Saturday, December 15, 2018

ಇಂದಿನ ಇತಿಹಾಸ History Today ಡಿಸೆಂಬರ್ 15

ಇಂದಿನ ಇತಿಹಾಸ History Today ಡಿಸೆಂಬರ್  15
2018: ನವದೆಹಲಿ: ರಫೇಲ್ ವಿವಾದಕ್ಕೆ ಸಂಬಂಧಿಸಿದಂತೆ ಸಿಎಜಿ ವರದಿ ಬಗ್ಗೆ ಸುಪ್ರೀಂಕೋರ್ಟಿಗೆ ಕೇಂದ್ರ ಸರ್ಕಾರವು ತಪ್ಪು ಮಾಹಿತಿ ನೀಡಿದೆ ಎಂದು ಇನ್ನೊಂದು ಸುತ್ತಿನ ಸಮರಕ್ಕೆ ಸಜ್ಜಾದ  ಕಾಂಗೆಸ್ ವಿರುದ್ಧ ಕೇಂದ್ರ ಸರ್ಕಾರವುತೇಜಸ್ ಯುದ್ಧ ವಿಮಾನ ಒದಗಿಸುವಲ್ಲಿನ ಎಚ್ಎಎಲ್ ವೈಫಲ್ಯಕ್ಕೆ ಛೀಮಾರಿ ಹಾಕಿದ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ನೇತೃತ್ವದ ಸಂಸದೀಯ ಸಮಿತಿ ವರದಿಯನ್ನೇ ಬ್ರಹ್ಮಾಸ್ತ್ರವಾಗಿ ಬಳಸಿಕೊಂಡು ಅದನ್ನು ಸಂಸತ್ತಿನಲ್ಲಿ ಮಂಡಿಸಿತು. ವಾಯುಪಡೆಗೆ ಅಗತ್ಯ ಸಂಖ್ಯೆಯ ತೇಜಸ್ ಯುದ್ಧ ವಿಮಾನಗಳನ್ನು ಒದಗಿಸುವಲ್ಲಿ ಹಿಂದುಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ವೈಫಲ್ಯವು ವಾಯುಪಡೆಯ ಸಮರ ಸಾಮರ್ಥ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಿದ್ದು, ಗಂಭೀರ ಬೆದರಿಕೆಯನ್ನು ತಂದೊಡ್ಡಿದೆ, ಇದು ಅತ್ಯಂತ ಕಳವಳಕಾರಿ ವಿಚಾರ ಎಂದು ಖರ್ಗೆ ಅಧ್ಯಕ್ಷತೆಯ ಸಾರ್ವಜನಿಕ ಲೆಕ್ಕಪತ್ರ ಸಮಿತಿಯುಹಗುರ ಯುದ್ಧ ವಿಮಾನದ (ಎಲ್ಸಿಎ) ವಿನ್ಯಾಸ ಅಭಿವೃದ್ಧಿ, ನಿರ್ಮಾಣ ಮತ್ತು ಸೇರ್ಪಡೆ ಕುರಿತ ತನ್ನ ವರದಿಯಲ್ಲಿ ಹೇಳಿದೆ. ’ಸೂಪರ್ ಸಾನಿಕ್ ಯುದ್ಧ ವಿಮಾನದ ಅಭಿವೃದ್ಧಿ ಮತ್ತು ಸೇರ್ಪಡೆಯಲ್ಲಿ ಭಾರೀ ಪ್ರಮಾಣದ ವಿಳಂಬವಾಗಿದೆ ಎಂದು ವರದಿಯು ಛೀಮಾರಿ ಹಾಕಿದೆ. ವಿಳಂಬದ ಪರಿಣಾಮವಾಗಿ ಎರಡು ಎಲ್ಸಿಎ ನೌಕಾತಂಡಗಳು ಮತ್ತು ಭಾರತೀಯ ವಾಯುಪಡೆಗೆ ಮಿಗ್-ಬಿಎಸ್, ಮಿಗ್-೨೯, ಮಿರಾಜ್ - ೨೦೦೦ ಮತ್ತು ಜಾಗ್ವಾರ್ ವಿಮಾನ ಸೇರಿದಂತೆ ವಿವಿಧ ಯುದ್ಧ ವಿಮಾನಗಳನ್ನು ೨೦,೦೩೭ ಕೋಟಿ ರೂಪಾಯಿ ವೆಚ್ಚದಲ್ಲಿ ಮೇಲ್ದರ್ಜೆಗೆ ಏರಿಸುವ ಕಾರ್ ಅನುಷ್ಠಾನಗೊಂಡಿಲ್ಲ ಎಂದು ಸಮಿತಿಯ ವರದಿ ಹೇಳಿದೆ. ತೇಜಸ್ ದೇಶೀಯವಾಗಿ ಅಭಿವೃದ್ಧಿ ಪಡಿಸಲಾದ ಏಕ ಎಂಜಿನ್ ಯುದ್ಧ ವಿಮಾನವಾಗಿದ್ದು, ಎಲ್ಸಿಎ ವಿನ್ಯಾಸ, ಅಭಿವೃದ್ಧಿ ಮತ್ತು ನಿರ್ಮಾಣ ಕಾರ್ಯಕ್ರಮಕ್ಕೆ ಸರ್ಕಾರವು ೧೯೮೩ರಲ್ಲೇ ಅನುಮೋದನೆ ನೀಡಿತ್ತು.ವಿಳಂಬದ ಪರಿಣಾಮವಾಗಿ ಮಿಗ್ -೨೧ ವಿಮಾನಗಳನ್ನು ಹೊರಹಾಕುವ ಕೆಲಸವನ್ನು ಮರುಪರಿಶೀಲಿಸಬೇಕಾಯಿತು ಮತ್ತು ಭಾರತೀಯ ವಾಯುಪಡೆಯು ಅನುಮೋದನೆ ಲಭಿಸಿರುವ ೪೨ ತಂಡಗಳ ಬದಲಿಗೆ ೩೫ ತಂಡಗಳ ಜೊತೆಗೆ ಕಾರ್ಯಾಚರಣೆ ನಡೆಸುವಂತಾಗಿದೆ. ಮಿಗ್ -೨೧ ಮತ್ತು ಮಿಗ್ -೨೭ ತಂಡಗಳು ಮುಂದಿನ ೧೦ ವರ್ಷಗಳ ಅವಧಿಯಲ್ಲಿ ನಿವೃತ್ತಿಹೊಂದುವಂತಾಗಿದೆ  ಎಂದು ಖರ್ಗೆ ಸಮಿತಿ ವಿಶ್ಲೇಷಿಸಿತ್ತು. ಲೋಕಸಭೆ ಮತ್ತು ರಾಜ್ಯ ಸಭೆಯ ೨೨ ಸದಸ್ಯರನ್ನು ಒಳಗೊಂಡಿದ್ದ ಸಮಿತಿಯಲ್ಲಿ ತೃಣಮೂಲ ಕಾಂಗ್ರೆಸ್, ಶಿರೋಮಣಿ ಅಕಾಲಿದಳ, ಬಿಜು ಜನತಾದಳ, ಶಿವಸೇನಾ ಮತ್ತು ಭಾರತೀಯ ಜನತಾ ಪಕ್ಷದ ಸಂಸದರಿದ್ದರುಎಚ್ಎಎಲ್/ ಎಡಿಎ (ಏರೋನಾಟಿಕಲ್ ಡೆವಲಪ್ ಮೆಂಟ್ ಏಜೆನ್ಸಿ-ಎಡಿಎ) ಮತ್ತು ರಕ್ಷಣಾ ಸಚಿವಾಲಯವು ಅಗತ್ಯ ಸಂಖ್ಯೆಯ ವಿಮಾನಗಳನ್ನು ಒದಗಿಸುವಲ್ಲಿ ವಿಫಲವಾಗಿರುವುದು ಭಾರತೀಯ ವಾಯುಪಡೆಯ ಸಮರ ಸಾಮರ್ಥ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಿದ್ದು ರಾಷ್ಟ್ರದ ಭದ್ರತೆಗೆ ಗಂಭೀರ ಬೆದರಿಕೆಯನ್ನು ಉಂಟುಮಾಡಿದೆ ಎಂಬುದಾಗಿ ಭ್ರಮನಿರಸನದೊಂದಿಗೆ ಸಮಿತಿಯು ಷರಾ ಬರೆಯಬೇಕಾಗಿದೆ ಎಂದು ಸಮಿತಿ ಹೇಳಿದೆ.ಫ್ರಾನ್ಸಿನ ಡಸ್ಸಾಲ್ಟ್ ಏವಿಯೇಶನ್ ಕಂಪೆನಿಯು ರಫೇಲ್ ಯುದ್ಧ ವಿಮಾನ ನಿರ್ಮಾಣದಲ್ಲಿ ಆಫ್ ಸೆಟ್ ಪಾಲುದಾರನ ಆಯ್ಕೆಯಲ್ಲಿ ಸರ್ಕಾರಿ ಸ್ವಾಮ್ಯದ ಎಚ್ ಎಎಲ್ ಕಂಪೆನಿಯನ್ನು ಮೂಲೆಗುಂಪು ಮಾಡಿದ್ದಕ್ಕಾಗಿ ಕಾಂಗ್ರೆಸ್ ಪಕ್ಷವು ಕೇಂದ್ರ ಸರ್ಕಾರದ ಮೇಲೆ ತೀವ್ರ ದಾಳಿ ನಡೆಸುತ್ತಿರುವ ವೇಳೆಯಲ್ಲೇ ಖರ್ಗೆ ಸಮಿತಿಯ ವರದಿ ಮಂಡನೆಯಾಗಿದೆ.ಬೆಂಗಳೂರಿನಲ್ಲಿ ಅಕ್ಟೋಬರ್ ತಿಂಗಳಲ್ಲಿ ಎಚ್ ಎಲ್ ನೌಕರರ ಜೊತೆಗೆ ಸಂವಾದ ನಡೆಸಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಮೋದಿ ಸರ್ಕಾರವು ಆಯಕಟ್ಟಿನ ಆಸ್ತಿಯಾಗಿರುವ ಎಚ್ಎಎಲ್ನ್ನು ನಾಶ ಮಾಡುತ್ತಿದೆ ಎಂದು ಆಪಾದಿಸಿದ್ದರು ಮತ್ತುರಫೇಲ್ ನಿಮ್ಮ ಹಕ್ಕು ಎಂಬುದಾಗಿ ಎಚ್ಎಎಲ್ ನೌಕರರಿಗೆ ಹೇಳಿದ್ದರು.ಮಿಗ್ -೨೧ ಮತ್ತು ಮಿಗ್ - ೨೭ ವಿಮಾನ ದಳಗಳು ವಯಸ್ಸಾಗಿ ಹಳಸಲಾಗುತ್ತಿರುವ ಪರಿಣಾಮವಾಗಿ ಕಡಿಮೆಯಾಗುತ್ತಿರುವ ಯುದ್ಧ ವಿಮಾನಗಳನ್ನು ಒದಗಿಸಿ ಭಾರತೀಯ ವಾಯುಪಡೆಯ ಕಾರ್ಯತಂಡಗಳ ಕನಿಷ್ಠ ಬಲವನ್ನು ನಿರ್ವಹಿಸುವ ಸಲುವಾಗಿ ಎಲ್ ಸಿಎ ವಿನ್ಯಾಸ ಅಭಿವೃದ್ದಿ ಯೋಜನೆಯನ್ನು ಹಮ್ಮಿಕೊಳ್ಳಲಾಗಿತ್ತು ಎಂದೂ ಸಮಿತಿ ಹೇಳಿದೆ. ‘ಏನಿದ್ದರೂ, ಯೋಜನೆಯು ಹಲವಾರು ತಾಂತ್ರಿಕ ಸಮಸ್ಯೆಗಳಲ್ಲಿ ಸಿಕ್ಕಿಹಾಕಿಕೊಂಡ ಪರಿಣಾಮವಾಗಿ ಯೋಜನೆ ಅನುಷ್ಠಾನದ ಕಾಲಮಿತಿಯನ್ನು ವಿಸ್ತರಿಸಲಾಯಿತು. ಹೀಗಾಗಿ ಸರ್ಕಾರವು ೨೦೧೬ರ ಜಾಗತಿಕ ನಿಯಮಾವಳಿಗಳ ಚೌಕಟ್ಟಿನಲ್ಲಿ ಜಾಗತಿಕ ಮಾರಾಟಗಾರರಿಂದ ಅಮೆರಿಕದ ಎಫ್-೧೬, ಗ್ಲೋಬ್ ಮಾಸ್ಟರ್ ಸಿ೧೭, ರಶ್ಯಾದ ಸುಖೋಯಿ ಸು-೩೦ ಮತ್ತು ಸು-೩೫, ಯುರೋಪಿಯ ಟೈಫೂನ್, ಸ್ವೀಡಿಶ್ ಗ್ರೀಪೆನ್-, ಫ್ರೆಂಚ್ ರಫೇಲ್ ಇತ್ಯಾದಿ ಲಘು ಯುದ್ಧ ವಿಮಾನಗಳ ಮಾಹಿತಿಯನ್ನು ಆಹ್ವಾನಿಸಿತು ಎಂದೂ ವರದಿ ವಿವರಿಸಿದೆ. ಎಚ್ ಎಎಲ್, ಎಡಿಎ ಮತ್ತು ಅದರ ಕಾರ್ಯಕ್ಷೇತ್ರಗಳು ತಮ್ಮ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ವೈಮಾನಿಕ ರಂಗಕ್ಕೆ ಅತಿ ಅಗತ್ಯವಾದ ತಂತ್ರಜ್ಞಾನವನ್ನು ಹೊಂದುವಲ್ಲಿ ದಯನೀಯವಾಗಿ ವಿಫಲವಾದವು ಎಂದು ಸಮಿತಿ ಬೊಟ್ಟು ಮಾಡಿದೆ.ವೈಮಾನಿಕ ರಂಗದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಕೊರತೆಯ ಪರಿಣಾಮವಾಗಿ ರಾಷ್ಟ್ರವು ಸಹಸ್ರಾರು ಕೋಟಿ ರೂಪಾಯಿಗಳನ್ನು ಯುದ್ಧ ವಿಮಾನ ಹಾಗೂ ನಾಗರಿಕ ವಿಮಾನಗಳನ್ನು ವಿದೇಶಗಳಿಂದ ತರಿಸಿಕೊಳ್ಳಲು ವ್ಯಯ ಮಾಡಬೇಕಾಯಿತು ಎಂಬುದಾಗಿ ಸಮಿತಿ ಕಳವಳ ವ್ಯಕ್ತ ಪಡಿಸಿದೆ. ಸಮರ ಕಾಲದಲ್ಲಿ ಮಿತ್ರರಲ್ಲದ ರಾಷ್ಟ್ರಗಳಿಂದ ಯುದ್ಧ ವಿಮಾನಗಳನ್ನು ಪಡೆಯುವುದು ಕಷ್ಟದ ಕೆಲಸ ಎಂಬುದಾಗಿ ಪ್ರತ್ಯೇಕ ಹೇಳುವ ಅಗತ್ಯವಿಲ್ಲ ಎಂದೂ ವರದಿ ತಿಳಿಸಿದೆ.೨೦೧೮ರ ಜುಲೈವರೆಗಿನ ಅಂಕಿಸಂಖ್ಯೆಗಳ ಪ್ರಕಾರ ಭಾರತೀಯ ವಾಯುಪಡೆ ತನ್ನ ಅಗತ್ಯವಾದ ೨೦೦ ಯುದ್ಧ ವಿಮಾನಗಳ ಪೈಕಿ ಕೇವಲ ಮತ್ತು ವಾಯು ಸಿಬ್ಬಂದಿಗೆ ಬೇಕಾದ  ೨೦ ತರಬೇತಿ ಯುದ್ಧ ವಿಮಾನಗಳನ್ನು  ಮಾತ್ರ ಪಡೆಯಲು ಸಮರ್ಥವಾಯಿತು ಎಂದು ಖರ್ಗೆ ಸಮಿತಿ ವರದಿ ಹೇಳಿತ್ತು. ಎಡಿಎ/ಎಚ್ಎಎಲ್ ಈವರೆಗೆ ಒಂದೇ ಒಂದು ಗುಣಮಟ್ಟದ ತರಬೇತಿ ವಿಮಾನವನ್ನು ಭಾರತೀಯ ವಾಯುಪಡೆಗೆ ಒದಗಸಲು ಕೂಡಾ ಸಮರ್ಥವಾಗಿಲ್ಲ. ಅಲ್ಲದೆ ವಾಯುಪಡೆಯ ಬೇಡಿಕೆಯನ್ನು ಪೂರೈಸುವಷ್ಟು ತನ್ನ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳಲೂ ಎಚ್ಎಎಲ್ಗೆ ಸಾಧ್ಯವಾಗಿಲ್ಲವಾದ್ದರಿಂದ ಭಾರತೀಯ ವಾಯುಪಡೆಯು ತನ್ನ ದಳಗಳ ಬಲ ಕುಗ್ಗದಂತೆ ನೋಡಿಕೊಳ್ಳಲು ದೀರ್ಘಕಾಲ ಆಮದು ವಿಮಾನಗಳನ್ನೇ ನೆಚ್ಚಿಕೊಳ್ಳಬೇಕಾಗಿ ಬಂದಿದೆ ಎಂದು ಸಮಿತಿ ಹೇಳಿತ್ತು.

2018: ಕೊಲಂಬೋ:  ಅಧ್ಯಕ್ಷ ಮೈತ್ರಿಪಾಲ  ಸಿರಿಸೇನಾ ಅವರಿಂದ ವಿವಾದಾತ್ಮಕ ಕ್ರಮವೊಂದರಲ್ಲಿ
ಶ್ರೀಲಂಕಾದ ಪ್ರಧಾನಮಂತ್ರಿಯಾಗಿ ನೇಮಕಗೊಂಡಿದ್ದ ಮಹಿಂದ ರಾಜಪಕ್ಸೆ ಅವರು ಕಡೆಗೂ ರಾಜೀನಾಮೆ ನೀಡಿದರು. ವಿಚಾರವನ್ನು ಅವರ ಪುತ್ರ ಶಾಸನಕರ್ತ ನಮಲ್ ರಾಜಪಕ್ಸೆ ಬಹಿರಂಗ ಪಡಿಸಿದರು. ಸುಪ್ರೀಂಕೋರ್ಟಿನ ಎರಡು ಪ್ರಮುಖ ತೀರ್ಪುಗಳು  ಪ್ರಧಾನ ಮಂತ್ರಿ ಸ್ಥಾನದಲ್ಲಿ ಮುಂದುವರೆಯುವ ಯತ್ನಗಳನ್ನು ವಿಫಲಗೊಳಿಸಿದ ಬಳಿಕ ರಾಜಪಕ್ಸೆ ಅವರು ಅನಿವಾರ್ಯವಾಗಿ ಹುದ್ದೆಯಿಂದ ಕೆಳಗಿಳಿದರು. ಪಕ್ಷದ ಸದಸ್ಯರ ಸಮ್ಮುಖದಲ್ಲಿ ರಾಜಪಕ್ಸೆ ಅವರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡುವ ಪತ್ರಕ್ಕೆ ಸಹಿ ಮಾಡಿದ್ದಾರೆ ಎಂದು ಯುನೈಟೆಡ್ ಪೀಪಲ್ಸ್ ಫ್ರೀಡಂ ಅಲಯನ್ಸ್ (ಯುಪಿಎಫ್) ಸಂಸದ ಶೆಹನ್ ಸೆಮಾಶಿಂಗ ಅವರು ಸುದ್ದಿಗಾರರಿಗೆ ತಿಳಿಸಿದರು.ಅಧ್ಯಕ್ಷ ಸಿರಿಸೇನಾ ಅವರು ಅಕ್ಟೋಬರ್ ೨೬ರಂದು ರಾನಿಲ್ ವಿಕ್ರಮ ಸಿಂಘೆ ಅವರನ್ನು ವಿವಾದಾತ್ಮಕವಾಗಿ ಪ್ರಧಾನಿ ಹುದ್ದೆಯಿಂದ ವಜಾಗೊಳಿಸಿ ರಾಜಪಕ್ಸೆ ಅವರನ್ನು ಪ್ರಧಾನಿಯಾಗಿ ನೇಮಕ ಮಾಡಿದ್ದರು. ಸಿರಿಸೇನಾ ಅವರ ಕ್ರಮವ ದೇಶದಲ್ಲಿ ಅಭೂತಪೂರ್ವ ಸಾಂವಿಧಾನಿಕ ಬಿಕ್ಕಟ್ಟನ್ನು ಸೃಷ್ಟಿಸಿತ್ತು. ರಾಜಪಕ್ಸೆ ಪ್ರಧಾನಿಯಾಗಿ ಮುಂದುವರೆಯುವುದನ್ನು ನಿಷೇಧಿಸಿ ತಾನು ನೀಡಿದ ಆದೇಶಕ್ಕೆ ಮುಂದಿನ ತಿಂಗಳು ಪ್ರಕರಣವನ್ನು ಪೂರ್ಣ ಪ್ರಮಾಣದಲ್ಲಿ ಆಲಿಸುವವರೆಗೆ ತಡೆಯಾಜ್ಞೆ ನೀಡಲು ಸುಪ್ರೀಂಕೋರ್ಟ್ ಡಿಸೆಂಬರ್ ೧೪ರ ಶುಕ್ರವಾರ ನಿರಾಕರಿಸಿತ್ತು.ಅಧ್ಯಕ್ಷ ಸಿರಿಸೇನಾ ಅವರು ಸಂಸತ್ ವಿಸರ್ಜನೆ ಮಾಡಿದ ಕ್ರಮವನ್ನು ಅಕ್ರಮ ಎಂಬುದಾಗಿ ಸುಪ್ರೀಂಕೋರ್ಟ್ ಸರ್ವಾನುಮತದ ತೀರ್ಪು ನೀಡಿತ್ತು. ಕಳೆದ ತಿಂಗಳು ಸಂಸತ್ ವಿಸರ್ಜನೆ ಮಾಡುವ ಮೂಲಕ ಕಾನೂನು ಉಲ್ಲಂಘಿಸಿದ್ದಕ್ಕಾಗಿ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ವಿರುದ್ಧ ವಾಗ್ದಂಡನಾ ಕ್ರಮಕ್ಕೆ ಮಾರ್ಗವನ್ನೂ ಸುಪ್ರೀಂಕೋಟ್ ತೆರೆದಿತ್ತುರಾಜಪಕ್ಸೆ ಅವರಿಗೆ ಸದನದಲ್ಲಿ ಅವಮಾನಕಾರೀ ಸೋಲು ಉಂಟಾಗದಂತೆ ತಡೆಯಲು ಕಳೆದ ತಿಂಗಳು ಸಂಸತ್ತನ್ನು ವಿಸರ್ಜಿಸುವ ಮೂಲಕ ಸಿರಿಸೇನಾ ಅವರು ಸಂವಿಧಾನವನ್ನು ಉಲ್ಲಂಘಿಸಿದ್ದಾರೆ ಎಂದು ಸುಪ್ರೀಂಕೋರ್ಟಿನ ಸಪ್ತ ಸದಸ್ಯ ಪೀಠ ಸರ್ವಾನುಮತದ ತೀರ್ಪಿನಲ್ಲಿ ಹೇಳಿತ್ತು.ನಿಗದಿತ ಅವಧಿಗಿಂತ ಎರಡು ವರ್ಷ ಮುಂಚಿತವಾಗಿಯೇ ದಿಢೀರ್ ಚುನಾವಣೆ ನಡೆಸುವಂತೆಯೂ ಸಿರಿಸೇನಾ ಆದೇಶ ನೀಡಿದ್ದರು. ನ್ಯಾಯಾಲಯಗಳು ಆದೇಶವನ್ನೂ ರದ್ದು ಪಡಿಸಿದ್ದವು. ಹೊಸ ಸರ್ಕಾರವನ್ನು ನೇಮಕ ಮಾಡಲು ಅಧ್ಯಕ್ಷರಿಗೆ ಅನುಕೂಲ ಮಾಡಿಕೊಡಲು ತಾವು ರಾಜೀನಾಮೆ ನೀಡಲು ನಿರ್ಧರಿಸಿರುವುದಾಗಿ ರಾಜಪಕ್ಸೆ ಅವರು ಸಿರಿಸೇನಾ ಜೊತೆಗಿನ ಭೇಟಿ ವೇಳೆ ತಿಳಿಸಿರುವುದಾಗಿ ರಾಜಪಕ್ಸೆ ಅವರ ಪರ ಶಾಸನಕರ್ತ ಲಕ್ಷ್ಮಣ್ ಅಬೆವರ್ದನ  ಸುದ್ದಿಗಾರರಿಗೆ ತಿಳಿಸಿದರು. ರಾನಿಲ್ ವಿಕ್ರಮ ಸಿಂಘೆ ಅವರ ಜೊತೆ ದೂರವಾಣಿಯಲ್ಲಿ ಮಾತನಾಡಿರುವ ಅಧ್ಯಕ್ಷ ಸಿರಿಸೇನಾ ಅವರು ವಿಕ್ರಮಸಿಂಘೆ ಅವರನ್ನು ಪ್ರಧಾನಿಯಾಗಿ ಮರುನೇಮಕ ಮಾಡಲು ಒಪ್ಪಿದ್ದಾರೆ ಎಂದು ಹೇಳಲಾಯಿತು.

2018: ಕೈರೋ: ಈಜಿಪ್ಟಿನ ರಾಜಧಾನಿ ಕೈರೋಧ ದಕ್ಷಿಣಕ್ಕೆ ಇರುವ ಸಖ್ಕಾರದಲ್ಲಿನ ಪಿರಮಿಡ್ ಸಮುಚ್ಛಯದಲ್ಲಿ ,೪೦೦ ವರ್ಷಗಳಷ್ಟು ಹಳೆಯದಾದ ರಾಜ ಪುರೋಹಿತನ ಸಮಾಧಿಯನ್ನು  ಪ್ರಾಕ್ತನ ತಜ್ಞರು ಪತ್ತೆ ಹಚ್ಚಿದ್ದು, ಮೃತ ಪುರೋಹಿತನ ಶವ ಒಂದಿಷ್ಟೂ ಕೆಡದ ಸ್ಥಿತಿಯಲ್ಲಿ ಲಭಿಸಿತು.  ‘೨೦೧೮ರ ಸಾಲಿನ ಕಡೆಯ ಸಂಶೋಧನೆಯನ್ನು ನಾವು ಪ್ರಕಟಿಸುತ್ತಿದ್ದು ಇದು ಹೊಸ ಸಂಶೋಧನೆಯಾಗಿದೆ. ಇದೊಂದು ಖಾಸಗಿ ಸಮಾಧಿಯಾಗಿದೆ ಎಂದು ಪ್ರಾಚೀನತಾ ಸಚಿವ ಖಾಲೆದ್ ಎಲ್ ಎನಾನಿ ವರದಿಗಾರರೂ ಇದ್ದ ಆಹ್ವಾನಿತ ಅತಿಥಿಗಳ ಸಭೆಯಲ್ಲಿ  ಪ್ರಕಟಿಸಿದರು. ‘ಇದು ಅತ್ಯುತ್ತಮವಾಗಿ ಸಂರಕ್ಷಿತವಾಧ ಸಮಾಧಿಯಾಗಿದ್ದು, ಕಲಾಕೃತಿಗಳನ್ನು ಹೊಂದಿದೆ. ಇದು ,೪೦೦ ವರ್ಷಗಳಷ್ಟು ಹಳೆಯದಾದ ರಾಜಪುರೋಹಿತನ ಸಮಾಧಿ. ಐದನೇ ರಾಜವಂಶದ ದೊರೆ ನೆಫೆರಿಕರೆ ಆಡಳಿತ ಕಾಲದಲ್ಲಿ ರಾಜಪುರೋಹಿತನಾಗಿ ಸೇವೆ ಸಲ್ಲಿಸಿದ  ’ವಾಹ್ತ್ಯೆ ಉನ್ನತ ಅಧಿಕಾರಿಯ ಸಮಾಧಿ ಇದು ಎಂದು ಅವರು ನುಡಿದರು.

2018: ನವದೆಹಲಿ: ಅಗಸ್ಟಾ ವೆಸ್ಟ್ ಲ್ಯಾಂಡ್ ವಿವಿಐಪಿ ಹೆಲಿಕಾಪ್ಟರ್ ವಹಿವಾಟು ಹಗರಣದ ಆರೋಪಿತ ಮಧ್ಯವರ್ತಿ ಕ್ರಿಸ್ಟಿಯನ್ ಮೈಕೆಲ್ ಸೇವೆಯಲ್ಲಿರುವ ಮತ್ತು ನಿವೃತ್ತ ವಾಯುಪಡೆ ಅಧಿಕಾರಿಗಳ ವಿದೇಶೀ ವಿಮಾನಯಾನ ವೆಚ್ಚಗಳನ್ನು ಭರಿಸಿರುವುದಾಗಿ ಸಿಬಿಐ ದೆಹಲಿ ನ್ಯಾಯಾಲಯಕ್ಕೆ ತಿಳಿಸಿತು. ಸಿಬಿಐ ಅಹವಾಲಿನ ಬಳಿಕ ನ್ಯಾಯಾಲಯವು ಮೈಕೆಲ್ನನ್ನು ಇನ್ನೂ ನಾಲ್ಕು ದಿನಗಳ ಅವಧಿಗೆ ವಿಚಾರಣಾ ಸಂಸ್ಥೆ ವಶಕ್ಕೆ ಒಪ್ಪಿಸಿತು.ಐದು ದಿನಗಳ ಸಿಬಿಐ ರಿಮಾಂಡ್ ಕೊನೆಗೊಂಡ ಬಳಿಕ ಕ್ರಿಸ್ಟಿಯನ್ ಮೈಕೆಲ್ನನ್ನು ದೆಹಲಿಯ ಪಾಟಿಯಾಲ ಹೌಸ್ ನ್ಯಾಯಾಲಯದಲ್ಲಿ ಹಾಜರು ಪಡಿಸಲಾಯಿತು. ಡಿಸೆಂಬರ್ ೫ರಂದು ಮೈಕೆಲ್ನನ್ನು ದುಬೈಯಿಂದ ಭಾರತಕ್ಕೆ ಗಡೀಪಾರು ಮಾಡಲಾಗಿತ್ತು.ಸಿಬಿಐ ಇನ್ನೂ ಐದು ದಿನಗಳ ಅವಧಿಗೆ ಮೈಕೆಲ್ನನ್ನು ಸಿಬಿಐ ವಶಕ್ಕೆ ಒಪ್ಪಿಸುವಂತೆ ಕೋರಿಕೆ ಮಂಡಿಸಿತ್ತು. ಇನ್ನಷ್ಟು ಸಾಕ್ಷ್ಯಾಧಾರಗಳ ಬಗ್ಗೆ ಮೈಕೆಲ್ ನನ್ನು ಪ್ರಶ್ನಿಸಬೇಕಾಗಿದೆ ಮತ್ತು ಆತನನ್ನು ತನಿಖೆ ಸಲುವಾಗಿ ಮುಂಬೈಗೂ ಕರೆದೊಯ್ಯಬೇಕಾಗಿದೆ ಎಂದು ಸಿಬಿಐ ನ್ಯಾಯಾಲಯಕ್ಕೆ ತಿಳಿಸಿತು. ಇಬ್ಬರು ಹಾಲಿ/ ನಿವೃತ್ತ ವಾಯುಪಡೆ ಅಧಿಕಾರಿಗಳ ಮತ್ತು ಅವರ ಕುಟುಂಬ ಸದಸ್ಯರ ವಿಮಾನಯಾನ ವೆಚ್ಚಗಳನ್ನು ಮೈಕೆಲ್ ಭರಿಸಿದ್ದ. ೨೦೦೯-೧೩ರ ಅವಧಿಯಲ್ಲಿ ಇದಕ್ಕಾಗಿ ಮೈಕೆಲ್ ೯೨ ಲಕ್ಷ ರೂಪಾಯಿಗಳನ್ನು ವೆಚ್ಚ ಮಾಡಿದ್ದ ಎಂಬುದು ತನಿಖೆಯಿಂದ ಬೆಳಕಿಗೆ ಬಂದಿದೆ ಎಂದು ತನಿಖಾ ಸಂಸ್ಥೆಯು ನ್ಯಾಯಾಲಯಕ್ಕೆ ತಿಳಿಸಿತು.ಮೈಕೆಲ್ ವಕೀಲ ಅಲ್ಜೊ ಜೋಸೆಫ್ ಅವರು ಮೈಕೆಲ್ ವಿರುದ್ಧದ ಇಂಟರ್ ಪೋಲ್ ನೋಟಿಸ್ ರದ್ದು ಪಡಿಸುವಂತೆ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರು. ಮೈಕೆಲ್ ವಿದೇಶೀ ವಕೀಲೆ ರೋಸ್ಮರಿ ಪಟ್ರೀಝಿ ಅವರನ್ನು ತಾನು ಪ್ರಕರಣದಲ್ಲಿ ಸಾಕ್ಷಿಯನ್ನಾಗಿ ಮಾಡಬೇಕಾಗಬಹುದು ಎಂದು ಸಿಬಿಐ ನ್ಯಾಯಾಲಯಕ್ಕೆ ತಿಳಿಸಿತು. ರೋಸ್ಮರಿ ಅವರು ಇಟಲಿ ಮತ್ತು ಸ್ವಿಟ್ಜರ್ಲೆಂಡಿನಲ್ಲಿ ಮೈಕೆಲ್ ಕ್ರಿಸ್ಟಿಯನ್ ಪರ ವಕೀಲರಾಗಿದ್ದರುಸಿಬಿಐ ಪರಿಚಯದ ಬಗ್ಗೆ ಪ್ರಶ್ನಿಸಿದಾಗ ರೋಸ್ಮರಿ ಅವರು ತನ್ನ ಪಾಸ್ ಪೋರ್ಟ್ ಮತ್ತು ಮಿಲಾನ್ ಕೋರ್ಟಿನ ಗುರುತಿನ ಚೀಟಿಯನ್ನು ನ್ಯಾಯಾಲಯಕ್ಕೆ ತೋರಿಸಿದರು. ಅದನ್ನು ಆಧರಿಸಿ ನ್ಯಾಯಾಲಯವು ೧೦ ನಿಮಿಷಗಳ ಕಾಲ ಮೈಕೆಲ್ ಭೇಟಿಗೆ ರೋಸ್ಮರಿ ಅವರಿಗೆ ಅವಕಾಶ ಕಲ್ಪಿಸಿತು.ಸಿಬಿಐ ಕೇಂದ್ರ ಕಚೇರಿಯಲ್ಲಿ ಮೈಕೆಲ್ ಭೇಟಿಗೆ ಅವಕಾಶ ನೀಡುವಂತೆ ರೋಸ್ಮರಿ ಅವರು ಸಲ್ಲಿಸಿದ ಅರ್ಜಿಯನ್ನು ನ್ಯಾಯಾಲಯ ವಜಾಮಾಡಿತು.
ನ್ಯಾಯಾಲಯಕ್ಕೆ ಮೊದಲೇ ಅರ್ಜಿ ಸಲ್ಲಿಸಿದ್ದ ಅಲಿಜೊ ಮತ್ತು ಮೈಕೆಲ್ ಭೇಟಿಗೆ ರೋಸ್ಮರಿ ಅವಕಾಶ ಬಯಸಿದ್ದರು. ಆದರೆ ನ್ಯಾಯಾಲಯವು ಅರ್ಜಿಯನ್ನು ಬಾಕಿ ಇರಿಸಿ, ಮೊದಲು ನ್ಯಾಯಾಲಯಕ್ಕೆ ಬರುವಂತೆ ಆಕೆಗೆ ಸೂಚಿಸಿತ್ತು. ತಾವು ಇಟಲಿಗೆ ವಾಪಸಾಗುತ್ತಿದ್ದು, ಕ್ರಿಸ್ಮಸ್ ಕಾಲವಾದ್ದರಿಂದ ಪುನಃ ಶೀಘ್ರದಲ್ಲೇ ಭಾರತಕ್ಕೆ ಬರಲು ಸಾಧ್ಯವಾಗದು, ಆದ್ದರಿಂದ ಇನ್ನೊಮ್ಮೆ ಸೆರೆಮನೆಯಲ್ಲಿ ಮೈಕೆಲ್ ಭೇಟಿಗೆ ಅವಕಾಶ ಬೇಕು ಎಂದು ರೋಸ್ಮರಿ ಅವರು ಪುನಃ ಕೋರಿಕೆ ಮಂಡಿಸಿದರು. ಆದರೆ ಸಿಬಿಐ ಇದನ್ನು ವಿರೋಧಿಸಿತು.ಮೈಕೆಲ್ ಪರ ವಕೀಲರು ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯನ್ನು ಮಾನ್ಯ ಮಾಡುವಂತೆ ಕೋರಿದರು. ತಾವು ಎಲ್ಲ ಪೂರಕ ದಾಖಲೆಗಳನ್ನೂ ಸಿಬಿಐಗೆ ನೀಡುವುದಾಗಿ ಅವರು ನುಡಿದರು. ರೋಸ್ಮರಿ ಅವರು ಒಂದು ಪೆನ್ ಡ್ರೈವ್ ಸೇರಿದಂತೆ ಎಲ್ಲ ದಾಖಲೆಗಳನ್ನೂ ತಾವು ನೀಡುವುದಾಗಿ ಸಿಬಿಐ ವಕೀಲರಿಗೆ ತಿಳಿಸಿದರುರಾಜತಾಂತಿಕ ಸಂಪರ್ಕ ಅವಕಾಶ ಕೋರಿಕೆಗೆ ಸಂಬಂಧಿಸಿದಂತೆ ಇನ್ನೂ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ (ಎಂಇಎ) ಪತ್ರ ತಲುಪಿಲ್ಲ ಎಂದು ಕ್ರಿಸ್ಟಿಯನ್ ಮೈಕೆಲ್ ವಕೀಲ ಅಲಿಜೊ ನುಡಿದರು.


2018: ಬೆಳಗಾವಿ: ಐರ್ಲೆಂಡ್ಲ್ಲಿ ಗರ್ಭಪಾತವನ್ನು ಕಾನೂನು ಬದ್ಧಗೊಳಿಸುವ ಐತಿಹಾಸಿಕ ಮಸೂದೆ ಅಂಗೀಕರಿಸಲಾಗಿದ್ದು, ಕಾನೂನಿಗೆ ಸವಿತಾಳ ಹೆಸರಿಡಬೇಕೆಂದು  ಈಕೆಯ ಹೆತ್ತವರು ಅಪೇಕ್ಷಿಸಿದರು.  ಕ್ಯಾಥೋಲಿಕ್ಸಮುದಾಯವೇ ಅಧಿಕ ಸಂಖ್ಯೆಯಲ್ಲಿರುವ ಐರ್ಲೆಂಡ್ಲ್ಲಿ ಗರ್ಭಪಾತಕ್ಕೆ ಅವಕಾಶ ಇಲ್ಲದೇ 2012ರಲ್ಲಿ ಬೆಳಗಾವಿಯ ಸವಿತಾ ಹಾಲಪ್ಪನವರ ಅಸುನೀಗಿದ್ದರು. ಹಾವೇರಿ ಮೂಲದ ಎಂಜಿನಿಯರ್ಪ್ರವೀಣ ಅವರೊಂದಿಗೆ ಸವಿತಾಳ ವಿವಾಹವಾಗಿತ್ತು. ಐರ್ಲೆಂಡ್ಗಾಲ್ವೇಯಲ್ಲಿ ನೆಲೆಸಿದ್ದ ದಂತವೈದ್ಯೆ ಡಾ| ಸವಿತಾ 17 ವಾರಗಳ ಗರ್ಭಿಣಿಯಾಗಿದ್ದಾಗ ರಕ್ತದಲ್ಲಿನ ನಂಜಿನಿಂದಾಗಿ ಮೃತಪಟ್ಟಿದ್ದರು. ಸವಿತಾಳನ್ನು ಉಳಿಸಿಕೊಳ್ಳಲು ಗರ್ಭಪಾತವೇ ಕೊನೆಯ ಮಾರ್ಗವಾಗಿತ್ತು. ಗರ್ಭಪಾತಕ್ಕೆ ಮನವಿ ಮಾಡಿದರೂ ಐರ್ಲೆಂಡ್ಕಾನೂನಿನಲ್ಲಿ ಅವಕಾಶ ಇಲ್ಲದ್ದರಿಂದ ವೈದ್ಯರು ಅನುಮತಿ ನೀಡಿರಲಿಲ್ಲ. ಹೀಗಾಗಿ 2012, .28ರಂದು ಸವಿತಾ ಮೃತಪಟ್ಟಿದ್ದರು. ಅಂದಿನಿಂದ ವಿಶ್ವದಾದ್ಯಂತ ನಡೆದ ತೀವ್ರ ಹೋರಾಟಗಳಿಗೆ ಸರ್ಕಾರ ಮನ್ನಣೆ ಕೊಟ್ಟಿದೆ. ಸವಿತಾಳ ಸಾವಿನ ಬಳಿಕ ಮೂರು ವರ್ಷಗಳ ಕಾಲ ಐರ್ಲೆಂಡ್ಲ್ಲಿಯೇ ಇದ್ದ ಪತಿ ಪ್ರವೀಣ ಅವರು ಈಗ ಯುಎಸ್ಎನಲ್ಲಿ ನೆಲೆಸಿದ್ದಾರೆ. ಸವಿತಾ ಸಾವಿನ ನಂತರ ಸಿಡಿದೆದ್ದ ಐರ್ಲೆಂಡ್ಮಹಿಳೆಯರು ಗರ್ಭಪಾತಕ್ಕೆ ಅವಕಾಶ ನೀಡಬೇಕೆಂದು ದೇಶಾದ್ಯಂತ ಪ್ರತಿಭಟನೆ ನಡೆಸಿದ್ದರು. ಕೂಗು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೋರಾಟ ಚಳವಳಿಗೆ ಕಾರಣವಾಗಿತ್ತು. ಐರ್ಲೆಂಡ್ಧಾರ್ಮಿಕ ನಂಬಿಕೆಯ ಹಿನ್ನೆಲೆಯಲ್ಲಿ ಇದಕ್ಕೆ  ಅವಕಾಶವೇ ಇಲ್ಲ ಎಂದು ವಾದ ಶುರುವಾಯಿತು. ಸತತ ಆರು ವರ್ಷಗಳ ಸುದೀರ್ಘಹೋರಾಟದ ಫಲವಾಗಿ ಗರ್ಭಪಾತವನ್ನು ಕಾನೂನು ಬದ್ಧಗೊಳಿಸುವ ಐತಿಹಾಸಿಕ ಮಸೂದೆಗೆ ಅಲ್ಲಿನ ಸಂಸತ್ಅಂಗೀಕಾರ ನೀಡಿದೆ. ಇದಕ್ಕೆ ನಡೆದ ಜನಮತಗಣನೆಯಲ್ಲಿ ಶೇ.64ರಷ್ಟು ಬೆಂಬಲ ದೊರೆತಿದ್ದು, ಕಾನೂನು ಜಾರಿಗೆ ರಾಷ್ಟ್ರಪತಿಗಳ ಅಂಕಿತ ಮಾತ್ರ ಬಾಕಿ ಉಳಿಯಿತು.


2018: ನವದೆಹಲಿ: ರಫೇಲ್ಯುದ್ಧ ವಿಮಾನ ಖರೀದಿಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ ಎಂದು ಸರ್ಕಾರಕ್ಕೆ ಕ್ಲೀನ್ಚಿಟ್ನೀಡಿದ ತೀರ್ಪಿನಲ್ಲಿ ತಪ್ಪು ನುಸುಳಿದೆ ಎಂದು ಕೇಂದ್ರ ಸರ್ಕಾರ  ಕೋರ್ಟ್ಮೊರೆ ಹೋಯಿತು. ಒಪ್ಪಂದದ ಬೆಲೆ ವಿವರಕ್ಕೆ ಸಂಬಂಧಿಸಿದಂತೆ ಮಹಾಲೇಖಪಾಲರ ವರದಿ(ಸಿಎಜಿ)ಯನ್ನು ಸಂಸದೀಯ ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ (ಪಿಎಸಿ) ಗೆ ಸಲ್ಲಿಸಲಾಗಿದೆ ಮತ್ತು ಪರಿಷ್ಕರಿಸಿದ ಆವೃತ್ತಿಯನ್ನು ಸಂಸತ್ತಿನಲ್ಲಿ ಮಂಡಿಸಲಾಗಿದೆ ಎಂದು ಸುಪ್ರೀಂಕೋರ್ಟ್ತೀರ್ಪಿನಲ್ಲಿ ಉಲ್ಲೇಖಿಸಿದ ಮಾಹಿತಿಯನ್ನು ಸರಿಪಡಿಸುವಂತೆ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ಮೊರೆ ಹೋಯಿತು. ಕೋರ್ಟ್ಗೆ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದ ಮಾಹಿತಿಯ ವ್ಯಾಖ್ಯಾನ ತಪ್ಪಾಗಿದೆ ಎಂದು ಹಿರಿಯ ವಕೀಲರು ತಿಳಿಸಿದ್ದಾರೆ. ವಾಕ್ಯ ರಚನೆಯಲ್ಲಿನ ದೋಷದಿಂದಾಗಿ ತೀರ್ಪಿನಲ್ಲಿರುವ ಒಂದು ಪ್ಯಾರಾ ತಪ್ಪು ಅರ್ಥ ನೀಡುತ್ತಿದೆ. ಅದರಲ್ಲಿ ತಿದ್ದುಪಡಿ ಮಾಡಬೇಕಿದೆ ಎಂದು ವಿವರಿಸಿ ಕೋರ್ಟ್ಗೆ ಅಫಿಡವಿಟ್ಸಲ್ಲಿಸಿತು. ಕಾಂಗ್ರೆಸ್ನಾಯಕ ಮಲ್ಲಿಕಾರ್ಜುನ ಖರ್ಗೆ ಪಿಎಸಿ ಮುಖ್ಯಸ್ಥರಾಗಿದ್ದು, ರಫೇಲ್ಗೆ ಸಂಬಂಧಿಸಿದ ಯಾವುದೇ ವರದಿಯನ್ನು ನೀಡಿಲ್ಲ ಎಂದಿದ್ದರು. ಅಲ್ಲದೆ ಪಿಎಸಿ ವರದಿ ಸಂಸತ್ತಿನಲ್ಲೂ ಮಂಡಿಸಲಾಗಿಲ್ಲ ಎಂದು ಕಾಂಗ್ರೆಸ್ಆರೋಪಿಸಿತ್ತು. ಆದರೆ ಕೋರ್ಟ್ಅನ್ನು ನಾವು ತಪ್ಪುದಾರಿಗೆ ಎಳೆದಿಲ್ಲ. ಬದಲಿಗೆ ವರದಿಯಲ್ಲಿ ಅಚ್ಚು ದೋಷ ನುಸುಳಿದೆ ಎಂದು ಸರ್ಕಾರ ಸಮರ್ಥನೆ ಮಾಡಿಕೊಂಡಿತು.
2017: ನವದೆಹಲಿ: ಒಂದೇ ಉಸಿರಿನಲ್ಲಿ ತ್ರಿವಳಿ ತಲಾಖ್ ಅಥವಾ ತಲಾಖ್ -ಇ-ಬಿದ್ದತ್ ಮೂಲಕ ವಿಚ್ಛೇದನ ನೀಡುವ ಮುಸ್ಲಿಮ್ ವಿವಾಹ ವಿಚ್ಛೇದನವನ್ನು  ಅಪರಾಧವಾಗಿ ಪರಿಗಣಿಸಿ ಜೈಲು ಶಿಕ್ಷೆ ವಿಧಿಸಲು ಅವಕಾಶ ನೀಡುವ ಕರಡು ಮಸೂದೆಗೆ ಸಂಸತ್ತಿನ  ಚಳಿಗಾಲದ ಅಧಿವೇಶನದ ಮೊದಲ ದಿನ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿತು. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟವು ಕರಡು ಮಸೂದೆಗೆ ಅನುಮೋದನೆ ನೀಡಿತು. ಕಳೆದ ತಿಂಗಳು ಕೇಂದ್ರ ಸರ್ಕಾರವು ಸಂಸತ್ತಿನ ಹಾಲಿ ಅಧಿವೇಶನದಲ್ಲಿ ಮಸೂದೆ ಮಂಡಿಸುವ ಬಗ್ಗೆ ಪ್ರತಿಕ್ರಿಯೆಗಳನ್ನು ಸಲ್ಲಿಸುವಂತೆ ಎಲ್ಲ ರಾಜ್ಯ ಸರ್ಕಾರಗಳಿಗೆ ಪತ್ರ ಬರೆದಿತ್ತು. ಮುಸ್ಲಿಮ್ ಮಹಿಳೆಯರ ವೈವಾಹಿಕ ಹಕ್ಕುಗಳ ರಕ್ಷಣೆಯ ಉದ್ದೇಶಿತ ಮಸೂದೆಯು ಜಮ್ಮು ಮತ್ತು ಕಾಶ್ಮೀರವನ್ನು ಹೊರತು ಪಡಿಸಿ ದೇಶಾದ್ಯಂತ ಒಂದೇ ಉಸಿರಿನ ತ್ರಿವಳಿ ತಲಾಖ್ ಗೆ ಸಂಬಂಧಿಸಿದ ಎಲ್ಲ ಪ್ರಕರಣಗಳನ್ನೂ ಇತ್ಯರ್ಥ ಗೊಳಿಸಲಿದೆ.  ಕರಡು ಮಸೂದೆಯ ವಿಧಿಗಳ ಪ್ರಕಾರ ಒಂದೇ ಉಸಿರಿನಲ್ಲಿ ತ್ರಿವಳಿ ತಲಾಖ್ ನೀಡುವ ಗಂಡನನ್ನು ಮೂರು ವರ್ಷಗಳವರೆಗೆ ಸೆರೆಮನೆಗೆ ಕಳುಹಿಸಬಹುದು ಮತ್ತು ಆತನಿಗೆ ದಂಡವನ್ನೂ ವಿಧಿಸಬಹುದು. ಮೌಖಿಕ, ಲಿಖಿತ ಅಥವಾ ಎಲೆಕ್ಟ್ರಾನಿಕ್ ಮಾಧ್ಯಮ ಸೇರಿದಂತೆ ಯಾವುದೇ ರೂಪದ ಒಂದೇ ಉಸಿರಿನ ತ್ರಿವಳಿ ತಲಾಖ್ ನ್ನು ಮಸೂದೆಯ ನಿಷೇಧಿಸುವುದು ಮತ್ತು ಶಿಕ್ಷಾರ್ಹ ಅಪರಾಧವನ್ನಾಗಿ ಮಾಡುವುದು. ಸಂತ್ರಸ್ತ ಮುಸ್ಲಿಮ್ ಮಹಿಳೆ ಮತ್ತು ಆಕೆಯನ್ನು ಅವಲಂಬಿಸಿದ ಮಕ್ಕಳಿಗೆ ಹಾಗೂ ಅಪ್ರಾಪ್ತ ಮಕ್ಕಳ ಉಸ್ತುವಾರಿ ಹಕ್ಕುಗಳನ್ನು ಒದಗಿಸುವ ಮಸೂದೆಯು ಆಕೆಗೆ ಜೀವನಾಂಶ ಭತ್ಯೆ ಒದಗಿಸಲು ಅವಕಾಶ ನೀಡಿದೆ. ಈ ವರ್ಷ ಆಗಸ್ಟ್ ತಿಂಗಳಲ್ಲಿ ಸುಪ್ರೀಂಕೋರ್ಟ್ ಒಂದೇ ಉಸಿರಿನ ತ್ರಿವಳಿ ತಲಾಖ್  ವಿಚ್ಛೇದನವನ್ನು ಅಕ್ರಮ ಮತ್ತು ಸಂವಿಧಾನ ಬಾಹಿರ ಎಂಬುದಾಗಿ ಚರಿತ್ರಾರ್ಹ ತೀರ್ಪು ನೀಡಿತ್ತು. ಆದರೆ ಈ ತೀರ್ಪಿನ ಬಳಿಕವೂ ಒಂದೇ ಉಸಿರಿನ ತ್ರಿವಳಿ ತಲಾಖ್ ಮೂಲಕ ವಿಚ್ಛೇದನ ನೀಡಿದ  ೬೭ ಪ್ರಕರಣಗಳು ಘಟಿಸಿವೆ ಎಂದು ಸರ್ಕಾರಿ ಮೂಲಗಳು ಹೇಳಿದವು. ತೀರ್ಪಿಗಿಂತ ಮೊದಲು ಇಂತಹ ೧೭೭ ವಿಚ್ಛೇದನಾ ಪ್ರಕರಣಗಳು ವರದಿಯಾಗಿದ್ದು, ಉತ್ತರ ಪ್ರದೇಶ ಮತ್ತು , ಬಿಹಾರದಲ್ಲಿ ಹೆಚ್ಚಿನ ಸಂಖ್ಯೆಯ ವಿಚ್ಛೇದನಗಳು ಆಗಿವೆ ಎಂದು ವರದಿಗಳು ಹೇಳಿದವು. ಸುಪ್ರೀಂಕೋರ್ಟ್ ತೀರ್ಪಿಗಿಂತ ಮೊದಲು ಪ್ರಧಾನಿ ನರೇಂದ್ರ ಮೋದಿ ಅವರು ಈ ಬಗ್ಗೆ ಅಧ್ಯಯನಕ್ಕಾಗಿ ಸಚಿವರ ತಂಡವೊಂದನ್ನು ರಚಿಸಿದ್ದರು. ವಿತ್ತ ಸಚಿವ ಅರುಣ್ ಜೇಟ್ಲಿ, ಗೃಹ ಸಚಿವ ರಾಜನಾಥ್ ಸಿಂಗ್, ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್, ಕಾನೂನು ಸಚಿವ ರವಿಶಂಕರ ಪ್ರಸಾದ್ ಈ ಸಮಿತಿಯ ಸದಸ್ಯರಾಗಿದ್ದರು. ಉತ್ತರ ಪ್ರದೇಶದಲ್ಲಿ ಬಿಜೆಪಿಯು ಈ ವಿಚಾರವನ್ನು ಚುನಾವಣಾ ಪ್ರಚಾರದಲ್ಲಿ ಪ್ರಮುಖ ವಿಷಯವಾಗಿಯೂ ಪ್ರಸ್ತಾಪಿಸಿತ್ತು. ಇದು ಬಿಜೆಪಿಗೆ ಮುಸ್ಲಿಮ್ ಮಹಿಳೆಯರ ಮತಗಳನ್ನು ತಂದು ಕೊಟ್ಟಿತ್ತು.

2017: ನವದೆಹಲಿ: ವಿವಿಧ ಸೇವೆಗಳು ಮತ್ತು ಕಲ್ಯಾಣ ಯೋಜನೆಗಳಿಗೆ, ಬ್ಯಾಂಕ್ ಖಾತೆ ಹಾಗೂ ಮೊಬೈಲ್ ಸಂಖ್ಯೆಗೆ  ಕಡ್ಡಾಯ ಆಧಾರ್ ಜೋಡಣೆ ಗಡುವನ್ನು ಸುಪ್ರೀಂಕೋರ್ಟ್ ಸಂವಿಧಾನ ಪೀಠವು  2018ರ ಮಾರ್ಚ್ ೧೫ಕ್ಕೆ ವಿಸ್ತರಿಸಿತು. ಆದರೆ  ಆಧಾರ್ ಕಾರ್ಡ್ ಹೊಂದಿರುವವರು ಹೊಸ ಬ್ಯಾಂಕ್ ಖಾತೆ ತೆರೆಯಬಯಸಿದರೆ ತಮ್ಮ ಆಧಾರ್ ಕಾರ್ಡ್ ಸಲ್ಲಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ನೇತೃತ್ವದ ಸುಪ್ರೀಂಕೋರ್ಟ್ ಪಂಚಸದಸ್ಯ ಪೀಠ ಸ್ಪಷ್ಟ ಪಡಿಸಿತು. ಆಧಾರ್ ಇಲ್ಲದೇ ಇರುವವರಿಗೆ ಮಾತ್ರ ಹೊಸ ಬ್ಯಾಂಕ್ ಖಾತೆ ತೆರೆಯಲು ಆಧಾರ್ ಜೋಡಣೆಯ ಗಡುವನ್ನು ೨೦೧೮ರ ಮಾರ್ಚ್ ೩೧ರವರೆಗೆ ವಿಸ್ತರಿಸಲಾಗಿದೆ. ಅವರು ಆಧಾರ್ ದಾಖಲಾತಿಗಾಗಿ  ಅರ್ಜಿ ಸಲ್ಲಿಸಲು ಮಾರ್ಚ್ ೩೧ರವೆಗೆ ಕಾಲಾವಕಾಶ ಇದೆ. ಆಧಾರ್ ದಾಖಲಾತಿಗಾಗಿ ಸಲ್ಲಿಸಿದ  ಅರ್ಜಿಯ ಪ್ರತಿಯನ್ನು ಅವರು ಬ್ಯಾಂಕಿಗೆ ಸಲ್ಲಿಸಬಹುದು ಎಂದು ಪೀಠ ಹೇಳಿತು. ‘ಯಾರು ಈಗಾಗಲೇ ಆಧಾರ್ ಹೊಂದಿದ್ದಾರೋ ಅವರು ಹೊಸ ಬ್ಯಾಂಕ್ ಖಾತೆ ತೆರೆಯಲು ಆಧಾರ್ ಇಲ್ಲದೇ ಹೋಗುವಂತಿಲ್ಲ. ಅವರು ಆಧಾರ್ ಹೊಂದಿದ್ದರೆ, ಅದನ್ನು ಬ್ಯಾಂಕಿಗೆ ಸಲ್ಲಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ಮಿಶ್ರ ಅವರು ಭಾರತದ ವಿಶಿಷ್ಠ ಗುರುತು ಪ್ರಾಧಿಕಾರದ (ಯುಐಡಿಎಐ) ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ಸಿ.ಎ. ಸುಂದರಂ ಅವರಿಗೆ ಸ್ಪಷ್ಟ ಪಡಿಸಿದರು.  ‘ನೋಡಿ, ಈಗಾಗಲೇ ಆಧಾರ್ ಕಾರ್ಡ್ ಹೊಂದಿರುವವರು ಆಧಾರ್ ದಾಖಲಾತಿ ಕೋರಿಕೆ ಅರ್ಜಿ  ಸಲ್ಲಿಸುವ ಪ್ರಶ್ನೆಯೇ ಇಲ್ಲ ಎಂದು ಪಂಚ ಸದಸ್ಯ ಪೀಠದ ಪರವಾಗಿ ತೀರ್ಪು ಓದಿದ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಹೇಳಿದರು. ಆಧಾರ್ ಯೋಜನೆಯ ಸಿಂಧುತ್ವವನ್ನೇ ಪ್ರಶ್ನಿಸಿರುವ ೨೮ ಪ್ರತ್ಯೇಕ ರಿಟ್ ಅರ್ಜಿಗಳ ಅಂತಿಮ ವಿಚಾರಣೆಯನ್ನು ೨೦೧೮ರ ಜನವರಿ ೧೭ರಂದು ಆರಂಭಿಸಲು ಪೀಠವು ತೀರ್ಮಾನಿಸಿತು. ಆಧಾರ್ ಸಿಂಧುತ್ವದ ಪ್ರಶ್ನೆ ಅತ್ಯಂ ತ ಮಹತ್ವದ್ದು. ಪ್ರಜೆಗಳು ಮತ್ತು ಸರ್ಕಾರದ ಹಿತದೃಷ್ಟಿಯಿಂದ ಆದಷ್ಟೂ ಬೇಗ ಈ ವಿಷಯದಲ್ಲ ಸ್ಪಷ್ಟತೆಯನ್ನು ಹೊಂದಬೇಕಾದ ಅಗತ್ಯ ಇದೆ ಎಂದು ನ್ಯಾಯಮೂರ್ತಿ ಚಂದ್ರಚೂಡ್ ನುಡಿದರು. ಒಂಭತ್ತು ಸದಸ್ಯರ ಸಂವಿಧಾನಪೀಠವು ೨೦೧೭ರ ಆಗಸ್ಟ್ ೨೪ರಂದು ತನ್ನ ತೀರ್ಪಿನಲ್ಲಿ ಖಾಸಗಿತನವನ್ನು ಮೂಲಭೂತ ಹಕ್ಕು ಎಂಬುದಾಗಿ ಮಾನ್ಯ ಮಾಡಿದೆ ಮತ್ತು ಅದು ಮೂಲಭೂತ ಮಾನವ ಘನತೆ ಮತ್ತು ಬದುಕುವ ಹಕ್ಕಿನ ಜೊತೆಗೆ ಹೆಣೆದುಕೊಂಡಿದೆ ಎಂದು ಹೇಳಿದೆ ಎಂದು ನ್ಯಾಯಮೂರ್ತಿ ಚಂದ್ರಚೂಡ್  ಗಮನ ಸೆಳೆದರು. ಆಧಾರ್ ಸಂವಿಧಾನಬದ್ಧವೇ ಅಥವಾ ಅಲ್ಲವೇ ಎಂಬ ಪ್ರಶ್ನೆಯನ್ನು ಹೆಚ್ಚು ಮಹತ್ವ ಪೂರ್ಣವಾಗುವಂತೆ ಈ ತೀರ್ಪು  ಮಾಡಿದೆ. ಪಂಚ ಸದಸ್ಯ ಪೀಠವು ಆದಷ್ಟೂ ಬೇಗ ಇದನ್ನು ಇತ್ಯರ್ಥ ಪಡಿಸಬೇಕಾಗಿದೆ ಎಂದು ಅವರು ನುಡಿದರು. ಆಧಾರ್ ಸಿಂಧುತ್ವವನ್ನು ಪ್ರಶ್ನಿಸಿರುವ ಅರ್ಜಿದಾರರು ಯೋಜನೆಯಡಿಯಲ್ಲಿ ಬಯೋಮೆಟ್ರಿಕ್ ಮತ್ತು ವೈಯಕ್ತಿಕ ವಿವರಗಳನ್ನು ನೀಡಬೇಕಾಗುತ್ತದೆ. ಇದು ದಬ್ಬಾಳಿಕೆಯ ಕ್ರಮವಾಗಿದ್ದು ಸಾಮಾನ್ಯ ಪೌರರ ಖಾಸಗಿತನದ ಮೂಲಭೂತ ಹಕ್ಕನ್ನು ಉಲ್ಲಂಘಿಸುತ್ತದೆ. ಮಾಹಿತಿ ಸೋರಿಕೆ ಮಾಡುವ ಸಿಬ್ಬಂದಿಯನ್ನು ಶಿಕ್ಷಿಸಲು ಮತ್ತು ಮಾಹಿತಿ ಸೋರಿಕೆಯಾಗದಂತೆ ತಡೆಯಲು ಭಾರತದಲ್ಲಿ ಯಾವುದೇ ರಕ್ಷಣಾತ್ಮಕ ವ್ಯವಸ್ಥೆ ಇಲ್ಲವಾದ್ದರಿಂದ ಖಾಸಗಿತನಕ್ಕೆ ಅಪಾಯ ಉಂಟಾಗುತ್ತದೆ ಎಂದು ಅರ್ಜಿದಾರರು ವಾದಿಸಿದ್ದರು. ಸಂವಿಧಾನ ಪೀಠವು ಮೊಬೈಲ್ ಫೋನ್ ಮತ್ತು ಆಧಾರ್ ಜೋಡಣೆ ಗಡುವನ್ನು ೨೦೧೮ರ ಫೆಬ್ರವರಿ ೬ರಿಂದ ಮಾರ್ಚ್ ೩೧ ವಿಸ್ತರಿಸಿದೆ. ಇ-ಕೆವೈಸಿ ಪ್ರಕ್ರಿಯೆಯಲ್ಲಿ ಹಾಲಿ ಅಥವಾ ಹೊಸ  ಮೊಬೈಲ್ ಫೋನ್ ಸಂಪರ್ಕಕ್ಕೆ ಆಧಾರ್ ಕಡ್ಡಾಯವಾಗಿ ಬೇಕು. ಸರ್ಕಾರದ ಸಬ್ಸಿಡಿ ಸಲುವಾಗಿ ೧೩೯ ಸೇವೆಗಳಿಗೆ ಆಧಾರ್ ಜೋಡಣೆ ಗಡುವನ್ನು ಕೂಡಾ ಕೋರ್ಟ್  ೨೦೧೮ರ ಮಾರ್ಚ್ ೩೧ಕ್ಕೆ ವಿಸ್ತರಿಸಿದೆ. ಗಡುವು ವಿಸ್ತರಣೆ ಆದೇಶವನ್ನು  ರಾಜ್ಯ ಸರ್ಕಾರಗಳಿಗೆ ತಲುಪಿಸಬೇಕು ಮತ್ತು ಆಧಾರ್ ಕಾರ್ಡ್ ಇಲ್ಲವೆಂಬ ಕಾರಣಕ್ಕಾಗಿ ತಳಮಟ್ಟದಲ್ಲಿ ಜನರು ಮೂಲಭೂತ ಕಲ್ಯಾಣ ಕಾರ್ಯಕ್ರಮ ಮತ್ತು ಸಬ್ಸಿಡಿಗಳಿಂದ ವಂಚಿತರಾಗಬಾರದು ಎಂದು ಕೋರ್ಟ್ ಹೇಳಿತು.

2017: ನವದೆಹಲಿ: ರಾಜ್ಯಸಭಾ ಕಲಾಪ ನಿರ್ವಹಣೆಯಲ್ಲಿ ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರು ಸದನದ ಸಭಾಪತಿಯಾಗಿ ಕಾರ್ಯ ನಿರ್ವಹಿಸಿದ ಮೊದಲ ದಿನವೇ ಕೆಲವು ಬದಲಾವಣೆಗಳನ್ನು ಜಾರಿಗೊಳಿಸಿದರು ಮತ್ತು ಸಚಿವರು ಹಾಗೂ ಸದಸ್ಯರಿಗೆ ಪತ್ರಗಳನ್ನು ಮಂಡನೆ ಮಾಡುವಾಗ ’ವಸಾಹತುಶಾಹಿ ಪದಗಳನ್ನು ಬಳಸಬೇಡಿ ಎಂದು ಸೂಚಿಸಿದರು.  ಸಂಸತ್ತಿನ ಚಳಿಗಾಲದ ಅಧಿವೇಶನದ ಮೊದಲ ದಿನ ಮೇಲ್ಮನೆಯ  ಸಭಾಧ್ಯಕ್ಷತೆ ವಹಿಸಿದ ನಾಯ್ಡು ಅವರು ದಾಖಲೆಗಳನ್ನು ಮಂಡಿಸುವಾಗ ಯಾರು ಕೂಡಾ ’ಐ ಬೆಗ್ ಟು (ನಾನು ಬೇಡುತ್ತೇನೆ) ಎಂಬ ಪದವನ್ನು ಬಳಸಬಾರದು ಎಂದು ಹೇಳಿದರು. ಸೂಚಿತ ’ಪತ್ರ/ ದಾಖಲೆ ಮಂಡನೆ ಮಾಡಲು ನಿಲ್ಲುತ್ತೇನೆ  ಎಂದಷ್ಟೇ ಹೇಳಿ.  ’ಬೇಡುವ ಅಗತ್ಯ ಇಲ್ಲ.. ಇದು ಸ್ವತಂತ್ರ ಭಾರತ ಎಂದು ಅವರು ನುಡಿದರು. ಪತ್ರಗಳನ್ನು ಮಂಡನೆ ಮಾಡುವಂತೆ ಕರೆದಾಗ ಸಚಿವರು ’ಈದಿನದ ಪರಿಷ್ಕೃತ ಕಲಾಪ ಪಟ್ಟಿಯಲ್ಲಿ ನನ್ನ ಹೆಸರಿನ ಮುಂದೆ ಸೂಚಿತವಾಗಿರುವ ಪತ್ರಗಳನ್ನು ಮಂಡಿಸಲು ನಾನು ಅನುಮತಿ ಬೇಡುತ್ತೇನೆ ಎಂದು ಹೇಳುತ್ತಿದ್ದುದನ್ನು ಗಮನಿಸಿದ  ಸಭಾಪತಿ ಈ ಸಲಹೆ ಮಾಡಿದರು. ಏನಿದ್ದರೂ ಇದು ಸಲಹೆ ಮಾತ್ರ, ಆದೇಶವಲ್ಲ ಎಂದೂ ಅವರು ತತ್ ಕ್ಷಣವೇ ಸ್ಪಷ್ಟ ಪಡಿಸಿದರು. ಸದನದ ಸಭಾಪತಿಯಾಗಿ ಮೊದಲ ದಿನ ಕಾರ್ಯ ನಿರ್ವಹಿಸಿದ ನಾಯ್ಡು ಅವರು ಇದೊಂದೇ ಬದಲಾವಣೆ ಮಾಡಿದ್ದಲ್ಲ. ಸಂತಾಪ ಸೂಚಕ ನಿರ್ಣಯ ಓದಿ ಹೇಳುವಾಗ ಕೂಡಾ ಅವರು ತಮ್ಮಪೀಠದಲ್ಲಿ ಎದ್ದು ನಿಂತುಕೊಂಡೇ ನಿರ್ಣಯ ಓದಿದರು. ಹಿಂದಿನ ಸಭಾಪತಿಗಳಾದ ಹಮೀದ್  ಅನ್ಸಾರಿ, ಭೈರೋನ್ ಸಿಂಗ್ ಶೆಖಾವತ್ ಅವರು ಪೀಠದಲ್ಲಿ ಕುಳಿತುಕೊಂಡೇ ಸಂತಾಪ ಸೂಚಕ ನಿರ್ಣಯಗಳನ್ನು ಓದುತ್ತಿದ್ದರು. ಲೋಕಸಭಾಧ್ಯಕ್ಷೆ ಸುಮಿತ್ರಾ ಮಹಾಜನ್ ಅವರೂ ಸಂತಾಪ ಸೂಚಕ ನಿರ್ಣಯಗಳನ್ನು ಓದುವಾಗ ಎದ್ದು ನಿಂತುಕೊಳ್ಳುತ್ತಾರೆ. ನಾಯ್ಡು ಅವರು ಆಗಸ್ಟ್ ತಿಂಗಳಲ್ಲಿ ಭಾರತದ ಉಪರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಸಂವಿಧಾನದ ಪ್ರಕಾರ ಉಪರಾಷ್ಟ್ರಪತಿಯವರೇ ರಾಜ್ಯಸಭೆಯ ಸಭಾಪತಿಯಾಗಿ ಕಾರ್ಯ ನಿರ್ವಹಿಸುತ್ತಾರೆ.

2017: ನವದೆಹಲಿ: ಸಂಸತ್ ಸದಸ್ಯರು ಮತ್ತು ರಾಜ್ಯ ಶಾಸನಸಭೆಗಳ ಸದಸ್ಯರ ವಿರುದ್ಧ ಬಾಕಿ ಇರುವ ೧,೫೮೧ ಕ್ರಿಮಿನಲ್ ಪ್ರಕರಣಗಳ ವಿಚಾರಣೆಗಾಗಿಯೇ ೧೨ ಫಾಸ್ಟ್ ಟ್ರ್ಯಾಕ್ ಕೋರ್ಟ್‌ಗಳನ್ನು  ರಚಿಸುವ ಕೇಂದ್ರ ಸರ್ಕಾರದ ಯೋಜನೆಗೆ ಸುಪ್ರೀಂಕೋರ್ಟ್  ತನ್ನ ಒಪ್ಪಿಗೆಯ ಮುದ್ರೆ ಒತ್ತಿತು. ರಾಜಕಾರಣಿಗಳ ವಿರುದ್ಧ ದಾಖಲಾಗಿರುವ ಈ ಕ್ರಿಮಿನಲ್ ಖಟ್ಲೆಗಳ ವಿಚಾರಣೆಯನ್ನು ಒಂದು ವರ್ಷದ ಒಳಗಾಗಿ ಪೂರ್ಣಗೊಳಿಸುವ ಇಚ್ಛೆಯಿಂದ ಕೇಂದ್ರ ಸರ್ಕಾರ ಈ ವಿಶೇಷ ನ್ಯಾಯಾಲಯಗಳ ರಚನೆಗೆ ಮುಂದಾಗಿತ್ತು. ನ್ಯಾಯಮೂರ್ತಿಗಳಾದ ರಂಜನ್ ಗೊಗೋಯ್ ಮತ್ತು ನವೀನ್ ಸಿನ್ಹ ಅವರನ್ನು ಒಳಗೊಂಡಿರುವ ಪೀಠವು ಇಂತಹ ನ್ಯಾಯಾಲಯಗಳ ರಚನೆಗೆ ರಾಜ್ಯಗಳಿಗೆ ೭.೮ ಕೋಟಿ ರೂಪಾಯಿಗಳನ್ನು ಮಂಜೂರು ಮಾಡುವಂತೆಯೂ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿತು. ರಾಜ್ಯ ಸರ್ಕಾರಗಳು ಸಂಬಂಧಪಟ್ಟ ರಾಜ್ಯಗಳ ಹೈಕೋರ್ಟ್‌ಗಳ ಜೊತೆಗೆ ಸಮಾಲೋಚಿಸಿ, ೨೦೧೮ರ ಮಾರ್ಚ್ ೧ರ ಒಳಗಾಗಿ ನ್ಯಾಯಾಲಯಗಳೂ ಕಾರ್ಯಾರಂಭ ಮಾಡುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಪೀಠ ಸೂಚನೆ ನೀಡಿತು.  ವಿಷಯಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದ ಅರ್ಜಿದಾರ, ಸುಪ್ರೀಂಕೋರ್ಟ್ ವಕೀಲರಾದ ಅಶ್ವನಿ ಉಪಾಧ್ಯಾಯ ಅವರು ’೧೫೮೧ ಪ್ರಕರಣಗಳ ವಿಚಾರಣೆಗೆ ೧೨ ಕೋರ್ಟ್‌ಗಳು ಸಾಕಾಗುವುದಿಲ್ಲ. ’ಕ್ರಿಮಿನಲ್ ರಾಜಕಾರಣಿಗಳ ವಿಚಾರಣೆ ನಡೆಸಲು ನಿಗದಿ ಪಡಿಸಲಾದ  ೭.೮ ಕೋಟಿ ರೂಪಾಯಿ ಕೂಡಾ ತುಂಬಾ ಕಡಿಮೆಯೇ ಎಂದು ನುಡಿದರು. ಇದಕ್ಕೆ ನ್ಯಾಯಮೂರ್ತಿ ಗೊಗೋಯ್ ಅವರು ೧೨ ಕೋರ್ಟ್‌ಗಳು ಅಲ್ಲಿಗೇ ಕೊನೆಗೊಳ್ಳುವುದಿಲ್ಲ. ಆದರೆ ಅವರಿಗೆ ಆರಂಭಿಸಲು ಬಿಡಿ. ದೂಷಣೆ ಮಾಡುವುದು ಅತ್ಯಂತ ಸುಲಭ, ಆದರೆ ಆರಂಭಿಸುವುದು ಕಷ್ಟದ ಕೆಲಸ ಎಂದು ಹೇಳಿದರು.  ೧೨ ನ್ಯಾಯಾಲಯಗಳ ರಚನಾ ವೆಚ್ಚಕ್ಕಾಗಿ  ೭.೮ ಕೋಟಿ ರೂಪಾಯಿಗಳನ್ನು ನಿಗದಿ ಪಡಿಸಲಾಗಿದ್ದು, ವೆಚ್ಚ ಇಲಾಖೆ ಮತ್ತು ಹಣಕಾಸು ಸಚಿವಾಲಯ ಅನುದಾನ ಬಿಡುಗಡೆಗೆ ’ ತಾತ್ವಿಕ ಒಪ್ಪಿಗೆ ನೀಡಿದೆ. ೭.೮ ಕೋಟಿ ರೂಪಾಯಿಗಳನ್ನು  ವಿಶೇಷ ನ್ಯಾಯಾಲಯಗಳನ್ನು ರಚಿಸಲು ಯೋಜನೆ ರೂಪಿಸಿರುವ ರಾಜ್ಯಗಳಿಗೆ ವಿತರಿಸಲು ಕ್ರಮಕೈಗೊಳ್ಳುವಂತೆ ನಾವು ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸುತ್ತೇವೆ ಎಂದು ಸುಪ್ರೀಂಕೋರ್ಟ್ ಹೇಳಿತು.

2017: ನವದೆಹಲಿ: ಕನಿಷ್ಠ ಶೇಕಡಾ ೧೦ರಷ್ಟು ಶಾಖೆಗಳಲ್ಲಿ ಆಧಾರ್  ಫಿಂಗರ್ ಪ್ರಿಂಟ್  (ಬೆರಳಚ್ಚು) ಮತ್ತು ಐರಿಸ್ (ಕಣ್ಪೊರೆ) ಸ್ಕ್ಯಾನರ್ ಗಳನ್ನು ಅಳವಡಿಸಿಕೊಳ್ಳುವ ಮೂಲಕ ಹೊಸದಾಗಿ ಬ್ಯಾಂಕ್ ಖಾತೆ ತೆರೆಯಬಯಸುವವರ ಆಧಾರ್  ದಾಖಲಾತಿಯನ್ನು ತ್ವರಿತಗೊಳಿಸುವಂತೆ ಭಾರತದ ವಿಶಿಷ್ಠ ಗುರುತು ಪ್ರಾಧಿಕಾರ (ಯುಐಡಿಎಐ- ಉದಾಯ್) ಬ್ಯಾಂಕುಗಳಿಗೆ ಸೂಚಿಸಿತು. ವಿವಿಧ ಸೇವೆಗಳು ಮತ್ತು ಕಲ್ಯಾಣಯೋಜನೆಗಳಿಗಾಗಿ ಬಯೋ ಮೆಟ್ರಿಕ್ ಗುರುತು (ಆಧಾರ್) ಕಡ್ಡಾಯ ಜೋಡಣೆಗೆ ನೀಡಲಾದ ಗಡುವನ್ನು ಸುಪ್ರೀಂಕೋರ್ಟ್ ಈದಿನ ೨೦೧೮ರ ಮಾರ್ಚ್ ೩೧ರವರೆಗೆ ವಿಸ್ತರಿಸಿದ ಹಿನ್ನೆಲೆಯಲ್ಲಿ ಪ್ರಾಧಿಕಾರ ಈ ಸೂಚನೆ ನೀಡಿತು. ನೂತನ ಬ್ಯಾಂಕ್ ಖಾತೆಗಳನ್ನು ಆಧಾರ್ ಇಲ್ಲದೆಯೇ ಆರಂಭಿಸಬಹುದು, ಆದರೆ ಅರ್ಜಿದಾರರು ೧೨ ಅಂಕಿಗಳ ವಿಶಿಷ್ಠ ಗುರುತು ಸಂಖ್ಯೆಗಾಗಿ ಅರ್ಜಿ ಸಲ್ಲಿಸಿರುವುದಕ್ಕೆ ಸಂಬಂಧಿಸಿದ ಸಾಕ್ಷ್ಯಾಧಾರವನ್ನು ಒದಗಿಸುವ ಅಗತ್ಯ ಇದೆ ಎಂದು ಸುಪ್ರೀಂಕೋರ್ಟ್ ಹೇಳಿತು. ‘ಆಧಾರ್ ಜೋಡಣೆ ಪ್ರಕ್ರಿಯೆಯನ್ನು ಸರಳಗೊಳಿಸಲು ನಾವು ನಿರಂತರ ಶ್ರಮಿಸುತ್ತಿದ್ದೇವೆ. ಎಲ್ಲ ಬ್ಯಾಂಕುಗಳಿಗೂ ತಮ್ಮ ನಿರ್ದಿಷ್ಟ ಶಾಖೆಗಳಲ್ಲಿ ಆಧಾರ್ ಫಿಂಗರ್ ಪ್ರಿಂಟ್ ಮತ್ತು ಐರಿಸ್  ಸ್ಕ್ಯಾನರ್ ಗಳನ್ನು ಅಳವಡಿಸಿಕೊಳ್ಳುವಂತೆ ಸೂಚಿಸಿದ್ದೇವೆ. ಆಧಾರ್ ದಾಖಲಾತಿ ಮಾಡುವಲ್ಲಿ ಜನರಿಗೆ ತೊಂದರೆಯಾಗದಂತೆ ಮಾಡಲು ಈ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಉದಾಯ್  ಸಿಇಒ ಅಜಯ್ ಭೂಷಣ್ ಪಾಂಡೆ ಸುಪ್ರೀಂಕೋರ್ಟ್ ಮಧ್ಯಂತರ ಆದೇಶದ ಬಳಿಕ ಹೇಳಿದರು. ಇದರಿಂದ ಆಧಾರ್ ಇಲ್ಲದ ಜನರಿಗೆ ಬ್ಯಾಂಕಿನಲ್ಲೇ ಆಧಾರ್  ದಾಖಲಾತಿ ಸವಲತ್ತು ಲಭಿಸುತ್ತದೆ ಮತ್ತು  ಸುಪ್ರೀಂಕೋರ್ಟ್ ಗಡುವಿನ ಪ್ರಕಾರ ೨೦೧೮ರ ಮಾರ್ಚ್ ೩೧ರ ವೇಳೆಗೆ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದ ಪಾಂಡೆ, ಈ ಸವಲತ್ತುಗಳನ್ನು ಬಳಸಿಕೊಳ್ಳುವಂತೆ ಜನರನ್ನು ಒತ್ತಾಯಿಸಿದರು. ಇಂತಹ ಕೇಂದ್ರಗಳನ್ನು ತೆರೆಯುವ ಪ್ರಕ್ರಿಯೆಯನ್ನು ತ್ವರಿತಗೊಳಿಸುವಂತೆ ಬ್ಯಾಂಕುಗಳಿಗೆ ಸೂಚಿಸಲಾಗಿದೆ. ಆಧಾರ್ ದಾಖಲಾತಿ ಸೌಲಭ್ಯ ಲಭ್ಯತೆ ಬಗ್ಗೆ ಪ್ರಾಧಿಕಾರದ ವೆಬ್ ಸೈಟಿನಲ್ಲೂ ಮಾಹಿತಿ ಲಭಿಸುತ್ತದೆ ಎಂದು ಪಾಂಡೆ ಹೇಳಿದರು. ದೇಶಾದ್ಯಂತ ಬ್ಯಾಂಕ್ ಶಾಖೆಗಳಲ್ಲಿ ಈಗಾಗಲೇ ೩೦೦೦ ಆಧಾರ್  ದಾಖಲಾತಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಬ್ಯಾಂಕುಗಳು ಒಟ್ಟಾರೆ ೧೪,೦೦೦ ಬ್ಯಾಂಕ್ ಶಾಖೆಗಳಲ್ಲಿ ಆಧಾರ್ ದಾಖಲಾತಿ ಕೇಂದ್ರಗಳನ್ನು ಸ್ಥಾಪಿಸಬೇಕಾಗಿದೆ ಎಂದು ಅವರು ನುಡಿದರು. ಈಗಾಗಲೇ ಆಧಾರ್ ಕಾರ್ಡ್ ಇದ್ದು ಹೊಸ ಬ್ಯಾಂಕ್ ಖಾತೆ ತೆರೆಯ ಬಯಸುವವರು ೧೨ ಅಂಕಿಗಳ ಆಧಾರ್ ಸಂಖ್ಯೆಯ ದಾಖಲೆಯನ್ನು ಬ್ಯಾಂಕಿಗೆ ಒದಗಿಸಬೇಕು. ನೀವು ಆಧಾರ್ ಕಾರ್ಡ್ ಹೊಂದಿಲ್ಲವಾದರೆ, ಆಧಾರ್ ದಾಖಲಾತಿಗಾಗಿ ಅರ್ಜಿ ಸಲ್ಲಿಸಿರುವ ಬಗೆಗಿನ ಸಾಕ್ಷ್ಯಾಧಾರವನ್ನು ಒದಗಿಸಬೇಕು ಎಂದು ಅವರು ಹೇಳಿದರು. ಆಧಾರ್ ಜೋಡಣೆ ಗಡುವು ವಿಸ್ತರಣೆಗೆ ಸಂಬಂಧಿಸಿದಂತೆ ಸರ್ಕಾರವು ಸುಪ್ರೀಂಕೋರ್ಟಿನ ಈದಿನದ ತೀರ್ಪಿಗೆ ಅನುಗುಣವಾಗಿ ಆಧಾರ್ ಕಾಯ್ದೆ, ಪಿಎಂಎಲ್ ಎ (ಹಣ ವರ್ಗಾವಣೆ ತಡೆ ಕಾಯ್ದೆ) ನಿಯಮಾವಳಿಗಳ ಅಡಿಯಲ್ಲಿ ಅಧಿಸೂಚನೆಗಳನ್ನು ಹೊರಡಿಸಿದೆ ಎಂದು ಪಾಂಡೆ ಹೇಳಿದರು.

2017: ನವದೆಹಲಿ: ನಗದು ರಹಿತ ವಹಿವಾಟಿಗೆ (ಡಿಜಿಟಲ್ ವಹಿವಾಟು) ಇನ್ನಷ್ಟು ಒತ್ತು ನೀಡುವ ಸಲುವಾಗಿ ೨೦೦೦ ರೂಪಾಯಿಗಳವರೆಗಿನ ಡಿಜಿಟಲ್ ವಹಿವಾಟುಗಳ  ವ್ಯಾಪಾರಿ ರಿಯಾಯ್ತಿ ದರವನ್ನು  (ಮರ್ಚೆಂಟ್ ಡಿಸ್ಕೌಂಟ್ ರೇಟ್ -ಎಂಡಿಆರ್) ಸರ್ಕಾರವೇ ಪಾವತಿ ಮಾಡಲಿದೆ. ಅಂದರೆ ಗ್ರಾಹಕರು ಇನ್ನು ಮುಂದೆ ಈ ಶುಲ್ಕವನ್ನು ಪಾವತಿ ಮಾಡಬೇಕಾಗಿಲ್ಲ. ನಗದು ರಹಿತ ವಹಿವಾಟಿಗೆ ಪ್ರೋತ್ಸಾಹ ಕೊಡುವ ಸಲುವಾಗಿ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು ಈದಿನ ಈ ನಿರ್ಧಾರ ಕೈಗೊಂಡಿತು. ‘ಈ ಹಿಂದೆ ಗ್ರಾಹಕರು ಪಾವತಿ ಮಾಡುತ್ತಿದ್ದ ವ್ಯಾಪಾರಿ ರಿಯಾಯ್ತಿ ದರವನ್ನು (ಎಂಡಿಆರ್) ಸರ್ಕಾರವೇ ಮರುಪಾವತಿ ಮಾಡಬೇಕು ಎಂದು ನಾವು ನಿರ್ಧರಿಸಿದ್ದೇವೆ. ಡೆಬಿಟ್  ಕಾರ್ಡ್, ಯುಪಿಐ, ಭೀಮ್ ಮತ್ತು ಆಧಾರ್ ಮೂಲಕ ನಡೆಸಲಾಗುವ ವಹಿವಾಟುಗಳಿಗೆ ಇದು ಅನ್ವಯಿಸುತ್ತದೆ. ಸಣ್ಣ ಡಿಜಿಟಲ್ ಗ್ರಾಹಕರಿಗೆ ಇದು ದೊಡ್ಡ ನಿರಾಳತೆ ಎಂದು ಕೇಂದ್ರ ಸಚಿವ ರವಿ ಶಂಕರ ಪ್ರಸಾದ್ ಅವರು ಸಂಪುಟ ಸಭೆಯ ಬಳಿಕ ಹೇಳಿದರು. ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಸೇವೆಗಳನ್ನು ಒದಗಿಸುವುದಕ್ಕಾಗಿ ವರ್ತಕರಿಗೆ ಬ್ಯಾಂಕ್ ವಿಧಿಸುವ ಶುಲ್ಕವೇ ಎಂಡಿಆರ್. ಇತ್ತೀಚಿನ ಅಧಿಸೂಚನೆ ಪ್ರಕಾರ ೨೦ ಲಕ್ಷ ರೂಪಾಯಿ ವರೆಗಿನ ವಾರ್ಷಿಕ ವಹಿವಾಟು ನಡೆಸುವ ಸಣ್ಣ ವರ್ತಕರು ಶೇಕಡಾ ೦.೪೦ ದಷ್ಟು ವ್ಯಾಪಾರಿ ರಿಯಾಯ್ತಿ ದರವನ್ನು (ಎಂಡಿ ಆರ್) ಪಾವತಿ ಮಾಡಬೇಕು. ವರ್ತಕನ ವಾರ್ಷಿಕ ವಹಿವಾಟು ೨೦ ಲಕ್ಷ ರೂಪಾಯಿ ಮೀರಿದ್ದರೆ, ಆತ ಶೇಕಡಾ ೦.೯೦ ದಷ್ಟು ಎಂಡಿಆರ್ ಪಾವತಿ ಮಾಡಬೇಕು. ೨೦೦೦ ರೂಪಾಯಿಗಳವರೆಗಿನ ಬಹುತೇಕ ಸಣ್ಣ ವಹಿವಾಟುಗಳನ್ನು ನಗದು ಮೂಲಕ ನಡೆಸಲು ಬಹುತೇಕ ಮಂದಿ ಇಚ್ಛಿಸುತ್ತಿರುವ ಹಿನ್ನೆಲೆಯಲ್ಲಿ ಇಂತಹ ವಹಿವಾಟುಗಳನ್ನು ನಗದು ರಹಿತ ವಹಿವಾಟಿನತ್ತ ಸೆಳೆಯುವ ಉದ್ದೇಶದಿಂದ ಸರ್ಕಾರ ಈ ನಿರ್ಧಾರ ಕೈಗೊಂಡಿತು. ಪ್ರಸಕ್ತ ಹಣಕಾಸು ವರ್ಷದಲ್ಲಿ ಕ್ರೆಡಿಟ್ ಕಾರ್ಡ್ ಮೂಲಕ ೪,೩೭,೪೦೦ ಕೋಟಿ ರೂಪಾಯಿಯಷ್ಟು ವಹಿವಾಟು ನಡೆಯುವ ನಿರೀಕ್ಷೆ ಇದ್ದು,  ಡೆಬಿಟ್ ಕಾರ್ಡ್ ಮೂಲಕ ೨,೧೮,೭೦೦ ಕೋಟಿ ರೂಪಾಯಿ ವಹಿವಾಟು ಏಪ್ರಿಲ್ ನಿಂದ ಸೆಪ್ಟೆಂಬರ್ ವರೆಗಿನ ಅವಧಿಯಲ್ಲಿ ನಡೆದಿದೆ ಎಂದು ಕೇಂದ್ರ ಸಚಿವರು ವಿವರಿಸಿದರು.

2016: ನವದೆಹಲಿ: ಎಲ್ಲ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳಲ್ಲಿ ಮದ್ಯ ಮಾರಾಟವನ್ನು 2017 ಏಪ್ರಿಲ್ 1ರಿಂದ ನಿಷೇಧಿಸುವಂತೆ  ಸುಪ್ರೀಂಕೋರ್ಟ್  ಆಜ್ಞಾಪಿಸಿತು. ಮುಖ್ಯ ನ್ಯಾಯಮೂರ್ತಿ ಟಿ.ಎಸ್. ಠಾಕೂರ್ ನೇತೃತ್ವದ ಪೀಠವು ಆದೇಶ ನೀಡಿದ್ದು, ಎಲ್ಲ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳಲ್ಲಿನ ಹಾಗೂ ಸುತ್ತಮುತ್ತಣ ಮದ್ಯದ ಅಂಗಡಿಗಳನ್ನು ಮುಚ್ಚುವಂತೆ ನಿರ್ದೇಶನ ನೀಡಿತು. ಎಲ್ಲ ರಾಜ್ಯಗಳಲ್ಲಿನ ಹೆದ್ದಾರಿಗಳು ಮತ್ತು ಸುತ್ತಮುತ್ತಣ ಸ್ಥಳಗಳಲ್ಲಿ ಇರುವ ಮದ್ಯದ ಅಂಗಡಿಗಳಿಗೆ ನೀಡಲಾಗಿರುವ ಎಲ್ಲ ಪರವಾನಗಿಗಳನ್ನು ರದ್ದು ಪಡಿಸುವಂತೆ ಸುಪ್ರೀಂಕೋರ್ಟ್ ಸೂಚಿಸಿತು. ಏನಿದ್ದರೂ ಪ್ರಸ್ತುತ ಪರವಾನಗಿ ಹೊಂದಿರುವ ಮದ್ಯದ ಅಂಗಡಿಗಳು ಪರವಾನಗಿ ಅವಧಿಯವರೆಗೆ ವ್ಯಾಪಾರ ನಡೆಸಬಹುದು. ಆದರೆ ಪರವಾನಗಿಗಳನ್ನು ನವೀಕರಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿತು. ಅರೈವ್ಸೇಫ್‌’ ಸ್ವಯಂಸೇವಾ ಸಂಸ್ಥೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ವಿಭಾಗೀಯ ಪೀಠ ಆದೇಶ ನೀಡಿತು.
2016: ನವದೆಹಲಿನಗದುರಹಿತ ವಹಿವಾಟು ಉತ್ತೇಜನಕ್ಕೆ ಸರ್ಕಾರ ಕ್ರಮ ಕೈಗೊಂಡಿದ್ದು,
ಅದೃಷ್ಟವಂತ ಗ್ರಾಹಕ ಯೋಜನೆ (ಲಕ್ಕಿ ಗ್ರಾಹಕ ಯೋಜನೆ) ಹಾಗೂಡಿಜಿ ಧನ್ಯೋಜನೆಗಳನ್ನು ನೀತಿ ಆಯೋಗ ಪ್ರಕಟಿಸಿತು. ಜತೆಗೆ, ಆಯ್ಕೆಯಾಗುವ ಅದೃಷ್ಟವಂತರಿಗೆ 1 ಕೋಟಿ ರೂಪಾಯಿ ಬಹುಮಾನ ಘೋಷಿಸಿತು. ಎರಡೂ ಯೋಜನೆಗಳು ಗ್ರಾಹಕರು ಹಾಗೂ ವ್ಯಾಪಾರಿಗಳು ನಡೆಸುವ ಡಿಜಿಟಲ್ವಹಿವಾಟಿಗೆ ಅನ್ವಯವಾಗಲಿದೆ. ದಿನದ ಅದೃಷ್ಟವಂತರು, ವಾರದ ಅದೃಷ್ಟವಂತರು ಮತ್ತು ದೊಡ್ಡ ಬಹುಮಾನ ಪಡೆಯುವ ಅದೃಷ್ಟವಂತರಿಗೆ 1 ಕೋಟಿ ರೂಪಾಯಿವರೆಗಿನ ಬಹುಮಾನ ನೀಡಲು ಸರ್ಕಾಋ ನಿರ್ಧರಿಸಿದೆ, ಯೋಜನೆಗಾಗಿ 340 ಕೋಟಿ ರೂಪಾಯಿ ವೆಚ್ಚಮಾಡಲಿದೆ ಎಂದು ನೀತಿ ಆಯೋಗ ಹೇಳಿತು. ರಾಷ್ಟ್ರದಲ್ಲಿ ಕೇವಲ ಶೇ 5ರಷ್ಟು ಮಾತ್ರ ಡಿಜಿಟಲ್ವ್ಯವಹಾರ ನಡೆಯುತ್ತಿದೆ. ಡಿಜಿಟಲ್ಪಾವತಿ ಮೂಲಕ ಆಂದೋಲನ ಮಾಡುತ್ತಿದ್ದೇವೆ ಎಂದು ನೀತಿ ಆಯೋಗದ ಮುಖ್ಯಸ್ಥ ಅಮಿತಾಬ್ಕಾಂತ್ಹೇಳಿದರು.
2016: ನವದೆಹಲಿ: ಪಕ್ಷದ ಹಿರಿಯ ನಾಯಕ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರನ್ನು ಉಲ್ಲೇಖಿಸಿದ ಬಿಜೆಪಿಯ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರು ಸಂಸತ್ ಕಲಾಪ ನಿರಂತರವಾಗಿ ಭಗ್ನಗೊಳ್ಳುತ್ತಿರುವ ಬಗ್ಗೆ ತಮ್ಮ ತೀವ್ರ ಭ್ರಮನಿರಸನವನ್ನು ವ್ಯಕ್ತ ಪಡಿಸಿ, ವಿಪಕ್ಷಗಳ ಜೊತೆಗೆ ಮಾತನಾಡಿ ಸದನದ ಕಲಾಪ ಸುಗಮವಾಗಿ ನಡೆಯುವಂತೆ ಮಾಡಲು ಯತ್ನಿಸಿ ಎಂದು ಅವರು ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಅವರಿಗೆ ಸೂಚಿಸಿದರು. ‘ವಾಜಪೇಯಿಯವರು ಇಂದು ಸಂಸತ್ತಿನಲ್ಲಿ ಇದ್ದಿದ್ದರೆ ಸಂಸತ್ ಕಲಾಪ ನಿರಂತರ ಭಗ್ನಗೊಳ್ಳುತ್ತಿರುವುದರ ಬಗ್ಗೆ ತೀವ್ರ ಭ್ರಮನಿರಸನ ವ್ಯಕ್ತಪಡಿಸುತ್ತಿದ್ದರು ಎಂದು ಅಡ್ವಾಣಿ ಹೇಳಿದರು. ಕಲಾಪ ಭಗ್ನಗೊಳ್ಳುತ್ತಿರುವ ಬಗ್ಗೆ ಭ್ರಮನಿರಸನ ವ್ಯಕ್ತ ಪಡಿಸಿದ 89 ಹರೆಯದ ಮಾಜಿ ಉಪ ಪ್ರಧಾನಿ, ಲೋಕಸಭೆಗೆ ರಾಜೀನಾಮೆ ನೀಡಬೇಕೇನೋ ಎಂದು ಅನಿಸುತ್ತಿದೆ ಎಂದು ಹೇಳಿದರು. ಟಿಎಂಸಿ ಸದಸ್ಯರೊಬ್ಬರು ಅಡ್ವಾಣಿ ಅವರ ಆರೋಗ್ಯದ ವಿಚಾರಿಸಿದಾಗ ನನ್ನ ಆರೋಗ್ಯ ಚೆನ್ನಾಗಿದೆ, ಆದರೆ ಸಂಸತ್ತಿನ ಆರೋಗ್ಯ ಹದಗೆಟ್ಟಿದೆ ಎಂದು ಪ್ರತಿಕ್ರಿಯಿಸಿದರು. ಸಂಸತ್ತಿನ ಚಳಿಗಾಲದ ಅಧಿವೇಶನದ ಒಂದು ದಿನ ಮಾತ್ರವೇ ಇನ್ನು ಬಾಕಿ ಉಳಿದಿದ್ದು, ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ವಾಕ್ ಸಮರ, ಕೋಲಾಹಲದ ಪರಿಣಾಮವಾಗಿ ಉಭಯ ಸದನಗಳ ಕಲಾಪಗಳು ಇಂದೂ ಕೂಡಾ ಭಗ್ನಗೊಂಡು ನಾಳೆಗೆ ಮುಂದೂಡಿಕೆಯಾದವು. ನವೆಂಬರ್ 16ರಿಂದ ಸಮಾವೇಶಗೊಂಡಿರುವ ಚಳಿಗಾಲದ ಅಧಿವೇಶನದಲ್ಲಿ 22 ಸಿಟ್ಟಿಂಗ್ಗಳು ಆಗಿದ್ದು, ಸರ್ಕಾರ 10 ಮಹತ್ವದ ಮಸೂದೆಗಳನ್ನು ಅಂಗೀಕರಿಸುವ ಸಲುವಾಗಿ ಪಟ್ಟಿ ಮಾಡಿತ್ತು. ಸರಕು ಮತ್ತು ಸೇವಾ ತೆರಿಗೆಗಳ (ಜಿಎಸ್ಟಿ) ಮಸೂದೆಯೂ ಇವುಗಳಲ್ಲಿ ಸೇರಿತ್ತು. ಕಲಾಪ ನಿರಂತರ ಭಗ್ನಗೊಳ್ಳುತ್ತಿರುವುದರ ಬಗ್ಗೆ ಅಡ್ವಾಣಿ ಅವರು ಇದು ಎರಡನೇ ಬಾರಿ ಅಸಮಾಧಾನ ವ್ಯಕ್ತಪಡಿಸಿದರು. ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರೂ ಕಲಾಪ ಭಗ್ನಗೊಳ್ಳುತ್ತಿರುವುದರ ಬಗ್ಗೆ ತಮ್ಮ ಅತೃಪ್ತಿ ವ್ಯಕ್ತ ಪಡಿಸಿದ್ದರು.

2016: ನವದೆಹಲಿ: ಆಡಳಿತಾಧಿಕಾರಿ (ಅಡ್ಮಿನಿಸ್ಟ್ರೇಟರ್) ಹುದ್ದೆಗೆ ಹೆಸರು ಸೂಚಿಸುವಂತೆ ಬಿಸಿಸಿಐಗೆ 
 ಈದಿನ ನಿರ್ದೇಶಿಸಿದ ಸುಪ್ರೀಂಕೋರ್ಟ್ ಹೆಸರು ಸೂಚಿಸಲು ಒಂದು ವಾರದ ಕಾಲಾವಕಾಶ ನೀಡಿತು. ಬಿಸಿಸಿಐ ಲೋಧಾ ಸಮಿತಿ ವಿಚಾರ ಸುಪ್ರೀಂಕೋರ್ಟ್ ಮುಂದೆ ವಿಚಾರಣೆಗೆ ಬಂದಾಗ ಅಮಿಕಸ್ ಕ್ಯೂರಿ ಅವರ ಹೇಳಿಕೆಯನ್ನು ಆಧರಿಸಿ ಸುಪ್ರೀಂಕೋರ್ಟ್ ನಿರ್ದೇಶನವನ್ನು ನೀಡಿತು. ಸುಪ್ರೀಂಕೋರ್ಟಿಗೆ ನೀಡಿದ ಪ್ರಮಾಣ ಪತ್ರದಲ್ಲಿ ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಅವರು ಸುಳ್ಳು ಹೇಳಿದ್ದಾರೆ. ಬಿಸಿಸಿಐ ಅಧ್ಯಕ್ಷನಾಗಿ ನಾನು ಶಶಾಂಕ್ ಮನೋಹರ್ ಅವರಿಂದ ಅಭಿಪ್ರಾಯ ಕೇಳಿದ್ದೇನೆ ಎಂದು ಠಾಕೂರ್ ಅವರು ಪ್ರಮಾಣ ಪತ್ರದಲ್ಲಿ ತಿಳಿಸಿದ್ದರು ಎಂದು ಅಮಿಕಸ್ ಕ್ಯೂರಿ ಸುಪ್ರೀಂಕೋರ್ಟಿಗೆ ತಿಳಿಸಿದರು. ಅಮಿಕಸ್ ಕ್ಯೂರಿ ಅವರ ಅಭಿಪ್ರಾಯದ ಬಳಿಕ ಸುಪ್ರೀಂಕೋರ್ಟ್ ಆಡಳಿತಾಧಿಕಾರಿ ಹುದ್ದೆಗೆ ಹೆಸರು ಸೂಚಿಸುವಂತೆ ಬಿಸಿಸಿಗೆ ನಿರ್ದೇಶನ ನೀಡಿತು.
2016: ನವದೆಹಲಿಪುಣೆಯಲ್ಲಿ ಬ್ಯಾಂಕ್ಗಳ 15 ಲಾಕರ್ಗಳಲ್ಲಿ ಶೋಧ ನಡೆಸಿದ ಐಟಿ
ಅಧಿಕಾರಿಗಳು 8.8 ಕೋಟಿ ರೂಪಾಯಿಗಳ ಹೊಸ ನೋಟುಗಳು ಸೇರಿದಂತೆ 10.80 ಕೋಟಿ ರೂಪಾಯಿಗಳನ್ನು ವಶಕ್ಕೆ ಪಡೆದರು. ಬ್ಯಾಂಕ್ಆಫ್ಮಹಾರಾಷ್ಟ್ರದ ವಿವಿಧ ಶಾಖೆಗಳ 15 ಲಾಕರ್ಗಳಲ್ಲಿ ಹಿಂದಿನ ದಿನ ಶೋಧ ಕೈಗೊಳ್ಳಲಾಗಿತ್ತು. ಈದಿನ ಹಣವನ್ನು ವಶಕ್ಕೆ ಪಡೆಯಲಾಯಿತು ಎಂದು ಮೂಲಗಳು ತಿಳಿಸಿದವು. ಇದೇ ವೇಳೆ ಲಾಕರನ್ನು ನಿಯಮಬಾಹಿರವಾಗಿ ಬಳಸಿದ ಸಂಬಂಧ ದೂರು ದಾಖಲಿಸಿಕೊಳ್ಳಲಾಯಿತು. ಬ್ಯಾಂಕ್ಆಫ್ಮಹಾರಾಷ್ಟ್ರದ 15 ಲಾಕರ್ಗಳಲ್ಲಿ ಶೋಧ ನಡೆಸಲಾಗಿದ್ದು,( ರೂ. 9.85 ಲಕ್ಷ -ರೂ.2,000 ಮುಖಬೆಲೆಯ 39,896 ನೋಟುಗಳ ಒಟ್ಟು 7.79 ಕೋಟಿ, ಉಳಿದಂತೆ ರೂ100 ಮುಖಬೆಲೆಯ ನೋಟುಗಳು) ಹಾಗೂ ಇತರ ಲಾಕರ್ಗಳಲ್ಲಿ ರೂ.80 ಲಕ್ಷ ಹೊಸ ನೋಟುಗಳು ಸೇರಿದಂತೆ ರೂ.94.50 ಲಕ್ಷ ವಶಕ್ಕೆ ಪಡೆಯಲಾಯಿತು. ರೂ.8.8 ಕೋಟಿ ಹೊಸ ನೋಟು ಸೇರಿದಂತೆ ಒಟ್ಟಾರೆ ರೂ.10.80 ಕೋಟಿ ವಶಕ್ಕೆ ಪಡೆಯಲಾಗಿದೆ ಎಂದು ಐಟಿ ಅಧಿಕಾರಿಗಳು ಹೇಳಿದರು.  ಬ್ಯಾಂಕಿನ ದಾಖಲೆ ಪ್ರಕಾರ, ನವೆಂಬರ್ಹಾಗೂ ಡಿಸೆಂಬರ್ನಲ್ಲಿ ಬೇರೆ ಬೇರೆ ದಿನಗಳಲ್ಲಿ ಎರಡು ಲಾಕರ್ಗಳು ತಲಾ 12 ಬಾರಿ ಬಳಕೆಯಾಗಿವೆ. ಬ್ಯಾಂಕಿನ ಅಧಿಕಾರಿಯ ಸಹಿ ಪಡೆದು ಒಬ್ಬನೇ ವ್ಯಕ್ತಿ ಎಲ್ಲಾ ಬಳಕೆಗಳನ್ನು ಮಾಡಿದ್ದಾನೆ ಎಂದು ಅವರು ಹೇಳಿದರು.

2016: ನೊಯಿಡಾನೋಟು ರದ್ದತಿ ಬಳಿಕ ದಾಳಿ ಮುಂದುವರೆಸಿದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಆಕ್ಸಿಸ್ಬ್ಯಾಂಕ್ ನೋಯಿಡಾ 51ನೇ ಸೆಕ್ಟರ್ ಶಾಖೆಯಲ್ಲಿ 20 ನಕಲಿ ಖಾತೆಗಳಲ್ಲಿ ಇರಿಸಿದ್ದ ರೂ.60 ಕೋಟಿ ಹಣವನ್ನು ಪತ್ತೆ ಮಾಡಿದರು. ಬಡವರು ಹಾಗೂ ಕೂಲಿ ಕಾರ್ಮಿಕರ ಹೆಸರಿನಲ್ಲಿ ಖಾತೆಗಳನ್ನು ತೆರೆದು ವ್ಯವಸ್ಥಿತವಾಗಿ ಹಣ ಜಮೆ ಮಾಡುತ್ತಾ ಬಂದಿದ್ದಾರೆ ಎಂದು ಮೂಲಗಳು ತಿಳಿಸಿದವು. ಮಧ್ಯಾಹ್ನ 12.30ಕ್ಕೆ ಅಧಿಕಾರಿಗಳು ದಾಖಲೆ ಪರೀಶೀಲನೆಯಲ್ಲಿ ತೊಡಗಿದ್ದಾಗ ಬ್ಯಾಂಕ್ ಹೊರಗೆ ಹೆಚ್ಚಿನ ಜನ ಸೇರಿದ್ದರು. ಪೊಲೀಸ್ಸಿಬ್ಬಂದಿ ಭದ್ರತೆ ಒದಗಿಸಿದ್ದರು. ನೋಟು ರದ್ದತಿ ಬಳಿಕ, ಇಲ್ಲಿನ ಚಿನ್ನದ ವ್ಯಾಪಾರಿಯೊಬ್ಬರು ತನ್ನ ಬಳಿ ಇದ್ದ ಆಭರಣಗಳನ್ನು ಮಾರಿದ ಹಣ ಎಂದು ಹೇಳಿ 600 ಕೋಟಿ ರೂ. ಠೇವಣಿ ಇರಿಸಿದ್ದರು
2008: ಭಾರತದಲ್ಲಿ ಸಾಲದ ಶೂಲಕ್ಕೆ ಸಿಲುಕಿ ಪ್ರತಿ ದಿನ 46 ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು. ರೈತರ ಆತ್ಮಹತ್ಯೆ ಪ್ರಮಾಣ ಮಹಾರಾಷ್ಟ್ರ ಬಿಟ್ಟರೆ ಕರ್ನಾಟಕದಲ್ಲೇ ಅಧಿಕ!. ರಾಷ್ಟ್ರೀಯ ಅಪರಾಧ ದಾಖಲೆ ವಿಭಾಗವು (ಎನ್‌ಸಿಆರ್‌ಬಿ) ಹೊರತಂದಿರುವ ಅಪಘಾತ ಮತ್ತು ಆತ್ಮಹತ್ಯೆ ಮೇಲಿನ ವರದಿಯಲ್ಲಿ ಇದನ್ನು ತಿಳಿಸಲಾಯಿತು. ಕಳೆದ ವರ್ಷ ದೇಶದ ಎಲ್ಲೆಡೆ 2,369 ಮಹಿಳೆಯರ ಸಹಿತ ಒಟ್ಟು 16,632 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. 2007ರಲ್ಲಿ ದೇಶದಲ್ಲಿ ಒಟ್ಟು 1,22,637 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಪೈಕಿ ರೈತರ ಪ್ರಮಾಣ ಶೇ 14.4ರಷ್ಟಿದೆ. 2006ರಲ್ಲಿ 17,060 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. 1997ರಿಂದೀಚೆಗೆ ದೇಶದಲ್ಲಿ ಒಟ್ಟು 1,82,936 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಹಾರಾಷ್ಟ್ರದಲ್ಲಿ 2007ರಲ್ಲಿ 4,238 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. 2006ಕ್ಕೆ ಹೋಲಿಸಿದರೆ ಇದು 215ರಷ್ಟು ಕಡಿಮೆ. ರೈತರ ಆತ್ಮಹತ್ಯೆಯಲ್ಲಿ ಕರ್ನಾಟಕ (2,135), ಆಂಧ್ರಪ್ರದೇಶ (1,797), ಛತ್ತೀಸ್‌ಗಡ (1,593), ಮಧ್ಯಪ್ರದೇಶ (1,263), ಕೇರಳ (1,263), ಪಶ್ಚಿಮ ಬಂಗಾಳ (1,102) ನಂತರದ ಸ್ಥಾನಗಳಲ್ಲಿದ್ದವು. 2006ರಲ್ಲೂ ಇದೇ ಏಳು ರಾಜ್ಯಗಳೇ ರೈತರ ಆತ್ಮಹತ್ಯೆಯಲ್ಲಿ ಮುಂಚೂಣಿಯಲ್ಲಿದ್ದವು. 2006ಕ್ಕೆ ಹೋಲಿಸಿದರೆ 2007ರಲ್ಲಿ ಮಹಾರಾಷ್ಟ್ರ, ಆಂಧ್ರಪ್ರದೇಶ, ಛತ್ತೀಸ್‌ಗಢ ಮತ್ತು ಮಧ್ಯಪ್ರದೇಶಗಳಲ್ಲಿ ರೈತರ ಆತ್ಮಹತ್ಯೆ ಪ್ರಮಾಣ ಸ್ವಲ್ಪ ಇಳಿದ್ದಿದರೆ, ಕರ್ನಾಟಕ, ಕೇರಳ ಮತ್ತು ಪಶ್ಚಿಮ ಬಂಗಾಳಗಳಲ್ಲಿ ಹೆಚ್ಚಳವಾಗಿದ್ದುದು ಬೆಳಕಿಗೆ ಬಂತು.

2008: ಇರಾಕಿಗೆ ಭೇಟಿ ನೀಡಿದ್ದ ಅಮೆರಿಕ ಅಧ್ಯಕ್ಷ ಜಾರ್ಜ್ ಬುಷ್ ಮೇಲೆ ಇರಾಕಿ ಪತ್ರಕರ್ತನೊಬ್ಬ ಬೂಟು ಎಸೆದ ಘಟನೆ ಬಾಗ್ದಾದಿನಲ್ಲಿ ನಡೆಯಿತು. ಇರಾಕ್ ಪ್ರಧಾನಿ ನೂರಿ-ಅಲ್-ಮಲಿಕಿ ಜೊತೆ ಬುಷ್ ಜಂಟಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡುತ್ತಿದ್ದಾಗ ಈ ಘಟನೆ ನಡೆಯಿತು. ಬುಷ್ ಹಾಗೂ ಮಲಿಕಿ ಪರಸ್ಪರ ಕೈಕುಲುಕಲು ಅಣಿಯಾಗುತ್ತಿದ್ದಾಗ 20 ಅಡಿ ದೂರದಲ್ಲಿ ಕುಳಿತಿದ್ದ ಕೈರೋದಿಂದ ಪ್ರಸಾರ ಮಾಡುವ ಅಲ್-ಬಾಗ್ದಾದಿಯಾ ಟಿವಿ ಚಾನೆಲ್‌ನ ವರದಿಗಾರ ಮುಂತಾಜೀರ್ ಅಲ್-ಜೈದಿ ಕುರ್ಚಿಯಿಂದ ಎದ್ದು 'ಏ ನಾಯಿ, ಇದು ನಿನಗೆ ಬೀಳ್ಕೊಡುಗೆಯ ಮುತ್ತು. ಇದು ವಿಧವೆಯರು, ಅನಾಥರು ಹಾಗೂ ಸತ್ತವರ ಕೊಡುಗೆ' ಎಂದು ಅರೆಬಿಕ್‌ನಲ್ಲಿ ಅರಚುತ್ತ ಬುಷ್‌ಅವರತ್ತ ಒಂದಾದ ಮೇಲೆ ಒಂದು ಬೂಟುಗಳನ್ನು ಎಸೆದ. ಬೂಟುಗಳು ಗುರಿತಪ್ಪಿ ಹಿಂದಿನ ಗೋಡೆಗೆ ತಾಗಿದವು. ಕೂಡಲೇ ಸಭಾಂಗಣದಲ್ಲಿ ಗೊಂದಲ, ಗೌಜು ಆರಂಭವಾಯಿತು. ಇದರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ ಎಂದು ಬುಷ್ ಹೇಳಿದರು. ಇರಾಕ್ ಪತ್ರಕರ್ತರು ಒಮ್ಮಿಂದೊಮ್ಮೆಲೆ ಕಿರುಚತೊಡಗಿದರು. ಆ ಪತ್ರಕರ್ತರೆಲ್ಲ ಘಟನೆಗಾಗಿ ಕ್ಷಮೆ ಯಾಚಿಸುತ್ತಿದ್ದರು ಎಂದು ಬುಷ್ ಆನಂತರ ಹೇಳಿದರು. ಆ ವ್ಯಕ್ತಿ ನನ್ನೆಡೆಗೆ ಬೂಟು ಎಸೆದರೆ ಏನಾಯಿತು. ಅಮೆರಿಕದ ರಾಜಕೀಯ ಪ್ರತಿಭಟನೆಗೆ ಇದು ಸಮನಾಗಿದೆ ಎಂದು ಬುಷ್ ಪತ್ರಕರ್ತರಿಗೆ ಹೇಳಿದರು. ನಿಮಗೆ ವಿವರ ಬೇಕಿದ್ದಲ್ಲಿ ಹೇಳುತ್ತೇನೆ. ಇದು 10ನೇ ನಂಬರ್ ಬೂಟು ಎಂದು ಬುಷ್ ತಮಾಷೆ ಮಾಡಿದರು. ಕೂಡಲೇ ಭದ್ರತಾ ಸಿಬ್ಬಂದಿ ಜೈದಿಯನ್ನು ನೆಲದ ಮೇಲೆ ಕೆಡವಿ ಥಳಿಸಿದರಲ್ಲದೇ ಎಳೆದುಕೊಂಡು ಹೋದರು. ಭದ್ರತಾ ಸಿಬ್ಬಂದಿ ಎಳೆದೊಯ್ಯುವಾಗ ಆತ ನೋವಿನಿಂದ ಅರಚುತ್ತಿದ್ದ. ಕಾರ್ಪೆಟ್ ಮೇಲೆ ರಕ್ತದ ಕಲೆಯೂ ಆಗಿತ್ತು. ಇರಾಕ್ ಸಂಸ್ಕೃತಿಯಲ್ಲಿ ಬೂಟು ಎಸೆಯುವುದು ವ್ಯಕ್ತಿಯೊಬ್ಬನಿಗೆ ಘೋರ ಅವಮಾನ ಮಾಡಿದಂತೆ. 2003ರಲ್ಲಿ ಅಮೆರಿಕದ ಸೈನಿಕರು ಸದ್ದಾಂ ಹುಸೇನ್ ಪ್ರತಿಮೆ ಹೊಡೆದು ಉರುಳಿಸಿದಾಗ ನೆರೆದಿದ್ದ ಜನ ಪ್ರತಿಮೆಗೆ ಬೂಟು ಎಸೆದಿದ್ದರು.

2008: ಜುಲೈ 22ರಂದು ನಡೆದ ಯುಪಿಎ ಸರ್ಕಾರದ ವಿಶ್ವಾಸಮತ ಗೊತ್ತುವಳಿ ಮೇಲಿನ ಮತದಾನದ ಸಂದರ್ಭದಲ್ಲಿ ಸಂಸದರಿಗೆ ಹಣದ ಆಮಿಷ ಒಡ್ಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಸಭೆಯ ಸಂಸದೀಯ ಸಮಿತಿಯು ಸಮಾಜವಾದಿ ಪಕ್ಷದ ಅಮರ್ ಸಿಂಗ್ ಮತ್ತು ಕಾಂಗ್ರೆಸ್ ಪಕ್ಷದ ಅಹ್ಮದ್ ಪಟೇಲ್ ಅವರನ್ನು ನಿರ್ದೋಷಿಗಳೆಂದು ಘೋಷಿಸಿತು. ಈ ಇಬ್ಬರೂ ರಾಜ್ಯಸಭಾ ಸದಸ್ಯರ ವಿರುದ್ಧ ಮಾಡಿದ ಆರೋಪಗಳಿಗೆ ಸೂಕ್ತ ಪುರಾವೆಗಳಿಲ್ಲ. ಹೀಗಾಗಿ ಇವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗದು ಎಂದು ಸಮಿತಿಯು ತನ್ನ 466 ಪುಟಗಳ ವರದಿಯಲ್ಲಿ ತಿಳಿಸಿತು. ಆದರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದೀಯ ಸಮಿತಿ ಅಮರ್ ಸಿಂಗ್ ಮತ್ತು ಅಹ್ಮದ್ ಪಟೇಲ್ ಅವರು ದೋಷಮುಕ್ತರು ಎಂದು ಹೇಳಿದ್ದರಿಂದ ಸತ್ಯ ಹೊರಬರದಂತೆ ಆಗಿದೆ ಎಂದು ಬಿಜೆಪಿ ಸಂಸದ ಹಾಗೂ ಈ ಎಲ್ಲ ಪ್ರಕರಣಗಳ ರೂವಾರಿ ಅಶೋಕ್ ಅರ್ಗಾಲ್ ಹೇಳಿದರು. 'ಸಂಸದೀಯ ಸಮಿತಿಯ ತನಿಖೆಯಿಂದ ನನಗೆ ನ್ಯಾಯ ಸಿಕ್ಕಿಲ್ಲ. ಸಮಿತಿಯು ಮುಖ್ಯ ಆರೋಪಿ ಅಮರ್ ಸಿಂಗ್ ಅವರನ್ನು ಪ್ರಶ್ನಿಸಿಯೇ ಇಲ್ಲ. ಅವರ ವಿರುದ್ಧವೇ ಕ್ರಮ ಕೈಗೊಳ್ಳಬೇಕಾಗಿತ್ತು, ಆದರೆ ಅದು ನಡೆದೇ ಇಲ್ಲ' ಎಂದು ಅವರು ತಿಳಿಸಿದರು. ಯುಪಿಎ ನಾಯಕರು ಬಿಜೆಪಿ ಸಂಸದರ ಮಂಪರು ಪರೀಕ್ಷೆಗೆ ಒತ್ತಾಯಿಸಿದ್ದರು. ಅದಕ್ಕೆ ನಾನು ತಯಾರಾಗಿದ್ದೆ. ಸಂಜೀವ್ ಸಕ್ಸೇನಾಗೇ ಮಂಪರು ಪರೀಕ್ಷೆ ನಡೆಸಬೇಕಿತ್ತು. ಆಗ ಆತ ಹಣ ಎಲ್ಲಿಂದ ಬಂತು ಎಂಬುದನ್ನು ತಿಳಿಸುತ್ತಿದ್ದ ಎಂದು ಅವರು ಹೇಳಿದರು.

2008: ಮಕ್ಕಳ ಆಪ್ತಮಿತ್ರನಂತಿರುವ ಪೊಗೊ ಚಾನೆಲ್ ಮುಂಬೈಯಲ್ಲಿ ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ಬೆಂಗಳೂರಿನ ಹನ್ನೊಂದು ವರ್ಷದ ಬಾಲಕ ಆಕಾಶ್ ಪ್ರತಿಷ್ಠಿತ 'ಪೊಗೊ ಅಮೇಜಿಂಗ್ ಕಿಡ್ಸ್ ಅವಾರ್ಡ್ 2008' ಪ್ರಶಸ್ತಿಯನ್ನು ಗೆದ್ದುಕೊಂಡರು. ಐದು ವರ್ಷಗಳಿಂದ ಪೊಗೊ ಆಯೋಜಿಸುತ್ತಾ ಬಂದ 'ಅಮೇಜಿಂಗ್ ಕಿಡ್ಸ್ ಅವಾರ್ಡ್'ನಲ್ಲಿ ಇದೇ ಮೊದಲ ಬಾರಿಗೆ ಕರ್ನಾಟಕದ ಆಕಾಶ್ ತನ್ನ ಮಾಂತ್ರಿಕ ಕೊಳಲು ವಾದನದಿಂದ ಈ ಪ್ರತಿಷ್ಠಿತ ಪ್ರಶಸ್ತಿಯನ್ನು (ಸಂಗೀತಗಾರ ವಿಭಾಗದಲ್ಲಿ) ಗೆದ್ದು ಅತ್ಯುತ್ತಮ ಸಾಧನೆ ಮಾಡಿದರು.

2008: ರಾಷ್ಟ್ರಪತಿ, ಉಪರಾಷ್ಟ್ರಪತಿ ಮತ್ತು ರಾಜ್ಯಪಾಲರ ತಿಂಗಳ ಸಂಬಳವನ್ನು ಮೂರು ಪಟ್ಟು ಹೆಚ್ಚಿಸುವ ಪ್ರಸ್ತಾವಕ್ಕೆ ಸಂಸತ್ ತನ್ನ ಅನುಮತಿ ನೀಡಿತು. ಲೋಕಸಭೆಯಲ್ಲಿ ಈ ಮೊದಲೇ ಅಂಗೀಕಾರಗೊಂಡಿದ್ದ ಈ ಪ್ರಸ್ತಾವಕ್ಕೆ ಈದಿನ ರಾಜ್ಯಸಭೆಯೂ ಸಮ್ಮತಿ ಸೂಚಿಸಿತು. ರಾಷ್ಟ್ರಪತಿ ಸಂಬಳ ಈಗಿನ 50 ಸಾವಿರದಿಂದ ರೂಪಾಯಿಗಳಿಂದ 1.5 ಲಕ್ಷ ರೂಪಾಯಿಗಳಿಗೆ ಹೆಚ್ಚಿದರೆ, ಉಪರಾಷ್ಟ್ರಪತಿ ಸಂಬಳ 40 ಸಾವಿರದಿಂದ 1.25 ಲಕ್ಷಕ್ಕೆ ಹಾಗೂ ರಾಜ್ಯಪಾಲರ ಸಂಬಳ 36 ಸಾವಿರದಿಂದ ರೂ 1.10 ಲಕ್ಷಕ್ಕೆ ಹೆಚ್ಚುವುದು. ಜೊತೆಗೆ ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಅವರ ಪಿಂಚಣೆ ಪ್ರಮಾಣವು ವೇತನದ ಶೇ 50ರಷ್ಟಾಗುವುದು.. ಈ ಎಲ್ಲ ಹೆಚ್ಚಳ 2006ರ ಜನವರಿಯಿಂದಲೇ ಪೂರ್ವಾನ್ವಯವಾಗುವುದು.

2008: ಇತರೆ ಹಿಂದುಳಿದ ವರ್ಗದ (ಒಬಿಸಿ) ಜನರ ಪೈಕಿ ವರ್ಷಕ್ಕೆ 4.5 ಲಕ್ಷ ರೂಪಾಯಿ ಆದಾಯ ಗಳಿಸುವವರನ್ನು ಮಾತ್ರ ಕೆನೆಪದರ ವಿಭಾಗದಲ್ಲಿ ಸೇರಿಸಬಹುದು ಎಂದು ಕಳೆದ ಅಕ್ಟೋಬರಿನಲ್ಲಿ ಕೇಂದ್ರ ಸರ್ಕಾರ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿ ಸಂಬಂಧ ಸುಪ್ರೀಂ ಕೋರ್ಟ್ ಕೇಂದ್ರಕ್ಕೆ ನೋಟಿಸ್ ಜಾರಿಗೊಳಿಸಿತು. ಹಿರಿಯ ಶಿಕ್ಷಣ ತಜ್ಞ ಪಿ. ವಿ. ಇಂದಿರೇಶನ್ ಮತ್ತು ಇತರರು ಸಲ್ಲಿಸಿದ ಈ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ಮುಖ್ಯ ನ್ಯಾಯಮೂರ್ತಿ ಕೆ. ಜಿ. ಬಾಲಕೃಷ್ಣನ್ ಮತ್ತು ಪಿ. ಸದಾಶಿವಂ ಅವರ ಪೀಠ ಸರ್ಕಾರದ ನಿರ್ಧಾರಕ್ಕೆ ಏನು ಕಾರಣ ಎಂದು ನಾಲ್ಕು ವಾರಗಳ ಒಳಗೆ ಉತ್ತರ ನೀಡುವಂತೆ ತಿಳಿಸಿ ನೋಟಿಸ್ ಜಾರಿಗೊಳಿಸಿತು. ಸರ್ಕಾರವು ಕಳೆದ ಅಕ್ಟೋಬರ್ 13ರಂದು ಹೊರಡಿಸಿದ ತನ್ನ ಆದೇಶದಲ್ಲಿ ಒಬಿಸಿ ಕೆನೆಪದರದ ಆದಾಯ ಮಿತಿಯನ್ನು ವಾರ್ಷಿಕ 2.5 ಲಕ್ಷ ರೂಪಾಯಿಯಿಂದ 4.5 ಲಕ್ಷಕ್ಕೆ ಹೆಚ್ಚಿಸಿತ್ತು. ಸುಪ್ರೀಂ ಕೋರ್ಟ್‌ ಸಂವಿಧಾನ ಪೀಠವೊಂದು ಕಳೆದ ಏಪ್ರಿಲ್ 10ರಂದು ತೀರ್ಪು ನೀಡಿ ಸರ್ಕಾರಿ ಅನುದಾನದಿಂದ ನಡೆಯುವ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಒಬಿಸಿಯವರಿಗೆ ಶೇ 27ರಷ್ಟು ಮೀಸಲಾತಿ ನೀಡುವುದನ್ನು ಎತ್ತಿ ಹಿಡಿದಿತ್ತು ಮತ್ತು 'ಕೆನೆಪದರ'ಕ್ಕೆ ಒಳಪಟ್ಟ ವಿದ್ಯಾರ್ಥಿಗಳನ್ನು ಈ ಮೀಸಲಾತಿಯಿಂದ ಹೊರಗೆ ಇಡಬೇಕು ಎಂದೂ ಹೇಳಿತ್ತು.

2008: ಡಾ. ಪು.ತಿ.ನ. ಟ್ರಸ್ಟ್ ವತಿಯಿಂದ ನೀಡಲಾಗುವ 2007ನೇ ಸಾಲಿನ ಪು.ತಿ.ನ. ಕಾವ್ಯ ಪುರಸ್ಕಾರಕ್ಕೆ ಜಿ.ಎನ್. ಮೋಹನ್ ಅವರ 'ಪ್ರಶ್ನೆಗಳಿ ರುವುದು ಷೇಕ್ಸ್‌ಪಿಯರನಿಗೆ' ಮತ್ತು ಅವರ 'ಒಡೆಯಲಾರದ ಪ್ರತಿಮೆ' ಕೃತಿಗಳನ್ನು ಆಯ್ಕೆ ಮಾಡಲಾಯಿತು.

2008: ದೇಶದ ಪ್ರಥಮ ಹವಾನಿಯಂತ್ರಿತ ಬಸ್ ತಂಗುದಾಣವನ್ನು (ಬಸ್ ಶೆಲ್ಟರ್) ಬಿಬಿಎಂಪಿ ಜಂಟಿ ಆಯುಕ್ತ (ಜಾಹೀರಾತು) ಗೋವಿಂದರಾಜು ಬೆಂಗಳೂರಿನಲ್ಲಿ ಉದ್ಘಾಟಿಸಿದರು. ರಿಲಯನ್ಸ್ ಸಮೂಹದ ಬಿಗ್‌ ಸ್ಟ್ರೀಟ್, ಟೆಲಿಕಾಂ ರಂಗದ ಪ್ರಮುಖ ಕಂಪೆನಿ ಭಾರತಿ ಏರ್‌ಟೆಲ್ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸಹಯೋಗದಲ್ಲಿ ಕಸ್ತೂರಬಾ ರಸ್ತೆಯಲ್ಲಿ (ಕಬ್ಬನ್ ಉದ್ಯಾನ ಪ್ರವೇಶ ದ್ವಾರದ ಬಳಿ) ಮೊದಲ ಹವಾನಿಯಂತ್ರಿತ ಬಸ್ ಶೆಲ್ಟರ್ ನಿರ್ಮಾಣವಾಗಿದೆ. ಒಮ್ಮೆಗೆ 20 ಜನರು ಕುಳಿತುಕೊಳ್ಳಬಹುದಾದ ಈ ತಂಗುದಾಣಕ್ಕೆ ಸಮವಸ್ತ್ರಧಾರಿ ಭದ್ರತಾ ಸಿಬ್ಬಂದಿಯಿಬ್ಬರು ನಿರಂತರ ರಕ್ಷಣೆ ಒದಗಿಸುವರು. ಈ ಶೆಲ್ಟರ್ ನಿರ್ಮಾಣಕ್ಕೆ ಎಂಟು ಲಕ್ಷ ರೂಪಾಯಿ ವೆಚ್ಚವಾಗಿದೆ. ಬಿಗ್ ಸ್ಟ್ರೀಟ್ ಕಂಪೆನಿ ನಗರದಲ್ಲಿ 172 ಸಾಮಾನ್ಯ ಬಸ್ ಶೆಲ್ಟರುಗಳ ನಿರ್ಮಾಣದ ಗುತ್ತಿಗೆಯನ್ನೂ ಪಡೆದಿದೆ.

2008: ದೂರ ಸಂಪರ್ಕ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಎಂದು ಹೇಳಲಾಗುವ ತ್ರೀಜಿ ತಂತ್ರಜ್ಞಾನ ಸೇವೆಯನ್ನು ದೆಹಲಿ ವ್ಯಾಪ್ತಿಯಲ್ಲಿ ಸರ್ಕಾರಿ ಸ್ವಾಮ್ಯದ ಮಹಾನಗರ ದೂರ ಸಂಪರ್ಕ ನಿಗಮ (ಎಂಟಿಎಂಎಲ್)ವು ಆರಂಭಿಸುತ್ತಿದ್ದು , ಪ್ರಧಾನಿ ಮನಮೋಹನ್ ಸಿಂಗ್ ಅವರು ನವದೆಹಲಿಯಲ್ಲಿ ಇದಕ್ಕೆ ವಿಧ್ಯುಕ್ತ ಚಾಲನೆ ನೀಡಿದರು. ಹೊಸ ತ್ರೀಜಿ ತಂತ್ರಜ್ಞಾನವನ್ನು 'ಜಾದೂ' ಹೆಸರಿನಿಂದ ಕರೆಯಲಾಗುತ್ತಿದ್ದು, ಕಾರ್ಯಕ್ರಮದಲ್ಲಿ ಹಾಜರಿದ್ದ ಕೇಂದ್ರ ದೂರ ಸಂಪರ್ಕ ಸಚಿವ ಎ.ರಾಜಾ ಅವರು ವೀಡಿಯೋ ಕರೆ ಮಾಡುವ ಮೂಲಕ ತ್ರೀಜಿ ತಂತ್ರಜ್ಞಾನ ಸಾಮರ್ಥ್ಯವನ್ನು ಪ್ರದರ್ಶಿಸಿದರು.

2008: ಚೆನ್ನೈ ನಗರದ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಮೊದಲ ಕ್ರಿಕೆಟ್ ಟೆಸ್ಟಿನ ಅಂತಿಮ ದಿನದ ಪಂದ್ಯದಲ್ಲಿ ಹರ್ಷೋದ್ಘಾರಗಳ ಮಧ್ಯೆ ಭಾರತವು ಇಂಗ್ಲೆಂಡ್ ವಿರುದ್ಧ ಆರು ವಿಕೆಟುಗಳ ವಿಜಯ ಸಾಧಿಸಿತು. ಅನುಭವಿ ಆಟಗಾರ ಸಚಿನ್ ತೆಂಡೂಲ್ಕರ್ ಅವರು ತಮ್ಮ 41ನೇ ಶತಕ ಬಾರಿಸುವುದರೊಂದಿಗೆ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತ್ಯುನ್ನತ ಶತಕ ಸಿಡಿಸಿದವರ ಸಾಲಿಗೆ ನಾಲ್ಕನೆಯವರಾಗಿ ಸೇರಿದ ದಾಖಲೆಯೂ ಕ್ರೀಡಾ ಇತಿಹಾಸದ ಪುಟಕ್ಕೆ ಸೇರ್ಪಡೆಯಾಯಿತು.

2007: ತಮಗೆ ಅನುಕೂಲವಾಗುವಂತೆ ಸಂವಿಧಾನ ತಿದ್ದುಪಡಿ ಮಾಡಿದ ನಂತರ ಪಾಕಿಸ್ಥಾನದ ಅಧ್ಯಕ್ಷ ಪರ್ವೇಜ್ ಮುಷರಫ್ ಆರು ವಾರಗಳ ತುರ್ತುಪರಿಸ್ಥಿತಿಯನ್ನು ತೆಗೆದುಹಾಕಿದರು. ತುರ್ತುಪರಿಸ್ಥಿತಿ, ತಾತ್ಕಾಲಿಕ ಸಾಂವಿಧಾನಿಕ ವ್ಯವಸ್ಥೆ ಹಾಗೂ ಮೂಲಭೂತ ಹಕ್ಕುಗಳ ಮೇಲಿನ ನಿರ್ಬಂಧ ತೆಗೆದು ಹಾಕುವ ಮೂರಂಶಗಳ ರಾಷ್ಟ್ರಪತಿ ಆದೇಶಗಳಿಗೆ ಅವರು ಸಹಿ ಹಾಕಿದರು. ತನ್ಮೂಲಕ 1973ರ ಸಂವಿಧಾನ ವ್ಯವಸ್ಥೆ ಮತ್ತೆ ಜಾರಿಗೆ ಬಂತು. ಆದರೆ, ನವೆಂಬರ್ 29ರಂದು ಸೇನಾ ಮುಖ್ಯಸ್ಥನ ಪದವಿ ತ್ಯಜಿಸಿದರೂ, ಆರು ವಾರಗಳ ತುರ್ತುಪರಿಸ್ಥಿತಿ ಅವಧಿಯಲ್ಲಿ ಕೈಗೊಂಡ ಸಂವಿಧಾನ ತಿದ್ದುಪಡಿಗಳು ಹಾಗೂ ಈ ಕ್ರಮಗಳನ್ನು ನ್ಯಾಯಾಲಯದಲ್ಲಿ ಪ್ರಶ್ನಿಸದಂತೆ ಮಾಡಿದ್ದು ಪ್ರತಿಪಕ್ಷಗಳಲ್ಲಿ ಅಸಮಾಧಾನ ಮೂಡಿಸಿತು.

2007: ಇಂಟರ್ನೆಟ್ ಮೂಲಕ ಅಕ್ರಮವಾಗಿ ಔಷಧ ವ್ಯಾಪಾರ ಮಾಡುತ್ತಿದ್ದ ಭಾರತೀಯ ವೈದ್ಯನೊಬ್ಬನಿಗೆ ಫಿಲಡಲ್ಫಿಯಾ ನ್ಯಾಯಾಲಯ 30 ವರ್ಷಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿತು. ಫಿಲಡೆಲ್ಫಿಯಾದ ಟೆಂಪಲ್ ವಿಶ್ವವಿದ್ಯಾಲಯದಲ್ಲಿ ಬಿಸಿನೆಸ್ ಪದವಿ ವ್ಯಾಸಂಗ ಮಾಡುತ್ತಿದ್ದ ವೈದ್ಯ ಅಖಿಲ್ ಬನ್ಸಾಲ್ (29) ತಮ್ಮ ಕುಟುಂಬದೊಂದಿಗೆ ಇಂಟರ್ನೆಟ್ ಮೂಲಕ ಅಕ್ರಮವಾಗಿ ಔಷಧ ವ್ಯಾಪಾರ ಮಾಡುತ್ತಿದ್ದು, ಭಾರತದಿಂದ ಅಕ್ರಮವಾಗಿ ತರಿಸಿಕೊಂಡ 11 ದಶಲಕ್ಷ ಔಷಧ ಮಾತ್ರೆಗಳನ್ನು ಅಮೆರಿಕದಲ್ಲಿರುವ 60,000 ಮಂದಿಗೆ ವಿತರಿಸಿದ್ದಾರೆ ಎಂಬುದು ಸರ್ಕಾರಿ ವಕೀಲರ ಆರೋಪ. `ನೀವು ಇಡೀ ದೇಶದ ತುಂಬ ವಿಷ ಹಂಚಿದ್ದೀರಿ' ಎಂದು ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ಜಿಲ್ಲಾ ನ್ಯಾಯಾಧೀಶ ಪೌಲ್ ಡೈಮಂಡ್ ಅವರು ಆರೋಪಿ ಅಖಿಲ್ ಬನ್ಸಾಲ್ ಗೆ ಛೀಮಾರಿ ಹಾಕಿದರು.

2007: ಮಾಹಿತಿ ತಂತ್ರಜ್ಞಾನ ಸಂಸ್ಥೆ `ಇನ್ಫೋಸಿಸ್' ಅಧ್ಯಕ್ಷ ಎನ್. ಆರ್. ನಾರಾಯಣ ಮೂರ್ತಿ ಅವರು ಸಾಫ್ಟವೇರ್ ಉದ್ದಿಮೆ, ವ್ಯಾಪಾರ ಕ್ಷೇತ್ರಗಳಲ್ಲಿ ನೀಡಿದ ಕೊಡುಗೆಯನ್ನು ಗುರುತಿಸಿ ಬ್ರಿಟನ್ನಿನ ಲ್ಯಾನ್ಸೆಸ್ಟರ್ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿತು. ಲ್ಯಾನ್ಸೆಸ್ಟರ್ ವಿಶ್ವವಿದ್ಯಾಲಯದಲ್ಲಿ ನಡೆದ ವಿಶೇಷ ಪದವಿ ಪ್ರದಾನ ಸಮಾರಂಭದಲ್ಲಿ ವಿಶ್ವವಿದ್ಯಾಲಯದ ಕುಲಪತಿ ಸರ್ ಕ್ರಿಸ್ ಬೊನಿಂಗ್ಟನ್ ಅವರು ನಾರಾಯಣ ಮೂರ್ತಿ ಅವರಿಗೆ `ಗೌರವ ಡಾಕ್ಟರೇಟ್' ಪದವಿ ಪ್ರದಾನ ಮಾಡಿದರು. ನಾರಾಯಣ ಮೂರ್ತಿ ಅವರು 1981 ರಲ್ಲಿ ಆರು ಜನ ಸಾಫ್ಟವೇರ್ ತಂತ್ರಜ್ಞರೊಂದಿಗೆ ಸೇರಿಕೊಂಡು ಇನ್ಫೋಸಿಸ್ ಸಂಸ್ಥೆ ಸ್ಥಾಪಿಸಿ, 21 ವರ್ಷಗಳ ಕಾಲ ಅದರ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು.

2007: ಪೂರ್ವ ಇಂಡೋನೇಷ್ಯಾದ ಮಲುಕಾ ದ್ವೀಪದಲ್ಲಿ ಭಾರಿ ಭೂಕಂಪ ಸಂಭವಿಸಿತು. ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ 7.1 ರಷ್ಟು ಇತ್ತು. ಸೌಮ್ ಲಕಿ ಪಟ್ಟಣದ ವಾಯವ್ಯ ಭಾಗದಿಂದ 128 ಕಿ.ಮೀ ದೂರದಲ್ಲಿ ಕಂಪನವು ಕೇಂದ್ರೀಕೃತವಾಗಿತ್ತು.

2007: ಕುದುರೆಗಳ ಹೆಜ್ಜೆಗಳ ಸದ್ದು ಮತ್ತು ಹೃದಯಕ್ಕೆ ತಂಪು ನೀಡುವ ಇಂಪಾದ ಮೆಲು ಸಂಗೀತದ ಮಧ್ಯೆ ಸಮವಸ್ತ್ರ ಧರಿಸಿದ ಮರದಗಲ ಎದೆಯ ರಾಷ್ಟ್ರಪತಿಗಳ ಅಂಗರಕ್ಷಕರು ಪ್ರತಿ ಶನಿವಾರ ಭಾರತದ ರಾಷ್ಟ್ರಪತಿ ಭವನದಲ್ಲಿ ನಡೆಸುವ ಕರ್ತವ್ಯದ ಹಸ್ತಾಂತರ (ಚೇಂಜ್ ಆಫ್ ಗಾರ್ಡ್) ಈ ಬಾರಿ ಐತಿಹಾಸಿಕ ದಿನವಾಗಿ ಮಾರ್ಪಟ್ಟಿತು. ಭಾರತದ ರಾಷ್ಟ್ರಪತಿ ಭವನದ ಇತಿಹಾಸದಲ್ಲಿ 2007ರ ಡಿಸೆಂಬರ್ 15 ಸ್ಮರಣೀಯ ದಿನವಾಯಿತು. ಇದೇ ಮೊದಲ ಬಾರಿಗೆ ಈ ಸಾಂಪ್ರದಾಯಿಕ ವಿಧಿಯನ್ನು ಸಾರ್ವಜನಿಕರ ವೀಕ್ಷಣೆಗೆ ಮುಕ್ತಗೊಳಿಸಲಾಯಿತು. ರಾಷ್ಟ್ರಪತಿ ಭವನವನ್ನು ಜನರಿಗೆ ಹತ್ತಿರವಾಗಿಸುವ ಪ್ರಯತ್ನವಾಗಿ ಈಗ ಈ `ಚೇಂಜ್ ಆಫ್ ಗಾರ್ಡ್' ನ್ನು ಸಾರ್ವಜನಿಕರಿಗೆ ಮುಕ್ತವಾಗಿಸಿ, ಅದರಲ್ಲಿ ಹಲವು ಮಾರ್ಪಾಟು ಸಹ ಮಾಡಲಾಯಿತು.

2007: ಖ್ಯಾತ ಬ್ಯಾಟ್ಸ್ ಮನ್ನರಾದ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್ ಹಾಗೂ ಅನುಭವಿ ಲೆಗ್ ಸ್ಪಿನ್ನರ್ ಅನಿಲ್ ಕುಂಬ್ಳೆ ಅವರು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ನೀಡುವ ವಾರ್ಷಿಕ ಪ್ರಶಸ್ತಿಗೆ ಆಯ್ಕೆಯಾದರು.

2007: ಬೆಂಗಳೂರು ನಗರದ ಸ್ಪರ್ಶ ಆಸ್ಪತ್ರೆಯಲ್ಲಿ ಅಪರೂಪದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಬಿಹಾರ ಗಡಿ ಭಾಗದ ರಾಂಪುರ್ ಗ್ರಾಮದ ಶಂಭು- ಪೂನಮ್ ದಂಪತಿಯ ಎರಡು ವರ್ಷದ ಬಾಲಕಿ ಲಕ್ಷ್ಮಿ ಈದಿನ ಸ್ಪರ್ಶ ಆಸ್ಪತ್ರೆಯಿಂದ ಮನೆಗೆ ಮರಳಿದಳು. ಈ ಬಾಲಕಿ ನಾಲ್ಕು ಹೆಚ್ಚುವರಿ ಕೈಕಾಲುಗಳನ್ನು ಹೊಂದಿದ್ದ ಪರಿಣಾಮ ಹುಟ್ಟಿನಿಂದಲೂ ತೊಂದರೆ ಅನುಭವಿಸುತ್ತಿದ್ದಳು. ಸ್ಪರ್ಶ ಆಸ್ಪತ್ರೆ ಮುಖ್ಯಸ್ಥ ಡಾ. ಶರಣ ಪಾಟೀಲ್ ನೇತೃತ್ವದ 30 ತಜ್ಞ ವೈದ್ಯರ ತಂಡ 2007ರ ನವಂಬರ್ 6 ಹಾಗೂ 7ರಂದು ಸತತ 27 ಗಂಟೆಗಳ ಕಾಲ ಲಕ್ಷ್ಮಿಗೆ ಶಸ್ತ್ರಚಿಕಿತ್ಸೆ ನಡೆಸಿತ್ತು. ಶಸ್ತ್ರಚಿಕಿತ್ಸೆ ವೇಳೆ ವೈದ್ಯರ ತಂಡ ರುಂಡವಿಲ್ಲದ ಲಕ್ಷ್ಮಿಯ ಅವಳಿ ದೇಹದ ಭಾಗವನ್ನು (2ಕೈ, 2ಕಾಲು) ಕತ್ತರಿಸಿ ತೆಗೆದಿತ್ತು. ನಂತರ ಅತ್ಯಂತ ಸೂಕ್ಷ್ಮವಾದ ಬೆನ್ನುಹುರಿ ಬೇರ್ಪಡಿಸುವ ಕಾರ್ಯ, ಸೊಂಟದ ಭಾಗವನ್ನು ಸಮರ್ಪಕಗೊಳಿಸುವ ಕಾರ್ಯ, ಮೂತ್ರಪಿಂಡ ಮರುಜೋಡಣೆ ಸೇರಿದಂತೆ ಹಲವು ಶಸ್ತ್ರಚಿಕಿತ್ಸೆಗಳನ್ನು ಲಕ್ಷ್ಮಿಗೆ ಯಶಸ್ವಿಯಾಗಿ ಮಾಡಲಾಗಿತ್ತು.

2007: ಏಷ್ಯಾದಲ್ಲಿಯೇ ಅತಿ ಎತ್ತರದ ಆನೆಗಳಲ್ಲಿ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ `ಶಿವಶಂಕರನ್' ಉತ್ತರ ಕೇರಳದ ಒಟ್ಟಪಾಲಮ್ಮಿನಲ್ಲಿ ಸಾವನ್ನಪ್ಪಿತು. ನೂರಾರು ದೇಗುಲಗಳ ಉತ್ಸವಗಳಲ್ಲಿ ಪಾಲ್ಗೊಂಡಿದ್ದ 56 ವರ್ಷ ವಯಸ್ಸಿನ `ಶಿವಶಂಕರನ್' 10 ಅಡಿ 9 ಅಂಗುಲ ಎತ್ತರವಿತ್ತು. ಈ ಎತ್ತರದಿಂದಲೇ ಜನರ ಗಮನ ಸೆಳೆದಿತ್ತು. ಒಟ್ಟಪಾಲಮ್ಮಿನ ದೇಗುಲ ಒಂದರ ಸಮಾರಂಭದಲ್ಲಿ ಪಾಲ್ಗೊಳ್ಳಲು ತೆರಳಿದ್ದ ಈ ಆನೆ ಟ್ರಕ್ಕಿನಿಂದ ಕೆಳಗಿಳಿಸುವಾಗ ಆಯತಪ್ಪಿ ಕೆಳಗೆ ಬಿದ್ದಿತು. ಪಶುವೈದ್ಯರ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆಯಿತು.

2007: ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಬಿ. ಶ್ರೀನಿವಾಸರೆಡ್ಡಿ ಅವರನ್ನು ತತ್ ಕ್ಷಣ ಹುದ್ದೆಯಿಂದ ವಜಾಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತು. ರೆಡ್ಡಿ ಅವರು ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿರುವುದು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಅವರ ನೇಮಕಾತಿಯ ಗುತ್ತಿಗೆ ರದ್ದು ಮಾಡುವಂತೆ ಲೋಕಾಯುಕ್ತ ಎನ್. ಸಂತೋಷ್ ಹೆಗ್ಡೆ, ಸರ್ಕಾರಕ್ಕೆ ಶಿಫಾರಸು ಮಾಡಿದ್ದರು.

2007: ಎಚ್ ಎಂ ಟಿ ಕಂಪೆನಿಯಿಂದ ಎರಡು ಲಕ್ಷ ರೂಪಾಯಿ ಪಡೆದು ನಕಲಿ ಛಾಪಾ ಕಾಗದ ನೀಡಿ (ಎಂಬೋಸ್ ಮೆಂಟ್) ವಂಚಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಛಾಪಾ ಕಾಗದ ಹಗರಣದ ಪ್ರಮುಖ ಆರೋಪಿ ಅಬ್ದುಲ್ ಕರೀಂಲಾಲಾ ತೆಲಗಿ, ವಜೀರ್ ಅಹ್ಮದ್ ಸಾಲಿಕ್, ಬದ್ರುದಿನ್ ಜಮಾದಾರ್ ಅವರಿಗೆ ಐದು ವರ್ಷ ಶಿಕ್ಷೆ ವಿಧಿಸಿ ಪರಪ್ಪನ ಅಗ್ರಹಾರ ವಿಶೇಷ ನ್ಯಾಯಾಲಯ ತೀರ್ಪು ನೀಡಿತು. ಮೂವರಿಗೂ ತಲಾ 4.50 ಲಕ್ಷ ರೂ ದಂಡ ಮತ್ತು ಇದೇ ಪ್ರಕರಣದ ಇನ್ನೊಬ್ಬ ಆರೋಪಿ ಪ್ರದೀಪ್ ಕುಮಾರ್ ಗೆ ಒಂದು ವರ್ಷ ಕಠಿಣ ಸಜೆ ವಿಧಿಸಿ ವಿಶೇಷ ನ್ಯಾಯಾಧೀಶರಾದ ಸಿ.ಜಿ. ಹುನಗುಂದ್ ಅವರು ತೀರ್ಪು ನೀಡಿದರು. ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಇನ್ನೂ ಮೂವರು ಆರೋಪಿಗಳಾದ ಅನೀಸ್ ಖಾನ್, ಇರ್ಫಾನ್ ಅಹಮ್ಮದ್ ಮತ್ತು ಸಮೀವುಲ್ಲಾ ಅವರನ್ನು ಖುಲಾಸೆಗೊಳಿಸಿದರು.

2007: ಭಾರತದ ಪ್ರತಿಷ್ಠಿತ ಬಾಹ್ಯಾಕಾಶ ಕಾರ್ಯಕ್ರಮ ಚಂದ್ರಯಾನ -1ಕ್ಕೆ ದ್ವಿಮುಖ ಸಂಪರ್ಕ ಸಾಧಿಸುವ ಆಂಟೆನಾವನ್ನು ಬೆಂಗಳೂರಿನ ಹೊರವಲಯದಲ್ಲಿ ಇಸ್ರೋ ಸ್ಥಾಪಿಸಿದ್ದು, ಅದನ್ನು ಈದಿನ ಪತ್ರಕರ್ತರಿಗೆ ತೋರಿಸಲಾಯಿತು. ದೊಡ್ಡ ಆಲದಮರದ ಬಳಿಯ ಬ್ಯಾಲಾಳುವಿನಲ್ಲಿ ಸ್ಥಾಪಿಸಿರುವ 32 ಮೀಟರ್ ವ್ಯಾಸದ ಆಂಟೆನಾ ಮತ್ತು ಇದಕ್ಕೆ ಪೂರಕ ಸಂಪರ್ಕ ಸಾಧನಗಳಿಂದ ಚಂದ್ರಯಾನ-1 ಉಪಗ್ರಹ ಹಾಗೂ ಭೂಮಿಯ ನಡುವೆ ದ್ವಿಮುಖ ಸಂಪರ್ಕ ಸಾಧ್ಯವಾಗುತ್ತದೆ.

2006: ಹತ್ತೊಂಬತ್ತು ವರ್ಷಗಳ ಹಿಂದೆ ನ್ಯಾಯಾಂಗ ಬಂಧನದಲ್ಲಿದ್ದ ಇಬ್ಬರನ್ನು ಹಿಂಸೆ ನೀಡಿ ಕೊಂದ ಪ್ರಕರಣದಲ್ಲಿ ದೆಹಲಿಯ ಮಾಜಿ ಎಸಿಪಿ ಋಷಿಪ್ರಕಾಶ್ ತ್ಯಾಗಿ (65) ಅವರಿಗೆ ನವದೆಹಲಿಯ ತ್ವರಿತ ಗತಿ ನ್ಯಾಯಾಲಯವು ಮರಣದಂಡನೆ ವಿಧಿಸಿತು. ನ್ಯಾಯಾಂಗದ ಇತಿಹಾಸದಲ್ಲೇ ಅಪರೂಪದ ತೀರ್ಪು ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಯಿತು.

2006: ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಇರುವ ಗಗನಯಾತ್ರಿಗಳಾದ ಬಾಬ್ ಕರ್ಬಿಮ್ ಮತ್ತು ಕ್ರಿಸ್ಟರ್ ಫಗ್ ಸ್ಯಾಂಗ್ ಮತ್ತೊಮ್ಮೆ ಬಾಹ್ಯಾಕಾಶ ನಡಿಗೆ ನಡೆಸಿ ನಿಲ್ದಾಣದ ಅರ್ಧ ಭಾಗಕ್ಕೆ ವಿದ್ಯುತ್ ಪೂರೈಸುವ ತಂತಿಗಳ ಮರುಜೋಡಣೆ ಕಾರ್ಯ ಕೈಗೊಂಡರು.

2006: ದೋಹಾದಲ್ಲಿ ನಡೆಯುತ್ತಿದ್ದ ಏಷ್ಯನ್ ಕ್ರೀಡಾಕೂಟಕ್ಕೆ ವರ್ಣರಂಜಿತ ತೆರೆ.

2006: ಹಾಡುಹಗಲೇ ತರಗತಿಯಲ್ಲಿ ಮಕ್ಕಳೆದುರು ನಡೆದ ಶಿಕ್ಷಕನ ಘೋರ ಕಗ್ಗೊಲೆಯ ಮುಖ್ಯ ಆರೋಪಿ, ಕೇರಳದ ಸಿಪಿಎಂ ಕಾರ್ಯಕರ್ತ ಎ. ಪ್ರದೀಪನ್ ಗೆ ವಿಧಿಸಲಾಗಿದ್ದ ಮರಣದಂಡನೆಯನ್ನು ನ್ಯಾಯಮೂರ್ತಿ ಎಸ್. ಬಿ. ಸಿನ್ಹ ಮತ್ತು ಮಾರ್ಕಾಂಡೇಯ ಕಟ್ಜು ಅವರನ್ನು ಒಳಗೊಂಡ ಸುಪ್ರೀಂಕೋರ್ಟ್ ಪೀಠವು ಜೀವಾವಧಿ ಸಜೆಗೆ ಇಳಿಸಿ ತೀರ್ಪು ನೀಡಿತು. ಭಾರತೀಯ ಯುವ ಮೋರ್ಚಾದ ರಾಜ್ಯ ಉಪಾಧ್ಯಕ್ಷರಾಗ್ದಿದ ಶಾಲಾ ಶಿಕ್ಷಕ ಕೆ.ಪಿ. ಜೈಕೃಷ್ಣನ್ ಅವರನ್ನು ತರಗತಿಯಲ್ಲೇ ಶಾಲಾ ಮಕ್ಕಳ ಎದುರು ಮಾರಕ ಅಸ್ತ್ರಗಳಿಂದ ಹಲ್ಲೆ ನಡೆಸಿ ಅಟ್ಟಿಸಿಕೊಂಡು ಹೋಗಿ ಕೊಲೆಗೈದುದಕ್ಕಾಗಿ ಆರೋಪಿ ಎ. ಪ್ರದೀಪನ್ ಮತ್ತು ಇತರ ಐವರು ಆಪಾದಿತರಿಗೆ ವಿಚಾರಣಾ ನ್ಯಾಯಾಲಯ ಮರಣದಂಡನೆ ವಿಧಿಸಿತ್ತು. ನಂತರ ಹೈಕೋರ್ಟ್ ಅದನ್ನು ದೃಢಪಡಿಸಿತ್ತು. ಕೇರಳದ ಕಣ್ಣೂರು ಜಿಲ್ಲೆಯ ಪರಮೇಲ್ನ ಮೊಕೇರಿ ಈಸ್ಟ್ ಯು.ಪಿ. ಸ್ಕೂಲಿನಲ್ಲಿ 1999ರ ಡಿಸೆಂಬರ್ 1ರಂದು ಈ ಭೀಕರ ಘಟನೆ ನಡೆದಿತ್ತು. ಘಟನೆ ನಡೆದ 7 ದಿನಗಳ ಬಳಿಕ ಅಂದರೆ ಡಿಸೆಂಬರ್ 8ರಂದು ಪ್ರಕರಣದ ತನಿಖೆ ಆರಂಭವಾಗಿತ್ತು.

2005: ಸೂರ್ಯನನ್ನು ಹೋಲುವ ನಕ್ಷತ್ರವೊಂದನ್ನು ಪತ್ತೆ ಹಚ್ಚಿರುವುದಾಗಿ ಖಗೋಳ ವಿಜ್ಞಾನಿಗಳು ನ್ಯೂಯಾರ್ಕಿನಲ್ಲಿ ಪ್ರಕಟಿಸಿದರು. ಈ ನಕ್ಷತ್ರದ ಸುತ್ತ ಚಲನಶೀಲ ಅವಶೇಷಗಳು ಕಾಣಿಸಿಕೊಂಡಿದ್ದು ಭೂಮಿಯನ್ನು ಹೋಲುವ ಗ್ರಹದ ರಚನೆ ನಡೆಯುತ್ತಿರಬಹುದು ಎನ್ನಲಾಗಿದೆ. 137 ಜ್ಯೋತಿರ್ ವರ್ಷಗಳಷ್ಟು ದೂರದಲ್ಲಿರುವ ನಕ್ಷತ್ರ ತನ್ನ ಸುತ್ತ ಗ್ರಹಗಳನ್ನು ಒಳಗೊಂಡಿರುವ ಸಾಧ್ಯತೆ ಇದೆ. ನಕ್ಷತ್ರ ಸುಮಾರು 3ಕೋಟಿ ವರ್ಷಗಳಷ್ಟು ಹಳೆಯದು. ಅಲ್ಲಿನ ತಾಪಮಾನ ಮೈನಸ್ 262 ಡಿಗ್ರಿ ಫ್ಯಾರನ್ ಹೀಟ್ ಎಂಬುದು ವಿಜ್ಞಾನಿಗಳ ಅಭಿಮತ.

2005: ನೂರು ಮೀಟರ್ ಓಟದ ಸ್ಪರ್ಧೆಯಲ್ಲಿ ದಾಖಲೆ ನಿರ್ಮಿಸಿದ್ದ ಉತ್ತರ ಕರೋಲಿನಾದ ಅಥ್ಲೀಟ್ ಟಿಮ್ ಮಾಂಟ್ಗೊಮರಿ ಸಾಲ್ವೊ ಪಟ್ಟಣದಲ್ಲಿ ತಮ್ಮ ನಿವೃತ್ತಿ ಘೋಷಿಸಿದರು. ಉದ್ದೀಪನ ಮದ್ದು ಸೇವನೆ ಪ್ರಕರಣದ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದ ಕ್ರೀಡಾ ನ್ಯಾಯ ಪಂಚಾಯ್ತಿಯು ಇವರನ್ನು ತಪ್ಪಿತಸ್ಥ ಎಂದು ತೀರ್ಮಾನಿಸಿ ಎರಡು ವರ್ಷದ ಅವಧಿಗೆ ನಿಷೇಧ ಹೇರಿದ ಮರುದಿನವೇ ಮಾಂಟ್ಗೊಮರಿ ನಿವೃತ್ತಿ ಪ್ರಕಟಿಸಿದರು.

2005: ಯಹೂದ್ಯರ ನರಮೇಧದ ಅವಧಿಯ ಗ್ರಾಹಕರಿಗೆ ನಾಜಿಗಳ ಪರ ಸ್ವಿಸ್ ಬ್ಯಾಂಕ್ ನಡೆಸಿದ ವಂಚನೆ ಪ್ರಕರಣ ಸಂಬಂಧದಲ್ಲಿ ಖ್ಯಾತ ಮನಃಶಾಸ್ತ್ರಜ್ಞ ಸಿಗ್ಮಂಡ್ ಫ್ರಾಯ್ಡ್ ಮೊಮ್ಮಗ ಅನ್ಟೋನ್ ವಾಲ್ಟರ್ ಫ್ರಾಯ್ಡ್ ಅವರಿಗೆ 1,68,000 ಡಾಲರ್ ಪರಿಹಾರ ನೀಡುವಂತೆ ಕ್ಯಾಲಿಫೋರ್ನಿಯಾದ ಪ್ಯಾಸಡೇನಾದ ನ್ಯಾಯಾಲಯವೊಂದು ಆದೇಶ ನೀಡಿತು.

2005: ಜನಾಂಗೀಯ ಕಲಹ, ಹಿಂಸಾಚಾರ, ಯುದ್ಧ ಮತ್ತು ಸರ್ವಾಧಿಕಾರದ ಮುಷ್ಠಿಯಲ್ಲಿ ಬಸವಳಿದ ಇರಾಕಿನಲ್ಲಿ ಇದೇ ಮೊದಲ ಬಾರಿಗೆ ಸಾರ್ವತ್ರಿಕ ಚುನಾವಣೆ ಆರಂಭಗೊಂಡಿತು.

2005: ಹಂಪಿಯ ಕನ್ನಡ ವಿಶ್ವ ವಿದ್ಯಾಲಯವು ನೀಡುವ ನಾಡೋಜ ಪ್ರಶಸ್ತಿಯ ಗೌರವಕ್ಕೆ ಪ್ರಜಾವಾಣಿಯ ಇಗೋ ಕನ್ನಡ ಅಂಕಣದ ಖ್ಯಾತಿಯ ನಿಘಂಟು ತಜ್ಞ ಬೆಂಗಳೂರಿನ ಪ್ರೊ. ಜಿ. ವೆಂಕಟಸುಬ್ಬಯ್ಯ, ಮೈಸೂರು ವಿ.ವಿ. ಪ್ರಾಧ್ಯಾಪಕಿ ಪ್ರೊ.ಸಿ. ಪಾರ್ವತಮ್ಮ, ಬರಹಗಾರ್ತಿ ಮಂಗಳೂರಿನ ಸಾರಾ ಅಬೂಬಕ್ಕರ್, ರಂಗಭೂಮಿಯ ಹಿರಿಯ ಚೇತನ ಬೆಳಗಾವಿಯ ಏಣಗಿ ಬಾಳಪ್ಪ, ಕಾಷ್ಠ ಶಿಲ್ಪ ಕಲಾವಿದ ಗುಲ್ಬರ್ಗದ ನಾಗಣ್ಣ ಮೋನಪ್ಪ ಬಡಿಗೇರ, ಖ್ಯಾತ ಹರಿದಾಸ ಉಡುಪಿ ಭದ್ರಗಿರಿ ಅಚ್ಯುತದಾಸರು ಆಯ್ಕೆಯಾದರು.

2001: ಪೀಸಾ ವಾಲುಗೋಪುರವನ್ನು 12 ವರ್ಷಗಳ ಬಳಿಕ ಮೊದಲ ಬಾರಿಗೆ ಸಾರ್ವಜನಿಕ ಭೇಟಿಗಾಗಿ ತೆರೆದಿಡಲಾಯಿತು. 1990ರಲ್ಲಿ ತಜ್ಞರ ಸಲಹೆಯಂತೆ ಗೋಪುರವನ್ನು ಮುಚ್ಚಲಾಗಿತ್ತು.

1966: ಚಿತ್ರ ನಿರ್ಮಾಪಕ ಹಾಗೂ ಅನಿಮೇಟರ್ ವಾಲ್ಟ್ ಡಿಸ್ನಿ ಅವರು ಲಾಸ್ ಏಂಜೆಲಿಸಿನಲ್ಲಿ ತಮ್ಮ 65ನೇ ವಯಸ್ಸಿನ್ಲಲಿ ಮೃತರಾದರು.

1950: ಭಾರತದ `ಉಕ್ಕಿನ ಮನುಷ್ಯ' ಸರ್ದಾರ್ ವಲ್ಲಭ ಭಾಯಿ ಪಟೇಲ್ ಬಾಂಬೆಯಲ್ಲಿ (ಈಗಿನ ಮುಂಬೈ) ತಮ್ಮ 75ನೇ ವಯಸ್ಸಿನಲ್ಲಿ ನಿಧನರಾದರು.

1944: ಅಮೆರಿಕದ ಸೇನಾ ಮೇಜರ್ ಬ್ಯಾಂಡ್ ಲೀಡರ್ ಗ್ಲೆನ್ನ್ ಮಿಲ್ಲರ್ ಅವರನ್ನು ಪ್ಯಾರಿಸ್ಸಿನತ್ತ್ತ ಒಯ್ಯುತ್ತಿದ್ದ ಏಕ ಎಂಜಿನ್ ವಿಮಾನ ಬ್ರಿಟಿಷ್ ಕಡಲ್ಗಾಲುವೆಯ ಮೇಲೆ ನಾಪತ್ತೆಯಾಯಿತು.

1938: ಸಾಹಿತಿ ಕೆ.ಎಚ್. ಶ್ರೀನಿವಾಸ್ ಜನನ.

1935: ನಟ, ನಾಟಕಕಾರ, ತಾಂತ್ರಿಕ ಶಿಕ್ಷಣ ಇಲಾಖೆಯ ಪ್ರಾಧ್ಯಾಪಕ ಬಿ.ಎಸ್. ಕೇಶವರಾವ್ ಅವರು ಬಿ.ಕೆ. ಸುಬ್ಬರಾವ್- ನಾಗಲಕ್ಷ್ಮಮ್ಮ ದಂಪತಿಯ ಮಗನಾಗಿ ಮೈಸೂರಿನಲ್ಲಿ ಜನಿಸಿದರು.

1911: ದೊರೆ ಐದನೇ ಜಾರ್ಜ್ ನವದೆಹಲಿ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದ. ದಿಲ್ಲಿ ದರ್ಬಾರಿನಲ್ಲಿ ರಾಜಧಾನಿಯು ಕಲ್ಕತ್ತಾದಿಂದ (ಈಗಿನ ಕೋಲ್ಕತ್ತಾ) ದೆಹಲಿಗೆ ಸ್ಥಳಾಂತರಗೊಳ್ಳಲಿದೆ ಎಂದು ಪ್ರಕಟಿಸಲಾಯಿತು.

1902: ಸಾಹಿತಿ ಚಂಪಾಬಾಯಿ ದೇಶಪಾಂಡೆ ಜನನ.

1832: ಫ್ರೆಂಚ್ ಸಿವಿಲ್ ಎಂಜಿನಿಯರ್ ಅಲೆಗ್ಸಾಂಡರ್ ಗುಸ್ಟಾವ್ ಐಫೆಲ್ (1832-1923) ಜನ್ಮದಿನ. ನೈಸ್ನಲ್ಲಿ ಖಗೋಳ ವೀಕ್ಷಣಾಲಯಕ್ಕೆ ಚಲಿಸುವಂತಹ ಗುಮ್ಮಟ ಹಾಗೂ ನ್ಯೂಯಾರ್ಕಿನ ಸ್ಟ್ಯಾಚ್ಯು ಆಫ್ ಲಿಬರ್ಟಿಯ ಚೌಕಟ್ಟಿನ ವಿನ್ಯಾಸ ರೂಪಿಸಿದ ಐಫೆಲ್ ಅವರ ಹೆಸರನ್ನು ಫ್ರಾನ್ಸಿನಲ್ಲಿ ನಿರ್ಮಿಸಿದ ಗೋಪುರಕ್ಕೆ ಇರಿಸಲಾಗಿದೆ.

No comments:

Post a Comment