Saturday, November 30, 2019

ಇಂದಿನ ಇತಿಹಾಸ History Today ನವೆಂಬರ್ 30

2019: ಮುಂಬೈ: ಮಹಾರಾಷ್ಟ್ರದ ೧೮ನೇ ಮುಖ್ಯಮಂತ್ರಿಯಾಗಿ ಗುರುವಾರ ಪ್ರಮಾಣವಚನ ಸ್ವೀಕರಿಸಿದ್ದ ಉದ್ಧವ್ ಠಾಕ್ರೆ ಶನಿವಾರ ಮಹಾರಾಷ್ಟ್ರ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ನಡೆದ ವಿಶ್ವಾಸಮತ ಯಾಚನೆಯಲ್ಲಿ ಬಹುಮತ ಸಾಬೀತುಪಡಿಸಿದ್ದು, ಸಂದರ್ಭದಲ್ಲಿ ಬಿಜೆಪಿ ಸದಸ್ಯರು ಕಲಾಪ ಬಹಿಷ್ಕರಿಸಿ ಹೊರನಡೆದ ಘಟನೆ ನಡೆಯಿತು. ನಂತರ ಸುಪ್ರೀಂಕೋರ್ಟ್ ಆದೇಶದಂತೆ ತಲೆ ಎಣಿಕೆ ಮೂಲಕ ವಿಶ್ವಾಸಮತ ಯಾಚನೆ ಪ್ರಕ್ರಿಯೆಯನ್ನು ಹಂಗಾಮಿ ಸ್ಪೀಕರ್ ದಿಲೀಪ್ ಪಾಟೀಲ್ ನಡೆಸಿದರು. ವಿಶ್ವಾಸಮತದ ಪರ ಇರುವ ಶಾಸಕರ ತಲೆ ಎಣಿಕೆ ಮೊದಲಿಗೆ ಮಾಡಲಾಯಿತು. ವಿಶ್ವಾಸಮತ ಯಾಚನೆಯಲ್ಲಿ ಶಿವಸೇನಾ, ಎನ್ ಸಿಪಿ, ಕಾಂಗ್ರೆಸ್ ಮೈತ್ರಿಕೂಟದ ಸರ್ಕಾರಕ್ಕೆ ೧೬೯ ಶಾಸಕರ ಮತ ಸಿಕ್ಕಿದೆ. ೨೮೮ ಶಾಸಕರ ಬಲದ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಹುಮತಕ್ಕೆ ೧೪೫ ಶಾಸಕರ ಬೆಂಬಲದ ಅಗತ್ಯವಿದೆ. ಶಿವಸೇನಾ, ಎನ್ ಸಿಪಿ ಹಾಗೂ ಕಾಂಗ್ರೆಸ್ ಸೇರಿ ಮೂರು ಪಕ್ಷಗಳ ಶಾಸಕರ ಸಂಖ್ಯೆ ೧೫೪. ವಿಶ್ವಾಸಮತ ಯಾಚನೆ ವೇಳೆ ಬಹುಜನ್ ವಿಕಾಸ್ ಅಘಾಡಿ ಮತ್ತು ಪಕ್ಷೇತರರು ಕೆಲವು ಶಾಸಕರು ಉದ್ಧವ್ ಠಾಕ್ರೆಗೆ ಬೆಂಬಲ ನೀಡಿದ್ದಾರೆ. ವಿಶ್ವಾಸಮತ ಯಾಚನೆ ಪ್ರಕ್ರಿಯೆಗೂ ಮೊದಲು ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ನೇತೃತ್ವದಲ್ಲಿ ೧೦೫ ಬಿಜೆಪಿ ಶಾಸಕರು ಕಲಾಪದಿಂದ ಹೊರನಡೆದಿದ್ದರು. ವಿಶ್ವಾಸಮತ ಯಾಚನೆ ಪ್ರಕ್ರಿಯೆಗೂ ಮೊದಲು ಹಂಗಾಮಿ ಸ್ಪೀಕರ್ ಕಾಳಿದಾಸ್ ಅವರನ್ನು ಬದಲಿಸಿ ಕಾಂಗ್ರೆಸ್ ದಿಲೀಪ್ ಪಾಟೀಲ್ ಅವರನ್ನು ನೇಮಕ ಮಾಡಿರುವುದಕ್ಕೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು. ಸಂದರ್ಭದಲ್ಲಿ ಪ್ರೋ ಟೆಮ್ ಸ್ಪೀಕರ್ ದಿಲೀಪ್ ಪಾಟೀಲ್, ಗದ್ದಲ ನಡೆಸದಂತೆ ಮನವಿ ಮಾಡಿಕೊಂಡರು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)

2019: ಪುಣೆ: ಭಯೋತ್ಪಾದನೆ ಮೂಲಕ ಪಾಕಿಸ್ತಾನವು ಭಾರತದ ವಿರುದ್ಧ ಛಾಯಾಸಮರ ಹೂಡಿದ್ದು, ಅದರಲ್ಲಿ ಅದು ಸೋಲುವುದು ಖಚಿತ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶನಿವಾರ ಇಲ್ಲಿ ಹೇಳಿದರು. ಇಲ್ಲಿನ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯಲ್ಲಿ ೧೩೭ ನೇ ತಂಡದ ನಿರ್ಗಮನ ಪೆರೇಡ್ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಇದೇ ವೇಳೆ ಭಯೋತ್ಪಾದಕರನ್ನು ಬಗ್ಗು ಬಡಿಯುತ್ತಿರುವ ಸಶಸ್ತ್ರ ಪಡೆಗಳನ್ನು ಶ್ಲಾಘಿಸಿದ ಸಚಿವರುಇವರು ದೇಶದ ಶಕ್ತಿ. ಪಾಕಿಸ್ತಾನ ಈಗ ಭಯೋತ್ಪಾದನೆಯಿಂದಾಗಿ ವಿಶ್ವ ಮಟ್ಟದಲ್ಲಿ ಏಕಾಂಗಿಯಾಗಿದೆಎಂದು ಹೇಳಿದರು. ವಿದೇಶಿ ವಿದ್ಯಾರ್ಥಿಗಳೂ ಸೇರಿದಂತೆ ೨೮೪ ಮಂದಿ ವಿದ್ಯಾರ್ಥಿಗಳು ಬಾರಿ ಪದವಿಗಳನ್ನು ಸ್ವೀಕರಿಸಿದ್ದಾರೆ. ಇದರೊಂದಿಗೆ ಸುಖೋಯ್, ಸಾರಂಗ್ ಹೆಲಿಕಾಪ್ಟರುಗಳನ್ನು ಚಾಲನೆ ಮಾಡಿ ವಿವಿಧ ಕಸರತ್ತುಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)

2019: ನವದೆಹಲಿ: ದೇಶಾದ್ಯಂತ ಉದ್ಯೋಗ ಕೊರತೆ ಕಾಡಿರುವಂತೆಯೇ, ಕೇಂದ್ರ ಸರ್ಕಾರದ  ಇಲಾಖೆಗಳಲ್ಲಿ ಸುಮಾರು ಲಕ್ಷ ಹುದ್ದೆಗಳು ಖಾಲಿ ಇರುವ ಸಂಗತಿ ಬಯಲಾಯಿತು.  ೨೦೧೪ರ ಬಳಿಕ ಇಷ್ಟೊಂದು ಹುದ್ದೆಗಳು ೨೦೧೮ರವರೆಗೆ ಖಾಲಿಯಿದ್ದವು ಎಂದು ಕೇಂದ್ರ ಸಿಬಂದಿ ಸಚಿವಾಲಯ ಇತ್ತೀಚೆಗೆ ಲೋಕಸಭೆಗೆ ತಿಳಿಸಿತು. ಸಿಬಂದಿ ಸಚಿವಾಲಯ ತಿಳಿಸಿದಂತೆ,  ೨೦೧೮ ಮಾ.೧ರವರೆಗೆ ೩೧.೧೮ ಲಕ್ಷ ಸಿಬಂದಿಯಷ್ಟೇ ಕೇಂದ್ರದ ಅಧೀನ ಇಲಾಖೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇಲ್ಲಿನ ಸಿಬಂದಿ ಸಾಮರ್ಥ್ಯ ಒಟ್ಟು ೩೮ ಲಕ್ಷದಷ್ಟು ಇದೆ. ೨೦೧೪ರ ಬಳಿಕ ಸುಮಾರು .೫೭ ಲಕ್ಷ ಹುದ್ದೆ ನೇಮಕಾತಿಗೆ ಸರ್ಕಾರ ಮುಂದಾಗಿದ್ದರೂ, ೨೦೧೮ರ ವೇಳೆಗೆ ೩೨.೨೩ ಲಕ್ಷದಷ್ಟು ಸಿಬಂದಿ ಮಾತ್ರ ಹುದ್ದೆಯಲ್ಲಿದ್ದಾರೆ ಎಂದು ಮಾಹಿತಿ ತಿಳಿಸಿತು. ರೈಲ್ವೇ ಇಲಾಖೆ ಅತಿ ದೊಡ್ಡ ಸಂಖ್ಯೆಯಲ್ಲಿ ಸಿಬಂದಿಗಳನ್ನು ಹೊಂದಿದ್ದು, ಇದರಲ್ಲಿ . ಲಕ್ಷದಷ್ಟು ಹುದ್ದೆಗಳು ೨೦೧೮ ಮಾ.೧ರ ವೇಳೆಗೆ ಖಾಲಿ ಇದ್ದವು. ರಕ್ಷಣಾ ಖಾತೆ (ಸಿವಿಲ್)ನಲ್ಲಿ . ಲಕ್ಷದಷ್ಟು ಹುದ್ದೆಗಳು ಖಾಲಿ ಇವೆ ಎಂದು ಹೇಳಲಾಯಿತು. ಇದೇ ವೇಳೆ ೨೦೧೭-೧೮ರ ಅವಧಿಯಲ್ಲಿ ಕೇಂದ್ರ ಸರ್ಕಾರ ಸಿಬ್ಬಂದಿಗೆ .೯೦ ಲಕ್ಷ ಕೋಟಿ ರೂ. ವೇತನ, ಭತ್ಯೆಗಳನ್ನು ಪಾವತಿಸಿದೆ ಎಂದು ಇಲಾಖೆ ಹೇಳಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)

2019: ರಾಂಚಿ: ಜಾರ್ಖಂಡ್ ವಿಧಾನಸಭೆಯ ೧೩ ವಿಧಾನಸಭಾ ಕ್ಷೇತ್ರಗಳಿಗಾಗಿ ಶನಿವಾರ ಮೊದಲ ಹಂತದ ಮತದಾನ ನಡೆದಿದ್ದು, ಶೇಕಡಾ ೬೨.೮೭ರಷ್ಟು ಮತದಾನ ನಡೆಯಿತು. ಚುನಾವಣೆ ಬಹಿಷ್ಕರಿಸುವಂತೆ ಮಾವೋವಾದಿ ನಕ್ಸಲೀಯರು ನೀಡಿದ್ದ ಕರೆಗೆ ಸೊಪ್ಪು ಹಾಕದ ಮತದಾರರು ಮತಗಟ್ಟೆಗಳಲ್ಲಿ ಭಾರೀ ಸಂಖ್ಯೆಯಲ್ಲಿ ಸಾಲುಗಟ್ಟಿ ನಿಂತು ಮತ ಚಲಾಯಿಸಿದರು ಎಂದು ವರದಿಗಳು ತಿಳಿಸಿದವು. ಚುನಾವಣಾ ಆಯೋಗದ ಪ್ರಕಾರ ಶೇಕಡಾ ೬೨.೮೭ರಷ್ಟು ಮತದಾನವಾಗಿದೆ. ಬಿಷ್ಣುಪುರದಲ್ಲಿ ಅತ್ಯಂತ ಹೆಚ್ಚು - ಶೇಕಡಾ ೬೭.೦೪ರಷ್ಟು ಮತದಾನವಾಗಿದ್ದು, ಮನಿಕಾ ಸ್ಥಾನಕ್ಕೆ ಅತ್ಯಂತ ಕಡಿಮೆ - ಶೇಕಡಾ ೫೭.೬೧ರಷ್ಟು ಮತದಾನವಾಗಿದೆ. ಡಾಲ್ಟನ್ ಗಂಜ್ ವಿಧಾನಸಭಾ ಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಘರ್ಷಣೆ ನಡೆದ ಬಗ್ಗೆ ವರದಿಯಾಯಿತು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)


Friday, November 29, 2019

ಇಂದಿನ ಇತಿಹಾಸ History Today ನವೆಂಬರ್ 29

2019: ನವದೆಹಲಿ: ಮಲಯಾಳದ ಖ್ಯಾತ ಕವಿ ಅಕ್ಕಿಥಮ್ ಅವರು ಪ್ರಸಕ್ತ ವರ್ಷದ ಜ್ಞಾನಪೀಠ ಪ್ರಶಸ್ತಿಗೆ ಭಾಜನರಾದರು. 2019 ನವೆಂಬರ್ 29ರ  ಶುಕ್ರ ವಾರ ಕುರಿತು ಘೋಷಣೆ ಹೊರಡಿಸಿದ ಜ್ಞಾನಪೀಠ ಆಯ್ಕೆ ಸಮಿತಿ, “೫೫ನೇ ಜ್ಞಾನಪೀಠ ಪ್ರಶಸ್ತಿಗೆ ಮಲಯಾಳದ ಪ್ರಸಿದ್ಧ ಕವಿ ಅಕ್ಕಿಥಮ್ ಅಚ್ಯುತನ್ ನಂಬೂದಿರಿ ಆಯ್ಕೆ ಯಾಗಿದ್ದಾರೆಎಂದು ತಿಳಿಸಿತು.  ಕೇವಲ ಕವಿತೆಗಳು ಮಾತ್ರವಲ್ಲದೇ ನಾಟಕ, ಸ್ಮರಣ ಗ್ರಂಥಗಳು, ವಿಮರ್ಶಾ ಪ್ರಬಂಧಗಳು, ಮಕ್ಕಳ ಸಾಹಿತ್ಯ, ಸಣ್ಣಕಥೆಗಳು, ಭಾಷಾಂತರ ಕೃತಿಗಳನ್ನು ಕೂಡ ಇವರು ರಚಿಸಿದ್ದಾರೆ. ೧೯೨೬ರಲ್ಲಿ ಜನಿಸಿದ ಅಕ್ಕಿಥಮ್ ಅವರು ಈವರೆಗೆ ೫೫ ಕೃತಿಗಳನ್ನು ರಚಿಸಿದ್ದು, ಪೈಕಿ ೪೫ ಕವನ ಸಂಕಲನಗಳಾಗಿವೆ. ಖಂಡ ಕಾವ್ಯಗಳು, ಕಥಾ ಕಾವ್ಯಗಳು, ಚರಿತ ಕಾವ್ಯಗಳು ಹಾಗೂ ಕವನಗಳು ಇವುಗಳಲ್ಲಿ ಸೇರಿವೆ. ಪದ್ಮಶ್ರೀ ಪುರಸ್ಕೃತರಾಗಿರುವ ಅವರು, ಸಾಹಿತ್ಯ ಅಕಾಡೆಮಿ ಪ್ರಶಸ್ತಿ (೧೯೭೩), ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ(೧೯೭೨ ಮತ್ತು ೧೯೮೮), ಮಾತೃಭೂಮಿ ಪ್ರಶಸ್ತಿ, ವಯಲಾರ್ ಪ್ರಶಸ್ತಿ, ಕಬೀರ್ ಸಮ್ಮಾನ್ ಸೇರಿದಂತೆ ಅನೇಕ ಸಾಹಿತ್ಯ ಸಂಬಂಧಿ ಗೌರವಗಳಿಗೂ ಪಾತ್ರ ರಾಗಿದ್ದಾರೆ. ಇವರ ಕೃತಿಗಳು ಭಾರತದ ಇತರೆ ಭಾಷೆಗಳು ಹಾಗೂ ವಿದೇಶಿ ಭಾಷೆಗಳಿಗೂ ತರ್ಜುಮೆಗೊಂಡಿವೆ. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)


Saturday, November 16, 2019

ಇಂದಿನ ಇತಿಹಾಸ History Today ನವೆಂಬರ್ 16

2019: ಪತ್ತನಂತಿಟ್ಟ  (ಕೇರಳ): ಕೇರಳದ ಶಬರಿಮಲೈ ಅಯ್ಯಪ್ಪಸ್ವಾಮಿ ದೇವಾಲಯಕ್ಕೆ ಸಹಸ್ರಾರು ಭಕ್ತರ ಚಾರಣದೊಂದಿಗೆ ೪೧ ದಿನಗಳ ವಾರ್ಷಿಕ ತೀರ್ಥಯಾತ್ರೆ 2019 ನವೆಂಬರ್ 16ರ ಶನಿವಾರ ಆರಂಭಗೊಂಡಿದ್ದು, ೧೦ ಮಂದಿ ಮಹಿಳೆಯರನ್ನು ವಾಪಸ್ ಕಳುಹಿಸಿದ ಬಳಿಕ ಸಂಜೆ  ’ಮಂಡಲ ಮಕರವಿಳಕ್ಕು ಪೂಜೆಗಾಗಿ ದೇವಾಲಯದ ಮಹಾದ್ವಾರವನ್ನು ತೆರೆಯಲಾಯಿತು. ಬೆಟ್ಟದ ಮೇಲಿನ ದೇವಾಲಯದ ಸುತ್ತಮುತ್ತಣ ಪ್ರದೇಶದಲ್ಲಿ ರಾಜ್ಯ ಸರ್ಕಾರವು ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಿದೆ. ಚಾರಣಕ್ಕೆ ಬಂದ ಹಿರಿಯ ಮಹಿಳೆಯರಿಗೆ ವಯಸ್ಸಿನ ದಾಖಲೆ ಒದಗಿಸುವಂತೆ ದೇವಾಲಯದಿಂದ ಕಿಮೀ ದೂರದಲ್ಲಿರುವ ಪಂಬಾ ತಳ ಶಿಬಿರದಲ್ಲೇ ಪೊಲೀಸ್ ಸೂಚನೆ ನೀಡಿದರು. ಸುಪ್ರೀಂಕೋರ್ಟಿನ ಇತ್ತೀಚಿನ ತೀರ್ಪು ಹೊರಬಿದ್ದ ಎರಡು ದಿನಗಳ ಬಳಿಕ, ಕೆಲವು ಮಹಿಳಾ ಕಾರ್ಯಕರ್ತರು ಪೂಜೆ ಸಲ್ಲಿಸಲು ಬೆಟ್ಟದ ಮೇಲಿನ ದೇಗುಲವನ್ನು ಪ್ರವೇಶಿಸುವುದಾಗಿ ಬೆದರಿಕೆ ಹಾಕಿರುವುದರ ಮಧ್ಯೆಯೇ ಶಬರಿಮಲೈ ದೇವಾಲಯದ ಮುಖ್ಯ ಅರ್ಚಕ ಅಥವಾ ತಂತ್ರಿಗಳು ಶನಿವಾರ ಸಂಜೆ ಗಂಟೆಗೆ ಮೂರು ತಿಂಗಳ ತೀರ್ಥಯಾತ್ರಾ ಋತುವಿಗಾಗಿ ಅಯ್ಯಪ್ಪ ಸ್ವಾಮಿ ದೇಗುಲದ ಮಹಾದ್ವಾರವನ್ನು ತೆರೆದರು. ಋತುಮತಿ ವಯೋಮಾನದ ಕನಿಷ್ಠ ೧೦ ಮಂದಿ ಮಹಿಳೆಯರನ್ನು ಪೊಲೀಸರು ವಾಪಸ್ ಕಳುಹಿಸಿದರು. ತಮ್ಮನ್ನು ದೇವಾಲಯದ ಮೆಟ್ಟಿಲು ಏರಲು ಬಿಡುವಂತೆ ಮಹಿಳೆಯರು ಆಗ್ರಹಿಸಿದಾಗ, ೧೦ರಿಂದ ೫೦ ವರ್ಷ ನಡುವಣ ವಯೋಮಾನದ ಮಹಿಳೆಯರನ್ನು ಬಿಡದಂತೆ ತಮಗೆ ಕಟ್ಟುನಿಟ್ಟಿನ ಆದೇಶವಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದರು. ಮಹಿಳಾ ಭಕ್ತರಿಗೆ ತಾನು ರಕ್ಷಣೆಗೆ ಒದಗಿಸಲಾಗದು ಎಂದು ರಾಜ್ಯ ಸರ್ಕಾರವು ಈಗಾಗಲೇ ಪ್ರಕಟಿಸಿದೆ. ಆದರೆ ಹಲವಾರು ಮಹಿಳಾ ಕಾರ್ಯಕರ್ತರು ದೇವಾಲಯ ಪ್ರವೇಶಿಸುವ ತಮ್ಮ ಯೋಜನೆಯನ್ನು ಪ್ರಕಟಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಉನ್ನತ ಹಿಂದೂ ಸಂಘಟನೆ ಶಬರಿಮಲೈ ಕರ್ಮ ಸಮಿತಿಯು ದೇವಾಯ ಪ್ರವೇಶಿಸುವ ಮಹಿಳೆಯರನ್ನು ತಾನು ತಡೆಯುವುದಾಗಿ ಹೇಳಿದೆ. ಮೊದಲ ಒಂದು ಗಂಟೆಯ ಅವಧಿಯಲ್ಲಿ ೧೦,೦೦೦ಕ್ಕೂ ಹೆಚ್ಚು ಮಂದಿ ಭಕ್ತರು ಪೊಲೀಸ್ ಚೆಕ್ ಪೋಸ್ಟ್ ಮೂಲಕ ಹಾದು ಹೋಗಿದ್ದಾರೆ ಎಂದು ಪಂಬಾದಲ್ಲಿನ ಹಿರಿಯ ಪೊಲೀಸ್ ಅಧಿಕಾರಿ ನುಡಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)

2019: ಮುಂಬೈ/ ನವದೆಹಲಿ: ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಜೊತೆಗೆ ನಿಗದಿಯಾಗಿದ್ದಮಹಾಮೈತ್ರಿ (ಶಿವಸೇನೆ-ಎನ್ಸಿಪಿ- ಕಾಂಗ್ರೆಸ್) ನಾಯಕರ ಭೇಟಿ 2019 ನವೆಂಬರ್ 16ರ ಶನಿವಾರ ದಿಢೀರನೆ ರದ್ದಾಯಿತು. ಎಲ್ಲ ನಾಯಕರು ತಮ್ಮ ಕ್ಷೇತ್ರಗಳಲ್ಲಿ ಇರುವುದರಿಂದ ರಾಜ್ಯಪಾಲರ ಜೊತೆಗಿನ ನಿಗದಿತ ಭೇಟಿ ರದ್ದಾಗಿದೆ ಎಂದು ಉದ್ಧವ್ ಠಾಕ್ರೆ ನೇತೃತ್ವದ ಪಕ್ಷ  ಪ್ರಕಟಿಸಿತು. ನೂತನ ಮೈತ್ರಿಕೂಟದ ನಾಯಕರ ಜಂಟಿ ನಿಯೋಗವು ರಾಜ್ಯಪಾಲ ಕೋಶಿಯಾರಿ ಅವರನ್ನು ಸಂಜೆ .೩೦ ಗಂಟೆಗೆ ಭೇಟಿ ಮಾಡಬೇಕಾಗಿತ್ತು. ಮಧ್ಯೆ, ದೆಹಲಿಯಲ್ಲಿ ಸಂಸತ್ತಿನ ಉಭಯ ಸದನಗಳಲ್ಲಿ ಶಿವಸೇನಾ ಸಂಸತ್ ಸದಸ್ಯರ ಆಸನ ವ್ಯವಸ್ಥೆ ಬದಲಾಗಿದೆ. ಅವರು ಈಗ ವಿರೋಧ ಪಕ್ಷಗಳ ಸಾಲಿನಲ್ಲಿ ಕೂರುವರು ಎಂದು ಸಂಸತ್ ಮೂಲಗಳು ತಿಳಿಸಿದವು. ಶಿವಸೇನಾ ಮೂಲಗಳು ಮತ್ತು ಕಾಂಗ್ರೆಸ್ ವಕ್ತಾರರೊಬ್ಬರ ಪ್ರಕಾರ ಎನ್ಸಿಪಿ, ಶಿವಸೇನೆ ಮತ್ತು ಕಾಂಗ್ರೆಸ್ ಪಕ್ಷಗಳ ಬಹುತೇಕ ನಾಯಕರು ಲಭ್ಯರಿಲ್ಲವಾದ ಕಾರಣ ರಾಜ್ಯಪಾಲರ ಜೊತೆಗಿನ ನಿಗದಿತ ಭೇಟಿಯನ್ನು ರದ್ದು ಪಡಿಸಲಾಯಿತು. ರಾಜ್ಯಪಾಲ ಕೋಶಿಯಾರಿ ಜೊತೆಗಿನ ಶಿವಸೇನಾ-ಎನ್ಸಿಪಿ- ಕಾಂಗ್ರೆಸ್ ನಾಯಕರ ಭೇಟಿ ಮುಂದೂಡಿಕೆಯಾಗಿದ್ದು, ಮುಂದಿನ ಭೇಟಿಗೆ ರಾಜ್ಯಪಾಲರಿಂದ ಇನ್ನೂ ಸಮಯ ಲಭಿಸಿಲ್ಲ ಎಂದು ಮೂಲಗಳು ಹೇಳಿದವು. ತಾವು ರಾಜ್ಯಪಾಲರನ್ನು ಭೇಟಿ ಮಾಡುತ್ತಿರುವುದು ರಾಜ್ಯದ ಗ್ರಾಮೀಣ ಸಂಕಷ್ಟಕ್ಕೆ ಸಂಬಂಧಿಸಿದಂತೆ ಚರ್ಚಿಸಲು ಹೊರತು ಸರ್ಕಾರ ರಚನೆಯ ಹಕ್ಕು ಮಂಡನೆಗಾಗಿ ಅಲ್ಲ ಎಂದು ಪಕ್ಷಗಳು ಪ್ರತಿಪಾದಿಸಿದ್ದವು. ‘ಮಳೆಯಿಂದ ತೊಂದರೆಗೆ ಒಳಗಾದ ರೈತರಿಗೆ ತುರ್ತು ನೆರವು ನೀಡಿಕೆ ಸಂಬಂಧವಾಗಿ ಚರ್ಚಿಸಲು ರಾಜ್ಯಪಾಲ ಕೋಶಿಯಾರಿ ಅವರನ್ನು ತಾವು ಭೇಟಿ ಮಾಡುತ್ತಿದ್ದೇವೆ ಹೊರತು ಸರ್ಕಾರ ರಚನೆಯ ವಿಷಯ ಮಾತನಾಡಲು ಅಲ್ಲಎಂದು ಮೈತ್ರಿಕೂಟದ ಮೂಲಗಳು ಇದಕ್ಕೆ ಮುನ್ನ ಹೇಳಿದ್ದವು. ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಅವರು ಶುಕ್ರವಾರ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರನ್ನು ಭೇಟಿ ಮಾಡಿ ರೈತರ ವಿಷಯಗಳ ಬಗ್ಗೆ ಚರ್ಚಿಸಿದ್ದರು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)

2019: ಪಣಜಿ: ಭಾರತೀಯ ನೌಕಾಪಡೆಯ ಮಿಗ್ 29ಕೆ ವಿಮಾನ 2019 ನವೆಂಬರ್ 16ರ ಶನಿವಾರ ಗಗನಕ್ಕೆ ಏರಿದ ಕೆಲವೇ ಕ್ಷಣಗಳಲ್ಲಿ ಗೋವಾದ ಡಾಬೋಲಿಮ್ನಲ್ಲಿ ಅಪಘಾತಕ್ಕೀಡಾಗಿದ್ದು, ಅದೃಷ್ಟವಶಾತ್ ಇಬ್ಬರು ತರಬೇತಿ ಪಡೆಯುತ್ತಿದ್ದ  ಪೈಲಟ್ ಗಳು ಪ್ರಾಣಾಪಾಯದಿಂದ ಪಾರಾದರು. ತರಬೇತಿಗಾಗಿ ಬಳಸುವ ಮಿಗ್ 29 ಕೆ ವಿಮಾನದಲ್ಲಿದ್ದ ಪೈಲಟ್ ಗಳಾದ ಕ್ಯಾಪ್ಟನ್ ಎಂ.ಶಿಯೋಖಂದ್ ಮತ್ತು ಲೆಫ್ಟಿನೆಂಟ್ ಕಮಾಂಡರ್ ದೀಪಕ್ ಯಾದವ್ ಪವಾಡಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ನೌಕದಳ  ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿತು. ತರಬೇತಿಯ ಮಿಗ್ 29ಕೆ ಟೇಕ್ ಗಗನಕ್ಕೇರಿದ ಹೊತ್ತಿನಲ್ಲಿಯೇ ಹಕ್ಕಿಗಳ ಹಿಂಡು ಬಂದು ಬಡಿದ ಪರಿಣಾಮ ಬಲಭಾಗದ ಎಂಜಿನ್ನಿನಲ್ಲಿ ಬೆಂಕಿ ಹೊತ್ತಿಕೊಂಡಿತ್ತು. ನಂತರ ಎಡಭಾಗದ ಎಂಜಿನ್ ಸ್ಥಗಿತವಾಗಿರುವುದಾಗಿ ವರದಿ ವಿವರಿಸಿತು. ಗೋವಾದ ನೌಕಾನೆಲೆ ಡಾಬೋಲಿಮ್ ನಲ್ಲಿರುವ ಐಎನ್ ಎಸ್ ಹನ್ಸ್ ನಿಂದ ಮಿಗ್ 29ಕೆ ಗಗನಕ್ಕೆ ಏರಿದಾಗ  ಹಕ್ಕಿಗಳ ಹಿಂಡು ಬಡಿದಿತ್ತು. ಸಂದರ್ಭದಲ್ಲಿ ಎಂಜಿನ್ನಿಗೆ ಬೆಂಕಿ ಹೊತ್ತಿಕೊಂಡಿರುವುದನ್ನು ಗಮನಿಸಿದ ಪೈಲಟ್ಗಳು  ಇಬ್ಬರು ಧೈರ್ಯಗೆಡದೆ ಪರಿಸ್ಥಿತಿಯನ್ನು ನಿಭಾಯಿಸಿರುವುದಾಗಿ ನೌಕಾದಳದ ಪ್ರಕಟಣೆ ವಿವರಿಸಿತು. ಬೆಂಕಿ ಹೊತ್ತಿಕೊಂಡ ಮಿಗ್ 29ಕೆ ಜನನಿಭಿಡ ಪ್ರದೇಶದಿಂದ ದೂರದಲ್ಲಿ ತೆರೆದ ಜಾಗದಲ್ಲಿ ಅಪಘಾತಕ್ಕೀಡಾಗಿತ್ತು ಎಂದು ವರದಿ ತಿಳಿಸಿತು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)

2019: ನವದೆಹಲಿ: ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಅಸೋಸಿಯೇಶನ್ ಅಧ್ಯಕ್ಷ ಸ್ಥಾನಕ್ಕೆ ರಜತ್ ಶರ್ಮ 2019 ನವೆಂಬರ್ 16ರ ಶನಿವಾರ ರಾಜೀನಾಮೆ ನೀಡಿದರು. ರಾಜೀನಾಮೆಯ ನಂತರ ಮಾತನಾಡಿದ ರಜತ್ ಶರ್ಮ, ಅಧ್ಯಕ್ಷನಾಗಿದ್ದ ವೇಳೆ ನನ್ನ ಮೇಲೆ ನಂಬಿಕೆ ಇಟ್ಟ ಎಲ್ಲರಿಗೂ ನಾನು ಆಭಾರಿಯಾಗಿದ್ದೇನೆ. ಸಿಕ್ಕ ಅವಕಾಶದಲ್ಲಿ ಸಂಸ್ಥೆಯ ಅಭಿವೃದ್ಧಿಗಾಗಿ ಪ್ರಾಮಾಣಿಕತೆಯಿಂದ ದುಡಿದಿದ್ದೇನೆ ಎಂದರು. ನಾನು ಪ್ರಾಮಾಣಿಕತೆ, ಪಾರದರ್ಶಕತೆಯಿಂದ ಕೆಲಸ ಮಾಡಬೇಕೆಂದು ಬಂದವ. ಆದರೆ ದೆಹಲಿ ಕ್ರಿಕೆಟ್ ಸಂಸ್ಥೆಯಲ್ಲಿ ಅದು ಸಾಧ್ಯವಿಲ್ಲ. ಪಟ್ಟ ಭದ್ರ ಹಿತಾಸಕ್ತಿಗಳ ನಡುವೆ ಕೆಲಸ ಮಾಡುವುದು ಕಷ್ಟ ಎಂದು ಶರ್ಮ ಹೇಳಿದರು. ಹಿರಿಯ ಪತ್ರಕರ್ತರಾಗಿರುವ ರಜತ್ ಶರ್ಮಾ 20 ತಿಂಗಳ ಹಿಂದಷ್ಟೇ ದೆಹಲಿ ಕ್ರಿಕೆಟ್ ಅಸೋಸಿಯೇಶನ್ ಅಧ್ಯಕ್ಷ ಗಾದಿಗೇರಿದ್ದರು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)

2019: ಉಡುಪಿಮೊಬೈಲ್ಕವರಿನ  ಹಿಂದೆ ತುಳಸಿ ದಳಗಳನ್ನು ಇಟ್ಟುಕೊಂಡರೆ ವಿಕಿರಣದಿಂದ ರಕ್ಷಣೆ ಪಡೆಯಬಹುದು ಎಂದು ಯೋಗಗುರು ಬಾಬಾ ರಾಮದೇವ್  2019 ನವೆಂಬರ್ 16 ಶನಿವಾರ ಇಲ್ಲಿ ಬಹಿರಂಗ ಪಡಿಸಿದರು. ಕೃಷ್ಣಮಠದ ಪಾರ್ಕಿಂಗ್ ಪ್ರದೇಶದಲ್ಲಿ ನಡೆದ ಬೃಹತ್ ಯೋಗ ಶಿಬಿರದಲ್ಲಿ, ವಿಕಿರಣದಿಂದ (ರೇಡಿಯೇಷನ್)  ಹೇಗೆ ರಕ್ಷಣೆ ಪಡೆಯಬಹುದು ಎಂಬುದನ್ನು ಮಠದ ಸಿಬ್ಬಂದಿಯೊಬ್ಬರ ಮೊಬೈಲ್ಪಡೆದುಕೊಂಡು ಪ್ರಾತ್ಯಕ್ಷಿಕೆ ಮೂಲಕ  ರಾಮದೇವ್ ತೋರಿಸಿದರು. ಮನೆಯಲ್ಲಿರುವ ಟಿವಿ, ಲ್ಯಾಪ್ಟಾಪ್‌, ಮೊಬೈಲ್ಹಾಗೂ ಎಲೆಕ್ಟ್ರಾನಿಕ್ವಸ್ತುಗಳು ವಿಕಿರಣಗಳನ್ನು ಹೊರಸೂಸುತ್ತವೆ. ಇದರಿಂದ ರಕ್ಷಣೆ ಪಡೆಯಬೇಕಾದರೆ ಮನೆಯಲ್ಲಿ ತುಳಸಿ ಗಿಡವನ್ನು ಬೆಳೆಸಬೇಕು ಎಂದು ಸಲಹೆ ನೀಡಿದರು. ತುಳಸಿ ದಳ ಬಳಸಿ ವಿಕಿರಣದಿಂದ ರಕ್ಷಣೆ ಪಡೆಯಬಹುದು ಎಂಬ ವಿಚಾರವನ್ನು ಇದೇ ಮೊದಲ ಬಾರಿಗೆ ಬಹಿರಂಗಗೊಳಿಸುತ್ತಿರುವುದಾಗಿಯೂ ಬಾಬಾ ರಾಮದೇವ್ಹೇಳಿದರು(ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)

2019: ಮುಂಬೈ: ರಿಲಯನ್ಸ್ಕಮ್ಯುನಿಕೇಷನ್ಸ್ ನಿರ್ದೇಶಕ ಹುದ್ದೆಗೆ ಉದ್ಯಮಿ ಅನಿಲ್ ಧೀರೂಭಾಯಿ ಅಂಬಾನಿ ರಾಜೀನಾಮೆ ನೀಡಿದ್ದಾರೆ ಎಂಬುದನ್ನು ಮುಂಬೈ ಷೇರುಪೇಟೆ ಅಧಿಸೂಚನೆ  2019 ನವೆಂಬರ್ 16 ಶನಿವಾರ ಬಹಿರಂಗ ಪಡಿಸಿತು. ಅಂಬಾನಿ ಮಾತ್ರವಲ್ಲದೆ, ಛಾಯಾ ವೀರಾನಿ, ರಾನ್ಕರಾನಿ, ಮಂಜರಿ ಕೇಕರ್ಮತ್ತು ಸುರೇಶ್ರಂಗಾಚಾರ್ಕೂಡ ನಿರ್ದೇಶಕ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂದು ಮುಂಬೈ ಷೇರುಪೇಟೆ (ಬಿಎಸ್) ಅಧಿಸೂಚನೆ ತಿಳಿಸಿತು. ಅಂಬಾನಿಛಾಯಾ ವೀರಾನಿ, ಮಂಜರಿ ಕೇಕರ್ . 15ರಂದು, ರಾನ್ಕರಾನಿ . 14ರಂದು ಮತ್ತು ಸುರೇಶ್ ರಂಗಾಚಾರ್ . 13ರಂದು ರಾಜೀನಾಮೆ ನೀಡಿದ್ದಾರೆ. ಮಣಿಕಂಠನ್ ವಿ. ಅವರು ಕಂಪನಿಯ ನಿರ್ದೇಶಕ ಹಾಗೂ ಮುಖ್ಯ ಹಣಕಾಸು ಅಧಿಕಾರಿ ಸ್ಥಾನಕ್ಕೆ ಅಕ್ಟೋಬರ್ 4ರಂದೇ ರಾಜೀನಾಮೆ ನೀಡಿದ್ದರು. ಮಣಿಕಂಠನ್ ಅವರ ರಾಜೀನಾಮೆ ಮತ್ತು ನಿರ್ದೇಶಕ ಹಾಗೂ ಮುಖ್ಯ ಹಣಕಾಸು ಅಧಿಕಾರಿ ಸ್ಥಾನಕ್ಕೆ ಡಿ. ವಿಶ್ವನಾಥ್ ಅವರ ನೇಮಕಾತಿಗೆ ಸಾಲಗಾರರ ಸಮಿತಿಯ (ಸಿಒಸಿ) ಅನುಮೋದನೆ ದೊರೆಯಬೇಕಾಗಿದೆ.  ಅನುಮೋದನೆ ದೊರೆತ ಬಳಿಕ ಮುಂದಿನ ಪ್ರಕಟಣೆ ಹೊರಡಿಸಲಾಗುವುದು ಎಂದು ಅಧಿಸೂಚನೆಯಲ್ಲಿ ಉಲ್ಲೇಖಿಸಲಾಯಿತು. ದಿವಾಳಿ ಪ್ರಕ್ರಿಯೆ ಎದುರಿಸುತ್ತಿರುವ ಕಂಪನಿಯು ಜುಲೈಸೆಪ್ಟೆಂಬರ್ಅವಧಿಯಲ್ಲಿ 30,142 ಕೋಟಿ ರೂಪಾಯಿ ನಷ್ಟ ಅನುಭವಿಸಿದೆ. (ವಿವರಗಳಿಗೆಇಲ್ಲಿ ಕ್ಲಿಕ್ಕಿಸಿ)