Wednesday, December 19, 2018

ಇಂದಿನ ಇತಿಹಾಸ History Today ಡಿಸೆಂಬರ್ 19

ಇಂದಿನ ಇತಿಹಾಸ History Today ಡಿಸೆಂಬರ್  19
2018: ಶ್ರೀಹರಿಕೋಟಾ: ಬಾಹ್ಯಾಕಾಶ ಲೋಕದಲ್ಲಿ ಮಹತ್ತರ ಸಾಧನೆ ಮಾಡುತ್ತಿರುವ ಇಸ್ರೋ, ತನ್ನ ಹಿರಿಮೆಗೆ ಮತ್ತೊಂದು ಕಿರೀಟ ಅಂಟಿಸಿಕೊಂಡಿತು.  ಸೇನಾ ಸಂವಹನ ಉಪಗ್ರಹ ಜಿಸ್ಯಾಟ್- ೭ಎ ಅನ್ನು ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಬಾಹ್ಯಾಕಾಶ ನೆಲೆಯಿಂದ ಬುಧವಾರ ಮಧ್ಯಾಹ್ನ ಯಶಸ್ವಿಯಾಗಿ ಉಡ್ಡಯನ ಮಾಡಲಾಯಿತು. ಜಿಸ್ಯಾಟ್-೭ಎ ,೨೫೦ ಕೆಜಿ ತೂಕ ಹೊಂದಿದ್ದು, ಭಾರತದ ೩೫ನೇ ಸಂವಹನ ಉಪಗ್ರಹವಾಗಿದೆ. ಜಿಎಸ್ಎಲ್ವಿ-ಎಫ್೧೧ ರಾಕೆಟ್ ಮೂಲಕ ಅಂತರಿಕ್ಷಕ್ಕೆ ಉಡಾವಣೆ ಮಾಡಲಾಗಿದೆ. ಎಂಟು ?ಗಳ ಕಾಲ ಸೇವೆ ಸಲ್ಲಿಸಲಿರುವ ಉಪಗ್ರಹವು ಕ್ಯೂಬ್ಯಾಂಡ್ ಮೂಲಕ ಸೇನಾಪಡೆಗೆ ನೆರವು ನೀಡಲಿದೆ. ಇತ್ತೀಚೆಗೆ, ದೇಶದ ಮೂಲೆ ಮೂಲೆಗೂ ಇಂಟರ್ನೆಟ್ ಸೌಲಭ್ಯ ಕಲ್ಪಿಸಬಲ್ಲ ಜಿಸ್ಯಾಟ್-೧೧ ಉಪಗ್ರಹವನ್ನು ಫ್ರಾನ್ಸ್ ಏರಿಯನ್ ಲಾಂಚ್ ಕಾಂಪ್ಲೆಕ್ಸ್ನಲ್ಲಿ ಉಡ್ಡಯನ ಮಾಡಲಾಗಿತ್ತು. ಇಸ್ರೋ ನಿರ್ಮಿಸಿದ ಉಪಗ್ರಹ ಭಾರತದ ಅತೀ ತೂಕದ (೫೮೭೦ ಕೆಜಿ) ಉಪಗ್ರಹ ಎಂಬ ಖ್ಯಾತಿಗೆ ಪಾತ್ರವಾಗಿತ್ತು. ಭಾರತೀಯ ವಾಯುಪಡೆಯ ವಾಯು ನೆಲೆಗಳ ನಡುವೆ ಸಂಪರ್ಕ ಒದಗಿಸಲು, ಕಾರ್ಯಾಚರಣೆ ನಡೆಸಲು ಮತ್ತು ಸೇನಾಪಡೆಯ ಯುದ್ಧ ವಿಮಾನಗಳು ಹಾರಾಟ ನಡೆಸುವ ವೇಳೆ ಸಂವಹನ ನಡೆಸಲು ಇದು ನೆರವು ನೀಡಲಿದೆ.
ಜಿಸ್ಯಾಟ್- ೭ಎ, ಐಎಎಫ್ಗಾಗಿಯೇ ಸಿದ್ಧಪಡಿಸಲಾದ ಮೊದಲ ಉಪಗ್ರಹವಾಗಿದೆ. ಇದು ಐಎಎಫ್ ತನ್ನ ಸಂಪನ್ಮೂಲಗಳನ್ನು ಒಗ್ಗೂಡಿಸಲು ಮತ್ತು ಸಂಯೋಜನೆಯನ್ನು ಸುಧಾರಿಸಲು, ಕಾರ್ಯಾಚರಣೆ ವೇಳೆ ಎಲ್ಲ ಕಡೆಗೂ ಏಕರೂಪದ ಸಂದೇಶಗಳನ್ನು ಹಂಚಿಕೊಳ್ಳಲು ಸಹಾಯ ಮಾಡಲಿದೆಭಾರತೀಯ ವಾಯುಪಡೆಯ (ಐಎಎಫ್) ಸಂವಹನ ಸಾಮರ್ಥ್ಯಗಳನ್ನು ವಿಸ್ತರಿಸಲು ನೆರವಾಗುವಂತೆ ಜಿಸ್ಯಾಟ್-೭ಎ ಅನ್ನು ವಿನ್ಯಾಸಪಡಿಸಲಾಗಿದೆ. ಅನೇಕ ಭೂ ರಾಡಾರ್ ನಿಲ್ದಾಣಗಳನ್ನು, ವಾಯು ನೆಲೆಗಳನ್ನು ಮತ್ತು ಐಎಎಫ್ ಕಾರ್ಯ ನಿರ್ವಹಿಸುವ ಯುದ್ಧ ವಿಮಾನಗಳನ್ನು ಸಂಪರ್ಕಿಸುವ ಮೂಲಕ ಗುರಿಯನ್ನು ತಲುಪಲಿದೆ. ಇದಲ್ಲದೆ, ನೆಟ್ವರ್ಕ್ ಅವಲಂಬಿತ ಯುದ್ಧ ಹಾಗೂ ಡ್ರೋನ್ ಸಾಮರ್ಥ್ಯಗಳನ್ನು ವೃದ್ಧಿಸುವ ನಿರೀಕ್ಷೆಯಿದೆ. ಇಸ್ರೋದ ಮಹತ್ತರ ಕೊಡುಗೆಯನ್ನು ಶ್ಲಾಘಿಸಿರುವ ವಾಯು ಸೇನಾ ಮುಖ್ಯಸ್ಥ ಬಿಎಸ್ ಧನೋವಾ, ಜಿಎಸ್ಎಲ್ ವಿ-೭ಎ, ವಾಯುಪಡೆಯ ಸಂಪರ್ಕ ಜಾಲ ಮತ್ತು ಸಂವಹನ ಸಾಮರ್ಥ್ಯಗಳನ್ನು ಬಲಪಡಿಸಲಿದೆ ಎಂದು ಹೇಳಿದರು. ಉಪಗ್ರಹದ ಮೂಲಕ ಸಂವಹನ ನಡೆಸುವ ಸಾಮರ್ಥ್ಯವುಳ್ಳ ಅನೇಕ ಯುದ್ಧ ವಿಮಾನಗಳು ನಮ್ಮ ಬಳಿ ಇವೆ. ಉಡ್ಡಯನದ ಮೂಲಕ ಉಪಗ್ರಹದ ಮೂಲಕ ಯುದ್ಧ ವಿಮಾನಗಳು ಸಂವಹನ ನಡೆಸುವುದು ಸಾಧ್ಯವಾಗಲಿದೆ ಎಂದರುಉಪಗ್ರಹವು ಅತ್ಯಾಧುನಿಕ ಕೆಯು ಬ್ಯಾಂಡ್ ಅನ್ನು ಹೊಂದಿದ್ದು, ಇದು ತತ್ಕ್ಷಣದ ಹಾಗೂ ಸ್ಪಷ್ಟ ಯುದ್ಧ ವಿಮಾನದಿಂದ ಯುದ್ಧ ವಿಮಾನದ ಸಂವಹನಕ್ಕೆ ಸಹಾಯ ಮಾಡಲಿದೆ. ಅಲ್ಲದೆ, ಹಾರಾಟ ನಡೆಸುತ್ತಿರುವ ವಿಮಾನಗಳು ಮತ್ತು ನೆಲದಲ್ಲಿರುವ ಕಮಾಂಡರ್ಗಳ ನಡುವಿನ ಸಂವಹನವೂ ಸಾಧ್ಯವಾಗಲಿದೆ. ಜಿಎಸ್ಎಲ್ವಿ-ಎಫ್ ೧೧ ಬಾಹ್ಯಾಕಾಶ ವಾಹನದ ಮೂಲಕ ಜಿಸ್ಯಾಟ್-೭ಎಯನ್ನು ಉಡಾವಣೆ ಮಾಡಲಾಗಿದೆ. ಇದು ಇಸ್ರೋ ವರ್ಷ ಉಡಾವಣೆ ಮಾಡಿದ ಕೊನೆಯ ಉಪಗ್ರಹವಾಗಿದೆ. ಭೂಮಿಯಿಂದ ೩೬ ಸಾವಿರ ಕಿ.ಲೋ. ಮೀಟರ್ ದೂರದಲ್ಲಿನ ಭೂಸ್ಥಾಯಿ ಕಕ್ಷೆಯಲ್ಲಿ ನೆಲೆ ನಿಲ್ಲಲಿದೆ. ಆರಂಭದಲ್ಲಿ ಪರೀಕ್ಷಾರ್ಥ ಚಟುವಟಿಕೆಗಳು ನಡೆದ ಬಳಿಕವ? ಒಂದು ತಿಂಗಳ ಬಳಿಕ ಸಂಪೂರ್ಣ ಕಾರ್ಯಾಚರಣೆ ನಡೆಸಲಿದೆ. ಸ್ವದೇಶಿ ನಿರ್ಮಿತ ಉಪಗ್ರಹವು ಮೂರು ಹಂತಗಳನ್ನು ದಾಟಿದ ಬಳಿಕ ಉದ್ದೇಶಿತ ಕಕ್ಷೆಯನ್ನು ತಲುಪಲಿದೆ.

2018: ನವದೆಹಲಿ: ರಫೇಲ್ ಯುದ್ಧ ವಿಮಾನಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿದ ತೀರ್ಪಿನಲ್ಲಿ ಆಗಿರುವ ತಪ್ಪು ಸರಿಪಡಿಸುವಂತೆ ಕೋರಿ ಕೇಂದ್ರ ಸರ್ಕಾರವು ಸರ್ವೋಚ್ಚ ನ್ಯಾಯಾಲಯಕ್ಕೆ ಕೇಂದ್ರ ಸರ್ಕಾರವು ಮನವಿ ಸಲ್ಲಿಸಿದ ಒಂದು ವಾರ ಕಳೆಯುವ ಮುನ್ನವೇ ಕಾಂಗ್ರೆಸ್ ವಿಷಯಕ್ಕೆ ಸಂಬಂಧಿಸಿದಂತೆ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ತನಿಖೆಗಾಗಿ ಸರ್ಕಾರದ ಮೇಲೆ ತನ್ನ ಒತ್ತಡವನ್ನು ಮುಂದುವರೆಸಿತು.  ‘ನಾವು ಜೆಪಿಸಿ ತನಿಖೆಯನ್ನು ಬಯಸುತ್ತೇವೆ. ಸಂಸತ್ ಸದಸ್ಯರು ಕುಳಿತು ಕಡತಗಳನ್ನು ಪರಿಶೀಲಿಸಿದಾಗ ನಮಗೆ ಎಲ್ಲವೂ ಗೊತ್ತಾಗುತ್ತದೆ. ಬೊಫೋರ್ಸ್ ಮತ್ತು ೨ಜಿ ಪ್ರಕರಣಗಳಲ್ಲಿ ಕೂಡಾ ಜೆಪಿಸಿ ರಚಿಸಲಾಗಿತ್ತುಇಡೀ ಪ್ಯಾರಾದಲ್ಲೇ ಮುದ್ರಣದೋಷ ಹೇಗೆ ಸಂಭವಿಸುತ್ತದೆ? ಒಂದು ಪದವಾಗಿದ್ದರೆ ಅದನ್ನು ಅರ್ಥ ಮಾಡಿಕೊಳ್ಳಬಹುದಾಗಿತ್ತು, ಇಡೀ ಪ್ಯಾರಾವೇ ಮುದ್ರಣ ದೋಷಕ್ಕೆ ಒಳಗಾಗಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ಸಿನ ಲೋಕಸಭಾ ನಾಯಕ ಮಲ್ಲಿಕಾರ್ಜುನ ಖರ್ಗೆ ಸೋಮವಾರ ಹೇಳಿದರು. ರಕ್ಷಣಾ ಸಚಿವಾಲಯವು ರಫೇಲ್ ಯುದ್ಧ ವಿಮಾನ ಒಪ್ಪಂದಕ್ಕೆ ಸಂಬಂಧಿದಂತೆ ಸುಪ್ರೀಂಕೋರ್ಟ್ ನೀಡಿದ್ದ ಆದೇಶದ ಒಂದು ಪ್ಯಾರಾದಲ್ಲಿನ ತಪ್ಪನ್ನು ಸರಿಪಡಿಸುವಂತೆ ಸರ್ವೋಚ್ಚ ನ್ಯಾಯಾಲಯಕ್ಕೆ ಕಳೆದ ಶನಿವಾರ ಮನವಿ ಮಾಡಿತ್ತು. ೫೯,೦೦೦ ಕೋಟಿ ರೂಪಾಯಿ ಮೊತ್ತದ ಒಪ್ಪಂದ ಮಾಡಿಕೊಳ್ಳುವ ಮುನ್ನ ಸೂಕ್ತ ಪ್ರಕ್ರಿಯೆ ನಡೆಸಲಾಗಿತ್ತು ಎಂಬ ಸರ್ಕಾರದ ನಿಲುವನ್ನು ಸುಪ್ರೀಂಕೋರ್ಟಿನ ತೀರ್ಪು ಪರಿಣಾಮಕಾರಿಯಾಗಿ ಸಮರ್ಥಿಸಿತ್ತು. ಸಿಬಿಐ ತನಿಖೆಗೆ ಆದೇಶ ನೀಡಲು ಕಾರಣಗಳಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿತ್ತುಏನಿದ್ದರೂ ತೀರ್ಪಿನಲ್ಲಿ ಬೆಲೆ ವಿವರಗಳನ್ನು ಭಾರತದ ಕಂಪ್ಟ್ರೋಲರ್ ಅಂಡ್ ಅಡಿಟರ್ ಜನರಲ್ (ಸಿಎಜಿ) ಅವರ ಜೊತೆಗೆ ಹಂಚಿಕೊಳ್ಳಲಾಗಿದೆ ಮತ್ತು ಸರ್ಕಾರದ ಅಡಿಟರ್ ಅವರು ಪರಿಷ್ಕೃತ ವರದಿಯನ್ನು ಸಂಸತ್ತಿಗೆ ಸಲ್ಲಿಸಿದ್ದಾರೆ ಎಂದು ತೀರ್ಪಿನಲ್ಲಿ ಉಲ್ಲೇಖಿಸಲಾಗಿದ್ದುದನ್ನು ಕಾಂಗ್ರೆಸ್ ಬೊಟ್ಟು ಮಾಡಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು. ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿಯು (ಪಿಎಸಿ) ವರದಿಯನ್ನು ಪರಿಶೀಲಿಸಿದೆ ಎಂದೂ ಸುಪ್ರೀಂಕೋರ್ಟ್ ತೀರ್ಪು ಹೇಳಿತ್ತುತೀರ್ಪಿನಲ್ಲಿನ ತಪ್ಪನ್ನು ಅರ್ಜಿದಾರರು ಮತ್ತು ವಿರೋಧ ಪಕ್ಷಗಳು ಕೈಗೆತ್ತಿಕೊಂಡಿವೆ. ಸರ್ಕಾರವು ತನ್ನ ಮೂಲ ಅರ್ಜಿಯಲ್ಲೇ ನ್ಯಾಯಾಲಯದ ದಾರಿತಪ್ಪಿಸಿದೆ ಎಂದು ವಿರೋಧ ಪಕ್ಷವು ಪ್ರತಿಪಾದಿಸಿತು.  ‘ಸುಪ್ರೀಂಕೋರ್ಟಿನ ತೀರ್ಪು ರಫೇಲ್ ದರಗಳನ್ನು ಪಿಎಸಿ ಪರೀಕ್ಷಿಸಿದೆ ಎಂಬುದಾಗಿ ಪ್ಯಾರಾದಲ್ಲಿ ಹೇಳಲು ಹೇಗೆ ಸಾಧ್ಯ? ಸಿಎಜಿ ವರದಿ ಎಲ್ಲಿದೆ ಎಂದು ನಾವು ಈಗ ಸರ್ಕಾರವನ್ನು ಕೇಳಬೇಕಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆಗ ಹೇಳಿದ್ದರುಸುಪ್ರೀಂಕೋರ್ಟ್ ತೀರ್ಪಿ ಮೂಲ ಪ್ಯಾರಾದಲ್ಲಿ (೨೫ನೇ ಪ್ಯಾರಾ) ’ದರ ವಿವರಗಳನ್ನು, ಏನಿದ್ದರೂ ಕಂಪ್ಟ್ರೋಲರ್ ಅಂಡ್ ಅಡಿಟರ್ ಜನರಲ್ (ಸಿಎಜಿ) ಅವರ ಜೊತೆ ಹಂಚಿಕೊಳ್ಳಲಾಗಿದೆ ಮತ್ತು ಸಿಎಜಿ ವರದಿಯನ್ನು ಸಾರ್ವಜನಿಕ ಲೆಕ್ಕ ಪತ್ರ ಸಮಿತಿಯು ಪರಿಶೀಲಿಸಿದೆ... ಕೇವಲ ಪರಿಷ್ಕೃತ ಭಾಗವನ್ನು ಮಾತ್ರ ಸಂಸತ್ತಿನ ಮುಂದೆ ಮಂಡಿಸಲಾಗಿದ್ದು, ಅದು ಅಂತರ್ಜಾಲದಲ್ಲಿ ಲಭ್ಯವಿದೆ ಎಂದು ತಿಳಿಸಲಾಗಿದೆಪ್ಯಾರಾದಲ್ಲಿ ಆಗಿರುವ ತಪ್ಪನ್ನು ಸರಿಪಡಿಸುವಂತೆ ಸಲ್ಲಿಸಲಾದ ಅರ್ಜಿಯಲ್ಲಿ ರಕ್ಷಣಾ ಸಚಿವಾಲಯವು ಸರ್ಕಾರವು ತಾನು ಮೊಹರಾದ ಲಕೋಟೆಯಲ್ಲಿ ಸಲ್ಲಿಸಿದ ದರ ವಿವರಗಳ ಜೊತೆಗೆ ಬುಲ್ಲೆಟ್ ಪಾಯಿಂಟ್ ಗಳಲ್ಲಿ ಸಲ್ಲಿಸಿದ್ದ ಟಿಪ್ಪಣಿಯನ್ನು ನ್ಯಾಯಾಲಯ ತಪ್ಪಾಗಿ ಅರ್ಥೈಸಿಕೊಂಡಂತಿದೆ ಎಂದು ತಿಳಿಸಿದೆ. ’ಸರ್ಕಾರವು ಈಗಾಗಲೇ ಬೆಲೆ ವಿವರಗಳನ್ನು ಸಿಎಜಿ ಜೊತೆಗೆ ಹಂಚಿಕೊಂಡಿದೆ ಎಂದು ಎರಡನೇ ಬುಲೆಟ್ ಪಾಯಿಂಟ್ ಹೇಳಿದೆ. ಸಿಎಜಿ ವರದಿಯನ್ನು ಪಿಎಸಿ ಪರಿಶೀಲಿಸುವುದು. ಕೇವಲ ವರದಿಯ ಪರಿಷ್ಕೃತ ಭಾಗವನ್ನು ಸಂಸತ್ತಿನ ಮುಂದೆ ಮಂಡಿಸಲಾಗುವುದು ಮತ್ತು ಅಂತರ್ಜಾಲದಲ್ಲಿ ಹಾಕಲಾಗುವುದು ಎಂದು ಟಿಪ್ಪಣಿ ತಿಳಿಸಿದೆ ಎಂದು ಸಚಿವಾಲಯ ತನ್ನ ಅರ್ಜಿಯಲ್ಲಿ ಪ್ರತಿಪಾದಿಸಿತ್ತು. ಸಾಮಾನ್ಯವಾಗಿಈಸ್ ಪದವನ್ನು ಬಳಸುವ ಕ್ರಮವನ್ನು ಅನುಸರಿಸಲಾಗುತ್ತದೆ ಎಂದು ವಾದಿಸಿದ ಅರ್ಜಿಯುಈಗಾಗಲೇ ಕ್ರಮ ಕೈಗೊಳ್ಳಲಾಗಿದೆ ಎಂಬ ಅರ್ಥವನ್ನು ಕೊಡುತ್ತಿರುವ ತೀರ್ಪಿನ ೨೫ನೇ ಪ್ಯಾರಾದಲ್ಲಿ ಬಳಸಲಾಗಿರುವಹ್ಯಾಸ್ ಬೀನ್ ಪದವನ್ನು ಬದಲಾಯಿಸಿ ಈಸ್ ಪದವನ್ನು ಹಾಕಬೇಕು ಎಂದು ಸಚಿವಾಲಯ ನ್ಯಾಯಾಲಯವನ್ನು ಕೋರಿತ್ತು. ಸರ್ಕಾರವು ತನ್ನ ಮೂಲ ಅರ್ಜಿಯಲ್ಲಿಈಸ್ ಪದದ ಬದಲಿಗೆವಿಲ್ ಬಿ ಪದ ಬಳಸಿದ್ದರೆ ವಾಕ್ಯದ ಅರ್ಥ ಹೆಚ್ಚು ಸ್ಪಷ್ಟವಾಗಿ ಇರುತ್ತಿತ್ತು.  ‘ಅವರು ತಪ್ಪು ಮಾಹಿತಿ ಕೊಟ್ಟಿದ್ದಾರೆ. ಮಾಹಿತಿಯನ್ನು ಆಧರಿಸಿ ಕೋರ್ಟ್ ತನ್ನ ತೀರ್ಪನ್ನು ಕೊಟ್ಟಿದೆ. ಅಟಾರ್ನಿ ಜನರಲ್ ಮತ್ತು ಕಂಪ್ಟ್ರೋಲರ್ ಅಂಡ್ ಅಡಿಟರ್ ಜನರಲ್ ಅವರಿಗೆ ಸಮಿತಿಯ ಮುಂದೆ ಹಾಜರಾಗುವಂತೆ ಸೂಚಿಸುವ ಸಲುವಾಗಿ ಸಭೆ ನಿಗದಿ ಪಡಿಸಲು ಈಗ ನಾನು ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಎಲ್ಲ ಸದಸ್ಯರಿಗೆ ಮನವಿ ಮಾಡುತ್ತೇನೆ. ಸದನಕ್ಕೆ ರಫೇಲ್ ವರದಿಯನ್ನು ಯಾವಾಗ ಸಲ್ಲಿಸಿದ್ದಿರಿ ಮತ್ತು ಪಿಎಸಿ ಎದುರು ಅದು ಯಾವಾಗ ಬಂತು? ಅವರು ಸಾಕ್ಷ್ಯ ನೀಡಲು ಯಾವಾಗ ಬಂದಿದ್ದರು ಮತ್ತು ನಾವು ಯಾವಾಗ ಸಂಸತ್ತಿಗೆ ಪಿಎಸಿ ವರದಿಯನ್ನು ಸಲ್ಲಿಸಿದ್ದೇವೆ ಎಂಬುದಾಗಿ ಅವರನ್ನು ನಾವು ಕೇಳಬಯಸುತ್ತೇವೆ ಎಂದು ಖರ್ಗೆ ಹೇಳಿದ್ದರು.

2018: ನವದೆಹಲಿ: ಪಾಕಿಸ್ತಾನದ ಸೆರೆಮನೆಯಿಂದ ಬಿಡುಗಡೆಯಾಗಿ ಭಾರತಕ್ಕೆ ವಾಪಸಾಗಿರುವ ಮುಂಬೈಯ ನಿವಾಸಿ ಹಮೀದ್ ಅನ್ಸಾರಿ ಮತ್ತು ಅವರ ತಾಯಿ ಫೌಜಿಯಾ ನವದೆಹಲಿಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಭೇಟಿ ಮಾಡಿ ಪಾಕ್ ಸೆರೆಮನೆಯಿಂದ ಬಿಡುಗಡೆ ಮಾಡಿಸಿಕೊಟ್ಟದ್ದಕ್ಕಾಗಿ ತಮ್ಮ ಧನ್ಯವಾದಗಳನ್ನು ಸಲ್ಲಿಸಿದರು. ಗೂಢಚರ್ಯೆ ಆರೋಪಕ್ಕೆ ಗುರಿಯಾಗಿ ಪಾಕಿಸ್ತಾನದ ಪೇಶಾವರ ಕೇಂದ್ರೀಯ ಸೆರೆಮನೆಯಲ್ಲಿ ವರ್ಷಗಳ ಕಾಲ ಇದ್ದ ಅನ್ಸಾರಿ ಮಂಗಳವಾರ ಪಂಜಾಬಿನ ಅಟ್ಟಾರಿ-ವಾಘಾ ಗಡಿಯ ಮೂಲಕ ಭಾರತಕ್ಕೆ ವಾಪಸಾಗಿದ್ದರು. ತಾಯಿ ಮತ್ತು ಮಗ ಇಬ್ಬರೂ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಭೇಟಿ ಮಾಡುವ ವೇಳೆಯಲ್ಲಿ ಭಾವ ಪರವಶರಾಗಿದ್ದರು. ಸುಷ್ಮಾ ಅವರೊಂದಿಗೆ ಮಾತನಾಡುತ್ತಾ ಫೌಜಿಯಾ ಅವರುಮೇರಾ ಭಾರತ್ ಮಹಾನ್, ಮೇರೀ ಮೇಡಮ್ ಮಹಾನ್, ಸಬ್ ಮೇಡಮ್ ನೇ ಹೀ ಕಿಯಾ ಹೈ (ನನ್ನ ಭಾರತ ಮಹಾನ್, ನನ್ನ ಮೇಡ್ ಮಹಾನ್, ನೀವೇ ಎಲ್ಲವನ್ನೂ ಮಾಡಿದಿರಿ) ಎಂದು ಹೇಳುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯಿತು. ಬಿಕ್ಕುತ್ತಿದ್ದ ಫೌಜಿಯಾ ಅವರನ್ನು ಆಲಂಗಿಸಿಕೊಂಡು ಸಮಾಧಾನಿಸಿದ ಸುಷ್ಮಾ ಸ್ವರಾಜ್ನೀನು ತುಂಬ ಕಷ್ಟದ ಸಮಯ ಎದುರಿಸಿದೆ ಎಂದು ಅನ್ಸಾರಿ ಬಳಿ ಹೇಳಿದರುಹಮೀದ್ ಅನ್ಸಾರಿ ಅವರು ೨೦೧೨ರ ನವೆಂಬರ್ ೧೨ರಂದು ತಮಗೆ ಸಾಮಾಜಿಕ ಮಾಧ್ಯಮ ಮೂಲಕ ಪರಿಚಯವಾಗಿದ್ದ ಮಹಿಳೆಯನ್ನು ಭೇಟಿ ಮಾಡುವ ಸಲುವಾಗಿ ಪಾಕಿಸ್ತಾನವನ್ನು ಪ್ರವೇಶಿಸಿದ್ದರು. ೩೩ರ ಹರೆಯದ ಅವರನ್ನು ೨೦೧೨ರ ನವೆಂಬರ್ ತಿಂಗಳಲ್ಲೇ ಬಂಧಿಸಲಾಗಿತ್ತು. ಬಳಿಕ ಅವರ ಬಳಿ ಪಾಕಿಸ್ತಾನದ ನಕಲಿ ಗುರುತಿನ ಚೀಟಿ ಲಭಿಸಿತು ಎಂದು ಆಪಾದಿಸಿ ಗೂಢಚರ್ಯೆಗಾಗಿ ಸೇನಾ ನ್ಯಾಯಾಲಯದ ವಿಚಾರಣೆಗೆ ಗುರಿ ಪಡಿಸಲಾಗಿತ್ತು. ೨೦೧೫ರಲ್ಲಿ ಸೇನಾ ನ್ಯಾಯಾಲಯವು ಅನ್ಸಾರಿ ಅವರಿಗೆ ಮೂರು ವರ್ಷಗಳ ಸೆರೆವಾಸದ ಶಿಕ್ಷೆ ವಿಧಿಸಿತ್ತು. ಶಿಕ್ಷೆಗೆ ಗುರಿಯಾದ ಬಳಿಕ ಅನ್ಸಾರಿ ಅವರನ್ನು ಪೇಶಾವರ ಕೇಂದ್ರೀಯ ಸೆರೆಮನೆಯಲ್ಲಿ ಇರಿಸಲಾಗಿತ್ತು. ಡಿಸೆಂಬರ್ ೧೫ರಂದು ಅವರ ಶಿಕ್ಷೆಯ ಅವಧಿ ಮುಗಿದಿತ್ತು. ಬಿಡುಗಡೆ ಪ್ರಕ್ರಿಯೆ ಪೂರ್ಣಗೊಳಿಸಲು ಪೇಶಾವರ ಹೈಕೋರ್ಟ್ ಗುರುವಾರ ಒಂದು ತಿಂಗಳ ಗಡುವು ನೀಡಿತ್ತು ಬಳಿಕ ಅವರನ್ನು ಭಾರತಕ್ಕೆ ಕಳುಹಿಸಲಾಯಿತು. ತಾಯ್ನಾಡಿಗೆ ವಾಪಸ್ ಬಂದದ್ದು ನನಗೆ ಅತ್ಯಂತ ಹಿತಕರ ಎನ್ನಿಸುತ್ತಿದೆ. ನಾನೀಗ ಅತ್ಯಂತ ಭಾವಪರವಶನಾಗಿದ್ದೇನೆ ಎಂದು ಅನ್ಸಾರಿ ಅವರು ದೆಹಲಿ ತಲುಪಿದ ಬಳಿಕ ಮಾಧ್ಯಮದ ಜೊತೆ ಮಾತನಾಡುತ್ತಾ ಹೇಳಿದರುತಾಯಿ ಫೌಜಿಯಾ, ತಂದೆ ನೆಹಲ್ ಮತ್ತು ಸಹೋದರ ಗಡಿ ದಾಟಿ ಭಾರತಕ್ಕೆ ಬಂದಾಗಿ ಅನ್ಸಾರಿಯನ್ನು ಭೇಟಿ ಮಾಡಿದರು.  ‘ಹಮೀದ್ ಗೆ ಪುನರ್ಜನ್ಮ ಲಭಿಸಿದೆ ಎಂದು ನಮಗೆ ಅನ್ನಿಸುತ್ತಿದೆ. ಮಗ ಕಣ್ಮರೆಯಾದಂದಿನಿಂದ ಈದಿನದವರೆಗೂ ನಾವು ಮನೆಯಲ್ಲಿ ಯಾವುದೇ ಹಬ್ಬವನ್ನೂ ಆಚರಿಸಿಲ್ಲ ಎಂದು ಪುತ್ರನನ್ನು ಎದುರುಗೊಳ್ಳುವುದಕ್ಕೆ ಮುನ್ನ ತಂದೆ ನೆಹಲ್ ಹೇಳಿದ್ದರು.

2018: ನವದೆಹಲಿ: ಚುನಾವಣೆಗಳಿಗೆ ಮೊದಲು ವಿದುನ್ಮಾನ ಮತ ಯಂತ್ರಗಳ (ಇವಿಎಂ) ಬಗ್ಗೆ ಕೂಗಾಟ ನಡೆಸುವ ಪ್ರವೃತ್ತಿಗಾಗಿ ಕಾಂಗ್ರೆಸ್ ಪಕ್ಷವನ್ನು ಇಲ್ಲಿ ತರಾಟೆಗೆ ತೆಗೆದುಕೊಂಡ ಪ್ರಧಾನಿ ನರೇಂದ್ರ ಮೋದಿ, ’ಪ್ರತಿಬಾರಿಯೂ ಫಲಿತಾಂಶ ಅವರ ಪರ ಬಂದರೆ ಕಾಂಗ್ರೆಸ್ ಪಕ್ಷಕ್ಕೆ ಇವಿಎಂ ಸ್ವಾಗತಾರ್ಹವಾಗುತ್ತದೆ ಎಂದು ಟೀಕಿಸಿದರುಇತ್ತೀಚೆಗಷ್ಟೇ ಮುಗಿದ ವಿಧಾನಸಭಾ ಚುನಾವಣೆಗಳ ಕಾಲದಲ್ಲೂ ಕಾಂಗ್ರೆಸ್ ಪಕ್ಷವು ವಿದ್ಯುನ್ಮಾನ ಮಂತಯಂತ್ರಗಳು, ಬ್ಯಾಲೆಟ್ ಘಟಕಗಳು ಮತ್ತಿ ವಿವಿಪ್ಯಾಟ್ಗಳು ಸಮಪರ್ಕವಾಗಿ ಕಾರ್ಯನಿರ್ವಹಿಸುವುದಿಲ್ಲ ಎಂದು ಕೂಗೆಬ್ಬಿಸಿತ್ತು ಎಂದು ಪ್ರಧಾನಿ ನುಡಿದರು.  ‘ಪ್ರತಿ ಚುನಾವಣೆಗೂ ಮುನ್ನ ಅವರು ಇವಿಎಂಗಳ ಬಗ್ಗೆ ಭಾರೀ ಗದ್ದಲ ಮಾಡುತ್ತಾರೆ, ಸಂಶಯದ ಪರಿಸರ ಹುಟ್ಟುಹಾಕಲು ಯತ್ನಿಸುತ್ತಾರೆ. ಏನಿದ್ದರೂ, ಚುನಾವಣೆಗಳ ಬಳಿಕ ಕಾಂಗ್ರೆಸ್ ಉತ್ತಮ ಸಾಧನೆ ತೋರಿದರೆ ಅದೇ ವಿದ್ಯುನ್ಮಾನ ಯಂತ್ರಗಳ ಮೂಲಕ ಬಂದ ಫಲಿತಾಂಶವನ್ನು ಅವರು ಅಂಗೀಕರಿಸುವಂತೆ ಕಾಣುತ್ತದೆ ಎಂದು ಪ್ರಧಾನಿ ಮೋದಿಯವರು ತಮಿಳುನಾಡು ಮತ್ತು ಪುದುಚೆರಿಯ ಬಿಜೆಪಿ ಕಾರ್ಯಕರ್ತರ ಜೊತೆ ಮಾತನಾಡುತ್ತಾ ಹೇಳಿದರು. ಪ್ರಧಾನಿಯವರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಬಿಜೆಪಿ ಕಾರ್ಯಕರ್ತರ ಜೊತೆಗೆ ಸಂವಹನ ನಡೆಸುತ್ತಿದ್ದರು. ಪ್ರಜಾಪ್ರಭುತ್ವವನ್ನು ಬಲಪಡಿಸುವ ಸಲುವಾಗಿ ಕಾಂಗ್ರೆಸ್ ಪಕ್ಷದ ಪ್ರಜಾತಂತ್ರ ವಿರೋಧಿ ವರ್ತನೆಯ ಬಗ್ಗೆ ಮಾಹಿತಿ ಹರಡಿ ಜಾಗೃತಿ ಮೂಡಿಸಿ ಎಂದು ಪ್ರಧಾನಿ ಕಾರ್ಯಕರ್ತರನ್ನು ಒತ್ತಾಯಿಸಿದರುಕಾಂಗ್ರೆಸ್ ಪಕ್ಷದ ಪ್ರಜಾತಂತ್ರ ವಿರೋಧಿ ವರ್ತನೆಗೆ ಸೂಕ್ತ ಉತ್ತರ ಪ್ರಜಾಪ್ರಭುತ್ವವನ್ನು ಬಲಪಡಿಸುವುದುಮಾಹಿತಿ ಮತ್ತು ಜಾಗೃತಿ ಪ್ರಜಾಪ್ರಭುತ್ವದಲ್ಲಿ ಅತ್ಯಂತ ಮಹತ್ವವಾದದ್ದು, ಕಾಂಗ್ರೆಸ್ ಮತ್ತು ಅದರ ಅಪಾಯಕಾರಿ ಆಟಗಳ ಬಗ್ಗೆ ನಾವು ಜನರಿಗೆ ತಿಳುವಳಿಕೆ ನೀಡಬೇಕು ಎಂದು ಮೋದಿ ನುಡಿದರು. ಕಾಂಗ್ರೆಸ್ ಪಕ್ಷವು ರಾಷ್ಟ್ರದ ಸಾರ್ವಜನಿಕ ಸಂಸ್ಥೆಗಳ ತೇಜೋವಧೆ ಮಾಡುತ್ತಿದೆ ಎಂದೂ ಪ್ರಧಾನಿ ಆಪಾದಿಸಿದರುಅವರು ಸೇನೆ, ಸಿಎಜಿ ಮತ್ತು ನಮ್ಮ ಪ್ರಜಾಪ್ರಭುತ್ವಕ್ಕೆ ಮಹತ್ವವಾಗಿರುವ ಪ್ರತಿಯೊಂದು ಸಂಸ್ಥೆಯ ತೇಜೋವಧೆ ಮಾಡಿದ್ದಾರೆ. ಇತ್ತೀಚೆಗೆ ಅವರು ತಮಗೆ ಹಿತವಾಗಲಿಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪನ್ನೇ ಪ್ರಶ್ನಿಸಿದರು. ಇದಕ್ಕೆ ಮುನ್ನ ತಾವು ಬಯಸಿದ್ದನ್ನು ಮಾಡುವಂತೆ ನ್ಯಾಯಾಲಯಕ್ಕೆ ಬೆದರಿಕೆ ಹಾಕಲಾಗಲಿಲ್ಲ ಎಂಬ ಕಾರಣಕ್ಕಾಗಿ ಅವರು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ವಿರುದ್ಧವೇ ದೋಷಾರೋಪ ಹೊರಿಸಲು ಯತ್ನಿಸಿದರು ಎಂದು ಪ್ರಧಾನಿ ನುಡಿದರು. ಮಧ್ಯ ಪ್ರದೇಶ ವಿಧಾನಸಭಾ ಫಲಿತಾಂಶ ಪ್ರಕಟಣೆಗೆ ಮುನ್ನ ಕಾಂಗ್ರೆಸ್ ಪಕ್ಷವು ರಾಜ್ಯದ ವಿಂಧ್ಯ ಪ್ರದೇಶದಲ್ಲಿ ಮತದಾನದ ಸ್ವರೂಪ ಬಗ್ಗೆ ವಿಧಿ ವಿಜ್ಞಾನ ಪರೀಕ್ಷೆ ತಡೆಯಲು ತಜ್ಞರನ್ನು ನಿಯೋಜಿಸುವುದಾಗಿ ಹೇಳಿತ್ತು. ಪ್ರದೇಶದಲ್ಲಿ ೩೦ ಸ್ಥಾನಗಳ ಪೈಕಿ ಕೇವಲ ಸ್ಥಾನಗಳನ್ನು ಗೆದ್ದ ಹಿನ್ನೆಲೆಯಲ್ಲಿ ಅಲ್ಲಿ ಇರಿಸಲಾಗಿದ್ದ ವಿದ್ಯುನ್ಮಾನ ಮತಯಂತ್ರಗಳ ಬಗ್ಗೆ ಕಾಂಗ್ರೆಸ್ಸಿಗೆ ಭಾರೀ ಗುಮಾನಿ ಇತ್ತು ಎಂದು ಪ್ರಧಾನಿ ಹೇಳಿದರು. ಮತದಾನದ ವೇಳೆಯಲ್ಲಿ ಕೆಲವೆಡೆ ತಾಂತ್ರಿಕ ಅಡಚಣೆಗಳಾದಾಗ, ಕಾಂಗ್ರೆಸ್ ಪಕ್ಷವು ತಾಂತ್ರಿಕ ವಿಳಂಬದಿಂದ ಮೂರು ಗಂಟೆಗಳಷ್ಟು ವಿಳಂಬವಾದ ಮತಗಟ್ಟೆಗಳಲ್ಲಿ, ಹಲವರಿಗೆ ಮತದಾನದ ಹಕ್ಕು ವಂಚಿಸಲಾಗಿದೆ ಎಂದು ಆಪಾದಿಸಿ ಮರುಚುನಾವಣೆಗೆ ಆದೇಶಿಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿತ್ತುಆದರೆ, ಚುನಾವಣಾ ಫಲಿತಾಂಶದ ಬಳಿಕ ಕಾಂಗ್ರೆಸ್ ಪಕ್ಷವು ವಿದ್ಯುನ್ಮಾನ ಮತಯಂತ್ರಗಳ ಬಗ್ಗೆ ಮತ್ತು ಅವುಗಳ ಅಸಮರ್ಪಕ ಕಾರ್ ನಿರ್ವಹಣೆ ಬಗ್ಗೆ ಸಂಪೂರ್ಣ ಮೌನ ತಾಳಿದೆ. ಅದು ದೊಡ್ಡ ಪಕ್ಷವಾಗಿ ಉದಯಿಸಿದೆ ಮತ್ತು ಎಸ್ ಪಿ ಮತ್ತು ಬಿಎಸ್ ಪಿ ಬೆಂಬಲದೊಂದಿಗ ನೇರವಾಗಿ ಸರ್ಕಾರ ರಚಿಸಿದೆ.

2018: ಚಾಮರಾಜನಗರ: ಸುಳ್ವಾಡಿ ಮಾರಮ್ಮ ದೇವಸ್ಥಾನದಲ್ಲಿ ವಿಷ ಪ್ರಸಾದ ಸೇವಿಸಿ ೧೫ ಜನರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ದಂತೆ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿ ಕೊಳ್ಳೇಗಾಲ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಕೆ. ಶ್ರೀಕಾಂತ್ ನಿವಾಸದಲ್ಲಿ ಹಾಜರುಪಡಿಸಿದ ನಂತರ ಆರೋಪಿಗಳನ್ನು ನಾಲ್ಕು ದಿನ ಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ನ್ಯಾಯಾಧೀಶರು ಆದೇಶ ಹೊರಡಿಸಿದರು. ಜಿಲ್ಲೆಯ ಹನೂರು ತಾಲೂಕಿನ ಮಾರ್ಟಳ್ಳಿ ಸಮೀಪದ ಸುಳ್ವಾಡಿ ಗ್ರಾಮದ ಕಿಚ್ಚುಗುತ್ತಿ ಮಾರಮ್ಮ ದೇವಾಲಯದಲ್ಲಿ ಕಳೆದ ವಿಷಪೂರಿತ ಪ್ರಸಾದ ಸೇವಿಸಿ ೧೫ ಮಂದಿ ಮೃತರಾಗಿ, ನೂರಾರು ಮಂದಿ ಅಸ್ವಸ್ಥರಾಗಿದ್ದರು. ಸಾಲೂರು ಮಠದ ಕಿರಿಯ ಸ್ವಾಮೀಜಿ ಹಾಗೂ ಕಿಚ್ಚುಗುತ್ತಿ ಮಾರಮ್ಮ ದೇವಾಲಯದ ಟ್ರಸ್ಟ್ ಅಧ್ಯಕ್ಷ ಇಮ್ಮಡಿ ಮಹದೇವಸ್ವಾಮೀಜಿ(೫೨) ಪ್ರಕರಣದ ಪ್ರಮುಖ ಆರೋಪಿಯಾಗಿದ್ದು, ಇವರಿಗೆ ಸಹಕಾರ ನೀಡಿದ್ದ ಅಂಬಿಕಾ ೨ನೇ ಆರೋಪಿಯಾಗಿದ್ದಾರೆ. ಅಂಬಿಕಾ(೩೫) ಪತಿ ಟ್ರಸ್ಟ್ ಮ್ಯಾನೇಜರ್ ಮಾದೇಶ್ (೪೬)೩ನೇ ಆರೋಪಿಯಾಗಿದ್ದು, ಪ್ರಸಾದ ಕ್ಕೆ ವಿ? ಬೆರೆಸಿದ ನಾಗ ದೇವಾಲಯದ ಅರ್ಚಕ ದೊಡ್ಡಯ್ಯ(೩೫) ತಂಬಡಿ ೪ನೇ ಆರೋಪಿ ಎಂದು ಐಜಿಪಿ ಶರತ್ಚಂದ್ರ ತಿಳಿಸಿದರು. ಘಟನೆ ಸಂಬಂಧ ಸುದ್ದಿಗೋಷ್ಠಿ ಯಲ್ಲಿ ಮಾಹಿತಿ ನೀಡಿದ ಅವರು, ಪ್ರಕ ರಣಕ್ಕೆ ಸಂಬಂಧಿಸಿದಂತೆ ಸುಮಾರು ೩೫ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದೇವೆ. ಸಾಲೂ ರು ಮಠದ ಕಿರಿಯ ಸ್ವಾಮಿಜಿ ಇಮ್ಮಡಿ ಮಹದೇವಸ್ವಾಮಿ ಅವರಿಗೂ ಟ್ರಸ್ಟಿ ಚಿನ್ನಪ್ಪಿ ಗೂ ಟ್ರಸ್ಟ್ ವಿಚಾರದಲ್ಲಿ ಮನಸ್ತಾಪವಿತ್ತು. ಅದೇ ರೀತಿ ಚಿನ್ನಪ್ಪಿಗೂ ನಾಗ ದೇವಾಲ ಯದ ಅರ್ಚಕ ದೊಡ್ಡಯ್ಯ ತಂಬಡಿಗೂ ಮನಸ್ತಾಪ ಇತ್ತು. ಇದನ್ನು ಗಮನಿಸಿದ ಇಮ್ಮಡಿ ಮಹದೇವಸ್ವಾಮಿ ಶುಕ್ರವಾರ ಟ್ರಸ್ಟ್ನವರು ಹಮ್ಮಿಕೊಂಡಿದ್ದ ಗೋಪುರ ನಿರ್ಮಾಣ ಕಾರ್ಯಕ್ಕೆ ವಿಘ್ನ ತರಲು ಪ್ರಸಾದಕ್ಕೆ ವಿಷ ಬೆರೆಸಲು ನಿರ್ಧಾರಿಸಿದ್ದರು ಎಂದು ಶರತ್ ಚಂದ್ರ ಹೇಳಿದರುಸಾಲೂರು ಮಠದ ಕಿರಿಯ ಸ್ವಾಮೀಜಿ ವಿರುದ್ಧ ಈಗಾಗಲೇ ಹಲವಾರು ಪ್ರಕರಣ ದಾಖಲಾಗಿವೆ. ಪ್ರಕರಣದ ತನಿಖೆ ಕೈ ಗೊಂಡ ಪೊಲೀಸರಿಗೆ ವಿಚಾರಣೆ ವೇಳೆ ಕೆಲವು ಖಚಿತ ಮಾಹಿತಿ ಲಭ್ಯವಾಗಿವೆ. ಅಲ್ಲದೆ, ಪ್ರಕರಣದ ಮೂಲ ಸೂತ್ರಧಾರ ಇಮ್ಮಡಿ ಮಹದೇವಸ್ವಾಮಿ ಎಂಬ ವಿ? ಬೆಳಕಿಗೆ ಬಂದಿದೆ. ಮಾಹಿತಿ ಆಧರಿಸಿ ಮಂಗಳವಾರ ರಾತ್ರಿ ಕೊಳ್ಳೇಗಾಲದ ಮಠದಬೀದಿಯಲ್ಲಿರುವ ಮಹದೇಶ್ವರ ಸಂಸ್ಕೃತ ಪಾಠಶಾಲೆಯಲ್ಲಿ ಇಮ್ಮಡಿ ಮಹಾದೇವಸ್ವಾಮಿ ಅವರನ್ನು ಬಂಧಿಸಲಾ ಯಿತು ಎಂದು ವಿವರಿಸಿದರುದೇವಾಲಯದ ೧೦೦ ಕೋ. ಆಸ್ತಿ ಮೇಲೆ ಕಣ್ಣು ಹಾಕಿದ್ದ ಇಮ್ಮಡಿ ಮಹದೇವಸ್ವಾಮೀ ಜಿ ತಮ್ಮ ವಿರೋಧದ ನಡುವೆ ಟ್ರಸ್ಟಿಗಳು ಹಮ್ಮಿಕೊಂಡಿದ್ದ ಗೋಪುರ ನಿರ್ಮಾಣ ಕಾರ್ಯಕ್ರಮಕ್ಕೆ ತಯಾರಾಗುವ ಪ್ರಸಾದಕ್ಕೆ ವಿ? ಬೆರೆಸುವ ಸಂಚು ರೂಪಿಸಿದ್ದರು. ಪ್ರಕರಣದಲ್ಲಿ ಟ್ರಸ್ಟಿಗಳು ಜೈಲು ಪಾಲಾ ಗುತ್ತಾರೆ, ತದನಂತರ ದೇವಾಲಯವನ್ನು ಸಂಪೂರ್ಣವಾಗಿ ತಮ್ಮ ಸುಪರ್ದಿಗೆ ಪಡೆದುಕೊಳ್ಳಬಹುದು. ಅಲ್ಲದೆ, ಅಂಬಿಕಾ ಪತಿ ಮಾದೇಶನನ್ನು ಟ್ರಸ್ಟಿಯನ್ನಾಗಿ ಮಾಡುವುದಾಗಿ ಇಮ್ಮಡಿ ಮಹದೇವ ಸ್ವಾಮೀಜಿ ಅಂಬಿಕಾಳ ಮನವೊಲಿಸಿದ್ದರು ಎಂದು ಹೇಳಿದರುಆರೋಪಿ ಅಂಬಿಕಾ ಮನೆಗೆ ದೂರದ ಸಂಬಂಧಿ ಹಾಗೂ ಕೃಷಿ ಅಧಿಕಾರಿ ಮೇಲಿಂದ ಮೇಲೆ ಭೇಟಿ ನೀಡುತ್ತಿದ್ದರು. ಘಟನೆ ನಡೆಯುವ ೧೦ ದಿನ ಮುನ್ನ ತನ್ನ ಜಮೀನಿನಲ್ಲಿ ಸಿಂಪಡಿಸುವ ಉದ್ದೇಶಕ್ಕಾಗಿ ಕ್ರಿಮಿನಾಶಕ ಪಡೆದುಕೊಂಡಿದ್ದರು. ಇದೇ ಕ್ರಿಮಿನಾಶಕವನ್ನ ಪ್ರಸಾದಕ್ಕೆ ಬಳಸಲು ಮಾದೇಶ್ ಮತ್ತು ದೊಡ್ಡಯ್ಯನಿಗೆ ನೀಡಲಾ ಗಿತ್ತು. ಇವರು ಸಮಯ ಸಾಧಿಸಿ ತಮ್ಮ ಕಾರ್ಯ ಸಾಧಿಸಿದ್ದಾರೆ ಎಂದು ಅವರು ತಿಳಿಸಿದರು. ಪ್ರಕರಣವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ಸು ಕಂಡಿದೆ. ಸುಳ್ವಾಡಿ ಪ್ರಕರಣದ ಸಂಬಂಧ ತಮಿಳುನಾಡಿನ ಬರಗೂರು ಹಾಗೂ ಅಕ್ಕ ಪಕ್ಕ ಗ್ರಾಮದ ಸುಮಾರು ೧೦೦ಕ್ಕೂ ಹೆಚ್ಚು ಮಂದಿಯನ್ನು ವಿಚಾರಣೆ ಮಾಡಲಾಗಿದ್ದು, ಪ್ರಕರಣದಲ್ಲಿ ತಮಿಳುನಾಡಿನ ಮಂದಿ ಪಾತ್ರ ಇಲ್ಲದಿರುವುದು ಖಚಿತಪಡಿಸಿ ಕೊಳ್ಳಲಾಗಿದೆ ಎಂದು ಸ್ಪಷ್ಟ ಪಡಿಸಿದರು. ಪೊಲೀಸ್ ವರಿಷ್ಠಾಧಿಕಾರಿ ಧಮೇಂ ದ್ರಕುಮಾರ್ ಮೀನಾ, ಹೆಚ್ಚುವರಿ ಜಿಲ್ಲಾಧಿ ಕಾರಿ ಗೀತಾ ಪ್ರಸನ್ನ, ಕೊಳ್ಳಗಾಲ ಡಿವೈಎಸ್ ಪಿ ಪುಟ್ಟಮಾದಯ್ಯ, ಚಾಮರಾಜನಗರ ಡಿವೈಎಸ್ಪಿ ಜಯಕುಮಾರ್ ಸೇರಿದಂತೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನೊಳ ಗೊಂಡ ೪೦ ಮಂದಿ ತನಿಖೆಯನ್ನು ವಿವಿಧ ಹಂತದಲ್ಲಿ ನಡೆಸಿದ್ದಾರೆ ಎಂದು ತಿಳಿಸಿ, ತಂಡದವರಿಗೆ ಅಭಿನಂದಿಸಿದರು.


2018: ಬೆಂಗಳೂರು: ತ್ರಿವಿಧ ದಾಸೋಹಿ, ನಡೆದಾ ಡುವ ದೇವರು ಸಿದ್ದಗಂಗಾ ಶ್ರೀ ಡಾ. ಶಿವಕುಮಾರ್ ಸ್ವಾಮೀಜಿ ಗುಣ ಮುಖರಾಗಿ ಮಠಕ್ಕೆ ಮರಳಿದರು. ಚೆನ್ನೈನ ರೇಲಾ ಆಸ್ಪತ್ರೆಯಲ್ಲಿ ಶ್ರೀಗಳಿಗೆ ಚಿಕಿತ್ಸೆ ನೀಡಲಾಗಿತ್ತು. ಶ್ರೀಗಳು ಗುಣಮುಖರಾಗಿ ರುವ ಹಿನ್ನೆಲೆಯಲ್ಲಿ ಆಸ್ಪತ್ರೆಯಿಂದ ಬುಧ ವಾರ ಡಿಸ್ಚಾರ್ಜ್ ಮಾಡಲಾಯಿತು. ಶ್ರೀಗಳು ವಿಶೇ? ಆಂಬುಲೆನ್ಸ್ನಲ್ಲಿ ಮಠಕ್ಕೆ ಮರಳಿದರು. ಚೆನ್ನೈ ನಿಂದ ವಿಶೇಷ ವಿಮಾನದ ಮೂಲಕ ಹೆಚ್ಎಎಲ್ ಗೆ ಆಗಮಿಸಿದರು. ವೇಳೆ ಶ್ರೀಗಳನ್ನು ಸ್ವಾಗತಿಸುವುದಕ್ಕೆ ಮೇಯರ್ ಗಂಗಾಂಬಿಕೆ ಮತ್ತು ಮಾಜಿ ಉಪಮೇಯರ್ ಪುಟ್ಟರಾಜು ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಚೆನ್ನೈನಿಂದ ಬಂದಿಳಿದ ಶಿವಕುಮಾರ ಸ್ವಾಮೀಜಿಯವರ ಯೋಗಕ್ಷೇಮ ವಿಚಾರಿಸಿದರು.  ಶಿವಕುಮಾರ ಸ್ವಾಮೀಜಿ ಜೊತೆಗೆ ಕಿರಿಯ ಶ್ರೀಗಳು ಸಹ ಇದ್ದು, ಹೆಚ್ಎಎಲ್ ನಿಂದ ತುಮಕೂರು ವರೆಗೆ ಕಾರಿನ ಮೂಲಕ ಶ್ರೀಗಳು ಪ್ರಯಾಣ ಬೆಳೆಸಿದರು. ವೇಳೆ ಹೆಚ್ಎಎಲ್ನಿಂದ ತುಮಕೂರು ರಸ್ತೆಯವರೆಗೂ ಜೀರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿತ್ತು. ಸಿದ್ದಗಂಗಾ ಶ್ರೀ ಕರೆದುಕೊಂಡು ಬರಲು ಎಲ್ಲಾ ರೀತಿಯ ಸಕಲ ಸಿದ್ಧತೆಗ ಳನ್ನು ಮಾಡಿಕೊಳ್ಳಲಾಗಿತ್ತು. ಸ್ವಾಮೀಜಿ ಯನ್ನು ಕರೆದುಕೊಂಡು ಬರಲು ಎರಡು ಅಂಬುಲೆನ್ಸ್ ಗಳನ್ನು ಸಿದ್ಧತೆ ಮಾಡಲಾಗಿ ತ್ತು. ಚೆನ್ನೈನ ರೇಲಾ ಆಸ್ಪತ್ರೆಯಿಂದ ಸಿದ್ದ ಗಂಗಾ ಶ್ರೀಗಳು ಸುಮಾರು ೧೨ ಗಂಟೆಗೆ ಹೊರಟು ಪೊಲೀಸರ ಬಿಗಿ ಭದ್ರತೆಯೊಂ ದಿಗೆ ಹಾಗೂ ಜೀರೋ ಟ್ರಾಫಿಕ್ ಮುಖಾಂ ತರ ವಿಮಾನ ನಿಲ್ದಾಣ ತಲುಪಿದ್ದರು.  ಡಿಸೆಂಬರ್ ೦೭ರಂದು ಏರ್ ಆಂಬು ಲೆನ್ಸ್ ಮೂಲಕ ಚಿಕಿತ್ಸೆಗಾಗಿ ತುಮಕೂರಿ ನಿಂದ ಶ್ರೀಗಳನ್ನು ಚೈನ್ನೈನ ರೇಲಾ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿತ್ತು. ಡಿಸೆಂಬರ್ ೮ರಂದು ಶ್ರೀಗಳಿಗೆ ಎಂಡೋಸ್ಕೋಪಿಯ ಲ್ಯಾಬ್ ರಿಪೋರ್ಟ್ ಆಧರಿಸಿ ಡಾ. ಮೊಹಮ್ಮದ್ ರೇಲಾ ನೇತೃತ್ವದ ತಂಡ ಶಸ್ತ್ರಚಿಕಿತ್ಸೆ ನಡೆಸಿತ್ತು. ಬಿಜಿಎಸ್ ಆಸ್ಪತ್ರೆಯ ಹಿರಿಯ ವೈದ್ಯ ಡಾ.ರವೀಂದ್ರ ಮತ್ತು ತುಮಕೂರಿನಲ್ಲಿ ಸಿದ್ದಗಂಗಾ ಶ್ರೀಗಳ ಆಪ್ತ ವೈದ್ಯರಾದ ಡಾ. ಪರಮೇಶ್ವರ್ ಅವರ ಸಮ್ಮುಖದಲ್ಲಿ ಶಿವಕುಮಾರ ಸ್ವಾಮೀಜಿಗ ಳಿಗೆ ಸರ್ಜರಿ ನಡೆಸಿ ನಂತರ ಅವರನ್ನು ಐಸಿಯುಗೆ ಶಿಫ್ಟ್ ಮಾಡಲಾಗಿತ್ತು. ಮಧ್ಯ ದಲ್ಲಿ ಶ್ರೀಗಳು ನಿರಂತರ ಅತಿಥಿಗಳ ಆಗಮನದಿಂದಾಗಿ ಕೊಂಚ ಸುಸ್ತಾಗಿದ್ದ ರಾದರೂ, ಸದ್ಯ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ. ಅಲ್ಲದೇ, ಅವರ ಆರೋಗ್ಯ ದಲ್ಲಿ ಮತ್ತ? ಚೇತರಿಕೆ ಕಂಡು ಬಂದ ಹಿನ್ನೆಲೆಯಲ್ಲಿ ಅವರನ್ನು ಡಿಸ್ಚಾರ್ಜ್ ಮಾಡ ಲಾಯಿತು. ಮಧ್ಯಾಹ್ನ ಗಂಟೆ ಸುಮಾರಿಗೆ ಮಠಕ್ಕೆ ಆಗಮಿಸಿದ ಶ್ರೀಗಳು ನೇರವಾಗಿ ಹಳೇ ಮಠದ ಕೊಠಡಿಗೆ ತೆರಳಿದರು.


2017: ನವದೆಹಲಿ: ದೆಹಲಿಯ ಮಗೆಂಟಾ ಮಾರ್ಗದಲ್ಲಿನ ಚಾಲಕ ರಹಿತ ದೆಹಲಿ ಮೆಟ್ರೋ ರೈಲುಗಾಡಿ ನಗರದ ಕಲಿಂಡಿ ಕುಂಜದ ಸಮೀಪ ಪರೀಕ್ಷಾ ಚಾಲನೆ ವೇಳೆಯಲ್ಲಿ ಗೋಡೆಗೆ ಅಪ್ಪಳಿಸಿದ ಘಟನೆ ಹಿಂದಿನ ದಿನ ಘಟಿಸಿತು. ಮಧ್ಯಾಹ್ನ .೪೦ರ ವೇಳೆಗೆ ಕಲಿಂಡಿ ಕುಂಜ ಮೆಟ್ರೋ ಡಿಪೋದಲ್ಲಿ ಅಪಘಾತ ಸಂಭವಿಸಿದೆ ಎಂದು ದೆಹಲಿ ಮೆಟ್ರೋ ರೈಲ್ವೇ ಕಾರ್ಪೋರೇಷನ್ (ಡಿಎಂಆರ್ ಸಿ) ತಿಳಿಸಿತು. ‘ಪರೀಕ್ಷೆ ನಡೆಸುತ್ತಿದ್ದ ರೈಲುಗಾಡಿ ವರ್ಕ್ಶಾಪ್ ನಿಂದ ಟೆಸ್ಟಿಂಗ್ ಬ್ರೇಕ್ ಇಲ್ಲದೆಯೇ ಚಲಿಸಿದ ಪರಿಣಾಮವಾಗಿ ಹಿಂದಕ್ಕೆ ಚಲಿಸಿ ಸಮೀಪದ ಆವರಣ ಗೋಡೆಗೆ ಡಿಕ್ಕಿ ಹೊಡೆಯಿತು. ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲ ಎಂದು ಡಿಎಂಆರ್ ಸಿ ಹೇಳಿಕೆ ತಿಳಿಸಿತು. ಡಿಎಂಆರ್ ಸಿ ಆಡಳಿತ ನಿರ್ದೆಶಕರು ಎಕ್ಸಿಕ್ಯೂಟಿವ್ ಡೈರೆಕ್ಟರ್ ಮಟ್ಟದ ಮೂವರು ಅಧಿಕಾರಿಗಳ ಸಮಿತಿಯಿಂದ ಘಟನೆ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆಜ್ಞಾಪಿಸಿದರು. ಮೇಲ್ನೋಟಕ್ಕೆ ಇದು ಮಾನವ ತಪ್ಪು ಮತ್ತು ನಿರ್ಲಕ್ಷ್ಯದ ಪ್ರಕರಣದಂತೆ ಕಂಡು ಬರುತ್ತಿದೆ. ತನಿಖೆಯ ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಡಿಎಂ ಆರ್ ಸಿ ಹೇಳಿಕೆ ತಿಳಿಸಿತು. ಈ ಮಗೆಂಟಾ ಮಾರ್ಗವು ಡಿಸೆಂಬರ್ ೨೫ರಂದು ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಗೊಳ್ಳಬೇಕಿತ್ತು. ಯೋಜನೆಯ ಮೊದಲ ಹಂತ ೨೦೧೫ರ ಕ್ರಿಸ್ಮಸ್ ವೇಳೆಗೆ ಅನುಷ್ಠಾನಗೊಂಡಿತ್ತು. ೨೦೧೬ರ ಆಗಸ್ಟ್ ತಿಂಗಳಿನಿಂದ ಕಲಿಂಡಿ ಕುಂಜ ಮತ್ತು ಕಲ್ಕಾಜಿ ಮಂದಿರ ವಿಭಾಗದಲ್ಲಿ ಪರೀಕ್ಷಾ ಚಾಲನೆ ಶುರುವಾಗಿತ್ತು. ದೆಹಲಿ ಮೆಟ್ರೋದ ೪ನೇ ಹಂತ ಕೂಡಾ ವಿಳಂಬವಾದ ಪರಿಣಾಮವಾಗಿ ಇದರ ವೆಚ್ಚ  ೬೦೦೦ ಕೋಟಿ ರೂಪಾಯಿಗಳಷ್ಟು ಏರುವ ನಿರೀಕ್ಷೆಯಿದೆ. ಕೇಂದ್ರ ಮತ್ತು ದೆಹಲಿ ಸರ್ಕಾರ ಜಪಾನ್ ಇಂಟನ್ ನ್ಯಾಷನಲ್ ಕೋ ಆಪರೇಟಿವ್ ಏಜೆನ್ಸಿ (ಜೆಐಸಿಎ) ನಿಧಿ ಒದಗಿಸುವ ಸಂಸ್ಥೆ ಆಗಿರಬೇಕೆ ಎಂಬ ಬಗ್ಗೆ ಇನ್ನೂ ನಿರ್ಧರಿಸಿಲ್ಲ. ಹೊಸ ಮೆಟ್ರೋ ನೀತಿಯ ಅಡಿಯಲ್ಲಿ ಖಾಸಗಿ ಹೂಡಿಕೆದಾರರನ್ನು ಭಾಗಿಗಳನ್ನಾಗಿ ಮಾಡಿಕೊಂಡು ಹೊಸ ಹಂತದ ಕಾಮಗಾರಿ ಕೈಗೆತ್ತಿಕೊಳ್ಳಬೇಕೆಂದು ನಿರ್ಧರಿಸಲಾಗಿದ್ದು, ಅದರ ಪ್ರಕಾರ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಬೇಕಾಗಿತ್ತು. ಒಂದೇ ಮೆಟ್ರೋದಲ್ಲಿ ೨೫೦೦-೩೦೦೦ ಮಂದಿ ಪ್ರಯಾಣ ಮಾಡಬಹುದು. ವಿಭಾಗದಲ್ಲಿ ಬರುವ ೧೨.೬೪ ಕಿಮೀ ದೂರದ ಬೊಟಾನಿಕಲ್ ಗಾರ್ಡನ್ - ಜನಕಪುರಿ ಪಶ್ಚಿಮ (ಮಗೆಂಟಾ) ಮಾರ್ಗಕ್ಕೆ  ಮೆಟ್ರೋ ರೈಲು ಸುರಕ್ಷತಾ (ಸಿಎಂಆರ್ ಎಸ್) ಕಮೀಷನರ್ ಕಳೆದ ತಿಂಗಳು ಸುರಕ್ಷತಾ ಒಪ್ಪಿಗೆ ನೀಡಿದ್ದರು. ಚಾಲಕರಿಲ್ಲದೆ ಚಲಿಸುವಂತಹ ಮೆಟ್ರೋದ ಹೊಸ ತಲೆಮಾರಿನ ರೈಲುಗಳು ಅತ್ಯಾಧುನಿಕ ಸಂಪರ್ಕ ಆಧಾರಿತ ರೈಲು ನಿಯಂತ್ರಣ (ಸಿಬಿಟಿಸಿ) ತಂತ್ರಜ್ಞಾನದ ಅಡಿಯಲ್ಲಿ ಕಾರ್ ಎಸಗುತ್ತವೆ. ತಂತ್ರಜ್ಞಾನದಲ್ಲಿ ೯೦-೧೦೦ ಸೆಕೆಂಡ್ ಗಳ ಆವರ್ತನದಲ್ಲಿ ರೈಲುಗಳನ್ನು ಓಡಿಸಲು ಸಾಧ್ಯವಿದೆ. ಏನಿದ್ದರೂ ಪ್ರಾರಂಭದ ಎರಡು ಮೂರು ವರ್ಷ ರೈಲುಗಳಲ್ಲಿ ಚಾಲಕರು ಸೇವೆಯಲ್ಲಿರುತ್ತಾರೆ.
2017: ಮಂಗಳೂರು: ಲಕ್ಷದ್ವೀಪ ಭೇಟಿಗಾಗಿ  ಮಂಗಳೂರಿಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಂಸದ ನಳಿನ್ಕುಮಾರ್ಕಟೀಲು ಅವರು ನಮೋ ಮಂಜುನಾಥ ಪುಸ್ತಕವನ್ನು ನೀಡಿದರು. ನಮೋ ಮಂಜುನಾಥ ಪುಸ್ತಕ ಪ್ರಧಾನಿ ನರೇಂದ್ರ ಮೋದಿ ಅವರ ಐತಿಹಾಸಿಕ ಧರ್ಮಸ್ಥಳ ಭೇಟಿಯ  ಚಿತ್ರಣವನ್ನು ಒಳಗೊಂಡಿದೆಧರ್ಮಸ್ಥಳದ ಪುಸ್ತಕ ಎಂದಾಕ್ಷಣ ಅಂತ್ಯಂತ ಖುಷಿಯಿಂದ ಪುಸ್ತಕವನ್ನು ಸ್ವೀಕರಿಸಿ ಸಂಪೂರ್ಣ ಓದುವುದಾಗಿ  ಹೇಳಿದ್ದಾರೆ ಎಂದು ವರದಿ ತಿಳಿಸಿತು. ಪ್ರಧಾನಿ ನರೇಂದ್ರ ಮೋದಿ ಒಖಿ  ಚಂಡಮಾರುತದಿಂದ ಸಂಭವಿಸಿದ ಹಾನಿಯನ್ನು ವೀಕ್ಷಿಸಲು ಲಕ್ಷದ್ವೀಪಕ್ಕೆ ಈದಿನ  ಬೆಳಗ್ಗೆ ತೆರಳಿದರುಸರ್ಕೀಟ್‌  ಹೌಸ್ನಲ್ಲಿ ಬೆಳಗ್ಗಿನ ಉಪಾಹಾರ ಸೇವಿಸಿ 7.30 ಸುಮಾರಿಗೆ ರಸ್ತೆ ಮಾರ್ಗವಾಗಿ ಮಂಗಳೂರು ವಿಮಾನ ನಿಲ್ದಾಣಕ್ಕೆ ತೆರಳಿ ಅಲ್ಲಿಂದ ವಾಯುಪಡೆಯ ವಿಶೇಷ ವಿಮಾನದ ಮೂಲಕ ಲಕ್ಷದ್ವೀಪಕ್ಕೆತೆರಳಿದರು.  ಒಖಿ ಚಂಡಮಾರುತ ಹಾನಿಯನ್ನು ವೀಕ್ಷಣೆ ಮಾಡಿ ಬಳಿಕ ತಿರುವನಂತಪುರ ಹಾಗೂ  ತಮಿಳುನಾಡಿಗೂ ತೆರಳುವ ಕಾರ್ಯಕ್ರಮವಿತ್ತು.
2017: ಇಸ್ಲಾಮಾಬಾದ್‌ : ತನ್ನನ್ನು ಅವಲಂಬಿಸಿರುವ ದೇಶಗಳು "ಆಗದು' ಎಂದು ಹೇಳುವುದನ್ನು ಚೀನ ಎಂದಿಗೂ ಸಹಿಸುವುದಿಲ್ಲ. ಇದಕ್ಕೆ ತಾಜಾ ಉದಾಹರಣೆ ಪಾಕಿಸ್ಥಾನ. ಚೀನ ಈಚೆಗೆ ಪಾಕಿಸ್ಥಾನಕ್ಕೆ ಅದರ  ಗ್ವಾದರ್  ಬಂದರಿನಲ್ಲಿ ತಾನು ನಡೆಸುವ ಎಲ್ಲ ವ್ಯಾಪಾರ ವಹಿವಾಟುಗಳನ್ನು ಚೀನದ "ಯುವಾನ್‌' ಕರೆನ್ಸಿಯಲ್ಲೇ ಮಾಡಬೇಕು ಎಂದು ತಾಕೀತು ಮಾಡಿತ್ತು. ಆದರೆ ಪಾಕಿಸ್ಥಾನ ಅದಕ್ಕೆ ಒಪ್ಪಿರಲಿಲ್ಲಇದರಿಂದ ಕುಪಿತಗೊಂಡ ಚೀನ ತಾನು ಸಿಪಿಇಸಿ ಯೋಜನೆಗೆ ಇನ್ನು ಹಣ ಒದಗಿಸುವುದಿಲ್ಲ ಎಂದು ಬೆದರಿಕೆ ಹಾಕಿತ್ತು. ಮಾತ್ರವಲ್ಲದೆ ಪಾಕ್ಆಕ್ರಮಿತ ಕಾಶ್ಮೀರದಲ್ಲಿ ನಿರ್ಮಾಣ ಹಂತದಲ್ಲಿರುವ ಬೃಹತ್ಅಣೆಕಟ್ಟಿಗೂ ತಾನಿನ್ನು ಹಣ ಪೂರೈಸುವುದಿಲ್ಲ ಎಂದು ಹೇಳಿತ್ತು. ಇದೀಗ ಚೀನದ ಉನ್ನತ ಅಧಿಕಾರಿಗಳೊಂದಿಗೆ  ನಡೆದ ಸಭೆಯಲ್ಲಿ ಪಾಕಿಸ್ಥಾನ ಚೀನಕ್ಕೆ ಸಂಪೂರ್ಣವಾಗಿ ಮಣಿದ ಅದರ ಎಲ್ಲ  ಶರತ್ತುಗಳನ್ನು ಒಪ್ಪಿಕೊಂಡಿತು ಎಂದು ಪಾಕ್ದೈನಿಕ ಡಾನ್ವರದಿ ಮಾಡಿತು. ಗ್ವಾದರ್  ಬಂದರಿನಲ್ಲಿ ನಡೆಯುವ ವ್ಯಾಪಾರ ವಹಿವಾಟನ್ನು ಚೀನೀ ಕರೆನ್ಸಿಯಲ್ಲೇ (ಡಾಲರ್ಗೆ ಸರಿಸಮ ನೆಲೆಯಲ್ಲಿ) ನಡೆಸವುದಕ್ಕೆ ಪಾಕ್ಒಪ್ಪಿಕೊಂಡಿತು. ಇದೇ ರೀತಿ ಉಭಯ ದೇಶಗಳ ನಡುವಿನ ಎಲ್ಲ ದ್ವಿಪಕ್ಷೀಯ ವಾಣಿಜ್ಯ ವಹಿವಾಟು ಇನ್ನು ಚೀನೀ ಕರೆನ್ಸಿಯಲ್ಲೇ ನಡೆಯಲಿದೆ. ಇದು ಪಾಕಿಸ್ಥಾನದ ಸಾರ್ವಭೌಮತೆಯ ಮೇಲೆ ದುಷ್ಪರಿಣಾಮ ಬೀರಲಿದೆ. ಉಭಯ ದೇಶಗಳ ನಡುವಿನ ಆರ್ಥಿಕ ವಹಿವಾಟಿನ ಎಲ್ಲ ಲಾಭಗಳು ಚೀನಕ್ಕೆ ಸಿಗಲಿವೆ ಎಂದಿರುವ ಡಾನ್‌, "ಸಿಪಿಇಸಿ ಯೋಜನೆ ನಿಜಕ್ಕೂ ಪಾಕಿಸ್ಥಾನಕ್ಕೆ ಬೇಕೇ' ಎಂದು ಪ್ರಶ್ನಿಸಿತು.
2017: ವಿಶ್ವಸಂಸ್ಥೆ: ಗಲ್ಫ್ವಲಯದಲ್ಲಿ 50 ಲಕ್ಷ ಭಾರತೀಯರು ನೆಲೆಸಿದ್ದು, ಸುಮಾರು 1.7 ಕೋಟಿ ಜನರು ಭಾರತದಿಂದ ವಿದೇಶಗಳಿಗೆ ವಲಸೆ ಹೋಗಿರುವುದಾಗಿ ವಿಶ್ವಸಂಸ್ಥೆ ವರದಿ ತಿಳಿಸಿತು. ಸ್ವದೇಶದಿಂದ ವಿದೇಶಗಳಿಗೆ ವಲಸೆ ಹೋಗಿರುವ ಜನಸಂಖ್ಯೆಯ ಆಧಾರದಲ್ಲಿ ವಿಶ್ವಸಂಸ್ಥೆ ಪಟ್ಟಿ ಸಿದ್ಧಪಡಿಸಿತು.. ಪಟ್ಟಿಯಲ್ಲಿ ಭಾರತ ಮೊದಲ ಸ್ಥಾನ ಪಡೆಯಿತು. ಮೆಕ್ಸಿಕೊ, ಸಿರಿಯಾ, ರಷ್ಯಾ, ಚೀನಾ, ಬಾಂಗ್ಲಾದೇಶ, ಪಾಕಿಸ್ತಾನ ಹಾಗೂ ಉಕ್ರೇನ್ರಾಷ್ಟ್ರಗಳಲ್ಲಿನ 60–110 ಲಕ್ಷ ಜನರು ವಿದೇಶಗಳಿಗೆ ವಲಸೆ ಹೋಗಿರುವುದಾಗಿ ‘2017 ಅಂತರರಾಷ್ಟ್ರೀಯ ವಲಸಿಗರ ವರದಿಯಲ್ಲಿ ಪ್ರಕಟಿಸಲಾಯಿತು. 2017 ಅಂತರರಾಷ್ಟ್ರೀಯ ವಲಸಿಗರ ಪಟ್ಟಿಯಲ್ಲಿ ಭಾರತ ಮೊದಲ ಸ್ಥಾನ (1.7 ಕೋಟಿ), ಮೆಕ್ಸಿಕೊ ಎರಡನೇ ಸ್ಥಾನ (1.3 ಕೋಟಿ)ದಲ್ಲಿದೆ. ಭಾರತೀಯರ ಪೈಕಿ 30 ಲಕ್ಷ ಜನ ಯುಎಇ, ಅಮೆರಿಕ ಹಾಗೂ ಸೌದಿ ಅರೇಬಿಯಾದಲ್ಲಿ ತಲಾ 20 ಲಕ್ಷ ಜನರು ನೆಲೆಸಿದ್ದಾರೆ. ಜಾಗತಿಕವಾಗಿ ಒಟ್ಟು 25.8 ಕೋಟಿ ಜನರು ತಮ್ಮ ಸ್ವಂತ ನೆಲೆಯಿಂದ ದೂರದ ವಿದೇಶಗಳಲ್ಲಿ ನೆಲೆ ಕಂಡುಕೊಂಡಿದ್ದಾರೆ. 2030 ಸುಸ್ಥಿರ ಅಭಿವೃದ್ಧಿ ಗುರಿ ಸಾಧನೆಯಲ್ಲಿ ಅಂಶ ನಿರ್ಣಾಯಕ ಪಾತ್ರವಹಿಸುತ್ತದೆ ಎನ್ನಲಾಯಿತು. ವಲಸೆಯ ಕಾರಣದಿಂದಾಗಿ 2000ರಿಂದ 2015 ನಡುವೆ ಉತ್ತರ ಅಮೆರಿಕದಲ್ಲಿ ಶೇ 42ರಷ್ಟು ಜನಸಂಖ್ಯೆ ಏರಿಕೆಯಾಗಿದ್ದರೆ, ಯುರೋಪ್ಭಾಗದಲ್ಲಿ ವಲಸಿಗರಿಲ್ಲದೆ ಒಟ್ಟು ಜನಸಂಖ್ಯೆ ಇಳಿಕೆಯಾಗಿತ್ತು. ವಲಸಿಗರ ಪಟ್ಟಿ(*ದಶಲಕ್ಷಗಳಲ್ಲಿ): ಭಾರತ –17 , ಮೆಕ್ಸಿಕೊ– 13, ರಷ್ಯಾ– 11, ಚೀನಾ– 10, ಬಾಂಗ್ಲಾದೇಶ– 7, ಸಿರಿಯಾ– 7, ಪಾಕಿಸ್ತಾನ– 6, ಉಕ್ರೇನ್‌– 6.


2016: ಚೆನ್ನೈಭಾರತಇಂಗ್ಲೆಂಡ್ಟೆಸ್ಟ್ಸರಣಿಯ ಕೊನೆಯ ಪಂದ್ಯದಲ್ಲಿ ತ್ರಿಶತಕ ಸಾಧನೆ ಮಾಡಿದ ಕರುಣ್ನಾಯರ್ಭಾರತ ಪರ ಟೆಸ್ಟ್ಕ್ರಿಕೆಟ್ನಲ್ಲಿ ತ್ರಿಶತಕ ಬಾರಿಸಿದ ಎರಡನೇ ಆಟಗಾರ ಎಂಬ ಶ್ರೇಯಕ್ಕೆ ಪಾತ್ರರಾದರು. ವೃತ್ತಿ ಜೀವನದ ಮೂರನೇ ಟೆಸ್ಟ್ ಪಂದ್ಯವನ್ನಾಡುತ್ತಿರುವ ಕನ್ನಡಿಗ ಕರುಣ್ ನಾಯರ್ ಟೆಸ್ಟ್ ಕ್ರಿಕೆಟ್ ಚೊಚ್ಚಲ ಶತಕ, ದ್ವಿಶತಕ ಅಂತಿಮವಾಗಿ ತ್ರಿಶತಕ ಸಿಡಿಸುವ ಮೂಲಕ ಇಂಗ್ಲೆಂಡ್ ವಿರುದ್ಧದ ಕೊನೆಯ ಟೆಸ್ಟ್ ಪಂದ್ಯದಲ್ಲಿ ಭಾರತ ಮೊದಲ ಇನ್ನಿಂಗ್ಸ್ನಲ್ಲಿ ಬೃಹತ್ ಮೊತ್ತ ದಾಖಲೆಗೆ ಹೆಗಲಾದರು. ಒಟ್ಟು 381ಎಸೆತಗಳನ್ನು ಎದುರಿಸಿದ ಕರುಣ್‌ 303 ರನ್ಗಳಿಸಿ ಸಾಧನೆ ಮಾಡಿದರುಕೆಎಲ್ರಾಹುಲ್‌(199) ಹಾಗೂ ಕರುಣ್ಆಕರ್ಷಕ ಬ್ಯಾಟಿಂಗ್ನೆರವಿನಿಂದ 7 ವಿಕೆಟ್ ನಷ್ಟಕ್ಕೆ ಒಟ್ಟು 759ರನ್ಗಳಿಸಿರುವ ಅತಿಥೇಯರು ಮೊದಲ ಇನಿಂಗ್ಸ್ 282ರನ್ಗಳ ಬಾರೀ ಮುನ್ನಡೆಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿದರು. 185 ಎಸೆತಗಳಲ್ಲಿ ಶತಕ ಬಾರಿಸಿದ ಕರುಣ್ದ್ವಿಶತಕ ಗಳಿಸಲು 306 ಎಸೆತಗಳ ವರೆಗೆ ಕಾದಿದ್ದರು. ದ್ವಿಶತಕದ ನಂತರ ರನ್ಗಳಿಕೆಯ ವೇಗ ಹೆಚ್ಚಿಸಿಕೊಂಡ ಅವರು ನಂತರ ತ್ರಿಶತಕದ ಗಡಿ ದಾಟಲು ತೆಗೆದು ಕೊಂಡದ್ದು ಕೇವಲ 75 ಎಸೆತಗಳನ್ನು. ಮೂಲಕ ಆಂಗ್ಲ ಬೌಲರ್ಗಳ ಬೆವರಿಳಿಸಿದರು. ಟಾಸ್ಜಯಿಸಿ ಬ್ಯಾಟಿಂಗ್ಆರಂಭಿಸಿದ್ದ ಇಂಗ್ಲೆಂಡ್ಮೊದಲ ಇನಿಂಗ್ಸ್ನಲ್ಲಿ 477 ರನ್ಗಳ ಸವಾಲಿನ ಮೊತ್ತ ದಾಖಲಿಸಿ, ಸರಣಿಯಲ್ಲಿ ಒಂದಾದರೂ ಗೆಲುವು ಪಡೆಯುವ ನಿರೀಕ್ಷೆಯಲ್ಲಿತ್ತು. ಆದರೆ ಆಂಗ್ಲರ ಲೆಕ್ಕಾಚಾರವನ್ನು ಬುಡಮೇಲು ಮಾಡಿದ ಆತಿಥೇಯ ಬ್ಯಾಟ್ಸ್ಮನ್ಗಳು ಪ್ರವಾಸಿ ತಂಡವನ್ನು ಮತ್ತಷ್ಟು ಒತ್ತಡಕ್ಕೆ ಸಿಲುಕಿಸಿದರು. ಭಾರತದ ಪರ ಹಿಂದಿನ ದಿನ ಭರ್ಜರಿ ಬ್ಯಾಟಿಂಗ್ನಡೆಸಿದ್ದ ಕರ್ನಾಟಕದ ಮತ್ತೊಬ್ಬ ದಾಂಡಿಗ ಕೆ.ಎಲ್ರಾಹುಲ್ಅತ್ಯುತ್ತಮ ಪ್ರದರ್ಶನದ ಹೊರತಾಗಿಯೂ (199) ದ್ವಿಶತಕದ ಹೊಸ್ತಿಲಲ್ಲಿ ಮುಗ್ಗರಿಸಿ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದ್ದರು. ಆದರೆ ನಿರಾಸೆಯನ್ನು ಮರೆಸುವಂತೆ ಚೆಂದದ ಇನಿಂಗ್ಸ್ಕಟ್ಟಿದ ಕರುಣ್ನಾಯರ್ಸಾಧನೆಯನ್ನು ಸಹ ಆಟಗಾರರು ಅಭಿನಂದಿಸಿದರು. ಒಟ್ಟು 32 ಬೌಂಡರಿ ಹಾಗೂ 4 ಸಿಕ್ಸರ್ಬಾರಿಸಿದ ಕರುಣ್ತಮ್ಮ ಸೊಗಸಾದ ಇನಿಂಗ್ಸ್ ಮೂಲಕ ಅಭಿಮಾನಿಗಳನ್ನು ರಂಜಿಸಿದರು. ಕರಣ್ ಅವರ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಎಲ್ಲೆಡೆಯಿಂದ ಅಭಿನಂದನೆಗಳ ಸುರಿಮಳೆಯಾಯಿತು.
2016: ನವದೆಹಲಿಸುಪ್ರೀಂಕೋರ್ಟ್ ಮುಂದಿನ ಮುಖ್ಯ ನ್ಯಾಯಮೂರ್ತಿಯನ್ನಾಗಿ
ನ್ಯಾಯಮೂರ್ತಿ ಜಗದೀಶ್ಸಿಂಗ್ಖೇಹರ್ಅವರನ್ನು ನೇಮಕ ಮಾಡಲಾಯಿತು. ಮೂಲಕ ಸಿಖ್ಧರ್ಮದ ವ್ಯಕ್ತಿಯೊಬ್ಬರು ಇದೇ ಮೊದಲ ಬಾರಿಗೆ ದೇಶದ ನ್ಯಾಯಾಂಗ ವ್ಯವಸ್ಥೆಯ ಸರ್ವೋಚ್ಚ ಹುದ್ದೆಯನ್ನು ಅಲಂಕರಿಸಲಿದ್ದಾರೆ. ಜೆ.ಎಸ್‌. ಖೇಹರ್ನೇಮಕಕ್ಕೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಒಪ್ಪಿಗೆ ಸೂಚಿಸಿದರು. ಆದೇಶ ಪ್ರತಿ ಮಂಗಳವಾರ ಖೇಹರ್ಅವರ ಕೈ ಸೇರಲಿದೆ ಎಂದು ಸರ್ಕಾರದ ಮೂಲಗಳು ತಿಳಿಸಿದವು. 44ನೇ ಮುಖ್ಯ ನ್ಯಾಯಮೂರ್ತಿಯಾಗಿ 64 ವರ್ಷದ ಖೇಹರ್ಅವರು 2017 . 4ರಂದು ಅಧಿಕಾರ ಸ್ವೀಕರಿಸಲಿದ್ದಾರೆ. 2017 . 4ರಿಂದ 2017 ಆಗಸ್ಟ್‌ 27ರವರೆಗೆ ಹುದ್ದೆಯಲ್ಲಿರುತ್ತಾರೆ. ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಹಾಗೂ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ಸೇವೆ ಸಲ್ಲಿಸಿದ್ದ ಖೇಹರ್ಅವರನ್ನು ಮುಖ್ಯ ನ್ಯಾಯಮೂರ್ತಿಯನ್ನಾಗಿ ನೇಮಕ ಮಾಡುವಂತೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಟಿ.ಎಸ್‌. ಠಾಕೂರ್ಅವರು ಶಿಫಾರಸು ಮಾಡಿದ್ದರು. ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸುತ್ತಿರುವ ಟಿ.ಎಸ್‌. ಠಾಕೂರ್ಅವರು 2017 . 3ರಂದು ನಿವೃತ್ತರಾಗುವರು.
2016: ಹೈದರಾಬಾದ್: 2013 ಹೈದರಾಬಾದ್ಅವಳಿ ಸ್ಫೋಟ ಪ್ರಕರಣದ ಆರೋಪಿಗಳಾದ
ಇಂಡಿಯನ್ ಮುಜಾಹಿದ್ದೀನ್ಸಂಘಟನೆಯ ಯಾಸೀನ್ ಭಟ್ಕಳ ಹಾಗೂ ಇತರ ನಾಲ್ವರಿಗೆ ರಾಷ್ಟ್ರೀಯ ತನಿಖಾ ದಳದ (ಎನ್ಐಎ) ವಿಶೇಷ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿತು. ಹೈದರಾಬಾದ್ ದಿಲ್ಸುಖ್ನಗರದಲ್ಲಿ 2013 ಫೆ.21ರಂದು ಸ್ಫೋಟ ಸಂಭವಿಸಿತ್ತು. ಘಟನೆಯಲ್ಲಿ 18 ಮಂದಿ ಸಾವಿಗೀಡಾಗಿದ್ದರು. 131 ಮಂದಿ ಗಾಯಗೊಂಡಿದ್ದರು. ಆರೋಪಿಗಳಾದ ಯಾಸೀನ್ಭಟ್ಕಳ ಹಾಗೂ ಉತ್ತರ ಪ್ರದೇಶದ ಅಸಾದುಲ್ಲಾ ಅಖ್ತರ್ ಮತ್ತು ಪಾಕಿಸ್ತಾನದ ಜಿಯಾಉರ್‌–ರಹಮಾನ್ಅಲಿಯಸ್ವಖಾಸ್‌, ಮಹಾರಾಷ್ಟ್ರದ ಅಜೀಜ್ ಸಯಿದ್‌, ಬಿಹಾರದ ತಾಹ್ ಸೇನ್ ಅಖ್ತರ್ ಅಲಿಯಾಸ್ಮೋನು ಪ್ರಕರಣದ ಅಪರಾಧಿಗಳು ಎಂದು ಎನ್ಐಎ ವಿಶೇಷ ನ್ಯಾಯಾಲಯ ಘೋಷಿಸಿತ್ತು. ‘ಎನ್ಐಎ ತಂಡ ನಡೆಸಿದ ಅದ್ಭುತ ತನಿಖೆ ಇದಾಗಿದೆ. ಪ್ರತಿಯೊಂದು ಸಾಕ್ಷ್ಯಾಧಾರಗಳನ್ನು ಅತ್ಯಂತ ಸೂಕ್ಷ್ಮವಾಗಿ ಪರಿಶೀಲಿಸಲಾಗಿದೆ. ಇಂಡಿಯನ್ ಮುಜಾಹಿದ್ದೀನ್ಸಂಘಟನೆಯ ಉಗ್ರರಿಗೆ ಶಿಕ್ಷೆ ನೀಡಿದ ಪ್ರಥಮ ಪ್ರಕರಣ ಇದಾಗಿದೆಎಂದು ಎನ್ಐಎ ಮಹಾ ನಿರ್ದೇಶಕ ಶರದ್ಕುಮಾರ್ಹೇಳಿದರು. ಸ್ಫೋಟ ಸಂಭವಿಸಿದ ವೇಳೆ ಘಟನಾಸ್ಥಳದ ಸಮೀಪವೇ ಯಾಸೀನ್ ಹಾಜರಿದ್ದುದು ಸಿ.ಸಿ ಟಿ.ವಿ ದೃಶ್ಯಾವಳಿಗಳಿಂದ ಧೃಡಪಟ್ಟಿದೆ ಎಂದು ಎನ್ಐಎ ವರದಿಯಲ್ಲಿ ತಿಳಿಸಿತ್ತು. ಪ್ರಕರಣದ ಮುಖ್ಯ ಆರೋಪಿ ಇಂಡಿಯನ್ ಮುಜಾಹಿದೀನ್ ಸಂಸ್ಥಾಪಕ ರಿಯಾಜ್ ಭಟ್ಕಳ್ ತಲೆತಪ್ಪಿಸಿಕೊಂಡಿದ್ದಾನೆ.
2016: ಅಸ್ಸಾಮ್ಅಸ್ಸಾಮ್ ರಾಜ್ಯದ ಪ್ರವಾಸೋದ್ಯಮ ಪ್ರಚಾರ ರಾಯಭಾರಿಯಾಗಿ ಪ್ರಿಯಾಂಕಾ ಚೋಪ್ರಾ ಅವರೊಂದಿಗೆ ಎರಡು ವರ್ಷಗಳ ವರೆಗೆ ಒಪ್ಪಂದ ಮಾಡಿಕೊಂಡಿರುವುದಾಗಿ ಆಯ್ಕೆ ಅಸ್ಸಾಮ್  ರಾಜ್ಯ ಸರ್ಕಾರ ತಿಳಿಸಿತು.  ಪ್ರವಾಸೋದ್ಯಮ ಸಚಿವ ಹಿಮಾಂತ ಬಿಸ್ವ ಶರ್ಮಾ ಅವರು ಮೊದಲು ತಮ್ಮ ರಾಜ್ಯದ ಪ್ರವಾಸೋದ್ಯಮದ ಪ್ರಚಾರ ರಾಯಭಾರಿಯಾಗುವಂತೆ ಕ್ರಿಕೆಟ್ದಂತಕತೆ ಸಚಿನ್ತೆಂಡುಲ್ಕರ್ಅವರಿಗೆ ಆಹ್ವಾನ ನೀಡಿದ್ದೆವು. ಆದರೆ ಅವರು ಇದಕ್ಕೆ ಒಪ್ಪದ ಕಾರಣ ನಾವು ಪ್ರಿಯಾಂಕಾ ಚೋಪ್ರಾರಿಗೆ ಆಹ್ವಾನ ನೀಡಿದ್ದೆವು. ನಮ್ಮ ಮನವಿಯನ್ನು ಪುರಸ್ಕರಿಸಿರುವ ಅವರು ಯಾವುದೇ ಸಂಭಾವನೆ ಪಡೆಯದೆ, ರಾಯಭಾರಿಯಾಗುವುದಾಗಿ ಒಪ್ಪಿಕೊಂಡ್ಡಿದ್ದಾರೆ. ಸಂಬಂಧ ಈಗಾಗಲೇ ಎರಡು ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದ್ದಾರೆಎಂದು ತಿಳಿಸಿದರು.
2016: ನವದೆಹಲಿ: ಪಠಾಣ್ ಕೋಟ್ ವಾಯುನೆಲೆ ಮೇಲಿನ ದಾಳಿ ಪ್ರಕರಣದ ತನಿಖೆ ನಡೆಸಿದ್ದ 
ರಾಷ್ಟ್ರೀಯ ತನಿಖಾ ದಳ ವು (ಎನ್ಐಎ) ಜೈಷ್ಮೊಹಮದ್  (ಜೆಇಎಂ) ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ಮತ್ತು ಇತರ ನಾಲ್ವರು ಭಯೋತ್ಪಾದಕರು ಈದಾಳಿಯ  ರೂವಾರಿಗಳು ಎಂದು  ದೋಷಾರೋಪ ಪಟ್ಟಿಯಲ್ಲಿ (ಚಾರ್ಜ್ ಶೀಟ್) ಹೆಸರಿಸಿತು. ಕಳೆದ ಜನವರಿ ತಿಂಗಳಲ್ಲಿ ಪಂಜಾಬ್ ಪಠಾಣ್ ಕೋಟ್ ವಾಯುನೆಲೆ ಮೇಲೆ  ದಾಳಿ ಮಾಡಲಾಗಿತ್ತು ದಾಳಿಯ ತನಿಖೆ ಕೈಗೊಂಡಿದ್ದ ಎನ್ಐಎ  ಇಲ್ಲಿನ ಪಂಚಕುಲ ವಿಶೇಷ ನ್ಯಾಯಲಯಕ್ಕೆ   ಚಾರ್ಜ್ ಶೀಟ್ ಸಲ್ಲಿಸಿತು. ಜೈಷ್ ಮೊಹಮದ್ ಉಗ್ರ ಸಂಘಟನೆಯ  ಮೌಲಾನಾ ಅಜರ್ ಮಸೂದ್ಅಸ್ಗರ್ ರೌವೂಫ್ ಅವರನ್ನು ದಾಳಿಯ ರೂವಾರಿಗಳು ಎಂದು ಚಾರ್ಜ್ಶೀಟ್ನಲ್ಲಿ ಉಲ್ಲೇಖ ಮಾಡಲಾಯಿತು.  ದಾಳಿಗೆ ಸಂಬಂಧಿಸಿದ ಸಾಕ್ಷ್ಯಗಳುವಿಡಿಯೊಗಳು ಮತ್ತು ಮೊಬೈಲ್ಮಾತುಕತೆಯ ಆಡಿಯೊಗಳನ್ನು ಕೋರ್ಟ್ಗೆ ಸಲ್ಲಿಸಲಾಯಿತು. ಜನವರಿ ತಿಂಗಳಲ್ಲಿ ನಡೆದ ಎರಡು ದಾಳಿಗಳಲ್ಲಿ 7 ಮಂದಿ ಸೇನಾ ಸಿಬ್ಬಂದಿ ಹುತಾತ್ಮರಾಗಿ ಇತರ 37 ಮಂದಿ ಗಾಯಗೊಂಡಿದ್ದರು. ಭಾರತೀಯ ದಂಡ ಸಂಹಿತೆ, ಸ್ಪೋಟಕ ವಸ್ತುಗಳ ಕಾಯ್ದೆ, ಶಸ್ತ್ರಾಸ್ತ್ರ ಕಾಯ್ದೆ ಮತ್ತು ಅಕ್ರಮ ಚಟುವಟಿಕೆಗಳ ಕಾಯ್ದೆ ಅಡಿಯಲ್ಲಿ ಎಲ್ಲ ನಾಲ್ವರೂ ಆರೋಪಿಗಳ ವಿರುದ್ಧ ಆರೋಪಗಳನ್ನು ಹೊರಿಸಲಾಯಿತು. ಅಜರ್ ಹೊರತಾಗಿ, ಆತನ ಸಹೋದರ ಮುಫ್ತಿ ಅಬ್ದುಲ್ ರೌಫ್ ಅಸ್ಗರ್, ಶಾಹಿದ್ ಲತೀಫ್ ಮತ್ತು ಕಾಶಿಫ್ ಜನ್ ಅವರನ್ನು ದೋಷಾರೋಪ ಪಟ್ಟಿಯಲ್ಲಿ ಹೆಸರಿಸಲಾಯಿತು.
 2016: ಕಾನ್ಪುರ (ಉತ್ತರ ಪ್ರದೇಶ): ‘ನಮ್ಮ ಅಜೆಂಡಾ ಭ್ರಷ್ಟಾಚಾರವನ್ನು ಸ್ಥಗಿತಗೊಳಿಸುವುದು.
ಅವರ (ವಿರೋಧ ಪಕ್ಷಗಳು) ಅಜೆಂಡಾ ಸಂಸತ್ತನ್ನು ಸ್ಥಗಿತಗೊಳಿಸುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕಾನ್ಪುರದಲ್ಲಿ ವಿರೋಧ ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡರು. ವಿಧಾನಸಭಾ ಚುನಾವಣೆಗೆ ಸಜ್ಜಾಗುತ್ತಿರುವ ಉತ್ತರ ಪ್ರದೇಶದ ಕಾನ್ಪುರದಲ್ಲಿ ಪರಿವರ್ತನಾ ಸಮಾವೇಶವನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು, ಸಂಸತ್ತಿನಲ್ಲಿ ಭ್ರಷ್ಟಾಚಾರಿಗಳಿಗೆ ನೆರವಾಗುವಂತಹ ಘೊಷಣೆ ಕೂಗುತ್ತಿರುವುದನ್ನು ನಾನು ಇದೇ ಮೊತ್ತ ಮೊದಲ ಬಾರಿಗೆ ನಾನು ನೋಡುತ್ತಿದ್ದೇನೆ ಎಂದು ಹೇಳಿದರು. ರಾಜ್ಯದಲ್ಲಿ ಮೋದಿ ಅವರು ಭಾಷಣ ಮಾಡಿದ 6ನೇ ಪರಿವರ್ತನಾ ಸಮಾವೇಶ ಇದು. ಉತ್ತರ ಪ್ರದೇಶದಲ್ಲಿ ಜನರು ಸರ್ಕಾರವನ್ನು ಬದಲಾಯಿಸುವವರೆಗೆ ಗೂಂಡಾಗಿರಿ ನಿಲ್ಲುವುದಿಲ್ಲ ಎಂದು ಹೇಳಿದ ಪ್ರಧಾನಿ, ಯುವಕರಿಗೆ ಅವಕಾಶ ಮತ್ತು ಸವಲತ್ತುಗಳನ್ನು ಕಲ್ಪಿಸಿಕೊಟ್ಟರೆ ಅವರು ರಾಷ್ಟ್ರದ ಪ್ರಗತಿಗೆ ಅಪಾರ ಪ್ರಮಾಣದ ಕಾಣಿಕೆ ಸಲ್ಲಿಸಬಲ್ಲರು. ಉತ್ತರ ಪ್ರದೇಶದಲ್ಲಿ ಯುವಕರನ್ನು ಸಬಲರನ್ನಾಗಿ ಮಾಡಲು ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ ಎಂದು ಪ್ರಧಾನಿ ಹೇಳಿದರು. ನಾನು ಕೆಲವು ದಿನಗಳ ಹಿಂದೆ ಉತ್ತರಪ್ರದೇಶಕ್ಕೆ ಹೋದಾಗ ಗಮನಿಸಿದ ವಿಷಯ ಏನೆಂದರೆ ಅಲ್ಲಿನ ಜನರು ಬದಲಾಗಿದ್ದಾರೆ. ಅಲ್ಲಿ ಬದಲಾವಣೆಯ ಗಾಳಿ ಬೀಸಿದೆ, ಅದು ಬರೀ ಗಾಳಿಯಲ್ಲ ಬಿರುಗಾಳಿ! ಉತ್ತರ ಪ್ರದೇಶದಲ್ಲಿರುವ ಪ್ರತಿಯೊಬ್ಬ ಪ್ರಜೆಯೂ ಬದಲಾವಣೆ ತರಲು ಪ್ರಯತ್ನಿಸುತ್ತಿದ್ದಾರೆ ಎಂದು ಮೋದಿ ಹೇಳಿದರು. ಕೌಶಲ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಕೈಗೊಂಡಿರುವ ಯೋಜನೆಗಳ ಬಗ್ಗೆ ಉಲ್ಲೇಖಿಸಿದ ಮೋದಿ, ವಿಶೇಷವಾಗಿ ಉತ್ತರ ಪ್ರದೇಶದಲ್ಲಿರುವ ಯುವಕರ ಅಭಿವೃದ್ಧಿಗಾಗಿ  ಸರ್ಕಾರ ಹಲವು ಯೋಜನೆಗಳನ್ನು ಕೈಗೊಂಡಿದೆ ಎಂದರು. ಅದೇ ವೇಳೆ ವಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡ ಪ್ರಧಾನಿ, ಭ್ರಷ್ಟಾಚಾರ ಮತ್ತು ಕಪ್ಪುಹಣವನ್ನು ನಿರ್ಮೂಲನೆ ಮಾಡುವುದು ನಮ್ಮ ಸರ್ಕಾರದ ಕಾರ್ಯಸೂಚಿ. ಆದರೆ ಸಂಸತ್ನಲ್ಲಿ ಕೋಲಾಹಲ ಸೃಷ್ಟಿಸುವುದು ವಿಪಕ್ಷಗಳ ಕಾರ್ಯಸೂಚಿ ಎಂದರು. ತಮ್ಮ ಬಣ್ಣ ಬಯಲಾಗುತ್ತದೆ ಎಂಬ ಭಯದಿಂದ ಅವರು (ವಿಪಕ್ಷಗಳು) ಸದನದಲ್ಲಿ ಗದ್ದಲವೆಬ್ಬಿಸಿ, ಕಲಾಪಕ್ಕೆ ತಡೆಯೊಡ್ಡುತ್ತಿದ್ದಾರೆ. ನಮ್ಮ ಸರ್ಕಾರ ಭ್ರಷ್ಟಾಚಾರವನ್ನು ಬಯಲಿಗೆಳೆಯಲು ಬಯಸಿದರೆ, ಅವರು ಭ್ರಷ್ಟರಿಗೆ ಬೆಂಬಲ ನೀಡುತ್ತಾರೆ ಎಂದು ಮೋದಿ ದೂರಿದರು.
2016: ಚೆನ್ನೈ: ತಮಿಳುನಾಡಿನ ಮಸೀದಿಗಳಲ್ಲಿ ಇನ್ನು ಮುಂದೆ ಅನಧಿಕೃತಷರಿಯಾ
ನ್ಯಾಯಾಲಯಗಳು ಕಾರ್ಯ ನಿರ್ವಹಿಸುವಂತಿಲ್ಲ. ಮದ್ರಾಸ್ ಹೈಕೋರ್ಟ್ ಇಂತಹ ಅಕ್ರಮ ನ್ಯಾಯಾಲಯಗಳನ್ನು ನಿಷೇಧಿಸಿತು. ಧಾರ್ಮಿಕ ಸ್ಥಳಗಳು ಮತ್ತು ಪ್ರಾರ್ಥನಾ ಸ್ಥಳಗಳನ್ನು ಧಾರ್ಮಿಕ ಉದ್ದೇಶಗಳಿಗೆ ಮಾತ್ರವೇ ಬಳಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಮತ್ತು ನ್ಯಾಯಮೂರ್ತಿ ಸುಂದರ್ ಅವರನ್ನು ಒಳಗೊಂಡ ಪೀಠ ಸ್ಪಷ್ಟ ಪಡಿಸಿತು. ಇಂತಹ ಅನಧಿಕೃತ ನ್ಯಾಯಾಲಯಗಳು ನಡೆಯದಂತೆ ಸರ್ಕಾರ ಖಾತರಿ ನೀಡಬೇಕು ಮತ್ತು ನಾಲ್ಕು ವಾರಗಳ ಒಳಗೆ ವಸ್ತುಸ್ಥಿತಿ ವರದಿಯನ್ನು ಸಲ್ಲಿಸಬೇಕು ಎಂದು ಹೈಕೋರ್ಟ್ ನಿರ್ದೇಶಿಸಿತು. ಅನಿವಾಸಿ ಭಾರತೀಯ ಅಬ್ದುಲ್ ರಹಮಾನ್ ಅವರು ಚೆನ್ನೈ ಅಣ್ಣಾ ಸಲಾಯಿಯಲ್ಲಿನ ಮಸೀದಿಯಲ್ಲಿ ನಿಯಮಿತ ನ್ಯಾಯಾಲಯದಂತೆಯೇ ಮಕ್ಕಾ ಮಸೀದಿ ಷರಿಯ ನ್ಯಾಯಾಲಯ ಕಾರ್ಯ ನಿರ್ವಹಿಸುತ್ತಿದೆ ಎಂದು ಮದ್ರಾಸ್ ಹೈಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದರು. ವೈವಾಹಿಕ ವಿವಾದಗಳ ಬಗ್ಗೆ ವಿಚಾರಣೆ ನಡೆಸುವ ಷರಿಯಾ ಕೋರ್ಟ್ ಕಕ್ಷಿದಾರರಿಗೆ ನೋಟಿಸ್ ಕಳುಹಿಸಿ, ವಿಚಾರಣೆ ನಡೆಸಿ ವಿಚ್ಛೇದನಾ ಆದೇಶಗಳನ್ನು ಹೊರಡಿಸುತ್ತದೆ ಎಂದು ರಹಮಾನ್ ತಮ್ಮ ದೂರಿನಲ್ಲಿ ತಿಳಿಸಿದ್ದರು. ದೊಡ್ಡ ಸಂಖ್ಯೆಯ ಮುಗ್ಧ ಮುಸ್ಲಿಮರ ಹಿತಾಸಕ್ತಿ ರಕ್ಷಣೆಗಾಗಿ ಅರ್ಜಿ ಸಲ್ಲಿಸಲಾಗಿತ್ತು. ಭಾರಿ ಸಂಖ್ಯೆಯ ಮುಗ್ಧ ಮುಸ್ಲಿಮರು ಷರಿಯಾ ನ್ಯಾಯಾಲಯ/ ಮಂಡಳಿಗಳ ಕೈಯಲ್ಲಿ ಸಿಕ್ಕಿಕೊಂಡು ಮೌನವಾಗಿ ನರಳುತ್ತಿದ್ದಾರೆ ಎಂದು ಅರ್ಜಿದಾರರ ವಕೀಲ . ಸಿರಾಜುದ್ದೀನ್ ಹೇಳಿದರು.
2016: ನವದೆಹಲಿ: ನೌಕರರ ಭವಿಷ್ಯ ನಿಧಿ ಠೇವಣಿಗೆ ನೀಡಲಾಗುತ್ತಿದ್ದ  ಶೇ. 8.8ರಷ್ಟು
ಬಡ್ಡಿದರವನ್ನು ನೌಕರರ ಭವಿಷ್ಯ ನಿಧಿ ಸಂಘಟನೆ ಶೇ. 8.65ಕ್ಕೆ ಇಳಿಕೆ ಮಾಡಿತು.  ನೌಕರರ ಭವಿಷ್ಯ ನಿಧಿ ಸಂಘಟನೆಯ ಕೇಂದ್ರ  ಟ್ರಸ್ಟಿಗಳು ಬಡ್ಡಿದರ ಇಳಿಕೆ ಬಗ್ಗೆ ಈದಿನ  ನಿರ್ಧಾರ ಕೈಗೊಂಡರು ಎಂದು ಟ್ರೇಡ್ ಯೂನಿಯನ್ ಕಾಂಗ್ರೆಸ್ ಉಪಾಧ್ಯಕ್ಷ ಅಶೋಕ್ ಸಿಂಗ್ ಹೇಳಿದರು. ಪ್ರಸ್ತುತ ಆರ್ಥಿಕ ವರ್ಷದ ಆರಂಭದಲ್ಲಿ ನೌಕರರ ಭವಿಷ್ಯ ನಿಧಿ ಬಡ್ಡಿದರವನ್ನು ಶೇ.8.8ರಿಂದ ಶೇ.8.7ಕ್ಕೆ ಇಳಿಕೆ ಮಾಡಲು ತೀರ್ಮಾನಿಸಿದ್ದರೂ ಇದಕ್ಕೆ ವಿರೋಧ ವ್ಯಕ್ತವಾಗಿದ್ದರಿಂದ ನಿರ್ಧಾರವನ್ನು ಕೈ ಬಿಡಲಾಗಿತ್ತು. ಇಪಿಎಫ್ಒ ತೆಗೆದುಕೊಂಡಿರುವ ನಿರ್ಧಾರದಿಂದ ಇಪಿಎಫ್ಒ ಸದಸ್ಯರಾಗಿರುವ ನಾಲ್ಕು ಕೋಟಿ ನೌಕರರ ಠೇವಣಿಯನ್ನು ಇದು ಬಾಧಿಸಲಿದೆ. ಸೆಪ್ಟೆಂಬರ್ ತಿಂಗಳಿನಲ್ಲಿ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿನ ದರವನ್ನು ಸರ್ಕಾರ ಕೊಂಚ ಇಳಿಕೆ ಮಾಡಿತ್ತು. ಇದರಿಂದ ಪಿಪಿಎಫ್, ಕಿಸಾನ್ ವಿಕಾಸ್ ಪತ್ರ, ಸುಕನ್ಯಾ ಸಮೃದ್ಧಿ ಯೋಜನೆ ಮುಂತಾದ ಉಳಿತಾಯ ಯೋಜನೆಗಳಿಂದ ಕಡಿಮೆ ರಿಟರ್ನ್ಸ್ ಬಂದಿತ್ತು.
2016: ನವದೆಹಲಿ: 2016 ಡಿಸೆಂಬರ್ 30 ವರೆಗಿನ ಅವಧಿಯಲ್ಲಿ 5000 ರೂಪಾಯಿಗಳಿಗಿಂತ
ಹೆಚ್ಚಿನ ಮೌಲ್ಯದ ಹಳೆಯ ನೋಟುಗಳನ್ನು ಒಂದು ಖಾತೆಯಲ್ಲಿ ಒಂದು ಬಾರಿ ಮಾತ್ರ ಮಾಡಲು ಅವಕಾಶ ನೀಡಲಾಗಿದೆ ಎಂದು ವಿತ್ತ ಸಚಿವಾಲಯದ ಪ್ರಕಟಣೆಯೊಂದು ತಿಳಿಸಿತು. ಪ್ರಕಟಣೆಯ ಪ್ರಕಾರ 2016 ಡಿಸೆಂಬರ್ 30ರವರೆಗಿನ ಅವಧಿಯಲ್ಲಿ ಇನ್ನು ಮುಂದೆ ಹಳೆ ನೋಟುಗಳನ್ನು ಖಾತೆಗೆ ಜಮಾ ಮಾಡುವುದಿದ್ದರೆ 5000 ರೂಪಾಯಿಗಳ ಒಳಗಿನ ಮೊತ್ತವನ್ನು ಮಾತ್ರವೇ ಜಮಾ ಮಾಡಬಹುದು. ಕೆವೈಸಿ ಮಿತಿಗಳ ಪ್ರಕಾರ ಒಂದು ಖಾತೆಗೆ ಅವಧಿಯಲ್ಲಿ ಜಮಾ ಮಾಡಬಹುದಾದ ಗರಿಷ್ಠ ಮೊತ್ತ 50,000 ರೂ.ಗಳಾಗಿದ್ದು, ಅದಕ್ಕಿಂತ ಹೆಚ್ಚಿನ ಮೊತ್ತದ ಹಣವನ್ನು ಜಮಾ ಮಾಡಿದಲ್ಲಿ ಅದು ಭಾರತೀಯ ರಿಸರ್ವ್ ಬ್ಯಾಂಕಿನ ನಿಯಮಗಳಿಗೆ ಒಳಪಡುತ್ತದೆ ಎಂದು ಪ್ರಕಟಣೆ ತಿಳಿಸಿದೆ. ಜಿಲ್ಲಾ ಮತ್ತು ಕೇಂದ್ರ ಸಹಕಾರಿ ಬ್ಯಾಂಕುಗಳಲ್ಲಿ 2016 ನವೆಂಬರ್ 10ರಿಂದ 14ರವರೆಗಿನ ಅವಧಿಯಲ್ಲಿ ವ್ಯಕ್ತಿಗಳು ಅಥವಾ ಕ್ರೆಡಿಟ್ ಸೊಸೈಟಿಗಳಿಂದ ಜಮಾ ಮಾಡಲಾದ ಹಣವು ಭಾರತೀಯ ರಿಸರ್ವ್ ಬ್ಯಾಂಕ್ ನೀಡುವ ಸೂಚನೆಗಳ ವ್ಯಾಪ್ತಿಗೆ ಒಳಪಡುತ್ತದೆ ಎಂದೂ ವಿತ್ತ ಸಚಿವಾಲಯದ ಪ್ರಕಟಣೆ ತಿಳಿಸಿತು. 



2014: ಅಹಮದಾಬಾದ್: ಗುಜರಾತಿನಲ್ಲಿ 'ಚುನಿ ಕಾಕಾ' ಎಂದೇ ಖ್ಯಾತರಾಗಿದ್ದ ಹಿರಿಯ ಗಾಂಧಿವಾದಿ ಹಾಗೂ ಭೂಮಿಯ ಹಕ್ಕುಗಳ ಹೋರಾಟಗಾರ ಚುನಿಭಾಯಿ ವೈದ್ಯ (97) ಅವರು ವಯೋಮಾನ ಸಂಬಂಧಿ ಅಸ್ವಸ್ಥತೆ ಕಾರಣ ಈದಿನ ಅಹಮದಾಬಾದಿನಲ್ಲಿ ನಿಧನರಾದರು. ತಮ್ಮ ಮನೆಯಲ್ಲೇ ನಸುಕಿನ ವೇಳೆಯಲ್ಲಿ ಅವರು ಅಸು ನೀಗಿದರು ಎಂದು ಅವರ ನಿಕಟವರ್ತಿಗಳು ತಿಳಿಸಿದರು. ಚುನಿಭಾಯಿ ಅವರು ಪುತ್ರಿ, ಅಳಿಯ ಮತ್ತು ಮೊಮ್ಮಕ್ಕಳನ್ನು ಅಗಲಿದರು. ಗಾಂಧಿವಾದಿ ಹಾಗೂ ಸವೋದಯ ನೇತಾರ ಚುನಿಭಾಯಿ ಅವರು ಸ್ವಾತಂತ್ರ್ಯಹೋರಾಟ ಮತ್ತು ವಿನೋಬಾ ಭಾವೆ ಅವರ ಭೂದಾನ ಚಳವಳಿಯಲ್ಲಿ ಪಾಲ್ಗೊಂಡಿದ್ದರು. ಅಸ್ಸಾಮಿನಲ್ಲಿ 60ರ ದಶಕದಲ್ಲಿ ಹಿಂಸಾಚಾರ ಸ್ಪೋಟಗೊಂಡಾಗ ಅಲ್ಲಿ 12 ವರ್ಷಗಳ ಕಾಲ ಶಾಂತಿ ಕಾರ್ಯಕರ್ತನಾಗಿ ಅವರು ದುಡಿದಿದ್ದರು. 1975ರಲ್ಲಿ ತುರ್ತು ಪರಿಸ್ಥಿತಿ ವಿರುದ್ಧ ಸಮರ ಸಾರಿದ್ದ ಚುನಿಭಾಯಿ ಸೆರೆವಾಸವನ್ನೂ ಎದುರಿಸಿದ್ದರು. ಅವರನ್ನು 'ಸಾಣೆ ಗುರೂಜಿ ನಿರ್ಭಯ ಪತ್ರಕರಿತಾ' ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ವಿಶ್ವ ಗುಜರಾತಿ ಸಮಾಜವು 'ವಿಶ್ವ ಗುಜರಾತಿ ಪ್ರತಿಭಾ' ಪ್ರಶಸ್ತಿಯನ್ನು ನೀಡಿ ಅವರನ್ನು ಪುರಸ್ಕರಿಸಿತ್ತು. ರೈತರ ಹಕ್ಕುಗಳ ಹೋರಾಟದಲ್ಲಿ ಮುಂಚೂಣಿಯಲ್ಲಿ ನಿಂತಿದ್ದ ಚುನಿಭಾಯಿ 1986ರಲ್ಲಿ ಎರಡು ವರ್ಷ ಕಾಲ ಗುಜರಾತಿನಲ್ಲಿ ಬರಪರಿಹಾರ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಉತ್ತರ ಗುಜರಾತಿನ ಪಾಟನ್ ಜಿಲ್ಲೆಯಲ್ಲಿ ಹಲವಾರು ತಡೆ ಅಣೆಕಟ್ಟುಗಳನ್ನು (ಚೆಕ್ ಡ್ಯಾಮ್) ನಿರ್ವಿುಸುವ ಮೂಲಕ 12,000 ಹೆಕ್ಟೇರ್ಗಳಿಗೂ ಹೆಚ್ಚಿನ ಪ್ರದೇಶಕ್ಕೆ ನೀರಾವರಿ ವ್ಯವಸ್ಥೆಯನ್ನು ಮಾಡಿಕೊಟ್ಟಿದ್ದರು. 2010ರಲ್ಲಿ ಜಮ್ನಾಲಾಲ್ ಬಜಾಜ್ ಪ್ರಶಸ್ತಿ ಅವರನ್ನು ಅರಸಿಕೊಂಡು ಬಂದಿತ್ತು. ಇತರ ಹಲವಾರು ಪ್ರಶಸ್ತಿಗಳೂ ಅವರ ಮುಡಿಗೇರಿದ್ದವು. 'ಗಾಂಧಿ ಹತ್ಯೆ: ವಾಸ್ತವಾಂಶಗಳು ಮತ್ತು ತಪ್ಪು ಕಲ್ಪನೆಗಳು' ಎಂಬ ಅವರ ಗ್ರಂಥ 11ಕ್ಕೂ ಹೆಚ್ಚು ಭಾಷೆಗಳಿಗೆ ತರ್ಜುಮೆಗೊಂಡು ಪ್ರಕಟಿಸಿಲ್ಪಟ್ಟಿತ್ತು. 2002ರ ಗುಜರಾತ್ ದಂಗೆಗಳ ವಿರುದ್ಧವೂ ಚುನಿಭಾಯಿ ತಮ್ಮ ಸ್ವರ ಎತ್ತಿದ್ದರು. ಚುನಿಭಾಯಿ ನಿಧನಕ್ಕೆ ಸಂತಾಪ ವ್ಯಕ್ತ ಪಡಿಸಿದ ಪ್ರಧಾನಿ ನರೇಂದ್ರ ಮೋದಿ ಅವರು 'ಖ್ಯಾತ ಗಾಂಧಿವಾದಿ ಶ್ರೀ ಚುನಿಭಾಯಿ ವೈದ್ಯ ಅವರ ನಿಧನದಿಂದ ನಾನು ದುಃಖಿತನಾಗಿದ್ದೇನೆ. ಅವರ ಕುಟುಂಬ ಸದಸ್ಯರಿಗೆ ನನ್ನ ಸಂತಾಪ ವ್ಯಕ್ತಪಡಿಸುತ್ತಿದ್ದೇನೆ. ಅವರಿಗೆ ಚಿರಶಾಂತಿ ಲಭಿಸಲಿ' ಎಂದು ಟ್ವೀಟ್ ಮಾಡಿದರು. ಸೋನಿಯಾಗಾಂಧಿ ಅವರ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ಸೇರಿದಂತೆ ಹಲವಾರು ನಾಯಕರೂ ವೈದ್ಯ ಅವರ ನಿಧನಕ್ಕೆ ಶೋಕ ವ್ಯಕ್ತ ಪಡಿಸಿದರು.

2014: ನವದೆಹಲಿ/ಬೆಂಗಳೂರು: ನಾಡಿನ ಹಿರಿಯ ವಿಮರ್ಶಕ, ಕವಿ, ಸಾಹಿತಿ ಜಿ.ಹೆಚ್.ನಾಯಕ ಅವರ 'ಉತ್ತರಾರ್ಧ' ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿತು.

 ಮೂಲತಃ ಉತ್ತರಕನ್ನಡದ ಅಂಕೋಲ ತಾಲೂಕಿನವರಾದ ಜಿ.ಹೆಚ್.ನಾಯಕ ಸದ್ಯ ಮೈಸೂರಿನಲ್ಲಿ ನೆಲೆಸಿದ್ದು, ಅವರಿಗೆ 2010ರ ಪಂಪ ಪ್ರಶಸ್ತಿ ಮತ್ತು ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಲಭಿಸಿದ್ದವು. ಈಗ ಪ್ರತಿಷ್ಠಿತ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಅವರ ಮುಡಿಗೇರಿತು,

 ಅಂಕೋಲದ ಸುರ್ವೆ ಜಿ.ಹೆಚ್. ನಾಯಕರ ಹುಟ್ಟೂರು. ಅವರಿಗೀಗ 79 ವರ್ಷ ವಯಸ್ಸು. ಗೋವಿಂದರಾಯ ಹಮ್ಮಣ್ಣ ನಾಯಕ ಅವರ ಪೂರ್ಣ ಹೆಸರು. ಮೈಸೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿರುವ ಜಿ.ಹೆಚ್. ನಾಯಕರ 'ನಿರಪೇಕ್ಷ' ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಲಭಿಸಿತ್ತು.

2014: ಜೋಧಪುರ: ಗೋಹತ್ಯೆಯನ್ನು ವಿರೋಧಿಸಿ, ಗೋ ಸಂರಕ್ಷಣೆಯ ಕಾಳಜಿ ಮೆರೆದದ್ದಕ್ಕಾಗಿ ಜೋಧಪುರದ ಮುಸ್ಲಿಂ ಸಂಸ್ಥೆ ಮುಸ್ಲಿಂ ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರೀಸ್ (ಎಂಸಿಸಿಐ. ಜೋಧಪುರ ಮೂಲದ ಸರ್ಕಾರೇತರ ಸಂಘಟನೆ ನೀಡುವ 'ಆಚಾರ್ಯ ಹಸ್ತಿ ಕರುಣಾರತ್ನ ಪ್ರಶಸ್ತಿ'ಗೆ ಪಾತ್ರವಾಯಿತು. ಆಚಾರ್ಯ ಹಸ್ತಿ ಕರುಣಾರತ್ನ ಪ್ರಶಸ್ತಿಯು ಪ್ರಶಸ್ತಿ ಪತ್ರದ ಜೊತೆಗೆ 50,000 ರೂಪಾಯಿಗಳ ಚೆಕ್ನ್ನು ಹೊಂದಿರುತ್ತದೆ. ಪ್ರಾಣಿಗಳ ಮೇಲೆ ದಯೆ, ಅವುಗಳ ಸಂರಕ್ಷಣೆ, ಪರಿಸರ ಸಂರಕ್ಷಣೆ ಇತ್ಯಾದಿ ಸಮಾಜಸೇವಾ ಕಾರ್ಯಗಳಿಗಾಗಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಸಂಸ್ಥೆಗೆ ಈ ತಿಂಗಳಲ್ಲಿ ಪ್ರಶಸ್ತಿಯನ್ನು ನೀಡಲಾಗುತ್ತದೆ. ಭಾರತದ ಜಾನುವಾರುಗಳು ಅದರಲ್ಲೂ ವಿಶೇಷವಾಗಿ ಗೋವುಗಳ ಸಂಖ್ಯೆ ರಾಷ್ಟ್ರದಲ್ಲಿ ಕುಗ್ಗುತ್ತಿದೆ. ಪರಿಣಾಮವಾಗಿ ಹಾಲಿನ ಕೊರತೆಯನ್ನು ರಾಷ್ಟ್ರ ಎದುರಿಸುತ್ತಿದೆ ಎಂದು ಎಂಸಿಸಿಐ ವಕ್ತಾರರು ಪ್ರಶಸ್ತಿ ಲಭಿಸಿದ ಸುದ್ದಿ ತಿಳಿಸುತ್ತಾ ಹೇಳಿದರು. ಹಿಂದುಗಳಿಂದ ಪೂಜಿಸಲ್ಪಡುವ ಗೋವುಗಳನ್ನು ರಕ್ಷಿಸುವ ಅಗತ್ಯವಿದೆ ಎಂದು ಅವರು ನುಡಿದರು.

2014: ಇಸ್ಲಾಮಾಬಾದ್: ಭಯೋತ್ಪಾದನಾ ನಿಗ್ರಹ ನ್ಯಾಯಾಲಯದಿಂದ 18-12-2014ರ ಗುರುವಾರ ಜಾಮೀನು ಪಡೆದ ಮುಂಬೈ ದಾಳಿಯ ರೂವಾರಿ ಝುಕಿ-ಉರ್-ರಹಮಾನ್ ಲಖ್ವಿಯನ್ನು ಈದಿನ ಸಾರ್ವಜನಿಕ ಸುವ್ಯವಸ್ಥೆ ಪಾಲನೆ (ಎಂಪಿಒ) ಕಾಯ್ದೆಯ ಅಡಿಯಲ್ಲಿ ಪುನಃ ಬಂಧಿಸಿ ರಾವಲ್ಪಿಂಡಿಯ ಅಡಿಲಾ ಸೆರೆಮನೆಯಲ್ಲಿ ಇರಿಸಲಾಯಿತು. ಆತನನ್ನು ಮೂರು ತಿಂಗಳ ಅವಧಿಗೆ ಸೆರೆಮನೆಯಲ್ಲಿ ಇರಿಸಲು ಸರ್ಕಾರ ನಿರ್ಧರಿಸಿತು ಎಂದು ಮಾಧ್ಯಮ ವರದಿಯೊಂದು ತಿಳಿಸಿತು. ಲಖ್ವಿಗೆ ಜಾಮೀನು ಮಂಜೂರು ಮಾಡಿದ್ದರ ವಿರುದ್ಧ ಉನ್ನತ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲು ಸರ್ಕಾರ ನಿರ್ಧರಿಸಿದೆ ಎಂದು ಸರ್ಕಾರಿ ಮೂಲವೊಂದು 'ಡಾನ್'ಗೆ ತಿಳಿಸಿತು. 2008ರ ನವೆಂಬರ್ 26-29ರ ಅವಧಿಯಲ್ಲಿ 166 ಜನರನ್ನು ಬಲಿ ತೆಗೆದುಕೊಂಡ ಮುಂಬೈ ಮೇಲಿನ ಭಯೋತ್ಪಾದಕ ದಾಳಿಯನ್ನು ಯೋಜಿಸಿ ನೆರವು ನೀಡಿದ ಆರೋಪವಿದ್ದ ಏಳು ಮಂದಿಯ ಪೈಕಿ ಲಖ್ವಿ ಒಬ್ಬನಾಗಿದ್ದು, ಇಸ್ಲಾಮಾಬಾದಿನ ಭಯೋತ್ಪಾದಕ ನಿಗ್ರಹ ನ್ಯಾಯಾಲಯವು ಈತನಿಗೆ ಜಾಮೀನು ಮಂಜೂರು ಮಾಡಿತ್ತು. ಮುಂಬೈ ದಾಳಿ ಘಟನೆಯಲ್ಲಿ ವಿದೇಶೀಯರೂ ಸೇರಿದಂತೆ 166 ಜನರು ಮೃತರಾಗಿದ್ದುದರ ಜೊತೆಗೆ ಇತರ ನೂರಾರು ಮಂದಿ ಗಾಯಗೊಂಡಿದ್ದರು. ಮುಂಬೈ ದಾಳಿ ಕಾಲದಲ್ಲಿ ಲಖ್ವಿಯು ಲಷ್ಕರ್-ಎ-ತೊಯ್ಬಾ (ಎಲ್ಇಟಿ) ಸಂಘಟನೆಯ ಕಾರ್ಯಾಚರಣಾ ವಿಭಾಗದ ಮುಖ್ಯಸ್ಥನಾಗಿದ್ದ ಎನ್ನಲಾಗಿದ್ದು, ಈ ಸಂಘಟನೆಯೇ ಈ ದಾಳಿಯನ್ನು ನಡೆಸಿತ್ತು ಎಂದು ಭಾರತ ಆಪಾದಿಸಿತ್ತು.

2014: ನವದೆಹಲಿ: ಮುಂಬೈ ಭಯೋತ್ಪಾದಕ ದಾಳಿಯ ರೂವಾರಿ ಝುಕಿ-ಉರ್-ರಹಮಾನ್-ಲಖ್ವಿಗೆ ಜಾಮೀನು ಮಂಜೂರು ಮಾಡಿದ್ದರ ವಿರುದ್ಧ ಭಾರತ ಸರ್ಕಾರದ ಕಳವಳ ಮತ್ತು ಜನತೆಯ ತೀವ್ರ ಅಸಮಾಧಾನವನ್ನು ಭಾರತವು ಈದಿನ ಪಾಕಿಸ್ತಾನಕ್ಕೆ ತಿಳಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಸೈಯದ್ ಅಕ್ಬರುದ್ದೀನ್ ನವದೆಹಲಿಯಲ್ಲಿ ಹೇಳಿದರು. 'ನಮಗೆ ತಲುಪಿರುವ ಪುನರಪಿ ಭರವಸೆಗಳ ಹೊರತಾಗಿಯೂ ಇಸ್ಲಾಮಾಬಾದಿನ ಭಯೋತ್ಪಾದನಾ ನಿಗ್ರಹ ನ್ಯಾಯಾಲಯದಲ್ಲಿ ಮುಂಬೈ ಭಯೋತ್ಪಾದನಾ ದಾಳಿಯ ಹಿಂದಿನ ಷಡ್ಯಂತ್ರದ ವಿಚಾರಣೆ ಅತ್ಯಂತ ನಿಧಾನಗತಿಯಲ್ಲಿ ಮುಂದುವರೆದಿದೆ. ಜೊತೆಗೆ ಝಕೀರ್-ಉರ್-ರಹಮಾನ್ ಲಖ್ವಿಗೆ ಜಾಮೀನು ಮಂಜೂರು ಮಾಡಿದ ಕ್ರಮವು ಈ ವಿಚಾರಣೆಯನ್ನು ಬೇರೆಯೇ ಹಂತಕ್ಕೆ ಒಯ್ದಿದೆ' ಎಂದು ಸೈಯದ್ ಅಕ್ಬರುದ್ದೀನ್ ಹೇಳಿದರು. 'ಆದ್ದರಿಂದ ನಾವು ರಾಜತಾಂತ್ರಿಕ ಮಾರ್ಗಗಳ ಮೂಲಕ ವಿಷಯದ ಬಗ್ಗೆ ಪಾಕಿಸ್ತಾನಕ್ಕೆ ನಮ್ಮ ಬಲವಾದ ಆಕ್ಷೇಪ, ಕಳವಳ ಮತ್ತು ಭಾರತೀಯ ಸಮಾಜದ ಭಾವನೆಗಳನ್ನು ಕಳುಹಿಸಿದ್ದೇವೆ. ಈ ಘಟನೆಯು ಭಯೋತ್ಪಾದಕ ಗುಂಪುಗಳ ವಿರುದ್ಧ ಹೋರಾಡುವ ಪಾಕಿಸ್ತಾನದ ಬದ್ಧತೆಯನ್ನೇ ನಗೆಪಾಟಲು ಮಾಡಿದೆ' ಎಂದು ವಕ್ತಾರರು ನುಡಿದರು. 2008ರ ನವೆಂಬರ್ 26ರಂದು 166 ಮಂದಿಯನ್ನು ಬಲಿತೆಗೆದುಕೊಂಡ ಮುಂಬೈ ಮೇಲಿನ ದಾಳಿಯ ಯೋಜನೆ ರೂಪಿಸಿ, ಪ್ರಚೋದಿಸುವ ಷಡ್ಯಂತ್ರವನ್ನು ಹೆಣೆದ 7 ಮಂದಿ ಪಾಕಿಸ್ತಾನೀಯರ ಪೈಕಿ ಲಖ್ವಿ ಒಬ್ಬನಾಗಿದ್ದಾನೆ. ಲಖ್ವಿ ಬಿಡುಗಡೆಗಾಗಿ ಜಾಮೀನು ನೀಡಲಾಗಿರುವುದನ್ನು ಒಪ್ಪಲಾಗದು ಎಂದು 18-12-2014ರಂದೇ ಪಾಕಿಸ್ತಾನಕ್ಕೆ ತಿಳಿಸಿದ್ದ ಭಾರತ ಈ ನಿರ್ಣಯವನ್ನು ತತ್ಕ್ಷಣ ಹಿಂತೆಗೆದುಕೊಳ್ಳಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿತ್ತು.

2014: ಇಸ್ಲಾಮಾಬಾದ್: ಮಿಲಿಟರಿ ನ್ಯಾಯಾಲಯದಿಂದ ಮರಣದಂಡನೆಗೆ ಗುರಿಯಾಗಿರುವ ಆರು ಮಂದಿ ಭಯೋತ್ಪಾದಕರ ಗಲ್ಲು ಶಿಕ್ಷೆ ಜಾರಿಗೆ ಪಾಕಿಸ್ತಾನಿ ಸೇನಾ ಮುಖ್ಯಸ್ಥ ಜನರಲ್ ರಹೀಲ್ ಷರೀಫ್ ಅನುಮೋದನೆ ನೀಡಿದ್ದಾರೆ ಎಂದು ಮಾಧ್ಯಮ ವರದಿಯೊಂದು ತಿಳಿಸಿತು. 'ಸೇನಾ ಸಿಬ್ಬಂದಿ ಮುಖ್ಯಸ್ಥರು ಫೀಲ್ಡ್ ಜನರಲ್ ಕೋರ್ಟ್ ಮಾರ್ಷಲ್ ಕಾನೂನು ಪ್ರಕಾರ ಶಿಕ್ಷೆ ವಿಧಿಸಿರುವ 6 ಮಂದಿ ಕಟ್ಟಾ ಭಯೋತ್ಪಾದಕರ 'ಡೆತ್ ವಾರಂಟ್'ಗಳಿಗೆ ಈದಿನ ಸಹಿ ಮಾಡಿದ್ದಾರೆ' ಎಂದು ಇಂಟರ್ ಸರ್ವೀಸಸ್ ಪಬ್ಲಿಕ್ ರಿಲೇಷನ್ಸ್ (ಐಎಸ್ಪಿಆರ್) ನಿರ್ದೇಶಕ ಜನರಲ್ ಮೇಜರ್ ಅಸಿಮ್ಬಜ್ವಾ ಹಿಂದಿನ ರಾತ್ರಿ ತಡವಾಗಿ ಟ್ವೀಟ್ ಮಾಡಿದರು. ಭಯೋತ್ಪಾದಕರ ಮರಣದಂಡನೆ ಜಾರಿ ಮೇಲಿನ ನಿಷೇಧ ರದ್ದು ಪಡಿಸಲಾಗಿದೆ ಎಂದು ಪ್ರಧಾನಿ ನವಾಜ್ ಷರೀಫ್ ಅವರು ಪ್ರಕಟಿಸಿದ ಒಂದು ದಿನದ ಬಳಿಕ ಈ ಕುರಿತ ಪ್ರಕಟಣೆ ಹೊರ ಬಿದ್ದಿದೆ ಎಂದು 'ಡಾನ್' ಆನ್ಲೈನ್ ವರದಿ ಮಾಡಿತು. ಸೇನೆಯು ಅಪರಾಧಿಗಳ ಹೆಸರುಗಳನ್ನು ತಡೆಹಿಡಿದಿದೆ ಮತ್ತು ಗಲ್ಲು ಶಿಕ್ಷೆ ಜಾರಿ ಪೂರ್ಣಗೊಂಡ ಬಳಿಕ ಹೆಸರುಗಳನ್ನು ಬಹಿರಂಗ ಪಡಿಸಲಾಗುವುದು ಎಂದು ಹೇಳಿತು. ಆರು ಪ್ರಕರಣಗಳಲ್ಲಿ ಗಲ್ಲು ಶಿಕ್ಷೆ ಜಾರಿಯ ಶಾಸನ ಸಂಬಂಧಿ ಪ್ರಕ್ರಿಯೆಗಳು ಪೂರ್ಣಗೊಂಡಿವೆ ಎಂದು ಸೇನಾ ವಕ್ತಾರರು ಹೇಳಿದ್ದನ್ನು ಮಾಧ್ಯಮ ಉಲ್ಲೇಖಿಸಿತು. ಪಾಕಿಸ್ತಾನಿ ಸೇನೆಯ ಕೇಂದ್ರ ಕಚೇರಿ ಮೇಲೆ ನಡೆದ ದಾಳಿ ಮತ್ತು ಚೇನಾಬ್ ನದಿ ತೀರದ ಸೇನಾ ಶಿಬಿರದ ಮೇಲೆ ನಡೆದ ದಾಳಿ ಹಾಗೂ ಇತರ ಪ್ರಕರಣಗಳಿಗೆ ಸಂಬಂಧಿಸಿದ ಅಪರಾಧಿಗಳಿಗೆ ಮರಣದಂಡನೆ ವಿಧಿಸಲಾಗಿತ್ತು.

2014: ನವದೆಹಲಿ: ಶ್ವಾಸನಾಳದ ಸೋಂಕಿನ ಕಾರಣ ಆಸ್ಪತ್ರೆಗೆ ದಾಖಲಾದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ದೇಹಸ್ಥಿತಿ ಸ್ಥಿರವಾಗಿದ್ದು, ಚೇತರಿಸಿಕೊಂಡರು. 'ಅವರ ದೇಹಸ್ಥಿತಿ ಸ್ಥಿರವಾಗಿದೆ. ಅವರು ಚೆನ್ನಾಗಿ ಚೇತರಿಸಿಕೊಳ್ಳುತ್ತಿದ್ದಾರೆ' ಎಂದು ಸರ್. ಗಂಗಾರಾಮ್ ಆಸ್ಪತ್ರೆಯ ಆಡಳಿತ ಮಂಡಳಿ ಅಧ್ಯಕ್ಷ ಡಾ.ಅಜಯ್ ಸ್ವರೂಪ್ ಹೇಳಿದರು. ಶ್ವಾಸನಾಳದ ಸೋಂಕು ಮತ್ತು ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ 68ರ ಹರೆಯದ ಕಾಂಗ್ರೆಸ್ ಅಧ್ಯಕ್ಷೆಯನ್ನು ಹಿಂದಿನ ದಿನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

2014: ಶ್ರೀನಗರ: ರಾತ್ರಿ ವೇಳೆಯಲ್ಲಿ ತಾಪಮಾನವು ಶೈತ್ಯಗಟ್ಟುವಿಕೆಯ ಬಿಂದುವಿಗಿಂತಲೂ ಕೆಳಗಿಳಿದ ಪರಿಣಾಮವಾಗಿ ಕಾಶ್ಮೀರ ಕಣಿವೆ ಚಳಿಯಿಂದ ಗಡ ಗಡ ನಡುಗಿತು. ಕಾಶ್ಮೀರ ಕಣಿವೆ ಪ್ರದೇಶದ ಹಾಲಿ ಶೀತಗಾಳಿಯ ಸ್ಥಿತಿ ಇನ್ನೂ ಮೂರುದಿನ ಮುಂದುವರಿಯುವ ಸಾಧ್ಯತೆಗಳಿವೆ ಎಂದು ಎಂದು ಹವಾಮಾನ ಕಚೇರಿ ತಿಳಿಸಿತು. ಶ್ರೀನಗರದಲ್ಲಿ ಈದಿನ ಕನಿಷ್ಠ ತಾಪಮಾನ ಮೈನಸ್ 4.2 ಡಿಗ್ರಿ ಸೆಲ್ಸಿಯಸ್ ಆಗಿದ್ದರೆ, ಗುಲ್ಮಾರ್ಗ್ನಲ್ಲಿ ಮೈನಸ್ 2.6 ಮತ್ತು ಪಹಲ್ಗಾಂವದಲ್ಲಿ ಮೈನಸ್ 7.2 ಡಿಗ್ರಿ ಸೆಲ್ಸಿಯಸ್ ಇತ್ತು ಎಂದು ಹವಾಮಾನ ಕಚೇರಿ ಹೇಳಿತು. ಲಡಾಖ್ ಪ್ರದೇಶದ ಲೆಹ್ ಪಟ್ಟಣದಲ್ಲಿ ಕನಿಷ್ಠ ತಾಪಮಾನ ಮೈನಸ್ 12.5 ಡಿಗ್ರಿ ಸೆಲ್ಸಿಯಸ್ ಆಗಿದ್ದರೆ, ಕಾರ್ಗಿಲ್ ಪಟ್ಟಣದಲ್ಲಿ ಅದು ಮೈನಸ್ 12.1 ಡಿಗ್ರಿಯಾಗಿತ್ತು. ಜಮ್ಮು ನಗರದಲ್ಲಿ ಹಿಂದಿನ ರಾತ್ರಿಯ ಕನಿಷ್ಠ ತಾಪಮಾನ 5.9 ಡಿಗ್ರಿ ಸೆಲ್ಸಿಯಸ್ ಆಗಿದ್ದರೆ, ಗರಿಷ್ಠ ತಾಪಮಾನ 10.2 ಡಿಗ್ರಿಯಾಗಿತ್ತು.

2014: ನವದೆಹಲಿ: ಚಿಟ್ ಫಂಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಪೊಲೀಸರು ಒಡಿಶಾದ ಪೊಲೀಸ್ ಸುಪರಿಂಟೆಂಡೆಂಟ್ ಅವರನ್ನು ಬಂಧಿಸಿದರು. ಚಿಟ್ ಫಂಡ್ ಅವ್ಯವಹಾರ ನಡೆಸಿರುವ ಕಂಪನಿಯಿಂದ ಆರ್ಥಿಕ ನೆರವು ಪಡೆದಿರುವ ಬಗ್ಗೆ ದಾಖಲೆಗಳನ್ನು ಸಂಗ್ರಹಿಸಿರುವ ಸಿಬಿಐ ಪೊಲೀಸರು ಹಿರಿಯ ಪೊಲೀಸ್ ಅಧಿಕಾರಿಯನ್ನೇ ಬಂಧಿಸಿರುವುದು ಒಡಿಶಾದಲ್ಲಿ ಪ್ರಕರಣದ ಬಗ್ಗೆ ಇನ್ನಷ್ಟು ಕುತೂಹಲ ಹುಟ್ಟಿಸಿತು. ಸಿಬಿಐ ಮೂಲಗಳು ತಿಳಿಸಿರುವಂತೆ ಡಿಎಸ್ಪಿ ಪ್ರಮೋದ್ ಪಾಂಡಾ ಬಂಧನಕ್ಕೊಳಗಾದ ಪೊಲೀಸ್ ಅಧಿಕಾರಿಯಾಗಿದ್ದು, ಅರ್ಥ ತತ್ವ ಗ್ರೂಪ್ನ ಯೋಜನೆಯಡಿ ಹೂಡಿಕೆ ಕೂಡ ಮಾಡಿದ್ದರು ಎನ್ನಲಾಯಿತು..

2008: ಚಿತ್ರದುರ್ಗದಲ್ಲಿ ಜನವರಿ 29ರಿಂದ ನಡೆಯುವ 75ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ವಿದ್ವಾಂಸ ಡಾ. ಎಲ್.ಬಸವರಾಜು ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಆರ್.ಕೆ. ನಲ್ಲೂರು ಪ್ರಸಾದ್ ಪ್ರಕಟಿಸಿದರು.

2008: ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆ ಹತ್ಯೆ ಸಂಬಂಧ ತಾವು ನೀಡಿದ್ದ ಹೇಳಿಕೆಗೆ ವ್ಯಕ್ತವಾದ ಒಕ್ಕೊರಲ ವಿರೋಧಕ್ಕೆ ಮಣಿದು ಕೇಂದ್ರದ ಅಲ್ಪ ಸಂಖ್ಯಾತ ವ್ಯವಹಾರ ಇಲಾಖೆ ಸಚಿವ ಎ.ಆರ್.ಅಂತುಳೆ ರಾಜೀನಾಮೆ ಸಲ್ಲಿಸಿದರು. ಸ್ವತಃ ಅಂತುಳೆ ತಾವು ರಾಜೀನಾಮೆ ನೀಡಿರುವ ಬಗ್ಗೆ ಖಚಿತ ಪಡಿಸದಿದ್ದರೂ ಅವರು ಕಳುಹಿಸಿದ ಪತ್ರ ಪ್ರಧಾನಿ ಸಿಂಗ್ ಅವರನ್ನು ತಲುಪಿರುವುದನ್ನು ಮೂಲಗಳು ಖಚಿತಪಡಿಸಿದವು.

2008: ಸುಮಾರು 59 ಜನರನ್ನು ಬಲಿತೆಗೆದುಕೊಂಡ 1997 ರ ಉಪಹಾರ್ ಚಿತ್ರಮಂದಿರ ಅಗ್ನಿ ದುರಂತ ಪ್ರಕರಣದಲ್ಲಿ ಕೆಳ ನ್ಯಾಯಾಲಯವು ರಿಯಲ್ ಎಸ್ಟೇಟ್ ಉದ್ಯಮಿಗಳಾದ ಗೋಪಾಲ್ ಹಾಗೂ ಸುಶೀಲ್ ಅನ್ಸಲ್ ಅವರನ್ನು ತಪ್ಪಿತಸ್ಥರೆಂದು ನೀಡಿದ ತೀರ್ಪನ್ನು ದೆಹಲಿ ಹೈಕೋರ್ಟ್ ಎತ್ತಿಹಿಡಿಯಿತು. ಆದರೆ ಅನ್ಸಲ್ ಸಹೋದರರಿಗೆ ಕೆಳ ನ್ಯಾಯಾಲಯ ವಿಧಿಸಿದ್ದ 2 ವರ್ಷಗಳ ಜೈಲು ಶಿಕ್ಷೆಯನ್ನು ಒಂದು ವರ್ಷಕ್ಕೆ ಇಳಿಸಿತು. ದೆಹಲಿ ವಿಚಾರಣಾ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಅನ್ಸಲ್ ಸಹೋದರರು ಸಲ್ಲಿಸಿದ ಮೇಲ್ಮನವಿ ತಿರಸ್ಕರಿಸಿದ ನ್ಯಾಯಮೂರ್ತಿ ರವೀಂದ್ರ ಭಟ್ ಅವರು, ತಮ್ಮ ಒಡೆತನದ ಉಪಹಾರ್ ಚಿತ್ರಮಂದಿರದಲ್ಲಿ ಜನರಿಗೆ ಸುರಕ್ಷತೆ ಒದಗಿಸಲು ಅನ್ಸಲ್ ಸಹೋದರರು ವಿಫಲರಾಗಿದ್ದಾರೆ ಎಂದು ಹೇಳಿದರು.

2007: ಇಂಗ್ಲಿಷ್ ಕಾನೂನಿನಲ್ಲಿ ಮಾನವ ಹಕ್ಕುಗಳನ್ನು ವಿವರಿಸಿರುವ ರಾಜಮುದ್ರೆಯುಳ್ಳ 800 ವರ್ಷಗಳಷ್ಟು ಹಳೆಯದಾದ ಅತ್ಯಮೂಲ್ಯ `ಮ್ಯಾಗ್ನಕಾರ್ಟ' ಹಸ್ತಪ್ರತಿ ಈದಿನ ನ್ಯೂಯಾರ್ಕಿನಲ್ಲಿ 2.13 ಕೋಟಿ (21.3 ಮಿಲಿಯನ್) ಡಾಲರುಗಳಿಗೆ ಹರಾಜಾಯಿತು. `ಮಾಗ್ನಕಾರ್ಟ' ಜಗತ್ತಿನಲ್ಲಿ ಉಳಿದಿರುವುದೆನ್ನಲಾದ ಏಕೈಕ ಪ್ರತಿಯಾಗಿರುವ ಈ ಮ್ಯಾಗ್ನಕಾರ್ಟ 1297ರಷ್ಟು ಹಳೆಯದಾಗಿದ್ದು ಒಂದನೇ ದೊರೆ ಎಡ್ವರ್ಡನ ಮೇಣದ ಮೊಹರನ್ನು ಹೊಂದಿದೆ. ಕಳೆದ ಎರಡು ದಶಕಗಳಿಂದ ಇದನ್ನು ವಾಷಿಂಗ್ಟನ್ನಿನ ರಾಷ್ಟ್ರೀಯ ಪುರಾತನ ವಸ್ತುಸಂಗ್ರಹಾಲಯದಲ್ಲಿ ಪ್ರದರ್ಶನಕ್ಕೆ ಇಡಲಾಗಿತ್ತು. ಟೆಲಿಫೋನ್ ಬಿಡ್ಡರ್ ಒಬ್ಬ ಅದನ್ನು  ಅಪಹರಿಸಿ ಮಾರಾಟ ಮಾಡಿದ್ದ. ಈ ಹಸ್ತಪ್ರತಿಯನ್ನು ಖರೀದಿಸಿದ ವ್ಯಕ್ತಿಯನ್ನು ಕಾರ್ಲೈಲ್ ಈಕ್ವಿಟಿ ಗುಂಪಿನ ಸ್ಥಾಪಕ ಡೇವಿಡ್ ರುಬೆನ್ ಸ್ಟೀನ್ ಎಂಬುದಾಗಿ ನಂತರ ಪತ್ತೆಹಚ್ಚಲಾಯಿತು. ಇವರು ಅಧ್ಯಕ್ಷ ಕಾರ್ಟರ್ ಅವರ ಗೃಹನೀತಿ ಉಪ ಸಲಹೆಗಾರರೂ ಆಗಿದ್ದರು. ವಿಷಯ ಬಹಿರಂಗಗೊಂಡ ಬಳಿಕ ರುಬೆನ್ ಸ್ಟೀನ್ ಅವರು ಹಸ್ತಪ್ರತಿಯನ್ನು ಮತ್ತೆ ವಾಷಿಂಗ್ಟನ್ನಿನ ರಾಷ್ಟ್ರೀಯ ಪುರಾತನ ವಸ್ತುಗಳ ಸಂಗ್ರಹಾಲಯದಲ್ಲಿ ಸಾರ್ವಜನಿಕ ವೀಕ್ಷಣೆಗೆ ಇಡುವುದಾಗಿ ಪ್ರಕಟಿಸಿದ್ದರು.

2007: ಪಾಕಿಸ್ಥಾನದ ಸಿಂಧ್ ಪ್ರಾಂತ್ಯದಲ್ಲಿ ಈದಿನ ಬೆಳಗ್ಗೆ ಸಂಭವಿಸಿದ ರೈಲು ಅಪಘಾತದಲ್ಲಿ 58ಕ್ಕೂ ಹೆಚ್ಚು ಜನ ದುರ್ಮರಣಕ್ಕೀಡಾದರು. 120 ಜನರು ಗಾಯಗೊಂಡರು. ಕರಾಚಿಯಿಂದ 300 ಕಿ.ಮೀ ದೂರದಲ್ಲಿರುವ ನೌಶೇರ್ ಫೆರೊಜ್ ಎಂಬಲ್ಲಿ ಕರಾಚಿ ಎಕ್ಸ್ ಪ್ರೆಸ್ ಅಪಘಾತಕ್ಕೀಡಾಯಿತು. ವೇಗವಾಗಿ ಚಲಿಸುತ್ತಿದ್ದಾಗ, ರೈಲಿನ ಎಂಜಿನ್ನಿನಿಂದ 15 ಬೋಗಿಗಳು ಪ್ರತ್ಯೇಕಗೊಂಡು ಹಳಿ ತಪ್ಪಿದ ಕಾರಣ ದುರ್ಘಟನೆ ಸಂಭವಿಸಿತು.

2007: ಐಎಎಸ್ ಅಧಿಕಾರಿ ಡಾ.ವಿ. ಚಂದ್ರಶೇಖರ್, ಇಬ್ಬರು ಮುಖ್ಯ ಎಂಜಿನಿಯರುಗಳು, ವಾಣಿಜ್ಯ ತೆರಿಗೆ ಇಲಾಖೆಯ ಒಬ್ಬ ಜಂಟಿ ಆಯುಕ್ತ, ಒಬ್ಬ ಪ್ರಾದೇಶಿಕ ಸಾರಿಗೆ ಅಧಿಕಾರಿ ಸೇರಿದಂತೆ ವಿವಿಧ ಇಲಾಖೆಗಳ 13 ಅಧಿಕಾರಿಗಳ ಮನೆ ಮತ್ತು ಕಚೇರಿಗಳ ಮೇಲೆ ರಾಜ್ಯದ ವಿವಿಧೆಡೆ ಏಕಕಾಲಕ್ಕೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು 30 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಅಕ್ರಮ ಆಸ್ತಿ ಪತ್ತೆ ಹಚ್ಚಿದರು. ಆದಾಯಕ್ಕಿಂತ ಹೆಚ್ಚು ಆಸ್ತಿ ಸಂಪಾದಿಸಿದ ಆರೋಪದ ಮೇರೆಗೆ ಬೆಂಗಳೂರು ನಗರ, ಗ್ರಾಮಾಂತರ, ಹಾವೇರಿ, ಚಿಕ್ಕಮಗಳೂರು, ಶಿವಮೊಗ್ಗ, ಮಂಡ್ಯ, ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಈ 13 ಭ್ರಷ್ಟ ಅಧಿಕಾರಿಗಳ ಮನೆಗಳ ಮೇಲೆ ದಾಳಿ ನಡೆಯಿತು.

2007: ತನ್ನ ಊರಿನ 50 ಸಾವಿರ ಜನರಿಗೆ ಕುಡಿಯುವ ನೀರು ಒದಗಿಸಲೇ ಬೇಕು ಎಂದು ಹಠ ಹಿಡಿದ ಯುವಕ ಬಸವರಾಜ ನಂದಿಕೇಶ್ವರ ಎಂಬ ಯುವಕನೊಬ್ಬ ತಲೆಯ ಮೇಲೆ 25 ಕೆ.ಜಿ ಭಾರದ ಕಲ್ಲು ಹೊತ್ತುಕೊಂಡು ವಿಜಾಪುರ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಸತತ ಮೂರು ಗಂಟೆಗಳ ಕಾಲ `ಗಾಂಧೀಗಿರಿ' ನಡೆಸುವ ಮೂಲಕ ಆಡಳಿತಕ್ಕೆ ಚುರುಕು ಮುಟ್ಟಿಸಿದರು. ಮುದ್ದೇಬಿಹಾಳ ಪಟ್ಟಣದ ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ ನಡೆಸುತ್ತಾ ಬಂದ ನಾಲ್ಕು ವರ್ಷಗಳ ಹೋರಾಟ ಇದರೊಂದಿಗೆ ವಿಶಿಷ್ಟ ಸ್ವರೂಪ ಪಡೆದುಕೊಂಡಿತು.

2007: ಬಹುಕೋಟಿ ಮೇವು ಹಗರಣ ಪ್ರಕರಣದಲ್ಲಿ ರಾಂಚಿಯ ವಿಶೇಷ ಸಿಬಿಐ ನ್ಯಾಯಾಲಯವು ಮೂವರಿಗೆ ತಲಾ ಒಂದು ಕೋಟಿ ರೂಪಾಯಿ ದಂಡದ ಜತೆ 6 ವರ್ಷಗಳ ಕಠಿಣ ಶಿಕ್ಷೆ ವಿಧಿಸಿತು. 1991-92ರ ಅವಧಿಯಲ್ಲಿ 6.29 ಕೋಟಿ ರೂಪಾಯಿಗಳನ್ನು ಅಕ್ರಮವಾಗಿ ಪಡೆದ ಮೇವು ಹಗರಣಕ್ಕೆ ಸಂಬಂಧಪಟ್ಟಂತೆ ಸಿಬಿಐ ನ್ಯಾಯಾಲಯದ ನ್ಯಾಯಾಧೀಶ ಬಿನಯ್ ಕುಮಾರ್ ಸಹಾಯ್ ಅವರು 43 ಜನರು ತಪ್ಪಿತಸ್ಥರು ಎಂದು ತೀರ್ಪು ನೀಡಿದರು. ಈ ಪೈಕಿ ಜೆ. ಬೆಂಗರಾಜ್, ಡಾ.ಕೃಷ್ಣಮೋಹನ್ ಪ್ರಸಾದ್ ಮತ್ತು ಡಾ.ಕೀರ್ತಿ ನಾರಾಯಣ್ ಝಾ ಅವರಿಗೆ ತಲಾ ಒಂದು ಕೋಟಿ ರೂಪಾಯಿ ದಂಡ ಮತ್ತು 6 ವರ್ಷಗಳ ಕಠಿಣ ಶಿಕ್ಷೆ ವಿಧಿಸಲಾಯಿತು. ಉಳಿದ 40 ಮಂದಿಗೆ 5 ಲಕ್ಷ ದಿಂದ 45 ಲಕ್ಷ ರೂಪಾಯಿವರೆಗೆ ದಂಡ ಹಾಗೂ 5 ರಿಂದ 6 ವರ್ಷಗಳ ಶಿಕ್ಷೆ ನೀಡಲಾಯಿತು. ಮೇವು ಹಗರಣದ ಇತರ ಪ್ರಕರಣಗಳಿಗೆ ಹೋಲಿಸಿದರೆ ಈ ತೀರ್ಪು ಅಭೂತಪೂರ್ವ. ಇಲ್ಲಿಯವರೆಗೆ ಮೇವು ಹಗರಣದಲ್ಲಿ ಯಾರಿಗೂ ಇಷ್ಟು ದಂಡ ವಿಧಿಸಿರಲಿಲ್ಲ.

2007: ಅಮೆರಿಕದ ಮಹಿಳೆಯ ಕೊಲೆಗೆ ಸಂಬಂಧಿಸಿದಂತೆ `ಬಿಕಿನಿ ಕೊಲೆಗಾರ' ಚಾರ್ಲ್ಸ್ ಶೋಭರಾಜ್ ಗೆ ವಿಧಿಸಲಾದ ಮರಣ ದಂಡನೆಗೆ ತಾತ್ಕಾಲಿಕ ತಡೆಯಾಜ್ಞೆ ನೀಡಲು ನಿರಾಕರಿಸಿದ ನೇಪಾಳದ ಸುಪ್ರೀಂಕೋರ್ಟ್ `ಯಥಾಸ್ಥಿತಿ' ಕಾಯ್ದುಕೊಳ್ಳುವಂತೆ ನಿರ್ದೇಶನ ನೀಡಿತು. ಪ್ರಕರಣಕ್ಕೆ ಸಂಬಂಧಿಸಿದಂತೆ ಈದಿನ ತೀರ್ಪು ನೀಡಿದ ಸುಪ್ರೀಂಕೋರ್ಟ್, ಶೋಭರಾಜ್ ವಿರುದ್ಧದ ಮತ್ತೊಂದು ನಕಲಿ ಪಾಸ್ ಪೋರ್ಟ್ ಪ್ರಕರಣದ ವಿಚಾರಣೆಯನ್ನು ಪುನಃ ಆರಂಭಿಸುವಂತೆ ಆದೇಶ ನೀಡಿತು. ಎರಡೂ ಪ್ರಕರಣಗಳ ವಿಚಾರಣೆಯನ್ನು ಏಕಕಾಲದಲ್ಲಿ ನಡೆಸಲೂ ನ್ಯಾಯಪೀಠ ನಿರ್ಧರಿಸಿತು. ಅಮೆರಿಕದ ಮಹಿಳೆ ಕೊನಿ ಬ್ರೊಂಜಿಕ್ ಅವರ ಕೊಲೆಗೆ ಸಂಬಂಧಿಸಿದಂತೆ ಶೋಭರಾಜ್ ಗೆ ಕಠ್ಮಂಡು ಜಿಲ್ಲಾ ನ್ಯಾಯಾಲಯ ಮರಣ ದಂಡನೆ ವಿಧಿಸಿತ್ತು. ಇದನ್ನು ಶೋಭರಾಜ್ ಸುಪ್ರೀಂಕೋರ್ಟಿನಲ್ಲಿ ಪ್ರಶ್ನಿಸಿದ್ದ. 1970ರ ದಶಕದಲ್ಲಿ ಭಾರತ, ಥಾಯ್ಲೆಂಡ್, ನೇಪಾಳದಲ್ಲಿ 12ಕ್ಕೂ ಹೆಚ್ಚು ಪ್ರವಾಸಿಗರನ್ನು ಕೊಲೆ ಮಾಡಿದ ಆರೋಪ ಶೋಭರಾಜ್ ಮೇಲಿತ್ತು.

2007: ಮೂಡಬಿದಿರೆಯ ಮಿಜಾರಿನ ಶೋಭಾವನದಲ್ಲಿ ನಡೆಯುವ `2008ರ ಆಳ್ವಾಸ್ ವಿರಾಸತ್'ನಲ್ಲಿ ಖ್ಯಾತ ಸ್ಯಾಕ್ಸೋಫೋನ್ ವಾದಕ ಕದ್ರಿ ಗೋಪಾಲನಾಥ್ ಅವರನ್ನು 'ವಿರಾಸತ್ ಪ್ರಶಸ್ತಿ- 2007' ನೀಡಿ ಗೌರವಿಸಲು ನಿರ್ಧರಿಸಲಾಯಿತು.

2007: ಧಾರವಾಡ ದ.ರಾ.ಬೇಂದ್ರೆ ರಾಷ್ಟ್ರೀಯ ಟ್ರಸ್ಟಿನ `ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿ'ಯನ್ನು ಈ ವರ್ಷ ದೆಹಲಿಯ ಕರ್ನಾಟಕ ಸಂಘಕ್ಕೆ ನೀಡಲಾಯಿತು.

2006: ವಿಶ್ವಕಪ್ ಚಾಂಪಿಯನ್ ಇಟಲಿ ಫುಟ್ಬಾಲ್ ತಂಡದ ನಾಯಕ ಫ್ಯಾಬಿಯೋ ಕನಾವಾರೋ ಅವರು ಫಿಫಾ `ವರ್ಷದ ಶ್ರೇಷ್ಠ ಆಟಗಾರ' ಪ್ರಶಸ್ತಿ ಗೆದ್ದರು. ಇದರೊಂದಿಗೆ ಈ ಪ್ರಶಸ್ತಿಯನ್ನು ಗೆದ್ದ ಮೊತ್ತ ಮೊದಲ ರಕ್ಷಣಾ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದ ಕನಾವಾರೋ ಅವರು ಈ ಹಾದಿಯಲ್ಲಿ ಫ್ರಾನ್ಸಿನ ಜೆನಡಿನ್ ಜಿಡಾನ್ ಹಾಗೂ ಬ್ರೆಜಿಲಿನ ರೋನಾಲ್ಡಿನೋ ಅವರನ್ನು ಹಿಂದೆ ಹಾಕಿದರು.

2006: ಡಿಸ್ಕವರಿ ಬಾಹ್ಯಾಕಾಶ ನೌಕೆಯ ಸೌರಶಕ್ತಿ ಸಂಗ್ರಹ ಪೆಟ್ಟಿಗೆಯಲ್ಲಿ ಕಾಣಿಸಿಕೊಂಡ ದೋಷವನ್ನು ಗಗನಯಾತ್ರಿಗಳು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಬಾಹ್ಯಾಕಾಶ ನಡಿಗೆ ನಡೆಸಿ ಸರಿ ಪಡಿಸಿದರು.

2005: ಖ್ಯಾತ ಗ್ಲೈಡರ್ ಹಾರಾಟಗಾರ ಹಾಗೂ ರೇಮಂಡ್ ಲಿಮಿಟೆಡ್ ಅಧ್ಯಕ್ಷ ವಿಜಯಪಥ್ ಸಿಂಘಾನಿಯಾ ಮುಂಬೈ ಷರೀಫ್ ಆಗಿ ಅಧಿಕಾರ ಸ್ವೀಕರಿಸಿದರು. ಮಹಾರಾಷ್ಟ್ರ ರಾಜ್ಯಪಾಲ ಎಸ್.ಎಂ. ಕೃಷ್ಣ ಅವರು ಸಿಂಘಾನಿಯಾ ಅವರಿಗೆ ಮುಂಬೈಯ ರಾಜಭವನದಲ್ಲಿ ಪ್ರಮಾಣವಚನ ಬೋಧಿಸಿದರು.

2005: ತಾರ್ ಶಹನಾಯಿ ವಾದಕ ಹಾಗೂ ಭಾರತೀಯ ಅರಣ್ಯಪಡೆ ಸೇವೆಯ ನಿವೃತ್ತ ಅಧಿಕಾರಿ ಎಚ್.ಟಿ. ಕೊಪ್ಪಿಕರ್ (88) ಹೊಸಪೇಟೆಯಲ್ಲಿ ನಿಧನರಾದರು. ಕೊಪ್ಪಿಕರ್ ಮೂಲದವರಾದ ಕೊಪ್ಪಿಕರ್ ಅವರು ತಮ್ಮ ಸಂಬಂಧಿಯೊಬ್ಬರು ಸೃಷ್ಟಿಸ್ದಿದ `ತಾರ್ ಶಹನಾಯಿ' ಎಂಬ ಆಧುನಿಕ ತಂತಿವಾದ್ಯ ಕಂಡು ಆಕರ್ಷಿತರಾಗಿ ಅವರಿಂದ ಒಂದು ಉಪಕರಣ ಮಾಡಿಸಿಕೊಂಡು ಅಭ್ಯಾಸ ಮಾಡಿದರು. ಅದರಲ್ಲೇ ಸಾಧನೆಗೈದು ರಾಷ್ಟ್ರದಲ್ಲಿ ಆಧುನಿಕ ವಾದ್ಯವನ್ನು ಪರಿಚಯಿಸಿ, ಆಕಾಶವಾಣಿ ಸೇರಿದಂತೆ ಹಲವೆಡೆ ಕಾರ್ಯಕ್ರಮವನ್ನೂ ನೀಡಿದರು. ಈ ಸಂಗೀತ ಸಾಧನೆಗೆ ಇವರಿಗೆ ಹಲವು ಸನ್ಮಾನ ಮತ್ತು ಪ್ರಶಸ್ತಿ ಬಂದಿದ್ದವು.

2005: ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷರಾಗಿ ಓಮರ್ ಅಬ್ದುಲ್ಲಾ ಸತತ ಎರಡನೇ ಬಾರಿಗೆ ಆಯ್ಕೆಯಾದರು.

2005: ಸಂಸದರ ಪ್ರದೇಶಾಭಿವೃದ್ಧಿ ನಿಧಿುಂದ ಹಣ ಮಂಜೂರು ಮಾಡಲು ವಿವಿಧ ರಾಜಕೀಯ ಪಕ್ಷಗಳ ಸಂಸತ್ ಸದಸ್ಯರು ರುಷುವತ್ತು ಕೇಳಿದ ಇನ್ನೊಂದು ಸ್ಫೋಟಕ ಸುದ್ದಿಯನ್ನು ಸ್ಟಾರ್ ನ್ಯೂಸ್ ಪ್ರಸಾರ ಮಾಡಿತು. 'ಚಕ್ರವ್ಯೂಹ' ಹೆಸರಿನ ಈ ಕಾರ್ಯಾಚರಣೆಯಲ್ಲಿ ಗೋವಾದ ಮಾಜಿ ಮುಖ್ಯಮಂತ್ರಿ ಚರ್ಚಿಲ್ ಅಲೆಮಾವೊ, ಎನ್ ಡಿ ಎ ಸರ್ಕಾರದಲ್ಲಿ ಸಚಿವರಾಗಿದ್ದ ಫಗನ್ ಸಿಂಗ್ ಕುಲಾಸ್ತೆ ಸೇರಿದಂತೆ 7 ಮಂದಿ ಸಂಸತ್ ಸದಸ್ಯರು ಸಿಕ್ಕಿ ಬಿದ್ದಿರುವುದಾಗಿ ಸ್ಟಾರ್ ನ್ಯೂಸ್ ಪ್ರಕಟಿಸಿತು. ಆರೋಪಿ ಸಂಸದರು: ಅಲೆಮಾವೊ ಚರ್ಚಿಲ್ (ಕಾಂಗ್ರೆಸ್), ಫಗನ್ ಸಿಂಗ್ ಕುಲಾಸ್ತೆ, ರಾಮಸ್ವರೂಪ ಕೋಲಿ, ಚಂದ್ರಪ್ರತಾಪ ಸಿಂಗ್ (ಎಲ್ಲರೂ ಬಿಜೆಪಿ), ಪಾರಸನಾಥ್ ಯಾದವ್ (ಎಸ್ ಪಿ). ರಾಜ್ಯಸಭೆಯಲ್ಲಿ ಆರೋಪಿಗಳು: ಸಾಕ್ಷಿ ಮಹಾರಾಜ್ (ರಾಷ್ಟ್ರೀಯ ಕ್ರಾಂತಿದಳ), ಈಶನ್ ಸಿಂಗ್ (ಬಿ ಎಸ್ ಪಿ).

2001: ರಾಷ್ಟ್ರಪತಿ ಕೆ.ಆರ್. ನಾರಾಯಣನ್ ಅವರು ವ್ಯಂಗ್ಯಚಿತ್ರಕಾರ ಆರ್. ಕೆ. ಲಕ್ಷ್ಮಣ್ ಅವರ ಖ್ಯಾತ ಸೃಷ್ಟಿ `ದಿ ಕಾಮನ್ ಮ್ಯಾನ್' ಪ್ರತಿಮೆಯನ್ನು ಅನಾವರಣಗೊಳಿಸಿದರು. ಪುಣೆಯ ಸಿಂಬಿಯೋಸಿಸ್ ಸೊಸೈಟಿಯ ನೂತನ ಕಟ್ಟಡ ವಿಶ್ವಭವನದಲ್ಲಿ ಈ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. `ಕಾರ್ಟೂನ್ ವ್ಯಕ್ತಿತ್ವ' ಒಂದರ ಅತ್ಯಂತ ಎತ್ತರದ ಲೋಹದ ಪ್ರತಿಮೆ ಇದು. ಈ ಕಂಚಿನ ಪ್ರತಿಮೆಯ ಎತ್ತರ ಎಂಟು ಅಡಿಗಳು.

1997: ಜೇಮ್ಸ್ ಕ್ಯಾಮೆರೋನ್ ಅವರ `ಟೈಟಾನಿಕ್' ಚಲನಚಿತ್ರ ಅಮೆರಿಕಾದ ಚಿತ್ರ ಮಂದಿರಗಳಲ್ಲಿ ಪ್ರದರ್ಶನಗೊಂಡಿತು.

1988: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗುಜರಾತಿ ಸಾಹಿತಿ ಉಮಾಶಂಕರ ಜೋಶಿ ನಿಧನ.

1984: ಹಾಂಕಾಂಗನ್ನು 1997ರ ಜುಲೈ 1ರಂದು ಚೀನೀ ಸಾರ್ವಭೌಮತ್ವಕ್ಕೆ ಹಿಂತಿರುಗಿಸುವ ಒಪ್ಪಂದಕ್ಕೆ ಬ್ರಿಟನ್ ಮತ್ತು ಚೀನಾ ಸಹಿ ಹಾಕಿದವು.

1961: ಪೋರ್ಚುಗೀಸ್ ಆಳ್ವಿಕೆಯಿಂದ ಗೋವಾ ಮುಕ್ತಗೊಂಡಿತು. ದಾಮನ್ ಹಾಗೂ ದಿಯು ಕೂಡಾ ಇದೇ ದಿನ ವಿದೇಶೀ ಆಳ್ವಿಕೆಯಿಂದ ವಿಮುಕ್ತಗೊಂಡಿತು. ಮೇಜರ್ ಜನರಲ್ ಜೆ.ಪಿ. ಕ್ಯಾಂಡೆತ್ ಗೋವಾದ ಸೇನಾ ಗವರ್ನರ್ ಆಗಿ ನೇಮಕಗೊಂಡರು.

1956: ವಿನಯಶೀಲರಾದ 48ರ ಹರೆಯದ ಸದಸ್ಯ ಎಸ್. ಆರ್. ಕಂಠಿ ಅವರನ್ನು ಈದಿನ ಆರಂಭಗೊಂಡ ವಿಧಾನಸಭೆಯು ತನ್ನ ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ಚುನಾಯಿಸಿತು.

1952: ಪ್ರಧಾನಿ ಜವಾಹರಲಾಲ್ ನೆಹರೂ ಅವರು ಆಂಧ್ರಪ್ರದೇಶ ರಾಜ್ಯ ಸ್ಥಾಪನೆಯ ಘೋಷಣೆ ಮಾಡಿದರು.

1918: ರಾಬರ್ಟ್ ರಿಪ್ಲೀ ಅವರ ಕಾಮಿಕ್ `ಬಿಲೀವ್ ಇಟ್ ಆರ್ ನಾಟ್!' ನ್ಯೂಯಾರ್ಕ್ ಗ್ಲೋಬ್ನಲ್ಲಿ ಮೊದಲ ಬಾರಿಗೆ ಪ್ರಕಟಗೊಂಡಿತು. ಇದಕ್ಕೆ ಓದುಗರ ಪ್ರತಿಕ್ರಿಯೆ ಅದ್ಭುತವಾಗಿತ್ತು. ಹೀಗಾಗಿ ಇದು ವಾರಕ್ಕೊಮ್ಮೆ ಹಾಗೂ ನಂತರ ಪ್ರತಿದಿನ ಬರಲು ಆರಂಭವಾಯಿತು.

1916: ಬರ್ಮಾದ (ಈಗಿನ ಮ್ಯಾನ್ಮಾರ್) ಕೊನೆಯ ದೊರೆ ಥೈಬಾ ಅವರು ಭಾರತದ ರತ್ನಗಿರಿ ಕೋಟೆಯಲ್ಲಿ ದೇಶಭ್ರಷ್ಟರಾಗಿದ್ದಾಗ ನಿಧನರಾದರು. ಬ್ರಿಟಿಷರು 1885ರಲ್ಲಿ ಅಪ್ಪರ್ ಬರ್ಮಾ ಮೇಲೆ ದಾಳಿ ನಡೆಸಿ ಥೈಬಾ ಅವರನ್ನು ಪದಚ್ಯುತಿಗೊಳಿಸಿದ್ದರು. ಅಪ್ಪರ್ ಬರ್ಮಾವನ್ನು ಬ್ರಿಟಿಷ್ ಬರ್ಮಾದೊಳಗಿನ ರಾಜ್ಯಕ್ಕೆ ಸೇರಿಸಿಕೊಳ್ಳಲಾಗಿತ್ತು.

1906: ಲಿಯೋನಿದ್ ಇಲಿಚ್ ಬ್ರೆಜ್ನೇವ್ (1906-1982) ಹುಟ್ಟಿದ ದಿನ. ಸೋವಿಯತ್ ಮುತ್ಸದ್ದಿ ಹಾಗೂ ಕಮ್ಯೂನಿಸ್ಟ್ ಪಕ್ಷದ ಮುಖ್ಯಸ್ಥರಾಗಿದ್ದ ಇವರು 18 ವರ್ಷಗಳ ಕಾಲ ಸೋವಿಯತ್ ಒಕ್ಕೂಟದ ನಾಯಕರಾಗಿದ್ದರು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Post a Comment