ನಾನು ಮೆಚ್ಚಿದ ವಾಟ್ಸಪ್

Saturday, January 4, 2020

ಇಂದಿನ ಇತಿಹಾಸ History Today ಜನವರಿ 04

ಇಂದಿನ ಇತಿಹಾಸ  History Today ಜನವರಿ 04 
2020: ಮುಂಬೈ:  ಶಿವಸೇನಾ ನೇತೃತ್ವದ ಮಹಾರಾಷ್ಟ್ರ ವಿಕಾಸ ಅಘಾಡಿ ಸರ್ಕಾರಕ್ಕೆ ಆಗಿರುವ ಹಿನ್ನಡೆಯೊಂದರಲ್ಲಿ ಸೇನಾ ಸಚಿವ ಅಬ್ದುಲ್ ಸತ್ತಾರ್ ಅವರು ತಮ್ಮ ಹುದ್ದೆಗೆ 2020 ಜನವರಿ 04ರ  ಶನಿವಾರ  ರಾಜೀನಾಮೆ ನೀಡಿದ್ದಾರೆ ಎಂದು ವರದಿಯಾಯಿತು. ಆದರೆ ಪಕ್ಷ ಮೂಲಗಳು ವರದಿಯನ್ನು ನಿರಾಕರಿಸಿದ್ದು, ಸತ್ತಾರ್ ಅವರು 2020 ಜನವರಿ 05ರ ಭಾನುವಾರ ಪಕ್ಷದ ನಾಯಕ ಉದ್ಧವ್ ಠಾಕ್ರೆ ಭೇಟಿ ಮಾಡಲಿದ್ದಾರೆ ಎಂದು ತಿಳಿಸಿದವು.  ಔರಂಗಾಬಾದ್ ಜಿಲ್ಲೆಯ ಸಿಲ್ಲೋದ್ ಕ್ಷೇತ್ರದ ಶಾಸಕ ಸತ್ತಾರ್ ಅವರು ವಿಧಾನಸಭಾ ಚುನಾವಣೆಗೆ ಮುನ್ನ ಕಾಂಗ್ರೆಸ್ ಪಕ್ಷದಿಂದ ಶಿವಸೇನೆಗೆ ಪಕ್ಷಾಂತರಗೊಂಡಿದ್ದರು. ಪಕ್ಷವು ತನಗೆ ಸಂಪುಟ ದರ್ಜೆಯನ್ನು ನೀಡದೆ, ರಾಜ್ಯ ಸಚಿವ ಸ್ಥಾನ ನೀಡಿದ್ದಕ್ಕಾಗಿ ಸತ್ತಾರ್ ಅವರು ಪಕ್ಷ ನಾಯಕತ್ವದ ಜೊತೆಗೆ ಮುನಿಸಿಕೊಂಡಿದ್ದರು ಎಂದು ಘಟನಾವಳಿಗಳ ಬಗ್ಗೆ ಅರಿವು ಹೊಂದಿರುವ ಅವರ ಆಪ್ತರೊಬ್ಬರು ತಿಳಿಸಿದರು. ಸಚಿವರ ರಾಜೀನಾಮೆ ಬಗ್ಗೆ ಮುಖ್ಯಮಂತ್ರಿ ಕಚೇರಿಯಿಂದ ಅಥವಾ ರಾಜಭವನದಿಂದ ಯಾವುದೇ ದೃಢೀಕರಣ ಬಂದಿಲ್ಲ. ಸ್ವತಃ ಸತ್ತಾರ್ ಅವರೂ ವಿಷಯಕ್ಕೆ ಸಂಬಂಧಿಸಿದಂತೆ ಇನ್ನೂ ಮಾತನಾಡಿಲ್ಲ. ಸತ್ತಾರ್ ರಾಜೀನಾಮೆ ಬಗ್ಗೆ ಹಿರಿಯ ಶಿವಸೇನಾ ನಾಯಕರು ತಮಗೆ ಸತ್ತಾರ್ ಅವರು ರಾಜೀನಾಮೆ ನೀಡಿರುವ ಬಗ್ಗೆ ಅರಿವು ಇಲ್ಲ ಎಂದು ಹೇಳಿದ್ದಾರೆ. ಪಕ್ಷವು ಅವರ ಮನವೊಲಿಸಲು ಯತ್ನಿಸುತ್ತಿದೆ. ಸತ್ತಾರ್ ಅವರು ರಾಜೀನಾಮೆ ನೀಡಿಲ್ಲ ಎಂದು ಹಿರಿಯ ಸೇನಾ ಕಾರ್ಯಕರ್ತ ಅನಿಲ್ ದೇಸಾಯಿ ಪ್ರತಿಪಾದಿಸಿದ್ದಾರೆ. ಮಧ್ಯೆ ಸೇನಾದ ಅರ್ಜುನ್ ಖೋತ್ಕರ್ ಅವರನ್ನು ಪಕ್ಷದ ಪರವಾಗಿ ಸತ್ತಾರ್ ಅವರನ್ನು ಭೇಟಿ ಮಾಡಿ ವಿಷಯದ ಚರ್ಚೆಗಾಗಿ ಕಳುಹಿಸಲಾಗಿತ್ತು. ಖೋತ್ಕರ್ ಅವರು ಔರಂಗಾಬಾದ್ ಹೋಟೆಲ್ ಒಂದರಲ್ಲಿ ಸತ್ತಾರ್ ಅವರನ್ನು ಶನಿವಾರ ಭೇಟಿ ಮಾಡಿದರು ಆದರೆ ಅಲ್ಲಿಂದ ಹೊರಡುವ ಮುನ್ನ ಯಾವುದೇ ಹೇಳಿಕೆಯನ್ನೂ ನೀಡಲಿಲ್ಲ. ( ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ಮುಂಬೈ
:
  ಕಾಂಗ್ರೆಸ್ ಪಕ್ಷದ ಆಧೀನ ಸಂಘಟನೆ ಸೇವಾದಳವು ಪ್ರಕಟಿಸಿರುವ ವಿವಾದಾತ್ಮಕ ವೀರ ಸಾವರ್ಕರ್ ಕಿತನೆ ವೀರ್ ?’ ಹಿಂದಿ ಪುಸ್ತಕವನ್ನು ಹಿಂತೆಗೆದುಕೊಳ್ಳುವಂತೆ ಮಹಾರಾಷ್ಟ್ರದ ಆಡಳಿತಾರೂಢ ಮೈತ್ರಿಕೂಟದ ಅಂಗಪಕ್ಷವಾಗಿರುವ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷವು (ಎನ್ಸಿಪಿ) 2020 ಜನವರಿ 04ರ ಶನಿವಾರ ಆಗ್ರಹಿಸಿತು.  ತ್ರಿಪಕ್ಷ ಮೈತ್ರಿಕೂಟದಲ್ಲಿ ಶಿವಸೇನೆ, ಎನ್ಸಿಪಿ ಮತ್ತು ಕಾಂಗ್ರೆಸ್ ಅಂಗಪಕ್ಷಗಳಾಗಿವೆ. ಕಾಂಗ್ರೆಸ್ ಪಕ್ಷದ ಆಧೀನ ಸಂಸ್ಥೆಯಾಗಿರುವ ಸೇವಾದಳವು ಮಧ್ಯಪ್ರದೇಶದಲ್ಲಿ ತನ್ನ ಶಿಬಿರದಲ್ಲಿ ಪುಸ್ತಕವನ್ನು ವಿತರಿಸಿದ್ದು, ಪುಸ್ತಕವು ಸಾವರ್ಕರ್ ಅವರ ದೇಶಭಕ್ತಿಯ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿದೆ. ‘ಸಾವರ್ಕರ್ ಅವರು ಜೀವಂತರಾಗಿ ಇಲ್ಲದೇ ಇರುವುದರಿಂದ ಇಂತಹ ಪ್ರತಿಪಾದನೆ ಮಾಡುವುದು ಸರಿಯಲ್ಲಎಂದು ಎನ್ಸಿಪಿ ಮುಖ್ಯ ವಕ್ತಾರ ನವಾಬ್ ಮಲಿಕ್ ಹೇಳಿದರುವಿನಾಯಕ ದಾಮೋದರ ಸಾವರ್ಕರ್ ಅವರು ಅಂಡಮಾನ್ ಸೆಲ್ಯುಲಾರ್ ಸೆರೆಮನೆಯಿಂದ ಬಿಡುಗಡೆಯಾಗಿ ಬಂದ ಬಳಿಕ ಬ್ರಿಟಿಷರಿಂದ ಪಿಂಚಣಿ ಪಡೆದಿದ್ದಾರೆ. ಮಹಾತ್ಮಾ ಗಾಂಧಿ ಹಂತಕ ನಾಥೂರಾಂ ಗೋಡ್ಸೆ ಜೊತೆಗೆ ಅವರು ದೈಹಿಕ ಸಂಬಂಧವನ್ನೂ ಹೊಂದಿದ್ದರುಎಂದು ವಿವಾದಾತ್ಮಕ ಪುಸ್ತಕವು ಆಪಾದಿಸಿದೆ.    ‘ಪುಸ್ತಕವನ್ನು ಹಿಂತೆಗೆದುಕೊಳ್ಳಬೇಕು. ನಿಮಗೆ ವ್ಯಕ್ತಿಗಳ ಜೊತೆಗೆ ಸೈದ್ಧಾಂತಿಕ ಭಿನ್ನಮತ ಇರಬಹುದು. ಆದರೆ ವ್ಯಕ್ತಿ ನಮ್ಮ ಸುತ್ತಮುತ್ತ ಇಲ್ಲದೇ ಇದ್ದಾಗ ಇಂತಹ ವೈಯಕ್ತಿಕ ಟೀಕೆಗಳನ್ನು ಮಾಡುವುದು ಸರಿಯಲ್ಲಎಂದು ನವಾಬ್ ಮಲಿಕ್ ಹೇಳಿದರು. (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ) 

2020: ಮೀರತ್
: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು 2020 ಜನವರಿ 04ರ  ಶನಿವಾರ ಉತ್ತರಪ್ರದೇಶದ ಪಶ್ಚಿಮಭಾಗದ ಮುಜಾಫ್ಫರನಗರದಲ್ಲಿ ಕಳೆದ ತಿಂಗಳಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧೀ ಪ್ರತಿಭಟನೆಗಳ ವೇಳೆಯಲ್ಲಿ ಮೃತರಾದವರು, ಗಾಯಗೊಂಡವರು ಮತ್ತು ಬಂಧನಕ್ಕೆ ಒಳಗಾದವರ ಮನೆಗಳಿಗೆ ಭೇಟಿ ನೀಡಿ ಅವರ ಜೊತೆಗೆ ಮಾತುಕತೆ ನಡೆಸಿದರು. ಪೂರ್ವ ಉತ್ತರಪ್ರದೇಶದ ಉಸ್ತುವಾರಿ ವಹಿಸಿರುವ ಪಕ್ಷದ ಪ್ರಧಾನ ಕಾರ್ಯದರ್ಶಿ ಮೀರತ್ ಹೊರವಲಯದಲ್ಲಿ ಡಿಸೆಂಬರ್ ೨೦ರಂದು ನಡೆದ ಪ್ರತಿಭಟನೆ ಕಾಲದಲ್ಲಿ ಮೃತರಾದ ವ್ಯಕ್ತಿಗಳ ಸಂಬಂಧಿಗಳನ್ನು ಭೇಟಿ ಮಾಡಿದರು. ಮುನ್ನ ಅವರಿಗೆ ಮೃತರ ಬಂಧುಗಳ ಭೇಟಿಗೆ ಅವಕಾಶ ನಿರಾಕರಿಸಲಾಗಿತ್ತು. ಪ್ರಿಯಾಂಕಾ ಅವರು ದೆಹಲಿಗೆ ವಾಪಸಾಗುವ ಮಾರ್ಗದಲ್ಲಿ ಬೈಪಾಸ್ ರಸ್ತೆಯಲ್ಲಿ ಐವರು ಮೃತರ ಕುಟುಂಬಗಳ ಜೊತೆ ಮಾತನಾಡಿದರು ಎಂದು ಮೀರತ್ ನಗರ ಕಾಂಗ್ರೆಸ್ ಘಟಕದ ಮುಖ್ಯಸ್ಥ ಜಹೀದ್ ಅನ್ಸಾರಿ ಹೇಳಿದರು. ಪ್ರಿಯಾಂಕಾಗಾಂಧಿ ಅವರು ಮುಜಾಫ್ಫರನಗರಕ್ಕೆ ಶನಿವಾರ ಬೆಳಗ್ಗೆ ಆಗಮಿಸಿ ಮೀನಾಕ್ಷಿ ಚೌಕದ ಬಳಿ ಮದ್ರಸಾ ಹೊಜ್ ಇಲ್ಮಿಯಾ ನಡೆಸುವ ಮೌಲಾನಾ ಅಸದ್ ಹುಸೈನಿ ಅವರನ್ನು ಭೇಟಿ ಮಾಡಿದರು. ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆ ವೇಳೆಯಲ್ಲಿ ಇದೇ ಚೌಕದಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ‘ಸಂತ್ರಸ್ಥರೆಲ್ಲರೂ ಪೊಲೀಸರು ಭೀತಿಯ ಸಾಮ್ರಾಜ್ಯ ಸೃಷ್ಟಿಸಿದ್ದಾರೆ ಮತ್ತು ಮಾಡದ ತಪ್ಪುಗಳಿಗಾಗಿ ತಮ್ಮನ್ನು ಥಳಿಸುತ್ತಿದ್ದಾರೆ ಎಂದು ಆಪಾದಿಸಿದರುಎಂದು ಹುಸೈನಿ ಮತ್ತು ಇತರ ಸಂತ್ರಸ್ಥರ ಜೊತೆಗಿನ ಮಾತುಕತೆಯ ಬಳಿಕ ಪ್ರಿಯಾಂಕಾ ಅವರು ಹೇಳಿದರು. ಪೊಲೀಸರು ಮದ್ರಸಾವನ್ನು ಪ್ರವೇಶಿಸಿ ಮೌಲಾನಾ ಮತ್ತು ಅವರ ವಿದ್ಯಾರ್ಥಿಗಳನ್ನು ಥಳಿಸಿದರು ಎಂದು ಪ್ರಿಯಾಂಕಾ ನುಡಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

2020: ಜಲ್ನಾ:  ಸಂಪುಟದರ್ಜೆ ಸಚಿವ ಸ್ಥಾನಮಾನ ಸಿಗದ ಕಾರಣಕ್ಕಾಗಿ ಶಿವಸೇನೆಯ ಮುಸ್ಲಿಂ ಶಾಸಕ ಅಬ್ದುಲ್ ಸತ್ತಾರ್ ರಾಜೀನಾಮೆ ಬೆನ್ನಲ್ಲೇ, ಮಹಾರಾಷ್ಟ್ರ ಸರ್ಕಾರದ ಸಚಿವ ಸಂಪುಟಕ್ಕೆ ತಮ್ಮನ್ನು ಸೇರ್ಪಡೆ ಮಾಡಿಲ್ಲ ಎಂದು ಅಸಮಾಧಾನದಿಂದ ಕುದಿಯುತ್ತಿರುವ ಜಲ್ನಾದ ಕಾಂಗ್ರೆಸ್ ಶಾಸಕ ಕೈಲಾಶ್ ಗೊರಂತ್ಯಾಲ್ ಅವರು ತಾವು ಪದಾಧಿಕಾರಿಗಳು ಮತ್ತು ಕಾರ್ಯಕರ್ತ ಜೊತೆಗೆ ಪಕ್ಷದ ಹುದ್ದೆಗಳಿಗೆ ರಾಜೀನಾಮೆ ನೀಡುವುದಾಗಿ 2020 ಜನವರಿ 04ರ  ಶನಿವಾರ ಪ್ರಕಟಿಸಿದರು.  ಜಿಲ್ಲಾ ಕಾಂಗೆಸ್ ಸಮಿತಿ ಸಭೆಯಲ್ಲಿ ರಾಜೀನಾಮೆ ನೀಡುವ ತೀರ್ಮಾನವನ್ನು ಈದಿನ  ಕೈಗೊಳ್ಳಲಾಗಿದೆ ಎಂದು ಗೊರಂತ್ಯಾಲ್ ಹೇಳಿದರು.  ‘ನಾನು ಮಹಾರಾಷ್ಟ್ರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಾಳಾಸಾಹೇಬ್ ಥೋರಟ್ ಅವರನ್ನು ಭೇಟಿ ಮಾಡಿ ಪಕ್ಷದ ಹುದ್ದೆಗಳಿಗೆ ನನ್ನ ರಾಜೀನಾಮೆಯನ್ನು ನೀಡುತ್ತೇನೆ. ಜಲ್ನಾ ಮುನಿಸಿಪಲ್ ಕೌನ್ಸಿಲ್, ಜಿಲ್ಲಾ ಪರಿಷತ್ತಿನ ಪಕ್ಷ ಸದಸ್ಯರೂ ನನ್ನ ಜೊತೆಗೇ ತಮ್ಮ ರಾಜೀನಾಮೆಗಳನ್ನು ಸಲ್ಲಿಸಲಿದ್ದಾರೆಎಂದು ಎಂದು ಗೊರಂತ್ಯಾಲ್ ನುಡಿದರು.  ಆಲ್ನಾದಲ್ಲಿನ ಎಲ್ಲ ತಹ್ಸಿಲ್ಗಳ ಕಾಂಗ್ರೆಸ್ ಕಾರ್ಯಕರ್ತರು ಈಗಾಗಲೇ ರಾಜೀನಾಮೆ ನೀಡಿದ್ದಾರೆ ಎಂದು ಶಾಸಕ ಪ್ರತಿಪಾದಿಸಿದರು. ‘ಪಕ್ಷವು ನನ್ನನ್ನು ನಿರ್ಲಕ್ಷಿಸಿದೆ ಮತ್ತು ನನಗೆ ನ್ಯಾಯ ಒದಗಿಸಿಲ್ಲಎಂದು ಅವರು ನುಡಿದರು. ಗೊರಂತ್ಯಾಲ್ ಅವರು ಅಕ್ಟೋಬರ್ ತಿಂಗಳಲ್ಲಿ ನಡೆದಿದ್ದ ವಿಧಾನಸಭಾ ಚುನಾವಣೆಯಲ್ಲಿ ಶಿವಸೇನೆಯ ಅರ್ಜುನ್ ಖೋತ್ಕರ್ ಅವರನ್ನು ಪರಾಭವಗೊಳಿಸಿದ್ದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020:  ಮುಂಬೈ
:  ಹದಿನಾರು ವರ್ಷಗಳ ಹಿಂದೆ ಕಪಿಲ್  ದೇವ್  ಅವರ ಉತ್ತರಾಧಿಕಾರಿ ಎಂಬ ಹೆಗ್ಗಳಿಕೆಯೊಂದಿಗೆ ಭಾರತ ತಂಡವನ್ನು ಪ್ರವೇಶಿಸಿದ್ದ ಆಲ್ ರೌಡರ್ ಇರ್ಫಾನ್ ಪಠಾಣ್  2020 ಜನವರಿ 04ರ  ಶನಿವಾರ  ಎಲ್ಲ ಮಾದರಿಯ ಕ್ರಿಕೆಟಿಗೆ ವಿದಾಯ ಘೋಷಿಸಿದರು. ಎಡಗೈ ಸೀಮ್ ಬೌಲಿಂಗ್ ಆಲ್ ರೌಂಡ್ ಸಾಧನೆಯ ಮೂಲಕ ಮಿಂಚತೊಡಗಿದರೂ ಪದೇಪದೇ ಕಾಡುತ್ತಿದ್ದ ಗಾಯದ ಸಮಸ್ಯೆ  ಇರ್ಫಾನ್ ಕ್ರಿಕೆಟ್ ಬದುಕಿಗೆ ಕಂಟಕವಾಗಿ ಕಾಡಿತ್ತು. ಹೀಗಾಗಿ ಕಪಿಲ್ ದೇವ್  ಸ್ಥಾನವನ್ನು ತುಂಬಲು ಅವರಿಂದ ಸಾಧ್ಯವಾಗಲೇ ಇಲ್ಲ. ಸ್ವಿಂಗ್ ಸ್ಪೆಷಲಿಸ್ಟ್: ಬಲಗೈ ಬ್ಯಾಟ್ ಮನ್ ಗಳಿಗೆ  ಎಡಗೈ ಸ್ವಿಂಗ್ ಎಸೆತಗಳ ಮೂಲಕ ಅಪಾಯಕಾರಿಯಾಗಿ ಗೋಚರಿಸುತ್ತಿದ್ದ ಇರ್ಫಾನ್ ಪಠಾಣ್ ೨೦೦೩ರ ಆಸ್ಟ್ರೇಲಿಯ ಪ್ರವಾಸದ ವೇಳೆ ಅಡಿಲೇಡಿನಲ್ಲಿ  ಟೆಸ್ಟ್ ಪದಾರ್ಪಣೆ ಮಾಡಿದ್ದರು. ೨೦೦೮ರ ಬಳಿಕ ಯಾವುದೇ ಟೆಸ್ಟಿನಲ್ಲಿ  ಕಾಣಿಸಿಕೊಳ್ಳಲಿಲ್ಲ. ೨೦೦೪-೨೦೧೨ರ ಅವಧಿಯಲ್ಲಿ ಏಕದಿನ ತಂಡದ ಸದಸ್ಯರಾಗಿದ್ದರು. ೨೫ ಟೆಸ್ಟ್ ಗಳಿಂದ  ,೧೦೫ ರನ್, ೧೦೦ ವಿಕೆಟ್; ೧೨೦ ಏಕದಿನ ಪಂದ್ಯಗಳಿಂದ ,೫೪೪ ರನ್ ಹಾಗೂ ೧೭೩ ವಿಕೆಟ್; ೨೪ ಟಿ೨೦ ಪಂದ್ಯಗಳಿಂದ ೧೭೨ ರನ್ ಹಾಗೂ ೨೮ ವಿಕೆಟ್ ಉರುಳಿಸಿದ್ದು ಇರ್ಫಾನ್ ಅವರ ಸಾಧನೆಯಾಗಿತ್ತು. (ವಿವರಗಳಿಗೆಇಲ್ಲಿ  ಕ್ಲಿಕ್  ಮಾಡಿರಿ)

ಇಂದಿನ ಇತಿಹಾಸ  History Today ಜನವರಿ 04  (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)




No comments:

Post a Comment