Thursday, October 4, 2018

ಇಂದಿನ ಇತಿಹಾಸ History Today ಅಕ್ಟೋಬರ್ 04

ಇಂದಿನ ಇತಿಹಾಸ History Today ಅಕ್ಟೋಬರ್ 04
2018: ನವದೆಹಲಿ: ವಾರ್ಷಿಕ ದ್ವಿಪಕ್ಷೀಯ ಶೃಂಗಸಭೆ ನಡೆಸುವ ಸಲುವಾಗಿ ಭಾರತಕ್ಕೆ ಎರಡು ದಿನಗಳ ಭೇಟಿಗಾಗಿ ಭಾರತಕ್ಕೆ ಆಗಮಿಸಿದ ರಷ್ಯದ ಅಧ್ಯಕ್ಷ ವ್ಲಾಡಿಮೀರ್ ಪುಟಿನ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯಲ್ಲಿ ಆತ್ಮೀಯ ಆಲಿಂಗನದ ಮೂಲಕ ಬರಮಾಡಿಕೊಂಡರು. ಪರಸ್ಪರ ಶುಭ ಹಾರೈಕೆ, ಕುಶಲ ಮಾತುಗಳನ್ನು ಆಡುತ್ತಾ ಕೈಕೈ ಹಿಡಿದುಕೊಂಡು ಉಭಯ ನಾಯಕರೂ ಲೋಕಕಲ್ಯಾಣ ಮಾರ್ಗದ ನಂ೭ರ ಪ್ರಧಾನಿಯವರ ನಿವಾಸದತ್ತ ನಡೆದರು. ಅದಕ್ಕೂ ಮುನ್ನ ಪ್ರಧಾನಿ ಮೋದಿಯವರು ಟ್ವೀಟ್ ಮೂಲಕ ತಾವು ರಷ್ಯದ ನಾಯಕರಿಗೆ ಸ್ವಾಗತ ಕೋರಿದ್ದರು. ಉನ್ನತ ಮಟ್ಟದ ನಿಯೋಗದೊಂದಿಗೆ ಆಗಮಿಸಿದ ಪುಟಿನ್ ಅವರನ್ನು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು. ಪ್ರಧಾನಿ ಮೋದಿ ಮತ್ತು ಪುಟಿನ್ ಅವರು ನಿಗದಿ ಪಡಿಸಿದ ಜಾಗದಲ್ಲಿ ಶುಕ್ರವಾರ ೧೯ನೇ ಭಾರತ- ರಷ್ಯ ವಾರ್ಷಿಕ ದ್ವಿಪಕ್ಷೀಯ ಶೃಂಗಸಭೆ ನಡೆಸಲಿದ್ದು, ಅಮೆರಿಕವು ರಷ್ಯದ ರಕ್ಷಣಾ ಪ್ರಮುಖ ಶಸ್ತ್ರಾಸ್ತ್ರ ಸರಬರಾಜು ವಿರುದ್ಧ ದಿಗ್ಬಂಧನ ವಿಧಿಸಿರುವ ಹಿನ್ನೆಲೆಯಲ್ಲಿ ಉಭಯ ರಾಷ್ಟ್ರಗಳ ನಡುವಣ ದ್ವಿಪಕ್ಷೀಯ ರಕ್ಷಣಾ ಸಹಕಾರ ಬಗ್ಗೆ ಮರುಪರಿಶೀಲಿಸುವ ಸಾಧ್ಯತೆಗಳಿವೆಐದು ಬಿಲಿಯನ್ (೫೦೦ ಕೋಟಿ) ಡಾಲರ್ ಮೊತ್ತದ ಎಸ್ -೪೦೦ ವಾಯು ರಕ್ಷಣಾ ವ್ಯವಸ್ಥೆ ವ್ಯವಹಾರದ ಬಗ್ಗೆ ಶೃಂಗಸಭೆ ಬೆಳಕು ಚೆಲ್ಲುವ ಸಾಧ್ಯತೆ ಇದೆ. ಭಾರತ ಮತ್ತು ರಷ್ಯಾ . ಬಿಲಿಯನ್ (೨೫೦ ಕೋಟಿ) ಡಾಲರ್ ಮೊತ್ತದ ಕ್ರಿವಾಕ್ / ತಲ್ವಾರ್ ದರ್ಜೆಯ ಇನ್ನೂ ರಹಸ್ಯ ಯುದ್ಧ ನೌಕೆಗಳಿಗೆ ಸಂಬಂಧಿಸಿದ ವ್ಯವಹಾರಕ್ಕೆ ಸಹಿ ಹಾಕುವ ಸಾಧ್ಯತೆ ಇದೆ ಎಂದು ವಿಷಯಕ್ಕೆ ಸಂಬಂಧಿಸಿದಂತೆ ಅರಿವು ಉಳ್ಳ ಇಬ್ಬರು ಹಿರಿಯ ಅಧಿಕಾರಿಗಳು ತಿಳಿಸಿದರು. ನೂತನ ಗ್ರಿಗೊರೊವಿಕ್ ದರ್ಜೆಯಪ್ರೊಜೆಕ್ಟ್ ೧೧೩೫. ರಹಸ್ಯ ಯುದ್ಧ ನೌಕೆಗಳು ಗ್ಯಾಸ್ ಟರ್ಬೈನ್ ಎಂಜಿನ್ ಗಳನ್ನು ಹೊಂದಿದ್ದು, ಉಕ್ರೇನಿನ ಉಕ್ರೊಬೊರೋನ್ಪ್ರೋಮ್ ಗ್ಯಾಸ್ ಟರ್ಬೈನ್ ರೀಸರ್ಚ್ ಅಂಡ್ ಪ್ರೊಡಕ್ಷನ್ ಕಾಂಪ್ಲೆಕ್ಸ್ ಝೊರ್ಯಾ ಮಾಶಪ್ರೊಯೆಕ್ತ್ ಅವುಗಳನ್ನು ಸರಬರಾಜು ಮಾಡಲಿದೆ. ಉಭಯ ರಾಷ್ಟ್ರಗಳು ರಷ್ಯದ ಎಸ್-೪೦೦ ಟ್ರಯಂಫ್ ರಕ್ಷಣಾ ಕ್ಷಿಪಣಿ ವ್ಯವಸ್ಥೆಗಳನ್ನು ಭಾರತಕ್ಕೆ ಸರಬರಾಜು ಮಾಡುವ ೩೯,೦೦೦ ಕೋಟಿ ರೂಪಾಯಿಗಳ ವ್ಯವಹಾರ ಒಪ್ಪಂದಕ್ಕೂ ಸಹಿ ಹಾಕಲಿವೆ. ಎಸ್-೪೦೦ ವಾಯುಮಾರ್ಗದ ಮೂಲಕ ನಡೆಯುವ ದಾಳಿಗಳನ್ನು ೪೦೦ ಕಿಮೀ ವಲಯದಲ್ಲಿ ಹೊಡೆದು ಉರುಳಿಸಬಲ್ಲ ಸಾಮರ್ಥ್ಯ ಹೊಂದಿವೆ. ಉಭಯ ನಾಯಕರು ಪ್ರಮುಖ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಬಗ್ಗೆ ಮಾತುಕತೆ ನಡೆಸುವ ಸಾಧ್ಯತೆಗಳಿವೆ. ಇರಾನ್ ಕಚ್ಛಾ ತೈಲ ಆಮದು ಮೇಲೆ ಅಮೆರಿಕ ವಿಧಿಸಿರುವ ದಿಗ್ಬಂಧನ ಬಗೆಗೂ ಉಭಯ ನಾಯಕರು ಚರ್ಚಿಸುವ ಸಾಧ್ಯತೆಗಳಿವೆ.

2018: ನವದೆಹಲಿ: ನಿರಂತರವಾಗಿ ಏರುತ್ತಿರುವ ಇಂಧನ ಬೆಲೆಯಿಂದ ತತ್ತರಿಸಿರುವ ಜನರಿಗೆ ಪೆಟ್ರೋಲ್
ಮತ್ತು ಡೀಸೆಲ್ ಬೆಲೆಯನ್ನು ಈದಿನ  ಮಧ್ಯರಾತ್ರಿಯಿಂದ ಜಾರಿಗೆ ಬರುವಂತೆ ಲೀಟರಿಗೆ ರೂ..೫೦ರಷ್ಟು ಕಡಿತ ಮಾಡುವ ಮೂಲಕ ಕೇಂದ್ರ ಸರ್ಕಾರವು ಅಲ್ಪ ನಿರಾಳತೆಯನ್ನು ನೀಡಿತು. ಕೇಂದ್ರ  ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಜೊತೆಗೆ ರಹಸ್ಯ ಮಾತುಕತೆ ನಡೆಸಿದ ಬಳಿಕ ಇಂಧನ ಬೆಲೆ ಕಡಿತವನ್ನು ಪ್ರಕಟಿಸಿದರು. ಕೇಂದ್ರ ಸರ್ಕಾರವು ಅಬಕಾರಿ ಸುಂಕವನ್ನು ಲೀಟರಿಗೆ ರೂ..೫೦ರಷ್ಟು ಇಳಿಸಿದ್ದು, ತೈಲ ಮಾರಾಟ ಕಂಪೆನಿಗಳಿಗೆ ಲೀಟರಿಗೆ ರೂ. ಇಳಿಸುವಂತೆ ಸೂಚಿಸಲಾಯಿತು. ಪೆಟ್ರೋಲ್ ಮತ್ತು ಡೀಸೆಲ್ ದರ ಹಿಂದಿನ ಎಲ್ಲ ದಾಖಲೆಗಳನ್ನು ಮುರಿದು ಗಗನಮುಖಿಯಾಗಿ ಏರುತ್ತಿರುವುದನ್ನು ಅನುಸರಿಸಿ ಕೇಂದ್ರ ಸರ್ಕಾರವು ದರ ಕಡಿತದ ನಿರ್ಧಾರ ಕೈಗೊಂಡಿದೆ. ದರ ಅತ್ಯಂತ ಕಡಿಮೆ ಇರುವ ಎಲ್ಲ ಮೆಟ್ರೋಗಳು ಮತ್ತು ರಾಜ್ಯ ರಾಜಧಾನಿಗಳಲ್ಲಿ ಈದಿನ  ಪೆಟ್ರೋಲ್ ಲೀಟರಿಗೆ ರೂ.೮೪ಕ್ಕೆ ಮತ್ತು ಡೀಸೆಲ್ ರೂ.೭೫.೪೫ಕ್ಕೆ ಮಾರಾಟವಾದವು. ಮುಂಬೈಯಲ್ಲಿ ಡೀಸೆಲ್ ದರವು ಇದೇ ಮೊದಲ ಬಾರಿಗೆ ಗುರುವಾರ ೮೦ರೂಪಾಯಿಗಳನ್ನು ದಾಟಿತು. ಇದೇ ವೇಳೆಗೆ ಪೆಟ್ರೋಲ್ ಲೀಟರಿಗೆ ೯೧.೩೪ ರೂಪಾಯಿಗೆ ಮಾರಾಟವಾಯಿತು. ಮಹಾರಾಷ್ಟ್ರ ಮತ್ತು ಬಿಹಾರಿನ ಬಹುತೇಕ ಜಿಲ್ಲೆಗಳಲ್ಲಿ ಈಗಾಗಲೇ ಪೆಟ್ರೋಲ್ ಲೀಟರಿಗೆ ೯೨ ರೂಪಾಯಿಗಳಿಗೂ ಹೆಚ್ಚಿನ ದರದಲ್ಲಿ ಮಾರಾಟವಾದವು. ಅಬಕಾರಿ ಸುಂಕ ಕಡಿತದಿಂದ ಕೇಂದ್ರ ಸರ್ಕಾರದ ಬೊಕ್ಕಸದ ಮೇಲೆ ೧೦,೫೦೦ ಕೋಟಿ ರೂಪಾಯಿ ಹೊರೆ ಬೀಳುವುದು ಎಂದು ಜೇಟ್ಲಿ ನುಡಿದರು. ಕೇಂದ್ರ ಸರ್ಕಾರವು ಪೆಟ್ರೋಲಿನ ಮೇಲೆ ಲೀಟರಿಗೆ ೧೯.೪೮ ರೂಪಾಯಿ ಅಬಕಾರಿ ಸುಂಕ ವಿಧಿಸುತ್ತಿದ್ದರೆ ಡೀಸೆಲ್ ಮೇಲೆ ಲೀಟರಿಗೆ ೧೫.೩೩ ರೂಪಾಯಿ ಅಬಕಾರಿ ಸುಂಕ ವಿಧಿಸುತ್ತಿದೆ. ಜನತೆಗೆ ಇನ್ನಷ್ಟು ಪರಿಹಾರ ಒದಗಿಸುವ ಸಲುವಾಗಿ ರಾಜ್ಯ ಸರ್ಕಾರಗಳೂ ಕೇಂದ್ರದ ದರ ಕಡಿತಕ್ಕೆ ಸರಿಹೊಂದುವಂತೆ ಇಂಧನ ಬೆಲೆ ಇಳಿಸಬೇಕು ಎಂದು ಜೇಟ್ಲಿ ಸೂಚಿಸಿದರು. ರಾಜಸ್ಥಾನ, ಆಂಧ್ರಪ್ರದೇಶ, ಪಶ್ಚಿಮ ಬಂಗಾಳ ಮತ್ತು ಕರ್ನಾಟಕದಂತಹ ಕೆಲವು ರಾಜ್ಯಗಳು ಮುನ್ನವೇ ವ್ಯಾಟ್ ದರ ಇಳಿಸಿವೆ. ಆದರೆ ಬಹುತೇಕ ರಾಜ್ಯಗಳು ದರ ಕಡಿತಕ್ಕೆ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಪ್ರಸ್ತುತ ವರ್ಷವೊಂದರಲ್ಲೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ರಾಜಧಾನಿಯಲ್ಲಿ ಕ್ರಮವಾಗಿ ಲೀಟರಿಗೆ ೧೩.೯೧ ಮತ್ತು ೧೫.೫೯ರಷ್ಟು ಹೆಚ್ಚಿದೆ. ಇತರ ರಾಜ್ಯಗಳಲ್ಲಿಯೂ ಇಂಧನ ಬೆಲೆ ಇದೇ ರೀತಿಯಾಗಿ ಏರಿವೆ. ಇಂಧನ ದರಗಳ ಮೇಲಿನ ನಿಯಂತ್ರಣವನ್ನು ರದ್ದು ಪಡಿಸಿರುವ ಕ್ರಮವನ್ನು ಕೇಂದ್ರ ಸರ್ಕಾರವು ಹಿಂತೆಗೆದುಕೊಳ್ಳುವುದಿಲ್ಲ ಎಂದು ವಿತ್ತ ಸಚಿವರು ಸಂದರ್ಭದಲ್ಲಿ ಸ್ಪಷ್ಟ ಪಡಿಸಿದರುನಾವು ಪರಿಸ್ಥಿತಿಗೆ ಅನುಗುಣವಾಗಿ ಪ್ರತಿಕ್ರಿಯಿಸಬೇಕು ಮತ್ತು ಹಣಕಾಸು ಕೊರತೆಯ ಮೇಲೆ ಪರಿಣಾಮವಾಗದಂತೆ ಪರಿಹಾರ ಒದಗಿಸಬೇಕು. ಹಣಕಾಸು ಪರಿಸ್ಥಿತಿಯ ಬೆಲೆ ತೆತ್ತು ನಾವು ಅದನ್ನು ಮಾಡುವಂತಿಲ್ಲ. ಹಣಕಾಸು ಪರಿಸ್ಥಿತಿಯು ತಡೆದುಕೊಳ್ಳಲು ಸಮರ್ಥವಾಗಿರುವ ವೇಳೆಯಲ್ಲಿ ನಾವು ಜನರಿಗೆ ಪರಿಹಾರ ಒದಗಿಸಬೇಕು ಎಂದು ಜೇಟ್ಲಿ ಹೇಳಿದರು.

2018: ನವದೆಹಲಿ: ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಲೀಟರಿಗೆ . ರೂಪಾಯಿಯಷ್ಟು ಇಳಿಸುವುದಾಗಿ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಪ್ರಕಟಿಸಿದ ಬೆನ್ನಲ್ಲೇ ಬಿಜೆಪಿ ಆಡಳಿತವಿರುವ ರಾಜ್ಯಗಳು ಹೆಚ್ಚುವರಿ ಇಂಧನ ದರ ಕಡಿತವನ್ನು ಪ್ರಕಟಿಸಿದವು. ಪಕ್ಷವು ಅಧಿಕಾರದಲ್ಲಿ ಇರುವ ೨೧ ರಾಜ್ಯಗಳ ಪೈಕಿ ೧೩ ರಾಜ್ಯಗಳು ವಿತ್ತ ಸಚಿವರ ದರಕಡಿತ ಪ್ರಕಟಣೆ ಹೊರಬಿದ್ದ ಗಂಟೆಗಳ ಒಳಗಾಗಿ ತಾವೂ ಇಂಧನ ದರ ಕಡಿತದ ಘೋಷಣೆ ಮಾಡಿವೆ. ಆದರೆ ಕರ್ನಾಟಕ ಮತ್ತು ಕೇರಳ ತಾವು ಇಂಧನ ದರ ಇಳಿಕೆ ಮಾಡುವುದಿಲ್ಲ ಎಂದು ಪ್ರಕಟಿಸಿದವು. ಕಾಂಗ್ರೆಸ್ ಪಕ್ಷವು ಕೇಂದ್ರ ಸರ್ಕಾರದ ಇಂಧನ ದರ ಕಡಿತ ಘೋಷಣೆಯನ್ನುಚುನಾವಣೆಗಿಂತ ಮೊದಲಿನ ಭಯಭೀತ ಪ್ರತಿಕ್ರಿಯೆ ಎಂದು ಬಣ್ಣಿಸಿತು. ಕೇಂದ್ರ ಸರ್ಕಾರವು ಪ್ರಕಟಿಸಿರುವ ಲೀಟರಿಗೆ .೫೦ ರೂಪಾಯಿ ದರ ಕಡಿತದ ಹೊರತಾಗಿ ತಾವು ಲೀಟರಿಗೆ . ರೂಪಾಯಿಗಳ ಹೆಚ್ಚುವರಿ ದರ ಕಡಿತ ಮಾಡುವುದಾಗಿ ವಿವಿಧ ಬಿಜೆಪಿ ರಾಜ್ಯಗಳು ಪ್ರಕಟಿಸಿವೆ. ಹೀಗಾಗಿ ರಾಜ್ಯಗಳಲ್ಲಿ ಇಂಧನ ದರ ಲೀಟರಿಗೆ ರೂಪಾಯಿಗಳಷ್ಟು ಇಳಿಯಲಿದೆ. ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಕೇಂದ್ರ ಸರ್ಕಾರವು ಕಡಿತಗೊಳಿಸಿದ ದರಕ್ಕೆ ಸರಿಹೊಂದುವಂತೆ ರಾಜ್ಯಗಳು ಇಂಧನ ದರ ಇಳಿಸಬೇಕು ಎಂದು ಕೋರಿದ್ದರು. ಜೇಟ್ಲಿ ಪ್ರಕಟಣೆಯ ಬಳಿಕ ಮಹಾರಾಷ್ಟ್ರ ಮತ್ತು ಗುಜರಾತ್ ಮೊತ್ತ ಮೊದಲಿಗೆ ಲೀಟರಿಗೆ . ರೂಪಾಯಿಗಳ ಹೆಚ್ಚುವರಿ ದರ ಕಡಿತದ ಪ್ರಕಟಣೆ ಮಾಡಿದವು. ಆಮೇಲೆ ಜಾರ್ಖಂಡ್, ತ್ರಿಪುರ, ಮಧ್ಯಪ್ರದೇಶ, ಉತ್ತರ ಪ್ರದೇಶ, ರಾಜಸ್ಥಾನ ಮತ್ತು ಅಸ್ಸಾಂ ದರ ಕಡಿತದ ಘೋಷಣೆ ಮಾಡಿದವು. ಜಮ್ಮು ಮತ್ತು ಕಾಶ್ಮೀರ, ಹರಿಯಾಣ, ಛತ್ತೀಸ್ ಗಢ, ಉತ್ತರಾಖಂಡ ಮತ್ತು ಅರುಣಾಚಲ ಪ್ರದೇಶ ಸರ್ಕಾರಗಳೂ ಇಂಧನ ದರ ಕಡಿತದ ನಿರ್ಧಾರ ಕೈಗೊಂಡವು.  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಇಂಧನ ದರ ಇಳಿಕೆಯ ಕೇಂದ್ರ ಘೋಷಣೆಯು ಜನ ಸಾಮಾನ್ಯರಿಗೆ ಭಾರೀ ನಿರಾಳತೆ ನೀಡಲಿದೆ. ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಲೀಟರಿಗೆ ಇನ್ನೂ .೫೦ ರೂಪಾಯಿಗಳಷ್ಟು ಇಳಿಸಲು ತಮ್ಮ ಸರ್ಕಾರ ನಿರ್ಧರಿಸಿದೆ ಎಂದು ಹೇಳಿದರು. ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ, ಜಾರ್ಖಂಡ್ ಮುಖ್ಯಮಂತ್ರಿ ರಘುಬರದಾಸ್ ಹಾಗೂ ಛತ್ತೀಸ್ ಗಢ, ಅಸ್ಸಾಂ ಮತ್ತು ತ್ರಿಪುರ ಮುಖ್ಯಮಂತ್ರಿಗಳೂ ಹೆಚ್ಚುವರಿ ದರ ಕಡಿತವನ್ನು ಪ್ರಕಟಿಸಿದರು. ವಿತ್ತ ಖಾತೆಯನ್ನೂ ಹೊಂದಿರುವ ಬಿಹಾರ ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಅವರು ಅಧಿಕೃತ ಮಾಹಿತಿ ಬಂದ ಬಳಿಕ ತಮ್ಮ ರಾಜ್ಯವು ನಿರ್ಧಾರ ಕೈಗೊಳ್ಳಲಿದೆ ಎಂದು ನುಡಿದರು. ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಇಂಧನ ದರಗಳನ್ನು ಲೀಟರಿಗೆ .೫೦ ರೂಪಾಯಿಗಳಷ್ಟು ಇಳಿಸುವುದಾಗಿ ಪ್ರಕಟಿಸಿ, ರಾಜ್ಯಗಳೂ ಹೆಚ್ಚುವರಿ ಕಡಿತ ಮಾಡುವಂತೆ ಸಲಹೆ ಮಾಡಿದ ಬೆನ್ನಲ್ಲೇ, ಕರ್ನಾಟಕ ಮತ್ತು ಕೇರಳ ಸರ್ಕಾರಗಳು ತಾವು ಇಂಧನ ದರ ಇಳಿಸುವುದಿಲ್ಲ ಎಂದು ಪ್ರಕಟಿಸಿದವು.  ‘ಕೇಂದ್ರ ಸರ್ಕಾರ ದರ ಇಳಿಸುವುದಕ್ಕೆ ಮೊದಲೇ ರಾಜ್ಯವು ಇಂಧನ ದರ ಇಳಿಸಿದೆ. ಆದ್ದರಿಂದ ಈಗ ಇಂಧನ ದರ ಇಳಿಸುವುದಿಲ್ಲ ಎಂದು ಕರ್ನಾಟಕ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಹೇಳಿದರು. ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರು ಸೆಪ್ಟೆಂಬರ್ ತಿಂಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಲೀಟರಿಗೆ ರೂಪಾಯಿಯಷ್ಟು ಇಳಿಸುವುದಾಗಿ ಪ್ರಕಟಿಸಿದ್ದರು. ಆದರೆ ಇದಕ್ಕೆ ಮುನ್ನ ಜುಲೈ ತಿಂಗಳಲ್ಲಿ ರೈತ ಸಾಲ ಮನ್ನಾ ಸಲುವಾಗಿ ಸೆಸ್ ರೂಪದಲ್ಲಿ ಇಂಧನದ ಮೇಲೆ ರೂಪಾಯಿಗಳ ಹೆಚ್ಚುವರಿ ದರವನ್ನು ಅವರು ವಿಧಿಸಿದ್ದರು.  ‘ಕೇಂದ್ರ ಕ್ರಮವನ್ನು ಮೆಚ್ಚುತ್ತೇನೆ. ಈಗಲಾದರೂ ಕೇಂದ್ರ ಸರ್ಕಾರ ತನ್ನ ಕಣ್ಣು ತೆರೆದಿದೆ ಎಂದು ಕುಮಾರ ಸ್ವಾಮಿ ಹೇಳಿದರು.  ಬೆಂಗಳೂರಿನಲ್ಲಿ ಈಗ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕ್ರಮವಾಗಿ ಲೀಟರಿಗೆ ೮೪.೭೬ ರೂಪಾಯಿ ಮತ್ತು ೭೫.೯೩ ರೂಪಾಯಿ ಇದೆ. ಕೇಂದ್ರದ ಮನವಿ ಮೇರೆಗೆ ಇಂಧನ ದರ ಇಳಿಸಲು ನಿರಾಕರಿಸಿದ ಕೇರಳ ಹಣಕಾಸು ಸಚಿವ ಥಾಮಸ್ ಇಸಾಕ್ ಅವರುಕೇಂದ್ರ ಸರ್ಕಾರವು ಇಂಧನ ದರಗಳನ್ನು ೨೦೧೪ರ ಮೇ ತಿಂಗಳಲ್ಲಿ ನರೇಂದ್ರ ಮೋದಿ ಸರ್ಕಾರ ಅಧಿಕಾರ ವಹಿಸಿಕೊಂಡಾಗ ಇದ್ದ ದರಕ್ಕೆ ಇಳಿಸಿದರೆ ರಾಜ್ಯವೂ ಇಂಧನ ದರವನ್ನು ಇಳಿಸುತ್ತದೆ ಎಂದು ಹೇಳಿದರು. ಮೋದಿ ಸರ್ಕಾರ ಅಧಿಕಾರಕ್ಕೆ ಬಂದಂದಿನಿಂದ ಇಲ್ಲಿಯವರೆಗೆ ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಲೀಟರಿಗೆ ೧೪ ರೂಪಾಯಿಗಳಷ್ಟು ಮತ್ತು ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು ಲೀಟರಿಗೆ ರೂಪಾಯಿಯಷ್ಟು ಏರಿಸಿದೆ. ಈಗ ಇಳಿಸಿದ್ದು ಹಣವನ್ನು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ನಿಜವಾಗಿಯೂ ಕೇಂದ್ರವು ಗಂಭೀರವಾಗಿದ್ದರೆ ತೆರಿಗೆಯನ್ನು ತಾನು ಅಧಿಕಾರ ವಹಿಸಿದಾಗ ಇದ್ದ ಮಟ್ಟಕ್ಕೆ ಇಳಿಸಬೇಕು. ಆಗ ನಾವೂ ಇಂಧನ ದರ ಇಳಿಸುತ್ತೇವೆ ಎಂದು ಮಾಜಿ ಅರ್ಥಶಾಸ್ತ್ರಜ್ಞನೂ ಆಗಿರುವ ಇಸಾಕ್ ನುಡಿದರು.

2018: ನವದೆಹಲಿ: ಭಾರತವು ತನ್ನ ಅತಿಯಾದ ತೈಲ ಆಮದು ಪರಿಣಾಮವಾಗಿ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಇಲ್ಲಿ ಹೇಳಿದರು.   ಕುಸಿಯುತ್ತಿರುವ ರೂಪಾಯಿ ಮೌಲ್ಯ ಮತ್ತು ರಾಷ್ಟ್ರದ ವಾಣಿಜ್ಯ ಕೊರತೆ ಹೆಚ್ಚುತ್ತಿರುವ ಬಗ್ಗೆ ಚರ್ಚಿಸಲು ಕರೆಯಲಾದ ಸಚಿವರ ಸಭೆ ಆರಂಭಕ್ಕೆ ಮುನ್ನ ಗಡ್ಕರಿ ಅವರು ಮಾಧ್ಯಮಗಳ ಜೊತೆ ಮಾತನಾಡುತ್ತಿದ್ದರುವಿಶ್ವದಲ್ಲಿ ಮೂರನೇ ದೊಡ್ಡ ತೈಲ ಆಮದು ರಾಷ್ಟ್ರವಾಗಿರುವ ಭಾರತ ತನ್ನ ಶೇಕಡಾ ೮೦ರಷ್ಟು ತೈಲ ಅಗತ್ಯಗಳಿಗೆ ವಿದೇಶೀ ತೈಲ ಮಾರುಕಟ್ಟೆಗಳನ್ನೇ ಅವಲಂಬಿಸಿದೆ ವರ್ಷದ ಆರಂಭದಿಂದ ಪರಿವರ್ತನೀಯ ರೂಪಾಯಿಯು ಡಾಲರ್ ಎದುರು ಶೇಕಡಾ ೧೩ರಷ್ಟು ಕುಸಿದಿದ್ದು, ರಾಷ್ಟ್ರದ ಕಚ್ಚಾ ತೈಲ ಬೆಲೆ ಬ್ಯಾರೆಲ್ ಗೆ ೮೫ ಡಾಲರ್ಗಳಿದ್ದ ಸಮಯದಲ್ಲಿ ಭಾರತದ ತೈಲ ಆಮದು ಬಿಲ್ ದುಬಾಯಿಯಾಗುವಂತೆ ಮಾಡಿದೆಪ್ರಧಾನ ಮಂತ್ರಿಗಳ ಕಚೇರಿಯಲ್ಲಿ (ಪಿಎಂಒ) ಗುರುವಾರ ವಿತ್ತ ಸಚಿವ ಅರುಣ್ ಜೇಟ್ಲಿ, ತೈಲ ಸಚಿವ ಧರ್ಮೇಂದ್ರ ಪ್ರಧಾನ್, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರದ ತೈಲ ಬೆಲೆ ಹಾಗೂ ರೂಪಾಯಿ ಮೌಲ್ಯ ಕುಸಿತ ಕುರಿತು ಸಮಾಲೋಚನೆ ನಡೆಸಿದ್ದರು. ಹಣಕಾಸು ಮಾರುಕಟ್ಟೆಗಳು ದಿಢೀರ್ ಕುಸಿದ ಪರಿಣಾಮವಾಗಿ ಹೂಡಿಕೆದಾರರು ಭೀತರಾಗಿರುವ ವೇಳೆಯಲ್ಲೇ ಗಡ್ಕರಿ ಅವರ ಹೇಳಿಕೆ ಹೊರಬಿದ್ದಿದೆ. ಗುರುವಾರ ಮಧ್ಯಾಹ್ನ ಬಿಎಸ್ ಸೂಚ್ಯಂಕವು ೮೦೦ ಪಾಯಿಂಟ್ ಗಳಿಗಿಂತಲೂ ಹೆಚ್ಚು ಕುಸಿದಿದ್ದರೆ, ರೂಪಾಯಿ ಮೌಲ್ಯ ಇನ್ನಷ್ಟು ಕುಸಿದಿದ್ದು, ತೈಲ ಬೆಲೆ ಏರಿದೆ.  ರೂಪಾಯಿ ಮೌಲ್ಯವು ಡಾಲರ್ ಎದುರು ೭೩.೮೧ ರೂಪಾಯಿಗಳಿಗೆ ಕುಸಿಯುವ ಮೂಲಕ ಹೊಸ ದಾಖಲೆ ಬರೆದರೆ, ಕಚ್ಚಾತೈಲ ಬೆಲೆಯು ಬ್ಯಾರೆಲ್ ಗೆ ೮೬ ಡಾಲರ್ ಮಟ್ಟಕ್ಕೆ ಏರಿದ್ದು ಇದು ನಾಲ್ಕು ವರ್ಷಗಳಲ್ಲೇ ಅತ್ಯಧಿಕವಾಗಿದೆ. ಬಿಎಸ್ ಶೇರು ಸೂಚ್ಯಂಕವು ಬುಧವಾರಕ್ಕೆ ಹೋಲಿಸಿದರೆ ೫೫೦ ಪಾಯಿಂಟಿನಷ್ಟು ಕುಸಿದಿದೆ. ಎನ್ ಎಸ್ ನಿಫ್ಟಿ ಕೂಡಾ ಶೇಕಡಾ .೯೬ರಷ್ಟು ಕುಸಿದಿದ್ದು, ೨೧೩.೧೫ ಪಾಯಿಂಟ್ ಗಳಿಗೆ ಇಳಿಯಿತು. ಐಟಿ, ಆಟೋ, ಫಾರ್ಮಾ, ಬ್ಯಾಂಕಿಂಗ್ ಮತ್ತು ರಿಯಾಲ್ಟಿ ಸ್ಟಾಕ್ ಬಹುತೇಕ ನಷ್ಟ ಅನುಭವಿಸಿವೆ. ರಿಲಯನ್ಸ್ ಇಂಡಸ್ಟ್ರೀಸ್, ಹೀರೋ ಮೋಟೊ ಕಾರ್ಪೊರೇಷನ್, ಟಿಸಿಎಸ್, ಇಂಡಸ್ ಇಂಡ್ ಬ್ಯಾಂಕ್, ಅದನಿ ಪೋರ್ಟ್ಸ್, ಎಚ್ ಡಿಎಫ್ ಸಿ ಬ್ಯಾಂಕ್, ಇನ್ ಫೋಸಿಸ್, ಎಚ್ ಯುಎಲ್, ಏಷ್ಯನ್ ಪೆಯಿಂಟ್ಸ್, ಎಚ್ ಡಿ ಎಫ್ ಸಿ ಮತ್ತು ಬಜಾಜ್ ಆಟೋ ಶೇರು ದರಗಳು ಶೇಕಡಾ ೬ರಷ್ಟು ಕುಸಿತ ಕಂಡವು. ಎಸ್ ಬ್ಯಾಂಕ್ ಮಾತ್ರ ಅತ್ಯಂತ ಹೆಚ್ಚು ಲಾಭ ಗಳಿಸಿದ್ದು ಅದರ ಶೇರುದರ ಶೇಕಡಾ .೧೮ರಷ್ಟು ಏರಿದೆ. ವಿಶ್ಲೇಷಕರ ಪ್ರಕಾರ ಈಕ್ವಿಟಿ ಸೂಚ್ಯಂಕಗಳೂ ಆಗಸ್ಟ್ ತಿಂಗಳಲ್ಲಿ ಇದ್ದುದಕ್ಕಿಂತ ಶೇಕಡಾ ೧೦ರಷ್ಟು ಕುಸಿದಿವೆ. ದುರ್ಬಲ ದೇಸೀ ಎಣಿಕೆಗಳು, ಜಾಗತಿಕ ಅಸ್ಥಿರತೆಗಳು, ರೂಪಾಯಿಯ ಮೌಲ್ಯ ಕುಸಿತ ಮತ್ತು ಹೆಚ್ಚುತ್ತಿರುವ ಕಚ್ಚಾ ತೈಲ ಬೆಲೆಗಳು ಮಾರುಕಟ್ಟೆ ಕುಸಿತಕ್ಕೆ ತಮ್ಮ ಕಾಣಿಕೆ ನೀಡಿದವು. ರೂಪಾಯಿಯ ಮೌಲ್ಯ ಕುಸಿತ ಮತ್ತು ಕಚ್ಚಾ ತೈಲ ಬೆಲೆ ಏರಿಕೆಯಲ್ಲಿ ಯಾವುದೇ ಸ್ಥಿರತೆ ಕಾಣದ ಕಾರಣ ಮಾರುಕಟ್ಟೆ ದೌರ್ಬಲ್ಯ ಇನ್ನೂ ಕೆಲಕಾಲ ಮುಂದುವರೆಯಬಹುದು ಎಂದು ಮಾರುಕಟ್ಟೆ ಮೂಲಗಳು ಹೇಳಿವೆ.  ಏಷ್ಯಾದ ಬಹುತೇಕ ಮಾರುಕಟ್ಟೆಗಳಲ್ಲಿ ಸ್ಥಿತಿ ಇದ್ದರೆ, ಅಮೆರಿಕದ ಮಾರುಕಟ್ಟೆಗಳು ಭದ್ರವಾಗಿರುವ ಹಿನ್ನೆಲೆಯಲ್ಲಿ ಹೂಡಿಕೆದಾರರು ಅಮೆರಿಕದತ್ತ ಚಲಿಸಬಹುದು ಎಂಬ ಆತಂಕವೂ ಎದುರಾಯಿತು. ಏಷ್ಯದ ಹೊರತಾಗಿ ಹಾಂಕಾಂಗಿನ ಹಾಂಗ್ ಸೆಂಗ್, ಜಪಾನ್, ಸಿಂಗಾಪುರ ಮತ್ತು ತೈವಾನ್ ಮಾರುಕಟ್ಟೆಗಳಲ್ಲೂ ವ್ಯಾಪಾರ ಶೇಕಡಾ ೨ರಷ್ಟು ಕುಸಿತಗೊಂಡಿತ್ತು.

2018: ನವದೆಹಲಿ: ಐಸಿಐಸಿಐ ಬ್ಯಾಂಕ್ ಆಡಳಿತ ನಿರ್ದೇಶಕಿ (ಎಂಡಿ) ಮತ್ತು ಕಾರ್ಯ ನಿರ್ವಹಣಾ ಅಧಿಕಾರಿ (ಸಿಇಒ) ಚಂದಾ ಕೊಚ್ಚರ್ ಅವರು ತತ್ ಕ್ಷಣದಿಂದ  ಜಾರಿಗೆ ಬರುವಂತೆ ಐಸಿಐಸಿಐ ಬ್ಯಾಂಕ್ ತ್ಯಜಿಸಿದ್ದಾರೆ ಎಂದು ಕಂಪೆನಿಯು ಪ್ರಕಟಿಸಿತು. ಈ ನಿಟ್ಟಿನಲ್ಲಿ ಕೊಚ್ಚರ್ ಅವರು ಮಾಡಿದ ಮನವಿಯನ್ನು ಆಡಳಿತ ಮಂಡಳಿಯು ತತ್ ಕ್ಷಣದಿಂದ ಜಾರಿಗೆ ಬರುವಂತೆ ಅಂಗೀಕರಿಸಿದೆ. ಮಂಡಳಿಯು ಆರಂಭಿಸಿರುವ ತನಿಖೆಗೆ ಇದರಿಂದ ಯಾವುದೇ ಬಾಧಕವೂ ಆಗುವುದಿಲ್ಲ. ಕೆಲವೊಂದು ಸವಲತ್ತುಗಳು ತನಿಖೆಯ ಫಲಿತಾಂಶವನ್ನು ಆಧರಿಸಿರುತ್ತವೆ ಎಂದು ಬ್ಯಾಂಕ್  ತಿಳಿಸಿತು. ಸಂದೀಪ ಬಕ್ಷಿ ಅವರನ್ನು ಆಡಳಿತ ನಿರ್ದೇಶಕ ಮತ್ತು ಮುಖ್ಯ ಕಾರ್ ನಿರ್ವಹಣಾ ಅಧಿಕಾರಿಯಾಗಿ ನೇಮಿಸಲು ಆಡಳಿತ ಮಂಡಳಿ ನಿರ್ಧರಿಸಿದೆ. ಬಕ್ಷಿ ಅವರನ್ನು ಮುಂದಿನ ಐದು ವರ್ಷಗಳಿಗೆ ಅಂದರೆ ೨೦೧೩ರ ಅಕ್ಟೋಬರ್ ೩ರವರೆಗೆ ನೇಮಕ ಮಾಡಲಾಯಿತು.  ಪ್ರಕಟಣೆ ಹೊರಬೀಳುತ್ತಿದ್ದಂತೆಯೇ ಐಸಿಐಸಿಐ ಬ್ಯಾಂಕ್ ಶೇರು ದರಗಳು ಅಂದಾಜು ಶೇಕಡಾ .೪ರಷ್ಟು ಏರಿದವು. ಬಾಂಬೆ ಶೇರು ವಿನಿಮಯ ಕೇಂದ್ರದಲ್ಲಿ ಐಸಿಐಸಿಐ ಬ್ಯಾಂಕ್ ಶೇರು ಮೌಲ್ಯ ೩೧೯.೨೦ ರೂಪಾಯಿಯಷ್ಟಕ್ಕೆ ಏರಿತು.  ಬ್ಯಾಂಕ್ ಹಿತಾಸಕ್ತಿಗೆ ಧಕ್ಕೆ ಉಂಟಾಗುವಂತೆ ವರ್ತಿಸಿದ್ದಾರೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಕಳೆದ ಕೆಲವು ತಿಂಗಳುಗಳಿಂದ ಉಂಟಾಗಿದ್ದ ವಿವಾದವನ್ನು ಅನುಸರಿಸಿ ಕೊಚ್ಚರ್ ಅವರು ತನಿಖೆ ಮುಕ್ತಾಯವಾಗುವವರೆಗೆ ರಜಾ ಹೋಗುವುದಾಗಿ ಕಂಪೆನಿ ಜೂನ್ ತಿಂಗಳಲ್ಲಿ ತಿಳಿಸಿತ್ತು. ಸಂದೀಪ್ ಬಕ್ಷಿ ಅವರನ್ನು ತಾತ್ಕಾಲಿಕ ಮುಖ್ಯಸ್ಥರನ್ನಾಗಿಯೂ ನೇಮಕ ಮಾಡಲಾಗಿತ್ತು.  ಭಾರತದ ಮೂರನೇ ಅತಿದೊಡ್ಡ ಸಾಲಸಂಸ್ಥೆಯಾಗಿರುವ ಐಸಿಐಸಿಐ ಬ್ಯಾಂಕಿನ ಸಿಇಒ ಆಗಿ ೫೬ರ ಹರೆಯದ ಕೊಚ್ಚರ್ ಅವರು ೨೦೦೯ರಿಂದ ಸೇವೆ ಸಲ್ಲಿಸುತ್ತಿದ್ದರು. ಬ್ಯಾಂಕಿನ ಸಾಲ ನೀಡಿಕೆಯಲ್ಲಿ ವಿಡಿಯೋಕಾನ್ ಗ್ರಾಹಕ ಎಲೆಕ್ಟ್ರಾನಿಕ್ ಸಮೂಹ ಮತ್ತು ತೈಲ ಹಾಗು ಅನಿಲ ಅನ್ವೇಷಣಾ ಕಂಪೆನಿ ಬಗ್ಗೆ ಒಲವು ತೋರಿದ್ದಾರೆ ಎಂಬ ಆರೋಪವನ್ನು ಕೊಚ್ಚರ್ ಎದುರಿಸಿದ್ದರು. ವಿಡಿಯೋಕೋನ್ ಸಂಸ್ಥಾಪಕರು ಕೊಚ್ಚರ್ ಅವರ ಪತಿ ಸ್ಥಾಪಿಸಿದ್ದ ನವೀಕರಿಸಲಾಗುವ ಇಂಧನ ಕಂಪೆನಿಯೊಂದರಲ್ಲಿ ಬಂಡವಾಳ ಹೂಡಿದ್ದರು ಎನ್ನಲಾಗಿತ್ತು. ಪ್ರಾರಂಭದಲ್ಲಿ, ಕೊಚ್ಚರ್ ಅವರನ್ನು ಬೆಂಬಲಿಸಿದ್ದ ಐಸಿಐಸಿಐ ಬ್ಯಾಂಕಿನ ಆಡಳಿತ ಮಂಡಳಿಯು ಅವರ ವಿರುದ್ಧದ ಸ್ವಜನ ಪಕ್ಷಪಾತದ ಆರೋಪಗಳನ್ನು ದುರುದ್ದೇಶದ್ದು ಮತ್ತು ಬುಡರಹಿತ ಎಂಬುದಾಗಿ ಹೇಳಿ ತಳ್ಳಿಹಾಕಿತ್ತು. ಅನಾಮಿಕ ವಿಷಲ್ ಬ್ಲೋಯರ್ ಒಬ್ಬರು ಮಾಡಿದ ಆಪಾದನೆಗಳ ಬಗ್ಗೆ ಸ್ವತಂತ್ರ ವ್ಯಕ್ತಿಯಿಂದ ತನಿಖೆ ನಡೆಸುವುದಾಗಿಯೂ ಆಡಳಿತ ಮಂಡಳಿ ಪ್ರಕಟಿಸಿತ್ತು. ಆಡಳಿತದ ಉನ್ನತ ಮಟ್ಟ ಮತ್ತು ಕಾರ್ಪೋರೇಟ್ ಗುಣಮಟ್ಟಕ್ಕೆ ಅನುಗುಣವಾಗಿ ತನಿಖೆ ಮುಕ್ತಾಯವಾಗುವವರೆಗೆ ರಜೆಯಲ್ಲಿ ತೆರಳಲು ಚಂದಾ ಕೊಚ್ಚರ್ ನಿರ್ಧರಿಸಿದ್ದಾರೆ ಎಂದು ಆಡಳಿತ ಮಂಡಳಿ ಹೇಳಿತ್ತು. ಕೊಚ್ಚರ್ ಮತ್ತು ಅವರ ಕುಟುಂಬ ಸದಸ್ಯರಿಗೆ ಸಂಬಂಧಿಸಿದ ಆರೋಪಗಳ ಬಗ್ಗೆ ಸಿಬಿಐ ಮತ್ತು ಸೆಬಿ ಸೇರಿದಂತೆ ಹಲವಾರು ಸರ್ಕಾರಿ ಸಂಸ್ಥೆಗಳು ಈಗಾಗಲೇ ತನಿಖೆ ನಡೆಸುತ್ತಿವೆ.  ಕೊಚ್ಚರ್ ಅವರು ಬ್ಯಾಂಕಿನ ಆಧೀನ ಸಂಸ್ಥೆಗಳ ಮಂಡಳಿ ನಿರ್ದೇಶಕ ಸ್ಥಾನಗಳಿಗೂ ರಾಜೀನಾಮೆ ನೀಡಿದ್ದಾರೆಅಸ್ವಸ್ಥತೆ ಕಾರಣಕ್ಕಾಗಿ ಸ್ವತಂತ್ರ ನಿರ್ದೇಶಕ ಎಂಡಿ ಮಲ್ಯ ಅವರೂ ಆಡಳಿತ ಮಂಡಳಿಗೆ ರಾಜೀನಾಮೆ ಸಲ್ಲಿಸಿದ್ದು ಅದನ್ನೂ ಅಂಗೀಕರಿಸಲಾಗಿದೆ ಎಂದು ಬ್ಯಾಂಕಿನ ಇನ್ನೊಂದು ಪ್ರಕಟಣೆ ತಿಳಿಸಿತು.

2018: ನವದೆಹಲಿ: ಏಳು ಮಂದಿ ರೊಹಿಂಗ್ಯಾ ಅಕ್ರಮ ವಲಸಿಗರನ್ನು ಗಡಿಪಾರು ಮಾಡುವ ಕೇಂದ್ರ ಸರ್ಕಾರದ ನಿರ್ಧಾರದ ವಿಚಾರದಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಸುಪ್ರೀಂಕೋರ್ಟ್ ತಿಳಿಸಿತು. ೨೦೧೨ರಲ್ಲಿ ಅಕ್ರಮವಾಗಿ ಭಾರತ ಪ್ರವೇಶಿಸಿದ್ದ ರೋಹಿಂಗ್ಯಾ ವಲಸಿಗರನ್ನು ಈದಿನ  ಮ್ಯಾನ್ಮಾರ್ ಅಧಿಕಾರಿಗಳಿಗೆ ಹಸ್ತಾಂತರ ಮಾಡಲಾಗುತ್ತದೆ ಎಂದು ಸರ್ಕಾರ ಹೇಳಿತ್ತು. ಭಾರತದ ನಿರ್ಧಾರಕ್ಕೆ ವಿಶ್ವಸಂಸ್ಥೆಯಿಂದಅಸಮಾಧಾನ ವ್ಯಕ್ತವಾಗಿತ್ತು. ಜನರನ್ನು ಬಲವಂತವಾಗಿ ಮ್ಯಾನ್ಮಾರ್ಗೆ ವಾಪಸ್ ಕಳಿಸುತ್ತಿರುವುದು ಅಂತಾರಾಷ್ಟ್ರೀಯ ಕಾನೂನಿನ ಉಲ್ಲಂಘನೆಯಾಗುತ್ತದೆ ಎಂದು ಹೇಳಿತ್ತು. ಅರ್ಜಿಯ ತುರ್ತು ವಿಚಾರಣೆಗೆ ಅನುಮತಿ ನೀಡಿದ ಸುಪ್ರೀಂಕೋರ್ಟ್, ಗಡಿಪಾರು ಮಾಡುವ ಸರ್ಕಾರದ ನಿರ್ಧಾರದಲ್ಲಿಹಸ್ತಕ್ಷೇಪ ಮಾಡಲು ನಿರಾಕರಿಸಿತು. ಅಲ್ಲದೆ ವಿಚಾರದಲ್ಲಿ ಕೇಂದ್ರ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ ಎಂದು ಸುಪ್ರೀಂಕೋರ್ಟ್ ತಿಳಿಸಿತು. ಇದರಿಂದ ಕೇಂದ್ರ ಸರ್ಕಾರಕ್ಕೆ ವಿಚಾರದಲ್ಲಿ ನಿರಾಳತೆ ಲಭಿಸಿತು. ವಕೀಲ ಪ್ರಶಾಂತ್ ಭೂಷಣ್, ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಬೇಕು ಎಂದು ಹೇಳಿದ್ದರು. ನಿರಾಶ್ರಿತ ಪ್ರಜೆಗಳನ್ನ ರಕ್ಷಣೆ ಮಾಡುವುದು ಕೋರ್ಟ್ ಕರ್ತವ್ಯ ಎಂದು ಅವರು ಹೇಳಿದ್ದರು. ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಮತ್ತು ನ್ಯಾಯಮೂರ್ತಿಗಳಾದ ಎಸ್. ಕೆ. ಕೌಲ್ ಮತ್ತು ಕೆ ಎಂ ಜೋಸೆಫ್ ಅವರನ್ನೊಳಗೊಂಡ ಪೀಠವು ರೊಹಿಂಗ್ಯಾಗಳ ಗಡೀಪಾರು ಆದೇಶವನ್ನು ನೀಡಿತು. ನ್ಯಾಯಮೂರ್ತಿಗಳ ಜವಾಬ್ದಾರಿಯನ್ನು ನೆನಪಿಸುವ ಅಗತ್ಯವಿಲ್ಲ ಎಂದು ನ್ಯಾಯಾಲಯ ಪ್ರಶಾಂತ್ ಭೂಷಣ್ ಅವರಿಗೆ ಚಾಟಿ ಬೀಸಿತು. 7 ರೋಹಿಂಗ್ಯಾ ವಲಸಿಗರು ೨೦೧೨ರಲ್ಲಿ ಅಕ್ರಮವಾಗಿ ಭಾರತವನ್ನು ಪ್ರವೇಶಿಸಿದ್ದ ಹಿನ್ನೆಲೆಯಲ್ಲಿ, ಅವರನ್ನು ಅಸ್ಸಾಂ ಪೊಲೀಸರು ವಶಕ್ಕೆ ಪಡೆದಿದ್ದರು. ೨೦೧೨ರಿಂದ ಜೈಲಿನಲ್ಲಿದ್ದ ಜನ, ಇದೀಗ ತಮ್ಮ ಜೈಲು ಶಿಕ್ಷೆ ಪೂರೈಸಿದ ಬಳಿಕ ಮ್ಯಾನ್ಮಾರ್ಗೆ ವಾಪಸ್ಹೋಗಲು ಇಚ್ಛಿಸಿದ್ದಾರೆ. ಇವರು ಅಕ್ರಮ ವಲಸಿಗರಾಗಿದ್ದು, ವಿದೇಶಿ ಕಾಯ್ದೆ ಅಡಿ ಶಿಕ್ಷೆಗೆ ಗುರಿಯಾಗಿದ್ದರೆಂದು ಗೃಹ ಸಚಿವಾಲಯ ಅಫಿಡವಿಟ್ ಸಲ್ಲಿಸಿತ್ತು. ಗಡೀಪಾರು: ನ್ಯಾಯಾಲಯ ಮಧ್ಯ ಪ್ರವೇಶ ಮಾಡಲು ನಿರಾಕರಿಸುತ್ತಿದ್ದಂತೆ ಭಾರತದ ಅಸ್ಸಾಂನಲ್ಲಿ ಅಕ್ರಮವಾಗಿ ವಾಸಿಸುತ್ತಿರುವ ಏಳು ರೋಹಿಂಗ್ಯಾ ವಲಸಿಗರನ್ನು ಭಾರತ ಮ್ಯಾನ್ಮಾರ್ಗೆ ವಾಪಸ್ ಕಳುಹಿಸಿತು. ೨೦೧೨ ರಿಂದ ಪೊಲೀಸರು ಅಸ್ಸಾಂನ ಸಿಲ್ಚಾರ್ ಜಿಲ್ಲೆಯ ಕೇಂದ್ರೀಯ ಕಾರಾಗೃಹದಲ್ಲಿ ಜನರನ್ನು ಬಂಧಿಸಿದ್ದರು.ಭಾರತದಿಂದ ಮ್ಯಾನ್ಮಾರ್ಗೆ ರೋಹಿಂಗ್ಯಾ ವಲಸಿಗರನ್ನು ಗಡಿಪಾರು ಮಾಡುತ್ತಿರುವುದು ಇದೇ ಮೊದಲು. ವಿದೇಶಿ ಕಾನೂನಿನ ಉಲ್ಲಂಘನೆಗಾಗಿ ಏಳು ರೋಹಿಂಗ್ಯಾ ಜನರನ್ನು ಜುಲೈ ೨೯, ೨೦೧೨ ರಂದು ಬಂಧಿಸಲಾಯಿತು. ಮೊಹಮ್ಮದ್ ಜಮಾಲ್, ಮೊಹೂಲ್ ಖಾನ್, ಜಮಾಲ್ ಹುಸೇನ್, ಮೊಹಮ್ಮದ್ ಯೂನೆಸ್, ಸಬೀರ್ ಅಹ್ಮದ್, ರಹೀಮ್ ಉದಿನ್ ಮತ್ತು ಮೊಹಮ್ಮದ್ ಸಲಾಮ್ ಎಂಬುವವರು ಅದರಲ್ಲಿಸೇರಿದ್ದಾರೆ ಎಂದು ಕರಾಚಿ ಜಿಲ್ಲೆಯ ಅಧಿಕಾರಿಗಳು ತಿಳಿಸಿದ್ದಾರೆ. ಅವರು ೨೬ ರಿಂದ ೩೨ ವರ್ಷ ವಯಸ್ಸಿನವರಾಗಿದ್ದಾರೆ. ಇದೊಂದು ವಾಡಿಕೆಯ ಪ್ರಕ್ರಿಯೆ, ಎಲ್ಲಾ ಅಕ್ರಮ ವಲಸಿಗರನ್ನು ಗಡಿಪಾರುಮಾಡಲಾಗುತ್ತದೆ ಎಂದು ಅಸ್ಸಾಂನ ಹೆಚ್ಚುವರಿ ಪೊಲೀಸ್ ನಿರ್ದೇಶಕ ಭಾಸ್ಕರ್ ಜ್ಯೋತಿ ಮಹಂತ ಹೇಳಿದರು. ಜನ ಅಕ್ರಮವಾಗಿ ಭಾರತ ಪ್ರವೇಶಿಸಿದ್ದು,೨೦೧೨ರಲ್ಲಿ ಅಸ್ಸಾಂ ಪೊಲೀಸರು ಇವರನ್ನ ವಶಕ್ಕೆ ಪಡೆದಿದ್ದರು ಎಂದು ತಿಳಿಸಿದ್ದಾರೆ. ಇನ್ನು ಮ್ಯಾನ್ಮಾರ್ ಅಧಿಕಾರಿಗಳು ರೋಹಿಂಗ್ಯಾ ವಲಸಿಗರ ಗುರುತನ್ನು ದೃಢಪಡಿಸಿದ್ದಾರೆ ಎಂದು ಭಾರತೀಯ ಅಧಿಕಾರಿಗಳು ಹೇಳಿದರು.  ಕೇಂದ್ರ ಗೃಹ ಸಚಿವಾಲಯದ ಅಧಿಕಾರಿಯೊಬ್ಬರು, ಏಳು ರೋಹಿಂಗ್ಯಾ ವಲಸಿಗರನ್ನು ಮಣಿಪುರದ ಮೊರೆಹ್ ಗಡಿಯಲ್ಲಿ ಮ್ಯಾನ್ಮಾರ್ ಅಧಿಕಾರಿಗಳಿಗೆ ಹಸ್ತಾಂತರ ಮಾಡಿದರು.ಮ್ಯಾನ್ಮಾರ್ ರಾಜತಾಂತ್ರಿಕರಿಗೆ ಕಾನ್ಸುಲರ್ ಪ್ರವೇಶವನ್ನು ನೀಡಲಾಗಿದೆ ಎಂದು ಅಧಿಕೃತ ಹೇಳಿದ್ದಾರೆ. ವಲಸೆಗಾರರ ಗುರುತನ್ನು ಅವರು ದೃಢಪಡಿಸಿದರು. ಅಕ್ರಮ ವಲಸಿಗರ ವಿಳಾಸವನ್ನು ರಾಜ್ಯದಲ್ಲಿ ದೃಢಪಡಿಸಿದ ನಂತರ, ಮಯನ್ಮಾರ್ ನಾಗರಿಕರು ಎಂದು ದೃಢಪಡಿಸಲಾಗಿದೆ ಎಂದು ಇತರ ಅಧಿಕಾರಿಗಳು ತಿಳಿಸಿದ್ದಾರೆ. ರೋಹಿಂಗ್ಯ ವಲಸಿಗರನ್ನು ಭಾರತದಿಂದ ಮಯನ್ಮಾರ್ಗೆ ಕಳುಹಿಸುತ್ತಿರುವುದು ಇದೇ ಮೊದಲು ಎಂಬುದು ಗಮನಾರ್ಹವಾಗಿದೆ.

ಅದೇ ಸಮಯದಲ್ಲಿ, ಅಸ್ಸಾಂನ ಹೆಚ್ಚುವರಿ ನಿರ್ದೇಶಕ ಜನರಲ್ ಭಾಸ್ಕರ್ ಜ್ಯೋತಿ ಮಹಾಂತ ಮಾತನಾಡುತ್ತಾ, ಅಕ್ರಮ ವಲಸಿಗರನ್ನು ವಾಪಸ್ ಕಳುಹಿಸುವ ಕೆಲಸ ಕೆಲವು ಸಮಯದಿಂದ ನಡೆಯುತ್ತಿದೆ. ವರ್ಷದ ಆರಂಭದಲ್ಲಿ ನಾವು ಬಾಂಗ್ಲಾದೇಶ, ಮ್ಯಾನ್ಮಾರ್ ಮತ್ತು ಪಾಕಿಸ್ತಾನದ ದೇಶಗಳಿಗೆ ದೇಶಕ್ಕೆ ಕಳುಹಿಸಿದ್ದೇವೆ ಎಂದು ಹೇಳಿದರು.
2016: ನವದೆಹಲಿ: ಕಾವೇರಿ ಕೊಳ್ಳದ ನೀರಿನ ಪರಿಸ್ಥಿತಿ ಬಗ್ಗೆ ಅಧ್ಯಯನ ನಡೆಸಲು ಈದಿನ
ಅಧ್ಯಯನ ತಂಡವನ್ನು ರಚಿಸಿದ ಸುಪ್ರೀಂಕೋರ್ಟ್, ಅಕ್ಟೋಬರ್ 7ರಿಂದ 18ರವರೆಗೆ ಪ್ರತಿದಿನ 2000
ಕ್ಯೂಸೆಕ್ಸ್ ನೀರು ಬಿಡುವಂತೆ ಕರ್ನಾಟಕಕ್ಕೆ ಆದೇಶ ನೀಡಿ, ಪ್ರಕರಣದ ವಿಚಾರಣೆಯನ್ನು ಅಕ್ಟೋಬರ್ 18ಕ್ಕೆ ಮುಂದೂಡಿತುಕೇಂದ್ರಿಯ ಜಲ ಆಯೋಗದ ಅಧ್ಯಕ್ಷ ಜಿ.ಎಸ್. ಝಾ ನೇತೃತ್ವದ ಅಧ್ಯಕತೆಯ ಅಧ್ಯಯನ ತಂಡದಲ್ಲಿ, ಕೇಂದ್ರೀಯ ಜಲ ಆಯೋಗದ ಮುಖ್ಯ ಎಂಜಿನಿಯರ್ ಮತ್ತು ನಾಲ್ಕು ರಾಜ್ಯಗಳ ಮುಖ್ಯ ಎಂಜಿನಿಯರ್ಗಳು ಸದಸ್ಯರಾಗಿರುತ್ತಾರೆ. ಅಕ್ಟೋಬರ್ 18ರಂದು ತಂಡವು ತನ್ನ ವರದಿ ಸಲ್ಲಿಸಬೇಕು ಎಂದು ಸುಪ್ರೀಂಕೋರ್ಟ್ ಆಜ್ಞಾಪಿಸಿತು. ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆ ಪ್ರಸ್ತಾಪವನ್ನು ಸುಪ್ರೀಂಕೋರ್ಟ್ ಮುಂದೂಡಿತು. ಸುಪ್ರೀಂಕೋರ್ಟಿನ ಆದೇಶದೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನ್ಯಾಯಾಂಗ ನಿಂದನೆ ಆರೋಪದಿಂದ ಪಾರಾಗಿದ್ದು, ನೀರು ಬಿಡುವ ವಿಚಾರದಲ್ಲಿಯೂ ಕರ್ನಾಟಕ್ಕೆ ಸ್ವಲ್ಪ ಮಟ್ಟಿನ ನಿರಾಳತೆ ಲಭಿಸಿತು. ಇದಕ್ಕೆ ಮುನ್ನ, ಕಳೆದ 2 ದಿನದಿಂದ ನೀರು ಬಿಟ್ಟಿರುವ ಕರ್ನಾಟಕ ಅಕ್ಟೋಬರ್ 6ರವರೆಗೆ ಮಾತ್ರ ನೀರು ಬಿಡಲು ಸಾಧ್ಯ, ಬಳಿಕ ನೀರು ಬಿಡಲು ಸಾಧ್ಯವೇ ಇಲ್ಲ ಎಂದು ಕರ್ನಾಟಕದ ಪರ ವಾದಿಸಿದ್ದ ವಕೀಲ ಫಾಲಿ ನಾರಿಮನ್ ನ್ಯಾಯಾಲಯಕ್ಕೆ ತಿಳಿಸಿದ್ದರು. ನ್ಯಾಯಾಲಯದಲ್ಲಿ ಏರಿದ ಸ್ವರದಲ್ಲಿ ವಾದಿಸಿ ಮತ್ತೆ ನೀರು ಬಿಡಲು ಆಜ್ಞಾಪಿಸಬೇಡಿ ಎಂದೂ ಆಗ್ರಹಿಸಿದ್ದರು.

2016: ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದೆ. ನಾವು ಚಿಕಿತ್ಸೆಯನ್ನು ಮುಂದುವರೆಸಲಿದ್ದೇವೆ ಎಂದು ಅಪೋಲೋ ಆಸ್ಪತ್ರೆ ವೈದ್ಯರು ಸ್ಪಷ್ಟನೆ ನೀಡಿದರು. ಸೆ.22ರಂದು ಜಯಲಲಿತಾ ಆಸ್ಪತ್ರೆಗೆ ದಾಖಲಾಗಿದ್ದರು.. ವೈದ್ಯರ ತಂಡ ಹಗಲಿರುಳು ಜಯಲಿತಾ ಅವರ ಆರೋಗ್ಯದ ಕುರಿತು ಕಾಳಜಿವಹಿಸುತ್ತಿದ್ದು, ಪ್ರಸಿದ್ಧ ಲಂಡನ್ ವೈದ್ಯರಾದ ಡಾ. ರಿಚರ್ಡ್ ಬಿಲ್ ಸಹ ನಮ್ಮ ತಂಡವನ್ನು ಕೂಡಿಕೊಂಡಿದ್ದರು. ಜಯಲಲಿತಾ ಅವರು ಚಿಕಿತ್ಸೆಗೆ ಉತ್ತಮ ಸ್ಪಂದನೆ ನೀಡಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಯಿತು. ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಬ್ಬಯ್ಯ ವಿಶ್ವನಾಥ್ ಪ್ರತಿಕ್ರಿಯಿಸಿ, ಜಯಲಲಿತಾ ಅವರಿಗೆ ಇನ್ನು ಕೆಲವು ದಿನ ಇದೇ ಚಿಕಿತ್ಸೆ ನೀಡಲಾಗುತ್ತದೆ. ಜಯಲಲಿತಾ ಅವರು ನಮ್ಮ ವೈದ್ಯಕೀಯ ತಂಡದ ಕಾರ್ಯವೈಖರಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ರಾಜ್ಯದ ಜನತೆ ಯಾವುದೇ ರೀತಿಯ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ತಿಳಿಸಿದರು. ಜಯಲಲಿತಾ ಅವರ ಆರೋಗ್ಯದ ವಿಚಾರವಾಗಿ ಮಾಹಿತಿ ಬಹಿರಂಗಗೊಳಿಸುವಂತೆ ಮದ್ರಾಸ್ ಹೈಕೋರ್ಟ್ ಆಸ್ಪತ್ರೆಗೆ ಸೂಚಿಸಿದ್ದು, ಆಸ್ಪತ್ರೆ ಅ.5ರಂದು ಹೈಕೋರ್ಟ್ಗೆ ಸಂಪೂರ್ಣ ಮಾಹಿತಿ ನೀಡಲಿದೆ.

2016: ನವದೆಹಲಿ: ಮಹಾಭಾರತ ಟಿವಿ ಸರಣಿಯಲ್ಲಿದ್ರೌಪದಿ ಪಾತ್ರದ ಮೂಲಕ ಮನೆ ಮಾತಾಗಿದ್ದ ಚಿತ್ರ ನಟಿ ರೂಪಾ ಗಂಗೂಲಿ ಅವರು ರಾಜ್ಯಸಭೆ ಸದಸ್ಯರಾಗಿ ನಾಮಕರಣಗೊಂಡರು. ಮೂಲತಃ ಬಂಗಾಳಿಯಾಗಿರುವ ರೂಪಾ, ಚಿತ್ರನಟಿಯಷ್ಟೇ ಅಲ್ಲ, ಹಿಮ್ಮೇಳ ಗಾಯಕಿ ಮತ್ತು ರಾಜಕಾರಣಿ ಕೂಡಾ. 1988ರಲ್ಲಿ ಪ್ರಸಾರವಾದ ಮಹಾಭಾರತ ಟೆಲಿವಿಷನ್ ಸರಣಿಯಲ್ಲಿದ್ರೌಪದಿಪಾತ್ರ ವಹಿಸಿದ್ದ ಅವರು ಅತ್ಯಂತ ಜನಪ್ರಿಯ ನಟಿಯಾಗಿದ್ದರು. ಗೌತಮ್ ಘೋಷ್ ಅವರ ಪದ್ಮಾ ನಾದಿರ್ ಮಜ್ಹಿ (1993), ಅಪರ್ಣ ಸೆನ್ ಅವರ ಯುಗಾಂತ್ (1995), ರಿತುಪಣೋ ಘೊಷ್ ಅವರ ಅಂತರ ಮಹಲ್ (2006) ಚಿತ್ರಗಳಲ್ಲಿ ನಟಿಸಿದ ರೂಪಾ 2015ರಲ್ಲಿ ಭಾರತೀಯ ಜನತಾ ಪಕ್ಷವನ್ನು ಸೇರಿದ್ದರು.

2016: ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕಿನ (ಆರ್ ಬಿ ) ನೂತನ ಅಧ್ಯಕ್ಷ ಉರ್ಜಿತ್ ಪಟೇಲ್ ಅಧ್ಯಕ್ಷತೆಯಲ್ಲಿ ನಡೆದ ಹಣಕಾಸು ನೀತಿ ಸಮಿತಿಯ (ಎಂಪಿಸಿ) ಪ್ರಥಮ ಪರಿಶೀಲನಾ ಸಭೆ ಅತ್ಯಾಶ್ಚರ್ಯಕರವಾದ ನಿರ್ಧಾರವನ್ನು ತೆಗೆದುಕೊಂಡು, ರೆಪೋ ದರವನ್ನು ಶೇಕಡಾ 25ರಷ್ಟು ಕಡಿತಗೊಳಿಸಿತು. ಪರಿಣಾಮವಾಗಿ ರೆಪೋ ದರ ಶೇಕಡಾ 6.50ಯಿಂದ ಶೇಕಡಾ 6.25ಕ್ಕೆ ಇಳಿಯಲಿದೆ.
ರಿಸರ್ವ್ ಬ್ಯಾಂಕ್ ರೆಪೋ ದರದಲ್ಲಿ ಮಾಡಿರುವ ಕಡಿತದ ಲಾಭವನ್ನು ಬ್ಯಾಂಕುಗಳು ಗ್ರಾಹಕರಿಗೆ ವರ್ಗಾಯಿಸುವ ಸಾಧ್ಯತೆಗಳಿವೆ. ರಿಸರ್ವ್ ಬ್ಯಾಂಕಿನ ಇತಿಹಾಸದಲ್ಲಿ ಈದಿನ ರೆಪೋದರ ಕಡಿತದ ನಿರ್ಧಾರ ಹೊಸ ಯುಗವನ್ನು ಆರಂಭಿಸಲಿದೆ. ಏಕೆಂದರೆ ಇದೇ ಮೊತ್ತ ಮೊದಲ ಬಾರಿಗೆ ನೀತಿ ನಿರ್ಣಯವನ್ನು ಸಮಿತಿ ಕೈಗೊಂಡಿದೆ. ಹಿಂದೆ ನಿರ್ಧಾರಗಳನ್ನು ಆರ್ಬಿಐ ಗವರ್ನರ್ ಕೈಗೊಳ್ಳುತ್ತಿದ್ದರು. ರಘುರಾಮ ರಾಜನ್ ಅವರ ಸ್ಥಾನಕ್ಕೆ ನೇಮಕಗೊಂಡ ಗವರ್ನರ್ ಉರ್ಜಿತ್ ಪಟೇಲ್ ಅವರ ಕೈಕೆಳಗಿನ ಸಮಿತಿಯ ಮೊತ್ತ ಮೊದಲ ಸಭೆ ಇದಾಗಿದ್ದು, ಡಾ. ಪಟೇಲ್, ಇಬ್ಬರು ರಿಸರ್ವ್ ಬ್ಯಾಂಕ್ ಅಧಿಕಾರಿಗಳು, ಸರ್ಕಾರದಿಂದ ನೇಮಕಗೊಂಡ ಮೂವರು ಸದಸ್ಯರು ಹಣಕಾಸು ನೀತಿ ಸಮಿತಿ ಸಭೆಯಲ್ಲಿ ಪಾಲ್ಗೊಂಡಿದ್ದರು. ರೆಪೋದರವನ್ನು ಕಡಿತಗೊಳಿಸಿದ್ದರಿಂದ ಈಗ ರೆಪೋ ದರ 6 ವರ್ಷಗಳ ಅವಧಿಯಲ್ಲೇ ಅತ್ಯಂತ ಕೆಳಕ್ಕೆ ಇಳಿಯಲಿದೆ. ಪರಿಣಾಮವಾಗಿ ಇಎಂಐಗಳು ಕಡಿಮೆಯಾಗಲಿವೆ. 2016-17 ಸಾಲಿನಲ್ಲಿ ಗ್ರಾಹಕರ ಹಣದುಬ್ಬರ ಸೂಚ್ಯಂಕವನ್ನು ಶೇಕಡಾ 5ಕ್ಕೆ ಇಳಿಸಬೇಕೆಂಬ ಗುರಿಗೆ ಅನುಗುಣವಾಗಿ ಎಂಪಿಸಿ ನಿರ್ಧಾರವನ್ನು ಕೈಗೊಂಡಿದೆ. ಹಣದುಬ್ಬರ ಇಳಿಕೆಯಿಂದ ಆರ್ಥಿಕ ಬೆಳವಣಿಗೆಗೆ ಇಂಬು ಸಿಗಲಿದೆ ಎಂದು ಆರ್ಬಿಐ ಹೇಳಿಕೆಯಲ್ಲಿ ತಿಳಿಸಿತು. ರೆಪೋ ದರ ಕಡಿತದ ನಿರ್ಧಾರ ಷೇರು ಮಾರುಕಟ್ಟೆಯಲ್ಲಿ ಉತ್ಸಾಹದ ವಾತಾವರಣವನ್ನು ಉಂಟು ಮಾಡಿತು. ಸೂಚ್ಯಂಕ 100 ಪಾಯಿಂಟ್ನಷ್ಟು ಜಿಗಿಯಿತು. ನಿಫ್ಟಿ ಕೂಡಾ 8,750ರಲ್ಲಿ ದೃಢವಾಗಿ ನಿಂತಿತು.
2016: ನವದೆಹಲಿ: ತಾಂತ್ರಿಕ ಶಿಕ್ಷಣ ಮತ್ತು ಕೌಶಲ್ಯ ವೃದ್ಧಿ, ರಕ್ಷಣೆ ಹಾಗೂ ಭದ್ರತಾ ಸಹಕಾರ ಸೇರಿದಂತೆ ಮೂರು ಮಹತ್ವದ ಒಪ್ಪಂದಗಳಿಗೆ ಭಾರತ ಮತ್ತು ಸಿಂಗಾಪುರ ನವದೆಹಲಿಯಲ್ಲಿ ಸಹಿ ಮಾಡಿದವು. ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಂಗಾಪುರದ ಪ್ರಧಾನಿ ಲೀ ಸಿಯೆನ್ ಲೋಂಗ್ ನೇತೃತ್ವದಲ್ಲಿ ಉಭಯ ರಾಷ್ಟ್ರಗಳ ನಿಯೋಗ ಮಟ್ಟದ ಮಾತುಕತೆಗಳ ಬಳಿಕ ಉಭಯ ರಾಷ್ಟ್ರಗಳು ಒಪ್ಪಂದಗಳಿಗೆ ಸಹಿಮಾಡಿ ಕಡತಗಳನ್ನು ವಿನಿಮಯ ಮಾಡಿಕೊಂಡವು.
ಬಳಿಕ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ 12 ತಿಂಗಳಿಗೂ ಕಡಿಮೆ ಅವಧಿಯ ತಮ್ಮ ಸಿಂಗಪುರ ಭೇಟಿ ಕಾಲದಲ್ಲಿ ನಾವು ನಮ್ಮ ಆಯಕಟ್ಟಿನ ಪಾಲುದಾರಿಕೆಯನ್ನು ಹೆಚ್ಚಿಸಿಕೊಂಡಿದ್ದೆವು. ಉತ್ಪಾದನೆ, ಪರಿಸರ, ತಂತ್ರಜ್ಞಾನ ಯಾವುದೇ ಕ್ಷೇತ್ರವಿರಲಿ ಸಿಂಗಪುರ ಈದಿನ ಮಾಡಿದ್ದನ್ನು ವಿಶ್ವದ ಇತರ ರಾಷ್ಟ್ರಗಳು ಬಳಿಕ ಮಾಡುತ್ತವೆ ಎಂದು ಶ್ಲಾಘಿಸಿದರು. ನೀವು ಭಾರತದ ಮಿತ್ರ, ನಿಮ್ಮನ್ನು ಸ್ವಾಗತಿಸುವುದು ನನಗೆ ಗೌರವದ ವಿಷಯ ಎಂದು ಮೋದಿ ಲೀ ಅವರನ್ನು ಉದ್ದೇಶಿಸಿ ಹೇಳಿದರು. ರಕ್ಷಣೆ ಮತ್ತು ಭದ್ರತಾ ಸಹಕಾರ ಉಭಯ ರಾಷ್ಟ್ರಗಳ ಆಯಕಟ್ಟಿನ ಪಾಲುದಾರಿಕೆಯಲ್ಲಿ ಮಹತ್ವದ ಸ್ಥಂಭ. ಭಯೋತ್ಪಾದನೆ ಅದರಲ್ಲೂ ಗಡಿಯಾಚೆಯ ಭಯೋತ್ಪಾದನೆ ನಮಗೆ ಸವಾಲು. ನಗರಾಭಿವೃದ್ಧಿ ಮತ್ತು ತ್ಯಾಜ್ಯ ನಿರ್ವಹಣೆಯಲ್ಲಿ ರಾಜಸ್ಥಾನವು ಸಿಂಗಾಪುರದ ಜೊತೆಗೆ ಕೆಲಸ ಮಾಡುತ್ತಿದೆ ಎಂದು ಮೋದಿ ನುಡಿದರು. ಭಯೋತ್ಪಾದನೆ ಹಾಗೂ ಉರಿ ದಾಳಿಯನ್ನು ಖಂಡಿಸಿದ ಸಿಂಗಾಪುರ ಪ್ರಧಾನಿ ಲೀ, ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಭಾರತಕ್ಕೆ ಯಾವ ಕ್ಷೇತ್ರಗಳಲ್ಲಿ ಸಾಧ್ಯವಿದೆಯೋ ಎಲ್ಲಾ ಕ್ಷೇತ್ರಗಳಲ್ಲೂ ಸಿಂಗಾಪುರ ಸಹಕಾರ ನೀಡುವುದು ಎಂದು ಲೀ ನುಡಿದರು.
2016:  ನವದೆಹಲಿ: ಇನ್ನೂ ಒಂದು ಮುಂಬೈ ಮಾಡಿ, ನೀವು ಬಲೂಚಿಸ್ತಾನವನ್ನು ಕಳೆದುಕೊಳ್ಳಬಹುದುಎರಡು ವರ್ಷಗಳ ಹಿಂದೆ ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್ಎಸ್) ಅಜಿತ್ ದೋವಲ್ ಅವರು ಪಾಕಿಸ್ತಾನಕ್ಕೆ ನೀಡಿದ್ದ ಸಂದೇಶ. ಅಜಿತ್ ದೋವಲ್ ಹೇಳಿದ್ದೇನು ಎಂಬುದರ ಸ್ಪಷ್ಟ ಕಲ್ಪನೆ ಆಗ ಯಾರಿಗೂ ಇರಲಿಲ್ಲ. ವಾಸ್ತವವಾಗಿ ಅವರು ಪಾಕಿಸ್ತಾನದ ಭಯೋತ್ಪಾದನೆಗೆ ಸಂಬಂಧಿಸಿದಂತೆ ಭಾರತದ ವ್ಯೂಹಗಾರಿಕೆಯನ್ನು ಬದಲಿಸುವ ಮುನ್ಸೂಚನೆ ನೀಡಿದ್ದರು. ಗಡಿ ನಿಯಂತ್ರಣ ರೇಖೆ ದಾಟಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಯೋತ್ಪಾದಕರ ಮೇಲೆ ನಡೆಸಿದ ಕೇಂದ್ರ ಸರ್ಕಾರದ ಸೀಮಿತ ದಾಳಿ ಕಾರ್ಯಾಚರಣೆಯೊಂದಿಗೆ ಸಂದೇಶ ಜಾರಿಗೆ ಬಂದಿತು. 2014 ಕೊನೆಯಲ್ಲಿ ಸಾಸ್ತ್ರ ವಿಶ್ವವಿದ್ಯಾಲಯದಲ್ಲಿ ಮಾಡಿದ್ದ ತಮ್ಮ ಉಪನ್ಯಾಸ ಒಂದರಲ್ಲಿ ದೋವಲ್ ಅವರುರಕ್ಷಣಾತ್ಮಕ ದಾಳಿಬಗ್ಗೆ ವಿವರಿಸಿದ್ದರು. ಅದಾಗಲೇ ಭಾರತ ತನ್ನ ವ್ಯೂಹಗಾರಿಕೆಯನ್ನು ಬದಲಿಸುವ ಬಗ್ಗೆ ಪರಿಶೀಲನೆ ನಡೆಸಿತ್ತೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಅಲ್ಲಿಯವರೆಗೂ ಭಾರತ ಭಯೋತ್ಪಾದಕ ದಾಳಿಗಳಿಗೆ ಸಂಬಂಧಿಸಿದಂತೆ ಚೌಕಿದಾರರ ಪಾತ್ರ ವಹಿಸುತ್ತಾ ಬಂದಿತ್ತು. ಅಂದರೆ ಕೇವಲ ರಕ್ಷಣಾತ್ಮಕ ನೀತಿ ಪಾಲಿಸುತ್ತಾ ಬಂದಿದೆ ಎಂದು ಆಗ ದೋವಲ್ ಹೇಳಿದ್ದರು. ಆದರೆ ಬಳಿಕ ಭಾರತ ತನ್ನ ನೀತಿಯನ್ನು ಬದಲಿಸುವ ಗಂಭೀರ ಚಿಂತನೆ ಮಾಡಿತು. ಅಣ್ವಸ್ತ್ರ ಸಮರ ಸಾಧ್ಯತೆಯ ಹಿನ್ನೆಲೆಯಲ್ಲಿ ವೈರಿಯ ಮೇಲೆೆ ನೇರ ದಾಳಿ ನಡೆಸುವ ಬದಲಿಗೆ ರಕ್ಷಣಾತ್ಮಕ ದಾಳಿ ಅಂದರೆ ಯಾವ ಸ್ಥಳದಿಂದ ದಾಳಿ ನಡೆಯುತ್ತಿದೆಯೋ ಸ್ಥಳವನ್ನೇ ಗುರಿಯಿಟ್ಟು ದಾಳಿ ನಡೆಸುವ ಬಗ್ಗೆ ಚಿಂತಿಸಿತು. ಜಮ್ಮು ಮತ್ತು ಕಾಶ್ಮೀರದಲ್ಲಿ ಗಡಿ ದಾಟಿ ಪಾಕ್ ಆಕ್ರಮಿತ ಕಾಶ್ಮೀರದ ಮೇಲೆ ನುಗ್ಗಿ ದಾಳಿ ನಡೆಸಿದ ಸೆಪ್ಟೆಂಬರ್ 29 ಸೀಮಿತ ದಾಳಿ ಕಾರ್ಯಾಚರಣೆ ನೀತಿ ಪಕ್ಕಾ ಉದಾಹರಣೆ. ‘ಇದರಲ್ಲಿ ಅಣ್ವಸ್ತ್ರ ಸಮರದ ಪ್ರಶ್ನೆ ಇಲ್ಲ. ಪಡೆಗಳ ಪಾಲ್ಗೊಳ್ಳುವಿಕೆಯೂ ಇಲ್ಲ. ಅವರಿಗೆ ಉಪಾಯಗಳು (ಟ್ರಿಕ್) ಗೊತ್ತಿವೆ. ನಮಗೆ ಅವರಿಗಿಂತ ಹೆಚ್ಚಿನ ಉಪಾಯಗಳು ಗೊತ್ತಿವೆಎಂದು ದೋವಲ್ ಆಗ ಹೇಳಿದ್ದರು. ಉರಿ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಸೆಪ್ಟೆಂಬರ್ 28-29 ನಡುರಾತ್ರಿಯಲ್ಲಿ ಸೀಮಿತ ದಾಳಿ ನಡೆಸಿದ ಭಾರತ 38 ಉಗ್ರಗಾಮಿಗಳನ್ನು ಕೊಂದು ಹಾಕಿದ್ದು ಇದೇ ನೀತಿಯ ಅಡಿಯಲ್ಲಿ.

2016: ಬೆಂಗಳೂರು: ರಾಜ್ಯದ ಖ್ಯಾತ ಕಲಾವಿದರಾದ ಯೂಸುಫ್ ಅರಕ್ಕಲ್ ಈದಿನ  ಮುಂಜಾನೆ ನಿಧನರಾದರು. ಅವರಿಗೆ 71 ವರ್ಷ ವಯಸ್ಸಾಗಿತ್ತು. ಬೆಂಗಳೂರು ನಿವಾಸದಲ್ಲಿ ನಿಧನರಾಗಿರುವುದನ್ನು ಆಪ್ತ ಮೂಲಗಳು ಖಚಿತಪಡಿಸಿದವು. ಮೂಲತಃ ಕೇರಳದ ಚವಕ್ಕಾಡ್ ನವರಾದರೂ ಬೆಂಗಳೂರಿನಲ್ಲಿಯೇ ನೆಲೆಸಿ ರಾಜ್ಯದವರಾಗಿಯೇ ಗುರುತಿಸಿಕೊಂಡು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆದು ರಾಜ್ಯದ ಚಿತ್ರಕಲಾ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡಿದ್ದರು. ತಮ್ಮ ಸಣ್ಣ ವಯಸ್ಸಿನಲ್ಲಿಯೇ ತಂದೆ-ತಾಯಿಯನ್ನು ಕಳೆದುಕೊಂಡ ಯೂಸುಫ್ ದೇಶದ ನವ್ಯ ಕಲಾವಿದರ ಸಾಲಿನಲ್ಲಿ ಅಗ್ರಪಂಕ್ತಿಯಲ್ಲಿರುವ ಕಲಾವಿದ.  ಬಾಲ್ಯದಲ್ಲಿಯೇ ಬೆಂಗಳೂರಿಗೆ ಬಂದು ಚಿತ್ರಕಲೆಯನ್ನು ಆಯ್ಕೆಮಾಡಿಕೊಂಡು ಯೂಸುಫ್ ಅರಕ್ಕಲ್, ಕರ್ನಾಟಕ ಚಿತ್ರಕಲಾ ಪರಿಷತ್ನಲ್ಲಿ ಚಿತ್ರಕಲಾ ಡಿಪ್ಲೋಮಾ ಮುಗಿಸಿದ ಬಳಿಕ ಮುದ್ರಣ ಕಲೆಯಲ್ಲಿ ವಿಶೇಷವಾದ ತರಬೇತಿ ಪಡೆದುಕೊಂಡಿದ್ದರು. ದೆಹಲಿಯ ರಾಷ್ಟ್ರೀಯ ಅಕಾಡೆಮಿ ಕಮ್ಯೂನಿಟಿ ಸ್ಟುಡಿಯೋದಲ್ಲಿ ಮುದ್ರಣ ಕಲೆಯ ವಿಶೇಷ ಅಧ್ಯಯನ ನಡೆಸಿದ ಯೂಸುಫ್ ಅರಕ್ಕಲ್, ಫ್ಲಾರೆನ್ಸ್ ಬಿಯನ್ನಾಲೆಯ ಪ್ರತಿಷ್ಠಿತ ಲಾರೆನ್ಜೋ ಡೆ ಮೆಡಿಸಿ ಸ್ವರ್ಣ ಪದಕ ಗೌರವ ಸಂಪಾದಿಸಿದ್ದರು. ಅಭಿವ್ಯಕ್ತಿವಾದದ ಮೇಲೆ ವಿಶೇಷವಾದ ಆಸಕ್ತಿ, ಕಾಳಜಿ ಹೊಂದಿದ್ದ ಯೂಸುಫ್ ಅರಕ್ಕಲ್, ರೇಖಾಚಿತ್ರ, ವರ್ಣಚಿತ್ರ, ಶಿಲ್ಪ, ಮ್ಯೂರಲ್, ಮುದ್ರಣ ಕಲೆ ಮತ್ತು ತಮ್ಮದೇ ಶೈಲಿಯ ಬರವಣಿಗೆಯಲ್ಲಿ ವಿಶೇಷ ಛಾಪು ಮೂಡಿಸಿದ್ದರು.  ಯೂಸುಫ್ ಅರಕ್ಕಲ್ ಅವರಿಗೆ ಎರಡು ಬಾರಿ ಕರ್ನಾಟಕ ಲಲಿತಕಲಾ ಅಕಾಡೆಮಿ ಪ್ರಶಸ್ತಿ, 1983ರಲ್ಲಿ ರಾಷ್ಟ್ರೀಯ ಪ್ರಶಸ್ತಿ, 1986ರಲ್ಲಿ ಢಾಕಾದಲ್ಲಿ ನಡೆದ ಬಿಯೆನ್ನಾಲೆ ಪ್ರದರ್ಶನದಲ್ಲಿ ವಿಶೇಷ ಪ್ರಶಸ್ತಿ ಲಭಿಸಿದೆ. 1989ರಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿ ಗೌರವ ಪ್ರಶಸ್ತಿ ನೀಡಿ ಪುರಸ್ಕರಿಸಿತ್ತು.

2016: ಇತ್ವಾ: ಜಮ್ಮು ಕಾಶ್ಮೀರದ ಬಾರಾಮುಲ್ಲಾದಲ್ಲಿ ಉಗ್ರರ ವಿರುದ್ಧ ನಡೆದ ಗುಂಡಿನ ಕಾಳಗದಲ್ಲಿ ಹುತಾತ್ಮರಾದ ಗಡಿ ಭದ್ರತಾ ಪಡೆಯ ಅಧಿಕಾರಿ ನಿತಿನ್ ಕುಮಾರ್ ಅವರ ಅಂತ್ಯಕ್ರಿಯೆಯನ್ನು ತವರು ನೆಲ ಉತ್ತರ ಪ್ರದೇಶದ ಇತ್ವಾದಲ್ಲಿ ನಡೆಸಲಾಯಿತು. ಸಕಲ ಸರ್ಕಾರಿ ಗೌರವ ಸಲ್ಲಿಸುವ ಮೂಲಕ ಅಂತ್ಯಕ್ರಿಯೆ ನಡೆಸಲಾಯಿತು.  ಸರ್ಜಿಕಲ್ ದಾಳಿಯ ಬಳಿಕ ಬಾರಾಮು್ಲ್ಲಾದಲ್ಲಿ ನಾಲ್ಕು ಮಂದಿ ಇರುವ ಉಗ್ರರ ಗುಂಪು ಗಡಿ ನುಸುಳಿ ಒಳ ಪ್ರವೇಶಿಸಿ ಆರ್ವಿು ಯೋಧರ ಶಿಬಿರಗಳ ಮೇಲೆ ದಾಳಿ ನಡೆಸಿತ್ತು. ಯೋಧರು ದಿಟ್ಟ ಉತ್ತರ ನೀಡಿ ಉಗ್ರರನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದ್ದರು. ಕಾರ್ಯಾಚರಣೆಯ ವೇಳೆ ನಿತಿನ್ ಗುಂಡು ತಗುಲಿ ಹುತಾತ್ಮರಾಗಿದ್ದರು.

2016: ವಾಷಿಂಗ್ಟನ್: ಉರಿ ಸೇನಾನೆಲೆಯ ಮೇಲೆ ಉಗ್ರರು ದಾಳಿ ನಡೆಸಿದ್ದನ್ನು ಖಂಡಿಸಿ, ಪಾಕಿಸ್ತಾನವನ್ನು ಉಗ್ರರ ರಾಷ್ಟ್ರವೆಂದು ಘೋಷಿಸಲು ಆನ್ಲೈನ್ ಸಹಿ ಸಂಗ್ರಹಕ್ಕೆ ಕರೆ ನೀಡಿದ್ದ ಅಮೆರಿಕ ಅಭಿಯಾನದಿಂದ ಹಠಾತ್ತಾಗಿ ಹಿಂದೆ ಸರಿಯಿತು. ಇದರಿಂದಾಗಿ ಪಾಕಿಸ್ತಾನದ ವಿಚಾರದಲ್ಲಿ ಅಮೆರಿಕ ಈಗ ತನ್ನ ನಿಲುವು ಬದಲಾಯಿಸುತ್ತಿದೆಯೇ ಎಂಬ ಅನುಮಾನ ಹುಟ್ಟಿತು. ಅಮೆರಿಕ ನಡೆಸಿದ ಅಭಿಯಾನದಲ್ಲಿ ಅಮೆರಿಕ ಮತ್ತು ಬ್ರಿಟನ್ನಿಂದ ಸಾಕಷ್ಟು ಮಂದಿ ಸಹಿ ದಾಖಲಿಸಿದ್ದರು. ಅಮೆರಿಕ ಒಂದು ಲಕ್ಷ ಸಹಿ ನಿರೀಕ್ಷಿಸಿತ್ತಾದರೂ, ಸಹಿ ಮಾಡಿದವರ ಸಂಖ್ಯೆ 6 ಲಕ್ಷ ಮೀರಿತ್ತು. ಆನ್ಲೈನ್ ಸಹಿಗೆ ನೀಡಿದ್ದ ಅವಕಾಶವನ್ನು ವೆಬ್ಸೈಟ್ ಹೋಮ್ ಪೇಜ್ನಿಂದ ಆರ್ಕೈವ್ ​ಗೆ ತಳ್ಳಿರುವ ಅಮೆರಿಕ, ‘ತಮ್ಮ ನಿರೀಕ್ಷೆಯಷ್ಟು ಸಹಿ ಸಗ್ರಹವಾಗಿಲ್ಲ. ಸಹಿ ಮಾಡುವ ಕ್ರಮದಲ್ಲಿ ಮೋಸವೆಸಗಿರುವ ಶಂಕೆ ಕಂಡುಬಂದ ಹಿನ್ನೆಲೆಯಲ್ಲಿ ಆರ್ಕೈವ್ ​ಗೆ ತಳ್ಳಲಾಗಿದೆಎಂದು ಸ್ಪಷ್ಟನೆ ನೀಡಿತು. ಈ ಮೊದಲು ಅಮೆರಿಕ ಅಕ್ಟೋಬರ್ 21 ಒಳಗಾಗಿ ಒಂದು ಲಕ್ಷ ಸಹಿ ಸಂಗ್ರಹಕ್ಕೆ ಸಮಯ ನಿಗದಿ ಪಡಿಸಿತ್ತು. ಆದರೆ ಈಗ ತಾನೇ ನಿಗಧಿಪಡಿಸಿದ ಸಮಯಕ್ಕಿಂತ ಮೊದಲೇ ಅಭಿಯಾನದಿಂದ ಹಿಂದೆ ಸರಿಯಿತು.


2016: ಮುಂಬೈ: ಭಾರತದವನಿರಲಿ ಅಥವಾ ಪಾಕಿಸ್ತಾನದವನಿರಲಿ, ಕಲಾವಿದ ಕಲಾವಿದನೇ. ಆದರೆ ನಾವು ಭಾರತವನ್ನು ಬೆಂಬಲಿಸಬೇಕುಎಂದು ಹೇಳುವ ಮೂಲಕ ಹಿರಿಯ ಬಾಲಿವುಡ್ ಚಿತ್ರನಟಿ, ಸಂಸತ್ ಸದಸ್ಯೆ ಹೇಮಾ ಮಾಲಿನಿ ತಮ್ಮ ದೇಶಪ್ರೇಮವನ್ನು ಮೆರೆದರು. ಜಮ್ಮು ಮತ್ತು ಕಾಶ್ಮೀರದ ಉರಿ ಸೇನಾ ನೆಲೆ ಮೇಲೆ ನಡೆದ ಪಾಕ್ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಭುಗಿಲೆದ್ದಿರುವ ಪಾಕ್ ಕಲಾವಿದರಿಗೆ ಸಂಬಂಧಿಸಿದ ವಿವಾದಕ್ಕೆ ಪ್ರತಿಕ್ರಿಯಿಸುತ್ತಾ ಹೇಮಾ ಅಭಿಪ್ರಾಯ ವ್ಯಕ್ತ ಪಡಿಸಿದರು.

2014: ಪಟ್ನಾ: ದಸರಾ ಸಂಭ್ರಮಾಚರಣೆ ಮುಗಿದ ಬಳಿಕ ಇಲ್ಲಿನ ಗಾಂಧಿ ಮೈದಾನದಲ್ಲಿ ಅಕ್ಟೋಬರ್ 3ರ ರಾತ್ರಿ ಸಂಭವಿಸಿದ ಕಾಲ್ತುಳಿತದಲ್ಲಿ ಬಹುತೇಕ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 33 ಮಂದಿ ಅಸು ನೀಗಿದರು. ಬಿಹಾರಿನ ರಾಜಧಾನಿ ನಗರದ ಗಾಂಧಿ ಮೈದಾನದಲ್ಲಿ ಮುಖ್ಯ ದಸರಾ ಉತ್ಸವದ ಅಂಗವಾಗಿ ನಡೆದ 'ರಾವಣ ವಧಾ' ಸಮಾರಂಭ ವೀಕ್ಷಿಸಿ ವಾಪಸಾಗುತ್ತಿದ್ದ ವೇಳೆಯಲ್ಲಿ ಈ ದುರಂತ ಸಂಭವಿಸಿತು. 'ರಾವಣ ವಧಾ' ವೀಕ್ಷಣೆಗೆ ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದರು. 32 ಜನ ಮೃತರಾಗಿದ್ದಾರೆ ಎಂದು ಬಿಹಾರ ಗೃಹ ಕಾರ್ಯದರ್ಶಿ ಅಮೀರ್ ಸುಭಾನಿ ಹೇಳಿದರು. ವರದಿಗಳ ಪ್ರಕಾರ ನಂತರ ಒಬ್ಬ ಗಾಯಾಳು ಆಸ್ಪತ್ರೆಯಲ್ಲಿ ಸಾವನ್ನಪ್ಪುವುದರೊಂದಿಗೆ ಮೃತರ ಸಂಖ್ಯೆ 33ಕ್ಕೆ ಏರಿತು. ಮೃತರಲ್ಲಿ ಹೆಚ್ಚಿನ ಮಂದಿ ಮಹಿಳೆಯರು ಮತ್ತು ಮಕ್ಕಳು. ಬಿಹಾರಿನ ಮುಖ್ಯಮಂತ್ರಿ ಜೀತನ್ ರಾಮ್​ವಾಂಜಿ ಅವರೂ ಗಾಂಧಿ ನಗರದಲ್ಲಿ ನಡೆದ ಸಮಾರಂಭದಲ್ಲಿ ಹಾಜರಿದ್ದರು. ಸಮಾರಂಭದಲ್ಲಿ 60 ಅಡಿ ಎತ್ತರದ 'ರಾವಣ ಪ್ರತಿಕೃತಿ'ಯನ್ನು ಸುಡುಮದ್ದಿನ ಬಾಣ ಬಿಡುವ ಮೂಲಕ ದಹಿಸಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ಬಿಹಾರ ಮುಖ್ಯಮಂತ್ರಿಯನ್ನು ಸಂರ್ಪಸಿ ಕಾಲ್ತುಳಿತ ದುರಂತದ ಬಗ್ಗೆ ವಿಚಾರಿಸಿ, ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂಪಾಯಿಗಳ ಪರಿಹಾರ ಘೋಷಿಸಿದರು. ಸಾವನ್ನಪ್ಪಿದವರಲ್ಲಿ 5-6 ಮಂದಿ ಮಕ್ಕಳಾಗಿದ್ದು, ಸುಮಾರು 20 ಮಂದಿ ಮಹಿಳೆಯರು ಎಂದು ಪಟ್ನಾ ಜಿಲ್ಲಾಧಿಕಾರಿ ಮನಿಶ್ ಕುಮಾರ್ ವರ್ಮಾ ಹೇಳಿದರು.

2014: ಪಟ್ನಾ: 'ಸಜೀವ ವಿದ್ಯುತ್ ತಂತಿ ಮೇಲೆ ಬೀಳುತ್ತಿದೆ, ಓಡಿ ಓಡಿ' ಒಂದಷ್ಟು ಯುವಕರು ಹೀಗೆ ಕೂಗಿದ್ದೇ ತಡ, ಜನ ಎದ್ದೆವೊ, ಬಿದ್ದೆವೋ ಎಂದು ಓಡತೊಡಗಿದರು. ಅಷ್ಟೇ ಕ್ಷಣಮಾತ್ರದಲ್ಲಿ ಒಬ್ಬರ ಮೇಲೊಬ್ಬರು ಬಿದ್ದರು. ಬಿದ್ದವರನ್ನು ತುಳಿದುಕೊಂಡೇ ಉಳಿದವರು ಓಡಿದರು. ಕಾಲ್ತುಳಿತದಲ್ಲಿ ಮಹಿಳೆಯರು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಸಿಲುಕಿದರು. ಬಿಹಾರಿನ ರಾಜಧಾನಿಯ ಗಾಂಧಿ ಮೈದಾನದಲ್ಲಿ ಹಿಂದಿನ ರಾತ್ರಿ ಸಂಭವಿಸಿದ ಕಾಲ್ತುಳಿತ ಪ್ರಕರಣಕ್ಕೆ ಕಾರಣವಾದದ್ದು ಒಂದಷ್ಟು ಯುವಕರು ಈ ರೀತಿ ಹಬ್ಬಿಸಿದ ಪುಕಾರು ಮತ್ತು ಮೈದಾನದಿಂದ ಹೊರಹೋಗುವ 11 ದ್ವಾರಗಳ ಪೈಕಿ 9 ದ್ವಾರಗಳನ್ನು ಮುಚ್ಚಿದ್ದುದು ಎನ್ನಲಾಯಿತು. ದುರಂತ ಸಂಭವಿಸಿದ ಗಾಂಧಿ ಮೈದಾನದ ಆಗ್ನೇಯ ಮೂಲೆಯಲ್ಲಿನ ರಸ್ತೆಯಲ್ಲಿ ಒಂದು ಕಿ.ಮೀ. ಉದ್ದಕ್ಕೂ ಎಲ್ಲೆಂದರಲ್ಲಿ ಚೆಲ್ಲಾಚೆದರಾಗಿ ಬಿದ್ದ ಚಪ್ಪಲಿ, ಬೂಟು, ಕೈಚೀಲಗಳು, 33 ಮಂದಿಯನ್ನು ಬಲಿತೆಗೆದುಕೊಂಡ ಈ ದುರಂತಕ್ಕೆ ಮೂಕ ಸಾಕ್ಷ್ಯಹೇಳಿದವು. ಮೈದಾನದಿಂದ ಹೊರಹೋಗುವ ದ್ವಾರಗಳನ್ನು ಮುಚ್ಚಿದ್ದೇ ಈ ಕಾಲ್ತುಳಿತ ದುರಂತಕ್ಕೆ ಕಾರಣವಾಯಿತು ಎಂದು ಪಟ್ನಾ ನಿವಾಸಿಗಳು ಜಿಲ್ಲಾ ಪೊಲೀಸರನ್ನು ದೂರಿದರು. ಗಾಂಧಿ ಮೈದಾನದಿಂದ ಎಕ್ಸಿಬಿಷನ್ ರಸ್ತೆಗೆ ಹೋಗುವ ರಸ್ತೆಯಲ್ಲಿ ಸುಮಾರು ಅರ್ಧ ಕಿ.ಮೀ. ಮತ್ತು ಕಾರ್ಗಿಲ್ ಚೌಕದ ಕಡೆಗೆ ಸಾಗುವ ರಸ್ತೆಯಲ್ಲಿ ಸುಮಾರು ಅಷ್ಟೇ ದೂರಕ್ಕೆ ಚಪ್ಪಲಿಗಳು, ಬೂಟುಗಳು ಮತ್ತು ಇತರ ವಸ್ತುಗಳು ಚೆಲ್ಲಾಬಿಲ್ಲಿಯಾಗಿ ಬಿದ್ದಿದ್ದವು. 'ಸಜೀವ ವಿದ್ಯುತ್ ತಂತಿ ಮೇಲೆ ಬೀಳುತ್ತಿದೆ ಎಂಬ ಪುಕಾರು ಹರಡಿದ್ದೇ ತಡ ನನ್ನ ಕಣ್ಣೆದುರಲ್ಲೇ ಜನ ಯದ್ವಾತದ್ವ ಓಡತೊಡಗಿದರು. ಕಣ್ಣೆದುರೇ ಸಂಭವಿಸಿದ ಈ ಘೊರ ದುರಂತ ಕಂಡ ಬಳಿಕ ನಾನು ಮೊದಲಿನ ವ್ಯಕ್ತಿಯಾಗಿ ಉಳಿದಿಲ್ಲ. ಈ ದುರಂತದ ಚಿತ್ರ ಮನದಿಂದ ಮಾಸುವುದು ಕಷ್ಟ' ಎಂದು ಪೂರ್ವ ಗಾಂಧಿ ಮೈದಾನದಲ್ಲಿ ಅಂಗಡಿಯೊಂದನ್ನು ಇಟ್ಟುಕೊಂಡಿರುವ ಮನಿಷ್ ಕುಮಾರ್ ಹೇಳಿದರು. 'ಜನ ಭಯವಿಹ್ವಲರಾಗಿ ಒಬ್ಬರ ಮೇಲೊಬ್ಬರು ಬೀಳುತ್ತಾ ಹೊರ ಹೋಗಲು ದುಂಬಾಲು ಬೀಳುತ್ತಿದ್ದರು. ಆದರೆ ಜನ ಕಿಕ್ಕಿರಿದಿದ್ದ ಮೈದಾನದ 11 ದ್ವಾರಗಳ ಪೈಕಿ ಎರಡನ್ನು ಮಾತ್ರವೇ ತೆರೆಯಲಾಗಿತ್ತು' ಎಂದು ಕುಮಾರ್ ನುಡಿದರು. 'ಓಡಿ ಓಡಿ' ಎಂದು ಕೆಲವು ಯುವಕರು ಕೂಗಿದ್ದು ಜನರನ್ನು ಭಯವಿಹ್ವಲರನ್ನಾಗಿ ಮಾಡಿತು. ಜೀವ ಉಳಿಸಿಕೊಳ್ಳಲು ಜನ ಎಲ್ಲೆಂದರಲ್ಲಿ ಓಡತೊಡಗಿದರು. ಮಹಿಳೆಯರು ಮಕ್ಕಳು ಓಡುವವರ ಕಾಲುಗಳ ಅಡಿಗೆ ಬಿದ್ದರು. ಯಾರನ್ನೂ ರಕ್ಷಿಸಲು ಕೂಡಾ ನನಗೆ ಸಾಧ್ಯವಾಗದೇ ಹೋಯಿತು' ಎಂದು ಕುಮಾರ್ ನುಡಿದರು. ಪೊಲೀಸರು ಸರಿಯಾದ ಭದ್ರತಾ ವ್ಯವಸ್ಥೆ ಮಾಡಲಿಲ್ಲ ಎಂದು ದೂರಿದ 20ರ ಹರೆಯದ ಕುಮಾರ್, 'ರಾವಣ ವಧಾ' ಕಾರ್ಯಕ್ರಮದ ಬಳಿಕ ಗಾಂದಿ ಮೈದಾನದ ದಕ್ಷಿಣ ಭಾಗದಲ್ಲಿ ಸಂಚಾರ ಮತ್ತು ಜನದಟ್ಟಣೆ ನಿಯಂತ್ರಿಸಲು ಪೊಲೀಸರೇ ಇರಲಿಲ್ಲ, ಸಮರ್ಪಕ ಪೊಲೀಸ್ ನಿಗಾ ಇದ್ದಿದ್ದರೆ ಹಲವು ಜೀವಗಳನ್ನು ರಕ್ಷಿಸಬಹುದಾಗಿತ್ತು ಎಂದು ನುಡಿದರು. ಕುಮಾರ್ ಮಾತನ್ನೇ ಪ್ರತಿಧ್ವನಿಸಿದ ಕಾರ್ಮಿಕ ಉದಯಕುಮಾರ್, 'ರಾವಣ ವಧಾ'ದಂತಹ ಬೃಹತ್ ಕಾರ್ಯಕ್ರಮ ಸಂಘಟಿಸುವಾಗ ಸೇರಿದಂತಹ ಜನಸಮೂಹ ನಿರ್ವಹಣೆಗೆ ಅಗತ್ಯ ವ್ಯವಸ್ಥೆಯೇ ಇರಲಿಲ್ಲ ಎಂದು ಹೇಳಿದರು.

2014: ಭುವನೇಶ್ವರ: ಒಡಿಶಾದ ನವರಂಗಪುರ ಜಿಲ್ಲೆಯಲ್ಲಿ ನಸುಕಿನ ವೇಳೆಯಲ್ಲಿ ಮಿನಿ ಟ್ರಕ್ ಒಂದು ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮವಾಗಿ ಅದರಲ್ಲಿ ಪ್ರಯಾಣ ಮಾಡುತ್ತಿದ್ದವರ ಪೈಕಿ ಕನಿಷ್ಠ 11 ಜನ ದುರ್ಮಣಕ್ಕೆ ಈಡಾದರು. ರಾಜಧಾನಿ ಭುವನೇಶ್ವರದಿಂದ 700 ಕಿ.ಮೀ. ದೂರದ ಝಾರಿಗಾಂವ್ ಬಳಿಯ ದಟ್ಟಾರಣ್ಯವಿರುವ ಗುಡ್ಡಗಾಡು ಪ್ರದೇಶದಲ್ಲಿ ಹಿಂದಿನ ದಿನ ತಡರಾತ್ರಿ ಸಂಭವಿಸಿದ ಈ ಅಪಘಾತದಲ್ಲಿ 12ಕ್ಕೂ ಹೆಚ್ಚು ಮಂದಿ ಗಾಯಗೊಂಡರು. 50 ಜನರಿದ್ದ ಈ ಈ ವಾಹನ ದಬುಗಾಂವ್​ನಿಂದ ಛಂದಾಹಂಡಿಗೆ ಸಾಗುತ್ತಿದ್ದಾಗ ಈ ದುರಂತ ಸಂಭವಿಸಿತು. ಮಿನಿ ಟ್ರಕ್​ನಲ್ಲಿದ್ದವರೆಲ್ಲಾ ನೃತ್ಯ ತಂಡವೊಂದರ ಸದಸ್ಯರು. ಛಂದಾಹಂಡಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹೊರಟಿದ್ದರು. ಚಾಲಕನಿಗೆ ನಿಯಂತ್ರನ ತಪ್ಪಿದ್ದರಿಂದ ವಾಹನ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆಯಿತು ಎನ್ನಲಾಯಿತು.

2014: ಲಂಡನ್: ನೆರವು ಕಾರ್ಯಕರ್ತ ಆಲನ್ ಹೆನ್ನಿಂಗ್ ಅವರನ್ನು ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿಗಳ ಗುಂಪು ಹತ್ಯೆಗೈದಿರುವುದನ್ನು ಬ್ರಿಟಿಷ್ ಪ್ರಧಾನಿ ಡೇವಿಡ್ ಕ್ಯಾಮೆರೂನ್ ಅವರು ದೃಢಪಡಿಸಿದರು. ಅವರನ್ನು ಕೊಂದವರ ವಿರುದ್ಧ ಸೇಡು ತೀರಿಸುವುದಾಗಿ ಅವರು ಹೇಳಿದರು. 'ಆಲನ್ ಹೆನ್ನಿಂಗ್ ಅವರನ್ನು ಐಎಸ್​ಐಎಲ್ (ಇಸ್ಲಾಮಿಕ್ ಸ್ಟೇಟ್ ಜೆಹಾದಿಗಳ ಇನ್ನೊಂದು ತಂಡ) ಭೀಕರವಾಗಿ ಕೊಲೆಗೈದಿರುವುದು ಈ ಭಯೋತ್ಪಾದಕರು ಅದೆಷ್ಟು ಕ್ರೂರಿಗಳು ಎಂಬುದಾಗಿ ತೋರಿಸಿಕೊಟ್ಟಿದೆ' ಎಂದು ಕ್ಯಾಮೆರೂನ್ ಅವರು ತಮ್ಮ ಡೌನಿಂಗ್ ಸ್ಟ್ರೀಟ್ ಕಚೇರಿಯಿಂದ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದರು. 'ಈ ಕೊಲೆಗಡುಕರ ವಿರುದ್ಧ ಏನು ಮಾಡಲು ಸಾಧ್ಯವೋ ಅದೆಲ್ಲವನ್ನೂ ನಾವು ಮಾಡುತ್ತೇವೆ ಮತ್ತು ನ್ಯಾಯದ ಕಟಕಟೆಗೆ ಅವರನ್ನು ತರುತ್ತೇವೆ' ಎಂದು ಕ್ಯಾಮೆರೂನ್ ಹೇಳಿದರು. ಜೆಹಾದಿ ಉಗ್ರಗಾಮಿ ಸಂಘಟನೆ ಹಿಂದಿನ ದಿನ ಅಂತರ್ಜಾಲಕ್ಕೆ ಹರಿಯಬಿಟ್ಟ ವಿಡಿಯೋ ಒಂದು ಹೆನ್ನಿಂಗ್ ಅವರು ಜೆಹಾದಿ ಉಗ್ರರ ವಶದಲ್ಲಿರುವ ಕೈದಿಗಳು ಧರಿಸುವ ಕಿತ್ತಳೆ ಬಣ್ಣದ ನಿಲುವಂಗಿ ತೊಟ್ಟು ಮೊಣಕಾಲೂರಿ ಕುಳಿತಿದ್ದುದನ್ನು ಹಾಗೂ ಹಿಂಬದಿಯಲ್ಲಿ ಮುಸುಕುಧಾರಿ ಉಗ್ರಗಾಮಿ ತಲೆ ಕಡಿಯುವುದಕ್ಕೆ ಮುನ್ನ ಚಾಕು ಝುಳಪಿಸುತ್ತಾ ನಿಂತಿದ್ದುದನ್ನು ತೋರಿಸಿತ್ತು. ವಾಯವ್ಯ ಇಂಗ್ಲೆಂಡಿನ ಮ್ಯಾಂಚೆಸ್ಟರ್ ನಿವಾಸಿಯಾದ 47ರ ಹರೆಯದ ಹೆನ್ನಿಂಗ್​ ಸಿರಿಯಾ ಫಾರ್ ಮುಸ್ಲಿಮ್​ ಚಾರಿಟಿ ಏಡ್4ಸಿರಿಯಾ ಎಂಬ ನೆರವು ತಂಡವೊಂದರಲ್ಲಿ ಸ್ವಯಂಸೇವಕರಾಗಿ ಸೇರಿಕೊಂಡಿದ್ದರು. ಅವರನ್ನು ಉಗ್ರಗಾಮಿಗಳು 10 ತಿಂಗಳ ಹಿಂದೆ ಅಪಹರಿಸಿದ್ದರು. 'ವಾಸ್ತವವಾಗಿ ಬೇರೆಯವರಿಗೆ ನೆರವಾಗಲು ಯತ್ನಿಸುತ್ತಿದ್ದ ಹೆನ್ನಿಂಗ್ ಅವರನ್ನು ಅಪಹರಿಸಿ ಕೊಂದಿರುವುದು ಈ ಐಎಸ್​ಐಎಲ್ ಭಯೋತ್ಪಾದಕರ ಹಿಂಸಾಚಾರಕ್ಕೆ ಯಾವ ಮಿತಿಯೂ ಇಲ್ಲ ಎಂಬುದನ್ನು ತೋರಿಸಿದೆ' ಎಂದು ಹೇಳಿದ ಕ್ಯಾಮೆರೂನ್, 'ಹೆನ್ನಿಂಗ್ ಅವರ ಪತ್ನಿ, ಮಕ್ಕಳು ಮತ್ತು ಸ್ನೇಹಿತರ ಸಲುವಾಗಿ ನಾನೂ ಪ್ರಾರ್ಥಿಸುತ್ತೇನೆ' ಎಂದು ತಿಳಿಸಿದರು.

2014: ಮುಂಬೈ: ಮಹಾರಾಷ್ಟ್ರ ವಿಧಾನಸಭೆಯ 288 ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಎಲೆಕ್ಟ್ರಾನಿಕ್ ಮತಯಂತ್ರಗಳ (ಇವಿಎಂ) ಜೊತೆಗೆ 'ವೋಟರ್ ವೆರಿಫಿಕೇಷನ್ ಪೇಪರ್ ಆಡಿಟ್ ಟ್ರಯಲ್' (ವಿವಿಪಿಎಟಿ) ಸಾಧನಗಳನ್ನೂ ಒದಗಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿದ ಎರಡು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು (ಪಿಐಎಲ್) ಮುಂಬೈ ಹೈಕೋರ್ಟ್ ವಜಾ ಮಾಡಿತು. ಇಂತಹ ಉಪಕರಣಗಳನ್ನು ದೇಶಾದ್ಯಂತ ಹಂತ ಹಂತವಾಗಿ ಬಳಸಲಾಗುವುದು ಎಂಬುದಾಗಿ ಸರ್ಕಾರ ನೀಡಿದ ಹೇಳಿಕೆಯನ್ನು ಅಂಗೀಕರಿಸಿದ ಮುಖ್ಯ ನ್ಯಾಯಮೂರ್ತಿ ಮೋಹಿತ್ ಶಾ ನೇತೃತ್ವದ ಪೀಠವು ಸೆಪ್ಟೆಂಬರ್ 30ರಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ತಳ್ಳಿಹಾಕಿತು. ಎಲೆಕ್ಟ್ರಾನಿಕ್ ಮತಯಂತ್ರಗಳು ಅಂತಾರಾಷ್ಟ್ರೀಯ ಗುಣಮಟ್ಟಗಳಿಗೆ ಅನುಗುಣವಾಗಿಲ್ಲ ಮತ್ತು ಹ್ಯಾಕಿಂಗ್​ಗೆ ಮುಕ್ತವಾಗಿವೆ. ಆದ್ದರಿಂದ ತಾನು ನೀಡಿದ ಮತ ಸರಿಯಾದ ವ್ಯಕ್ತಿಗೆ ಬಿದ್ದಿದೆಯೇ ಎಂದು ಸ್ವತಃ ಪರಿಶೀಲಿಸಲು ಮತದಾರನಿಗೆ ಅನುಕೂಲವಾಗುವಂತೆ ವಿವಿಪಿಎಟಿ ಸಾಧನಗಳನ್ನೂ ಒದಗಿಸಬೇಕು ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಕೋರಿದ್ದವು. ವಿವಿಪಿಎಟಿ ಸಾಧನಗಳನ್ನು ಎಲೆಕ್ಟ್ರಾನಿಕ್ ಮತಯಂತ್ರಗಳಿಗೇ ಜೋಡಿಸಲಾಗಿರುತ್ತದೆ ಮತ್ತು ಅವು ,ಮತದಾರನು ಗುರುತು ಹಾಕಿದ ಅಭ್ಯರ್ಥಿಯ ಹೆಸರು ಮತ್ತು ಲಾಂಛನ ಸಹಿತವಾದ ಚೀಟಿಯನ್ನು ಮುದ್ರಿಸಿ ಮತದಾರನಿಗೆ ಸಿಗುವಂತೆ ಮಾಡುತ್ತವೆ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ವಿವರಿಸಿದ್ದವು.

2014: ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಅಮೆರಿಕ ಪ್ರವಾಸಕ್ಕೆ ಬದಲಿ ವ್ಯವಸ್ಥೆಗಾಗಿ ನಿಯೋಜಿಸಲಾಗಿದ್ದ ಏರ್​ಇಂಡಿಯಾದ ವಿಮಾನದಲ್ಲಿ ನಿಷ್ಕ್ರಿಯಗೊಂಡ ಗ್ರೆನೇಡ್ ಇದ್ದ ವಿಷಯ ತಡವಾಗಿ ಬೆಳಕಿಗೆ ಬಂದಿತು. ಆದರೆ ಭದ್ರತಾ ಲೋಪದ ಹೊಣೆ ಹೊರಬೇಕಿದ್ದ ಏರ್ ಇಂಡಿಯಾ ಮತ್ತು ನಾಗರಿಕ ವಿಮಾನಯಾನ ಸಚಿವಾಲಯ ಪ್ರಕರಣ ಸಂಬಂಧ ವಿಭಿನ್ನ ಹೇಳಿಕೆ ನೀಡಿ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟವು. ಏನಿದು ಘಟನೆ....? ಪ್ರಧಾನಿ ನರೇಂದ್ರ ಮೋದಿ ಐದು ದಿನಗಳ ಅಮೆರಿಕ ಪ್ರವಾಸಕ್ಕಾಗಿ ಹಿಂದಿನ ವಾರ ಜಂಬೋಜೆಟ್ ವಿಮಾನ ಏರಿದ್ದರು. ಜಂಬೋ ಜೆಟ್​ನಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡರೆ ಪ್ರಯಾಣಿಸುವುದಕ್ಕೆಂದು ಏರ್ ಇಂಡಿಯಾದ ವಿಮಾನವೊಂದನ್ನು ಪರ್ಯಾಯವಾಗಿ ಸಜ್ಜುಗೊಳಿಸಲಾಗಿತ್ತು. ಮೋದಿ ಅಮೆರಿಕದಿಂದ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ನಂತರ ಈ ವಿಮಾನವನ್ನು ಸಾರ್ವಜನಿಕರ ಪ್ರಯಾಣಕ್ಕೆ ಬಳಸಲಾಗಿತ್ತು. ದೆಹಲಿ-ಮುಂಬೈ-ಹೈದರಾಬಾದ್ ಮಾರ್ಗವಾಗಿ ಸಾಗಿ ಜೆಡ್ಡಾದಲ್ಲಿ ಇಳಿದಿದ್ದ ವಿಮಾನದಲ್ಲಿ ಗ್ರೆನೇಡ್ ಎಂದು ಬರೆದಿದ್ದ ವಸ್ತುವೊಂದು ಕಾಣಿಸಿಕೊಂಡಿತು. ತಕ್ಷಣ ವಿಮಾನವನ್ನು ನಿರ್ಜನ ಪ್ರದೇಶಕ್ಕೆ ಕೊಂಡೊಯ್ದ ಸ್ಥಳೀಯ ಭದ್ರತಾ ಅಧಿಕಾರಿಗಳು ತಪಾಸಣೆ ನಡೆಸಿದಾಗ ಅದು ನಿಷ್ಕ್ರಿಯಗೊಂಡ ಗ್ರೆನೇಡ್ ಎಂಬುದು ಖಚಿತವಾಯಿತು. ತೆರವು ಕಾರ್ಯಾಚರಣೆ ನಂತರ ವಿಮಾನ ದೆಹಲಿಗೆ ಹಿಂದಿರುಗಲು ಜೆಡ್ಡಾ ವಿಮಾನ ನಿಲ್ದಾಣದ ಅಧಿಕಾರಿಗಳು ಅನುಮತಿ ನೀಡಿದರು. ಪ್ಲಾಸ್ಟಿಕ್​ನಲ್ಲಿತ್ತು: ಏರ್ ಇಂಡಿಯಾ ಮೂಲಗಳ ಪ್ರಕಾರ ವಿಮಾನದ ಬ್ಯುಸಿನೆಸ್ ಕ್ಲಾಸ್ ಸೀಟಿನ ಕೆಳಭಾಗದಲ್ಲಿ ಪ್ಲಾಸ್ಟಿಕ್​ನಿಂದ ಸುತ್ತಿಡಲಾಗಿದ್ದ ವಸ್ತುವೊಂದು ಜೆಡ್ಡಾ ವಿಮಾನ ನಿಲ್ದಾಣದಲ್ಲಿ ಉರುಳಿ ಹೊರಕ್ಕೆ ಬಂದಿತ್ತು. ಇದನ್ನು ಕಂಡ ಪ್ರಯಾಣಿಕರು ಬೆದರಿ ವಿಮಾನದ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಏರ್ ಇಂಡಿಯಾ ಭದ್ರತಾ ವಿಭಾಗದ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಯಿತು. ಪ್ರಕರಣದ ಸಮಗ್ರ ತನಿಖೆ ನಡೆಸಲು ಏರ್ ಇಂಡಿಯಾದ ಜಂಟಿ ಎಂಡಿ ಸೈಯದ್ ನಾಸಿರ್ ಅನಿಲ್ ಮತ್ತು ವಿಮಾನಯಾನ ಭದ್ರತೆ ವಿಭಾಗದ ಕಮಿಷನರ್ ಬಿ.ಬಿ.ಡಾಶ್ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಲಾಯಿತು.

2014: ವಾಷಿಂಗ್ಟನ್: ವಿಜ್ಞಾನ ಕ್ಷೇತ್ರದಲ್ಲಿನ ಸಾಧನೆಗಾಗಿ ಅಮೆರಿಕ ಸರ್ಕಾರ ಕೊಡಮಾಡುವ ಪ್ರತಿಷ್ಠಿತ ಪ್ರಶಸ್ತಿಗೆ ಭಾರತೀಯ ಮೂಲದ ವಿಜ್ಞಾನಿ ಥಾಮಸ್ ಕೈಲಾಥ್(79) ಪಾತ್ರರಾದರು. ಒಟ್ಟು 10 ಮಂದಿ ವಿಜ್ಞಾನಿಗಳಿಗೆ ವಾರ್ಷಿಕವಾಗಿ ನೀಡಲಾಗುವ ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿಯನ್ನು ಅಧ್ಯಕ್ಷ ಬರಾಕ್ ಒಬಾಮ ಘೋಷಿಸಿದರು. ಕೇರಳದಲ್ಲಿ ಜನಿಸಿದ್ದ ಥಾಮಸ್ 1956ರಲ್ಲಿ ಪುಣೆ ವಿಶ್ವ ವಿದ್ಯಾಲಯದಿಂದ ಪದವಿ ಪಡೆದಿದ್ದರು. ಇವರು ಪದ್ಮಭೂಷಣಕ್ಕೂ ಪಾತ್ರರಾಗಿದ್ದರು.

2014: ಬೀಜಿಂಗ್: 10,000 ಕಿ.ಮೀ. ದೂರದ ಗುರಿಯಲ್ಲಿ ಪರಮಾಣು ಸಿಡಿತಲೆಗಳನ್ನು ಸಿಡಿಸಬಲ್ಲ ಅತ್ಯಾಧುನಿಕ ಕ್ಷಿಪಣಿಯನ್ನು ಚೀನಾದ ರಾಷ್ಟ್ರೀಯ ದಿನವಾದ ಅ.1ರಂದು ಶಾಂಕ್ಸಿ ಪ್ರಾಂತದ ತೈಯಾನ್ ಬಾಹ್ಯಾಕಾಶ ಕೇಂದ್ರದಿಂದ ಪ್ರಾಯೋಗಿಕವಾಗಿ ಉಡಾವಣೆ ಮಾಡಲಾಯಿತು. 'ಡಿಎಫ್-31 ಬಿ' ಎಂಬ ಈ ಕ್ಷಿಪಣಿ ಸುಮಾರು 10,000 ಕಿ.ಮೀ. ದೂರದ ಗುರಿಗೆ ಪರಮಾಣು ಸಿಡಿತಲೆಗಳನ್ನು ಸಿಡಿಸುವ ಸಾಮರ್ಥ್ಯ ಹೊಂದಿದ್ದು, ಅಮೆರಿಕ ಹಾಗೂ ಯೂರೋಪಿಯನ್ ರಾಷ್ಟ್ರಗಳಿಗೆ ಚೀನಾದಿಂದಲೇ ನೇರವಾಗಿ ದಾಳಿ ನಡೆಸಬಹುದು. 3 ತಿಂಗಳ ಹಿಂದೆ ಚೀನಾದ ಪೀಪಲ್ಸ್ ಲಿಬರೇಷನ್ ಆರ್ವಿು(ಪಿಎಲ್​ಎ) 'ಡಿಎಫ್-31 ಎ' ಎಂಬ ಪರಮಾಣು ಕ್ಷಿಪಣಿ ಪರೀಕ್ಷೆ ನಡೆಸಿತ್ತು. ಇದರ ಮುಂದುವರಿದ ಭಾಗವೇ 'ಡಿಎಫ್-31 ಬಿ' ಎನ್ನಲಾಯಿತು.. ಈ ನಡುವೆ, ಅಮೆರಿಕವನ್ನು ಗುರಿಯಾಗಿಸಿ ಚೀನಾ ಕ್ಷಿಪಣಿ ಅಭಿವೃದ್ಧಿಪಡಿಸಿದೆ ಎಂದು ಕೆಲ ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಯಿತು. ಆದರೆ, ಈ ವಿಚಾರವನ್ನು ಪಿಎಲ್​ಎನ ನಿವೃತ್ತ ಮೇಜರ್ ಕ್ಸು ಗ್ವಾಂಗ್ಯು ನಿರಾಕರಿಸಿದರು. ದೇಶದ ಸೇನಾ ಬಲ ವೃದ್ಧಿಸುವುದಷ್ಟೇ ನಮ್ಮ ಉದ್ದೇಶ. ಅಮೆರಿಕವನ್ನು ಗುರಿಯಾಗಿಸಿ ಕ್ಷಿಪಣಿ ಅಭಿವೃದ್ಧಿಪಡಿಸಲಾಗಿದೆ ಎಂಬ ವಾದ ಆಧಾರರಹಿತ ಎಂದು ಅವರು ಹೇಳಿದರು.

2014: ಮೈಸೂರು: ವಿಶ್ವವಿಖ್ಯಾತ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಚಾಲನೆ ನೀಡಿದರು. ಅರಮನೆಯ ಬಲರಾಮ ದ್ವಾರದಲ್ಲಿ ನಂದಿಧ್ವಜಕ್ಕೆ ಪೂಜೆ ಸಲ್ಲಿಸಿದ ಬಳಿಕ ಮುಖ್ಯಮಂತ್ರಿಯವರು ಅರಮನೆಯ ಒಳಾವರಣದಲ್ಲಿ ವಿಶೇಷ ವೇದಿಕೆಯ ಮೇಲೆ ನಿಂತು ಗಜರಾಜ ಅರ್ಜುನನ ಬೆನ್ನ ಮೇಲಿನ ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾದ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂಸವಾರಿಯನ್ನು ಉದ್ಘಾಟಿಸಿದರು. ಜಂಬೂಸವಾರಿಗೆ ಚಾಲನೆ ನೀಡಿದ ಬಳಿಕ ಸಿದ್ಧರಾಮಯ್ಯ ಅವರು ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಸಾಗಿದರು. ಅವರೊಂದಿಗೆ ಸಚಿವರಾದ ಮಹದೇವ ಪ್ರಸಾದ್ ಮತ್ತಿತರ ಸಂಪುಟ ಸದಸ್ಯರೂ ಸೇರಿಕೊಂಡರು. 750 ಕಿ.ಗ್ರಾಂ. ತೂಕದ ಚಿನ್ನದ ಅಂಬಾರಿಯನ್ನು ಹೊತ್ತು ಅರ್ಜುನ ಮುಂದಕ್ಕೆ ಸಾಗುತ್ತಿದ್ದಂತೆಯೇ ಇತರ ಆನೆಗಳು, ವೀರಗಾಸೆ ತಂಡ, ವಾದ್ಯವೃಂದ, ಫಿರಂಗಿ ಗಾಡಿಗಳು, ಜಾನಪದ ಕಲಾ ತಂಡಗಳು, ಸ್ತಬ್ಧಚಿತ್ರಗಳು ಸಾಗಿದವು.
 2008: ಇನ್ನು ಮೇಲೆ ನೀವು ಯಾರ ಗಡಿಯಾರವನ್ನೂ ನೋಡಿ ಅದೇನು ಸಗಣಿ ಗಡಿಯಾರ ಎಂದು ಹೀಯಾಳಿಸುವಂತಿಲ್ಲ. ಯಾಕೆಂದರೆ ಸಗಣಿಯಿಂದಲೇ ನಡೆಯುವಂತಹ ಗಡಿಯಾರವನ್ನು ತಯಾರಿಸಲಾಗಿದೆ. ಮೈಸೂರು ದಸರಾದಲ್ಲಿ ಇದೇ ಮೊದಲ ಬಾರಿಗೆ ಆಯೋಜಿಸಲಾದ ರೈತ ದಸರಾದಲ್ಲಿ ಈ ಗಂಜಳ ಗಡಿಯಾರ ಎಲ್ಲರ ಕುತೂಹಲದ ವಸ್ತುವಾಗಿ ಗಮನ ಸೆಳೆಯಿತು.. ಈ ಗಡಿಯಾರಕ್ಕೆ ಬ್ಯಾಟರಿಯೇ ಬೇಕಾಗಿಲ್ಲ. ಇದಕ್ಕೆ ಕೇವಲ ಗೋಮೂತ್ರ, ಹುಳಿ ಮಜ್ಜಿಗೆ ಇದ್ದರೆ ಸಾಕು. ನಾಲ್ಕಾರು ತಿಂಗಳು ಈ ಗಡಿಯಾರದಲ್ಲಿ ವೇಳೆ ನೋಡಿಕೊಳ್ಳಬಹುದು. ಈ ನವೀನ ಗಡಿಯಾರಗಳ ಹೆಸರು `ಗೋಮೂತ್ರ ಗಡಿಯಾರ'/ ಸಗಣಿ ಗಡಿಯಾರ/ ಮಜ್ಜಿಗೆ ಗಡಿಯಾರ. ಇದಷ್ಟೇ ಅಲ್ಲ, 1.5 ವೋಲ್ಟ್ ಬಲ್ಬುಗಳನೂ ಗೋಮೂತ್ರದಿಂದ ಉರಿಸಬಹುದು.. ಶ್ರೀ ರಾಮಚಂದ್ರಾಪುರ ಮಠದ ಸಹಯೋಗದಲ್ಲಿ ಈ ಗೋಮೂತ್ರಗಳ ಗಡಿಯಾರಗಳನ್ನು ತಯಾರಿಸಲಾಗಿತ್ತು. ಸಗಣಿಯೋ, ಗಂಜಲವೋ ಅಥವಾ ಮಜ್ಜಿಗೆ ತುಂಬಿದ ಬಾಟಲಿಗಳಲ್ಲಿ ವಿದ್ಯುತ್ ತಂತಿಯನ್ನು ಬಿಗಿದ ತೆಳುವಾದ ತಾಮ್ರ ಮತ್ತು ಜಿಂಕ್ ಶೀಟ್ ತುಂಡುಗಳನ್ನು ಅಕ್ಕಪಕ್ಕದಲ್ಲಿ ಇಳಿಬಿಟ್ಟು ವಯರಿನ ಮತ್ತೊಂದು ತುದಿಯಲ್ಲಿ ಸಾಮಾನ್ಯ ಗಡಿಯಾರಕ್ಕೆ ಜೋಡಿಸಬೇಕು. ತಾಮ್ರ ಹಾಗೂ ಜಿಂಕ್ಗಳು ಒಂದು ಪಾಸಿಟಿವ್ ಮತ್ತೊಂದು ನೆಗೆಟಿವ್ ವಿದ್ಯುತ್ ವಾಹಕಗಳಾಗಿ ಕೆಲಸ ಮಾಡುತ್ತವೆ. ನಾಲ್ಕೈದು ತಿಂಗಳು ಗಡಿಯಾರ ಚಲಿಸುತ್ತದೆ. ನಂತರ ಲೋಹದ ತುಂಡುಗಳು ಹಾಗೂ ಗೋಮೂತ್ರ ಹಾಗೂ ಸಗಣಿಯನ್ನು ಬದಲಾಯಿಸಬೇಕು. ಮಜ್ಜಿಗೆ ಗಡಿಯಾರದಲ್ಲಿ ಪ್ರತಿ ದಿವಸ ಮಜ್ಜಿಗೆ ಬದಲಾಯಿಸಬೇಕು. ಕೊಟ್ಟಿಗೆ ಬೆಳಗಲು ಗೋಮೂತ್ರದ ವಿದ್ಯುತ್ ದೀಪವನ್ನೇ ಬಳಸಬಹುದು ಎಂಬುದು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ದಾರದಹಳ್ಳಿಯ ಹಿರಿಯ ಪಶು ವೈದ್ಯಕೀಯ ಪರೀಕ್ಷಕ ಕ.ದಾ.ಕೃಷ್ಣರಾಜು ಅವರ ವಿವರಣೆ. ರೈತರು ಈ ಗಡಿಯಾರವನ್ನು ತಯಾರಿಸಿಕೊಂಡರೆ ವಿದ್ಯುತ್ ಉಳಿಸಬಹುದು. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 9448073711 ಸಂಪರ್ಕಿಸಬಹುದು. ರೈತ ದಸರಾದಲ್ಲಿ ಇದೊಂದೇ ವಿಶೇಷವಲ್ಲ. ನಜರ್ ಬಾದಿನ ಕುಪ್ಪಣ್ಣ ಪಾರ್ಕಿನಲ್ಲಿ ರೈತರದ್ದೇ ಸಂತೆ. ರಾಜ್ಯದ ವಿವಿಧ ಭಾಗಗಳ ರೈತರು ತಾವು ಬೆಳೆದ ಸಾವಯವ ಉತ್ಪನ್ನಗಳು, ಕೃಷಿ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮಾಡಿ ನಗರದ ಜನರಲ್ಲಿಯೂ ಅಚ್ಚರಿ ಮೂಡಿಸಿದರು. ಈ ಸಾವಯವ ಲೋಕದೊಳಗೆ ರಾಮಚಂದ್ರಾಪುರ ಮಠದ 26 ದೇಸಿಯ ಗೋತಳಿಗಳ ಪ್ರದರ್ಶನ, ತುಮಕೂರಿನ ನಂದನ ತಾಜಾ ನೈಸರ್ಗಿಕ ತೆಂಗಿನ ಎಣ್ಣೆ, ಕೊಬ್ಬರಿ, ಹಪ್ಪಳ, ಹರಿಹರದ 55 ಬಗೆಯ ಬೀಜ ಬ್ಯಾಂಕ್, ಮಂಡ್ಯ ಜಿಲ್ಲೆಯ ಕೀಲಾರದ ಕೆಂಪಕ್ಕಿ, ಅವಲಕ್ಕಿ ಅಕ್ಕಿ ಹಿಟ್ಟು, ಬೆಲ್ಲ ಇತ್ಯಾದಿ ಉತ್ಪನ್ನಗಳು ಮಾರಾಟಕ್ಕೆ ಲಭಿಸಿದವು. ವಿವಿಧ ಕಂಪೆನಿಗಳು ತಯಾರಿಸಿದ ಕೃಷಿ ಸಲಕರಣೆ ಹಾಗೂ ಯಂತ್ರಗಳೂ ಮಾರಾಟಕಿದ್ದವು..

2008: ದೇಶದಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಿದ ಎರಡೇ ದಿನಗಳಲ್ಲಿ ದೆಹಲಿ ಸರ್ಕಾರವು ನಿಷೇಧ ಉಲ್ಲಂಘಿಸಿದ 141 ಜನರಿಗೆ ದಂಡ ವಿಧಿಸಿತು.. 56 ಸಾರ್ವಜನಿಕ ಸ್ಥಳಗಳು ಹಾಗೂ 388 ಬಸ್ಸುಗಳಲ್ಲಿ ಅಧಿಕಾರಿಗಳು ದಾಳಿ ನಡೆಸಿ 7080 ರೂಪಾಯಿ ದಂಡ ಸಂಗ್ರಹಿಸಿದರು. ಬಹುತೇಕ ರಾಜ್ಯಗಳು ಈ ನಿಷೇಧವನ್ನು ಜಾರಿಗೊಳಿಸಲು ಉತ್ಸಾಹದಿಂದ ಮುಂದೆ ಬಂದವು. ಆದರೆ ಮಹಾರಾಷ್ಟ್ರ ಮತ್ತು ಬಿಹಾರ ಮಾತ್ರ ನಿರಾಸಕ್ತಿ ತೋರಿಸಿದವು.

2008: ಗಣೇಶ ದೇವಸ್ಥಾನದ ಮೇಲೆ ದಾಳಿ ಮಾಡಿದ ದುಷ್ಕರ್ಮಿಗಳನ್ನು ಬಂಧಿಸುವಲ್ಲಿ ಆನೆಯೊಂದು ಪೊಲೀಸರಿಗೆ ನೆರವಾದ ಘಟನೆ ಬೆಳಕಿಗೆ ಬಂತು.. ಹಜಾರಿಬಾಗ್ ಜಿಲ್ಲೆಯ ಮಹಿದಿ ಬೆಟ್ಟ ಪ್ರದೇಶದಲ್ಲಿನ ಗಣೇಶ ದೇವಾಲಯದ ಮೇಲೆ ದುಷ್ಕರ್ಮಿಗಳು ಆಗಸ್ಟ್ 16ರಂದು ದಾಳಿ ನಡೆಸಿದ್ದರು. ಆಶ್ಚರ್ಯಕರ ಸಂಗತಿ ಎಂದರೆ ಕಾಡಾನೆಯೊಂದು ದುಷ್ಕರ್ಮಿಗಳ ಮನೆಗಳ ಮೇಲೆ ಪ್ರತಿದಾಳಿ ನಡೆಸಿ ದೇವಸ್ಥಾನದ ದಾಳಿಗೆ ಆಕ್ರೋಶ ವ್ಯಕ್ತಪಡಿಸಿತು. ಮನೆಗಳ ಮೇಲೆ ದಾಳಿ ಮಾಡಿದ ಆನೆಯು ಯಾರನ್ನೂ ಗಾಯಗೊಳಿಸಲಿಲ್ಲ. ನಂತರ ಪೊಲೀಸರು ದೇವಸ್ಥಾನದ ಮೇಲೆ ದಾಳಿ ಮಾಡಿದವರನ್ನು ಬಂಧಿಸಿದರು. ದಾಳಿ ನಡೆದ ಮಾರನೇ ದಿನ ಆನೆಯು ಭಕ್ತರಿಗೆ ದೇವಸ್ಥಾನದ ಬಳಿ ಸುಳಿಯಲೂ ಬಿಡಲಿಲ್ಲ.

2007: ಭಾರತೀಯ ಶಾಸ್ತ್ರೀಯ ನೃತ್ಯ ಪ್ರಕಾರಕ್ಕೆ ಸಲ್ಲಿಸಿದ ಅನುಪಮ ಕೊಡುಗೆಯನ್ನು ಗಮನಿಸಿ ದೆಹಲಿ ಮೂಲದ ಕೂಚಿಪುಡಿ ನೃತ್ಯ ಕಲಾವಿದೆ ಯಾಮಿನಿ ರೆಡ್ಡಿ ಅವರನ್ನು ಪ್ರಸಕ್ತ ಸಾಲಿನ `ದೇವದಾಸಿ ರಾಷ್ಟ್ರೀಯ ಪ್ರಶಸ್ತಿ'ಗೆ ಆಯ್ಕೆ ಮಾಡಲಾಯಿತು.

2007: ವಿಶ್ವ ಚೆಸ್ ಚಾಂಪಿಯನ್ ಶಿಪ್ ನಲ್ಲಿ ಪ್ರಶಸ್ತಿ ಗೆದ್ದ ವಿಶ್ವನಾಥನ್ ಆನಂದ್ ಅವರಿಗೆ ತಮಿಳುನಾಡು ಸರ್ಕಾರವು 25 ಲಕ್ಷ ರೂಪಾಯಿಯ ಬಹುಮಾನವನ್ನು ಪ್ರಕಟಿಸಿತು. ಆನಂದ್ ಅವರನ್ನು ಅಭಿನಂದಿಸಿದ ಮುಖ್ಯಮಂತ್ರಿ ಕರುಣಾನಿಧಿ ಅವರು 25 ಲಕ್ಷ ರೂಪಾಯಿಯ ನಗದು ಬಹುಮಾನವನ್ನು ಪ್ರಕಟಿಸಿದರು. ಅಲ್ಲದೆ, ಇತರ 28 ಕ್ರೀಡಾಳುಗಳಿಗೆ 96.05 ಲಕ್ಷ ರೂಗಳ ಬಹುಮಾನವನ್ನೂ ಘೋಷಿಸಿದರು.

2006: ಮಹಿಳಾ ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ಡಾ. ರಾಣಿ ಅಭಯ್ ಬಾಂಗ್ ಮತ್ತು ರಾಷ್ಟ್ರೀಯ ಯುವಜನ ಯೋಜನೆ ನಿರ್ದೇಶಕ ಡಾ. ಎಸ್. ಎನ್. ಸುಬ್ಬರಾವ್ ಅವರು ಪ್ರಸ್ತುತ ಸಾಲಿನ ಪ್ರತಿಷ್ಠಿತ ಜಮ್ನಾಲಾಲ್ ಬಜಾಜ್ ಪ್ರಶಸ್ತಿಗೆ ಆಯ್ಕೆಯಾದರು.

2006: ಮಾನವ ದೇಹದ ವಂಶವಾಹಿಯಲ್ಲಿ ಸಂಗ್ರಹವಾಗಿರುವ ಮಾಹಿತಿಯನ್ನು ಪ್ರೊಟೀನುಗಳನ್ನು ಉತ್ಪತ್ತಿ ಮಾಡುವ ಜೀವಕೋಶಕ್ಕೆ ಕೂಡಾ ವರ್ಗಾಯಿಸಬಹುದು ಎಂಬ ಮಹತ್ವದ ಸಂಶೋಧನೆ ನಡೆಸಿದ್ದಕ್ಕಾಗಿ ಅಮೆರಿಕದ ರೋಜರ್ ಡಿ. ಕಾರ್ನ್ ಬರ್ಗ್ ಅವರು ರಸಾಯನಶಾಸ್ತ್ರದಲ್ಲಿ ಮಾಡಿದ ಸಂಶೋಧನೆಗೆ ನೀಡಲಾಗುವ ಪ್ರತಿಷ್ಠಿತ ನೊಬೆಲ್ ಪ್ರಶಸ್ತಿಗೆ ಪಾತ್ರರಾದರು. ರೋಜರ್ ಅವರ ತಂದೆ ಆರ್ಥರ್ ಕಾರ್ನ್ ಬರ್ಗ್ ಅವರು ಕೂಡಾ 1959ರಲ್ಲಿವೈದ್ಯಕೀಯ ನೊಬೆಲ್ ಪ್ರಶಸ್ತಿಗೆ ಪಾತ್ರರಾಗಿದ್ದರು.

2006: ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್ ಅವರ ಕನಸಿನ ಕೂಸಾದ `ಗರೀಬ್ ರಥ್' ಹವಾನಿಯಂತ್ರಿತ ರೈಲು ಬಿಹಾರಿನ ಸಹರ್ಸಾದಿಂದ ಅಮೃತಸರಕ್ಕೆ ಚೊಚ್ಚಲ ಪಯಣ ನಡೆಸಿತು. ಬಡವರು ಹಾಗೂ ಕೂಲಿ ಕಾರ್ಮಿಕರೂ ಹವಾ ನಿಯಂತ್ರಿತ ರೈಲಿನಲ್ಲಿ ಪಯಣಿಸುವಂತಾಗಬೇಕು ಎಂಬ ಆಶಯದಿಂದ ಲಾಲೂ ಅವರು ಆರಂಭಿಸಿದ ಈ ರೈಲಿನ ಚೊಚ್ಚಲ ಪಯಣದಲ್ಲಿ ಕೇವಲ 25 ಪಯಣಿಗರು ಇದ್ದರು. ರೈಲಿನಲ್ಲಿ 1500 ಆಸನಗಳಿವೆ. ದರ ಅರ್ಧಕ್ಕರ್ಧ ಕಡಿಮೆ.

2006: ಎಲ್ಲ ಉಳಿತಾಯ ಖಾತೆದಾರರಿಗೂ ಪಾಸ್ ಪುಸ್ತಕ ನೀಡಬೇಕಾದ್ದು ಕಡ್ಡಾಯ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿ ಐ) ವಾಣಿಜ್ಯ ಬ್ಯಾಂಕುಗಳಿಗೆ ತಾಕೀತು ಮಾಡಿತು. ಹಲವಾರು ಬ್ಯಾಂಕುಗಳು ಪಾಸ್ ಪುಸ್ತಕ ನೀಡುವ ಬದಲು 4 ತಿಂಗಳಿಗೊಮ್ಮೆ ಖಾತೆಯ ಸ್ಟೇಟ್ ಮೆಂಟ್ ಮಾತ್ರ ನೀಡುವ ಕ್ರಮ ಕೈಬಿಡಬೇಕು ಎಂದು ಅದು ಸುತ್ತೋಲೆಯಲ್ಲಿ ತಿಳಿಸಿತು.

2006: ಗಡಿ ವಿಚಾರದಲ್ಲಿ ಕೇಂದ್ರ ಸರ್ಕಾರವು ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಆಪಾದಿಸಿ ಕನ್ನಡಪರ ಸಂಘಟನೆಗಳು ನೀಡಿದ `ಕರ್ನಾಟಕ ಬಂದ್' ಕರೆಗೆ ರಾಜ್ಯಾದ್ಯಂತ ವ್ಯಾಪಕ ಬೆಂಬಲ ಲಭಿಸಿತು. ಇಡಿ ರಾಜ್ಯದಲ್ಲಿ ಜನ ಜೀವನ ಅಸ್ತವ್ಯಸ್ತಗೊಂಡಿತು.

1996: ಪಾಕಿಸ್ತಾನದ ಶಾಹಿದ್ ಆಫ್ರಿದಿ ಅವರು ನೈರೋಬಿಯಲ್ಲಿ ನಡೆದ ಪಂದ್ಯದಲ್ಲಿ ಶ್ರೀಲಂಕಾದ ವಿರುದ್ಧ ಕೇವಲ 37 ಬಾಲ್ ಗಳಿಗೆ ಶತಕ ಬಾರಿಸುವ ಮೂಲಕ ಒಂದು ದಿನದ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾದ ಸನತ್ ಜಯಸೂರ್ಯ ಅವರು ಮಾಡಿದ್ದ `ಅತಿ ವೇಗದ ಶತಕ' ದಾಖಲೆಯನ್ನು ಮುರಿದರು. ಹಿಂದೆ ದಾಖಲೆ ಮಾಡಿದ್ದ ಜಯಸೂರ್ಯ ಅವರ ಬಾಲಿನಿಂದಲೇ 2 ಓವರುಗಳಲ್ಲಿ 43 ರನ್ನುಗಳನ್ನು ಆಫ್ರಿದಿ ಗಳಿಸಿದರು.

1986: ಭಾರತೀಯ ಹೆಲಿಕಾಪ್ಟರ್ ನಿಗಮ ಅಸ್ತಿತ್ವಕ್ಕೆ ಬಂದಿತು.

1977: ಭಾರತದ ವಿದೇಶಾಂಗ ಸಚಿವ ಅಟಲ್ ಬಿಹಾರಿ ವಾಜಪೇಯಿ ಅವರು ವಿಶ್ವಸಂಸ್ಥೆ ಮಹಾ ಅಧಿವೇಶನವನ್ನು ಉದ್ದೇಶಿಸಿ ಹಿಂದಿಯಲ್ಲಿ ಭಾಷಣ ಮಾಡಿದ ಮೊದಲಿಗರೆಂಬ ಖ್ಯಾತಿಗೆ ಪಾತ್ರರಾದರು.

1972: ಫುಟ್ ಬಾಲ್ ಆಟಗಾರ ರಾಮನ್ ವಿಜಯನ್ ಜನನ.

1970: ಅಮೆರಿಕದ ರಾಕ್ ಹಾಡುಗಾರ್ತಿ ಜಾನಿಸ್ ಜೋಪ್ಲಿನ್ ಅವರು ಹಾಲಿವುಡ್ ಹೊಟೇಲ್ ಒಂದರ ಕೊಠಡಿಯಲ್ಲಿ ಮೃತರಾಗಿದ್ದುದು ಪತ್ತೆಯಾಯಿತು. ಹೆರಾಯಿನ್ ಅತಿ ಸೇವನೆಯಿಂದ ಈ ಸಾವು ಸಂಭವಿಸಿತ್ತು. ಆಗ ಆಕೆಯ ವಯಸ್ಸು ಕೇವಲ 27 ವರ್ಷ.

1957: ಸೋವಿಯತ್ ಒಕ್ಕೂಟವು ಮೊತ್ತ ಮೊದಲ ಮಾನವ ನಿರ್ಮಿತ ಉಪಗ್ರಹ `ಸ್ಪುಟ್ನಿಕ್ 1'ನ್ನು ಕಕ್ಷೆಗೆ ಹಾರಿಸುವುದರೊಂದಿಗೆ ಬಾಹ್ಯಾಕಾಶ ಯುಗ ಆರಂಭವಾಯಿತು. ಅದು ಕಕ್ಷೆಯಲ್ಲಿ ಭೂಮಿಗೆ 96 ನಿಮಿಷಗಳಿಗೆ ಒಂದರಂತೆ ಪ್ರದಕ್ಷಿಣೆ ಹಾಕಿತು. ಇದೇ ಸ್ಥಿತಿಯಲ್ಲಿ 1958ರ ಆದಿಯವರೆಗೂ ಅದು ಕಕ್ಷೆಯಲ್ಲಿ ಕಾರ್ಯಾಚರಿಸಿ, ನಂತರ ಉರಿದು ಬಿತ್ತು. `ಲಾಯಿಕಾ' ಎಂಬ ನಾಯಿಯನ್ನು ಹೊತ್ತೊಯ್ದ ಸ್ಪುಟ್ನಿಕ್ 2 ಭೂಮಿಯಿಂದ ಬಾಹ್ಯಾಕಾಶಕ್ಕೆ ಹಾಗೂ ಭೂ ಕಕ್ಷೆಗೆ ಜೀವಂತ ಪ್ರಾಣಿಯನ್ನು ಮೊದಲಿಗೆ ಒಯ್ದ ಹೆಗ್ಗಳಿಕೆಗೆ ಪಾತ್ರವಾಯಿತು.

1948: ಸಾಹಿತಿ ಮೇಗರವಳ್ಳಿ ರಮೇಶ್ ಜನನ.

1940: ಅಡಾಲ್ಫ್ ಹಿಟ್ಲರ್ ಮತ್ತು ಬೆನಿಟೊ ಮುಸ್ಸೋಲಿನಿ ಅವರು ಆಲ್ಪ್ಸ್ ಪರ್ವತದ ಬ್ರೆನ್ನರ್ ಕಣಿವಯಲ್ಲಿ ಭೇಟಿಯಾದರು. ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಇಟಲಿಯ ನೆರವನ್ನು ಈ ಸಂದರ್ಭದಲ್ಲಿ ನಾಜಿ ನಾಯಕ ಯಾಚಿಸಿದ.

1916: ಸಾಹಿತಿ ರಾಜೇಶ್ವರಿ ನರಸಿಂಹಮೂರ್ತಿ ಜನನ.

1916: ಮಹಾ ಮಾನವತಾವಾದಿ, ಕಣ್ಣಿನ ವೈದ್ಯ ಡಾ. ಎಂ.ಸಿ. ಮೋದಿ (4-10-1916ರಿಂದ 11-11-2005) ವಿಜಾಪುರ ಜಿಲ್ಲೆಯಲ್ಲಿ ಜನಿಸಿದರು. ವೃದ್ಧರ ಕಣ್ಣಿನ ಪೊರೆ ತೆಗೆಯುವ ಶಸ್ತ್ರಚಿಕಿತ್ಸೆ ದುಬಾರಿಯಾಗಿದ್ದ ಕಾಲದಲ್ಲಿ ಶಿಬಿರಗಳ ಮೂಲಕ ಕಣ್ಣಿನ ಪೊರೆ ತೆಗೆಯುವ ಶಸ್ತ್ರಚಿಕಿತ್ಸಾ ಅಭಿಯಾನವನ್ನೇ ಕೈಗೊಂಡ ಮೋದಿ ಜನರ ನೆಚ್ಚಿನ `ನೇತ್ರದಾನಿ' ಆಗಿದ್ದರು.

1884: ಖ್ಯಾತ ಸಾಹಿತಿ ಹುಯಿಲಗೋಳ ನಾರಾಯಣರಾಯರು (4-10-1884ರಿಂದ 4-7-1971ರವರೆಗೆ) ಕೃಷ್ಣರಾಯರು- ಬಹೆಣಕ್ಕ ದಂಪತಿಯ ಮಗನಾಗಿ ಗದಗದಲ್ಲಿ ಜನಿಸಿದರು. ಕನ್ನಡಿಗರ ಮೈ ನವಿರೇಳಿಸುವ `ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು' ಗೀತೆಯ ಕತೃ ಇವರೇ. 1924ರಲ್ಲಿ ಬೆಳಗಾವಿ ಜಿಲ್ಲಾ ಟಿಳಕವಾಡಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಖ್ಯಾತ ಗಾಯಕ ಸುಬ್ಬರಾಯರು ಈ ಗೀತೆಯನ್ನು ಹಾಡಿದಾಗ ಜನ ಪುಳಕಿತರಾಗಿ ಹರ್ಷೋದ್ಘಾರ ಮಾಡಿದರು.

1857: ಸ್ವಾತಂತ್ರ್ಯ ಹೋರಾಟಗಾರ ಶ್ಯಾಮ್ ಜಿ ಕೃಷ್ಣವರ್ಮ ಜನನ.

1847: ಮರಾಠ ದೊರೆ ಪ್ರತಾಪ್ ಸಿಂಗ್ ಬೋಸ್ಲೆ ನಿಧನ.

No comments:

Post a Comment