Sunday, November 28, 2021

PARYAYA: ಹಸುವು ನಕ್ಕಿತು…ಏಕೆ..?

ಹಸುವು ನಕ್ಕಿತು…ಏಕೆ..?

 ಹಸುವು ನಕ್ಕಿತು…ಏಕೆ..?


ಕಸಾಯಿಖಾನೆಯಲ್ಲಿ ಒಬ್ಬ ಕಟುಕ ಹಸುವನ್ನು ಕೊಲ್ಲಲು ಬಂದಾಗ
ಹಸುವು ಕಟುಕನನ್ನು ನೋಡಿ ನಗುತ್ತಿತ್ತು.

ಇದನ್ನ ನೋಡಿ ಕಟುಕ ಹೇಳಿದ…

‘ನಾನು ನಿನ್ನನ್ನು ಕೊಲ್ಲಲು ಬಂದಿದ್ದೇನೆ. ಅದನ್ನು ತಿಳಿದು ನೀನು ಏಕೆ ಹೀಗೆ
ನಗುತ್ತಾ ಇದ್ದೀಯ?’

ಹಸು ಹೇಳಿತು:
‘ನಾನು ಯಾವತ್ತಿಗೂ ಮಾಂಸವನ್ನು ತಿಂದಿಲ್ಲ, ಹಾಗಿದ್ದೂ ನನ್ನ ಸಾವು ಇಷ್ಟು ಘೋರವಾಗಿದೆ.

 ತಪ್ಪು ಮಾಡದ, ಯಾರಿಗೂ ಕೆಡಕು ಮಾಡದ
ನನ್ನನ್ನು ನೀನು ಕೊಂದು
ನನ್ನ
ಮಾಂಸವನ್ನು ತಿನ್ನುವೆಯಲ್ಲ?
ನಿನ್ನ
ಸಾವು ಎಷ್ಟು  ಘೋರವಾಗಿರುವುದೋ ಎನ್ನುವುದನ್ನು ಯೋಚಿಸಿ
ನಾನು ನಗುತ್ತಿದ್ದೇನೆ….

ಹಾಲು ಕೊಟ್ಟು ನಿಮ್ಮನ್ನು ಬೆಳೆಸಿದೆ, ನಿಮ್ಮ
ಮಕ್ಕಳಿಗೂ ಹಾಲು ಕೊಡುತ್ತಿದ್ದೀನೆ.,ಆದರೆ
ನಾನು ತಿನ್ನುತ್ತಿದ್ದದ್ದು ಹುಲ್ಲು ಮಾತ್ರ.

 ಹಾಲಿನಿಂದ ಬೆಣ್ಣೆ ಮಾಡಿಕೊಂಡಿರಿ, ಬೆಣ್ಣೆಯಿಂದ

ತುಪ್ಪ ಮಾಡಿಕೊಂಡಿರಿ,

ಸಗಣಿಯಿಂದ ಬೆರಣಿ

ಮಾಡಿಕೊಂಡಿರಿ,

ಸಗಣಿ ಮತ್ತು ಗಂಜಲದಿಂದ ನಿಮ್ಮ ಜಮೀನಿನ

ಭೂಮಿಯನ್ನು ಹಸನು ಮಾಡಿಕೊಂಡಿರಿ,

 ಭೂಮಿಯಲ್ಲಿ ಒಳ್ಳೆಯ ಬೆಳೆ ಬೆಳೆದಿರಿ,
ಆದರೆ
ನನಗೆ ಕೊಡುತ್ತಿದ್ದದ್ದು ಮಾತ್ರ
ಹಾಳಾಗಿ ಕೊಳೆತು ಹೋದ ತರಕಾರಿಗಳನ್ನ. !

ನನ್ನ ಸಗಣಿಯಿಂದ ಗೋಬರ್ ಗ್ಯಾಸ್
ತಯಾರಿಸಿ ನಿಮ್ಮ ಮನೆಯನ್ನು
ಕತ್ತಲಿನಿಂದ ಬೆಳಕು ಮಾಡಿಕೊಂಡಿರಿ,

ಆದರೆ
ನನನ್ನೇ ಕುರುಡನಂತೆ ಕೊಲ್ಲಲು ಬಂದಿರುವೆ,

ಹಾಲಿನಿಂದ ಸಿಕ್ಕ
ಶಕ್ತಿಯಿಂದ ನನ್ನನ್ನು ಕೊಲ್ಲಲು ಆಯುಧ ಎತ್ತಿರುವೆ,
ಆ ಆಯುಧವನ್ನು ಹಿಡಿಯುವ ಶಕ್ತಿ
ನಿನಗೆ ಬಂದದ್ದು ನನ್ನಿಂದಲೇ.

ನನ್ನಿಂದ ಒಳ್ಳೆಯ
ಆದಾಯವನ್ನು ಮಾಡಿಕೊಂಡು
ಮನೆ ಮಾಡಿಕೊಂಡೆ,

ಆದರೆ,
ನನ್ನನ್ನು ಮಾತ್ರ ಮನೆಯಿಂದ ಹೊರಗೆ
ಒಂದು ಗುಡಿಸಿಲಿನಲ್ಲಿರಿಸಿದೆ.

ನಿಮ್ಮ ಹೆತ್ತ ತಾಯಿಗಿಂತಲು ನಾನೇ ನಿಮಗೆ
ಹೆಚ್ಚು ಆಸರೆಯಾದೆ,

ಶ್ರೀ  ಕೃಷ್ಣನ ಪ್ರಿಯಳು ನಾನು.

ನನಗೇ ಇಂತಹ ಶಿಕ್ಷೆ ಇರುವಾಗ

ನಿನ್ನ ಗತಿ ಎನಿರಬಹುದು,

 ನಿನ್ನ

ಭವಿಷ್ಯವನ್ನು ನೆನೆದು ನಾನು ನಗುತ್ತಿರುವೆ..

(ವಾಟ್ಸಪ್ಪಿನಲ್ಲಿ ಬಂದ  ಒಂದು ಸಂದೇಶ)

ವಿಡಿಯೋ ನೋಡಲು ಮೇಲಿನ/ ಕೆಳಗಿನ ಚಿತ್ರ ಕ್ಲಿಕ್ ಮಾಡಿರಿ


PARYAYA: ಹಸುವು ನಕ್ಕಿತು…ಏಕೆ..?:   ಹಸುವು ನಕ್ಕಿತು…ಏಕೆ..? ಕಸಾಯಿಖಾನೆಯಲ್ಲಿ ಒಬ್ಬ ಕಟುಕ ಹಸುವನ್ನು ಕೊಲ್ಲಲು ಬಂದಾಗ ಹಸುವು ಕಟುಕನನ್ನು ನೋಡಿ ನಗುತ್ತಿತ್ತು. ಇದನ್ನ ನೋಡಿ ಕಟುಕ ಹೇಳಿದ… ‘ನಾನು...

Sunday, November 21, 2021

PARYAYA: ಪ್ರಜಾಪ್ರಭುತ್ವದ ತಾಯಿ ಭಾರತ

ಪ್ರಜಾಪ್ರಭುತ್ವದ ತಾಯಿ ಭಾರತ


ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವಸಂಸ್ಥೆಯ 76ನೇ ಸಮ್ಮೇಳನದಲ್ಲಿ ಮಾತನಾಡುತ್ತಾ ‘ಪ್ರಜಾಪ್ರಭುತ್ವದ ತಾಯಿ’ ಎನಿಸಿರುವ ಭಾರತದ ಪ್ರತಿನಿಧಿಯಾಗಿ ವಿಶ್ವಸಂಸ್ಥೆಯನ್ನು ಪ್ರತಿನಿಧಿಸುತ್ತಿರುವುದಕ್ಕಾಗಿ ತಮಗೆ ಹೆಮ್ಮೆಯಾಗುತ್ತದೆ. ಭಾರತದ ಪ್ರಜಾಪ್ರಭುತ್ವಕ್ಕೆ ಸಹಸ್ರಾರು ವರ್ಷಗಳ ಇತಿಹಾಸವಿದೆ ಎಂಬುದಾಗಿ ಹೇಳಿದರು.

ವಿಶ್ವದ ಪ್ರಜಾಪ್ರಭುತ್ವಕ್ಕೆ ಗ್ರೀಕ್ ದೇಶವೇ ಮೂಲ ಎಂಬುದಾಗಿ ನಂಬಿದ್ದ ಹಲವರಿಗೆ ಇದು ಇರುಸು ಮುರುಸು ಉಂಟು ಮಾಡಿದ್ದು ಸುಳ್ಳಲ್ಲ. ಸಾಮಾಜಿಕ ಜಾಲತಾಣದಲ್ಲಿ ಇದರ ಬಗ್ಗೆ ಬಹಳಷ್ಟು ಚರ್ಚೆಗಳು ನಡೆದವು.

ಈ ಸಂದರ್ಭದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಯ ಕೇಂದ್ರದ ಸಹವರ್ತಿ ಕಾನ್‌ಸ್ಟಾಂಟಿನೋ ಕ್ಸೇವಿಯರ್  ಮಾಡಿದ ಒಂದು ಟ್ವೀಟ್ ಎಲ್ಲರ ಗಮನ ಸೆಳೆಯಿತು.

 "ಸ್ಥಳೀಯ ಭಾರತೀಯ ಪ್ರಜಾಪ್ರಭುತ್ವ" ಎಂಬ ಪರಿಕಲ್ಪನೆಯನ್ನು ಭಾರತದ ದಿಗಂಗತ ಪ್ರಧಾನಿಗಳಾಗಿದ್ದ ಮೊರಾರ್ಜಿ ದೇಸಾಯಿ ಮತ್ತು  ಅಟಲ್ ಬಿಹಾರಿ ವಾಜಪೇಯಿ ಸೇರಿದಂತೆ ಹಲವರು ಪ್ರಸ್ತಾಪಿಸಿದ್ದರು ಎಂದು ಅವರು ಟ್ವೀಟ್ ಮಾಡಿದರು.

ಅನೇಕ ವರ್ಷಗಳಿಂದ ವ್ಯಾಪಕವಾಗಿ ಪ್ರಚಾರದಲ್ಲಿರುವ  ಸಂದರ್ಶನ ಒಂದರ ಕಡೆಗೆ ಕ್ಸೇವಿಯರ್ ಗಮನ ಸೆಳೆದಿದ್ದರು.   “ಭಾರತದಲ್ಲಿ ಪ್ರಜಾಪ್ರಭುತ್ವವು ಇತರ ದೇಶಗಳಿಗಿಂತ ಹೆಚ್ಚು ಸಹಜವಾಗಿದೆ ಎಂಬುದನ್ನು ಜನರು ಮರೆಯುತ್ತಾರೆ. ಏಕೆಂದರೆ ಪ್ರಪಂಚದಲ್ಲಿ ಬೇರೆ ಯಾವುದೇ ದೇಶವು ಕನಸು ಕಾಣುವ ಮೊದಲೇ ಭಾರತದಲ್ಲಿ ಪ್ರಜಾಪ್ರಭುತ್ವವಿತ್ತು. ಇದು ವೇದಗಳಲ್ಲಿ ಇದೆ, ಅದನ್ನು ಸಂಪೂರ್ಣವಾಗಿ ಮತ್ತು ದೃಢವಾಗಿ ವಿವರಿಸಲಾಗಿದೆ " ಎಂದು ಮೊರಾರ್ಜಿ ದೇಸಾಯಿ ಹೇಳಿದ್ದರು.

ಬ್ರಿಟನ್‌ನಲ್ಲಿ ಅನೇಕರು ಭಾರತಕ್ಕೆ ತಾವು ನೀಡಿರುವ ಕೊಡುಗೆ  ಪ್ರಜಾಪ್ರಭುತ್ವ ಎಂದು ಭಾವಿಸಿದ್ದಾರಲ್ಲ ಎಂದು ಸಂದರ್ಶಕರು ಕಾಲೆಳೆದಾಗ ಮೊರಾರ್ಜಿ ಹೀಗೆ ಉತ್ತರಿಸಿದ್ದರು:  “ಅದು ಅವರಿಗೆ  ಇಷ್ಟವಾದರೆ, ಅದರ ಬಗ್ಗೆ ನನಗೆ ಯಾವುದೇ ತಕರಾರು ಇಲ್ಲ. ಆದರೆ ನಾವು 2,500 ವರ್ಷಗಳ ಹಿಂದೆ ಗಣರಾಜ್ಯಗಳನ್ನು ಹೊಂದಿದ್ದೆವು - 2,500 ವರ್ಷಗಳ ಹಿಂದೆ, ಗ್ರೀಸ್ ತನ್ನದೇ ರೀತಿಯ ಪ್ರಜಾಪ್ರಭುತ್ವವನ್ನು ಹೊಂದಿರುವುದಕ್ಕಿಂತ  ಮುಂಚೆಯೇ”.

ನಂತರ, 2003 ರಲ್ಲಿ,ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಭಾರತದ ಸಂಸತ್ತಿನ ಸುವರ್ಣ ಮಹೋತ್ಸವದ ಅಂಗವಾಗಿ ನಡೆದ ಅಂತಾರಾಷ್ಟ್ರೀಯ ಸಂಸತ್ತಿನ ಸಮ್ಮೇಳನದಲ್ಲಿ, "ಭಾರತದ ಪ್ರಜಾಪ್ರಭುತ್ವವು ಆಳವಾದ ಬೇರುಗಳನ್ನು ಹೊಂದಿದೆ ಮತ್ತು ನಮ್ಮ ಪ್ರಾಚೀನ ಸಂಸ್ಕೃತಿಯು ವಿಭಿನ್ನ ಮತ್ತು ಭಿನ್ನಾಭಿಪ್ರಾಯಗಳಿಗೆ ಗೌರವವನ್ನು ಕಲಿಸುತ್ತದೆ” ಎಂದು ಹೇಳಿದ್ದನ್ನೂ ಕ್ಸೇವಿಯರ್ ತಮ್ಮ ಟ್ವೀಟಿನಲ್ಲಿ ಪ್ರಸ್ತಾಪಿಸಿದರು.

1990 ರಲ್ಲಿ  ಆಗಿನ ವಿದೇಶಾಂಗ ವ್ಯವಹಾರಗಳ ಸಚಿವ ಪಿ.ವಿ. ನರಸಿಂಹ ರಾವ್ ( ರಾಜೀವ ಗಾಂಧಿಯವರ ಬಳಿಕ  ಪಿವಿ ನರಸಿಂಹ ರಾವ್ ಅವರೂ ಭಾರತದ ಪ್ರಧಾನಿಯಾದರು)  ನೇಪಾಳಕ್ಕೆ ಭೇಟಿ ನೀಡಿದಾಗ, "ಬುದ್ಧನ ಹುಟ್ಟು ಮತ್ತು ಬೋಧನೆಗಳ ಕಾಲದಲ್ಲಿ ಪ್ರಪಂಚದ ಈ ಭಾಗದಲ್ಲಿ ಅಸ್ತಿತ್ವದಲ್ಲಿದ್ದ ಪ್ರಜಾಪ್ರಭುತ್ವ ಗಣರಾಜ್ಯಗಳ ಬಗ್ಗೆ ಮಾತನಾಡಿದ್ದರು” ಎಂದೂ ಕ್ಸೇವಿಯರ್ ಪ್ರಸ್ತಾಪ ಮಾಡಿದ್ದಾರೆ.

ಲಿಚ್ಚಾವಿಗಳ ರಾಜಧಾನಿಯಾದ ವೈಶಾಲಿ ಪ್ರಜಾಪ್ರಭುತ್ವ ಗಣರಾಜ್ಯವಾಗಿದ್ದುಚುನಾಯಿತ ಅಧ್ಯಕ್ಷರೊಂದಿಗಿನ ಗಣ್ಯರ ಸಭೆಯಿಂದ ನಿಯಂತ್ರಿಸಲ್ಪಡುತ್ತಿತ್ತು ಎಂದು ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಕೂಡಾ ಹೇಳಿದ್ದರು.

ಭಾರತೀಯ ಸಂಸ್ಕೃತಿಯ ಅಡಿಪಾಯವೇ ಆಗಿರುವ ವೇದಗಳಲ್ಲಿರಾಮಾಯಣದಲ್ಲಿಮಹಾಭಾರತದಲ್ಲಿ ಪ್ರಜಾಪ್ರಭುತ್ವದ ಉಲ್ಲೇಖವಿದೆ.

ಹಾಗಾದರೆ ಭಾರತ ಪ್ರಜಾಪ್ರಭುತ್ವದ ಮೂಲ ಬೇರು ಯಾವುದು?  ಗ್ರಾಮ ಪಂಚಾಯತಿಗಳು ಇಲ್ಲವೇ ಗ್ರಾಮ ಸಭೆಗಳುವೇದರಾಮಾಯಣಮಹಾಭಾರತಗಳಲ್ಲಿ ಇದರ ಪ್ರಸ್ತಾಪವಿದೆ.

ಸಹಸ್ರಾರು ವರ್ಷಗಳ ಹಿಂದಿನ ಶಿಲಾ ಶಾಸನಗಳಲ್ಲೂ  ಬಗ್ಗೆ ಉಲ್ಲೇಖಗಳಿವೆತಮಿಳುನಾಡಿನ  ಉತಿರಾಮೆರೂರು ಎಂಬ ಗ್ರಾಮದ ದೇವಸ್ಥಾನದಲ್ಲಿನ ಶಿಲಾಶಾಸನವೊಂದರಲ್ಲಿ ಗ್ರಾಮ ಸಭೆಯ ಕಾರ್ಯ ನಿರ್ವಹಣೆಯ ಬಗೆಗೆ ಬರಹಗಳಿವೆ.

ಗ್ರಾಮಸಭೆಯ ಸದಸ್ಯರ ಆಯ್ಕೆಅವರ ಕಾರ್ಯ ನಿರ್ವಹಣೆಕರ್ತವ್ಯಗಳ ಬಗ್ಗೆಅವರನ್ನು ಅನರ್ಹಗೊಳಿಸುವ ಬಗ್ಗೆ ವಿವರಗಳಿವೆ.

 ಬಗೆಗಿನ ವಿಡಿಯೋವನ್ನು ನೋಡಲು ಮೇಲಿನ/ ಕೆಳಗಿನ ಚಿತ್ರಗಳನ್ನು ಕ್ಲಿಕ್ ಮಾಡಿ.


ಹೌದುನಿಜವಾಗಿಯೂ ನಮ್ಮ ಪ್ರಜಾಪ್ರಭುತ್ವದ ಇತಿಹಾಸಅದರ ಅಡಿಪಾಯವಾದ ಪಂಚಾಯತಿ ವ್ಯವಸ್ಥೆ ಬಗ್ಗೆ ನಾವಿಂದು ಹೆಮ್ಮೆ ಪಡಬೇಕಾಗಿದೆ.

-ನೆತ್ರಕೆರೆ ಉದಯಶಂಕರ


PARYAYA: ಪ್ರಜಾಪ್ರಭುತ್ವದ ತಾಯಿ ಭಾರತ:   ಪ್ರಜಾಪ್ರಭುತ್ವದ ತಾಯಿ ಭಾರತ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವಸಂಸ್ಥೆಯ 76ನೇ ಸಮ್ಮೇಳನದಲ್ಲಿ ಮಾತನಾಡುತ್ತಾ ‘ಪ್ರಜಾಪ್ರಭುತ್ವದ ತಾಯಿ’ ಎನಿಸಿರುವ ಭ...

Saturday, November 20, 2021

PARYAYA: ಬದ್ಧ ವೈರಿಗಳ ಅಪರೂಪದ ಮೈತ್ರಿ.!

ಬದ್ಧ ವೈರಿಗಳ ಅಪರೂಪದ ಮೈತ್ರಿ.!

ಬದ್ಧ ವೈರಿಗಳ ಅಪರೂಪದ ಮೈತ್ರಿ.!

ಇದು ಸುವರ್ಣ ನೋಟ

ಕೇರೆ ಹಾವು ಮತ್ತು ಗೂಬೆ ಪರಸ್ಪರ ವೈರಿಗಳು.ಹಾವು – ಮುಂಗುಸಿಗಳ ಹಾಗೆಯೇ. ಕೇರೆ ಹಾವು ಆಸುಪಾಸಿನಲ್ಲಿ ಸುಳಿದಾಡುತ್ತಿದ್ದರೆ ಸಾಕು ಗೂಬೆ ಅದರ ಮೇಲೆರಗಿ ಕುಕ್ಕದೇ ಬಿಡಲು ಸಾಧ್ಯವೇ ಇಲ್ಲ..

ಆದರೆಇತ್ತೀಚೆಗೆ ಒಂದು ದಿನ ಹಿರಿಯ ಪತ್ರಿಕಾ ಛಾಯಾಗ್ರಾಹಕ ವಿಶ್ವನಾಥ ಸುವರ್ಣ  ಬೆಂಗಳೂರಿನ ಕಬ್ಬನ್ ಪಾರ್ಕಿನಲ್ಲಿ ಸುತ್ತಾಡುತ್ತಿದ್ದಾಗ ಕಂಡು ಬಂದದ್ದು ಒಂದು ಅಪರೂಪದ ದೃಶ್ಯ.  ಗೂಬೆಯೊಂದು ಮರದ ರೆಂಬೆಯೊಂದರಲ್ಲಿ ಕುಳಿತಿದೆಅದರ ಸಮೀಪದಲ್ಲೇ ಒಂದು ಕೇರೆ ಹಾವು ಅತ್ತಿತ್ತ ಸುಳಿದಾಡುತ್ತಿದೆ.

ಓಹ್ ಇನ್ನೇನು ಕ್ಷಣಾರ್ಧದಲ್ಲಿ ಗೂಬೆ ಹಾವಿನ ಮೇಲೆರಗುತ್ತದೆಒಂದು ಪುಟ್ಟ ಕದನ ಏರ್ಪಡುತ್ತದೆ ಅಂದು ಕೊಂಡ ಸುವರ್ಣರು ಹೆಗಲ ಮೇಲಿನಿಂದ ಕ್ಯಾಮರಾ ಕೆಳಗಿಳಿಸಿದರು. ಅವರ  ಕ್ಯಾಮರಾ ಮುಂದಿನ ಸಮರ ದೃಶ್ಯದ ದಾಖಲೀಕರಣಕ್ಕೆ ಸಜ್ಜಾಯಿತು..

ಒಂದುಎರಡುಮೂರು . … ನಿಮಿಷಗಳು ಕಳೆದವುಊಹೂಂ ಕದನದ ಯಾವ ಲಕ್ಷಣವೂ ಇಲ್ಲಹಾವು ಹಿಂದೆ ಮುಂದೆ ಸುತ್ತಾಡಿದರೂಗೂಬೆಯದ್ದು ಗಂಭೀರ ಮೌನ!  ಅರೇಇದೇನಿದು

ಲಡಾಖ್ನಲ್ಲಿ ಭಾರತ-ಚೀನಾಗಳ ಸೇನಾ ಚಲನ ವಲನದಂತೆ ಆಯಿತಲ್ಲಬರೇ ಚಲನವಲನ ಮಾತ್ರಗಂಭೀರ ಮೌನ.ಸುತ್ತಾಡುವ ಕೇರೆ ಹಾವು ಗೂಬೆಯ ಕಣ್ಣಿನ ಸಮೀಪಕ್ಕೆ ಬಂದು ದಿಟ್ಟಿಸಿ ನೋಡಿದರೂ ಗೂಬೆಯಿಂದ ಸದ್ದಿಲ್ಲ, ಗದ್ದಲವಿಲ್ಲ. ಹಿಂದಕ್ಕೆ ಮುಂದಕ್ಕೆ ಸುತ್ತಿದರೂ ಮಿಸುಕಾಡದ ಗೂಬೆ.

ಅತ್ತಿತ್ತ ಸುಳಿದ ಹಾವು ಕಡೆಗೆ ಚೀನಾದ ಸೈನಿಕರ ಹಾಗೆ ಹಿಂದಕ್ಕೆ ಸರಿದು ಆಚೆ ಹೊರಟೇ ಹೋಯಿತುಗೂಬೆಯೋ ಭಾರತದ ಸೇನೆಯ ಹಾಗೆ ಘನ ಗಾಂಭೀರ್ಯದಿಂದ ಕುಳಿತಲ್ಲೇ ಕುಳಿತುಕೊಂಡಿತ್ತು…

ಸುವರ್ಣರ ಕ್ಯಾಮರಾ ಹೆಗಲಿನಿಂದ ಕೆಳಗೆ ಇಳಿಯಿತುಯುದ್ಧ ನಡೆಯಲಿಲ್ಲಎಲ್ಲವೂ ಶಾಂತಿಯೊಂದಿಗೆ ಮುಕ್ತಾಯವಾಯಿತು.

ಅದು ಸರಿ.  ಆದರೆ ಗೂಬೆ ತನ್ನ ಬದ್ಧ ವೈರಿ ಕೇರೆ ಹಾವಿನ ಮೇಲೆ ಏಕೆ ಎರಗಲಿಲ್ಲ ? ಈ  ಪ್ರಶ್ನೆ ಸುವರ್ಣರ ತಲೆಯೊಳಗೆ ಗುಂಯ್ ಗುಡುತ್ತಿತ್ತು.

ಅಷ್ಟರಲ್ಲಿ ನೆತ್ತಿಯ  ಮೇಲೆ ತಂಪಾದಂತಾಯಿತುನೋಡಿದರೆಬೀಸಿದ ಗಾಳಿಗೆ ಮರದ ಎಲೆಗಳಿಂದ ನೀರ ಹನಿಗಳು ಸುವರ್ಣರ ಮಂಡೆಯ ಮೇಲೆ ಬಿದ್ದಿದ್ದವುಹೌದು, ಹಿಂದಿನ ದಿನವಷ್ಟೇ

ಬೆಂಗಳೂರಿನಲ್ಲಿ ಭಾರೀ  ಮಳೆ ಸುರಿದಿತ್ತು.

ಸುವರ್ಣರ ಪ್ರಶ್ನೆಗೆ ಉತ್ತರ ಸಿಕ್ಕಿತು… ಹೌದುಗೂಬೆ ಮಳೆಯಿಂದ ಒದ್ದೆ ಮುದ್ದೆಯಾಗಿ ಕುಳಿತಿದೆ.ಬಹುಶಃ  ರಾತ್ರಿಯಿಂದಲೇ  ಹಾಗೆಯೇ ಕುಳಿತಿರಬಹುದು. ಹಾಗೇ ಸೂರ್ಯ ಮೇಲೆದ್ದು ಕಾಯಕ ಆರಂಭಿಸಿದ್ದಾನೆ.ಲೋಕಕ್ಕೆ  ಬೆಳಗಾಗುತ್ತಿದ್ದಂತೆಯೇ ಗೂಬೆಗೆ ಕತ್ತಲು ಆವರಿಸಿದೆಏಕೆಂದರೆ ಹಗಲು ಅದಕ್ಕೆ ಕಣ್ಣು ಕಾಣುವುದಿಲ್ಲಸುತ್ತ ಬಂದು ಸುತ್ತಾಡಿದ ಕೇರೆ ಹಾವು ಅದರ ಕಣ್ಣಿಗೆ ಬಿದ್ದೇ ಇಲ್ಲಇನ್ನು ಸಮರ ನಡೆಯುವುದು ಎಲ್ಲಿಗೆಕೇರೆ ಸುತ್ತಾಡಿ  ‘ಈ ಮೂಕ ಮುನಿಯ ಸಹವಾಸ’ ತನಗೇಕೆ  ಎಂದು ತನ್ನಷ್ಟಕ್ಕೇ ಹೊರಟು ಹೋಗಿದೆ ಅಷ್ಟೆ.

ವಿಶ್ವನಾಥ ಸುವರ್ಣ ಕ್ಯಾಮರಾ ಸೆರೆ ಹಿಡಿದ  ಘಟನೆಯ ದೃಶ್ಯಗಳು ಇಲ್ಲಿವೆ

ಸಮೀಪ ದೃಶ್ಯದ ಅನುಭವಕ್ಕಾಗಿ ಫೊಟೋಗಳನ್ನು ಕ್ಲಿಕ್ ಮಾಡಿರಿ.

ಕಥೆಯನ್ನು ಆಲಿಸಲು ಕೆಳಗೆ ಕ್ಲಿಕ್  ಮಾಡಿರಿ:

-ಉದಯನೆ


PARYAYA: ಬದ್ಧ ವೈರಿಗಳ ಅಪರೂಪದ ಮೈತ್ರಿ.!: ಬದ್ಧ ವೈರಿಗಳ ಅಪರೂಪದ ಮೈತ್ರಿ. ! ಇದು ಸುವರ್ಣ ನೋಟ ಕೇರೆ ಹಾವು ಮತ್ತು ಗೂಬೆ ಪರಸ್ಪರ ವೈರಿಗಳು . ಹಾವು – ಮುಂಗುಸಿಗಳ ಹಾಗೆಯೇ. ಕೇರೆ ಹಾವು ಆಸುಪಾಸಿನ...

Sunday, November 7, 2021

PARYAYA: ವಿಶ್ವ ಸಂಸ್ಥೆಯಲ್ಲಿ ಡೈನೋಸಾರ್..!

ವಿಶ್ವ ಸಂಸ್ಥೆಯಲ್ಲಿ ಡೈನೋಸಾರ್..!

ವಿಶ್ವಸಂಸ್ಥೆಯಲ್ಲಿ ಇತ್ತೀಚೆಗೆ ಜಾಗತಿಕ ಹವಾಮಾನ ಸ್ಥಿತಿಗತಿ ಬಗ್ಗೆ ಚರ್ಚೆ ನಡೆಯಿತು. ವಿಶ್ವವನ್ನು ದುರಂತದೆಡೆಗೆ ತಳ್ಳುತ್ತಿರುವ ಪಳೆಯುಳಿಕೆ ಇಂಧನಗಳ ಮೇಲಿನ ಅವಲಂಬನೆಯನ್ನು ತಗ್ಗಿಸಬೇಕಾದ ಅಗತ್ಯದ ಬಗ್ಗೆ ವಿವಿಧ ಅಭಿಪ್ರಾಯಗಳು ವ್ಯಕ್ತವಾದವು.

ಪ್ರಧಾನಿ ನರೇಂದ್ರ ಮೋದಿ ಅವರು ಭೂಮಿಯ ಮಂದಿ ಮತ್ತೆ ಸೂರ್ಯನತ್ತ ಹೋಗಬೇಕಾದ ಅಗತ್ಯವನ್ನು ಬಲವಾಗಿ ಪ್ರತಿಪಾದಿಸಿದರು. ‘ಒಬ್ಬ ಸೂರ್ಯ, ಒಂದು ಜಗತ್ತು, ಒಂದು ಜಾಲಇಂದಿನ ಅಗತ್ಯ ಎಂದು ಅವರು ಒತ್ತಿ ಹೇಳಿದರು.

ಇದೇ ಸಂದರ್ಭದಲ್ಲಿ ವಿಶ್ವಸಂಸ್ಥೆಯು ಒಂದು ವಿಡಿಯೋವನ್ನು ಪ್ರಸಾರ ಮಾಡಿತು. ವಿಡಿಯೋ ಸಂದೇಶ ಏನು ಎಂಬದನ್ನು ಕನ್ನಡದಲ್ಲಿ ನೋಡಿ.

ವಿಡಿಯೋ ನೋಡಲು ಮೇಲಿನ ಚಿತ್ರ/ ಕೆಳಗಿನ ಚಿತ್ರ ಕ್ಲಿಕ್ ಮಾಡಿರಿ

PARYAYA: ವಿಶ್ವ ಸಂಸ್ಥೆಯಲ್ಲಿ ಡೈನೋಸಾರ್..!:   ವಿಶ್ವ ಸಂಸ್ಥೆಯಲ್ಲಿ ಡೈನೋಸಾರ್ ..! ವಿಶ್ವಸಂಸ್ಥೆಯಲ್ಲಿ ಇತ್ತೀಚೆಗೆ ಜಾಗತಿಕ ಹವಾಮಾನ ಸ್ಥಿತಿಗತಿ ಬಗ್ಗೆ ಚರ್ಚೆ ನಡೆಯಿತು . ವಿಶ್ವವನ್ನು ದುರಂತದೆಡೆಗೆ ...