Thursday, September 20, 2018

ಇಂದಿನ ಇತಿಹಾಸ History Today ಸೆಪ್ಟೆಂಬರ್ 20

ಇಂದಿನ ಇತಿಹಾಸ History Today ಸೆಪ್ಟೆಂಬರ್ 20

2018: ನವದೆಹಲಿ/ ಇಸ್ಲಾಮಾಬಾದ್: ಮಹತ್ವದ ಬೆಳವಣಿಗೆಯೊಂದರಲ್ಲಿ ಭಯೋತ್ಪಾದನೆ ಮತ್ತು ಕಾಶೀರ ವಿಷಯ ಸೇರಿದಂತೆ ಎಲ್ಲ ವಿವಾದಗಳ ಬಗ್ಗೆ ದ್ವಿಪಕ್ಷೀಯ ಮಾತುಕತೆ ಪುನಾರಂಭ ಕೋರಿ ಪಾಕಿಸ್ತಾನದ ನೂತನ ಪ್ರಧಾನಿ ಇಮ್ರಾನ್ ಖಾನ್ ಪತ್ರ ಬರೆದಿದ್ದು, ಬೆನ್ನಲ್ಲೇ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಮತ್ತು ಪಾಕ್ ವಿದೇಶಾಂಗ ವ್ಯವಹಾರಗಳ ಸಚಿವ ಶಾ ಮೆಹಮೂದ್ ಖುರೇಶಿ ಅವರ ಭೇಟಿಗೆ ಚಾಲನೆ ದೊರಕಿತು. ನ್ಯೂಯಾರ್ಕಿನಲ್ಲಿ ವಿಶ್ವಸಂಸ್ಥೆ ಮಹಾಧಿವೇಶನ ಸಂದರ್ಭದಲ್ಲಿ ಭಾರತ ಮತ್ತು ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ಸಚಿವರು ಭೇಟಿ ಮಾಡಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ದೃಢ ಪಡಿಸಿದರು. ‘ಪರಸ್ಪರ ಭೇಟಿಗೆ ನಾವು ಒಪ್ಪಿರುವ ಸಭೆಯನ್ನು ಸಂಭಾಷಣೆ ಎಂಬುದಾಗಿ ಗೊಂದಲ ಮಾಡಿಕೊಳ್ಳಬಾರದು. ಪಾಕಿಸ್ತಾನದ ಮನವಿ ಮೇರೆಗೆ ಸಭೆ ನಡೆಸಲು ಒಪ್ಪಲಾಗಿದೆ. ಭೇಟಿ ಯಾವಾಗ, ಎಲ್ಲಿ ನಡೆಯುತ್ತದೆ ಎಂಬುದನ್ನು ರಾಜತಾಂತ್ರಿಕ ಕಚೇರಿಗಳು ನಿರ್ಧರಿಸಲಿವೆ. ಸಭೆಯ ಕಾರ್ಯಸೂಚಿಯನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ ಎಂದು ಕುಮಾರ್ ನುಡಿದರುಏನಿದ್ದರೂ, ಪಾಕಿಸ್ತಾನದಲ್ಲಿ ಸಾರ್ಕ್ ಶೃಂಗ ಸಭೆ ನಡೆಸಲು ಸೂಕ್ತವಾದ ಪರಿಸರ ಇನ್ನೂ ಸೃಷ್ಟಿಯಾಗಿಲ್ಲ ಎಂದೂ ಕುಮಾರ್ ಸಂದರ್ಭದಲ್ಲಿ ಹೇಳಿದರು. ಇದಕ್ಕೆ ಮುನ್ನ ವರ್ಷ ಏಪ್ರಿಲ್ನಲ್ಲಿ ಸಾರ್ಕ್ ಶೃಂಗ ನಡೆಸುವ ಪಾಕಿಸ್ತಾನದ ಯತ್ನವನ್ನು ಭಾರತ ವಿರೋಧಿಸಿತ್ತು. ನೆರೆ ರಾಷ್ಟ್ರದ ಬೆಂಬಲದೊಂದಿಗೆ ಗಡಿಯಾಚೆಯಿಂದ ಭಯೋತ್ಪಾದಕ ದಾಳಿ ಮುಂದುವರೆದಿರುವುದನ್ನು ಅವರು ಉಲ್ಲೇಖಿಸಿದರುಉಭಯ ರಾಷ್ಟ್ರಗಳ ವಿದೇಶಾಂಗ ಸಚಿವರು ನ್ಯೂಯಾರ್ಕಿನಲ್ಲಿ ಸೆಪ್ಟೆಂಬರ್ ೨೭ರಂದು ಸಾರ್ಕ್ ಶೃಂಗ ಸಭೆಯಲ್ಲಿ ಪಾಲ್ಗೊಳ್ಳಲಿದ್ದು ಭೋಜನಕಾಲದಲ್ಲಿ ಭೇಟಿ ಮಾಡಲಿದ್ದಾರಾದರೂ, ಪ್ರತ್ಯೇಕವಾಗಿಯೇ ಭೇಟಿ ಮಾಡುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆದಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸುಷ್ಮಾ ಸ್ವರಾಜ್ ಅವರು ಸೆಪ್ಟೆಂಬರ್ ೨೪ರಂದು ನ್ಯೂಯಾರ್ಕಿಗೆ ತೆರಳಲಿದ್ದಾರೆ. ಅವರು ಮತ್ತು ಖುರೇಶಿ ಅವರು ವಿಶ್ವ ಸಂಸ್ಥೆ ಮಹಾಧಿವೇಶನಕ್ಕೆ ತಮ್ಮ ತಮ್ಮ ರಾಷ್ಟ್ರಗಳ ನಿಯೋಗಗಳನ್ನು ಒಯ್ಯಲಿದ್ದಾರೆ. ಇಮ್ರಾನ್ ಖಾನ್ ಅವರು ತಮ್ಮ ಪತ್ರದಲ್ಲಿ ಸಮಗ್ರ ಮಾತುಕತೆ ಪ್ರಕ್ರಿಯೆಗೆ ಚಾಲನೆ ನೀಡಲು ಕರೆ ನೀಡಿದ್ದರೂ ಭಾರತವು ಭಯೋತ್ಪಾದನೆ ನಿಗ್ರಹ ವಿಚಾರದಲ್ಲಿ ನೆರೆಯ ರಾಷ್ಟ್ರ ಯಾವ ರೀತಿಯಾಗಿ ಮುಂದುವರೆಯಲಿದೆ ಎಂಬ ಬಗ್ಗೆ ಭಾರತ ಗಮನ ಹರಿಸುವುದು ಎಂದು ಮೂಲಗಳು ಹೇಳಿದವು. ಮುಂಬೈ ಮೇಲಿನ ೨೬/೧೧ರ ದಾಳಿಯ ಹಿಂದಿನ ವ್ಯಕ್ತಿಗಳನ್ನು ಕಾನೂನು ಕ್ರಮಕ್ಕೆ ಒಳಪಡಿಸುವ ಪ್ರಕ್ರಿಯೆಯಂತಹ ಕ್ರಮಗಳು ಪಾಕಿಸ್ತಾನದ ಪ್ರಾಮಾಣಿಕತೆಗೆ ಸಾಕ್ಷ್ಯಾಧಾರಗಳಾಗಲಿವೆ ಎಂದು ಮೂಲಗಳು ಅಭಿಪ್ರಾಯ ಪಟ್ಟಿವೆ. ಉಭಯ ದೇಶಗಳೂ ವಿದೇಶಾಂಗ ಸಚಿವರ ಭೇಟಿ ಬಗ್ಗೆ ಈವರೆಗೆ ಅಧಿಕೃತವಾಗಿ ಯಾವುದೇ ಮಾಹಿತಿ ನೀಡಿಲ್ಲ. ಇಮ್ರಾನ್ ಖಾನ್ ಪತ್ರ: ಭಯೋತ್ಪಾದನೆ ಮತ್ತು ಕಾಶ್ಮೀರ ವಿಷಯವೂ ಸೇರಿದಂತೆ ಬಾಂಧವ್ಯಕ್ಕೆ ಸವಾಲೊಡ್ಡಿರುವ ಎಲ್ಲ ಪ್ರಮುಖ ವಿಷಯಗಳ ಬಗ್ಗೆ ದ್ವಿಪಕ್ಷೀಯ ಮಾತುಕತೆ ಪುನಾರಂಭವನ್ನು ಕೋರಿ ಪಾಕಿಸ್ತಾನದ ನೂತನ ಪ್ರಧಾನಿ ಇಮ್ರಾನ್ ಖಾನ್ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವುದಾಗಿ ಇಸ್ಲಾಮಾಬಾದಿನ ವಿದೇಶಾಂಗ ಕಚೇರಿ ಮುನ್ನ ತಿಳಿಸಿತ್ತು. ಸೆಪ್ಟೆಂಬರ್ ೧೪ರ ದಿನಾಂಕದ ಪತ್ರದಲ್ಲಿ ರಾಜಕಾರಣಿಯಾಗಿ ಪರಿವರ್ತನೆಗೊಂಡಿರುವ ಕ್ರಿಕೆಟಿಗ ಖಾನ್ ಅವರು ತಿಂಗಳು ನ್ಯೂಯಾರ್ಕಿನಲ್ಲಿ ನಡೆಯಲಿರುವ ವಿಶ್ವಸಂಸ್ಥೆ ಮಹಾಧಿವೇಶನ ಸಂದರ್ಭದಲ್ಲಿ ಉಭಯ ದೇಶಗಳ ವಿದೇಶಾಂಗ ಸಚಿವರ ಮಾತುಕತೆ ನಡೆಸುವ ಬಗ್ಗೆ ಪ್ರಸ್ತಾಪ ಮಾಡಿದ್ದರು.  ‘ನಮ್ಮ ಎರಡು ರಾಷ್ಟ್ರಗಳ ಮಧ್ಯೆ ಶಾಂತಿ ಸ್ಥಾಪನೆಯ ಪರಸ್ಪರ ಆಶಯದ ಹಿನ್ನೆಲೆಯಲ್ಲಿ ನಾನು ವಿದೇಶಾಂಗ ಸಚಿವ ಮಖ್ದೂಮ್ ಶಾ ಮೆಹಮೂದ್ ಖುರೇಶಿ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರು ಸಾರ್ಕ್ ವಿದೇಶಾಂಗ ಸಚಿವರ ಅನೌಪಚಾರಿಕ ಭೇಟಿಗೆ ಮುನ್ನವೇ ಮುಂಬರುವ ವಿಶ್ವಸಂಸ್ಥೆ ಮಹಾಧಿವೇಶನದ ಸಂದರ್ಭದಲ್ಲಿ ನ್ಯೂಯಾರ್ಕಿನಲ್ಲಿ ಭೇಟಿ ಮಾಡಬೇಕೆಂಬ ಪ್ರಸ್ತಾವವನ್ನು ತಾವು ಮುಂದಿಡುತ್ತಿರುವುದಾಗಿ ಖಾನ್ ಪತ್ರದಲ್ಲಿ ತಿಳಿಸಿದ್ದರು.  ‘ಪಾಕಿಸ್ತಾನ ಮತ್ತು ಭಾರತ ನಿರಾಕರಿಸಲಾಗದ ಬಾಂಧವ್ಯದ ಸವಾಲು ಎದುರಿಸುತ್ತಿವೆ ಎಂದು ಪ್ರಧಾನಿ ಮೋದಿ ಅವರು ಆಗಸ್ಟ್ ೧೮ರ ಪತ್ರಕ್ಕೆ ಪ್ರತಿಕ್ರಿಯಿಸುತ್ತಾ ಅವರು ಹೇಳಿದ್ದರುಖಾನ್ ಅವರಿಗೆ ಬರೆದ ಪತ್ರದಲ್ಲಿ ಮೋದಿಯವರುಪಾಕಿಸ್ತಾನದ ಜೊತೆಗೆ ಭಯೋತ್ಪಾದನೆ ಮುಕ್ತ ದಕ್ಷಿಣ ಏಷ್ಯಕ್ಕಾಗಿ ಶ್ರಮಿಸುವ ಅಗತ್ಯಕ್ಕೆ ಒತ್ತು ನೀಡುವಂತಹ ಅರ್ಥಪೂರ್ಣ ಮತ್ತು ಧನಾತ್ಮಕ ತೊಡಗಿಸಿಕೊಳ್ಳುವಿಕೆಗೆ ಭಾರತದ ಬದ್ಧತೆಯ  ಸಂದೇಶವನ್ನು ನೀಡಿದ್ದರು.
ಪ್ರಧಾನಿಯವರು (ಇಮ್ರಾನ್ ಖಾನ್) ಪ್ರಧಾನಿ ಮೋದಿಯವರಿಗೆ ಧನಾತ್ಮಕ ಸ್ಫೂರ್ತಿಯೊಂದಿಗೆ ಅವರ ಭಾವನೆಗಳಿಗೆ ಸ್ಪಂದಿಸಿದ್ದಾರೆ. ನಾವು ಮಾತುಕತೆ ನಡೆಸಿ ಎಲ್ಲ ವಿಷಯಗಳನ್ನೂ ಇತ್ಯರ್ಥ ಪಡಿಸಿಕೊಳ್ಳೋಣ. ನಾವು ಭಾರತದಿಂದ ಔಪಚಾರಿಕ ಪ್ರತಿಕ್ರಿಯೆಯನ್ನು ಎದುರುನೋಡುತ್ತಿದ್ದೇವೆ ಎಂದು ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಮೊಹಮ್ಮದ್ ಫೈಸಲ್ ಹೇಳಿದರು.  ‘ಏನಿದ್ದರೂ, ನಮ್ಮ ಜನರಿಗಾಗಿ, ವಿಶೇಷವಾಗಿ ಭವಿಷ್ಯದ ತಲೆಮಾರುಗಳಿಗಾಗಿ ಜಮ್ಮು ಮತ್ತು ಕಾಶ್ಮೀರ ವಿವಾದ, ಭಿನ್ನಾಭಿಪ್ರಾಯಗಳನ್ನು ತೊಡೆದುಹಾಕಿ ಪರಸ್ಪರ ಅನುಕೂಲಕರವಾದ ಫಲಿತಾಂಶಕ್ಕಾಗಿ ಎಲ್ಲ ವಿಷಯಗಳನ್ನೂ ಶಾಂತಿಯುತವಾಗಿ ಇತ್ಯರ್ಥ ಪಡಿಸಿಕೊಳ್ಳುವ ಬಾಧ್ಯತೆ ನಮಗಿದೆ ಎಂದು ಖಾನ್ ತಮ್ಮ ಪತ್ರದಲ್ಲಿ ಬರೆದರು. ಪಾಕಿಸ್ತಾನದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸುವ ಹೊತ್ತಿನಲ್ಲಿ ತಮ್ಮ ಅಭಿನಂದನೆ ಮತ್ತು ಶುಭಾಶಯಗಳನ್ನು ಕೋರಿದ್ದಕ್ಕಾಗಿ ಪ್ರಧಾನಿ ಮೋದಿ ಅವರಿಗೆ ಪಾಕಿಸ್ತಾನ್ ತೆಹ್ರೀಕ್--ಇನ್ಸಾಫ್ (ಪಿಟಿಐ) ಪಕ್ಷದ ಮುಖ್ಯಸ್ಥ ಧನ್ಯವಾದಗಳನ್ನು ಸಲ್ಲಿಸಿದರು.  ‘ಉಭಯ ಸಚಿವರು (ಖುರೇಶಿ ಮತ್ತು ಸ್ವರಾಜ್) ಮುಂದುವರೆಯಬೇಕಾದ ದಾರಿಯನ್ನು ಶೋಧಿಸಬಹುದು. ಇಸ್ಲಾಮಾಬಾದಿನಲ್ಲಿ ನಡೆಯಲಿರುವ ಸಾರ್ಕ್ ಶೃಂಗ ಸಭೆಯು ನಿಮಗೆ ಪಾಕಿಸ್ತಾನಕ್ಕೆ ಭೇಟಿ ನೀಡುವ ಮತ್ತು ಸ್ಥಗಿತಗೊಂಡಿರುವ ಮಾತುಕತೆ ಪ್ರಕ್ರಿಯೆಯ ಪುನಾರಂಭದ ಅವಕಾಶವನ್ನು ಒದಗಿಸಲಿದೆ ಎಂದು ಖಾನ್ ಬರೆದರು. ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ತಮ್ಮ ಪತ್ರದಲ್ಲಿ ಸ್ಮರಿಸಿದ ಇಮ್ರಾನ್ ಖಾನ್, ದ್ವಿಪಕ್ಷೀಯ ಬಾಂಧವ್ಯ ವೃದ್ಧಿಯ ನಿಟ್ಟಿನಲ್ಲಿ ಮತ್ತು ಸಾರ್ಕ್ ದೇಶಗಳ ಅಭಿವೃದ್ಧಿಗಾಗಿ ವಾಜಪೇಯಿ ಅವರು ನೀಡಿದ್ದ ಕೊಡುಗೆಯನ್ನು ಉಲ್ಲೇಖಿಸಿದರು. ೨೦೧೬ರ ಜನವರಿಯಲ್ಲಿ ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪುಗಳು ಭಾರತದ ಸೇನಾ ನೆಲೆಗಳ ಮೇಲೆ ಭಯೋತ್ಪಾದಕ ದಾಳಿ ನಡೆಸಿದ ಬಳಿಕ ಭಾರತ ಮತ್ತು ಪಾಕಿಸ್ತಾನದ ಬಾಂಧವ್ಯ ಬಿಗಡಾಯಿಸಿದೆ. ದಾಳಿಗಳನ್ನು ಅನುಸರಿಸಿ ಭಾರತವು ತಾನು ಪಾಕಿಸ್ತಾನದ ಜೊತೆ ಮಾತುಕತೆ ನಡೆಸುವುದಿಲ್ಲ ಎಂದು ಪ್ರಕಟಿಸಿತ್ತು. ಭಯೋತ್ಪಾದನೆ ಮತ್ತು ಮಾತುಕತೆ ಕೈ ಕೈ ಹಿಡಿದುಕೊಂಡು ಸಾಗಲು ಸಾಧ್ಯವಿಲ್ಲ ಎಂದು ಭಾರತ ಹೇಳಿತ್ತುಭಾರತದ ಉರಿ ಸೇನಾ ನೆಲೆಯ ಮೇಲೆ ನಡೆದಿದ್ದ ಭಯೋತ್ಪಾದಕ ದಾಳಿಯಲ್ಲಿ ಭಾರತದ ೧೮ ಮಂದಿ ಯೋಧರು ಹುತಾತ್ಮರಾಗಿದ್ದರು. ಘಟನೆಯನ್ನು ಅನುಸರಿಸಿ ೨೦೧೬ರ ನವೆಂಬರಿನಲ್ಲಿ ಇಸ್ಲಾಮಾಬಾದಿನಲ್ಲಿ ನಡೆಯಬೇಕಾಗಿದ್ದ ಸಾರ್ಕ್ ಶೃಂಗ ಸಭೆಯನ್ನು ತಾನು ಬಹಿಷ್ಕರಿಸುವುದಾಗಿ ಭಾರತ ಘೋಷಿಸಿತ್ತು. ಬಾಂಗ್ಲಾದೇಶ, ಭೂತಾನ್ ಮತ್ತು ಆಫ್ಘಾನಿಸ್ಥಾನ ಕೂಡಾ ಶೃಂಗ ಸಭೆಯಲ್ಲಿ ಪಾಲ್ಗೊಳ್ಳಲು ನಿರಾಕರಿಸಿದ ಬಳಿಕ ಸಾರ್ಕ್ ಶೃಂಗ ಸಭೆಯನ್ನು ರದ್ದು ಪಡಿಸಬೇಕಾಗಿ ಬಂದಿತ್ತು.

2018: ನವದೆಹಲಿ: ಎನ್ಡಿಎ ಸರ್ಕಾರದ ವಿರುದ್ಧ ರಫೇಲ್ ಯುದ್ಧ ವಿಮಾನ ವ್ಯವಹಾರ ಮತ್ತು ಮರುಪಾವತಿಯಾಗದ ಬ್ಯಾಂಕ್ ಆಸ್ತಿಗಳ ಕುರಿತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಮಾಡುತ್ತಿರುವ ಟೀಕೆಗಳನ್ನು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರುಕೋಡಂಗಿ ರಾಜಕುಮಾರನ ಸುಳ್ಳುಗಳ ಪ್ರಚಾರ ಅಭಿಯಾನ ಎಂದು ಖಂಡಿಸಿದರು. ‘ಕೋಡಂಗಿ ರಾಜಕುಮಾರ ಸುಳ್ಳುಗಳು ಶೀರ್ಷಿಕೆಯಲ್ಲಿ ತಮ್ಮ ಫೇಸ್ ಬುಕ್ ಬ್ಲಾಗ್ನಲ್ಲಿ ಬರೆದ ಲೇಖನದಲ್ಲಿ ಅರುಣ್ ಜೇಟ್ಲಿ ಅವರುಸುಳ್ಳಿನ ಸೃಷ್ಟಿ ಮತ್ತು ಅದನ್ನೇ ಹಲವಾರು ಬಾರಿ ಪುನರಾವರ್ತಿಸುವುದು ಕಾಂಗ್ರೆಸ್ ಮುಖ್ಯಸ್ಥನತಂತ್ರವಾಗಿದೆ ಎಂದು ಹೇಳಿದರು. ‘ನೀವು ರಫೇಲ್ ವ್ಯವಹಾರದ ಬಗ್ಗೆ ಸುಳ್ಳು ಹೇಳಿದಿರಿ, ನೀವು ಮರು ಪಾವತಿಯಾಗದ ಸಾಲಗಳ (ಎನ್ ಪಿಎ) ಬಗ್ಗೆ ಸುಳ್ಳು ಹೇಳಿದಿರಿಸುಳ್ಳುಗಳನ್ನು ಸೃಷ್ಟಿಸುವ ನಿಮ್ಮ ಪ್ರವೃತ್ತಿಯು ಈಗ ಸುಳ್ಳುಗಳಿಗೆ ಆದ್ಯತೆ ನೀಡುವಂತಹ ವ್ಯಕ್ತಿಗಳು ಸಾರ್ವಜನಿಕ ಭಾಷಣಗಳ ಭಾಗವಾಗಿರಬೇಕೆ ಎಂಬ ಪ್ರಶ್ನೆ ಏಳುವಂತೆ ಮಾಡಿದೆ ಎಂದು ಜೇಟ್ಲಿ ಬರೆದರು. ‘ಸಾರ್ವಜನಿಕ ಸಭೆಗಳಲ್ಲಿ ಮತ್ತು ಮಾಧ್ಯಮ ಸಂವಾದಗಳಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಬ್ಯಾಂಕುಗಳ ಮರುಪಾವತಿಯಾಗದ ಸಾಲಗಳನ್ನು ಪ್ರಸ್ತಾಪಿಸಿ ಸರ್ಕಾರವು ಬೃಹತ್ ಉದ್ಯಮಿಗಳನ್ನು ಬಿಟ್ಟಿದೆ ಆದರೆ ರೈತರನ್ನು ಬಿಡುವುದಿಲ್ಲ ಎಂದು ಆಪಾದಿಸುತ್ತಾರೆ. ಮಧ್ಯಪ್ರದೇಶದಲ್ಲಿ ವಾರ ಪಕ್ಷದ ಪ್ರಚಾರ ಅಭಿಯಾನದಲ್ಲಿ ಗಾಂಧಿಯವರು ಆರ್ಥಿಕ ತಜ್ಞರು ತಮಗೆ ಏನು ಹೇಳಿದ್ದಾರೆ ಎಂಬದನ್ನೂ ಮರೆತು ರೈತರ ಸಾಲಮನ್ನಾ ಭವರಸೆ ನೀಡಿದ್ದಾರೆ ಎಂದು ಜೇಟ್ಲಿ ಟೀಕಿಸಿದರು. ಸಾರ್ವಜನಿಕ ಭಾಷಣವು ಗಂಭೀರವಾದ ಚಟುವಟಿಕೆ ಎಂದು ಹಣಕಾಸು ಸಚಿವರು ಹೇಳಿದರು.  ‘ಇದು ನಗುವಂತಹ ಸವಾಲು ಅಲ್ಲ. ಇದು ಗಂಭೀರ ಚಟುವಟಿಕೆಯನ್ನು ಅಪ್ಪಿಕೊಳ್ಳುವುದಕ್ಕೆ, ಕಣ್ಣು ಮಿಟುಕಿಸುವುದಕ್ಕೆ ಅಥವಾ ಸುಳ್ಳುಗಳ ಪುನರಾವರ್ತನೆಯ ಮಟ್ಟಕ್ಕೆ ಇಳಿಸಿದೆ. ಸಾರ್ವಜನಿಕ ಭಾಷಣವುಕೋಡಂಗಿ ರಾಜಕುಮಾರ ಸುಳ್ಳುಗಳಿಂದ ಮಲಿನಗೊಳ್ಳಲು ಅವಕಾಶ ಕೊಡಬೇಕೆ ಎಂಬ ಬಗ್ಗೆ  ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವು ಗಂಭೀರವಾಗಿ ಆತ್ಮಾವಲೋಕನ ಮಾಡಬೇಕಾಗಿದೆ ಎಂದು ಸಚಿವರು ಬರೆದರು.

2018: ನವದೆಹಲಿ: ಕೇರಳದ ಕ್ರೈಸ್ತ ಸನ್ಯಾಸಿನಿ ಮೇಲಿನ ಅತ್ಯಾಚಾರ ಆರೋಪ ಪ್ರಕರಣದಲ್ಲಿ ಸಿಲುಕಿರುವ ಸಿರಿಯನ್ ಮಲಬಾರ್ ಚರ್ಚ್ ಕ್ಯಾಥೋಲಿಕ್ ಬಿಷಪ್ ಫ್ರಾಂಕೋ ಮುಲಕ್ಕಲ್ ಅವರು ತಾತ್ಕಾಲಿಕವಾಗಿ ಹುದ್ದೆಯಿಂದ ಕೆಳಗಿಳಿಯುವ ಇಚ್ಛೆಯನ್ನು ವ್ಯಕ್ತ ಪಡಿಸಿ ಪೋಪ್ ಅವರಿಗೆ ಪತ್ರ ಬರೆದ ನಾಲ್ಕು ದಿನಗಳ ಬಳಿಕ ಅವರ ಮನವಿಯನ್ನು ವ್ಯಾಟಿಕನ್ ಅಂಗೀಕರಿಸಿತು.  ‘ಬಿಷಪ್ ಫ್ರಾಂಕೋ ಮುಲಕ್ಕಲ್ ಅವರನ್ನು ತಾತ್ಕಾಲಿಕವಾಗಿ ಪ್ಯಾಸ್ಟೋರಲ್ ಹೊಣೆಗಾರಿಕೆಯಿಂದ ವ್ಯಾಟಿಕನ್ ಬಿಡುಗಡೆ ಮಾಡಿದೆ ಎಂದು ಕ್ಯಾಥೋಲಿಕ್ ಬಿಷಪ್ ಕಾನ್ಫರೆನ್ಸ್ ಆಫ್ ಇಂಡಿಯಾ (ಸಿಬಿಸಿ) ಹೇಳಿಕೆಯೊಂದರಲ್ಲಿ ತಿಳಿಸಿತು. ಬಾಂಬೆಯ ಆರ್ಕ್ ಡಯೋಸಿಸ್ ಬಿಷಪ್ ಎಮಿರಿಟಸ್ ಅಗ್ನೆಲೊ ರುಫಿನೋ ಗ್ರೇಸಿಯಸ್ ಅವರನ್ನು ಡಯೋಸಿಸ್ ಆಫ್ ಜಲಂಧರ್ ಅಪೊಸ್ಟೋಲಿಕ್ ಆಡಳಿತಗಾರರಾಗಿ ತತ್ ಕ್ಷಣದಿಂದ ಜಾರಿಗೆ ಬರುವಂತೆ ಪೋಪ್ ಅವರು ನೇಮಿಸಿದ್ದಾರೆ ಎಂದು ಸಿಬಿಸಿಐ ಹೇಳಿಕೆ ತಿಳಿಸಿತು. ಹಿರಿಯ ಕ್ಯಾಥೋಲಿಕ್ ಧಾರ್ಮಿಕ ಮುಖ್ಯಸ್ಥನನ್ನು ವಿಶೇಷ ತನಿಖಾ ತಂಡವು (ಎಸ್ ಐಟಿ) ಈದಿನ ಎರಡನೇ ದಿನವೂ ಪ್ರಶ್ನಿಸುತ್ತಿರುವುದರ ಮಧ್ಯೆಯೇ ವ್ಯಾಟಿಕನ್ ನಿರ್ಧಾರ ಹೊರಬಿದ್ದಿತು. ಮುಲಕ್ಕಲ್ ವಿರುದ್ಧದ ಆರೋಪಿತ ಅತ್ಯಾಚಾರ ಪ್ರಕರಣದ ತನಿಖೆ ನಡೆಸುತ್ತಿರುವ ಕೇರಳ ಪೊಲೀಸ್ ಎಸ್ ಐಟಿ ತಂಡವು ಮುಲಕ್ಕಲ್ ಅವರನ್ನು ಈದಿನ ಪುನಃ ಪ್ರಶ್ನಿಸಿತು. ಫ್ರಾಂಕೋ ಮುಲಕ್ಕಲ್ ಅವರನ್ನು ಬಂಧಿಸುವ ಬಗ್ಗೆ ಒಂದೆರಡು ದಿನಗಳಲ್ಲಿ ನಿರ್ಧರಿಸುವುದಾಗಿ ರಾಜ್ಯ ಪೊಲಿಸ್ ಮುಖ್ಯಸ್ಥರು ಹೇಳಿದರು. ಮಿಷನರೀಸ್ ಆಫ್ ಜೇಸಸ್ ಜಲಂಧರ್ ಡಯೋಸಿಸ್ ಬಿಷಪ್ ಮುಲಕ್ಕಲ್ ಅವರನ್ನು ಡಿವೈಎಸ್ಪಿ ಕೆ. ಸುಭಾಶ್ ನೇತೃತ್ವದ ಎಸ್ ಐಟಿ ತಂಡವು ಬುಧವಾರ ಏಳು ಗಂಟೆಗಳ ಕಾಲ ಪ್ರಶ್ನಿಸಿತ್ತು. ಮಧ್ಯೆ ಮುಲಕ್ಕಲ್ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿ ವಿವಿಧ ಕ್ಯಾಥೋಲಿಕ್ ಸುಧಾರಣಾ ಸಂಘಟನೆಗಳು ಮತ್ತು ಕ್ರೈಸ್ತ ಸನ್ಯಾಸಿನಿಯರ ಸಮೂಹ ನಡೆಸುತ್ತಿರುವ ಪ್ರತಿಭಟನೆ ಈದಿನ ೧೩ನೇ ದಿನವನ್ನು ಪ್ರವೇಶಿಸಿತುಸೆಪ್ಟೆಂಬರ್ ೧೬ನೇ ದಿನಾಂಕದ ಪತ್ರದಲ್ಲಿ ಬಿಷಪ್ ಅವರು, ಕೇರಳಕ್ಕೆ ಹಲವಾರು ಬಾರಿ ಪ್ರವಾಸ ಮಾಡಬೇಕಾಗಿ ಬಂದಿರುವುದರಿಂದ ತಾವು ಡಯೋಸಿಸ್ ಹೊಣೆಗಾರಿಕೆಯಿಂದ ಮುಕ್ತರಾಗಬಯಸಿರುವುದಾಗಿ ತಿಳಿಸಿ ಅದಕ್ಕೆ ಅನುಮತಿ ನೀಡುವಂತೆ ಕೋರಿದ್ದರು. ಪತ್ರವನ್ನು ಭಾರತದಲ್ಲಿನ ಪೋಪ್ ಅವರ ಪ್ರತಿನಿಧಿಗೆ ಹಸ್ತಾಂತರಿಸಲಾಗಿತ್ತು. ವಿವಾದದ ಮೂಲಬಿಂದುವಾಗಿರುವ ಕ್ರೈಸ್ತ ಸನ್ಯಾಸಿನಿ ನ್ಯಾಯಕ್ಕಾಗಿ ತುರ್ತಾಗಿ ಮಧ್ಯಪ್ರವೇಶ ಮಾಡುವಂತೆ ಕೋರಿ ವ್ಯಾಟಿಕನ್ ಗೆ ಪತ್ರ ಬರೆದಿದ್ದರು ಮತ್ತು ಜಲಂಧರ್ ಡಯೋಸಿಸ್ ಮುಖ್ಯಸ್ಥ ಹುದ್ದೆಯಿಂದ ಬಿಷಪ್ ಅವರನ್ನು ಕಿತ್ತು ಹಾಕಬೇಕು ಎಂದು ಆಗ್ರಹಿಸಿದ್ದರು. ತನ್ನ ನೋವನ್ನು ಬಹಿರಂಗ ಪಡಿಸಲು ಸ್ವತಃ ತಾನೇ ಮುಂದಾಗಿರುವಾಗಸತ್ಯದ ಬಗ್ಗೆ ಚರ್ಚ್ ಕಣ್ಮುಚ್ಚಿಕೊಂಡಿರುವುದು ಏಕೆ?’ ಎಂದು ಅವರು ಪ್ರಶ್ನಿಸಿದ್ದರು. ಬಿಷಪ್ ಮುಲಕ್ಕಲ್ ಅವರು ತಮ್ಮ ವಿರುದ್ಧದ ಪ್ರಕರಣದಸಮಾಧಿಗಾಗಿ ರಾಜಕೀಯ ಮತ್ತು ಹಣ ಬಲವನ್ನು ಬಳಸುತ್ತಿದ್ದಾರೆ ಎಂದು ಆಕೆ ಆಪಾದಿಸಿದ್ದರು. ೨೦೧೪ರಿಂದ ೨೦೧೬ರ ನಡುವಣ ಅವಧಿಯಲ್ಲಿ ಚರ್ಚ್ ಮುಖ್ಯಸ್ಥ ತಮ್ಮ ಮೇಲೆ ಪದೇ ಪದೇ ಲೈಂಗಿಕ ಹಲ್ಲೆ ನಡೆಸಿದ್ದುದಾಗಿ ಕ್ರೈಸ್ತ ಸನ್ಯಾಸಿನಿ ಆರೋಪಿಸಿದ್ದರು. ಏನಿದ್ದರ್ ಬಿಷಪ್ ಮುಲಕ್ಕಲ್ ಅವರು ಆಪಾದನೆಗಳನ್ನುಬುಡರಹಿತ ಮತ್ತು ಕಟ್ಟುಕಥೆ ಎಂದು ಹೇಳಿ ನಿರಾಕರಿಸಿದ್ದರು. ತನಗೆ ಅನುಕೂಲಗಳನ್ನು ಮಾಡಿಕೊಡುವಂತೆ ಆಕೆ ಮಾಡಿದ್ದ ಬೇಡಿಕೆಯನ್ನು ನಿರಾಕರಿಸಿದ ಕಾರಣ ಆಕೆ ತಮ್ಮ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಬಿಷಪ್ ಪ್ರತಿಪಾದಿಸಿದ್ದರು.

2018: ಪಣಜಿ: ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗೋವಾ ಮುಖ್ಯಮಂತ್ರಿ ಮನೋಹರ ಪರಿಕ್ಕರ್ ಅವರ ಆರೋಗ್ಯ ಸುಧಾರಣೆಗಾಗಿ ರಾಜ್ಯ ೧೦ ಮಸೀದಿಗಳ ಮೌಲಾನರು ಬಿಜೆಪಿಯ ದಕ್ಷಿಣ ಗೋವಾ ಕಚೇರಿಯಲ್ಲಿಕುರಾನ್ ಖವಾನಿ ಧಾರ್ಮಿಕ ವಿಧಿಯನ್ನು ನೆರವೇರಿಸಿದರು. ಬಿಜೆಪಿಯ ಅಲ್ಪಸಂಖ್ಯಾತ ಮೋರ್ಚಾ ಕಾರ್ಯಕ್ರಮವನ್ನು ಸಂಘಟಿಸಿತ್ತು. ಮೇಧೋಜೀರಕ ಗ್ರಂಥಿಗೆ (ಪ್ಯಾಂಕ್ರಿಯಾಸ್) ಸಂಬಂಧಿಸಿದ ಸಮಸ್ಯೆಗಾಗಿ ಪರಿಕ್ಕರ್ ಅವರು ದೆಹಲಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಾವು ಗೋವಾದ್ಯಂತದ ಮೌಲಾನಾರನ್ನುಕುರಾನ್ ಖವಾನಿ ನಡೆಸುವ ಸಲುವಾಗಿ ಬಿಜೆಪಿ ಕೇಂದ್ರ ಕಚೇರಿಗೆ ಕರೆದಿದ್ದೆವು. ತ್ವರಿತ ಆರೋಗ್ಯ ಸುಧಾರಣೆ ಸಲುವಾಗಿ ಅಲ್ಲಾಹ್ ಕೃಪೆಗಾಗಿ ವಿಧಿಯನ್ನು ನೆರವೇರಿಸಲಾಗುತ್ತದೆ ಎಂದು ಗೋವಾ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷ  ಶೇಖ್ ಜಿನಾ ಹೇಳಿದರು. ಪರಿಕ್ಕರ್ ಅವರು ಹಜ್ ಪ್ರವಾಸ, ಹಜ್ ಸದನ ನಿರ್ಮಾಣ, ಅಲ್ಪಸಂಖ್ಯಾತರ ಶಿಕ್ಷಣ ಸೇರಿದಂತೆ ಗೋವಾದ ಮುಸ್ಲಿಮರ ಹಲವಾರು ಸಮಸ್ಯೆಗಳ ನಿವಾರಣೆಗಾಗಿ ಶ್ರಮಿಸಿದ್ದಾರೆ ಎಂದು ಅವರು ನುಡಿದರು.

2018: ನವದೆಹಲಿ: ಬಿಜೆಪಿ ವಿರುದ್ಧ ರಾಷ್ಟ್ರವ್ಯಾಪಿ ಮೈತಿಕೂಟ ರಚಿಸುವ ಕಾಂಗ್ರೆಸ್ ಯತ್ನಕ್ಕೆ ಛತ್ತೀಸ್ಗಢದಲ್ಲಿ ಹಿನ್ನಡೆಯಾಯಿತು.  ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ ಅವರು ಮುಂಬರುವ ಛತ್ತೀಸ್ಗಢ ವಿಧಾನಸಭೆ ಚುನಾವಣೆಗಳಿಗಾಗಿ ಅಜಿತ್ ಜೋಗಿ ಅವರ ಜನತಾ ಕಾಂಗ್ರೆಸ್ ಜೊತೆ ಕೈಜೋಡಿಸಲು ನಿರ್ಧರಿಸಿದ್ದು, ’ಮಾಯಾ ಜಾಲಕ್ಕೆ ಕಾಂಗ್ರೆಸ್ ಸುಸ್ತಾಯಿತು. ತಮ್ಮ ಮೈತ್ರಿಕೂಟವು ಅಧಿಕಾರಕ್ಕೆ ಬಂದರೆ ಅಜಿತ್ ಜೋಗಿ ಅವರು ಛತ್ತೀಸ್ ಗಡದ ಮುಖ್ಯಮಂತ್ರಿಯಾಗಲಿದ್ದಾರೆ ಎಂದೂ ಬಿಎಸ್ ಪಿ ಪ್ರಕಟಿಸಿತು. ‘ಛತ್ತೀಸ್ ಗಢದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜನತಾ ಕಾಂಗ್ರೆಸ್ ಜೊತೆಗೆ ಮೈತ್ರಿಕೂಟ ರಚಿಸಲು ಬಹುಜನ ಸಮಾಜ ಪಕ್ಷವು ನಿರ್ಧರಿಸಿದೆ. ಬಿಎಸ್ ಪಿಯು ೩೫ ಸ್ಥಾನಗಳಲ್ಲಿ ಸ್ಪರ್ಧಿಸಲಿದ್ದು, ಜನತಾ ಕಾಂಗ್ರೆಸ್ ಛತ್ತೀಸ್ ಗಢ ೫೫ ಸ್ಥಾನಗಳಿಗೆ ಸ್ಪರ್ಧಿಸಲಿದೆ. ನಾವು ಗೆದ್ದರೆ, ಅಜಿತ್ ಜೋಗಿ ಅವರು ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ ಹೇಳಿದರುತಮ್ಮ ಪಕ್ಷಕ್ಕೆ ಮರ್ಯಾದೆಯುತವಾದ ಸ್ಥಾನಗಳನ್ನು ನೀಡಲು ಸಿದ್ಧವಿರುವ ಪಕ್ಷಗಳ ಜೊತೆ ಮಾತ್ರ ಬಿಎಸ್ ಪಿಯು ಮೈತ್ರಿ ಮಾಡಿಕೊಳ್ಳುವುದು ಎಂದೂ ಮಾಯಾವತಿ ಪುನರುಚ್ಚರಿಸಿದರು.  ‘ಮೈತ್ರಿಕೂಟದ ಅಂಗ ಪಕ್ಷವು ದಲಿತರು ಮತ್ತು ಆದಿವಾಸಿಗಳ ಉದ್ಧಾರಕ್ಕಾಗಿ ಕೆಲಸ ಮಾಡುತ್ತಿರಬೇಕು ಎಂದೂ ಮಾಯಾವತಿ ನುಡಿದರು. ಏನಿದ್ದರೂ, ಮೈತ್ರಿ ಮಾತುಕತೆಗಾಗಿ ತಾವು ಬಿಎಸ್ ಪಿಯನ್ನು ಸಂಪರ್ಕಿಸಿತ್ತು ಎಂದು ಕಾಂಗ್ರೆಸ್ ಪ್ರತಿಪಾದಿಸಿತು.  ‘ಬಿಎಸ್ ಪಿಯಿಂದ ನಮಗೆ ಮೈತ್ರಿ ಪ್ರಸ್ತಾಪ ಬಂದಿತ್ತು. ಆದರೆ ಕಾಂಗ್ರೆಸ್ ಪಕ್ಷವು ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸುವುದು ಮತ್ತು ಸರ್ಕಾರ ರಚಿಸುವುದು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮತ್ತು ಛತ್ತೀಸ್ ಗಢದ ಉಸ್ತುವಾರಿ ಹೊತ್ತಿರುವ ಪಿಎಲ್ ಪೂರ್ಣಿಯಾ ಹೇಳಿದರು. ಛತ್ತೀಸ್ ಗಢದಲ್ಲಿ ದಲಿತ ಸಮುದಾಯವು ಜಂಜ್ಗೀರ್-ಚಂಪಾ, ರಾಯ್ ಗಢ ಮತ್ತು ಬಸ್ತಾರ್ ಗಳಂತಹ ಪ್ರದೇಶಗಳಲ್ಲಿ ಚುನಾವಣಾ ಫಲಿತಾಂಶ ನಿರ್ಧರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಛತ್ತೀಸ್ ಗಢದಲ್ಲಿ ಒಟ್ಟು ಜನಸಂಖ್ಯೆಯ ಶೇಕಡಾ ೧೧.೬ರಷ್ಟು ಭಾಗ ದಲಿತರರಾಗಿದ್ದಾರೆರಮಣ್  ಸಿಂಗ್ ನೇತೃತ್ವದ ಬಿಜೆಪಿಯು ರಾಜ್ಯದಲ್ಲಿ ಕಳೆದ ೧೫ ವರ್ಷಗಳಿಂದ ಅಧಿಕಾರದಲ್ಲಿದೆ. ಬಿಎಸ್ ಪಿಯು ಮಧ್ಯಪ್ರದೇಶದಲ್ಲಿ ಕೂಡಾ ತನ್ನ ೨೨ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇಲ್ಲಿ ಕಾಂಗ್ರೆಸ್ ಜೊತೆಗೆ ಮೈತ್ರಿ ಮಾತುಕತೆ ಇನ್ನೂ ನಡೆಯುತ್ತಲೇ ಇದೆ. ಹಿಂದಿನ ವರ್ಷಗಳಲ್ಲಿ ಬಿಎಸ್ ಪಿಯು ಇತರ ರಾಜಕೀಯ ಪಕ್ಷಗಳ ಜೊತೆಗೆ ಮೈತ್ರಿ ಮಾಡಿಕೊಳ್ಳಲು ಒಲವು ಹೊಂದಿರಲಿಲ್ಲ. ಬದಲಿಗೆ ಜಾತಿಗಳು ಮತ್ತು ಸಮುದಾಯಗಳ ಸಾಮಾಜಿಕ ಲೆಕ್ಕಾಚಾರವನ್ನೇ ನಂಬಿತ್ತು. ಕರ್ನಾಟಕದಲ್ಲಿ ಬಿಎಸ್ ಪಿಯು ಜೆಡಿ(ಎಸ್) ಜೊತೆಗೆ, ಉತ್ತರ ಪ್ರದೇಶದಲ್ಲಿ ಟೀಕಾಕಾರರನ್ನು ಅಚ್ಚರಿಗೊಳಿಸಿ ತನ್ನ ಕಡು ವಿರೋಧಿ ಸಮಾಜವಾದಿ ಪಕ್ಷದ ಜೊತೆಗೆ ಮೈತ್ರಿ ಮಾಡಿಕೊಂಡಿದೆ.

ದುಂಗಾರ್ ಪುರ್ (ರಾಜಸ್ಥಾನ): ರಾಜಸ್ಥಾನದ ದುಂಗಾರ್ ಪುರದಲ್ಲಿ ನಡೆದ ರಾಲಿ ಒಂದರಲ್ಲಿಮೇಕ್ ಇನ್ ಇಂಡಿಯಾ ಅಭಿಯಾನದ ವೈಫಲ್ಯಕ್ಕಾಗಿ ಎನ್ ಡಿಎ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರುಮೇಡ್ ಇನ್ ರಾಜಸ್ಥಾನ ಅಥವಾಮೇಡ್ ಇನ್ ದುಂಗಾರ್ ಪುರ್ ಫೋನ್ ಗಳನ್ನು ರಾಜಸ್ಥಾನದ ಜನತೆಗೆ ಒಂದು ದಿನ ನೀಡಲು ಪಕ್ಷ ಬಯಸಿದೆ ಎಂದು ಹೇಳಿದರು.  ಮುಂಬರುವ ರಾಜಸ್ಥಾನ ವಿಧಾನಸಭಾ ಚುನಾವಣೆಗಾಗಿ ದುಂಗಾರ್ ಪುರದಲ್ಲಿ ಪ್ರಚಾರ ಅಭಿಯಾನ ನಡೆಸಿದ ಅವರುಮೇಕ್ ಇನ್ ಇಂಡಿಯಾ, ’ರಫೇಲ್, ’ನೋಟು ಅಮಾನ್ಯೀಕರಣ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಮೋದಿ ಸರ್ಕಾರದ ವಿರುದ್ಧ ವಾಕ್ ಪ್ರಹಾರ ನಡೆಸಿದರು. ದುಂಗಾರ್ಪುರದ ಸಗ್ವಾರದಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷಮೇಡ್ ಇನ್ ರಾಜಸ್ಥಾನ್, ’ಮೇಡ್ ಇನ್ ದುಂಗಾರ್ ಪುರ ಎಂಬುದಾಗಿ ನಿಮ್ಮ ಫೋನ್ ಗಳಲ್ಲಿ ಬರೆದಿರುವ ಫೋನುಗಳನ್ನು ಒಂದುದಿನ ನಾವು ನಿಮಗೆ ಕೊಡ ಬಯಸಿದ್ದೇವೆ ಎಂದು ಹೇಳಿದರು. ಮೇಕ್ ಇನ್ ಇಂಡಿಯಾ ವಿಫಲವಾಗಿದೆ. ಕಾಂಗ್ರೆಸ್ ಪಕ್ಷವು ಬ್ಯಾಂಕುಗಳ ಬಾಗಿಲುಗಳನ್ನು ನಮ್ಮ ಯುವಕರ ಮನೆಗಳಿಗೆ ತರಲಿದೆ. ಮತ್ತು ರಾಜಸ್ಥಾನದ ಮಧ್ಯಮ ಮತ್ತು ಸಣ್ಣ ಪ್ರಮಾಣದ ಉದ್ಯಮಗಳು ಉದ್ಯೋಗ ಒದಗಿಸಲಿವೆ ಎಂದು ಅವರು ನುಡಿದರುಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಜಾರಿಗಾಗಿ ಕೇಂದ್ರದ ಮೇಲೆ ಹರಿಹಾಯ್ದ ರಾಹುಲ್, ’ಭಾರತದ ಶ್ರೀಮಂತರಿಗೆ ಮಾತ್ರ ಅಚ್ಛೇ ದಿನ್ ಬಂದಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ, ನಾವು ಗಬ್ಬಾರ್ ಸಿಂಗ್ ತೆರಿಗೆಯನ್ನು ಜಿಎಸ್ ಟಿ ಆಗಿ ಬದಲಾಯಿಸುತ್ತೇವೆ ಎಂದು ಹೇಳಿದರು.  ಐಪಿಎಲ್ ಹಗರಣ ಕಳಂಕಿತ ಲಲಿತ್ ಮೋದಿ ಜೊತೆಗಿನ ಸಂಪರ್ಕಕ್ಕಾಗಿ ಮುಖ್ಯಮಂತ್ರಿ ವಸುಂಧರಾ ರಾಜೆ ಅವರನ್ನು ಗುರಿಯಿಟ್ಟು ಟೀಕಾಪ್ರಹಾರ ಮಾಡಿದ ಕಾಂಗ್ರೆಸ್ ಅಧ್ಯಕ್ಷರುರಾಜಸ್ಥಾನದ ಮುಖ್ಯಮಂತ್ರಿಯ ಬಿಸಿನೆಸ್ ಪಾಲುದಾರ ಲಲಿತ್ ಮೋದಿ ಅವರು ಮುಖ್ಯಮಂತ್ರಿಯ ಮಗನಿಗೆ ಹಣ ಕೊಟ್ಟಿದ್ದಾರೆ. ಬಿಜೆಪಿ ಸರ್ಕಾರವು ಇಂತಹ ಜನರೊಂದಿಗೆ ಕೆಲಸ ಮಾಡುತ್ತದೆ ಎಂದು ಚುಚ್ಚಿದರು.



ನವದೆಹಲಿ: ಕಾವೇರಿ ಜಲ ನಿರ್ವಹಣಾ ಮಂಡಳಿ ರಚನೆ ಆಗಬೇಕು. ಅದನ್ನು ತಾನೇ ರಚಿಸುವುದಾಗಿ ಸುಪ್ರೀಂ ಕೋರ್ಟ್ಹೇಳಿತು. ಇದರಿಂದಾಗಿ ಕರ್ನಾಟಕಕ್ಕೆ ಭಾರೀ ಹಿನ್ನಡೆಯಾಯಿತು. ನ್ಯಾಯಮೂರ್ತಿ ದೀಪಕ್ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ ಜಲ ವಿವಾದದ ಮೇಲ್ಮನವಿ ಅರ್ಜಿ  ವಿಚಾರಣೆಯನ್ನು ಅಂತಿಮಗೊಳಿಸಿ ತೀರ್ಪು ಕಾಯ್ದಿರಿಸಿ ಅಭಿಪ್ರಾಯ ವ್ಯಕ್ತಪಡಿಸಿರುವುದಾಗಿ ವರದಿ ತಿಳಿಸಿತು. 'ಕಾವೇರಿ ಜಲ ನಿರ್ವಹಣಾ ಮಂಡಳಿ ರಚನೆಯಾಗಬೇಕು. ಈಗಾಗಲೇ ನರ್ಮದಾ, ಕೃಷ್ಣಾ ಜಲ ನಿರ್ವಹಣಾ ಮಂಡಳಿ ರಚನೆ ಆಗಿದೆ. ಅದರಂತೆಯೇ ಕಾವೇರಿ ಜಲ ನಿರ್ವಹಣಾ ಮಂಡಳಿ ರಚನೆಯಾಗಬೇಕು. ಅಂತಿಮ ತೀರ್ಪಿನಲ್ಲಿ ಮಂಡಳಿ ಸ್ವರೂಪ ಹೇಗಿರಬೇಕು ಎನ್ನುವುದನ್ನು ತಿಳಿಸುತ್ತೇವೆಎಂದು ತ್ರಿಸದಸ್ಯ ಪೀಠ ರಾಜ್ಯದ ವಕೀಲರಿಗೆ ತಿಳಿಸಿತು. 2 ವಾರಗಳ ಒಳಗೆ ಲಿಖಿತ ದಾಖಲೆಗಳನ್ನು ಸಲ್ಲಿಸಲು ಕರ್ನಾಟಕ, ಕೇರಳ, ತಮಿಳುನಾಡು ಮತ್ತು ಪಾಂಡಿಚೇರಿ  ರಾಜ್ಯಗಳಿಗೆ ಕೋರ್ಟ್ ಸೂಚನೆ ನೀಡಿತು. ಕಾವೇರಿ ನ್ಯಾಯಾಧಿಕರಣ ಪ್ರಶ್ನಿಸಿ ಕರ್ನಾಟಕ, ತಮಿಳುನಾಡು ಮತ್ತು ಕೇರಳ ರಾಜ್ಯಗಳು ಸಲ್ಲಿಸಿರುವ ಅರ್ಜಿ ವಿಚಾರಣೆ ವೇಳೆ, ಕೇಂದ್ರ ಸರ್ಕಾರ ವಾದ ಮಂಡಿಸಿ ಕಾವೇರಿ ನಿರ್ವಹಣಾ ಮಂಡಳಿ ರಚನೆ ಅಧಿಕಾರ ನ್ಯಾಯಾಲಯಕ್ಕಿಲ್ಲ ಎಂದು ಹೇಳಿತ್ತುಕೇಂದ್ರ ಸರ್ಕಾರದ ಪರ ವಕೀಲ ರಂಜಿತ್ಕುಮಾರ್ಅವರು, ಕಾವೇರಿ ನಿರ್ವಹಣಾ ಮಂಡಳಿ ರಚನೆ ಮಾಡುವುದು ಕೇವಲ ಸಂಸತ್ ಅಧಿಕಾರ. ಜತೆಗೆ, ಇದಕ್ಕೆ ತಿದ್ದುಪಡಿ ಮಾಡುವುದು ಸಂಸತ್ಗೆ ಬಿಟ್ಟ ಅಧಿಕಾರ. ಈಗಾಗಲೇ ಕರಡು ಸಿದ್ಧಪಡಿಸಲಾಗಿದೆ ಎಂದು ಹೇಳಿದರು. ರಂಜಿತ್ಕುಮಾರ್ಅವರ ವಾದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಮುಖ್ಯ ನ್ಯಾಯಮೂರ್ತಿ ದೀಪಕ್ಮಿಶ್ರಾ, ಕೇಂದ್ರ ಸರ್ಕಾರ ಕೋರ್ಟ್ ಆದೇಶ ಪಾಲಿಸಲೇ ಬೇಕು ಎಂದಿದ್ದರು.

2017: ಹೈದರಾಬಾದ್‌ : ಹೈದರಾಬಾದ್ಪೊಲೀಸರು ಈದಿನ  ಮದುವೆ ಜಾಲವೊಂದರಲ್ಲಿ ಶಾಮೀಲಾದ ಆರೋಪದ ಮೇಲೆ ಎಂಟು ಶೇಖ್ಗಳನ್ನು ಮತ್ತು ನಾಲ್ವರು ಮುಸ್ಲಿಂ ಮುಲ್ಲಾಗಳನ್ನು ಬಂಧಿಸಿದರು. ಬಂಧಿತ ಶೇಖ್ಗಳು ಸೌದಿ ಅರೇಬಿಯ, ಒಮಾನ್ಮತ್ತು ಕತಾರ್ನವರಾಗಿದ್ದಾರೆ ಎಂದು ಪೊಲೀಸರು ತಿಳಿಸಿದರು. ಪೊಲೀಸರ ಪ್ರಕಾರ ಸೌದಿ ಅರೇಬಿಯದ ಶೇಖ್ಗಳು ಲೂಕ್ನಾಮಾ ಮತ್ತು ಚಂದ್ರಾಯನ ಗುಟ್ಟ ಎಂಬಲ್ಲಿನ ಇಬ್ಬರು ಅಪ್ತಾಪ್ತ ವಯಸ್ಸಿನ ಬಾಲಕಿಯನ್ನು ಒಪ್ಪಂದದ ನೆಲೆಯಲ್ಲಿ ಮದುವೆಯಾಗಿದ್ದರು. ಪೊಲೀಸರು ಇದೇ ವೇಳೆ ನಾಲ್ಕು ಲಾಡ್ಜ್ ಮಾಲೀಕರು ಮತ್ತು ಐವರು ಮದುವೆ ಬ್ರೋಕರ್ಗಳನ್ನು ಬಂಧಿಸಿದರು. ಸೆ.18ರಂದು ಮುಂಬಯಿ ಮುಖ್ಯ ಕಾಝಿ ರೀದ್ಅಹ್ಮದ್ಖಾನ್ಅವರನ್ನು ಪೊಲೀಸರು ಬಂಧಿಸಿದ್ದರು. ರೀದ್ಅಹ್ಮದ್ಖಾನ್ಅವರು ಅಪ್ರಾಪ್ತ ವಯಸ್ಸಿನ ಬಾಲಕಿಗೆ ಮದುವೆ ಸರ್ಟಿಫಿಕೇಟ್ಕೊಟ್ಟದ್ದನ್ನು ಆಧರಿಸಿ ಓಮಾನೀ ಶೇಖ್ವೀಸಾ ಪಡೆದುಕೊಂಡಿದ್ದಹೈದರಾಬಾದಿನಲ್ಲಿ ಹಿಂದೆಯೂ ಪೊಲೀಸರು ಹಲವಾರು ಮದುವೆ ಜಾಲಗಳನ್ನು ಬಯಲುಗೊಳಿಸಿದ್ದರು. ಜಾಲದವರು ಹುಡುಗಿಯರ ಹೆತ್ತವರಿಗೆ ಹೆಚ್ಚಿನ ಹಣದ ಆಮಿಷ ಒಡ್ಡಿ ತಮ್ಮ ಹೆಣ್ಣು ಮಕ್ಕಳನ್ನು ಶೇಖ್ಗಳಿಗೆ ಒಪ್ಪಂದದ ನೆಲೆಯಲ್ಲಿ ಮದುವೆ ಮಾಡಿಕೊಡುವಂತೆ ಮನವೊಲಿಸುತ್ತಿದ್ದರು.

2017: ಚೆನ್ನೈ: ತಮಿಳುನಾಡು ವಿಧಾನಸಭೆಯಲ್ಲಿ ಬಹುಮತ ಸಾಬೀತು ಪ್ರಕ್ರಿಯೆಗೆ ಮದ್ರಾಸ್ಹೈಕೋರ್ಟ್ತಡೆ ನೀಡಿತು. ಮುಂದಿನ ಆದೇಶದವರೆಗೆ ಬಹುಮತ ಸಾಬೀತು ಪ್ರಕ್ರಿಯೆ ನಡೆಸದಂತೆ ಹೈಕೋರ್ಟ್ಹೇಳಿತು. ಎಐಎಡಿಎಂಕೆ ಪಕ್ಷದ ಬಿಕ್ಕಟ್ಟಿನಿಂದಾಗಿ ಪಳನಿಸ್ವಾಮಿ ಅವರಿಗೆ ನೀಡಿದ್ದ ಬೆಂಬಲವನ್ನು 18 ಮಂದಿ ಬಂಡಾಯ ಶಾಸಕರು ವಾಪಸ್ಪಡೆದಿದ್ದರು. ಬೆಂಬಲ ವಾಪಸ್ಪಡೆದಿದ್ದಕ್ಕಾಗಿ ಸಭಾಧ್ಯಕ್ಷ ಧನಪಾಲ್ 18 ಶಾಸಕರನ್ನು ಅನರ್ಹಗೊಳಿಸಿದ್ದರು. ಪಕ್ಷಾಂತರ ವಿರೋಧಿ ನಿಯಮದ ಅಡಿಯಲ್ಲಿ ತಮ್ಮನ್ನು ಅನರ್ಹಗೊಳಿಸಿ ವಿಧಾನಸಭಾಧ್ಯಕ್ಷ ಪಿ. ಧನಪಾಲ್ಹೊರಡಿಸಿರುವ ಆದೇಶವನ್ನು ಪ್ರಶ್ನಿಸಿ ಎಐಎಡಿಎಂಕೆಯ 18 ಬಂಡಾಯ ಶಾಸಕರು ಮದ್ರಾಸ್ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ದೊರೆಸ್ವಾಮಿ ಮಧ್ಯಂತರ ಆದೇಶ ಹೊರಡಿಸಿದರು. ಸಭಾಧ್ಯಕ್ಷರ ಆದೇಶದ ಆಧಾರದ ಮೇಲೆ 18 ಸ್ಥಾನಗಳಿಗೆ ಚುನಾವಣೆ ನಡೆಸುವ ಪ್ರಕ್ರಿಯೆಗೂ ಚುನಾವಣಾ ಆಯೋಗ ಮುಂದಾಗಬಾರದು ಎಂದು ಆದೇಶದಲ್ಲಿ ತಿಳಿಸಲಾಯಿತು.

2017: ನವದೆಹಲಿ: ಕ್ರಿಕೆಟಿಗ ಮಹೇಂದ್ರ ಸಿಂಗ್ದೋನಿ ಅವರ ಹೆಸರನ್ನು ಬಿಸಿಸಿಐ ಪದ್ಮ ಭೂಷಣ ಪುರಸ್ಕಾರಕ್ಕೆ ಶಿಫಾರಸು ಮಾಡಿತು. ಕ್ರೀಡಾ ಕ್ಷೇತ್ರದಲ್ಲಿ ದೋನಿ ಸಾಧನೆಯನ್ನು ಪದ್ಮ ಭೂಷಣ ಪುರಸ್ಕಾರಕ್ಕೆ ಪರಿಗಣಿಸುವಂತೆ ಬಿಸಿಸಿಐ ಶಿಫಾರಸಿನಲ್ಲಿ ಮನವಿ ಮಾಡಿತು. ಬಿಸಿಸಿಐನ ಸದಸ್ಯರೆಲ್ಲರೂ ಶಿಫಾರಸಿಗೆ ಒಮ್ಮತ ಸೂಚಿಸಿದ್ದಾರೆ. ಪದ್ಮ ಭೂಷಣ ಪುರಸ್ಕಾರಕ್ಕೆ ದೋನಿ ಅರ್ಹ ವ್ಯಕ್ತಿಯಾಗಿದ್ದಾರೆಎಂದು ಬಿಸಿಸಿಐನ ಹಂಗಾಮಿ ಅಧ್ಯಕ್ಷ ಸಿ.ಕೆ. ಖನ್ನಾ ತಿಳಿಸಿದರು.
2017: ಮೆಕ್ಸಿಕೊ ಸಿಟಿ: ಹಿಂದಿನ ದಿನ ಸಂಭವಿಸಿದ 7.1 ತೀವ್ರತೆಯ ಭೂಕಂಪದಿಂದ ನೆಲಕ್ಕೆ ಉರುಳಿರುವ ಶಾಲಾ ಕಟ್ಟಡಗಳು, ಮನೆ ಹಾಗೂ ಅಪಾರ್ಟ್ಮೆಂಟ್ಗಳ ಅಡಿಯಲ್ಲಿ ಸಿಲುಕಿದ್ದ ನೂರಾರು ಜನರನ್ನು ರಕ್ಷಣಾ ಪಡೆ ಹೊರಕ್ಕೆ ತಂದಿದ್ದು, ಸಾವಿನ ಸಂಖ್ಯೆ 248ಕ್ಕೆ ಏರಿಕೆಯಾಯಿತು. 1985 ನಂತರ ಮೆಕ್ಸಿಕೊದಲ್ಲಿ ಸಂಭವಿಸಿರುವ ಅತ್ಯಂತ ಪ್ರಭಾವಶಾಲಿ ಭೂಕಂಪ ಇದು. ದಕ್ಷಿಣ ಮೆಕ್ಸಿಕೊ ಸಿಟಿಯಲ್ಲಿ ಮೂರು ಅಂತಸ್ತಿನ ಶಾಲಾ ಕಟ್ಟಡ ಕುಸಿದಿದ್ದು, ಈಗಾಗಲೇ 25 ಮೃತ ದೇಹಗಳನ್ನು ಹೊರ ತೆಗೆಯಲಾಯಿತು. 32 ವರ್ಷಗಳ ಹಿಂದೆ, ಅಂದರೆ 1985 ಸೆಪ್ಟೆಂಬರ್‌ 19ರಂದು ಮೆಕ್ಸಿಕೊದಲ್ಲಿ ಪ್ರಬಲ ಭೂಕಂಪ ಸಂಭವಿಸಿತ್ತು. 7.5ಕ್ಕೂ ಹೆಚ್ಚು ತೀವ್ರತೆಯ ಭೂಕಂಪದಲ್ಲಿ ನೂರಾರು ಕಟ್ಟಡಗಳು ನೆಲಸಮಗೊಂಡು 5 ಸಾವಿರಕ್ಕೂ ಹೆಚ್ಚು ಮೃತರಾಗಿದ್ದರು.

2014: ಇಂಚೋನ್ (ದಕ್ಷಿಣ ಕೊರಿಯಾ): ದಕ್ಷಿಣ ಕೊರಿಯಾದ ಇಂಚೋನ್ ನಗರದಲ್ಲಿ ಆರಂಭವಾದ 17ನೇ ಆವೃತ್ತಿಯ ಏಷಿಯನ್ ಗೇಮ್್ಸ ನಲ್ಲಿ ಜಿತು ರೈ ಅವರು ಭಾರತಕ್ಕೆ ಮೊತ್ತ ಮೊದಲ ಸ್ವರ್ಣ ಪದಕವನ್ನು ತಂದು ಕೊಟ್ಟರು. ಪುರುಷರ 50 ಮೀ. ಪಿಸ್ತೂಲ್ ಶೂಟ್ ಸ್ಪರ್ಧೆಯಲ್ಲಿ ಜಿತು ರೈ ಅವರು ಸ್ವರ್ಣ ಪದಕ ಗೆದ್ದರು. ಮಹಿಳೆಯರ ವಿಭಾಗದ 10 ಮೀ. ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಶ್ವೇತಾ ಚೌಧುರಿ ಅವರು ಕಂಚಿನ ಪದಕ ಗೆದ್ದು ಮೊದಲ ಕಂಚಿನ ಪದಕವನ್ನು ತಂದುಕೊಟ್ಟರು.

2014: ಕೋಲ್ಕತ: ಆಹಾರ ವ್ಯರ್ಥವಾಗುವುದನ್ನು ತಪ್ಪಿಸುವ ಸಲುವಾಗಿ ಭಾರತೀಯ ವಿಜ್ಞಾನಿಗಳ ತಂಡವೊಂದು ಸೌರಶಕ್ತಿ ಚಾಲಿತ ಸಂಚಾರಿ ಕಿರು ಶೈತ್ಯಾಗಾರ ವ್ಯವಸ್ಥೆಯೊಂದನ್ನು ಅಭಿವೃದ್ಧಿ ಪಡಿಸಿದೆ. ರೈತರಿಗೆ ವರದಾನವಾಗಬಲ್ಲ ಈ 'ಕಿರು ಶೈತ್ಯಾಗಾರ' ಸಣ್ಣ ರೈತರಿಗೆ ಕಡಿಮೆ ವಿದ್ಯುತ್ ಇರುವ ಅಥವಾ ವಿದ್ಯುತ್ತೇ ಇಲ್ಲದ ಪ್ರದೇಶಗಳಲಿ ತಮ್ಮ ಕೃಷಿ ಉತ್ಪನ್ನಗಳನ್ನು ತಂಪಾಗಿ ಶೇಖರಿಸಿ ಇಡಲು ಅನುವು ಮಾಡಿಕೊಡಲಿದೆ. ಖರಗಪುರದ ಭಾರತೀಯ ತಂತ್ರಜ್ಞಾನ ಸಂಸ್ಥೆಯು (ಐಐಟಿ) ತನ್ನ ತಂತ್ರಜ್ಞಾನ ಉದ್ಯಮಶೀಕತಾ ಪಾರ್ಕ್​ನಲ್ಲಿ (ಎಸ್​ಟಿಇಪಿ- ಸ್ಟೆಪ್) ಪ್ರದರ್ಶಿಸಿರುವ ಈ ಇಂಧನ ದಕ್ಷ ಶೈತ್ಯಾಗಾರ ಘಟಕಗಳು 2.5 ಕಿ.ವಾ ದಿಂದ 3.5 ಕಿ.ವಾ. ಸಾಮರ್ಥ್ಯ ಸೌರ ಫಲಕ ಮೂಲಕ ಪಡೆಯುವ ಸೌರ ವಿದ್ಯುತ್​ನಿಂದ ಕಾರ್ಯ ನಿರ್ವಹಿಸುತ್ತವೆ. ಇವುಗಳನ್ನು ಬೆಳೆಗಳಿಗೆ ತಕ್ಕಂತೆ ವಿನ್ಯಾಸ ಮಾಡಲೂಬಹುದು. 'ಉಷ್ಣವಿದ್ಯುತ್ ಆಧಾರಿತ ಶೈತ್ಯಾಗಾರಗಳು ಜಾಲ ವಿದ್ಯುತ್ತನ್ನು (ಗ್ರಿಡ್ ಎಲೆಕ್ಟ್ರಿಸಿಟಿ) ಆಧರಿಸಿರುವುದಿಲ್ಲ. ಅಲ್ಲದೆ ಎರಡು ವರ್ಷಗಳ ಬಳಿಕವೂ ಶೇಕಡಾ 40ರಷ್ಟು ವಿದ್ಯುತ್ ಉತ್ಪಾದನೆ ಮಾಡಬಲ್ಲವು. ಸಾಮಾನ್ಯವಾಗಿ ಶೈತ್ಯಾಗಾರಗಳು ವಿದ್ಯುತ್ತನ್ನು ಆಧರಿಸಿಯೇ ಕೆಲಸ ಮಾಡುತ್ತವೆ. ಅವುಗಳಿಗೆ ಬ್ಯಾಟರಿ ಬ್ಯಾಕ್​ಅಪ್ ಕೂಡಾ ಬೇಕು. ಆದರೆ ನಾವು ಸಂಶೋಧಿಸಿರುವ ಸೌರ ಶಕ್ತಿ ಆಧಾರಿತ ಶೈತ್ಯಾಗಾರಗಳಿಗೆ ವಿದ್ಯುತ್ ಬ್ಯಾಕ್ ಅಪ್ ಬೇಕಾಗಿಲ್ಲ. ಹೀಗಾಗಿ ನಿರ್ವಹಣಾ ವೆಚ್ಚ ಸಂಪೂರ್ಣವಾಗಿ ನಿವಾರಣೆಯಾಗುತ್ತದೆ' ಎಂದು ಐಐಟಿ ಖರಗಪುರದ ಎಂಜಿನಿಯರ್ ಗಳಲ್ಲಿ ಒಬ್ಬರಾದ ವಿವೇಕ ಪಾಂಡೆ ಹೇಳಿದರು. ವ್ಯರ್ಥವಾಗುವ ಶೇಕಡಾ 30ರಷ್ಟು ಆಹಾರ ವಸ್ತುಗಳನ್ನು ಕೆಡದಂತೆ ರಕ್ಷಿಸಿ ಇಡಲು ಭಾರತವೊಂದರಲ್ಲೇ ಒಂದು ಕೋಟಿ ಟನ್ ಸಾಮರ್ಥ್ಯ ಶೈತ್ಯಾಗಾರಗಳು ಬೇಕು. ಭಾರತದ ಆಹಾರ ವಸ್ತು ಸರಬರಾಜು ವ್ಯವಸ್ಥೆಯಲ್ಲಿ ಶೇಕಡಾ 60ರಷ್ಟು ಶೈತ್ಯಾಗಾರ ಕೊರತೆ ಇದೆ ಎಂದು ಅವರು ವಿವರಿಸಿದರು. ನಮ್ಮ ತಂತ್ರಜ್ಞಾನದ ಬಳಕೆ ಮೂಲಕ ಭಾರತೀಯ ರೈತರು ತಮ್ಮ ಉತ್ಪನ್ನಗಳನ್ನು ಶೈತ್ಯಾಗಾರದಲ್ಲಿ ಕೆಡದಂತೆ ರಕ್ಷಿಸಿ ಇಟ್ಟುಕೊಂಡು ಬೆಲೆ ಏರಿದಾಗ ಮಾರಾಟ ಮಾಡಬಹುದು ಎಂದು ಪಾಂಡೆ ನುಡಿದರು. ಇದರಿಂದ ರೈತರ ಉತ್ಪನ್ನ ನಷ್ಟವಾಗುವುದು ಗಮನಾರ್ಹವಾಗಿ ತಗ್ಗುತ್ತದೆ. ತನ್ಮೂಲಕ ರೈತರ ಲಾಭವನ್ನು ಹೆಚ್ಚಿಸುತ್ತದೆ. ಸರಬರಾಜು ವ್ಯವಸ್ಥೆಯನ್ನು ಸ್ಥಿರಗೊಳಿಸುತ್ತದೆ. ನಾವು ವಿನ್ಯಾಸಗೊಳಿಸಿದ ಸೌರಶಕ್ತಿ ಚಾಲಿತ ಶೈತ್ಯಾಗಾರಗಳು ಸಾಮಾನ್ಯ ಘಟಕದ ವೆಚ್ಚವನ್ನು ನಾಲ್ಕು ಪಟ್ಟಿನಷ್ಟು ತಗ್ಗಿಸುತ್ತವೆ. ನಾವು ತಂತ್ರಜ್ಞಾನಕ್ಕಾಗಿ ನಾಲ್ಕು ವಿವಿಧ ಪೇಟೆಂಟ್ ಅರ್ಜಿ ಸಲ್ಲಿಸಿದ್ದೇವೆ' ಎಂದೂ ಅವರು ನುಡಿದರು.

2014: ರಾಯಪುರ: ಛತ್ತೀಸ್​ಗಢದ ಬಸ್ತಾರದ ಅಂತಾಗಢ (ಪರಿಶಿಷ್ಟ) ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಉಪಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಕಾಂಗ್ರೆಸ್ಸಿನ ಯಾವ ವಿರೋಧವೂ ಇಲ್ಲದೆಯೇ ಜಯಗಳಿಸಿತು. 'ಮೇಲಿನ ಯಾರಿಗೂ ಮತ ಇಲ್ಲ' (ನೋಟಾ) ಅವಕಾಶವನ್ನು ಇಲ್ಲಿನ ಮತದಾರರು ಬಹುದೊಡ್ಡ ಪ್ರಮಾಣದಲ್ಲಿ ಬಳಸಿಕೊಂಡಿದ್ದು ಕಣದಲ್ಲಿದ್ದ ಏಕೈಕ ಪ್ರತಿಸ್ಪರ್ಧಿಗಿಂತಲೂ ಹೆಚ್ಚು ಮತಗಳು ನೋಟಾಕ್ಕೆ ಬಿದ್ದವು. ಕಣದಲ್ಲಿದ್ದ ಏಕೈಕ ಪ್ರತಿಸ್ಪರ್ಧಿ ಅಂಬೇಡ್ಕರ್ ಪಾರ್ಟಿ ಆಫ್ ಇಂಡಿಯಾದ (ಎಪಿಐ) ರೂಪಧರ್ ಪಾಂಡೊ ಅವರಿಗೆ ಕೇವಲ 12,285 ಮತಗಳು ಬಂದರೆ, 13556 ಮಂದಿ ನೋಟಾಕ್ಕೆ ತಮ್ಮ ಮುದ್ರೆ ಒತ್ತಿದರು. ಬಿಜೆಪಿಯ ಭೋಜರಾಜ್ ನಾಗ್ ಅವರು ಉಪಚುನಾವಣೆಯಲ್ಲಿ 53,275 ಮತಗಳ ಅಂತರದಿಂದ ಜಯಗಳಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು. ಕಳೆದ ವರ್ಷದ ವಿಧಾನಸಭಾ ಚುನಾವಣೆಯಲ್ಲಿ ಸತತ ಮೂರನೇ ಬಾರಿ ಅಧಿಕಾರ ಉಳಿಸಿಕೊಂಡಿದ್ದ ಬಿಜೆಪಿಗೆ ರಾಜ್ಯದಲ್ಲಿ ನಡೆದ ಮೊದಲ ಉಪಚುನಾವಣೆಯ ವಿಜಯ ದಕ್ಕಿತು. ಕಾಂಗ್ರೆಸ್ಸಿನ ಅಧಿಕೃತ ಅಭ್ಯರ್ಥಿ ಮಂಥುರಾಮ್​ಪವಾರ್ ಅವರು ಕೊನೆಗಳಿಗೆಯಲ್ಲಿ ತಮ್ಮ ನಾಮಪತ್ರ ಹಿಂತೆಗೆದುಕೊಂಡದ್ದರಿಂದ ಕಾಂಗ್ರೆಸ್ಸಿಗೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಹೋರಾಟ ನಡೆಸಲೂ ಸಾಧ್ಯವಾಗದ ಪರಿಸ್ಥಿತಿ ಉಂಟಾಗಿತ್ತು. ತಮ್ಮ ಅಚ್ಚರಿಯ ಕ್ರಮದ ಮೂಲಕ ಬಿಜೆಪಿಗೆ ನೇರ ಅನುಕೂಲ ಮಾಡಿಕೊಟ್ಟ ಪವಾರ್ ಅವರನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಚಾಟಿಸಿತ್ತು.

2014: ನವದೆಹಲಿ: ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಖ್ಯಾತ ವಕೀಲ ಪ್ರಶಾಂತ ಭೂಷಣ್ ಮತ್ತು ಇತರ ಇಬ್ಬರ ವಿರುದ್ಧ ಇಲ್ಲಿನ ವಿಚಾರಣಾ ನ್ಯಾಯಾಲಯವೊಂದು ಮಾನನಷ್ಟ ಖಟ್ಲೆಯೊಂದರಲ್ಲಿ ವಿಚಾರಣೆಗೆ ಗುರಿ ಪಡಿಸಿತು. ಮಾಜಿ ದೂರಸಂಪರ್ಕ ಸಚಿವ ಕಪಿಲ್ ಸಿಬಲ್ ಅವರ ಪುತ್ರ ಅಮಿತ್ ಸಿಬಲ್ ಅವರು ಆಮ್​ಆದ್ಮಿ ಪಕ್ಷದ ಧುರೀಣರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಸುನಿಲ್ ಕುಮಾರ್ ಅವರು ಕೇಜ್ರಿವಾಲ್, ಭೂಷಣ್, ಮನಿಷ್ ಸಿಸೋಡಿಯಾ ಮತ್ತು ಶಾಝಿಯಾ ಇಲ್ಮಿ ವಿರುದ್ಧ ಭಾರತೀಯ ದಂಡ ಸಂಹಿತೆಯ 500 ನೇ ವಿಧಿ (ಮಾನನಷ್ಟ) ಅಡಿಯಲ್ಲಿ ದೋಷಾರೋಪ ಹೊರಿಸಿದರು. ಇವರ ಪೈಕಿ ಇಲ್ಮಿ ಇತ್ತೀಚೆಗೆ ಪಕ್ಷ ತ್ಯಜಿಸಿದ್ದರು. ನಾಲ್ಕೂ ಮಂದಿ ಆರೋಪಿಗಳು ತಪ್ಪು ಒಪ್ಪಿಕೊಳ್ಳದೆ ವಿಚಾರಣೆ ಎದುರಿಸುವುದಾಗಿ ಹೇಳಿದ್ದನ್ನು ಅನುಸರಿಸಿ ನ್ಯಾಯಾಲಯವು ಅವರನ್ನು ವಿಚಾರಣೆಗೆ ಗುರಿ ಪಡಿಸಿತು. ಸಾಕ್ಷ್ಯಾಧಾರ ದಾಖಲಿಸಿಕೊಳ್ಳುವ ಸಲುವಾಗಿ ನ್ಯಾಯಾಲಯವು 2015ರ ಜನವರಿ 17ನೇ ದಿನಾಂಕವನ್ನು ನಿಗದಿ ಪಡಿಸಿತು. ಅಮಿತ್ ಸಿಬಲ್ ಅವರು ಹೂಡಿದ್ದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಕಳೆದ ಜುಲೈ 24ರಂದು ಕೇಜ್ರಿವಾಲ್, ಸಿಸೋಡಿಯಾ, ಭೂಷಣ್ ಮತ್ತು ಇಲ್ಮಿ ಅವರಿಗೆ ಸಮನ್ಸ್ ಕಳುಹಿಸಿತ್ತು. ಟೆಲಿಕಾಂ ಕಂಪೆನಿ ಪ್ರಕರಣಗಳಲ್ಲಿ ಪ್ರತಿನಿಧಿಸಲು ತಾನು ತಂದೆಯ ಹುದ್ದೆಯ ಲಾಭ ಪಡೆದಿರುವುದಾಗಿ ಎಎಪಿ ನಾಯಕರು ಹೇಳಿದ್ದಾರೆ ಎಂದು ಹಿರಿಯ ವಕೀಲರೂ ಆಗಿರುವ ಅಮಿತ್ ಆಪಾದಿಸಿದ್ದರು.

2008: ಇಸ್ಲಾಮಾಬಾದ್ ನಗರದ ಹೃದಯ ಭಾಗದಲ್ಲಿನ ಮರಿಯಟ್ ಪಂಚತಾರಾ ಹೊಟೇಲ್ ಮೇಲೆ ಆತ್ಮಹತ್ಯಾ ಬಾಂಬರುಗಳು ನಡೆಸಿದ ಭೀಕರ ದಾಳಿಯಲ್ಲಿ ಕನಿಷ್ಠ 62 ಮಂದಿ ಸತ್ತು, 100ಕ್ಕೂ ಹೆಚ್ಚು ಮಂದಿ ಗಾಯಗೊಂಡರು.

2008: ಹಿಮಾಚಲ ಪ್ರದೇಶ, ಉತ್ತರ ಪ್ರದೇಶ, ಒರಿಸ್ಸಾ ಸಹಿತ ದೇಶದ ವಿವಿಧ ಭಾಗಗಳಲ್ಲಿ ಭಾರಿ ಮಳೆಯ ಹಿನ್ನೆಲೆಯಲ್ಲಿ ಸಂಭವಿಸಿದ ಭೂಕುಸಿತ, ಪ್ರವಾಹ, ಕಟ್ಟಡ ಕುಸಿತದಂತಹ ಹಲವು ದುರಂತಗಳಲ್ಲಿ 100ಕ್ಕೂ ಅಧಿಕ ಮಂದಿ ಮೃತರಾದರು.

2007: ಹನಿ ನೀರಾವರಿ ಮತ್ತು ಜಲ ಸಂರಕ್ಷಣೆ ಕ್ಷೇತ್ರದಲ್ಲಿ ಕ್ರಾಂತಿಕಾರಿ ತಂತ್ರಜ್ಞಾನ ಅಭಿವೃದ್ಧಿಪಡಿಸಿದ ಮಂಡ್ಯದ ಚೈತ್ರ ಇರಿಗೇಷನ್ ಸಿಸ್ಟಮಿನ ವ್ಯವಸ್ಥಾಪಕ ನಿರ್ದೇಶಕ ಟಿ.ಎನ್. ಪರಮೇಶ್ ಅವರಿಗೆ ರಾಷ್ಟ್ರೀಯ ಶ್ರೇಷ್ಠ ಸಣ್ಣ ಕೈಗಾರಿಕೋದ್ಯಮಿ ಪ್ರಶಸ್ತಿ ಲಭಿಸಿತು. ನೀರಾವರಿ ಕ್ಷೇತ್ರದಲ್ಲಿ ಈ ಪುರಸ್ಕಾರ ಪಡೆದ ಕರ್ನಾಟಕದ ಮೊದಲ ಉದ್ಯಮಿ ಎಂಬ ಹೆಗ್ಗಳಿಕೆ ಅವರದಾಯಿತು. ದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಈ ಪ್ರಶಸ್ತಿ ನೀಡಿದರು.
ಚೈತ್ರ ಇರಿಗೇಷನ್ ಸಿಸ್ಟಂ ಕಂಪೆನಿ ಅಭಿವೃದ್ಧಿಪಡಿಸಿದ ಉತ್ತಮ ದರ್ಜೆಯ ತುಂತುರು ನೀರಾವರಿ, ಹನಿ ನೀರಾವರಿ ಪೈಪ್, ವಾಲ್ವ್ ಮತ್ತಿತರ ಸಲಕರಣೆಗಳು ಕೇಂದ್ರ ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಇಲಾಖೆಯ ಪ್ರಶಂಸೆಗೆ ಪಾತ್ರವಾದವು.

2007: ರಾಮ ಸೇತು ನಾಶಪಡಿಸಬೇಕೆಂಬುದು ತಮ್ಮ ಅಭಿಪ್ರಾಯವಲ್ಲ. ಸೇತು ಸಮುದ್ರಂ ಕಡಲ್ಗಾಲುವೆ ಯೋಜನೆ ಅನುಷ್ಠಾನವಾಗಬೇಕೆಂಬುದಷ್ಟೇ ನಮಗೆ ಮುಖ್ಯ. ರಾಮ ಸೇತು ನಾಶಪಡಿಸಿಯಾದರೂ ಸರಿ ಅಥವಾ ನಾಶಪಡಿಸದೆ ಇದ್ದರೂ ಸರಿ ಯೋಜನೆ ಅನುಷ್ಠಾನಗೊಳ್ಳಬೇಕು ಎಂದು ತಮಿಳುನಾಡು ಮುಖ್ಯಮಂತ್ರಿ ಹಾಗೂ ಡಿಎಂಕೆ ಅಧ್ಯಕ್ಷ ಎಂ. ಕರುಣಾನಿಧಿ ಸ್ಪಷ್ಟನೆ ನೀಡಿದರು. ರಾಮ ಸೇತು ನಾಶಪಡಿಸದೇ ಸೇತು ಸಮುದ್ರಂ ಕಡಲ್ಗಾಲುವೆ ಯೋಜನೆ ಜಾರಿಗೊಳಿಸುವುದಾದರೆ ತಮಗೆ ಅಭ್ಯಂತರವಿಲ್ಲ. ತಮಿಳರ ನೂರು ವರ್ಷಗಳಷ್ಟು ಹಳೆಯ ಕನಸಾದ ಸೇತು ಸಮುದ್ರಂ ಯೋಜನೆ ಅನುಷ್ಠಾನಗೊಳ್ಳುವುದು ತಮಗೆ ಮುಖ್ಯ ಎಂದು ಅವರು ಹೇಳಿದರು. ವೈಯಕ್ತಿಕ ಆಚರಣೆ ಹಾಗೂ ನಂಬಿಕೆಗೆ ಸಂಬಂಧಿಸಿದ ಸೂಕ್ಷ್ಮ ವಿಷಯಗಳ ಕುರಿತು ಅನಗತ್ಯ ಹೇಳಿಕೆ ನೀಡದಂತೆ ಕಾಂಗ್ರೆಸ್ ತನ್ನ ಸದಸ್ಯರಿಗೆ ಹಾಗೂ ಸಚಿವರಿಗೆ ನಿರ್ದೇಶನ ನೀಡಿತು. ರಾಮನ ಅಸ್ತಿತ್ವವನ್ನು ಪ್ರಶ್ನಿಸುವ ಮೂಲಕ ಡಿಎಂಕೆ ನಾಯಕ ಕರುಣಾನಿಧಿ ತಮ್ಮ ಧಾರ್ಮಿಕ ನಂಬಿಕೆಗೆ `ಧಕ್ಕೆ' ಉಂಟು ಮಾಡಿದ್ದಾರೆ ಎಂದು ಆಪಾದಿಸಿ ಚೆನ್ನೈಯ ಮದ್ರಾಸ್ ಹೈಕೋರ್ಟ್ ವಕೀಲ ಆರ್.ಕೆ. ವೆಂಕಟೇಶ್ ಚೆನ್ನೈ ನಗರ ನ್ಯಾಯಾಲಯದಲ್ಲಿ ಖಟ್ಲೆ ಹೂಡಿದರು.

2007: ಹದಿನೆಂಟು ವರ್ಷಗಳ ಹಿಂದೆ ಗುಲ್ಬರ್ಗ ನ್ಯಾಯಾಲಯದ ಆವರಣದಲ್ಲಿ ನಡೆದ ಕೊಲೆಯ ಪ್ರಮುಖ ಆರೋಪಿಗಳ ಜೀವಾವಧಿ ಶಿಕ್ಷೆಯನ್ನು ಎತ್ತಿ ಹಿಡಿದಿರುವ ಸುಪ್ರೀಂಕೋರ್ಟ್ `ಸಂಬಂಧಿಗಳೆಂಬ ಕಾರಣಕ್ಕೆ ಸಾಕ್ಷಿಗಳನ್ನು ತಿರಸ್ಕರಿಸಲಾಗದು' ಎಂದು ಹೇಳಿತು. `ಸಾಕ್ಷಿಗಳು ವಿಶ್ವಾಸಾರ್ಹರಾಗಿದ್ದು ಆರೋಪಿಗಳನ್ನು ಗುರುತು ಹಚ್ಚಲು ನೆರವಾಗುವುದಿದ್ದರೆ, ಸಂಬಂಧಿಗಳು, ಪ್ರಕರಣದಲ್ಲಿ ಆಸಕ್ತರು. ಅವರಿಗೆ ಗಾಯಗಳಾಗಿಲ್ಲ ಇತ್ಯಾದಿ ಕಾರಣಗಳನ್ನು ಮುಂದೊಡ್ಡಿ ಸಾಕ್ಷ್ಯ ವಿಶ್ವಾಸಾರ್ಹ ಅಲ್ಲ ಎಂದು ತಿರಸ್ಕರಿಸಲಾಗದು' ಎಂದು ನ್ಯಾಯಮೂರ್ತಿಗಳಾದ ಬಿ.ಎನ್.ಅಗರ್ ವಾಲ್ ಮತ್ತು ಪಿ.ಪಿ.ನಾವ್ಲೇಕರ್ ಅವರನ್ನೊಳಗೊಂಡ ನ್ಯಾಯಪೀಠ ಹೇಳಿತು. ಕೊಲೆಯ ಪ್ರಮುಖ ಆರೋಪಿಗಳಾದ ಮಲ್ಲಣ್ಣ, ಲಲಸೆ ಮತ್ತು ಭೀಮನಗೌಡರಿಗೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಜೀವಾವಧಿ ಶಿಕ್ಷೆಯನ್ನು ಸಮರ್ಥಿಸಿದ ಸುಪ್ರೀಂಕೋರ್ಟ್, ಉಳಿದ ಆರೋಪಿಗಳಾದ ಮೆಹಬಾಬ್ ಸಾಬ್, ಬುದ್ದೇಸಾಬ್,ಖಾಸಿಮಸಾ, ಅಪ್ಪಾಸಾಹೇಬ್, ಶರಣಪ್ಪ, ಬಾಪುಗೌಡ, ಚಂದಪ್ಪ ಮತ್ತು ರಾಜಶೇಖರ್ ಅವರನ್ನು ಖುಲಾಸೆ ಮಾಡಿತು. 1989ರ ಏಪ್ರಿಲ್ 22ರ ಬೆಳಿಗ್ಗೆ ಗುಲ್ಬರ್ಗ ನ್ಯಾಯಾಲಯದ ಮುಂದಿನ ಕಟ್ಟೆ ಬಳಿ ಸ್ನೆಹಿತರ ಜೊತೆ ಮಾತನಾಡುತ್ತಾ ನಿಂತಿದ್ದ ಭೀಮನಗೌಡ ದೇಸಾಯಿ ಅವರ ಮೇಲೆ ಆಯುಧಧಾರಿ ವ್ಯಕ್ತಿಗಳ ಗುಂಪೊಂದು ದಾಳಿ ನಡೆಸಿ ಹತ್ಯೆಗೈದಿತ್ತು. ತೀವ್ರವಾಗಿ ಗಾಯಗೊಂಡ ದೇಸಾಯಿ ಆಸ್ಪತ್ರೆಯಲ್ಲಿ ಮೃತರಾಗಿದ್ದರು.

2007: ಗಣೇಶ ಪ್ರತಿಮೆಯನ್ನು ಪೂಜಿಸಿದ `ತಪ್ಪಿಗಾಗಿ' ನಟ ಸಲ್ಮಾನ್ ಖಾನ್ ಮತ್ತು ಕುಟುಂಬದ ಸದಸ್ಯರ ಮೇಲೆ ಬರೇಲಿಯ ಇಸ್ಲಾಂ ಧಾರ್ಮಿಕ ಮುಖಂಡರೊಬ್ಬರು `ಫತ್ವಾ' ಹೊರಡಿಸಿದರು. ಇದರೊಂದಿಗೆ ಸಲ್ಮಾನ್  ಖಾನ್ ಮತ್ತೊಂದು ಸಮಸ್ಯೆಯಲ್ಲಿ ಸಿಲುಕಿಕೊಂಡರು. `ವಿಗ್ರಹ ಪೂಜೆಗೆ ಇಸ್ಲಾಂ ಧರ್ಮದಲ್ಲಿ ಅವಕಾಶ ಇಲ್ಲ. ಈ ಫತ್ವಾ ಕೇವಲ ಸಲ್ಮಾನ್ ಖಾನ್ ವಿರುದ್ಧ ಮಾತ್ರ ಅಲ್ಲ,  ವಿಗ್ರಹ ಪೂಜೆ ಸಲ್ಲಿಸಿದವರು ಯಾರೇ ಆಗಲಿ `ಕಲ್ಮಾ' ಪಠಿಸಿ ಇಸ್ಲಾಂಗೆ ಮರುಪ್ರವೇಶ ಪಡೆಯಬೇಕು' ಎಂದು ಬರೇಲಿಯ ಇಫ್ತಾ ಮಂಜರ್ ಇ ಇಸ್ಲಾಮ್ ಪರವಾಗಿ ಮುಫ್ತಿ ಫಕೀರ್ ಖಾದ್ರಿ ಹೇಳಿದರು. ಸಲ್ಮಾನ್ ಖಾನ್ ಮತ್ತು ಅವರ ಕುಟುಂಬದ ಸದಸ್ಯರು ಗಣೇಶ ಪ್ರತಿಮೆಗೆ ನಮಿಸಿದ್ದಲ್ಲದೇ ಗಣಪತಿ ವಿಸರ್ಜನೆಯ ಸಂದರ್ಭದಲ್ಲಿ ನರ್ತಿಸಿದ್ದನ್ನು ಮಾಧ್ಯಮಗಳು ವರದಿ ಮಾಡಿದ್ದವು.

2007: ಬಾಹ್ಯಾಕಾಶದಲ್ಲಿ 195 ದಿನಗಳಷ್ಟು ಸುದೀರ್ಘ ಅವಧಿವರೆಗೆ ಇದ್ದ ವಿಶ್ವದ ಪ್ರಥಮ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದ ಭಾರತೀಯ ಮೂಲದ ಅಮೆರಿಕ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಅವರು ಒಂದು ವಾರದ ಭಾರತ ಭೇಟಿ ಸಲುವಾಗಿ ಅಹಮದಾಬಾದಿಗೆ ಬಂದಿಳಿದರು.  `ಇಲ್ಲಿಗೆ ಬಂದಿಳಿಯಲು ನನಗೆ ಅತೀವ ಸಂತೋಷವೆನಿಸಿದೆ. ಭಾರತದ ಭೇಟಿ ಬಹಳ ಕಾಲದವರೆಗೂ ನನಗೆ ನೆನಪಿನಲ್ಲಿ ಉಳಿಯಲಿದೆ' ಎಂದು `ಸುನೀತಾ ವಿಲಿಯಮ್ಸ್ ಅಹಮದಾಬಾದ್ ನೆಲ ಸ್ಪರ್ಶಿಸುತ್ತಿದ್ದಂತೆಯೇ ಆನಂದ ತುಂದಿಲರಾಗಿ ಉದ್ಘರಿಸಿದರು. ಕಪ್ಪು ವರ್ಣದ ಟಿ-ಶರ್ಟ್ ಮತ್ತು ಜೀನ್ಸ್ ಪ್ಯಾಂಟ್ ಧರಿಸಿದ್ದ ಸುನೀತಾ ಬೆಳಿಗ್ಗೆ 10.55ಕ್ಕೆ ಏರ್ ಇಂಡಿಯಾ ವಿಮಾನದಲ್ಲಿ ಸ್ಥಳೀಯ ಸರ್ದಾರ್ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ಮುಖ್ಯಮಂತ್ರಿ ನರೇಂದ್ರ ಮೋದಿ ಪರವಾಗಿ ರಾಜ್ಯ ಸರ್ಕಾರದ ಶಿಷ್ಟಾಚಾರ ಅಧಿಕಾರಿ ಪುಷ್ಪಗುಚ್ಛ ನೀಡುವ ಮೂಲಕ ಸ್ವಾಗತಿಸಿದರು.

2007: ಎಲ್ಲೇ ಇದ್ದರೂ ಮಾಹಿತಿಗಳನ್ನು ತತ್ ಕ್ಷಣ ರವಾನೆ ಮಾಡುವ ತಂತ್ರಜ್ಞಾನವೊಂದನ್ನು ಅಭಿವೃದ್ಧಿ ಪಡಿಸಿರುವುದಾಗಿ ಇಂಟೆಲ್ ಕಾರ್ಪೊರೇಷನ್ ಸ್ಯಾನ್ ಫ್ರಾನ್ಸಿಸ್ಕೊದಲ್ಲಿ ಪ್ರಕಟಿಸಿತು. ಮುಂದಿನ ವರ್ಷ ಇದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ಕಂಪೆನಿ ಹೇಳಿತು. ವೈಫೈ ಮತ್ತು ವೈಮ್ಯಾಕ್ಸ್ ತಂತ್ರಜ್ಞಾನ ಎರಡನ್ನೂ ಬಳಸಿಕೊಂಡು ಸಂಯುಕ್ತ ಮಾಡ್ಯೂಲ್ ಒಂದನ್ನು ಕಂಪೆನಿ ಸಿದ್ಧಪಡಿಸಿದೆ. ಲ್ಯಾಪ್ ಟಾಪ್ ಮತ್ತು ಅಲ್ಟ್ರಾಮೊಬೈಲುಗಳಿಗೆ ಇದನ್ನು ಅಳವಡಿಸಬಹುದು ಎಂದು ಕಂಪೆನಿಯ ಅಧ್ಯಕ್ಷ ಪಾಲ್ ಒಟೆಲಿನಿ ತಿಳಿಸಿದರು.

2007: ಕ್ರೈಸ್ತ ಧರ್ಮದ ಬಿಷಪ್ ಅಂತ್ಯಸಂಸ್ಕಾರದ ವೇಳೆ ಋಗ್ವೇದ, ಉಪನಿಷತ್ ಹಾಗೂ ಕುರಾನಿನಲ್ಲಿನ ಕೆಲವು ಸಾಲುಗಳನ್ನು ಪಠಿಸಿ ಧಾರ್ಮಿಕ ಸೌಹಾರ್ದ ಮೆರೆದ ಘಟನೆ ಅಮೆರಿಕದಲ್ಲಿ ನಡೆಯಿತು. ನೆವಾಡಾ ರಾಜ್ಯದ ರಿನೊ ಚರ್ಚಿನ ಆರ್ಚ್ ಬಿಷಪ್ ಡಗ್ಲಾಸ್ ಇಗೋ ನೆ ಸೊವೈ ಅವರು ನಿಧನರಾಗಿದ್ದರು. ಅವರ ಅಂತ್ಯಕ್ರಿಯೆ ವೇಳೆ ರಾಜನ್ ಜೇಡ್ ಅವರು ಗಾಯಿತ್ರಿ ಮಂತ್ರ, ಋಗ್ವೇದ, ಉಪನಿಷತ್ ಪಠಿಸಿದರು. ಸಿಯೆರಾ ಪ್ರತಿಷ್ಠಾನದ ತುನೆ ದರ್ಮಾಜ್ ಕುರಾನಿನ ಕೆಲವು ಸಾಲುಗಳನ್ನು ಹೇಳಿದರು. ನಂತರ ಬೌದ್ಧ ಧರ್ಮದ ವಿಲಿಯಂ ಬಾರ್ಲೆಟ್ಟೆ ಸಹ ಮಂತ್ರ ಓದಿದರು.

2007: ಬೆಂಗಳೂರಿನ ಇಂದಿರಾನಗರದ ಸಿಎಂಎಚ್ ರಸ್ತೆಯಲ್ಲಿರುವ (ನಂ.67) 218.76 ಚದರ ಮೀಟರ್ ಜಮೀನನ್ನು ಮೆಟ್ರೋ ರೈಲು ಯೋಜನೆಗೆ ಸ್ವಾಧೀನ ಪಡಿಸಿಕೊಂಡು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಹೊರಡಿಸಿರುವ ಅಧಿಸೂಚನೆಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿತು.

2007: ರಾಷ್ಟ್ರೀಕೃತ ಕೆನರಾ ಬ್ಯಾಂಕ್ ದೇಶದಲ್ಲಿಯೇ ಪ್ರಥಮ ಬಾರಿಗೆ ಗ್ರಾಮೀಣ ಪ್ರದೇಶದ ಅನಕ್ಷರಸ್ಥರಿಗಾಗಿ ಬಹು ಉದ್ದೇಶದ ಜೈವಿಕ ತಂತ್ರಜ್ಞಾನದ `ಕೆನರಾ ವಿಕಾಸ ಸ್ಮಾರ್ಟ್ ಕಾರ್ಡ್' ಬಳಕೆಗೆ  ಬೆಂಗಳೂರಿನ ದೇವನಹಳ್ಳಿಯಲ್ಲಿ ಚಾಲನೆ ನೀಡಿತು. ಅನಕ್ಷರಸ್ಥರ ಹೆಬ್ಬೆಟ್ಟಿನ ಗುರುತೇ ಎಟಿಎಂ ಕಾರ್ಡ್,  ಕೆನರಾ ವಿಕಾಸ ಸ್ಮಾರ್ಟ್ ಕಾರ್ಡುಗಳ ಬಳಕೆಯ ದೃಢೀಕರಣಕ್ಕೆ ನೆರವಾಗುವ ತಂತ್ರಜ್ಞಾನ ಬಳಸಿರುವುದು ದೇಶದಲ್ಲೇ ಪ್ರಥಮ ಎಂದು ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಎಂ. ಬಿ. ಎನ್. ರಾವ್ ನುಡಿದರು.

2006: ರಕ್ತರಹಿತ ಕ್ಷಿಪ್ರಕ್ರಾಂತಿ ಮೂಲಕ ಥಾಯ್ಲೆಂಡ್ ಸರ್ಕಾರವನ್ನು ಉರುಳಿಸಿದ ಸೇನಾ ಮುಖ್ಯಸ್ಥ ಜನರಲ್ ಸೋಂಥಿ ಬೂನ್ಯಾ ರತ್ಕಾಲಿ ಅವರನ್ನು ಥಾಯ್ಲೆಂಡ್ ದೊರೆ ಭೂಮಿಬೊಲ್ ಅದುಲ್ಯತೇಜ್ ಅವರು ಥಾಯ್ಲೆಂಡಿನ ಹಂಗಾಮಿ ಪ್ರಧಾನಿಯಾಗಿ ನೇಮಕ ಮಾಡಿದರು.

2006: ಹದಿನೆಂಟು ಲಕ್ಷ ಡಾಲರ್ ಬೆಲೆಯ ವಜ್ರಗಳನ್ನು ಒಳಗೊಂಡ ದುಬಾರಿ ಚಿನ್ನದ ಕಂಚುಕವನ್ನು ದಕ್ಷಿಣ ಕೊರಿಯಾದ ರೂಪದರ್ಶಿಯೊಬ್ಬಳು ಸೋಲ್ ನಲ್ಲಿ ಪ್ರದರ್ಶಿಸಿದಳು. ಗೋಲ್ಡನ್ ಝೋನ ಸಂಸ್ಥೆಯ ಹೊಸ ಉತ್ಪನ್ನ ಬಿಡುಗಡೆ ಸಮಾರಂಭದಲ್ಲಿ ಈ ದುಬಾರಿ ಬ್ರಾ ಪ್ರದರ್ಶಿಸಲಾಯಿತು.

2006: `ಕ್ರೊಕೊಡೈಲ್ ಹಂಟರ್' ಎಂದೇ ಖ್ಯಾತರಾದ ಸ್ಟೀವ್ ಇರ್ವಿನ್ ಗೆ ಜಗತ್ತು ಭಾವಪೂರ್ಣ ವಿದಾಯ ಹೇಳಿತು. ಸುಮಾರು ಹದಿನೈದು ದಿನಗಳ ಹಿಂದೆ ಸಮುದ್ರದ ಒಳಗೆ ಛಾಯಾಗ್ರಹಣ ಕಾಲದಲ್ಲೇ ವಿಷದ ಮೀನಿನ ಮುಳ್ಳಿನ ದಾಳಿಗೆ ತುತ್ತಾಗಿ ಅವರು ಅಸು ನೀಗಿದ್ದರು. 5000 ಮಂದಿ ನೇರವಾಗಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡರು. ಜಗತ್ತಿನಾದ್ಯಂತ 300 ದಶಲಕ್ಷ ಮಂದಿ ಸ್ಟೀವ್ ಅವರ ಅಂತ್ಯಕ್ರಿಯೆ ವೀಕ್ಷಿಸಿ ಭಾಷ್ಪಾಂಜಲಿ ಸಲ್ಲಿಸಿದರು.

2006: ಶನಿಗ್ರಹದ ಸುತ್ತ ಈಗಾಗಲೇ ಇರುವ ದಟ್ಟ ಬಳೆಗಳ ನಡುವೆ ಕಣಗಳಿಂದ ಕೂಡಿದ ಕಂದಿದ ಬಳೆಯೊಂದು ಇರುವುದನ್ನು  ಪತ್ತೆ ಹಚ್ಚಲಾಯಿತು. ಶನಿಗ್ರಹದ ಕುರಿತು ಮಾಹಿತಿ ಸಂಗ್ರಹಿಸಲು ಕಳುಹಿಸಲಾದ `ಕ್ಯಾಸಿನಿ' ಅಂತರಿಕ್ಷ ನೌಕೆಯು ಈ ಬಳೆಯ ಚಿತ್ರವನ್ನು ಸೆರೆ ಹಿಡಿದು ಭೂಮಿಗೆ ರವಾನಿಸಿತು. ಶನಿಯ ಸುತ್ತ 7 ಸ್ಪಷ್ಟ ಬಳೆಗಳಿದ್ದು, 47 ಉಪಗ್ರಹಗಳು ಸುತ್ತುತ್ತಿವೆ. `ಕ್ಯಾಸಿನಿ' ನೌಕೆಯು ಶನಿಯಿಂದ 150 ಕೋಟಿ ಮೈಲಿ ದೂರದಲ್ಲಿರುವ ಭೂಮಿಯ ವರ್ಣಮಯ ಚಿತ್ರವನ್ನೂ ಸೆರೆ ಹಿಡಿದಿದೆ. (ಈ ಚಿತ್ರಗಳನ್ನು ಇಂಟರ್ನೆಟ್ಟಿನಲ್ಲಿ(ಣಣಠಿ://ತಿತಿತಿ.ಟಿಚಿಚಿ.ರಠತ/ಛಿಚಿಟಿ) ನೋಡಬಹುದು)
1999: ಮಿಖಾಯಿಲ್ ಗೊರ್ಬಚೆವ್ ಅವರ ಪತ್ನಿ ರಯೀಸಾ ಗೊರ್ಬಚೆವ್ ಅವರು ಜರ್ಮನಿಯಲ್ಲಿ ತಮ್ಮ 67ನೇ ವಯಸಿನಲ್ಲಿ ಮೃತರಾದರು.

1982: ಪಾಕಿಸ್ತಾನದ ಹೈದರಾಬಾದಿನಲ್ಲಿ ನಡೆದ ಮೂರು ಆಟಗಳ ಸರಣಿಯ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯದ ರಾಡ್ ಮಾರ್ಶ್, ಬ್ರೂಸ್ ಯಾರ್ಡ್ಲಿ ಮತ್ತು ಜಿಯೊ ಲಾಸನ್ ಅವರನ್ನು ಒಂದರ ಹಿಂದೊಂದರಂತೆ ಬಾಲ್ ಬಾರಿಸಿ ಔಟ್ ಮಾಡುವ ಮೂಲಕ ಪಾಕಿಸ್ತಾನಿ ಬೌಲರ್ ಜಲಾಲುದ್ದೀನ್ ಅವರು ಒಂದು ದಿನದ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಮೊದಲ ಹ್ಯಾಟ್ರಿಕ್ ಸಾಧಿಸಿದರು.

1973: ಟೆಕ್ಸಾಸಿನ ಆಸ್ಟ್ರೋಡೋಮಿನಲ್ಲಿ ನಡೆದ ಟೆನಿಸ್ ನೇರ ಸ್ಪರ್ಧೆಯಲ್ಲಿ ಬಿಲಿ ಜೀನ್ ಕಿಂಗ್ ಅವರು 6-4, 6-3, 6-4 ಅಂತರದಲ್ಲಿ ಬಾಬಿ ಜೀನ್ಸ್ ಅವರನ್ನು ಪರಾಭವಗೊಳಿಸಿದರು. ಒಂದು ಲಕ್ಷ ಡಾಲರ್ ಮೊತ್ತದ ಬಹುಮಾನವಿದ್ದ ಈ ಪಂದ್ಯ `ಬ್ಯಾಟ್ಲ್ ಆಫ್ ಸೆಕ್ಸಸ್' ಎಂದೇ ಖ್ಯಾತವಾಗಿದೆ.

1933: ಸಮಾಜ ಸುಧಾರಕಿ ಹಾಗೂ ಭಾರತೀಯ ಸ್ವಾತಂತ್ರ್ಯ ಹೋರಾಟದ ಧುರೀಣರಲ್ಲಿಒಬ್ಬರಾಗಿದ್ದ ಅನಿಬೆಸೆಂಟ್ ಅವರು ಮದ್ರಾಸಿನಲ್ಲಿ (ಈಗಿನ ಚೆನ್ನೈ) ತಮ್ಮ 85ನೇ ವಯಸ್ಸಿನಲ್ಲಿ ಮೃತರಾದರು.

1881: ಚೆಸ್ಟರ್ ಎ. ಆರ್ಥರ್ ಅವರು ಅಮೆರಿಕದ 21ನೇ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದರು. ಅಮೆರಿಕದ 20ನೇ ಅಧ್ಯಕ್ಷ ಜೇಮ್ಸ್ ಎ. ಗ್ಯಾರಿಫೀಲ್ಡ್ ಅವರನ್ನು ಕೊಲೆಗೈದ ಹಿನ್ನೆಲೆಯಲ್ಲಿ ಆರ್ಥರ್ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಆರಿಸಲಾಯಿತು.

1878: `ದಿ ಹಿಂದು' ವೃತ್ತಪತ್ರಿಕೆಯು ವಾರಪತ್ರಿಕೆಯ ರೂಪದಲ್ಲಿ ಮದ್ರಾಸಿನಲ್ಲಿ ಆರಂಭವಾಯಿತು. 1889ರ ಏಪ್ರಿಲ್ 1ರಿಂದ ಅದು ದಿನಪತ್ರಿಕೆಯಾಯಿತು.

1857: ಮೊದಲ ಸ್ವಾತಂತ್ರ್ಯ ಸಂಗ್ರಾಮದ (ಸಿಪಾಯಿ ದಂಗೆ) ವೈಫಲ್ಯದ ಬಳಿಕ ಬ್ರಿಟಿಷರು ದೆಹಲಿಯನ್ನು ಮರುವಶ ಮಾಡಿಕೊಂಡರು. ದೊರೆ ಎಂಬುದಾಗಿ ಘೋಷಿಸಿಕೊಂಡಿದ್ದ ಕೊನೆಯ ಮೊಘಲ್ ದೊರೆ ಎರಡನೇ ಬಹಾದುರ್ ಶಹಾನನ್ನು  ಹುಮಾಯೂನ್ ಸಮಾಧಿ ಬಳಿ ಬಂಧಿಸಿ, ಬರ್ಮಾಕ್ಕೆ (ಈಗಿನ ಮ್ಯಾನ್ಮಾರ್) ಗಡೀಪಾರು ಮಾಡಲಾಯಿತು. ಅಲ್ಲೇ ಆತ ಮೃತನಾದ.

1856: ಭಾರತೀಯ ಸಮಾಜ ಸುಧಾರಕ ನಾರಾಯಣ ಗುರು ಜನ್ಮದಿನ.

1955: ಸಾಹಿತಿ ವಸಂತ ಬನ್ನಾಡಿ ಜನನ.

1933: ಯಕ್ಷಗಾನ ಕಲೆಗೆ ದೇಶೀ ನೆಲೆಯಲ್ಲಿ ಒಂದು ಸಮರ್ಥ ವೇದಿಕೆ ನಿರ್ಮಿಸಿ ಹೆಸರು ತಂದುಕೊಟ್ಟ ಎಚ್.ಬಿ.ಎಲ್. ರಾವ್ ಅವರು ಎಚ್.ಪಿ. ರಾವ್- ಸೀತಾ ರತ್ನ ದಂಪತಿಯ ಮಗನಾಗಿ ಉಡುಪಿ ಜಿಲ್ಲೆಯ ಹೆಜಮಾಡಿಯಲ್ಲಿ ಈದಿನ ಜನಿಸಿದರು. ಯಕ್ಷಗಾನ ಕಲೆಗೆ ಆಧುನಿಕ ಸ್ಪರ್ಶ ನೀಡಿ, ದೇಶ ವಿದೇಶಗಳಿಗೆ ಅದನ್ನು ಒಯ್ದ ಕೀರ್ತಿ ಶಿವರಾಮ ಕಾರಂತರಿಗೆ ಸಲ್ಲುತ್ತದೆ.

1933: ಭಾರತೀಯ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದ್ದ ವಿದೇಶೀ ಮೂಲದ ಅನಿಬೆಸೆಂಟ್ (86) ಅವರು ಈದಿನ ಭಾರತದಲ್ಲಿ ನಿಧನರಾದರು. ಅವರು ಹುಟ್ಟಿದ್ದು  1847ರಲ್ಲಿ ಇಂಗ್ಲೆಂಡಿನಲ್ಲಿ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Post a Comment