ್ಕೃತ್ಯ ಎಸಗಿದ ವ್ಯಕ್ತಿಯ ವಿಚಾರಣೆಯನ್ನು ನಡೆಸಿದ ಶೆಫಿಲ್ಡ್ ಕ್ರೌನ್ ನ್ಯಾಯಾಲಯದ ನ್ಯಾಯಮೂರ್ತಿ ಆಲನ್ ಗೋಲ್ಡ್‌ಸ್ಯಾಕ್ ಅವರು ತಪ್ಪಿತಸ್ಥನಿಗೆ 25 ಜೀವಾವಧಿ ಶಿಕ್ಷೆಯನ್ನು ಏಕಕಾಲದಲ್ಲಿ ಅನುಭವಿಸುವಂತೆ ತೀರ್ಪು ನೀಡಿದರು. ಆಸ್ಟ್ರೇಲಿಯಾದ ಜೋಸೆಫ್ ಫ್ರಿಟ್ಜಿಲ್ ಎಂಬುದು ಈತನ ಹೆಸರು. ಈತ ತನ್ನ ಹೆಣ್ಮಕ್ಕಳನ್ನು 24 ವರ್ಷಗಳ ಕಾಲ ನೆಲಮಾಳಿಗೆಯಲ್ಲಿ ಕೂಡಿಹಾಕಿದ್ದ.

2008: ಕಿಷ್ಲ್ಟಕರ ಆರೋಗ್ಯ ಸಂದರ್ಭಗಳಲ್ಲಿ ವ್ಯಕ್ತಿಯೊಬ್ಬನಿಗೆ ಮರಣ ಹೊಂದಲು ಅವಕಾಶ ನೀಡುವ ಕಾನೂನಿಗೆ ಮೆಕ್ಸಿಕೋ ಸೆನೆಟ್ ಒಪ್ಪಿಗೆ ನೀಡಿತು. ಇದರಿಂದ ಕಾಯಿಲೆ ಪೀಡಿತ ರೋಗಿಗಳು ತಮಗೆ ನೀಡಬೇಕಾಗಿರುವ ಚಿಕಿತ್ಸೆಗೆ ವಿರೋಧ ವ್ಯಕ್ತಪಡಿಸಲು ಅವಕಾಶ ಲಭಿಸಿತು. ಈ ಕಾನೂನಿಗೆ ಈ ಮೊದಲೇ ಮೆಕ್ಸಿಕೊದ ಕೆಳಮನೆ ಒಪ್ಪಿಗೆ ನೀಡಿತ್ತು. ಈಗ ಇದು ರಾಷ್ಟ್ರಪತಿಗಳ ಸಹಿಯೊಂದಿಗೆ ಅಂತಿಮ ರೂಪ ಪಡೆಯುವುದು. ಈ ಕಾನೂನು ದಯಾಮರಣ ಇಲ್ಲವೇ ಆತ್ಮಹತ್ಯೆಯನ್ನು ಸಮ್ಮತಿಸುವುದಿಲ್ಲ ಎಂದು ಕೆಲವು ಸೆನೆಟರುಗಳು ಹೇಳಿದರು. ಈ ಕಾನೂನಿನ ಪ್ರಕಾರ ಯಾವುದೇ ರೋಗಿ ಚಿಕಿತ್ಸೆ ಬೇಡ ಎಂದು ನಿರಾಕರಿಸುವುದಾದರೆ ಇಬ್ಬರು ಸಾಕ್ಷಿಗಳ ಸಮ್ಮುಖದಲ್ಲಿ ಲಿಖಿತ ರೂಪದಲ್ಲಿ ಒಪ್ಪಿಗೆ ನೀಡಬೇಕಾಗುತ್ತದೆ.

2008: ಪಾಕಿಸ್ಥಾನದಲ್ಲಿ ಹತ್ಯೆಯಾದ ಮಾಜಿ ಪ್ರಧಾನಿ  ಬೆನಜೀರ್ ಭುಟ್ಟೊ ಅವರನ್ನು ಮರಣೋತ್ತರವಾಗಿ ವಿಶ್ವಸಂಸ್ಥೆಯ ಮಾನವ ಹಕ್ಕು ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು.  ವಿಶ್ವಸಂಸ್ಥೆಯ ಮಾನವ ಹಕ್ಕು ದಿನವಾದ ಡಿಸೆಂಬರ್ 10 ರಂದು  ಪ್ರಧಾನ ಕಾಯಾದರ್ಶಿ ಬಾನ್ ಕಿ ಮೂನ್ ಅವರು ಪ್ರಶಸ್ತಿ ಪ್ರದಾನ ಮಾಡುವರು ಎಂದು ವಿಶ್ವಸಂಸ್ಥೆಯ ಮಹಾಸಭೆಯ ಅಧ್ಯಕ್ಷ ಮಿಗುಯಿಲ್ ಡಿ' ಎಸ್ಕೊಟೊ ಅವರು ಭುಟ್ಟೊ ಪತಿ ಹಾಗೂ ಪಾಕ್ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರಿಗೆ ತಿಳಿಸಿದರು. ವಿಶ್ವಸಂಸ್ಥೆಯು 1968 ರಲ್ಲಿ ಸ್ಥಾಪಿಸಿದ ಈ ಪ್ರಶಸ್ತಿಯನ್ನು ಮಾನವ ಹಕ್ಕುಗಳ ರಕ್ಷಣೆಯಲ್ಲಿ ಗಣನೀಯ ಸೇವೆ ಸಲ್ಲಿಸಿದ ವ್ಯಕ್ತಿ ಹಾಗೂ  ಸಂಸ್ಥೆಗಳಿಗೆ ನೀಡುತ್ತದೆ.

2007: ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಸಂಸತ್ತಿನ ಉಭಯ ಸದನಗಳ ಅಂಗೀಕಾರ ಪಡೆದ ಯುಪಿಎ ಸರ್ಕಾರ ಮರುಕ್ಷಣವೇ ವಿಧಾನಸಭೆಯನ್ನು ವಿಸರ್ಜಿಸಲು ನಿರ್ಧರಿಸುವ ಮೂಲಕ ಎರಡು ತಿಂಗಳ ಕಾಲ ರಾಜ್ಯದಲ್ಲಿದ್ದ ಅತಂತ್ರ ರಾಜಕೀಯ ಸ್ಥಿತಿಗೆ ಅಂತ್ಯ ಹಾಡಿತು.

2007: ಪಾಕಿಸ್ಥಾನದ ಅಧ್ಯಕ್ಷ ಜನರಲ್ ಪರ್ವೇಜ್ ಮುಷರಫ್ ಅವರು ಪಾಕಿಸ್ಥಾನದ ಸೇನಾ ಮುಖ್ಯಸ್ಥನ ಹುದ್ದೆಯನ್ನು ವಾರಾಂತ್ಯದಲ್ಲಿ ತ್ಯಜಿಸಿ ಪ್ರಜಾಸತ್ತಾತ್ಮಕ ರಾಷ್ಟ್ರಪತಿಯಾಗಿ ಹೊಸ ರೂಪ ಧರಿಸಲು ನಿರ್ಧರಿಸಿದರು. ಅ. 6ರಂದು ನಡೆದ ಅಧ್ಯಕ್ಷ ಚುನಾವಣೆಯಲ್ಲಿ ಮರುಆಯ್ಕೆಯಾದ ಮುಷರಫ್ ಅವರ ಗೆಲುವನ್ನು ಪರಿಗಣಿಸಬೇಕೆಂದು ಸುಪ್ರೀಂಕೋರ್ಟ್ ಪಾಕ್ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. 1998ರ ಅಕ್ಟೋಬರ್ 7ರಂದು  ಜನರಲ್ ಮುಷರಫ್ ಅವರು ಪಾಕ್ ಸೇನಾ ಮುಖ್ಯಸ್ಥನ ಪದವಿಗೇರಿದ್ದರು. ಮೂರು ವರ್ಷಗಳ ಕಾಲ ಮಾತ್ರ ಸೇನಾ ಮುಖ್ಯಸ್ಥನ ಅಧಿಕಾರವಧಿ ನಿಗದಿಯಾಗಿದ್ದರೂ, ಮುಷರಫ್ ಸತತ 9 ವರ್ಷಗಳ ಕಾಲ ಈ ಹುದ್ದೆಯಲ್ಲಿ ಮುಂದುವರೆದಿದ್ದರು.

2007: ಆಗ್ನೇಯ ಇಂಡೋನೇಷ್ಯಾದ ಸುಂಬಾವಾ ದ್ವೀಪದಲ್ಲಿ ಸಂಭವಿಸಿದ ಎರಡು ಪ್ರಬಲ ಭೂಕಂಪಗಳಿಗೆ ಮೂವರು ಬಲಿಯಾಗಿ, 45ಕ್ಕೂ ಹೆಚ್ಚು ಜನರು ಗಾಯಗೊಂಡರು. ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 6.7 ಹಾಗೂ 5.0ರಷ್ಟು ಇತ್ತು.

2007: ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಲಘು ಭೂಕಂಪ ಸಂಭವಿಸಿತು. ನಸುಕಿನ 4.42ರ ಸುಮಾರಿಗೆ ಕೆಲ ಸೆಕೆಂಡುಗಳ ಕಾಲ ಲಘುವಾಗಿ ಭೂಮಿ ಕಂಪಿಸಿದ್ದರಿಂದ ಬೆಳಗಿನ ಸಿಹಿನಿದ್ರೆಯಲ್ಲಿದ್ದ ಜನರು ಭಯಭೀತರಾಗಿ ಮನೆ ಬಿಟ್ಟು ಹೊರಗೋಡಿದರು. ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 4.42ರಷ್ಟು ಇತ್ತು.

 2007: ಬಾಂಗ್ಲಾದೇಶದ ವಿವಾದಾತ್ಮಕ ಲೇಖಕಿ ತಸ್ಲಿಮಾ ನಸ್ರೀನ್ ಅವರು ಭಾರತದಲ್ಲಿ ಎಲ್ಲಿಆಶ್ರಯ ಪಡೆಯಬೇಕು ಎಂದು ನಿರ್ಧರಿಸುವ ಹೊಣೆ ಕೇಂದ್ರ ಸರ್ಕಾರದ್ದು ಎಂದು ಹೇಳುವ ಮೂಲಕ ಪಶ್ಚಿಮ ಬಂಗಾಳ ಸರ್ಕಾರ ಈ ವಿವಾದದಿಂದ ಕೈತೊಳೆದುಕೊಂಡಿತು. ನಸ್ರೀನ್ ಅವರಿಗೆ ಆಶ್ರಯ ನೀಡಿದ್ದರಿಂದ ಪಶ್ಚಿಮ ಬಂಗಾಳದ ಎಡರಂಗ ಸರ್ಕಾರ ಮುಸ್ಲಿಂ ಸಮುದಾಯದಿಂದ ಭಾರಿ ಟೀಕೆ ಹಾಗೂ ಪ್ರತಿಭಟನೆಗಳನ್ನು ಎದುರಿಸಿತ್ತು. ಇದೇ ಸಂದರ್ಭದಲ್ಲಿ ಸಚಿವರೊಬ್ಬರು ತಮ್ಮ ಮನೆಯಲ್ಲಿ ನಸ್ರೀನ್ ಅವರಿಗೆ ಆಶ್ರಯ ನೀಡುವುದಾಗಿ ಹೇಳಿದ್ದು ರಾಜ್ಯ ಸರ್ಕಾರಕ್ಕೆ ತೀವ್ರ ಮುಜುಗರ ಉಂಟು ಮಾಡಿತ್ತು. ಈ ಬೆಳವಣಿಗೆ ನಂತರ ನಸ್ರೀನ್ ಅವರು ಜೈಪುರಕ್ಕೆ ತೆರಳಿದ್ದರು.

2006: ಮಹಿಳೆಯರಿಗೆ ರಕ್ಷಣೆ ಒದಗಿಸುವ ಉದ್ದೇಶದ ಮಹತ್ವದ ಕ್ರಮವಾಗಿ ಅಖಿಲ ಭಾರತ ಶಿಯಾ ವೈಯಕ್ತಿಕ ಕಾನೂನು ಮಂಡಳಿಯು ಮುಂಬೈಯಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲಿ `ಮಾದರಿ ನಿಕ್ಹಾನಾಮಾ'(ಮದುವೆ ಒಪ್ಪಂದ)ಕ್ಕೆ ಸರ್ವಾನುಮತದ ಮಂಜೂರಾತಿ ನೀಡಿತು. ಇದು ವಿಚ್ಛೇದನ ವಿಚಾರದಲ್ಲಿ ಮಹಿಳೆಯರಿಗೂ ಪುರುಷರಷ್ಟೇ ಹಕ್ಕುಗಳನ್ನು ಒದಗಿಸುತ್ತದೆ. `ನಮ್ಮ ಮಾದರಿ ನಿಕ್ಹಾನಾಮಾಕ್ಕೆ ಇರಾಕಿನ ಅತ್ಯುನ್ನತ ಧರ್ಮಗುರು ಅಯತ್ಲ್ಲೊಲಾ ಸಿಸ್ಟಾನಿ ಮತ್ತು ಸಂವಿಧಾನ ತಜ್ಞರು ಅನುಮೋದನೆ ನೀಡಿದ್ದು ಈ ದಿನದಿಂದಲೇ ಜಾರಿಗೆ ಬರುವುದು' ಎಂದು ಮಂಡಳಿ ಅಧ್ಯಕ್ಷ ಮೌಲಾನಾ ಮಿರ್ಜಾ ಮಹಮ್ಮದ್ ಅತಾರ್ ಪ್ರಕಟಿಸಿದರು. ಈ ಮದುವೆ ಒಪ್ಪಂದದ ಪ್ರಕಾರ ವಧು ಮತ್ತು ವರ ಮದುವೆ ಸಮಯದಲ್ಲಿ ತಮ್ಮ ಷರತ್ತುಗಳನ್ನು ಮುಂದಿಡಬಹುದು. ವಧುವಿಗೆ ಅಗತ್ಯ ಬಿದ್ದರೆ ವಿಚ್ಛೇದನಕ್ಕೆ ಒತ್ತಾಯಿಸುವ ಹಕ್ಕು ಇರುತ್ತದೆ. ಅಗತ್ಯ ಬಿದ್ದಾಗ ಆಕೆ ಅದನ್ನು ಬಳಸಿಕೊಳ್ಳಬಹುದು. ಮಂಡಳಿಯ ಎರಡನೇ ಸರ್ವ ಸದಸ್ಯರ ಸಭೆಯಲ್ಲಿ ನಿಕ್ಹಾನಾಮಾಕ್ಕೆ ಮಂಜೂರಾತಿ ನೀಡಲಾಯಿತು. ಭಾರಿ ಸಂಖ್ಯೆಯಲ್ಲಿ ಧರ್ಮಗುರುಗಳು ಮತ್ತು ದೇಶದಾದ್ಯಂತದಿಂದ ಧಾರ್ಮಿಕ ನಾಯಕರು ಸಭೆಗೆ ಆಗಮಿಸಿದ್ದರು.

2006: ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ರಾಜನಾಥ ಸಿಂಗ್ ಅವರು ಮುಂದಿನ ಮೂರು ವರ್ಷಗಳ ಅವಧಿಗೆ ಅವಿರೋಧವಾಗಿ ಆಯ್ಕೆಯಾದರು.

2006: ಭಾರತದ ಜೀವ್ ಮಿಲ್ಕಾ ಸಿಂಗ್ ಅವರು ಜಪಾನಿನ ಕೋಚಿಯಲ್ಲಿ ಮುಕ್ತಾಯಗೊಂಡ ಕ್ಯಾಸಿಯೋ ವಿಶ್ವ ಓಪನ್ ಗಾಲ್ಫ್ ಟೂರ್ನಿಯಲ್ಲಿ ಕಿರೀಟ ಮುಡಿಗೇರಿಸಿಕೊಂಡರು. ನ್ಯೂಜಿಲೆಂಡಿನ ಡೇವಿಡ್ ಸ್ಮೇಲ್ ಅವರನ್ನು ಅಂತಿಮ ಸುತಿನಲ್ಲಿ ಹಿಮ್ಮೆಟ್ಟಿಸಿದ ಅವರು ತಮ್ಮ ಚೊಚ್ಚಲ ಪ್ರಶಸ್ತಿಯನ್ನು ಗೆದ್ದುಕೊಂಡರು.

2005: ಆಕಾಶಯಾನಿ, 75 ವರ್ಷದ ವಿಜಯಪತ್ ಸಿಂಘಾನಿಯಾ ಅವರು ಬಿಸಿಗಾಳಿ ತುಂಬಿದ್ದ ಬಲೂನಿನ ಬುಟ್ಟಿಯಲ್ಲಿ ಸಮುದ್ರಮಟ್ಟಕ್ಕಿಂತ 69,852 ಅಡಿಗಳಷ್ಟು ಎತ್ತರಕ್ಕೆ ಏರಿ ವಿಶ್ವದಾಖಲೆ ನಿರ್ಮಿಸಿದರು. ಅಮೆರಿಕದ ಪೇರ್ ಲಿಂಡ್ ಸ್ಟ್ರ್ಯಾಂಡ್ 1988ರಲ್ಲಿ ಟೆಕ್ಸಾಸಿನ ಪ್ಲ್ಯಾನೋದಲ್ಲಿ ಬಿಸಿಗಾಳಿಯ ಬಲೂನಿನಲ್ಲಿ 64,997 ಅಡಿ ಎತ್ತರದಲ್ಲಿ ವಿಹಾರ ನಡೆಸಿದ್ದೇ ಈ ಹಿಂದಿನ ವಿಶ್ವದಾಖಲೆಯಾಗಿತ್ತು. ಸಿಂಘಾನಿಯಾ ಸಾಹಸದೊಂದಿಗೆ ಪೇರ್ ದಾಖಲೆ ಅಳಿಸಿಹೋಯಿತು.

2005: ಟೆಸ್ಟ್ ಕ್ರಿಕೆಟಿನಲ್ಲಿ ಆಸ್ಟ್ರೇಲಿಯಾದ ಆಲನ್ ಬಾರ್ಡರ್ ಅವರು ಸ್ಥಾಪಿಸಿದ್ದ 11,174 ರನ್ ಗಳಿಕೆಯ ವಿಶ್ವದಾಖಲೆಯನ್ನು ವೆಸ್ಟ್ ಇಂಡೀಸಿನ ಬ್ರಯನ್ ಲಾರಾ ಅವರು 11,187 ರನ್ ಗಳಿಸುವ ಮೂಲಕ ಅಳಿಸಿ ಹಾಕಿ ಹೊಸ ವಿಶ್ವದಾಖಲೆ ಬರೆದರು. ಅಡಿಲೇಡ್ ಕ್ರೀಡಾಂಗಣ ಈ ಹೊಸ ದಾಖಲೆ ನಿರ್ಮಾಣಕ್ಕೆ ಸಾಕ್ಷಿಯಾಯಿತು.

2005: ಸಂಗೀತ ಸಾಮ್ರಾಜ್ಞಿ ಲತಾ ಮಂಗೇಶ್ಕರ್ ಅವರು ಮೆರ್ರಿಲ್ ಲಿಂಚ್ ನೀಡುವ `ಜೀವಮಾನದ ಸಾಧನೆ' ಪ್ರಶಸ್ತಿಗೆ ಆಯ್ಕೆಯಾದರು. ಲತಾ ಅವರು ಕಲೆ, ಸಂಸ್ಕತಿ, ಸಂಗೀತ ಕ್ಷೇತ್ರಗಳಿಗೆ ನೀಡಿರುವ ಕೊಡುಗೆಯನ್ನು ಸ್ಮರಿಸಿ ಭಾರತದ ಎರಡನೇ ಅತಿದೊಡ್ಡ ವಜ್ರ ರಫ್ತುದಾರ ಸಂಸ್ಥೆ ಮೆರಿಲ್ ಲಿಂಚ್ ಇನ್ವೆಸ್ಟ್ಮೆಂಟ್ ಮತ್ತು ಅಡೋರ ಸಂಸ್ಥೆಯು ಈ ಪ್ರಶಸ್ತಿಯನ್ನು ನೀಡುತ್ತದೆ.

2005: ವೈಜ್ಞಾನಿಕ ಸಂಶೋಧನೆಗಾಗಿ 2005ನೇ ಸಾಲಿನ ಜಿ.ಡಿ. ಬಿರ್ಲಾ ಪ್ರಶಸ್ತಿಗೆ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ಪ್ರಾಧ್ಯಾಪಕ ಪ್ರೊ. ದೀಪಂಕರ್ ದಾಸ್ ಪಾತ್ರರಾದರು. ಈ ಪ್ರಶಸ್ತಿಯ ಮೊತ್ತ 1.50 ಲಕ್ಷ ರೂಪಾಯಿಗಳು.

2005: ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಆಯ್ಕೆ ಮಾಡಲು ಬಿಜೆಪಿ ವರಿಷ್ಠ ಮಂಡಳಿ ತೀರ್ಮಾನಿಸಿತು.

1998: ಬ್ರಿಟಿಷ್ ಪ್ರಧಾನಿ ಟೋನಿ ಬ್ಲೇರ್ ಅವರು ಐರಿಷ್ ಸಂಸತ್ತನ್ನು ಉದ್ಧೇಶಿಸಿ ಮೊತ್ತ ಮೊದಲ ಭಾಷಣ ಮಾಡಿದರು. ಉತ್ತರ ಐರ್ಲೆಂಡಿನ ಶಾಂತಿ ಒಪ್ಪಂದವು ಅಂತಿಮವಾಗಿ ಬ್ರಿಟನ್ ಮತ್ತು ಐರ್ಲೆಂಡನ್ನು ಐಕ್ಯ ಗೊಳಿಸುವ ನಿಟ್ಟಿನಲ್ಲಿ ಸಹಕಾರಿಯಾಗಲಿದೆ ಎಂದು ಅವರು ಹೇಳಿದರು.

1981: ಹಿಂದೂ ಮಹಾಸಾಗರದಲ್ಲಿರುವ ಸೇಷೆಲ್ಸ್ ದ್ವೀಪದಿಂದ ಮುಂಬೈಗೆ 79 ಜನ ಪ್ರಯಾಣಿಕರು ಮತ್ತು ಚಾಲಕ ವರ್ಗವರೊಡನೆ ಯಾನ ಮಾಡುತ್ತಿದ್ದ ಏರ್ ಇಂಡಿಯಾ ಬೋಯಿಂಗ್ ವಿಮಾನ ಅಪಹರಣ ನಡೆದು ನಂತರ ಅಪಹರಣಗಾರರು ಶರಣಾಗತರಾದರು.

1978: ಸ್ವಾತಂತ್ರ್ಯ ಯೋಧ ಶೌಕತ್ ಅಲಿ ನಿಧನ.

1960: ಭಾರತದ ಕಾನ್ಪುರ ಮತ್ತು ಲಖನೌ ಮಧ್ಯೆ ಮೊತ್ತ ಮೊದಲ ಸಬ್ ಸ್ಕ್ರೈಬರ್ ಟ್ರಂಕ್ ಡಯಲಿಂಗ್ (ಎಸ್ ಟಿ ಡಿ) ಅಳವಡಿಸಲಾಯಿತು.

1956: ಅರಿಯಲೂರು ಬಳಿ ಸಂಭವಿಸಿದ ತೂತ್ತುಕುಡಿ ಎಕ್ಸ್ ಪ್ರೆಸ್ ರೈಲಿನ ದುರಂತದಿಂದ ವ್ಯಥೆಗೊಂಡ ರೈಲ್ವೆ ಸಚಿವ ಲಾಲ್ ಬಹ್ದದೂರ್ ಶಾಸ್ತ್ರಿ ಅವರು ತಮ್ಮ ಸಚಿವ ಪದವಿಗೆ ರಾಜೀನಾಮೆ ನೀಡಿದರು.

1954: ಭಾರತದಲ್ಲಿ ಪರಮಾಣು ಶಕ್ತಿ ಆಯೋಗ ಕಾರ್ಯ ಆರಂಭಿಸಿತು.

1949: ಸಂವಿಧಾನ ರಚನಾ ಸಭೆಯ ಅಧ್ಯಕ್ಷ ಡಾ. ರಾಜೇಂದ್ರ ಪ್ರಸಾದ್ ಅವರು ಭಾರತೀಯ ಸಂವಿಧಾನಕ್ಕೆ ಸಹಿ ಹಾಕಿದರು ಹಾಗೂ ಸಂವಿಧಾನವನ್ನು ಅಂಗೀಕರಿಸಲಾಗಿದೆ ಎಂದು ಘೋಷಿಸಿದರು. ಪೌರತ್ವ, ಚುನಾವಣೆಗಳು, ತಾತ್ಕಾಲಿಕ ಸಂಸತ್ತು, ತಾತ್ಕಾಲಿಕ ಮತ್ತು ವರ್ಗಾವಣಾ ವಿಧಿಗಳನ್ನು ತಕ್ಷಣದಿಂದಲೇ ಜಾರಿಗೊಳಿಸಲಾಯಿತು. ಸಂವಿಧಾನದ ಉಳಿದ ಭಾಗ 1950ರ ಜನವರಿ 26ರಂದು ಜಾರಿಗೆ ಬಂದಿತು.

1947: ಸ್ವತಂತ್ರ ಭಾರತದ ಮೊತ್ತ ಮೊದಲ ಮುಂಗಡಪತ್ರವನ್ನು ಆರ್. ಕೆ. ಷಣ್ಮುಖನ್ ಚೆಟ್ಟಿ ಅವರು ಶಾಸನ ಸಭೆಯಲ್ಲಿ ಮಂಡಿಸಿದರು.

1947: ಸಾಹಿತಿ ನಲ್ಲೂರು ಪ್ರಸಾದ್ ಜನನ.

1938: ಸಾಹಿತಿ ಅನಸೂಯಾರಾವ್ ಜನನ.

1932: ಸಾಹಿತಿ ಜನಾರ್ದನ ಗುರ್ಕಾರ ಜನನ.

1929: ಸಾಹಿತಿ ಬಿ.ಕೆ. ಸುಬ್ಬುಲಕ್ಷ್ಮಿ ಜನನ.

1926: ಅಮುಲ್ ಖ್ಯಾತಿಯ ರಾಷ್ಟ್ರೀಯ ಹೈನು ಅಭಿವೃದ್ಧಿ ಮಂಡಳಿ ಅಧ್ಯಕ್ಷ ವರ್ಗೀಸ್ ಕುರಿಯನ್ ಹುಟ್ಟಿದ ದಿನ. ಭಾರತದ `ಕ್ಷೀರಕ್ರಾಂತಿ' ಯೋಜನೆಯ ಮೂಲ ಪುರುಷ ಇವರು. ಹೈನೋದ್ಯಮದಲ್ಲಿ ಮಾಡಿದ ಸಾಧನೆಗಾಗಿ ಇವರಿಗೆ ದೇಶ ವಿದೇಶಗಳ ಪ್ರಶಸ್ತಿ ಲಭಿಸಿದೆ. ಅವರಿಗೆ ಲಭಿಸಿದ ಪ್ರಶಸ್ತಿಗಳು: ರಾಮನ್ ಮ್ಯಾಗ್ಸೇಸೆ (1963), ಪದ್ಮಶ್ರೀ (1965), ಪದ್ಮಭೂಷಣ (1966), ಕೃಷಿರತ್ನ (1986), ವಾಟೆಲರ್ ಶಾಂತಿ ಪ್ರಶಸ್ತಿ (1986), ವಿಶ್ವ ಆಹಾರ ಪ್ರಶಸ್ತಿ (1989), ಪದ್ಮವಿಭೂಷಣ ಪ್ರಶಸ್ತಿ (1999).

1924: ಭಾರತೀಯ ಕ್ರಿಕೆಟ್ ಆಟಗಾರ ಜಸುಭಾಯಿ ಪಟೇಲ್ (1924-1992) ಹುಟ್ಟಿದ ದಿನ.

1922: ಅಮೆರಿಕದ ಚಾರ್ಲ್ಸ್ ಶುಲ್ಜ್ (1922-2000) ಹುಟ್ಟಿದ ದಿನ. 20ನೇ ಶತಮಾನದಲ್ಲಿ ಅತ್ಯಂತ ಯಶಸ್ವೀ ಕಾಮಿಕ್ ಸ್ಟ್ರಿಪ್ ಎಂಬುದಾಗಿ ಹೆಸರು ಪಡೆದ `ಪೀನಟ್ಸ್' ಇವರ ಸೃಷ್ಟಿ.

1911: ಅಮೆರಿಕದ ಚೆಸ್ ಮಾಸ್ಟರ್ ಸ್ಯಾಮ್ಯುಯೆಲ್ ಹರ್ಮನ್ ರೆಶೆವ್ ಸ್ಕಿ (1911-1992) ಹುಟ್ಟಿದ ದಿನ. ಜಾಗತಿಕ ಚಾಂಪಿಯನ್ ಶಿಪ್ ಗಳಿಸದೇ ಇದ್ದರೂ ಇವರು ಅಪ್ರತಿಮ ಚೆಸ್ ಆಟಗಾರರಾಗಿದ್ದರು.

1906: ನಿಘಂಟು ರಚನಾಕಾರ, ಭಾಷಾಶಾಸ್ತ್ರ ಪಂಡಿತ ತೀ.ನಂ. ಶ್ರೀಕಂಠಯ್ಯ (26-11-1906ರಿಂದ 7-9-1966) ಅವರು ನಂಜುಂಡಯ್ಯ- ಭಾಗೀರಥಮ್ಮ ದಂಪತಿಯ ಮಗನಾಗಿ ತುಮಕೂರು ಜಿಲ್ಲೆ ಚಿಕ್ಕನಾಯಕನ ಹಳ್ಳಿ ತಾಲ್ಲೂಕಿನ ತೀರ್ಥಪುರಲದಲ್ಲಿ ಜನಿಸಿದರು.

 1890: ಶಿಕ್ಷಣ ತಜ್ಞ ಸತ್ಯಬೋಧ ಅವರು ಧಾರವಾಡದಲ್ಲಿ ಈದಿನ ಜನಿಸಿದರು.

No comments:

Post a Comment