Sunday, December 23, 2018

ಇಂದಿನ ಇತಿಹಾಸ History Today ಡಿಸೆಂಬರ್ 23

ಇಂದಿನ ಇತಿಹಾಸ History Today ಡಿಸೆಂಬರ್  23
2018: ಶಬರಿಮಲೈ / ತಿರುವನಂತಪುರಂ: ಪ್ರತಿಭಟನಕಾರ ಭಕ್ತರ ತೀವ್ರ ವಿರೋಧ ಪ್ರತಿರೋಧದ ಪರಿಣಾಮವಾಗಿ ಶಬರಿಮಲೈ ಅಯ್ಯಪ್ಪ ದರ್ಶನ ಪಡೆಯಲು ಪಟ್ಟು ಹಿಡಿದಿದ್ದ ತಮಿಳುನಾಡಿನ ೧೧ ಮಹಿಳೆಯರು ದೇವಾಲಯಕ್ಕೆ ಪ್ರವೇಶ ಲಭಿಸದೆ, ತಮ್ಮ ಕಾರ್ಯಕ್ರಮ ರದ್ದು ಪಡಿಸಿ ಮಧುರೈಗೆ ವಾಪಸಾದರು.ದೇವಾಲಯದ ಪುರಾತನ ಪದ್ಧತಿಯನ್ನು ಉಲ್ಲಂಘಿಸಿ ಋತುಮತಿ ವಯೋಮಾನದ ಮಹಿಳೆಯರ ಪ್ರವೇಶವನ್ನು ವಿರೋಧಿಸುತ್ತಿದ್ದ ಭಕ್ತರ ಪ್ರತಿಭಟನೆಯು, ಪೊಲೀಸರು ಮಹಿಳೆಯರನ್ನು ಬಂದೋಬಸ್ತಿನಲ್ಲಿ ಕರೆದೊಯ್ಯಲು ಹೊರಟಾಗ ಹಿಂಸೆಗೆ ತಿರುಗಿತು. ಹಂತದಲ್ಲಿ ಪೊಲೀಸರು ಹಲವಾರು ಪ್ರತಿಭಟನಾ ನಿರತ ಭಕ್ತರನ್ನು ಬಂಧಿಸಿದರು. ಆದರೆ ಪ್ರತಿಭಟನಕಾರ ಭಕ್ತರ ಗುಂಪು ಹೆಚ್ಚಾದ ಪರಿಣಾಮವಾಗಿ ಮಹಿಳಾ ತಂಡಕ್ಕೆ ಪಂಬಾದಿಂದ ದೇವಾಲಯದವರೆಗಿನ ಕಿಮೀ ಮಾರ್ಗದಲ್ಲಿ ೧೦೦ ಮೀಟರುಗಳಷ್ಟು ದೂರ ಕೂಡಾ ಸಾಗಲು ಸಾಧ್ಯವಾಗಲಿಲ್ಲ.ತಮಿಳುನಾಡಿನಮಾನಿಥಿ ಮಹಿಳಾ ಸಂಘಟನೆಯ ಕಾರ್ಯಕರ್ತೆ ಸೆಲ್ವೀ ನೇತೃತ್ವದಲ್ಲಿ ಬೆಳಗ್ಗೆ .೩೦ರ ವೇಳೆಗೇ ಪಂಬಾ ಮೂಲಶಿಬಿರಕ್ಕೆ ಆಗಮಿಸಿದ್ದ ೧೧ ಮಹಿಳೆಯರ ತಂಡ ಪಂಬಾದಿಂದ ಮುಂದಕ್ಕೆ ಬೆಟ್ಟ ಏರುವ ಮಾರ್ಗದಲ್ಲೇ ಭಕ್ತರು ಅಡ್ಡ ಗಟ್ಟಿದ ಪರಿಣಾಮವಾಗಿ ತಮ್ಮ ಮುಂದಿನ ಯಾತ್ರೆಯನ್ನು ಕೈಬಿಟ್ಟು ಮಧುರೈಗೆ ವಾಪಸಾಗಬೇಕಾಯಿತು. ಅದಕ್ಕೆ ಮುನ್ನ ಏನಾದರೂ ಸರಿ ದರ್ಶನ ಪಡೆಯದೆ ವಾಪಸಾಗುವುದಿಲ್ಲ ಎಂದು ಪಟ್ಟು ಹಿಡಿದಿದ್ದ ಮಹಿಳೆಯರು, ಇನ್ನಷ್ಟು ಮಹಿಳೆಯರು ತಂಡಗಳಲ್ಲಿ ಶಬರಿಮಲೈಗೆ ಬರಲಿದ್ದಾರೆ ಎಂದು ಪ್ರಕಟಿಸಿದ್ದರು.ನೂರಾರು ಮಂದಿ ಭಕ್ತರ ಗುಂಪು ಪೊಲೀಸರ ಬೆಂಗಾವಲಿನಲ್ಲಿ ದೇವಾಲಯದತ್ತ ಹೊರಟ ಮಹಿಳೆಯರನ್ನು ಮಾರ್ಗಮಧ್ಯದಲ್ಲಿ ಅಡ್ಡ ಗಟ್ಟಿ ವಸ್ತುಶಃ ಹಿಂದಕ್ಕೆ ಅಟ್ಟಿತು. ಮಹಿಳೆಯರ ಅರಣ್ಯಮಾರ್ಗದ ದಾರಿಯನ್ನು ಅಡ್ಡಗಟ್ಟಿದ ಕೆಲವು ಭಕ್ತರನ್ನು ಪೊಲೀಸರು ಬಂಧಿಸಿದರೂ, ಭಕ್ತರು ನೂರಾರು ಸಂಖ್ಯೆಯಲ್ಲಿ ಜಮಾಯಿಸಿ ಅವರನ್ನು ಅಡ್ಡಗಟ್ಟಿದರು.ಪ್ರತಿಭಟನೆಯ ಮಧ್ಯೆ ೧೦೦ ಮೀಟರ್ ಕೂಡಾ ಮುಂದಕ್ಕೆ ಸಾಗಲು ಸಾಧ್ಯವಾಗದ ಮಹಿಳೆಯರು ಮತ್ತು ಅವರ ಬೆಂಗಾವಲಿಗೆ ಬಂದ ಪೊಲೀಸರು ಪ್ರತಿಭಟನಕಾರರ ಒತ್ತಡ ತಾಳಲಾಗದೆ ಮುಂದಕ್ಕೆ ಸಾಗುವ ಯೋಜನೆಯನ್ನು ಕೈಬಿಟ್ಟು ರಕ್ಷಣೆಗಾಗಿ ಸಮೀಪದ ಗಾರ್ಡ್ ರೂಂ ಹೊಕ್ಕರು. ಮಹಿಳೆಯರನ್ನು ತಡೆಯಲು ನಿಷೇಧಾಜ್ಞೆಗಳನ್ನು ಉಲ್ಲಂಘಿಸಿ ಭಾರೀ ಸಂಖ್ಯೆಯಲ್ಲಿ ಸೇರಿ, ಅಯ್ಯಪ್ಪ ನಾಮ ಜಪ ಜಪಿಸುತ್ತಾ ದಾರಿ ಅಡ್ಡಗಟ್ಟಿದ್ದ ಭಕ್ತರಿಗೆ ಚದುರುವಂತೆ ಪದೇ ಪದೇ ಧ್ವನಿವರ್ಧಕದಲ್ಲಿ ಕೂಗಿ ಪೊಲೀಸರು ಎಚ್ಚರಿಸಿದರು. ಆದರೂ ಚದುರದ ಭಕ್ತರನ್ನು ಬಲವಂತವಾಗಿ ತೆರವುಗೊಳಿಸಲು ಯತ್ನಿಸಿದರು. ಸುಮಾರು ಗಂಟೆಗಳಿಗೂ ಹೆಚ್ಚುಕಾಲ ದರ್ಶನಕ್ಕಾಗಿ ಪಟ್ಟು ಹಿಡಿದು ರಸ್ತೆಯಲ್ಲೇ ಕುಳಿತಿದ್ದ ಮಹಿಳೆಯರು ಕಡೆಗೂ ಮುಂದುವರೆಯಲಾಗದೆ ತಮ್ಮ ಯೋಜನೆಯನ್ನು ಕೈಬಿಟ್ಟರು.ಇದಕ್ಕೆ ಮುನ್ನ ಮಹಿಳೆಯರು ಪ್ರವೇಶಿಸಿದ್ದೇ ಆದರೆ, ದೇವಾಲಯದ ಬಾಗಿಲು ಮುಚ್ಚಿ ತೆರಳುವುದಾಗಿ ದೇವಾಲಯದ ಅರ್ಚಕರೂ ಎಚ್ಚರಿಕೆ ನೀಡಿದ್ದರು. ಹಿಂದೂ ಐಕ್ಯವಾಹಿನಿಯ ನಾಯಕಿ ಶಶಿಕಲಾ ಅವರು ಪ್ರಾಣತೆತ್ತಾದರೂ ಸರಿ ದೇವಾಲಯದ ಪರಂಪರೆಗಳನ್ನು ರಕ್ಷಿಸುವುದಾಗಿ ಹೇಳಿದ್ದರು.
ಮಧ್ಯೆಅಯ್ಯಪ್ಪ ದೇವಾಲಯಕ್ಕೆ ನಿಕಟವಾಗಿರುವ ಪಂದಳ ರಾಜಕುಟುಂಬ ಮತ್ತು ವಿರೋಧಿ ಬಿಜೆಪಿ, ಸರ್ಕಾರವುಕಾರ್ಯಕರ್ತ ಮಹಿಳೆಯರನ್ನು ಪೊಲೀಸ್ ರಕ್ಷಣೆಯಲ್ಲಿ ದೇವಾಲಯಕ್ಕೆ ಕರೆದೊಯ್ಯುತ್ತಿದೆ ಎಂದು ಆಪಾದಿಸಿದರೆ, ದೇವಸ್ವಂ ಸಚಿವ ಕಡಕಂಪಲ್ಲಿ ಸುರೇಂದ್ರ ಅವರು ತಾವು ಹೈಕೋರ್ಟ್ನಿಂದ ನೇಮಕಗೊಂಡಿರುವ ನಿಗಾ ಸಮಿತಿಯ ನಿರ್ದೇಶನದಂತೆ ನಡೆದುಕೊಳ್ಳುವುದಾಗಿ ಹೇಳಿದರು. ‘ಹೈಕೋರ್ಟಿನಿಂದ ನೇಮಕಗೊಂಡಿರುವ ತ್ರಿಸದಸ್ಯ ಸಮಿತಿಯು ವಿಷಯವನ್ನು ಪರಿಶೀಲಿಸಿ ಸೂಕ್ತ ನಿರ್ಧಾರ ಕೈಗೊಳ್ಳುವುದು ಎಂದು ನಾವು ಹಾರೈಸಿದ್ದೇವೆ. ಅವರ ನಿರ್ಧಾರಕ್ಕೆ ಅನುಗುಣವಾಗಿ ಸರ್ಕಾರವ ನಡೆದುಕೊಳ್ಳುತ್ತದೆ ಎಂದು ಸುರೇಂದ್ರನ್ ವರದಿಗಾರರ ಜೊತೆ ಮಾತನಾಡುತ್ತಾ ಹೇಳಿದರು.ಏನಿದ್ದರೂಮಹಿಳೆಯರ ಆಗಮನವು ವ್ಯವಸ್ಥಿತ ಯೋಜನೆಯಾಗಿದ್ದು, ಸಿಪಿಐ(ಎಂ) ನೇತೃತ್ವದ ಎಲ್ ಡಿಎಫ್ ಸರ್ಕಾರವು ಇದರ ಹಿಂದಿದೆ ಎಂದು ಬಿಜೆಪಿ ನಾಯಕ ಕೆ. ಸುರೇಂದ್ರನ್ ಆಪಾದಿಸಿದರು.ಬಿಜೆಪಿ ಮತ್ತು ಇತರ ಬಲಪಂಥೀಯ ಚಳವಳಿಕಾರರು ತಿರುವನಂತಪುರಂನ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಅಧಿಕೃತ ನಿವಾಸ ಕ್ಲಿಫ್ ಹೌಸ್ ಎದುರು ಮತ್ತು ರಾಜ್ಯದ ಇತರ ಕಡೆಗಳಲ್ಲಿ ನಾಮಜಪ ಪ್ರತಿಭಟನೆಗಳನ್ನು ನಡೆಸಿದರು. ‘ಮಾನಿಥಿ ಸಂಚಾಲಕಿ ಸೆಲ್ವಿ ಅವರು ಇದಕ್ಕೆ ಮುನ್ನ ಪಂಬಾದಲ್ಲಿ ಸಂಘಟನೆಯ ಇನ್ನಷ್ಟು ಮಹಿಳೆಯರು ಶಬರಿಮಲೈ ಮಾರ್ಗದಲ್ಲಿದ್ದು, ೧೧ ಮಂದಿ ಮಹಿಳೆಯರು ಮೊದಲ ತಂಡದ ಸದಸ್ಯರಾಗಿದ್ದಾರೆ ಎಂದು ಹೇಳಿದ್ದರು.’ಮಹಿಳೆಯರಿಗೆ ದೇವಾಲಯದಲ್ಲಿ ಪ್ರಾರ್ಥಿಸುವ ಹಕ್ಕಿದೆ. ದರ್ಶನವಿಲ್ಲದೆ ನಾವು ವಾಪಸಾಗುವುದಿಲ್ಲ ಎಂದೂ ಅವರು ಹೇಳಿದ್ದರು.’ಪ್ರತಿಭಟನೆಗಳ ಹಿನ್ನೆಲೆಯಲ್ಲಿ ವಾಪಸಾಗುವಂತೆ ಪೊಲೀಸರು ನಮಗೆ ಸೂಚಿಸುತ್ತಿದ್ದಾರೆ. ಆದರೆ ದರ್ಶನವಿಲ್ಲದೆ ನಾವು ವಾಪಸಾಗುವುದಿಲ್ಲ. ಬೆಟ್ಟ ಏರಲು ಬಿಡುವವರೆಗೂ ನಾವು ಇಲ್ಲೇ ಕುಳಿತುಕೊಳ್ಳುತ್ತೇವೆ ಎಂದು ಅವರು ವರದಿಗಾರರಿಗೆ ತಿಳಿಸಿದ್ದರು. ಕೇರಳ ಮೂಲದ ದಲಿತ ಕಾರ್ಯಕರ್ತೆ ಅಮ್ಮಿನಿ ಅವರೂ ತಾನು ಭಾನುವಾರ ಶಬರಿಮಲೈ ಬೆಟ್ಟ ಏರಲು ನಿರ್ಧರಿಸಿರುವುದಾಗಿ ಪ್ರಕಟಿಸಿದ್ದರು. ತಿಭಟನಕಾರರು ತನ್ನನ್ನು ತಡೆದರೆ ಶಬರಿಮಲೈಗೆ ಹೋಗುವ ಪಂಬಾದ ದಾರಿಯಲ್ಲಿ ಆಮರಣ ನಿರಶನ ಕೈಗೊಳ್ಳುವೆ ಎಂದೂ ಅಮ್ಮಿನಿ ಕೊಟ್ಟಾಯಂನಲ್ಲಿ ಹೇಳಿದ್ದರುಮಾನಿಥಿ ಗುಂಪು ತಮಿಳುನಾಡು -ಕೇರಳ ಗಡಿಯ ಇಡುಕ್ಕಿ ಕಂಬಮೇಡು ಮೂಲಕ ಬೆಳಗ್ಗೆ .೩೦ಕ್ಕೆ ಪಂಬಾ ತಲುಪಿತ್ತು. ಮಾರ್ಗದುದ್ದಕ್ಕೂ ಹಲವೆಡೆಗಳಲ್ಲಿ ಅವರು ಪ್ರತಿಭಟನೆಗಳನ್ನು ಎದುರಿಸಬೇಕಾಯಿತು. ಪೊಲೀಸರು ಪ್ರತಿಭಟನಕಾರರನ್ನು ತೆರವುಗೊಳಿಸಿ ಪಂಬಾ ತಲುಪಲು ಅವರಿಗೆ ನೆರವಾದರು ಎಂದು ಸ್ಥಳೀಯ ಟಿವಿ ವಾಹಿನಿಗಳು ವರದಿ ಮಾಡಿದವು.೧೧ ಮಂದಿ ಮಹಿಳೆಯರ ಪೈಕಿ ಮಂದಿಪದಿನೆಟ್ಟಾಂಪಡಿ (೧೮ ಮೆಟ್ಟಿಲು) ಏರಲು ಕಡ್ಡಾಯವಾಗಿ ಹೊಂದಿರಬೆಕಾದ ಸಾಂಪ್ರದಾಯಿಕ ಇರುಮುಡಿಕಟ್ಟು ಇಟ್ಟುಕೊಂಡಿದ್ದರು.ಗುಂಪಿನ ಇನ್ನೊಬ್ಬ ಸದಸ್ಯೆ ಥಿಲಕಾವಥಿಅಯ್ಯಪ್ಪ ಸ್ವಾಮಿಗೆ ಪ್ರಾರ್ಥನೆ ಸಲ್ಲಿಸಲು ಸಾಧ್ಯವಾಗುವವರೆಗೂ ತಮ್ಮ ಪ್ರತಿಭಟನೆಯನ್ನು ಮುಂದುವರೆಸುವುದಾಗಿ ನುಡಿದರುಪಂಬಾದಲ್ಲಿ ಸ್ಥಳೀಯ ದೇವಾಲಯದ ಅರ್ಚಕರು ತಮ್ಮೊಂದಿಗೆ ಸಹಕರಿಸಲಿಲ್ಲ. ಸಂಪ್ರದಾಯದ ಪ್ರಕಾರ ನಮ್ಮಇರುಮುಡಿಕಟ್ಟು ಸಿದ್ಧಪಡಿಸಲು ಅವರು ನಮಗೆ ಸಹಕಾರ ನೀಡಲಿಲ್ಲ. ನಾವು ನಮ್ಮದೇ ಆದ ರೀತಿಯಲ್ಲಿ ಅದನ್ನು ತಯಾರಿಸಿಕೊಂಡಿದ್ದೇವೆ ಎಂದು ಅವರು ಹೇಳಿದರು.ಪುರಾತನ ದೇವಾಲಯದಲ್ಲಿ ಸುದೀರ್ಘ ಕಾಲದಿಂದ ಅನುಸರಿಸಲಾಗುತ್ತಿರುವ ವಿಧಿ ವಿಧಾನಗಳ ಪ್ರಕಾರ ೧೦-೫೦ರ ನಡುವಣ ಮಹಿಳೆಯರಿಗೆ ಶಬರಿಮಲೈ ದೇವಾಲಯ ಪ್ರವೇಶ ನಿಷಿದ್ಧವಾಗಿದೆ. ಆದರೆ ಸುಪ್ರೀಂಕೋರ್ಟ್ ತನ್ನ ಸೆಪ್ಟೆಂಬರ್ ೨೮ರ ಚಾರಿತ್ರಿಕ ತೀರ್ಪಿನಲ್ಲಿ ನಿಷೇಧವನ್ನು ರದ್ದು ಪಡಿಸಿ ಎಲ್ಲ ವಯಸ್ಸಿನ ಮಹಿಳೆಯರಿಗೂ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಲು ಅನುಮತಿ ನೀಡಿದೆ.ಮಾನಿಥಿ ಸಂಘಟನೆ ತನ್ನ ಗುಂಪಿನ ೫೦ ವರ್ಷಗಳ ಒಳಗಿನ ೫೦ ಮಂದಿ ಮಹಿಳೆಯರು ದೇವಾಲಯಕ್ಕೆ ಭೇಟಿ ನೀಡುವುದಾಗಿ ವಾರದ ಹಿಂದೆ ಪ್ರಕಟಿಸಿದಾಗ ಶಬರಿಮಲೈ ದೇವಾಲಯದ ಆಸುಪಾಸಿನಲ್ಲಿ ಉದ್ವಿಗ್ನತೆ ಉಂಟಾಗಿತ್ತು.ತಮ್ಮ ಗುಂಪಿನಲ್ಲಿ ಕೇರಳ ಮತ್ತು ತಮಿಳುನಾಡು ಅಲ್ಲದೆ ಮಧ್ಯಪ್ರದೇಶ, ಒಡಿಶಾ, ಕರ್ನಾಟಕದ ಮಹಿಳೆಯರೂ ಇದ್ದಾರೆ. ತಾವು ಈಗಾಗಲೇ ತಮ್ಮ ಯೋಜನೆ ಬಗ್ಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಕಚೇರಿಗೆ ಪತ್ರ ಬರೆದು ತಿಳಿಸಿದ್ದೇವೆ ಎಂದೂ ಸೆಲ್ವಿ ಮಲಯಾಳಿ ಟಿವಿ ವಾಹಿನಿ ಒಂದಕ್ಕೆ ತಿಳಿಸಿದ್ದರು.ಸೆಪ್ಟೆಂಬರ್ ೨೮ರ ಸುಪ್ರೀಂಕೋರ್ಟ್ ತೀರ್ಪನ್ನು ಜಾರಿಗೊಳಿಸಲು ಕೇರಳ ಸರ್ಕಾರವು ನಿರ್ಧರಿಸಿದಂದಿನಿಂದ ೧೦-೫೦ರ ನಡುವಣ ವಯಸ್ಸಿನ ಮಹಿಳೆಯರ ಪ್ರವೇಶವನ್ನು ವಿರೋಧಿಸಿ ಭಕ್ತರು ವ್ಯಾಪಕ ಪ್ರತಿಭಟನೆಗಳನ್ನು ಕೇರಳದಾದ್ಯಂತ ನಡೆಸಿದರು. ಒಂದು ಡಜನ್ಗೂ ಹೆಚ್ಚು ಮಹಿಳೆಯರು ಶಬರಿಮಲೈ ಪ್ರವೇಶಕ್ಕೆ ಯತ್ನಿಸಿ ವಿಫಲರಾಗಿ ವಾಪಸ್ ಹೋಗಿದ್ದಾರೆ. ನಾಲ್ವರು ಮಂಗಳಮುಖಿಯರು ವಾರ ಪೊಲೀಸರ ಭದ್ರತೆಯಲ್ಲಿ ದೇವಾಲಯಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಭಕ್ತರು ಮೊದಲು ಅವರನ್ನು ಅಡ್ಡಗಟ್ಟಿದರೂ, ಬಳಿಕ ಹೋಗಲು ಬಿಟ್ಟು ಬಿಟ್ಟಿದ್ದರುಕಾನೂನು ಸುವ್ಯವಸ್ಥೆ ಮತ್ತು ಭಕ್ತರಿಗೆ ಎದುರಾಗುವ ಸಮಸ್ಯೆಗಳ ಪರಿಶೀಲನೆಗಾಗಿ ಕೇರಳ ಹೈಕೋರ್ಟ್ ಕಳೆದ ತಿಂಗಳು ತ್ರಿಸದಸ್ಯ ಸಮಿತಿಯೊಂದನ್ನು ರಚಿಸಿತ್ತು.
.
2018: ಪಾಟ್ನಾ: ಬಿಜೆಪಿ ಮತ್ತು ಜೆಡಿ (ಯು) ಗೆ ತಲಾ ೧೭ ಸ್ಥಾನಗಳು ಮತ್ತು ಲೋಕ ಜನಶಕ್ತಿ ಪಕ್ಷಕ್ಕೆ (ಎಲ್ಜೆಪಿ) ಸ್ಥಾನಗಳನ್ನು ನಿಗದಿ ಪಡಿಸಿ, ಎನ್ಡಿಎ ಅಂಗ ಪಕ್ಷಗಳ  ಬಿಹಾರದ ಸ್ಥಾನ ಹಂಚಿಕೆ ಒಪ್ಪಂದವನ್ನು ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಬಿಹಾರ ಮುಖ್ಯಮಂತ್ರಿ, ಜನತಾದಳ (ಯು) ಮುಖ್ಯಸ್ಥ   ನಿತೀಶ್ಕುಮಾರ್ ಮತ್ತು ಲೋಕಜನಶಕ್ತಿ ಪಕ್ಷದ ನಾಯಕರಾಮ್ ವಿಲಾಸ್ ಪಾಸ್ವಾನ್ ಅವರು ಇಲ್ಲಿ ಪ್ರಕಟಿಸಿದರು.ಲೋಕಜನಶಕ್ತಿ ಪಕ್ಷವು ಬಿಹಾರದಆರು ಲೋಕಸಭಾ ಕ್ಷೇತ್ರಗಳಲ್ಲದೆ, ಉತ್ತರ ಪ್ರದೇಶ ಅಥವಾ ಜಾರ್ಖಂಡ್ನಲ್ಲಿ ಒಂದು ಲೋಕಸಭಾ ಕ್ಷೇತ್ರ ಮತ್ತು ರಾಜ್ಯಸಭೆಯ ಒಂದು ಸ್ಥಾನ  ಪಡೆಯುವ ಸಾಧ್ಯತೆಯಿದೆ. ರಾಜ್ಯಸಭಾ ಸ್ಥಾನವನ್ನು ಪ್ರಸ್ತುತ ನರೇಂದ್ರ ಮೋದಿ ಸಚಿವ ಸಂಪುಟದಲ್ಲಿ ಸಚಿವರಾಗಿರುವ ಪಾಸ್ವಾನ್ ಅವರು ಪಡೆಯುವರು.ಪಾಸ್ವಾನ್ ಮತ್ತು ಬಿಜೆಪಿಯೊಂದಿಗಿನ ತಮ್ಮ ಪಕ್ಷದ ಭಿನ್ನಾಭಿಪ್ರಾಯಗಳ ಬಗ್ಗೆ ಬಹಿರಂಗವಾಗಿ ಮಾತನಾಡುತ್ತಿದ್ದ ಪಾಸ್ವಾನ್ ಪುತ್ರ ಚಿರಾಗ್ ಅವರು ಶುಕ್ರವಾರ ಬಿಜೆಪಿ ಮುಖಂಡ ಅರುಣ್ ಜೇಟ್ಲಿ ಅವರನ್ನು ಭೇಟಿ ಮಾಡಿದ ಬಳಿಕ ಒಪ್ಪಂದವನ್ನು ರೂಪಿಸಲಾಯಿತು. ಸ್ಥಾನಗಳ ಹಂಚಿಕೆಯಲ್ಲದೆ ಇತರ ಸಮಸ್ಯೆಗಳೂ ಇವೆ ಎಂದು ಚಿರಾಗ್ ವರದಿಗಾರರ ಜೊತೆ ಮಾತನಾಡುತ್ತಾ ಹೇಳಿದ್ದರು.ಉಭಯ ಪಕ್ಷಗಳ ನಡುವಣ ಭಿನ್ನಮತ ನಿವಾರಣೆಯಾಗಿದೆ ಎಂದು ಬಳಿಕ ಮೂಲಗಳು ಹೇಳಿದವು.೨೦೧೪ರ ಲೋಕಸಭಾ ಚುನಾವಣೆಯಲ್ಲಿ ೩೧ ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ ನೇತೃತ್ವದ ಎನ್ಡಿಎ, ರಾಜಕೀಯವಾಗಿ ನಿರ್ಣಾಯಕ ರಾಜ್ಯವಾಗಿರುವ ಬಿಹಾರದಲ್ಲಿ ಮಿತ್ರ ಪಕ್ಷ ಜೆಡಿಯು ಜೊತೆಗೆ ಬಾರಿ ಸಮಾನ ಸ್ಥಾನಗಳಿಗೆ ಸ್ಪರ್ಧಿಸುವುದಾಗಿ ಮುನ್ನ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಪ್ರಕಟಿಸಿದ್ದರು.ಲೋಕಜನಶಕ್ತಿ ಪಕ್ಷದ ಜೊತೆಗೆ ಮೈತ್ರಿ ಗಟ್ಟಿಗೊಳಿಸುವ ಕಾರ್ಯವನ್ನು ಪಕ್ಷವು ವಿವಿಧ ಪಕ್ಷಗಳ ನಾಯಕರ ಜೊತೆಗೆ ಉತ್ತಮ ಸ್ನೇಹ ಸಂಬಂಧ ಹೊಂದಿರುವ ಜೇಟ್ಲಿ ಅವರಿಗೆ ಬಿಜೆಪಿ ವಹಿಸಿತ್ತು. ಎಲ್ಜೆಪಿಯು ದಲಿತ ವರ್ಗದ ಪ್ರಬಲ ಬೆಂಬಲವನ್ನು ಹೊಂದಿರುವುದು ಇಲ್ಲಿ ಗಮನಾರ್ಹ.
ಬಿಜೆಪಿಯ ಅಧ್ಯಕ್ಷ ಶಾ ಮತ್ತು ಜೇಟ್ಲಿ ಅವರು ರಾಮ್ ವಿಲಾಸ್ ಪಾಸ್ವಾನ್ ಮತ್ತು ಅವರ ಪುತ್ರ ಚಿರಾಗ್ ಜೊತೆಗೆ ಒಂದು ಗಂಟೆಗೂ ಹೆಚ್ಚಿನ ಮಾತುಕತೆ ನಡೆಸಿದ್ದರುಇದಕ್ಕೆ ಮುನ್ನ ಜೇಟ್ಲಿ ಅವರಿಗೆ ಪತ್ರ ಬರೆದಿದ್ದ ಚಿರಾಗ್ ಪಾಸ್ವಾನ್ ಅವರು ನೋಟು ಅಮಾನ್ಯೀಕರಣದಿಂದ ದೇಶಕ್ಕೆ ಏನು ಪ್ರಯೋಜನವಾಗಿದೆ ಎಂದು ವಿವರಿಸುವಂತೆ ಆಗ್ರಹಿಸಿದ್ದರು.ಸ್ಥಾನ ಹಂಚಿಕೆ ಪ್ರಕಟಣೆಯ ವಿಳಂಬದಿಂದ ಆಡಳಿತಾರೂಢ ಮೈತ್ರಿಕೂಟಕ್ಕೆ ಹಾನಿಯಾಗಬಹುದು ಎಂದೂ ಅವರು ಟ್ವೀಟ್ ಮಾಡಿದ್ದರುದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಸ್ಥಾನ ಹಂಚಿಕೆ ಸೂತ್ರವನ್ನು ಪ್ರಕಟಿಸಿದ ಅಮಿತ್ ಶಾ ಅವರು ರಾಮ್ ವಿಲಾಸ್ ಪಾಸ್ವಾನ್ ಅವರು ರಾಜ್ಯಸಭಾ ಚುನಾವಣೆಗಳಲ್ಲಿ ಎನ್ ಡಿಎ ಮೂಲಕ ರಾಜ್ಯಸಭೆಗೆ ಸ್ಪರ್ಧಿಸುವರು ಎಂದು ಹೇಳಿದರು. ಬಿಹಾರ ಮುಖ್ಯಮಂತ್ರಿ ಹಾಗೂ ಜನತಾದಳ (ಯು) ಮುಖ್ಯಸ್ಥ ನಿತೀಶ್ ಕುಮಾರ್, ಲೋಕಜನಶಕ್ತಿ ಪಕ್ಷದ ಮುಖ್ಯಸ್ಥ ರಾಮ್ ವಿಲಾಸ್ ಪಾಸ್ವಾನ್ ಅವರೂ ಸೀಟು ಹಂಚಿಕೆ ಒಪ್ಪಂದದ ಪ್ರಕಟಣೆ ವೇಳೆಯಲ್ಲಿ ಅಮಿತ್ ಶಾ ಅವರ ಜೊತೆಗಿದ್ದರು.ರಾಜ್ಯದಲ್ಲಿನ ರಾಜಕೀಯ ಪರಿಸ್ಥಿತಿ ಮತ್ತು ಎನ್ಡಿಎ ಬಲವನ್ನು ಗಮನದಲ್ಲಿ ಇರಿಸಿಕೊಂಡು ಸ್ಥಾನ ಹಂಚಿಕೆ ಒಪ್ಪಂದಕ್ಕೆ ಬರಲಾಯಿತು ಎಂದು ಅಮಿತ್ ಶಾ ಹೇಳಿದರು.೨೦೧೯ರ ಚುನಾವಣೆಯಲ್ಲಿ ನಾವು ೨೦೧೪ರ ಚುನಾವಣೆಗಳಲ್ಲಿ ಗೆದ್ದುದಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಅಮಿತ್ ಶಾ ವಿಶ್ವಾಸ ವ್ಯಕ್ತ ಪಡಿಸಿದರು. ‘ನಾವು ಬಿಜೆಪಿ ನಾಯಕತ್ವದ ಜೊತೆಗೆ ಕುಳಿತು ವಿಷಯಗಳ ಬಗ್ಗೆ ಚರ್ಚಿಸುತ್ತೇವೆ. ೨೦೧೯ರ ಚುನಾವಣೆಗಳಲ್ಲಿ ಎನ್ಡಿಎ ವಿಜಯವನ್ನು ಖಚಿತಪಡಿಸುವ ನಿಟ್ಟಿನಲ್ಲಿ ನಾವು ಶ್ರಮಿಸುತ್ತೇವೆ ಎಂದು ನಿತೀಶ್ ಕುಮಾರ್ ಹೇಳಿದರು.ಸ್ಥಾನ ಹಂಚಿಕೆ ಒಪ್ಪಂದವನ್ನು ಪ್ರಕಟಿಸುವ ವೇಳೆಯಲ್ಲಿ ಬಿಜೆಪಿ ಮುಖ್ಯಸ್ಥ ಶಾ ಅವರು ಯಾವ ಕ್ಷೇತ್ರದಲ್ಲಿ ಯಾವ ಪಕ್ಷ ಸ್ಪರ್ಧಿಸಬೆಕು ಎಂಬ ಬಗ್ಗೆ ಮೈತ್ರಿಕೂಟದ ಪಕ್ಷಗಳು ಒಟ್ಟಾಗಿ ಕುಳಿತು ನಿರ್ಧರಿಸಲಿವೆ. ಬಗ್ಗೆಯೂ ಶೀಘ್ರದಲ್ಲೇ ಪ್ರಕಟಣೆ ಹೊರಬೀಳಲಿದೆ ಎಂದು ಬಿಜೆಪಿ ಮುಖ್ಯಸ್ಥ ನುಡಿದರು.ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಹಾರಿನಲ್ಲಿ ಬಿಜೆಪಿ ೩೦ ಸ್ಥಾನಗಳಿಗೆ ಸ್ಪರ್ಧಿಸಿತ್ತು ಮತ್ತು ೨೨ ಸ್ಥಾನಗಳನ್ನು ಗೆದ್ದಿತ್ತು. ಎಲ್ ಜೆಪಿ ಸ್ಥಾನಗಳನ್ನು ಗೆದ್ದಿತ್ತು ಮತ್ತು ಈಗ ಮಹಾಘಟಬಂಧನವನ್ನು ಸೇರಿರುವ ರಾಷ್ಟ್ರೀಯ ಲೋಕಸಮತಾ ಪಕ್ಷವು (ಆರ್ ಎಲ್ ಎಸ್ ಪಿ) ಸ್ಥಾನಗಳನ್ನು ಗೆದ್ದಿತ್ತುಜನತಾ ದಳ (ಯು) ಸ್ವತಂತ್ರವಾಗಿ ಸ್ಪರ್ಧಿಸಿ, ಅತ್ಯಂತ ನಿಕೃಷ್ಟ ಸಾಧನೆ ಪ್ರದರ್ಶಿಸಿತ್ತು. ಅದು ಕೇವಲ ಸ್ಥಾನ ಗೆದ್ದಿತ್ತು. ಎಲ್ ಜೆಪಿ ಸ್ಥಾನಗಳ ಪೈಕಿ ಸ್ಥಾನಗಳನ್ನು ಗೆದ್ದಿತ್ತು. ೨೦೧೪ರ ಲೋಕಸಭಾ ಚುನಾವಣೆಯಲ್ಲಿ ಎಲ್ ಜೆಪಿ ಶೇಕಡಾ .೫೦ರಷ್ಟು ಮತಗಳನ್ನು ಗಳಿಸಿದರೆ, ಆರ್ ಎಲ್ ಎಸ್ ಪಿ ಶೇಕಡಾ .೦೪ ಮತಗಳನ್ನು ಪಡೆದಿತ್ತು. ಇದಲ್ಲದೆ, ಬಿಹಾರ ಜನಸಂಖ್ಯೆಯ ಶೇಕಡಾ ೧೬ರಷ್ಟಿರುವ ದಲಿತರು ಮತ್ತು ಮಹಾದಲಿತ ಸಮುದಾಯಗಳಲ್ಲಿ ಪಾಸ್ವಾನ್ ಉತ್ತಮ ವರ್ಚಸ್ಸು ಹೊಂದಿದ್ದಾರೆ.

2018: ಜಕಾರ್ತ: ಇಂಡೋನೇಷ್ಯದ ಅನಕ್ ಕ್ರಾಕಟಾವು ಜ್ವಾಲಾಮುಖಿ ಬಾಯ್ದೆರೆದ ಪರಿಣಾಮವಾಗಿ ಸಮುದ್ರದ ತಳದಲ್ಲಿ ಸಂಭವಿಸಿದ   ಭೂಕುಸಿತದಿಂದ ಹಿಂದಿನ ರಾತ್ರಿ ಅಪ್ಪಳಿಸಿದ ಭಾರೀ ಸುನಾಮಿ ಅಲೆಗಳ ಹೊಡೆತಕ್ಕೆ ಕನಿಷ್ಠ ೨೨೨ ಜನ ಬಲಿಯಾಗಿದ್ದು, ಹಲವರು ಕಣ್ಮರೆಯಾಗಿದ್ದಾರೆ. ನೂರಾರು ಮನೆ, ಕಟ್ಟಡಗಳು ಕುಸಿದು ಬಿದ್ದವು. ರಾತ್ರಿ ಇಂಡೋನೇಷ್ಯದ ಸುಂದಾ ಜಲಸಂಧಿಯಲ್ಲಿ ಯಾವ ಸುಳಿವೂ ಇಲ್ಲದೇ ಸುನಾಮಿ ಅಪ್ಪಳಿಸಿದ ಪರಿಣಾಮವಾಗಿ ಸಾವು ನೋವಿನ ಜೊತೆಗೆ ನೂರಾರು ಸಂಖ್ಯೆಯ ಮನೆಗಳು ಕಟ್ಟಡಗಳು ತೀವ್ರವಾಗಿ ಹಾನಿಗೊಂಡಿವೆ ಎಂದು ವಿಪತ್ತು ನಿರ್ವಹಣಾ ಸಂಸ್ಥೆಯ ವಕ್ತಾರ ಸುತೊಪೊ ಪುರ್ವೊ ನುಗ್ರೋಹೊ ಹೇಳಿದರು. ರಾತ್ರಿ ೧೦.೪೦ರ ವೇಳೆಗೆ (ಸ್ಥಳೀಯ ಕಾಲಮಾನ ಮಧ್ಯಾಹ್ನ .೩೦ ವೇಳೆಗೆ) ದಿಢೀರನೆ ಸುನಾಮಿ ಅಪ್ಪಳಿಸಿದಾಗ ಸಹಸ್ರಾರು ಮಂದಿ ಎತ್ತರದ ಪ್ರದೇಶದಕ್ಕೆ ದೌಡಾಯಿಸಿದರು. ಸುಮಾರು ೨೨೨ ಮಂದಿ ಸಾವನ್ನಪ್ಪಿದರೆ, ೮೪೩ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ೨೮ ಮಂದಿ ಕಣ್ಮರೆಯಾದರು.ಜಾವಾ ದ್ವೀಪದ ಕರಾವಳಿಯ ಪಂಡೆಗ್ಲಾಂಗ್ ವಸತಿ ಪ್ರದೇಶದಕ್ಕೆ ಸುನಾಮಿ ಅಲೆಗಳು ಅಪ್ಪಳಿಸಿ ತನ್ನ ಬಲಿಪಶುಗಳನ್ನು, ಕುಸಿದ ಮನೆ, ಕಟ್ಟಡಗಳ ಅವಶೇಷಗಳು, ಉರುಳಿದ ಮರ ಇತ್ಯಾದಿಗಳನ್ನು  ಸೆಳೆದೊಯ್ದ ದೃಶ್ಯಗಳನ್ನು ಟಿವಿ ವಾಹಿನಿಗಳು ಪ್ರಸಾರ ಮಾಡಿದವು. ಸುನಾಮಿ ಅಪ್ಪಳಿಸುವ ಮುನ್ನ ಕಂಡು ಬರುವ ಭೂಕಂಪ, - ಮೀಟರ್ ಎತ್ತರದ ಅಲೆಗಳು ಇತ್ಯಾದಿ ಸುನಾಮಿ ಲಕ್ಷಣಗಳು ಇಲ್ಲದೇ ಇದ್ದುದರಿಂದ ನಿವಾಸಿಗಳು ನಿರಾಂತಕದಿಂದಿದ್ದರು ಎಂದು ವರದಿಗಳು ಹೇಳಿವೆ. ಎಚ್ವರಿಕೆಯ ಸೈರನ್ ಕೆಲವಡೆಗಳಲ್ಲಿ ಸ್ಥಗಿತಗೊಂಡಿತು ಎಂದು ಅಧಿಕಾರಿಗಳು ಹೇಳಿದರು. ಕ್ರಿಸ್ಮಸ್ ರಜಾಕಾಲದ ವೇಳೆಯಲಿ ದಿಢೀರ್ ಅಪ್ಪಳಿಸಿದ ಸುನಾಮಿಯು ೨೦೦೪ರ ಡಿಸೆಂಬರ್ ೨೬ರಂದು ಹಿಂದೂ ಮಹಾಸಾಗರದಲ್ಲಿ ಉಂಟಾಗಿದ್ದ ಸುನಾಮಿಯ ನೆನಪುಗಳನ್ನು ತಂದಿದೆ. ೨೦೦೪ರ ಸುನಾಮಿ ೧೩ ರಾಷ್ಟ್ರಗಳಲ್ಲಿ ಒಟ್ಟು ,೨೬,೦೦೦ ಜನರನ್ನು  ಬಲಿ ತೆಗೆದುಕೊಂಡಿತ್ತು. ಇಂಡೋನೇಷ್ಯ ಒಂದರಲ್ಲೇ ,೨೦,೦೦೦ ಮಂದಿ ಸುನಾಮಿಗೆ ಬಲಿಯಾಗಿದ್ದರು.ಸುನಾಮಿ ಅಪ್ಪಳಿಸಿದಾಗ ಎನಿಯೆಟ್ ಪಟ್ಟಣದಲ್ಲಿ ಕುಟುಂಬದ ಜೊತೆಗೆ ರಜಾಕಳೆಯಲು ಆಗಮಿಸಿದ್ದ ನಾರ್ವೆಯ ನಿವಾಸಿ ಡೈಸ್ಟೀನ್ ಲಂಡ್ ಆಂಡರ್ಸನ್ ಅವರು ತಾವು ಕಂಡ ದೃಶ್ಯವನ್ನು ಫೇಸ್ ಬುಕ್ ನಲ್ಲಿ ಹೀಗೆ ವಿವರಿಸಿದರು: ೧೫-೨೦ ಮೀಟರ್ ಎತ್ತರದ ಸಮುದ್ರದ ಅಲೆ ಕರಾವಳಿ ದಂಡೆಯತ್ತ ನುಗ್ಗಿ ಬರುತ್ತಿದ್ದುದನ್ನು ಕಂಡು ನಾನು ಓಡಬೇಕಾಯಿತು. ನಂತರದ ಅಲೆ ನಾನು ವಸತಿ ಹೂಡಿದ್ದ ಹೊಟೇಲ್ ಪ್ರದೇಶಕ್ಕೆ ಅಪ್ಪಳಿಸಿತು ಮತ್ತು ಹೊಟೇಲಿನ ಹಿಂಭಾಗದಲ್ಲಿದ್ದ ಕಾರುಗಳು ಮತ್ತು ರಸ್ತೆಯನ್ನು ಕೊಚ್ಚಿಕೊಂಡು ಹೋಯಿತು.’ ಕಾಡುಮೇಡಿನ ದಾರಿಯಲ್ಲಿ ಕುಟುಂಬದ ಸದಸ್ಯರ ಜೊತೆಗೆ ಹೇಗೋ ಎತ್ತರದ ಪ್ರದೇಶಕ್ಕೆ ಓಡಿದೆ. ಸ್ಥಳೀಯರು ನಮಗೆ ನೆರವಾಗಿದ್ದರು ಎಂದು ಅವರು ತಮ್ಮ ಫೇಸ್ ಬುಕ್ ಪೋಸ್ಟಿನಲ್ಲಿ ಬರೆದರು.ಡಿಸೆಂಬರ್ ೨೫ರವರೆಗೆ ಅಬ್ಬರದ ಅಲೆಗಳು ಹೆಚ್ಚು ಇರುವ ಕಾರಣ ಸುಂದಾ ಸುತ್ತುಮುತ್ತಣ ಪ್ರದೇಸದಲ್ಲಿ ಕರಾವಳಿ ತೀರದಿಂದ ದೂರ ಇರುವಂತೆ ನಿವಾಸಿಗಳು ಮತ್ತು ಪ್ರವಾಸಿಗಳಿಗೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದರು.ಸ್ಥಳ ತೆರವುಗೊಳಿಸಿರುವವರಿಗೆ ಹಿಂತಿಗುದಂತೆ ಎಚ್ಚರಿಕೆ ನೀಡಲಾಗಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿ ರಹಮತ್ ಟ್ರಿಯೊನೊ ಹೇಳಿದರು.

2018: ಜಕಾರ್ತ: ಇಂಡೋನೇಷ್ಯದ ಸೆವೆಂಟೀನ್ ತಂಡದ ಪಾಪ್ ಸಂಗೀತ ಮೇಳದ ವೇದಿಕೆಗೆ ಶನಿವಾರ ರಾತ್ರಿ ಸುನಾಮಿ ಅಲೆ ಅಪ್ಪಳಿಸಿದ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದ್ದು, ಇನ್ಸ್ಟಾಗ್ರಾಮ್ನಲ್ಲಿ ವೈರಲ್ ಆಯಿತು. ಪಾಪ್ ತಂಡವು ಬಯಲಿನಲ್ಲಿ ಸಂಗೀತಮೇಳ ನಡೆಸುತ್ತಿದ್ದಾಗ ಸಂಭವಿಸಿದ ದುರಂತದಲ್ಲಿ ತಂಡದ ಮ್ಯಾನೇಜರ್ ಸಾವನ್ನಪ್ಪಿದ್ದು, ಗಾಯಕ ರೀಫಿಯಾನ್ ಫಜರ್ಸಿಯಾಹ್ ಅವರ ಪತ್ನಿ, ಡ್ರಮ್ಮರ್ ಮತ್ತು ಗಿಟಾರಿಸ್ಟ್ ಕಣ್ಮರೆಯಾದರು. ಪಾಪ್ ಸಂಗೀತ ತಂಡದ ವೇದಿಕೆಯ ಹಿಂಭಾಗದಿಂದ ಸುನಾಮಿ ಅಪ್ಪಳಿಸಿ, ಪ್ರೇಕ್ಷಕರತ್ತ ಮುನ್ನುಗ್ಗಿದ್ದು ವಿಡಿಯೋದಲ್ಲಿ ದಾಖಲಾಗಿತ್ತು. ಗಾಯಕ ರೀಫಿಯಾನ್ ಅವರು ವಿಡಿಯೋವನ್ನು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿ, ತಮ್ಮ ಆಘಾತ ವ್ಯಕ್ತ ಪಡಿಸಿದರು. ತಂಡವು ಹಿಂದಿನ ರಾತ್ರಿ ತಂಜುಂಗ್ ಲೆಸುಂಗ್ ಕರಾವಳಿ ರಿಸಾರ್ಟ್ನಲ್ಲಿ ಕಾರ್ಯಕ್ರಮ ನಡೆಸುತ್ತಿದ್ದಾಗ ಸುನಾಮಿ ಅಲೆ ಬಂದು ಅಪ್ಪಳಿಸಿತ್ತು. ಸುನಾಮಿ ಅಲೆ ಅಪ್ಪಳಿಸುವ ಮುನ್ನ ವೇದಿಕೆಯ ಮುಂಭಾಗದಲ್ಲಿದ್ದ ಅಭಿಮಾನಿಗಳು ಚಪ್ಪಾಳೆ ತಟ್ಟುತ್ತಾ, ನರ್ತಿಸುತ್ತಾ ಸಂಭ್ರಮಿಸುತ್ತಿದ್ದುದು ಮತ್ತು ವೇದಿಕೆಯ ಹಿಂಭಾಗದಲ್ಲಿ ಸುನಾಮಿ ಅಲೆ ನುಗ್ಗುವ ದೃಶ್ಯ ವಿಡಿಯೋದಲ್ಲಿ ದಾಖಲಾಗಿತ್ತು. ತಂಡದ ಆಚಿಡಿ (ಡ್ರಮ್ಮರ್), ಹೆರ್ಮನ್ (ಗಿಟಾರಿಸ್ಟ್), ಮತ್ತು ಉಜಂಗ್, ಪತ್ನಿ ಡೈಲಾನ್ ಸಹಾರಾ ಕಣ್ಮರೆಯಾಗಿದ್ದರು. ಅವರೆಲ್ಲರೂ ಶೀಘ್ರ ಪತ್ತೆಯಾಗಲಿ ಪ್ರಾರ್ಥಿಸಿ ಎಂದು ರೀಫಿಯಾನ್ ಇನ್ಸ್ಟಾ ಗ್ರಾಂ ಪೋಸ್ಟಿನಲ್ಲಿ ಒಂದು ಲಕ್ಷಕ್ಕೂ ಹೆಚ್ಚಿನ ಅಭಿಮಾನಿಗಳಿಗೆ ಮನವಿ ಮಾಡಿದರು.
     

2018: ಅಮ್ರೋಹ (ಉತ್ತರ ಪ್ರದೇಶ): ರಾಮನ ಬಂಟ ಹನುಮಂತನ ಬಗ್ಗೆ ಹೆಚ್ಚಿದ ಚರ್ಚೆಯಲ್ಲಿ ಮಧ್ಯಪ್ರವೇಶ ಮಾಡಿದ ಭಾರತದ ಮಾಜಿ ಕ್ರಿಕೆಟಿಗ ಚೇತನ್ ಚೌಹಾಣ್ ಅವರುಹನುಮಂತ ಕ್ರೀಡಾಪಟುವಾಗಿದ್ದು, ದೇಶಾದ್ಯಂತ ಕ್ರೀಡಾಪಟುಗಳು ಇಂದಿಗೂ ಹನುಮಂತನನ್ನು ಆರಾಧಿಸುತ್ತಾರೆ ಎಂದು ಹೇಳಿದರು. ಹನುಮಂತನ ಜಾತಿ ಬಗ್ಗೆ ಚರ್ಚೆ ಸರಿಯಲ್ಲ ಎಂದು ಅವರು ನುಡಿದರು. ‘ಆತ (ಹನುಮಂತ) ಒಬ್ಬ ಕ್ರೀಡಾಪಟು ಎಂಬುದಾಗಿ ನಾನು ನಂಬುತ್ತೇನೆ. ಆತ ತನ್ನ ವೈರಿಗಳ ಜೊತೆಗೆ ಕುಸ್ತಿಯಾಡುತ್ತಿದ್ದ. ನಮ್ಮರಾಷ್ಟ್ರದ ಎಲ್ಲ ಕ್ರೀಡಾಪಟುಗಳೂ ವಿಜಯಶಾಲಿಗಳಾಗಲು ಹನುಮಂತನಂತೆಯೇ ಶಕ್ತಿ ಸಾಮರ್ಥ್ಯ ಗಳಿಸುವುದಕ್ಕಾಗಿ ಆತನನ್ನು ಆರಾಧಿಸುತ್ತಾರೆ. ಕ್ರೀಡಾಪಟುಗಳು ಹನುಮಂತನನ್ನು ಆತನ ಜಾತಿ ನೋಡಿ ಆರಾಧಿಸುವುದಿಲ್ಲ ಎಂದು ಚೌಹಾಣ್ ಹೇಳಿದರು. ‘ಸಂತರಿಗೆ ಜಾತಿ ಇಲ್ಲ. ಅದೇ ರೀತಿ ಅತೀಂದ್ರಿಯ ವ್ಯಕ್ತಿಗಳು ಅಥವಾ ಅನುಭಾವಿಗಳಿಗೆ ಜಾತಿ ಇಲ್ಲ. ನಾವು ಹನುಮಾನ್ ಜಿಯನ್ನು ನಂಬುತ್ತೇವೆ. ನಾನು ಹನುಮಂತನನ್ನು ದೇವರು ಎಂದು ಪರಿಗಣಿಸುತ್ತೇನೆ. ಹನುಮಂತನಿಗೆ ಯಾವುದೇ ಜಾತೀಯ ಹಣೆಪಟ್ಟಿ ಅಂಟಿಸಬಾರದು ಎಂದು ನಾನು ಆಶಿಸುತ್ತೇನೆ ಎಂದು ಚೇತನ್ ಚೌಹಾಣ್ ನುಡಿದರು.ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ರಾಜಸ್ಥಾನದ ಆಳ್ವಾರ್ ಜಿಲ್ಲೆಯಲ್ಲಿ ವಿಧಾನಸಭಾ ಚುನಾವಣೆಗೆ ಮುನ್ನ ನಡೆದ ಪ್ರಚಾರ ಸಭೆಯೊಂದರಲ್ಲಿ ಆದಿತ್ಯನಾಥ್ ಅವರು ಹನುಮಾನ್ ಒಬ್ಬ ದಲಿತ ಎಂದು ಹೇಳಿದ ಬಳಿಕ ಹನುಮಂತನ ಜಾತಿ ಬಗ್ಗೆ ವಿವಾದ ಆರಂಭವಾಗಿತ್ತು.ಒಬ್ಬರು ಹನುಮಾನ್ಜೈನ ಎಂದು ವಾದಿಸಿದರೆ, ಬಿಜೆಪಿಯ ಕೇಂದ್ರ ಸಚಿವರೊಬ್ಬರು ಹನುಮಾನ್ ಒಬ್ಬಮುಸ್ಲಿಮ್ ಎಂದು ಪ್ರತಿಪಾದಿಸಿದ್ದರು. ಅದರ ಬೆನ್ನಲ್ಲೇ ಇನ್ನೊಬ್ಬರು ಹನುಮಾನ್ಜಾಟ ಎಂದು ವಾದಿಸಿದ್ದರು.
2017: ರಾಂಚಿ (ಜಾರ್ಖಂಡ್): ಮೇವು ಹಗರಣಕ್ಕೆ ಸಂಬಂಧಿಸಿದ ಪ್ರಕರಣಗಳ ಪೈಕಿ ೨ನೇ ಪ್ರಕರಣದಲ್ಲಿ ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಮತ್ತು ಇತರ ೧೪ ಮಂದಿ ತಪ್ಪಿತಸ್ಥರು ಎಂದು ಇಲ್ಲಿನ ವಿಶೇಷ ಸಿಬಿಐ ನ್ಯಾಯಾಲಯ ತೀರ್ಪು ನೀಡಿತು. ಅಪರಾಧಿಗಳಿಗೆ ಶಿಕ್ಷೆಯ ಪ್ರಮಾಣವನ್ನು ಜನವರಿ ೩ರಂದು ಪ್ರಕಟಿಸುವುದಾಗಿ ನ್ಯಾಯಾಲಯ ಹೇಳಿತು.ಪ್ರಕರಣದ ಇನ್ನೊಬ್ಬ ಪ್ರಮುಖ ಆರೋಪಿ ಬಿಹಾರದ ಮಾಜಿ ಮುಖ್ಯಮಂತ್ರಿ ಜಗನ್ನಾಥ ಮಿಶ್ರ ಸೇರಿದಂತೆ ಮಂದಿಯನ್ನು ನ್ಯಾಯಾಲಯ ಖುಲಾಸೆ ಮಾಡಿತು. ದೇವಘಡ ಜಿಲ್ಲಾ ಖಜಾನೆಯಿಂದ ೮೯ ಲಕ್ಷ ರೂಪಾಯಿಗಳನ್ನು ಅಕ್ರಮವಾಗಿ ಪಡೆದುಕೊಂಡ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ತಪ್ಪಿತಸ್ಥ ಎಂದು ಘೋಷಿಸಿದ ನ್ಯಾಯಾಲಯ, ೧೯೯೦ರ ಬಳಿಕ ಲಾಲು ಅವರು ಗಳಿಸಿದ ಎಲ್ಲ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಆದೇಶ ನೀಡಿತು. ತೀರ್ಪು ಲಾಲು ಪ್ರಸಾದ್ ಯಾದವ್ ಕುಟುಂಬಕ್ಕೆ ಒಂದೇ ದಿನದಲ್ಲಿ ಎರಡನೇ ಆಘಾತ. ಇದಕ್ಕೆ ಸ್ವಲ್ಪ ಮುನ್ನ ಜಾರಿ ನಿರ್ದೇಶನಾಲಯವು ಭ್ರಷ್ಟಾಚಾರ ಪ್ರಕರಣವೊಂದರಲ್ಲಿ ಲಾಲುಪ್ರಸಾದ್ ಅವರ ಪುತ್ರ ಮಿಸಾ ಭಾರ್ತಿ ಮತ್ತು ಅಕೆಯ ಪತಿ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ೧೯೯೦ ಮತ್ತು ೧೯೯೪ರ ನಡುವಣ ಅವಧಿಯಲ್ಲಿ ೮೯ ಲಕ್ಷ ರೂಪಾಯಿಗಳಿಗೂ ಹೆಚ್ಚು ಹಣವನ್ನು ದೇವಘಡ ಜಿಲ್ಲಾ ಖಜಾನೆಯಿಂದ ಅಕ್ರಮವಾಗಿ ಹಿಂಪಡೆದುಕೊಂಡ ಪ್ರಕರಣಕ್ಕೆ ಸಂಬಂಧಿಸಿದ ಖಟ್ಲೆಯಲ್ಲಿ ಜಿ ತರಂಗಾಂತರ ಮಾದರಿಯಲ್ಲಿ ತಮ್ಮ ಖುಲಾಸೆ ಆಗಬಹುದು ಎಂಬ ನಿರೀಕ್ಷೆಯಲ್ಲಿ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಇದ್ದರು. ವೈರುಧ್ಯ ಎಂದರೆ ಮೇವು ಹಗರಣದಲ್ಲಿ ಲಾಲೂ ಪ್ರಸಾದ್ ವಿರುದ್ಧ ಮೊತ್ತ ಮೊದಲು ಆರೋಪ ಮಾಡಿದ್ದ ಶಿವಾನಂದ ತಿವಾರಿ ಈಗ ಲಾಲು ಪ್ರಸಾದ್ ಅವರ ಆರ್ ಜೆಡಿ ಪಕ್ಷದಲ್ಲಿ ಇದ್ದಾರಲ್ಲದೆ, ಪಕ್ಷ ಮುಖ್ಯಸ್ಥನ ವಿರುದ್ಧ ಮಾಡಿದ್ದ ಆರೋಪತಪ್ಪು ಎಂದು ಹೇಳಿದ್ದರು. ಕೋರ್ಟಿನಲ್ಲೇ ಬಂಧನ: ನ್ಯಾಯಾಲಯದ ತೀರ್ಪು ಹೊರಬೀಳುತ್ತಿದ್ದಂತೆಯೇ ರಾಂಚಿಯ ವಿಶೇಷ ಸಿಬಿಐ ನ್ಯಾಯಾಲಯದ ಆವರಣದಲ್ಲೇ ಲಾಲು ಪ್ರಸಾದ್ ಅವರನ್ನು ಬಂಧಿಸಿ ವಶಕ್ಕೆ ತೆಗೆದುಕೊಳ್ಳಲಾಯಿತು.  ‘ನಾವು ಭಾರತದ ನ್ಯಾಯಾಂಗದಲ್ಲಿ ವಿಶ್ವಾಸ ಇಡುತ್ತೇವೆ. ಆದರೆ ಲಾಲು ಪ್ರಸಾದ್ ಯಾದವ್ ಅವರ ಕೊಡುಗೆಯನ್ನು ಕೆಳಕ್ಕೆ ಬೀಳಿಸಲು ದೃಢ ನಿರ್ಧಾರ ಮಾಡಿದ ಇತರ ರಾಜಕೀಯ ಶಕ್ತಿಗಳು ಇವೆ. ನಾವು ನ್ಯಾಯಕ್ಕಾಗಿ ಹೋರಾಟ ಮುಂದುವರೆಸುತ್ತೇವೆ ಎಂದು ಆರ್ ಜೆಡಿ ವಕ್ತಾರ ಮನೋಜ್ ಝಾ ಹೇಳಿದರು. ‘ಜಗನ್ನಾಥ ಮಿಶ್ರ ಅವರ ವಿರುದ್ಧ ಮೂರು ಆಪಾದನೆಗಳಿದ್ದವು. ಆದರೆ ಯಾವುದೇ ಸಾಕ್ಷ್ಯಾಧಾರ ಇರಲಿಲ್ಲ. ಲಾಲು ಪ್ರಸಾದ್ ಅವರು ತಪ್ಪಿತಸ್ಥ ಎಂಬುದಾಗಿ ಸಾಬೀತಾಗಿದ್ದು ಅವರು ಸೆರೆಮನೆ ಸೇರುತ್ತಾರೆ ಎಂದು ಮಿಶ್ರ ಅವರ ವಕೀಲರು ತಿಳಿಸಿದರು. ಬಿಜೆಪಿ ನಾಯಕ, ಲಾಲು ಪ್ರಸಾದ್ ಯಾದವ್ ಅವರ ಕಟು ಪ್ರತಿಸ್ಪರ್ಧಿ ಸುಶೀಲ್ ಮೋದಿ ಅವರುನಾವು ಬಿತ್ತಿದ್ದನ್ನೇ ಪಡೆಯುತ್ತೇವೆ ಎಂದು ಪ್ರತಿಕ್ರಿಯಿಸಿದರು. ೧೯೯೭ರಲ್ಲಿ ಮೊದಲು ಬೆಳಕಿಗೆ ಬಂದ ಮೇವು ಹಗರಣ ಬಿಹಾರದ ಚರಿತ್ರೆಯಲ್ಲೇ ಅತಿದೊಡ್ಡ ಹಗರಣವಾಗಿದ್ದು, ೨೦ ವರ್ಷಗಳ ಬಳಿಕ ವಿಶೇಷ ಸಿಬಿಐ ನ್ಯಾಯಾಲಯ ಐದು ಪ್ರಕರಣಗಳ ಪೈಕಿ ೨ನೇ ಪ್ರಕರಣದಲ್ಲಿ ಲಾಲು ಪ್ರಸಾದ್ ತಪ್ಪಿತಸ್ಥ ಎಂದು ಘೋಷಿಸಿದೆ. ಹಗರಣ ಇದೀಗ ಲಾಲು ಪ್ರಸಾದ್ ಅವರ ರಾಜಕಾರಣಕ್ಕೆ ವಸ್ತುಶಃ ತೆರೆ ಎಳೆಯಿತು. ಲಾಲು ಪ್ರಸಾದ್ ಸೇರಿದಂತೆ ದೇವಘಡ ಜಿಲ್ಲಾ ಖಜಾನೆ ಪ್ರಕರಣದಲ್ಲಿ ಆರೋಪಿಗಳೆಂದು ಹೆಸರಿಸಲಾಗಿದ್ದ ಎಲ್ಲ ೨೨ ಮಂದಿಯೂ ನ್ಯಾಯಾಲಯದಲ್ಲಿ ಹಾಜರಿದ್ದರು.

2017: ಸಿದ್ಧಾರ್ಥ ನಗರ (.ಪ್ರ): ೨೦೧೪ರ ಲೋಕಸಭಾ ಚುನಾವಣೆ ಕಾಲದಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಬಿಜೆಪಿ ಸಂಸತ್ ಸದಸ್ಯ ಜಗದಂಬಿಕಾ ಪಾಲ್ ಅವರಿಗೆ ಉತ್ತರ ಪ್ರದೇಶದ ಸಿದ್ಧಾರ್ಥನಗರ ನ್ಯಾಯಾಲಯವು ಒಂದು ತಿಂಗಳ ಸೆರೆವಾಸದ ಶಿಕ್ಷೆ ವಿಧಿಸಿತು. ಆದರೆ ಸಂಸತ್ ಸದಸ್ಯರಿಗೆ ನ್ಯಾಯಾಲಯ ಕೂಡಲೇ ಜಾಮೀನು ಮಂಜೂರು ಮಾಡಿತು. ೨೦೧೪ರ ಚುನಾವಣಾ ಪ್ರಚಾರ ಕಾಲದಲ್ಲಿ ಬನ್ಸಿಯಲ್ಲಿ ನಡೆದ ಸಭೆಯೊಂದರಲ್ಲಿ ಮಿತಿಗಿಂತ ಹೆಚ್ಚು ವಾಹನಗಳನ್ನು ಬಳಸಿದ್ದರೆಂಬ ಆಪಾದನೆಯನ್ನು ಪಾಲ್ ವಿರುದ್ಧ ಮಾಡಲಾಗಿತ್ತು. ಆಗಿನ ಸಿದ್ಧಾರ್ಥನಗರ ಜಿಲ್ಲಾ ಮ್ಯಾಜಿಸ್ಟ್ರೇಟ್ (ಎಸ್ ಡಿಎಂ) ಬನ್ಸಿ ಕೊತ್ವಾಲಿಯಲ್ಲಿ ಪಾಲ್ ವಿರುದ್ಧ ಮಾದರಿ ನೀತಿ ಸಂಹಿತೆಯ ಉಲ್ಲಂಘನೆಗಾಗಿ ದೂರು ದಾಖಲಿಸಿದ್ದರು ಎಂದು ಅಡಿಷನಲ್ ಪ್ರಾಸೆಕ್ಯೂಷನ್ ಅಧಿಕಾರಿ ಕೇಶವ ಪಾಂಡೆ ಹೇಳಿದರುಚೀಫ್ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಸಂಜಯ್ ಚೌಧರಿ ಅವರು ಡಿಸೆಂಬರ್ ೨೨ರಂದು ತಮ್ಮ ತೀರ್ಪು ಘೋಷಿಸಿದ್ದು, ಪಾಲ್ ಅವರಿಗೆ ೧೦೦ ರೂಪಾಯಿ ದಂಡವನ್ನೂ ವಿಧಿಸಿದ್ದಾರೆ ಎಂದು ಪಾಂಡೆ ನುಡಿದರು. ಸ್ವಲ್ಪ ಹೊತ್ತಿನ ಬಳಿಕ ಸಂಸದರಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿತು ಎಂದು ಅವರು ನುಡಿದರು.

2017: ಕರಾಚಿ: ಹಫೀಜ್ ಸಯೀದನನ್ನು ಗೃಹ  ಬಂಧನದಿಂದ ಬಿಡುಗಡೆ ಮಾಡಿದ ನಾಲ್ಕು ವಾರಗಳ ಬಳಿಕ ಪಾಕಿಸ್ತಾನ ಸರ್ಕಾರವು  ಆತನ ಮಿಲ್ಲಿ ಮುಸ್ಲಿಮ್ ಲೀಗ್ (ಎಂಎಂಎಲ್) ರಾಜಕೀಯ ಪಕ್ಷದ ನೋಂದಣಿಗೆ ಅವಕಾಶ ನೀಡಬಾರದು ಎಂದು ಇಸ್ಲಾಮಾಬಾದ್ ಹೈಕೋರ್ಟಿಗೆ ಮನವಿ ಮಾಡಿತು. ಸಯೀದ್ ನೇತೃತ್ವದ ಲಷ್ಕರ್- -ತೊಯ್ಬಾ (ಎಲ್ ಟಿ) ಮತ್ತು ಜಮಾತ್ - ಉದ್-ದವಾ ಸಂಘಟನೆಗಳು ಅಂತಾರಾಷ್ಟ್ರೀಯ ದಿಗ್ಬಂಧನಕ್ಕೆ ಒಳಗಾಗಿರುವ ಸಂದರ್ಭದಲ್ಲಿ ಆತನ ಹೊಸ ರಾಜಕೀಯ ಪಕ್ಷಕ್ಕೆ ಮಾನ್ಯತೆ ನೀಡುವುದು ಸರಿಯಲ್ಲ ಎಂದು ಸರ್ಕಾರ ಹೈಕೋರ್ಟಿಗೆ ತಿಳಿಸಿತು.  ೨೦೦೮ರ ಮುಂಬೈ ಭಯೋತ್ಪಾದಕ ದಾಳಿಗಳನ್ನು ಯೋಜಿಸಿದ್ದು ಸಯೀದ್ ಎಂದು ಭಾರತ ಮತ್ತು ಅಮೆರಿಕ ಆಪಾದಿಸಿದ್ದವು. ಅಮೆರಿಕವು ಆತನ ತಲೆಗೆ ಬಹುಮಾನವನ್ನೂ ಘೋಷಿಸಿತ್ತು. ವಿಶ್ವಸಂಸ್ಥೆ ಕೂಡಾ ಸಯೀದ್ ನನ್ನು ಭಯೋತ್ಪಾದಕ ಎಂಬುದಾಗಿ ಘೋಷಿಸಿತ್ತು. ಕಳೆದ ಜನವರಿಯಲ್ಲಿ ಪಾಕ್ ಸರ್ಕಾರ ಹಫೀಜ್ನನ್ನು ಗೃಹಬಂಧನದಲ್ಲಿ ಇರಿಸಿತ್ತು. ಪಂಜಾಬ್ ಸರ್ಕಾರ ಆತನ ಅಪರಾಧ ಸಾಬೀತು ಪಡಿಸುವಲ್ಲಿ ವಿಫಲವಾದ ಬಳಿಕ ತಿಂಗಳ ಆದಿಯಲ್ಲಿ ಸಯೀದನನ್ನು ಬಿಡುಗಡೆ ಮಾಡಲಾಗಿತ್ತು. ಭಾರತವು ಸಯೀದ್ ಬಿಡುಗಡೆಯನ್ನು ಖಂಡಿಸಿತ್ತು. ಅಮೆರಿಕ ಕೂಡಾ ಸಯೀದನನ್ನು ಮುಖ್ಯವಾಹಿನಿಗೆ ತರುವುದರ ವಿರುದ್ಧ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿತ್ತುಹಫೀಜ್ ಸಯೀದನ ಎಂಎಂಎಲ್ ಪಕ್ಷವನ್ನು ರಾಜಕೀಯ ಪಕ್ಷವಾಗಿ ನೋಂದಣಿ ಮಾಡುವುದರಿಂದ ರಾಜಕೀಯದಲ್ಲಿ ಹಿಂಸೆ ಮತ್ತು ಉಗ್ರವಾದದ ಬೀಜಾಂಕುರವಾಗಬಹುದು ಎಂದು ಭದ್ರತಾ ಏಜೆನ್ಸಿ ಕೊಟ್ಟಿರುವ ವರದಿಯನ್ನು ಆಧರಿಸಿ, ಒಳಾಡಳಿತ ಸಚಿವಾಲಯವು ಇದನ್ನು ವಿರೋಧಿಸಲು ನಿರ್ಧರಿಸಿತು ಎಂದು ಪತ್ರಿಕಾ ವರದಿ ತಿಳಿಸಿತ್ತು. ನೋಂದಣಿಗೆ ಅನುಮತಿ ಕೋರಿ ಎಂಎಂಎಲ್ ಹೈಕೋರ್ಟಿಗೆ ಸಲ್ಲಿಸಿದ ಅರ್ಜಿಗೆ ಪಾಕ್ ಸರ್ಕಾರ ಲಿಖಿತ ಆಕ್ಷೇಪವನ್ನು ಸಲ್ಲಿಸಿತು. ಎಂಎಂಎಲ್ ಅರ್ಜಿಯನ್ನು ತಿರಸ್ಕರಿಸಬೇಕು ಎಂದು ಒಳಾಡಳಿತ ಸಚಿವಾಲಯ ನ್ಯಾಯಾಲಯಕ್ಕೆ ಮನವಿ ಮಾಡಿತು. ಪಾಕಿಸ್ತಾನದ ಚುನಾವಣಾ ಆಯೋಗವು ಈಗಾಗಲೇ ಒಳಾಡಳಿತ ಸಚಿವಾಲಯದ ಹಸ್ತಕ್ಷೇಪದ ಕಾರಣ ನೀಡಿ ಎಂಎಂಎಲ್ ನೋಂದಣಿಗೆ ನಿರಾಕರಿಸಿತ್ತು.  ಅಕ್ಟೋಬರ್ ೧೧ರಂದು ಸಂಬಂಧ ಚುನಾವಣಾ ಆಯೋಗ ನೀಡಿದ ಆದೇಶವನ್ನು ಎಂಎಂಎಲ್ ಹೈಕೋರ್ಟಿನಲ್ಲಿ ಪ್ರಶ್ನಿಸಿತ್ತು. ಚುನಾವಣಾ ಆಯೋಗದ ನಿರ್ಧಾರವು ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿದೆ ಎಂದು ಎಂಎಂಎಲ್ ಆಪಾದಿಸಿತ್ತು. ಒಳಾಡಳಿತ ಸಚಿವಾಲಯವು ಭದ್ರತಾ ಸಂಸ್ಥೆಯ ವರದಿಯನ್ನು ಉಲ್ಲೇಖಿಸಿತ್ತು. ಎಂಎಂಎಲ್ ತನ್ನ ಮಾತೃಪಕ್ಷಗಳಾದ ಎಲ್ ಇಟಿ ಮತ್ತು ಜೆಯುಡಿ ಮಾರ್ಗವನ್ನು ಬಿಟ್ಟು ತನ್ನದೇ ಆದ ಮಾರ್ಗದಲ್ಲಿ ಕ್ರಮಿಸಬಹುದು ಎಂದು ನಂಬುವುದು ಕಷ್ಟ ಎಂದು ಭದ್ರತಾ ಸಂಸ್ಥೆ ವರದಿ ಹೇಳಿತ್ತು. ಇಂತಹ ಗುಂಪುಗಳು ರಾಜಕೀಯದಲ್ಲಿ ಉಗ್ರವಾದವನ್ನು ಬಿತ್ತಬಹುದಾದ ಕಾರಣ ಅವುಗಳು ರಾಜಕೀಯ ಪ್ರವೇಶಿಸದಂತೆ ತಡೆಯಬೇಕು ಎಂದು ವರದಿ ತಿಳಿಸಿತ್ತು.
ಅಂತಾರಾಷ್ಟ್ರೀಯ ಬದ್ಧತೆಗಳ ಹಿನ್ನೆಲೆಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಕೂಡಾ ಎಂಎಂಎಲ್  ಅರ್ಜಿಗೆ ಮಾನ್ಯತೆ ನೀಡುವುದಕ್ಕೆ ವಿರುದ್ಧವಾದ ನಿಲುವು ತಳೆದಿರುವುದನ್ನೂ ಸಚಿವಾಲಯ ಉಲ್ಲೇಖಿಸಿತ್ತು.

2017: ನವದೆಹಲಿ: ನವದೆಹಲಿಯ ಪ್ರಗತಿ ಮೈದಾನದಲ್ಲಿ ಐಟಿಪಿಒ ಸಮುಚ್ಛಯ ಅಭಿವೃದ್ಧಿಗಾಗಿ ರೂಪಿಸಲಾಗಿದ್ದ ,೧೫೦ ಕೋಟಿ ರೂಪಾಯಿ ಯೋಜನೆಯಲ್ಲಿನ ಭ್ರಷ್ಟಾಚಾರಗಳಿಗಾಗಿ ಎನ್ಬಿಸಿಸಿ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ (ಸಿಎಂಡಿ) ಅನೂಪ್ ಕುಮಾರ್ ಮಿತ್ತಲ್ ಅವರನ್ನು ಸಿಬಿಐ ವಶಕ್ಕೆ ತೆಗೆದುಕೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ಸರ್ಕಾರಿ ಅಧಿಕಾರಿ ಮತ್ತು ಇನ್ನೊಬ್ಬ ವ್ಯಕ್ತಿಯನ್ನು ಬಂಧಿಸಿತು. 
ಸರ್ಕಾರಿ ಅಧಿಕಾರಿ ಪ್ರದೀಪ್ ಕುಮಾರ್ ಮಿಶ್ರ ಮತ್ತು ಅಕ್ಷರದೀಪ ಚೌಹಾಣ್ ಅವರನ್ನು ಸಿಬಿಐ ಕಳೆದ ರಾತ್ರಿ ಬಂಧಿಸಿತ್ತು. ಇದೇ ವೇಳೆಗೆ ಗಾಜಿಯಾಬಾದ್, ದೆಹಲಿ ಮತ್ತು ಮುಂಬೈಯಲ್ಲಿ ಕೇಂದ್ರೀಯ ತನಿಖಾ ದಳ (ಸಿಬಿಐ) ಶೋಧ ಕಾರ್ಯಾಚರಣೆ ನಡೆಸಿದೆ ಎಂದು ಮೂಲಗಳು ತಿಳಿಸಿದವು. ಮಿತ್ತಲ್ ಅವರ ವಸತಿ ಮತ್ತು ಕಚೇರಿ ಆವರಣದಲ್ಲಿ ಶೋಧ ನಡೆಸಲಾಗಿಲ್ಲ. ಮಿಶ್ರ ಮತ್ತು ಚೌಹಾಣ್ ಅವರನ್ನು ವಿಶೇಷ ಸಿಬಿಐ ನ್ಯಾಯಾಲಯ ಈದಿನ ದಿನಗಳ ಅವಧಿಗೆ ಪೊಲೀಸ್ ವಶಕ್ಕೆ ನೀಡಿದೆ ಎಂದು ಮೂಲಗಳು ಹೇಳಿದವು. ಶಾಪೂರ್ಜಿ ಪಲ್ಲೋನ್ಜಿ ಅಂಡ್ ಕಂಪೆನಿ ಪ್ರೈವೇಟ್ ಲಿಮಿಟೆಡ್ ಹಾಗೂ ಶಾಪೂರ್ ಜಿ ಪಲ್ಲೋನ್ಜಿ ಖತಾರ್ ಡಬ್ಲ್ಯೂ ಎಲ್ ಎಲ್ ಅವರ ಜಂಟಿ ಉದ್ಯಮಕ್ಕೆ ,೧೪೯.೯೩ ಕೋಟಿ ರೂಪಾಯಿ ಮೊತ್ತದ ಕ್ರೀಡಾಂಗಣ ಸಮುಚ್ಛಯ ಅಭಿವೃದ್ಧಿ ಕಾಮಗಾರಿಯ ಗುತ್ತಿಗೆಯನ್ನು ಎನ್ಬಿಸಿಸಿ (ಇಂಡಿಯಾ) ಲಿಮಿಟೆಡ್ ನೀಡಿತ್ತು. ಮುಂಬೈ ಮೂಲದ ಕೆಪಾಸೈಟ್ ಸ್ಟ್ರಕ್ಚರ್ಸ್ ಉಪ ಗುತ್ತಿಗೆ ಆಧಾರದಲ್ಲಿ ಶಾಪೂರ್ಜಿ ಪಲ್ಲೋನ್ಜಿಯಿಂದ ಕೆಲಸವನ್ನು ಪಡೆಯಲು ಯತ್ನಿಸಿತ್ತು ಎಂದು ಸಿಬಿಐ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಿದ ಎಫ್  ಐಆರ್ ನಲ್ಲಿ ಆಪಾದಿಸಿತ್ತು.  ಸಿಬಿಐ-ಎಫ್ ಐಆರ್ ಪ್ರಕಾರ, ಅಚ್ಚರಿದಾಯಕವಾಗಿ ,೧೪೯.೯೩ ಕೋಟಿ ರೂಪಾಯಿಗಳ ಉಪಗುತ್ತಿಗೆ ವ್ಯವಹಾರದಲ್ಲಿ ಹಸ್ತಕ್ಷೇಪ ಮಾಡಿದ ಸರ್ಕಾರಿ ಅಧಿಕಾರಿಯೊಬ್ಬರು ಕೆಪಾಸೈಟ್ ಸ್ಟ್ರಕ್ಚರ್ಸ್ ಗೆ ಉಪಗುತ್ತಿಗೆ ಸಿಗುವಂತೆ ಮಾಡಲು ಮಿತ್ತಲ್ ಮೇಲೆ ತನ್ನ ಪ್ರಭಾವ ಬೀರಲು ರಾಯಲ್ ಎನ್ ಫೀಲ್ಡ್ ಬೈಕ್ನ್ನು ಲಂಚವಾಗಿ ನೀಡುವಂತೆ ಆಗ್ರಹಿಸಿದರು. ಕೆಪಾಸೈಟ್ ಸ್ಟ್ರಕ್ಚರ್ಸ್ ಆಡಳಿತ ನಿರ್ದೇಶಕ ಸಂಜಯ್ ಕುಲಕರ್ಣಿ ಅವರು ಉಪಗುತ್ತಿಗೆ ಪಡೆಯುವ ಸಲುವಾಗಿ ಸರ್ಕಾರಿ ಅಧಿಕಾರಿಗಳ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದ ರಿಷಭ್ ಅಗರ್ವಾಲ್ ಎಂಬ ಮಧ್ಯವರ್ತಿಯನ್ನು ಸಂಪರ್ಕಿಸಿದರು ಎಂದು ಹೇಳಲಾಯಿತು. ಅಗರ್ ವಾಲ್ ಎನ್ಬಿಸಿಸಿ ಲಿಮಿಟೆಡ್ ಕೆಲವು ಹಿರಿಯ ಅಧಿಕಾರಿಗಳಿಗೆ ನಿಕಟವಾಗಿದ್ದಾರೆನ್ನಲಾದ ಸರ್ಕಾರಿ ನೌಕರ ಪ್ರದೀಪ್ ಕುಮಾರ್ ಮಿಶ್ರ ಅವರನ್ನು ಸಂಪರ್ಕಿಸಿದರು ಎಂದು ಎಫ್ ಐಆರ್ ಆಪಾದಿಸಿತು. ಕುಲಕರ್ಣಿ ಒಪ್ಪಿಕೊಂಡ ಪ್ರಕಾರ ಹೊಸ ರಾಯಲ್ ಎನ್ ಫೀಲ್ಡ್ ಬುಲ್ಲೆಟ್ ಮೋಟಾರ್ ಸೈಕಲ್ಲನ್ನು ತನಗೆ ನೀಡಿದರೆ ಉಪಗುತ್ತಿಗೆಯು ಕೆಪಾಸೈಟ್ ಸ್ಟ್ರಕರ್ಸ್ ಗೆ ಸಿಗುವುದು ಖಂಡಿತ ಎಂದು ಮಿಶ್ರ ಅವರು ಅಗರ್ ವಾಲ್ ಗೆ ಭರವಸೆ ನೀಡಿದರು ಎಂದು ಎಫ್ ಐಆರ್ ಹೇಳಿತು.
ಮಿಶ್ರ ಪ್ರಭಾವದಿಂದ ಮಿತ್ತಲ್ ಅವರು ಎನ್ಬಿಸಿಸಿಯ ಆಡಳಿತ ನಿರ್ದೇಶಕರಿಗೆ ಕೆಪಾಸೈಟ್ ಸ್ಟ್ರಕ್ಚರ್ಸ್ ಪರವಾಗಿ ವಿಷಯವನ್ನು ಇತ್ಯರ್ಥ ಪಡಿಸುವಂತೆಪ್ರಬಲ ನಿರ್ದೇಶನ ನೀಡಿದರು ಎಂದು ಎಫ್ ಆರ್ ಆಪಾದಿಸಿತು. ಒಳಸಂಚಿನ ಮುಂದುವರಿದ ಭಾಗವಾಗಿ೨೦೧೭ರ ಡಿಸೆಂಬರ್ ೧೫ರಂದು  ಸಂಜಯ್ ಖಾರ್ಖಾನಿಸ್ ಸೇರಿದಂತೆ ಶಾಪೂರ್ಜಿ ಪಲ್ಲೋನ್ಜಿಯ ಪ್ರತಿನಿಧಿ, ಎನ್ಬಿಸಿಸಿಯ ಗುಪ್ತ ಸೇರಿದಂತೆ ಹಿರಿಯ ಅಧಿಕಾರಿಗಳು ಮತ್ತು ಕುಲಕರ್ಣಿ ಮಧ್ಯೆ ಸಭೆ ನಡೆಯಿತು ಎಂದು ಸಿಬಿಐ ಹೇಳಿದತು. ಸಭೆಯ ಬಳಿಕ ಮಿತ್ತಲ್ ಅವರು ಕುಲಕರ್ಣಿ ಮತ್ತು ಮಿಶ್ರ ಅವರಿಗೆ ಶಾಪೂರ್ಜಿ ಪಲ್ಲೋನ್ಜಿಯಿಂದ ಕಾಮಗಾರಿ ಲಭಿಸುವ ಬಗ್ಗೆ ಭರವಸೆ ನೀಡಿದರು. ಕೆಪಾಸೈಟ್ ಸ್ಟ್ರಕ್ಚರ್ ಗೆ ಕಾಮಗಾರಿ ಸಿಗದೇ ಇದ್ದಲ್ಲಿ, ಬೇರೆ ಯಾರಿಗೂ ಅದನ್ನು ನೀಡಲಾಗುವುದಿಲ್ಲ ಎಂಬ ಖಾತರಿಯನ್ನು ತಾನು ನೀಡುವುದಾಗಿ ಮಿತ್ತಲ್ ಹೇಳಿದರು ಎಂದು ಎಫ್ ಐಆರ್ ಆಪಾದಿಸಿತು. ಮಿಶ್ರ ಅವರು ಭರವಸೆ ಪ್ರಕಾರ ಕುಲಕರ್ಣಿ ಅವರ ಸಿಬ್ಬಂದಿ ಅಕ್ಷರದೀಪ ಚೌಹಾಣ್ ಅವರಿಂದ ಲಂಚವಾಗಿ ಬೈಕ್ ಸ್ವೀಕರಿಸುತಿದ್ದಾಗ ಮಿಶ್ರನನ್ನು ಸಿಬಿಐ ಬಂಧಿಸಿದೆ ಎಂದು ಮೂಲಗಳು ಹೇಳಿದವು. ಏಜೆನ್ಸಿಯು ಮಿತ್ತಲ್, ಮಿಶ್ರ, ಕುಲಕರ್ಣಿ, ಅಗರ್ ವಾಲ್ ಮತ್ತು ಚೌಹಾಣ್ ವಿರುದ್ಧ ಕ್ರಿಮಿನಲ್ ಷಡ್ಯಂತ್ರ ಮತ್ತು ಭ್ರಷ್ಟಾಚಾರಕ್ಕಾಗಿ ಎಫ್ ಆರ್ ದಾಖಲಿಸಿತು.

2017: ಚೆನ್ನೈ : ತಮಿಳುನಾಡಿನ ದಿವಂಗತ ಮುಖ್ಯಮಂತ್ರಿ ಜೆ ಜಯಲಲಿತಾ ಅವರ ಶಂಕಾಸ್ಪದ ಸಾವಿನ ತನಿಖೆ ನಡೆಸುತ್ತಿರುವ ಏಕ ಸದಸ್ಯ ನ್ಯಾಯಮೂರ್ತಿ ಅರ್ಮುಘಸ್ವಾಮಿ ತನಿಖಾ ಆಯೋಗವು ಬೆಂಗಳೂರು ಸೆರೆಮನೆಯಲ್ಲಿ ನಾಲ್ಕು ವರ್ಷಗಳ ಸೆರೆವಾಸ ಅನುಭವಿಸುತ್ತಿರುವ  ಜಯಲಲಿತಾ ನಿಕಟವರ್ತಿ ವಿ ಕೆ ಶಶಿಕಲಾ ಮತ್ತು ಅಪೋಲೊ ಅಸ್ಪತ್ರೆ ಅಧ್ಯಕ್ಷ ಪ್ರತಾಪ್ ಸಿ ರೆಡ್ಡಿ ಅವರಿಗೆ ಸಮನ್ಸ್ ಜಾರಿ ಮಾಡಿತು. ಜಯಲಲಿತಾ ಅವರನ್ನು ಚೆನ್ನೈಯ ಅಪೋಲೋ ಆಸ್ಪತ್ರೆಗೆ ಸೇರಿಸಿದಂದಿನಿಂದ ಸಾವಿನ ತನಕ  ಅವರಿಗೆ ನೀಡಲಾಗಿರುವ ವೈದ್ಯಕೀಯ ಚಿಕಿತ್ಸೆ ಬಗೆಗಿನ ಮಾಹಿತಿಗಳನ್ನು ಸಲ್ಲಿಸುವಂತೆ ಸಮನ್ಸಿನಲ್ಲಿ ಆದೇಶ ನೀಡಲಾಯಿತು.  ಮಾಹಿತಿ ಸಲ್ಲಿಸಲು ಹದಿನೈದು ದಿನಗಳ ಕಾಲಾವಕಾಶ ನೀಡಲಾಯಿತು. ಜಯಲಲಿತಾ ಅವರನ್ನು ಕಳೆದ ವರ್ಷ ಸೆ.೨೨ರಂದು ಅಪೋಲೋ ಆಸ್ಪತ್ರೆಗೆ ಸೇರಿಸಲಾಗಿತ್ತು. ಡಿ.೫ರಂದು ಅವರ ಸಾವು ಸಂಭವಿಸಿತ್ತು. ಈಗ ಜೈಲಿನಲ್ಲಿರುವ ಶಶಿಕಲಾ ಅವರು ತಮ್ಮ ಸಾಕ್ಷ್ಯವನ್ನು ವಕೀಲರ ಮೂಲಕ ಇಲ್ಲವೇ ಖುದ್ದು ಹಾಜರಾಗುವ ಮೂಲಕ ಸಲ್ಲಿಸಬಹುದು ಎಂದು ಮೂಲಗಳು ಹೇಳಿದವು. ಶಶಿಕಲಾ ಅವರ ಸೋದರ ಸಂಬಂಧಿ ಮತ್ತು ಈಗ ಮೂಲೆಗೆ ಒತ್ತಲ್ಪಟ್ಟಿರುವ  ಎಐಎಡಿಎಂಕೆ ನಾಯಕ ಟಿಟಿವಿ ದಿನಕರನ್ ಅವರು ಜಯಲಲಿತಾ ಅವರು ಆಸ್ಪತ್ರೆಯಲ್ಲಿ ತಮ್ಮ ಕೊನೆಗಾಲದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಚಿತ್ರಿಸಲಾಗಿದ್ದ ವಿಡಿಯೋ ತುಣುಕೊಂದನ್ನು ಮಾಧ್ಯಮಕ್ಕೆ ಬಿಡುಗಡೆಗೊಳಿಸಿದ ಎರಡು ದಿನಗಳ ತರುವಾಯ ಆಯೋಗವು, ಶಶಿಕಲಾ ಮತ್ತು ಅಪೋಲೋ ಆಸ್ಪತ್ರೆ ಅಧ್ಯಕ್ಷರಿಗೆ ಸಮನ್ಸ್ ಜಾರಿ ಮಾಡಿತು.

2017: ಪಟ್ನಾ/ ರಾಂಚಿ: ರಾಂಚಿಯಲ್ಲಿನ ವಿಶೇಷ ಸಿಬಿಐ ನ್ಯಾಯಾಲಯವು ಮೇವು ಹಗರಣಕ್ಕೆ ಸಂಬಂಧಿಸಿದಂತೆ ತೀರ್ಪು ನೀಡಿದ ಬಳಿಕ ಬಂಧಿತರಾಗಿರುವ ಬಿಹಾರದ ಮಾಜಿ ಮುಖ್ಯಮಂತ್ರಿ, ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರನ್ನು ರಾಂಚಿಯ ಬಿರ್ಸಾ ಮುಂಡಾ ಸೆರೆಮನೆಗೆ ಒಯ್ಯಲಾಗಿದೆ ಎಂದು ಸಿಬಿಐ ಮೂಲಗಳು ತಿಳಿಸಿದವು. ಇದರೊಂದಿಗೆ ಲಾಲು ಅವರು 9ನೇ ಬಾರಿಗೆ ಜೈಲು ಸೇರಿದಂತಾಯಿತು. 
ನ್ಯಾಯಾಲಯವು ಜನವರಿ ೩ರಂದು ಶಿಕ್ಷೆಯ ಪ್ರಮಾಣವನ್ನು ಘೋಷಿಸುವವರೆಗೆ ಲಾಲು ಪ್ರಸಾದ್ ಅವರನ್ನು ಬಿರ್ಸಾ ಮುಂಡಾ ಸೆರೆಮನೆಯಲ್ಲಿ ಇರಿಸಲಾಗುವುದು ಎಂದು ಮೂಲಗಳು ಹೇಳಿದವು. ಹೈಕೋರ್ಟಿಗೆ ಮೇಲ್ಮನವಿ: ಮಧ್ಯೆ ರಾಂಚಿ ವಿಶೇಷ ಸಿಬಿಐ ನ್ಯಾಯಾಲಯದ ವಿರುದ್ಧ ಹೈಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಲಾಗುವುದು ಎಂದು ಆರ್ಜೆಡಿ ನಾಯಕ ರಘುವಂಶ ಪ್ರಸಾದ್ ಸಿಂಗ್ ಹೇಳಿದರು. ಮೇವು ಹಗರಣ ಎಂಬುದು ಒಟ್ಟು ೬೪ ಪ್ರಕರಣಗಳನ್ನು ಒಳಗೊಂಡಿರುವ ಹಗರಣವಾಗಿದೆ. ಇವುಗಳ ಪೈಕಿ ೫೩ ಪ್ರಕರಣಗಳು ರಾಂಚಿಯಲ್ಲಿ ಘಟಿಸಿವೆ. ಮಹಾಲೆಕ್ಕ ಪರಿಶೋಧಕ ಟಿ.ಎನ್ .ಚತುರ್ವೇದಿ ಅವರು ಬಿಹಾರಿನ ಖಜಾನೆ ಮತ್ತು ವಿವಿಧ ಇಲಾಖೆಗಳಿಂದ ಭಾರಿ ಮೊತ್ತದ ಹಣವನ್ನು ನುಂಗಿಹಾಕಿರುವ ಸಾಧ್ಯತೆ ಬಗ್ಗೆ ೧೯೮೫ರಲ್ಲಿ ಸುಳಿವು ನೀಡಿದ ಬಳಿಕ ಹಗರಣ ಬೆಳಕಿಗೆ ಬಂದಿತ್ತು. ೧೦ ವರ್ಷಗಳ ಬಳಿಕ ಸಣ್ಣ ಪ್ರಮಾಣದ ಹಣ ನುಂಗಿದ ಪ್ರಕರಣಗಳ ಮೊತ್ತ ೯೦೦ ಕೋಟಿ ರೂಪಾಯಿಗಳಿಗೆ ಏರಿದ್ದು ಬೆಳಕಿಗೆ ಬಂದಿತ್ತು.
  
2017: ಜಮ್ಮು: ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ಕೇರಿ ವಿಭಾಗದಲ್ಲಿ ನಿಯಂತ್ರಣ ರೇಖೆಯಲ್ಲಿದ್ದ ಭಾರತೀಯ ಗಸ್ತು ದಳದ ಮೇಲೆ ಪಾಕಿಸ್ತಾನಿ ಪಡೆಗಳು ಗುಂಡಿನ ದಾಳಿ ನಡೆಸಿದ ಪರಿಣಾಮವಾಗಿ ಒಬ್ಬ ಸೇನಾ ಮೇಜರ್ ಮತ್ತು ಮೂವರು ಯೋಧರು ಹುತಾತ್ಮರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು. ಮಧ್ಯಾಹ್ನ ೧೨.೧೫ ಗಂಟೆ ವೇಳೆಗೆ ಗುಂಡಿನ ದಾಳಿ ನಡೆಯಿತು. ದಿಢೀರ್ ಗುಂಡಿನ ದಾಳಿಯಿಂದ ಒಬ್ಬ ಸೇನಾ ಮೇಜರ್ ಮತ್ತು ಮೂವರು ಯೋಧರು ಹುತಾತ್ಮರಾದರು ಎಂದು ಅಧಿಕಾರಿ ಹೇಳಿದರು. ಭಾರತೀಯ ಪಡೆಗಳು ದಾಳಿಗೆ ತಕ್ಕ ಪ್ರತ್ಯುತ್ತರ ನೀಡುತ್ತಿವೆ ಎಂದು ಅವರು ನುಡಿದರು.

2017: ಜೈಪುರ:ರಾಜಸ್ಥಾನದಲ್ಲಿ ಬಸ್ಸೊಂದು ಸೇತುವೆಯಿಂದ ನಿಯಂತ್ರಣ ತಪ್ಪಿ ನದಿಗೆ ಉರುಳಿ 32 ಪ್ರಯಾಣಿಕರು ದಾರುಣವಾಗಿ ಸಾವನ್ನಪ್ಪಿ ಹಲವರು ಗಂಭೀರವಾಗಿ ಗಾಯಗೊಂಡರು. ದುಬಿ ಜಿಲ್ಲೆಯ ಸಾವಾಯಿ ಮಾಧೋಪುರ್ನಲ್ಲಿ ಈ ದುರಂತ ಘಟಿಸಿದ್ದು, 20 ಕ್ಕೂ ಹೆಚ್ಚು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದರು.  ಸ್ಥಳೀಯರು ರಕ್ಷಣಾ ಕಾರ್ಯ ನಡೆಸಿ ಕೆಲವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದರು. ಚಾಲಕ ಅತೀ ವೇಗದಲ್ಲಿ ಬಸ್ಚಲಾಯಿಸಿದ್ದೆ ದುರಂತಕ್ಕೆ ಪ್ರಮುಖ ಕಾರಣ ಎಂದು ರಾಜಸ್ಥಾನ ಸರ್ಕಾರ ಹೇಳಿತು.  

2016: ವೆಲೆಟ್ಟಾ, ಮಾಲ್ಟಾ ಈದಿನ ಮಧ್ಯಾಹ್ನ ಅಪಹರಣಗೊಂಡಿದ್ದ ಲಿಬಿಯಾದ ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಬಿಡುಗಡೆಗೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದವು. ವಿಮಾನ ಸಿಬ್ಬಂದಿಯನ್ನುಳಿದು ಎಲ್ಲಾ 111 ಮಂದಿ ಪ್ರಯಾಣಿಕರು ಸುರಕ್ಷಿತವಾಗಿ ಬಿಡುಗಡೆಯಾಗಿದ್ದಾರೆ ಎಂದು ವರದಿ ತಿಳಿಸಿತು. ವಿಮಾನದಲ್ಲಿ 111 ಮಂದಿ ಪ್ರಯಾಣಿಕರು ಹಾಗೂ 7 ಮಂದಿ ಸಿಬ್ಬಂದಿ ಇದ್ದರು. ಇಬ್ಬರುಗಡಾಫಿ ಬೆಂಬಲಿಗರುವಿಮಾನವನ್ನು ಅಪಹರಿಸಿದ್ದರುಟ್ರಿಪೋಲಿಗೆ ತೆರಳಬೇಕಿದ್ದ ಲಿಬಿಯಾದ ಏರ್ಬಸ್‌ A–320 ವಿಮಾನವನ್ನು ಮಾಲ್ಟಾದಲ್ಲಿ ಇಳಿಸಲಾಗಿತ್ತುವಿಮಾನ ಸಿಬ್ಬಂದಿ ಮತ್ತು ಇಬ್ಬರು ಅಪಹರಣಕಾರರು ವಿಮಾನದಲ್ಲಿದ್ದಾರೆ ಎಂದು ಮಾಲ್ಟಾದ ಪ್ರಧಾನಿ ಜೋಸೆಫ್ಮಸ್ಕಟ್ಟ್ವೀಟ್ಮಾಡಿದರು..
2016: ವಾರಾಣಸಿ: ತಮ್ಮ ಕ್ಷೇತ್ರವಾದ ವಾರಾಣಸಿಯಲ್ಲಿ ಹಿಂದಿನ ದಿನ ನಡೆದ ಬಿಜೆಪಿ ಸಭೆಯಲ್ಲಿ ಭಾಗವಹಿಸಿದ ಪ್ರಧಾನಿ ನರೇಂದ್ರ ಮೋದಿ, ಸಭೆಗೆ ಬರುವಾಗ ಊಟದ ಬುತ್ತಿಯನ್ನೂ ಕಟ್ಟಿಕೊಂಡು ಬಂದಿದ್ದರು. ಮೋದಿಯವರು ಪಕ್ಷದ ಕಾರ್ಯಕರ್ತರೊಂದಿಗೆ ಊಟ ಮಾಡುತ್ತಿರುವ ಫೋಟೊವನ್ನು ಟ್ವಿಟರ್ ನಲ್ಲಿ ಶೇರ್ ಮಾಡಿರುವ ಬಿಜೆಪಿ, ಇಂಥಾ ಸಮಾನತೆ ಬಿಜೆಪಿಯಲ್ಲಿ ಮಾತ್ರ ಎಂದು ಟ್ವೀಟ್ ಮಾಡಿದೆ. ವಾರಣಾಸಿಯಲ್ಲಿ ನಡೆದ ಸಭೆಯಲ್ಲಿ  26,000  ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು. ಸಭೆಯಲ್ಲಿ ಭಾಗವಹಿಸುವವರು ಅವರವರ ಊಟದ ಬುತ್ತಿಯನ್ನು ತರಬೇಕು ಎಂದು ಪಕ್ಷ ಸೂಚಿಸಿತ್ತು. ಇದರಂತೆಯೇ ಎಲ್ಲ ಕಾರ್ಯಕರ್ತರು ಬುತ್ತಿ ಕಟ್ಟಿಕೊಂಡು ಬಂದಿದ್ದರು. ನಾನೂ ಒಬ್ಬ ಕಾರ್ಯಕರ್ತ ಎಂದು ಮೋದಿಯವರು ಕೂಡಾ ಬುತ್ತಿ ಕಟ್ಟಿಕೊಂಡು ಬಂದಿದ್ದರು.
2016: ನವದೆಹಲಿ: ನ್ಯಾಯಮೂರ್ತಿ ಜಗದೀಶ ಸಿಂಗ್ ಖೇಹರ್ ಅವರನ್ನು ಭಾರತದ ಮುಂದಿನ ಮುಖ್ಯ ನ್ಯಾಯಮೂರ್ತಿಯಗಿ ನೇಮಕ ಮಾಡಬಾರದು ಎಂಬುದಾಗಿ ಕೋರಿ ವಕೀಲರ ಸಂಘಟನೆಯೊಂದು ಸಲ್ಲಿಸಿದ್ದ ಮನವಿಯನ್ನು ಸುಪ್ರೀಂಕೋರ್ಟ್  ವಜಾ ಮಾಡಿತು. ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಡಿಸೆಂಬರ್ 19ರಂದು ಮುಖ್ಯ ನ್ಯಾಯಮೂರ್ತಿಯಾಗಿ ಖೇಹರ್ ಅವರನ್ನು ನೇಮಕಗೊಳಿಸಿ ಪ್ರಕಟಣೆ ಹೊರಡಿಸಿದ್ದರಿಂದ ವಕೀಲರ ಸಂಘಟನೆಯ ಕೋರಿಕೆ ಅಪ್ರಸ್ತುತವಾಗಿದೆ ಎಂದು ನ್ಯಾಯಮೂರ್ತಿ ಅಶೋಕ ಭೂಷಣ್ ನೇತೃತ್ವದ ಸುಪ್ರೀಂಕೋರ್ಟ್ ಪೀಠ ತೀರ್ಪು ನೀಡಿತು. ನ್ಯಾಯಮೂರ್ತಿ ಎಲ್. ನಾಗೇಶ್ವರ ರಾವ್ ಅವರೂ ಪೀಠದಲ್ಲಿದ್ದರು. ವಕೀಲರ ಸಂಘಟನೆಯಾದ ಕ್ಯಾಂಪೇನ್ ಫಾರ್ ಜುಡಿಷಿಯಲ್ ಟ್ರಾನ್ಸ್ಪರೆನ್ಸಿ ಅಂಡ್ ರಿಫಾರ್ಮ್ಸ್ (ಎನ್ಸಿಜೆಟಿಆರ್) ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾಯಮೂರ್ತಿ ಜಗದೀಶ ಸಿಂಗ್ ಖೇಹರ್ ನೇಮಕಾತಿಗೆ ತಡೆಯಾಜ್ಞೆ ನೀಡಬೇಕು ಎಂದು ಕೋರಿತ್ತು. ನ್ಯಾಯಮೂರ್ತಿ ಜೆ. ಚಲಮೇಶ್ವರ ಅವರು ನ್ಯಾಯಮೂರ್ತಿ ಖೇಹರ್ ಅವರಿಗಿಂತ ಹಿರಿಯರಾಗಿರುವುದರಿಂದ 44ನೇ ಮುಖ್ಯ ನ್ಯಾಯಮೂರ್ತಿಯಾಗಿ ಚಲಮೇಶ್ವರ ಅವರನ್ನು ನೇಮಿಸಬೇಕು ಎಂದು ಸಂಘಟನೆ ಮನವಿ ಮಾಡಿತ್ತು.
2016: ಮಿಲಾನ್ (ಇಟಲಿ): ಬರ್ಲಿನ್  ಕ್ರಿಸ್ ಮಸ್ ಮಾರುಕಟ್ಟೆಗೆ ಟ್ರಕ್ ನುಗ್ಗಿಸಿ ಹಲವರ ಸಾವಿಗೆ ಕಾರಣನಾಗಿದ್ದನೆಂದು ಶಂಕಿಸಲಾದ ವ್ಯಕ್ತಿಯನ್ನು ಉತ್ತರ ಇಟಲಿಯ ಮಿಲಾನ್ ನಗರದಲ್ಲಿ ಈದಿನ ನಸುಕಿನಲ್ಲಿ ನಡೆದ ಗುಂಡಿನ ಘರ್ಷಣೆಯಲ್ಲಿ ಕೊಲ್ಲಲಾಗಿದೆ ಎಂದು ಭದ್ರತಾ ಮೂಲವನ್ನು ಉಲ್ಲೇಖಿಸಿದ ವರದಿಗಳು ತಿಳಿಸಿದವು. ಇಟಲಿಯ ಒಳಾಡಳಿತ ಸಚಿವರು ಪತ್ರಿಕಾಗೋಷ್ಠಿಯಲ್ಲಿ ಹೆಚ್ಚಿನ ವಿವರ ನೀಡಲಿದ್ದಾರೆ ಎಂದು ಸಚಿವಾಲಯ ಮೂಲಗಳು ತಿಳಿಸಿದವು. ಇಟಲಿಯ ನಿಯತಕಾಲಿಕ ಪನೋರಮಾದಲ್ಲಿ ಪ್ರಕಟಗೊಂಡಿರುವ ಕಿರು ವಿಡಿಯೋ ಒಂದು ನಸುಕಿನಲ್ಲಿಯೇ ಗುಂಡಿನ ಘರ್ಷಣೆ ಸಂಭವಿಸಿದೆ ಎಂದು ಹೇಳಿತು. ಪೊಲೀಸರು ಕತ್ತಲಿನಲ್ಲೇ ಜಮಾಯಿಸಿ ಪ್ರದೇಶಕ್ಕೆ ದಿಗ್ಬಂಧನ ಹಾಕಿದ್ದನ್ನು ವಿಡಿಯೋ ತೋರಿಸಿತು.  ಏನಿದ್ದರೂ ಬರ್ಲಿನ್ ಕ್ರಿಸ್ವುಸ್ ಮಾರುಕಟ್ಟೆ ಹಂತಕ 24 ಹರೆಯದ ಟುನಿಷಿಯನ್ ಅನಿಸ್ ಅಮ್ರಿ ಚಲನವಲನಗಳ ಬಗ್ಗೆ ವಿರೋಧಾಭಾಸದ ವರದಿಗಳು ಬರುತ್ತಿದ್ದು, ಅವುಗಳಲ್ಲಿ ಇದೂ ಒಂದಾಗಿದೆ ಎಂದೂ ಹೇಳಲಾಯಿತು.
2016: ತಿರುವನಂತಪುರಮ್ (ಕೇರಳ): ಕೇರಳದ ಮಾಜಿ ಮುಖ್ಯಮಂತ್ರಿ ಒಮನ್ ಚಾಂಡಿ ಮತ್ತು ಸಂಯುಕ್ತ ಪ್ರಜಾತಾಂತ್ರಿಕ ರಂಗದ (ಯುಡಿಎಫ್) 9 ನಾಯಕರ ವಿರುದ್ಧ ಸ್ವಜನ ಪಕ್ಷಪಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ತನಿಖೆ ನಡೆಸುವಂತೆ ತಿರುವನಂತಪುರಮ್ ಜಾಗೃತಾದಳ ನ್ಯಾಯಾಲಯ (ವಿಜಿಲೆನ್ಸ್ ಕೋರ್ಟ್)  ಆಜ್ಞಾಪಿಸಿತು. ಯುಡಿಎಫ್ ಸರ್ಕಾರದ ಅವಧಿಯಲ್ಲಿ ಮುಖ್ಯ ಹುದ್ದೆಗಳಿಗೆ ನಿಕಟ ಬಂಧುಗಳನ್ನು ನೇಮಕ ಮಾಡಿದ ಆಪಾದನೆಗೆ ಸಂಬಂಧಿಸಿದ ಪ್ರಕರಣದ ತನಿಖಗೆ ನ್ಯಾಯಾಲಯ ಆದೇಶ ನೀಡಿತು. ಪಿಎಸ್ಯುಗಳ ಪ್ರಮುಖ ಹುದ್ದೆಗಳಿಗೆ ನಿಕಟ ಬಂಧುಗಳನ್ನು ನೇಮಕ ಮಾಡಿದ ಸಂಬಂಧ ದಾಖಲಾದ ದೂರೊಂದರ ಆಧಾರದಲ್ಲಿ ತಾನು ಕೈಗಾರಿಕಾ ಸಚಿವ .ಪಿ. ಜಯರಾಜನ್ ವಿರುದ್ಧ ಪ್ರಾಥಮಿಕ ತನಿಖೆ ಆರಂಭಿಸಿರುವುದಾಗಿ ಜಾಗೃತಾ ಮತ್ತು ಭ್ರಷ್ಟಾಚಾರ ನಿಗ್ರಹ ದಳ ಅಕ್ಟೋಬರ್ 15ರಂದು ನ್ಯಾಯಾಲಯಕ್ಕೆ ತಿಳಿಸಿತ್ತು. ಐದು ವರ್ಷಗಳ ಅವಧಿಯಲ್ಲಿ ನಡೆದ ಇಂತಹ ನೇಮಕಾತಿಗಳ ಬಗೆಗೂ ತಾನು ತನಿಖೆ ನಡೆಸುವುದಾಗಿ ದಳ ಹೇಳಿತ್ತು.
2016: ನವದೆಹಲಿ: ಹೊಸ ಕಾರುಗಳನ್ನು ಅಥವಾ ಬೈಕ್ಗಳನ್ನು ಖರೀದಿಸಲು ಯೋಚಿಸುತ್ತಿದ್ದೀರಾ? ಹಾಗಿದ್ದರೆ ಮೊದಲು ರ್ಪಾಂಗ್ ಜಾಗ ಹುಡುಕಿಕೊಳ್ಳಿ. ಹೌದು. ಕೇಂದ್ರ ಸರ್ಕಾರವು ಹಿಂದಿನ ದಿನ ಪ್ರಕಟಿಸಿರುವ ಪ್ರಸ್ತಾಪ ಜಾರಿಗೊಂಡಲ್ಲಿ ಹೊಸ ಕಾರು, ಬೈಕ್ಗಳನ್ನು ಖರೀದಿಸುವವರು ಅವುಗಳನ್ನು ಪಾರ್ಕ್ ಮಾಡಲು ತಮ್ಮ ಬಳಿ ಸಾಕಷ್ಟು ಜಾಗ ಇದೆ ಎಂಬುದನ್ನು ಮೊದಲ ಸಾಬೀತು ಪಡಿಸಬೇಕಾಗುತ್ತದೆ. ಕಾರುಗಳ ಮಾರಾಟದ ವಾರ್ಷಿಕ ಹೆಚ್ಚಳದ ಮೇಲೆ ನಿಯಮ ಗಮನಾರ್ಹ ಪರಿಣಾಮ ಬೀರುವ ಸಾಧ್ಯತೆ ಇದೆ. ಕೇವಲ ದೆಹಲಿಯೊಂದರಲ್ಲೇ 2015 ಮಾರ್ಚ್ ವೇಳೆಗೆ ಇದ್ದ ಕಾರುಗಳ ಸಂಖ್ಯೆ 26 ಲಕ್ಷ. ಭವಿಷ್ಯದಲ್ಲಿ ಶೌಚಗೃಹ ರಹಿತ ಕಟ್ಟಡಗಳಿಗೆ ಅನುಮತಿ ನಿರಾಕರಣೆ ಕಡ್ಡಾಯವಾಗಲಿದ್ದು, ಸಾಕಷ್ಟು ರ್ಪಾಂಗ್ ಅವಕಾಶ ಇಲ್ಲದೇ ಇದ್ದಲ್ಲಿ ಕಾರು ಅಥವಾ ಯಾವುದೇ ವಾಹನ ನೋಂದಣಿ ಕೂಡಾ ಅಸಾಧ್ಯವಾಗಲಿದೆ ಎಂದು ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ದೆಹಲಿಯಲ್ಲಿ ನಡೆಸ ಸರ್ಕಾರಿ ಸಮಾರಂಭ ಒಂದರಲ್ಲಿ ಹೇಳಿದರು. ವಿಚಾರವಾಗಿ ನಾನು ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರ ಜೊತೆಗೆ ರ್ಚಚಿಸುತ್ತಿದ್ದೇನೆ. ರಾಜ್ಯಗಳನ್ನೂ ವಿಚಾರವಾಗಿ ಜಾಗೃತಗೊಳಿಸುತ್ತಿದ್ದೇನೆ. ನಾವು ನಿಟ್ಟಿನಲ್ಲಿ ಮುಂದುವರೆಯುತ್ತಿದ್ದೇವೆ ಎಂದು ನಾಯ್ಡು ನುಡಿದರು. ತಜ್ಞರು ಯೋಜನೆಯನ್ನು ಸ್ವಾಗತಿಸಿದ್ದಾರೆ. ಆದರೆ ಯೋಜನೆಯ ಜಾರಿಯಲ್ಲಿ ಹಲವಾರು ಸಮಸ್ಯೆಗಳು ಎದುರಾಗಬಹುದು ಎಂದು ಎಚ್ಚರಿಸಿದ್ದಾರೆ.
2016: ನವದೆಹಲಿ: ತಮ್ಮ ಹುದ್ದೆಗೆ ಹಿಂದಿನ ದಿನ ದಿಢೀರ್ ರಾಜೀನಾಮೆ ನೀಡಿದ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಅವರು ಈದಿನ ಬೆಳಗಿನ ಉಪಾಹಾರಕ್ಕೆ ತಮ್ಮ ಕಟ್ಟಾ ಟೀಕಾಕಾರ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಬೆಳಗಿನ ಉಪಾಹಾರಕ್ಕೆ ಆಹ್ವಾನಿಸಿದ್ದರು. ಬೆಳಗಿನ ಉಪಾಹಾರ ಸೇವಿಸುತ್ತಾ ಜಂಗ್ ಅವರ ಜೊತೆಗೆ 40 ನಿಮಿಷಗಳನ್ನು ಕಳೆದ ಕೇಜ್ರಿವಾಲ್ ಅವರು ಬಳಿಕ ಸುದ್ದಿಗಾರರ ಜೊತೆಗೆ ಮಾತನಾಡುತ್ತಾ ವೈಯಕ್ತಿಕ ಕಾರಣಗಳಿಗಾಗಿ ರಾಜೀನಾಮೆ ನೀಡುತ್ತಿದ್ದೇನೆ ಎಂಬುದಾಗಿ ಜಂಗ್ ಅವರು ನನ್ನ ಬಳಿ ತಿಳಿಸಿದರು ಎಂದು ಹೇಳಿದರು. ‘ಜಂಗ್ ಅವರು ಆಪ್ ಸರ್ಕಾರದ ದಾರಿಯನ್ನು ನಿರಾಳಗೊಳಿಸಿದ್ದಾರೆಯೇ? ಎಂಬ ಪ್ರಶ್ನೆಗೆ ಅದು ಮುಂದೆ ಹುದ್ದೆಗೆ ಬರುವವರನ್ನು ಅವಲಂಬಿಸಿದೆ ಎಂದು ಕೇಜ್ರಿವಾಲ್ ಉತ್ತರಿಸಿದರು. ಜಂಗ್ ಅವರ ದಿಢೀರ್ ರಾಜೀನಾಮೆಯಿಂದ ತಮಗೆ ಅಚ್ಚರಿಯಾಗಿರುವುದನ್ನು ಶುಕ್ರವಾರ ರಾತ್ರಿ ಒಪ್ಪಿಕೊಂಡಿದ್ದ ಕೇಜ್ರಿವಾಲ್ ಅವರು ಖಟ್ಟಾ ಮೀಠಾ ತೊ ಚಲ್ತಾ ರಹ್ತಾ ಹೈ ಜಿಂದಗೀ ಮೇ (ಜೀವನದಲ್ಲಿ ಸಿಹಿ-ಕಹಿಗಳು ಇದ್ದೇ ಇರುತ್ತವೆ) ಎಂದು ಹೇಳಿದ್ದರು. 66 ಹರೆಯದ ಜಂಗ್ ಅವರು ತಮ್ಮ 18 ತಿಂಗಳುಗಳ ಅಧಿಕಾರಾವಧಿಯ ಬಳಿಕ ಡಿ.22ರ ಗುರುವಾರ ದಿಢೀರ್ ರಾಜೀನಾಮೆ ನೀಡಿ, ನನ್ನ ಮೊದಲ ಪ್ರೀತಿಯ ಶಿಕ್ಷಣ ಕ್ಷೇತ್ರಕ್ಕೆ ಮರಳಬಯಸಿದ್ದೇನೆ ಎಂದು ಪ್ರಕಟಿಸಿದ್ದರು.
2016: ಕೋಲ್ಕತ: ಬಿಜೆಪಿಯ ರಾಜ್ಯಸಭಾ ಸದಸ್ಯೆ, ಛೋಪ್ರಾ ಮಹಾಭಾರತ ಟಿವಿ ಸರಣಿಯದ್ರೌಪದಿರೂಪಾ ಗಂಗೂಲಿ ಅವರು ಅಸ್ವಸ್ಥರಾಗಿದ್ದು, ಅವರನ್ನು ಕೋಲ್ಕತದ ಎಎಂಆರ್ ಆಸ್ಪತ್ರೆಗೆ ದಾಖಲಿಸಲಾಯಿತು. ರೂಪಾ ಗಂಗೂಲಿ ಅವರಿಗೆ ಮೆದುಳಿನಲ್ಲಿ ಸಣ್ಣ ಪ್ರಮಾಣದಲ್ಲಿ ರಕ್ತ ಹೆಪ್ಪುಗಟ್ಟಿದ ಸಮಸ್ಯೆ ಕಂಡು ಬಂದಿದೆ. ಅವರ ಆರೋಗ್ಯ ಸ್ಥಿರವಾಗಿದೆ. ವೈದ್ಯರು ಆಕೆ ಬಗ್ಗೆ ಸಂಪೂರ್ಣ ನಿಗಾ ವಹಿಸಿದ್ದಾರೆ ಎಂದು ಎಎಂಆರ್ ಆಸ್ಪತ್ರೆಯ ಹೇಳಿಕೆ ತಿಳಿಸಿತು.

2016: ಕೋಲ್ಕತ: ಗರಿಷ್ಠ ಮುಖಬೆಲೆಯ ನೋಟುಗಳನ್ನು ರದ್ದು ಮಾಡಿದ ನಂತರ ದೈನಂದಿನ ವ್ಯವಹಾರಕ್ಕಾಗಿ ನಗದು ಹಣಕ್ಕೆ ಕಷ್ಟಪಡುತ್ತಿರುವಾಗ ಸಾಮಾನ್ಯ ಜನರು  ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಮತ್ತು ಆನ್ಲೈನ್ ವ್ಯವಹಾರಗಳಿಗೆ ಒಗ್ಗಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ನಗದು ರಹಿತ ವಹಿವಾಟು ನಡೆಸಿ ಎಂದು ಪ್ರಧಾನಿ ನರೇಂದ್ರ ಮೋದಿ ದೇಶದ ಜನರಿಗೆ ಹೇಳುತ್ತಿದ್ದಾರೆ. ಆದರೆ 5000 ವರ್ಷಗಳ ಹಿಂದೆಯೇ
ಭಾರತದಲ್ಲಿ ನಗದು ರಹಿತ ಆರ್ಥಿಕತೆ ಇತ್ತು. ಇಲ್ಲಿ ಹಣದ ಬದಲು ಕ್ರೆಡಿಟ್ ಕಾರ್ಡ್ ರೀತಿಯಲ್ಲಿ ಜೇಡಿಮಣ್ಣಿನ ಬಿಲ್ಲೆಗಳನ್ನು ಬಳಸಲಾಗುತ್ತಿತ್ತು ಎಂದು ಇತಿಹಾಸ ತಜ್ಞರು ಹೇಳಿದರು. ಈಗಿನ ಕಾಲದಂತೆ ಆಗ ಪ್ಲಾಸ್ಟಿಕ್ ಇರಲಿಲ್ಲ, ಪ್ರಾಚೀನ ಹರಪ್ಪ ನಾಗರಿಕತೆ ಕಾಲದಲ್ಲಿ ಜೇಡಿಮಣ್ಣು ಬಳಸಿ ವಿಶೇಷ ರೀತಿಯ ಬಿಲ್ಲೆಗಳನ್ನು ಬಳಸಿ ಹಣ ವಿನಿಮಯ ಮಾಡಲಾಗುತ್ತಿತ್ತು ಎಂದು ಖ್ಯಾತ  ಪುರಾತತ್ವ ಸಂಶೋಧಕ, ಹರಪ್ಪ ಸಂಸ್ಕೃತಿ ಸಂಶೋಧಕ ಜೋನಾಥನ್ ಮಾರ್ಚ್ ಕೆನಾಯರ್ ಹೇಳಿದರು. ಕೋಲ್ಕತದ ಇಂಡಿಯನ್ ಮ್ಯೂಸಿಯಂ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ  ಜೋನಾಥನ್  ವಿಷಯವನ್ನು  ತಿಳಿಸಿದರು. ಕ್ರೆಡಿಟ್  ಕಾರ್ಡ್ ನಂತೆಯೇ ಮಣ್ಣಿನ ಬಿಲ್ಲೆಗಳನ್ನು ಬಳಸಿದ್ದರು ಎಂಬುದಕ್ಕೆ ಮೆಸಪೊಟಾಮಿಯ ಇತಿಹಾಸದ ದಾಖಲೆಗಳಲ್ಲಿ ಉಲ್ಲೇಖವಿದೆ ಎಂದು ಜೋನಾಥನ್  ವಾದಿಸಿದರು. ಗರಿಷ್ಠ ಮುಖಬೆಲೆಯ ಹಣದ ವ್ಯವಹಾರ ನಡೆಸುವಾಗ ಉಂಟಾಗುವ ಸಮಸ್ಯೆ ಪರಿಹರಿಸುವುದಕ್ಕಾಗಿ ಕಾಲದಲ್ಲಿ ಇಂಥಾ ಬಿಲ್ಲೆಗಳನ್ನು ಬಳಸಲಾಗುತ್ತಿತ್ತು. ಇಂದು ನಾವು ಬಳಸುತ್ತಿರುವ ಡೆಬಿಟ್ -ಕ್ರೆಡಿಟ್ ಕಾರ್ಡುಗಳಲ್ಲಿ ನಮ್ಮ ಬ್ಯಾಂಕ್ ಖಾತೆಯ ವಿವರಗಳಿರುತ್ತವೆ. ಹಾಗೆಯೇ ಪುರಾತನ ಕಾಲದಲ್ಲಿ ಬಳಸುತ್ತಿದ್ದ ಮಣ್ಣಿನ ಬಿಲ್ಲೆಗಳಲ್ಲಿ ಹಣದ ಮೌಲ್ಯವನ್ನು ನಮೂದಿಸಿ, ಮುದ್ರೆಯೊತ್ತಲಾಗುತ್ತಿತ್ತು. ಮೆಸಪೊಟಾಮಿಯಾ ಮತ್ತು ಹರಪ್ಪ ನಾಗರಿಕತೆಗಳಲ್ಲಿ ಹಣದ ವ್ಯವಹಾರಗಳು ಹೆಚ್ಚಾಗಿ ನಡೆದು ಬರುತ್ತಿತ್ತು. ಕಾರಣದಿಂದಲೇ ಕಂಚಿನ ಅಗತ್ಯ ಜಾಸ್ತಿ ಇರುತ್ತಿತ್ತು. ಕಂಚಿನ ಪೂರೈಕೆ ಕಷ್ಟವಾದಾಗ ಅವರು ಜೇಡಿ ಮಣ್ಣು ಬಳಸಿ ಬಿಲ್ಲೆಗಳನ್ನು ತಯಾರಿಸುತ್ತಿದ್ದರು. ಗುಜರಾತಿನ ದೇಲಾವಿರ ಎಂಬಲ್ಲಿ ವಿಶೇಷ ರೀತಿಯ ಮಣ್ಣಿನ ಬಿಲ್ಲೆಗಳನ್ನು ಚೀನಾದ ಸಂಶೋಧಕರು ಪತ್ತೆ ಹಚ್ಚಿದ್ದರು.
2008: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಹಾಗೂ ಸಾಹಿತಿ ಮನು ಬಳಿಗಾರ್ ಅವರಿಗೆ ಮೈಸೂರಿನ ದೇಜಗೌ ಟ್ರಸ್ಟ್ 'ವಿಶ್ವ ಮಾನವ ಪ್ರಶಸ್ತಿ' ಪ್ರಕಟಿಸಿತು. ಇದಲ್ಲದೇ ಪ್ರಸ್ತುತ ಸಾಲಿನ 'ಸಾವಿತ್ರಮ್ಮ ದೇಜಗೌ ಮಹಿಳಾ ಪ್ರಶಸ್ತಿ' ಕುವೆಂಪು ಅವರ ಪುತ್ರಿಯೂ ಆದ ಲೇಖಕಿ ತಾರಿಣಿ ಚಿದಾನಂದ ಗೌಡ ಅವರಿಗೆ ಲಭಿಸಿತು. ಈ ಪ್ರಶಸ್ತಿಗಳ ಮೊತ್ತ ಕ್ರಮವಾಗಿ 25 ಹಾಗೂ 20 ಸಾವಿರ ರೂಪಾಯಿಗಳು. ಇದರೊಂದಿಗೆ ಕುವೆಂಪು ವಿದ್ಯಾವರ್ಧಕ ಟ್ರಸ್ಟ್ ದಿ. ಎಚ್.ಕೆ.ವೀರಣ್ಣ ಗೌಡ ಹೆಸರಿನಲ್ಲಿ ನೀಡುವ ಪತ್ರಿಕೋದ್ಯಮ ಪ್ರಶಸ್ತಿ ಪ್ರಕಟಿಸಿದ್ದು, ಈ ವರ್ಷ ತರಂಗ ವಾರಪತ್ರಿಕೆಯ ಸಂಪಾದಕಿ ಸಂಧ್ಯಾ ಎಸ್.ಪೈ ಅವರಿಗೆ ನೀಡಲಾಯಿತು. ಈ ಪ್ರಶಸ್ತಿಯ ಮೊತ್ತ 10 ಸಾವಿರ ರೂಪಾಯಿಗಳು.

2008: ಮಾಹಿತಿ ತಂತ್ರಜ್ಞಾನದ ಪ್ರಮುಖ ಕಂಪೆನಿ ವಿಪ್ರೊ, ಹಣಕಾಸು ಸೇವಾನಿರತ ಸಿಟಿ ಸಮೂಹದ 'ಸಿಟಿ ಟೆಕ್ನಾಲಾಜಿ ಸರ್ವಿಸ್ ಲಿಮಿಟೆಡ್'ನ ಭಾರತದಲ್ಲಿನ ವಿಭಾಗವನ್ನು ಸಂಪೂರ್ಣ ಸ್ವಾಧೀನಕ್ಕೆ ತೆಗೆದುಕೊಂಡಿತು. 'ಮುಖ್ಯವಾಗಿ ಮೂಲ ಸೌಕರ್ಯ ಅಭಿವೃದ್ಧಿಗೆ ಅಗತ್ಯವಾಗುವ ಮಾಹಿತಿ ತಂತ್ರಜ್ಞಾನ ಸೇವೆಯನ್ನು ಒದಗಿಸುವ ಉದ್ದೇಶದಿಂದ ಆರು ವರ್ಷಗಳ ಮಟ್ಟಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ' ಎಂದು ವಿಪ್ರೊ ನಿರ್ದೇಶಕ ಮಂಡಳಿ ಸದಸ್ಯ ಗಿರೀಶ್ ಎಸ್. ಪರಾಂಜಪೆ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು. 127 ದಶಲಕ್ಷ ಡಾಲರ್ ನಗದು ವ್ಯವಹಾರಕ್ಕೆ ಒಪ್ಪಂದವಾಗಿದ್ದು, ಮುಂದಿನ ದಿನಗಳಲ್ಲಿ ಸಿಟಿ ಸಮೂಹದ ಹಣಕಾಸು ಸೇವೆ ವಿಭಾಗದ ಕಾರ್ಯಗಳಿಗೆ ತಂತ್ರಜ್ಞಾನ ದಕ್ಷತೆ ಒದಗಿಸಲು ವಿಪ್ರೊ ಬದ್ಧತೆಯಿಂದ ಕಾರ್ಯನಿರ್ವಹಿಸಲಿದೆ ಎಂದು ಅವರು ಹೇಳಿದರು. ಸಿಟಿಎಸ್ ವಿಶ್ವದ 32 ದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಭಾರತದಲ್ಲಿ ಮುಂಬೈ ಹಾಗೂ ಚೆನ್ನೈಯಲ್ಲಿ ಪ್ರಧಾನ ಕಚೇರಿಗಳನ್ನು ಹೊಂದಿದೆ. ಸ್ವಾಧೀನದ ನಂತರವೂ ಭಾರತದ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಟಿಎಸ್ ಉದ್ಯೋಗಿಗಳು ಯಥಾಪ್ರಕಾರ ಮುಂದುವರಿಯುವರು ಎಂದು ಅವರು ತಿಳಿಸಿದರು.

2008: ಹಿರಿಯ ಸಾಹಿತಿ ಶ್ರಿನಿವಾಸ ವೈದ್ಯ ಅವರ 'ಹಳ್ಳ ಬಂತು ಹಳ್ಳ' ಕಾದಂಬರಿ 2008ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಪಾತ್ರವಾಯಿತು. ಧಾರವಾಡ ಜಿಲ್ಲೆಯವರಾದ ವೈದ್ಯ ತಮ್ಮ 60ನೇ ವಯಸ್ಸಿನಲ್ಲಿ ಸಾಹಿತ್ಯಕೃಷಿಗೆ ಇಳಿದವರು. 'ಹಳ್ಳ ಬಂತು ಹಳ್ಳ' ಅವರ ಚೊಚ್ಚಲ ಕಾದಂಬರಿ. ಸಣ್ಣ ಕತೆ ಮತ್ತು ಹಾಸ್ಯಸಾಹಿತ್ಯದ ಮೂಲಕ ಕನ್ನಡದ ಓದುಗರಿಗೆ ಪರಿಚಿತರಾದ ವೈದ್ಯ ಬ್ಯಾಂಕ್ ಅಧಿಕಾರಿಯಾಗಿದ್ದವರು. ಈಗ ಬೆಂಗಳೂರಿನಲ್ಲಿ ನಿವೃತ್ತ ಜೀವನ ಸಾಗಿಸುತ್ತಿದ್ದಾರೆ. ನರಗುಂದ-ನವಲಗುಂದ ತಾಲ್ಲೂಕುಗಳ ಹಳೆಯ ತಲೆಮಾರಿನ ಬ್ರಾಹ್ಮಣ ಕುಟುಂಬದ ನೋವು-ನಲಿವು- ತಲ್ಲಣಗಳನ್ನೊಳಗೊಂಡ ಈ ಕಾದಂಬರಿಯನ್ನು ಧಾರವಾಡದ ಮನೋಹರ ಗ್ರಂಥಮಾಲಾ ಪ್ರಕಟಿಸಿದೆ. 'ತಲೆಗೊಂದು ಥರಾ ಥರಾ' ಮತ್ತು 'ಮನಸ್ಸುರಾಯನ ಮನಸ್ಸು' (ಹರಟೆ ಮತ್ತು ಸಣ್ಣ ಕತೆಗಳ ಸಂಕಲನ) ವೈದ್ಯ ಅವರ ಇನ್ನೆರಡು ಪ್ರಮುಖ ಪ್ರಕಟಿತ ಕೃತಿಗಳು. ಅಪರಂಜಿ ಹಾಸ್ಯಪತ್ರಿಕೆಗೆ 'ಸೀನು' ಕಾವ್ಯನಾಮದಿಂದ ಹಾಸ್ಯಲೇಖನಗಳನ್ನೂ ಬರೆದಿದ್ದಾರೆ. ಡಾ.ಬಸವರಾಜ ಕಲ್ಗುಡಿ, ಕುಂ.ವೀರಭದ್ರಪ್ಪ ಮತ್ತು ಲಿಂಗದೇವರು ಹಳೆಮನೆ ಅವರನ್ನೊಳಗೊಂಡ ತೀರ್ಪುಗಾರರ ಮಂಡಳಿ ಒಮ್ಮತದಿಂದ 'ಹಳ್ಳ ಬಂತು ಹಳ್ಳ' ಕಾದಂಬರಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಿತು.. ಇದಕ್ಕೆ ರಾಜ್ಯ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯೂ ಲಭಿಸಿದೆ.

2007: ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭಾರಿ ಜಯ ಗಳಿಸುವ ಮೂಲಕ ಸತತ ನಾಲ್ಕನೇ ಬಾರಿಗೆ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಿತು. ಮುಖ್ಯಮಂತ್ರಿಯಾಗಿ ನರೇಂದ್ರ ಮೋದಿ ಅವರು ಮೂರನೇ ಅವಧಿಗೆ ಮುಂದುವರೆಯುವ ಮೂಲಕ ಹ್ಯಾಟ್ರಿಕ್ ಸಾಧಿಸಿದರು. ರಾಜ್ಯ ವಿಧಾನಸಭೆಯ ಒಟ್ಟು 182 ಸ್ಥಾನಗಳಲ್ಲಿ ಅರ್ಧಕ್ಕಿಂತಲೂ ಹೆಚ್ಚಿನ ಸ್ಥಾನಗಳನ್ನು ಗಳಿಸುವ ಮೂಲಕ ಸರ್ಕಾರ ರಚನೆಗೆ ಅಗತ್ಯವಾದ ಬಹುಮತವನ್ನು ಬಿಜೆಪಿ ಪಡೆಯಿತು. ಕಳೆದ ಚುನಾವಣೆಯಲ್ಲಿ 127 ಕ್ಷೇತ್ರಗಳಲ್ಲಿ ಗೆದ್ದಿದ್ದ ಬಿಜೆಪಿ ಈ ಸಲ 117 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದರೆ, ಹಿಂದಿನ ಚುನಾವಣೆಯಲ್ಲಿ 51 ಕ್ಷೇತ್ರಗಳಲ್ಲಿ ಜಯ ಗಳಿಸಿದ್ದ ಕಾಂಗ್ರೆಸ್ ಈ ಬಾರಿ 59 ಕ್ಷೇತ್ರಗಳನ್ನು ಗೆದ್ದುಕೊಂಡಿತು. ಉಳಿದಂತೆ ಎನ್ ಸಿ ಪಿ 3, ಜೆಡಿಯು 1 ಹಾಗೂ ಪಕ್ಷೇತರರು 2 ಕ್ಷೇತ್ರಗಳಲ್ಲಿ ಗೆಲುವು ಪಡೆದರು. ಉತ್ತರಪ್ರದೇಶ ಚುನಾವಣಾ ದಾಳವನ್ನು ಗುಜರಾತಿನಲ್ಲಿ ಬಳಸಿದ ಮಾಯಾವತಿ ನೇತೃತ್ವದ ಬಿ ಎಸ್ ಪಿ ನೆಲಕಚ್ಚಿತು. ಸ್ಪರ್ಧೆಗೆ ಇಳಿದಿದ್ದ ಸಿಪಿಎಂ, ಲೋಕಜನಶಕ್ತಿ ಮತ್ತಿತರ ಪಕ್ಷಗಳಿಗೂ ಇದೇ ಉತ್ತರ ಸಿಕ್ಕಿತು.

2007: ಭಾರತದ ಸೈನಿಕರು ನೈಋತ್ಯ ಚೀನಾದ ಕುನ್ಮಿಂಗ್ ಸೇನಾ ಅಕಾಡೆಮಿಯಲ್ಲಿ ಪ್ರದರ್ಶಿಸಿದ `ಯೋಗ' ಚೀನೀ ಸೈನಿಕರ ಮನಗೆದ್ದಿತು. ಭಾರತ-ಚೀನಾ ಜಂಟಿ ಸಮರಾಭ್ಯಾಸದ ಮೂರನೇ ದಿನ ಭಾರತದ ಸೈನಿಕರು ಚೀನಾದ ಯೋಧರಿಂದ `ಮಾರ್ಷಲ್ ಕಲೆ'ಯನ್ನು ಕಲಿತರೆ, ಚೀನಾದ ಸೈನಿಕರು ಭಾರತೀಯ ಯೋಧರಿಂದ `ಯೋಗ' ಕಲಿತರು. ಚೀನಾ ಯೋಧರಿಂದ ಯೋಗದ ಬಗ್ಗೆ ತೀವ್ರ ಆಸಕ್ತಿ ಮತ್ತು ಮೆಚ್ಚುಗೆ ವ್ಯಕ್ತವಾಯಿತು.

2007: ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಮಾಜಿ ಅಧ್ಯಕ್ಷ ಕೆ.ಕೆ.ಮೂರ್ತಿ (74) ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾದರು. 20 ವರ್ಷಗಳಿಂದ ಎಐಸಿಸಿ ಸದಸ್ಯರಾಗಿದ್ದ ಅವರು ವಿಶ್ವಖ್ಯಾತಿ ಗಳಿಸಿರುವ ಬೆಂಗಳೂರಿನ ಚೌಡಯ್ಯ ಸ್ಮಾರಕ ಸಭಾಭವನದ ನಿರ್ಮಾಣ ಮತ್ತು ಅದರ ವಿನ್ಯಾಸದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಚೌಡಯ್ಯ ಸ್ಮಾರಕ ಟ್ರಸ್ಟ್ ಕಾರ್ಯದರ್ಶಿಯಾಗಿದ್ದರು. ಮೂರು ದಶಕಕ್ಕೂ ಹೆಚ್ಚು ಕಾಲ ಕಾಂಗ್ರೆಸ್ ಪಕ್ಷದ ಒಡನಾಟದಲ್ಲಿ ಇದ್ದ ಕುಣಿಗಲ್ ಕೃಷ್ಣಮೂರ್ತಿ ಮೊದಲು ದೇವರಾಜ ಅರಸು ಅವರಿಗೆ ನಿಕಟರಾಗಿದ್ದರು. ಗುಂಡೂರಾವ್ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದರು. ಇದಕ್ಕೆ ಮೊದಲು ಅಂದರೆ 1972ರಿಂದ 75ರ ತನಕ ಕರ್ನಾಟಕ ಚಲನಚಿತ್ರ ಅಭಿವೃದ್ಧಿ ನಿಗಮದ (ಕೆ ಎಫ್ ಡಿ ಸಿ) ಅಧ್ಯಕ್ಷರಾಗಿದ್ದರು. ಕರ್ನಾಟಕ ನಿಯತಕಾಲಿಕ ಪ್ರಕಾಶನ ಸಂಸ್ಥೆಯ ಅಧ್ಯಕ್ಷರಾಗಿದ್ದರು.

2007: ಐದು ವರ್ಷಗಳ ಹಿಂದೆ ಜನಿಸಿದ್ದ ದೇವಿ ಮತ್ತು ರಾಹುಲ್ ಹೆಸರಿನ ಎರಡು ಆನೆಗಳು ಜಪಾನಿನ ಉಕೊಹಾಮಾ ಪ್ರಾಣಿ ಸಂಗ್ರಹಾಲಯ ಮತ್ತು ಡಾರ್ಜಿಲಿಂಗಿನ ಪದ್ಮಜಾನಾಯ್ಡು ವನ್ಯಜೀವಿ ಪಾರ್ಕಿನ ನಡುವೆ ಪ್ರತಿವರ್ಷ ನಡೆಯುವ ಪ್ರಾಣಿಗಳ ವಿನಿಮಯ ಕಾರ್ಯಕ್ರಮದ ಅನ್ವಯ ಈದಿನ ಟ್ರಕ್ ಮೂಲಕ ಜಪಾನಿಗೆ ಪಯಣಿಸಿದವು.

2007: ಪ್ರತಿಭಟನೆಗಳ ಪರಿಣಾಮವಾಗಿ ರದ್ದಾಗಿದ್ದ ಕಲಾವಿದ ಎಂ.ಎಫ್.ಹುಸೇನ್ ಅವರ .`ಇಂಡಿಯಾ ಇನ್ ದಿ ಎರಾ ಆಫ್ ಮೊಘಲ್ಸ್' ಚಿತ್ರಗಳ ಪ್ರದರ್ಶನ ದೆಹಲಿಯ ಇಂಡಿಯಾ ಇಂಟರ್ನ್ಯಾಷನಲ್ ಸೆಂಟರ್(ಐಐಸಿ) ಆರ್ಟ್ಸ್ ಗ್ಯಾಲರಿಯಲ್ಲಿ ಬಿಗಿ ಭದ್ರತೆಯೊಂದಿಗೆ ಪುನರಾರಂಭಗೊಂಡಿತು.

2007: ಉತ್ತರ ಕನ್ನಡದ ಅಡಿಕೆ, ತೆಂಗು, ಬಾಳೆಯಿಂದ ಶೃಂಗಾರಗೊಂಡ ಶಿರಸಿಯ ತೋಟಗಾರರ ಕಲ್ಯಾಣ ಮಂಟಪದ ಸುಂದರ ವೇದಿಕೆಯಲ್ಲಿ ಎರಡು ದಿನಗಳ ಹವ್ಯಕ ಮಹಿಳಾ ಜಾಗತಿಕ ಸಮಾವೇಶವನ್ನು ಕರ ನಿರಾಕರಣ ಹೋರಾಟಗಾರ್ತಿ ಭಾಗೀರಥಿ ನಾರಾಯಣ ಶಾಸ್ತ್ರಿ ಉದ್ಘಾಟಿಸಿದರು.

2006: ವಿಶ್ವದ ಮೊತ್ತ ಮೊದಲ ಮೊಬೈಲ್ ಸಿನಿಮಾ `ಕಂಟ್ರೋಲ್ ಪ್ಲಸ್ ಆಲ್ಟ್ ಪ್ಲಸ್ ಡಿಲೀಟ್' ಕುರಿತು ಚಿತ್ರದಲ್ಲಿ ಕಬೀಲ್ ಯುವಕನ ಪಾತ್ರ ನಿರ್ವಹಿಸಿದ ಬಾಲಿವುಡ್ ನಟ ರಾಹುಲ್ ಬೋಸ್ ವಿಡಿಯೋ ಕಾನ್ಫರೆನ್ಸ್ ಮೂಲಕ ಮುಂಬೈಯಿಂದಲೇ ಬೆಂಗಳೂರಿನ ಪತ್ರಕರ್ತರಿಗೆ ಸಿನಿಮಾ ಬಗ್ಗೆ ಮಾಹಿತಿ ನೀಡಿದರು. ಫೋನೆಥಿಕ್ಸ್ ಮೊಬೈಲ್ ಮೀಡಿಯಾ ಸಂಸ್ಥೆ ಈ ಚಿತ್ರವನ್ನು ನಿರ್ಮಿಸಿದ್ದು ರಿಲಯನ್ಸ್ ಮೊಬೈಲ್ ಗ್ರಾಹಕರು ತಮ್ಮ ಮೊಬೈಲಿನಲ್ಲಿಈ ಚಿತ್ರವನ್ನು ವೀಕ್ಷಿಸಬಹುದು ಎಂದು ರಿಲಯನ್ಸ್ ಕಮ್ಯೂನಿಕೇಶನ್ಸ್ ಅಧಿಕಾರಿ ಕೃಷ್ಣದುರ್ಗ ಪ್ರಕಟಿಸಿದರು. ಚಿತ್ರ ಮೂರು ಅಂತಾರಾಷ್ಟ್ರೀಯ ಚಲನಚಿತ್ರ ಉತ್ಸವಗಳಲ್ಲೂ ಪ್ರದರ್ಶನಗೊಂಡಿದೆ.

2006: ಆಸ್ಟ್ರೇಲಿಯಾ ತಂಡದ ವೇಗದ ಬೌಲರ್ ಗ್ಲೆನ್ ಮೆಕ್ ಗ್ರಾ ಅವರು 2007ರ ವಿಶ್ವಕಪ್ ಟೂರ್ನಿಯ ಬಳಿಕ ನಿವೃತ್ತಿ ಹೊಂದುವುದಾಗಿ ಮೆಲ್ಬೋರ್ನಿನಲ್ಲಿ ಪ್ರಕಟಿಸಿದರು.

2006: ಶಿವಮೊಗ್ಗದಲ್ಲಿ 73ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತೆರೆ.

2005: ಸದನದಲ್ಲಿ ಪ್ರಶ್ನೆ ಕೇಳಲು 'ಲಂಚ' ಪಡೆದ ದುರ್ನಡತೆಗಾಗಿ ಲೋಕಸಭೆಯ 10 ಮಂದಿ ಹಾಗೂ ರಾಜ್ಯಸಭೆಯ ಒಬ್ಬ ಸದಸ್ಯನನ್ನು ಉಭಯ ಸದನಗಳು ಧ್ವನಿಮತದಿಂದ ಉಚ್ಚಾಟಿಸಿ 'ಸಂಸದೀಯ ಇತಿಹಾಸ' ನಿರ್ಮಿಸಿದವು. ಶಿಕ್ಷೆಯ ವಿಧಿವಿಧಾನ ಬಗ್ಗೆ ಬಿಜೆಪಿ ಮತ್ತು ಮಿತ್ರಪಕ್ಷಗಳ ವಿರೋಧದ ಮಧ್ಯೆ ಸದನ ಈ ಕ್ರಮ ಕೈಗೊಂಡಿತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸದನ ಸಮಿತಿಗಳು ಮಾಡಿದ ಶಿಫಾರಸುಗಳ ಮೇಲೆ ಉಭಯ ಸದನಗಳು ಅತ್ಯಂತ ಕ್ಷಿಪ್ರ ಕ್ರಮ ಕೈಗೊಂಡು `ಪೂರ್ವ ನಿದರ್ಶನ' ನಿರ್ಮಿಸಿದವು. 50 ವರ್ಷಗಳ ಸಂಸದೀಯ ಇತಿಹಾಸದಲ್ಲೇ ಇದೊಂದು ನೂತನ ಕ್ರಮ. 1951ರಲ್ಲಿ ಸಂಸತ್ತಿನಲ್ಲಿ ಕೆಲಸ ಮಾಡಿಕೊಡಲು ಮುಂಬೈ ಚಿನ್ನಾಭರಣ ವ್ಯಾಪಾರಿಗಳಿಂದ ಹಣ ಸ್ವೀಕರಿಸಿದ್ದಕ್ಕೆ ಸದಸ್ಯ ಎಚ್. ಜಿ. ಮುದ್ಗಲ್ ಅವರನ್ನು ಪ್ರಾಂತೀಯ ಸಂಸತ್ತು ಉಚ್ಚಾಟಿಸಿದ ಏಕೈಕ ನಿದರ್ಶನ ಇತಿಹಾಸದಲ್ಲಿ ಸಿಗುತ್ತದೆ. ಮುದ್ಗಲ್ ಅವರು ರಾಜೀನಾಮೆ ನೀಡಿದರೂ ಸದನ ಅದನ್ನು ಅಂಗೀಕರಿಸಿರಲಿಲ್ಲ. ಉಚ್ಚಾಟನೆಗೊಂಡವರು: ಲೋಕಸಭೆ- ಅಣ್ಣಾಸಾಹೇಬ್ ಎಂ.ಕೆ. ಪಾಟೀಲ್, ವೈ.ಜಿ. ಮಹಾಜನ್, ಪ್ರದೀಪಗಾಂಧಿ, ಸುರೇಶ ಚಂಡೇಲ್, ಚಂದ್ರಪ್ರತಾಪ ಸಿಂಗ್ (ಎಲ್ಲರೂ ಬಿಜೆಪಿ), ನರೇಂದ್ರ ಕುಮಾರ್ ಕುಶವಾಹ, ರಾಜಾರಾಮ್ ಪಾಲ್ ಮತ್ತು ಲಾಲ್ ಚಂದ್ರ ಕೋಲ್ (ಎಲ್ಲರೂ ಬಿಎಸ್ಪಿ) ರಾಮ್ ಸೇವಕ್ ಸಿಂಗ್ (ಕಾಂಗ್ರೆಸ್) ಮತ್ತು ಮನೋಜ ಕುಮಾರ್ (ಆರ್ ಜೆ ಡಿ). ರಾಜ್ಯಸಭೆ: ಛತ್ರಪಾಲ್ ಸಿಂಗ್ ಲೋಧಾ (ಬಿಜೆಪಿ).

2005: ಬೆಂಗಳೂರಿನ ಗ್ರೂಪ್ ಎಂ ಸಂಸ್ಥೆಯ ಹೂಡಿಕೆ ನಿರ್ದೇಶಕ ಪ್ರಶಾಂತ ಕುಮಾರ್ ಅವರಿಗೆ 'ಏಷ್ಯಾದ ಅತ್ಯುತ್ತಮ ಮೀಡಿಯಾ ಪ್ಲ್ಯಾನರ್/ ಬೈಯರ್' ಪುರಸ್ಕಾರ ಲಭಿಸಿತು. ಹಾಂಕಾಂಗಿನ ಮೀಡಿಯಾ ಮ್ಯಾಗಜಿನ್ ಈ ಪುರಸ್ಕಾರವನ್ನು ನೀಡುತ್ತದೆ.

2004: ಭಾರತದ ಮಾಜಿ ಪ್ರಧಾನಿ ಪಿ.ವಿ. ನರಸಿಂಹರಾವ್ ನಿಧನರಾದರು. ಬಹುಭಾಷಾ ಪಾರಂಗತರಾಗಿದ್ದ ನರಸಿಂಹರಾವ್ ಅವರ ಆಡಳಿತಕಾಲದಲ್ಲೇ ಭಾರತದಲ್ಲಿ ಆರ್ಥಿಕ ಸುಧಾರಣೆಗಳ ಯುಗ ಆರಂಭವಾಗಿ ಮುಂದೆ ಜಾಗತೀಕರಣಕ್ಕೆ ದೇಶದ ಬಾಗಿಲು ತೆರೆಯಿತು.

1986: ಡಿಕ್ ರುಟಿನ್ ಮತ್ತು ಜಿಯಾನ ಈಗರ್ ಅವರ ಚಾಲಕತ್ವದಲ್ಲಿ `ವಾಯೇಜರ್' ವಿಮಾನ ಮರು ಇಂಧನ ಭರ್ತಿ ಮಾಡಿಕೊಳ್ಳದೇ, ಎಲ್ಲೂ ನಿಲ್ಲದೆ ಮೊತ್ತ ಮೊದಲ ಬಾರಿಗೆ ಸುತ್ತುಹಾಕುವ ಪ್ರಾಯೋಗಿಕ ಹಾರಾಟ ನಡೆಸಿ ಕ್ಯಾಲಿಫೋರ್ನಿಯಾದ ಎಡ್ವರ್ಡ್ಸ್ ವಾಯುಪಡೆ ನೆಲೆಯಲ್ಲಿ ಯಶಸ್ವಿಯಾಗಿ ಇಳಿಯಿತು.

1956: ಮರಣದಂಡನೆಗೆ ಗುರಿಯಾದ ಸೋವಿಯತಿನ ಮಾಜಿ ಗುಪ್ತ ಪೊಲೀಸ್ ಮುಖ್ಯಸ್ಥ ಲಾವ್ ರೆಂಟಿ ಬೆರಿಯಾ ಮತ್ತು ಇತರ 6 ಮಂದಿಯನ್ನು ಗುಂಡಿಟ್ಟು ಕೊಲೆಗೈಯಲಾಯಿತು.

1952: ಅಸ್ಸಾಮಿನ ಅತ್ಯಂತ ಕಿರಿಯ ಮುಖ್ಯಮಂತ್ರಿ ಪ್ರಫುಲ್ಲ ಕುಮಾರ ಮಹಂತ ಹುಟ್ಟಿದ ದಿನ.

1948: ಜಪಾನಿನ ಮಾಜಿ ಪ್ರಧಾನಿ ಹಿಡೆಕಿ ಟೊಜೊ ಮತ್ತು ಇತರ 6 ಮಂದಿ ಜಪಾನೀ ಸಮರ ನಾಯಕರನ್ನು ಟೋಕಿಯೋದಲ್ಲಿ ಮರಣದಂಡನೆಗೆ ಗುರಿ ಪಡಿಸಲಾಯಿತು.

1936: ಕನ್ನಡಿಗರಲ್ಲಿ ಸಾಹಿತ್ಯಾಭಿರುಚಿಯನ್ನು ಬೆಳೆಸಲು ಕಟ್ಟಿದ ಮನೋಹರ ಗ್ರಂಥಮಾಲೆಯ ಈಗಿನ ಸಂಪಾದಕ ಡಾ. ರಮಾಕಾಂತ ಜೋಶಿ ಅವರು ಜಿ.ಬಿ. ಜೋಶಿ (ಜಡಭರತ)- ಪದ್ಮಾವತಿ ದಂಪತಿಯ ಮಗನಾಗಿ ಧಾರವಾಡದಲ್ಲಿ ಜನಿಸಿದರು.

1923: ಸಾಹಿತಿ ದೊಡ್ಡ ಸುಧಾಬಾಯಿ ಜನನ.

1912: ನೂತನ ರಾಜಧಾನಿ ದೆಹಲಿಗೆ ಆನೆಯ ಮೂಲಕವಾಗಿ ಪ್ರವೇಶಿಸಲು ಹೊರಟಿದ್ದ ಭಾರತದ ವೈಸ್ ರಾಯ್ ಲಾರ್ಡ್ ಹಾರ್ಡಿಂಗ್ ಅವರು ಬಾಂಬ್ ಎಸೆತದಿಂದ ಗಾಯಗೊಂಡರು. ಅವರ ಸೇವಕ ಘಟನೆಯಲ್ಲಿ ಮೃತನಾದ. ಹಾರ್ಡಿಂಗ್ ಅವರು ಗಾಯಗೊಂಡು ಪ್ರಜ್ಞೆ ಕಳೆದುಕೊಂಡರು. (ಅವರ ಸರ್ಕಾರವು ಲಾರ್ಡ್ ಕರ್ಝನ್ ಮಾಡಿದ್ದ ಬಂಗಾಳದ ವಿಭಜನೆಯನ್ನು ರದ್ದು ಪಡಿಸಿತ್ತು. 1911ರ ಡಿಸೆಂಬರಿನಲ್ಲಿ ದೊರೆ ಐದನೇ ಜಾರ್ಜ್ ಮತ್ತು ರಾಣಿಯ ಭೇಟಿ ಸಂದರ್ಭದಲ್ಲಿ ಭಾರತದ ರಾಜಧಾನಿಯನ್ನು ಕಲ್ಕತ್ತಾದಿಂದ ದೆಹಲಿಗೆ ಸ್ಥಳಾಂತರಿಸುವ ನಿರ್ಣಯವನ್ನು ಹಾರ್ಡಿಂಗ್ ಸರ್ಕಾರ ಪ್ರಕಟಿಸಿತ್ತು.)

1902: ಭಾರತದ ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ (1902-1987) ಈ ದಿನ ಉತ್ತರ ಪ್ರದೇಶದ ಮೀರತ್ ಜಿಲ್ಲೆಯ ನೂರ್ ಪುರದಲ್ಲಿ ಜನಿಸಿದರು. ರೈತಪರ ಹೋರಾಟಗಾರರಾಗಿದ್ದ ಚರಣ್ ಸಿಂಗ್ ಬಡತನ ಹಾಗೂ ರೈತಕುಟುಂಬದಿಂದ ಬಂದ ಮೊದಲ ಪ್ರಧಾನಿ (1979-90ರ ಅವಧಿಯಲ್ಲಿ) ಎಂಬ ಹೆಗ್ಗಳಿಕೆಗೆ ಪಾತ್ರರಾದವರು. 1937ರಲ್ಲಿ ಉತ್ತರಪ್ರದೇಶದ ಚತ್ರೌಲಿ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾದರು. 1979ರಲ್ಲಿ ಮೊರಾರ್ಜಿ ದೇಸಾಯಿ ಸರ್ಕಾರದಲ್ಲಿ ಉಪಪ್ರಧಾನಿ ಆದರು. 1987ರ ಮೇ 27ರಂದು ನಿಧನರಾದರು.

No comments:

Post a Comment