ನಾನು ಮೆಚ್ಚಿದ ವಾಟ್ಸಪ್

Friday, January 31, 2020

ಇಂದಿನ ಇತಿಹಾಸ History Today ಜನವರಿ 31

2020: ನವದೆಹಲಿ: ೨೦೧೨ರ ದೆಹಲಿ ಸಾಮೂಹಿಕ ಅತ್ಯಾಚಾರ, ಕೊಲೆ ಪ್ರಕರಣದ ನಾಲ್ವರು ಶಿಕ್ಷಿತ ಅಪರಾಧಿಗಳನ್ನು ಫೆಬ್ರುವರಿ ೧ರ ಶನಿವಾರ ಬೆಳಗ್ಗೆ ಗಂಟೆಗೆ ಗಲ್ಲಿಗೇರಿಸಲು ನೀಡಲಾಗಿದ್ದ ಆದೇಶದ ಜಾರಿಗೆ ದೆಹಲಿಯ ವಿಚಾರಣಾ ನ್ಯಾಯಾಲಯವು  2020 ಜನವರಿ 31ರ ಶುಕ್ರವಾರ  ಸಂಜೆ ತಡೆಯಾಜ್ಞೆ ನೀಡಿತುಮರಣದಂಡನೆ ಜಾರಿಯನ್ನು ತಡೆ ಹಿಡಿಯುವಂತೆ ಕೋರಿ ಶಿಕ್ಷಿತ ಅಪರಾಧಿಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯಅರ್ಜಿಯ ಕುರಿತು ಮುಂದಿನ ಆದೇಶ ನೀಡುವವರೆಗೆ ಗಲ್ಲು ಜಾರಿಯನ್ನು ತಡೆಹಿಡಿದಿರುವುದಾಗಿ ಪ್ರಕಟಿಸಿತು. ಪ್ರಕರಣದಲ್ಲಿ ದಾರುಣವಾಗಿ ಸಾವನ್ನಪ್ಪಿದ್ದ ನತದೃಷ್ಟ ಯುವತಿಯ ತಾಯಿ ಆಶಾದೇವಿ ಅವರು ನ್ಯಾಯಾಲಯವು ಗಲ್ಲು ಶಿಕ್ಷೆಯ ಜಾರಿಗೆ ತಡೆಯಾಜ್ಞೆ ನೀಡಿದ ಕೆಲವೇ ನಿಮಿಷಗಳಲ್ಲಿ ನ್ಯಾಯಾಲಯದಲ್ಲೇ ಬಿಕ್ಕಳಿಸಿ ಅತ್ತ ಘಟನೆಯೂ ಘಟಿಸಿತು. ಶಿಕ್ಷಿತ ಅಪರಾಧಿಗಳು ಮರಣದಂಡನೆ ಜಾರಿಯನ್ನು ಅನಿರ್ದಿಷ್ಟ ಅವಧಿಯವರೆಗೆ ಮುಂದೂಡುವಂತೆ ತಮ್ಮ ಅರ್ಜಿಯಲ್ಲಿ ಮನವಿ ಮಾಡಿದ್ದರು ಎಂದು ಶಿಕ್ಷಿತರ ಪರ ವಕೀಲ ಎಪಿ ಸಿಂಗ್ ಹೇಳಿದರು. ’ ಶಿಕ್ಷಿತರು ಭಯೋತ್ಪಾದಕರಲ್ಲಎಂದು ಅವರು ನುಡಿದರು. ಸೆರೆಮನೆ ನಿಯಮಾವಳಿಯ ೮೩೬ನೇ ನಿಯಮವನ್ನು ಉಲ್ಲೇಖಿಸಿದ ವಕೀಲರುಒಬ್ಬನಿಗಿಂತ ಹೆಚ್ಚು ವ್ಯಕ್ತಿಗಳು ಮರಣದಂಡನೆಗೆ ಗುರಿಯಾಗಿರುವ ಪ್ರಕರಣಗಳಲ್ಲಿ ಎಲ್ಲ ಶಿಕ್ಷಿತರೂ ತಮ್ಮ ಕಾನೂನುಬದ್ಧ ಪರಿಹಾರಗಳ ಆಯ್ಕೆಯನ್ನು ಚಲಾಯಿಸುವವರೆಗೂ ಗಲ್ಲು ಶಿಕ್ಷೆಯನ್ನು ಜಾರಿಗೊಳಿಸುವಂತಿಲ್ಲ ಎಂದು ನಿಯಮ ಹೇಳುತ್ತದೆಎಂದು ವಿವರಿಸಿದರು. ಶಿಕ್ಷಿತರಲ್ಲಿ ಒಬ್ಬನಾಗಿರುವ ಪವನ್ ಕುಮಾರ್ ಗುಪ್ತ ತನ್ನ ಅಪ್ರಾಪ್ತ ವಯಸ್ಸಿನ ಪ್ರತಿಪಾದನೆಯನ್ನು ತಿರಸ್ಕರಿಸಿದ್ದರ ವಿರುದ್ಧ ಸುಪ್ರಿಂಕೋರ್ಟಿನಲ್ಲಿ ಪುನರ್ ಪರಿಶೀಲನಾ ಅರ್ಜಿಯನ್ನು ಸಲ್ಲಿಸಿದ್ದು, ಅಕ್ಷಯ್ ಕುಮಾರ್ ಸಲ್ಲಿಸಿದ ಕುರೇಟಿವ್ ಅರ್ಜಿ ತಿರಸ್ಕೃತಗೊಂಡಿದೆ. ಸುಪ್ರೀಂಕೋರ್ಟಿನ ಆದೇಶ ಲಭಿಸಿದ ಬಳಿಕ ನಾನು ಕ್ಷಮಾದಾನ ಕೋರಿಕೆ ಅರ್ಜಿಯನ್ನು ಸಲ್ಲಿಸಲಿದ್ದೇನೆಎಂದು ಪವನ್ ಕುಮಾರ್ ಗುಪ್ತನನ್ನು ಪ್ರತಿನಿಧಿಸಿದ ವಕೀಲ ಸಿಂಗ್ ನುಡಿದರು. ಏನಿದ್ದರೂ, ಪವನ್ ಗುಪ್ತ ಸಲ್ಲಿಸಿದ್ದ ಪುನರ್ ಪರಿಶೀಲನಾ ಅರ್ಜಿಯನ್ನು ಸುಪ್ರೀಂಕೋರ್ಟ್ ಶುಕ್ರವಾರ ಬಳಿಕ ತಿರಸ್ಕರಿಸಿತು. (ವಿವರಗಳಿಗೆ ಇಲ್ಲಿ  ಕ್ಲಿಕ್ ಮಾಡಿರಿ)

2020: ನವದೆಹಲಿ: ಪ್ರಸ್ತುತ ಹಣಕಾಸು ವರ್ಷದಲ್ಲಿ ದೇಶದ ಆರ್ಥಿಕ ವೃದ್ಧಿ ದರ (ಜಿಡಿಪಿ) ಶೇ ೫ರಷ್ಟು ಇರಲಿದೆ ಹಾಗೂ ಮಾರ್ಚ್ ೨೦೨೧ಕ್ಕೆ ಕೊನೆಯಾಗಲಿರುವ ಮುಂದಿನ ಹಣಕಾಸು ವರ್ಷದಲ್ಲಿ ಜಿಡಿಪಿ ಶೇ -. ರಷ್ಟಕ್ಕೆ ಏರಲಿದೆ ಎಂದು ಸರ್ಕಾರದ ಆರ್ಥಿಕ ಸಮೀಕ್ಷೆ ಅಂದಾಜು ಮಾಡಿತು. ಸಮೀಕ್ಷೆಯನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸದನದಲ್ಲಿ 2020 ಜನವರಿ 31ರ ಶುಕ್ರವಾರ ಮಂಡಿಸಿದರು. ಕಳೆದ ವರ್ಷದ ಆರ್ಥಿಕ ಸಮೀಕ್ಷೆಯಲ್ಲಿ ೨೦೧೯-೨೦ರ ಹಣಕಾಸು ವರ್ಷದಲ್ಲಿ ಜಿಡಿಪಿ ಶೇ ೭ರಷ್ಟು ಇರಲಿದೆ ಎಂದು ಅಂದಾಜು ಮಾಡಲಾಗಿತ್ತು. ಆದರೆ, ಜಿಡಿಪಿ ಶೇ ೫ಕ್ಕೆ ಕುಸಿಯಿತು. ಆರ್ಥಿಕತೆಗೆ ಚೇತರಿಕೆ ನೀಡುವುದು, ಏಪ್ರಿಲ್ ನಿಂದ ಆರಂಭವಾಗುವ ೨೦೨೦-೨೧ರ ಹಣಕಾಸು ವರ್ಷದಲ್ಲಿ ಆರ್ಥಿಕ ವೃದ್ಧಿ ಸವಾಲು ಎದುರಿಸಲು ವಿತ್ತೀಯ ಕೊರತೆ ಗುರಿಯನ್ನು ಸಡಿಲಗೊಳಿಸುವ ಅನಿವಾರ್ಯತೆ ಇರುವುದಾಗಿ ಸಮೀಕ್ಷೆ ಹೇಳಿತು.  ೨೦೧೯ರ ಏಪ್ರಿಲ್ ನಲ್ಲಿ ಶೇ .೨ರಷ್ಟಿದ್ದ ಹಣದುಬ್ಬರ ಡಿಸೆಂಬರ್ ವೇಳೆಗೆ ಶೇ .೬ಕ್ಕೆ ಕುಸಿದಿದೆ. ಆರ್ಥಿಕತೆ ಮೇಲೆ ಆಗಿರುವ ಬೇಡಿಕೆ ಕುಸಿತದ ಪರಿಣಾಮವನ್ನು ಇದು ಬಿಂಬಿಸುತ್ತಿದೆ.  ೨೦೧೮-೧೯ರಲ್ಲಿ ವಿತ್ತೀಯ ಕೊರತೆ ಗುರಿ ಶೇ..೩ರಷ್ಟಿತ್ತು. ೨೦೧೯ರ ಬಜೆಟ್ ವೇಳೆ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ೨೦೧೯-೨೦ರ ಗುರಿಯನ್ನು ಶೇ..೪ರಿಂದ ಶೇ..೩ಕ್ಕೆ ಇಳಿಸಿದ್ದರು. ಮುಂದಿನ ಹಣಕಾಸು ವರ್ಷಕ್ಕೆ ವಿತ್ತೀಯ ಕೊರತೆ ಗುರಿಯನ್ನು ಪರಿಷ್ಕರಿಸುವ ಅಗತ್ಯವನ್ನು ತಿಳಿಸಲಾಗಿದ್ದು, ಎಂಕೇಯ್ ಬ್ರೊಕರೇಜ್ ಶೇ . ಆಗಲಿದೆ ಎಂದು ಅಂದಾಜು ಮಾಡಲಾಗಿದೆ.  . (ವಿವರಗಳಿಗೆಇಲ್ಲಿ  ಕ್ಲಿಕ್  ಮಾಡಿರಿ)
2020: ಜಿನೇವಾ (ಸ್ವಿಜರ್ಲೆಂಡ್): ಚೀನಾವನ್ನು ನಡುಗಿಸುತ್ತಿರುವ ಮಾರಣಾಂತಿಕ ಕೊರೋನಾವೈರಸ್ಗೆ ಬಲಿಯಾಗುತ್ತಿರುವವರ ಸಂಖ್ಯೆ ಏರುತ್ತಿದ್ದಂತೆಯೇ ವ್ಯಾಧಿಯ ಗಂಭೀರತೆಯನ್ಹು ಪರಿಗಣಿಸಿ ವಿಶ್ವ ಆರೋಗ್ಯ ಸಂಸ್ಥೆಯು (ಡಬ್ಲ್ಯುಎಚ್)  ಅಂತಾರಾಷ್ಟ್ರೀಯ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿಯನ್ನು ಘೋಷಣೆ ಮಾಡಿತು. ಇತರ ದೇಶಗಳು ಅಪಾಯದಲ್ಲಿರುವ ಕಾರಣ ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದ್ದು ಇದೊಂದು "ಅಸಾಮಾನ್ಯ ಘಟನೆ" ಎಂದು ವಿಶ್ವ ಆರೋಗ್ಯ ಸಂಸ್ಥೆ ಬಣ್ಣಿಸಿತು. ಮೂರು ವಾರಗಳ ಹಿಂದೆ ಚೀನಾದ ನಗರವಾದ ವುಹಾನ್ನಲ್ಲಿ ಆರಂಭವಾಗಿರು ಕೊರೋನಾವೈರಸ್ ಸೃಷ್ಟಿಸಿರುವ ಅಸಾಮಾನ್ಯ ಸ್ಥಿತಿಯ ಹಿನ್ನೆಲೆಯಲ್ಲಿ, ವೈರಸ್ ನಿಯಂತ್ರಣಕ್ಕೆ ಜಾಗತಿಕವಾದ ಸಂಘಟಿತ ಪ್ರಯತ್ನ ಅಗತ್ಯ ಎಂದು ಸಂಸ್ಥೆ ಹೇಳಿತು. ಹೊಸ ವೈರಸ್ನಿಂದ ಈವರೆಗೆ ಸತ್ತಿರುವವರ ಸಂಖ್ಯೆ ಚೀನಾದಲ್ಲಿ ಸುಮಾರು ೨೧೩ಕ್ಕೆ ತಲುಪಿದೆ ಮತ್ತು ವರದಿಯಾದ ಪ್ರಕರಣಗಳ ಸಂಖ್ಯೆ ೧೦,೦೦೦ಕ್ಕೆ ಏರಿದೆ. ಚೀನಾದ ಹುಬೈ ಪ್ರಾಂತ ಒಂದರಲ್ಲೇ ಸತ್ತವರ ಸಂಖ್ಯೆ ೨೦೪ಕ್ಕೆ ಏರಿದೆ. ೧೯೮೨ ಮಂದಿಯಲ್ಲಿ ಹೊಸದಾಗಿ ಸೋಂಕು ಕಂಡುಬಂದಿದೆ. ಒಂದು ಲಕ್ಷಕ್ಕೂ ಅಧಿಕ ಮಂದಿಯನ್ನು ವೈದ್ಯಕೀಯ ನಿಗಾದಲ್ಲಿ ಇರಿಸಲಾಗಿದೆ.  ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ೧೮ ದೇಶಗಳಲ್ಲಿ ೧೦೦ ಪ್ರಕರಣಗಳು ಪತ್ತೆಯಾಗಿದ್ದು, ಎಲ್ಲಡೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಇಟಲಿ ಕೂಡಾ ತನ್ನ ದೇಶಕ್ಕೆ ಬಂದ ಇಬ್ಬರು ಚೀನೀ ಪ್ರವಾಸಿಗರಲ್ಲಿ ಸೋಂಕು ಪತ್ತೆಯಾಗಿದೆ ಎಂದು ತಿಳಿಸಿದೆ. ಹಿನ್ನೆಲೆಯಲ್ಲಿ ಇಟಲಿಯು ತನ್ನ ಎಲ್ಲ ಚೀನೀ ವಿಮಾನ ಸೇವೆಗಳನ್ನು ರದ್ದು ಪಡಿಸಿತು. ಚೀನಾದಲ್ಲಿ ಏನಾಗುತ್ತಿದೆ ಎಂಬುದು ಘೋಷಣೆಗೆ ಮುಖ್ಯ ಕಾರಣವಲ್ಲ, ಬದಲಿಗೆ ಇತರ ದೇಶಗಳಲ್ಲಿ ಏನಾಗುತ್ತಿದೆ ಎಂಬುದು ಇದಕ್ಕೆ ಕಾರಣ. ದುರ್ಬಲ ಆರೋಗ್ಯ ವ್ಯವಸ್ಥೆಗಳನ್ನು ಹೊಂದಿರುವ ದೇಶಗಳು ವ್ಯಾಧಿಯನ್ನು ಎದುರಿಸಲು ಯಾವುದೇ ಸಿದ್ಧತೆಯನ್ನೂ ಹೊಂದಿಲ್ಲವಾದ ಕಾರಣ ವ್ಯಾಧಿ ತಡೆಗೆ ಸಂಘಟಿತವಾದ ಕ್ರಮಗಳ ಅಗತ್ಯವಿದೆಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಹೇಳಿದರು. ‘ನಾವೆಲ್ಲರೂ ಒಗ್ಗಟ್ಟಿನಿಂದ ನಿಂತಾಗ ಮಾತ್ರ ಅದನ್ನು ತಡೆಯಬಹುದುಎಂದು ಟೆಡ್ರೊಸ್ ನುಡಿದರು.  (ವಿವರಗಳಿಗೆ ಇಲ್ಲಿ  ಕ್ಲಿಕ್ ಮಾಡಿರಿ)

ಇಂದಿನ ಇತಿಹಾಸ  History Today ಜನವರಿ31  (2019+ ಹಿಂದಿನವುಗಳಿಗೆ ಇಲ್ಲಿಕ್ಲಿಕ್ ಮಾಡಿರಿ)



No comments:

Post a Comment