Wednesday, January 16, 2019

ಇಂದಿನ ಇತಿಹಾಸ History Today ಜನವರಿ 16

ಇಂದಿನ ಇತಿಹಾಸ History Today ಜನವರಿ 16
2019: ಹಾಂಕಾಂಗ್: ಚೀನಾವು ಇತ್ತೀಚೆಗೆ ಚಂದ್ರಗ್ರಹಕ್ಕೆ ಕಳುಹಿಸಿದ ಚಾಂದ್ರ ನೌಕೆಯಲ್ಲಿ ಹತ್ತಿ ಬೀಜ ಕುಡಿಯೊಡೆದಿದೆ. ಇದರೊಂದಿಗೆ ಭೂಮಿಯಿಂದ ಆಚೆಗಿನ ಗ್ರಹವೊಂದರಲ್ಲಿ ಕುಡಿಯೊಡೆದ ಚೊಚ್ಚಲ ಸಸಿ ಎಂಬ ಹೆಗ್ಗಳಿಕೆಗೆ ಹತ್ತಿ ಸಸಿ ಪಾತ್ರವಾಗಿದೆ. ಭೂಮಿಯಿಂದ ಆಚೆಗಿನ ಗ್ರಹವೊದರಲ್ಲಿ ತಾನು ಬೆಳೆಸಿದ ಮೊದಲ ಸಸಿಯ ಚಿತ್ರಗಳನ್ನು ಚೀನೀ ಸರ್ಕಾರ ಬಿಡುಗಡೆ ಮಾಡಿತು. ಚಂದ್ರ ಗ್ರಹದಲ್ಲಿ ಹತ್ತಿಬೀಜ ಚಿಗುರೊಡೆದ ಸುದ್ದಿಯನ್ನು ಪ್ರಕಟಿಸಿದ ಚೀನೀ ಸಂಶೋಧಕರು ಭೂಮಿಯಿಂದ ಸಹಸ್ರಾರು ಕಿಲೋಮೀಟರ್ಗಳ ಆಚೆ ಚಂದ್ರನಲ್ಲಿ ಇಳಿದ ಚೀನೀ ಬಾಹ್ಯಾಕಾಶ ನೌಕೆಯಲ್ಲಿನ ಸಣ್ಣ ಕುಂಡದಲ್ಲಿ ಪುಟ್ಟ ಗಿಡ ಚಿಗುರಿದ್ದನ್ನು ತೋರಿಸುವ ಚಿತ್ರಗಳನ್ನು ಬಿಡುಗಡೆ ಮಾಡಿದರು. ಭೂಮಿಗೆ ಕಾಣಿಸದ ಚಂದ್ರನ ಇನ್ನೊಂದು ಪಾರ್ಶ್ವದಲ್ಲಿ ಜನವರಿ ೩ರಂದು ಯುಟು ಅಥವಾ ಜೇಡ್ ರ್ಯಾಬಿಟ್ ಹೆಸರಿನ ತನ್ನ ರೋವರ್ ನ್ನು ಇಳಿಸುವ ಮೂಲಕ ಚಂದ್ರಗ್ರಹದ ಇನ್ನೊಂದು ಬದಿಯಲ್ಲಿ ಚಾಂದ್ರ ನೆಲವನ್ನು ಸ್ಪರ್ಶಿಸಿದ ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಚೀನಾ ಪಾತ್ರವಾಗಿತ್ತು. ಚಂದ್ರಗ್ರಹದ ದಕ್ಷಿಣ ಧ್ರುವಕ್ಕೆ ಹತ್ತಿರದ ಪ್ರದೇಶದಲ್ಲಿ ಚೀನಾದ ಉಪಗ್ರಹ ಇಳಿದಿತ್ತುಚಾಂಗ್ ಹೆಸರಿನ ಚಂದ್ರಯಾನ ಯೋಜನೆಯು ಹಲವಾರು ಗುರಿಗಳನ್ನು ಹೊಂದಿದೆ. ಚಂದ್ರನ ಧ್ರುವಗಳಲ್ಲಿ ನೀರು ಇದೆಯೇ ಎಂಬುದಾಗಿ ಪತ್ತೆ ಹಚ್ಚುವುದು, ರೇಡಿಯೋ ಅಸ್ಟ್ರಾನಮಿ ಪ್ರಯೋಗ, ಚಂದ್ರ ಗ್ರಹದ ಅತ್ಯಂತ ಕಡಿಮೆ ಗುರುತ್ವಾಕರ್ಷಣೆಯ ಪರಿಸರದಲ್ಲಿ ಗಿಡಗಳು ಬೆಳೆಯಬಲ್ಲವೇ ಎಂಬುದಾಗಿ ಪರೀಕ್ಷಿಸುವುದು ಇತ್ಯಾದಿ ಗುರಿಗಳನ್ನು ಚೀನಾ ಹೊಂದಿದೆ. ಪ್ರಯೋಗಗಳ ಪೈಕಿ ಚಂದ್ರನ ಕಡಿಮೆ ಗುರುತ್ವಾಕರ್ಷಣೆಯ ಪರಿಸರದಲ್ಲಿ ಗಿಡಗಳು ಬೆಳೆಯಬಲ್ಲವೇ ಎಂಬ ಪ್ರಯೋಗ ಇದೀಗ ಫಲ ನೀಡಿರುವಂತೆ ಕಾಣುತ್ತಿದೆಚೀನೀ ಬಾಹ್ಯಾಕಾಶ ನೌಕೆಯು ಚಂದ್ರ ನೆಲದಲ್ಲಿ ಇಳಿತ ಬಳಿಕ ಬೀಜಗಳಿಗೆ ನೀರು ಹನಿಸುವ ಕೆಲಸ ಆರಂಭಿಸಲಾಗಿತ್ತು. ಒಂದು ವಾರದ ಬಳಿಕ  ಹತ್ತಿ ಬೀಜವು ಕುಡಿಯೊಡೆಯಿತುಮಾನವರು ಮುನ್ನ ಬಾಹ್ಯಾಕಾಶದಲ್ಲಿ ಗಿಡಗಳನ್ನು ಬೆಳಸುವ ಪ್ರಯತ್ನ ನಡೆಸಿ ಯಶಸ್ವಿಯಾಗಿದ್ದರು. ಆದರೆ ಚಾಂದ್ರ ನೆಲದಲ್ಲಿ ಗಿಡ ಬೆಳೆಸುವ ಯತ್ನವನ್ನು ಎಂದೂ ನಡೆಸಿರಲಿಲ್ಲ. ಚೊಂಗ್ಗಿಂಗ್ ವಿಶ್ವವಿದ್ಯಾಲಯದ ಇನ್ ಸ್ಟಿಟ್ಯೂಟ್ ಆಫ್ ಅಡ್ವಾನ್ಸಡ್ ಟೆಕ್ನಾಲಜಿಯ ಡೀನ್ ಕ್ಷೀ ಗೆಂಗ್ ಕ್ಷಿನ್ ಅವರು ಚಾಂದ್ರ ನೆಲದಲ್ಲಿ ಗಿಡ ಬೆಳೆಸಿದ ಸಾಧನೆಯನ್ನು ಶ್ಲಾಘಿಸಿದರು. ಬಾಹ್ಯಾಕಾಶದಲ್ಲಿ ಹಲವಾರು ಸಾಧನೆಗಳನ್ನು ಮಾಡುವ ಮಹತ್ವಾಕಾಂಕ್ಷೆ ಹೊಂದಿರುವ ಚೀನಾದ ಯೋಜನೆಗಳ ಪೈಕಿ ಮೊದಲ ಯೋಜನೆ ಭೂಮಿಗೆ ಕಾಣಿಸದ ಚಾಂದ್ರ ಪಾರ್ಶ್ವವನ್ನು ಸ್ಪರ್ಶಿಸುವುದಾಗಿತ್ತು.   ಯೋಜನೆಯು ಇದೀಗ ಮಾನವ ಇತಿಹಾಸದಲ್ಲೇ ಮೊದಲ ಬಾರಿಗೆ ಚಾಂದ್ರನೆಲದಲ್ಲಿ ನೈವಿಕ ಪ್ರಯೋಗದಲ್ಲೂ ಸಾಧನೆ ಮಾಡಿದೆ. ನಿರ್ಜನ ಚಾಂದ್ರ ಪರಿಸರದಲ್ಲಿ ಹಸಿರು ಎಲೆಗಳನ್ನು ಒಳಗೊಂಡ ಮೊದಲ ಸಸಿ ಇದಾಗಲಿದೆ ಎಂದು ಕ್ವಿನ್ ಹೇಳಿದರು. ಹತ್ತಿಯ ಜೊತೆಗೆ ಆಲೂಗಡ್ಡೆ, ರೇಪ್ಸೀಡ್, ಮೌಸ್ ಈಯರ್ ಕ್ರೆಸ್ ಇತ್ಯಾದಿಗಳನ್ನು ಬೀಜಗಳನ್ನು ಬೆಳೆಸಲೂ ಚೀನೀ ವಿಜ್ಞಾನಿಗಳು ಯತ್ನಿಸುತ್ತಿದ್ದಾರೆ. ಕಡಿಮೆ ಗುರುತ್ವಾಕರ್ಷಣೆ ಮತ್ತು ಪ್ರಬಲ ರೇಡಿಯೇಷನ್ ಇರುವ ಪರಿಸರದಲ್ಲಿ ಸಸಿಗಳು ಹೇಗೆ ಬೆಳೆಯುತ್ತವೆ ಎಂಬುದನ್ನು ಪ್ರಯೋಗ ತೋರಿಸಿಕೊಡಲಿದೆ. ಭವಿಷ್ಯದಲ್ಲಿ ಚಂದ್ರಗ್ರಹದಲ್ಲಿ ಮಾನವರು ನಿರ್ಮಿಸಬಹುದಾದ ಕಾಲೋನಿಗಳಿಗಾಗಿ ಬೆಳೆಸಬಹುದಾದ ಸಂಪನ್ಮೂಲಗಳ ನೀಲನಕ್ಷೆ ರೂಪಿಸಲು ಪ್ರಯೋಗ ನೆರವಾಗಲಿದೆ ಎಂದು ವಿಜ್ಞಾನಿಗಳು ಹೇಳಿದರುಚೀನಾದ ಮುಂದಿನ ಮಹತ್ವಾಕಾಂಕ್ಷಿ ಬಾಹ್ಯಾಕಾಶ ಯೋಜನೆ ಚಾಂಗ್ ಚಾಂದ್ರಯಾನ ವರ್ಷಾಂತ್ಯದ ವೇಳೆಗೆ ನಡೆಯಲಿದ್ದು ಚಂದ್ರನಿಂದ ಮಾದರಿಗಳನ್ನು ಭೂಮಿಗೆ ಕಳುಹಿಸುವ ಗುರಿಯನ್ನು ಇದು ಹೊಂದಿದೆ. ಚೀನಾದ ಮೊದಲ ಮಂಗಳಯಾನ ಯೋಜನೆ ೨೦೨೦ರ ವೇಳೆಗೆ ಜಾರಿಯಾಗಲಿದೆ ಎಂದು ಚೀನಾ ನ್ಯಾಷನಲ್ ಸ್ಪೇಸ್ ಅಡ್ಮಿನಿಸ್ಟ್ರೇಷನ್ ಉಪ ಮುಖ್ಯಸ್ಥ ವು ಯನ್ಹುವಾ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
. 
2019: ನವದೆಹಲಿ: ಕರ್ನಾಟಕ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಮತ್ತು ದೆಹಲಿ ಹೈಕೋರ್ಟಿನ ನ್ಯಾಯಮೂರ್ತಿ ಸಂಜೀವ ಖನ್ನಾ ಅವರನ್ನು ಸರ್ಕಾರವು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾಗಿ ನೇಮಕ ಮಾಡಿದೆ ಎಂದು ಕಾನೂನು ಮತ್ತು ನ್ಯಾಯಾಂಗ ಸಚಿವಾಲಯದ ಅಧಿಸೂಚನೆಯೊಂದು ತಿಳಿಸಿತು.  ಇದರೊಂದಿಗೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ನೇಮಕಾತಿ ಸಂಬಂಧದ ವಿವಾದಕ್ಕೆ ಕೇಂದ್ರ ಸರ್ಕಾರ ತೆರೆ ಎಳೆಯಿತು. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಸಮ್ಮತಿ ಲಭಿಸಿರುವ ಆದೇಶವನ್ನು ಸುಪ್ರೀಂಕೋರ್ಟಿನ ಐವರು ನ್ಯಾಯಮೂರ್ತಿಗಳ ಉನ್ನತಾಧಿಕಾರದ ಕೊಲಿಜಿಯಂ ಶಿಫಾರಸಿನಂತೆ ಹೊರಡಿಸಲಾಯಿತು. ಕರ್ನಾಟಕ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಮತ್ತು ದೆಹಲಿ ಹೈಕೋರ್ಟಿನ ನ್ಯಾಯಮೂರ್ತಿ ಸಂಜೀವ ಖನ್ನಾ ಅವರನ್ನು ಇತ್ತೀಚೆಗೆ ಹಲವಾರು ಹೈಕೋರ್ಟ್ಗಳ ಕಿರಿಯ ನ್ಯಾಯಮೂರ್ತಿಗಳಿಗೆ ಬಡ್ತಿ ನೀಡುವಾಗ ಕಡೆಗಣಿಸಲಾಗಿತ್ತು. ಉಭಯ ನ್ಯಾಯಮೂರ್ತಿಗಳನ್ನು ನೇಮಕ ಮಾಡುವಂತೆ ಮಾಡಿದ್ದ ತನ್ನ ಶಿಫಾರಸನ್ನು ಸರ್ಕಾರ ಜಾರಿಗೊಳಿಸದೇ ಇದ್ದಾಗ ಸುಪ್ರೀಂಕೋರ್ಟಿನ ಕೊಲಿಜಿಯಂ ಅವರ ನೇಮಕಾತಿಗೆ ಮರುಶಿಫಾರಸು ಮಾಡಿತ್ತು. ಇದು ದೇಶಾದ್ಯಂತ ಭಾರೀ ವಿವಾದಕ್ಕೆ ಕಾರಣವಾಗಿತ್ತುಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ನೇತೃತ್ವದ ಸುಪ್ರೀಂಕೋರ್ಟ್ ಕೊಲಿಜಿಯಂ ಹೊಸದಾಗಿ ಮಾಡಿದ ಶಿಫಾರಸಿನ ವಿರುದ್ಧ ದೆಹಲಿ ಹೈಕೋರ್ಟಿನ ಮಾಜಿ ನ್ಯಾಯಮೂರ್ತಿ ಕೈಲಾಶ್ ಗಂಭೀರ್ ಅವರು ಮೊತ್ತ ಮೊದಲಿಗೆ ಮಾತನಾಡಿದ್ದರುಇಬ್ಬರು ನ್ಯಾಯಮೂರ್ತಿಗಳ ನೇಮಕಕ್ಕೆ ಮರುಶಿಫಾರಸು ಮಾಡಿದ ದಿನವನ್ನು ಭಾರತೀಯ ನ್ಯಾಯಾಂಗದಕರಾಳ ದಿನ ಎಂಬುದಾಗಿ ಕರೆದಿದ್ದ ನಿವೃತ್ತ ನ್ಯಾಯಮೂರ್ತಿ, ಶಿಫಾರಸಿಗೆ ಒಪ್ಪಿಗೆ ನೀಡುವುದನ್ನು ತಡೆಹಿಡಿಯುವಂತೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಗೆ ಮನವಿ ಮಾಡಿದ್ದರು. ’ಇನ್ನೊಂದು ಐತಿಹಾಸಿಕ ತಪ್ಪು ಘಟಿಸದಿರಲಿ ಎಂದು ಅವರು ಆಗ್ರಹಿಸಿದ್ದರು. ಸುಪ್ರೀಂಕೋರ್ಟಿನಲ್ಲಿ ಪ್ರಸ್ತುತ ಮಂಜೂರಾಗಿರುವ ೩೧ ನ್ಯಾಯಮೂರ್ತಿಗಳ ಹುದ್ದೆಯ ಪೈಕಿ ೨೬ ನ್ಯಾಯಮೂರ್ತಿಗಳು ಮಾತ್ರ ಕಾರ್ ನಿರ್ವಹಿಸುತ್ತಿದ್ದರು. ಐದು ಹುದ್ದೆಗಳು ಇನ್ನೂ ಖಾಲಿ ಬಿದ್ದಿವೆ. ಇಬ್ಬರ ನೇಮಕದೊಂದಿಗೆ ಈಗ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ಸಂಖ್ಯೆ ೨೮ಕ್ಕೆ ಏರಿತು. ಕಾನೂನು ಮತ್ತು ನ್ಯಾಯಾಂಗ ಸಚಿವಾಲಯವು ಉಭಯ ನ್ಯಾಯಮೂರ್ತಿಗಳ ಹೆಸರುಗಳಿಗೆ ಒಪ್ಪಿಗೆ ನೀಡಿ ರಾಷ್ಟ್ರಪತಿಗಳ ಕಚೇರಿಗೆ ಅಂತಿಮ ಸಮ್ಮತಿಗಾಗಿ ಕಳುಹಿಸಿತ್ತು. ಕೆಲದಿನಳಿಂದ ಅಸ್ವಸ್ಥರಾಗಿದ್ದ ಕೇಂದ್ರ ಕಾನೂನು ಸಚಿವ ರವಿಶಂಕರ ಪ್ರಸಾದ್ ಅವರು ಬಡ್ತಿಗಾಗಿ ಉಭಯ ನ್ಯಾಯಮೂರ್ತಿಗಳ ಹೆಸರುಗಳಿಗೆ ಒಪ್ಪಿಗೆ ನೀಡಿದ ದಿನವೇ ಸಚಿವಾಲಯದಿಂದ ನೇಮಕಾತಿಗೆ ಒಪ್ಪಿಗೆ ಲಭಿಸಿತುಇಬ್ಬರು ನ್ಯಾಯಮೂರ್ತಿಗಳ ಹೆಸರಿನ ಬಗ್ಗೆ ಮಾಜಿ ನ್ಯಾಯಮೂರ್ತಿಗಳು ಮತ್ತು ವಕೀಲರು ಆಕ್ಷೇಪ ವ್ಯಕ್ತ ಪಡಿಸುವುದರೊಂದಿಗೆ ದೇಶವ್ಯಾಪಿ ವಿವಾದ ಭುಗಿಲೆದ್ದಿತ್ತು. ಅವರ ಹೆಸರುಗಳನ್ನು ಕೊಲಿಜಿಯಂ ಮರುಶಿಫಾರಸು ಮಾಡಿದ್ದು ಹಲವಾರು ಕಾರಣಗಳಿಗಾಗಿ ಸಮರ್ಪಕವಲ್ಲ ಎಂಬ ಟೀಕೆಗಳು ಕೇಳಿ ಬಂದಿದ್ದವು. ಹಿಂದೆ ಹೊಸ ನೇಮಕಾತಿಗಳ ಬಗ್ಗೆ ಚರ್ಚೆ ನಡೆಸಿದಾಗ ಉಭಯ ನ್ಯಾಯಮೂರ್ತಿಗಳ ಹೆಸರುಗಳನ್ನು ಕೊಲಿಜಿಯಂ ಕೈಬಿಟ್ಟಿದ್ದ ಹಿನ್ನೆಲೆಯಲ್ಲಿ ಕೊಲಿಜಿಯಂನ ಮರುಶಿಫಾರಸು ಬಗ್ಗೆ ಪ್ರಶ್ನೆಗಳು ಎದ್ದಿದ್ದವು. ಭಾರತದ ಮುಖ್ಯ ನ್ಯಾಯಮೂರ್ತಿ ಮತ್ತು ಇತರ ನಾಲ್ವರು ಹಿರಿಯ ನ್ಯಾಯಮೂರ್ತಿಗಳನ್ನು ಒಳಗೊಂಡ ಕೊಲಿಜಿಯಂನ ಹಿಂದಿನ ಸಭೆಯಲ್ಲಿ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಅವರ ಹೆಸರನ್ನು ಕೈಬಿಡಲಾಗಿತ್ತು. ಆದರೆ ಮರುದಿನದ ಸಭೆಯಲ್ಲಿ ದಿಢೀರನೆ ಅವರ ಹೆಸರನ್ನು ಶಿಫಾರಸು ಮಾಡಲಾಗಿತ್ತು. ಸುಪ್ರೀಂಕೋರ್ಟಿನ ಮಾಜಿ ನ್ಯಾಯಮೂರ್ತಿ ಜೆ. ಚೆಲಮೇಶ್ವರ್ ಅವರು ಇದನ್ನು ತೀವ್ರವಾಗಿ ಟೀಕಿಸಿಎಕ್ಸಿಕ್ಯೂಟಿವ್ ಬಿಡ್ಡಿಂಗ್ ನಡೆಯುತ್ತಿದೆ ಎಂದು ಪತ್ರವೊಂರಲ್ಲಿ ದೂರಿದ್ದರು.  ಅದೇ ರೀತಿ ಅಖಿಲ ಭಾರತ ಪಟ್ಟಿಯಲ್ಲಿ ಹಿರಿತನದಲ್ಲಿ ೩೩ನೇ ಸ್ಥಾನದಲ್ಲಿದ್ದ ನ್ಯಾಯಮೂರ್ತಿ ಖನ್ನಾ ಅವರ ಬಡ್ತಿ ಬಗೆಗೂ ಪ್ರಶ್ನೆಗಳು ಎದ್ದಿದ್ದವುದೆಹಲಿ ಹೈಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಕೈಲಾಶ್ ಗಂಭೀರ್ ಅವರು ರಾಷ್ಟ್ರಪತಿಯವರಿಗೆ ಬರೆದ ಪತ್ರದಲ್ಲಿನ್ಯಾಯಮೂರ್ತಿ ಖನ್ನಾ ಅವರನ್ನು ನೇಮಿಸಲು ೩೨ ಇತರ ಹಿರಿಯ ನ್ಯಾಯಮೂರ್ತಿಗಳನ್ನು ನಿರ್ಲಕ್ಷಿಸುವುದಾದರೆ ಅದು ಭಾರತದ ನ್ಯಾಯಾಂಗ ಇತಿಹಾಸದಲ್ಲಿ ಇನ್ನೊಂದುಕರಾಳ ದಿನವಾಗುತ್ತದೆ ಎಂದು ತಿಳಿಸಿದ್ದರು. ನಿವೃತ್ತ ಸಿಜೆಐ ಆರ್. ಎಂ. ಲೋಧಾ ಮತ್ತು ದೆಹಲಿ ಹೈಕೋರ್ಟಿನ ಮಾಜಿ ಮುಖ್ಯ ನ್ಯಾಯಮೂರ್ತಿ ಎಪಿ ಶಾ ಅವರೂ ಎರಡು ಹೆಸರುಗಳನ್ನು ದಿಢೀರನೆ ಕೈಬಿಟ್ಟು, ಇತರ ಇಬ್ಬರ ಹೆಸರುಗಳ ಬಗ್ಗೆ ಒಲವು ವ್ಯಕ್ತ ಪಡಿಸಿದ ಕೊಲಿಜಿಯಂ ನಿರ್ಣಯವನ್ನು ಪ್ರಶ್ನಿಸಿದ್ದರು.

2019: ನವದೆಹಲಿ: ನಾಲ್ಕು ವರ್ಷಗಳ ಹಿಂದೆ ಪಕ್ಷವು ಅನುಭವಿಸಿದ ಹೀನಾಯ ಸೋಲಿನ ಬಳಿಕ ನಗರ ರಾಜಕೀಯದಿಂದ ದೂರಕ್ಕೆ ತಳ್ಳಲ್ಪಟ್ಟಿದ್ದ ದೆಹಲಿಯ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರು ದೆಹಲಿ ಕಾಂಗ್ರೆಸ್ ಮುಖ್ಯಸ್ಥೆಯಾಗಿ ಅಧಿಕಾರ ವಹಿಸಿಕೊಂಡರುಅಧ್ಯಕ್ಷೆಯಾಗಿ ಅಧಿಕಾರ ವಹಿಸಿಕೊಂಡ ೮೦ರ ಹರೆಯದ ರಾಜಕಾರಣಿ ಪಕ್ಷವು ಮುಂದಿನ ಸವಾಲುಗಳನ್ನು ಎದುರಿಸುವ ಸಲುವಾಗಿ ಸೂಕ್ತ ತಂತ್ರಗಾರಿಕೆಯನ್ನು ಪಕ್ಷವು ರೂಪಿಸಲಿದೆ ಎಂದು ಹೇಳಿದರು. ಶೀಲಾ ದೀಕ್ಷಿತ್ ಅವರ ಪೂರ್ವಾಧಿಕಾರಿ ಅಜಯ್ ಮಾಕನ್ ಅವರು ಪಕ್ಷವು ಆಮ್ ಆದ್ಮಿ ಪಕ್ಷದ (ಆಪ್) ಜೊತೆಗೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಿದ್ದರು. ಆಮ್ ಆದ್ಮಿ ಪಕ್ಷವು ೨೦೧೫ರಲ್ಲಿ ಮೂರು ಅವಧಿಗಳಿಂದ ಸತತವಾಗಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷವನ್ನೇ ದೂಳೀಪಟಗೊಳಿಸಿ ಅಧಿಕಾರಕ್ಕೆ ಏರಿತ್ತುಇತ್ತೀಚಿನ ವಾರಗಳಲ್ಲಿ ಎಂದೂ ಶೀಲಾ ದೀಕ್ಷಿತ್ ಅವರು ಆಮ್ ಆದ್ಮಿ [ಕ್ಷದ ಜೊತೆಗೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಒಲವು ವ್ಯಕ್ತ ಪಡಿಸಿರಲಿಲ್ಲ೨೦೧೦ರ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿನ ಭ್ರಷ್ಟಾಚಾರವನ್ನು ತಮ್ಮ ವಿರುದ್ಧದ ಮುಖ್ಯ ಆಪಾದನೆಯನ್ನಾಗಿ ಮಾಡಿಕೊಂಡು ತಮ್ಮ ವಿರುದ್ಧ ತೀವ್ರ ಪ್ರಚಾರ ನಡೆಸಿದ್ದ ಅರವಿಂದ ಕೇಜ್ರಿವಾಲ್ ಅವರ ಆಪ್ ಜೊತೆಗೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ದೀಕ್ಷಿತ್ ಅವರು ಅಂತಹ ಆಸಕ್ತಿಯನ್ನು ಹೊಂದಿಲ್ಲ ಎಂದು ಹೇಳಲಾಗಿತ್ತು. ಅಧಿಕೃತವಾಗಿ ಅಧಿಕಾರ ವಹಿಸಿಕೊಳ್ಳುವುದಕ್ಕೆ ಸ್ವಲ್ಪ ಮುನ್ನ ಶೀಲಾ ದೀಕ್ಷಿತ್ ಅವರು ಬಿಜೆಪಿ ಮತ್ತು ಆಪ್ನ್ನು ಒಂದೇ ತಕ್ಕಡಿಯಲ್ಲಿ ಇಟ್ಟು ಟೀಕಿಸಿದ್ದರು. ಬಿಜೆಪಿ ಮತ್ತು ಆಪ್ ಎರಡೂ ಸವಾಲುಗಳೇ. ನಾವು ಸವಾಲುಗಳನ್ನು ಒಟ್ಟಾಗಿಯೇ ಎದುರಿಸುತ್ತೇವೆ ಎಂದು ದೀಕ್ಷಿತ್ ಹೇಳಿದ್ದರು. ’ಆಪ್ ಜೊತೆಗೆ ಮೈತ್ರಿ ಕುರಿತು ಈವರೆಗೂ ಏನೂ ಬೆಳವಣಿಗೆ ಆಗಿಲ್ಲ ಎಂದು ಅವರು ಹೇಳಿದ್ದರು. ತನ್ನ ಕಡು ವಿರೋಧಿ ಆಪ್ ಜೊತೆಗೆ ಮೈತ್ರಿ ಮಾಡಿಕೊಳ್ಳಲು ಯತ್ನಿಸಿದ ಅಜಯ್ ಮಾಕನ್ ಅವರ ನಿಲುವಿಗೆ ದೀಕ್ಷಿತ್ ಅವರ ನಿಲುವು ತದ್ದಿರುದ್ಧವಾಗಿದೆ. ಹಿಂದಿನ ವರ್ಷ ಆಪ್ ಶಿಬಿರದ ಕಡೆಯಿಂದ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುವ ಊಹಾಪೋಹಗಳು ಹರಡಿದಾಗ ಮಾಕನ್ ಅವರುಇದು ಅತ್ಯಂತ ಕೆಟ್ಟ ಕಲ್ಪನೆ ಎಂಬುದಾಗಿ ಪಕ್ಷದ ವರಿಷ್ಠರಿಗೆ ಹೇಳಿದ್ದರು. ಹೀಗಾಗಿಯೇ ಅವರ ನಿರ್ಗಮನದ ವೇಳೆಗೆ ಸರಿಯಾಗಿ ಮೊದಲಿಗೆ ಕಾಂಗ್ರೆಸ್ ಜೊತೆ ಮೈತ್ರಿಯನ್ನು ವಿರೋಧಿಸಿದ್ದ ಆಪ್ ಎಚ್.ಎಸ್. ಫೂಲ್ಕ ಅವರು ಮೈತ್ರಿಯ ಊಹಾಪೋಹಗಳಿಗೆ ಮರುಜೀವ ನೀಡಿದ್ದರು. ಪಕ್ಷದ ನಾಯಕತ್ವವು ಮೈತ್ರಿಗಳ ಬಗ್ಗೆ ನಿರ್ಧರಿಸುತ್ತದೆ ಎಂಬುದಾಗಿ ಪ್ರತಿಪಾದಿಸಿದ ಶೀಲಾ ದೀಕ್ಷಿತ್ ಅವರು, ತಮ್ಮ ನಿಲುವು ಏನು ಎಂಬ ಬಗ್ಗೆ ಸ್ಪಷ್ಟ ಸುಳಿವುಗಳನ್ನು ನೀಡಿದರು. ಅವರು ರಾಜೀವ್ ಗಾಂಧಿ ಬಗ್ಗೆ ಆಡಿದ ಮಾತುಗಳ ರೀತಿಯು ನಮ್ಮೆಲ್ಲರನ್ನೂ ಘಾಸಿಗೊಳಿಸಿದೆ ಎಂದು ೧೯೮೪ರ ಸಿಖ್ ವಿರೋಧಿ ಗಲಭೆಗಳ ಬಗ್ಗೆ ವಿಧಾನಸಭೆಯು ಅಂಗೀಕರಿಸಿದ ನಿರ್ಣಯ ಬಗ್ಗೆ ಉಲ್ಲೇಖಿಸಿ ದೀಕ್ಷಿತ್ ನುಡಿದರು. ದೆಹಲಿ ವಿಧಾನಸಭೆಯಲ್ಲಿ ಇತ್ತೀಚೆಗೆ ನಿರ್ಣಯವನ್ನು ಅಂಗೀಕರಿಸುವ ವೇಳೆಯಲ್ಲಿ ಕೆಲವು ಆಪ್ ನಾಯಕರು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಬಗ್ಗೆ ತೀಕ್ಷ್ಣ ಟೀಕಾ ಪ್ರಹಾರ ಮಾಡಿದ್ದರು. ವಾಸ್ತವವಾಗಿ ೧೯೮೦ರಲ್ಲಿ ರಾಜೀವ್ ಗಾಂಧಿಯವರೇ ಮೂಲೆಗುಂಪಾಗಿದ್ದ ಶೀಲಾ ದೀಕ್ಷಿತ್ ಅವರನ್ನು ಸರ್ಕಾರಕ್ಕೆ ಸೇರ್ಪಡೆ ಮಾಡಿದ್ದರು. ತಮ್ಮ ಮಾವ ಉತ್ತರ ಪ್ರದೇಶದ ಹಿರಿಯ ಕಾಂಗ್ರೆಸ್ ನಾಯಕ ಉಮಾಶಂಕರ ದೀಕ್ಷಿತ್ ಅವರಿಗೆ ನೆರವಾಗುವ ಮೂಲಕ ಶೀಲಾ ದೀಕ್ಷಿತ್ ಅವರು ಇದಕ್ಕೆ ಮುನ್ನ ತಮ್ಮರಾಜಕೀಯ ಹಲ್ಲನ್ನೇ ಮುರಿದುಕೊಂಡಿದ್ದರು. ವಾಸ್ತವವಾಗಿ ರಾಜಕಾರಣಕ್ಕೆ ಅನಾಸಕ್ಕಿಯಿಂದಲೇ ಪ್ರವೇಶಿಸಿದ್ದ ಶೀಲಾ ದೀಕ್ಷಿತ್, ಉಮಾಶಂಕರ ದೀಕ್ಷಿತ್ ಅವರಿಗೆ ನೆರವಾದ ಬಳಿಕವಂತೂ ಸಂಪೂರ್ಣವಾಗಿ ಮೂಲೆಗುಂಪಾಗಿದ್ದರುಹಲವು ವರ್ಷಗಳ ಬಳಿಕ ಬಿಜೆಪಿಯು ದೆಹಲಿ ಗದ್ದುಗೆಯನ್ನು ಮತ್ತೆ ಹಿಡಿಯಲು ಯತ್ನಿಸುತ್ತಿದ್ದಾಗ ಮತ್ತು ದೆಹಲಿ ಕಾಂಗ್ರೆಸ್ ನಾಯಕರು ಪರಸ್ಪರ ಕಾಲೆಳೆದುಕೊಳ್ಳುವುದರಲ್ಲಿ ಮಗ್ನರಾಗಿದ್ದಾಗ, ಪಕ್ಷವುಹೊರಗಿನವರಾದ ಶೀಲಾ ದೀಕ್ಷಿತ್ ಅವರನ್ನು ನಿಯೋಜಿಸಿತ್ತು. ದೆಹಲಿ ಕಾಂಗ್ರೆಸ್ ಮುಖ್ಯಸ್ಥರಾಗಿ ಅದೇ ಅವರ ಮೊದಲ ಹೆಜ್ಜೆಯಾಗಿತ್ತು. ಇದಕ್ಕೆ ಮುನ್ನ ಅವರು ಯಾವುದೇ ಮಹತ್ವದ ಹುದ್ದೆಯನ್ನೂ ಪಕ್ಷದಲ್ಲಿ ಹೊಂದಿರಲಿಲ್ಲ. ಪಕ್ಷವನ್ನು ವಿಜಯದತ್ತ ಮುನ್ನಡೆಸಿದ ಶೀಲಾ ದೀಕ್ಷಿತ್ ದೆಹಲಿಯ ಮುಖ್ಯಮಂತ್ರಿಯಾದರು. ಅವರ ವಿಜಯ ರಥವು ೧೫ ವರ್ಷಗಳ ಕಾಲ, ಅಬಾಧಿತವಾಗಿ ಮುನ್ನಡೆದಿತ್ತು. ಆದರೆ ನಾಲ್ಕು ವರ್ಷಗಳ ಹಿಂದೆ ಅಣ್ಣಾ ಹಜಾರೆ ಅವರ ಭ್ರಷ್ಟಾಚಾರ ವಿರೋಧಿ ಚಳವಳಿಯ ಪರಿಣಾಮವಾಗಿ ಹುಟ್ಟಿದ ಆಮ್ ಆದ್ಮಿ ಪಕ್ಷವು ಶೀಲಾ ದೀಕ್ಷಿತ್ ಅವರಿಗೆ ಹೀನಾಯ ಪರಾಭವವನ್ನು ತಂದೊಡ್ಡುವ ಮೂಲಕ ದೆಹಲಿಯಲ್ಲಿ ಕಾಂಗ್ರೆಸ್ ರಾಜ್ಯಭಾರಕ್ಕೆ ತೆರೆ ಎಳೆದಿತ್ತು.

2019: ನವದೆಹಲಿ: ಫೇಸ್ ಬುಕ್ ಪೋಸ್ಟಿನಲ್ಲಿ ಬಾಲಕಿಯರ ಕನ್ಯತ್ವಕ್ಕೆ ಸಂಬಂಧಿಸಿದಂತೆ ವಿವಾದಾತ್ಮಕ ಟೀಕೆ ಮಾಡಿದ ಜಾಧವಪುರ ವಿಶ್ವವಿದ್ಯಾಲಯದ (ಜೆಯು) ಪ್ರೊಫೆಸರ್ ಕನಕ್ ಸರ್ಕಾರ್ ಅವರನ್ನು ಬೋಧನಾ ಕರ್ತವ್ಯದಿಂದ ತತ್ ಕ್ಷಣದಿಂದ ಜಾರಿಗೆ ಬರುವಂತೆ ವಿವಿ ಆಡಳಿತವು ಕಿತ್ತುಹಾಕಿತು. ಜಾಧವಪುರ ವಿಶ್ವ ವಿದ್ಯಾಲಯದ ಅಂತಾರಾಷ್ಟ್ರೀಯ ಬಾಂಧವ್ಯಗಳ ಇಲಾಖೆಯು ನೋಟಿಸ್ ಒಂದರಲ್ಲಿ ವಿಚಾರವನ್ನು ತಿಳಿಸಿತು. ಪ್ರೊಫೆಸರ್ ಕನಕ ಸರ್ಕಾರ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಕನ್ನಿಕೆಯರ ಕನ್ಯತ್ವವನ್ನುಸೀಲ್ಡ್ ಬಾಟಲ್ (ಮೊಹರಾದ ಬಾಟಲಿ) ಅಥವಾಸೀಲ್ಡ್ ಪ್ಯಾಕೆಟ್ಗೆ ಹೋಲಿಕೆ ಮಾಡಿದ್ದನ್ನು ಕಂಡು ಜಾಧವಪುರ ವಿಶ್ವ ವಿದ್ಯಾಲಯದ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಕೆಂಡಾಮಂಡಲವಾಗಿದ್ದರು. ಜೊತೆಗೆ ಬಂಗಾಳದ ಭಾರೀ ಸಂಖ್ಯೆಯ ಜನರೂಪ್ರೊಫೆಸರರ ಪೋಸ್ಟನ್ನು ಪ್ರಬಲವಾಗಿ ಖಂಡಿಸಿದ್ದರು. ಆಡಳಿತವು ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿತ್ತು.  ಘಟನೆಯು ದುರದೃಷ್ಟಕರ ಮತ್ತು ಪ್ರೊಫೆಸರರಿಂದ ಇಂತಹ ವರ್ತನೆ ಯೋಗ್ಯವಲ್ಲ. ನಾವು ಕಾನೂನಿಗೆ ಅನುಗುಣವಾಗಿ ಕ್ರಮ ಕೈಗೊಳ್ಳುತ್ತೇವೆ. ಬುಧವಾರ ಕುರಿತು ನಿರ್ಧರಿಸಲು ಸಭೆ ಕರೆಯಲಾಗಿದೆ ಎಂದು ವಿಶ್ವವಿದ್ಯಾಲಯದ ಉಪಕುಲಪತಿ ಸುರಂಜನ್ ದಾಸ್ ಅವರು ವಿದ್ಯಾರ್ಥಿಗಳ ನಿಯೋಗವೊಂದು ಜಂಟಿ ರಿಜಿಸ್ಟ್ರಾರ್ ಅವರನ್ನು ಭೇಟಿ ಮಾಡಿದ್ದಾಗ ಭರವಸೆ ಕೊಟ್ಟಿದ್ದರು. ರಾಷ್ಟ್ರದ ಮುಂಚೂಣಿಯ ಶಿಕ್ಷಣ ಸಂಸ್ಥೆಗಳಲ್ಲಿ ಜಾಧವಪುರ ವಿಶ್ವವಿದ್ಯಾಲಯವೂ ಒಂದಾಗಿದ್ದು, ವಿದ್ಯಾರ್ಥಿ ರಾಜಕಾರಣದ ಪ್ರಮುಖ ಕೇಂದ್ರವಾಗಿದೆ. ಫೇಸ್ ಬುಕ್ ಪೋಸ್ಟಿನಲ್ಲಿ ಆಕ್ಷೇಪಾರ್ಹ ಟೀಕೆ ಮಾಡಿದ ಅಂತಾರಾಷ್ಟ್ರೀಯ ಬಾಂಧವ್ಯಗಳ ಪ್ರೊಫೆಸರ್ ಸರ್ಕಾರ್ ಅವರು ಹಿಂದೆಯೂ ಸಾಮಾಜಿಕ ಮಾಧ್ಯಮ ಹಾಗೂ ಕಾಲೇಜು ಆವರಣದಲ್ಲಿ ಹಲವಾರು ಬಾರಿ ಇಂತಹ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆಪಾದಿಸಿದ ವಿದ್ಯಾರ್ಥಿಗಳು ಅವರ ವಿರುದ್ಧ ಲೈಂಗಿಕ ಕಿರುಕುಳದ ನಿರ್ದಿಷ್ಟ ದೂರುಗಳನ್ನು ದಾಖಲಿಸುವುದಾಗಿ ಉಪಕುಲಪತಿಯವರಿಗೆ ತಿಳಿಸಿದ್ದರು. ಸಾಮಾಜಿಕ ಮಾಧ್ಯಮವು ಜೆಯುವಿನ ಆವರಣದ ಭಾಗವಲ್ಲ. ಆದರೆ ವಿದ್ಯಾರ್ಥಿಗಳು ಲೈಂಗಿಕ ಕಿರುಕುಳದ ನಿರ್ದಿಷ್ಟ ದೂರು ನೀಡಿದರೆ ಸರ್ಕಾರ್ ವಿರುದ್ಧ ಕಠಿಣ ಶಿಕ್ಷೆ ವಿಧಿಸುವಂತಹ ಕ್ರಮವನ್ನು ಕೈಗೊಳ್ಳಬಹುದು ಎಂದು ವಿದ್ಯಾರ್ಥಿ ಸಂಘದ ವಕ್ತಾರ ಸ್ನೇಹಬ್ರಿಷ್ಟಿ ನಂದಿ ಹೇಳಿದರು. ಪ್ರೊಫೆಸರ್ ವಿರುದ್ಧ  ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿzರು. ಪ್ರೊಫೆಸರ್ ಅವರುನನ್ನ ಅಭಿಪ್ರಾಯಗಳು ಸರಿಯಲ್ಲದಿರಬಹುದು. ಆದರೆ ನನ್ನ ಉದ್ದೇಶ ಕೆಟ್ಟದಲ್ಲ. ಹಿಂದೆ ಕೂಡಾ ನಾನು ಅತ್ಯಾಚಾರ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ಖಂಡಿಸಿ ಹಲವಾರು ಪೋಸ್ಟ್ ಗಳನ್ನು ಪ್ರಕಟಿಸಿದ್ದೇನೆ ಎಂದು ಸರ್ಕಾರ್ ಪ್ರತಿಪಾದಿಸಿದ್ದರುಕನ್ನಿಕೆಯು ಸೀಲ್ಟ್ ಬಾಟಲಿ ಅಥವಾ ಸೀಲ್ಡ್ ಪ್ಯಾಕೆಟ್ ಇದ್ದಂತೆ ಎಂಬುದಾಗಿ ಫೇಸ್ ಬುಕ್ ಪೋಸ್ಟಿನಲ್ಲಿ ಬರೆದಿದ್ದ ಪ್ರೊಫೆಸರ್ಹಲವು ಹುಡುಗರು ಮೂರ್ಖರಾಗಿದ್ದಾರೆ. ಅವರಿಗೆ ಕನ್ನಿಕೆಯ ಬಗ್ಗೆ ಅರಿವಿಲ್ಲ ಎಂದು ಬರೆದಿದ್ದರುಪೋಸ್ಟ್ ವೈರಲ್ ಆದಾಗ ಅದನ್ನು ಕಿತ್ತು ಹಾಕಿದ್ದ ಪ್ರೊಫೆಸರ್ ತಮ್ಮ ಅಭಿಪ್ರಾಯ  ವ್ಯಕ್ತ ಪಡಿಸುವ ಸ್ವಾತಂತ್ರ್ಯ ತಮಗೆ ಇದೆ ಎಂದು ಕೆಲವು ತಾಸುಗಳ ಬಳಿಕ ಬರೆದ್ದರು. ಸುಪ್ರೀಂ ಕೋರ್ಟ್ ಮಾಹಿತಿ ತಂತ್ರಜ್ಞಾನ ಕಾಯ್ದೆಯ ೬೬ ಸೆಕ್ಷನ್ಗೆ ತಿದ್ದುಪಡಿ ಮಾಡಿದ್ದು ಸಾಮಾಜಿಕ ಮಾಧ್ಯಮದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀಡಿದೆ ಎಂದು ಬರೆಯುವ ಮೂಲಕ ಉರಿಯುತ್ತಿದ್ದ ಬೆಂಕಿಗೆ ತುಪ್ಪ ಸುರಿದಿದ್ದರು. ಅವರ ಎರಡನೇ ಪೋಸ್ಟಿಗೆ ಮತ್ತೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಬಂಗಾಳದಾದ್ಯಂತದ ಬುದ್ಧಿಜೀವಿಗಳೂ ಅವರನ್ನು ಟೀಕಿಸಿದ್ದರು.

2018: ಬೀಜಿಂಗ್: ಕಳೆದ ಕೆಲವು ವರ್ಷಗಳಿಂದ ಭಾರಿ ಪ್ರಮಾಣದ ಹೊಂಜಿನ  (ಸ್ಮಾಗ್‌) ಸಮಸ್ಯೆ ಎದುರಿಸುತ್ತಿರುವ ಚೀನಾ ಇಲ್ಲಿನ ಕ್ಸಿಯಾನ್ನಲ್ಲಿ ವಿಶ್ವದಲ್ಲೇ ಅತಿ ಎತ್ತರದ ಹಾಗೂ ದೊಡ್ಡ ಪ್ರಾಯೋಗಿಕ ಗಾಳಿ ಶುದ್ಧೀಕರಣ ಟವರ್ ನಿರ್ಮಿಸಿದೆ. ಟವರ್ 330 ಅಡಿ ಎತ್ತರವಿದೆ ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿತು. ಟವರ್ನಿಂದಾಗಿ ಕ್ಸಿಯಾನ್ಪ್ರದೇಶದಲ್ಲಿ ಗಾಳಿಯ ಗುಣಮಟ್ಟದ ಮೇಲೆ ಸಕಾರಾತ್ಮಕ ಪರಿಣಾಮವಾಗಿದೆ ಎನ್ನಲಾಯಿತು.  ಸದ್ಯ, ಚೀನಾದ ವಿಜ್ಞಾನ ಅಕಾಡೆಮಿಯ ಭೂ ವಾತಾವರಣ ವಿಭಾಗದ ಸಂಶೋಧಕರು ಟವರ್ ಪರೀಕ್ಷಾ ಕಾರ್ಯದಲ್ಲಿ ನಿರತರಾಗಿದ್ದಾರೆ. ಟವರ್ಅಳವಡಿಸಿದ ನಂತರ ಪ್ರದೇಶದ 10 ಚದರ ಕಿಲೋ ಮೀಟರ್ ಪ್ರದೇಶದಲ್ಲಿ ಗಾಳಿಯ ಗುಣಮಟ್ಟ ಉತ್ತಮವಾಗಿರುವುದು ಕಂಡುಬಂದಿದೆ ಎಂದು ಸಂಶೋಧಕರ ತಂಡದ ನೇತೃತ್ವ ವಹಿಸಿರುವ ಕಾವೊ ಜುಂಜಿ ತಿಳಿಸಿದರು.

2018: ಜೈಪುರ: ಹತ್ತು ವರ್ಷಗಳಷ್ಟು ಹಳೆಯ ಪ್ರಕರಣ ಒಂದರಲ್ಲಿ ನನ್ನ ಬೆನ್ನಿಗೆ ಬಿದ್ದಿದ್ದ ರಾಜಸ್ಥಾನ ಪೊಲೀಸರು ನನ್ನನ್ನು ಎನ್‌ಕೌಂಟರ್‌ನಲ್ಲಿ ಮುಗಿಸುವ ಯೋಜನೆ ಹೊಂದಿದ್ದರು ಎಂದು ವಿಶ್ವ ಹಿಂದು ಪರಿಷತ್ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಪ್ರವೀಣ್ ತೊಗಾಡಿಯಾ ಅವರು ಪತ್ರಿಕಾಗೋಷ್ಠಿಯಲ್ಲಿ ಕಣ್ಣೀರುಗರೆಯುತ್ತಾ ಆಪಾದಿಸಿದರು. ಎನ್ ಕೌಂಟರಿನಲ್ಲಿ ಮುಗಿಸುವ ಯೋಜನೆಯ ಸುಳಿವು ಪಡೆದ ನಾನು ಅವರಿಂದ ತಪ್ಪಿಸಿಕೊಳ್ಳುವ ಸಲುವಾಗಿ ನಾಪತ್ತೆಯಾಗಿದ್ದೆ ಎಂದು ತೊಗಡಿಯಾ ವಿವರಿಸಿದರು. ಪ್ರವೀಣ್ ತೊಗಾಡಿಯಾ ಅವರು 15 ಜನವರಿ 2018ರ ಸೋಮವಾರ ನಾಪತ್ತೆಯಾಗಿದ್ದು ಬಳಿಕ ಪ್ರಜ್ಞಾಹೀನ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ  ಪತ್ತೆಯಾಗಿದ್ದರು. ಈದಿನ ಅವರು ಪತ್ರಿಕಾಗೋಷ್ಠಿ ನಡೆಸಿ ತಾವು ನಾಪತ್ತೆಯಾಗಬೇಕಾಗಿ ಬಂದ ಅನಿವಾರ್ಯ ಸ್ಥಿತಿಯನ್ನು ವಿವರಿಸಿದರು. "ನನ್ನ ಧ್ವನಿಯನ್ನು ಶಾಶ್ವತವಾಗಿ ಅಡಗಿಸುವ ಹುನ್ನಾರದ ಭಾಗವಾಗಿ ನನ್ನನ್ನು ರಾಜಸ್ಥಾನ ಪೊಲೀಸರು ಎನ್‌ಕೌಂಟರ್ ಮಾಡಿ ಮುಗಿಸಲಿದ್ದಾರೆ ಎಂದು ಯಾರೋ ಒಬ್ಬರು ನನಗೆ ತಿಳಿಸಿದರು, ಆಗ ನಾನು ಕಚೇರಿ ಬಿಟ್ಟು ರಿಕ್ಷಾದಲ್ಲಿ ತೆರಳಿದೆ. ಮಧ್ಯಾಹ್ನ ೨.೩೦ಗೆ ಬರುವಂತೆ ನನ್ನ ಭದ್ರತಾ ಸಿಬ್ಬಂದಿಯಲ್ಲಿ ಹೇಳಿದ್ದೆ ಎಂದು ತೊಗಾಡಿಯಾ ಹೇಳಿದರು.  ನಾನು ಯಾವಾಗಲೂ ಹಿಂದುತ್ವ, ರಾಮ ಮಂದಿರ, ಗೋ ಹತ್ಯಾ ನಿಷೇಧ ಕಾನೂನು, ರೈತ ಕಲ್ಯಾಣ ಯೋಜನೆಗಳು ಮುಂತಾದವುಗಳ ಬಗ್ಗೆ ನಾನು ಮಾತನಾಡುತ್ತಿದ್ದೆ. ಎನ್‌ಕೌಂಟರ್ ಮೂಲಕ ನನ್ನ ಧ್ವನಿಯನ್ನು ಅಡಗಿಸುವ ಯತ್ನ ನಡೆದಿದೆ ಎಂದು ತೊಗಾಡಿಯಾ ಹೇಳಿದರು. ಹಿಂದುತ್ವ ಮತ್ತು ರಾಮ ಮಂದಿರದ ಬಗ್ಗೆ ನಾನು ಮಾತನಾಡುವುದನ್ನು ಬಯಸದ ಜನ ನನ್ನ ವಿರುದ್ಧ ಪಿತೂರಿ ಮಾಡಿದ್ದಾರೆ. ಯಾರು ನನ್ನ ದನಿ ಅಡಗಿಸಲು ಬಯಸುತ್ತಿದ್ದಾರೆ ಎಂಬುದನ್ನು ಸಮಯ ಬಂದಾಗ ಸಾಕ್ಷ್ಯ ಸಮೇತ ಬಹಿರಂಗಪಡಿಸುವೆ ಎಂದು ತೊಗಾಡಿಯಾ ನುಡಿದರು. ತೊಗಾಡಿಯಾ ಅವರ ಆರೋಗ್ಯ ಸುಧಾರಿಸಿದೆ ಎಂದು ವೈದ್ಯರು ಹೇಳಿದರು. ಆದರೆ ನನ್ನ ಆರೋಗ್ಯ ಪೂರ್ಣವಾಗಿ ಸುಧಾರಿಸುವವರೆಗೆ ನಾನು ಆಸ್ಪತ್ರೆಯಿಂದ ಹೋಗುವುದಿಲ್ಲ ಎಂದು  ತೊಗಾಡಿಯಾ ಹೇಳಿದರು. ತೊಗಾಡಿಯಾ ಅವರಿಗೆ ಝಡ್ ಪ್ಲಸ್ ಕೆಟಗರಿಯ ರಕ್ಷಣೆ ಇದೆ.  ದಶಕದಷ್ಟು ಹಳೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಸ್ಥಾನದ ಪೊಲೀಸರ ತಂಡ ನಗರದ ಪಾಲ್ಡಿ ಪ್ರದೇಶದಲ್ಲಿನ ವಿಶ್ವ ಹಿಂದು ಪ್ರಧಾನ ಕಾರ್ಯಾಲಯಕ್ಕೆ ತೊಗಾಡಿಯ ಅವರನ್ನು ಬಂಧಿಸಲು   ಬಂದಿತ್ತು. ಆ ವೇಳೆಗೆ ತೊಗಾಡಿಯಾ ವಿಎಚ್‌ಪಿ ಕಾರ್ಯಾಲಯದಿಂದ ಹೊರಬಿದ್ದು ನಾಪತ್ತೆಯಾಗಿದ್ದರು.  ನಾಪತ್ತೆಯಾಗಿದ್ದ ತೊಗಾಡಿಯಾ ರಾತ್ರಿ ವೇಳೆ ಅಹಮದಾಬಾದಿನ ಆಸ್ಪತ್ರೆಯೊಂದರಲ್ಲಿ ಪತ್ತೆಯಾಗಿದ್ದರು. ‘ರಕ್ತದಲ್ಲಿ ಕಡಿಮೆ ಸಕ್ಕರೆ ಅಂಶದ ಕಾರಣ ಅವರು ಪ್ರಜ್ಞಾಹೀನರಾಗಿದ್ದರು. ಶಾಹಿಬಾಗ್ ಉದ್ಯಾನದಲ್ಲಿ ಪ್ರಜ್ಞಾಹೀನರಾಗಿದ್ದ ಅವರನ್ನು ಚಂದ್ರಮಣಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ವಿಎಚ್ ಪಿ ತಿಳಿಸಿತ್ತು. ತೊಗಾಡಿಯಾ ಅವರು ಪತ್ರಿಕಾಗೋಷ್ಠಿಯಲ್ಲಿ ಕಣ್ಣೀರಿಟ್ಟ ವಿಡಿಯೊವನ್ನು ಎಎನ್‌ಐ ಸುದ್ದಿಸಂಸ್ಥೆ ಟ್ವೀಟ್ ಮಾಡಿತು.

2018: ನವದೆಹಲಿ: ಹಜ್ ಯಾತ್ರಿಕರಿಗೆ ಒದಗಿಸಲಾಗುತ್ತಿದ್ದ ಸಬ್ಸಿಡಿಯನ್ನು ಕೇಂದ್ರ ಸರ್ಕಾರ ಹಿಂತೆಗೆದುಕೊಂಡಿದೆ. ಅಲ್ಪಸಂಖ್ಯಾತರನ್ನು ತುಷ್ಟೀಕರಣ ಮಾಡದೆಯೇ ಸಬಲೀಕರಣ ಮಾಡುವ ತನ್ನ ಕಾರ್ಯಸೂಚಿಗೆ ಅನುಗುಣವಾಗಿ ಸರ್ಕಾರವು ಈ ನಿರ್ಧಾರ ಕೈಗೊಂಡಿದೆ ಎಂದು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಇಲ್ಲಿ ಹೇಳಿದರು.  ಸ್ವತಂತ್ರ ಭಾರತದಲ್ಲಿ ಇದೇ ಮೊತ್ತ ಮೊದಲ ಬಾರಿಗೆ ೧.೭೫ ಲಕ್ಷ ಯಾತ್ರಿಗಳು ಸಬ್ಸಿಡಿ ಇಲ್ಲದೆಯೇ ಹಜ್ ಯಾತ್ರೆಗೆ ಹೋಗುತ್ತಿದ್ದಾರೆ. ಈ ಸಂಖ್ಯೆ ಕಳೆದ ವರ್ಷದ ೧.೨೫ ಲಕ್ಷಕ್ಕಿಂತ ಹೆಚ್ಚಿನದಾಗಿದ್ದು, ಸಬ್ಸಿಡಿ ಇಲ್ಲದಿದ್ದರೂ ಸುಮಾರು ೫೦,೦೦೦ ಮಂದಿ ಹೆಚ್ಚಿನ ಯಾತ್ರಿಕರು ಈ ಹಜ್ ಯಾತ್ರೆ ನಡೆಸುತ್ತಿದ್ದಾರೆ ಎಂದು ನಖ್ವಿ ನುಡಿದರು.  ಹಜ್ ಸಬ್ಸಿಡಿ ಸ್ಥಗಿತದಿಂದ ಸುಮಾರು ೭೦೦ ಕೋಟಿ ರೂಪಾಯಿಗಳನ್ನು ಸರ್ಕಾರ ಉಳಿತಾಯ ಮಾಡುತ್ತದೆ. ಈ ನಿಧಿಯನ್ನು ಅಲ್ಪಸಂಖ್ಯಾತರ ಅದರಲ್ಲೂ ನಿರ್ದಿಷ್ಟವಾಗಿ ಬಾಲಕಿಯರ ಶಿಕ್ಷಣಕ್ಕಾಗಿ ಸರ್ಕಾರ ಬಳಸಿಕೊಳ್ಳಲಿದೆ ಎಂದು ಸಚಿವರು ಹೇಳಿದರು.  ೪೫ ವರ್ಷಕ್ಕಿಂತ ಮೇಲಿನ ಮುಸ್ಲಿಮ್ ಮಹಿಳೆಯರಿಗೆ ಪುರುಷ ರಕ್ಷಕರು ಇಲ್ಲದೆಯೇ ಕನಿಷ್ಠ ನಾಲ್ಕು ಮಂದಿಯ ಗುಂಪಿನಲ್ಲಿ ಹಜ್ ಯಾತ್ರೆಗೆ ತೆರಳಲು ಅವಕಾಶ ನೀಡಿದ ಒಂದು ದಿನದ ಬಳಿಕ ಹಜ್ ಸಬ್ಸಿಡಿ ರದ್ದು ಪಡಿಸುವ ನಿರ್ಧಾರವನ್ನು ಸರ್ಕಾರ ಕೈಗೊಂಡಿತು. ಭಾರತದಿಂದ ಹಡಗುಗಳ ಮೂಲಕ ಹಜ್ ಯಾತ್ರೆಗೆ ಸೌದಿ ಅರೇಬಿಯಾ ಸರ್ಕಾರ ತತ್ವಶಃ ಒಪ್ಪಿದೆ. ಇದಕ್ಕೆ ಸಂಬಂಧಿಸಿದ ವಿಧಿವಿಧಾನಗಳನ್ನು ಉಭಯ ರಾಷ್ಟ್ರಗಳ ಅಧಿಕಾರಿಗಳು ಒಟ್ಟಾಗಿ ಕುಳಿತು ಚರ್ಚಿಸಿ ಅಂತಿಮಗೊಳಿಸಲಿದ್ದಾರೆ ಎಂದು ಕೂಡಾ ನಖ್ವಿ ನುಡಿದರು. ಅಖಿಲ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿಯ ಕಮಲ್ ಫರೂಖಿ ಅವರು ಸರ್ಕಾರ ಕ್ರಮವನ್ನು ಸ್ವಾಗತಿಸಿದರು.  ಸರ್ಕಾರ ಹಜ್ ಸಬ್ಸಿಡಿಗೆ ನೀಡುವ ನೆರವಿನಿಂದ ಮುಸ್ಲಿಮರಿಗೆ ಅನುಕೂಲವಾಗುತ್ತಿದೆ ಎಂಬ ತಪ್ಪು ಕಲ್ಪನೆಯನ್ನು ಬಿತ್ತಲಾಗಿದೆ. ವಾಸ್ತವವಾಗಿ ಅತ್ಯಂತ ದೊಡ್ಡ ಪ್ರಮಾಣದಲ್ಲಿ ಲಾಭವಾಗುತ್ತಿದ್ದುದು ಏರ್ ಇಂಡಿಯಾ ವಿಮಾನಯಾನ ಕಂಪೆನಿಗೆ ಮಾತ್ರ ಎಂದು ಅವರು ನುಡಿದರು. ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಕಳೆದ ಮೇ ತಿಂಗಳಲ್ಲಿ ಹಜ್ ಸಬ್ಸಿಡಿ ರದ್ದು ಬಗ್ಗೆ ಪರಿಶೀಲಿಸಲು ಕೇಂದ್ರ ಸರ್ಕಾರವು ಕಳೆದ ವರ್ಷ ಮೇ ತಿಂಗಳಲ್ಲಿ ಆರು ಸದಸ್ಯರ ಸಮಿತಿಯೊಂದನ್ನು ರಚಿಸಿತ್ತು.  ಹಜ್ ಯಾತ್ರಿಗಳಿಗೆ ನೀಡಲಾಗುವ ಸಬ್ಸಿಡಿಯನ್ನು ಕ್ರಮ ಕ್ರಮವಾಗಿ ಕಡಿಮೆಗೊಳಿಸುತ್ತಾ ೨೦೨೨ರ ವೇಳೆಗೆ ಸಂಪೂರ್ಣವಾಗಿ ರದ್ದು ಪಡಿಸುವಂತೆ ಸುಪ್ರೀಂಕೋರ್ಟ್ ೨೦೧೨ರಲ್ಲಿ ಕೇಂದ್ರ ಸರ್ಕಾರಕ್ಕೆ ಆದೇಶ ನೀಡಿತ್ತು.  ಪ್ರತಿವರ್ಷ ಈ ಉದ್ದೇಶಕ್ಕಾಗಿ ಬಳಸುವ ಅಂದಾಜು ೬೫೦ ಕೋಟಿ ರೂಪಾಯಿಗಳನ್ನು ಸಮುದಾಯದ ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಬಳಸುವಂತೆ ಕೋರ್ಟ್ ಸರ್ಕಾರಕ್ಕೆ ಸೂಚಿಸಿತ್ತು.

2018: ನವದೆಹಲಿ: ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ದೀಪಕ್ ಮಿಶ್ರ ಅವರು ಸುಪ್ರೀಂಕೋರ್ಟಿನ ನ್ಯಾಯಾಂಗ ಆಡಳಿತಕ್ಕೆ ಸಂಬಂಧಿಸಿದ ವಿಚಾರಗಳ ಬಗ್ಗೆ ತಮ್ಮ ನಾಲ್ಕು ಮಂದಿ ಹಿರಿಯ ಸಹೋದ್ಯೋಗಿಗಳನ್ನು ಕರೆದು ಚರ್ಚಿಸಿದ್ದು, ಸುಪ್ರೀಂ ಕೋ ರ್ಟಿನ  ’ಬಂಡಾಯ ಬಿಕ್ಕಟ್ಟು ಇತ್ಯರ್ಥದ ಹಾದಿಯತ್ತ ಹೊರಳಿತು. ಹೆಪ್ಪುಗಟ್ಟಿದ ಮೌನವನ್ನು ಮುರಿದ ಮುಖ್ಯ ನ್ಯಾಯಮೂರ್ತಿ ಮಿಶ್ರ ಅವರು ಹಿರಿಯ ಸಹೋದ್ಯೋಗಿಗಳಾದ ನ್ಯಾಯಮೂರ್ತಿ ಜೆ. ಚೆಲಮೇಶ್ವರ್, ರಂಜನ್ ಗೊಗೋಯಿ, ಮದನ್ ಬಿ. ಲೋಕುರ್ ಮತ್ತು ಕುರಿಯನ್ ಜೋಸೆಫ್ ಅವರನ್ನು ಮಾತುಕತೆ ಸಲುವಾಗಿ ಈದಿನ ಬೆಳಗ್ಗೆ ಸುಪ್ರೀಂಕೋರ್ಟಿನಲ್ಲಿನ ತಮ್ಮ ಅಧಿಕೃತ ಕೊಠಡಿಗೆ ಕರೆದಿದ್ದರು. ಮಾತುಕತೆ ಜನವರಿ 17ರಂದು ಮುಂದುವರೆಯಲಿದೆ. ಜನವರಿ 12ರಂದು ನಾಲ್ವರು ನ್ಯಾಯಮೂರ್ತಿಗಳು ಅಭೂತಪೂರ್ವ ಪತ್ರಿಕಾಗೋಷ್ಠಿ ನಡೆಸಿದ ಪ್ರಸ್ತಾಪಿಸಿದ್ದ ವಿಷಯಗಳ ಬಗ್ಗೆ ಅವರ ಜೊತೆ ಸಿಜೆಐ ಮಾತನಾಡಿದ್ದು ಕಳೆದ ಮೂರು ದಿನಗಳಲ್ಲಿ ಇದೇ ಪ್ರಥಮ. ವಿಶೇಷ ನ್ಯಾಯಮೂರ್ತಿ ಲೋಯ ಸಾವಿಗೆ ಸಂಬಂಧಿಸಿದ ಪ್ರಕರಣ ಸೇರಿದಂತೆ ವಿವಿಧ ಪ್ರಕರಣಗಳ ನಿಯೋಜನೆಗೆ ಸಂಬಂಧಿಸಿದಂತೆ ತಾವು ಸಿಜೆಐ ಜೊತೆಗೆ ಮಾತನಾಡಿದ್ದು, ಅವರು ತಮ್ಮ ಮಾತುಗಳನ್ನು ಕೇಳಲಿಲ್ಲ ಎಂದು ನಾಲ್ವರು ನ್ಯಾಯಮೂರ್ತಿಗಳು ಪತ್ರಿಕಾಗೋಷ್ಠಿಯಲ್ಲಿ ಆಪಾದಿಸಿದ್ದರು. ‘ಇತ್ತೀಚಿನ ನ್ಯಾಯಾಂಗ ತೀರ್ಪುಗಳು ಮತ್ತು ಸುಪ್ರೀಂಕೋರ್ಟಿನ ನ್ಯಾಯಾಂಗ ಸ್ವಾತಂತ್ರ್ಯದ ಸವೆತ ಬಗ್ಗೆ ತಮ್ಮ ಆಕ್ರೋಶ ವ್ಯಕ್ತ ಪಡಿಸಿ ಸಿಜೆಐ ಅವರಿಗೆ ಬರೆದಿದ್ದ ಪತ್ರವನ್ನು ಪತ್ರಿಕಾಗೋಷ್ಠಿಯಲ್ಲಿ ವಿತರಿಸಿದ ನ್ಯಾಯಮೂರ್ತಿಗಳು ತಪ್ಪುಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳುವಂತೆ ಸಿಜೆಐ ಅವ ಮನವೊಲಿಸಲು ನಡೆಸಿದ ತಮ್ಮ ಯತ್ನಗಳು ವಿಫಲವಾದ್ದರಿಂದ ತಾವು ಜನತೆಯ ಮುಂದೆ ಬರಬೇಕಾಯಿತು ಎಂದು ಹೇಳಿದ್ದರು. ಯಾವ ಪ್ರಕರಣವನ್ನು ಯಾವ ಪೀಠಕ್ಕೆ ವಹಿಸಬೇಕು ಎಂಬುದಾಗಿ ನಿರ್ಧರಿಸಲು ’ಮಾಸ್ಟರ್ ಆಫ್ ರೋಸ್ಟರ್ ಆಗಿ ಮುಖ್ಯ ನ್ಯಾಯಮೂರ್ತಿ ಅವರಿಗೆ ನೀಡಲಾಗಿರುವ ವಿಶೇಷ ಅಧಿಕಾರವು ಅವರು ’ಸೂಪರ್ ಅಧಿಕಾರಿಯನ್ನಾಗಿ ಮಾಡುವುದಿಲ್ಲ. ಮುಖ್ಯ ನ್ಯಾಯಮೂರ್ತಿ ಸಮಾನರಲ್ಲಿ ಒಬ್ಬರು ಅಷ್ಟೆ, ಹೆಚ್ಚೂ ಅಲ್ಲ ಕಡಿಮೆಯೂ ಅಲ್ಲ ಎಂದು ಪತ್ರ ಹೇಳಿತ್ತು.  ರೋಸ್ಟರ್ ರೂಪಿಸಲು ಮತ್ತು ನ್ಯಾಯಾಲಯದ ಪ್ರಕರಣಗಳನ್ನು ವಿವಿಧ ಸದಸ್ಯರು / ಪೀಠಗಳಿಗೆ ಹಂಚುವ ವಿಶೇಷ ಹಕ್ಕು ಮುಖ್ಯ ನ್ಯಾಯಮೂರ್ತಿಯರದ್ದು ಎಂಬುದಾಗಿ ಮಾನ್ಯ ಮಾಡಿರುವ ಒಡಂಬಡಿಕೆಯು ನ್ಯಾಯಾಲಯದ ಕಲಾಪಗಳನ್ನು ಶಿಸ್ತುಬದ್ಧ ಹಾಗೂ ದಕ್ಷ ರೀತಿಯಲ್ಲಿ ನಿರ್ವಹಿಸಲು ಮಾಡಿರುವ ವ್ಯವಸ್ಥೆಯಾಗಿದೆ, ಆದರೆ ಇದು ಮುಖ್ಯ ನ್ಯಾಯಮೂರ್ತಿಯವರಿಗೆ ತಮ್ಮ ಸಹೋದ್ಯೋಗಿಗಳ ಮೇಲೆ ಶಾಸನಬದ್ಧವಾಗಿ ಅಥವಾ ವಾಸ್ತವಿಕವಾಗಿ ಇರುವ ಯಾವುದೇ ಉನ್ನತ ಅಧಿಕಾರದ ಮಾನ್ಯತೆ ಅಲ್ಲ ಎಂದು ಪತ್ರ ವಿವರಿಸಿತ್ತು. ಮುಖ್ಯ ನ್ಯಾಯಮೂರ್ತಿಯವರು ಸಮಾನರಲ್ಲಿ ಮೊದಲಿಗ, ಆದರೆ ಹೆಚ್ಚೂ ಅಲ್ಲ, ಕಡಿಮೆಯೂ ಅಲ್ಲ ಎಂಬುದು ನಿರ್ಧಾರವಾಗಿರುವ ವಿಷಯ ಎಂದು ಪತ್ರ ಹೇಳಿತ್ತು.  ಸುಪ್ರೀಂಕೋರ್ಟ್ ನ್ಯಾಯಾಧೀಶರ ಭ್ರಷ್ಟಾಚಾರ ಮತ್ತು ಸುಪ್ರೀಂಕೋರ್ಟ್ ನ್ಯಾಯಮೂರ್ತಿವರಿಗೆ ಲಂಚ ನೀಡಲು ಯತ್ನಿಸಿದ ಪ್ರಕರಣವೊಂದನ್ನು ಆಲಿಸುತ್ತಿದ್ದಾಗ ಮಾಸ್ಟರ್ ಆಫ್ ರೋಸ್ಟರ್ ವಿಷಯ ಬಂದಿತ್ತು. ಸಿಜೆಐ ಅವರು ಕಾರಣವಿಲ್ಲದೆಯೇ ಆಯ್ದ ಪೀಠಗಳಿಗೆ ಆಯ್ದೆ ಪ್ರಕರಣಗಳನ್ನು ಹಂಚುತ್ತಾರೆ ಎಂದು ಪತ್ರ ಹೇಳಿತ್ತು. ಪತ್ರವು ನ್ಯಾಯಾಂಗ ಅಶಿಸ್ತಿನ ಪ್ರಕರಣವಾಗಿ ಎಂಒಪಿಗೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ನ್ಯಾಯಮೂರ್ತಿಗಳಾದ ಎ.ಕೆ. ಗೋಯೆಲ್ ಮತ್ತು ಯು.ಯು. ಲಲಿತ್ ಅವರ ತೀರ್ಪು ಹಸ್ತಕ್ಷೇಪ ಮಾಡಿದ್ದನ್ನು ಉಲ್ಲೇಖಿಸಿತ್ತು. ‘ನಾವು ನಾಲ್ವರು ಸಿಜೆಐ ದೀಪಕ್ ಮಿಶ್ರ ಅವರ ಬಳಿ ಸಂಸ್ಥೆಯ ಹಿತಾಸಕ್ತಿ ಸಲುವಾಗಿ ತಮ್ಮ ಕಾರ್‍ಯವಿಧಾನವನ್ನು ಸರಿಪಡಿಸಿಕೊಳ್ಳುವಂತೆ ಹೇಳುತ್ತಾ ಬಂದಿದ್ದೇವೆ. ಕಳೆದ ಕೆಲವು ತಿಂಗಳುಗಳಿಂದ ನಾವು ಈ ಯತ್ನವನ್ನು ಮಾಡುತ್ತಿದ್ದೇವೆ. ಆದರೆ ಪ್ರಯೋಜನವಾಗಿಲ್ಲ. ಇಲ್ಲಿಂದಾಚೆಗೆ ೨೦ ವರ್ಷಗಳ ಬಳಿಕ ರಾಷ್ಟ್ರವು ನಾವು ನಮ್ಮ ಆತ್ಮಗಳನ್ನು ಮಾರಿಕೊಂಡಿದ್ದೆವು ಎಂದು ಹೇಳಬಾರದು. ಸುಪ್ರೀಂಕೋರ್ಟಿನ ಆಡಳಿತದಲ್ಲಿ ಕೆಲವು ವಿಚಾರಗಳು ಸರಿ ಇಲ್ಲ ಎಂದು ಸಿಜೆಐ ಅವರಿಗೆ ಸಾಮೂಹಿಕವಾಗಿ ಹೇಳಲು ನಾವು ಯತ್ನಿಸಿದೆವು. ದುರದೃಷ್ಟಕರವಾಗಿ ನಮ್ಮ ಪ್ರಯತ್ನಗಳು ವಿಫಲಗೊಂಡಿವೆ. ಆದ್ದರಿಂದ ನಾವು ಇದನ್ನು ರಾಷ್ಟ್ರದ ಮುಂದೆ ಹೇಳುತ್ತಿದ್ದೇವೆ ನಾಲ್ವರು ನ್ಯಾಯಮೂರ್ತಿಗಳ ಹೇಳಿಕೆ ತಿಳಿಸಿತ್ತು.

2018: ನವದೆಹಲಿ: ಹದಿಹರೆಯದ (೧೪ರಿಂದ ೧೮ ವರ್ಷ ವಯೋಮಾನದ) ಶಾಲಾ ವಿದ್ಯಾರ್ಥಿಗಳ ಪೈಕಿ ಕಾಲುಭಾಗದಷ್ಟು ಮಂದಿಗೆ ಮಾತೃಭಾಷೆಯಲ್ಲಿ ಓದಲು ಬರೆಯಲು ಬರುವುದಿಲ್ಲ, ಶೇಕಡಾ ೭೬ರಷ್ಟು ಮಂದಿಗೆ ದುಡ್ಡು ಲೆಕ್ಕ ಹಾಕಲೂ ಬರುವುದಿಲ್ಲ, ಶೇಕಡಾ ೩೬ರಷ್ಟು ಮಂದಿಗೆ ರಾಷ್ಟ್ರದ ರಾಷ್ಟ್ರದ ರಾಜಧಾನಿ ಯಾವುದು ಎಂದೇ ಗೊತ್ತಿಲ್ಲ!  ೨೦೧೭ರ ಶಿಕ್ಷಣದ ವಾರ್ಷಿಕ ವಸ್ತುಸ್ಥಿತಿ ವರದಿ (ಎಎಸ್ ಇ ಆರ್ - ಅಸರ್) ಈ ವಿಚಾರವನ್ನು ಬಹಿರಂಗ ಪಡಿಸಿತು.  ‘ಅಸರ್ ೨೦೧೭: ಬಿಯಾಂಡ್ ಬೇಸಿಕ್ಸ್ ಶೀರ್ಷಿಕೆಯ ವರದಿಯನ್ನು ಈದಿನ ಬಿಡುಗಡೆ ಮಾಡಲಾಗಿದ್ದು, ೧೪ರಿಂದ ೧೮ರ ನಡುವಣ ವಯೋಮಾನದ, ಪ್ರಾಥಮಿಕ ಶಿಕ್ಷಣ ಮುಗಿಸಿ ಹೊರಬಂದಿರುವ ವಿದ್ಯಾರ್ಥಿಗಳ ಶಿಕ್ಷಣದ ಗುಣಮಟ್ಟವನ್ನು ಇದು ಬಿಂಬಿಸಿತು. ‘ನಮ್ಮ ಯುವಕರನ್ನು ಸ್ವಂತ ಉಜ್ವಲ ಭವಿಷ್ಯ ಮತ್ತು ರಾಷ್ಟ್ರದ ಉಜ್ವಲ ಭವಿಷ್ಯದ ಸಲುವಾಗಿ ನಾವು ಎಷ್ಟು ಚೆನ್ನಾಗಿ ಸಿದ್ಧ ಪಡಿಸುತ್ತಿದ್ದೇವೆ ಎಂಬ ಪ್ರಮುಖ ಪ್ರಶ್ನೆಗೆ ಉತ್ತರ ಪಡೆಯುವ ಸಲುವಾಗಿ ಈ ’ಅಸರ್ ಸಮೀಕ್ಷೆಯನ್ನು ನಡೆಸಲಾಗಿತ್ತು.  ಅಸರ್ ೨೦೧೭ ಸಮೀಕ್ಷೆಯನ್ನು ೨೪ ರಾಜ್ಯಗಳ ೨೮ ಜಿಲ್ಲೆಗಳಲ್ಲಿ ನಡೆಸಲಾಗಿತ್ತು. ೩೫ ಭಾಗಿದಾರ ಸಂಸ್ಥೆಗಳ ೨,೦೦೦ ಸ್ವಯಂ ಸೇವಕರು ೧೬೪೧ ಗ್ರಾಮಗಳ ಸುಮಾರು ೨೫,೦೦೦ ಮನೆಗಳಿಗೆ ಭೇಟಿ ನೀಡಿ ೧೪ರಿಂದ ೧೮ರ ವಯೋಮಾನದ ಸುಮಾರು ೩೦,೦೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳ ಸಮೀಕ್ಷೆ ಮಾಡಿದ್ದರು. ಸಮೀಕ್ಷೆಯ ಕೆಲವು ಪ್ರಮುಖ ಅಂಶಗಳು ಹೀಗಿವೆ: ಮೂಲಭೂತ ಕೌಶಲ:  ಈ ವಯೋಮಾನದ ಶೇಕಡಾ ೨೫ರಷ್ಟು ಮಂದಿಗೆ ತಮ್ಮ ಮಾತೃಭಾಷೆಯಲ್ಲಿ ಒದಗಿಸಲಾದ ಮೂಲಪಾಠವನ್ನು ಸಮರ್ಥವಾಗಿ ಓದಲು ಸಾಧ್ಯವಾಗಲಿಲ್ಲ. ಶೇಕಡಾ ೫೦ರಷ್ಟು ಮಂದಿಗೆ ಭಾಗಾಕಾರ ಬರುವುದಿಲ್ಲ. ಶೇಕಡಾ ೪೩ರಷ್ಟುಮಂದಿ ಭಾಗಾಕಾರದ ಸಮಸ್ಯೆಗಳನ್ನು ಸಮರ್ಪಕವಾಗಿ ಬಿಡಿಸಿದರು. ಏಸರ್ ಸಮೀಕ್ಷೆಯಲ್ಲಿ ಭಾಗಾಕಾರವನ್ನು ಮೂಲಭೂತ ಗಣಿತದ ಅರಿವಿನ ಪರೀಕ್ಷೆಗಾಗಿ ಮಾಡಲಾಗುತ್ತದೆ.  ೧೪ರ ಹರೆಯದ ಶೇಕಡಾ ೫೩ರಷ್ಟು ಮಂದಿ ಇಂಗ್ಲಿಷ್  ಭಾಷೆಯ ವಾಕ್ಯಗಳನ್ನು ಓದಿದರು. ೧೮ರ ಹರೆಯದ ಯುವಕರ ಪೈಕಿ ಶೇಕಡಾ ೬೦ರಷ್ಟು ಮಂದಿಗೆ ಇಂಗ್ಲಿಷ್ ಭಾಷೆಯ ವಾಕ್ಯಗಳನ್ನು ಓದಲು ಸಾಧ್ಯವಾಯಿತು. ಓದಲು ಸಾಧ್ಯವಾದ ವಿದ್ಯಾರ್ಥಿಗಳಲ್ಲಿ ಶೇಕಡಾ ೭೯ ಮಂದಿ ವಾಕ್ಯದ ಅರ್ಥವನ್ನು ವಿವರಿಸಲು ಸಮರ್ಥರಾಗಿದ್ದರು.  ಈ ವಯೋಮಾನದ ಯುವಕರ ಪೈಕಿ ೮ ವರ್ಷಗಳ ಶಿಕ್ಷಣ ಪೂರೈಸಿದ ವಿದ್ಯಾರ್ಥಿಗಳಲ್ಲಿ ಬಹುತೇಕ ಮಂದಿಗೆ ಓದುವ ಮತ್ತು ಮೂಲಭೂತ ಗಣಿತದ (ಸಂಕಲನ, ವ್ಯವಕಲನ, ಗುಣಾಕಾರ, ಭಾಗಾಕಾರ) ಕೌಶಲಗಳು ಬರುತ್ತಿರಲಿಲ್ಲ!  ವಯಸ್ಸಿನೊಂದಿಗೆ ಪ್ರಾದೇಶಿಕ ಭಾಷೆ ಮತ್ತು ಇಂಗ್ಲಿಷ್ ನಲ್ಲಿ ಓದುವ ಶಕ್ತಿ ಸ್ವಲ್ಪ ಸುಧಾರಿಸುತ್ತದೆಯಾದರೂ, ಇದು ಗಣಿತಕ್ಕೆ ಅನ್ವಯಿಸುವುದಿಲ್ಲ. ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾಶಾಸ್ತ್ರ ಕೌಶಲದ ಅನ್ವಯಿಸುವಿಕೆ:        ಹಣ ಲೆಕ್ಕ ಹಾಕುವ, ತೂಕ ತಿಳಿಯವ ಮತ್ತು ಸಮಯ ಲೆಕ್ಕ ಹಾಕುವ ಚಟುವಟಿಕೆಗಳನ್ನು ಏಸರ್ ನಡೆಸಿತು. ಶೇಕಡಾ ೭೬ರಷ್ಟು ಯುವಕರಿಗೆ ಸಮರ್ಪಕವಾಗಿ ದುಡ್ಡು ಲೆಕ್ಕ ಹಾಕಲು ಬರಲಿಲ್ಲ. ಶೇಕಡಾ ೯೦ ಮಂದಿಗೆ ಅಂಕಗಣಿತದ ಕೌಶಲ ಇತ್ತು.  ಶೇಕಡಾ ೫೬ರಷ್ಟು ಮಂದಿಗೆ ಕಿಲೋಗ್ರಾಂಗಳಲ್ಲಿ ಸಮರ್ಪಕವಾಗಿ ತೂಕ ಲೆಕ್ಕಹಾಕಲು ಸಾಧ್ಯವಾಯಿತು. ಶೇಕಡಾ ೭೬ರಷ್ಟು ಮಂದಿಗೆ ಮೂಲ ಗಣಿತ ಕೌಶಲ ಇತ್ತು. ಸಮಯ ಎಷ್ಟಾಯಿತು ಎಂದು ಹೇಳುವುದು ದೈನಂದಿನ ಚಟುವಟಿಕೆಗಳಲ್ಲಿ ಅತ್ಯಂತ ಸಾಮಾನ್ಯ ಚಟುವಟಿಕೆ. ಸಮಯ ಹೇಳುವ ಅತ್ಯಂತ ಸುಲಭದ ಪರೀಕ್ಷೆಯಲ್ಲಿ (ಗಂಟೆ ಹೇಳುವುದು) ಶೇಕಡಾ ೮೩ ಮಂದಿ ಸಮರ್ಪಕ ಉತ್ತರ ನೀಡಿದರು. ಆದರೆ ಸ್ವಲ್ಪ ಕಷ್ಟದ ಚಟುವಟಿಕೆಯಲ್ಲಿ (ಗಂಟೆ ಮತ್ತು ನಿಮಿಷ ಹೇಳುವುದು) ಶೇಕಡಾ ೬೦ರಷ್ಟು ಮಂದಿ ಮಾತ್ರ ಸರಿ ಉತ್ತರ ನೀಡಿದರು.
2018: ಬೆಂಗಳೂರು: ಅಪರಿಚಿತವಾದ ಸಿಎಚ್ ಎಸ್ ಹೆಸರಿನ ಸಂಸ್ಥೆಯೊಂದು ಕರ್ನಾಟಕ ಚುನಾವಣಾ ಪೂರ್ವ  ಸಮೀಕ್ಷೆಯನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಿದ್ದು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅಸ್ಥಿರ ಅಸೆಂಬ್ಲಿ ರೂಪುಗೊಳ್ಳಲಿದೆ ಎಂದು ಭವಿಷ್ಯ ನುಡಿಯುವ ಮೂಲಕ ಕಾಂಗ್ರೆಸ್ ಮತ್ತು ಬಿಜೆಪಿಗೆ ತಲೆನೋವು ತಂದಿತು. ಆದರೆ ಈ ಸಮೀಕ್ಷೆಯು ಜನತಾದಳ (ಜಾತ್ಯತೀತ) ಧುರೀಣರನ್ನು ಸಂತುಷ್ಟರನ್ನಾಗಿ ಮಾಡಿತು.  ಕಾಂಗ್ರೆಸ್ ಮತ್ತು ಬಿಜೆಪಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಬೇಕಿದ್ದರೆ ಮುಂದಿನ ಮೂರು-ನಾಲ್ಕು ತಿಂಗಳುಗಳಲ್ಲಿ ತಮ್ಮ ಈಗಿನ ವ್ಯೂಹಗಳನ್ನು ಬದಿಗಿಟ್ಟು ಹೊಸ ತಂತ್ರಗಳನ್ನು ಹೆಣೆಯಬೇಕಾಗಬಹುದು ಎಂದು ಸಮೀಕ್ಷೆ ಹೇಳಿತು.  ಸಮೀಕ್ಷೆಯ ಪ್ರಕಾರ ೨೨೪ ಸದಸ್ಯ ಬಲದ ವಿಧಾನಸಭೆಯಲ್ಲಿ  ಕಾಂಗ್ರೆಸ್ ೭೭ರಿಂದ ೮೧ ಸ್ಥಾನ, ಬಿಜೆಪಿ ೭೩ರಿಂದ ೭೬ ಸ್ಥಾನ ಮತ್ತು ಜನತಾದಳ ೬೪ರಿಂದ ೬೬ ಸ್ಥಾನ ಹಾಗೂ ಇತರರು ೪ರಿಂದ ೫ ಸ್ಥಾನ ಪಡೆಯಬಹುದು ಎಂದು ಹೇಳಲಾಯಿತು.  ಈ ಸಮೀಕ್ಷೆಯನ್ನು ವಾಟ್ಸಪ್ ಗ್ರೂಪ್ ಗಳಲ್ಲಿ ಜನವರಿ 14ರ ಭಾನುವಾರ ಹರಿಯಬಿಡಲಾಗಿತ್ತು.  ಸಂಸ್ಥೆ ಪ್ರತಿಪಾದಿಸಿರುವ ಪ್ರಕಾರ ಅದು ಪ್ರತಿ ಕ್ಷೇತ್ರದಲ್ಲಿ ೨೦೦೦ ಜನರನ್ನು ಸಮೀಕ್ಷೆಗೆ ಒಳಪಡಿಸಿತ್ತು. ಕೆಳ ಜಾತಿಯ ಮಂದಿ ಈಗಲೂ ಕಾಂಗ್ರೆಸ್ ಜೊತೆಗೇ ಇದ್ದಾರೆ ಆದರೆ ಮೇಲ್ಜಾತಿಯವರು ಪಕ್ಷದಿಂದ ದೂರವಾಗಿದ್ದಾರೆ ಎಂದು ಸಮೀಕ್ಷೆ ಹೇಳಿತ್ತು.  ಕಳೆದ ಐದು ವರ್ಷಗಳಲ್ಲಿ ಆಡಳಿತಾರೂಢ ಪಕ್ಷದ ವರ್ಚಸ್ಸು ಕುಗ್ಗಿದೆ ಎಂದು ಹೇಳಿರುವ ಸಮೀಕ್ಷೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಹಿಂದ ನೀತಿ ಅಪೇಕ್ಷಿತ ಫಲಿತಾಂಶಗಳನ್ನು ತಂದು ಕೊಟ್ಟಿಲ್ಲ ಎಂದು ವಿಶ್ಲೇಷಿಸಿತ್ತು.  ಬಿಜೆಪಿಯ ’ಹಿಂದುತ್ವವನ್ನು ಬಹುತೇಕ ಮಂದಿ ಅಂಗೀಕರಿಸಿಲ್ಲ. ಹೀಗಾಗಿ ಕೇಸರಿ ಪಕ್ಷ ಚುನಾವಣೆಯಲ್ಲಿ ಎರಡನೇ ಸ್ಥಾನದಲ್ಲಿ ಬಂದು ನಿಲ್ಲಬಹುದು ಎಂದು ಸಮೀಕ್ಷೆ ಹೇಳಿತ್ತು. ಸಮೀಕ್ಷೆಯಲ್ಲಿ ಅತ್ಯಂತ ಕುತೂಹಲಕರವಾದ ಅಂಶ ಏನೆಂದರೆ ಚುನಾವಣೆಗೆ ಮುನ್ನವೇ ದಲಿತ ಮುಖ್ಯಮಂತ್ರಿಯ ಘೋಷಣೆ ಮಾಡಿದರೆ ಕಾಂಗ್ರೆಸ್ ಕಳೆದುಕೊಂಡ ಕೆಲವು ನೆಲೆಗಳನ್ನು ಪಡೆದುಕೊಳ್ಳಬಹುದು ಎಂಬ ವಿಶ್ಲೇಷಣೆ.  ಕಾಂಗ್ರೆಸ್ ಮತ್ತು ಬಿಜೆಪಿಯ ಹಲವರು ಈ ಸಮೀಕ್ಷೆ ಬಿಡುಗಡೆಯ ಹಿಂದೆ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಾ. ಜಿ. ಪರಮೇಶ್ವರ ಅವರ ಕೈವಾಡ ಇರಬಹುದು ಎಂದು ಶಂಕಿಸಿದರು. ದಲಿತರಾಗಿರುವ ಪರಮೇಶ್ವರ ಅವರು ೨೦೧೩ರ ವಿಧಾನಸಭಾ ಚುನಾವಣೆಯಲ್ಲಿ ಭಾರಿ ಅಂತರದೊಂದಿಗೆ ಪರಾಭವಗೊಂಡಿದ್ದರು. ಅವರ ಸೋಲಿಗೆ ಸಿದ್ದರಾಮಯ್ಯ ಕಾರಣ ಎಂದು ಪರಮೇಶ್ವರ ಬೆಂಬಲಿಗರು ದೂರಿದ್ದರು. ಬಳಿಕ ವಿಧಾನ ಪರಿಷತ್ ಸದಸ್ಯರಾದ ಪರಮೇಶ್ವರ ಅವರು ಕೆಲ ಕಾಲ ಗೃಹ ಸಚಿವರಾಗಿದ್ದರು.  ಪಕ್ಷದ ಒಳಗಿನವರ ಪ್ರಕಾರ ಅವರು ಈಗಲೂ ಮುಖ್ಯಮಂತ್ರಿ ಹುದ್ದೆಯ ಪೈಪೋಟಿಯಲ್ಲಿದ್ದು, ಚುನಾವಣೆ ಹತ್ತಿರ ಬರುತ್ತಿದ್ದಂತೆ ’ದಲಿತ ಕಾರ್ಡ್ ಬಳಸಲು ಬಯಸಿದ್ದಾರೆ ಎನ್ನಲಾಯಿತು. ಸಮೀಕ್ಷೆಯ ಹಿಂದೆ ತಮ್ಮ ಕೈವಾಡ ಇದೆ ಎಂಬುದನ್ನು ಪರಮೇಶ್ವರ ಅವರು ಬಲವಾಗಿ ನಿರಾಕರಿಸಿದರು.. ಇದರ ಹಿಂದೆ ಕಾಂಗ್ರೆಸ್ ವಿರೋಧಿಗಳ ಕೈವಾಡ ಇದೆ ಎಂದಿರುವ ಅವರು ಸಿಎಚ್ ಎಸ್ ಮತ್ತು ಅಪರಿಚಿತ ವ್ಯಕ್ತಿಗಳ ವಿರುದ್ಧ ಸೈಬರ್ ಸೆಲ್ ಪೊಲೀಸರಿಗೆ ದೂರು ನೀಡಿರುವುದಾಗಿ ಹೇಳಿದರು.  ’ಇದು ಕಿಡಿಗೇಡಿಗಳ ಕೆಲಸ. ಕಾಂಗ್ರೆಸ್ ಸುಲಭವಾಗಿ ಚುನಾವಣೆ ಗೆಲ್ಲಲಿದೆ. ಇಂತಹ ಸಮೀಕ್ಷೆಗಳ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ ಎಂದು ನಾನು ಪಕ್ಷ ಸದಸ್ಯರಿಗೆ ಸೂಚಿಸಿದ್ದೇನೆ ಎಂದು ಪರಮೇಶ್ವರ ಹೇಳಿದರು. ಇತರ ಸಮೀಕ್ಷೆಗಳು ಜೆಡಿಎಸ್ ಗೆ ೩೦ಕ್ಕಿಂತ ಕಡಿಮೆ ಸ್ಥಾನಗಳು ಬರಬಹುದು ಎಂದು ಹೇಳುತ್ತಿರುವಾಗ ಈ ಸಮೀಕ್ಷೆ ಜೆಡಿಎಸ್ ಗೆ ೭೦ರ ಆಸುಪಾಸಿನ ಸ್ಥಾನಗಳು ಬರಬಹುದು ಎಂದು ಹೇಳಿದೆ. ಇದರ ಹಿಂದೆ ದೇವೇಗೌಡ ಮತ್ತು ಅವರ ಬೆಂಬಲಿಗರ ಕೈವಾಡ ಇರಬಹುದು ಎಂದೂ ಕೆಲವು ಸುದ್ದಿ ಮೂಲಗಳು ಅಭಿಪ್ರಾಯ ಪಟ್ಟವು.  ಬಿಜೆಪಿ ಕೂಡಾ ಸಮೀಕ್ಷೆಯನ್ನು ತಳ್ಳಿಹಾಕಿತು.  ಬಿಜೆಪಿಯು ಗೆದ್ದು ಸ್ವಂತ ಬಲದಿಂದ ಸರ್ಕಾರ ರಚಿಸಲಿದೆ ಎಂದು ಅದರ ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್. ಯಡಿಯೂರಪ್ಪ ಪ್ರತಿಪಾದಿಸಿದರು.

2018: ಚಂಡೀಗಢ: ಕಳೆದ ಆಗಸ್ಟ್‌ನಲ್ಲಿ ಡೇರಾ ಸಚ್ಚಾ ಸೌಧ ಮುಖ್ಯಸ್ಥ ಗುರ್‌ಮೀತ್ ರಾಮ್ ರಹೀಮ್‌ಗೆ ಜೈಲು ಶಿಕ್ಷೆ ವಿಧಿಸಿದ ಸಂದರ್ಭದಲ್ಲಿ ಭುಗಿಲೆದ್ದಿದ್ದ ಹಿಂಸಾಚಾರದಲ್ಲಿ ೧೨೬ ಕೋಟಿ ರೂಪಾಯಿ ಆಸ್ತಿಪಾಸ್ತಿ ನಷ್ಟ ಉಂಟಾಗಿದೆ ಎಂದು ಐದು ತಿಂಗಳ ಬಳಿಕ ಸಲ್ಲಿಸಲಾಗಿರುವ ಪರಿಷ್ಕೃತ ವರದಿ ತಿಳಿಸಿತು. ಅಂಬಾಲಾದಲ್ಲಿ ಅತಿ ಹೆಚ್ಚು ೪೭ ಕೋಟಿ ರೂಪಾಯಿ ನಷ್ಟವಾಗಿದೆ. ನಂತರದ ಸ್ಥಾನ ಫತೇಹ್‌ಬಾದ್ ಜಿಲ್ಲೆಯದ್ದು. ಇಲ್ಲಿ ಸುಮಾರು ೧೫ ಕೋಟಿ ರೂಪಾಯಿ ನಷ್ಟ ಸಂಭವಿಸಿದೆ. ಪಂಚಕುಲಾದಲ್ಲಿ ಅತಿಹೆಚ್ಚು ಹಿಂಸಾಚಾರ ಸಂಭವಿಸಿದ್ದು, ೩೬ ಮಂದಿ ಸಾವನ್ನಪ್ಪಿದ್ದರು. ಇಲ್ಲಿ ೧೧ ಕೋಟಿ ರೂಪಾಯಿ ನಷ್ಟವಾಗಿದೆ ಎಂದು ವರದಿ ತಿಳಿಸಿತು. ಹಿಸ್ಸಾರ್, ಝಾಜರ್, ರೇವಾರಿ, ನಾರ್ನುಲ್, ಪಲ್ವಾಲ್, ಜಿಂದ್, ನುವಾ ಹಾಗೂ ಯಮುನಾನಗರದಲ್ಲಿಯೂ ಡೇರಾ ಸಚ್ಚಾ ಅನುಯಾಯಿಗಳು ನಡೆಸಿದ ಹಿಂಸಾಚಾರದಲ್ಲಿ ಕೋಟ್ಯಂತರ ರೂಪಾಯಿ ಆಸ್ತಿಪಾಸ್ತಿ ನಷ್ಟವಾಗಿದೆ ಎಂದು ವರದಿ ಹೇಳಿತು. ಕಳೆದ ಆಗಸ್ಟ್ ೨೫ರಂದು ಪಂಚುಕಲಾ ನ್ಯಾಯಾಲಯ ರಾಮ್ ರಹೀಮ್‌ಗೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ೨೦ ವರ್ಷಗಳ ಶಿಕ್ಷೆ ವಿಧಿಸಿತ್ತು. ಶಿಕ್ಷೆ ಘೋಷಣೆಯಾಗುತ್ತಿದ್ದಂತೆಯೇ ನಾಲ್ಕೈದು ಜಿಲ್ಲೆಗಳಲ್ಲಿ ಡೇರಾ ಸಚ್ಚಾ ಅನುಯಾಯಿಗಳು ನಡೆಸಿದ ಹಿಂಸಾತ್ಮಕ ಪ್ರತಿಭಟನೆಯಲ್ಲಿ ಹಲವಾರು ಮಂದಿ ಸಾವನ್ನಪ್ಪಿದ್ದರು. ಹಿಂಸಾಚಾರದಲ್ಲಿ ಕೋಟ್ಯಂತರ ರೂಪಾಯಿಗಳ ಆಸ್ತಿಪಾಸ್ತಿ ನಷ್ಟ ಉಂಟಾಗಿತ್ತು. ಐದು ತಿಂಗಳ ಬಳಿಕ ಇದೀಗ ನಷ್ಟದ ವರದಿಯನ್ನು ಪರಿಷ್ಕರಿಸಿ ಸಲ್ಲಿಸಲಾಗಿದೆ ಎಂದು ಸುದ್ದಿ ಮೂಲಗಳು ತಿಳಿಸಿದವು.
2017: ನವದೆಹಲಿ: ಚುನಾವಣಾ ಆಯೋಗವು ಸಮಾಜವಾದಿ ಪಕ್ಷದ ವಿವಾದಿತಸೈಕಲ್ಚಿಹ್ನೆಯನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ ಯಾದವ್ ಅವರಿಗೆ ನೀಡಿತು. ಚುನಾವಣಾ ಆಯೋಗದ ನಿರ್ಧಾರವು ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರಿಗೆ ಭಾರಿ ಹೊಡೆತವನ್ನು ನೀಡಿತು. ನಸೀಮ್ ಜೈದಿ ನೇತೃತ್ವದ ತ್ರಿಸದಸ್ಯ ಚುನಾವಣಾ ಆಯೋಗವು ಜನವರಿ 13ರಂದು ಸಮಾಜವಾದಿ ಪಕ್ಷದ ಉಭಯ ಬಣಗಳ ಅಹವಾಲು ಆಲಿಸಿದ ಬಳಿಕ ತನ್ನ ತೀರ್ಪನ್ನು ಕಾಯ್ದಿರಿಸಿತ್ತು. ಯುವ ನಾಯಕನಿಗೆ ಬೆಂಬಲ ವ್ಯಕ್ತ ಪಡಿಸಿ ನೀಡಲಾಗಿರುವ ದಾಖಲೆಗಳು ಅಧಿಕ ಸಂಖ್ಯೆಯಲ್ಲಿ ಇರುವುದನ್ನು ಪರಿಗಣಿಸಿ ಆಯೋಗವು ಅಖಿಲೇಶ್ ಯಾದವ್ ಪರ ತೀರ್ಪು ನೀಡಿತು. ಅಖಿಲೇಶ ಯಾದವ್ ನೇತೃತ್ವದ ಬಣವು ಸಮಾಜವಾದಿ ಪಕ್ಷವಾಗಿದ್ದುಬೈಸಿಕಲ್ಚಿಹ್ನೆ ಪಡೆಯಲು ಅರ್ಹವಾಗಿದೆ ಎಂದು ಆಯೋಗ ಹೇಳಿತು. ಅಖಿಲೇಶ್ ಯಾದವ್ ಅವರನ್ನು ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿಯೂ ಆಯೋಗ ಮಾನ್ಯ ಮಾಡಿತು. ಜನವರಿ 1ರಂದು ನಡೆದ ರಾಷ್ಟ್ರೀಯ ಸಮಾವೇಶದಲ್ಲಿ ಮುಖ್ಯಮಂತ್ರಿ ಅಖಿಲೇಶ ಯಾದವ್ ಅವರನ್ನು ರಾಷ್ಟ್ರೀಯ ಅಧ್ಯಕ್ಷರಾಗಿ ಚುನಾಯಿಸುವುದರೊಂದಿಗೆ ಪಕ್ಷದ ಚಿಹ್ನೆಯ ವಿವಾದ ಎದ್ದಿತ್ತು.
2017: ನವದೆಹಲಿ: ಪಕ್ಷ ಮತ್ತು ಸೈಕಲ್ ಚಿಹ್ನೆಯ ರಕ್ಷಣೆಗಾಗಿ ಪುತ್ರ, ಮುಖ್ಯಮಂತ್ರಿ ಅಖಿಲೇಶ್ ಯಾದವ್ ಜೊತೆಗೆ ಹೊಂದಾಣಿಕೆಗೆ ಯತ್ನಿಸುತ್ತಿದ್ದರೂ, ಅಖಿಲೇಶ್ ಯಾದವ್ ಸ್ಪಂದಿಸದೇ ಇರುವ ಕಾರಣ ಸಮಾಜವಾದಿ ಪಕ್ಷದ ವಿಭಜನೆ ಅನಿವಾರ್ಯವಾಗಬಹುದು ಎಂಬುದಾಗಿ ಇಲ್ಲಿ ಹೇಳಿದ ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅಂತಹ ಸಂದರ್ಭದಲ್ಲಿ ತಾವು ಪುತ್ರನ ವಿರುದ್ಧವೇ ಹೋರಾಟ ನಡೆಸುವುದಾಗಿ ಪ್ರಕಟಿಸಿದರು. ಲಖನೌ ಪಕ್ಷ ಕಚೇರಿಯಲ್ಲಿ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಮುಲಾಯಂ ಸಿಂಗ್, ‘ಚುನಾವಣಾ ಆಯೋಗ ನೀಡುವ ನಿರ್ಧಾರವನ್ನು ನಾವು ಪಾಲಿಸುತ್ತೇವೆ. ಪಕ್ಷ ಮತ್ತು ಸೈಕಲ್ ಚಿಹ್ನೆಯನ್ನು ಉಳಿಸಲು ಪ್ರಯತ್ನಿಸುತ್ತಿದ್ದೇವೆ. ಮಗನ ಜೊತೆಗೆ ರಾಜಿ ಮಾತುಕತೆಗೆ ಯತ್ನಿಸುತ್ತಿದ್ದೇನೆ. ಅಖಿಲೇಶ್ ಬಂದರೂ ನಾನು ಮಾತುಕತೆ ಅರಂಭಿಸುವ ಮುನ್ನವೇ ಹೊರಟುಹೋಗುತ್ತಾರೆಎಂದು ನುಡಿದರು. ಪಕ್ಷದ ಚಿಹ್ನೆ ಕುರಿತು ಚುನಾವಣಾ ಆಯೋಗದ ನಿರ್ಧಾರ ಇಷ್ಟರಲ್ಲೇ ಹೊರಬೀಳಬಹುದು. ಆಯೋಗದ ಯಾವುದೇ ನಿರ್ದಾರಕ್ಕೆ ತಾವು ಬದ್ಧ ಎಂದು ಅವರು ಹೇಳಿದರು. ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಗಾಗಿ ಸಿದ್ಧ ಪಡಿಸಿದ ತನ್ನ ಅಭ್ಯರ್ಥಿಗಳ ಯಾದಿಯಲ್ಲಿ ಅಖಿಲೇಶ್ ಯಾದವ್ ಒಂದೇ ಒಂದು ಸ್ಥಾನವನ್ನೂ ಮುಸ್ಲಿಂ ಅಭ್ಯರ್ಥಿಗೆ ಮೀಸಲಿಟ್ಟಿಲ್ಲ ಎಂದು ಹೇಳಿದ ಮುಲಾಯಂ ಅಖಿಲೇಶ್ ಯಾದವ್ ಮುಸ್ಲಿಂ ವಿರೋಧಿ ಎಂಬ ಹಣೆಪಟ್ಟಿ ಕಟ್ಟಿಕೊಳ್ಳುವ ಸಾಧ್ಯತೆ ಬಗ್ಗೆ ತಮಗೆ ಚಿಂತೆ ಇದೆ ಎಂದು ನುಡಿದರು. ಉತ್ತರ ಪ್ರದೇಶದಲ್ಲಿ ಶೇಕಡಾ 19ರಷ್ಟು ಮುಸ್ಲಿಮರಿದ್ದು ಅವರಲ್ಲಿ ಬಹುತೇಕರ ಬೆಂಬಲ ಸಮಾಜವಾದಿ ಪಕ್ಷಕ್ಕೆ ಇದೆ.
2017: ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಈದಿನ ಎಟಿಎಂಗಳ ಮೂಲಕ ಹಣ ವಿತ್ಡ್ರಾ ಮಾಡುವ ಮಿತಿಯನ್ನು ದೈನಿಕ 4,500 ರೂಪಾಯಿಗಳಿಂದ 10,000 ರೂಪಾಯಿಗಳಿಗೆ ಏರಿಸಿತು. 17 ಜನವರಿ 2017ರ ಮಂಗಳವಾರದಿಂದ ಎಟಿಎಂಗಳಲ್ಲಿ ಒಂದು ಕಾರ್ಡ್ಗೆ 4,500 ರೂಪಾಯಿಗಳ ಬದಲು 10,000 ರೂಪಾಯಿಗಳವರೆಗೆ ಹಣ ಹಿಂಪಡೆಯಬಹುದು. ಆದರೆ ಬ್ಯಾಂಕ್ ಖಾತೆಯೊಂದರಿಂದ ವಾರಕ್ಕೆ 24,000 ರೂಪಾಯಿ ಪಡೆಯುವ ಮಿತಿಯಲ್ಲಿ ಯಾವುದೇ ಬದಲಾವಣೆ ಆಗಲಿಲ್ಲ. ಇದೇ ರೀತಿ ಚಾಲ್ತಿ ಖಾತೆಗಳಿಂದ (ಕರೆಂಟ್ ಅಕೌಂಟ್) ಪ್ರತಿವಾರ ವಿತ್ಡ್ರಾ ಮಾಡಬಹುದಾದ ಹಣದ ಮೊತ್ತವನ್ನು ಆರ್ಬಿಐ ದುಪ್ಪಟ್ಟುಗೊಳಿಸಿದೆ. ಈವರೆಗೆ ಚಾಲ್ತಿ ಖಾತೆಯಿಂದ 50,000 ರೂ. ಹಿಂಪಡೆಯಬಹುದಾಗಿತ್ತು. ಇನ್ನು ವಾರಕ್ಕೆ 1,00,000 (ಒಂದು ಲಕ್ಷ) ರೂಪಾಯಿವರೆಗೆ ವಿತ್ಡ್ರಾ ಮಾಡಬಹುದು. ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್ 8ರಂದು 500 ಮತ್ತು 1000 ರೂ. ಮುಖಬೆಲೆಯ ನೋಟುಗಳನ್ನು ನಿಷೇಧಿಸಲಾಗಿದೆ ಎಂದು ಪ್ರಕಟಿಸಿದ ಬಳಿಕ ಬ್ಯಾಂಕುಗಳಿಂದ ಹಣ ವಿತ್ಡ್ರಾ ಮಾಡುವ ಮೊತ್ತದ ಮೇಲೆ ಮಿತಿ ವಿಧಿಸಲಾಗಿತ್ತು. ತೆರಿಗೆ ವಂಚನೆ, ಭ್ರಷ್ಟಾಚಾರ ಮತ್ತು ಕಾಳಧನವನ್ನು ನಿಯಂತ್ರಿಸುವ ಸಲುವಾಗಿ ನೋಟು ನಿಷೇಧ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಧಾನಿ ಪ್ರಕಟಿಸಿದ್ದರು. ಹಳೆ ನೋಟುಗಳನ್ನು ಬದಲಾಯಿಸಲು, ಬ್ಯಾಂಕುಗಳಿಗೆ ಜಮಾ ಮಾಡಲು ಡಿಸೆಂಬರ್ 30ರವರೆಗೆ ಕಾಲಾವಕಾಶ ನೀಡಲಾಯಿತು. ಪರಿಣಾಮವಾಗಿ ನಂತರದ ದಿನಗಳಲ್ಲಿ ಬ್ಯಾಂಕುಗಳ ಮುಂದೆ ಮೈಲುಗಟ್ಟಲೆ ಉದ್ದದ ಸರತಿ ಸಾಲುಗಳು ಕಂಡು ಬಂದಿದ್ದವು. ಹೊಸ ವರ್ಷಾರಂಭದೊಂದಿಗೆ ನೋಟುಗಳ ಅಭಾವ ಸ್ಥಿತಿ ಸುಧಾರಿಸಿತು.
2017: ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರನ್ನು ಭೇಟಿ ಮಾಡಿದ ಬಳಿಕ ವ್ಯಾಪಕ ಟೀಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿಅನಗತ್ಯವಾಗಿ ಉದ್ದೇಶವಿಲ್ಲದೆ ಜನರನ್ನು ನೋಯಿಸಿದ್ದಕ್ಕಾಗಿ ಜನರ ಬಳಿ ಕ್ಷಮೆ ಕೇಳುವೆಎಂದು ಆಮೀರ್ ಖಾನ್ ಅವರದಂಗಲ್ಚಿತ್ರದಲ್ಲಿ ಭಾರತೀಯ ಕುಸ್ತಿಪಟು ಎಳೆಯ ಗೀತಾ ಪೋಗತ್ ಪಾತ್ರ ವಹಿಸಿದ್ದ ಕಾಶ್ಮೀರದ ಬಾಲಕಿ ಝುಯಿರಾ ವಾಸಿಮ್ ಫೇಸ್ ಬುಕ್ನಲ್ಲಿ ಪೋಸ್ಟ್ ಮಾಡಿದರು. ವಾಸಿಮ್ ಅವರು 14ರಂದು ಮುಖ್ಯಮಂತ್ರಿಯನ್ನು ಭೇಟಿ ಮಾಡಿದ್ದರು. ಕಳೆದ ಕೆಲವು ತಿಂಗಳುಗಳಲ್ಲಿ ಕಾಶ್ಮೀರ ಕಣಿವೆಯಲ್ಲಿ ಇದ್ದ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಭೇಟಿ ಬಗ್ಗೆ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದವು. ಬೆನ್ನಲ್ಲೇ ವಾಸಿಮ್ ಅವರು ಫೇಸ್ಬುಕ್ ಪೋಸ್ಟ್ ನಲ್ಲಿ ತಾವು ಯಾರನ್ನೂ ನೋಯಿಸಬಯಸುವುದಿಲ್ಲ, ತಾನು ಮಾಡಿದ್ದ ಭೇಟಿಯಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಯಾಚಿಸುವೆಎಂದು ಸುದೀರ್ಘ ವಿವರಣೆ ನೀಡಿದ್ದರು. ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲ ಇದಕ್ಕೆ ಪ್ರತಿಕ್ರಿಯಿಸಿ ವಾಸಿಮ್ ಮೇಲೆ ಕ್ಷಮೆ ಯಾಚಿಸುವಂತೆ ಒತ್ತಡ ಹಾಕಿದ್ದು ಸರಿಯಲ್ಲ ಎಂದು ಪ್ರತಿಕ್ರಿಯಿಸಿದ್ದರು. ವಾಸಿಮ್ ಯಾರಿಗೂ ಹೆದರಬೇಕಾಗಿಲ್ಲ, ಇಡೀ ದೇಶವೇ ಆಕೆಯ ಜೊತೆಗಿದೆ ಎಂದು ಎಂದು ಕುಸ್ತಿ ಪಟು ಗೀತಾ ಪೋಗತ್, ಕುಸ್ತಿಪಟು ಬಬಿತಾ ಪೋಗತ್ ಮತ್ತಿತರರು ಆಕೆಗೆ ಬೆಂಬಲ ವ್ಯಕ್ತ ಪಡಿಸಿದರು. ಬಳಿಕ ಫೇಸ್ಬುಕ್ನಲ್ಲಿ ಎರಡನೇ ಪೋಸ್ಟ್ ಪ್ರಕಟಿಸಿದ ವಾಸಿಮ್ನನ್ನ ಪೋಸ್ಟ್ ಏಕೆ ಇಷ್ಟು ದೊಡ್ಡ ಸುದ್ದಿಯಾಯಿತೋ ಗೊತ್ತಿಲ್ಲ. ನನ್ನ ಮೇಲೆ ಯಾರೂ ಒತ್ತಡ ಹೇರಿಲ್ಲ. ನನಗೆ ಯಾರನ್ನೂ ವಿನಾ ಕಾರಣ ನೋಯಿಸಲು ಇಷ್ಟವಿಲ್ಲ ಎಂದು ಜನರಿಗೆ ಮತ್ತೆ ಮತ್ತೆ ಸ್ಪಷ್ಟ ಪಡಿಸಬಯಸುತ್ತೇನೆ. ವಿವಾದವನ್ನು ಇನ್ನು ಬೆಳೆಸಬೇಡಿಎಂದು ಪ್ರತಿಕ್ರಿಯಿಸಿದರು.
2017: ನವದೆಹಲಿ: ವೈದ್ಯಕೀಯ ನೆಲೆಯಲ್ಲಿ ಮಹಾರಾಷ್ಟ್ರದ ಮಹಿಳೆಯೊಬ್ಬರಿಗೆ 24ನೇ ವಾರದಲ್ಲಿ (6ನೇ ತಿಂಗಳು) ಗರ್ಭಪಾತಕ್ಕೆ ಸುಪ್ರೀಂಕೋರ್ಟ್ ಅನುಮತಿ ನೀಡಿತು. 22 ಹರೆಯದ ಮಹಿಳೆಯ ಗರ್ಭದಲ್ಲಿ ಬೆಳೆದಿದ್ದ 24 ವಾರಗಳ ಭ್ರೂಣದಲ್ಲಿ ತಲೆಬುರುಡೆ ಇಲ್ಲದೇ ಇದ್ದುದು ವೈದ್ಯಕೀಯ ತಪಾಸಣೆಯಲ್ಲಿ ಕಂಡು ಬಂದ ಹಿನ್ನೆಲೆಯಲ್ಲಿ ಮಹಿಳೆಯ ಜೀವ ರಕ್ಷಣೆ ಸಲುವಾಗಿ ಗರ್ಭಪಾತ ಮಾಡಿಸಿಕೊಳ್ಳಲು ಸುಪ್ರೀಂಕೋರ್ಟ್ ಒಪ್ಪಿಗೆ ನೀಡಿತು. ಭ್ರೂಣ ಸಮರ್ಪಕವಾಗಿ ಬೆಳೆಯದೇ ಇದ್ದ ಕಾರಣ ಗರ್ಭಪಾತಕ್ಕೆ ಅವಕಾಶ ನೀಡಬಹುದು ಎಂಬುದಾಗಿ ವೈದ್ಯಕೀಯ ಮಂಡಳಿಯ ತಜ್ಞರು ಶಿಫಾರಸು ಮಾಡಿದ್ದರು. ಮಹಿಳೆಯ ವೈದ್ಯಕೀಯ ಪರೀಕ್ಷೆ ನಡೆಸುವಂತೆ ಪರೇಲ್ ಕೆಇಎಂ ಆಸ್ಪತ್ರೆಗೆ ಸುಪ್ರೀಂಕೋರ್ಟ್ ಆಜ್ಞಾಪಿಸಿತ್ತು. ವೈದ್ಯಕೀಯ ತಪಾಸಣೆ ಕಾಲದಲ್ಲಿ 21 ವಾರ ಬೆಳೆದಿದ್ದ ಭ್ರೂಣ ಸಮರ್ಪಕವಾಗಿ ಬೆಳೆದಿಲ್ಲ ಎಂಬುದು ಬೆಳಕಿಗೆ ಬಂದಿತ್ತು. 1971 ವೈದ್ಯಕೀಯ ಗರ್ಭಪಾತ ಕಾಯ್ದೆಯ ಪ್ರಕಾರ 20 ವಾರಗಳಿಗಿಂತ ಹೆಚ್ಚು ಕಾಲ ಭ್ರೂಣ ಬೆಳೆದಿದ್ದರೆ ಗರ್ಭಪಾತಕ್ಕೆ ಅವಕಾಶ ಇಲ್ಲ. ಗರ್ಭಪಾತಕ್ಕೆ ಅವಕಾಶ ಕೋರಿ ಕಳೆದ 3 ವರ್ಷಗಳಲ್ಲಿ ಸುಪ್ರೀಂಕೋರ್ಟ್ ಮುಂದೆ ಬಂದಿದ್ದ ಮಾದರಿಯ 4ನೇ ಪ್ರಕರಣ ಇದು.
2017: ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಸಬ್ಸಿಡಿ ನೀಡುವ ಯೋಜನೆಯನ್ನು ಮರು ಜಾರಿಗೊಳಿಸುವ ಪ್ರಶ್ನೆಯೇ ಇಲ್ಲ ಎಂದು ಕೇಂದ್ರ ಇಂಧನ ಸಚಿವ ಧರ್ಮೇಂದ್ರ ಪ್ರಧಾನ್ ಸ್ಪಷ್ಟ ಪಡಿಸಿದರು. ಕಳೆದ ಡಿಸೆಂಬರ್ನಿಂದ ಪೆಟ್ರೋಲ್ ಮತ್ತು ಡೀಸೆಲ್ ದರಗಳು ನಿರಂತರವಾಗಿ ಏರಿಕೆಯಾಗುತ್ತಿದ್ದು, ಪೆಟ್ರೋಲ್ 5.21 ರೂ. ಮತ್ತು ಡೀಸೆಲ್ 4.45 ರೂ. ಏರಿಕೆಯಾಗಿದೆ. ಹಿನ್ನೆಲೆಯಲ್ಲಿ ಮಾತನಾಡಿದ ಧರ್ಮೇಂದ್ರ ಪ್ರಧಾನ್ ಸಬ್ಸಿಡಿ ವ್ಯವಸ್ಥೆ ಜಾರಿಗೊಳಿಸುವುದಿಲ್ಲ ಎಂದು ಸ್ಪಷ್ಟನೆ ನೀಡಿದರು. ಪೆಟ್ರೋಲ್ ದರ ನಿಗದಿಯನ್ನು 2010 ಜೂನ್ನಲ್ಲಿ ಮತ್ತು ಡೀಸೆಲ್ ದರ ನಿಗದಿಯನ್ನು 2014 ಅಕ್ಟೋಬರ್ನಲ್ಲಿ ಸರ್ಕಾರದ ನಿಯಂತ್ರಣದಿಂದ ಮುಕ್ತಗೊಳಿಸಲಾಗಿದೆ. ಅದರಂತೆ ಸಬ್ಸಿಡಿ ನೀಡುವ ವ್ಯವಸ್ಥೆಯನ್ನು ಸ್ಥಗಿತಗೊಳಿಸಲಾಗಿದೆ. ಇದು ಮುಂದುವರೆಯಲಿದೆ. ಅಗತ್ಯ ಬಿದ್ದರೆ ಅಬಕಾರಿ ಸುಂಕದಲ್ಲಿ ಕಡಿತ ಮಾಡುವ ಕುರಿತು ಚಿಂತಸಲಾಗುವುದು ಎಂದು ಧರ್ಮೇಂದ್ರ ಪ್ರಧಾನ್ ತಿಳಿಸಿದರು. ಸಬ್ಸಿಡಿ ನೀಡುವುದರಿಂದ ಬಡವರಿಗೆ ಅನ್ಯಾಯವಾಗುತ್ತದೆ. ಕೊಳ್ಳುವ ಸಾಮರ್ಥ್ಯ ಇರುವವರು ಮಾತ್ರ ವಾಹನಗಳಿಗೆ ಇಂಧನ ಕೊಳ್ಳುತ್ತಿದ್ದಾರೆ. ಜಾಗತಿಕವಾಗಿ ಇಂಧನ ಬೆಲೆ ಕುಸಿತವಾದಾಗ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಕಡಿತ ಮಾಡಲಾಗಿತ್ತು. ಜತೆಗೆ ಅಬಕಾರಿ ಸುಂಕ ಏರಿಕೆ ಮಾಡುವ ಮೂಲಕ ಬಂದ ಹೆಚ್ಚುವರಿ ಆದಾಯವನ್ನು ಸಮಾಜ ಕಲ್ಯಾಣ ಯೋಜನೆಗಳಲ್ಲಿ ಬಳಸಲಾಗಿತ್ತು. ಶ್ರೀಮಂತ ದೇಶಗಳೂ ಸಹ ಬೆಲೆ ಇಳಿಕೆಯ ಲಾಭ ಪಡೆದು ಸಬ್ಸಿಡಿ ಕಡಿತಗೊಳಿಸಿದ್ದವು ಎಂದು ಪ್ರಧಾನ್ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು. ಕೇಂದ್ರ ಸರ್ಕಾರ ತೈಲ ಬೆಲೆ ಇಳಿಕೆಯಾಗಿದ್ದ ಸಂದರ್ಭದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಕ್ರಮವಾಗಿ 11.77 ರೂ. ಮತ್ತು 13.47 ರೂ. ಅಬಕಾರಿ ಸುಂಕವನ್ನು ಏರಿಕೆ ಮಾಡಿತ್ತು.
2017: ನವದೆಹಲಿ: ಬೆಸ ಸಂಖ್ಯೆಯ ದಿನಗಳಲ್ಲಿ ಮಾತ್ರ ಸಂಪರ್ಕ ಕ್ರಾಂತಿ ಎಕ್ಸ್ ಪ್ರೆಸ್ ರೈಲಿನಲ್ಲಿಯೇ ಪಯಣ, ಕೆಂಪು ಜಾಕೆಟ್ ಮತ್ತು ನೀಲ ಬಣ್ಣದ ಜೀನ್ಸ್ ಧರಿಸಿಕೊಂಡು 7ರಿಂದ 11 ವರ್ಷದೊಳಗಿನ ಶಾಲಾ ಬಾಲಕಿಯರನ್ನೇ ಗುರಿಯಾಗಿಟ್ಟುಕೊಂಡು ನಿರಂತರ 14 ವರ್ಷಗಳಿಂದ ಅತ್ಯಾಚಾರ ಎಸಗುತ್ತಿದ್ದ ಸರಣಿ ಅತ್ಯಾಚಾರಿಯನ್ನು ಪೂರ್ವ ದೆಹಲಿಯ ಕಲ್ಯಾಣಿಪುರದಲ್ಲಿ ಪೊಲೀಸರು ಬಂಧಿಸಿದ್ದಾರೆ. 14 ವರ್ಷಗಳ ಅವಧಿಯಲ್ಲಿ ಈತ ಸುಮಾರು 100ಕ್ಕೂ ಹೆಚ್ಚು ಬಾಲಕಿಯರ ಮೇಲೆ ಅತ್ಯಾಚಾರ ಎಸಗಿರುವುದು ಬೆಳಕಿಗೆ ಬಂದಿತು. ಕೆಂಪು ಜಾಕೆಟ್ ತನ್ನ ಅದೃಷ್ಟ, ಅದನ್ನು ಹಾಕಿಕೊಂಡು ಕೃತ್ಯ ಎಸಗಿದರೆ ತನ್ನನ್ನು ಯಾರೂ ಹಿಡಿಯುವುದು ಸಾಧ್ಯವಿಲ್ಲ ಎಂದು ನಂಬಿದ್ದ 38 ಹರೆಯದ ಈತನನ್ನು ಉತ್ತರ ಪ್ರದೇಶದ ರಾಮ್ ಪುರದ ಟೈಲರ್ ಸುನಿಲ್ ರಾಸ್ಟೋಗಿ ಎಂಬುದಾಗಿ ಗುರುತಿಸಲಾಯಿತು. ಈತ 5 ಮಕ್ಕಳ ತಂದೆಯಾಗಿದ್ದು, ಅವರ ಪೈಕಿ ಇಬ್ಬರು ಹುಡುಗಿಯರು. ನಿರಂತರ 14 ವರ್ಷಗಳಿಂದ ಕೆಂಪು ಜಾಕೆಟ್ ಹಾಕಿಕೊಂಡೇ ಪುಟ್ಟ ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದ್ದ ಈತನ ಅದೃಷ್ಟ ಶನಿವಾರ ಕೆಟ್ಟಿತ್ತು. ಅದೇ ಕೆಂಪು ಜಾಕೆಟ್ ಈತನನ್ನು ಪೊಲೀಸರ ಬಲೆಗೆ ಬೀಳಿಸಿತು. ನ್ಯೂ ಅಶೋಕ ನಗರದಲ್ಲಿ ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದ ಹಾಗೂ ಇನ್ನೊಬ್ಬ ಬಾಲಕಿಯ ಮಾನಭಂಗ ಮಾಡಿದ ಆರೋಪದಲ್ಲಿ ಈತನನ್ನು ಬಂಧಿಸಲಾಯಿತು. ನ್ಯೂ ಅಶೋಕ ನಗರ, ಗಾಜಿಯಾಬಾದ್ ಮತ್ತು ಉತ್ತರಾಖಂಡದ ರುದ್ರಪುರಗಳಲ್ಲಿ ವಿವಿಧ ಅತ್ಯಾಚಾರ ಪ್ರಕರಣಗಳಲ್ಲಿ ತಾನು ಶಾಮೀಲಾಗಿದ್ದುದಾಗಿ ಈತ ವಿಚಾರಣೆ ಕಾಲದಲ್ಲಿ ಒಪ್ಪಿಕೊಂಡಿದ್ದಾನೆ ಎಂದು ದೆಹಲಿ (ಪೂರ್ವ) ಡಿಸಿಪಿ ಓವೀರ್ ಸಿಂಗ್ ಹೇಳಿದರು. ಕನಿಷ್ಠ 13 ಬಾಲಕಿಯರ ಮೇಲೆ ತಾನು ಅತ್ಯಾಚಾರ ಎಸಗಿರುವುದಾಗಿ ರಾಸ್ಟೋಗಿ ಒಪ್ಪಿಕೊಂಡಿದ್ದಾನೆ. ಆದರೆ ಆತ ನಿರಂತರ ಹೇಳಿಕೆ ಬದಲಾಯಿಸುತ್ತಿದ್ದು ಸಂಖ್ಯೆ ನೂರಕ್ಕೂ ಹೆಚ್ಚಿರಬಹುದು ಎಂಬ ಶಂಕೆ ಇದೆ. ದೆಹಲಿಗೆ ಆಗಾಗ ಕೃತ್ಯದ ಸಲುವಾಗಿಯೇ ಭೇಟಿ ನೀಡುತ್ತಿದ್ದ ಈತನ ವಿರುದ್ಧ ಉತ್ತರಾಖಂಡದಲ್ಲಿ ಹಲವಾರು ಪ್ರಕರಣಗಳು ಇವೆ ಎಂದು ತಿಳಿದು ಬಂದಿದೆ. ರಾಜಧಾನಿಯಲ್ಲಿ ಯಾವಾಗಲೂ ಮಧ್ಯಾಹ್ನ 2ರಿಂದ 4 ಗಂಟೆಯ ಅವಧಿಯಲ್ಲಿ ಈತ ಕೃತ್ಯ ಎಸಗುತ್ತಿದ್ದ. ಮಕ್ಕಳು ಶಾಲೆಯಿಂದ ಮನೆಗೆ ಹೋಗುವಾಗ ಯಾವುದಾದರೂ ಹುಡುಗಿಯರ ಗುಂಪನ್ನು ಹಿಂಬಾಲಿಸುವುದು, ಗುಂಪಿನಿಂದ ಪ್ರತ್ಯೇಕಗೊಳ್ಳುವ ಬಾಲಕಿಯನ್ನು ಸಮೀಪಿಸಿ ತಾನು ಆಕೆಯ ತಂದೆಯ ಗೆಳೆಯ ಎಂದು ಹೇಳಿಕೊಂಡು ತಂದೆ ಬಟ್ಟೆ, ತಿಂಡಿ ಕಳುಹಿಸಿಕೊಟ್ಟಿದ್ದಾನೆ ಎಂದು ಹೇಳಿ ಆಕರ್ಷಿಸುವುದು, ಇನ್ನಷ್ಟು ತಿಂಡಿ, ಬಟ್ಟೆ ಇದೆ ಎಂಬುದಾಗಿ ಹೇಳಿ ಕರೆದೊಯ್ದು ನಿರ್ಜನ ಪ್ರದೇಶದಲ್ಲಿ ಅತ್ಯಾಚಾರ ಎಸಗುವುದು ಈತನ ಕಾರ್ಯತಂತ್ರ. ಪ್ರತಿಯೊಬ್ಬ ಬಲಿಪಶುವಿಗೂ ಈತ ಹೊಸ ಹೊಸ ಬಟ್ಟೆಗಳನ್ನು ಹೊಲಿದು ತರುತ್ತಿದ್ದ ಎಂದು ಪೊಲೀಸರು ಹೇಳಿದರು. ಈತನಿಂದ ಅತ್ಯಾಚಾರಕ್ಕೆ ಒಳಗಾದ ಬಾಲಕಿಯರು ಈತ ಧರಿಸುತ್ತಿದ್ದ ಉಡುಪಿನ ಬಗ್ಗೆ ನೀಡಿದ್ದ ವಿವರಗಳೇ ಶನಿವಾರ ಈತನಿಗೆ ಮುಳುವಾಯಿತು.
2017: ಬಿಷ್ಕೆಕ್: ಕಾಗೋ ವಿಮಾನವೊಂದು ಪತನಗೊಂಡು ನಾಲ್ವರು ಪೈಲಟ್ಗಳು ಸೇರಿ 32 ಮಂದಿ ಮೃತಪಟ್ಟ ಘಟನೆ ಕರ್ಗಿಸ್ತಾನದಲ್ಲಿ ಗಟಿಸಿತು. ಜನನಿಬಿಡ ಪ್ರದೇಶದಲ್ಲಿ ವಿಮಾನ ಪತನಗೊಂಡಿದ್ದರಿಂದ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ವರದಿಗಳು ಹೇಳಿದವು.  ಭಾರಿ ಪ್ರಮಾಣದಲ್ಲಿ ಹಿಮಪಾತವಾಗುತ್ತಿದ್ದುದು ಘಟನೆಗೆ ಪ್ರಮುಖ ಕಾರಣ ಎಂದು ಹೇಳಲಾಯಿತು. ಪ್ರಾಣ ಕಳೆದುಕೊಂಡಿರುವವರಲ್ಲಿ ಡಚಾ-ಸು ಎನ್ನುವ ಹಳ್ಳಿಯ ಮಂದಿಯೇ ಹೆಚ್ಚಿದ್ದಾರೆ. ಪತನಗೊಂಡಿರುವ ಬೋಯಿಂಗ್ 747400 ವಿಮಾನ ಟರ್ಕಿ ಏರ್ಲೈನ್ಸ್ಗೆ ಸೇರಿದ್ದಾಗಿದ್ದು, ಹಾಂಕಾಂಗ್ನಿಂದ ಕರ್ಗಿಸ್ತಾನ ರಾಜಧಾನಿ ಬಿಷ್ಕೆಕ್ ಮಾರ್ಗವಾಗಿ ಇಸ್ತಾನ್ಬುಲ್ಗೆ ತೆರಳುತ್ತಿತ್ತು ಎಂದು ಹೇಳಲಾಗಿದೆ. ದುರಂತ ಬೆಳಗ್ಗೆ 7.30 ಸುಮಾರಿಗೆ ಘಟಿಸಿತು.  ಭಾರಿ ಪ್ರಮಾಣದಲ್ಲಿ ಹಿಮಪಾತವಾಗುತ್ತಿದ್ದ ಕಾರಣ ವಿಮಾನವನ್ನು ಇಳಿಸಲು ಮುಂದಾದ ವೇಲೆ ಪೈಲಟ್ ನಿಯಂತ್ರಣ ತಪ್ಪಿ ಘಟನೆ ಸಂಭವಿಸಿರಬಹುದೆಂದು ಶಂಕಿಸಲಾಗಿದೆ ಎಂದು ವಿಮಾನ ನಿಲ್ದಾಣದ ನಿಯಂತ್ರಣಾ ಕೊಠಡಿ ಅಧಿಕಾರಿಗಳು ಮಾಹಿತಿ ನೀಡಿದರು. ಘಟನೆಯಿಂದಾಗಿ ಹಳ್ಳಿಯ 15ಕ್ಕೂ ಹೆಚ್ಚು ಮನೆಗಳಿಗೆ ಸಾಕಷ್ಟು ಹಾನಿಯಾಗಿದ್ದು, ಅನೇಕರು ಗಾಯಗೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದರು.
2017: ಫ್ಲೋರಿಡಾ: ಅಮೆರಿಕದ ರಿಂಗ್ಲಿಂಗ್ಬ್ರೋಸ್‌. ಮತ್ತು ಬರ್ನಮ್ಆ್ಯಂಡ್ಬೈಲೆ ಸರ್ಕಸ್ಕಂಪನಿಯು 146 ವರ್ಷಗಳ ನಿರಂತರ ಪ್ರದರ್ಶವನ್ನು ಅಂತ್ಯಗೊಳಿಸಲಿದೆ ಎಂದು ಪ್ರಕಟಿಸಲಾಯಿತು.  ಪ್ರಾಣಿಗಳ ಹಕ್ಕುಗಳ ಗುಂಪಿನೊಂದಿಗೆ ನಿರಂತರ ಕಾನೂನು ಹೋರಾಟ, ಬದಲಾಗುತ್ತಿರುವ ಜನರ ಅಭಿರುಚಿ ಹಾಗೂ ನಿರ್ವಹಣಾ ವೆಚ್ಚದಲ್ಲಿ ಹೆಚ್ಚಳ ಸೇರಿದಂತೆ ಅನೇಕ ಕಾರಣಗಳಿಂದ 146 ವರ್ಷಗಳಷ್ಟು ಹಳೆಯದಾದದಿ ಗ್ರೇಟೆಸ್ಟ್ಷೋ ಆನ್ಅರ್ಥ್‌’ ಸ್ಥಗಿತಗೊಳ್ಳಲಿದೆ ಎಂದು ಸರ್ಕಸ್ಕಂಪನಿ ಮುಖ್ಯಸ್ಥರು ತಿಳಿಸಿದರು. ಊರಿಂದ ಊರಿಗೆ ತಿರುಗಾಟ ನಡೆಸುತ್ತ ಪ್ರದರ್ಶನ ನೀಡುವ ಸರ್ಕಸ್ಕಂಪನಿಯು ಇದೇ ವರ್ಷ ಮೇ ನಲ್ಲಿ ಎಲ್ಲ ಪ್ರದರ್ಶನಗಳಿಗೆ ಪೂರ್ಣ ವಿರಾಮ ಇಡಲು ಮುಂದಾಯಿತು. ನ್ಯೂಯಾರ್ಕ್‌, ವಾಷಿಂಗ್ಟನ್‌, ಅಟ್ಲಾಂಟಾ ಸೇರಿದಂತೆ ಅಮೆರಿಕದ ವಿವಿಧ ಭಾಗಗಳಲ್ಲಿ ಮೇ ವರೆಗೂ 30 ಪ್ರದರ್ಶನಗಳನ್ನು ನೀಡಲಿದೆ. 1871ರಲ್ಲಿ ಸ್ಥಾಪನೆಯಾದ ಸರ್ಕಸ್ಕಂಪನಿಯು 1919ರಲ್ಲಿ ಭಿನ್ನ ಪ್ರದರ್ಶನಗಳ ಮೂಲಕ ಅಮೆರಿಕದಲ್ಲಿ ಜನಪ್ರಿಯಗೊಂಡಿತು.

2017: ಭೋಪಾಲ್: ಮಧ್ಯಪ್ರದೇಶದ ರಾಯಸೇನಾ ಪ್ರದೇಶದಲ್ಲಿ ಸುಮಾರು 80 ಕಿ.ಮೀ. ಉದ್ದವಿರುವ ಪುರಾತನ ಗೋಡೆ ಕೆಲ ತಿಂಗಳ ಹಿಂದೆ ಪತ್ತೆಯಾಗಿದ್ದು, ಪುರಾತತ್ವ ತಜ್ಞರು ಗೋಡೆಯ ರಹಸ್ಯ ಬಯಲಿಗೆಳೆಯಲು ಯತ್ನಿಸುತ್ತಿದ್ದಾರೆ. ಚೀನಾದ ಮಹಾಗೋಡೆ ಬಳಿಕ ಇದು ವಿಶ್ವದ ಎರಡನೇ ಅತಿ ಉದ್ದದ ಗೋಡೆ ಎನ್ನಲಾಗುತ್ತಿದೆ. ವಿವಿಧ ಪ್ರದೇಶಗಳ ಮೂಲಕ ಹಾದು ಹೋಗುವ ಗೋಡೆ. ಕೆಲವೆಡೆ 15 ಅಡಿಗಳಷ್ಟು ಎತ್ತರವಿದೆ. ಹೆಚ್ಚಿನ ಪ್ರದೇಶದಲ್ಲಿ ಗೋಡೆ ಕುಸಿದುಬಿದ್ದಿದ್ದು ಅವಶೇಷಗಳು ಮಾತ್ರ ಉಳಿದುಕೊಂಡಿದೆ. ರಾಜಸೇನಾ ಜಿಲ್ಲೆಯಿಂದ ಆರಂಭವಾಗುವ ಗೋಡೆ ಹಲವಾರು ಹಳ್ಳಿಗಳ ಮೂಲಕ ಸಾಗಿ ಚೌಕಿಗಢ ಎಂಬ ಕೋಟೆಯಲ್ಲಿ ಕೊನೆಗೊಳ್ಳುತ್ತದೆ. ಶತಮಾನಗಳ ಹಿಂದೆ ಪರಮಾರ ವಂಶದ ರಾಜರು ರಾಜ್ಯದ ಗಡಿಯನ್ನು ರಕ್ಷಿಸಿಕೊಳ್ಳಲು ಗೋಡೆ ನಿರ್ವಿುಸಿದ್ದಾರೆ ಎಂದು ಇತಿಹಾಸ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಹಲವು ಸ್ಥಳಗಳಲ್ಲಿ ಗೋಡೆ ಶಿಥಿಲಾವಸ್ಥೆಗೆ ತಲುಪಿದೆ. ಸ್ಥಳೀಯರು ಗೋಡೆಯ ಕಲ್ಲು, ಇಟ್ಟಿಗೆಗಳನ್ನು ಕಿತ್ತು ತಮ್ಮ ವೈಯಕ್ತಿಕ ಕಾರ್ಯಕ್ಕೆ ಬಳಕೆ ಮಾಡಿಕೊಂಡಿದ್ದಾರೆ. ಹೀಗಾಗಿ ಗೋಡೆಯ ಉದ್ದ 80 ಕಿ.ಮೀ.ಗಿಂತಲೂ ಹೆಚ್ಚಿರಬಹುದು ಎಂದು ಅಂದಾಜಿಸಲಾಗಿದೆ.  ಇಂಟರ್ಲಾಕ್!: ಅಚ್ಚರಿಯ ವಿಚಾರವೆಂದರೆ ಗೋಡೆಯ ಇಟ್ಟಿಗೆಗಳನ್ನು ಇಂಟರ್ಲಾಕ್ ತಂತ್ರಜ್ಞಾನದಿಂದ ಜೋಡಿಸಲಾಗಿದೆ. ಮಧ್ಯದಲ್ಲಿ ಮಣ್ಣು, ಸಣ್ಣ ಕಲ್ಲಿನ ಚೂರುಗಳನ್ನು ಬಳಸಲಾಗಿದೆ. ಗೋಡೆಯ ಸುತ್ತಮುತ್ತ ಪುರಾತನ ಕಾಲದ ಹಲವು ವಸ್ತುಗಳು ದೊರೆಯುತ್ತಿವೆ. ಕೆಲ ಪ್ರದೇಶದಲ್ಲಿ ಉತ್ಖನನ ನಡೆಸಲಾಗಿದ್ದು, ದೇವಾಲಯಗಳ ಅವಶೇಷಗಳು ಇಲ್ಲಿ ದೊರೆತಿವೆ. ಇವು 10 ಅಥವಾ 11ನೇ ಶತಮಾನದ್ದು ಎನ್ನಲಾಗಿದೆ.
2009: ಹಿಂದುಳಿದ ಪ್ರದೇಶವಾದ ಹೈದರಾಬಾದ್- ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡಲು ಅನುವಾಗುವಂತೆ ಸಂವಿಧಾನದ 371ನೇ ವಿಧಿಗೆ ತಿದ್ದುಪಡಿ ಹಾಗೂ ಬೆಂಗಳೂರಿಗೆ ರಾಷ್ಟ್ರೀಯ ಭದ್ರತಾ ಪಡೆ (ಎನ್.ಎಸ್.ಜಿ.) ಘಟಕ ಮಂಜೂರು ಮಾಡುವಂತೆ ರಾಜ್ಯ ಸರ್ಕಾರ ಕೇಂದ್ರವನ್ನು ಪುನಃ ಒತ್ತಾಯಿಸಿತು. 'ಕುಂದಾನಗರ' ಬೆಳಗಾವಿಯಲ್ಲಿ ವಿಧಾನಮಂಡಲದ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರು 50 ನಿಮಿಷಗಳ ತಮ್ಮ ಸುದೀರ್ಘ ಭಾಷಣದಲ್ಲಿ ಈ ಸಲುವಾಗಿ ಒಗ್ಗಟ್ಟಿನಿಂದ ಕೇಂದ್ರದ ಮೇಲೆ ಒತ್ತಡ ಹೇರಬೇಕಾದ ಅಗತ್ಯವನ್ನು ಒತ್ತಿಹೇಳಿದರು. ರಾಜ್ಯಪಾಲರು ಇತ್ತ ಕನ್ನಡದಲ್ಲಿ ಶುಭಾಶಯ ಕೋರಿ, ಉತ್ತರ ಕರ್ನಾಟಕ ಮತ್ತು ಗಡಿ ಪ್ರದೇಶಗಳ ಅಭಿವೃದಿಟಗೆ ಸರ್ಕಾರ ಬದ್ಧ ಎಂದು ಸಾರಿದ ಹೊತ್ತಿಗೇ ಅಧಿವೇಶನ ಸ್ಥಳದ ಹೊರಗೆ ಟಿಳಕವಾಡಿಯ ಲೇಲೆ ಮೈದಾನ ಬಳಿ 'ಗಡಿ ಸಮಾವೇಶ'ಕ್ಕೆಂದು ಜಮಾಯಿಸಿದ ಎಂ.ಇ.ಎಸ್. ಕಾರ್ಯಕರ್ತರನ್ನು ಕಾಕತಾಳೀಯ ಎಂಬಂತೆ ಪೊಲೀಸರು ವಶಕ್ಕೆ ತೆಗೆದುಕೊಂಡರು.

2009: ಅಮೆರಿಕ ಏರ್‌ವೇಸ್‌ನ ವಿಮಾನವೊಂದು ನದಿಗೆ ಬಿದ್ದಿತು. ಆದರೆ ಅದರೊಳಗಿದ್ದ 148 ಪ್ರಯಾಣಿಕರು ಮತ್ತು ಆರು ಸಿಬ್ಬಂದಿ ಪವಾಡಸದೃಶ ರೀತಿಯಲ್ಲಿ ಪಾರಾದರು. ಏರ್ ಬಸ್- 320 ಹೆಸರಿನ ದೇಶೀಯ ವಿಮಾನ ನ್ಯೂಯಾರ್ಕ್ ವಿಮಾನ ನಿಲ್ದಾಣದಿಂದ ಹಾರಿದ ಕೆಲವೇ ನಿಮಿಷಗಳಲ್ಲಿ ಸಮೀಪದ ಹಡ್ಸನ್ ನದಿಗೆ ಅಪ್ಪಳಿಸಿತು. ನದಿಯಲ್ಲಿದ್ದ ಪ್ರವಾಸಿ ದೋಣಿಗಳು ಮತ್ತು ಪರಿಹಾರ ಕಾರ್ಯಕರ್ತರು ಕ್ಷಣಮಾತ್ರದಲ್ಲಿ ಸ್ಥಳಕ್ಕೆ ಆಗಮಿಸಿ ಪ್ರಯಾಣಿಕರ ರಕ್ಷಣೆಗೆ ಮುಂದಾದರು. ಶೀತ ಗಾಳಿಯಿಂದ ಪಾರಾಗಲು ಉಣ್ಣೆಯ ವಸ್ತ್ರ ಧರಿಸಿ, ಬೆಚ್ಚನೆಯ ವಿಮಾನದೊಳಗೆ ಕುಳಿತು ಹಿತವಾದ ಪಯಣ ಆರಂಭಿಸಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾದರಾದರೂ, ಕೇವಲ 6 ಡಿಗ್ರಿ ಸೆಲ್ಷಿಯಸ್ ತಾಪಮಾನದಿಂದ ಹಿಮಗಟ್ಟಿದ್ದ ನೀರಿನಲ್ಲಿ ಥರಗುಟ್ಟಿಹೋದರು. ಈ ಅಪಘಾತ ಎಲ್ಲರಿಗೂ ಆಘಾತ ಉಂಟು ಮಾಡಿತು.

2009: ಬಾಂಗ್ಲಾದೇಶದ ಅಕ್ರಮ ವಲಸಿಗರನ್ನು ಪತ್ತೆ ಹಚ್ಚುವ ಉದ್ದೇಶದಿಂದ ಗ್ರಾಮ ಪಂಚಾಯಿತಿಗಳು ಗ್ರಾಮಸ್ಥರ ದಾಖಲೆಗಳನ್ನು ಕಡ್ಡಾಯವಾಗಿ ಹೊಂದುವುದಕ್ಕೆ ಸಂಬಂಧಿಸಿದಂತೆ ನಿಯಮಗಳನ್ನು ರೂಪಿಸಬೇಕು ಹಾಗೂ ಎಲ್ಲಾ ನಾಗರಿಕರಿಗೂ ಗುರುತಿನ ಚೀಟಿ ವಿತರಿಸಬೇಕು ಎಂದು ಸುಪ್ರೀಂಕೋರ್ಟ್ ಸರ್ಕಾರಕ್ಕೆ ಆದೇಶಿಸಿತು. ದೇಶದ ಎಲ್ಲಾ ನಾಗರಿಕರ ನೋಂದಣಿ ಮಾಡಲು ಹಾಗೂ ಗುರುತಿನ ಚೀಟಿ ವಿತರಿಸಲು ರಾಷ್ಟ್ರೀಯ ನೋಂದಣಿ ಪ್ರಾಧಿಕಾರವನ್ನು ರಚಿಸುವಂತೆ ಮುಖ್ಯ ನ್ಯಾಯಮೂರ್ತಿ ಕೆ. ಜಿ. ಬಾಲಕೃಷ್ಣನ್, ಪಿ. ಸದಾಶಿವಂ ಮತ್ತು ಜೆ. ಪಂಚಾಲ್ ಅವರನ್ನು ಒಳಗೊಂಡ ನ್ಯಾಯಪೀಠವು ಕೇಂದ್ರ ಸರ್ಕಾರಕ್ಕೆ ಸೂಚಿಸಿತು.

2009: ಕನ್ನಡ ಸಾಹಿತ್ಯದ ಸೃಜನೇತರ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಹಿತಿ ಪ್ರೊ. ಟಿ.ವಿ.ವೆಂಕಟಾಚಲ ಶಾಸ್ತ್ರಿ ಅವರನ್ನು 2008ನೇ ಸಾಲಿನ 'ಪಂಪ ಪ್ರಶಸ್ತಿ'ಗೆ ರಾಜ್ಯ ಸರ್ಕಾರ ಆಯ್ಕೆ ಮಾಡಿತು. ಪ್ರಶಸ್ತಿಯು 1 ಲಕ್ಷ ರೂಪಾಯಿ ಬಹುಮಾನ ಹಾಗೂ ಫಲಕವನ್ನು ಒಳಗೊಂಡಿದೆ.

2008: ಆಗ್ನೇಯ ಶ್ರೀಲಂಕಾದ ಬುಟಾಲಾದಲ್ಲಿ ಶಂಕಿತ ಎಲ್ ಟಿ ಟಿ ಇ ಭಯೋತ್ಪಾದಕರು ಬಸ್ಸೊಂದನ್ನು ಸ್ಫೋಟಿಸಿದ್ದರಿಂದ 26ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿ, 64 ಮಂದಿಗೆ ತೀವ್ರ ಸ್ವರೂಪದ ಗಾಯಗಳಾದವು. ಈ ಘಟನೆ ನಡೆದ ಕೆಲವೇ ನಿಮಿಷಗಳಲ್ಲಿ ಅದೇ ಪ್ರದೇಶದಲ್ಲಿ ಇನ್ನೊಂದು ಬಾಂಬ್ ಕೂಡ ಸ್ಫೋಟಗೊಂಡು ಮೂವರು ಯೋಧರಿಗೆ ಗಾಯಗಳಾಗಿ ಸೇನಾ ವಾಹನ ಜಖಂಗೊಂಡಿತು.

2008: ಗೋವಾ ಮುಖ್ಯಮಂತ್ರಿ ದಿಗಂಬರ ಕಾಮತ್ ಸಚಿವ ಸಂಪುಟದ ಸದಸ್ಯರಾದ ವಿಶ್ವಜಿತ್ ರಾಣೆ (ಪಕ್ಷೇತರ), ಫ್ರಾನ್ಸಿಸ್ಕೊ ಉರುಫ್ ಮಿಕ್ಕಿ ಪಾಥೆಕೊ ಮತ್ತು ಜೋಸ್ ಫಿಲಿಪ್ (ಇಬ್ಬರೂ ಎನ್ ಸಿ ಪಿ) ಅವರು ರಾಜ್ಯಪಾಲ ಎಸ್. ಸಿ. ಜಮೀರ್ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದರು. ಇದರೊಂದಿಗೆ ಕಾಂಗ್ರೆಸ್ ನೇತೃತ್ವದ ಗೋವಾ ಸಮ್ಮಿಶ್ರ ಸರ್ಕಾರ ಪತನದೆಡೆಗೆ ಸಾಗಿತು.

2008: ಚೀನಾದ ಸಿಸಿಟಿವಿ-9 ವಾಹಿನಿಗೆ ಭಾರತದಲ್ಲಿ ಡೌನ್ ಲೋಡ್ ಮಾಡಲು ಅನುಮತಿ ನೀಡಲಾಯಿತು. ಇದರಂತೆ ಝೀ ಟಿವಿ ಪ್ರಸಾರಕ್ಕೆ ಚೀನಾ ಒಪ್ಪಿದೆ ಎಂದು ಕೇಂದ್ರದ ವಾರ್ತಾ ಹಾಗೂ ಪ್ರಸಾರ ಸಚಿವಾಲಯದ ಮೂಲಗಳು ತಿಳಿಸಿದವು.

2008: ಆಫ್ಘಾನಿಸ್ಥಾನದ ಗಡಿಯಲ್ಲಿರುವ ದಕ್ಷಿಣ ವಜೀರಸ್ಥಾನ ಬುಡಕಟ್ಟು ಪ್ರದೇಶದಲ್ಲಿ ಪಾಕಿಸ್ಥಾನಿ ಭದ್ರತಾ ದಳದ ವಶದಲ್ಲಿದ್ದ ಕೋಟೆಯೊಂದನ್ನು ತಾಲಿಬಾನ್ ಉಗ್ರಗಾಮಿಗಳು ವಶ ಪಡಿಸಿಕೊಂಡರು. ಈ ದಾಳಿ ಸಂದರ್ಭದಲ್ಲಿ ಸುಮಾರು 47 ಪಾಕ್ ಯೋಧರು ಸಾವನ್ನಪ್ಪಿದರು. ಉಗ್ರಗಾಮಿಗಳ ದಾಳಿಗೆ ತತ್ತರಿಸಿ ಹಲವಾರು ಯೋಧರು ಸ್ಥಳದಿಂದಲೇ ಪರಾರಿಯಾದರು.

2007: ಜರ್ಮನ್ ಚಾನ್ಸಲರ್ ಆಂಗೇಲಾ ಮರ್ಕೆಲ್ ಅವರ ಮಿತ್ರ ಕನ್ಸರ್ ವೇಟಿವ್ ಪಕ್ಷದ ಹ್ಯಾನ್ಸ್-ಗೆರ್ಟ್ ಪೋಟ್ರಿಂಗ್ ಅವರು ಯುರೋಪಿಯನ್ ಪಾರ್ಲಿಮೆಂಟಿನ ಅಧ್ಯಕ್ಷರಾಗಿ ಆಯ್ಕೆಯಾದರು.

2007: ಖ್ಯಾತ ಹಾಲಿವುಡ್ ನಟ ಕ್ಲಿಂಟ್ ಈಸ್ಟ್ ವುಡ್ ನಿರ್ದೇಶನದ `ಲೆಟರ್ಸ್ ಫ್ರಮ್ ಇವೊ ಜಿಮಾ' ಚಲನಚಿತ್ರ ಗೋಲ್ಡನ್ ಗ್ಲೋಬ್ ಶ್ರೇಷ್ಠ ವಿದೇಶಿ ಚಿತ್ರ ಎಂಬ ಪ್ರಶಸ್ತಿ ಪಡೆಯಿತು. ಜಪಾನಿ ಭಾಷೆಯಲ್ಲಿರುವ ಈ ಚಿತ್ರ ಎರಡನೇ ಜಾಗತಿಕ ಸಮರದ ಹಿನ್ನೆಲೆಯ ಕಥಾಹಂದರ ಹೊಂದಿದೆ. ಮೆಲ್ ಗಿಬ್ಸನ್ ಅವರ `ಅಪೊಕಲಿಪ್ಟೊ', ಪೆಡ್ರೊ ಅಲ್ಮೊದೊವರ್ ಅವರ `ವೊಲ್ವರ್' ಚಿತ್ರಗಳು ಈಸ್ಟ್ ವುಡ್ ಚಿತ್ರಕ್ಕೆ ಪ್ರಬಲ ಪೈಪೋಟಿ ಒಡ್ಡ್ದಿದವು.

2007: ದ ಟೈಮ್ಸ್ ಆಫ್ ಇಂಡಿಯಾ ದೈನಿಕದ ಕನ್ನಡ ಆವೃತ್ತಿ 'ದ ಟೈಮ್ಸ್ ಆಫ್ ಇಂಡಿಯಾ ಕನ್ನಡ' ಮಾರುಕಟ್ಟೆಗೆ ಪ್ರವೇಶ.

2007: ಲಂಡನ್ನಿನ ಚಾನೆಲ್ 4ರ ರಿಯಾಲಿಟಿ ಶೋ `ಬಿಗ್ ಬ್ರದರ್' ನಲ್ಲಿ ಅವಕಾಶ ಪಡೆದ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಭಾರತೀಯಳೆಂಬ ಕಾರಣಕ್ಕಾಗಿ ಇತರ ಸ್ಪರ್ಧಿಗಳಿಂದ ಜನಾಂಗೀಯ ನಿಂದೆ ಹಾಗೂ ಅವಹೇಳನಕ್ಕೆ ಗುರಿಯಾಗಿ ಕಣ್ಣೀರಿಟ್ಟರು. ಕಾರ್ಯಕ್ರಮದ ನಿರ್ಮಾಪಕರು ಈ ಪ್ರಕರಣದ ತನಿಖೆಗೆ ಆದೇಶಿಸಿದರು.

2007: ಚೀನಾ ಕ್ರಾಂತಿಯಲ್ಲಿ ಪಾಲ್ಗೊಂಡು 1949ರಲ್ಲಿ ಮಾವೋ ಝೆಡೊಂಗ್ ಜೊತೆಗೆ ಅಧಿಕಾರಕ್ಕೆ ಏರಿದ್ದ ಹಿರಿಯ ಕ್ರಾಂತಿಕಾರಿ ನಾಯಕರಲ್ಲಿ ಒಬ್ಬರಾದ ಬೊ ಯಿಬೊ (98) ಬೀಜಿಂಗ್ ಆಸ್ಪತ್ರೆಯೊಂದರಲ್ಲಿ ನಿಧನರಾದರು.

2007: ವಿಶ್ವ ಆರ್ಥಿಕ ವೇದಿಕೆಯ (ವರ್ಲ್ಡ್ ಎಕನಾಮಿಕ್ ಫೋರಂ) ಪ್ರಕಟಿಸುವ ಪ್ರಸಕ್ತ ಸಾಲಿನ ಜಾಗತಿಕ ಯುವ ನಾಯಕರ ಪಟ್ಟಿಯಲ್ಲಿ ಬಾಲಿವುಡ್ ನಟಿ ಐಶ್ವರ್ಯ ರೈ, ಜನಾಗ್ರಹ ಸಂಸ್ಥೆಯ ಸಂಸ್ಥಾಪಕ ರಮೇಶ ರಾಮನಾಥನ್, ಸಂಸದರಾದ ಓಮರ್ ಅಬ್ದುಲ್ಲ, ಜ್ಯೋತಿರಾದಿತ್ಯ ಸಿಂಧಿಯಾ, ನವೀನ್ ಜಿಂದಾಲ್, ಮ್ಯಾಗ್ಸೆಸೆ ವಿಜೇತ ಅರವಿಂದ್ ಕೇಜ್ರಿವಾಲ ಸ್ಥಾನ ಪಡೆದರು.

2007: ಕರ್ನಾಟಕ ರಾಜ್ಯ ಬರಹಗಾರರ ಮತ್ತು ಪ್ರಕಾಶಕರ ಸಂಘದ 2006ನೇ ಸಾಲಿನ ವರ್ಷದ `ಉತ್ತಮ ಲೇಖಕ' ಪ್ರಶಸ್ತಿಗೆ ಡಾ. ನಲ್ಲೂರು ಪ್ರಸಾದ್ ಹಾಗೂ ಉತ್ತರ ಪ್ರಕಾಶಕ ಪ್ರಶಸ್ತಿಗೆ ಧಾರವಾಡ ಮನೋಹರ ಗ್ರಂಥ ಮಾಲೆಯ ಡಾ. ರಮಾಕಾಂತ ಜೋಶಿ ಆಯ್ಕೆಯಾದರು.

2006: ಸದನದಲ್ಲಿ ಪ್ರಶ್ನೆ ಕೇಳಲು ಲಂಚ ಪಡೆದ ಸದಸ್ಯರನ್ನು ಸಂಸತ್ತಿನಿಂದ ಉಚ್ಚಾಟಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಲೋಕಸಭಾಧ್ಯಕ್ಷ ಸೋಮನಾಥ ಚಟರ್ಜಿ ಮತ್ತು ಇತರರಿಗೆ ನೋಟಿಸ್ ಜಾರಿ ಮಾಡಿತು. ಬಹುಜನ ಸಮಾಜ ಪಕ್ಷದ ಸಂಸದ ರಾಜಾ ರಾಂ ಪಾಲ್ ಸಂಸತ್ತಿನ ನಿರ್ಧಾರವನ್ನು ಪ್ರಶ್ನಿಸಿ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿದರು.

2006: ಮಿಷೆಲ್ ಬಾಸೆಲೆಟ್ ಚಿಲಿಯ ನೂತನ ಅಧ್ಯಕ್ಷೆಯಾಗಿ ಆಯ್ಕೆಯಾದರು. ಚಿಲಿಯ ಪ್ರಥಮ ಮಹಿಳಾ ಅಧ್ಯಕ್ಷೆ ಎಂಬ ಹೆಗ್ಗಳಿಕೆಗೆ ಪಾತ್ರರಾದ ಇವರು ದಕ್ಷಿಣ ಅಮೆರಿಕದ ರಾಷ್ಟ್ರಗಳಲ್ಲಿ ಅಧ್ಯಕ್ಷ ಸ್ಥಾನವೊಂದಕ್ಕೆ ಆಯ್ಕೆಯಾಗಿರುವ ಎರಡನೆಯ ಮಹಿಳೆ.

2006: ಆಫ್ಘಾನಿಸ್ಥಾನದಲ್ಲಿ ಉಗ್ರರು ನಡೆಸಿದ ಬಾಂಬ್ ದಾಳಿಯಲ್ಲಿ ಕೆನಡಾದ ಹಿರಿಯ ರಾಜತಂತ್ರಜ್ಞ ಗಿನ್ ಬೆರ್ರಿ ಅಸು ನೀಗಿದರು.

1997: ಕಾರ್ಮಿಕ ಧುರೀಣ ದತ್ತಾ ಸಾಮಂತ್ ಅವರನ್ನು ಮುಂಬೈಯಲ್ಲಿ ಗುಂಡಿಕ್ಕಿ ಕೊಲೆಗೈಯಲಾಯಿತು.

1989: ಖ್ಯಾತ ಮಲಯಾಳಂ ಚಿತ್ರನಟ ಪ್ರೇಮ್ ನಜೀರ್ ನಿಧನರಾದರು. ಅವರು 600ಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕ ನಟನ ಪಾತ್ರ ವಹಿಸಿ ದಾಖಲೆ ನಿರ್ಮಿಸಿದ್ದರು.

1979: ಇರಾನಿನ ಶಹಾ ಮೊಹಮ್ಮದ್ ರೇಝಾ ಶಹಾ ಪಹ್ಲವಿ ಇರಾನ್ ತ್ಯಜಿಸಿದರು. ಅಯತ್ಲೊಲ ಖೊಮೇನಿ ಇರಾನಿನ ಆಡಳಿತವನ್ನು ತನ್ನ ವಶಕ್ಕೆ ತೆಗೆದುಕೊಂಡರು.

1963: ಕಲಾವಿದೆ ಪುಷ್ಪಲತಾ ಚಂದ್ರಹಾಸ ಜನನ.

1955: ಪುಣೆಯ ಖಡಕವಾಸ್ಲಾದಲ್ಲಿ ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ನ್ಯಾಷನಲ್ ಡಿಫೆನ್ಸ್ ಅಕಾಡೆಮಿ) ಆರಂಭಗೊಂಡಿತು.ಇದಕ್ಕೆ ಪಂಡಿತ್ ಜವಾಹರಲಾಲ್ ನೆಹರೂ ಅವರು 1949ರ ಅಕ್ಟೋಬರ್ 6ರಂದು ಶಿಲಾನ್ಯಾಸ ನೆರವೇರಿಸಿದ್ದರು.

1946: ಸೂತ್ರಧಾರ ನಾಟಕ ತಂಡದ ಸ್ಥಾಪಕ ಸದಸ್ಯ `ಸೂತ್ರಧಾರ ರಾಮಯ್ಯ' ಅವರು ವೆಂಕಟೇಶಯ್ಯ- ಮಂಗಳಮ್ಮ ದಂಪತಿಯ ಮಗನಾಗಿ ಕನಕಪುರ ತಾಲ್ಲೂಕಿನ ದೊಡ್ಡ ಆಲನಹಳ್ಳಿಯಲ್ಲಿ ಜನಿಸಿದರು.

1936: ಅಮೆರಿಕಾದ ರೇಸ್ ಟ್ರ್ಯಾಕಿನಲ್ಲಿ ಮೊತ್ತ ಮೊದಲ ಫೊಟೋ ಫಿನಿಶ್ ಕ್ಯಾಮರಾವನ್ನು ಅಳವಡಿಸಲಾಯಿತು. ಫ್ಲಾರಿಡಾದಲ್ಲಿ ಕುದುರೆಗಳ ಓಟ ಗಮನಿಸಿಲು `ಎಲೆಕ್ಟ್ರಿಕ್ ಕಣ್ಣು' ಬಳಸಲಾಯಿತು.

1935: ಭಾರತದ ಚಿತ್ರನಟ, ರಂಗನಟ, ಟಿವಿ ನಟ ಕಬೀರ್ ಬೇಡಿ ಹುಟ್ಟಿದ ದಿನ.

1924: ಕಲಾವಿದ ಬಸವ ಪ್ರಭು ನಿಂಗಪ್ಪ ಈಟಿ ಜನನ.

1901: ಭಾರತೀಯ ನ್ಯಾಯಾಧೀಶ, ಇತಿಹಾಸಕಾರ, ಸಮಾಜ ಹಾಗೂ ಆರ್ಥಿಕ ಸುಧಾರಕ ಮಹದೇವ ಗೋವಿಂದ ರಾನಡೆ (1842-1901) ನಿಧನರಾದರು.

1547: ರಷ್ಯಾದ ತ್ಸಾರ್ ದೊರೆಯಾಗಿ ಇವಾನ್ ನ ಸಿಂಹಾಸನಾರೋಹಣ ನಡೆಯಿತು. `ತ್ಸಾರ್' (Czar) ಎಂಬುದಾಗಿ ಹೆಸರು ಇಟ್ಟುಕೊಂಡ ಮೊದಲ ರಷ್ಯಾದ ಆಡಳಿತಗಾರ ಈತ.

No comments:

Post a Comment