Saturday, November 11, 2023

PARYAYA: ಸಾಮರ್ಥ್ಯ ವೃದ್ಧಿಗೆ ಡಿಜಿಟಲ್‌ ತಂತ್ರಜ್ಞಾನ ಬಳಕೆ ಹೇಗೆ?

 ಸಾಮರ್ಥ್ಯ ವೃದ್ಧಿಗೆ ಡಿಜಿಟಲ್‌ ತಂತ್ರಜ್ಞಾನ ಬಳಕೆ ಹೇಗೆ?

ರೇಡಿಯೋ ಶಿವಮೊಗ್ಗದಲ್ಲಿ ʼಆತ್ಮ ನಿರ್ಭರ ಗ್ರಾಮ ಪಂಚಾಯಿತಿʼ ಕಂತು 5

ಬೆಂಗಳೂರು: ಗ್ರಾಮ ಪಂಚಾಯಿತಿಗಳ ಮತ್ತು ಪಂಚಾಯಿತಿ ಪ್ರತಿನಿಧಿಗಳು ತಮ್ಮ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳುವುದು ಗ್ರಾಮಗಳ ಅಭಿವೃದ್ಧಿಗೆ ಅತ್ಯಂತ ಅಗತ್ಯ. ಅದಕ್ಕಾಗಿ ಸರ್ಕಾರ ಗ್ರಾಮ ಪಂಚಾಯಿತಿ ಪ್ರತಿನಿಧಿಗಳಿಗೆ ತರಬೇತಿ ಶಿಬಿರಗಳನ್ನು ನಡೆಸುತ್ತದೆ. ಆದರೆ ತರಬೇತಿ ಮುಗಿಸಿ ಬರುವಷ್ಟರಲ್ಲಿ ಬಹುಮಂದಿಗೆ ಅಲ್ಲಿ ಹೇಳಿ ಕೊಟ್ಟದ್ದು ಮರೆತೇ ಹೋಗಿರುತ್ತದೆ.

ಹಾಗಿದ್ದರೆ ಅದನ್ನು ಸದಾಕಾಲ ನೆನಪು ಮಾಡಿಕೊಳ್ಳುವ ವ್ಯವಸ್ಥೆ ಯಾವುದಾದರೂ ಇದೆಯೇ? ಹೌದು ಇದೆ ಎನ್ನುತ್ತಾರೆ ಸಂಪೂರ್ಣ ಸ್ವರಾಜ್‌ ಫೌಂಡೇಷನ್ನಿನ ಡಾ. ಶಂಕರ ಕೆ. ಪ್ರಸಾದ್.‌

ಶಿವಮೊಗ್ಗೆ ಬಾನುಲಿಯಲ್ಲಿ ಪ್ರತಿ ಭಾನುವಾರ 8 ಗಂಟೆಗೆ ಮೂಡಿ ಬರುತ್ತಿರುವ ʼಆತ್ಮ ನಿರ್ಭರ ಗ್ರಾಮ ಪಂಚಾಯಿತಿʼ ವಿಶಿಷ್ಟ ಕಾರ್ಯಕ್ರಮದ ಐದನೇ ಕಂತಿನಲ್ಲಿ ಗ್ರಾಮ ಪಂಚಾಯಿತಿಗಳು ಮತ್ತು ಪಂಚಾಯಿತಿ ಸದಸ್ಯರು ಸಾಮರ್ಥ್ಯ ವೃದ್ಧಿಸಿಕೊಳ್ಳಲು ಡಿಜಿಟಲ್‌ ತಂತ್ರಜ್ಞಾನವನ್ನು ಬಳಸುವ ಬಗ್ಗೆ ಮಾತನಾಡಿದ್ದಾರೆ.

ʼ21ನೇ ಶತಮಾನದ ಆತ್ಮ ನಿರ್ಭರ ಗ್ರಾಮ ಪಂಚಾಯಿತಿʼ ಪುಸ್ತಕವನ್ನು ಆಧರಿಸಿ ಬರುತ್ತಿರುವ ಈ ಕಾರ್ಯಕ್ರಮದ ಐದನೇ ಕಂತು 2023 ನವೆಂಬರ್‌ 12ರ ಭಾನುವಾರ ಪ್ರಸಾರವಾಯಿತು.

ಇಂದಿನ ಬಾನುಲಿಯಲ್ಲಿ ಬಂದ ವಿಚಾರಗಳೇನು?

ಆಲಿಸಲು ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ:  


ಇವುಗಳನ್ನೂ ಓದಿರಿ:


PARYAYA: ಸಾಮರ್ಥ್ಯ ವೃದ್ಧಿಗೆ ಡಿಜಿಟಲ್‌ ತಂತ್ರಜ್ಞಾನ ಬಳಕೆ ಹೇಗೆ?:   ಸಾಮರ್ಥ್ಯ ವೃದ್ಧಿಗೆ ಡಿಜಿಟಲ್‌ ತಂತ್ರಜ್ಞಾನ ಬಳಕೆ ಹೇಗೆ? ರೇಡಿಯೋ ಶಿವಮೊಗ್ಗದಲ್ಲಿ ʼ ಆತ್ಮ ನಿರ್ಭರ ಗ್ರಾಮ ಪಂಚಾಯಿತಿ ʼ ಕಂತು 5 ಬೆಂ ಗಳೂರು: ಗ್ರಾಮ ಪಂಚಾಯಿತಿಗಳ ...

Sunday, November 5, 2023

PARYAYA: ಶಿವಮೊಗ್ಗ ಬಾನುಲಿಯಲ್ಲಿ ಬಂತು ʼಆತ್ಮ ನಿರ್ಭರ ಗ್ರಾಮ ಪಂಚಾಯ...

 ಶಿವಮೊಗ್ಗ ಬಾನುಲಿಯಲ್ಲಿ ಬಂತು ʼಆತ್ಮ ನಿರ್ಭರ ಗ್ರಾಮ ಪಂಚಾಯಿತಿʼ

ಕಂತು-2

ಬೆಂಗಳೂರು: ರೇಡಿಯೋ ಶಿವಮೊಗ್ಗದಲ್ಲಿ 2023 ನವೆಂಬರ್ 5ರ ಭಾನುವಾರ ಬೆಳಗ್ಗೆ ಗಂಟೆಗೆ ʼಆತ್ಮ ನಿರ್ಭರ ಗ್ರಾಮ ಪಂಚಾಯ್ತಿʼ ವಿಶಿಷ್ಟ ಕಾರ್ಯಕ್ರಮದ ಎರಡನೇ ಕಂತು ಮೂಡಿಬಂತು.

ಅಕ್ಟೋಬರ್‌ 15ರ ಭಾನುವಾರದಿಂದ ಪ್ರತಿ ಭಾನುವಾರವೂ ಬೆಳಗ್ಗೆ 8 ಗಂಟೆಗೆ ರೇಡಿಯೋ ಶಿವಮೊಗ್ಗ 90.8 ಎಫ್‌ ಎಂ ನಲ್ಲಿ ಡಿಜಿಟಲ್‌ ತಂತ್ರಜ್ಞಾನ ಪರಿಣತ ಡಾ. ಶಂಕರ ಕೆ. ಪ್ರಸಾದ್‌ ಅವರು ರಚಿಸಿರುವ 21ನೆಯ ಶತಮಾನದ ಆತ್ಮ ನಿರ್ಭರ ಗ್ರಾಮ ಪಂಚಾಯಿತಿʼ ಕೃತಿಯನ್ನು ಆಧರಿಸಿದ ಬಾನುಲಿ ಕಾರ್ಯಕ್ರಮ ಪ್ರಸಾರ ಆರಂಭವಾಗಿದೆ.

ಈದಿನ ಕಾರ್ಯಕ್ರಮದ 2ನೇ ಕಂತಿನ ಮರುಪ್ರಸಾರವಾಯಿತು ಎಂದು ರೇಡಿಯೋ ಶಿವಮೊಗ್ಗ ಮತ್ತು ಬೆಂಗಳೂರಿನ ಸಂಪೂರ್ಣ ಸ್ವರಾಜ್‌ ಫೌಂಡೇಷನ್ನಿನ ಪತ್ರಿಕಾ ಪ್ರಕಟಣೆ ತಿಳಿಸಿದೆ.

 ಇಂದಿನ ಬಾನುಲಿಯಲ್ಲಿ ಬಂದ ವಿಚಾರಗಳೇನು?

ಆಲಿಸಲು ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ: 


ಇದನ್ನೂ ನೋಡಿ:

ಶಿವಮೊಗ್ಗ ಬಾನುಲಿಯಲ್ಲಿ ಬಂತು ʼಆತ್ಮ ನಿರ್ಭರ ಗ್ರಾಮ ಪಂಚಾಯಿತಿʼ


PARYAYA: ಶಿವಮೊಗ್ಗ ಬಾನುಲಿಯಲ್ಲಿ ಬಂತು ʼಆತ್ಮ ನಿರ್ಭರ ಗ್ರಾಮ ಪಂಚಾಯ...:   ಶಿವಮೊಗ್ಗ ಬಾನುಲಿಯಲ್ಲಿ ಬಂತು ʼ ಆತ್ಮ ನಿರ್ಭರ ಗ್ರಾಮ ಪಂಚಾಯಿತಿ ʼ ಕಂತು-2 ಬೆಂಗಳೂರು: ರೇಡಿಯೋ ಶಿವಮೊಗ್ಗದಲ್ಲಿ 2023 ನವೆಂಬರ್ 5 ರ ಭಾನುವಾರ ಬೆಳಗ್ಗೆ 8 ಗಂಟೆ...

Wednesday, November 1, 2023

PARYAYA: ಶ್ರೀ ಬಾಲಾಜಿ ಕೃಪಾ ಬಡಾವಣೆ ರಾಜ್ಯೋತ್ಸವ ಸಂಭ್ರಮ

ಶ್ರೀ ಬಾಲಾಜಿ ಕೃಪಾ ಬಡಾವಣೆ ರಾಜ್ಯೋತ್ಸವ ಸಂಭ್ರಮ

ಬೆಂಗಳೂರು: ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ಕನ್ನಡ ರಾಜ್ಯೋತ್ಸವ ಮತ್ತು ಕರ್ನಾಟಕ ನಾಮಕರಣದ ಸುವರ್ಣ ಮಹೋತ್ಸವವನ್ನು ೨೦೨೩ ನವೆಂಬರ್‌ ೦೧ರ ಬುಧವಾರ ಆಚರಿಸಲಾಯಿತು.

 ಬಡಾವಣೆಯ ಹಿರಿಯ ಸದಸ್ಯ, ಕೆಜಿಎಫ್‌ ಗೋಲ್ಡನ್‌ ವ್ಯಾಲಿ ಎಜುಕೇಷನ್‌ ಟ್ರಸ್ಟ್‌ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಎಚ್.‌ ಆರ್.‌ ಸೇತೂರಾಂ ಅವರು ಕನ್ನಡ ಧ್ವಜಾರೋಹಣ ನೆರವೇರಿಸಿದರು.

ಬೆಸ್ಕಾಂ ಅಸಿಸ್ಟೆಂಟ್‌ ಎಂಜಿನಿಯರ್‌ ಮೊಹಮ್ಮದ್‌ ಇರ್ಫಾನ್‌ ಅಲಿ ಅವರು ಈ ಸಂದರ್ಭದಲ್ಲಿ ಹಾಜರಿದ್ದು ಬಡಾವಣೆಯ ನಿವಾಸಿಗಳಿಗೆ ವಿದ್ಯುತ್‌ ಸರಬರಾಜಿಗೆ ಸಂಬಂಧಿಸಿದ ಮಾಹಿತಿ ಒದಗಿಸಿದರು.

ಸಂಘದ ಅಧ್ಯಕ್ಷ ರಾಜೇಶ ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ನೆತ್ರಕೆರೆ ಉದಯಶಂಕರ ಸ್ವಾಗತಿಸಿದರು. ಸಹ ಕಾರ್ಯದರ್ಶಿ ಬಿಎಲ್.‌ ಪ್ರಭಾವತಿ ಕಾರ್ಯಕ್ರಮ ನಿರ್ವಹಿಸಿದರು. ಉಪಾಧ್ಯಕ್ಷ ಪ್ರವೀಣ್‌ ‌ಕುಮಾರ್ ವಂದನೆಗಳನ್ನು ಸಲ್ಲಿಸಿದರು.

ಬಡಾವಣೆಯ ಮಹಳೆಯರು, ಹಿರಿಯ ಸದಸ್ಯರು ಸೇರಿದಂತೆ ಬಡಾವಣೆಯ ನಿವಾಸಿಗಳು ಅತ್ಯುತ್ಸಾಹದೊಂದಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಬಡಾವಣೆಯ ಹಿರಿಯ ಸದಸ್ಯ ನ್ಯಾಯವಾದಿ ಮುನಿರಾಜು ಅವರು ಉಪಾಹಾರದ ವ್ಯವಸ್ಥೆ ಮಾಡಿದ್ದರು.


ಧ್ವಜಾರೋಹಣ ಎಚ್. ಆರ್.‌ ಸೇತೂರಾಂ ಅವರಿಂದ.

ಅಧ್ಯಕ್ಷೀಯ ಭಾಷಣ ರಾಜೇಶ ಕೆ. ಹೆಗಡೆ ಅವರಿಂದ.

ಬೆಸ್ಕಾಂ ಅಸಿಸ್ಟೆಟ್‌ ಎಂಜಿನಿಯರ್‌ ಮೊಹಮ್ಮದ್‌ ಇರ್ಫಾನ್‌ ಅಲಿ ಅವರ ಜೊತೆಗೆ ಸಂವಾದ ಕಾರ್ಯಕ್ರಮದಲ್ಲಿ ಇರ್ಫಾನ್‌ ಅವರಿಂದ ಎರಡು ಮಾತು.

PARYAYA: ಶ್ರೀ ಬಾಲಾಜಿ ಕೃಪಾ ಬಡಾವಣೆ ರಾಜ್ಯೋತ್ಸವ ಸಂಭ್ರಮ: ಶ್ರೀ ಬಾಲಾಜಿ ಕೃಪಾ ಬಡಾವಣೆ ರಾಜ್ಯೋತ್ಸವ ಸಂಭ್ರಮ ಬೆಂಗಳೂರು: ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ಕನ್ನಡ ರಾಜ್ಯೋತ್ಸವ ಮತ್ತು ಕರ್ನಾಟಕ...