Sunday, October 14, 2018

#ಮಿ ಟೂ ಆರೋಪ: ಎಂ.ಜೆ. ಅಕ್ಬರ್ ‘ರಾಜೀನಾಮೆ’


#ಮಿ ಟೂ ಆರೋಪ: ಎಂ.ಜೆ. ಅಕ್ಬರ್ರಾಜೀನಾಮೆ

ನವದೆಹಲಿ:  ಹಿರಿಯ ಪತ್ರಕರ್ತರಾಗಿದ್ದಾಗ ಲೈಂಗಿಕ ಕಿರುಕುಳ ನೀಡಿದ್ದರು ಎಂಬುದಾಗಿ ಮಹಿಳಾ ಪತ್ರಕರ್ತರ ಆರೋಪಗಳಿಗೆ ಗುರಿಯಾದ ಕಿರಿಯ  ವಿದೇಶಾಂಗ ಸಚಿವ ಎಂ.ಜೆ. ಅಕ್ಬರ್ ೨೦೧೮ ಅಕ್ಟೋಬರ್ ೧೪ ಭಾನುವಾರ ಕೇಂದ್ರ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿದರು.
                      
ನೈಜೀರಿಯಾದ ಅಧಿಕೃತ ಪ್ರವಾಸದಿಂದ ಹಿಂದಿರುಗಿದ ಅಕ್ಬರ್ ಅವರು, ಪ್ರಧಾನ ಕಾರ್ಯದರ್ಶಿ ನೃಪೇಂದ್ರ ಮಿಶ್ರಾ ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ಕಳುಹಿಸಿದ್ದು, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಭೇಟಿಗೆ ಸಮಯ ಕೋರಿದ್ದಾರೆ ಎಂದು ವರದಿಗಳು ತಿಳಿಸಿವೆ.

# ಮಿ ಟೂ ಚಳವಳಿಯ ಭಾಗವಾಗಿ ಅನೇಕ ಮಹಿಳೆಯರು ಅಕ್ಬರ್ ವಿರುದ್ಧ ಮಾಡುತ್ತಿರುವ ಆರೋಪಗಳ ಹಿನ್ನೆಲೆಯಲ್ಲಿ ಅಕ್ಬರ್ ಅವರನ್ನು ಸಮರ್ಥಿಸಿಕೊಳ್ಳವುದು ಕಷ್ಟದ ವಿಚಾರ ಎಂಬುದಾಗಿ ಸರ್ಕಾರಿ ಮೂಲಗಳು ಹೇಳಿವೆ.

ಸಾಹಿತ್ಯ, ಮನರಂಜನೆ, ಪತ್ರಿಕೋದ್ಯಮ ಮತ್ತು ಜಾಹೀರಾತು ಕ್ಷೇತ್ರಗಳಲ್ಲಿ ದೊಡ್ಡ ವ್ಯಕ್ತಿಗಳ ಹೆಸರಿನ ಜೊತೆ ಲೈಂಗಿಕ ಕಿರುಕುಳದ ಆರೋಪಗಳು ತಳಕು ಹಾಕಿಕೊಳ್ಳುತ್ತಿದ್ದು, ಹಿನ್ನೆಲೆಯಲ್ಲಿ ಸಾರ್ವಜನಿಕ ಸಮಾರಂಭಗಳಲ್ಲಿ ತಮ್ಮನ್ನು ಅಕ್ಬರ್ ಅವರಿಗೆ ಸಂಬಂಧಿಸಿದಂತೆ ಪ್ರಶ್ನಿಸಲಾಗುತ್ತಿದೆ ಎಂದು ಇತರ ಅನೇಕ ಸಚಿವರು ದೂರುತ್ತಿದ್ದಾರೆ ಎಂದು ವರದಿಗಳು ಹೇಳಿವೆ.

ವಿಷಯದಲ್ಲಿ ಭಾರತೀಯ ಜನತಾ ಪಕ್ಷವು ಅಧ್ಯಯನಪೂರ್ಣ  ಮೌನವನ್ನು ತಾಳಿದ್ದು, ಅಕ್ಬರ್ ವಿರುದ್ಧದ  ಆರೋಪಗಳು ಗಂಭೀರ ಸ್ವರೂಪದವಾಗಿವೆ ಎಂದು ಪಕ್ಷದ ಮೂಲಗಳು ಹೇಳಿವೆ.

ಅಕ್ಬರ್ ಅವರ ವಿರುದ್ಧ ಯಾವುದೇ ಪ್ರಕರಣ ಇಲ್ಲ. ಈಗ ಕೇಳಿ ಬರುತ್ತಿರುವ ಆರೋಪಗಳು ಕೂಡಾ ಅವರು ಸಚಿವರಾಗುವುದಕ್ಕಿಂತ ಸಾಕಷ್ಟು ಹಿಂದಿನವು ಎಂಬ ಅಭಿಪ್ರಾಯ ಕೂಡಾ ಪಕ್ಷದ ಕೆಲವು ವಲಯಗಳಲ್ಲಿ ಇದೆ.

ಬಿಜೆಪಿ ಮುಖ್ಯಸ್ಥ ಅಮಿತ್ ಶಾ ಅವರು  ಪ್ರಸ್ತುತ ಮಧ್ಯಪ್ರದೇಶದಲ್ಲಿ ಎರಡು ದಿನಗಳ ಚುನಾವಣಾ ಸಮೀಕ್ಷಾ ಪ್ರವಾಸದಲ್ಲಿದ್ದಾರೆ.

ಅಕ್ಬರ್ ದುರ್ವರ್ತನೆಯ ವಿರುದ್ಧ ಪತ್ರಕರ್ತೆ ಪ್ರಿಯಾ ರಮಣಿ ಅವರು ಮೊದಲು ಅವರ ಹೆಸರನ್ನು ಉಲ್ಲೇಖಿಸದೆಯೇ ಕಳೆದ ವರ್ಷ ನಿಯತಕಾಲಿಕ ಒಂದಕ್ಕೆ ಬರೆದಿದ್ದರು. ವಾರ ಅವರು ತಮ್ಮ ಆರೋಪವು ಅಕ್ಬರ್ ವಿರುದ್ಧ ಎಂಬುದಾಗಿ ದೃಢ ಪಡಿಸಿದ್ದರು.

 ನನ್ನ ಬರಹದ ತುಣುಕನ್ನು ಎಂ.ಜೆ. ಅಕ್ಬರ್ ಕಥೆಯೊಂದಿಗೆ ಪ್ರಾರಂಭಿಸಿದ್ದೆ. ಅವರು "ಏನೂ" ಮಾಡದ ಕಾರಣ ಅವರ ಹೆಸರನ್ನು  ಎಂದೂ ಉಲ್ಲೇಖಿಸಲಿಲ್ಲ. ಬಹಳಷ್ಟು ಮಹಿಳೆಯರ ಬಳಿ ಪರಭಕ್ಷಕನ ಬಗ್ಗೆ ಕೆಟ್ಟ ಕಥೆಗಳಿವೆ. ಬಹುಶಃ ಅವರು ಹಂಚಿಕೊಳ್ಳಬಹುದುಎಂದು ರಮಣಿ ಬರೆದಿದ್ದರು.

ದಿ ಟೆಲಿಗ್ರಾಫ್, ಏಷ್ಯನ್ ಏಜ್ ಮತ್ತು ದಿ ಸಂಡೇ ಗಾರ್ಡಿಯನ್ ಮುಂತಾದ ಪ್ರಮುಖ ಪತ್ರಿಕೆಗಳ ಸಂಪಾದಕರಾಗಿದ್ದ ಅಕ್ಬರ್ ಅವರು ಬಳಿಕ ಬಿಜೆಪಿ ಮೂಲಕ ರಾಜ್ಯಸಭೆ ಪ್ರವೇಶಿಸಿದ್ದರು.

ತಮಗಾಗಿದ್ದ ಅನುಭವವನ್ನು ವಿವರಿಸಿದ್ದ ರಮಣಿ, ‘ನನಗೆ 23 ವರ್ಷ ಮತ್ತು ಅವರಿಗೆ 43 ವರ್ಷವಾಗಿದ್ದಾಗ ಅವರು ದಕ್ಷಿಣ ಮುಂಬೈ ಹೋಟೆಲ್ ಒಂದಕ್ಕೆ ಕೆಲಸದ ಸಂದರ್ಶನ ಒಂದಕ್ಕಾಗಿ ಕರೆದಿದ್ದರು. ಅಲ್ಲಿ ಹೋಟೆಲ್ ಲಾಬಿಯಲ್ಲಿ ಅವರು ನನ್ನನ್ನು ಭೇಟಿ ಮಾಡಲಿಲ್ಲ. ಬದಲಿಗೆ ತಮ್ಮ ಕೊಠಡಿಗೆ ಕರೆಸಿದರು. ಅಲ್ಲಿ ಪಾನೀಯ ಕೊಟ್ಟರು. ನಾನು ನಿರಾಕರಿಸಿದರೂ ತಾವು ವೋಡ್ಕಾ ಸೇವಿಸುತ್ತಾ ಹಳೆಯ ಹಾಡು ಗುನುಗುನಿಸಿದರು. ತಮ್ಮ ಪಕ್ಕದಲ್ಲೇ ಕುಳಿತುಕೊಳ್ಳುವಂತೆ ಸೂಚಿಸಿದರು ಎಂದು ರಮಣಿ ಆಪಾದಿಸಿದ್ದರು.
ತಾನು
ಕೆಲಸದ ಕೊಡುಗೆ ಬಂದರೂ ನಿರಾಕರಿಸಿದ್ದೆ ಎಂದು ಅವರು ಬರೆದಿದ್ದರು.

ರಮಣಿ ಅವರ ಬಳಿಕ ಶುಮಾ ರಾಹ ಎಂಬ ಪತ್ರಕರ್ತೆ ಮತ್ತು ಪ್ರೇರಣಾ ಸಿಂಗ್ ಬಿಂದ್ರಾ ಎಂಬ ಪತ್ರಕರ್ತೆ ತಮಗಾದ ಕೆಟ್ಟ ಅನುಭವಗಳನ್ನು ಬಹಿರಂಗ ಪಡಿಸಿದ್ದರು.

No comments:

Post a Comment