Friday, November 7, 2025

PARYAYA: ರಾಷ್ಟ್ರಗೀತೆ "ವಂದೇ ಮಾತರಂ"ಗೆ ೧೫೦ರ ಸಂಭ್ರಮ

 ರಾಷ್ಟ್ರಗೀತೆ "ವಂದೇ ಮಾತರಂ"ಗೆ ೧೫೦ರ ಸಂಭ್ರಮ

ಸ್ಮರಣಾರ್ಥ ಉತ್ಸವ ಕ್ಕೆ ಪ್ರಧಾನಿ ಚಾಲನೆ

ಭಾರತದ ರಾಷ್ಟ್ರಗೀತೆ ʼವಂದೇ ಮಾತರಂʼನ ೧೫೦ನೇ ವರ್ಷಾಚರಣೆ ಸ್ಮರಣಾರ್ಥ ಉತ್ಸವಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ೨೦೨೫ ನವೆಂಬರ್‌ ೭ರ ಶುಕ್ರವಾರ ಚಾಲನೆ ನೀಡಿದರು.

ಸಂಸ್ಕೃತಿ ಸಚಿವಾಲಯವು ನವದೆಹಲಿಯ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಪ್ರಧಾನಿ ಈ ಶುಭ ಸಮಾರಂಭವನ್ನು ಉದ್ಘಾಟಿಸಿದರು.

ಈ ಕಾರ್ಯಕ್ರಮವು ನವೆಂಬರ್ ೭೨೦೨೫ ರಿಂದ ನವೆಂಬರ್ ೭೨೦೨೬ ರವರೆಗೆ ಒಂದು ವರ್ಷದ ರಾಷ್ಟ್ರವ್ಯಾಪಿ ಸ್ಮರಣೋತ್ಸವಕ್ಕೆ ಔಪಚಾರಿಕವಾಗಿ ನಾಂದಿ ಹಾಡಿತು. ಭಾರತದ ಸ್ವಾತಂತ್ರ್ಯ ಚಳುವಳಿಗೆ ಸ್ಫೂರ್ತಿ ನೀಡಿದ ಮತ್ತು ರಾಷ್ಟ್ರೀಯ ಹೆಮ್ಮೆ ಹಾಗೂ ಏಕತೆಯನ್ನು ಇಂದಿಗೂ ಜಾಗೃತಗೊಳಿಸುತ್ತಿರುವ ಈ ಕಾಲಾತೀತ ಸಂಯೋಜನೆಗೆ ೧೫೦ ವರ್ಷಗಳು ತುಂಬಿದ ಸಂಭ್ರಮ ಇದು.

🌟 ವಂದೇ ಮಾತರಂ ಇತಿಹಾಸ ಮತ್ತು ಮಹತ್ವ 🌟

೨೦೨೫ ವಂದೇ ಮಾತರಂ ಗೀತೆಗೆ ೧೫೦ ವರ್ಷ ತುಂಬಿದ ವರ್ಷ. ಬಂಕಿಮಚಂದ್ರ ಚಟರ್ಜಿ ಅವರು ರಚಿಸಿದ ನಮ್ಮ "ವಂದೇ ಮಾತರಂ" ರಾಷ್ಟ್ರಗೀತೆಯನ್ನು ೧೮೭೫ ರ ನವೆಂಬರ್ ೭ ರ ಅಕ್ಷಯ ನವಮಿಯ ಶುಭ ಸಂದರ್ಭದಲ್ಲಿ ಬರೆಯಲಾಯಿತು ಎಂದು ನಂಬಲಾಗಿದೆ.

ವಂದೇ ಮಾತರಂ ಮೊದಲು ಬಂಕಿಮಚಂದ್ರ ಅವರ ಕಾದಂಬರಿ ಆನಂದಮಠದ ಭಾಗವಾಗಿ 'ಬಂಗದರ್ಶನ್ಎಂಬ ಸಾಹಿತ್ಯ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಕಾಣಿಸಿಕೊಂಡಿತು ಮತ್ತು ನಂತರ ೧೮೮೨ ರಲ್ಲಿ ಸ್ವತಂತ್ರ ಪುಸ್ತಕವಾಗಿ ಪ್ರಕಟವಾಯಿತು.

ಆ ಅವಧಿಯಲ್ಲಿ ಭಾರತವು ಪ್ರಮುಖ ಸಾಮಾಜಿಕಸಾಂಸ್ಕೃತಿಕ ಮತ್ತು ರಾಜಕೀಯ ಬದಲಾವಣೆಗಳಿಗೆ ಒಳಗಾಗುತ್ತಿತ್ತು ಮತ್ತು ರಾಷ್ಟ್ರೀಯ ಅಸ್ಮಿತೆ ಹಾಗೂ ವಸಾಹತುಶಾಹಿ ಆಡಳಿತಕ್ಕೆ ಪ್ರತಿರೋಧದ ಪ್ರಜ್ಞೆ ಬೆಳೆಯುತ್ತಿತ್ತು. ತಾಯಿಭಾರತಿಯನ್ನು ಶಕ್ತಿಸಮೃದ್ಧಿ ಮತ್ತು ದೈವತ್ವದ ಮೂರ್ತರೂಪವಾಗಿ ಆವಾಹಿಸುವ ಈ ಹಾಡುಭಾರತದ ಜಾಗೃತಗೊಂಡ ಏಕತೆ ಮತ್ತು ಆತ್ಮಗೌರವದ ಮನೋಭಾವಕ್ಕೆ ಕಾವ್ಯಾತ್ಮಕ ಅಭಿವ್ಯಕ್ತಿ ನೀಡಿತು. ಶೀಘ್ರದಲ್ಲೇಇದು ರಾಷ್ಟ್ರಭಕ್ತಿಯ ಶಾಶ್ವತ ಸಂಕೇತವಾಯಿತು.

ಜನವರಿ ೨೪೧೯೫೦ ರಂದುಸಂವಿಧಾನ ಸಭೆಯ ಅಧ್ಯಕ್ಷರಾದ ಡಾ. ರಾಜೇಂದ್ರ ಪ್ರಸಾದ್ ಅವರು, "ವಂದೇ ಮಾತರಂ" ಸ್ವಾತಂತ್ರ್ಯ ಹೋರಾಟದಲ್ಲಿ ಐತಿಹಾಸಿಕ ಪಾತ್ರವನ್ನು ವಹಿಸಿದ್ದರಿಂದಅದಕ್ಕೆ ರಾಷ್ಟ್ರಗೀತೆ "ಜನ ಗಣ ಮನ" ದೊಂದಿಗೆ ಸಮಾನ ಗೌರವ ನೀಡಲಾಗುವುದು ಎಂದು ಘೋಷಿಸಿದರು.

🎤 ಸಮಾರಂಭದ ವಿಶೇಷತೆ: ಸಾಮೂಹಿಕ ಗಾಯನ 🎤

ಪ್ರಧಾನಮಂತ್ರಿಗಳ ಸಮ್ಮುಖದಲ್ಲಿ ನಡೆ ಮುಖ್ಯ ಕಾರ್ಯಕ್ರಮದಲ್ಲಿ "ವಂದೇ ಮಾತರಂ"ನ ಸಂಪೂರ್ಣ ಆವೃತ್ತಿಯ ಸಾಮೂಹಿಕ ಗಾಯನ ನಡೆಯಿತು. ದೇಶಾದ್ಯಂತ ಇತರೆಡೆಗಳಲ್ಲೂ ವಂದೇ ಮಾತರಂನ ಸಂಪೂರ್ಣ ಆವೃತ್ತಿಯ ಸಾಮೂಹಿಕ ಗಾಯನ ನಡೆಯಿತು.

ಈ ಅಭಿಯಾನದಲ್ಲಿ ಸಾರ್ವಜನಿಕರುಶಾಲಾ ಮಕ್ಕಳುಕಾಲೇಜು ವಿದ್ಯಾರ್ಥಿಗಳುಅಧಿಕಾರಿಗಳುಚುನಾಯಿತ ಪ್ರತಿನಿಧಿಗಳುಪೊಲೀಸ್ ಸಿಬ್ಬಂದಿವೈದ್ಯರುಶಿಕ್ಷಕರುಚಾಲಕರುಅಂಗಡಿಯವರು ಮತ್ತು ಸಮಾಜದ ಎಲ್ಲ ವರ್ಗಗಳ ಸಂಬಂಧಿತ ಪಾಲುದಾರರು ಭಾಗವಹಿಸಿದರು.

🏛️ ಕೇಂದ್ರ ಸಚಿವ ಸಂಪುಟದ ಅನುಮೋದನೆ 🏛️

ಈ ಐತಿಹಾಸಿಕ ಮತ್ತು ರಾಷ್ಟ್ರೀಯ ಮಹತ್ವವನ್ನು ಗುರುತಿಸಿನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟವು ಅಕ್ಟೋಬರ್ ೧೨೦೨೫ ರಂದು ರಾಷ್ಟ್ರಗೀತೆ ವಂದೇ ಮಾತರಂನ ೧೫೦ ವರ್ಷಗಳ ಆಚರಣೆಗಳಿಗೆ ಅನುಮೋದನೆ ನೀಡಿತ್ತು. ನಂತರಅಕ್ಟೋಬರ್ ೨೪೨೦೨೫ ರಂದು ರಾಷ್ಟ್ರೀಯ ಅನುಷ್ಠಾನ ಸಮಿತಿಯು ನವೆಂಬರ್ ೭೨೦೨೫ ರಿಂದ ನವೆಂಬರ್ ೭೨೦೨೬ ರವರೆಗೆ ಒಂದು ವರ್ಷದ ಸ್ಮರಣೋತ್ಸವಕ್ಕೆ ಅನುಮೋದನೆ ನೀಡಿದೆ.

'ವಂದೇ ಮಾತರಂ'ಗೆ ಗೌರವ ನೀಡಿದ ಪರ್ಯಾಯದ ಪರಿ ಇಲ್ಲಿದೆ: ಚಿತ್ರಗಳನ್ನು ಕ್ಲಿಕ್‌  ಮಾಡಿ ನೋಡಿ:



PARYAYA: ರಾಷ್ಟ್ರಗೀತೆ "ವಂದೇ ಮಾತರಂ"ಗೆ ೧೫೦ರ ಸಂಭ್ರಮ:   ರಾಷ್ಟ್ರಗೀತೆ "ವಂದೇ ಮಾತರಂ" ಗೆ ೧೫೦ ರ ಸಂಭ್ರಮ ಸ್ಮರಣಾರ್ಥ ಉತ್ಸವ ಕ್ಕೆ ಪ್ರಧಾ ನಿ ಚಾಲನೆ ಭಾ ರತದ ರಾಷ್ಟ್ರಗೀತೆ ʼ ವಂದೇ ಮಾತರಂ ʼ ನ ೧೫೦ನೇ ವರ್ಷಾಚ...

No comments:

Post a Comment