Tuesday, October 16, 2018

ಇಂದಿನ ಇತಿಹಾಸ History Today ಅಕ್ಟೋಬರ್ 16

ಇಂದಿನ ಇತಿಹಾಸ History Today ಅಕ್ಟೋಬರ್ 16
2018: ನಿಲಕ್ಕಲ್ (ಕೇರಳ): ಎಲ್ಲ ವಯಸ್ಸಿನ ಮಹಿಳೆಯಗೂ ಶಬರಿಮಲೈ ಅಯ್ಯಪ್ಪ ಸ್ವಾಮಿ ದೇವಾಲಯ ಪ್ರವೇಶದ ಬಾಗಿಲು ತೆರೆದ ಸುಪ್ರೀಂಕೋರ್ಟ್ ತೀರ್ಪಿನ ಅನುಷ್ಠಾನಕ್ಕೆ ನಿರ್ಧರಿಸಿದ ಕೇರಳ ಸರ್ಕಾರದ ನಿರ್ಧಾರದಿಂದ ಉದ್ಭವಿಸಿದ ಬಿಕ್ಕಟ್ಟಿನ ಇತ್ಯರ್ಥಕ್ಕಾಗಿ ತಿರುವಾಂಕೂರು ದೇವಸ್ವಂ ಮಂಡಳಿಯು (ಟಿಡಿಬಿ) ದೇವಾಲಯದ ತಂತ್ರಿ (ಪ್ರಧಾನ ಅರ್ಚಕ) ಮತ್ತು ಪಂದಳ ರಾಜಕುಟುಂಬ ಮತ್ತು ಇತರರ ಜೊತೆ ನಡೆಸಿದ ಮಾತುಕತೆ ವಿಫಲಗೊಂಡಿತು. ಮಾತುಕತೆ ವಿಫಲಗೊಂಡ ಪರಿಣಾಮವಾಗಿ ಮಾಸಿಕ ಪೂಜಾವಿಧಿಗಳಿಗಾಗಿ ದೇವಾಲಯದ ಬಾಗಿಲು ತೆರೆಯುವ ಮುನ್ನವೇ ರಾಜ್ಯ ಉದ್ವಿಗ್ನತೆ ತಲೆದೋರಿತು.  ಮಹಿಳೆಯರನ್ನು ದೇವಾಲಯದ ಒಳಕ್ಕೆ ಪ್ರವೇಶಿಸಲು ಬಿಡಬಾರದು ಎಂಬುದಾಗಿ ಅಯ್ಯಪ್ಪ ಸ್ವಾಮಿ ಭಕ್ತರು ಆಗ್ರಹಪೂರ್ವಕ ಪ್ರತಿಭಟನೆ ನಡೆಸುತ್ತಿದ್ದು ಸರ್ಕಾರ ಇಕ್ಕಟ್ಟಿನಲ್ಲಿ ಸಿಲುಕಿತು.  ‘ಪುನರ್ ಪರಿಶೀಲನಾ ಅರ್ಜಿ ಸಲ್ಲಿಕೆ ಬಗ್ಗೆ ಅಕ್ಟೋಬರ್ ೧೯ರಂದು ಚರ್ಚಿಸಬಹುದು ಎಂದು ದೇವಸ್ವಂ ಮಂಡಳಿಯವರು ಹೇಳಿದರು. ಅವರು ವಿಷಯವನ್ನು ಈದಿನ ಚರ್ಚಿಸಲು ಸಿದ್ಧರಿಲ್ಲದೆ ಇದ್ದುದರಿಂದ ನಾವು ಭ್ರಮ ನಿರಸನಗೊಂಡಿದ್ದೇವೆ. ಮಾತುಕತೆ ಸಮಾಧಾನಕರವಾಗಿರಲಿಲ್ಲ. ನಮ್ಮ ಬೇಡಿಕೆಗಳನ್ನು ಅಂಗೀಕರಿಸಲು ಅವರು ಸಿದ್ಧರಿಲ್ಲದೇ ಇದ್ದುದರಿಂದ ನಾವು ಸಭೆಯಿಂದ ಹೊರನಡೆದೆವು ಎಂದು ಪಂದಳ ರಾಜಕುಟುಂಬದ ಕುಡಿ ಶಶಿ ಕುಮಾರ್ ವರ್ಮ ಹೇಳಿದರು. ಮಾತುಕತೆ ವಿಫಲವಾಗಿರುವುದನ್ನು ದೃಢೀಕರಿಸಿದ ದೇವಸ್ವಂ ಮಂಡಳಿಯ ಅಧ್ಯಕ್ಷ ಪದ್ಮ ಕುಮಾರ್ ಅವರು, ಇತ್ಯರ್ಥ ಯತ್ನಗಳನ್ನು ಮುಂದುವರೆಸಲಾಗುವುದು ಎಂದು ಹೇಳಿದರು.  ದೇವಾಲಯದ ಸಂರಕ್ಷಕರಾಗಿರುವ ಪಂದಳ ರಾಜಕುಟುಂಬ ಮತ್ತು ದೇವಾಲಯದ ತಂತ್ರಿ ಕುಟುಂಬ ದೇವಾಲಯದ ವಿಧಿ ವಿಧಾನಗಳಿಗೆ ಸಂಬಂಧಿಸಿದಂತೆ ಯಥಾಸ್ಥಿತಿಯನ್ನು ಪಾಲಿಸಬೇಕು ಮತ್ತು ಸರ್ಕಾರವು ಸುಪ್ರೀಕೋರ್ಟಿನಲ್ಲಿ ಪಂಚ ಸದಸ್ಯ ತೀರ್ಪಿನ ವಿರುದ್ಧ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಬೇಕು ಎಂದು ಆಗ್ರಹಿಸಿದವು. ಸಭೆಯಲ್ಲಿ ದೇವಾಲಯದ ತಂತ್ರಿ, ಪಂದಳ ರಾಜಕುಟುಂಬವಲ್ಲದೆ ಭಕ್ತರ ಸಮೂಹಗಳಾದ ಅಯ್ಯಪ್ಪ ಸೇವಾ ಸಂಗಮ್, ಅಯ್ಯಪ್ಪ ಸೇವಾ ಸಮಾಜಮ್, ತಂತ್ರಿ ಮಹಾಮಂಡಲಂ ಮತ್ತು ಯೋಗ ಕ್ಷೇಮ ಸಭಾ ಕೂಡಾ ಪಾಲ್ಗೊಂಡಿದ್ದವುಸುಪ್ರೀಂ ತೀರ್ಪು ಅನುಷ್ಠಾನಕ್ಕೆ ಬದ್ಧ: ಪಿಣರಾಯಿ: ಮಾತುಕತೆ ಆರಂಭವಾಗುವುದಕ್ಕೆ ಮುನ್ನ ಈದಿನ ಬೆಳಗ್ಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಸರ್ಕಾರವು ಸುಪ್ರಿಂಕೋರ್ಟ್ ತೀರ್ಪಿನ ವಿರುದ್ಧ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸುವುದಿಲ್ಲ. ದೇವಾಲಯ ಪ್ರವೇಶಿಸದಂತೆ ಯಾರನ್ನೂ ತಡೆಯಲು ಸಾಧ್ಯವಿಲ್ಲ ಎಂದು ಹೇಳಿದ್ದರು.   ‘ನಾವು ಯಾರಿಗೂ ಕಾನೂನನ್ನು ಕೈಗೆತ್ತಿಕೊಳ್ಳಲು ಅವಕಾಶ ನೀಡುವುದಿಲ್ಲ. ಸರ್ಕಾರವು ಶಬರಿಮಲೈ ದೇವಾಲಯದಲ್ಲಿ ಪ್ರಾರ್ಥನೆ ಮಾಡಲು ಭಕ್ತರಿಗೆ ಸವಲತ್ತುಗಳನ್ನು ಒದಗಿಸುವ ಖಾತರಿ ನೀಡುತ್ತದೆ. ಸರ್ಕಾರವು ಪುನರ್ ಪರಿಶೀಲನಾ ಅರ್ಜಿ ಸಲ್ಲಿಸುವುದಿಲ್ಲ. ನಾವು ನ್ಯಾಯಾಲಯದಲ್ಲಿ ಸುಪ್ರೀಂಕೋರ್ಟ್ ಆದೇಶವನ್ನು ಪಾಲಿಸುವುದಾಗಿ ಹೇಳಿದ್ದೇವೆ.’ ಎಂದು ಸಾಪ್ತಾಹಿಕ ಸಂಪುಟ ಸಭೆಯ ಬಳಿಕ ವಿಜಯನ್ ಅವರು ಹೇಳಿದ್ದನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿತ್ತುಪ್ರಕ್ಷುಬ್ಧತೆ: ಮಧ್ಯೆ ಸುಪ್ರೀಂಕೋರ್ಟ್ ಕಳೆದ ತಿಂಗಳು ನೀಡಿದ ಐತಿಹಾಸಿಕ ತೀರ್ಪಿನ ಹೊರತಾಗಿಯೂ, ದೇವಾಲಯ ಸಮುಚ್ಚಯವನ್ನು ಪ್ರವೇಶಿಸದಂತೆ ಮಹಿಳೆಯರನ್ನು ನಿರ್ಬಂಧಿಸಬೇಕು ಎಂದು ಆಗ್ರಹಿಸಿ ಭಕ್ತರು ವ್ಯಾಪಕ ಪ್ರತಿಭಟನೆಗಳನ್ನು ನಡೆಸುತ್ತಿರುವುದರಿಂದ ದೇವಾಲಯದ ಆಸುಪಾಸಿನಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ಉಂಟಾಯಿತು. ದೇವಾಲಯ ಮಾರ್ಗದ ಮೂಲಶಿಬಿರವಾಗಿರುವ ಪಂಬಾದಿಂದ ೧೫ ಕಿಮೀ ದೂರದ ನೀಲಕ್ಕಲ್ ನಲ್ಲಿ ಭಕ್ತರು, ಬಹುತೇಕ ಮಹಿಳೆಯರು ಭಾರೀ ಮಳೆ ಸುರಿಯುತ್ತಿದ್ದರೂ ಲೆಕ್ಕಿಸದೆ ವಾಹನಗಳನ್ನು ತಪಾಸಣೆ ಮಾಡಿ ಮಹಿಳೆಯರನ್ನು ಹಿಂದಕ್ಕೆ ಹೋಗುವಂತೆ ಸೂಚಿಸಿದರು. ಭಾರಿ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದ್ದರೂ, ದೇವಾಲಯದತ್ತ ಹೊರಟ ಮಹಿಳೆಯರನ್ನು ತಡೆಯುತ್ತಿದ್ದ ಪ್ರತಿಭಟನಕಾರರನ್ನು ಯಾರೂ ತಡೆಯಲಿಲ್ಲ.
ಬೆಂಗಳೂರಿನಿಂದ ಬಂದಿದ್ದ ಕಾಲೇಜು ವಿದ್ಯಾರ್ಥಿನಿಯರ ಗುಂಪೊಂದನ್ನು ಹಿಂದಕ್ಕೆ ಕಳುಹಿಸಲಾಯಿತು. ಖಾಸಗಿ ವಾಹನಗಳಲ್ಲದೆ ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್ ಆರ್ ಟಿಸಿ) ಬಸ್ಸುಗಳನ್ನೂ ನಿಲ್ಲಿಸಿ ತಪಾಸಣೆ ನಡೆಸಿದ ಭಕ್ತರು ಯುವ ಮಹಿಳೆಯರನ್ನು ಕೆಳಗಿಳಿಯುವಂತೆ ಸೂಚಿಸಿದರು.  ಅಧಿಕೃತ ಕಾರ್ಯನಿಯೋಜನೆಯ ಭಾಗವಾಗಿ ಬೆಟ್ಟದ ಮೇಲಿನ ದೇವಾಲಯ ತಲುಪಲು ಯತ್ನಿಸುತ್ತಿದ್ದ ಮಹಿಳಾ ಪತ್ರಕರ್ತರನ್ನೂ ತಡೆಯಲಾಯಿತು. ನೀಲಕ್ಕಲ್ ನಲ್ಲಿ ಮರವೊಂದಕ್ಕೆ ನೇಣುಹಾಕಿಕೊಳ್ಳುವುದಾಗಿ ಬೆದರಿಕೆ ಹಾಕಿದ ಮಹಿಳಾ ಭಕ್ತೆಯೊಬ್ಬರ ಆತ್ಮಾಹುತಿ ಯತ್ನವನ್ನು ಪೊಲೀಸರು ವಿಫಲಗೊಳಿಸಿದರು.
ಮುಖ್ಯತಂತ್ರಿ ಆಗಮನ ಅನುಮಾನ: ದೇವಾಲಯವು  17ರ ಬೆಳಗ್ಗೆ ಗಂಟೆಗೆ ತನ್ನ ದ್ವಾರಗಳನ್ನು ತೆರೆಯಲಿದೆ. ಆದರೆ ಮಾತುಕತೆ ವಿಫಲಗೊಂಡ ಕಾರಣ ಮುಖ್ಯ ತಂತ್ರಿಯವರು ಪೂಜಾವಿಧಿಗಳನ್ನು ನೆರವೇರಿಸಲು ಬರುವ ಸಾಧ್ಯತೆಗಳಿಲ್ಲ ಎಂಬ ವದಂತಿ ವ್ಯಾಪಕವಾಗಿ ಹರಡಿತು. ಪ್ರಕ್ಷುಬ್ಧತೆಯ ಮಧ್ಯೆ ಭದ್ರತೆ ವಿಚಾರವು ತೀವ್ರ ಆತಂತಕ್ಕೆ ಕಾರಣವಾಯಿತು. ನಿಲಕ್ಕಲ್ ಗೆ ಇನ್ನಷ್ಟು ಪೊಲೀಸರು ಬರುವ ನಿರೀಕ್ಷೆಯಿದೆ. ನಿಲಕ್ಕಲ್ ನಲ್ಲೇ ಶಿಬಿರ ಹೂಡಿರುವ ಪಟ್ಟಣಂತಿಟ್ಟ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಟಿ. ನಾರಾಯಣನ್ ಅವರು ಮಾಧ್ಯಮಗಳ ಜೊತೆ ಮಾತನಾಡಲು ನಿರಾಕರಿಸಿದರು. ಇದಕ್ಕೆ ಮುನ್ನ ಸಿಪಿಐ(ಎಂ) ಮಾಜಿ ಶಾಸಕರೂ ಆಗಿರುವ, ದೇವಸ್ವಂ ಮಂಡಳಿಯ ಮುಖ್ಯಸ್ಥ ಪದ್ಮ ಕುಮಾರ್ ಅವರು ಮಾತುಕತೆ ಯಶಸ್ವಿಯಾಗುವ ವಿಶ್ವಾಸ ವ್ಯಕ್ತ ಪಡಿಸಿದ್ದರು.  ‘ಸೌಹಾರ್ದಯುತವಾಗಿ ವಿಷಯವು ಇತ್ಯರ್ಥಗೊಳ್ಳುವ ಬಗೆ ನಮಗೆ ವಿಶ್ವಾಸವಿದೆ. ಎಲ್ಲ ಪಾಲುದಾರರ ಅಭಿಪ್ರಾಯಗಳನ್ನೂ ನಾವು ಶಾಂತವಾಗಿ ಆಲಿಸುತ್ತೇವೆ. ನಾವು ಇದನ್ನು ರಾಜಕೀಯ ವಿಷಯವನ್ನಾಗಿ ಮಾಡಲು ಇಚ್ಚಿಸುವುದಿಲ್ಲ. ಇದೇ ಸಮಯದಲ್ಲಿ ನಮ್ಮ ಮಿತಿಗಳ ಬಗ್ಗೆ ನಾವು ಅವರಿಗೆ ಮನವರಿಕೆಯನ್ನೂ ಮಾಡುತ್ತೇವೆ ಎಂದು ಪದ್ಮಕುಮಾರ್ ಹೇಳಿದ್ದರುಬಿಕ್ಕಟ್ಟಿಗೆ ಪರಿಹಾರ ಹುಡುಕುವ ವಿಚಾರದಲ್ಲಿ ಪಂದಳ ರಾಜಕುಟುಂಬವು ಇದೀಗ ತಿರುವಾಂಕೂರು ದೇವಸ್ವಂ ಮಂಡಳಿಯ (ಟಿಡಿಬಿ) ಅಂಗಣದತ್ತ ಚೆಂಡು ಎಸೆಯಿತು.ದೇವಾಲಯದಲ್ಲಿ ಯಥಾಸ್ಥಿತಿ ಪಾಲನೆಯಾಗಬೇಕು ಎಂಬ ನಮ್ಮ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ. ಪರಿಹಾರ ಹುಡುಕುವುದು ಟಿಡಿಬಿಗೆ ಬಿಟ್ಟದ್ದು ಎಂದು ವರ್ಮಾ ಅವರು ಮಾತುಕತೆಗೂ ಮುನ್ನವೇ ಹೇಳಿದ್ದರು. ತಿಂಗಳ ಆದಿಯಲ್ಲಿ ರಾಜಕುಟುಂಬ ಮತ್ತು ತಂತ್ರಿ ಕುಟುಂಬವು ಮಾತುಕತೆಗಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ನೀಡಿದ್ದ ಆಹ್ವಾನವನ್ನು ತಿರಸ್ಕರಿಸಿದ್ದವು. ಋತುಮತಿ ವಯಸ್ಸಿನ ಮಹಿಳೆಯರು ಶಬರಿಮಲೈ ದೇವಾಲಯ ಪ್ರವೇಶಿಸದಂತೆ ವಿಧಿಸಲಾಗಿದ್ದ ನಿಷೇಧವು ಸಂವಿಧಾನ ಬಾಹಿರ ಎಂಬುದಾಗಿ ಸುಪ್ರೀಂಕೋಟ್ ಪಂಚಸದಸ್ಯ ಪೀಠವು ಕಳೆದ ತಿಂಗಳು ತೀರ್ಪು ನೀಡಿದ್ದು, ತೀರ್ಪಿನ ಬಗ್ಗೆ ತತ್ ಕ್ಷಣದಿಂದಲೇ ಭಕ್ತರು ತೀವ್ರವಾಗಿ ಆಕ್ರೋಶಗೊಂಡಿದ್ದರು. ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಕಾಂಗ್ರೆಸ್ ಪಕ್ಷದ ಕೇರಳ ಘಟಕಗಳು ಅಯ್ಯಪ್ಪ ಸ್ವಾಮಿ ಭಕ್ತರನ್ನು ಬೆಂಬಲಿಸಿದ್ದು, ಇದರಿಂದಾಗಿ ಸುಪ್ರೀಂಕೋರ್ಟ್ ತೀರ್ಪನ್ನು ಜಾರಿಗೊಳಿಸುವುದು ಸರ್ಕಾರಕ್ಕೆ ಕಠಿಣವಾಯಿತು.

2018: ಲಕ್ನೋಉತ್ತರಪ್ರದೇಶದ ಅಲಹಾಬಾದ್ ನಗರದ ಹೆಸರನ್ನುಪ್ರಯಾಗರಾಜ್ ಎಂಬುದಾಗಿ ಮರುನಾಮಕರಣ ಮಾಡುವ ಪ್ರಸ್ತಾವವನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಚಿವ ಸಂಪುಟವು  ವಿರೋಧ ಪಕ್ಷಗಳ ವಿರೋಧದ ಹೊರತಾಗಿಯೂ ಅಂಗೀಕರಿಸಿತು. ಅಲಹಾಬಾದ್  ಹೆಸರನ್ನುಪ್ರಯಾಗರಾಜ್ ಎಂಬುದಾಗಿ ಬದಲಾಯಿಸುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಘೋಷಣೆಯನ್ನು ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ  (ಎಸ್ ಪಿ) ತೀವ್ರವಾಗಿ ವಿರೋಧಿಸಿತು. ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ತ್ರಿವೇಣಿ ಸಂಗಮ ನಗರವಾಗಿರುವ ಅಲಹಾಬಾದ್ ನಗರದ  ಬುದ್ಧಿಜೀವಿಗಳು,  ಶಿಕ್ಷಕರು, ಸಾಹಿತಿಗಳು, ವಕೀಲರು ಮತ್ತು ರಾಜಕಾರಣಿಗಳು ನಗರದ ಮರುನಾಮಕರಣಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದರು. ನಗರದ ಮರುನಾಮಕರಣದಿಂದ ರಾಷ್ಟ್ರದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅಲಹಾಬಾದ್ ನಗರದ ಮಹತ್ವ ಕುಗ್ಗುತ್ತದೆ. ಹೆಸರು ಬದಲಾವಣೆಯ ಕ್ರಮ ಅರ್ಥರಹಿತ ಎಂದು ಕಾಂಗ್ರೆಸ್ ಹೇಳಿತು. ಆದಿತ್ಯನಾಥ್ ಸರ್ಕಾರದ ಕ್ರಮವು ಅವರ ಸರ್ಕಾರದಮರುನಾಮಕರಣ ಚಾಳಿಯ ಗುಣಲಕ್ಷಣವನ್ನು ಪುನಃ ತೋರಿಸಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಟೀಕಿಸಿದರು. ಅಲಹಾಬಾದಿನ ಪ್ರಾಚೀನ ಹೆಸರು ಪ್ರಯಾಗ, ಆದರೆ ೧೬ನೇ ಶತಮಾನದಲ್ಲಿ ಮೊಘಲ್ ದೊರೆ ಅಕ್ಬರ್, ಗಂಗಾ ಮತ್ತು ಯಮುನಾ ನದಿಗಳ ಸಂಗಮದ ಸಮೀಪ ಕೋಟೆಯೊಂದನ್ನು ನಿರ್ಮಿಸಿದ ಮತ್ತು  ಕೋಟೆ ಹಾಗೂ ಆಸುಪಾಸಿನ ಪ್ರದೇಶಕ್ಕೆ ಇಲ್ಲಾಹಾಬಾದ್ ಎಂಬುದಾಗಿ ಹೆಸರಿಟ್ಟ. ಬಳಿಕ ಅಕ್ಬರನ ಮೊಮ್ಮಗ ಶಾ ಜಹಾನ್ ಇಡೀ ನಗರಕ್ಕೆ ಅಲಹಾಬಾದ್ ಎಂಬುದಾಗಿ ಮರುನಾಮಕರಣ ಮಾಡಿದ್ದ. ಆದರೆ ಕುಂಭ ಮೇಳ ನಡೆಯುವ ಸಂಗಮಕ್ಕೆ ಸಮೀಪದ ತಾಣಕ್ಕೆ ಪ್ರಯಾಗ ಎಂಬ ಹೆಸರು ಮುಂದುವರೆಯಿತು. ಪ್ರಯಾಗವು ಭಗವಾನ್ ಬ್ರಹ್ಮ ಮೊತ್ತ ಮೊದಲ ಯಜ್ಞ ನಡೆಸಿದ್ದ ಸ್ಥಳ. ಎರಡು ನದಿಗಳು ಸಂಗಮಿಸುವ ಜಾಗವೇಪ್ರಯಾಗ ಮತ್ತು ಅಲಹಾಬಾದಿನಲ್ಲಿ ಗಂಗಾ, ಯಮುನಾ ಮತ್ತು ಸರಸ್ವತಿ ಮೂರು ನದಿಗಳು ಒಂದುಗೂಡುತ್ತವೆ. ಆದ್ದರಿಂದ ಇದುಪ್ರಯಾಗಗಳ ದೊರೆ. ಕಾರಣದಿಂದ ಇದುಪ್ರಯಾಗರಾಜ್ ಎಂದು ನಗರವನ್ನು ಕರೆಯಲಾಗುತ್ತದೆಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರವು ಮುನ್ನ ಮುಘಲ್ ಸರಾಯಿ ಜಂಕ್ಷನ್ ಹೆಸರನ್ನು ಪಂಡಿತ ದೀನದಯಾಳ್ ಉಪಾಧ್ಯಾಯ ಜಂಕ್ಷನ್ ಎಂಬುದಾಗಿ ಬದಲಾಯಿಸಿತ್ತುಮುಘಲ್ ಸರಾಯಿಯನ್ನು ಪಂಡಿತ ದೀನದಯಾಳ್ ಉಪಾಧ್ಯಾಯ ನಗರ ಎಂಬುದಾಗಿಯೂ ಮರುನಾಮಕರಣ ಮಾಡಲಾಗಿತ್ತು. ಕಳೆದ ವರ್ಷ ವಿವಿಧ ಅಖಾರಗಳ ಸಂತರು ಲಕ್ನೋದಲ್ಲಿ ಮುಖ್ಯಮಂತ್ರಿ ಯೋಗಿ ಅವರನ್ನು ಭೇಟಿ ಮಾಡಿ ಅಲಹಾಬಾದಿನ ಹೆಸರನ್ನು ಪವಿತ್ರ ನಗರಿಯಲ್ಲಿ ೨೦೧೯ರ ಅರ್ಧ ಕುಂಭಮೇಳ ನಡೆಯುವುದಕ್ಕೆ ಮುನ್ನವೇ ಪ್ರಯಾಗರಾಜ್ ಎಂಬುದಾಗಿ ಬದಲಾಯಿಸುವಂತೆ ಆಗ್ರಹಿಸಿದ್ದರು.

2018: ನವದೆಹಲಿ: ತಮ್ಮ ಸಚಿವ ಸಂಪುಟದ ಸಚಿವರಿಂದಲೇ ಲೈಂಗಿಕ ದುರ್ವರ್ತನೆ ನಡೆದಿರುವ ಆಪಾದನೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಏಕೆ ಮೌನವಾಗಿದ್ದಾರೆ ಎಂಬುದಾಗಿ ಪ್ರಶ್ನಿಸಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿಯವರ ಬೇಟಿ ಬಚಾವೋ ಮತ್ತು ಬೇಟಿ ಪಡಾವೋ ಘೋಷಣೆಗಳನ್ನು ಬದಲಾಯಿಸಬೇಕಾದ ಅಗತ್ಯವಿದೆ ಎಂದು ಹೇಳಿದರು.  ‘ಬಿಜೆಪಿ ನೇತಾವೋಂಸೆ, ಮಂತ್ರಿಯೋಂಸೆ, ಎಂಎಲ್ಎಯೋಂಸೆ ಬೇಟಿ ಬಚಾವೋ (ಬಿಜೆಪಿ ನಾಯಕರು, ಮಂತ್ರಿಗಳೂ ಮತ್ತು ಶಾಸಕರಿಂದ ಮಗಳನ್ನು ರಕ್ಷಿಸಿ) ಎಂಬುದಾಗಿಬೇಟಿ ಬಚಾವೋ ಘೋಷಣೆಯನ್ನು ಬದಲಾಯಿಸಬೇಕಾಗಿದೆ ಎಂದು ರಾಹುಲ್ ಗಾಂಧಿ ಹೇಳಿದರು. ಚುನಾವಣೆ ನಡೆಯಲಿರುವ ಮಧ್ಯಪ್ರದೇಶದ ಶೇವೋಪುರ ಜಿಲ್ಲೆಯಲ್ಲಿ ರ್ಯಾಲಿ ಒಂದರಲ್ಲಿ ಮಾತನಾಡಿದ ರಾಹುಲ್ಮೋದಿ ಜಿ ಅವರು ಒಳ್ಳೆಯ ಸ್ಲೋಗನ್ ಕೊಟ್ಟಿದ್ದಾರೆ: ಬೇಟಿ ಪಢಾವೋ, ಬೇಟಿ ಬಚಾವೋ. ನರೇಂದ್ರ ಮೋದಿ ಅವರ ಸಚಿವರನ್ನು ಪ್ರಶ್ನಿಸಲಾಗಿದೆ. ಉತ್ತರ ಪ್ರದೇಶದಲ್ಲಿ ಬಿಜೆಪಿ ಶಾಸಕ ಅತ್ಯಾಚಾರ ಮಾಡುತ್ತಾರೆ ಆದರೆ ಪ್ರಧಾನಿ ಒಂದು ಅಕ್ಷರ ಉಸುರುವುದಿಲ್ಲ ಎಂದು ಹೇಳಿದರು. ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಎಂಜೆ ಅಕ್ಬರ್ ವಿರುದ್ಧದ ಲೈಂಗಿಕ ಕಿರುಕುಳ ಮತ್ತು ಬಿಜೆಪಿ ಉತ್ತರ ಪ್ರದೇಶದ ಶಾಸಕ ಕುಲದೀಪ್ ಸಿಂಗ್ ಸೆನೆಗರ್ ವಿರುದ್ಧದ ಅತ್ಯಾಚಾರ ಆರೋಪಗಳ ಬಗ್ಗೆ ಪ್ರಸ್ತಾಪಿಸಿ ಪ್ರಧಾನಿಯನ್ನು ತರಾಟೆಗೆ ತೆಗೆದುಕೊಂಡ ರಾಹುಲ್, ಪ್ರಧಾನಿಯವರ ಬೇಟಿ ಪಢಾವೋ, ಬೇಟಿ ಬಚಾವೋ ಘೋಷಣೆಯನ್ನು ಬದಲಾಯಿಸುವ ಅಗತ್ಯ ಇದೆ ಎಂದು ಚುಚ್ಚಿದರು.

2018: ನವದೆಹಲಿ: ರಫೇಲ್ ವ್ಯವಹಾರ, ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಮತ್ತು ಅನುತ್ಪಾದಕ ಆಸ್ತಿ (ಎನ್ ಪಿಎ- ಮರುವಸೂಲಿಯಾಗದ ಸಾಲ) ಸೇರಿದಂತೆ ಹಲವಾರು ವಿಷಯಗಳಿಗೆ ಸಂಬಂಧಿಸಿದಂತೆ ಸ್ವತಃ ಪರ್ಯಾಯ ಕಟ್ಟುಕಥೆಗಳನ್ನು ಹೆಣೆಯುತ್ತಾ  ‘ಕೋಡಂಗಿ ನಟನೆ ಮಾಡುತ್ತಿದ್ದಾರೆ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ರಾಹುಲ್ ಗಾಂಧಿ ಅವರನ್ನು ತರಾಟೆಗೆ ತೆಗೆದುಕೊಂಡರು.  ‘ವಾಸ್ತವಾಂಶಗಳು ತಮಗೆ (ಗಾಂಧಿ) ಸರಿ ಹೊಂದದೇ ಇದ್ದಲ್ಲಿ ಆಗ ಅವರು ಪರ್ಯಾಯ ಕಟ್ಟುಕಥೆ ಸೃಷ್ಟಿಸುತ್ತಾರೆ. ಸುಳ್ಳು ಕಥೆಯನ್ನು ಡಜನ್ ಬಾರಿ ಪುನರಾವರ್ತಿಸುತ್ತಾರೆ ಮತ್ತು ತಪ್ಪೇ ವಾಸ್ತವವಾಗಿಯೂ ಸತ್ಯ ಎಂಬುದಾಗಿ ಸ್ವತಃ ಸಮಾಧಾನ ಮಾಡಿಕೊಳ್ಳುತ್ತಾರೆ. ಬಳಿಕ ಆತ್ಮಭ್ರಮೆಯಲ್ಲಿ ನೀವು ಆರಾಮವಾಗಿರುತ್ತೀರಿ ಎಂದು ಅರುಣ್ ಜೇಟ್ಲಿ ಅವರು ರಾಹುಲ್ ಗಾಂಧಿ ಅವರಿಗೆ ಚುಚ್ಚಿದರು. ಐದಂಶಗಳ ಪೋಸ್ಟಿನಲ್ಲಿ ತಮ್ಮ ವಿರುದ್ಧ ಕಾಂಗ್ರೆಸ್ ಅಧ್ಯಕ್ಷರು ಇತ್ತೀಚೆಗೆ ಮಾಡಿದ್ದ ಆರೋಪಗಳಿಗೆ ಪ್ರತಿಕ್ರಿಯಿಸಿದ ಸಚಿವರುನಾನು ಏನು ಹೇಳಿದ್ದೇನೋ ಅದನ್ನು ಸಮರ್ಥಿಸುವ ಹೊಣೆಗಾರಿಕೆ ಈಗ ನನ್ನ ಮೇಲೆಯೇ ಇದೆ ಎಂದು ಫೇಸ್ ಬುಕ್ ಪೋಸ್ಟಿನಲ್ಲಿ ತಿಳಿಸಿದರು. ಗಾಂಧಿಯವರು ಮತ್ತೆ ಮತ್ತೆಭಾರತದಲ್ಲಿನ ಖಾಸಗಿ ವ್ಯಾಪಾರ ಸಂಸ್ಥೆಯೊಂದು ೩೮,೦೦೦ ಕೋಟಿ ರೂಪಾಯಿಗಳಿಂದ ,೩೦,೦೦೦ ಕೋಟಿ ರೂಪಾಯಿಗಳಷ್ಟು ಲಾಭ ಗಳಿಸಿದೆ ಮತ್ತುಎಚ್ ಎಲ್ ಏನನ್ನು ತಯಾರಿಸುತ್ತಿತ್ತೋ ಅದನ್ನು ಈಗ ಖಾಸಗಿ ವ್ಯಾಪಾರೀ ಸಂಸ್ಥೆಯು ಯಾವುದೇ ಅನುಭವ ಇಲ್ಲದೇ ಇದ್ದರೂ ಈಗ ತಯಾರಿಸುತ್ತಿದೆ ಎಂದು ಗಾಂಧಿ  ಆಪಾದಿಸುತ್ತಾರೆ ಎಂದು ಜೇಟ್ಲಿ ಉಲ್ಲೇಖಿಸಿದರು. ರಾಹುಲ್ ಗಾಂಧಿಯವರ ಟೀಕೆಗೆ ಉತ್ತರಿಸಿರುವ ಜೇಟ್ಲಿ, ’ರಫೇಲ್ ವಿಮಾನ ಮತ್ತು ಅದರ ಶಸ್ತ್ರಾಸ್ತ್ರಗಳನ್ನು ಭಾರತದಲ್ಲಿ ಡಸಾಲ್ಟ್ ಅಥವಾ ಬೇರೆ ಯಾವುದೇ ಖಾಸಗಿ ಸಂಸ್ಥೆ ನಿರ್ಮಿಸುತ್ತಲೇ ಇಲ್ಲ ಎಂದು ಹೇಳಿದರು.  ’ಎಲ್ಲ ೩೬ ವಿಮಾನಗಳು ಮತ್ತು ಅದರ ಶಸ್ತ್ರಾಸ್ತ್ರಗಳು ಸಂಪೂರ್ಣ ಸನ್ನದ್ಧ ಸ್ಥಿತಿಯಲ್ಲಿ ಭಾರತಕ್ಕೆ ಬರಲಿವೆ. ಸರಬರಾಜು ಆರಂಭವಾದ ಬಳಿಕ ಗುತ್ತಿಗೆ ಮೌಲ್ಯದ ಶೇಕಡಾ ೫೦ರಷ್ಟನ್ನು ಡಸಾಲ್ಟ್ ಭಾರತದಿಂದಲೇ ಖರೀದಿಸಲು ಬಳಸುತ್ತದೆ. ಇದನ್ನು ಯುಪಿಎಯ ಮೇಕ್ ಇನ್ ಇಂಡಿಯಾ ನೀತಿಗೆ ಅನುಗುಣವಾಗಿ ಮಾಡಲಾಗಿದೆ ಎಂದು ಜೇಟ್ಲಿ ವಿವರಿಸಿದರು.  ‘ಒಟ್ಟು ವ್ಯವಹಾರ ೫೮,೦೦೦ ಕೋಟಿ ರೂಪಾಯಿಗಳಾಗಿದ್ದಲ್ಲಿ, ಶೇಕಡಾ ೫೦ರಷ್ಟು ಅಂದರೆ ೨೯,೦೦೦ ಕೋಟಿ ರೂಪಾಯಿಯಾಗುತ್ತದೆ. ಡಸಾಲ್ಟ್ ಕಂಪೆನಿಗೆ ಸರಬರಾಜನ್ನು ೧೨೦ ಪಾಲುದಾರ ಸರಬರಾಜುದಾರರು ಮಾಡಬೇಕು. ಹೆಸರಿಸಲಾಗಿರುವ ಉದ್ಯಮ ಸಂಸ್ಥೆಯು ೧೨೦ ಪಾಲುದಾರ ಸರಬರಾಜುದಾರರಲ್ಲಿ ಒಂದು. ಶೇಕಡಾ ೩ರಷ್ಟು ಮರುಬಂಡವಾಳ ಮಾತ್ರವೇ ಪಾಲುದಾರ ಕಂಪೆನಿಗೆ ಲಭಿಸುತ್ತದೆ ಎಂದು ಡಸಾಲ್ಟ್ ಹೇಳಿದೆ. ಅಂದರೆ ಮೊತ್ತ ೧೦೦೦ ಕೋಟಿ ರೂಪಾಯಿಗಿಂತಲೂ ಕಡಿಮೆ ಎಂದು ಜೇಟ್ಲಿ ವಿವರಿಸಿದರು. ಅನುತ್ಪಾದಕ ಆಸ್ತಿ ಅಥವಾ ಮರುವಸೂಲಿಯಾಗದ ಸಾಲ ವಿಷಯಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖ್ಯಸ್ಥರ ಮೇಲೆ ದಾಳಿ ನಡೆಸಿದ ಜೇಟ್ಲಿ, ’ ಸಾಲಗಳನ್ನು ಯುಪಿಎ ಆಡಳಿತಾವಧಿಯಲ್ಲೇ ನೀಡಲಾಗಿದೆ. ಸುಸ್ತಿದಾರ ಕಂಪೆನಿಗಳ ಪ್ರವರ್ತಕರನ್ನು ಐಬಿಸಿ ಮೂಲಕ ಹೊರಕ್ಕೆ ಎಸೆಯಲಾಗಿದೆ ಮತ್ತು ಬ್ಯಾಂಕುಗಳು ಯಶಸ್ವಿಯಾಗಿ ಬಾಕಿ ವಸೂಲಿ ಮಾಡುತ್ತಿವೆ. ಎನ್ ಸಿ ಎಲ್ ಟಿ ಬ್ಯಾಂಕುಗಳ ಪ್ರಕ್ರಿಯೆ ಮೂಲಕ ಅವುಗಳ ಸಾಲವನ್ನು ಮರುವಸೂಲಿ ಮಾಡಲಾಗುತ್ತಿದೆ ಎಂದು ಹೇಳಿದರು.  ‘ಭಾರತದಲ್ಲಿ ಮೊಬೈಲ್ ಫೋನುಗಳನ್ನು ಏಕೆ ನಿರ್ಮಾಣ ಮಾಡಲಾಗುತ್ತಿಲ್ಲ ಎಂಬ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ. ಯುಪಿಎ ಅಧಿಕಾರದಿಂದ ಇಳಿದಾಗ ಭಾರತದಲ್ಲಿ ಮೊಬೈಲ್ ಫೋನು ಮತ್ತು ಸಂಬಂಧಿಸಿ ಸಲಕರಣೆಗಳನ್ನು ನಿರ್ಮಿಸುವ ಎರಡೇ ಎರಡು ಘಟಕಗಳಿದ್ದವು. ಇಂದು ೧೨೦ ಘಟಕಗಳಿದ್ದು ಅವುಗಳ ಸಂಖ್ಯೆ ಇನ್ನೂ ಹೆಚ್ಚುತ್ತಿವೆ ಎಂಬುದಾಗಿ ತಿಳಿಸುವ ಮೂಲಕ ಅವರನ್ನು ಹಿಂದೆಯೇ ತಿದ್ದಿದ್ದೇನೆ ಎಂದು ಜೇಟ್ಲಿ ತಿಳಿಸಿದರು. ಕಾಂಗೆಸ್ ಮುಖ್ಯಸ್ಥರು ತಮ್ಮ ಉದಾಹರಣೆಯನ್ನು ತತ್ ಕ್ಷಣವೇ ಬದಲಾಯಿಸಿ, ರಾಷ್ಟ್ರದಲ್ಲಿ ಪಾದರಕ್ಷೆಗಳನ್ನು ಏಕೆ ನಿರ್ಮಾಣ ಮಾಡಲಾಗುತ್ತಿಲ್ಲ ಎಂದು ಕೇಳಿದ್ದಾರೆ ಎಂದು ಹೇಳಿದ ಸಚಿವರು ವಿಚಾರದಲ್ಲೂ ಅವರಿಗೆ ಅಲ್ಪ ಮಾಹಿತಿ ಇದೆ. ಭಾರತವು ವಿಶ್ವದಲ್ಲೇ ಎರಡನೇ ದೊಡ್ಡ ಪಾದರಕ್ಷೆ ತಯಾರಕ ರಾಷ್ಟ್ರವಾಗಿ ಬೆಳೆದಿದೆ. ನಮ್ಮ ಪಾದರಕ್ಷೆ ರಫ್ತು ಪ್ರತಿವರ್ಷ ೨೦,೦೦೦ ಕೋಟಿ ರೂಪಾಯಿಯಷ್ಟಿದೆ. ದೆಹಲಿ ಹೊರವಲಯದ ಬಹಾದುರ್ ಗಢಕ್ಕೆ ಭೇಟಿ ಕೊಡಿ, ಭಾರತದ ಪಾದರಕ್ಷೆ ಉದ್ಯಮದ ಪೈಪೋಟಿಯ ಸ್ವರೂಪ ನಿಮಗೆ ಅರ್ಥವಾಗುತ್ತದೆ ಎಂದು ಜೇಟ್ಲಿ ತಿಳಿಸಿದರು. ರಾಹುಲ್ ಗಾಂಧಿಯವರು ಪದೇ ಪದೇಗಬ್ಬಾರ್ ಸಿಂಗ್ ಟ್ಯಾಕ್ಸ್ ಎಂಬುದಾಗಿ ಮೂದಲಿಸುವ ಸರಕು ಮತ್ತು ಸೇವಾ ತೆರಿಗೆಯ (ಜಿಎಸ್ ಟಿ) ಯಶಸ್ವೀ ಅನುಷ್ಠಾನದಿಂದ ಭಾರತವು ಏಕ ಮಾರುಕಟ್ಟೆಯ ರಾಷ್ಟ್ರವಾಗಿ ಬದಲಾಗಿದೆ. ಎಲ್ಲ ತಪಾಸಣಾ ಕೇಂದ್ರಗಳು (ಚೆಕ್ ಪಾಯಿಂಟ್) ರದ್ದಾಗಿವೆ. ಇನ್ಸ್ಪೆಕ್ಟರುಗಳು ಕಣ್ಮರೆಯಾಗಿದ್ದಾರೆ. ಆದಾಯ ತೆರಿಗೆಯಂತೆಯೇ ಈಗ ಜಿಎಸ್ ಟಿಯನ್ನು ಆನ್ ಲೈನ್ ಮೂಲಕವೇ ಪಾವತಿ ಮಾಡಲಾಗುತ್ತಿದೆ ಎಂದು ಜೇಟ್ಲಿ ವಿವರಿಸಿದರು.  ‘ಕಾಂಗ್ರೆಸ್ ಕೊಡುಗೆಯಾಗಿದ್ದ ಶೇಕಡಾ ೩೧ರ ತೆರಿಗೆಯನ್ನು (ಅಬಕಾರಿ+ವ್ಯಾಟ್+ಸಿಎಸ್ಟಿ) ಮೊದಲ ೧೩ ತಿಂಗಳುಗಳಲ್ಲಿ ೩೩೪ ವಸ್ತುಗಳಿಗೆ ಶೇಕಡಾ ೧೮ ಮತ್ತು ಶೇಕಡಾ ೧೨ಕ್ಕೆ ಇಳಿಸಲಾಗಿದೆ. ಇದು ಹಣದುಬ್ಬರಕ್ಕೂ ತಡೆ ಹಾಕಿದೆ. ರಾಹುಲ್ ಗಾಂಧಿಯವರಿಗೆ ಇದೆಲ್ಲ ಗೊತ್ತೇ ಇಲ್ಲವೆಂದು ಕಾಣುತ್ತದೆ ಎಂದು ಜೇಟ್ಲಿ ಕುಟುಕಿದರು. ತಾವು ವಿಜಯ್ ಮಲ್ಯ, ನೀರವ್ ಮೋದಿ ಮತ್ತಿತರ ದೇಶಭ್ರಷ್ಟ ಉದ್ಯಮಿಗಳ ಸಂಪರ್ಕದಲ್ಲಿ ಇರುವುದಾಗಿ ರಾಹುಲ್ ಗಾಂಧಿ ಮಾಡಿದ ಆರೋಪವನ್ನೂ ತಳ್ಳಿಹಾಕಿದ ಜೇಟ್ಲಿ, ’ಇದು ವ್ಯಕ್ತಿತ್ವದ ವಿಷಯ, ಅವರು (ಗಾಂಧಿ) ಸುಳ್ಳನ್ನು ಡಜನ್ ಬಾರಿ ಹೇಳುತ್ತಾರೆ. ಬಳಿಕ ಅದೇ ಸತ್ಯ ಎಂಬ ಆತ್ಮಭ್ರಮೆಯಲ್ಲಿ ಮುಳುಗುತ್ತಾರೆ ಅಥವಾಕೋಡಂಗಿ ರಾಜಕುಮಾರ ತಮ್ಮನ್ನೇ ಕೋಡಂಗಿಯನ್ನಾಗಿ ಮಾಡಿಕೊಳ್ಳುತ್ತಿದ್ದಾರೆಯೇ? ಎಂದು ಛೇಡಿಸಿದ್ದಾರೆ.

2018: ಭೋಪಾಲ್: ಮಧ್ಯ ಪ್ರದೇಶದ ವಿಧಾನಸಭೆಗೆ ಇನ್ನೊಂದು ತಿಂಗಳಲ್ಲಿ ಚುನಾವಣೆ ನಡೆಯಲಿದೆ. ಹೊತ್ತಿನಲ್ಲಿ ತಾವು ಪಕ್ಷದ ಪರವಾಗಿ ಪ್ರಚಾರ ನಡೆಸುವ ಮತ್ತು ಭಾಷಣ ಮಾಡುವ ಕೆಲಸದಿಂದ ದೂರ ಉಳಿಯುವುದಾಗಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಹೇಳಿದರು. ತಾವು ಭಾಷಣ ಮಾಡಿದರೆ, ಅಥವಾ ಪ್ರಚಾರ ಮಾಡಿದರೆ ಪಕ್ಷದ ನಿರ್ಣಾಯಕ ಮತಗಳಿಗೆ ಧಕ್ಕೆ ಉಂಟಾಗಬಹುದು ಎಂಬ ಕಾರಣಕ್ಕಾಗಿ ತಾವು ಪ್ರಚಾರ ಭಾಷಣಗಳಿಂದ ದೂರ ಉಳಿಯುವುದಾಗಿ ಅವರು ತಿಳಿಸಿದರು. ಪಕ್ಷದ ರಾಜ್ಯ ಅಧ್ಯಕ್ಷ ಜಿತು ಪಟ್ವಾರಿ ಮನೆಯಲ್ಲಿ ಅವರ ಜೊತೆ ಕೆಲಸ ಮಾಡುತ್ತಿದ್ದ ಕಾರ್ಯಕರ್ತರ ಜೊತೆ ಅನೌಪಚಾರಿಕ ಮಾತುಕತೆ ನಡೆಸುತ್ತಿದ್ದಾಗ ಸೆರೆ ಹಿಡಿದದ್ದು ಎಂದು ಹೇಳಲಾಗಿರುವ ವಿಡಿಯೋ ಒಂದರಲ್ಲಿ ಸಿಂಗ್ ಅವರು ತಮ್ಮಏಕೈಕ ಕೆಲಸ ಬಗ್ಗೆ ಮಾತನಾಡಿದ್ದು ದಾಖಲಾಗಿದ್ದು, ವಿಡಿಯೋ ಇದೀಗ ವೈರಲ್ ಆಯಿತು.  ನನಗೆ ಇರುವುದು ಒಂದೇ ಕೆಲಸ. ಪ್ರಚಾರ ಇಲ್ಲ, ಭಾಷಣ ಇಲ್ಲ. ನನ್ನ ಭಾಷಣಗಳಿಂದ ಕಾಂಗ್ರೆಸ್ ಮತಗಳಿಗೆ ಧಕ್ಕೆಯಾಗುತ್ತದೆ. ಆದ್ದರಿಂದ ನಾನು (ಪ್ರಚಾರಕ್ಕೆ) ಹೋಗುವುದಿಲ್ಲ ಎಂದು ದಿಗ್ವಿಜಯ್ ಸಿಂಗ್ ಹೇಳಿದರು. ಪಕ್ಷದ ಅಭ್ಯರ್ಥಿಗಳಿಗೆ ವಿಜಯಗಳಿಸಲು ನೆರವಾಗಿ ಎಂದು ಅವರು ಕಾರ್ಯಕರ್ತರಿಗೆ ಸಲಹೆ ಮಾಡಿದರು.  ‘ನೀವು ಕಠಿಣ ಶ್ರಮ ವಹಿಸದಿದ್ದರೆ, ನಿಮಗೆ ಸರ್ಕಾರ ರಚಿಸಲು ಸಾಧ್ಯವಾಗುವುದಿಲ್ಲ. ಯಾರಿಗೆ ಟಿಕೆಟ್ ಸಿಗುತ್ತದೋ ಅಂತಹವರು ನಿಮ್ಮ ವೈರಿಯಾಗಿದ್ದರೂ ವಿಜೇತರಾಗಲು ನೆರವಾಗಿ ಎಂದು ಸಿಂಗ್ ಕಾರ್ಯಕರ್ತರಿಗೆ ಸೂಚಿಸಿದರು. ಈ ವರ್ಷದ ಆದಿಯಲ್ಲಿ ತಮ್ಮ ನರ್ಮದಾ ಪರಿಕ್ರಮ ಸಂದರ್ಭದಲ್ಲಿ ಮುಖ್ಯಮಂತ್ರಿ ಆಕಾಂಕ್ಷೆಯನ್ನು ಸಿಂಗ್ ಅವರು ತಳ್ಳಿಹಾಕಿದ್ದರು. ಬಳಿಕ ಅವರಿಗೆ ಕಾಂಗ್ರೆಸ್ ಸಮನ್ವಯ ಸಮಿತಿಯ ಅಧ್ಯಕ್ಷ ಸ್ಥಾನವನ್ನು ನೀಡಲಾಗಿತ್ತು. ಇತ್ತೀಚೆಗೆ ಅವರು ಪಕ್ಷದ ಕಾರ್ಯಕರ್ತರಿಗೆ ಸ್ಫೂರ್ತಿ ತುಂಬಲು ಮತ್ತು ಆಂತರಿಕ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳುವ ಸಲುವಾಗಿ ಏಕತಾ ಯಾತ್ರೆ ನಡೆಸಿದ್ದರು. ಪಕ್ಷದ ಇತರ ನಾಯಕರು ಯತ್ನದಲ್ಲಿ ಸೇರುವ ನಿರೀಕ್ಷೆ ಇದ್ದರೂ, ಚುನಾವಣೆಗೆ ಮುನ್ನ ಅವರ ಜೊತೆಗೆ ಪಕ್ಷದ ವೇದಿಕೆ ಹಂಚಿಕೊಳ್ಳಲು ಹಿಂಜರಿದರು. ದಿಗ್ವಿಜಯ್ ಸಿಂಗ್ ಅವರು ೧೦ ವರ್ಷಗಳ ರಾಜ್ಯಭಾರ ೨೦೦೩ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಕೊನೆಗೊಂಡಿತ್ತು.

2018: ನವದೆಹಲಿ: ಎರಡು ಕೊಲೆ ಪ್ರಕರಣಗಳಿಗೆ ಸಂಬಂಧಿಸಿದಂತೆ, ಸ್ವಯಂ ಘೋಷಿತ ದೇವಮಾನವ ಬಾಬಾ ರಾಮ್‌ಪಾಲ್‌ಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು.  ಕೊಲೆ ಪ್ರಕರಣಗಳಲ್ಲಿ ರಾಮ್‌ಪಾಲ್ ದೋಷಿ ಎಂದು ಕಳೆದ ವಾರ ಹರಿಯಾಣ ಕೋರ್ಟ್ ತೀರ್ಪು ನೀಡಿತ್ತು. ಎರಡೂ ಕೊಲೆ ಪ್ರಕರಣಗಳಲ್ಲಿ ರಾಮ್‌ಪಾಲ್ ಹಾಗೂ ೨೬ ಭಕ್ತರ ಆರೋಪ ಸಾಬೀ ತಾಗಿತ್ತು. ಇಂದು ರಾಮ್‌ಪಾಲ್‌ಗೆ ಶಿಕ್ಷೆ ಪ್ರಮಾಣ ಪ್ರಕಟವಾಯಿತು.  ಹೆಚ್ಚುವರಿ ಜಿಲ್ಲಾ ಹಾಗೂ ಸೆ?ನ್ಸ್ ನ್ಯಾಯಾ ಲಯದ ನ್ಯಾಯಾಧೀಶ ಡಿ.ಆರ್. ಚಾಲಿಯಾ ಅವರು ತೀರ್ಪು ಪ್ರಕಟಿಸಿದರು. ೨೦೧೪ ನವೆಂ ಬರ್ ೮ರಂದು ಬರ್ವಾಲದ ಸತ್ಲೋಕ್ ಆಶ್ರಮ ದಲ್ಲಿ ಮಹಿಳೆಯೊಬ್ಬರ ಅನುಮಾನಾಸ್ಪದ ಸಾವು ಹಾಗೂ ೨೦೧೪ ನವೆಂಬರ್ ೧೯ರಂದು ರಾಂಪಾಲ್‌ನನ್ನು ಪೊಲೀಸರು ಬಂಧಿಸಲು ತೆರಳಿದ್ದಾಗ ಉಂಟಾದ ಗಲಭೆಯಲ್ಲಿ ನಾಲ್ವರು ಮಹಿಳೆಯರು ಮತ್ತು ಒಂದು ಮಗು ಸಾವಿಗೀಡಾದ ಪ್ರಕರಣದಲ್ಲಿ ಇವರಿಗೆ ಶಿಕ್ಷೆಯಾಗಿದೆ.
ಅಂದೇ, ಕೊಲೆ, ಕೊಲೆಗೆ ಯತ್ನ, ಪಿತೂರಿ, ಅಕ್ರಮವಾಗಿ ಶಸ್ತ್ರಾಸ್ತ್ರಗಳನ್ನು ಇಟ್ಟುಕೊಂಡದ್ದು ಹಾಗೂ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣಗಳು ರಾಮ್‌ಪಾಲ್ ಮೇಲೆ ದಾಖಲಾಗಿದ್ದವು. ತೀರ್ಪಿನಿಂದ ಗಲಭೆ ಉಂಟಾಗಬಹುದೆಂದು ಪೊಲೀಸರು ಎಲ್ಲೆಡೆ ಬಿಗಿ ಬಂದೋಬಸ್ತ್ ಮಾಡಿದರು. ರಾಮ್‌ಪಾಲ್ ಆಶ್ರಮದಲ್ಲಿ ತಮ್ಮ ಹೆಂಡತಿಯರ ಕೊಲೆಯಾಗಿದೆ ಎಂದು ಇಬ್ಬರು ವ್ಯಕ್ತಿಗಳು ಪ್ರತ್ಯೇಕ ಪ್ರಕರಣಗಳನ್ನ ದಾಖಲಿಸಿದ್ದರು. ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ೨೦೧೪ರಲ್ಲಿ ರಾಮ್‌ಪಾಲ್ ಬಂಧನವಾಗಿತ್ತು. ೪ ವ?ಗಳ ಸುದೀರ್ಘ ವಿಚಾರಣೆಯ ನಂತರ ಇದೀಗ ರಾಮ್‌ಪಾಲ್ಗೆ  ಜೈಲು ಶಿಕ್ಷೆ ವಿಧಿಸಲಾಗೆ ಗುರಿಯಾದ.

2018: ಸ್ಯಾನ್‌ಫ್ರಾನ್ಸಿಸ್ಕೋ: ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಪಾಲ್ ಅಲೆನ್ ಸೋಮವಾರ ನಿಧನರಾಗಿದ್ದಾರೆ. ಅವರಿಗೆ ೬೫ ವರ್ಷ  ವಯಸ್ಸಾಗಿತ್ತು. ಹಲವು ವರ್ಷಗಳಿಂದ ಕ್ಯಾನ್ಸರ್‌ನಿಂದ ಅವರು ಬಳಲುತ್ತಿದ್ದರು. ಅಕ್ಟೋಬರ್೧೫ರ ಮಧ್ಯಾಹ್ನ ಅಲೆನ್ ಅವರು ಇಹಲೋಕ ತ್ಯಜಿಸಿರುವುದಾಗಿ ಕುಟುಂಬ ವರ್ಗದವರು ತಿಳಿಸಿದರು. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅಲೆನ್ ಅವರು ಸೋಮವಾರ ಕೊನೆಯುಸಿರೆಳೆದಿದ್ದಾರೆ ಎಂದು ಅವರ ಕುಟುಂಬಸ್ಥರು ತಿಳಿಸಿದರು. ಬಿಳಿ ರಕ್ತಕಣಗಳನ್ನು ಕೊಲ್ಲುವ ಮಾರಕ ಕ್ಯಾನ್ಸರ್‌ಗೆ ಅಲೆನ್ ತುತ್ತಾಗಿದ್ದರು. ಕಳೆದ ಸುಮಾರು ೬ ವ?ಗಳಿಂದ ಅವರು ಇದಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಅವರು ವಿಧಿವಶರಾದರು. ೧೯೭೦ರಲ್ಲಿ ವಿಶ್ವದ ಶ್ರೀಮಂತ ಉದ್ಯಮಿ ಬಿಲ್ ಗೇಟ್ಸ್ ಅವರೊಂದಿಗೆ ಸೇರಿಖ್ಯಾತ ತಂತ್ರಾಂಶ ಸಂಸ್ಥೆ ಮೈಕ್ರೋಸಾಫ್ಟ್ ಅನ್ನು ಪಾಲ್ ಅಲೆನ್ ಹುಟ್ಟುಹಾಕಿದ್ದರು. ಬಳಿಕ ಮೈಕ್ರೋಸಾಫ್ಟ್ ವಿಶ್ವದ ದೈತ್ಯ ತಂತ್ರಾಂಶ ತಯಾರಿಕಾ ಸಂಸ್ಥೆಯಾಗಿ ಬೆಳೆದಿದೆ. ಇಂದು ಪಾಲ್ ಅಲೆನ್ ಮತ್ತು ಬಿಲ್ ಗೇಟ್ಸ್ ವಿಶ್ವದ ಶ್ರೀಮಂತ ಗಣ್ಯರ ಪಟ್ಟಿಯಲ್ಲಿ ಅಗ್ರಮಾನ್ಯರಾಗಿದ್ದಾರೆ. ಇನ್ನು ಪಾಲ್ ಅಲೆನ್ ನಿಧನಕ್ಕೆ ವಿಶ್ವದ ಖ್ಯಾತನಾಮ ಉದ್ಯಮಿಗಳು, ಹಾಲಿವುಡ್ ನಟರು ಮತ್ತು ತಂತ್ರಜ್ಞಾನ ಲೋಕದ ತಜ್ಞರು ಕಂಬನಿ ಮಿಡಿದರು. ಇದಲ್ಲದೆ ವಲ್ಕಾನ್ ಇಂಕ್ ಎಂಬ ಕಂಪನಿಯನ್ನು ಹುಟ್ಟು ಹಾಕಿದ್ದರು. ಕಳೆದ ಕೆಲ ವರ್ಷಗಳಿಂದ ಅಲೆನ್ ಅವರು ನಾನ್ ಹಾಡ್ಕಿನ್ ಲಿಂಫೋಮಾದಿಂದ ಬಳಲುತ್ತಿದ್ದರು. ಇವರು ಕೂಡ ಬಿಲ್ ಗೇಟ್ಸ್‌ರಂತೆ ತಮ್ಮ ಸಂಪತ್ತನ್ನು ಸಮಾಜಿಕ ಕಾರ್ಯಗಳಿಗೆ ಬಳಸುವ ಮೂಲಕ ಜನಮನ್ನಣೆಗಳಿಸಿದ್ದರು. ಅತ್ಯಂತ ಹಳೆಯ ಮತ್ತು ಆತ್ಮೀಯ ಸ್ನೇಹಿತನನ್ನು ಕಳೆದುಕೊಂಡಿರುವುದು ತೀವ್ರ ನೋವು ತಂದಿದೆ" ಎಂದು ಗೇಟ್ಸ್ ಪ್ರತಿಕ್ರಿಯಿಸಿದ್ದಾರೆ. ಬಹುಶಃ ಅಲೆನ್ ಇಲ್ಲದಿದ್ದರೆ, ಕಂಪ್ಯೂಟರ್‌ಗಳೇ ಇರುತ್ತಿರಲಿಲ್ಲ ಎಂದು ಬಣ್ಣಿಸಿದರು.  "ಪಾಲ್ ಒಂದು ಕಂಪನಿಯನ್ನು ಮಾತ್ರ ಸ್ಥಾಪಿಸಿಲ್ಲ. ತಮ್ಮ ಬುದ್ಧಿಮತ್ತೆ ಮತ್ತು ಪ್ರೀತಿಯನ್ನು ಜನರ ಜೀವನ ಸುಧಾರಣೆ ಮತ್ತು ವಿಶ್ವಾದ್ಯಂತ ಸಮುದಾಯಗಳನ್ನು ಸಬಲಗೊಳಿಸುವ ಕಾರ್ಯಕ್ಕೆ ವಿನಿಯೋಗಿಸಿದ್ದರು. ಅದು ಒಳ್ಳೆಯದಕ್ಕೆ ಅರ್ಹ ಎಂದಾದರೆ ನಾವದನ್ನು ಮಾಡಲೇಬೇಕು ಎಂದು ಅವರು ಹೆಮ್ಮೆಯಿಂದ ಹೇಳುತ್ತಿದ್ದರು" ಎಂದು ಗೇಟ್ಸ್ ವಿವರಿಸಿದರು. "ಅಲೆನ್ ಅವರು ಕಂಪನಿ, ಸಮುದಾಯ ಹಾಗೂ ಉದ್ಯಮಕ್ಕೆ ನೀಡಿದ ಕೊಡುಗೆ ಅನನ್ಯ" ಎಂದು ಮೈಕ್ರೊಸಾಫ್ಟ್ ಸಿಇಓ ಸತ್ಯ ನಾದೆಲ್ಲಾ ಪ್ರತಿಕ್ರಿಯಿಸಿದ್ದಾರೆ. ಅಪೂರ್ವ ಕ್ರೀಡಾಪ್ರೇಮಿಯೂ ಆಗಿದ್ದ ಅಲೆನ್, ಪೋರ್ಟ್‌ಲ್ಯಾಂಡ್ ಟ್ರಯಲ್ ಬ್ಲೇಝರ್ಸ್ ಮತ್ತು ಸಿಯಾಟೆಲ್ ಸೀಹಾಕ್ಸ್ ತಂಡಗಳ ಮಾಲಕರೂ ಆಗಿದ್ದರು. ನ್ಯೂ ಮೆಕ್ಸಿಕೋದ ಅಲ್ಬುಕರ್ಕ್‌ನಲ್ಲಿ ತಮ್ಮ ಹೊಸ ಕಂಪನಿಯನ್ನು ಆರಂಭಿಸಿದರು. ಕಂಪ್ಯೂಟರ್ ಕಾರ್ಯನಿರ್ವಹಿಸಲು ಅಗತ್ಯವಾದ ಕಂಪ್ಯೂಟರ್ ಲ್ಯಾಂಗ್ವೇಜ್ ಇವರ ಮೊಟ್ಟಮೊದಲ ಉತ್ಪನ್ನವಾಗಿತ್ತು. ಎಂಎಸ್-ಬೇಸಿಕ್ ಉತ್ಪನ್ನದ ಮಾರಾಟದ ಯಶಸ್ಸಿನ ಬಳಿಕ ತಮ್ಮ ವಹಿವಾಟನ್ನು ೧೯೭೯ರಲ್ಲಿ ವಾಷಿಂಗ್ಟನ್‌ನ ಬೆಲ್ಲೇವ್‌ಗೆ ಸ್ಥಳಾಂತರಿಸಿದ್ದರು. ೧೯೮೦ರಲ್ಲಿ ಐಬಿಎಂ ಕಾರ್ಪೊರೇ?ನ್, ವೈಯಕ್ತಿಕ ಕಂಪ್ಯೂಟರ್ ಉತ್ಪಾದನೆ ಆರಂಭಿಸಿ, ಆಪರೇಟಿಂಗ್ ಸಿಸ್ಟಂ ಒದಗಿಸುವಂತೆ ಮೈಕ್ರೊಸಾಫ್ಟ್‌ಗೆ ಮನವಿ ಮಾಡಿದಾಗ ಮೈಕ್ರೊಸಾಫ್ಟ್ ಉದ್ಯಮ ಹೊಸ ಎತ್ತರಕ್ಕೆ ತಲುಪಿತು. ವಾಸ್ತವವಾಗಿ ಈ ಕಂಪನಿ ಆಪರೇಟಿಂಗ್ ಸಿಸ್ಟಮ್ ಸಂಶೋಧನೆ ಮಾಡಿಲ್ಲ. ಐಬಿಎಂನ ಅಗತ್ಯ ಪೂರೈಸುವ ಸಲುವಾಗಿ ೫೦ ಸಾವಿರ ಡಾಲರ್ ವೆಚ್ಚದಲ್ಲಿ, ಟಿಮ್ ಪೀಟರ್‌ಸನ್ ಎಂಬುವವರು ಸಿದ್ಧಪಡಿಸಿದ್ದ ಕ್ಯೂಡಾಸ್ ಖರೀದಿಸಿತ್ತು. ಅದನ್ನು ಬಳಿಕ ಡಾಸ್ (ಡೆಸ್ಕ್ ಆಪರೇಟಿಂಗ್ ಸಿಸ್ಟಂ) ಎಂದು ಕರೆಯಿತು.

2016: ಪಣಜಿ (ಗೋವಾ): ಭಾರತ ಸೇರಿದಂತೆ ಕೆಲವು ಬ್ರಿಕ್ಸ್ ರಾಷ್ಟ್ರಗಳ ವಿರುದ್ಧ ಇತ್ತೀಚೆಗೆ ನಡೆದಿರುವ ಭಯೋತ್ಪಾದಕ ದಾಳಿಗಳನ್ನು ಬ್ರಿಕ್ಸ್ ಶೃಂಗಸಭೆ ಖಂಡಿಸಿತು. ಬ್ರಿಕ್ಸ್ ಮಹಾ ಅಧಿವೇಶನದ ಬಳಿಕ ಹೊರಡಿಸಲಾದಗೋವಾ ಘೋಷಣೆಯಲ್ಲಿ ಖಂಡನೆಯನ್ನು ಪ್ರಕಟಿಸಲಾಯತು.  ‘ಗುಂಪುಗಳು ಮತ್ತು ಅವುಗಳೊಂದಿಗೆ ಸೇರಿದ ವ್ಯಕ್ತಿಗಳಿಂದ ನಡೆಯುವ ಅಂತಾರಾಷ್ಟ್ರೀಯ ಭಯೋತ್ಪಾದನೆ, ವಿಶೇಷವಾಗಿ ಭದ್ರತೆ, ಸಮಗ್ರತೆಗೆ ಧಕ್ಕೆ ಉಂಟು ಮಾಡುವ ಭಯೋತ್ಪಾದನೆಯು ಶಾಂತಿ ಮತ್ತು ಭದ್ರತೆಗೆ ಜಾಗತಿಕ ಬೆದರಿಕೆ ಎಂಬದನ್ನು ನಾವು ಮಾನ್ಯ ಮಾಡುತ್ತೇವೆಎಂದು ಘೋಷಣೆ ಹೇಳಿತು. ಹಲವಾರು ರಾಷ್ಟ್ರಗಳಲ್ಲಿ ಇರುವ ರಾಜಕೀಯ ಮತ್ತು ಭದ್ರತಾ ಅಸ್ಥಿರತೆಯು ಭಯೋತ್ಪಾದನೆ ಮತ್ತು ಉಗ್ರವಾದದ ಪರಿಣಾಮವಾಗಿ ಇನ್ನಷ್ಟು ತೀವ್ರಗೊಂಡಿರುವ ಬಗ್ಗೆ ನಾವು ಕಳವಳ ವ್ಯಕ್ತ ಪಡಿಸುತ್ತೇವೆಎಂದು ಗೋವಾ ಘೋಷಣೆೆ ಹೇಳಿತು. ತಮ್ಮ ನೆಲದಿಂದ ಭಯೋತ್ಪಾದನೆ ಚಟುವಟಿಕೆ ತಡೆಯುವುದು ಆಯಾ ರಾಷ್ಟ್ರದ ಹೊಣೆಗಾರಿಕೆ ಎಂದೂ ಘೋಷಣೆ ತಿಳಿಸಿತು. ಶೃಂಗಸಭೆಯಲ್ಲಿ ಎಲ್ಲ ಸದಸ್ಯ ರಾಷ್ಟ್ರಗಳೂ ಒಪ್ಪಂದಗಳಿಗೆ ಸಹಿಮಾಡಿ ಅವುಗಳನ್ನು ವಿನಿಮಯ ಮಾಡಿಕೊಂಡ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಪ್ರಧಾನಿ ಮೋದಿ, ಬ್ರಿಕ್ಸ್ ಸಮೂಹದ ಮುಂದಿನ ಅಧ್ಯಕ್ಷನಾಗಿರುವ ಚೀನಾಕ್ಕೆ ನಾವು ಸಕಲ ಬೆಂಬಲವನ್ನೂ ನೀಡುತ್ತೇವೆ ಎಂದು ಪ್ರಕಟಿಸಿದರು. ಶಾಂತಿ ಮತ್ತು ಭದ್ರತೆಗೆ ಸಂಬಂಧಿಸಿದ ವಿಚಾರಲ್ಲಿ ನಮ್ಮ ಸಮಾಲೋಚನೆ ಮತ್ತು ಸಹಕಾರವನ್ನು ಇನ್ನಷ್ಟು ಬಲಪಡಿಸಲು ಬ್ರಿಕ್ಸ್ ಬದ್ಧವಾಗಿದೆ ಎಂದು ನುಡಿದ ಮೋದಿ ಭಯೋತ್ಪಾದಕರ ಹಣಕಾಸು ಮೂಲ ಪತ್ತೆ ಹಚ್ಚುವಿಕೆ, ಶಸ್ತ್ರಾಸ್ತ್ರ, ಮದ್ದುಗುಂಡು, ಉಪಕರಣ ಸರಬರಾಜು ಮತ್ತು ಭಯೋತ್ಪಾದನೆ ಸೇರಿದಂತೆ ಭಯೋತ್ಪಾದನೆಗೆ ನೆರವಾಗುವುದನ್ನು ಗುರಿಯಾಗಿಸಿ ದಾಳಿ ನಡೆಸಲು ಒಪ್ಪಿಕೊಳ್ಳಲಾಗಿದೆ ಎಂದು ಹೇಳಿದರು.

2016: ಪಣಜಿ (ಗೋವಾ): ಭಯೋತ್ಪಾದನೆಯು ಅಭಿವೃದ್ಧಿ ಕಾರ್ಯಗಳಿಗೆ ದೊಡ್ಡ ತೊಡಕಾಗಿದ್ದು, ಸಂಘಟಿತ ಯತ್ನದ ಮೂಲಕ ಅದನ್ನು ನಿಗ್ರಹಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಗೋವಾದಲ್ಲಿ 2 ದಿನಗಳಿಂದ ನಡೆಯುತ್ತಿರುವ ಬ್ರಿಕ್ಸ್ ಶೃಂಗ ಸಭೆಯ ಮಹಾಧಿವೇಶನದಲ್ಲಿ ಕರೆ ನೀಡಿದರುಭಯೋತ್ಪಾದಕರಿಗೆ ಒದಗಿಸಲಾಗುತ್ತಿರುವ ಹಣಕಾಸು ಬೆಂಬಲ, ಶಸ್ತ್ರಾಸ್ತ್ರ ಸರಬರಾಜು, ತರಬೇತಿ ಮತ್ತು ರಾಜಕೀಯ ಬೆಂಬಲವನ್ನು ವ್ಯವಸ್ಥಿತವಾಗಿ ಕಡಿತಗೊಳಿಸಬೇಕು. ನಮ್ಮ ರಾಷ್ಟ್ರೀಯ ಭದ್ರತಾ ಏಜೆನ್ಸಿಗಳ (ಎನ್ಎಸ್) ಮಧ್ಯೆ ಭದ್ರತಾ ಸಹಕಾರ ಇನ್ನಷ್ಟು ಗಾಢವಾಗಬೇಕಾದ ಅಗತ್ಯ ಇದೆ. ಅಂತಾರಾಷ್ಟ್ರೀಯ ಭಯೋತ್ಪಾದನೆ ಬಗ್ಗೆ ಆದಷ್ಟು ಶೀಘ್ರ ಸಮಗ್ರ ಸಮಾವೇಶ ಸಂಘಟಿಸಬೇಕು. ಅಲ್ಲಿ ಭಯೋತ್ಪಾದನೆ ಹಾವಳಿಯನ್ನು ಸಂಪೂರ್ಣವಾಗಿ ಚಿವುಟಿಹಾಕುವ ದೃಢ ಅಭಿಪ್ರಾಯ ವ್ಯಕ್ತವಾಗಬೇಕು ಎಂದು ಮೋದಿ ಹೇಳಿದರು. ಭಯೋತ್ಪಾದಕ ವ್ಯಕ್ತಿಗಳು ಮತ್ತು ಸಂಘಟನೆಗಳನ್ನು ಆಯ್ದುಕೊಂಡು ನಿಗ್ರಹಕ್ಕೆ ಯತ್ನಿಸುವುದರಿಂದ ಯಾವುದೇ ಪ್ರಯೋಜನವಿಲ್ಲ. ಅದು ಪ್ರತಿಕೂಲವೂ ಆಗಬಹುದು ಎಂದು ಮೋದಿ ನುಡಿದರು. ಅಭಿವೃದ್ಧಿ ಮತ್ತು ಆರ್ಥಿಕ ಸಮೃದ್ಧಿಯ ಮೇಲೆ ಭಯೋತ್ಪಾದನೆ ತನ್ನ ಕರಿನೆರಳು ಚಾಚಿದೆ. ಇದು ಅತ್ಯಂತ ಮಾರಕವಾಗಿ ಬೆಳೆದಿದೆ. ವ್ಯಕ್ತಿಗತವಾಗಿ ಮತ್ತು ಸಾಮೂಹಿಕವಾಗಿ ಭಯೋತ್ಪಾದನೆ ವಿರುದ್ಧ ಕ್ರಮಕ್ಕೆ ಮುಂದಾಗಬೇಕಾಗಿದೆ. ನಮ್ಮ ನಾಗರಿಕರ ಪ್ರಾಣ ರಕ್ಷಣೆಗೆ ಭದ್ರತೆಯ ಜೊತೆಗೆ ಭಯೋತ್ಪಾದನೆ ನಿಗ್ರಹದಲ್ಲಿ ಸಹಕಾರ ಅತ್ಯಗತ್ಯ ಎಂದು ಅವರು ಹೇಳಿದರು. ಬ್ರಿಕ್ಸ್ ಕೃಷಿ ಸಂಶೋಧನಾ ಕೇಂದ್ರ ಸ್ಥಾಪನೆ, ರೈಲ್ವೇ ಸಂಶೋಧನಾ ಜಾಲ ಮತ್ತು ಬ್ರಿಕ್ಸ್ ಕ್ರೀಡಾ ಮಂಡಳಿ ಸ್ಥಾಪನೆಯ ಕಾರ್ಯವನ್ನು ನಾವು ತ್ವರಿತಗೊಳಿಸಬೇಕಾಗಿದೆ. ತೆರಿಗೆ ವಂಚನೆ, ಕಪ್ಪು ಹಣ ಮತ್ತು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲೂ ಸ್ಪಷ್ಟ ರೂಪುರೇಷೆ ಹಾಕಿಕೊಳ್ಳಬೇಕಾದ ಅಗತ್ಯ ಇದೆ ಎಂದು ಪ್ರಧಾನಿ ನುಡಿದರು. ಬ್ರಿಕ್ಸ್ ಇತರ ಸದಸ್ಯ ರಾಷ್ಟ್ರಗಳ ಪ್ರಮುಖರೂ ಮಾತನಾಡಿದರು.

2016: ಪಣಜಿ (ಗೋವಾ): ಭಯೋತ್ಪಾದನೆಯಮಾತೃನೌಕೆಭಾರತದ ನೆರೆಯ ರಾಷ್ಟ್ರವಾಗಿದೆ. ವಿಶ್ವಾದ್ಯಂತದ ಉಗ್ರಗಾಮಿ ಘಟಕಗಳಿಗೆ ಅದರ ಜೊತೆಗೆ ಸಂಪರ್ಕವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ತಾನದ ಹೆಸರು ಉಲ್ಲೇಖಿಸದೆಯೇ ಇಲ್ಲಿ ಹೇಳಿದರು. ಬ್ರೆಜಿಲ್, ಚೀನಾ, ರಷ್ಯಾ ಮತ್ತು ದಕ್ಷಿಣ ಆಫ್ರಿಕಾ ಮತ್ತು ಭಾರತವನ್ನು ಒಳಗೊಂಡ ಬ್ರಿಕ್ಸ್ ಶೃಂಗಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಅವರು, ಭಯೋತ್ಪಾದನೆಯು ಶಾಂತಿ, ಭದ್ರತೆ ಮತ್ತು ಅಭಿವೃದ್ಧಿಗೆ ಗಂಭೀರ ಬೆದರಿಕೆಯನ್ನು ಒಡ್ಡಿದೆ. ಬ್ರಿಕ್ಸ್ ಸಮೂಹ ಒಂದೇ ಧ್ವನಿಯಲ್ಲಿ ಅದರ ವಿರುದ್ಧ ಮಾತನಾಡಬೇಕಾಗಿದೆ ಎಂದು ನುಡಿದರುದುರಂತವೆಂದರೆ, ಭಯೋತ್ಪಾದನೆಯಮಾತೃನೌಕೆಯು ಭಾರತದ ನೆರೆಯ ರಾಷ್ಟ್ರವಾಗಿದೆ. ವಿಶ್ವಾದ್ಯಂತದ ಭಯೋತ್ಪಾದಕ ಘಟಕಗಳು ಮಾತೃನೌಕೆ ಜೊತೆಗೆ ಸಂಪರ್ಕ ಹೊಂದಿವೆಎಂದು ಮೋದಿ ಹೇಳಿದ್ದಾರೆ ಎಂದು ವಿದೇಶಾಂಗ ಸಚಿವರ ವಕ್ತಾರ ವಿಕಾಸ್ ಸ್ವರೂಪ್ ಅವರು ಟ್ವೀಟ್ ಮಾಡಿದ ಹೇಳಿಕೆ ತಿಳಿಸಿತು. ರಾಷ್ಟ್ರ ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿರುವುದು ಮಾತ್ರವಲ್ಲ. ಅದು ಮನಃಸ್ಥಿತಿಯನ್ನೂ ರೂಪಿಸುತ್ತದೆ. ರಾಜಕೀಯ ಲಾಭಕ್ಕಾಗಿ ಭಯೋತ್ಪಾದನೆ ನ್ಯಾಯೋಚಿತ ಎಂಬ ಮನಃಸ್ಥಿತಿಯನ್ನೂ ರಾಷ್ಟ್ರ ಹುಟ್ಟು ಹಾಕಿ ಘೊಷಿಸುತ್ತಿದೆೆಎಂದೂ ಮೋದಿ ಹೇಳಿದರು. ಗಡಿಯಾಚೆಯ ಭಯೋತ್ಪಾದನೆ ವಿಚಾರದಲ್ಲಿ ರಷ್ಯಾದಿಂದ ಪ್ರಬಲ ಬೆಂಬಲ ಪ್ರಾಪ್ತವಾದ ಒಂದು ದಿನದ ಬಳಿಕ ಪ್ರಧಾನಿಯವರಿಂದ ಪ್ರಬಲ ಮಾತುಗಳು ಬಂದವು.. ಆದರೆ ಗಡಿಯಾಚೆಯ ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ನೆರವಾಗುವ ಬಗ್ಗೆ ಅಥವಾ ಪಾಕಿಸ್ತಾನದಂತಹ ಉಗ್ರಗಾಮಿಗಳ ಆಡುಂಬೊಲ ವಿರುದ್ಧ ಜಾಗತಿಕ ಅಭಿಪ್ರಾಯ ರೂಪಿಸುವ ಭಾರತದ ಯತ್ನಕ್ಕೆ ಸಹಕರಿಸುವ ಬಗ್ಗೆ ಚೀನಾ ತನ್ನ ಬದ್ಧತೆ ಪ್ರದರ್ಶಿಸಲಿಲ್ಲ..
2016: ಬೆಂಗಳೂರು: ಬಸವೇಶ್ವರ ವೃತ್ತದಿಂದ ಹೆಬ್ಬಾಳದವರೆಗೆ ನಿರ್ಮಿಸಲು ಉದ್ದೇಶಿಸಿರುವ ಉಕ್ಕಿನ
ಮೇಲ್ಸೇತುವೆಯನ್ನು ವಿರೋಧಿಸಿಉಕ್ಕಿನ ಮೇಲ್ಸೇತುವೆ ವಿರೋಧಿ ನಾಗರಿಕರುಮಾನವ ಸರಪಳಿ ರಚಿಸುವ ಮೂಲಕ ಪ್ರತಿಭಟನೆ ನಡೆಸಿದರು. ಬಸವೇಶ್ವರ ವೃತ್ತ, ಬಿಡಿಎ ಕಚೇರಿ, ಕಾವೇರಿ ಜಂಕ್ಷನ್, ಮೇಖ್ರಿ ವೃತ್ತದ ಬಳಿ ಬೆಳಿಗ್ಗೆ 8 ಗಂಟೆಯಿಂದ ಮಾನವ ಸರಪಳಿ  ಆರಂಭಗೊಂಡಿತು. 10 ಗಂಟೆ ವೇಳೆಗೆ ಬಸವೇಶ್ವರ ವೃತ್ತದಿಂದ ಮೇಖ್ರಿವರೆಗೆ ನಿರಂತರ ಮಾನವ ಸರಪಳಿ ನಿರ್ಮಾಣ ವಾಗಿತ್ತು. ಕೆಲವೆಡೆ ರಸ್ತೆಯ ಇಕ್ಕೆಲಗಳಲ್ಲೂ  ಪ್ರತಿಭಟನಾಕಾರರು ಸಾಲುಗಟ್ಟಿ ನಿಂತಿದ್ದರು. ಯೋಜನೆ ಅನುಷ್ಠಾನಕ್ಕೆ ಮುಂದಾಗಿರುವ ಸರ್ಕಾರದ ವಿರುದ್ಧ ಹಾಗೂ ಬಿಡಿಎ  ವಿರುದ್ಧ  ಸಾವಿರಾರು ಪ್ರತಿಭಟನಾಕಾರರು ಘೋಷಣೆ ಕೂಗಿದರು. ‘ಉಕ್ಕಿನ  ಸೇತುವೆ ಬೇಡಎಂಬ ಭಿತ್ತಿಪತ್ರಗಳನ್ನು ಪ್ರದರ್ಶಿಸಿದರು.
2016: ನವದೆಹಲಿ: ಸುಲಿಗೆ ಆಪಾದನೆ ಹಿನ್ನೆಲೆಯಲ್ಲಿ ಜಾಮೀನು ರಹಿತ ವಾರಂಟ್ ಜಾರಿಯಾಗಿದ್ದ ಆಮ್ ಆದ್ಮಿ ಪಕ್ಷದ (ಆಪ್) ಶಾಸಕ ಗುಲಾಬ್ ಸಿಂಗ್ ಗುಜರಾತ್ ಪೊಲೀಸರಿಗೆ ಶರಣಾಗತರಾದರು. ಹಿಂದಿನ ದಿನ ಗುಲಾಬ್ ಸಿಂಗ್ ವಿರುದ್ಧ ಜಾಮೀನುರಹಿತ ಬಂಧನ ವಾರಂಟ್ ಜಾರಿಯಾಗಿತ್ತು. ತಮ್ಮ ಬೆಂಬಲಿಗರೊಂದಿಗೆ ಸೂರತ್ ಉಮ್ರಾ ಪೊಲೀಸ್ ಠಾಣೆಗೆ ಬಂದ ಸಿಂಗ್ ಸ್ವತಃ ಪೊಲೀಸರ ಮುಂದೆ ಶರಣಾದರು. ಇದಕ್ಕೆ ಮುನ್ನ ಆಪ್ ಗುಜರಾತ್ ಉಸ್ತುವಾರಿ ನೋಡಿಕೊಳ್ಳುತ್ತಿರುವ ಗುಲಾಬ್ ಸಿಂಗ್ ಅವರನ್ನು ಬಂಧಿಸುವ ಸಲುವಾಗಿ ದೆಹಲಿ ಪೊಲೀಸ್ ತಂಡವು ಬೆಳಗ್ಗೆ ಗುಜರಾತ್ಗೆ ತೆರಳಿತ್ತು. ದೆಹಲಿ ನ್ಯಾಯಾಲಯ ಸಿಂಗ್ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿ ಮಾಡಿತ್ತು. ಸಿಂಗ್ ಅವರ ಸಹಾಯಕರು ಎನ್ನಲಾದ ಮೂವರು ವ್ಯಕ್ತಿಗಳನ್ನು ಹಣ ಸುಲಿಗೆ ಪ್ರಕರಣದಲ್ಲಿ ಬಂಧಿಸಲಾಗಿದ್ದು ಅವರ ವಿಚಾರಣೆ ಕಾಲದಲ್ಲಿ ಸಿಂಗ್ ಅವರೂ ಪ್ರಕರಣದಲ್ಲಿ ಷಾಮೀಲಾಗಿದ್ದಾರೆ ಎಂದು ಹೇಳಲಾಗಿತ್ತು.

2016: ಧರ್ಮಶಾಲಾ: ಬೌಲರ್ಗಳ ಸಂಘಟಿತ ದಾಳಿ ಮತ್ತು ವಿರಾಟ್ ಕೊಹ್ಲಿಯ (85*) ಅರ್ಧಶತಕದಾಟದ ನೆರವಿನಿಂದ ಭಾರತ ತಂಡವು ತನ್ನ 900ನೇ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು 6 ವಿಕೆಟ್ಗಳಿಂದ ಮಣಿಸಿ ಐತಿಹಾಸಿಕ ಗೆಲುವನ್ನು ತನ್ನದಾಗಿಸಿಕೊಂಡಿತು. ನ್ಯೂಜಿಲೆಂಡ್ ನೀಡಿದ 191 ರನ್ ಗುರಿಯನ್ನು ಬೆನ್ನತ್ತಿದ ಭಾರತ 33.1 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 194 ರನ್ಗಳಿಸುವ ಮೂಲಕ ವಿಜಯದ ನಗೆ ಬೀರಿತು. ಅಲ್ಪ ಮೊತ್ತದ ಗುರಿಯನ್ನು ಬೆನ್ನತ್ತಿದ ಭಾರತ ಉತ್ತಮ ಆರಂಭ ಪಡೆಯಿತು. ರೋಹಿತ್ ಶರ್ಮಾ (14)ಮತ್ತು ಅಜಿಂಕ್ಯ ರಹಾನೆ (33) ಜೋಡಿ ಮೊದಲ ವಿಕೆಟ್ಗೆ 49 ರನ್ ಕಲೆ ಹಾಕಿದರು. ರೋಹಿತ್ ಶರ್ಮಾ ಔಟಾದ ನಂತರ ಕ್ರೀಸ್ಗೆ ಬಂದ ಕೊಹ್ಲಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಇವರಿಗೆ ಧೋನಿ (21), ಮನೀಷ್ ಪಾಂಡೆ (17) ಉತ್ತಮ ಸಾಥ್ ನೀಡಿದರು. ನ್ಯೂಜಿಲೆಂಡ್ ಪರ ಬ್ರೀಸ್ವೆಲ್, ಸೋಧಿ ಮತ್ತು ನೀಷಮ್ ತಲಾ ಒಂದು ವಿಕೆಟ್ ಪಡೆದರು. ಇದಕ್ಕೂ ಮುನ್ನ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಭಾರತ ನ್ಯೂಜಿಲೆಂಡ್ ತಂಡವನ್ನು 190 ರನ್ಗಳಿಗೆ ಕಟ್ಟಿ ಹಾಕಿತು. ಬೌಲರ್ಗಳು ಸಂಘಟಿತ ದಾಳಿ ನಡೆಸಿ ನ್ಯೂಜಿಲೆಂಡ್ ತಂಡ ಬೃಹತ್ ಮೊತ್ತ ಗಳಿಸದಂತೆ ತಡೆದರು. ನ್ಯೂಜಿಲೆಂಡ್ ಪರ ಲಾಥಮ್ (79*) ಮತ್ತು ಟಿಮ್ ಸೌಥಿ (55) ಮಾತ್ರ ಭಾರತೀಯ ಬೌಲರ್ಗಳನ್ನು ಸಮರ್ಥವಾಗಿ ಎದುರಿಸಿ ರನ್ ಕಲೆ ಹಾಕಿದರುಪಾದಾರ್ಪಣೆ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ 3 ವಿಕೆಟ್ ಪಡೆದು ಮಿಂಚಿದರೆ ಅಮಿತ್ ಮಿಶ್ರಾ ಸಹ 3 ವಿಕೆಟ್ ಪಡೆದರು. ಉಳಿದಂತೆ ಉಮೇಶ್ ಯಾದವ್ ಮತ್ತು ಕೇದಾರ್ ಜಾಧವ್ ತಲಾ 2 ವಿಕೆಟ್ ಪಡೆದರು.

2016: ಮುಂಬೈ: ಡಿಸೆಂಬರ್ 25ರಂದು ಪಾಕಿಸ್ತಾನಕ್ಕೆ ಭೇಟಿ ನೀಡಿ ಪಾಕಿಸ್ತಾನಿ ಪ್ರಧಾನಿ ನವಾಜ್ ಷರೀಪ್ ಅವರನ್ನು ಭೇಟಿ ಮಾಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಕ್ಷಮೆ (ಸಾರಿ) ಕೇಳಬೇಕು ಎಂಬುದಾಗಿ ಟ್ವೀಟ್ ಮಾಡುವ ಮೂಲಕ ವಿವಾದವನ್ನು ಮೈಮೇಲೆ ಎಳೆದುಕೊಂಡಿರುವ ಚಿತ್ರ ನಿರ್ಮಾಪಕ ಅನುರಾಗ್ ಕಶ್ಯಪ್ ಅವರು ಪುನಃ ಟ್ವೀಟ್ ಮಾಡಿಪ್ರಧಾನಿಯನ್ನು ಪ್ರಶ್ನಿಸುವ ಸರ್ವ ಹಕ್ಕುಗಳೂ ನನಗಿವೆಎಂದು ಪ್ರತಿಪಾದಿಸಿದರು.  ಕರಣ್ ಜೋಹರ್ ಅವರ ದಿಲ್ ಹೈ ಮುಶ್ಕಿಲ್ಚಿತ್ರವನ್ನು ಪಾಕ್ ನಟ ಫವಾದ್ ಖಾನ್ ನಟಿಸಿದ್ದಾರೆಂಬ ಕಾರಣಕ್ಕೆ ಭಾರತದ ಸಿನಿಮಾ ಮಾಲೀಕರು ಮತ್ತು ಪ್ರದರ್ಶಕರ ಸಂಘ ನಿಷೇಧಿಸಿರುವುದನ್ನು ವಿರೋಧಿಸಿ ಟ್ವೀಟ್ ಮೂಲಕ ತಮ್ಮ ಭ್ರಮನಿರಸನವನ್ನು ವ್ಯಕ್ತ ಪಡಿಸಿದ ಅನುರಾಗ್ ಕಶ್ಯಪ್ ಅವರ ಟ್ವೀಟ್ಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.  ಈ ಹಿನ್ನೆಲೆಯಲ್ಲಿ ಮತ್ತೆ ಟ್ವೀಟ್ ಮಾಡಿದ ಕಶ್ಯಪ್ಪಾಕಿಸ್ತಾನಕ್ಕೆ ಭೇಟಿ ನೀಡಿ ನವಾಜ್ ಷರೀಪ್ ಅವರನ್ನು ಭೇಟಿ ಮಾಡಿದ್ದಕ್ಕಾಗಿ ಮೋದಿ ಅವರು ಕ್ಷಮೆ ಯಾಚಿಸಬೇಕು, ಏಕೆಂದರೆ ಇದೇ ಸಮಯದಲ್ಲಿ ಕರಣ್ ಅವರು ದಿಲ್ ಹೈ ಮುಶ್ಕಿಲ್ ಚಿತ್ರದ ಚಿತ್ರೀಕರಣದಲ್ಲಿ ತೊಡಗಿದ್ದರು ಎಂದು ಹೇಳಿದರು.. ‘ವಿಷಯವನ್ನು ಸ್ಪಷ್ಟ ಪಡಿಸುವುದಕ್ಕಾಗಿ ಮತ್ತೆ ಟ್ವೀಟ್ ಮಾಡುತ್ತಿದ್ದೇನೆ. ಸರ್ಕಾರ ನಮ್ಮನ್ನು ರಕ್ಷಿಸಬೇಕು ಎಂದು ನಾನು ನಿರೀಕ್ಷಿಸುತ್ತೇನೆ. ನನಗೆ ಸರ್ವ ಹಕ್ಕುಗಳೂ ಇರುವ ಕಾರಣ ನಾನು ಪ್ರಧಾನಿಯನ್ನು ಪ್ರಶ್ನಿಸುತ್ತೇನೆಎಂದು ಕಶ್ಯಪ್ ತಮ್ಮ ಟ್ವೀಟ್ಗಳನ್ನು ಸಮರ್ಥಿಸಿದರು. ಉಭಯ ರಾಷ್ಟ್ರಗಳ ನಡುವಣ ನಿಜವಾದ ವ್ಯಾಪಾರಕ್ಕೆ ಯಾವುದೇ ರೀತಿಯ ವಿರೋಧವೂ ವ್ಯಕ್ತವಾಗಿಲ್ಲ. ಆದರೆ ನಾವು ಅದಕ್ಕೆ ಬೆಲೆ ತೆರಬೇಕಾಗಿದೆ. ಬೊಬ್ಬಿರಿದು ನನ್ನ ದೇಶಪ್ರೇಮವನ್ನು ಪ್ರಶ್ನಿಸುವ ಯಾರೇ ಆದರೂ ತಮ್ಮ ದೇಶಪ್ರೇಮವನ್ನು ಗಡಿಗೆ ಹೋಗಿ ರಾಷ್ಟ್ರವನ್ನು ಪ್ರತಿನಿಧಿಸಿ ತೋರಿಸಲಿ, ಇಲ್ಲವೇ ಗೌರವಾರ್ಹ ರೀತಿಯಲ್ಲಿ ವರ್ತಿಸಿ ತೋರಿಸಲಿ. ಇಲ್ಲಿ (ಸಾಮಾಜಿಕ ಜಾಲತಾಣದಲ್ಲಿ) ಬೊಬ್ಬೆ ಹೊಡೆಯುವ ಮೂಲಕ ಅಲ್ಲಎಂದು ಕಶ್ಯಪ್ ಬರೆದರು.

2016: ಮುಂಬೈ: ಇತ್ತೀಚಿನ ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಪ್ರತಿಭಟಿಸುವುದು ಟ್ರೆಂಡ್ ಆಗಿ ರ್ವಪಟ್ಟಿದೆ ಎಂದು ಹೇಳುವ ಮೂಲಕ ಬಾಲಿವುಡ್ ನಿರ್ದೇಶಕ, ನಿರ್ಮಾಪಕ ಮಧುರ ಭಂಡಾರ್ಕರ್ ಅವರು ಅನುರಾಗ್ ಕಶ್ಯಪ್ಗೆ ತಿರುಗೇಟು ನೀಡಿದರು. ಅನುರಾಗ್ ಕಶ್ಯಪ್ ಅವರು ಪ್ರಧಾನಿ ಅವರಿಗೆ ಕೇಳಿರುವ ಪ್ರಶ್ನೆಯಲ್ಲಿ ಯಾವುದೇ ಹುರುಳಿಲ್ಲ. ಬಿಜೆಪಿ ಸರ್ಕಾರ ಯಾವುದೇ ಚಿತ್ರಕ್ಕೆ ನಿಷೇಧ ಹೆರಿಲ್ಲ. ರೀತಿ ಮೋದಿ ಅವರನ್ನು ಪ್ರಶ್ನಿಸಿ, ಟೀಕಿಸುವುದು ಟ್ರೆಂಡ್ ಆಗಿದೆ ಎಂದು ಚುಚ್ಚಿದರು. ದಿಲ್ ಹೈ ಮುಶ್ಕಿಲ್ಚಿತ್ರದ ಬ್ಯಾನ್ ಕುರಿತು ಪ್ರಧಾನಿ ಮೋದಿ ಅವರಿಗೆ ಕಶ್ಯಪ್ ಟ್ವಿಟರ್ನಲ್ಲಿ ಪ್ರಶ್ನೆ ಕೇಳಿ, ನೀವು ಕಳೆದ ಡಿಸೆಂಬರ್ 25ರಂದು ಪಾಕಿಸ್ತಾನಕ್ಕೆ ಭೇಟಿ ನೀಡಿ ಅಲ್ಲಿನ ಪ್ರಧಾನಿ ನವಾಜ್ ಷರೀಫ್ರನ್ನು ಭೇಟಿ ಮಾಡಿದ್ದಿರಿ. ಇದೇ ಸಂದರ್ಭದಲ್ಲಿ ದಿಲ್ ಹೈ ಮುಶ್ಕಿಲ್ಚಿತ್ರ ಚಿತ್ರೀಕರಣ ಆರಂಭಿಸಿತ್ತು. ಪಾಕ್ ನಟನನ್ನು ಚಿತ್ರದಲ್ಲಿ ಹಾಕಿಕೊಂಡಿರುವುದಕ್ಕೆ ನಿರ್ದೇಶಕ ಕರಣ್ ಜೋಹರ್ ಕ್ಷಮೆಯಾಚಿಸಬೇಕಾದರೆ, ಪ್ರಧಾನಿಯವರು ಕ್ಷಮೆ ಕೇಳಬೇಕಲ್ಲವೇ ಎಂದು ಪ್ರಶ್ನಿಸಿದ್ದರು.

2016: ನವದೆಹಲಿ: ಪಾಕ್ ಉಗ್ರರ ದಾಳಿಯ ಬಿಸಿ ಭಾರತೀಯ ಚಿತ್ರರಂಗಕ್ಕೆ ಜೋರಾಗಿಯೇ ತಟ್ಟಿತು. ಕರಣ್ ಜೋಹರ್ ನಿರ್ದೇಶನದ ದಿಲ್ ಹೈ ಮುಶ್ಕಿಲ್ಚಿತ್ರವನ್ನು ನಾಲ್ಕು ರಾಜ್ಯಗಳಲ್ಲಿ ಬ್ಯಾನ್ ಮಾಡಿದ್ದು ಬಾಲಿವುಡ್ನಲ್ಲಿ ಅಪಸ್ವರ ಎಬ್ಬಿಸಿತು.. ನಿರ್ದೇಶಕ ಅನುರಾಗ್ ಕಶ್ಯಪ್ ಕರಣ್ ನೆರವಿಗೆ ಧಾವಿಸಿ, ಪ್ರಧಾನ ಮಂತ್ರಿ ಮೋದಿ ಅವರನ್ನೇ ಪ್ರಶ್ನಿಸಿದರು.  ಕರಣ್ ಜೋಹರ್ ನಿರ್ದೇಶನದ ದಿಲ್ ಹೈ ಮುಶ್ಕಿಲ್ ಚಿತ್ರ ಬಿಡುಗಡೆಗೆ ಸರ್ವಸನ್ನದ್ಧವಾಗಿದೆ. ಆದರೆ ಚಿತ್ರದಲ್ಲಿ ಪಾಕ್ ನಟ ಫವಾದ್ ಖಾನ್ ಅಭಿನಯಿಸಿರುವುದು ನಿಷೇಧದ ಭೀತಿ ಹೆಚ್ಚಿಸಿದೆ. ಕುರಿತು ಟ್ವೀಟ್ ಮಾಡಿರುವ ಬಾಲಿವುಡ್ ನಿರ್ದೇಶಕ ಅನುರಾಗ್, ‘ಮೋದಿ ಜೀ ಕಳೆದ ಡಿಸೆಂಬರ್ನಲ್ಲಿ ಪಾಕಿಸ್ತಾನಕ್ಕೆ ದಿಢೀರ್ ಭೇಟಿ ನೀಡಿ, ಪ್ರಧಾನಿ ನವಾಜ್ ಷರೀಪ್ ಜತೆಗೆ ಮಾತುಕತೆ ನಡೆಸಿದ್ದಿರಿ. ಇದೇ ಸಂದರ್ಭದಲ್ಲಿ ದಿಲ್ ಹೇ ಮುಶ್ಕಿಲ್ ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು. ಆದರೆ ನೀವು ಅಂದು ಕೈಗೊಂಡ ಪಾಕ್ ಭೇಟಿ ವಿಚಾರವಾಗಿ ಇಲ್ಲಿಯವರೆಗೂ ಕ್ಷಮೆಯಾಚಿಸಿಲ್ಲಎಂದು ಟ್ವೀಟ್ ಮಾಡಿದರು. ಇನ್ನೊಂದು ಟ್ವೀಟ್ನಲ್ಲಿವಿಶ್ವ ನಮ್ಮನ್ನು ನೋಡಿ ಕಲಿಯಬೇಕು. ನಾವು ಎಲ್ಲಾ ಸಮಸ್ಯೆಗಳನ್ನು ಬ್ಯಾನ್ ಮಾಡುವುದು ಮತ್ತು ಜರಿಯುವುದರ ಮೂಲಕ ನಿವಾರಿಸುತ್ತೇವೆಎಂದು ವ್ಯಂಗ್ಯವಾಡಿದರು. ಭಾರತೀಯ ಸಿನಿಮಾ ಮಾಲೀಕರು ಮತ್ತು ಪ್ರದರ್ಶಕರ ಅಸೋಸಿಯೆಷನ್ ಮಹಾರಾಷ್ಟ್ರ, ಗುಜರಾತ್, ಗೋವಾ ಮತ್ತು ಕರ್ನಾಟಕದಲ್ಲಿ ದಿಲ್ ಹೈ ಮುಶ್ಕಿಲ್ ಚಿತ್ರಕ್ಕೆ ನಿಷೇಧ ಹೇರಿತ್ತು.

2016: ನವದೆಹಲಿ: ತ್ರಿವಳಿ ತಲಾಖ್ ಬಗ್ಗೆ ನಡೆಯುತ್ತಿರುವ ದೇಶವ್ಯಾಪಿ ಚರ್ಚೆಯ ಮಧ್ಯೆ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ವೈಯಕ್ತಿಕ ಕಾನೂನುಗಳು ಸಂವಿಧಾನವನ್ನು ಅನುಸರಿಸಿಬೇಕು ಮತ್ತು ಲಿಂಗಸಮಾನತೆ ಹಾಗೂ ಗೌರವಯುತ ಬದುಕಿನ ಹಕ್ಕಿನ ಮಿತಿಗಳಿಗೆ ಅನುಗುಣವಾಗಿರಬೇಕು ಎಂದು  ಹೇಳಿದರು. ‘ತ್ರಿವಳಿ ತಲಾಖ್ ಮತ್ತು ಸರ್ಕಾರದ ಪ್ರಮಾಣಪತ್ರಶೀರ್ಷಿಕೆಯ ಫೇಸ್ಬುಕ್ ಪೋಸ್ಟ್ ನಲ್ಲಿ ವಿಚಾರವನ್ನು ತಿಳಿಸಿರುವ ಜೇಟ್ಲಿ, ವೈಯಕ್ತಿಕ ಕಾನೂನುಗಳು ಮೂಲಭೂತ ಹಕ್ಕುಗಳಿಗೆ ಬದ್ಧವಾಗಿರಬೇಕು ಎಂಬ ಖಡಾಖಂಡಿತ ನಿಲುವು ತೆಗೆದುಕೊಳ್ಳಲು ಹಿಂದಿನ ಸರ್ಕಾರಗಳು ನಾಚಿಕೆ ಪಟ್ಟಿದ್ದವು. ಆದರೆ ಈಗಿನ ಸರ್ಕಾರ ವಿಷಯಕ್ಕೆ ಸಂಬಂಧಿಸಿದಂತೆ ಸ್ಪಷ್ಟ ನಿಲುವು ತೆಗೆದುಕೊಂಡಿದೆ ಎಂದು ಹೇಳಿದರು.
ವೈಯಕ್ತಿಕ ಕಾನೂನುಗಳು ಸಂವಿಧಾನವನ್ನು ಅನುಸರಿಸಬೇಕು. ಆದ್ದರಿಂದ ತ್ರಿವಳಿ ತಲಾಖ್ ವಿಷಯವನ್ನು ಸಮಾನತೆ ಮತ್ತು ಗೌರವಯುತ ಬದುಕಿನ ಹಕ್ಕಿನ ಮಾನದಂಡದಿಂದಲೇ ತೀರ್ಮಾನಿಸಬೇಕು. ಇದೇ ಮಾನದಂಡ ಇತರ ಎಲ್ಲ ವೈಯಕ್ತಿಕ ಕಾನೂನುಗಳಿಗೂ ಅನ್ವಯಿಸುತ್ತದೆ ಎಂದು ಪ್ರತ್ಯೇಕವಾಗಿ ಹೇಳಬೇಕಾದ ಅಗತ್ಯ ಇಲ್ಲಎಂದು ಜೇಟ್ಲಿ ಬರೆದಿದ್ದಾರೆ. ಸಮಾನ ನಾಗರಿಕ ಸಂಹಿತೆಯ ವಿಷಯ ಬೇರೆ, ಅದಕ್ಕೂ ತ್ರಿವಳಿ ತಲಾಖ್ಗೂ ತಳಕು ಹಾಕುವಂತಿಲ್ಲ ಎಂದೂ ಜೇಟ್ಲಿ ತಿಳಿಸಿದರು.
 2016: ನವದೆಹಲಿ: ತುರ್ತು ಸಂದರ್ಭಗಳಲ್ಲಿ ಹೆದ್ದಾರಿಗಳಲ್ಲಿ ಯುದ್ಧ ವಿಮಾನಗಳನ್ನು ಇಳಿಸಲು ಅನುಕೂಲವಾಗುವಂತೆ ರಸ್ತೆ ನಿರ್ಮಿಸುವಂತೆ ರಕ್ಷಣಾ ಸಚಿವಾಲಯ ಪ್ರಸ್ತಾವನೆ ಸಲ್ಲಿಸಿದ್ದು, ಹೆದ್ದಾರಿ ಸಚಿವಾಲಯ ಹೆದ್ದಾರಿಗಳಲ್ಲಿ ರನ್ವೇ ನಿರ್ಮಿಸುವ ಸಂಬಂಧ ಯೋಜನೆ ರೂಪಿಸುತ್ತಿದೆ ಎಂದು ರಸ್ತೆ, ಸಂಚಾರ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ತಿಳಿಸಿದರು. ರಕ್ಷಣಾ ಸಚಿವಾಲಯ ಹೆದ್ದಾರಿಯನ್ನು ರನ್ವೇಯಾಗಿ ಬಳಸಲು ಅನುಕೂಲವಾಗುವಂತೆ ರಸ್ತೆ ನಿರ್ಮಿಸಲು ಪ್ರಸ್ತಾವನೆ ಸಲ್ಲಿಸಿದೆ. ಸಂಬಂಧ ರಕ್ಷಣಾ ಸಚಿವಾಲಯ ಮತ್ತು ಹೆದ್ದಾರಿ ಸಚಿವಾಲಯ ಜಂಟಿ ಸಮಿತಿಯನ್ನು ರಚಿಸಲಿದ್ದು, ಸಮಿತಿಯು ರನ್ವೇ ಮಾದರಿಯ ರಸ್ತೆ ನಿರ್ಮಾಣದ ಸಂಬಂಧ ಸೂಕ್ತ ಸ್ಥಳಗಳನ್ನು ಗುರುತಿಸಲಿದೆ. ರನ್ವೇಗಳನ್ನು ತುರ್ತು ಸಂದರ್ಭಗಳಲ್ಲಿ ಮತ್ತು ವಿಮಾನ ನಿಲ್ದಾಣದ ವ್ಯವಸ್ಥೆ ಇಲ್ಲದೆಡೆ ಬಳಸಿಕೊಳ್ಳಬಹುದಾಗಿದೆ ಎಂದು ಗಡ್ಕರಿ ಹೇಳಿದರು. ಹೆದ್ದಾರಿಯಲ್ಲಿ ರನ್ವೇ ನಿರ್ಮಿಸುವ ಸಂಬಂಧ ದೇಶದ ವಿವಿಧೆಡೆ ಈಗಾಗಲೇ 22 ಸ್ಥಳಗಳನ್ನು ಗುರುತಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಜಸ್ಥಾನದಲ್ಲಿ ರಸ್ತೆಯ ಪಕ್ಕದಲ್ಲಿ ಏರ್ಪೋರ್ಟ್ ನಿರ್ಮಿಸಲು ಉದ್ದೇಶಿಸಲಾಗಿದೆ. ಏರ್ಪೋರ್ಟ್ನಲ್ಲಿ ವಿಮಾನಗಳು ಹೆದ್ದಾರಿಯ ಮೇಲೆ ಇಳಿಯಲಿವೆ. ಇದೇ ಮಾದರಿಯಲ್ಲಿ ಅರುಣಾಚಲ ಪ್ರದೇಶ, ಮೆಘಾಲಯ ಮತ್ತು ಗಡಿ ಭಾಗದ ಇತರ ಜಿಲ್ಲೆಗಳಲ್ಲಿ ಹೆದ್ದಾರಿಯಲ್ಲಿ ರನ್ವೇ ನಿರ್ಮಿಸುವ ಯೋಜನೆ ಇದೆ ಎಂದು ಗಡ್ಕರಿ ಆಗಸ್ಟ್ನಲ್ಲಿ ತಿಳಿಸಿದ್ದರು.

2016: ಉರಿ/ನವದೆಹಲಿ: ಸೆಪ್ಟೆಂಬರ್ 18 ರಂದು ಉರಿ ಸೇನಾ ನೆಲೆಯ ಮೇಲೆ ದಾಳಿ ನಡೆಸಿದ್ದ ನಾಲ್ವರು ಉಗ್ರರು ಗಡಿ ನಿಯಂತ್ರಣ ರೇಖೆಯ ಬಳಿ ಏಣಿಯ ಸಹಾಯದಿಂದ ವಿದ್ಯುತ್ ಬೇಲಿಯನ್ನು ದಾಟಿ ಬಂದಿದ್ದರು ಎಂಬ ವಿಷಯ ತನಿಖೆಯಿಂದ ತಿಳಿದು ಬಂದಿತು. ಉರಿ ದಾಳಿಯ ನಂತರ ಸೇನೆ ಉಗ್ರರು ಒಳನುಸುಳಿ ಬಂದಿದ್ದು ಹೇಗೆ ಎಂಬುದನ್ನು ತಿಳಿಯಲು ತನಿಖೆಗೆ ಆದೇಶಿಸಲಾಗಿತ್ತು. ತನಿಖಾಧಿಕಾರಿಗಳು ಉಗ್ರರು ಏಣಿಯನ್ನು ಬಳಸಿ ಸಲಾಮಾಬಾದ್ ನಲ್ಲಾ ಎಂಬಲ್ಲಿ ವಿದ್ಯುತ್ ಬೇಲಿಯನ್ನು ದಾಟಿ ಬಂದಿರುವುದನ್ನು ಪತ್ತೆ ಹಚ್ಚಿದ್ದಾರೆ ಎಂದು ಸೇನೆಯ ಮೂಲಗಳು ತಿಳಿಸಿದವು. ಸಲಾಮಾಬಾದ ನಲ್ಲಾ ಎಂಬಲ್ಲಿ ಬೇಲಿಯ ನಡುವಿನ ಸಣ್ಣ ಜಾಗದಿಂದ ಮೊದಲಿಗೆ ಓರ್ವ ಉಗ್ರ ಭಾರತದೊಳಗೆ ನುಸುಳಿ ಬಂದಿದ್ದಾನೆ. ನಂತರ ಆತ ಒಂದು ಏಣಿಯನ್ನು ಬೇಲಿಯ ಮೇಲೆ ಇಟ್ಟಿದ್ದಾನೆ. ಪಿಒಕೆ ಕಡೆಯಿಂದ ಮೂವರು ಉಗ್ರರು ಮತ್ತೊಂದು ಏಣಿಯನ್ನು ಬಳಸಿ ಭಾರತದ ಕಡೆಯಿಂದ ಇಟ್ಟಿದ್ದ ಏಣಿಗೆ ಸಂಪರ್ಕ ಕಲ್ಪಿಸಿದ್ದಾರೆ. ನಂತರ ಅವರು ಏಣಿಯ ಸಹಾಯದಿಂದ ಗಡಿ ದಾಟಿ ಭಾರತದೊಳಗೆ ನುಸುಳಿದ್ದಾರೆ. ಉಗ್ರರು ವಿಧಾನದಲ್ಲಿ ಬೇಲಿ ದಾಟಲು ಸಾಕಷ್ಟು ಸಮಯ ಹಿಡಿದಿದೆ. ಎಲ್ಲಾ ಉಗ್ರರು ಗಡಿ ದಾಟಿದ ನಂತರ ಏಣಿಯನ್ನು ಪಿಒಕೆಯಲ್ಲಿ ತಮಗೆ ದಾರಿ ತೋರಿಸಲು ಬಂದಿದ್ದ ಇಬ್ಬರಿಗೆ ಹಸ್ತಾಂತರಿಸಿದ್ದಾರೆ. ಮೂಲಕ ಬೇಲಿ ದಾಟಿದ ಕುರುಹು ಸಿಗದಂತೆ ಎಚ್ಚರಿಕೆ ವಹಿಸಿದ್ದಾರೆ ಎಂದು ಮೂಲಗಳು ತಿಳಿಸಿದವು.  ಉಗ್ರರು ದಾಳಿ ನಡೆಸುವ ಒಂದು ದಿನ ಮೊದಲು ದೇಶದೊಳಗೆ ನುಸುಳಿರುವ ಸಾಧ್ಯತೆ ಇದೆ. ಅವರಿಗೆ ಉರಿ ಸೇನಾ ನೆಲೆಯ ಕುರಿತು ಸಂಪೂರ್ಣವಾದ ಮಾಹಿತಿ ಇತ್ತು. ಇಲ್ಲಿರುವ ಕಟ್ಟಡಗಳು ಮತ್ತು ಸೈನಿಕರ ಕುರಿತು ಸಾಕಷ್ಟು ಮಾಹಿತಿ ಕಲೆ ಹಾಕಿದ್ದರು. ಉಗ್ರರು ಅಡುಗೆ ಕೋಣೆ ಮತ್ತು ಸ್ಟೋರ್ ರೂಂನ ಬಾಗಿಲನ್ನು ಹೊರಗಿನಿಂದ ಬಂದ್ ಮಾಡಿದ ನಂತರ ಕಟ್ಟಡಕ್ಕೆ ಬೆಂಕಿ ಹಚ್ಚಿದ್ದರು ಎಂದು ಸೇನೆಯ ಮೂಲಗಳು ಹೇಳಿದವು. ಇದಕ್ಕೂ ಮುನ್ನ ವರ್ಷದ ಆರಂಭದಲ್ಲಿ ಉತ್ತರ ಕಾಶ್ಮೀರದ ಮಚಲಿ ಸೆಕ್ಟರ್ನಲ್ಲಿ ಉಗ್ರರು ಏಣಿ ಬಳಸಿ ಬೇಲೆ ದಾಟಿ ಒಳನುಸುಳಿದ್ದರು.
2014: ಇಸ್ಲಾಮಾಬಾದ್: ಪ್ರವಾದಿ ಮಹಮ್ಮದ್ ನಿಂದನೆ ಮಾಡಿದ ಆರೋಪದಲ್ಲಿ ಪಾಕಿಸ್ತಾನದಲ್ಲಿನ ಪಂಜಾಬಿನ ಕ್ರಿಶ್ಚಿಯನ್ ಮಹಿಳೆ ಆಸಿಯಾ ಬೀಬಿಗೆ ವಿಧಿಸಲಾಗಿದ್ದ ಗಲ್ಲು ಶಿಕ್ಷೆಯನ್ನು ಪಾಕಿಸ್ತಾನದ ಲಾಹೋರ್ ಹೈಕೋರ್ಟ್ ಈದಿನ ಎತ್ತಿ ಹಿಡಿಯಿತು. 2010ರಲ್ಲಿ ಆಸಿಯಾ ಮತ್ತು ಸಹೋದ್ಯೋಗಿಗಳ ನಡುವೆ ನೀರು ಕುಡಿಯುವ ವಿಚಾರಕ್ಕೆ ಜಗಳ ನಡೆದಿತ್ತು. ಆಸಿಯಾಳ ಸಹೋದ್ಯೋಗಿಗಳು ಆಕೆ ಮುಸ್ಲಿಂ ಮಹಿಳೆಯಲ್ಲದ ಕಾರಣಕ್ಕೆ ಒಂದೇ ಬಾವಿಯಿಂದ ಮತ್ತು ಒಂದೇ ಲೋಟದಲ್ಲಿ ನೀರು ಕುಡಿಯುವ ವಿಚಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೆ ಇದನ್ನು ಆಸಿಯಾ ವಿರೋಧಿಸಿದ್ದಳು. ಇದೇ ಕಾರಣಕ್ಕೆ ಆಕೆಯ ವಿರುದ್ಧ ಧರ್ಮನಿಂದನೆ ಪ್ರಕರಣ ದಾಖಲಿಸಲಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ಇಸ್ಲಾಮಾಬಾದ್ ನ್ಯಾಯಾಲಯ ಆಕೆಗೆ ಗಲ್ಲುಶಿಕ್ಷೆ ವಿಧಿಸಿತ್ತು. ಆಸಿಯಾ ಧರ್ಮನಿಂದನೆ ಆರೋಪದಲ್ಲಿ ಗಲ್ಲುಶಿಕ್ಷೆಗೊಳಗಾದ ಮೊದಲ ಮಹಿಳೆ.

2008: ಅಮೆರಿಕದ ಷೇರು ಮಾರುಕಟ್ಟೆ ಇತಿಹಾಸದಲ್ಲಿ ಎರಡನೇ ಅತಿ ದೊಡ್ಡ ದಿನದ ಸೂಚ್ಯಂಕ ಕುಸಿತ ದಾಖಲಾಯಿತು. ಇದು ಅಮೆರಿಕವು ಆರ್ಥಿಕ ಹಿಂಜರಿಕೆಯತ್ತ ಜಾರುತ್ತಿರುವುದರ ಸ್ಪಷ್ಟ ಸಂಕೇತವನ್ನು ನೀಡಿತು. ಇದರಿಂದ ಮುಂಬೈ ಸೇರಿದಂತೆ ವಿಶ್ವದ ಪ್ರಮುಖ ಷೇರುಪೇಟೆಗಳಲ್ಲಿ ಭಾರಿ ತಲ್ಲಣ ಕಂಡು ಬಂದಿತು. ಅಮೆರಿಕದ ವಾಲ್ ಸ್ಟ್ರೀಟಿನಲ್ಲಿನ ಈ ಭಾರಿ ಕುಸಿತವು ಕಳೆದ ಎರಡು ದಶಕಗಳಲ್ಲಿಯ ಗರಿಷ್ಠ ಹಿನ್ನಡೆಯಾಗಿದ್ದು, ಭಾರತ ಸಹಿತ ಜಗತ್ತಿನ ಎಲ್ಲ ರಾಷ್ಟ್ರಗಳಿಗೂ ತೀವ್ರ ಬಿಸಿ ಮುಟ್ಟಿಸಿತು. ಮುಂಬೈ ಷೇರುಪೇಟೆಯಲ್ಲಿ ಬೆಳಗ್ಗೆ 790 ಅಂಕಗಳಷ್ಟು ಕುಸಿತದಿಂದಲೇ ವಹಿವಾಟು ಆರಂಭವಾಗಿತ್ತು. ಅಮೆರಿಕ ಮತ್ತು ಐರೋಪ್ಯ ಮಾರುಕಟ್ಟೆಗಳ ಪರಿಣಾಮ ಆಗಲೇ ಗೋಚರಿಸಿ, ಪೇಟೆಯಲ್ಲಿ ತೀವ್ರ ಕಳವಳ ನೆಲೆಸಿತು. ಆದರೆ ಹೊತ್ತೇರಿದಂತೆ ಮಾರುಕಟ್ಟೆಯಲ್ಲಿ ಚೇತರಿಕೆ ಕಂಡುಬಂದರೂ ಕೊನೆಗೆ 227.63ರಷ್ಟು (ಶೇ 2.11) ಕುಸಿತವನ್ನೇ ದಾಖಲಿಸಿತು.

2008: ಕೆನಡಾ ಸಂಸತ್ತಿಗೆ ನಡೆದ ಚುನಾವಣೆಯಲ್ಲಿ ಒಂಬತ್ತು ಮಂದಿ ಪಂಜಾಬಿ ಮೂಲದ ಭಾರತೀಯ-ಕೆನಡಿಯನ್ನರು ಆಯ್ಕೆಯಾದರು. ಕೆನಡಾ ಸಂಸತ್ತಿನ ಒಟ್ಟು ಸದಸ್ಯ ಬಲ 308. ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷದ ಅಭ್ಯರ್ಥಿ ಟಿಮ್ ಉಪ್ಪಲ್ (ಎಡ್ಮಂಟನ್ ಶೆರ್ವೂಡ್ ಪಾರ್ಕ್ ಕ್ಷೇತ್ರ) ಹಾಗೂ ದೇವಿಂದರ್ ಶೋರೆ (ಕಲ್ಗರೆ ವಾಯವ್ಯ ಕ್ಷೇತ್ರ) ಅವರು ಇದೇ ಮೊದಲ ಬಾರಿಗೆ ಸಂಸತ್ ಪ್ರವೇಶಿಸಿದರು. 1993ರಲ್ಲಿ ಕೆನಡಾ ಸಂಸತ್ತಿಗೆ ಮೊದಲು ಪ್ರವೇಶ ಪಡೆದ ಪೇಟಾಧಾರಿ ಗುರ್ಬಕ್ಷ್ ಮಲ್ಲಿಎದಬಕ್ಷ್ ಮಲ್ಹಿ ಅವರು ಸಹ ಲಿಬರಲ್ ಪಕ್ಷದಿಂದ ಜಯಗಳಿಸಿದರು. ಈ ಮೂಲಕ ಅವರು ಆರನೇ ಬಾರಿ ಸಂಸತ್ ಪ್ರವೇಶಿಸಿದ ವಿಶಿಷ್ಟ ಸಾಧನೆ ಮಾಡಿದರು.

2008: ಹಿಂದೂ ಹಕ್ಕುಗಳ ಕ್ರಿಯಾ ಸಮಿತಿ (ಹಿಂದೂ ರೈಟ್ಸ್ ಆ್ಯಕ್ಷನ್ ಫೋರ್ಸ್)- ಹಿಂಡ್ರಾಫ್ ಹೆಸರಿನ ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಯನ್ನು ಮಲೇಷ್ಯ ಸರ್ಕಾರ ನಿಷೇಧಿಸಿತು. ಈ ಸಂಘಟನೆಯಿಂದ ದೇಶದ ಭದ್ರತೆಗೆ ಧಕ್ಕೆಯಿದೆ ಎಂಬ ಬೆದರಿಕೆಯ ಹಿನ್ನೆಲೆಯಲ್ಲಿ ಸಂಘಟನೆಯ ಮೇಲೆ ನಿಷೇಧ ಜಾರಿಗೊಳಿಸಲಾಗಿದೆ ಎಂದು ಗೃಹ ಮಂತ್ರಿ ಸೈಯ್ಯದ್ ಹಮೀದ್ ಅಲ್ಬರ್ ತಿಳಿಸಿದರು.

2008: ಕರ್ನಾಟಕ ರಾಜ್ಯದಲ್ಲಿ ಸೂಕ್ತ ಕುಡಿಯುವ ನೀರಿನ ಸೌಲಭ್ಯವಿಲ್ಲದಿರುವ ಎಲ್ಲ ನಗರ ಹಾಗೂ ಗ್ರಾಮಗಳಿಗೆ ಕುಡಿಯುವ ನೀರು ಒದಗಿಸಲು ಅಂದಾಜು 53,877 ಕೋಟಿ ರೂಪಾಯಿ ವೆಚ್ಚದ `ಮಾಸ್ಟರ್ ಪ್ಲಾನ್' ಸಿದ್ಧಪಡಿಸಲು ಸರ್ಕಾರ ಒಪ್ಪಿಗೆ ನೀಡಿತು. ರಾಜ್ಯದಲ್ಲಿ ಕುಡಿಯುವ ನೀರು ಸರಬರಾಜು ಯೋಜನೆಗಳ ಕುರಿತಂತೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ `ಕೃಷ್ಣಾ'ದಲ್ಲಿ ನಡೆದ ಪ್ರಾತ್ಯಕ್ಷಿಕೆಯ ಬಳಿಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು.

2008: ಭಾರತದ ವೀರ್ ಧವಳ್ ಖಾಡೆ ಅವರು ಪುಣೆಯಲ್ಲಿ ನಡೆದ ಮೂರನೇ ಕಾಮನ್ವೆಲ್ತ್ ಯುವ ಕ್ರೀಡಾಕೂಟದ ಪುರುಷರ 100 ಮೀಟರ್ ಫ್ರೀಸ್ಟೈಲ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದುಕೊಂಡರು. ಶಿವಛತ್ರಪತಿ ಕ್ರೀಡಾನಗರದ ಈಜುಗೊಳದಲ್ಲಿ ನಡೆದ ಸ್ಪರ್ಧೆಯಲ್ಲಿ ವೀರ್ ಧವಳ್ ಖಾಡೆ ಅವರು 49.47ಸೆ.ಗಳಲ್ಲಿ ಗುರಿ ಮುಟ್ಟಿ ಹೊಸ ಕೂಟ ದಾಖಲೆಯನ್ನು ಸ್ಥಾಪಿಸಿದರು. ಅವರು ಈ ಹಾದಿಯಲ್ಲಿ ಎಂಟು ವರ್ಷಗಳ ಹಿಂದೆ ಆಸ್ಟ್ರೇಲಿಯಾದ ರೇಮಂಡ್ ಮೆಕ್ಡೋನಾಲ್ಡ್ ಅವರು 52.10ಸೆ.ನೊಂದಿಗೆ ಸ್ಥಾಪಿಸಿದ್ದ ದಾಖಲೆಯನ್ನು ಮುರಿದರು. ಬಳಿಕ ನಡೆದ 100 ಮೀಟರ್ ಬಟರ್ ಫ್ಲೈ ಸ್ಪರ್ಧೆಯಲ್ಲಿ ವೀರ್ ಧವಳ್ ಖಾಡೆ ಅವರು 54.01ಸೆ.ನೊಂದಿಗೆ ಬೆಳ್ಳಿ ಪದಕವನ್ನು ಗೆದ್ದರು.

2007: ಪ್ರಸ್ತತ ಸಾಲಿನ ಪ್ರತಿಷ್ಠಿತ ಜಮ್ನಾಲಾಲ್ ಬಜಾಜ್ ಪ್ರಶಸ್ತಿಯನ್ನು ಪಟಿಯಾಲಾದ ಯಶಪಾಲ್ ಮಿತ್ತಲ್ (ರಚನಾತ್ಮಕ ಸೇವೆ), ಪುಣೆಯ ಆನಂದ ಕರ್ವೆ (ಗ್ರಾಮೀಣ ಅಭಿವೃದ್ಧಿಗೆ ತಂತ್ರಜ್ಞಾನ ಬಳಕೆ) ಮತ್ತು ಕ್ಯಾಲಿಫೋರ್ನಿಯಾದ ಮೈಕೆಲ್ ನಗ್ಲರ್ (ಭಾರತದ ಹೊರಗೆ ಗಾಂಧಿ ತತ್ವ ಪ್ರಚಾರ) ಅವರಿಗೆ ಘೋಷಿಸಲಾಯಿತು. ಜಾನಕಿದೇವಿ ಬಜಾಜ್ ಪ್ರಶಸ್ತಿಗೆ ಕೋಲ್ಕತ್ತದ ಅಶೋಕ್ ಗುಪ್ತಾ (ಮಹಿಳೆ ಮತ್ತು ಮಕ್ಕಳ ಕಲ್ಯಾಣ) ಆಯ್ಕೆಯಾದರು ಎಂದು ಮುಂಬೈಯಲ್ಲಿ ಪ್ರಕಟಿಸಲಾಯಿತು.

2007: ಒಟ್ಟು 80 ಲಕ್ಷ ರೂಪಾಯಿ ಕೊಟ್ಟರೆ ಬಾಹ್ಯಾಕಾಶಕ್ಕೆ ಹೋಗಿ ಬರುವ, ಗಗನಯಾನಿಯಾಗಿ ಭೂಮಿ ಸುತ್ತುವ ಅವಕಾಶ ಕಲ್ಪಿಸಿರುವುದಾಗಿ ಬ್ರಿಟಿಷ್ ಕಂಪೆನಿ ವರ್ಜಿನ್ ಗ್ಯಾಲಕ್ಟಿಕ್ ಪ್ರಕಟಿಸಿತು. ನಾಲ್ವರು ಅನಿವಾಸಿ ಭಾರತೀಯರೂ ಸೇರಿ ಸುಮಾರು 470 ಜನ ಈ ಬಾಹ್ಯಾಕಾಶ ಪ್ರವಾಸಕ್ಕೆ ಸ್ಥಳ ಕಾಯ್ದಿರಿಸಿದ್ದಾರೆ ಎಂದೂ ಸಂಸ್ಥೆ ಹೇಳಿತು.

2007: ಉದ್ಯೋಗಿಯೊಬ್ಬ ಮಾತೃ ಸಂಸ್ಥೆಯಲ್ಲಿ ಹೊಂದಿರುವ ಸೇವಾ ಹಿರಿತನವೇ ಎರವಲು ಸೇವೆಗೆ ಹೋದ ಸಂಸ್ಥೆಯಲ್ಲಿಯೂ ಮುಂದುವರಿಯಬೇಕು ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿತು.

2007: ಕೇಂದ್ರದ ಯುಪಿಎ ಸರ್ಕಾರದಲ್ಲಿನ ಬಿಹಾರದ ಲಾಲು ಪ್ರಸಾದ್ ಅವರ ಆರ್ ಜೆ ಡಿ ಗೆ ಸೇರಿದ ಮಾನವ ಸಂಪನ್ಮೂಲ ಖಾತೆಯ ಸಹಾಯಕ ಸಚಿವ ಮೊಹಮ್ಮದ್ ಅಲಿ ಅಶ್ರಫ್ ಫಾತ್ಮಿ ಅವರು ಜೆಡಿ (ಯು) ಬೆಂಬಲಿತ ದರ್ಭಾಂಗದ ಉಪ ಮೇಯರ್ ಬಾಬ್ಬಿ ಖಾನ್ ಅವರನ್ನು ಈದ್-ಉಲ್- ಫಿತರ್ ಹಬ್ಬದ ದಿನವೇ ಹತ್ಯೆ ಮಾಡುವಂತೆ ಈ ಮಂತ್ರಿ ತನ್ನ ಪರಮಾಪ್ತ ಶಿಷ್ಯ, ಬಾಡಿಗೆ ಹಂತಕ ಅಲ್ಲಾ ಮಿಯಾ ಅಲಿಯಾಸ್ ಅಲ್ಲಾ ಖಾನ್ ಗೆ 5 ಲಕ್ಷ ರೂಪಾಯಿ `ಸುಪಾರಿ' ನೀಡಿದ್ದರು ಎಂದು ಪೊಲೀಸರು ಬಹಿರಂಗಪಡಿಸಿದರು.

2007: `ನರಭಕ್ಷಣೆಗೆ ಪ್ರೇರಣೆಗಳು' ಎಂಬ ಪುಸ್ತಕ ಬರೆಯುತ್ತಿದ್ದ ಮೆಕ್ಸಿಕೊ ಲೇಖಕ ಜೋಸ್ ಲೂಯಿಸ್ ಕಾಲ್ವಾ ತನ್ನ ಮಾಜಿ ಪ್ರೇಯಸಿಯನ್ನೇ ಕೊಂದು ತಿಂದು ಪೊಲೀಸರ ಅತಿಥಿಯಾದ. 'ನನ್ನ ಮಗಳು ಕಾಣೆಯಾಗಿದ್ದಾಳೆ. ನಮಗೆ ಅವಳ ಪ್ರಿಯಕರ ಜೋಸ್ ಮೇಲೆ ಅನುಮಾನವಿದೆ' ಎಂದು ಅಲೆಜಾಡ್ರಾ ಗಾಲಿಯಾನಳ (32) ತಾಯಿ ಪೊಲೀಸರಿಗೆ ದೂರು ನೀಡಿದ್ದಳು. ತನಿಖೆಗೆಂದು ಬಂದ ಪೊಲೀಸರು ಜೋಸ್ ಮನೆ ಬಾಗಿಲು ತಟ್ಟಿದರೆ ಆಸಾಮಿ ಹಿಂಬಾಗಿಲಿನಿಂದ ಓಡಲು ಹೋಗಿ ಕೆಳಗೆ ಬಿದ್ದು ಕಾಲು ಮುರಿದುಕೊಂಡ. ಪೊಲೀಸರಿಗೆ ಊಟದ ಮೇಜಿನ ಮೇಲೆ ನರಮಾಂಸದ ತುಣುಕುಗಳು ಸಿಕ್ಕಿದವು. ಫ್ರಿಜ್ಜಿನಲ್ಲಿಯೂ ಡಬ್ಬಿಗಟ್ಟಲೆ ಮಾಂಸವಾಗಿ ಗಾಲಿಯಾನ ತಣ್ಣಗಾಗಿದ್ದಳು. ಮತ್ತಷ್ಟು ತಡಕಾಡಿದಾಗ ಮಲಗುವ ಕೋಣೆ ಬದಿಯಲ್ಲೇ ಅವಳ ಅಳಿದುಳಿದ ಶರೀರ ಸಿಕ್ಕಿತು. ಎರಡು ವರ್ಷಗಳಿಂದ ಇವನು ಇನ್ನೂ ಇಬ್ಬರು ಹೆಂಗಳೆಯರನ್ನು ಕೊಂದು ತಿಂದಿರಬಹುದೆಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದರು. ಸಂಪುಟಗಟ್ಟಲೇ ಪದ್ಯ ಬರೆದಿರುವ ಜೋಸ್ ಮೆಕ್ಸಿಕೊದಲ್ಲಿ ಜನಪ್ರಿಯ ಕವಿ. ಮಾಟದ ಬಗ್ಗೆ ಅಪಾರ ಒಲವು ಹೊಂದಿದ್ದ ಅವನು ಹೊಟ್ಟೆಕಿಚ್ಚಿನ ಅನುಮಾನದ ಪಿಶಾಚಿ ಎಂದು ಅವನ ಇನ್ನೊಬ್ಬ ಮಾಜಿ ಪ್ರಿಯತಮೆ ಸಾರ್ವಜನಿಕ ಹೇಳಿಕೆ ನೀಡಿದಳು.

2007: ತಮಿಳುನಾಡಿನಾದ್ಯಂತ ಶಾಲಾ ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳು ಮೊಬೈಲ್ ಬಳಸುವುದನ್ನು ನಿಷೇಧಿಸಿ ತಮಿಳುನಾಡು ಸರ್ಕಾರ ಆದೇಶ ಹೊರಡಿಸಿತು. ಇದಕ್ಕೆ ಮೊದಲು ಕರ್ನಾಟಕ ಸರ್ಕಾರ ಕೂಡಾ ರಾಜ್ಯದಲ್ಲಿ ಪಿಯುಸಿ ವರೆಗಿನ ವಿದ್ಯಾರ್ಥಿಗಳು ಮತ್ತು ಪಿಯು ವರೆಗಿನ ಶಿಕ್ಷಕರು ಶಾಲಾ ಆವರಣದಲ್ಲಿ ಮೊಬೈಲ್ ಬಳಸುವುದರ ಮೇಲೆ ಎರಡು ವಾರಗಳ ಹಿಂದೆ ನಿಷೇಧವನ್ನು ಹೇರಿತ್ತು.

2006: ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) ಮೀಸಲಾತಿ ಜಾರಿಗೊಳಿಸುವ ಬಗ್ಗೆ ಆಕ್ಷೇಪಿಸಿದ ಸುಪ್ರೀಂಕೋರ್ಟ್ ಸಂಸದೀಯ ಸ್ಥಾಯಿ ಸಮಿತಿಯ ವರದಿಯ ಪ್ರತಿಯನ್ನು ಮೊಹರು ಮಾಡಿದ ಲಕೋಟೆಯಲ್ಲಿ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿತು. ಕೆನೆಪದರವನ್ನು ಮೀಸಲಾತಿಯಿಂದ ಹೊರಗಿಡುವಂತೆ ಮಂಡಲ್ ಪ್ರಕರಣದ ಇಂದ್ರ ಸಾಹ್ನಿ ತೀರ್ಪಿನಲ್ಲಿ ಸೂಚಿಸಿದ್ದುದು ಸೇರಿದಂತೆ ನ್ಯಾಯಾಲಯವು ಹಿಂದೆ ನೀಡಿದ್ದ ತೀರ್ಪುಗಳನ್ನೂ ಸರ್ಕಾರ ಲಕ್ಷಿಸಿಲ್ಲ ಎಂದೂ ನ್ಯಾಯಾಲಯ ಅಸಮಾಧಾನ ಸೂಚಿಸಿತು. ಐಐಟಿ, ಐಐಎಂ, ಮತ್ತು ಕೇಂದ್ರೀಯ ಶಿಕ್ಷಣ ಸಂಸ್ಥೆಗಳಿಗೆ ಒಬಿಸಿ ಮೀಸಲಾತಿ ವಿಸ್ತರಿಸಲು ಸರ್ಕಾರ ಕೈಗೊಂಡಿರುವ ನಿರ್ಧಾರವನ್ನು ಪ್ರಶ್ನಿಸಿ ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸಲಾಗಿತ್ತು.

2006: ಉದ್ದೀಪನ ಮದ್ದು ಸೇವನೆ ಪರೀಕೆಯಲ್ಲಿ ಸಿಕ್ಕಿ ಬಿದ್ದ ಕಾರಣಕ್ಕಾಗಿ ಪಾಕಿಸ್ಥಾನದ ಕ್ರಿಕೆಟ್ ಆಟಗಾರ ಖ್ಯಾತ ಬೌಲರ್ ಶೋಯಬ್ ಅಖ್ತರ್ ಮತ್ತು ಬಲಗೈ ವೇಗಿ ಮೊಹಮ್ಮದ್ ಅಸಿಫ್ ಅವರನ್ನು ಪಾಕ್ ತಂಡದಿಂದ ವಜಾ ಮಾಡಲಾಯಿತು. ಕೆಲವೇ ದಿನಗಳ ಹಿಂದೆ ನಾಯಕ ಇಂಜಮಾಮ್ ಉಲ್ ಹಕ್ ನಾಲ್ಕು ಪಂದ್ಯಗಳ ಮಟ್ಟಿಗೆ ನಿಷೇಧಕ್ಕೆ ಒಳಗಾದ ಬೆನ್ನ್ಲಲೇ ಶೋಯಬ್ ಅಖ್ತರ್ ಪ್ರಕರಣ ಘಟಿಸಿತು.

2006: ಕರ್ನಾಟಕದ ವೈಣಿಕ ವಿದ್ವಾನ್ ಎನ್ ಕಾರ್ತಿಕ್ ಅವರು ಸತತ 24 ಗಂಟೆಗಳಲ್ಲಿ 50 ಸಂಗೀತ ಕಛೇರಿ ನೀಡುವ ಮೂಲಕ ಗಿನ್ನೆಸ್ ದಾಖಲೆಗೆ ಸೇರ್ಪಡೆಯಾದರು. ಈವರೆಗೆ ದಕ್ಷಿಣ ಆಫ್ರಿಕದ ಆ್ಯಡಮ್ ಟಾಸ್ ನೇತೃತ್ವದ ತಂಡವೊಂದು 24 ಗಂಟೆಗಳಲ್ಲಿ 41 ಕಛೇರಿಗಳನ್ನು ನೀಡಿದ ದಾಖಲೆ ಹೊಂದಿತ್ತು. 2005ರ ನವೆಂಬರ್ 29 ಮತ್ತು 30ರಂದು ಬೆಂಗಳೂರಿನ ಸುತ್ತಮುತ್ತ 50 ವೀಣಾ ಕಛೇರಿಗಳನ್ನು ಅವರು ನೀಡಿದ್ದರು.

1999: ಖ್ಯಾತ ಪತ್ರಕರ್ತ ವೈ ಎನ್ ಕೆ ನಿಧನರಾದರು.

1999: ಸಾಹಿತಿ ಉ.ಕಾ. ಸುಬ್ಬರಾಯಾಚಾರ್ ಜನನ.

1998: ಚಿಲಿಯ ಮಾಜಿ ಸರ್ವಾಧಿಕಾರಿ ಆಗಸ್ಟೋ ಪಿನೋಕ್ಷಿ ಅವರನ್ನು ಬ್ರಿಟಿಷ್ ಪೊಲೀಸರು ಲಂಡನ್ನಿನಲ್ಲಿ ಬಂಧಿಸಿದರು. ತಾವು ಅಧಿಕಾರದಲ್ಲಿದ್ದ ಅವಧಿಯಲ್ಲಿ ಸ್ಪೇನಿನ ನಾಗರಿಕರನ್ನು ಹತ್ಯೆಗೈದರೆಂಬುದಾಗಿ ಪಿನೋಕ್ಷಿ ವಿರುದ್ಧ ಬಂದ ಆಪಾದನೆಗಳ ಸಂಬಂಧ ಪ್ರಶ್ನಿಸುವ ಸಲುವಾಗಿ ಬ್ರಿಟಿಷ್ ಪೊಲೀಸರು ಈ ಕ್ರಮ ಕೈಗೊಂಡರು.

1992: ಆಜಾದ್ ಹಿಂದ್ ಫೌಜಿನ ಕ್ಯಾಪ್ಟನ್ ಆಗಿದ್ದ ಪಿ.ಕೆ. ಸೆಹಗಲ್ ನಿಧನ.

1978: ರೋಮನ್ ಕ್ಯಾಥೋಲಿಕ್ ಇಗರ್ಜಿಯ (ಚರ್ಚ್) ಕಾಲೇಜ್ ಆಫ್ ಕಾರ್ಡಿನಲ್ಸ್ ನೂತನ ಪೋಪ್ ಆಗಿ ಕಾರ್ಡಿನಲ್ ಕರೋಲ್ ವೊಜೆಯಾಲ ಅವರನ್ನು ಆಯ್ಕೆ ಮಾಡಿತು. ಅವರು ಎರಡನೇ ಜಾನ್ ಪಾಲ್ ಎಂಬ ಹೆಸರನ್ನು ಇಟ್ಟುಕೊಂಡರು. 1522ರಿಂದ ಇಟಲಿಯೇತರ ವ್ಯಕ್ತಿಯೊಬ್ಬರು ಪೋಪ್ ಹುದ್ದೆಗೆ ಏರಿದ್ದು ಇದೇ ಮೊದಲು.

1972: ತಮಿಳುನಾಡಿನ ಜನಪ್ರಿಯ ಚಿತ್ರ ನಟ ಎಂ.ಜಿ. ರಾಮಚಂದ್ರನ್ (ಎಂಜಿಆರ್) ಅವರು `ಆಲ್ ಇಂಡಿಯಾ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ' (ಎಐಎಡಿಎಂಕೆ) ಸ್ಥಾಪನೆ ಮಾಡಿದರು. ಅಣ್ಣಾದುರೈ ಅವರು ಸ್ಥಾಪಿಸಿದ್ದ `ದ್ರಾವಿಡ ಮುನ್ನೇತ್ರ ಕಳಗಂ' (ಡಿಎಂಕೆ) ಪಕ್ಷದಿಂದ ಹೊರಬಂದು ಅವರು ಈ ಪಕ್ಷವನ್ನು ಕಟ್ಟಿದರು.

1950: ಸಾಹಿತಿ ಜ್ಯೋತಿ ಶಶಿಕುಮಾರ್ ಜನನ.

1949: ಸಾಹಿತಿ ಡಾ. ಜೆ.ಕೆ. ರಮೇಶ್ ಜನನ.

1948: ಚಿತ್ರ ನಟಿ ಹೇಮಮಾಲಿನಿ ಜನ್ಮದಿನ.

1945: ಅಮೆರಿಕದಲ್ಲಿ ಆಹಾರ ಮತ್ತು ಕೃಷಿ ಸಂಸ್ಥೆಯನ್ನು (ಎಫ್ಎಓ) ಈದಿನ ಅಸ್ತಿತ್ವಕ್ಕೆ ತರಲಾಯಿತು. ಅದರ ಸ್ಮರಣೆಗಾಗಿ ಈದಿನವನ್ನು ವಿಶ್ವ ಆಹಾರ ದಿನವಾಗಿ ಆಚರಿಸಲಾಗುತ್ತದೆ. 1981ರಲ್ಲಿ ಮೊದಲ ಬಾರಿಗೆ ವಿಶ್ವ ಆಹಾರ ದಿನವನ್ನು ಆಚರಿಸಲಾಯಿತು.

1941: ಸಾಹಿತ್ಯ ಮತ್ತು ಆಡಳಿತ ಎರಡನ್ನೂ ಸಮರ್ಥವಾಗಿ ನಿಭಾಯಿಸಿಕೊಂಡು ಹೋದ ಖ್ಯಾತ ಸಾಹಿತಿ ಪಿ.ಎಸ್. ರಾಮಾನುಜಂ ಅವರು ಸಂಪತ್ ಕುಮಾರ್ ಆಚಾರ್ಯ- ಇಂದಿರಮ್ಮ ದಂಪತಿಯ ಮಗನಾಗಿ ಚಾಮರಾಜನಗರ ಜಿಲ್ಲೆಯ ಬೇಡಮೂಡಲುನಲ್ಲಿ ಜನಿಸಿದರು.

1931: ಸಾಹಿತಿ ಕ.ಮ.ಶಿ. ಚಂದ್ರಶೇಖರಯ್ಯ ಜನನ.

1916: ಮಾರ್ಗರೆಟ್ ಸ್ಯಾಂಗರ್ ನ್ಯೂಯಾರ್ಕ್ ನಗರದ ಬ್ರೂಕ್ಲಿನ್ನಿನಲ್ಲ್ಲಿ `ಜನನ ನಿಯಂತ್ರಣ ಕ್ಲಿನಿಕ್' ತೆರೆದರು. ಅವರನ್ನು ಒಂಬತ್ತು ದಿನಗಳ ಬಳಿಕ ಬಂಧಿಸಿ ಒಂದು ತಿಂಗಳ ಕಾಲ ಸೆರೆಮನೆಯಲ್ಲಿ ಇಡಲಾಯಿತು. ಜನನ ನಿಯಂತ್ರಣ ಚಳವಳಿಯ ಸ್ಥಾಪಕಿ ಎಂದೇ ಈಕೆಯನ್ನು ಪರಿಗಣಿಸಲಾಗಿದೆ.

1905: ಬಂಗಾಳದಲ್ಲಿ ವ್ಯಾಪಕವಾಗಿದ್ದ ರಾಷ್ಟ್ರೀಯತೆಯ ಭಾವನೆಯ ಪ್ರಭಾವ ಭಾರತದ ಇತರ ಭಾಗಗಳ ಮೇಲೆ ಆಗದಂತೆ ತಡೆಯಲು ಲಾರ್ಡ್ ಕರ್ಝನ್ ಬಂಗಾಳವನ್ನು ವಿಭಜಿಸಿದ. ಹಲವಾರು ಆಡಳಿತಾತ್ಮಕ ಸಮಸ್ಯೆಗಳಿಗೆ ಇದು ಪರಿಹಾರ ಆಗಬಹುದು ಎಂದು ಆತ ಭಾವಿಸಿದ್ದ. ಬಂಗಾಳದ ಏಳು ಪೂರ್ವ ಜಿಲ್ಲೆಗಳು ಮತ್ತು ನಾಲ್ಕು ಗುಡ್ಡಗಾಡು ಜಿಲ್ಲೆಗಳನ್ನು `ಪೂರ್ವ ಬಂಗಾಳ' ಎಂಬ ಹೊಸ ಪ್ರಾಂತ ರಚಿಸಿ ಅದಕ್ಕೆ ವರ್ಗಾಯಿಸಲಾಯಿತು.

No comments:

Post a Comment