Thursday, June 4, 2015

ಇಂದಿನ ಇತಿಹಾಸ History Today ಜೂನ್ 03

ಇಂದಿನ ಇತಿಹಾಸ History Today ಜೂನ್ 03
ಇಂದಿನ ಇತಿಹಾಸ

ಜೂನ್ 03


2016: ಮಥುರಾ (ಉತ್ತರ ಪ್ರದೇಶ) : ನಗರದ ಜವಾಹರ್ಬಾಗ್ನಲ್ಲಿ ಹಿಂದಿನ ದಿನ ಅಕ್ರಮ ಒತ್ತುವರಿ ದಾರರನ್ನು ತೆರವುಗೊಳಿಸುವ ಸಂದರ್ಭ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿ 320ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆಘಟನೆಯಲ್ಲಿ ಓರ್ವ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಪೇದೆ ಸೇರಿದಂತೆ ಒಟ್ಟು 24 ಮಂದಿ ಸಾವಿಗೀಡಾಗಿದ್ದಾರೆ.   ಅಲಹಾಬಾದ್ ಹೈಕೋರ್ಟ್ ಆದೇಶದನ್ವಯ ಜವಾಹರ್ಬಾಗ್ನಲ್ಲಿ ಅಕ್ರಮ ಒತ್ತುವರಿದಾರರನ್ನು ತೆರವುಗೊಳಿಸುವ ಸಂದರ್ಭ ನಡೆದ ಗಲಭೆಯಲ್ಲಿ ಓರ್ವ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಪೇದೆ ಸೇರಿದಂತೆ ಒಟ್ಟು 21 ಮಂದಿ ಸಾವಿಗೀಡಾದರು. ಸ್ವಾಧೀನಭಾರತ್ ಸುಭಾಷ್ ಸೇನಾ ಹೆಸರಿನ ಸಂಘಟನೆತಾವು ಸುಭಾಷ್ಚಂದ್ರ ಬೋಸ್ ಅನುಯಾಯಿಗಳು ಎಂದು ಹೇಳಿಕೊಂಡು 280 ಎಕರೆ ಪ್ರದೇಶವನ್ನು ಎರಡು ವರ್ಷಗಳಿಂದ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದರು. ಅವರನ್ನು ಜಿಲ್ಲಾಡಳಿತ ತೆರವುಗೊಳಿಸಲು ಮುಂದಾಗಿತ್ತು ಸಂದರ್ಭ ತೆರವು ಪ್ರಕ್ರಿಯೆಗೆ ಅಡ್ಡಿ ಉಂಟುಮಾಡಿದ ಒತ್ತುವರಿದಾರರುಪೊಲೀಸರ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದರು ಸಂದರ್ಭ ಕಾರ್ಯಾಚರಣೆ ನೇತೃತ್ವ ವಹಿಸಿದ್ದ ಎಸ್ಪಿ ಮುಕುಲ್ ದ್ವಿವೇದಿ ಹಾಗೂ ಅವರ ಬೆಂಗಾವಲಿಗಿದ್ದ ಪೇದೆ ಸಂತೋಷ್ ಯಾದವ್ ತಲೆಗೆ ಬಲವಾದ ಗುಂಡೇಟು ಬಿದ್ದು ಸಾವಿಗೀಡಾದರು. ಈ ಪ್ರದೇಶದಲ್ಲಿದ್ದ ಗುಡಿಸಲುಗಳಿಗೆ ಬೆಂಕಿ ಹಚ್ಚಿದ ಗಲಭೆಕೋರರು ಪರಿಸ್ಥಿತಿಯನ್ನು ಇನ್ನಷ್ಟು ವಿಷಮಗೊಳಿಸಿದರು.

2016: ನವದೆಹಲಿ: ಗೂಗಲ್ ಸ್ವಯಂಚಾಲಿತ ವಾಹನಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿ ತುರ್ತು ಸಂದರ್ಭದಲ್ಲಿ ಹೇಗೆ ಕಾರ್ಯನಿರ್ವಹಿಸಬೇಕು ಮತ್ತು ಸೌಮ್ಯವಾದ ಹಾರ್ನ್ ಕಾರುಗಳಲ್ಲಿ ಅಳವಡಿಕೆ ಮಾಡಲಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿತು. ಯಾವ ಸಂದರ್ಭದಲ್ಲಿ ಕಾರಿನ ಹಾರ್ನ್ ಮಾಡಬೇಕು ಎಂಬ ನಿಯಮವನ್ನು ಕಾರಿನಲ್ಲಿ ಗೂಗಲ್ ಇಂಜಿನಿಯರುಗಳು ಅಳವಡಿಸಿದ್ದಾರೆತುರ್ತು ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲು ಕಾರುಗಳಲ್ಲಿ ಜನರಿಗೆ ಚಿರಪರಿಚಿತ ಶಬ್ದದ ಮಾದರಿಗಳನ್ನು ನೀಡಲಾಗಿದೆ.
ಪರೀಕ್ಷೆಯಲ್ಲಿ ಅರಿಯಾಗಿ ಕಾರ್ಯನಿರ್ವಹಿಸಿದ ಗೂಗಲ್ ಕಾರ್ಮುಂಬರುವ ದಿನಗಳಲ್ಲಿ ಬೇರೆ ಕಾರುಗಳ ಶಬ್ದ ಮತ್ತು ಅದನ್ನು ಗ್ರಹಿಸುವ ಜವಬ್ದಾರಿಯನ್ನು ಸಂಶೋಧಿಸಿ  ಕಾರುಗಳಲ್ಲಿ ಅಳವಡಿಸಲಾಗುವುದು ಎಂದು ಕಂಪೆನಿ ತಿಳಿಸಿತು.

2016: ನವದೆಹಲಿ: ಅಂತಾರಾಷ್ಟ್ರೀಯ ಓಲಿಂಪಿಕ್ ಕಮಿಟಿ (ಐಓಸಿಸದಸ್ಯ ಸ್ಥಾನಕ್ಕಾಗಿ ಭಾರತದ ನೀತಾ ಅಂಬಾನಿ ನಾಮನಿರ್ದೇಶನಗೊಂಡರು. ಮುಂಬರುವ ಅಗಸ್ಟ್ 2 ರಿಂದ 4 ರವರೆಗೆ ಬ್ರೆಜಿಲ್ ರಿಯೋ ಡಿ ಜನೈರೋದಲ್ಲಿ 129ನೇ ಅವಧಿಗೆ ನಡೆಯುವ ಚುನಾವಣೆಗೆ ಭಾರತದಿಂದ ಪ್ರಥಮ ಮಹಿಳಾ ಅಭ್ಯರ್ಥಿಯಾಗಿ ರಿಲಯನ್ಸ್ ಫೌಂಡೇಶನ್ ಒಡತಿ ನೀತಾ ಅಂಬಾನಿ ಸ್ಪರ್ಧಿಸಲಿದ್ದಾರೆಒಂದು ವೇಳೆ ಅವರು ವಿಜೇತರಾದರೆ ನೀತಾ 70 ವರ್ಷ ಪ್ರಾಯದವರಾಗುವರೆಗೂ ಸದಸ್ಯೆಯಾಗಿ ಮುಂದುವರೆಯಬಹುದು. ಹಲವು ವರ್ಷಗಳಿಂದ ಶಿಕ್ಷಣ ಮತ್ತು ಕ್ರೀಡಾ ವಿಭಾಗಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿರುವ ನೀತಾ ತನ್ನ ಹೆಸರನ್ನು ಐಓಸಿ ಚುನಾವಣೆಗೆ ಶಿಫಾರಸು ಮಾಡಿದ್ದಕ್ಕೆ ಸಂತಸ ವ್ಯಕ್ತಪಡಿಸಿದರು. ಕ್ರೀಡೆಯಲ್ಲಿ ಯಾವುದೇ ಸಂಸ್ಕೃತಿಭಾಷೆ ತೊಡಕು ಇಲ್ಲದೆ  ಪೀಳಿಗೆಯ ಜನರನ್ನು ಒಟ್ಟುಗೂಡಿಸುತ್ತದೆ ಎಂದು ಅವರು ಹೇಳಿದರು.  ಓಲಿಂಪಿಕ್ ಕಮಿಟಿಗೆ ಸರ್ ದೊರಬ್ಜಿ ಟಾಟಾ ಭಾರತದ ಪ್ರಥಮ ಪ್ರತಿನಿಧಿಯಾಗಿ ಆಯ್ಕೆಗೊಂಡಿದ್ದರು, 2000-2014 ಅವಧಿಗೆ ರಾಜಾ ರಣಧೀರ್ ಸಿಂಗ್ ಓಲಿಂಪಿಕ್ ಗೌರವ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆಓಲಿಂಪಿಕ್ ಸ್ವಯಂಸೇವಾ ಪ್ರತಿನಿಧಿಯಾಗಿ ತಮ್ಮ ದೇಶದಲ್ಲಿ ಓಲಿಂಪಿಕ್ ನಡೆಯನ್ನು ಸಾರುವ ವಿಭಾಗದಲ್ಲಿ ನೀತಾ ಅಂಬಾನಿ ನಾಮನಿರ್ದೇಶನಗೊಂಡರು.

2016: ತಿರುವನಂತಪುರಂಕೇರಳದ 14ನೇ ವಿಧಾನ ಸಭೆಯ ನೂತನ ಸಭಾಧ್ಯಕ್ಷರಾಗಿ ಪಿ.ಶ್ರೀರಾಮಕೃಷ್ಣನ್ ಆಯ್ಕೆಯಾದರುಅವರು 92 ಮತಗಳನ್ನು ಪಡೆದು ಪ್ರತಿಸ್ಪರ್ಧಿ ವಿ.ಪಿ ಸಜೀಂದ್ರನ್ ವಿರುದ್ಧ ಜಯಗಳಿಸಿದರುಸಜೀಂದ್ರನ್ ಅವರಿಗೆ 46 ಮತಗಳು ಮಾತ್ರ ಲಭಿಸಿದವುನೂತನ ಸಭಾಧ್ಯಕ್ಷರಿಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಶುಭ ಕೋರಿಪಿ.ಶ್ರೀರಾಮಕೃಷ್ಣನ್ ಅವರು ಎಲ್ಡಿಎಫ್ಅನ್ನು ಮಾತ್ರ ಪ್ರತಿನಿಧಿಸುತ್ತಿಲ್ಲ ಬದಲು ವಿಧಾನ ಸಭೆಯನ್ನೇ ಪ್ರತಿನಿಧಿಸಲಿದ್ದಾರೆ ಎಂದರು.

2016: ನವದೆಹಲಿ: ಕಳೆದ 30 ವರ್ಷಗಳ ಅವಧಿಯಲ್ಲಿ ರಾಷ್ಟ್ರಾದ್ಯಂತ ಹರಿಯಾಣದ ಮೂರನೇ ಎರಡರಷ್ಟು ಗಾತ್ರದ (15,000 ಚದರ ಕಿ.ಮೀ.ಗಳುಅರಣ್ಯಗಳು ಅತಿಕ್ರಮಣಗಳಿಂದಾಗಿ ನಾಶವಾಗಿದ್ದರೆ, 23,716 ಕೈಗಾರಿಕಾ ಯೋಜನೆಗಳಿಗಾಗಿ 14,000 ಚದರ ಕಿಮೀಯಷ್ಟು ಪ್ರದೇಶದ ಕಾಡುಗಳು ನಾಶವಾಗಿವೆಕೃತಕ ಕಾಡುಗಳು  ನೈಸರ್ಗಿಕ ಕಾಡುಗಳಿಗೆ ಪರ್ಯಾಯವಾಗುವ ಸಾಧ್ಯತೆಗಳೇ ಇಲ್ಲ ಸರ್ಕಾರವೇ ಬಹಿರಂಗ ಪಡಿಸಿತು.  ಮೂವತ್ತು ವರ್ಷಗಳಲ್ಲಿ ನಾಶವಾಗಿರುವ 14,000 ಚದರ ಕಿಮೀ ಅರಣ್ಯ ಪ್ರದೇಶದಲ್ಲಿ ಅತ್ಯಂತ ಹೆಚ್ಚಿನ ಪ್ರದೇಶವನ್ನು ಅಂದರೆ 4,947 ಚದರ ಕಿಮೀ ಪ್ರದೇಶವನ್ನು ಗಣಿಗಾರಿಕೆಗಾಗಿ ನೀಡಲಾಗಿದೆರಕ್ಷಣಾ ಯೋಜನೆಗಳಿಗೆ 1594 ಚದರ ಕಿ.ಮೀಮತ್ತು ಹೈಡ್ರೋ ಇಲೆಕ್ಟ್ರಿಕ್ ಯೋಜನೆಗಳಿಗಾಗಿ 1351 ಚದರ ಕಿಮೀಗಳನ್ನು ನೀಡಲಾಗಿದೆ ಯೋಜನೆಗಳಿಗಾಗಿ ಅರಣ್ಯ ಪ್ರದೇಶವನ್ನು ನೀಡುವಾಗ ವಿಧಿಸಲಾಗುವ ಎಲ್ಲಾ ಷರತ್ತುಗಳನ್ನೂ ವ್ಯಾಪಕವಾಗಿ ಉಲ್ಲಂಘಿಸಲಾಗಿದೆ ಎಂದು ಸರ್ಕಾರಿ ಲೆಕ್ಕ ಪತ್ರ ಪರಿಶೋಧಕರು ಹೇಳಿದರೆತಜ್ಞರ ಪ್ರಕಾರ ಸರ್ಕಾರ ಒದಗಿಸಿರುವ  ಮಾಹಿತಿಗಳೆಲ್ಲಾ ಕಡಿಮೆ ಅಂದಾಜಿನ ಮಾಹಿತಿಗಳು. ‘ಸರ್ಕಾರದ ಮಾಹಿತಿ ಸಮುದ್ರದಲ್ಲಿ ಮುಳುಗಿರುವ ಮಂಜುಗಡ್ಡೆಯ ತುದಿ ಮಾತ್ರ’ ಎಂದು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ (ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ಪರಿಸರ ವಿಜ್ಞಾನ ಕೇಂದ್ರದ ಪ್ರಾಧ್ಯಾಪಕ ಟಿ.ವಿರಾಮಚಂದ್ರ ಹೇಳುತ್ತಾರೆನಮ್ಮ ಅಧ್ಯಯನದ ಪ್ರಕಾರ ಉತ್ತರಮಧ್ಯ ಹಾಗೂ ದಕ್ಷಿಣದ ಪಶ್ಚಮ ಘಟ್ಟಗಳ ವ್ಯಾಪ್ತಿ ಶೇಕಡಾ 2.84, 4.38 ಮತ್ತು 5.77 ರಷ್ಟು ಇಳಿಮುಖವಾಗಿದೆ ಎಂದು ಅವರು ಹೇಳುತ್ತಾರೆರಸ್ತೆಯಿಂದ ಅಣೆಕಟ್ಟುವರೆಗಿನ ವಿವಿಧ ಯೋಜನೆಗಳಿಗಾಗಿ ಈಗ 25,000 ಹೆಕ್ಟೇರ್ (250 ಚದರ ಕಿಮೀಕಾಡು ನಷ್ಟವಾಗುತ್ತಿದೆಎಂದು ಅವರ ಅಭಿಪ್ರಾಯ.

2016: ಕೇಂದ್ರಪಾರಾ: ಓಡಿಶಾ ರಾಜ್ಯದ ಎಮ್ ಪ್ರವೇಶಿಸಲು ನಡೆಸುವ ಪೂರ್ವಭಾವಿ ಪರೀಕ್ಷೆ (ಓಜೆಇಇಯಲ್ಲಿ ಪುಸ್ತಕ ಬೈಂಡಿಂಗ್ ಮಾಡುವವರ ಮಗನಾದ ಶಾದಾಬ್ ಅನ್ವರ್(22) ಎಂಬಾತ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ.
ಎಸ್ ಕೆ ಫಲಾವುದ್ದೀನ್ ಎಂಬುವರ ಮಗ ಅನ್ವರ್ ವಿದ್ಯಾಭ್ಯಾಸಕ್ಕೆ ನಗರದಲ್ಲಿದ್ದ ತುಣುಕು ಜಾಗವನ್ನು ಮಾರಿ ಖರ್ಚು ವೆಚ್ಚ ನಿಭಾಯಿಸಿದ್ದಕೇಂದ್ರಪಾರಾದ ಕಾಲೇಜೊಂದರಲ್ಲಿ ವಾಣಿಜ್ಯ ವಿಷಯವನ್ನು ಪ್ರಥಮ ದರ್ಜೆಯಲ್ಲಿ ಉತ್ತೀರ್ಣನಾಗಿದ್ದ ಅನ್ವರ್ ಎಮ್ ಮಾಡಲು ಇಚ್ಛಿಸಿ ಪ್ರವೇಶ ಪರೀಕ್ಷೆ ಎದುರಿಸಿದ್ದನಮ್ಮ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿ ರಾಜ್ಯಕ್ಕೆ ಪ್ರಥಮ ರ್ಯಾಂಕ್ ಪಡೆದಿರುವ ಅನ್ವರ್ ಸಾಧನೆ ಅಪಾರವಾದದ್ದು ಎಂದು ಕೇಂದ್ರಪಾರಾ ಕಾಲೇಜಿನ ಪ್ರಿನ್ಸಿಪಾಲ್ ಸಚ್ಚಿದಾನಂದ ಸದಂಗಿ ಹೇಳಿದರು. 10 ನೇ ತರಗರತಿಯಿಂದ ಓದಿನಲ್ಲಿ ಮುಂದಿದ್ದ ಅನ್ವರ್ ಓದಿಗೆ ಬೆನ್ನೆಲುಬಾಗಿ ನಿಂತ ತಂದೆ ಫಲಾವುದ್ದೀನ್ ದಿಟ್ಟತನಕ್ಕೆ ಸರಿಯಾದ ಪ್ರತಿಫಲ ದೊರಕಿಸಿದ. ಓದಿನಲ್ಲಿ ಶ್ರದ್ದೆಏಕಾಗ್ರತೆ ಅವಶ್ಯ ಅದರಿಂದ ಯಾವ ಗುರಿಯನ್ನಾದರೂ ಮುಟ್ಟಬಹುದುಪ್ರವೇಶ ಪರೀಕ್ಷೆಯ ಮೊದಲ ರ್ಯಾಂಕ್ ನನ್ನಲ್ಲಿ ಮತ್ತಷ್ಟು ಶಕ್ತಿ ತುಂಬಿದ್ದುಉನ್ನತ ಮಟ್ಟಕ್ಕೇರಲು ನನ್ನನ್ನು ಹುರಿದುಂಬಿಸಿದೆ ಎಂದು ಟಾಪರ್ ಅನ್ವರ್ ಹೇಳಿದ.
 2016: ಕೃಷ್ಣಗಿರಿ: ಕರ್ನಾಟಕದಿಂದ ತೆರಳುತ್ತಿದ್ದ ಕಡಲೆಕಾಯಿ ತುಂಬಿದ ಲಾರಿ ಚಾಲಕನ ನಿರ್ಲಕ್ಷ್ಯ ಚಾಲನೆಯಿಂದಾಗಿ, 33 ಮಂದಿ ಪ್ರಯಾಣಿಕರಿದ್ದ ಖಾಸಗಿ ಬಸ್ ಮತ್ತು ಕಾರಿಗೆ ಡಿಕ್ಕಿ ಹೊಡೆದು 15 ಮಂದಿ ಮೃತರಾಗಿ, 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 7 ಮೇಲುಮಲೈಯಲ್ಲಿ ಘಟಿಸಿತು.  12 ವರ್ಷದ ಬಾಲಕಆರು ಮಂದಿ ಮಹಿಳೆ ಸೇರಿದಂತೆ ಒಟ್ಟು 12 ಮಂದಿ ಸಾವಿಗೀಡಾಗಿದ್ದುಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದೆಗಾಯಗೊಂಡವರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಮಾಹಿತಿ ತಿಳಿಸಿತು. ಲಾರಿ ಚಾಲಕ ಹೆದ್ದಾರಿ ರೇಖೆ ಉಲ್ಲಂಘಿಸಿ ಕ್ರಾಸ್ ಮಾಡಿದ ಪರಿಣಾಮ  ಘಟನೆ ಸಂಭವಿಸಿದೆ ಎಂದು ಹೇಳಲಾಯಿತು.

2016: ನವದೆಹಲಿ: ಕೇಂದ್ರ ಇಂಧನ ಸಚಿವ ಪಿಯೂಷ್ ಗೋಯಲ್ ಮತ್ತು ಮಾಜಿ ವಿತ್ತ ಸಚಿವ ಪಿ.ಚಿದಂಬರಂ ಮಹಾರಾಷ್ಟ್ರದಿಂದ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾದರು. ಅಂತೆಯೇ ಆಂಧ್ರಪ್ರದೇಶದಿಂದ ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಹಾಗೂ ಕೇಂದ್ರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ವೈಸತ್ಯನಾರಾಯಣ ಚೌಧರಿ ಅವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾದರು. ನಾಮಪತ್ರ ಹಿಂಪಡೆಯಲು ಈದಿನ ಕಡೆ ದಿನವಾಗಿತ್ತು ನಾಲ್ವರು ಅಭ್ಯರ್ಥಿಗಳ ಪ್ರತಿಸ್ಪರ್ಧಿಗಳು ಕಡೇ ಗಳಿಗೆಯಲ್ಲಿ ನಾಮಪತ್ರ ಹಿಂಪಡೆದಿದ್ದರಿಂದಾಗಿ ಅವಿರೋಧವಾಗಿ ಆಯ್ಕೆಯಾದರು. ಉಳಿದಂತೆ ಮಹಾರಾಷ್ಟ್ರದಿಂದ ಮಾಜಿ ಕೇಂದ್ರ ಸಚಿವ ಪ್ರಫುಲ್ ಪಟೇಲ್(ಎನ್ಸಿಪಿ), ಬಿಜೆಪಿಯ ವಿನಯ್ ಸಹಸ್ರಬುದ್ಧೆ ಶಿವಸೇನೆಯ ಸಂಜಯ್ ರಾವತ್ಬಿಜೆಪಿಯ ವಿಕಾಸ್ ಆಯ್ಕೆಯಾದರು.

2016: ನವದೆಹಲಿ: ಕಳೆದ ವರ್ಷ ಡಿಸೆಂಬರ್ನಲ್ಲಿ ಬಂಧಿಸಲಾಗಿದ್ದ ಐಸಿಸ್ (ಐಎಸ್ಐಎಸ್ಭಯೋತ್ಪಾದಕ ಮೊಹಮ್ಮದ್ ನಾಸೇರ್ ಪಾಕೀರ್ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎತನ್ನ ಮೊದಲ ದೋಷಾರೋಪ ಪಟ್ಟಿಯನ್ನು (ಚಾಜ್ಷೀಟ್ಸಲ್ಲಿಸಿತು. ಭಾರತದಲ್ಲಿ ಐಸಿಸ್ಗೆ ಸೇರಿಸಲು ಯುವಕರನ್ನು ನೇಮಿಸುವ ಹಾಗೂ ಭಯೋತ್ಪಾದಕ ಕೃತ್ಯಗಳನ್ನು ಎಸಗಲು ಸಂಚು ರೂಪಿಸಿದ ಆರೋಪಗಳನ್ನು ನಾಸೇರ್ ವಿರುದ್ಧ ಎನ್ಐಎ ದೋಷಾರೋಪ ಪಟ್ಟಿಯಲ್ಲಿ ಹೊರಿಸಲಾಯಿತು.  23 ಹರೆಯದ ತಮಿಳುನಾಡು ಮೂಲದ ನಾಸೇರ್ನನ್ನು ಸುಡಾನ್ನಿಂದ ಗಡೀಪಾರು ಮಾಡಲಾಗಿತ್ತುಕಳೆದ ವರ್ಷ ಡಿಸೆಂಬರ್ 11ರಂದು ಆತನನ್ನು ಬಂಧಿಸಲಾಗಿತ್ತು.

2016: ಅಥೆನ್ಸ್: ಮೆಡಿಟರೇನಿಯನ್ ಸಮುದ್ರದಲ್ಲಿ ಸಂಭವಿಸಿದ ಮೂರು ದೋಣಿ ದುರಂತಗಳಲ್ಲಿ 700ಕ್ಕೂ ಹೆಚ್ಚು ಮಂದಿ ನಿರಾಶ್ರಿತು ಜಲಸಮಾಧಿಯಾಗಿದ್ದಾರೆ ಎಂದು ಶಂಕಿಸಲಾಯಿತು. ಯುರೋಪಿಗೆ ಆಶ್ರಯ ಕೇಳಿ ಬರುತ್ತಿದ್ದವರ ಪಾಲಿನ ಅತಿಭೀಕರ ದುರಂತವಿದು ಎಂದು ಹೇಳಲಾಯಿತು. ಜೂನ್ 1, 2, 3ರಂದು ಈ ಮೂರು ದುರಂತಗಳು ಸಂಭವಿಸಿವೆ ಎನ್ನಲಾಯಿತು.  ಲಿಬಿಯಾದಿಂದ ಇಟಲಿಗೆ ಎಂಟು ದಿನಗಳ ಅವಧಿಯಲ್ಲಿ 13,000ಕ್ಕೂ ಹೆಚ್ಚು ಮಂದಿ ನಿರಾಶ್ರಿತರು ಸಮುದ್ರಮಾರ್ಗವಾಗಿ ಹೊರಟಿದ್ದಾಗ  ದುರಂತಗಳು ಸಂಭವಿಸಿವೆ ಎನ್ನಲಾಯಿತು. ಸಂಪೂರ್ಣ ಅರಾಜಕ ಪರಿಸ್ಥಿತಿ ಇದ್ದ ಕಾರಣ ದುರಂತದ ವಿಚಾರ ತಡವಾಗಿ ಬೆಳಕಿಗೆ ಬಂದಿದ್ದು, 2015 ಏಪ್ರಿಲ್ ಬಳಿಕದ ಅತ್ಯಂತ ಭೀಕರ ದುರಂತ ಇದು ಎಂದು ವಿಶ್ವಸಂಸ್ಥೆ ನಿರಾಶ್ರಿತರ ಸಂಸ್ಥೆ ಹೇಳಿತು.  2015ರಲ್ಲಿ ಎರಡು ಪ್ರತ್ಯೇಕ ಘಟನೆಗಳಲ್ಲಿ 1300 ಜನ ಲಿಬಿಯಾ ಸಮೀಪ ಜಲಸಮಾಧಿಯಾಗಿದ್ದರು.

2016: ಕೊಯಮತ್ತೂರು: ತಮಿಳು ಚಿತ್ರನಟನಿರ್ದೇಶಕ ಬಾಲು ಆನಂದ್ (62) ಅವರು ಶುಕ್ರವಾರ ತೀವ್ರ ಹೃದಯಾಘಾತದಿಂದ ತಮ್ಮ ನಿವಾಸದಲ್ಲಿ ನಿಧನರಾದರು ಎಂದು ಕುಟುಂಬ ಮೂಲಗಳು ತಿಳಿಸಿದವು. ಸುಮಾರು 100 ಚಿತ್ರಗಳಲ್ಲಿ ನಟಿಸಿದ್ದ ಹಾಗೂ ಕೆಲವು ತಮಿಳು ಚಿತ್ರಗಳನ್ನು ನಿರ್ದೇಶಿಸಿದ್ದ ಆನಂದ್ ಅವರಿಗೆ ಕಲಾಮ್ಾಳ್ಯಂನ ತಮ್ಮ ನಿವಾಸದಲ್ಲಿ ಇದ್ದಾಗ ಎದೆ ನೋವು ಕಾಣಿಸಿಕೊಂಡಿತುತತ್ಕ್ಷಣವೇ ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಯೊಂದಕ್ಕೆ ಒಯ್ಯಲಾಯಿತುಆದರೆ ಮಾರ್ಗ ಮಧ್ಯದಲ್ಲೇ ಅವರು ಕೊನೆಯುಸಿರು ಎಳೆದರು.  
ಸತ್ಯರಾಜ್ ಜೊತೆಗೆ ಆನಂದ್ ಅವರು ನಟಿಸಿದ್ದ ‘ಅಣ್ಣಾನಗರ ಪಸ್ಟ್ ಸ್ಟ್ರೀಟ್’ ಹಾಗೂ ವಿಜಯಕಾಂತ್ ಜೊತೆಗೆ ನಟಿಸಿದ್ದ ‘ನಾನೇ ರಾಜನಾನೇ ಮಂತ್ರಿ’ ಚಿತ್ರಗಳು ಅತ್ಯಂತ ಜನಪ್ರಿಯವಾಗಿದ್ದವುಅವರು ಪತ್ನಿಪುತ್ರ ಹಾಗೂ ಪುತ್ರಿಯನ್ನು ಅಗಲಿದರು.
2016: ನ್ಯೂಯಾರ್ಕ್ಪ್ರತಿನಿತ್ಯ ಆಕ್ರೋಡು ಇಲ್ಲವೇ ಆಕ್ರೋಟ (ವಾಲ್ನಟ್ಸೇವಿಸುವ ಮೂಲಕ ಕರುಳಿನ (ಕೋಲನ್) ಕ್ಯಾನ್ಸರನ್ನು ತಡೆಯಬಹುದು ಎಂದು ಹೊಸ ಸಂಶೋಧನೆಯೊಂದರಿಂದ ಬೆಳಕಿಗೆ ಬಂದಿತು.  ಪ್ರತಿದಿನ 28 ಗ್ರಾಮ್ಷ್ಟು ಆಕ್ರೋಡು ಸೇವಿಸುತ್ತಿದ್ದರೆ ಕರುಳಿನ ಕ್ಯಾನ್ಸರನ್ನು ತಡೆಗಟ್ಟಬಹುದುಆಕ್ರೋಡು ಸೇವನೆಯಿಂದ ಕರುಳಿನ ಕ್ಯಾನ್ಸರ್ ಗಡ್ಡೆ ಬೆಳೆಯುವುದು ಕಡಿಮೆಯಾಗುತ್ತದೆ ಎಂಬುದು ಇದೇ ಮೊತ್ತ ಮೊದಲ ಬಾರಿಗೆ ನಮ್ಮ ಸಂಶೋಧನೆಯಿಂದ ಬಾರಿಗೆ ಬೆಳಕಿಗೆ ಬಂದಿದೆ ಎಂದು ಅಮೆರಿಕದ ಯನಿವರ್ಸಿಟಿ ಆಫ್ ಕನೆಕ್ಟಿಕಲ್ ಹೆಲ್ತ್ ಸೆಂಟರ್ ಸಂಶೋಧಕರ ತಂಡದ ಮುಖ್ಯಸ್ಥ ಡೇನಿಯಲ್ ರೋಸೆನ್ ಬರ್ಗ್ ಹೇಳಿದರು.  ತನಗೆ ಬೇಕಾಗುವ ಒಟ್ಟು ಕ್ಯಾಲೋರಿಯಲ್ಲಿ ಶೇಕಡಾ 7ರಿಂದ 10ರಷ್ಟನ್ನು ವಾಲ್ನಟ್ ಸೇವನೆಯಿಂದ ಪಡೆದ ಇಲಿಗಳ ಕರುಳಿನ ಕ್ಯಾನ್ಸರ್ ಗಡ್ಡೆ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಬೆಳೆದದ್ದು ಅಧ್ಯಯನದಿಂದ ಬೆಳಕಿಗೆ ಬಂದಿತು. ಗಂಡು ಇಲಿಗಳಲ್ಲಿ ಇದು ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದು ಸ್ಪಷ್ಟಗೊಂಡಿದೆಆಕ್ರೋಡು ತಿಂದ ಹೆಣ್ಣು ಇಲಿಗಳಿಗಿಂತ ಅಷ್ಟೇ ಪ್ರಮಾಣದಲ್ಲಿ ಆಕ್ರೋಡು ತಿಂದ ಗಂಡು ಇಲಿಗಳಲ್ಲಿ ಕ್ಯಾನ್ಸರ್ ಗಡ್ಡೆ 2.3 ಪಟ್ಟಿನಷ್ಟು ಕಡಿಮೆ ಬೆಳೆದಿತ್ತು ಎಂದು ಸಂಶೋಧಕರು ಹೇಳಿದರು. ಇಲಿಗಳು ತಿಂದ ಆಕ್ರೋಡು ಪ್ರಮಾಣ ಮಾನವರು ಸೇವಿಸುವ ಒಂದು ಔನ್ಸ್ನಷ್ಟು (28.3) ಗ್ರಾಮ್ ಆಕ್ರೋಡು ಪ್ರಮಾಣಕ್ಕೆ ಸಮವಾಗುತ್ತದೆ ಎಂದು ಅಧ್ಯಯನ ತಿಳಿಸಿತು. ಆರೋಗ್ಯ ವಿಷಯಕ್ಕೆ ಸಂಬಂಧಿಸಿದಂತೆ ಆಕ್ರೋಡು ಸೇವನೆಯಿಂದ ಹಲವಾರು ಲಾಭಗಳಿವೆಕರುಳಿನ ಗಡ್ಡೆ ಬೆಳೆಯದಂತೆ ತಡೆಯಲು ಇದು ತುಂಬಾ ಅನುಕೂಲ ಎಂಬುದು ಅಧ್ಯಯನದಿಂದ ಸ್ಪಷ್ಟವಾಗಿದೆ ಎಂದು ಸಂಶೋಧಕರು ಹೇಳಿದರು.

2016: ಮುಂಬೈ: ಮಾಜಿ ಕೇಂದ್ರ ಸಚಿವ ಕಪಿಲ್ ಸಿಬಲ್ ಬಾಲಿವುಡ್ ಸಿನಿಮಾವೊಂದಕ್ಕೆ ಗೀತೆ ಬರೆದಿದ್ದು ಈ ಹಾಡು ಜನಪ್ರಿಯ ಗಾಯಕ ಅರ್ಜಿತ್ ಸಿಂಗ್ ಅವರ ಕಂಠ ಸಿರಿಯಲ್ಲಿ ಮೂಡಿಬರಲಿದೆ. ಸಿತಾರ್ ವಾದಕ ನಿಲಾದ್ರಿ ಕುಮಾರ್ ಸಂಗೀತ ಸಂಯೋಜನೆ ಮಾಡುತ್ತಿರುವ ‘ಶೊರ್ಗಲ್’ ಚಿತ್ರ ಶೀರ್ಷಿಕೆ ಗೀತೆಯಿಂದಲೇ ಸುದ್ದಿ ಮಾಡುತ್ತಿದೆಕವ್ವಾಲಿ ರೂಪದಲ್ಲಿರುವ  ಗೀತೆ ‘ತು ಹಿ ತು’ ಎಂದು ಆರಂಭವಾಗುತ್ತದೆಇಷ್ಟಕ್ಕೆ ತೃಪ್ತರಾಗದ ಕುಮಾರ್ಸಿಬಲ್ ಅವರ ಬಳಿ ಮತ್ತೊಂದು ಗೀತೆಯನ್ನು ಬರೆಯಿಸಿದ್ದಾರೆ ಹಾಡು ‘ತೇರೆ ಬಿನಾ’ ಎಂದು ತೆರೆದುಕೊಳ್ಳುತ್ತದೆ ಹಾಡುಗಳ ಕುರಿತು ಪ್ರತಿಕ್ರಿಯಿಸಿದ ಕಪಿಲ್ ಸಿಬಲ್ ಹಾಡುಗಳು ಶಾಶ್ವತ ಪ್ರಭಾವ ಬೀರುವುದರಲ್ಲಿ ಯಾವುದೇ ಅನುಮಾನವಿಲ್ಲನಾನು ಬರೋಬ್ಬರಿ ಒಂಭತ್ತು ತಿಂಗಳುಗಳ ಸಮಯ ತೆಗೆದುಕೊಂಡು ರಚಿಸಿದ್ದೇನೆಯುವ ಮನಗಳನ್ನು ಪರಿಣಾಮಕಾರಿಯಾಗಿ ತಲುಪುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ತಿಳಿಸಿದರು. ಬಾಲಿವುಡ್ ನಟ ಸಲ್ಮಾನ್ ಖಾನ್ ಕೆಂಗಣ್ಣಿಗೆ ಗುರಿಯಾಗಿದ್ದ ಅರ್ಜಿತ್ ಸಿಂಗ್ ತಮ್ಮ ಕಂಚಿನ ಕಂಠದ ಮೂಲಕ ಮತ್ತೊಮ್ಮೆ ಮೋಡಿ ಮಾಡಲು ತಯಾರಾಗಿದ್ದಾರೆ.

 2009: ಕಾಂಗ್ರೆಸ್ಸಿನ ಹಿರಿಯ ನಾಯಕಿ, ದಲಿತ ಮಹಿಳೆ ಮೀರಾ ಕುಮಾರ್ (64) ಲೋಕಸಭಾಧ್ಯಕ್ಷರಾಗಿ  ಅವಿರೋಧವಾಗಿ ಆಯ್ಕೆ ಆದರು. ಇದರೊಂದಿಗೆ ಮಹಿಳೆ ಮೊದಲ ಬಾರಿಗೆ ಈ ಉನ್ನತ ಸಾಂವಿಧಾನಿಕ ಹುದ್ದೆ ಅಲಂಕರಿಸಿದ ಇತಿಹಾಸವೂ ನಿರ್ಮಾಣವಾಯಿತು. ಮೀರಾ ಕುಮಾರ್ ಲೋಕಸಭೆಯ 16ನೇ ಅಧ್ಯಕ್ಷರಾದರು. ಇವರ ತಂದೆ ಮಾಜಿ ಉಪ ಪ್ರಧಾನಿ ದಿವಂಗತ ಜಗಜೀವನ ರಾಮ್ ಅವರು 25 ವರ್ಷಗಳ ಹಿಂದೆ ಲೋಕಸಭೆಯ ಹಂಗಾಮಿ ಅಧ್ಯಕ್ಷರಾಗಿದ್ದರು. ಯುಪಿಎ ಅಧ್ಯಕ್ಷೆ ಸೋನಿಯಾಗಾಂಧಿ ಮಂಡಿಸಿದ ನಿರ್ಣಯವನ್ನು ಸದನದ ನಾಯಕ ಪ್ರಣವ್ ಮುಖರ್ಜಿ ಅನುಮೋದಿಸಿದರು. ಆ ಬಳಿಕ ಸದಸ್ಯರೆಲ್ಲರೂ ಧ್ವನಿಮತದ ನಡುವೆ ಮೇಜು ಕುಟ್ಟಿ  ನಿರ್ಣಯ ಅಂಗೀಕರಿಸಿದರು. ಇದಕ್ಕೂ ಮೊದಲು, ಪ್ರತಿಪಕ್ಷದ ನಾಯಕ ಎಲ್.ಕೆ. ಅಡ್ವಾಣಿ, ತೃಣಮೂಲ ಕಾಂಗ್ರೆಸ್ಸಿನ ಮಮತಾ ಬ್ಯಾನರ್ಜಿ, ಡಿಎಂಕೆಯ ಟಿ.ಆರ್. ಬಾಲು ಸೇರಿದಂತೆ ವಿವಿಧ ನಾಯಕರು ಪಕ್ಷ ಭೇದ ಮರೆತು ಸಭಾಧ್ಯಕ್ಷ ಸ್ಥಾನಕ್ಕೆ ಮೀರಾ ಕುಮಾರ್ ಅವರ ಹೆಸರನ್ನೇ ಸೂಚಿಸಿ ನಿರ್ಣಯ ಮಂಡಿಸಿದರು. ಭಾರತೀಯ ವಿದೇಶಾಂಗ ಸೇವೆಯ ಮಾಜಿ ಅಧಿಕಾರಿ ಮತ್ತು ಮಾಜಿ ಕೇಂದ್ರ ಸಚಿವೆ ಮೀರಾ ಕುಮಾರ್ ಅವರು ಸಭಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುವುದನ್ನು ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಪ್ರತಿಪಕ್ಷದ ನಾಯಕ ಅಡ್ವಾಣಿ ಮತ್ತಿತರರು ಸ್ವಾಗತಿಸಿದರು.

2009: ಅರುಣ್ ಜೇಟ್ಲಿ ಅವರನ್ನು ರಾಜ್ಯಸಭೆಯಲ್ಲಿ ಪ್ರತಿಪಕ್ಷದ ನಾಯಕರಾಗಿ ಮತ್ತು ಸುಷ್ಮಾ ಸ್ವರಾಜ್ ಅವರನ್ನು ಲೋಕಸಭೆಯಲ್ಲಿ ಪಕ್ಷದ ಉಪ ನಾಯಕರಾಗಿ ಬಿಜೆಪಿಯ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ನೇಮಿಸಿದರು. ಉಭಯ ಸದನಗಳಲ್ಲಿ ಪಕ್ಷದ ಪದಾಧಿಕಾರಿಗಳನ್ನು ಆಯ್ಕೆ ಮಾಡಲು ಬಿಜೆಪಿ ಸಂಸದೀಯ ಪಕ್ಷವು ಲೋಕಸಭೆಯ ಪ್ರತಿಪಕ್ಷದ ನಾಯಕ ಅಡ್ವಾಣಿ ಅವರಿಗೆ  ಅಧಿಕಾರ ನೀಡಿತ್ತು. ರಾಜ್ಯಸಭೆಯಲ್ಲಿ ಪ್ರತಿಪಕ್ಷದ ಉಪ ನಾಯಕರಾಗಿ ಎಸ್.ಎಸ್. ಅಹ್ಲುವಾಲಿಯ, ಪಕ್ಷದ ಮುಖ್ಯ ಸಚೇತಕರಾಗಿ ಮಾಯಾ ಸಿಂಗ್ ಮತ್ತು  ಲೋಕಸಭೆಯಲ್ಲಿ ಪಕ್ಷದ ಮುಖ್ಯ ಸಚೇತಕರಾಗಿ ರಮೇಶ್ ಅವರನ್ನು ನೇಮಿಸಲಾಯಿತು. ರಾಜ್ಯಸಭೆಯಲ್ಲಿ ಪ್ರತಿಪಕ್ಷದ ನಾಯಕರಾಗಿದ್ದ ಮಾಜಿ ಸಚಿವ ಜಸ್ವಂತ್ ಸಿಂಗ್ ಅವರು ಲೋಕಸಭೆಗೆ ಆಯ್ಕೆಯಾಗಿದ್ದರಿಂದ ಈ ಸ್ಥಾನ ತೆರವಾಗಿತ್ತು.

2009: ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾಗಿ ಸತತವಾಗಿ ಎರಡನೇ ಬಾರಿಗೆ ವೈ.ಎಸ್. ರಾಜಶೇಖರ ರೆಡ್ಡಿ ಅವರು ಹೈದರಾಬಾದಿನಲ್ಲಿ ಅಧಿಕಾರ ವಹಿಸಿಕೊಂಡರು. ವೈಎಸ್‌ಆರ್ ಎಂದೇ ಖ್ಯಾತರಾದ ಅವರು ರಾಜ್ಯ ಸಚಿವಾಲಯಕ್ಕೆ ಆಗಮಿಸಿ ಅಧಿಕೃತವಾಗಿ ಮುಖ್ಯಮಂತ್ರಿ ಕಚೇರಿಯಲ್ಲಿ ಕಡತವೊಂದಕ್ಕೆ ಸಹಿ ಹಾಕುವ ಮೂಲಕ ಅಧಿಕಾರ ಸ್ವೀಕರಿಸಿದರು.

2009: ಅಂತಾರಾಷ್ಟ್ರೀಯ ಹಾಕಿ ಫೆಡರೇಷನ್ (ಎಫ್‌ಐಎಚ್) ಒತ್ತಡಕ್ಕೆ ಮಣಿದ ಭಾರತ ಒಲಿಂಪಿಕ್ ಸಂಸ್ಥೆ (ಐಒಎ)ಯು ಕೊನೆಗೂ 'ಹಾಕಿ ಇಂಡಿಯಾ'ದ ಅಸ್ತಿತ್ವವನ್ನು ಅಧಿಕೃತವಾಗಿ ಘೋಷಿಸಿತು. ಭಾರತ ಪುರುಷ ಹಾಗೂ ಮಹಿಳಾ ಹಾಕಿ ಸಂಸ್ಥೆಗಳನ್ನು ಒಳಗೊಂಡಿರುವ 'ಹಾಕಿ ಇಂಡಿಯಾ'ವನ್ನು ಮೇ 20 ರಂದು ರಚಿಸಲಾಯಿತು ಎಂದು ಐಒಎ ಅಧ್ಯಕ್ಷ ಸುರೇಶ್ ಕಲ್ಮಾಡಿ ತಿಳಿಸಿದರು. 15 ದಿನಗಳ ಒಳಗಾಗಿ ಹಾಕಿ ಸಂಸ್ಥೆಯನ್ನು ರಚಿಸುವಂತೆ ಎಚ್ಚರಿಸಿ ಎಫ್‌ಐಎಚ್ ಮೇ 5 ರಂದು ಐಒಎಗೆ ಪತ್ರ ಬರೆದಿತ್ತು. ಭಾರತದಲ್ಲಿ ಎರಡು ಹಾಕಿ ಸಂಸ್ಥೆಗಳು ಅಸ್ತಿತ್ವದಲ್ಲಿರುವುದರ ಬಗ್ಗೆ ಎಫ್‌ಐಎಚ್ ಆತಂಕ ವ್ಯಕ್ತಪಡಿಸಿತ್ತು. ಮಾತ್ರವಲ್ಲ, ಹಾಕಿ ಸಂಸ್ಥೆಯನ್ನು ರಚಿಸದಿದ್ದರೆ ಮುಂದಿನ ವರ್ಷದ ವಿಶ್ವಕಪ್‌ಗೆ ಆತಿಥ್ಯ ವಹಿಸುವ ಮತ್ತು ಎಫ್‌ಐಎಚ್ ನಡೆಸುವ ಟೂರ್ನಿಯಲ್ಲಿ ಆಡುವ ಅವಕಾಶವನ್ನು ಕಳೆದುಕೊಳ್ಳಕಾದೀತು ಎಂದು ಎಚ್ಚರಿಸಿತ್ತು.

2009: ಬ್ರೆಜಿಲ್ ನ ಫೆರ್ನಾಂಡೊ ಡಿ ನೊರೊನಾ ಸಮೀಪದ ಅಟ್ಲಾಂಟಿಕ್ ಸಾಗರದಲ್ಲಿ ಐದು ಕಿ.ಮೀ ವ್ಯಾಪ್ತಿಯಲ್ಲಿ ಚದುರಿ ಬಿದ್ದ ಅವಶೇಷಗಳು 228 ಜನರನ್ನು ಬಲಿತೆಗೆದುಕೊಂಡ ನತದೃಷ್ಟ ಏರ್ ಫ್ರಾನ್ಸ್ ವಿಮಾನದ್ದೇ ಎಂಬುದನ್ನು ಬ್ರೆಜಿಲ್ ಮತ್ತು ಫ್ರಾನ್ಸ್ ದೇಶಗಳು ಖಚಿತಪಡಿಸಿದ್ದು, ಅವಶೇಷಗಳನ್ನು ಸಂಗ್ರಹಿಸುವ ಕಾರ್ಯ ಆರಂಭವಾಯಿತು. ಈ ವಿಷಯವನ್ನು ಬ್ರೆಜಿಲ್‌ನ ರಕ್ಷಣಾ ಸಚಿವ ನೆಲ್ಸನ್ ಜೊಬಿಮ್ ಅವರು ರಿಯೊ ಡಿ ಜನೈರೋದಲ್ಲಿ ಹಾಗೂ ಪ್ಯಾರಿಸ್‌ನಲ್ಲಿ ಹಿರಿಯ ಸೇನಾಧಿಕಾರಿ ಕ್ರಿಸ್ಟೋಫೆ ಪ್ರಝೂಕ್ ತಿಳಿಸಿದರು.

2009: ಎಲ್ಲ ವಯೋಮಾನದ ಆಕರ್ಷಣೆ ಮತ್ತು ಕುತೂಹಲದ ವಸ್ತುವಾಗಿರುವ ಮೊಬೈಲ್‌ಗಳ ರಿಂಗ್‌ಟೋನ್ ಗಮನ ಸೆಳೆಯುವುದರ ಜೊತೆಗೆ ಸ್ಮರಣ ಶಕ್ತಿಯನ್ನೂ ಕಡಿಮೆ ಮಾಡುತ್ತದೆ ಎಂಬ ಅಂಶವೊಂದು ಬೆಳಕಿಗೆ ಬಂತು. ಸೇಂಟ್‌ ಲೂಯಿಸ್‌ನಲ್ಲಿರುವ ವಾಷಿಂಗ್ಟನ್ ವಿಶ್ವವಿದ್ಯಾಲಯದಲ್ಲಿ ಜಿಲ್ ಶೆಲ್ಟನ್ ನೇತೃತ್ವದಲ್ಲಿ ನಡೆದ ಸಂಶೋಧನೆ ಈ ವಿಷಯವನ್ನು ಬಹಿರಂಗಪಡಿಸಿತು. ಮೊಬೈಲ್‌ನ ತರೇಹವಾರಿ ರಿಂಗ್‌ಟೋನ್‌ಗಳು ತರಗತಿಗಳಲ್ಲಿ ವಿದ್ಯಾರ್ಥಿಗಳ ಗಮನವನ್ನು ಬೇರೆಡೆ ಹೆಚ್ಚು ಸೆಳೆಯುತ್ತವೆ ಎಂಬುದನ್ನು ಇವರು ಪತ್ತೆ ಹಚ್ಚಿದರು. ಮೊಬೈಲ್‌ಗಳಲ್ಲಿ ಇಂದು ಜನಪ್ರಿಯ ಗೀತೆಗಳ ಸಾಲುಗಳನ್ನು ಕರೆಧ್ವನಿಯಾಗಿ ಬಳಸಲಾಗುತ್ತದೆ. ಇದಕ್ಕೆ ಕಿವಿಗೊಡುವವರ ಮೇಲೆ ಕ್ರಮೇಣ ನಕರಾತ್ಮಾಕ ಪರಿಣಾಮ ಬೀರುತ್ತದೆ ಎಂಬುದನ್ನು ಸಹ ಅಧ್ಯಯನದಿಂದ ಕಂಡುಕೊಂಡರು. 'ರಿಂಗ್‌ಟೋನ್‌ನಿಂದ ಈ ರೀತಿಯ ತೊಂದರೆಯಾಗುವುದು ಸಾಮಾನ್ಯ ಎನಿಸಿದರೂ, ಜನ ಕ್ರಮೇಣ ತಾವು ಹೊಂದಿದ್ದ ಮಾಹಿತಿಯನ್ನು ಉಳಿಸಿಕೊಳ್ಳುವ ಶಕ್ತಿಯನ್ನೂ ಕಳೆದುಕೊಳ್ಳುವಂತೆ ಮಾಡಿಬಿಡುತ್ತದೆ' ಎಂದು ಶೆಲ್ಟನ್ ಹೇಳುತ್ತಾರೆ. ಮನಃಶಾಸ್ತ್ರ ಪದವಿ ವಿದ್ಯಾರ್ಥಿಗಳ ಮೂಲಕ ಇವರ ಮಾಡಿದ ಅಧ್ಯಯನದ ಪ್ರಕಾರ, ಮೊಬೈಲ್ ರಿಂಗಣಿಸುವ ಪರಿಸರದ ನಡುವೆ ಇದ್ದವರು ಶೇ 25 ರಷ್ಟು ಕಡಿಮೆ ಅಂಕ ಪಡೆದಿದ್ದರು. 'ಬಹಳಷ್ಟು ಜನ ಸಾರ್ವಜನಿಕ ಸ್ಥಳದಲ್ಲಿ ಮೊಬೈಲ್ ರಿಂಗ್‌ಟೋನ್‌ಗಳಿಂದ ಏನು ಮಹಾ ತೊಂದರೆಯಾಗುತ್ತದೆ ಎಂದು ಅಂದುಕೊಂಡಿರುತ್ತಾರೆ. ಆದರೆ ಈ ಶಬ್ದ ನಿಜವಾಗಿಯೂ ಮನುಷ್ಯರ ಜೀವನದ ಮೇಲೆ ಗಂಭೀರವಾದ ಪರಿಣಾಮ ಬೀರುತ್ತವೆ' ಎಂಬುದು ಶೆಲ್ಟನ್ ಅಭಿಪ್ರಾಯ.

2009: ವಿಶೇಷ ಆರ್ಥಿಕ ವಲಯಗಳ ರಚನೆಗೆ ಸಂಬಂಧಿಸಿದಂತೆ ಒಂಬತ್ತು ನೂತನ ಬೇಡಿಕೆಗಳಿಗೆ ಸರ್ಕಾರವು ಒಪ್ಪಿಗೆ ನೀಡಿತು. ಅದರಲ್ಲಿ ಹೆಚ್ಚಿನವು ಮಾಹಿತಿ ತಂತ್ರಜ್ಞಾನ ಮತ್ತು ಸರಕು ಆಧರಿತ ಸಾಫ್ಟ್‌ವೇರ್ (ಐಟಿಇಎಸ್). ನಂತರದ ಸ್ಥಾನ ಬಯೊಟೆಕ್ನಾಲಜಿಗೆ ಸೇರಿದವುಗಳು. ವಾಣಿಜ್ಯ ಸಚಿವಾಲಯದಲ್ಲಿನ ಅನುಮೋದನೆ ಮಂಡಳಿಯು ಗಲ್ಫ್ ಆಯಿಲ್ ಕಾರ್ಪೊರೇಷನ್, ಎಲ್ ಅಂಡ್ ಟಿ, ಎಂಎಂ ಟೆಕ್‌ಗಳಿಗೆ ಬೆಂಗಳೂರು, ಮುಂಬೈ ಹಾಗೂ ಚೆನಗಮನಾಡುಗಳಲ್ಲಿ  (ಕೇರಳ) ಐಟಿ/ಐಟಿಇಎಸ್ ತೆರಿಗೆ ಮುಕ್ತ ವಲಯಗಳನ್ನು ರಚಿಸಲು ಹಸಿರು ನಿಶಾನೆ ತೋರಿತು.

2008: ಮುಂದಿನ ಲೋಕಸಭಾ ಚುನಾವಣೆ ಮೇಲೆ ಕಣ್ಣಿಟ್ಟ ಬಿಜೆಪಿಯು ರಾಷ್ಟ್ರೀಯ ಪ್ರಜಾತಾಂತ್ರಿಕ  ಮೈತ್ರಿಕೂಟ (ಎನ್ ಡಿ ಎ) ವಿಸ್ತರಣೆಯ ಕಾರ್ಯಾಚರಣೆ ಆರಂಭಿಸಿತು. ಆಡಳಿತಾರೂಢ ಯುಪಿಎ ಶೀಘ್ರವಾಗಿ  ತನ್ನ ರಾಜಕೀಯ  ವರ್ಷಸ್ಸು  ಕಳೆದುಕೊಳ್ಳುತ್ತಿರುವುದು ಎನ್ಡಿಎಗೆ ಅನುಕೂಲಕರ ಎಂದು ಅದು ಪ್ರತಿಪಾದಿಸಿತು. ಕರ್ನಾಟಕ ಮತ್ತು  ಗುಜರಾತ್  ಸೇರಿದಂತೆ ವಿಧಾನಸಭಾ ಚುನಾವಣೆಗಳಲ್ಲಿ ಪಕ್ಷವು ಮಾಡಿರುವ ಉತ್ತಮ ಸಾಧನೆ ಖಂಡಿತವಾಗಿ  ಲೋಕಸಭಾ ಚುನಾವಣೆಯಲ್ಲಿ ಪಕ್ಷವನ್ನು  ಮುಂಚೂಣಿಗೆ ತಂದು ನಿಲ್ಲಿಸಿದ್ದು, ಇದು ಹೆಚ್ಚು ಹೆಚ್ಚು  ಮಿತ್ರಪಕ್ಷಗಳನ್ನು ಆಕರ್ಷಿಸುವುದು ಎಂದು ಬಿಜೆಪಿ ಕಾರ್ಯಕಾರಿಣಿ ನಿರ್ಣಯವು ಭರವಸೆ ವ್ಯಕ್ತಪಡಿಸಿತು.

2008: ಮುದ್ರಣ ಉದ್ಯಮವು ಕಳೆದ ವರ್ಷ ಶೇಕಡಾ 16ರಷ್ಟು  ಬೆಳವಣಿಗೆ ದಾಖಲಿಸಿದ್ದು, ಮಾರುಕಟ್ಟೆಯು 14,900 ಕೋಟಿ ರೂಪಾಯಿಗಳಷ್ಟು  ವಹಿವಾಟು ನಡೆಸಿದೆ ಎಂದು ವಾರ್ತೆ ಮತ್ತು  ಪ್ರಸಾರ ಸಚಿವಾಲಯವು ತಿಳಿಸಿತು. ದೇಶಾದ್ಯಂತ ಸಾಕ್ಷರತೆ ಪ್ರಮಾಣ ಹೆಚ್ಚಿರುವುದು ಭವಿಷ್ಯದಲ್ಲಿ ಮುದ್ರಣ ಮಾಧ್ಯಮ ಇನ್ನಷ್ಟು  ಬೆಳವಣಿಗೆ ಸಾಧಿಸುವ ಅವಕಾಶಗಳನ್ನು  ಹುಟ್ಟು  ಹಾಕಿದೆ ಎಂದು ವಾರ್ತಾ ಮತ್ತು ಪ್ರಸಾರ ಖಾತೆ  ಸಚಿ ಪಿ.ಆರ್. ದಾಸ್ ಮುನ್ಶಿ ಹೇಳಿದರು.

2008: ತಮ್ಮ ರಾಜಕೀಯ  ಗುರು ಕಾನ್ಶೀರಾಮ್ ಪ್ರತಿಮೆಯ ಪಕ್ಕದಲ್ಲಿ ತಾನು `ಕುಳ್ಳಿ'ಯಾಗಿ  ಕಾಣುತ್ತೇನೆ ಎಂಬ ಕಾರಣಕ್ಕಾಗಿ ಕೇವಲ ಎರಡೇ ತಿಂಗಳ ಹಿಂದೆ ಲಖನೌದಲ್ಲಿ ಅನಾವರಣಗೊಳಿಲಾಗಿದ್ದ ತಮ್ಮ ಪ್ರತಿಮೆಯನ್ನು  ಉತ್ತರ ಪ್ರದೇಶದ ಮುಖ್ಯಮಂತ್ರಿ  ಮಾಯಾವತಿ  ಕಿತ್ತು  ಹಾಕಿಸಿದರು. ಎರಡು ತಿಂಗಳ ಹಿಂದೆ ಅನಾವರಣಗೊಳಿಸಲಾಗಿದ್ದ ಪ್ರತಿಮೆಯನ್ನು  ಒಡೆದುಹಾಕಿ ಅದಕ್ಕಿಂತ ದೊಡ್ಡದಾದ ಪ್ರತಿಮೆ  ಸ್ಥಾಪಿಸುವ ಕಾರ್ಯ ಇಲ್ಲಿನ ಗಾಂಧಿ  ಸೇತುವಿನ ಸಾಮಾಜಿಕ ಪರಿವರ್ತನ್ ಪ್ರತೀಕ ಸ್ಥಳದಲ್ಲಿ ಹಿಂದಿನ ರಾತ್ರಿ  ಆರಂಭವಾಯಿತು. ಬಿಎಸ್ಪಿ  ಸ್ಥಾಪಕ ಕಾನ್ಶೀರಾಮ್ ಅವರ ಸನಿಹದಲ್ಲೇ ಸ್ಥಾಪಿಸಲಾಗಿದ್ದ ತಮ್ಮ ಪ್ರತಿಮೆಯನ್ನು  ಮಾಯಾವತಿ ಅವರು ಏಪ್ರಿಲ್ 14ರಂದು ಅಂಬೇಡ್ಕರ್ ಜಯಂತಿ ಸಂದರ್ಭದಲ್ಲಿ ಅನಾವರಣಗೊಳಿಸಿದ್ದರು. ಗೋಮತಿ  ನದಿಯ ಕಡೆಗೆ ಮುಖಮಾಡಿರುವ  ಅಂಬೇಡ್ಕರ್ ಮತ್ತು  ಅವರ ಪತ್ನಿಯ ಪ್ರತಿಮೆಗಳನ್ನು ಕೂಡಾ ಇಲ್ಲಿ ಸ್ಥಾಪಿಸಲಾಗಿತ್ತು. ಇತರ ಎಲ್ಲಾ ಪ್ರತಿಮೆಗಳು 15 ಅಡಿ  ಎತ್ತರ ಹಾಗೂ 18 ಟನ್ ತೂಕವಿದ್ದರೆ, ಬಿಎಸ್ಪಿ  ಮುಖ್ಯಸ್ಥೆಯ ಪ್ರತಿಮೆ  12 ಅಡಿಗಳಷ್ಟು  ಮಾತ್ರ ಎತ್ತರವಿತ್ತು.

2008: ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರವು ಸದನದಲ್ಲಿ ವಿಶ್ವಾಸಮತ ಕೋರಲು ಒಪ್ಪಿದ ಹಿನ್ನೆಲೆಯಲ್ಲಿ ಜೂನ್ 6ರಂದು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಲು ರಾಜ್ಯಪಾಲರು ಸಮ್ಮತಿಸಿದರು.

2008: ಉತ್ತರ ಕರ್ನಾಟಕದ ವಿವಿಧೆಡೆ ಸಿಡಿಲು ಬಡಿದು 13 ಮಂದಿ ಮೃತರಾದರು. ವಿಜಾಪುರ ಜಿಲ್ಲೆ ಸಿಂದಗಿ ತಾಲ್ಲೂಕಿನಲ್ಲಿ ಐವರು, ರಾಯಚೂರು ಜಿಲ್ಲೆ ಲಿಂಗಸುಗೂರಿನಲ್ಲಿ ಮೂವರು, ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲ್ಲೂಕಿನಲ್ಲಿ ಇಬ್ಬರು, ಬಳ್ಳಾರಿ ಜಿಲ್ಲೆ ಕೂಡ್ಲಗಿ ತಾಲ್ಲೂಕು ಮರೂರು ಹಾಗೂ ಬೆಳಗಾವಿ ಜಿಲ್ಲೆ ರಾಯಭಾಗ ತಾಲ್ಲೂಕಿನ ದೇವನಕಟ್ಟಿ, ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ಬಳಿಯ ಮುಠ್ಠಳ್ಳಿ ಎತ್ತಕಾಲ ಅಡವಿ ಎಂಬಲ್ಲಿ ತಲಾ ಒಬ್ಬರು ಸಿಡಿಲಿಗೆ ಬಲಿಯಾದರು.

2008: ಗರ್ಭಿಣಿಯರು ನಳದ ನೀರನ್ನು ಕುಡಿಯುವುದರಿಂದ ಹಾಗೂ ಸ್ನಾನ ಮಾಡುವುದರಿಂದ ಅವರಿಗೆ ಹೃದಯಾಘಾತವಾಗುವ ಸಾಧ್ಯತೆ ಇರುತ್ತದೆ. ಅಲ್ಲದೇ ಹುಟ್ಟುವ ಮಗುವಿಗೆ ಬುದ್ಧಿಮಾಂದ್ಯತೆ ಉಂಟಾಗುವ ಅಪಾಯವೂ ಇದೆ ಎಂದು ಅಧ್ಯಯನವೊಂದು ಹೇಳಿತು. ಲಂಡನ್ನಿನ ನಿಯತಕಾಲಿಕವೊಂದರಲ್ಲಿ ಈ ಸಂಗತಿ ವರದಿಯಾಯಿತು. ನಲ್ಲಿ ನೀರಿನಲ್ಲಿ ಇರುವ ಕ್ಲೋರಿನ್ನಿನಂತಹ ರಾಸಾಯನಿಕ  ಪದಾರ್ಥಗಳು  ಹೃದಯದ ತೊಂದರೆಗೆ ಕಾರಣವಾಗುತ್ತವೆ.  ಇದರ ಪರಿಣಾಮವು  ಮೆದುಳು, ತಲೆಬುರುಡೆ ಹಾಗೂ ನೆತ್ತಿಯ ಮೇಲೂ ಉಂಟಾಗುತ್ತದೆ ಎಂದು ಅಧ್ಯಯನ ಹೇಳಿತು. ಭಾರಿ ಪ್ರಮಾಣದಲ್ಲಿ ಕ್ಲೋರಿನ್ ಹಾಕಿದ ನಲ್ಲಿ ನೀರು ಕುಡಿಯುವ ಪ್ರದೇಶಗಳಲ್ಲಿ ಹುಟ್ಟುವ ಮಕ್ಕಳಲ್ಲಿ ಹೃದಯ ತೊಂದರೆಗಳು ದ್ವಿಗುಣಗೊಳ್ಳುವ ಸಾಧ್ಯತೆ ಹೆಚ್ಚು. ಇಂಥ ಮಕ್ಕಳಲ್ಲಿ ಮೆದುಳಿನ ತೊಂದರೆಯೂ ಕಾಣಿಸಿಕೊಳ್ಳುತ್ತದೆ ಎಂದು  ತೈವಾನಿನಲ್ಲಿ ಸುಮಾರು 4,00,000 ಶಿಶುಗಳ ಮೇಲೆ ನಡೆಸಿದ ಅಧ್ಯಯನದಿಂದ ತಿಳಿದುಬಂದಿತು. ನೀರು ಶುದ್ಧಿಗಾಗಿ ಬಳಸುವ ಕ್ಲೋರಿನ್ನಿನಿಂದ ಯಾವ ಕಾರಣಕ್ಕೆ ಇಂಥ  ತೊಂದರೆಗಳು ಉಂಟಾಗುತ್ತವೆ ಎನ್ನುವುದು ಬೆಳಕಿಗೆ ಬಂದಿಲ್ಲ ಎಂಬುದು ಈ ಅಧ್ಯಯನ ವರದಿಯನ್ನು ತಯಾರಿಸಿರುವ ಪ್ರೊ.ಜೌನಿ ಜಾಕ್ಕೊಲಾ ಹೇಳಿಕೆ. ಸಾರ್ವಜನಿಕರ ಆರೋಗ್ಯ ಸುಧಾರಣೆಯಲ್ಲಿ ಕ್ಲೋರಿನ್ ಯುಕ್ತ ನೀರು ಮಹತ್ವದ ಪಾತ್ರ ವಹಿಸುತ್ತದೆ ಎನ್ನುವುದು ಸುಷ್ಟಷ್ಟ.  ಹಾಗಾಗಿ ಕ್ಲೋರಿನ್ನಿನ ಅಡ್ಡ ಪರಿಣಾಮಗಳನ್ನು ಕಂಡು ಹಿಡಿಯುವ ದಿಸೆಯಲ್ಲಿ ಇನ್ನಷ್ಟು ಸಂಶೋಧನೆಗಳು ನಡೆಯಬೇಕಾದ ಅಗತ್ಯವಿದೆ ಎಂಬುದು ಅವರ ಅಭಿಮತ.

2008: ಜಪಾನಿನ ಬೃಹತ್ ಪ್ರಯೋಗಾಲಯವೊಂದನ್ನು ಹೊತ್ತು ಎರಡು ದಿನಗಳ ಹಿಂದೆ ಫ್ಲಾರಿಡಾದಿಂದ ಅಂತರಿಕ್ಷಕ್ಕೆ ನೆಗೆದಿದ್ದ `ಡಿಸ್ಕವರಿ' ಗಗನ ನೌಕೆಯು ಈದಿನ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಸೇರಿತು. ದಕ್ಷಿಣ ಪೆಸಿಫಿಕ್ ಪ್ರದೇಶದಿಂದ 340 ಕಿ.ಮೀ. ಎತ್ತರದಲ್ಲಿ ನಿಲ್ದಾಣದ ಸಮೀಪಕ್ಕೆ ಬಂದ ಡಿಸ್ಕವರಿಯಿಂದ ಕಮಾಂಡರ್ ಮಾರ್ಕ್ ಕೆಲ್ಲಿ ಅವರನ್ನು ನಿಲ್ದಾಣದೊಳಕ್ಕೆ ಸೇರಿಸಲಾಯಿತು.

2008: ಬಾಂಗ್ಲಾದೇಶದಿಂದ ಗಡಿಪಾರು ಶಿಕ್ಷೆಗೆ ಒಳಗಾಗಿರುವ ವಿವಾದಾತ್ಮಕ ಲೇಖಕಿ ತಸ್ಲಿಮಾ ನಸ್ರೀನ್, ಮುಸ್ಲಿಂ ಭಯೋತ್ಪಾದಕರಿಂದ ಜೀವ ಬೇದರಿಕೆ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಅವರನ್ನು ಇನ್ನೂ ಎರಡು ವರ್ಷಗಳ ಕಾಲ ಸ್ವೀಡನ್ನಿನಲ್ಲಿಯೇ ಇರಲು ಅವಕಾಶ ಮಾಡಿಕೊಡುವುದಾಗಿ ಸ್ಟಾಕ್ಹೋಮ್ನ ಲೇಖಕರ ಕ್ಲಬ್ ಹೇಳಿತು.

2008: ಮಾದಕ ವಸ್ತು ಹೊಂದಿದ್ದ ಆರೋಪದ ಮೇಲೆ ಪಾಕಿಸ್ಥಾನ ಕ್ರಿಕೆಟ್ ತಂಡದ ವೇಗದ ಬೌಲರ್ ಮೊಹಮ್ಮದ್ ಆಸಿಫ್ ಅವರನ್ನು ದುಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಯಿತು.

2007: ಕೆಲ ಕಾಲದ ಅಜ್ಞಾತವಾಸದ ಬಳಿಕ ಶೃಂಗೇರಿಗೆ ಸಮೀಪದ ಗಂಡಘಟ್ಟಕ್ಕೆ ಲಗ್ಗೆ ಇಟ್ಟ ನಕ್ಸಲೀಯರು ಕೆಸಮುಡಿ ವೆಂಕಟೇಶ್ (45) ಎಂಬ ವರ್ತಕರ ಮನೆ ಮೇಲೆ ದಾಳಿ ಮಾಡಿ ಅವರನ್ನು ಹಿಗ್ಗಾಮುಗ್ಗ ಥಳಿಸಿ ಗುಂಡಿಟ್ಟು ಕೊಂದು ಹಾಕಿದರು.

2007: ಅಂತಾರಾಷ್ಟ್ರೀಯ ಸಂಸ್ಥೆ ಗೋಲ್ಡ್ ಕ್ವೆಸ್ಟ್ ಇಂಟರ್ ನ್ಯಾಷನಲ್ (ಕ್ವೆಸ್ಟ್ ನೆಟ್) ತಯಾರಿಸಿದ ವರನಟ ಡಾ. ರಾಜಕುಮಾರ್ ಅವರ ಭಾವಚಿತ್ರ ಇರುವ ಚಿನ್ನ ಮತ್ತು ಬೆಳ್ಳಿಯ ಪದಕಗಳನ್ನು ಪಾರ್ವತಮ್ಮ ರಾಜಕುಮಾರ್ ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದರು. ನಸುನಗುತ್ತಿರುವ ಡಾ. ರಾಜಕುಮಾರ್ ಭಾವಚಿತ್ರ ಇರುವ ಈ ನಾಣ್ಯಗಳಲ್ಲಿ ನೇತ್ರದಾನ ಮಾಡಿ' ಎಂಬ ಸಂದೇಶವಿದೆ. ಚಿನ್ನದ ಪದಕ 6 ಗ್ರಾಂ ತೂಕವಿದ್ದು, 26 ಮಿ.ಮೀ. ಸುತ್ತಳತೆ ಹೊಂದಿದೆ. ಪ್ರತಿಪದಕಕ್ಕೂ ಸಂಖ್ಯೆ ಇದೆ. ಬೆಳ್ಳಿ ಪದಕದ ತೂಕ ಒಂದು ಔನ್ಸ್ ಸುತ್ತಳತೆ 38.6 ಮಿ.ಮೀ. . ಎರಡೂ ಪದಕಗಳನ್ನು ಜರ್ಮನಿಯ ಬಿ.ಎಚ್. ಮಾಯರ್ ಹೆಸರಿನ ಟಂಕಸಾಲೆಗಳಲ್ಲಿ ತಯಾರಿಸಲಾಯಿತು.

2007: ನ್ಯೂಯಾರ್ಕಿನ ಜಾನ್ ಎಫ್. ಕೆನಡಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಫೋಟಿಸುವ ವಿಧ್ವಂಸಕ ಕೃತ್ಯದ ಸಂಚನ್ನು ವಿಫಲಗೊಳಿಸಲಾಯಿತು.

2007: ದೇಶದಾದ್ಯಂತ ಲಕ್ಷಾಂತರ ರೈತರಿಗೆ ತಲೆನೋವಾದ `ಕಾಂಗ್ರೆಸ್ ಹುಲ್ಲು' ಈಗ ಗೊಬ್ಬರ ಎಂಬುದು ಸಾಬೀತಾಗಿದೆ ಎಂದು ಈ ಬಗ್ಗೆ ಸಂಶೋಧನೆ ನಡೆಸಿದ ಮಹಾರಾಷ್ಟ್ರದ ಜೀವಶಾಸ್ತ್ರ ಅಧ್ಯಾಪಕಿ ಡಾ. ಗೌರಿ ಶ್ರೀಕೃಷ್ಣ ಕ್ಷೀರಸಾಗರ್ ವಾರ್ಧಾ ಜಿಲ್ಲೆಯ ಪಲ್ ಗಾಂವ್ ಪ್ರಥಮ ದರ್ಜೆ ಕಾಲೇಜಿನ ಕಾರ್ಮಿಕ ಶಿಬಿರದಲ್ಲಿ ಪ್ರಕಟಿಸಿದರು.

2006: ವಿಶ್ವ ವೃತ್ತಿಪರ ಬಿಲಿಯರ್ಡ್ ಚಾಂಪಿಯನ್ ಶಿಪ್ನಲ್ಲಿ ಅಮೋಘ ಜಯ ದಾಖಲಿಸುವ ಮೂಲಕ ಭಾರತದ ಗೀತ್ ಸೇಥಿ ಐದನೇ ಬಾರಿಗೆ ಈ ಕಿರೀಟವನ್ನು ಧರಿಸಿದರು. ಮುಂಬೈಯಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡಿನ ಲ್ಯಾಗನ್ ವಿರುದ್ಧ 1000 ಅಂಕಗಳ ಅಂತರದಿಂದ ಜಯಗಳಿಸುವ ಮೂಲಕ ಸೇಥಿ ಅವರು ಈ ಪ್ರಶಸ್ತಿಗೆ ಭಾಜನರಾದರು. 1998ರಲ್ಲಿ ಗೀತ್ ಸೇಥಿ ಅವರು ಕೊನೆಯ ಬಾರಿ ಈ ಪ್ರಶಸ್ತಿ ಗೆದ್ದಿದ್ದರು.

2006: ಪಾಕಿಸ್ಥಾನದ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೊ ಮತ್ತು ಅವರ ಪತಿ ಆಸಿಫ್ ಅಲಿ ಜರ್ದಾರಿ ಅವರು ತಮ್ಮ ಆಸ್ತಿಯ ವಿವರದ ಬಗ್ಗೆ ಸುಳ್ಳು ಹೇಳಿಕೆ ನೀಡಿದ್ದರ ಸಂಬಂಧ ತನ್ನ ಸಮನ್ಸಿಗೆ ಉತ್ತರಿಸದ ಆರೋಪಕ್ಕಾಗಿ ಇಸ್ಲಾಮಾಬಾದಿನ ನ್ಯಾಯಾಲಯವೊಂದು ಬಂಧನದ ವಾರಂಟ್ ಹೊರಡಿಸಿತು. ಇಸ್ಲಾಮಾಬಾದಿನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ರಫೀ-ಉಲ್ ಜಮನ್ ಅವರು ನ್ಯಾಯಾಲಯದ ಸಮನ್ಸಿಗೆ ಪ್ರತಿಕ್ರಿಯೆ ವ್ಯಕ್ತಪಡಿಸದ ಬೆನಜೀರ್ ಮತ್ತು ಜರ್ದಾರಿ ಬಂಧನಕ್ಕೆ ಇಂಟರ್ ಪೋಲ್ ಪೊಲೀಸರನ್ನು ಸಂಪರ್ಕಿಸುವಂತೆ ಮತ್ತು ಈ ದಂಪತಿಯನ್ನು ಬಂಧಿಸಿ ಜುಲೈ 3ರಂದು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಆದೇಶಿಸಿದರು. ಪಾಕಿಸ್ಥಾನ ಪೀಪಲ್ಸ್ ಪಾರ್ಟಿಯ ಅಧ್ಯಕ್ಷೆ ಬೆನಜೀರ್ ಅವರು ಮಾಜಿ ಪ್ರಧಾನಿ ಮತ್ತು ಪಾಕಿಸ್ಥಾನ ಮುಸ್ಲಿಂ ಲೀಗ್ ಅಧ್ಯಕ್ಷ ನವಾಜ್ ಷರೀಫ್ ಅವರನ್ನು ದುಬೈಯಲ್ಲಿ ಭೇಟಿಯಾದ ಮಾರನೇ ದಿನವೇ ಬಂಧನ ಆದೇಶ ಹೊರಬಿದ್ದಿತು.

1989: ಇರಾನಿನ ರಾಜಕೀಯ ಹಾಗೂ ಧಾರ್ಮಿಕ ನಾಯಕರಾಗಿದ್ದ ಅಯತೊಲ್ಲಾ ಖೊಮೇನಿ 89ನೇ ವಯಸ್ಸಿನಲ್ಲಿ ಮೃತರಾದರು. 1979ರಲ್ಲಿ ಇವರು ಮೊಹಮ್ಮದ್ ರೇಝಾ ಶಾ ಪಹ್ಲವಿಯವರನ್ನು ಪದಚ್ಯುತಗೊಳಿಸಿ ಇರಾನಿನ ಪರಮೋಚ್ಚ ನಾಯಕರಾದರು.

1966: ಪಾಕ್ ಕ್ರಿಕೆಟಿಗ ವಾಸಿಂ ಅಕ್ರಮ್ ಜನನ.

1965: ಬಾಹ್ಯಾಕಾಶದಲ್ಲಿ ನಡೆದಾಡಿದ ಮೊತ್ತ ಮೊದಲ ಅಮೆರಿಕನ್ ಎಂಬ ಹೆಗ್ಗಳಿಕೆಗೆ ಎಡ್ವರ್ಡ್ ಎಚ್. ವೈಟ್ ಪಾತ್ರರಾದರು. ಅವರು `ಜೆಮಿನಿ-4' ಬಾಹ್ಯಾಕಾಶ ನೌಕೆಯಿಂದ ಹೊರಕ್ಕೆ ಬಂದು 21 ನಿಮಿಷಗಳ ಕಾಲ ಗಗನದಲ್ಲಿ ನಡೆದಾಡಿದರು.

1931: ಪತ್ರಿಕೋದ್ಯಮಿ, ಸಾಹಿತಿ ಪರಮೇಶ್ವರ ಭಟ್ಟ (ಪ.ಸು. ಭಟ್ಟ) (3-6-1931ರಿಂದ 24-6-1981) ಅವರು ಸುಬ್ಬರಾಯ ಭಟ್ಟರು - ಸರಸ್ವತಿ ದಂಪತಿಯ ಪುತ್ರನಾಗಿ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಹೊಲನಗದ್ದೆಯಲ್ಲಿ ಹುಟ್ಟಿದರು.

1930: ಜಾರ್ಜ್ ಫರ್ನಾಂಡಿಸ್ ಅವರು ಮಂಗಳೂರಿನಲ್ಲಿ ಈದಿನ ಜನಿಸಿದರು.

1924: ಡಿಎಂಕೆ ಮುಖ್ಯಸ್ಥ ಎಂ. ಕರುಣಾನಿಧಿ ಜನನ.

1916: ಧೋಂಡೋ ಕೇಶವ ಕರ್ವೆ ಅವರು ಪುಣೆಯಲ್ಲಿ ಭಾರತೀಯ ಮಹಿಳಾ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದರು. ಈ ವಿಶ್ವ ವಿದ್ಯಾಲಯಕ್ಕೆ ವಿಪುಲ ನೆರವು ನೀಡಿದ ಕೈಗಾರಿಕೋದ್ಯಮಿ ಸರ್ ವಿಠ್ಠಲದಾಸ್ ಥ್ಯಾಕರ್ಸೆ ಅವರ ತಾಯಿಯ ನೆನಪಿಗಾಗಿ ಈ ವಿಶ್ವ ವಿದ್ಯಾಲಯಕ್ಕೆ ಶ್ರೀಮತಿ ನಾಥಿಬಾಯಿ ದಾಮೋದರ ಥ್ಯಾಕರ್ಸೆ ವಿಶ್ವ ವಿದ್ಯಾಲಯ ಎಂಬುದಾಗಿ ನಂತರ ನಾಮಕರಣ ಮಾಡಲಾಯಿತು.

1899: ಗಾಯಕ ಡಾ. ಬಿ. ದೇವೇಂದ್ರಪ್ಪ (3-6-1899ರಿಂದ 6-6-1986) ಅವರು ಚಿತ್ರದುರ್ಗದ ಮದಕರಿ ನಾಯಕನ ವಂಶಕ್ಕೆ ಸೇರಿದ ಸಂಗೀತ ಮತ್ತು ಭರತನಾಟ್ಯ ಪ್ರವೀಣ ಬಿ.ಎಸ್. ರಾಮಯ್ಯ- ತುಳಸಮ್ಮ ದಂಪತಿಯ ಮಗನಾಗಿ ಶಿವಮೊಗ್ಗ ಜಿಲ್ಲೆಯ ಅಯನೂರು ಗ್ರಾಮದಲ್ಲಿ ಜನಿಸಿದರು.

1895: ಭಾರತೀಯ ರಾಜತಾಂತ್ರಿಕ ಕಾವಲಂ ಮಾಧವ ಪಣಿಕ್ಕರ್ (ಕೆ.ಎಂ. ಪಣಿಕ್ಕರ್)(1895-1963) ಜನ್ಮದಿನ.

1890: ಗಡಿನಾಡ ಗಾಂಧಿ ಎಂದೇ ಖ್ಯಾತರಾಗಿದ್ದ ಸ್ವಾತಂತ್ರ್ಯ ಹೋರಾಟಗಾರ ಖಾನ್ ಅಬ್ದುಲ್ ಗಫಾರ್ ಖಾನ್ ಈದಿನ ಪೇಷಾವರದಲ್ಲಿ ಜನಿಸಿದರು. 1915ರಿಂದ 1918ರವರೆಗೆ ಗಡಿ ಭಾಗದ ಸಾವಿರಾರು ಹಳ್ಳಗಳನ್ನು ಸುತ್ತಿದ ಅವರು 1920ರಲ್ಲಿ `ಸರ್ವೆಂಟ್ಸ್ ಆಫ್ ಗಾಡ್' ಎಂಬ ಸಂಘಟನೆ ಸ್ಥಾಪಿಸಿದರು. ಇದು `ರೆಡ್ ಶರ್ಟ್ಸ್' ಎಂದೇ ಪ್ರಸಿದ್ಧಿ ಪಡೆದಿದೆ.

1865: ಯುನೈಟೆಡ್ ಕಿಂಗ್ ಡಮ್ಮಿನ ದೊರೆ ಐದನೇ ಜಾರ್ಜ್ (1865-1936) ಜನ್ಮದಿನ. ರಾಣಿ ಎರಡನೇ ಎಲಿಜಬೆತ್ ಳ ತಂದೆಯಾದ ಈತ ಯುನೈಟೆಡ್ ಕಿಂಗ್ಡಮ್ಮನ್ನು 1910ರಿಂದ 1936ರ ಅವಧಿಯಲ್ಲಿ ಆಳಿದ್ದ.

1761: ಹೆನ್ರಿ ಶ್ರಾಪ್ ನೆಲ್ (1761-1842) ಜನ್ಮದಿನ. ಇಂಗ್ಲಿಷ್ ಸೇನಾ ಅಧಿಕಾರಿಯಾದ ಈತ ಶ್ರಾಪ್ ನೆಲ್ ಶೆಲ್ ಹಾಗೂ ಶೆಲ್ ಭಾಗಗಳನ್ನು ಕಂಡು ಹಿಡಿದವ. ವೆಲಿಂಗ್ಟನ್ನಿನ ಡ್ಯೂಕ್ ಈ ಶೆಲ್ ಗಳನ್ನು ವಾಟರ್ಲೂ ಕದನದಲ್ಲಿ ನೆಪೋಲಿಯನ್ ವಿರುದ್ಧ ಬಳಸಿದ್ದ.