Sunday, July 22, 2018

ಇಂದಿನ ಇತಿಹಾಸ History Today ಜುಲೈ 22

ಇಂದಿನ ಇತಿಹಾಸ History Today ಜುಲೈ 22
2019: ನವದೆಹಲಿ: ತಾಂತ್ರಿಕ ಅಡಚಣೆಯಿಂದ ಕೊನೆಯ ಕ್ಷಣದಲ್ಲಿ ಸ್ಥಗಿತಗೊಳಿಸಲಾಗಿದ್ದ ಭಾರತದ ಮಹತ್ವಾಕಾಂಕ್ಷಿ ಚಂದ್ರಯಾನ- ಉಡಾವಣೆಯನ್ನು  ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೋ) ದೇಶದ ಏಕೈಕ ಉಡ್ಡಯನ ಕೇಂದ್ರವಾದ ಆಂಧ್ರಪ್ರದೇಶದ ಶ್ರೀಹರಿಕೋಟ
ದಲ್ಲಿರುವ
ಸತೀಶ ಧವನ್ ಬಾಹ್ಯಾಕಾಶ ಕೇಂದ್ರದಿಂದ  ಈದಿನ  ನಡೆಸಿ, ಉಪಗ್ರಹವನ್ನು ಯಶಸ್ವಿಯಾಗಿ
ಭೂ ಕಕ್ಷೆಗೆ  ಒಯ್ದಿತು. ಉಪಗ್ರಹವನ್ನು ಹೊತ್ತ ೬೪೦ ಟನ್ ತೂಕದ ಜಿಎಸ್ಎಲ್ವಿ ಎಂಕೆ೩-ಎಂ (ಜಿಯೋಸಿಂಕ್ರನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ - ಮಾರ್ಕ್ ) ರಾಕೆಟ್  ಮಧ್ಯಾಹ್ನ .೪೩ ಗಂಟೆಗೆ ನಿಗದಿಯಂತೆಯೇ ಕಿತ್ತಳೆ ಬಣ್ಣದ ಬೆಂಕಿಯನ್ನು ಉಗುಳುತ್ತಾ  ಲಕ್ಷಾಂತರ ಮಂದಿಯ ಹರ್ಷೋದ್ಘಾರಗಳೊಂದಿಗೆ ನಭೋಮಂಡಲಕ್ಕೆ ಚಿಮ್ಮಿತು. ರಾಕೆಟ್ ಗರ್ಜಿಸುತ್ತಾ ಯಶಸ್ವಿಯಾಗಿ
ಗಗನಕ್ಕೆ ಏರಿದ್ದನ್ನು ಭಾರತ ವಿದೇಶಗಳ ಲಕ್ಷಾಂತರ ಮಂದಿ ವೀಕ್ಷಿಸಿದರು.  ‘ಬಾಹುಬಲಿಅಡ್ಡ
ಹೆಸರಿನ ಚಂದ್ರಯಾನ - ಬಾಹ್ಯಾಕಾಶ ನೌಕೆಯು ೪೪ ಮೀಟರ್ ಎತ್ತರವಿದೆ. ಮೂರು ಹಂತಗಳ ಬಾಹ್ಯಾಕಾಶ ನೌಕೆಯು ಟನ್ ತೂಕದ ಉಪಗ್ರಹಗಳನ್ನು ಭೂಸ್ಥಿರ ವರ್ಗಾವಣೆ ಕಕ್ಷೆಗೆ ಉಡಾವಣೆ
ಮಾಡುವ ಸಾಮರ್ಥ್ಯವನ್ನು ಹೊಂದಿದೆಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು
(ಇಸ್ರೋ) ಕೈಗೊಂಡ ಯೋಜನೆಗಳಲ್ಲೇ ಅತ್ಯಂತ ಸಂಕೀರ್ಣವಾದ ಚಂದ್ರಯಾನ- ಉಡಾವಣೆಗೆ
ಭಾನುವಾರ ಸಂಜೆ .೪೩ ಗಂಟೆಗೆ ಕ್ಷಣಗಣನೆ ಆರಂಭಿಸಲಾಗಿತ್ತುತನ್ನ ಎರಡನೇ ಚಂದ್ರಯಾನವನ್ನು ಭಾರತವು ಜುಲೈ ೧೫ರಂದು ಐದನೇ ಬಾರಿಗೆ ಮುಂದೂಡಿತ್ತು. ಉಡಾವಣೆಗೆ ಕೇವಲ ಒಂದು ಗಂಟೆ ಮುಂಚಿತವಾಗಿ ಬಾಹ್ಯಾಕಾಶ ನೌಕೆಯಲ್ಲಿ ತಾಂತ್ರಿಕ ಅಡಚಣೆ ಇದ್ದುದನ್ನು ವಿಜ್ಞಾನಿಗಳು ಗಮನಿಸಿದ
ಬಳಿಕ ಕೊನೆಯ ಕ್ಷಣದಲ್ಲಿ ಯಾನವನ್ನು ಸ್ಥಗಿತಗೊಳಿಸಲಾಗಿತ್ತು. ವಿಜ್ಞಾನಿಗಳು ದೋಷವನ್ನು
ಸರಿಪಡಿಸಿದ ಬಳಿಕ ಜುಲೈ ೨೨ರಂದು ಉಡಾವಣೆಗೆ ಸಮಯ ಮರುನಿಗದಿ ಮಾಡಲಾಗಿತ್ತುಚೀನಾವು
ಕಳೆದ ಜನವರಿಯಲ್ಲಿ ಚಂದ್ರನಲ್ಲಿ ಈವರೆಗೆ ಯಾವ ದೇಶವೂ ಅನ್ಷೇಷಿಸದೇ ಇದ್ದ ಭಾಗದಲ್ಲಿ ತನ್ನ ಬಾಹ್ಯಾಕಾಶ ನೌಕೆಯನ್ನು ಇಳಿಸಿದ ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ೯೭೮ ಕೋಟಿ ರೂಪಾಯಿಗಳ ಚಾಂಗ್- ಯೋಜನೆಯ ಮೂಲಕ ಚೀನಾ ಸಾಹಸ ನಡೆಸಿತ್ತು. ಬಳಿಕ ಭಾರತ
ಇದೀಗ ಚಂದ್ರನಲ್ಲಿ ಇನ್ನೂ ಅನ್ವೇಷಣೆ ನಡೆಯದೇ ಇರುವ ದಕ್ಷಿಣ ಧ್ರುವ ಪ್ರದೇಶಕ್ಕೆ ತನ್ನ ನೌಕೆಯನ್ನು ಕಳುಹಿಸಿದೆ. ಈವರೆಗೆ ಅಮೆರಿಕ, ಹಿಂದಿನ ಸೋವಿಯತ್ ಯೂನಿಯನ್ ಮತ್ತು ಚೀನಾ ಮಾತ್ರ 
ಯಶಸ್ವಿಯಾಗಿ ಚಂದ್ರನ ಮೇಲೆ ತಮ್ಮ ಬಾಹ್ಯಾಕಾಶ ನೌಕೆಗಳನ್ನು ಇಳಿಸಿದ್ದು, ಚಂದ್ರಯಾನದ
ಮೂಲಕ  ಭಾರತವು ೪ನೇ ರಾಷ್ಟ್ರವಾಗಿ ಸಾಲಿಗೆ ಸೇರ್ಪಡೆಯಾಗಿದೆ.   ಚಂದ್ರನ ಕಕ್ಷೆಯಲ್ಲಿ ಒಂದು ವರ್ಷಕಾಲ ಸುತ್ತರಲಿರುವ ಆರ್ಬಿಟರ್ ಸೇರಿದಂತೆ ಚಂದ್ರಯಾನ- ಒಟ್ಟು ,೮೫೦ ಕಿಗ್ರಾಂ ತೂಕವನ್ನು ಹೊಂದಿದೆ. ಆರ್ಬಿಟರ್ ಚಂದ್ರನ ಕಕ್ಷೆಯಲ್ಲಿ ಸುತ್ತುತ್ತಾ ಚಂದ್ರನ ಭಾವಚಿತ್ರಗಳನ್ನು ತೆಗೆಯುವುದರ ಜೊತೆಗೆ ಅಲ್ಲಿನ ಪರಿಸರದ ಮತ್ತು ಚಂದ್ರ ನೆಲದಲ್ಲಿ ಇಳಿಯುವವಿಕ್ರಮ್ಹೆಸರಿನ ಲಾಂಡರ್
ನಡೆಸುವ ಪರೀಕ್ಷೆಯ ವಿವರಗಳನ್ನು ಭೂಮಿಗೆ ಕಳುಹಿಸುವುದು. ಚಂದ್ರ ನೆಲದಲ್ಲಿ ಇಳಿಯುವ
ಲ್ಯಾಂಡರ್ಗೆ ಭಾರತದ ಮುಂಚೂಣಿಯ ಬಾಹ್ಯಾಕಾಶ ವಿಜ್ಞಾನಿ ವಿಕ್ರಮ್ ಸಾರಾಭಾಯಿ ಅವರ
ನೆನಪಿಗಾಗಿವಿಕ್ರಮ್ಹೆಸರು ಇಡಲಾಗಿದೆ. ’ವಿವೇಚನೆಎಂಬ ಅರ್ಥವನ್ನು ಕೊಡುವ ಸಂಸ್ಕೃತ ಪದಪ್ರಗ್ಯಾನ್ಎಂಬ ಹೆಸರನ್ನು ರೋವರ್ಗೆ ಇರಿಸಲಾಗಿತ್ತು. ಆರ್ಬಿಟರ್, ಲ್ಯಾಂಡರ್ ಮತ್ತು ರೋವರ್ನ್ನು ಒಯ್ಯುತ್ತಿರುವ ೩೭೫ ಕೋಟಿ ರೂಪಾಯಿ ವೆಚ್ಚದ ಜಿಎಸ್ಎಲ್ವಿ- ಎಂಕೆ ನೌಕೆಯು ೬೦೩ ಕೋಟಿ ರೂಪಾಯಿ ವೆಚ್ಚದ ಚಂದ್ರಯಾನ- ಬಾಹ್ಯಾಕಾಶ ನೌಕೆಯನ್ನು ೧೬ ನಿಮಿಷಗಳಲ್ಲಿ ಭೂ ಕಕ್ಷೆಗೆ ಒಯ್ದಿದೆ. ಅಲ್ಲಿಂದ ಮುಂದಕ್ಕೆ ಚಂದ್ರನ ಕಕ್ಷೆಯ ಕಡೆಗೆ ಅದು ಸಾಗಲಿದೆ. ಭೂಮಿ ಮತ್ತು ಚಂದ್ರನ ನಡುವಣ ದೂರ ಅಂದಾಜು .೮೪೪ ಲಕ್ಷ ಕಿಲೋ ಮೀಟರುಗಳು. ಯೋಜನೆಯ ಅಡಿಯಲ್ಲಿ ಚಂದ್ರಯಾನವು ತನ್ನ ರೋವರ್ನ್ನು ಇದುವರೆಗೆ ಯಾವುದೇ ದೇಶವೂ ಅನ್ವೇಷಣೆ ಮಾಡದೇ ಇರುವ ಚಂದ್ರದ ದಕ್ಷಿಣ ಧ್ರುವದಲ್ಲಿ ಇಳಿಸಲಿದ್ದು ಚಂದ್ರನ ಮೇಲ್ಮೈಯಲ್ಲಿ ಇರುವ ನೀರಿನ ಗಡ್ಡೆಯ ಅನ್ವೇಷಣೆ ನಡೆಸಲಿದೆ. ತನ್ಮೂಲಕ ೨೦೦೮ರಲ್ಲಿ ಭಾರತದ ಮೊದಲ ಚಂದ್ರಯಾನವು ಒದಗಿಸಿದ್ದ ಮಾಹಿತಿಗೆ ಸಾಕ್ಷ್ಯಾಧಾರವನ್ನು ಕಲೆ ಹಾಕಲಿದೆ. ಉಡ್ಡಯನದಿಂದ ಆರಂಭಿಸಿ, ಚಂದ್ರಯಾನ - ಯೋಜನೆಗೆ ೫೮ ದಿನಗಳನ್ನು ನಿಗದಿ ಪಡಿಸಲಾಗಿದೆ. ಭೂಸ್ಥಿರ ವರ್ಗಾವಣೆ ಕಕ್ಷೆಯಿಂದ ಮೇಲೇರಲು ೧೬ ದಿನ, ಚಂದ್ರನ ಕಕ್ಷೆ ಸೇರಲು ದಿನ ಹಿಡಿಯಲಿದೆ. ಅಲ್ಲಿಗೆ ತಲುಪಿದ ಬಳಿಕ ೨೭ ದಿನಗಳ ಕಾಲ ಅದು ಚಂದ್ರನಿಗೆ ಪ್ರದಕ್ಷಿಣೆ ಹಾಕಲಿದೆ. ಬಳಿಕ ಲ್ಯಾಂಡರ್ ಕಕ್ಷೆಯಿಂದ ಕೆಳಕ್ಕೆ ಇಳಿಯುವ ಪ್ರಯತ್ನ ಮಾಡುವುದು. ಇನ್ನೂ ನಾಲ್ಕು ದಿನಗಳ ಬಳಿಕ ಲ್ಯಾಂಡರ್ ಚಂದ್ರನ ನೆಲದಲ್ಲಿ ಇಳಿಯುವ ಯತ್ನ ನಡೆಸುವುದು. ಅತ್ಯಂತ ಕ್ಲಿಷ್ಟಕರವಾದ ಸಾಹಸಕ್ಕೆ ಅದು ೧೫ ನಿಮಿಷಗಳನ್ನು ತೆಗೆದುಕೊಳ್ಳುವುದು. ಚಂದ್ರನ ನೆಲದಲ್ಲಿ ಚಂದ್ರಯಾನ-೨ನ್ನು ಇಳಿಯುವುದು ಇಸ್ರೋದ ಈವರೆಗಿನ ಅತ್ಯಂತ ದೊಡ್ಡ ಸವಾಲಾಗಿದ್ದು, ಚಂದ್ರನ ನೆಲ ತಲುಪುವ ಮುನ್ನ ಲ್ಯಾಂಡರ್ ಪ್ರತ್ಯೇಕಗೊಳ್ಳುವ ೧೫ ನಿಮಿಷಗಳನ್ನುಭಯಾನಕ ಕ್ಷಣಗಳುಎಂಬುದಾಗಿ ಸಂಸ್ಥೆಯು ಕರೆದಿದೆ. ಇಸ್ರೋ ಇಲ್ಲಿಯವರೆಗೂ ಇಂತಹ ಸಾಹಸವನ್ನೂ ಎಂದೂ ನಡೆಸಿಲ್ಲ.  ಚಂದ್ರಯಾನ -ವಿಕ್ರಮ್ಲ್ಯಾಂಡರ್ ಮತ್ತುಪ್ರಗ್ಯಾನ್ರೋವರ್ನ್ನು ಮಂಜಿನಸ್ ಸಿ ಮತ್ತು ಸಿಂಪೆಲಿಯಸ್ ಎನ್ ಹೆಸರಿನ ಎರಡು ಚಂದ್ರ ಕುಳಿಗಳ ನಡುವಣ ಎತ್ತರದ ಪ್ರದೇಶದಲ್ಲಿ ಇಳಿಸುವುದು. ಅನ್ವೇಷಣೆಗೆ ಇಲ್ಲಿ ಸೌರ ಶಕ್ತಿಯಿಂದ ಪಡೆಯಲಾಗುವ ಬೆಳಕನ್ನು ಬಳಸಲಾಗುವುದು. ದಕ್ಷಿಣ ಧ್ರುವ ಪ್ರದೇಶದಲ್ಲಿ ನೀರು ಮತ್ತು ಖನಿಜಗಳು ಇರಬಹುದು ಎಂಬ ನಿರೀಕ್ಷೆಯೊಂದಿಗೆ ಇಸ್ರೋ ದಕ್ಷಿಣ ಧ್ರುವ ಪ್ರದೇಶದ ಭಾಗವನ್ನು ಅನ್ವೇಷಣೆಗಾಗಿ ಆಯ್ಕೆ ಮಾಡಿದೆರೋವರ್ ಮತ್ತು ಲ್ಯಾಂಡರ್ ಒಂದು ಚಾಂದ್ರ ದಿನದ (೧೪ ಭೂ ದಿನಗಳು) ಜೀವಿತಾವಧಿ ಹೊಂದಿರುತ್ತದೆ. ಮತ್ತು ಅವಧಿಯಲ್ಲಿ ಅದು ವೈಜ್ಞಾನಿಕ ಪರೀಕ್ಷೆಗಳನ್ನು ನಡೆಸಲಿದೆ. ಏನಿದ್ದರೂ, ಆರ್ಬಿಟರ್ ಒಂದು ವರ್ಷದವರೆಗೆ ಕಾರ್ ನಿರ್ವಹಿಸುತ್ತದೆಚಂದ್ರನೆಲ ಸ್ಪರ್ಶದ ಮೊದಲ ಚಿತ್ರಗಳು ಲ್ಯಾಂಡರ್ ಚಂದ್ರನ ನೆಲವನ್ನು ಸ್ಪರ್ಶಿಸಿದ ೧೫ ನಿಮಿಷಗಳ ಒಳಗೆ ಲಭಿಸಬಹುದು. ಏನಿದ್ದರೂ ಚಂದ್ರ ನೆಲದಲ್ಲಿ ಇಳಿಯುವುದರಿಂದ ಹಿಡಿದು ಲ್ಯಾಂಡರ್ನಿಂದ ರೋವರ್ ಹೊರಬರುವವರೆಗಿನ ಪ್ರಕ್ರಿಯೆಗೆ ನಾಲ್ಕು ಗಂಟೆಗಳು ತಗುಲುತ್ತವೆಇಸ್ರೋ ಮತ್ತು ಅಮೆರಿಕದ ನಾಸಾ (ನ್ಯಾಷನಲ್ ಏರೋನಾಟಿಕ್ಸ್ ಅಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್) ಯೋಜನೆಯಲ್ಲಿ ಪರಸ್ಪರ ಸಹಕರಿಸುತ್ತಿದ್ದು ನಾಸಾದ ಲೇಸರ್ ರೇಂಜಿಂಗ್ ಉಪಕರಣವನ್ನು ಚಂದ್ರಯಾನ- ಒಯ್ದಿದೆ. ವಿವಿಧ ಪ್ರಯೋಗಗಳಿಗಾಗಿ ಚಂದ್ರಯಾನ - ಒಟ್ಟು ೧೩ ಭಾರತೀಯ ವೈಜ್ಞಾನಿಕ ಉಪಕರಣಳನ್ನು ಒಯ್ದಿದೆ. ಚಂದ್ರ ಶಿಲೆಗಳಲ್ಲಿ ಮ್ಯಾಗ್ನೇಸಿಯಂ, ಕ್ಯಾಲ್ಸಿಯಂ ಮತ್ತು ಕಬ್ಬಿಣದಂತಹ ಲೋಹಗಳ ಅಂಶ ಎಷ್ಟಿದೆಮತ್ತು ನೀರಿನ ಸೂಚನೆ ಇದೆಏ ಎಂಬುದನ್ನು ಪತ್ತೆ ಹಚ್ಚುವ ಸಲುವಾಗಿ ಅವುಗಳ ಚಿತ್ರ ತೆಗೆಯುವ ಕಾರ್ಯವನ್ನೂ ಚಂದ್ರಯಾನ ಮಾಡಲಿದೆ.
2019: ನವದೆಹಲಿ: ಕಾನೂನಿನ ಪಾರದರ್ಶಕತೆಯನ್ನು ಮೂಲೆಪಾಲು ಮಾಡುವ ಸಲುವಾಗಿ ತಿದ್ದುಪಡಿ ತರಲಾಗಿದೆ ಎಂಬ ವಿರೋಧ ಪಕ್ಷಗಳ ತೀವ್ರ ಟೀಕೆಯ ನಡುವೆ, ಮಾಹಿತಿ ಹಕ್ಕು (ತಿದ್ದುಪಡಿ) ಮಸೂದೆ ೨೦೧೯ಕ್ಕೆ ಲೋಕಸಭೆಯು ತನ್ನ ಅನುಮೋದನೆ ನೀಡಿತು. ಮಾಹಿತಿ ಹಕ್ಕು (ತಿದ್ದುಪಡಿ) ಮಸೂದೆ, ೨೦೧೯ ಕಾನೂನನ್ನು ದುರ್ಬಲಗೊಳಿಸುವ ಉದ್ದೇಶವನ್ನು ಹೊಂದಿದೆ ಎಂಬ ವಿರೋಧ ಪಕ್ಷಗಳ ಟೀಕೆಯನ್ನು ತಿರಸ್ಕರಿಸಿದ ಸರ್ಕಾರವಿರೋಧ ಪಕ್ಷವು ಜನರನ್ನು ದಾರಿತಪ್ಪಿಸುತ್ತಿದೆ. ಉದ್ದೇಶಿತ ಬದಲಾವಣೆಗಳು ಕಾರ್ಯ ನಿರ್ವಹಣೆಯನ್ನು ಸುಗಮಗೊಳಿಸುವ ಗುರಿ ಹೊಂದಿವೆಎಂದು ಪ್ರತಿಪಾದಿಸಿತುಮಸೂದೆ ಮೇಲೆ ನಡೆದ ಚರ್ಚೆಯಲ್ಲಿ ವಿಪಕ್ಷಗಳ ನೇತೃತ್ವ ವಹಿಸಿದ ಕಾಂಗ್ರೆಸ್ ನಾಯಕ ಶಶಿ ತರೂರ್ ಅವರುಉದ್ದೇಶಿತ ಬದಲಾವಣೆಗಳ ಅಡಿಯಲ್ಲಿ ಸರ್ಕಾರವು ಸ್ವತಂತ್ರ ಮಾಹಿತಿ ಆಯುಕ್ತರನ್ನು ತರಾಟೆಗೆ ತೆಗೆದುಕೊಳ್ಳಬಹುದುಎಂದು ಹೇಳಿದರು.  ‘ಇದು ತಿದ್ದುಪಡಿ ಮಸೂದೆಯಲ್ಲ, ಬದಲಿಗೆ ನಿರ್ಮೂಲನಾ ಮಸೂದೆಎಂದು ಅವರು ನುಡಿದರು.  ‘ಕಾಯ್ದೆಯು ರಾಷ್ಟ್ರದ ಪ್ರಜಾಪ್ರಭುತ್ವದ ಗುರಿಸಾಧನೆಗೆ ಮುಖ್ಯವಾಗಿದೆ ಮತ್ತು ಅದು ಸರ್ಕಾರದಲ್ಲಿನ ಸ್ಥಾಪಿತ ಹಿತಾಸಕ್ತಿಗಳಿಗೆ ಸವಾಲು ಹಾಕಿದೆಎಂದು ಮಾಜಿ ಕೇಂದ್ರ ಸಚಿವ ನುಡಿದರು.  ‘ಯಾವುದೇ ಸಾರ್ವಜನಿಕ ಸಮಾಲೋಚನೆ ಇಲ್ಲದೆ ಮಸೂದೆಯನ್ನು ಏಕೆ ತರಲಾಗಿದೆ?’ ಎಂದು ಅವರು ಪ್ರಶ್ನಿಸಿದರು.  ‘ಮಸೂದೆಯನ್ನು ಅಂಗೀಕರಿಸಲು ಸರ್ಕಾರಕ್ಕೆ ಇಷ್ಟೊಂದು ಅವಸರ ಏಕೆ? ಏಕೆಂದರೆ ಕೇಂದ್ರೀಯ ಮಾಹಿತಿ ಆಯೋಗವು (ಸಿಐಸಿ) ಪ್ರಧಾನ ಮಂತ್ರಿಯವರ ಶೈಕ್ಷಣಿಕ ವಿವರಗಳಿಗೆ ಸಂಬಂಧಿಸಿದಂತೆ ಆದೇಶ ಒಂದನ್ನು ನೀಡಿದೆಎಂದು ಅವರು ನುಡಿದರುಕೇಂದ್ರೀಯ ಮಾಹಿತಿ ಆಯೋಗದಲ್ಲಿ ಮಾಹಿತಿ ಆಯುಕ್ತರ ನಾಲ್ಕು ಹುದ್ದೆಗಳು ಖಾಲಿ ಬಿದ್ದಿವೆ ಎಂದು ಅವರು ಬೊಟ್ಟು ಮಾಡಿದರು.  ‘ಮಾಹಿತಿ ಹಕ್ಕು (ತಿದ್ದುಪಡಿ)ಮಸೂದೆ - ೨೦೧೯, ಮೂಲ ಕಾಯ್ದೆಯನ್ನು ಮೂಲೆಗುಂಪು ಮಾಡಿ, ಅದನ್ನು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದಂತೆ (ಎನ್ಎಚ್ಆರ್ಸಿ) ಹಲ್ಲಿಲ್ಲದ ಹುಲಿಯನ್ನಾಗಿ ಮಾಡುವ ಯತ್ನವಾಗಿದೆಎಂದು ತರೂರ್ ಆಪಾದಿಸಿದರು.

11:45 pm (IST)
2019: ಬೆಂಗಳೂರು:  ಕಾಂಗ್ರೆಸ್ ಮತ್ತು ಜನತಾದಳದ (ಎಸ್) 15 ಮಂದಿ ಶಾಸಕರ ರಾಜೀನಾಮೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಅವರು ವಿಧಾನಸಭೆಯಲ್ಲಿ ಮಂಡಿಸಿದ ವಿಶ್ವಾಸ ಮತ ನಿರ್ಣಯವನ್ನು ಮತಕ್ಕೆ ಹಾಕುವ ವಿಚಾರದಲ್ಲಿ ಹಗ್ಗ ಜಗ್ಗಾಟ ಮುಂದುವರೆದು, ಜುಲೈ 23ರ ಮಂಗಳವಾರ ಸಂಜೆ 4 ಗಂಟೆಯ ಒಳಗೆ ವಿಶ್ವಾಸ ಮತ ಕಲಾಪ ಮುಗಿಸುವ ಸ್ಪಷ್ಟ ಸೂಚನೆಯೊಂದಿಗೆ ವಿಧಾನಸಭಾಧ್ಯಕ್ಷ ಕೆ.ಆರ್.  ರಮೇಶ ಕುಮಾರ್ ಅವರು ವಿಧಾನಸಭಾ ಕಲಾಪಗಳನ್ನು ಜುಲೈ 23ರ ಬೆಳಗ್ಗೆ 10 ಗಂಟೆಗೆ ಮುಂದೂಡಿದರು. ಇದಕ್ಕೆ ಮುನ್ನ ಸದನದಲ್ಲಿ ಮುಖ್ಯಮಂತ್ರಿಯವರಿಂದ ರಾಜೀನಾಮೆ ಸಲ್ಲಿಕೆಗೆ ಸಂಬಂಧಿಸಿದ ನಕಲಿ ಪತ್ರದ ಪ್ರದರ್ಶನ, ಮೈತ್ರಿ ಪಕ್ಷಗಳ ಸದಸ್ಯರಿಂದ ಕಲಾಪ ಮುಂದೂಡಿಕೆಗೆ ಆಗ್ರಹಿಸಿ ಘೋಷಣೆ,  ಸಭಾಧ್ಯಕ್ಷರಿಂದ ನನ್ನನ್ನು ರಾಜೀನಾಮೆ ಬೆದರಿಕೆ,  ನನ್ನನ್ನು ಬಲಿಪಶು ಮಾಡಬೇಡಿ, ಕಲಾಪ ಮುಗಿಸುವುದಾಗಿ ನೀಡಿದ ವಚನ ಈಡೇರಿಸಿ ಎಂಬ ಖಡಕ್ ಸೂಚನೆ,  ವಿರೋಧ ಪಕ್ಷ ಸದಸ್ಯರಿಂದ ಇದೇ ದಿನ ಕಲಾಪ ಮುಗಿಸಲು ಆಗ್ರಹದ ದೃಶ್ಯಗಳಿಗೆ ವಿಧಾನಸಭೆ ಸಾಕ್ಷಿಯಾಯಿತು.  ಕಾಂಗ್ರೆಸ್ ಮತ್ತು ಜನತಾದಳದ (ಎಸ್) ೧೫ ಶಾಸಕರು ನೀಡಿದ ರಾಜೀನಾಮೆಯ ಪರಿಣಾಮವಾಗಿ ಸರ್ಕಾರವು ಪತನದ ಅಂಚಿಗೆ ಸರಿದ ಹಿನ್ನೆಲೆಯಲ್ಲಿ ಕುಮಾರ ಸ್ವಾಮಿಯವರು 2019 ಜುಲೈ 18ರ ಗುರುವಾರ ವಿಶ್ವಾಸ ಮತ ನಿರ್ಣಯವನ್ನು ಮಂಡಿಸಿದ್ದರು. ನಿರ್ಣಯದ ಮೇಲಿನ ಚರ್ಚೆಯನ್ನು ಶುಕ್ರವಾರ ಮುಕ್ತಾಯಗೊಳಿಸುವಂತೆ ರಾಜ್ಯಪಾಲ ವಜುಭಾಯಿ ವಾಲಾ ಅವರು ನೀಡಿದ್ದ ಎರಡು ಗಡುವುಗಳನ್ನು ಉಲ್ಲಂಘಿಸಿ ಸದನದಲ್ಲಿ ಚರ್ಚೆ ಮುಂದುವರೆದು, ಈದಿನಕ್ಕೆ ಮುಂದೂಡಿಕೆಯಾಗಿತ್ತು. ಶುಕ್ರವಾರ ಮಧ್ಯಾಹ್ನ  .೩೦ರ ಒಳಗೆ ಬಹುಮತ ಸಾಬೀತು ಪಡಿಸುವಂತೆ ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರಿಗೆ ಮೊದಲ ಗಡುವು ನೀಡಿದ್ದ ರಾಜ್ಯಪಾಲರು, ಅದರ ಉಲ್ಲಂಘನೆಯಾಗಿ ಚರ್ಚೆ ಮುಂದುವರೆದಾಗ ಅದೇ ದಿನ ಸಂಜೆ ಗಂಟೆಯ ಒಳಗಾಗಿ ರಾಜೀನಾಮೆ ನೀಡುವಂತೆ ಎರಡನೇ ಗಡುವು ವಿಧಿಸಿದ್ದರು. ಆದರೆ ಕಲಾಪವನ್ನು ಜುಲೈ 22ರ ಸೋಮವಾರಕ್ಕೆ ಮುಂದೂಡುವಂತೆ ಆಡಳಿತಾರೂಢ ಮೈತ್ರಿಕೂಟ ಸದಸ್ಯರು ಆಗ್ರಹಿಸಿದಾಗ,  ಅದೇ ದಿನ  ಪ್ರಕ್ರಿಯೆ ಪೂರ್ಣಗೊಳಿಸುವ ಬದ್ಧತೆಯನ್ನು ಸರ್ಕಾರದಿಂದ ಪಡೆದುಕೊಂಡು ಸಭಾಧ್ಯಕ್ಷರು ಕಲಾಪವನ್ನು ಜುಲೈ ೨೨ಕ್ಕೆ ಮುಂದೂಡಿದ್ದರುಇದರ ಹೊರತಾಗಿಯೂ ವಿಶ್ವಾಸ ಮತ ಯಾಚನೆಯ ಕಲಾಪವನ್ನು ಇನ್ನೆರಡು ದಿನ ಮುಂದೂಡುವಂತೆ ಆಡಳಿತ ಪಕ್ಷದಿಂದ ಆಗ್ರಹ ಬಂದಾಗಇದು ಸದನಕ್ಕಾಗಲೀ ನನಗಾಗಲೀ ಗೌರವ ತರುವುದಿಲ್ಲಎಂಬುದಾಗಿ ಹೇಳುವ ಮೂಲಕ  ಸಭಾಧ್ಯಕ್ಷರು ತಮ್ಮ ನಿಲುವು ಏನೆಂಬುದನ್ನು ಸ್ಪಷ್ಟ ಪಡಿಸಿದ್ದರು. ನಾವು ಸಾರ್ವಜನಿಕ ಜೀವನದಲ್ಲಿ ಇದ್ದೇವೆ. ಜನರು ನಮ್ಮನ್ನು ಗಮನಿಸುತ್ತಿದ್ದಾರೆ. ಚರ್ಚೆಯ ನೆಪದಲ್ಲಿ ನಾವು ಕಾಲಹರಣ ಮಾಡುತ್ತಿದ್ದೇವೆ ಎಂಬ ಅಭಿಪ್ರಾಯ ಮೂಡಿದಲ್ಲಿ, ಅದು ನನಗಾಗಲೀ ಅಥವಾ ಬೇರೆ ಯಾರಿಗಾದರೂ ಶೋಭೆ ತರುವುದಿಲ್ಲ, ಅದು ಸರಿಯೂ ಅಲ್ಲಎಂದು ರಮೇಶ ಕುಮಾರ್ ಹೇಳಿದರು. ಶಾಸಕರ ರಾಜೀನಾಮೆಗಳ ಬಗ್ಗೆ ಸಭಾಧ್ಯಕ್ಷರು ನಿರ್ಧರಿಸುವವರೆಗೂ ವಿಶ್ವಾಸ ಮತ ನಿರ್ಣಯದ ಮೇಲೆ ಮತದಾನ ನಡೆಸಿದರೆ ಅದಕ್ಕೆ ಯಾವುದೇ ಪಾವಿತ್ರ್ಯ ಇರುವುದಿಲ್ಲ ಎಂಬುದಾಗಿ ಹೇಳುವ ಮೂಲಕ ಹಿರಿಯ ಸಚಿವ ಕೃಷ್ಣ ಬೈರೇಗೌಡ ಅವರು ಕಾಂಗ್ರೆಸ್ ನಿಲುವು ಏನೆಂಬುದನ್ನು ಸದನದಲ್ಲಿ ಚರ್ಚೆಯ ವೇಳೆಯಲ್ಲಿ ಸ್ಪಷ್ಟ ಪಡಿಸಿದರು. ನಾವು ಅಸಾಧಾರಣ ಪರಿಸ್ಥಿತಿ ಎದುರಿಸುತ್ತಿದ್ದೇವೆ. ರಾಜೀನಾಮೆ ವಿಚಾರವನ್ನು ಮೊದಲು ನಿರ್ಧರಿಸಿ ಎಂಬುದಾಗಿ ನಾನು ಪೀಠಕ್ಕೆ ಮನವಿ ಮಾಡುತ್ತೇನೆ. ಇಲ್ಲದೇ ಇದ್ದಲ್ಲಿ ಅದಕ್ಕೆ (ವಿಶ್ವಾಸಮತ) ಯಾವ ಅರ್ಥವೂ ಇರುವುದಿಲ್ಲಎಂದು ಬೈರೇಗೌಡ ಪ್ರತಿಪಾದಿಸಿದರು. ರಾಜೀನಾಮೆಗಳು ಸ್ವ ಇಚ್ಛೆ ಮತ್ತು ನೈಜವಾದವುಗಳೇ? ಅವು ಪ್ರಜಾಪ್ರಭುತ್ವಕ್ಕೆ ವಿರುದ್ಧವಲ್ಲವೇ?’ ಎಂದು ಅವರು ಪ್ರಶ್ನಿಸಿದರು. ಕೇಂದ್ರದಲ್ಲಿನ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ದಾಳಿ ನಡೆಸಿದ ಸಚಿವರುರಾಷ್ಟ್ರದಲ್ಲಿ ರಾಜಕೀಯ ವಿರೋಧವನ್ನು ನಿರ್ನಾಮ ಮಾಡಲು ವ್ಯವಸ್ಥಿತ ಪ್ರಯತ್ನ ನಡೆಯುತ್ತಿದೆ. ಬಿಜೆಪಿಯಿಂದ ಕರ್ನಾಟಕದಲ್ಲಿ ನಡೆಯುತ್ತಿರುವ ಆಪರೇಷನ್ ಇಂತಹ ಯತ್ನದ ಭಾಗಎಂದು ಅವರು ನುಡಿದರು. ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ ಎಂದು ಆಪಾದಿಸಿದ ಬೈರೇಗೌಡ, ’ಪ್ರಜಾಪ್ರಭುತ್ವದ ರಕ್ತದ ಕಲೆ ನಿಮ್ಮ ಕೈಗಳಲ್ಲಿದೆಎಂದು ಬಿಜೆಪಿಯನ್ನು ಉದ್ದೇಶಿಸಿ ಹೇಳಿದರು. ತಮ್ಮ ನಿಲುವು ಮರುಪರಿಶೀಲನೆ ಮಾಡುವಂತೆ ಅವರು ಬಂಡಾಯ ಶಾಸಕರಿಗೆ ಮನವಿ ಮಾಡಿದರು. ವಿಶ್ವಾಸ ಮತ ನಿರ್ಣಯದ ಮೇಲಿನ ಕಲಾಪವನ್ನು ಈದಿನವೇ ಪೂರ್ಣಗೊಳಿಸಬೇಕು, ಅದನ್ನು ನಿರಂತರ ಮುಂದೂಡುತ್ತಾ ಹೋಗಬಾರದು ಎಂದು ಬಿಜೆಪಿಯ ಹಿರಿಯ ನಾಯಕರಾದ ಜಗದೀಶ ಶೆಟ್ಟರ ಮತ್ತು ಮಾಧುಸ್ವಾಮಿ ಅವರು ಸಭಾಧ್ಯಕ್ಷರಿಗೆ ಹೇಳಿದರು. ಇದಕ್ಕೆ ಮುನ್ನ ಬೆಳಗ್ಗೆಯೇ ಸಭಾಧ್ಯಕ್ಷರು ಸಿದ್ದರಾಮಯ್ಯ ಅವರು ವಿಪ್ ಹಕ್ಕಿಗೆ ಸಂಬಂಧಿಸಿದಂತೆ ಎತ್ತಿದ್ದ ಕ್ರಿಯಾಲೋಪಕ್ಕೆ ಸಂಬಂಧಿಸಿದಂತೆ ರೂಲಿಂಗ್ ನೀಡಿಶಾಸಕಾಂಗ ಪಕ್ಷದ ನಾಯಕರಿಗೆ ವಿಪ್ ನೀಡುವ ಹಕ್ಕು ಇದೆಎಂದು ಹೇಳಿದ್ದರು.  ‘ವಿಪ್ ನೀಡುವುದು ನಿಮ್ಮ ಹಕ್ಕು. ಅದನ್ನು ಪಾಲಿಸುವುದು ಶಾಸಕರಿಗೆ ಬಿಟ್ಟದ್ದು. ವಿಪ್ ಉಲ್ಲಂಘನೆ ಬಗ್ಗೆ ನನಗೇನಾದರೂ ದೂರು ಬಂದಲ್ಲಿ ನಾನು ನಿಯಮಗಳ ಪ್ರಕಾರ ಕ್ರಮ ಕೈಗೊಳ್ಳುತ್ತೇನೆಎಂದು ಸಭಾಧ್ಯಕ್ಷರು ಹೇಳಿದ್ದರು. ಬಂಡಾಯ ಶಾಸಕರನ್ನು ಸದನಕ್ಕೆ ಬರುವಂತೆ ಯಾರೂ ಬಲವಂತ ಪಡಿಸುವಂತಿಲ್ಲ ಎಂಬುದಾಗಿ ಸುಪ್ರೀಂಕೋರ್ಟ್ ಕಳೆದ ವಾರ ತೀರ್ಪು ನೀಡಿದ್ದ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ  ವಿಶ್ವಾಸಮತ ಯಾಚನೆ ಮಾಡುತ್ತಿದ್ದಂತೆಯೇ ಸಿದ್ದರಾಮಯ್ಯ ಅವರುವಿಪ್ ಹಕ್ಕಿನಬಗ್ಗೆ ಕ್ರಿಯಾಲೋಪ ಎತ್ತಿ, ಸಭಾಧ್ಯಕ್ಷರು ಬಗ್ಗೆ ನಿರ್ಧರಿಸಬೇಕು, ಅಲ್ಲಿಯವರೆಗೆ ವಿಶ್ವಾಸಮತ ಕಲಾಪವನ್ನು ಮುಂದೂಡಬೇಕು ಎಂದು ಹೇಳಿದ್ದರು.

2018: ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಲಗಮ್ ಜಿಲ್ಲೆಯ ಖುದ್ವಾನಿಯ ವಾನಿ ಮೊಹಲ್ಲಾದಲ್ಲಿ ಭದ್ರತಾ ಪಡೆಗಳು ಭಾರೀ ಗುಂಡಿನ ಚಕಮಕಿ ನಡೆಸಿ ಮೂವರು ಉಗ್ರರನ್ನು ಬಲಿ ತೆಗೆದುಕೊಳ್ಳುವಲ್ಲಿ ಯಶಸ್ವಿಯಾದವು. ಹತ್ಯೆಗೀಡಾದ ಈ ಉಗ್ರರು ಸಿ.ಟಿ. ಮೊಹಮ್ಮದ್ ಸಲೀಂ ಎಂಬ ಪೊಲೀಸ್ ಪೇದೆಯನ್ನು ಅಪಹರಿಸಿ ಜುಲೈ 21ರ ಶನಿವಾರ ಹತ್ಯೆಗೈದಿದ್ದರು. ಶಾ ಅವರು ರಜೆಯ ನಿಮಿತ್ತ ಮನೆಗೆ ಬಂದಿದ್ದಾಗ, ಜುಲೈ ೨೦ರ ಶುಕ್ರವಾರ ರಾತ್ರಿ ಅವರನ್ನು ಉಗ್ರಗಾಮಿಗಳು  ಅಪಹರಿಸಿದ್ದರು.  ಪೊಲೀಸ್ ಹತ್ಯೆ ಬಳಿಕ ಉಗ್ರಗಾಮಿಗಳ ಸುಳಿವನ್ನು ಅನುಸರಿಸಿ ಗಡಿ ಭದ್ರತಾ ಪಡೆ (ಬಿಎಸ್ ಎಫ್) ಯೋಧರು, ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಸಿಬ್ಬಂದಿ ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿ ಆರ್ ಪಿ ಎಫ್)  ಜಂಟಿಯಾಗಿ ಭಾನುವಾರ ಬೆಳ್ಳಂಬೆಳಗ್ಗೆಯೇ ಭಾರೀ ಕಾರ್ಯಾಚರಣೆಗಿಳಿದು ಕೆಲವೇ ತಾಸುಗಳ ಒಳಗಾಗಿ ಮೂವರು ಉಗ್ರಗಾಮಿಗಳನ್ನು ಕೊಂದು ಹಾಕಿದರು. ಹತ ಉಗ್ರರ ಬಳಿ ಇದ್ದ ಮೂರು ಶಸ್ತ್ರಾಸ್ತ್ರಗಳನ್ನು ವಶಕ್ಕೆ ಭದ್ರತಾ ಪಡೆಗಳು ವಶಕ್ಕೆ ಪಡೆದುಕೊಂಡವು. ಕಳೆದ ತಿಂಗಳಷ್ಟೇ ಉಗ್ರಗಾಮಿಗಳು ಯೋಧ ಔರಂಗಬೇಜ್ ಅವರನ್ನು ಅಪಹರಿಸಿ, ಹತ್ಯೆಗೈದ ಘಟನೆ ಶೋಪಿಯಾನ್ ನಲ್ಲಿ ಘಟಿಸಿತ್ತು.  ದಕ್ಷಿಣ ಕಾಶ್ಮೀರದ ಕುಲಗಮ್ ಜಿಲ್ಲೆಯ ಮುತಲ್ಹಾಮಾ ಪ್ರದೇಶದ ನಿವಾಸದಿಂದ ಪೊಲೀಸ್  ಪೇದೆಯನ್ನು  ಅಪಹರಿಸಲಾಗಿತ್ತು. ಪೊಲೀಸ್ ಪೇದೆಯ ಮೃತದೇಹ ಬಳಿಕ ಪತ್ತೆಯಾಗಿದ್ದು, ತೀವ್ರ ಚಿತ್ರಹಿಂಸೆ ನೀಡಿರುವ ಗುರುತುಗಳು ದೇಹದ ಮೇಲೆ ಕಂಡು ಬಂದಿದ್ದವು.  ಪೊಲೀಸ್ ಪೇದೆ ಹತ್ಯೆಗೆ ಕಾರಣವಾದ ಮೂವರೂ ಉಗ್ರಗಾಮಿಗಳನ್ನು ಎನ್ ಕೌಂಟರಿನಲ್ಲಿ ಹತ್ಯೆ ಮಾಡಲಾಗಿದ್ದು, ಉಗ್ರರ ಬಳಿಯಿದ್ದ ಮೂರು ಬಂದೂಕುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿಜಿಪಿ ಎಸ್ಪಿ ವಾಯಿದ್ ಟ್ವೀಟ್ ಮಾಡಿದರು. ಕುಲಗಮ್ ಜಿಲ್ಲೆಯ ಖುದ್ವಾನಿಯಲ್ಲಿ ಪೊಲೀಸ್ ಪೇದೆ ಮೊಹಮ್ಮದ್ ಸಲೀಂ ಅವರನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ಉಗ್ರಗಾಮಿಗಳು ಜಮ್ಮು ಮತ್ತು ಕಾಶ್ಮೀರ ಪೊಲೀಸ್, ಸೇನೆ ಹಾಗೂ ಸಿಆರ್ ಪಿ ಎಫ್ ನಡೆಸುತ್ತಿರುವ ಜಂಟಿ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದಿದ್ದಾರೆ ಎಂದು ಬೆಳಗ್ಗೆ ಡಿಜಿಪಿ ತಿಳಿಸಿದ್ದರು.  ಖುದ್ವಾನಿ ಪ್ರದೇಶದಲ್ಲಿ ಉಗ್ರಗಾಮಿಗಳೂ ಇರುವ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ ನೀಡಿದ ಬೆನ್ನಲ್ಲೇ, ಬೆಳ್ಳಂಬೆಳಗ್ಗೆಯೇ ಭದ್ರತಾ ಪಡೆಗಳು ಬೆಳಗ್ಗೆ ಅವರಿಗಾಗಿ ಹುಡುಕಾಟ ನಡೆಸಿದ್ದವು. ಶೋಧ ಕಾರ್ಯಾಚರಣೆಯಲ್ಲಿ ಉಗ್ರಗಾಮಿಗಳು ಬಂದೂಕಿನಿಂದ ಭದ್ರತಾ ಪಡೆಗಳತ್ತ ಗುಂಡು ಹಾರಿಸಿದರು. ಕೂಡಲೇ  ಪ್ರತಿ ದಾಳಿ ನಡೆಸಿದ ಜಂಟಿ ಭದ್ರತಾ ಪಡೆ, ಮೂವರು ಉಗ್ರಗಾಮಿಗಳನ್ನು ಕೊಂದು ಹಾಕಿತು. ಹತರಾಗಿರುವ ಉಗ್ರಗಾಮಿಗಳು ಯಾವ ಸಂಘಟನೆಗೆ ಸೇರಿದವರು ಎಂಬುದು ಇನ್ನೂ ಧೃಡಪಟ್ಟಿಲ್ಲ. ಆದರೆ, ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯು ಪೊಲೀಸ್ ಪೇದೆಯನ್ನು ಹತ್ಯೆ ಮಾಡಿದೆ ಎಂದು ಕಣಿವೆ ರಾಜ್ಯದ ಪೊಲೀಸರು ತಿಳಿಸಿದ್ದರು.

2018: ನವದೆಹಲಿ: ಕಾಂಗ್ರೆಸ್ ಕಾರ್ಯಕಾರಿ ಸಮತಿಯನ್ನು (ಸಿ ಡಬ್ಲ್ಯೂಸಿ) ’ಅನುಭವ ಮತ್ತು ಚೈತನ್ಯದ ಸಂಸ್ಥೆ ಎಂಬುದಾಗಿ ಇಲ್ಲಿ ಬಣ್ಣಿಸಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಈ ಸಂಸ್ಥೆಯು ವರ್ತಮಾನಕಾಲ, ಭೂತಕಾಲ ಮತ್ತು ಭವಿಷ್ಯತ್ ಕಾಲಗಳ ನಡುವಣ ಸೇತುವೆಯಾಗಿ ದುಡಿಯುವುದು ಎಂದು ಹೇಳಿದರು.  ಹೊಸದಾಗಿ ರಚನೆಗೊಂಡ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಚೊಚ್ಚಲ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ’ಕಾಂಗ್ರೆಸ್ ಸದಸ್ಯ, ಸದಸ್ಯೆಯರು ಎದ್ದೇಳಬೇಕು ಮತ್ತು ಭಾರತದಲ್ಲಿನ ತುಳಿತಕ್ಕೆ ಒಳಗಾದವರ ಪರ ಹೋರಾಡಬೇಕು ಎಂದು ಅವರು ಕರೆ ನೀಡಿದರು.  ‘ಭಾರತದ ಧ್ವನಿಯಾಗಿ ಕಾಂಗ್ರೆಸ್ ಪಕ್ಷವು ವಹಿಸಬೇಕಾದ ಪಾತ್ರವನ್ನು ನೆನಪಿಸಿದ ರಾಹುಲ್ ಗಾಂಧಿ, ಬಿಜೆಪಿಯು ಸಂಸ್ಥೆಗಳು, ದಲಿತರು, ಬುಡಕಟ್ಟು ಜನ, ಹಿಂದುಳಿದವರು, ಅಲ್ಪ ಸಂಖ್ಯಾತರು ಮತ್ತು ಬಡವರ ಮೇಲೆ ದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ವರ್ತಮಾನ ಕಾಲ ಮತ್ತು ಭವಿಷ್ಯದಲ್ಲಿಯೂ ಕಾಂಗ್ರೆಸ್ ಪಕ್ಷದ ಹೊಣೆಗಾರಿಕೆ ದೊಡ್ಡದು ಎಂದು ರಾಹುಲ್ ಹೇಳಿದರು.  ಪಾರ್ಲಿಮೆಂಟ್ ಅನೆಕ್ಸ್‌ನಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಕಾರ್‍ಯಕಾರಿ ಸಮಿತಿ ಸಭೆಯ ವಿವರಗಳನ್ನು ಕಾಂಗ್ರೆಸ್ ಸಂಪರ್ಕ ವಿಭಾಗದ ಮುಖ್ಯಸ್ಥ ರಣ್ ದೀಪ್ ಸುರ್ಜಿವಾಲ ಟ್ವೀಟ್ ಮಾಡಿದರು.  ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಮೋದಿ ಸರ್ಕಾರದ ಸ್ವಯಂ ಹೊಗಳಿಕೆ ಮತ್ತು ಜುಮ್ಲಾ ಸಂಸ್ಕೃತಿಯನ್ನು ತಿರಸ್ಕರಿಸಿದರು ಮತ್ತು ಐದು ವರ್ಷಗಳಲ್ಲಿ ರೈತರ ಆದಾಯವನ್ನು ದುಪ್ಪಟ್ಟುಗೊಳಿಸುವ ಸರ್ಕಾರದ ಪ್ರತಿಪಾದನೆಯನ್ನು ಪ್ರಶ್ನಿಸಿದರು ಎಂದು ಸುರ್ಜಿವಾಲ ತಿಳಿಸಿದರು.  ೨೦೨೨ರ ವೇಳೆಗೆ ಕೃಷಿ ಆದಾಯವನ್ನು ದುಪ್ಪಟ್ಟುಗೊಳಿಸಲು ಕೃಷಿ ಪ್ರಗತಿ ದರವು ಶೇಕಡಾ ೧೪ರಷ್ಟು ಇರಬೇಕು. ಅದು ಎಲ್ಲಿಯೂ ಕಾಣುತ್ತಿಲ್ಲ ಎಂದು ಮನಮೋಹನ್ ಸಿಂಗ್ ಹೇಳಿದ್ದನ್ನು ಟ್ವೀಟ್ ಉಲ್ಲೇಖಿಸಿತು.  ಭಾರತದ ವಂಚಿತರು ಮತ್ತು ಬಡವರಲ್ಲಿ ಭ್ರಮ ನಿರಸನ ಮತ್ತು ಭಯ ಮಡುಗಟ್ಟಿರುವ ಬಗ್ಗೆ ಸೋನಿಯಾ ಗಾಂಧಿ ಎಚ್ಚರಿಕೆ ನೀಡಿದರು. ಮೋದಿ ಸಭೆಗಳು ದುರ್ಬಲಗೊಳ್ಳುತ್ತಿದ್ದು ಮೋದಿ ಸರ್ಕಾರದ ಹಿಮ್ಮುಖ ಕ್ಷಣಗಣನೆ ಆರಂಭವಾಗಿರುವುದನ್ನು  ಪ್ರತಿಫಲಿಸುತಿವೆ ಎಂದು ಸೋನಿಯಾ ಗಾಂಧಿ ನುಡಿದರು ಎಂದು ಸುರ್ಜಿವಾಲ ಟ್ವೀಟ್ ತಿಳಿಸಿತು.  ಅಧ್ಯಕ್ಷ ರಾಹುಲ್ ಗಾಂಧಿಯವರು ಕಳೆದ ವಾರ ಹೊಸದಾಗಿ ರಚಿಸಿದ ಕಾಂಗ್ರೆಸ್ ಕಾರ್‍ಯಕಾರಿ ಸಮಿತಿಯಲ್ಲಿ ೨೩ ಸದಸ್ಯರು, ೧೮ ಮಂದಿ ಕಾಯಂ ಆಹ್ವಾನಿತರು, ೧೦ ಮಂದಿ ವಿಶೇಷ ಆಹ್ವಾನಿತರು ಇದ್ದಾರೆ.   ಏನಿದ್ದರೂ ಮೊದಲ ಸಭೆಗೆ ೨೩೯ ಮಂದಿ ಅತಿಥಿಗಳು ಹಾಜರಾಗಿದ್ದು, ವಿಸ್ತರಿತ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯು ರಾಜ್ಯ ಘಟಕಗಳ ಮುಖ್ಯಸ್ಥರು, ಕಾಂಗ್ರೆಸ್ ಶಾಸಕಾಂಗ ನಾಯಕರು ಮತ್ತು ಪಕ್ಷದ ವಿವಿಧ ಸೆಲ್ ಗಳ ಮುಖ್ಯಸ್ಥರು, ಕಾರ್ಯದರ್ಶಿಗಳು ಹಾಗೂ ಜಂಟಿ ಕಾರ್ಯದರ್ಶಿಗಳನ್ನು ಒಳಗೊಂಡಿದೆ.  ಲೋಕಸಭೆಯಲ್ಲಿ ಅವಿಶ್ವಾಸ ಮಂಡನೆ ಕಾಲದಲ್ಲಿ ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸಿ, ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಪ್ರಖರ ವಾಗ್ದಾಳಿ ನಡೆಸಿ, ಬಳಿಕ ದಿಢೀರನೆ ಅವರನ್ನು ಆಲಿಂಗಿಸಿ, ಸ್ವಸ್ಥಾನಕ್ಕೆ ವಾಪಸಾಗಿ ಕಣ್ಣು ಮಿಟುಕಿಸುವ ಮೂಲಕ ಎಲ್ಲರ ಗಮನ ಸೆಳೆದ ರಾಹುಲ್ ಗಾಂಧಿ ಈದಿನ ಕಾಂಗ್ರೆಸ್ ಕಾರ್‍ಯಕಾರಿ ಸಮಿತಿ ಸಭೆಯಲ್ಲಿ ಮುಂಬರುವ ಮೂರು ರಾಜ್ಯಗಳ ವಿಧಾನಸಭಾ ಚುನಾವಣೆಗಳು ಹಾಗೂ ಮುಂದಿನ ವರ್ಷ ಬರಲಿರುವ ಮಹಾ ಚುನಾವಣೆ ಕಾಲಕ್ಕೆ ಬಿಜೆಪಿ ನೇತೃತ್ವದ ಎನ್ ಡಿಎ ವಿರುದ್ಧ ಸದೃಢ ರಂಗ ರಚಿಸವುದಕ್ಕೆ ಸಂಬಂಧಿಸಿದಂತೆ ತೀವ್ರ ಸಮಾಲೋಚನೆಗಳನ್ನು ನಡೆಸಿದರು.  ಬಹುತೇಕ ರಾಜ್ಯಗಳಲ್ಲಿ ಕಾಂಗ್ರೆಸ್ ಅಸಿತ್ವ ಹೊಂದಿರುವುದರಿಂದ ಕಾಂಗ್ರೆಸ್ ಪಕ್ಷವು ಸಂಯುಕ್ತ ಪ್ರತಿಪಕ್ಷವನ್ನು ಮುನ್ನಡೆಸಬೇಕು ಎಂದು ಹಲವು ಸದಸ್ಯರು ಆಗ್ರಹಿಸಿದರು ಎಂದು ಮೂಲಗಳು ಹೇಳಿವೆ.  ಆದರೆ ಕಾಂಗ್ರೆಸ್ ಪಕ್ಷವು ಮೈತ್ರಿಕೂಟಗಳು ಕೆಲಸ ಮಾಡುವಂತೆ ನೋಡಿಕೊಳ್ಳಲು ಕಾಂಗ್ರೆಸ್ ಬದ್ಧವಾಗಿದೆ ಎಂದು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದರು.  ‘ನಾವು ನಮ್ಮ ಜನರನ್ನು ಭಾರತದಲ್ಲಿ ಪ್ರಜಾಪ್ರಭುತ್ವದ ಜೊತೆಗೆ ರಾಜಿ ಮಾಡಿಕೊಳ್ಳುತ್ತಿರುವ ಅಪಾಯಕಾರಿ ಆಡಳಿತದಿಂದ ರಕ್ಷಿಸಬೇಕಾಗಿದೆ ಎಂದು ಸೋನಿಯಾ ಗಾಂಧಿ ನುಡಿದರು.  ಮೈತ್ರಿಕೂಟಗಳ  ಬಗ್ಗೆ ಮಾತನಾಡಿದ ಪಕ್ಷದ ಹಿರಿಯ ನಾಯಕ ಮತ್ತು ಮಾಜಿ ವಿತ್ತ ಸಚಿವ ಪಿ. ಚಿದಂಬರಂ ಮೈತ್ರಿಕೂಟಗಳಿಗೆ ಸಂಬಂಧಿಸಿದಂತೆ ಪ್ರಸಂಟೇಷನ್ ಕೂಡಾ ಮಂಡಿಸಿದರು. ತಾನು ಉತ್ತಮ ಸ್ಥಿತಿಯಲ್ಲಿ ಇರುವ ರಾಜ್ಯಗಳಲ್ಲಿ ಕಾಂಗ್ರೆಸ್ ಏಕಾಂಗಿಯಾಗಿ ಮುಂದಕ್ಕೆ ಸಾಗಬೇಕು, ಇತರ ಕಡೆಗಳಲ್ಲಿ ಅಗತ್ಯ ಇರುವಲ್ಲಿ ಮಾತ್ರ ಮೈತ್ರಿಕೂಟವನ್ನು ಹೆಣೆಯಬೇಕು ಎಂದು ಅವರು ಸಲಹೆ ಮಾಡಿದರು.  ಕಾಂಗ್ರೆಸ್ ಪಕ್ಷವು ಕನಿಷ್ಠ ೧೨ ರಾಜ್ಯಗಳಲ್ಲಿ ಉತ್ತಮ ಸಾಧನೆ ಮಾಡಬಹುದಾಗಿದ್ದು ತನ್ನ ಸಂಖ್ಯೆಯನ್ನು ಮೂರು ಪಟ್ಟು ಏರಿಸಿಕೊಂಡು ೧೫೦ ಸ್ಥಾನಗಳನ್ನು ಗೆಲ್ಲ ಬಲ್ಲುದು. ಉಳಿದ ರಾಜ್ಯಗಳಲ್ಲಿ ಪ್ರಾದೇಶಿಕವಾರು, ರಾಜ್ಯವಾರು ಮೈತ್ರಿಗಳನ್ನು ರಚಿಸಬೇಕಾದ್ದು ಕಾಲದ ಅಗತ್ಯ ಎಂದು ಅವರು ಹೇಳಿದರು. ಚಿದಂಬರಂ ಅವರ ಮೈತ್ರಿಸೂತ್ರವನ್ನು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಬೆಂಬಲಿಸಿದರು.  ರಾಷ್ಟ್ರೀಯ ನಾಯಕತ್ವವು ನಮ್ಮನ್ನು ಎಲ್ಲಿ ಮುಂದಕ್ಕೆ ಒಯ್ಯುತ್ತದೆ ಎಂಬುದನ್ನು ಮೈತ್ರಿಗಳು ಅವಲಂಬಿಸಿವೆ. ರಾಷ್ಟ್ರೀಯ ನಾಯಕತ್ವ ಎಲ್ಲಿಗೆ ಒಯ್ಯುತ್ತದೋ ಅಲ್ಲಿಗೆ ನಾವು ನಾವು ಹೋಗುತ್ತೇವೆ. ಜನರು ಈಗ ಕಾಂಗ್ರೆಸ್ ಮೇಲೆ ವಿಶ್ವಾಸ ವ್ಯಕ್ತ ಪಡಿಸುತ್ತಿದ್ದಾರೆ ಎಂದು ಅವರು ನುಡಿದರು.  ತಮ್ಮ ಪಕ್ಷವು ಇತರ ವಿರೋಧ ಪಕ್ಷಗಳ ಜೊತೆಗೆ ಕೆಲಸ ಮಾಡುವುದು ಎಂದು ರಾಹುಲ್ ಗಾಂಧಿ ಈಗಾಗಲೇ ಸುಳಿವು ನೀಡಿದ್ದಾರೆ ಮತ್ತು ರಾಜ್ಯಗಳಿಗೆ ಸಂಬಂಧಿಸಿದಂತೆ ಮೈತ್ರಿ ರಚನೆಗೆ ಮಾತುಕತೆಗಳು ನಡೆಯುತ್ತಿವೆ. ಕರ್ನಾಟಕದಲ್ಲಿ ಜೆಡಿ-ಎಸ್ ಜೊತೆಗೆ ಮೈತ್ರಿಕೂಟ ರಚಿಸಿರುವ ಕಾಂಗ್ರೆಸ್ ಬಿಹಾರ ಮತ್ತು ಮಧ್ಯಪ್ರದೇಶದಲ್ಲಿಯೂ ಮೈತ್ರಿಕೂಟ ರಚನೆಗೆ ಮಾತುಕತೆಗಳನ್ನು ನಡೆಸುತ್ತಿದೆ.

2018: ಕೊಲಂಬೋ: ಭಾರತದ ದಕ್ಷಿಣ ತುದಿಯಲ್ಲಿ ಇರುವ ಪುಟ್ಟ ನೆರೆರಾಷ್ಟ್ರ ಶ್ರೀಲಂಕಾದಲ್ಲಿ ತನ್ನ ಪ್ರಾಬಲ್ಯ ವರ್ಧನೆಗೆ ಹವಣಿಸುತ್ತಿರುವ ಚೀನಾವು ಆ ರಾಷ್ಟ್ರಕ್ಕೆ ೨೦೦ ಕೋಟಿ ಯುವಾನ್ (೨೯.೫೦ ಕೋಟಿ ಡಾಲರ್) ಮೊತ್ತದ ಹೊಸ ಅನುದಾನದ ಕೊಡುಗೆ ನೀಡಲು ಮುಂದಾಯಿತು.  ಚೀನಾದ ಬಹುರಾಷ್ಟ್ರ ವಲಯ ಮತ್ತು ರಸ್ತೆ ಮೂಲಸವಲತ್ತು ಯೋಜನೆಯಲ್ಲಿ ಪಾಲುದಾರನಾಗಿರುವ ಶ್ರೀಲಂಕಾದ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರು ಚೀನಾದ ಹಣಕಾಸು ನೆರವಿನೊಂದಿಗೆ ರಾಜಧಾನಿ ಕೊಲಂಬೋದಿಂದ ೨೩೦ ಕಿಮೀ ದೂರದಲ್ಲಿರುವ ತಮ್ಮ ಸ್ವಕ್ಷೇತ್ರದ ಪೊಲೊನ್ನಾರುವಾದಲ್ಲಿ ನಿರ್ಮಿಸಲಾಗುವ ಕಿಡ್ನಿ ಆಸ್ಪತ್ರೆಯ ಕಾಮಗಾರಿ ಆರಂಭದ ಸಮಾರಂಭದ ವೇಳೆ ಶನಿವಾರ ಚೀನಾದ ಹೊಸ ಕೊಡುಗೆ ವಿಚಾರವನ್ನು ಪ್ರಕಟಿಸಿದರು.  ‘ಈ ಸಮಾರಂಭಕ್ಕಾಗಿ ದಿನಾಂಕ ನಿಗದಿಗೊಳಿಸಲು ನನ್ನ ಮನೆಗೆ ಭೇಟಿ ನೀಡಿದ್ದ ವೇಳೆಯಲ್ಲಿ ಚೀನೀ ರಾಯಭಾರಿಯವರು ಚೀನಾದ ಅಧ್ಯಕ್ಷ ಕ್ಷಿ ಜಿನ್ ಪಿಂಗ್ ಅವರು ನನಗೆ ಇನ್ನೊಂದು ಕೊಡುಗೆಯನ್ನು ಕಳುಹಿಸಿದ್ದಾರೆ ಎಂದು ಹೇಳಿದರು ಎಂದು ಸಿರಿಸೇನಾ ಸಭೆಗೆ ತಿಳಿಸಿದರು.   ‘ನಾನು ಇಚ್ಛಿಸುವ ಯಾವುದೇ ಯೋಜನೆಯಲ್ಲಿ ಬಳಸಿಕೊಳ್ಳಲು ೨೦೦ ಕೋಟ ಯುವಾನ್ ಕೊಡುಗೆಯನ್ನು ಅವರು ನೀಡಿದ್ದಾರೆ. ರಾಷ್ಟ್ರದ ಎಲ್ಲ ಮತದಾರರಿಗೂ ಮನೆಗಳನ್ನು ನಿರ್ಮಿಸುವ ಪ್ರಸ್ತಾಪವನ್ನು ಚೀನೀ ರಾಯಭಾರಿಗೆ ನಾನು ಸಲ್ಲಿಸಲಿದ್ದೇನೆ ಎಂದು ಸಿರಿಸೇನಾ ಹೇಳಿದರು.  ಈ ಕೊಡುಗೆ ಬಗ್ಗೆ ಪ್ರತಿಕ್ರಿಯೆ ಅರಿಯುವ ಸಲುವಾಗಿ ಶ್ರೀಲಂಕಾದಲ್ಲಿನ ಚೀನೀ ರಾಯಭಾರ ಕಚೇರಿಯನ್ನು ಸಂಪರ್ಕಿಸಲು ಸುದ್ದಿ ಸಂಸ್ಥೆ ನಡೆಸಿದ ಯತ್ನ ತತ್ ಕ್ಷಣಕ್ಕೆ ಫಲಕಾರಿಯಾಗಿಲ್ಲ.  ಹಿಂದಿನ ಶ್ರೀಲಂಕಾ ಅಧ್ಯಕ್ಷ ಮಹಿಂದ ರಾಜಪಕ್ಸ ಅವರ ಕಳೆದ ಚುನಾವಣಾ ಪ್ರಚಾರ ಕಾಲದಲ್ಲಿ ಹಣಕಾಸು ನೆರವು ನೀಡಿದ್ದಕ್ಕಾಗಿ ಚೀನೀ ಸಂಸ್ಥೆಯೊಂದು ವ್ಯಾಪಕ ಟೀಕೆಗೆ ಗುರಿಯಾಗಿರುವ ಹೊತ್ತಿನಲ್ಲಿಯೇ ಚೀನಾದಿಂದ ಈ ಹೊಸ ಹಣಕಾಸು ಅನುದಾನದ ಘೋಷಣೆ ಹೊರಬಿದ್ದಿತು. ೨೦೧೫ರ ಆದಿಯಲ್ಲಿ ನಡೆದ ಚುನಾವಣೆಯಲ್ಲಿ ಮರುಆಯ್ಕೆಗೆ ಯತ್ನ ನಡೆಸಿದ್ದ ರಾಜಪಕ್ಸ ಅವರಿಗೆ ಚೀನಾ ಹಾರ್ಬರ್ ಎಂಜಿನಿಯರಂಗ್ ಕಂಪೆನಿ ಲಿಮಿಟೆಡ್ (ಸಿಎಚ್ ಇಸಿ) ೭೬ ಲಕ್ಷ ಡಾಲರ್ ನೆರವನ್ನು ನೀಡಿತ್ತು ಎಂದು ನ್ಯೂಯಾಕ್ ಟೈಮ್ಸ್ ಕಳೆದ ತಿಂಗಳು  ವರದಿ ಮಾಡಿತ್ತು. ರಾಜಪಕ್ಸ್ಸ ಮತ್ತು ಕೊಲಂಬೋದಲ್ಲಿನ ಚೀನೀ ರಾಯಭಾರ ಕಚೇರಿ ಹಾಗೂ ಸಿಎಚ್ ಇಸಿ ಸಿಬ್ಬಂದಿ ಈ ಎಲ್ಲ ಆಪಾದನೆಗಳನ್ನೂ ನಿರಾಕರಿಸಿದ್ದರು. ಆದರೆ ಸಿರಿಸೇನಾ ನೇತೃತ್ವದ ಮೈತ್ರಿಕೂಟ ಸರ್ಕಾರವು ಹಣಕಾಸು ನೆರವು ಆಪಾದನೆ ಸಂಬಂಧಿತ ವರದಿಯ ಬಗ್ಗೆ ತನಿಖೆಗೆ ಸೂಚಿಸಿತ್ತು.  ಸಿರಿಸೇನಾ ಅವರು ತಮ್ಮ ಆಡಳಿತದ ಆರಂಭದಲ್ಲಿ ರಾಜಪಕ್ಸ ಅವರ ಕಾಲದಲ್ಲಿ ಆರಂಭವಾಗಿದ್ದ ಚೀನೀ ಬೆಂಬಲಿತ ಮೂಲಸವಲತ್ತು ಯೋಜನೆಗಳನ್ನು ಶಂಕಿತ ಭ್ರಷ್ಟಾಚಾರ ಮತ್ತು ಸರ್ಕಾರಿ ನಿಯಮಾವಳಿಗಳ ಉಲ್ಲಂಘನೆ ಆಪಾದನೆಯಲ್ಲಿ ಅಮಾನತುಗೊಳಿಸಿದ್ದರು. ಆದರೆ ಒಂದು ವರ್ಷದ ಬಳಿಕ, ಸಿರಿಸೇನಾ ಸರ್ಕಾರವು ಚೀನೀ ಯೋಜನೆಗಳ ಪುನಾರಂಭಕ್ಕೆ ಅವಕಾಶ ನೀಡಿತ್ತು, ಅವುಗಳಲ್ಲಿ ಕೆಲವು ಯೋಜನೆಗಳಿಗೆ ಸಣ್ಣಪುಟ್ಟ ಬದಲಾವಣೆಗಳನ್ನು ಮಾಡುವಂತೆ ಸೂಚಿಸಿತ್ತು.  ೨೦೦೯ರಲ್ಲಿ ೨೬ ವರ್ಷಗಳ ಸುದೀರ್ಘ ಅಂತರ್ ಯುದ್ಧದ ಬಳಿಕ ಶ್ರೀಲಂಕಾ ಮರುನಿರ್ಮಾಣಕ್ಕೆ ನೆರವಾಗಲು ಮುಂದೆ ಬಂದಿದ್ದ ಮುಂಚೂಣಿ ರಾಷ್ಟ್ರಗಳಲ್ಲಿ ಚೀನಾವೂ ಒಂದಾಗಿತ್ತು.  ರಾಜಪಕ್ಸ ಸರ್ಕಾರವು ಚೀನೀ ಸಾಲದೊಂದಿಗೆ ಆರಂಭಿಸಿದ್ದ ಹಲವಾರು ಬೀಜಿಂಗ್ ಯೋಜಿತ ಯೋಜನೆಗಳಿಗೆ ಶ್ರೀಲಂಕಾ ವಿರೋಧ ಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಚೀನಾವು ಶ್ರೀಲಂಕಾವನ್ನು ತನ್ನ ಸೇನಾ ನೆಲೆಯಾಗಿ ಬಳಸಿಕೊಳ್ಳಬಹುದು ಎಂಬುದಾಗಿ ಅಮೆರಿಕ, ಭಾರತ ಮತ್ತು ಜಪಾನ್  ಆತಂಕ ವ್ಯಕ್ತ ಪಡಿಸಿದ್ದವು.  ೨೦೧೪ರಲ್ಲಿ ಕೊಲಂಬೋದಲ್ಲಿ ಚೀನೀ ನೌಕಾಪಡೆಯ ಜಲಾಂತರ್ಗಾಮಿ ಲಂಗರು ಹಾಕಿದಾಗ ಭಾರತ ತೀವ್ರ ಆತಂಕ ವ್ಯಕ್ತ ಪಡಿಸಿತ್ತು. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀಲಂಕಾ ಜೊತೆಗಿನ ಬಾಂಧವ್ಯ ವೃದ್ಧಿಗೆ ಕ್ರಮ ಕೈಗೊಳ್ಳಲು ಮತ್ತು ಹಿಂದೂ ಮಹಾಸಾಗರ ಪ್ರದೇಶದಲ್ಲಿ ತನ್ನ ಪ್ರಭಾವವನ್ನು ಮತ್ತೆ ಹೆಚ್ಚಿಸಿಕೊಳ್ಳಲು ಪ್ರೇರಿಸಿತ್ತು.
ಪ್ರಸ್ತುತ ಚೀನೀ ಕಂಪೆನಿಯು ನಿಭಾಯಿಸುತ್ತಿರುವ ದಕ್ಷಿಣದ ಬಂದರನ್ನು ಸೇನಾ ಉದ್ದೇಶಗಳಿಗಾಗಿ ಬಳಸುವ ಯೋಜನೆಗಳಿವೆ ಎಂಬ ಆಪಾದನೆಗಳನ್ನು ಶ್ರೀಲಂಕಾ ಸರ್ಕಾರ ಮತ್ತು ಕೊಲಂಬೋದಲ್ಲಿನ ಚೀನೀ ರಾಜತಾಂತ್ರಿಕ ಕಚೇರಿ ನಿರಾಕರಿಸಿದ್ದವು.

2018: ನವದೆಹಲಿ: ೨೦೧೯ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಪರಾಭವಗೊಳಿಸಲು, ಸಮಾನ ಮನಸ್ಕ ಪಕ್ಷಗಳೊಂದಿಗೆ ಮೈತ್ರಿಗಳನ್ನು ಮಾಡಿಕೊಳ್ಳುವ ನಿಟ್ಟಿನಲ್ಲಿ ಅಂತಿಮ ನಿರ್ಧಾರವನ್ನು ಕೈಗೊಳ್ಳುವ ಅಧಿಕಾರವನ್ನು ವಿಸ್ತರಿತ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯು  ಈದಿನ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ವಹಿಸಿತು. ಇದೇ ವೇಳೆಗೆ ಉತ್ತರ ಪ್ರದೇಶದಲ್ಲಿ ೨೦೧೯ರ ಮಹಾಚುನಾವಣೆ ವೇಳೆಗೆ ಸಮಾಜವಾದಿ ಪಕ್ಷದ (ಎಸ್ ಪಿ) ಜೊತೆಗೆ ಮೈತ್ರಿ ಸಾಧಿಸುವ ವಿಚಾರದಲ್ಲಿ ಕಾಂಗ್ರೆಸ್ ಪಕ್ಷವು ವಿಶ್ವಾಸ ವ್ಯಕ್ತ ಪಡಿಸಿತು. ಹೊಸದಾಗಿ ರಚಿಸಲಾಗಿರುವ ಕಾಂಗ್ರೆಸ್ ಕಾರ್‍ಯಕಾರಿಣಿ ಸಮಿತಿಯ (ಸಿ ಡಬ್ಲ್ಯೂಸಿ) ಚೊಚ್ಚಲ ಸಭೆಯಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಹಿರಿಯ ದೊಡ್ಡ ಪಕ್ಷದ ಜೊತೆಗೆ ಮೈತ್ರಿ ಮಾಡಿಕೊಳ್ಳಲು ಬಯಸುತ್ತಿಲ್ಲ ಎಂಬ ವರದಿಯು ಸ್ಥಾನ ಹಂಚಿಕೆಯಲ್ಲಿ ಗರಿಷ್ಠ ಸಂಖ್ಯೆಯ ಸ್ಥಾನಗಳನ್ನು ಪಡೆಯಲು ನಡೆಸುತ್ತಿರುವ ಯತ್ನದ ಹೊರತು ಬೇರೇನಲ್ಲ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು ಎಂದು ಮೂಲಗಳು ಹೇಳಿದವು. ಮಾಜಿ ವಿತ್ತ ಸಚಿವ ಪಿ. ಚಿದಂಬರಂ ಅವರು ಗೆಲ್ಲಲು ಸಾಧ್ಯವಿರುವ ರಾಜ್ಯಗಳಲ್ಲೆಲ್ಲ ಕಾಂಗ್ರೆಸ್ ಪಕ್ಷವು ಏಕಾಂಗಿಯಾಗಿಯೇ ಹೋರಾಡಬೇಕು ಮತ್ತು ಅಗತ್ಯ ಬಿದ್ದ ಕಡೆಗಳಲ್ಲಿ ಮಾತ್ರ ಮೈತ್ರಿ ಮಾಡಿಕೊಳ್ಳಬೇಕು ಎಂಬುದಾಗಿ ಅಭಿಪ್ರಾಯ ವ್ಯಕ್ತ ಪಡಿಸಿದ್ದರೂ, ಮೈತ್ರಿ ಕೂಟಗಳ ರಚನೆ ಪರಿಶೀಲನೆಗಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಸಮಿತಿಯೊಂದನ್ನು ರಚಿಸಿದರು. ಎಲ್ಲ ರಾಜ್ಯಗಳಲ್ಲೂ ಕಾಂಗ್ರೆಸ್ ಪಕ್ಷವು ಅಸ್ತಿತ್ವ ಹೊಂದಿರುವ ಹಿನ್ನೆಲೆಯಲ್ಲಿ ಸಂಯುಕ್ತ ವಿರೋಧ ಪಕ್ಷದ ನೇತೃತ್ವವನ್ನು ಕಾಂಗ್ರೆಸ್ ಪಕ್ಷವೇ ವಹಿಸಬೇಕು ಎಂದು ಬಹುತೇಕ ಸದಸ್ಯರು ಒತ್ತಿ ಹೇಳಿದರು.  ಅಂಬಿಕಾ ಸೋನಿ ಮತ್ತು ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವಾರು ಹಿರಿಯ ಕಾಂಗ್ರೆಸ್ ನಾಯಕರು ೨೦೧೯ರ ಚುನಾವಣೆಗಾಗಿ ಮೈತ್ರಿಕೂಟಗಳನ್ನು ರಚಿಸುವ ಹಾಗೂ ಸಮರ ವ್ಯೂಹ ರೂಪಿಸುವ ವಿಚಾರದಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ಕಾರ್‍ಯಕಾರಿಣಿಯು ರಾಹುಲ್ ಗಾಂಧಿ ಅವರಿಗೆ ನೀಡಿತು ಎಂದು ಸುದ್ದಿ ಸಂಸ್ಥೆಗಳಿಗೆ ತಿಳಿಸಿದರು. ಕಾಂಗ್ರೆಸ್ ಕಾರ್‍ಯಕಾರಿ ಸಮಿತಿಯು ಮೈತ್ರಿಕೂಟ ರಚನೆಯ ವಿಷಯವನ್ನು ಚರ್ಚಿಸಿತು. ವಿವಿಧ ರಾಜ್ಯಗಳಲ್ಲಿ ಅದನ್ನು ಹೇಗೆ ಮುಂದಕ್ಕೆ ಒಯ್ಯಬೇಕು ಎಂಬ ಬಗ್ಗೆ ತಂತ್ರವೊಂದನ್ನು ರೂಪಿಸಲಾಗುತ್ತಿದೆ ಎಂದು ಖರ್ಗೆ ನುಡಿದರು.  ‘ನಾನು ದೊಡ್ಡ ಹೋರಾಟದ ಸಲುವಾಗಿ ಹೋರಾಡುತ್ತಿದ್ದೇನೆ. ಪ್ರತಿಯೊಬ್ಬರಿಗೂ ಪಕ್ಷದ ವೇದಿಕೆಯಲ್ಲಿ ಮಾತನಾಡುವ ಹಕ್ಕಿದೆ, ಆದರೆ ಯಾರಾದರೂ ಒಬ್ಬ ಪಕ್ಷದ ನಾಯಕ ತಪ್ಪು ಹೇಳಿಕೆ ನೀಡಿದರೆ ಮತ್ತು ಈ ಹೋರಾಟವನ್ನು ದುರ್ಬಲಗೊಳಿಸಿದರೆ, ಕ್ರಮ ಕೈಗೊಳ್ಳಲು ನಾನು ಹಿಂಜರಿಯುವುದಿಲ್ಲ ಎಂಬ ಎಚ್ಚರಿಕೆಯನ್ನು ರಾಹುಲ್ ಗಾಂಧಿ ಅವರು ಪಕ್ಷದ ನಾಯಕರಿಗೆ ನೀಡಿದರು.  ಈ ಮಧ್ಯೆ, ಮೈತ್ರಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಪ್ರತಿಪಾದನೆಗೆ ಪ್ರತಿಕ್ರಿಯಿಸಿದ ಸಮಾಜವಾದಿ ಪಕ್ಷವು ’ಕಾಂಗ್ರೆಸ್ ಪಕ್ಷವು ಉತ್ತರ ಪ್ರದೇಶದ ಮೈತ್ರಿಯಲ್ಲಿ ಯಾವುದೇ ಸ್ಥಾನ ಬಯಸುವುದಿದ್ದರೆ, ಆಗ ಅದು ಮಧ್ಯಪ್ರದೇಶ, ಛತ್ತೀಸ್ ಗಢ ಮತ್ತು ರಾಜಸ್ಥಾನ ಈ ಮೂರು ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ನಮಗೆ ಗೌರವಾನ್ವಿತ ಸ್ಥಾನವನ್ನು ನೀಡಬೇಕು ಎಂದು ಹೇಳಿತು.  ಇದಕ್ಕೆ ಮುನ್ನ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದ ರಾಹುಲ್ ಗಾಂಧಿ ’ಸ್ವಾತಂತ್ರ್ಯ ಹೋರಾಟ ಕಾಲದಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯನ್ನು ರಚಿಸಲಾಗಿತ್ತು. ಅದು ರಾಷ್ಟ್ರವನ್ನು ವಸಾಹತುಶಾಹಿ ಆಡಳಿತದಿಂದ ಸ್ವಾತಂತ್ರ್ಯದೆಡೆಗೆ ಒಯ್ಯುವ ವಿವಿಧ ಕಲ್ಪನೆಗಳ ಬಗ್ಗೆ ಅಭಿಪ್ರಾಯ ವ್ಯಕ್ತ ಪಡಿಸುವ, ಚರ್ಚಿಸುವ, ವಿರೋಧಿಸುವ ಮತ್ತು ಸಮ್ಮತಿಯೊಂದಿಗೆ ನಿರ್ಧರಿಸುವ ವೇದಿಕೆಯಾಗಿತ್ತು. ಕಾಂಗ್ರೆಸ್ ಕಾರ್‍ಯಕಾರಿ ಸಮಿತಿಯು ಪ್ರತಿಯೊಬ್ಬ ಭಾರತೀಯನಿಗೂ ಧ್ವನಿ ನೀಡಿತ್ತು. ಅದು ವಿವಿಧ ದೃಷ್ಟಿಕೋನಗಳ ಅಭಿಪ್ರಾಯಗಳಿಗೆ ಅವಕಾಶ ನೀಡಿತ್ತು. ಭಾರತದ ದುರ್ಬಲ ಧ್ವನಿಗಳಿಗೂ ಅವಕಾಶ ಒದಗಿಸಿತ್ತು. ಆ ಮಟ್ಟಕ್ಕೆ ಈಗಿನ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯನ್ನು ಒಯ್ಯುವುದು ನಮ್ಮ ಈಗಿನ ಸಾಮೂಹಿಕ ಸವಾಲು ಎಂದು ಹೇಳಿದ್ದರು. ಭಾರತದಲ್ಲಿ ಸಾಮಾಜಿಕ ಸೌಹಾರ್ದ ಮರುಸ್ಥಾಪನೆ ಮತ್ತು ಆರ್ಥಿಕ ಅಭಿವೃದ್ಧಿಯ ಕಠಿಣ ಕಾರ್‍ಯ ನಿಭಾಯಿಸಲು ತಾವು ಮತ್ತು ಇತರ ಎಲ್ಲ ಕಾಂಗ್ರೆಸ್ಸಿಗರೂ ಸಂಪೂರ್ಣ ಸಹಕಾರ ನೀಡುವುದಾಗಿ ರಾಹುಲ್ ಗಾಂಧಿ ಅವರಿಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಭರವಸೆ ನೀಡಿದರು.

2018: ಮುಂಬೈ: ಲೋಕಸಭೆಯಲ್ಲಿ ತೆಲುಗುದೇಶಂ ಮಂಡಿಸಿದ್ದ ಅವಿಶ್ವಾಸ ನಿರ್ಣಯದ ಚರ್ಚೆ, ಮತದಾನದಲ್ಲಿ ಗೈರು ಹಾಜರಾಗುವುದರ ಜೊತೆಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಭಾಷಣವನ್ನು ಹೊಗಳಿರುವ ಶಿವಸೇನೆಯ ವರ್ತನೆಗೆ ಮುನಿಸಿಕೊಂಡಿರುವ ಬಿಜೆಪಿ ಮಹಾರಾಷ್ಟ್ರದಲ್ಲಿ ೨೦೧೯ರ ಲೋಕಸಭಾ ಚುನಾವಣೆಯಲ್ಲಿ ಏಕಾಂಗಿ ಸಮರಕ್ಕೆ ಸಜ್ಜಾಯಿತು.  ೨೦೧೯ರ ಲೋಕಸಭಾ ಚುನಾವಣೆಯಲ್ಲಿ ’ಕಹಿಮಿತ್ರ ಶಿವಸೇನೆ ಜೊತೆಗೆ ಮೈತ್ರಿ ಇರುವುದಿಲ್ಲ ಎಂಬುದಾಗಿ ಮಹಾರಾಷ್ಟ್ರದ ಪಕ್ಷ ಕಾರ್‍ಯಕರ್ತರಿಗೆ ಸ್ಪಷ್ಟ ಸಂದೇಶ ನೀಡಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಏಕಾಂಗಿ ಸಮರಕ್ಕೆ ಸಜ್ಜಾಗುವಂತೆ ಸೂಚನೆ ನೀಡಿದರು. ಮುಂದಿನ ವರ್ಷದ ಚುನಾವಣೆಯಲ್ಲಿ ಬಿಸಿ ಸಮರಕ್ಕೆ ಸಜ್ಜಾಗುವಂತೆ ಸೂಚಿಸಿರುವ ಶಾ ಮುಂಚಿತವಾಗಿಯೇ ಸಮರಕ್ಕೆ ಸಜ್ಜಾಗಲು ೨೩ ಅಂಶಗಳ ಯೋಜನೆಯನ್ನು ನೀಡಿದರು. ಶಿವಸೇನೆಯು ಈಗಲೂ ಮಹಾರಾಷ್ಟ್ರ ಸರ್ಕಾರ ಮತ್ತು ಕೇಂದ್ರದಲ್ಲಿ ಮೋದಿ ಸರ್ಕಾರದ ಅಂಗಪಕ್ಷವಾಗಿಯೇ ಮುಂದುವರೆದಿದೆ. ಆದರೂ ಉದ್ಧವ್ ಠಾಕರೆ ನೇತೃತ್ವದ ಪಕ್ಷವು ಆಗಾಗ ಬಹಿರಂಗವಾಗಿ ಬಿಜೆಪಿಯನ್ನು ಮತ್ತು ಪ್ರಧಾನಿ ಮೋದಿಯವರನ್ನು ಟೀಕಿಸುವ ಮೂಲಕ ಪಕ್ಷಕ್ಕೆ ಮುಜುಗರ ಉಂಟು ಮಾಡುತ್ತಿದೆ.  ಸಂಸತ್ ಅಧಿವೇಶನದಲ್ಲಿ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆ ಆರಂಭಕ್ಕೆ ಕೆಲವೇ ತಾಸುಗಳ ಮುನ್ನ ಶಿವಸೇನೆಯು ತಾನು ಮತದಾನ ಪ್ರಕ್ರಿಯೆಯಿಂದ ದೂರ ಉಳಿಯುವುದಾಗಿ ಪ್ರಕಟಿಸಿತ್ತು.  ೨೦೧೯ರ ಚುನಾವಣೆಗೆ ಸಿದ್ಧತೆ ಆರಂಭಿಸುವಂತೆ ಬಿಜೆಪಿ ಕಾರ್‍ಯಕರ್ತರಿಗೆ ಸೂಚಿಸಿರುವ ಶಾ, ರಾಜ್ಯದಲ್ಲಿನ ಎಲ್ಲ ಸಾಮಾಜಿಕ ಮಾಧ್ಯಮ ಗುಂಪುಗಳನ್ನು ಜಾಗೃತಗೊಳಿಸುವಂತೆ ಮತ್ತು ’ಒಂದು ಮತಗಟೆ (ಬೂತ್), ೨೫ ಯುವಕರು ಸೂತ್ರ ಜಾರಿ ನಿಟ್ಟಿನಲ್ಲಿ ಶ್ರಮಿಸುವಂತೆ ಸೂಚಿಸಿದರು. ಪ್ರತಿಯೊಂದು ಮತಗಟ್ಟೆಯಲ್ಲೂ ಐವರು ಕಾರ್ಯಕರ್ತರು ಮೋಟಾರು ಬೈಕುಗಳ ಜೊತೆಗೆ ಸಜ್ಜಾಗಿರಬೇಕು ಎಂದು ಬಿಜೆಪಿ ಮುಖ್ಯಸ್ಥ ಅಪೇಕ್ಷಿಸಿದರು. ದೇವಾಲಯಗಳು ಮತ್ತು ಅಲ್ಲಿನ ಅರ್ಚಕರು ಹಾಗೆಯೇ ಮಸೀದಿಗಳ ಪಟ್ಟಿಯನ್ನು ಪ್ರತಿಯೊಂದು ಮತಗಟ್ಟೆಯಲ್ಲೂ ತಯಾರಿಸುವಂತೆಯೂ ಶಾ ಬೆಂಬಲಿಗರಿಗೆ ಸೂಚಿಸಿದರು. ಪ್ರತಿಸ್ಪರ್ಧಿಗಳ ಬಗ್ಗೆ ಮಾಹಿತಿ ಸಂಗ್ರಹಿಸುವಂತೆ ಮತ್ತು ಸರ್ಕಾರಿ ಯೋಜನೆಗಳು ಮತ್ತು ಅವುಗಳ ಲಾಭವನ್ನು ಜನರಿಗೆ ಪ್ರಚಾರ ಮೂಲಕ ಮುಟ್ಟಿಸುವಂತೆಯೂ ಪಕ್ಷವು ತನ್ನ ಕಾರ್ಯಕರ್ತರಿಗೆ ಸೂಚಿಸಿತು.

2018: ಬೆಂಗಳೂರು: ರಾಷ್ಟ್ರದಲ್ಲಿ ಅತ್ಯುತ್ತಮ ಆಡಳಿತವನ್ನು ಹೊಂದಿರುವ ರಾಜ್ಯ ಕೇರಳವಾಗಿದ್ದು, ಕರ್ನಾಟಕ ಅತ್ಯುತ್ತಮ ಆಡಳಿತ ಹೊಂದಿರುವ ರಾಜ್ಯಗಳಲ್ಲಿ ೪ನೇ ಸ್ಥಾನವನ್ನು ಪಡೆದಿದೆ ಎಂದು ಸಾರ್ವಜನಿಕ ವ್ಯವಹಾರಗಳ ಕೇಂದ್ರದ (ಪಿಎಸಿ) ಚಿಂತನ ಕೊಳವು ಬಿಡುಗಡೆ ಮಾಡಿದ ೨೦೧೮ರ ಸಾರ್ವಜನಿಕ ವ್ಯವಹಾರಗಳ ಸೂಚ್ಯಂಕ (ಪಿಎಐ) ತಿಳಿಸಿತು. ೨೦೧೮ರ ಸಾರ್ವಜನಿಕ ವ್ಯವಹಾರಗಳ ಸೂಚ್ಯಂಕದಲ್ಲಿ ಕೇರಳವು ಮೊದಲ ಸ್ಥಾನವನ್ನು ಪಡೆದಿದ್ದು ೨೦೧೬ರಿಂದ ಸತತ ಮೂರನೇ ವರ್ಷ ಅತ್ಯುತ್ತಮ ಆಡಳಿತ ಹೊಂದಿರುವ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಬೆಂಗಳೂರು ಮೂಲಕ ಸಾರ್ವಜನಿಕ ವ್ಯವಹಾರಗಳ ಕೇಂದ್ರವು ತನ್ನ ವರದಿಯಲ್ಲಿ ತಿಳಿಸಿತು. ೨೦೧೬ರಿಂದ ಪ್ರತಿವರ್ಷವೂ ಅತ್ಯುತ್ತಮ ಆಡಳಿತದ ರಾಜ್ಯಗಳ ಪಟ್ಟಿಯನ್ನು ಪ್ರಕಟಿಸುತ್ತಿರುವ ಕೇಂದ್ರ, ಸಾಮಾಜಿಕ, ಆರ್ಥಿಕ ಅಭಿವೃದ್ಧಿ ಸೇರಿದಂತೆ ವಿವಿಧ ಮಾನದಂಡಗಳ ಅಡಿಯಲ್ಲಿ ಈ ಪಟ್ಟಿಯನ್ನು ಸಿದ್ದ ಪಡಿಸುತ್ತಿರುವುದಾಗಿ ಹೇಳಿತು. ಖ್ಯಾತ ಭಾರತೀಯ ಆರ್ಥಿಕ ತಜ್ಞ ದಿವಂಗತ ಸ್ಯಾಮ್ಯುಯೆಲ್ ಪೌಲ್ ಅವರು ೧೯೯೪ರಲ್ಲಿ ಸ್ಥಾಪಿಸಿರುವ ಈ ಸಂಸ್ಥೆಯು ರಾಷ್ಟ್ರದಲ್ಲಿ ಅತ್ಯುತ್ತಮ ಆಡಳಿತಕ್ಕಾಗಿ ಆಗ್ರಹ ಮೂಡುವಂತೆ ಮಾಡಲು ಶ್ರಮಿಸುತ್ತಿದೆ. ತಮಿಳುನಾಡು, ತೆಲಂಗಾಣ, ಕರ್ನಾಟಕ ಮತ್ತು ಗುಜರಾತ್ ಈ  ನಾಲ್ಕು ರಾಜ್ಯಗಳು ಅತ್ಯುತ್ತಮ ಆಡಳಿತ ಒದಗಿಸಿರುವ ರಾಜ್ಯಗಳ ಪೈಕಿ ಕೇರಳದ ನಂತರದ ಸ್ಥಾನ ಪಡೆದಿವೆ. ಕೇರಳ ಸೇರಿದಂತೆ ಈ ಐದು ರಾಜ್ಯಗಳು ರಾಷ್ಟ್ರದಲ್ಲಿ ಅತ್ಯುತ್ತಮ ಆಡಳಿತ ಹೊಂದಿರುವ ೫ ರಾಜ್ಯಗಳ ಪಟ್ಟಿಯಲ್ಲಿವೆ.  ಮಧ್ಯಪ್ರದೇಶ, ಜಾರ್ಖಂಡ್ ಮತ್ತು ಬಿಹಾರ ಸಾರ್ವಜನಿಕ ವ್ಯವಹಾರಗಳ ಸೂಚ್ಯಂಕದಲ್ಲಿ ಅತ್ಯಂತ ಕೆಳಗಿನ ಸ್ಥಾನದಲ್ಲಿದ್ದು ಈ ರಾಜ್ಯಗಳಲ್ಲಿ ಸಾಮಾಜಿಕ, ಆರ್ಥಿಕ ಅಸಮಾನತೆಗಳು ಹೆಚ್ಚಿನ ಪ್ರಮಾಣದಲ್ಲಿ ಇರುವುದನ್ನು ಸೂಚಿಸಿದೆ. ಎರಡು ಕೋಟಿಗಿಂತ ಕಡಿಮೆ ಜನಸಂಖ್ಯೆ ಇರುವ ಸಣ್ಣ ರಾಜ್ಯಗಳ ಪೈಕಿ ಹಿಮಾಚಲ ಪ್ರದೇಶ ಅತ್ಯುತ್ತಮ ಆಡಳಿತ ಇರುವ ರಾಜ್ಯಗಳಲ್ಲಿ ಅಗ್ರಸ್ಥಾನ ಪಡೆದಿದೆ. ಗೋವಾ, ಮಿಜೋರಂ, ಸಿಕ್ಕಿಂ ಮತ್ತು ತ್ರಿಪುರಾ ನಂತರದ ಸ್ಥಾನ ಪಡೆದಿವೆ.  ಸಣ್ಣ ರಾಜ್ಯಗಳ ಪೈಕಿ ನಾಗಾಲ್ಯಾಂಡ್, ಮಣಿಪುರ ಮತ್ತು ಮೇಘಾಲಯದಲ್ಲಿ ಅತ್ಯಂತ ಕಳಪೆ ಆಡಳಿತ ಇದೆ.  ಹೆಚ್ಚುತ್ತಿರುವ ಜನಸಂಖ್ಯೆಯನ್ನು ಹೊಂದಿರುವ ಯುವ ರಾಷ್ಟ್ರವಾಗಿರುವ ಭಾರತವು ತನ್ನ ಅಭಿವೃದ್ಧಿ ಸವಾಲುಗಳನ್ನು ಪರಿಶೀಲಿಸಿಕೊಳ್ಳಬೇಕಾದ ಅಗತ್ಯ ಇದೆ ಎಂದು ಸಾರ್ವಜನಿಕ ವ್ಯವಹಾರಗಳ ಕೇಂದ್ರದ (ಪಿಎಸಿ) ಅಧ್ಯಕ್ಷ ಕೆ. ಕಸ್ತೂರಿ ರಂಗನ್ ಈ ಸಂದರ್ಭದಲ್ಲಿ ಅಭಿಪ್ರಾಯ ಪಟ್ಟರು.


2017: ಅಹಮದಾಬಾದ್, ಮುಂಬೈ: ಮಹಾರಾಷ್ಟ್ರ, ಗುಜರಾತ್‌ನಲ್ಲಿ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಪ್ರವಾಹ ಉಂಟಾಗಿದ್ದು, ಐವರು ಮೃತರಾದರು. ಗುಜರಾತಿನಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಪ್ರವಾಹ ಭೀತಿ ಎದುರಾಯಿತು. ಧಾರಾಕಾರ ಮಳೆಯಲ್ಲಿ ಸಿಲುಕಿ ಮೂವರು ಮೃತರಾದರು. 6 ಸಾವಿರಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಯಿತು. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡ ಮತ್ತು ವಾಯುಪಡೆ ಪ್ರವಾಹ  ಪ್ರದೇಶಕ್ಕೆ ದೌಡಾಯಿಸಿದ್ದು, ಪ್ರವಾಹದಲ್ಲಿ ಸಿಲುಕಿರುವ 200ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಯಿತು. ಕಳೆದ 24 ಗಂಟೆಗಳಿಂದ ಸೌರಾಷ್ಟ್ರದಲ್ಲಿ ಮಳೆ ಅಬ್ಬರಿಸಿದೆ. ಇಲ್ಲಿನ ಎಲ್ಲಾ ನದಿಗಳು ತುಂಬಿ ಹರಿಯುತ್ತಿದ್ದು, ಈ ಋತುವಿನ ಶೇ 52ರಷ್ಟು ಮಳೆಯಾಗಿದೆ ಎಂದು ಗುಜರಾತಿನ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಪಂಕಜ್ ಕುಮಾರ್ ಹೇಳಿದರು. ಮಳೆಗೆ ಸಿಲುಕಿ ಮೃತಪಟ್ಟವರು ರಾಜ್‌ಕೋಟ್ ಹಾಗೂ ಅಮರೇಲಿ ನಿವಾಸಿಗಳು.
2017: ಮುಂಬೈ: ಹಿರಿಯ ಕಾಂಗ್ರೆಸ್‌ ನಾಯಕ, ಮಾಜಿ ಸಂಸದ ಮತ್ತು ನಟಿ ಸ್ಮಿತಾ ಪಾಟೀಲ್‌ ಅವರ ತಂದೆ
ಶಿವಾಜಿರಾವ್‌ ಪಾಟೀಲ್‌(92) ಅವರು ನಿಧನರಾದರು. 1960–67ರ ಅವಧಿಯಲ್ಲಿ ಮಹಾರಾಷ್ಟ್ರ ವಿಧಾನ ಪರಿಷತ್‌, 1967–80ರ ಅವಧಿಯಲ್ಲಿ ವಿಧಾನ ಸಭೆ ಹಾಗೂ 1992–98ರ ಅವಧಿಯಲ್ಲಿ ರಾಜ್ಯಸಭೆಯ ಸದಸ್ಯರಾಗಿ ಆಯ್ಕೆಯಾಗಿದ್ದರು. ಇವರಿಗೆ 2013ರಲ್ಲಿ ಪದ್ಮ ಭೂಷಣ ಗೌರವ ಲಭಿಸಿತ್ತು.
2017: ಲಖನೌ: ಪಕ್ಷದ ಸಭೆ ನಡುವೆ ಹೃದಯಾಘಾತಕ್ಕೆ ಒಳಗಾದ ಸಮಾಜವಾದಿ ಪಕ್ಷದ ಹಿರಿಯ ನಾಯಕ ಉಮಾಶಂಕರ್‌ ಚೌಧರಿ (60) ಅವರು ನಿಧನರಾದರು. ಪಕ್ಷ ಸಂಘಟನೆ ಕುರಿತು ಚರ್ಚಿಸಲು ಪಕ್ಷದ ಅಧ್ಯಕ್ಷ ಹಾಗೂ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್‌ ಯಾದವ್‌ ಅವರ ನೇತೃತ್ವದಲ್ಲಿ ಸಭೆ ಕರೆಯಲಾಗಿತ್ತು. ಸಭೆ ಮಧ್ಯೆ ಚೌಧರಿ ಅವರಿಗೆ ಎದೆ ನೋವು ಕಾಣಿಸಿಕೊಂಡಿದ್ದರಿಂದ ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು. ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಅಖಿಲೇಶ್‌ ಯಾದವ್‌ ಸೇರಿದಂತೆ ಪಕ್ಷದ ಹಲವು ನಾಯಕರು, ಮಾಜಿ ಸಚಿವರು ಆಸ್ಪತ್ರೆಗೆ ಧಾವಿಸಿದರು. ‘ಚೌಧರಿ ಅವರಿಗೆ ಸಕ್ಕರೆ ಖಾಯಿಲೆಯಿತ್ತು. ತೊಂದರೆ ಕಾಣಿಸಿಕೊಂಡ ತತ್ ಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತರಾದರು’ ಎಂದು ಪಕ್ಷದ ವಕ್ತಾರ ರಾಜೇಂದ್ರ ಚೌಧರಿ ಹೇಳಿದರು.
2017: ನವದೆಹಲಿ: ರಾಷ್ಟ್ರಪತಿಯಾಗಿ ಆಯ್ಕೆಯಾಗಿರುವ ರಾಮನಾಥ ಕೋವಿಂದ ಅವರ
ಕಾರ್ಯದರ್ಶಿಯಾಗಿ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ಮಾಜಿ ಕಾರ್ಯದರ್ಶಿ ಸಂಜಯ ಕೊಠಾರಿ ಅವರನ್ನು ನೇಮಕ ಮಾಡಲಾಯಿತು. ನವದೆಹಲಿಯಲ್ಲಿ ಗುಜರಾತ್‌ ಸರ್ಕಾರದ ಸ್ಥಾನಿಕ ಆಯುಕ್ತರಾಗಿರುವ ಭರತ್ ಲಾಲ್ ಅವರನ್ನು ಜಂಟಿ ಕಾರ್ಯದರ್ಶಿಯಾಗಿ ಹಾಗೂ ಹಿರಿಯ ಪತ್ರಕರ್ತ, ಒಆರ್‌ಎಫ್‌ ಫೆಲೋ ಅಶೋಕ್ ಮಲ್ಲಿಕ್ ಅವರನ್ನು ಮಾಧ್ಯಮ ಕಾರ್ಯದರ್ಶಿಯಾಗಿ ನೇಮಿಸಲಾಯಿತು. ಕೇಂದ್ರ ಸರ್ಕಾರವು ಹಿಂದಿನ ದಿನ  ರಾತ್ರಿ ನೇಮಕಾತಿ ಪತ್ರ ಕಳುಹಿಸಿಕೊಟ್ಟಿತು. ಕೊಠಾರಿ ಅವರು ನವದೆಹಲಿಯ ಪ್ರಧಾನಿ ಕಚೇರಿಯ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಡಾ.ಪಿ.ಕೆ ಮಿಶ್ರಾ ಅವರ ಆಪ್ತರು ಎನ್ನಲಾಯಿತು. ರಾಮನಾಥ ಕೋವಿಂದ ಅವರು ಜುಲೈ 17ರಂದು ನಡೆದ ರಾಷ್ಟ್ರಪತಿ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೀರಾ ಕುಮಾರ್ ಅವರಿಗಿಂತ ಹೆಚ್ಚು ಮತ ಪಡೆದು 14ನೇ ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದರು. ಕೋವಿಂದ್ ಅವರು ಜುಲೈ 25ರಂದು ಸಂಸತ್ತಿನ ಸೆಂಟ್ರಲ್‌ ಹಾಲ್‌ನಲ್ಲಿ ರಾಜಕೀಯ ಮುಖಂಡರು, ಗಣ್ಯರ ಸಮ್ಮುಖದಲ್ಲಿ ಪ್ರಮಾಣವಚನ ಸ್ವೀಕರಿಸುವರು.
2017: ಚೆನ್ನೈ: ಬೆಂಗಳೂರಿನ ಖಾಸಗಿ ಸಂಸ್ಥೆ ‘ಟೀಮ್‌ ಇಂಡಸ್‌’ ಚಂದ್ರನಲ್ಲಿ ಬಾಹ್ಯಕಾಶ ನೌಕೆ ಹಾಗೂ ರೋವರ್‌
ಇಳಿಸುವ ಪ್ರಯತ್ನಕ್ಕೆ ಮುಂದಾಗಿದ್ದು ಈಗಾಗಲೇ  ಬಾಹ್ಯಾಕಾಶ ನೌಕೆಯ ಮಾದರಿ ಸಿದ್ಧಪಡಿಸಿದೆ. ಆಗಸ್ಟ್‌ನಲ್ಲಿ ಇಸ್ರೊಈ ಮಾದರಿಯ ಪರೀಕ್ಷೆ ನಡೆಸಲಿದೆ. ಹೀಗೆ ಚಂದ್ರನಲ್ಲಿ ಬಾಹ್ಯಾಕಾಶ ನೌಕೆ ಇಳಿಸಿದ ವಿಶ್ವದ ಪ್ರಥಮ ಖಾಸಗಿ ಕಂಪನಿ ಎಂಬ ಹೆಗ್ಗಳಿಕೆಗೆ ಟೀಮ್ ಇಂಡಸ್ ಪಾತ್ರವಾಗಲಿದೆ. ಚೆನ್ನೈ ಇಂಟರ್‌ನ್ಯಾಷನಲ್‌ ಸೆಂಟರ್‌ ಆಯೋಜಿಸಿದ್ದ ‘ಮಿಷನ್‌ ಟು ದಿ ಮೂನ್‌’ ಕಾರ್ಯಕ್ರಮದಲ್ಲಿ ಟೀಮ್‌ ಇಂಡಸ್‌ ಸಂಸ್ಥೆಯ ಸಂಸ್ಥಾಪಕ, ದೆಹಲಿ ಐಐಟಿಯ ಹಿರಿಯ ವಿದ್ಯಾರ್ಥಿ ರಾಹುಲ್‌ ನಾರಾಯಣ್‌ ಯೋಜನೆ ಪ್ರಸ್ತುತ ಪಡಿಸಿದರು. ಯಾವುದೇ ಸ್ವರೂಪದಲ್ಲಿ ಸರ್ಕಾರದ ನೆರವು ಪಡೆಯದ ಸಂಪೂರ್ಣ ಖಾಸಗಿ ಪ್ರಯತ್ನ ಆಗಿರುವುದು ಈ ಯೋಜನೆಯ ವಿಶೇಷತೆ. ಸಿದ್ಧಗೊಂಡಿರುವ ಮಾದರಿಯು ಇಸ್ರೊ ಪರೀಕ್ಷೆಯಲ್ಲಿ ಅರ್ಹಗೊಂಡ ನಂತರ ಚಂದ್ರನಲ್ಲಿಗೆ ಸಾಗುವ ಬಾಹ್ಯಾಕಾಶ ನೌಕೆಯ ಅಂತಿಮ ತಯಾರಿ ನಡೆಯಲಿದೆ ಎಂದು ಟೀಮ್‌ ಇಂಡಸ್‌ನ ಸಹ ಸ್ಥಾಪಕದಲ್ಲಿ ಒಬ್ಬರಾಗಿರುವ  ಶೀಲಿಕಾ ರವಿಶಂಕರ್‌ ತಿಳಿಸಿದರು. ಗೂಗಲ್‌ ಲೂನಾರ್‌ ಎಕ್ಸ್‌ ಸ್ಪರ್ಧೆಯಲ್ಲಿ ಅಂತಿಮಗೊಂಡ ಐದು ತಂಡಗಳಲ್ಲಿ ಟೀಮ್‌ ಇಂಡಸ್‌ ಕೂಡ ಒಂದು. ಉಳಿದಂತೆ ಅಮೆರಿಕದ ಎರಡು, ಇಸ್ರೇಲ್‌ ಹಾಗೂ ಜಪಾನ್‌ನ ಒಂದೊಂದು ತಂಡಗಳು ಟಾಪ್‌ ಐದರಲ್ಲಿವೆ. ಒಂದು ಸಣ್ಣ ಆಸೆ:  ಇಸ್ರೊದ ಹನ್ನೆರಡು ಮಂದಿ ಮಾಜಿ ವಿಜ್ಞಾನಿಗಳೂ ಸೇರಿದಂತೆ 100ಕ್ಕೂ ಹೆಚ್ಚು ಜನರನ್ನು ಒಳಗೊಂಡ ತಂಡ 600 ಕೆ.ಜಿ. ತೂಕದ ಬಾಹ್ಯಾಕಾಶ ನೌಕೆ ಹಾಗೂ 6 ಕೆ.ಜಿ. ತೂಕದ ರೋವರ್‌ ವಿನ್ಯಾಸ ಮತ್ತು ಅಭಿವೃದ್ಧಿ ಮಾಡಿದೆ. ಒಂದು ಸಣ್ಣ ಆಸೆ ಎನ್ನುವ ಅರ್ಥ ನೀಡುವ ‘ಏಕ್‌ ಚೋಟಿ ಸಿ ಆಶಾ(ಇಸಿಎ)’ ರೋವರ್‌ನೊಂದಿಗೆ ಜಪಾನ್‌ ತಂಡದ ರೂಪಿಸಿರುವ ರೋವರ್‌ ಹಾಗೂ ಫ್ರೆಂಚ್‌ ಬಾಹ್ಯಾಕಾಶ ಸಂಸ್ಥೆಯ ಕ್ಯಾಮೆರಾವನ್ನೂ ಹೊತ್ತು ಬಾಹ್ಯಾಕಾಶ ನೌಕೆ ಚಂದ್ರನತ್ತ ಧಾವಿಸಲಿದೆ.
ಕಾರ್ಯಾಚರಣೆ: ಚಂದ್ರನ ಕಕ್ಷೆಗೆ ಬಾಹ್ಯಾಕಾಶ ನೌಕೆ ಕಳಿಸಿ, ಅದರ ನೆಲದ ಮೇಲೆ ಇಳಿಯುವ ರೋವರ್‌  500 ಮೀಟರ್‌ವರೆಗೆ ಚಲಿಸಿ ಮಾಹಿತಿ ರವಾನಿಸಲಿದೆ. ಈ ವರೆಗೆ ಚಂದ್ರನಲ್ಲಿಗೆ ಅಮೆರಿಕ, ರಷ್ಯಾ ಮತ್ತು ಚೀನಾ ದೇಶಗಳು ಮಾತ್ರ ಬಾಹ್ಯಾಕಾಶ ನೌಕೆ ಕಳಿಸಿವೆ. ಈಗ ಖಾಸಗಿ ಸಂಸ್ಥೆ ಪ್ರಯತ್ನದೊಂದಿಗೆ ಚಂದ್ರನಲ್ಲಿ ನೌಕೆ ಇಳಿಸುವ ನಾಲ್ಕನೇ ದೇಶ ಭಾರತವಾಗಲಿದೆ. ರೋವರ್‌ ಒಳಗೊಂಡ ಬಾಹ್ಯಾಕಾಶ ನೌಕೆಯನ್ನು ‘ಪಿಎಸ್‌ಎಲ್‌ವಿ’ಯ  ತುದಿಯಲ್ಲಿ ಜೋಡಿಸಲಾಗುತ್ತಿದೆ. ಉಡಾವಣೆಗೊಂಡು ಬಾಹ್ಯಾಕಾಶದತ್ತ 15 ನಿಮಿಷಗಳವರೆಗೆ ಸಾಗಿದ ನಂತರ ನೌಕೆಯು ಬೇರ್ಪಡಲಿದೆ. ಭೂಮಿಗೆ ಎರಡು ಸುತ್ತು ಹಾಕಿ ಚಂದ್ರನತ್ತ ಐದು ದಿನಗಳ ಪಯಣ ಬೆಳೆಸಲಿದೆ. ಕೊನೆಯ ಹಂತ: ಪ್ರತಿ ಸೆಕೆಂಡ್‌ಗೆ 1.3 ಕಿ. ಮೀಟರ್‌ ವೇಗದಲ್ಲಿ ಸಾಗುವ ನೌಕೆ ಶೂನ್ಯ ವೇಗಕ್ಕೆ ತಲುಪಿ ಚಂದ್ರನ ಮೇಲ್ಮೈ ಸ್ಪರ್ಶಿಸುವ  ಹಂತವೇ ಅತ್ಯಂತ ಸೂಕ್ಷ್ಮ ಹಂತವಾಗಿದೆ. ಯೋಜನೆಯ ಒಟ್ಟು ವೆಚ್ಚ ರೂ.485 ಕೋಟಿ. ಸ್ಪರ್ಧೆಯಲ್ಲಿ ಗಳಿಸಿರುವ ಹಣ ರೂ.193 ಕೋಟಿ (30 ಮಿಲಿಯನ್‌ ಡಾಲರ್).

2017: ಮುಂಬಯಿ : ಭಾರತದ ಮಾಜಿ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರ ಪುತ್ರ ದಿವಂಗತ ಸಂಜಯ್‌
ಗಾಂಧಿ ಅವರಿಗೆ ಜನಿಸಿದ ಪುತ್ರಿ ತಾನು ಎಂದು ಹೇಳಿಕೊಂಡಿರುವ ಪ್ರಿಯಾ ಪೌಲ್‌ ಎಂಬ ಮಹಿಳೆ ಬಾಲಿವುಡ್‌ ಚಿತ್ರ ನಿರ್ದೇಶಕ ಮಧುರ್‌ ಭಂಡಾರ್‌ಕರ್‌ ಅವರ ಮುಂಬರುವ  "ಇಂದು ಸರ್ಕಾರ್‌' ಚಿತ್ರಕ್ಕೆ ತಡೆ ನೀಡಬೇಕೆಂದು ಕೋರಿ ಬಾಂಬೆ ಹೈಕೋರ್ಟ್‌ ಮೆಟ್ಟಲೇರಿದರು. ಎಪ್ಪತ್ತರ ದಶಕದಲ್ಲಿ ದೇಶ ಕಂಡಿದ್ದ ಕರಾಳ ತುರ್ತು ಪರಿಸ್ಥಿತಿಯ ಹಿನ್ನೆಲೆಯನ್ನು ಹೊಂದಿರುವ ತನ್ನ "ಇಂದು ಸರ್ಕಾರ್‌' ಸಿನೇಮಾದ ಶೇ.30 ಭಾಗ ಸತ್ಯಾಂಶ ಹೊಂದಿದ್ದು ಉಳಿದ ಭಾಗ ಕಾಲ್ಪನಿಕವಾಗಿದೆ ಎಂದು ಈಚೆಗೆ ಮಧುರ್‌ ಭಂಡಾರ್‌ಕರ್‌ ಹೇಳಿಕೊಂಡಿದ್ದರು. ಭಂಡಾರ್‌ಕರ್‌ ಅವರು ತಮ್ಮ ಇಂದು ಸರ್ಕಾರ್‌ ಚಿತ್ರದಲ್ಲಿ 'ಸತ್ಯ ಯಾವುದು ಕಟ್ಟು ಕಥೆ ಯಾವುದು' ಎಂಬುದನ್ನು ವಿವರಿಸಿ ಸ್ಪಷ್ಟೀಕರಣ ನೀಡುವಂತೆ ಅವರಿಗೆ ನಿರ್ದೇಶ ನೀಡಬೇಕೆಂದು ಕೋರಿ ಪ್ರಿಯಾ ಪೌಲ್‌ ಹಿಂದಿನ ದಿನ ಬಾಂಬೆ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದರು. ತುರ್ತು ಪರಿಸ್ಥಿತಿಯ ವೇಳೆ ನೆಗೆಟೀವ್‌ ಹೀರೋ ಆಗಿ ಮೆರೆದಿದ್ದ ಸಂಜಯ್‌ ಗಾಂಧಿಯನ್ನು ಚಿತ್ರದಲ್ಲಿ ಕೆಟ್ಟದಾಗಿ ತೋರಿಸಿರುವ ಸಾಧ್ಯತೆಯನ್ನು ಪ್ರಿಯಾ ಪೌಲ್‌ ಶಂಕಿಸಿ ಚಿತ್ರದ ತಡೆಗೆ ಹೈಕೋರ್ಟಿಗೆ ಮನವಿ ಸಲ್ಲಿಸಿರುವುದಾಗಿ ಹೇಳಲಾಯಿತು. ಮಧುರ್‌ ಭಂಡಾರ್‌ಕರ್‌ ಅವರ ಇಂದು ಸರ್ಕಾರ್‌ ಸಿನೇಮಾ ಜು.28ರಂದು ತೆರೆ ಕಾಣಲಿದೆ.

2017: ವಾಷಿಂಗ್ಟನ್‌: ವೈದ್ಯಕೀಯ ಲೋಕದಲ್ಲಿ ಹಲವು ಉತ್ಪನ್ನಗಳಿಗೆ ಗೋಜನ್ಯ, ಪ್ರಾಣಿಜನ್ಯ
ವಸ್ತುಗಳು ಬಳಕೆಯಾಗುತ್ತವೆ. ಆದರೀಗ ಮನುಷ್ಯರಿಗೆ ಮಾರಣಾಂತಿಕವಾದ, ಜಗತ್ತಿನಲ್ಲಿ ಈವರೆಗೆ ಔಷಧವೇ ಇಲ್ಲದ ಎಚ್‌ಐವಿ ಸೋಂಕಿನ ವಿರುದ್ಧ ಹೋರಾಡುವ ಶಕ್ತಿ ಗೋವಿನಲ್ಲಿದೆ ಎಂಬ ವಿಚಾರ ಬಹಿರಂಗಗೊಂಡಿತು.  ಗೋವಿನ ಸಂಕೀರ್ಣ ಹಾಗೂ ಬ್ಯಾಕ್ಟೀರಿಯಾಮಯ ಜೀರ್ಣಾಂಗ ವ್ಯವಸ್ಥೆಯ ಮಾದರಿಯಲ್ಲಿ ಕ್ಷಿಪ್ರವಾಗಿ ಅದಿಕ ಸಂಖ್ಯೆಯಲ್ಲಿ ಪ್ರತಿಜೀವಿಗಳನ್ನು ತಯಾರಿಸುವ ವಿಧಾನವನ್ನು ರೂಪಿಸಿ ತನ್ಮೂಲಕ  ಲಸಿಕೆಯನ್ನು ತಯಾರಿಸಿ ಎಚ್‌ಐವಿ ನಿರೋಧಕವಾಗಿ ಬಳಸಲ್ಪಡುವ ಸಾಧ್ಯತೆ ಇದೆ ಎಂದು ವಿಜ್ಞಾನಿಗಳು ಹೇಳಿದರು. ಇಂಥ ವಿನೂತನ ಸಂಶೋಧನೆಯನ್ನು ಅಮೆ ರಿಕದ ಸಂಶೋಧಕರ ತಂಡ ಮಾಡಿದ್ದು, "ನೇಚರ್‌' ಹೆಸರಿನ ನಿಯತಕಾಲಿಕೆಯಲ್ಲಿ ಸಂಶೋಧನೆಯ ವಿವರಗಳನ್ನು ನೀಡಿತು. ಸಂಶೋಧನೆ ಪ್ರಕಾರ, ಗೋವಿನಿಂದ ಎಚ್‌ಐವಿಗಳನ್ನು ತಡೆಯುವ ಪ್ರತಿಜೀವಿಗಳನ್ನು ಕೆಲವು ವಾರಗಳಲ್ಲಿ ತಯಾರು ಮಾಡಬಹುದು. ಗೋವುಗಳಲ್ಲಿರುವ ಬ್ಯಾಕ್ಟೀರಿಯಾ ಪೂರಿತ ಜೀರ್ಣಾಂಗ ವ್ಯವಸ್ಥೆ ಅತ್ಯಂತ ಸಂಕೀರ್ಣ ವಾಗಿದ್ದು, ಹೊಟ್ಟೆಯಲ್ಲಿನ ಬಹುಹಂತದ ವ್ಯವಸ್ಥೆ, ಹುಲ್ಲುಗಳನ್ನು ಜೀರ್ಣಗೊಳಿಸಲು ಸಹಾಯ ಮಾಡುತ್ತವೆ. ಇದಕ್ಕೆ ತಕ್ಕುದಾದ ಭಾರೀ ಪ್ರಮಾಣದ ಬ್ಯಾಕ್ಟೀರಿಯಾ ವ್ಯವಸ್ಥೆ ಅವು ಗಳಲ್ಲಿದೆ. ಆದ್ದರಿಂದ ಅವುಗಳಲ್ಲಿ ಸಹಜವಾಗಿ ರೋಗನಿರೋಧಕ ಶಕ್ತಿಯೂ ಹೆಚ್ಚು. ಜತೆಗೆ ಪ್ರತಿಜೀವಿ (ಆ್ಯಂಟಿಬಾಡಿ)ಗಳು ಅತಿ ವೇಗದಲ್ಲಿ ಗೋವುಗಳಲ್ಲಿ ಉತ್ಪತ್ತಿಯಾಗುತ್ತವೆ. ಇದೇ ರೀತಿ ಮಾನವನಲ್ಲಾದರೆ ಪ್ರಾಕೃತಿಕವಾಗಿ ಎಚ್‌ಐವಿ ವಿರುದ್ಧದ ಪ್ರತಿಜೀವಿಗಳು (ಬಿಎನ್‌ಎಬಿಎಸ್‌) ಬೆಳವಣಿಗೆ ಹೊಂದುವ ಪ್ರಮಾಣ ಶೇ. 10ರಿಂದ 20ರಷ್ಟು ಮಾತ್ರವಾಗಿದೆ. ಇಷ್ಟು ಬೆಳವಣಿಗೆ ಯಾಗಲು 2 ವರ್ಷ ಬೇಕಾಗಿದ್ದು, ಅದಾಗಲೇ ಎಚ್‌ಐವಿ ವೈರಸ್‌ ರೂಪಾಂತರಗೊಂಡು ದೇಹ ವನ್ನು ಜರ್ಝರಿತಗೊಳಿಸಿರುತ್ತದೆ. ಆದರೆ, ಸಂಶೋಧನೆ ಪ್ರಕಾರ, ಎಚ್‌ಐವಿ ವಿರುದ್ಧ ಕೆಲವೇ ವಾರಗಳಲ್ಲಿ ಗೋವುಗಳಲ್ಲಿ ಬಿಎನ್‌ಎಬಿಎಸ್‌ಗಳು ಸೃಷ್ಟಿಯಾಗಿವೆ. ನಾಲ್ಕು ಹಸುಗಳ ಮೇಲೆ ಇಂತಹ ಪ್ರಯೋಗ ಮಾಡಲಾಗಿದ್ದು, ಧನಾತ್ಮಕ ಫ‌ಲಿತಾಂಶಗಳು ಗೋಚರವಾಗಿವೆ. ಎಚ್‌ಐವಿ ಗೋವುಗಳ ಮೇಲೆ ಪರಿ ಣಾಮ ಬೀರುವುದಿಲ್ಲ ಮತ್ತು ಸದ್ಯದ ಪರಿಸ್ಥಿತಿಯಲ್ಲಿ ಗೋವಿನ ಪ್ರತಿಜೀವಕ ಗಳನ್ನೇ ಔಷಧವನ್ನಾಗಿ ಮಾನವನಿಗೆ ನೀಡಲು ಸಾಧ್ಯವಿಲ್ಲ. ಆದ್ದರಿಂದ ಮುಂದಿನ ದಿನಗಳಲ್ಲಿ ಅವುಗಳನ್ನು ಪೂರಕ ವಾಗಿ ಬಳಸಿ ಮಾನವರಿಗೆ ಬೇಕಾದ ಸುಧಾರಿತ ಎಚ್‌ಐವಿ ವಿರೋಧಿ ಲಸಿಕೆ ಕಂಡುಹಿಡಿಯುವುದು ವಿಜ್ಞಾನಿಗಳ ಲೆಕ್ಕಾಚಾರವಾಗಿದೆ. ಈ ಬಗ್ಗೆ ಇನ್ನೂ ವ್ಯಾಪಕವಾದ ಸಂಶೋಧನೆಗಳು ನಡೆಯಬೇಕಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಎಚ್‌ಐವಿ ವಿರುದ್ಧ ಹೋರಾಟ ಹೇಗೆ ? ಮಾನವನಲ್ಲಿ ಎಚ್‌ಐವಿ ಬಳಿಕ ಪ್ರತಿಜೀವಿಗಳು ಸೃಷ್ಟಿಯಾಗುತ್ತಾವಾದರೂ, ಅವುಗಳ ಉತ್ಪಾದನೆ ನಿಧಾನವಾಗಿರುತ್ತದೆ ಮತ್ತು ಪ್ರಬಲವಾಗಿರುವುದಿಲ್ಲ. ವಿರೋಧಿ ಪ್ರತಿಜೀವಿಗಳ ಬೆಳವಣಿಗೆಗೆ ಸುಮಾರು 2 ವರ್ಷ ತಗಲುತ್ತವೆ. ಆದರೆ ಮಾನವ ದೇಹ ಆಗ ಎಚ್‌ಐವಿನಿಂದಾಗಿ ತೀರಾ ಘಾಸಿಗೊಂಡಿರುತ್ತವೆ. ಆದರೆ ಗೋವು ಗಳಲ್ಲಿ 30-45 ದಿನಗಳಲ್ಲಿ ಪ್ರತಿಜೀವಿಗಳು ಉತ್ಪತ್ತಿಯಾಗಿ ಎಚ್‌ಐವಿ ನಿರೋಧಕವಾಗಿ ಕೆಲಸ ಮಾಡುವುದನ್ನು ಪತ್ತೆ ಹಚ್ಚಲಾಗಿದೆ.

2016: ನವದೆಹಲಿ: ಇಪ್ಪತ್ತೊಂಬತ್ತು ಮಂದಿಯಿದ್ದ ಭಾರತೀಯ ವಾಯುಪಡೆಗೆ ಸೇರಿದ ಎಎನ್-32 ವಿಮಾನ ನಾಪತ್ತೆಯಾಗಿದ್ದು, ಬಂಗಾಳ ಕೊಲ್ಲಿಯಲ್ಲಿ ಚೆನ್ನೈನಿಂದ ಅಂದಾಜು 280 ಕಿಲೋ ಮೀಟರ್ ದೂರದಲ್ಲಿ ಪತನಗೊಂಡಿರುವ ಸಾಧ್ಯತೆಗಳಿವೆ ಎಂದು ಹೇಳಲಾಯಿತು. ಬಂಗಾಳ ಕೊಲ್ಲಿ ವ್ಯಾಪ್ತಿಯಲ್ಲಿ ವಿಮಾನಕ್ಕಾಗಿ ವ್ಯಾಪಕ ಶೋಧ ಕಾರ್ಯಾಚರಣೆ ನಡೆಸಲಾಯಿತು. ಚೆನ್ನೈಯ ತಂಬರಂನಿಂದ ಹಾರಿದ ವಾಯಪಡೆಯ ವಿಮಾನ ಪತನಗೊಂಡಿರುವ ಬಗ್ಗೆ ಯಾವುದೇ ಸುಳಿವು ರಾತ್ರಿಯವರೆಗೂ ಸಿಗಲಿಲ್ಲ. ಆದರೆ ಸಾಕಷ್ಟು ಹುಡುಕಾಟದ ಬಳಿಕವೂ ಯಾವುದೇ ಸುಳಿವು ಇಲ್ಲದಿರುವುದನ್ನು ಗಮನಿಸಿದರೆ ಪತನಗೊಂಡಿರುವ ಸಾಧ್ಯತೆಯೇ ಹೆಚ್ಚು ಎಂಬುದು ಐಎಎಫ್ ತಜ್ಞರ ಅಭಿಪ್ರಾಯ. ಚೆನ್ನೈಗೆ ಸಮೀಪದಲ್ಲಿರುವ ತಂಬರಮ್ ಏರ್ಬೇಸ್ನಿಂದ ಬೆಳಗ್ಗೆ 8.30 ವೇಳೆಯಲ್ಲಿ ಗಗನಕ್ಕೆ ಏರಿದ್ದ ವಿಮಾನ 11.45ರತನಕ ರಾಡಾರ್ ಮೂಲಕ ಸಂಪರ್ಕದಲ್ಲಿತ್ತು. ಆದರೆ ಆನಂತರ ಸಂಪರ್ಕಕ್ಕೆ ಸಿಗಲಿಲ್ಲ. ಕಡೇ ಸಮಯದಲ್ಲಿನ ಸಂಪರ್ಕದಲ್ಲಿ ವಿಮಾನ ಅಂದಾಜು 23,000 ಅಡಿ ಎತ್ತರದಲ್ಲಿತ್ತು. ವಾರದಲ್ಲಿ ಮೂರ್ನಾಲ್ಕು ಬಾರಿ ಚೆನ್ನೈನಿಂದ ಅಂಡಮಾನ್ ನಿಕೋಬಾರ್ ಪೋರ್ಟ್ ಬ್ಲೇರ್ಗೆ ಹಾರಾಟ ನಡೆಸುತ್ತಿದ್ದ ವಿಮಾನ ಈದಿನ ಕೂಡ ಎಂದಿನಂತೆ ಸುರಳೀತವಾಗಿಯೇ ಟೇಕ್ಆಫ್ ಮಾಡಿತ್ತು. ಎಂದಿನಂತೆ 11.20 ವೇಳೆಗೆ ಪೋರ್ಟ್ ಬ್ಲೇರ್ಗೆ ತಲುಪಬೇಕಿತ್ತು. ಆದರೆ ಸಮಯಕ್ಕೆ ತಲುಪದೇ ಇರುವ ಹಿನ್ನೆಲೆಯಲ್ಲಿ ಸಂಪರ್ಕಕ್ಕೆ ಪ್ರಯತ್ನಿಸಿದಾಗ, ಸಂಪರ್ಕ ಸಾಧ್ಯವಾಗಲಿಲ್ಲ. ಆಗ ವಿಮಾನ ನಾಪತ್ತೆಯಾಗಿರುವುದು ಖಚಿತವಾಯಿತು ಎಂದು ನೇವಿ ವಕ್ತಾರ ಡಿ.ಕೆ. ಶರ್ಮ ತಿಳಿಸಿದರು.

2016: ನವದೆಹಲಿ: ಮುಂಬೈಯ 31 ಮಹಡಿಗಳ ವಿವಾದಾತ್ಮಕ ಆದರ್ಶ ಅಪಾರ್ಟ್ಮೆಂಟ್ ಕಟ್ಟಡವನ್ನು ತನ್ನ ವಶಕ್ಕೆ ತೆಗೆದುಕೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಆಜ್ಞಾಪಿಸಿದ ಸುಪ್ರೀಂಕೋರ್ಟ್, ಕಟ್ಟಡವನ್ನು ನಾಶಪಡಿಸುವಂತೆ ಬಾಂಬೆ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿದ್ದ ವಿವಿಧ ಅರ್ಜಿದಾರರಿಗೆ ನೋಟಿಸ್ಗಳನ್ನು ಜಾರಿ ಮಾಡಿತು. ‘ಕಟ್ಟಡವನ್ನು ಕೆಡವಿ ಹಾಕಲಾಗುವುದಿಲಎಂದು ಕೇಂದ್ರ ಸರ್ಕಾರವು ಸುಪ್ರೀಂಕೋರ್ಟಿಗೆ ಭರವಸೆ ನೀಡಿತು. ‘ನಾವು ಕಟ್ಟಡವನ್ನು ಮತ್ತು ಭೂಮಿಯನ್ನು ವಶಕ್ಕೆ ತೆಗೆದುಕೊಳ್ಳುತ್ತೇವೆ. ಯಾವುದನ್ನೂ ಕೆಡವಿ ಹಾಕುವುದಿಲ್ಲಎಂದು ಕೇಂದ್ರದ ಪರವಾಗಿ ಹಾಜರಿದ್ದ ಸಾಲಿಸಿಟರ್ ಜನರಲ್ ರಂಜಿತ್ ಕುಮಾರ್ ಅವರು ನ್ಯಾಯಮೂರ್ತಿಗಳಾದ ಜೆ. ಚಲಮೇಶ್ವರ್ ಮತ್ತು .ಎಂ. ಸಪ್ರೆ ಅವರನ್ನು ಒಳಗೊಂಡ ಪೀಠಕ್ಕೆ ತಿಳಿಸಿದರು. ಆದರ್ಶ ಕೋ-ಆಪರೇಟಿವ್ ಹೌಸಿಂಗ್ ಸೊಸೈಟಿಯ ವಕೀಲರು ಹೈಕೋರ್ಟಿನ ತೀರ್ಪಿಗೆ ತಡೆಯಾಜ್ಞೆ ಕೋರಿದಾಗ ಸಾಲಿಸಿಟರ ಜನರಲ್ ಭರವಸೆ ನೀಡಿದರುಕಟ್ಟಡ ಹಸ್ತಾಂತರ ಪ್ರಕ್ರಿಯೆಯ ಉಸ್ತುವಾರಿ ನೋಡಿಕೊಳ್ಳುವಂತೆ ಬಾಂಬೆ ಹೈಕೋರ್ಟಿನ ರಿಜಿಸ್ಟ್ರಾರ್ ಜನರಲ್ ಅವರಿಗೆ ಸೂಚಿಸಿದ ಪೀಠವುನೀವು ಅಥವಾ ನಿಮ್ಮಿಂದ ನೇಮಕಗೊಂಡ ರಿಜಿಸ್ಟ್ರಾರ್ ಆಗಸ್ಟ್ 5 ಒಳಗಾಗಿ ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಳ್ಳುವಂತೆ ನೋಡಿಕೊಳ್ಳಬೇಕುಎಂದು ಸೂಚಿಸಿತು.
2016: ನವದೆಹಲಿ: ಸಂಸತ್ತಿನ ಭದ್ರತೆಗೆ ಸಂಬಂಧಿಸಿದ ವಿವಾದಾತ್ಮಕ ವಿಡಿಯೋ ಪ್ರಸಾರಿಸಿದ ಆಮ್ ಆದ್ಮಿ ಪಕ್ಷದ (ಆಪ್) ಸಂಸತ್ ಸದಸ್ಯ ಭಗವಂತ ಮಾನ್ ಅವರು ಲೋಕಸಭಾ ಅಧ್ಯಕ್ಷೆ ಸುಮಿತ್ರಾ ಮಹಾಜನ್ ಅವರಿಂದ ಬುಲಾವ್ ಬಂದ ಬಳಿಕ ಭೇಷರತ್ ಕ್ಷಮಾಯಾಚನೆ ಮಾಡುವುದಾಗಿ ಹೇಳಿ, ಇಂತಹ ಘಟನೆ ಮರುಕಳಿಸುವುದಿಲ್ಲ ಎಂಬುದಾಗಿ ಭರವಸೆ ನೀಡಿದರು.  ಮಧ್ಯೆ ಭಗವಂತ ಮಾನ್ ವಿರುದ್ಧ ಸಂಸತ್ ರಸ್ತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಯಿತು. ಸಂಸತ್ತಿನ ಭದ್ರತಾ ವ್ಯವಸ್ಥೆಯನ್ನು ಅಪಾಯಕ್ಕೆ ಒಡ್ಡಲು ನಾನೆಂದೂ ಬಯಸಿರಲಿಲ್ಲ. ನಾನು ಲಿಖಿತವಾಗಿಯೇ ಕ್ಷಮಾಯಾಚನೆ ಮಾಡಿದ್ದೇನೆಎಂದು ಮಾನ್ ತಿಳಿಸಿದರು. ‘ನಾನು ಲೋಕಸಭಾ ಅಧ್ಯಕ್ಷರನ್ನು ಭೇಟಿ ಮಾಡಿದ್ದೇನೆ. ವಿವರಣೆ ನೀಡಲು ನನಗೆ ಒಂದು ಅವಕಾಶ ನೀಡಬೇಕು ಎಂದು ಕೋರಿದ್ದೇನೆ. ಸಂಸತ್ತಿನ ಭದ್ರತೆಯನ್ನು ಅಪಾಯಕ್ಕೆ ತಳ್ಳುವ ಉದ್ದೇಶ ನನಗೆ ಇರಲಿಲ್ಲ ಎಂದು ಅವರಿಗೆ ತಿಳಿಸಿದ್ದೇನೆಎಂದು ಮಾನ್ ಹೇಳಿದರು. ಮಾನ್ ಭೇಟಿ ಮಾಡಿದ ಬಳಿಕ ಸುದ್ದಿಗಾರರ ಜೊತೆಗೆ ಮಾತನಾಡಿದ ಸುಮಿತ್ರಾ ಮಹಾಜನ್ ಅವರುನನ್ನನ್ನು ಭೇಟಿ ಮಾಡಿದಾಗ ಅವರು (ಮಾನ್) ಕ್ಷಮೆಯಾಚನೆಗೆ ಸಿದ್ಧರಿರುವುದಾಗಿ ತಿಳಿಸಿದರು. ಆದರೆ ವಿಷಯವು ಕೇವಲ ಕ್ಷಮಾಯಾಚನೆಯಿಂದ ಇತ್ಯರ್ಥವಾಗುವಂತಹುದಲ್ಲ. ಸಂಸತ್ತಿನ ಎಲ್ಲಾ ಸದಸ್ಯರೂ ಸಿಟ್ಟಿಗೆದ್ದಿದ್ದಾರೆ. ಇದು ಸಂಸತ್ತಿನ ಭದ್ರತೆಗೆ ಸಂಬಂಧಪಟ್ಟ ವಿಷಯ. ಸೂಕ್ತ ಕ್ರಮ ಕೈಗೊಳ್ಳಲೇಬೇಕಾಗುತ್ತದೆ. ಯಾವ ಕ್ರಮ ಕೈಗೊಳ್ಳಬೇಕು ಎಂದು ನಾನು ಪ್ರತಿಯೊಬ್ಬರ ಬಳಿಯೂ ಮಾತನಾಡುತ್ತಿದ್ದೇನೆಎಂದು ಹೇಳಿದರು. ಇದಕ್ಕೆ ಮುನ್ನ ವಿಡಿಯೋ ವಿಚಾರ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಸಂಸತ್ತಿನ ಉಭಯ ಸದನಗಳಲ್ಲೂ ಭಾರೀ ಕೋಲಾಹಲ ಉಂಟಾಗಿ ಇಡೀ ದಿನ ಕಲಾಪಗಳು ಅಸ್ತವ್ಯಸ್ತಗೊಂಡವು.

2016: ನವದೆಹಲಿ: ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಹರಿಯಾಣ ಮಾಜಿ ಮುಖ್ಯಮಂತ್ರಿ ಭೂಪೀಂದರ್ ಸಿಂಗ್ ಹೂಡಾ ವಿರುದ್ಧ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿಕೊಂಡಿತು. ಅಸೋಸಿಯೇಟೆಡ್ ಜರ್ನಲ್ ಲಿಮಿಟೆಡ್ (ಅಜಿಎಲ್) ಹಾಗೂ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗಳಿಗೆ ಅಕ್ರಮವಾಗಿ ಭೂಮಿ ಹಂಚಿಕೆ ಮಾಡಿದ ಆರೋಪದ ಅಡಿಯಲ್ಲಿ ಅಕ್ರಮ ಹಣ ವರ್ಗಾವಣೆ ಕಾಯ್ದೆ ಪ್ರಕಾರ ಭೂಪೀಂದರ್ ಸಿಂಗ್ ಸೇರಿ ಹಲವರ ಮೇಲೆ ಕೇಸು ದಾಖಲಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿತು. ಭೂಪೀಂದರ್ ಸಿಂಗ್ ಹೂಡಾ ಹರ್ಯಾಣದ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನಿಯಮಗಳನ್ನು ಗಾಳಿಗೆ ತೂರಿ ಅಸೋಸಿಯೇಟೆಡ್ ಜರ್ನಲ್ ಲಿಮಿಟೆಡ್ಗೆ ಪಂಚಕುಲಾದಲ್ಲಿ ಅಕ್ರಮವಾಗಿ ಭೂಮಿ ಹಂಚಿಕೆ ಮಾಡಿದ್ದರು ಎಂದು ಆಪಾದಿಸಲಾಗಿತ್ತು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಸಮಯದಲ್ಲಿ ಕೈಗಾರಿಕಾ ಭೂಮಿ ಹಂಚಿಕೆಯಲ್ಲಿ ನಡೆದ ಅಕ್ರಮಕ್ಕೆ ಸಂಬಂಧಿಸಿ ಈಗಾಗಲೇ ಹೂಡಾ ಮೇಲೆ ಸಿಬಿಐ ಕಣ್ಣಿಟ್ಟಿದೆ.

2016: ಗೋರಖ್ಪುರ್: ಉತ್ತರ ಪ್ರದೇಶದ ಗೋರಖ್ಪುರದಲ್ಲಿ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಏಮ್ಸ್) ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಶಿಲಾನ್ಯಾಸ ಮಾಡಿದರು. ಇದಕ್ಕೂ ಮೊದಲು ಗೋರಖ್ಪುರ ಗೋರಖ್ನಾಥ ಮಂದಿರದಲ್ಲಿ ನಿರ್ಮಿಸಿರುವ ಮಹಾಂತ ಅವೈದ್ನಾಥ್ ಪ್ರತಿಮೆಯನ್ನು ಲೋಕಾರ್ಪಣೆ ಮಾಡಿದರು. ಅಡಿಗಲ್ಲು ಸಮಾರಂಭದಲ್ಲಿ ನೆರೆದಿದ್ದ ಅಪಾರ ಜನಸ್ತೋಮಕ್ಕೆ ಭೋಜಪುರಿ ಭಾಷೆಯಲ್ಲಿ ಭಾಷಣದ ಮೊದಲ ಸಾಲುಗಳನ್ನು ಹೇಳಿದ ಮೋದಿಗೆ ಜನ ಹಷೋದ್ಘಾರ ಮಾಡಿದರು. ಮಹಾಂತ ಅವೈದ್ನಾಥ್ರನ್ನು ಸ್ಮರಿಸಿದ ಮೋದಿ ರಾಜಕೀಯಕ್ಕೆ ಧುಮುಕದೆ ಜನಸೇವೆ ಮಾಡಿದ ಅಪರೂಪದ ಸಂತ ಎಂದು ಹೊಗಳಿದರು. 1990 ರಿಂದ ಬಾಗಿಲು ಮುಚ್ಚಿದ್ದ ರಸಗೊಬ್ಬರ ಕಾರ್ಖಾನೆ ಮೋದಿಯವರಿಂದ ಪುನಾರಂಭಗೊಂಡಿದೆ ಎಂದು ಸಂಸದ ಯೋಗಿ ಆದಿತ್ಯನಾಥ ಹೇಳಿದರು. ಇಂಧನ ಸಚಿವ ಪಿಯೂಶ್ ಗೋಯಲ್ ಮಾತನಾಡಿ ಕಳೆದ ಎರಡು ವರ್ಷಗಳಲ್ಲಿ 1,364 ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ ಎಂದು ಹೇಳಿದರು. ಗೋರಖ್ಪುರ ಸಂಸದ ಯೋಗಿ ಆದಿತ್ಯನಾಥ ಭಾಗದ ಜನರ ಕಷ್ಟಗಳಿಗೆ ಸ್ಪಂದಿಸುವುದಷ್ಟೆ ಅಲ್ಲದೇ ಅಭಿವೃದ್ಧಿಗೆ ಮಣೆ ಹಾಕಿದ್ದಾರೆ. ಸರ್ಕಾರ ರೈತರಿಗಾಗಿ ಆರಂಭಿಸಿರುವ ಯೋಜನೆಗಳ ಬಗ್ಗೆ ವಿವರವಾಗಿ ತಿಳಿಸಿದರು.

2016: ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಈಗಾಗಲೇ ವಿಶ್ವದ ಹಲವು ಮುಸ್ಲಿಂ ರಾಷ್ಟ್ರಗಳಿಗೆ ಭೇಟಿ ನೀಡುವ ಮೂಲಕ ಉಭಯ ದೇಶಗಳ ಭಾಂದವ್ಯವೃದ್ಧಿ ಮಾಡಿದ್ದಾರೆ. ಇದರ ಜತೆಗೆ ದೇಶದಲ್ಲಿನ ಹಿಂದುಮುಸ್ಲಿಮರ ನಡುವಣ ಅಂತರವನ್ನು ಕಡಿಮೆ ಮಾಡಿ ಪ್ರೀತಿಯ ಬೀಜ ಬಿತ್ತುತ್ತಿದ್ದಾರೆ ಎಂದು ಇಸ್ಲಾಂ ಧಾರ್ವಿುಕ ಮುಖಂಡ ಹಾಗೂ ವಿವಾದಿತ ಪೀಸ್ ಟಿ.ವಿ ಮುಖ್ಯಸ್ಥ ಜಾಕಿರ್ ನಾಯಕ್ ಹೇಳಿದರು.  ಢಾಕಾ ಭಯೋತ್ಪಾದನಾ ಕೃತ್ಯಕ್ಕೆ ಪ್ರಚೋದನೆ ನೀಡಿದ ಆರೋಪ ಎದುರಿಸುತ್ತಿರುವ ಜಾಕಿರ್ ನಾಯಕ್ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮುಕ್ತಕಂಠದಿಂದ ಹೊಗಳಿದರು. ಕಳೆದ ಎರಡು ವರ್ಷದ ಅಧಿಕಾರವಧಿಯಲ್ಲಿ ಮೋದಿ ಅವರು ಹಲವು ಇಸ್ಲಾಂ ದೇಶಗಳಿಗೆ ಭೇಟಿ ನೀಡಿ ಅವರ ವಿಶ್ವಾಸಗಳಿಸಿದ್ದಾರೆ. ಇದರಿಂದಾಗಿ ವ್ಯಾಪಾರವ್ಯವಹಾರ ಅಧಿಕವಾಗಲಿದ್ದು, ಮುಂದಿನ ದಿನಗಳಲ್ಲಿ ಭಾರತ ಸೂಪರ್ ಪವರ್ ಆಗಿ ಹೊರಹೊಮ್ಮುವುದರಲ್ಲಿ ಅನುಮಾನವಿಲ್ಲ ಎಂದು ತಿಳಿಸಿದರು. ಜಿಹಾದ್ ಕುರಿತು ಮಾತನಾಡಿದ ಜಾಕಿರ್ ನಾಯಕ್, ಜಿಹಾದ್ ಮುಖ್ಯ ಉದ್ದೇಶ ಸಮಾಜಕ್ಕಾಗಿ ಹೋರಾಟ ನಡೆಸುವುದಾಗಿದೆ. ಇನ್ನೊಂದು ಅರ್ಥದಲ್ಲಿ ಆತ್ಮರಕ್ಷಣೆ ಕೂಡ ಹೌದು. ಆದರೆ ಭಾರತೀಯ ಮಾಧ್ಯಮಗಳು ಇದನ್ನು ಬೇರೆಯೇ ಅರ್ಥದಲ್ಲಿ ಪ್ರಚಾರಮಾಡುತ್ತಿವೆ. ಜಿಹಾದ್ ವಿಚಾರವಾಗಿ ಮುಸ್ಲಿಂ ಸಮುದಾಯದ ಹಲವರಿಗೆ ಸ್ಪಷ್ಟತೆ ಇಲ್ಲ. ಅಮಾಯಕರನ್ನು ಕೊಲ್ಲುವುದು ಅಮಾನವೀಯ ಎಂದು ಸ್ವತಃ ಖುರಾನ್ನಲ್ಲೇ ಸ್ಪಷ್ಟಪಡಿಸಲಾಗಿದೆ. ಯಾರೋ ಗುಜರಾತ್ನಲ್ಲಿ ದಾಳಿ ನಡೆಸಿ ಮುಸ್ಲಿಮರನ್ನು ಕೊಲೆಗೈದರೆಂದು, ಮುಂಬೈ ಮೇಲೆ ದಾಳಿ ಮಾಡಿ ಹಿಂದುಗಳನ್ನು ಹತ್ಯೆ ಮಾಡುವುದು ತಪ್ಪು ಎಂದು ಹೇಳಿದರು. ಬಾಂಗ್ಲಾದೇಶದಲ್ಲಿನ ರೆಸ್ಟೋರೆಂಟ್ ಮೇಲೆ ದಾಳಿ ನಡೆಸಿದ್ದ ಉಗ್ರರಿಗೆ ತನ್ನ ಭಾಷಣದ ಮೂಲಕ ಪ್ರೇರಣೆ ನೀಡಿದ್ದ ಎಂಬ ಆರೋಪವನ್ನು ಜಾಕಿರ್ ನಾಯಕ್ ಎದುರಿಸುತ್ತಿದ್ದು, ಭಾಷಣಗಳು ಪೀಸ್ ಟಿವಿಯಲ್ಲಿ ಪ್ರಸಾರವಾಗುತ್ತವೆ. ಚಾನೆಲ್ನಲ್ಲಿ ಪ್ರಸಾರವಾದ ಜಾಕಿರ್ ಭಾಷಣ ಕೇಳಿ ಉಗ್ರರು ಪ್ರಭಾವಿತರಾಗಿದ್ದರು ಎಂಬ ವಿಷಯ ಇದೀಗ ಬಹಿರಂಗವಾಗಿದೆ. ದುಬೈನಿಂದ ಪ್ರಸಾರವಾಗುತ್ತದೆ ಎಂದು ತಿಳಿದು ಬಂದಿರುವ ಟಿವಿ ಚಾನಲ್, ಭಾರತದಲ್ಲಿ ಯಾವುದೇ ಅಡೆ ತಡೆ ಇಲ್ಲದೆ ಮನೆಮನೆಗೂ ತಲುಪುತ್ತಿದೆ.

2016: ನವದೆಹಲಿ: ಪಾಕಿಸ್ತಾನದ ಜಮಾಯತ್-ಉದ್-ದವಾ ಮತ್ತು ಲಷ್ಕರ್--ತೊಯ್ಬಾ ಉಗ್ರಗಾಮಿ ಸಂಘಟನೆಗಳ ನಾಯಕ, ಮುಂಬೈ 2008 ಮೇಲಿನ ಭಯೋತ್ಪಾದಕ ದಾಳಿಯ ಸಂಚುಕೋರ ಹಫೀಜ್ ಸಯೀದ್ ಜೊತೆಗೆ ಕಾಶ್ಮೀರದಲ್ಲಿ ಇತ್ತೀಚೆಗೆ ಹತನಾದ ಹಿಜ್ಬುಲ್ ಮುಜಾಹಿದೀನ್ ಸಂಘಟನೆಯ ಭಯೋತ್ಪಾದಕ ಬುರ್ಹಾನ್ ವನಿ ಮತ್ತು ದುಖ್ತ್ರನ್--ಮಿಲ್ಲತ್ ಮುಖ್ಯಸ್ಥ್ಥೆ ಅಸಿಯಾ ಅಂದ್ರಬಿಗೆ ನಿಕಟ ಸಂಪರ್ಕವಿತ್ತು ಎಂಬುದನ್ನು ಬಹಿರಂಗ ಪಡಿಸುವ ವಿಡಿಯೋ ಬೆಳಕಿಗೆ ಬಂದಿತು. ಸ್ವತಃ ಹಫೀಜ್ ಸಯೀದ್ ಕಾಶ್ಮೀರ ಕ್ಯಾರವಾನ್ ಸಂದರ್ಭದಲ್ಲಿ ಮಾಡಿದ ಭಾಷಣದಲ್ಲಿ ವನಿ ಮತ್ತು ಅಂದ್ರಬಿ ಜೊತೆಗಿನ ಸಂಪರ್ಕಗಳನ್ನು ಬಹಿರಂಗ ಗೊಳಿಸಿದ್ದು ವಿಡಿಯೋದಲ್ಲಿ ಅನಾವರಣಗೊಂಡಿತು. ನನ್ನ ಸಹೋದರಿ ಅಸಿಯಾ ಅಂದ್ರಬಿ ನನಗೆ ಕರೆ ಮಾಡಿದ್ದಳು. ಆಕೆ 15 ನಿಮಿಷಕಾಲ ನಿರಂತರವಾಗಿ ಅತ್ತಳು. ನಾನು ಆಕೆಗೆ ಸಹೋದರಿ ಅಳಬೇಡ, ನಾವು ನಮ್ಮ ದಾರಿಯಲ್ಲಿ ಮುನ್ನಡೆದಿದ್ದೇವೆಎಂದು ಸಮಾಧಾನ ಹೇಳಿರುವುದಾಗಿ ಸ್ವತಃ ಸಯೀದ್ ಹೇಳಿದ್ದು ವಿಡಿಯೋದಲ್ಲಿ ದಾಖಲಾಗಿದೆ. ‘ಬುರ್ಹಾನ್ ವನಿ ತನ್ನ ಸಾವಿಗಿಂತ ಕೆಲ ದಿನಗಳ ಹಿಂದೆ ನನಗೆ ಕರೆ ಮಾಡಿ ತನ್ನ ಕೊನೆಯ ಆಸೆ ನನ್ನೊಂದಿಗೆ ಮಾತನಾಡುವುದು ಎಂದು ಹೇಳಿದ್ದಎಂದೂ ಸಯೀದ್ ಬಹಿರಂಗ ಪಡಿಸಿದ್ದಾನೆ. ವನಿ ಜೊತೆಗಿನ ಸಂಪರ್ಕಗಳನ್ನು ಬಹಿರಂಗ ಪಡಿಸಿದ ವಿಡಿಯೋದಲ್ಲಿಯೇ ಸಯೀದ್ ಎಸ್ಎಎಸ್ ಗೀಲಾನಿಯ ನಾಲ್ಕು ಅಂಶಗಳ ಕಾಶ್ಮೀರ ಪರಿಹಾರವನ್ನು ಒಪ್ಪಿಕೊಳ್ಳಿ. ಇಲ್ಲದೇ ಇದ್ದಲ್ಲಿ ಸಮರ ನಿಶ್ಚಿತ ಎಂಬುದಾಗಿ ಭಾರತಕ್ಕೆ ಎಚ್ಚರಿಕೆಯನ್ನೂ ನೀಡಿದ್ದಾನೆ.

2016: ಐಜ್ವಾಲ್: 38 ಪತ್ನಿಯರು ಹಾಗೂ 89 ಮಕ್ಕಳು, ಅಸಂಖ್ಯಾತ ಮೊಮ್ಮಕ್ಕಳನ್ನು ಹೊಂದುವ ಮೂಲಕ ವಿಶ್ವದಲ್ಲಿಯೇ ಅತಿದೊಡ್ಡ ಕುಟಂಬ ಎಂಬ ಗೌರವಕ್ಕೆ ಪಾತ್ರರಾಗಿರುವ ಮಿಜೋರಾಂನ ಜ್ಯೋಣ ಚಾನ 72ನೇ ಜನ್ಮದಿನೋತ್ಸವವನ್ನು ಕುಟುಂಬದ ಪ್ರೀತಿಪಾತ್ರರೊಂದಿಗೆ ಆಚರಿಸಿಕೊಂಡರು.
ಹೌದು, ಅವಿಭಕ್ತ ಕುಟುಂಬಗಳು ಮರೆಯಾಗುತ್ತಿರುವ ಇತ್ತೀಚಿನ ದಿನದಲ್ಲಿ ಒಂದೇ ಕುಟುಂಬದಲ್ಲಿ 162 ಜನ ಸದಸ್ಯರನ್ನು ಒಟ್ಟಿಗೆ ಪ್ರೀತಿಯಿಂದ ಕೊಂಡೊಯ್ಯುವ ಮೂಲಕ ಜ್ಯೋಣ ಆದರ್ಶಪ್ರಾಯರಾಗಿದ್ದಾರೆ. ಚಾನ ಪಂಥದ ಜ್ಯೋಣ ಚಾನ ಹಲವು ಧಾರ್ವಿುಕ ಹಾಗೂ ಸಾಮುದಾಯಿಕ ಗೀತೆಗಳ ಗಾಯನ ಹಾಗೂ ನೃತ್ಯ ಪ್ರದರ್ಶನದ ಮೂಲಕ ವಿಶ್ವಾದ್ಯಂತ ಚಿರಪರಿಚಿತರಾಗಿದ್ದಾರೆ. ಈಗಾಗಲೇ ಸುಮಾರು ಎರಡು ಸಾವಿರಕ್ಕೂ ಅಧಿಕ ಉತ್ಸವಗಳಲ್ಲಿ ಭಾಗವಹಿಸಿ, ತಮ್ಮ ಕಲೆಯನ್ನು ಅನಾವರಣ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಒಟ್ಟು 38 ಪತ್ನಿಯರನ್ನು ಹೊಂದಿರುವ ಜ್ಯೋಣ 1959ರಲ್ಲಿ ಹದಿನೈದನೇ ವಯಸ್ಸಿನಲ್ಲಿ ಮೊದಲ ವಿವಾಹವಾದರು. 2004ರಲ್ಲಿ 60ನೇ ವರ್ಷಕ್ಕೆ ಕಾಲಿಟ್ಟ ಸಂದರ್ಭದಲ್ಲಿ 38ನೇ ಮದುವೆಯಾದರು. 89 ಮಕ್ಕಳನ್ನು ಹೊಂದಿರುವ ಚಾನ ಹಲವು ಮೊಮ್ಮಕ್ಕಳಿಗೆ ಅಜ್ಜನ ಪ್ರೀತಿಯನ್ನು ಧಾರೆಯೆರೆಯುತ್ತಿದ್ದಾರೆ. ಇದೀಗ ನಾಲ್ಕು ಅಂತಸ್ತಿನ ಮನೆಯಲ್ಲಿ ಚಾನ ಸೇರಿದಂತೆ ಒಟ್ಟು 162 ಸದಸ್ಯರು ಜೀವನ ಸಾಗಿಸುತ್ತಿದ್ದಾರೆ.ಮಿಜೋರಾಂಗೆ ಆಗಮಿಸಿದ ಪ್ರವಾಸಿಗರು ಚಾನ ಮನೆಗೆ ಭೇಟಿ ನೀಡುವುದನ್ನು ಮರೆಯುವುದಿಲ್ಲ. ಅಷ್ಟೇ ಅಲ್ಲ ಸುಂದರ ಕುಟುಂಬದೊಂದಿಗೆ ಭೇಟಿ ನೀಡಿದ ಪ್ರತಿಯೊಬ್ಬರು ಪೋಟೋ ಕ್ಲಿಕ್ಕಿಸಿಕೊಳ್ಳದೆ ಹಿಂತಿರುಗುವುದೇ ಇಲ್ಲ.

2016: ಲಖನೌ: ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ಉತ್ತರ ಪ್ರದೇಶ ಬಿಜೆಪಿ ಉಪಾಧ್ಯಕ್ಷ ದಯಾಶಂಕರ್ ಸಿಂಗ್ ಕುಟುಂಬ ಸದಸ್ಯರು ಬಹುಜನ ಸಮಾಜವಾದಿ ಪಕ್ಷದ ಮುಖ್ಯಸ್ಥೆ ಮಾಯಾವತಿ ಹಾಗೂ ಕೆಲ ಬಿಎಸ್ಪಿ ಮುಖಂಡರ ವಿರುದ್ಧ ಎಫ್ಐಆರ್ ದಾಖಲಿಸಿದರು. ಉತ್ತರ ಪ್ರದೇಶ ಚುನಾವಣೆಗೆ ಬಿಎಸ್ಪಿ ಮುಖ್ಯಸ್ಥೆ ಲೈಂಗಿಕ ಕಾರ್ಯಕರ್ತೆಯಂತೆ ಟಿಕೆಟ್ ಹಂಚಿಕೆ ಮಾಡುತ್ತಿದ್ದಾರೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿ ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾಗಿ ಪಕ್ಷದಿಂದ 6 ವರ್ಷ ಅವಧಿಗೆ ಉಚ್ಚಾಟಿತರಾದ ದಯಾಶಂಕರ್ ವಿರುದ್ಧ ಉತ್ತರ ಪ್ರದೇಶದ ಹಜರತ್ಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು.
ಹಿಂದಿನ ದಿನ ದಯಾಶಂಕರ್ ಹೇಳಿಕೆ ಖಂಡಿಸಿ ಸಾವಿರಾರು ಬಿಎಸ್ಪಿ ಕಾರ್ಯಕರ್ತರು ಪ್ರತಿಭಟನಾ ಪ್ರದರ್ಶನ ನಡೆಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ದಯಾಶಂಕರ್ ಪತ್ನಿ ಸ್ವಾತಿ, ಪತಿಯ ಮೇಲೆ ಬಿಎಸ್ಪಿ ಕಾರ್ಯಕರ್ತರು ನಡೆಸಿದ ಪ್ರತಿಭಟನೆ ನೋಡಿ ಮಗಳು ದಿಗ್ಭ್ರಾಂತಳಾಗಿದ್ದು, ಪ್ರತಿಭಟನೆ ವೇಳೆ ದಯಾಶಂಕರ್ ಮತ್ತು 12 ಹರೆಯದ ಮಗಳ ವಿರುದ್ಧ ಅವಾಚ್ಯ ಪದ ಬಳಕೆ ಮಾಡಿರುವ ಬಿಎಸ್ಪಿ ಕಾರ್ಯಕರ್ತರು ಹಾಗೂ ಕುಮ್ಮಕ್ಕು ನೀಡಿರುವ ಮಾಯಾವತಿ ವಿರುದ್ಧ ಕೇಸ್ ದಾಖಲಿಸಿರುವುದಾಗಿ ತಿಳಿಸಿದರು.

2016: ನವದೆಹಲಿ: ದೇಶದ ಎಲ್ಲ ರಾಜ್ಯಗಳಲ್ಲಿ ಪ್ರಬಲ, ನಿಷ್ಪಕ್ಷ, ಸ್ವತಂತ್ರ ಲೋಕಾಯುಕ್ತ ಸಂಸ್ಥೆ ಸ್ಥಾಪನೆ ಕೋರಿ ಅರ್ಜಿದಾರರೊಬ್ಬರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್) ಬಗ್ಗೆ ಮೂರು ತಿಂಗಳ ಒಳಗೆ ನಿರ್ಧಾರ ತೆಗೆದುಕೊಳ್ಳುವಂತೆ ದೆಹಲಿ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಆದೇಶಿಸಿತು. ನ್ಯಾಯಮೂರ್ತಿಗಳಾದ ಜಿ. ರೋಹಿಣಿ ಮತ್ತು ಸಂಗೀತಾ ಧೀಂಗ್ರಾ ನೇತೃತ್ವದ ಪೀಠವು, ಅರ್ಜಿದಾರರೂ ವಕೀಲರೂ ಆದ ಅಶ್ವಿನಿ ಉಪಾಧ್ಯೆ ಅವರ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಕೋರಿಕೆ ಬಗ್ಗೆ ನಿರ್ಧಾರ ಕೈಗೊಳ್ಳಲು ಕೇಂದ್ರ ಕಾನೂನು ಸಚಿವಾಲಯಕ್ಕೆ 3 ತಿಂಗಳ ಕಾಲಾವಕಾಶ ನೀಡಿ ಪ್ರಕರಣವನ್ನು ಇತ್ಯರ್ಥ ಪಡಿಸಿತು. ಕಾನೂನು ಸಚಿವಾಲಯದ ನಿರ್ಧಾರದಿಂದ ಸಂತೃಪ್ತರಾಗದೇ ಇದ್ದಲ್ಲಿ ಮತ್ತೆ ನ್ಯಾಯಾಲಯವನ್ನು ಸಂಪರ್ಕಿಸುವ ಅವಕಾಶವನ್ನೂ ಕೋರ್ಟ್ ಅರ್ಜಿದಾರರಿಗೆ ನೀಡಿತು. ವಾದ ಮಂಡಿಸಿದ ಅಶ್ವಿನಿ ಉಪಾಧ್ಯೆ ಅವರು ದೇಶದ ಎಲ್ಲ ರಾಜ್ಯಗಳಲ್ಲಿ ಲೋಕಾಯುಕ್ತದ ಜೊತೆ ಯುನೈಟೆಡ್ ನೇಷನ್ಸ್ ಭ್ರಷ್ಟಾಚಾರ ವಿರುದ್ಧ ಹೋರಾಟ ಸಮಾವೇಶ ಮತ್ತು ಹೌಸ್ ರೆಸಲ್ಯೂಷನ್ ಸೆನ್ಸ್-2011 ಜಾರಿಗೊಳಿಸಬೇಕೆಂದು ಕೋರಿದರು. ಕೇಂದ್ರ ಸರ್ಕಾರಕ್ಕೆ ನ್ಯಾಯಾಲಯ ಹೊರಡಿಸಿರುವ ಆದೇಶ ಬಗ್ಗೆ ಪ್ರತಿಕ್ರಿಯಿಸಿದ ಸರ್ಕಾರದ ಸ್ಥಾಯಿ ಸಮಿತಿಯ ಜಸ್ಮಿತ್ ಸಿಂಗ್, ಸರ್ಕಾರ ಕೋರ್ಟಿನ ಆದೇಶವನ್ನು ಪರಿಗಣಿಸಿದ್ದು, ಅವರ ಅರ್ಜಿಯನ್ನು ಪರಿಶೀಲಿಸುತ್ತಿದೆ ಎಂದು ಹೇಳಿದರು. ಬಿಜೆಪಿ ವಕ್ತಾರರೂ ಆಗಿರುವ ಉಪಾಧ್ಯೆ ಜನಹಿತಕ್ಕಾಗಿ ಎಲ್ಲ ರಾಜ್ಯಗಳಲ್ಲಿ ಲೋಕಾಯುಕ್ತ ಸ್ಥಾಪನೆ ಜತೆ ಸಂಸತ್ತಿನಲ್ಲಿ ಲೋಕಪಾಲ ಮಸೂದೆ ಜಾರಿಗಾಗಿ ನ್ಯಾಯಾಲಯದಲ್ಲಿ ಹೋರಾಡಿದ ಪ್ರಮುಖರಲ್ಲಿ ಒಬ್ಬರು.

2008: ಯುಪಿಎ ಸರ್ಕಾರವು ಲೋಕಸಭೆಯಲ್ಲಿ ವಿಶ್ವಾತಮತ ಪರೀಕ್ಷೆಯಲ್ಲಿ 275 ಮತಗಳನ್ನು ಪಡೆದು ತೃಪ್ತಿಕರ ಅಂತರದಲ್ಲಿ ಗೆಲುವು ಪಡೆಯಿತು. ಇದರೊಂದಿಗೆ ಪ್ರಧಾನಿ ಮನಮೋಹನ್ ಸಿಂಗ್ `ಅಣು' ಮತ ಗೆದ್ದರು. ಸರ್ಕಾರದ ವಿರುದ್ಧ 256 ಮತಗಳು ಬಿದ್ದವು. ಇದರಿಂದಾಗಿ ಕಳೆದ ಒಂದು ತಿಂಗಳಿನಿಂದ ಉದ್ಭವಿಸಿದ್ದ ರಾಜಕೀಯ ಅನಿಶ್ಚಿತತೆ ದೂರವಾಯಿತು. ಅಮೆರಿಕ ಜತೆ ನಾಗರಿಕ ಪರಮಾಣು ಒಪ್ಪಂದಕ್ಕೆ ಸಹಿ ಹಾಕುವ ಪ್ರಧಾನಿ ಮನ ಮೋಹನ್ ಸಿಂಗ್ ಅವರ ಕನಸು ನನಸಾಗುವತ್ತ ಸಾಗಿತು.

2007: ರಾಜ್ಯ ಸಭೆಯ ಮಾಜಿ ಉಪ ಸಭಾಪತಿ ನಜ್ಮಾ ಹೆಫ್ತುಲ್ಲಾ ಅವರು ಉಪ ರಾಷ್ಟ್ರಪತಿ ಸ್ಥಾನಕ್ಕೆ ಎನ್ ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸುವರು ಎಂದು ಎನ್ ಡಿಎ ಪ್ರಕಟಿಸಿತು. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನಿವಾಸದಲ್ಲಿ ನಡೆದ ಎನ್ ಡಿಎ ಸಭೆಯ ನಂತರ ಈ ವಿಷಯ ಪ್ರಕಟಿಸಲಾಯಿತು. ನಜ್ಮಾ ಹೆಫ್ತುಲ್ಲಾ ಅವರು ಸ್ವಾತಂತ್ರ್ಯಯೋಧ ಮೌಲಾನ ಅಬುಲ್ ಕಲಾಂ ಆಜಾದ್ ಅವರ ಮೊಮ್ಮಗಳು. ಈ ಮೊದಲು ಇವರು ಕಾಂಗ್ರೆಸ್ಸಿನಲ್ಲಿದ್ದರು.

2007: ಟಿವಿಂಯಲ್ಲಿ ಕ್ರೈಸ್ತಧರ್ಮದ ಪ್ರಚಾರ ಮಾಡುತ್ತಿದ್ದ ಟಾಮಿ ಫಯೆ ಬಕ್ಕೆರ್ ಮೆಸ್ಸನೆರ್ ಅವರು ದೀರ್ಘಕಾಲದ ಅನಾರೋಗ್ಯದಿಂದ ಕಾನ್ಸಸ್ ಸಿಟಿಯಲ್ಲಿ ಮೃತರಾದರು.
ಮೆಸ್ಸನೆರ್ ಅವರು ಕ್ಯಾನ್ಸರಿನಿಂದ ಬಳಲುತ್ತಿದ್ದರು. `ಪ್ರೈಸ್ ದಿ ಲಾರ್ಡ್' ಸಂಘಟನೆಯ ಸಂಸ್ಥಾಪಕರಾದ ಅವರ ಮೊದಲ ಪತಿ ಜಿಮ್ ಬಕ್ಕರ್ ಅವರಿಂದ ಮೆಸ್ಸನೆರ್ ಅವರು ಅಮೆರಿಕದಲ್ಲಿ ಮನೆಮಾತಾಗಿದ್ದರು.

2007: ಜೆ.ಕೆ.ರಾವ್ಲಿಂಗ್ ಬರೆದಿರುವ 'ಹ್ಯಾರಿ ಪಾಟರ್ ಅಂಡ್ ಡೆತ್ಲಿ ಹ್ಯಾಲೊಸ್' ಪುಸ್ತಕದ 30 ಲಕ್ಷ ಪ್ರತಿಗಳು ಲಂಡನ್ನಿನ ನ್ಯಾಚುರಲ್ ಹಿಸ್ಟ್ರಿ ಮ್ಯೂಸಿಯಮ್ಮಿನಲ್ಲಿ 24 ಗಂಟೆಗಳಲ್ಲಿ ಮಾರಾಟವಾಗಿ ಇತಿಹಾಸ ನಿರ್ಮಾಣಗೊಂಡಿತು. ಡಬ್ಲ್ಯು ಎಚ್ ಸ್ಮಿತ್ ಮತ್ತು ವೂಲ್ವತ್ಸರ್್ ಅವರು ಬರೆದಿದ್ದ ಹಿಂದಿನ `ಹ್ಯಾರಿ ಪಾಟರ್' ಪುಸ್ತಕಕ್ಕೆ ಹೋಲಿಸಿದರೆ ಈ ಪುಸ್ತಕದ 10 ಲಕ್ಷದಷ್ಟು ಹೆಚ್ಚು ಪ್ರತಿಗಳು ಮಾರಾಟವಾದವು. ಪುಸ್ತಕವನ್ನು ಮಾರಾಟಕ್ಕೆ ಇಟ್ಟ ಎರಡು ಗಂಟೆಗಳಲ್ಲಿಯೇ 1 ಲಕ್ಷ ಪ್ರತಿ ಖರ್ಚಾಯಿತು ಎಂದು ಪ್ರಕಾಶಕ ಬ್ಲೂಮ್ಸ್ಬರಿ ಹೇಳಿದರು.

2007: ಸರ್ಕಾರದ ಶಾಂತಿ ಒಪ್ಪಂದವನ್ನು ಉಲ್ಲಂಘಿಸಿ ಪಾಕಿಸ್ತಾನದ ಮಿರಾನ್ಷಾ ಪ್ರದೇಶದಲ್ಲಿ ಹಿಂಸಾತ್ಮಕ ಚಟುವಟಿಕೆ ನಡೆಸುತ್ತಿದ್ದ 13 ಮಂದಿ ತಾಲಿಬಾನ್ ಉಗ್ರರನ್ನು ಪಾಕ್ ಸೇನೆ ಹತ್ಯೆ ಮಾಡಿತು.

2007: ಮಾಜಿ ಚಾಂಪಿಯನ್ ಗೀತ್ ಸೇಥಿ ಅವರು ಬ್ರಿಟನ್ನಿನ ಲೀಡ್ಸ್ ನಲ್ಲಿ ವಿಶ್ವ ವೃತ್ತಿಪರ ಬಿಲಿಯರ್ಡ್ಸ್ ಚಾಂಪಿಯನ್ ಷಿಪ್ ಫೈನಲ್ ಪ್ರವೇಶಿಸಲು ವಿಫಲರಾದರು. ನಾರ್ಥನ್ ಸ್ನೂಕರ್ ಸೆಂಟರಿನಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡಿನ ಮೈಕ್ ರಸ್ಸೆಲ್ ಅವರು 1835-1231ರಲ್ಲಿ ಎಂಟು ಬಾರಿಯ ವಿಶ್ವ ಚಾಂಪಿಯನ್ ಸೇಥಿ ಅವರನ್ನು ಮಣಿಸಿದರು. ಇದೇ ಚಾಂಪಿಯನ್ ಷಿಪ್ ನಲ್ಲಿ ಪೈಪೋಟಿಗೆ ಇಳಿದ ಭಾರತದ ಇತರ ಸ್ಪರ್ಧಿಗಳಾದ ಪಂಕಜ್ ಅಡ್ವಾಣಿ, ದೇವೇಂದ್ರ ಜೋಶಿ, ಅಶೋಕ್ ಶಾಂಡಿಲ್ಯಾ, ಅಲೋಕ್ ಕುಮಾರ್, ಸೌರವ್ ಕೊಠಾರಿ, ಧ್ರುವ ಸೀತಾವಾಲಾ ಅವರು ಆರಂಭದ ಹಂತದಲ್ಲಿಯೇ ಸೋತು ಹೊರ ಬಿದ್ದಿದ್ದರು.

2006: ಹಿರಿಯ ನೃತ್ಯಗುರು ಎಚ್.ಆರ್. ಕೇಶವಮೂರ್ತಿ (87) ನಿಧನರಾದರು. 1949ರಲ್ಲಿ ಇವರು ಕೇಶವ ನೃತ್ಯ ಶಾಲೆಯನ್ನು ಸ್ಥಾಪಿಸಿ ಭರತನಾಟ್ಯವನ್ನು ಅತ್ಯಂತ ಶುದ್ಧ ಶೈಲಿಯಲ್ಲಿ ಬೆಳೆಸಿದವರಲ್ಲಿ ಪ್ರಮುಖರಾಗಿದ್ದರು.

2006: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರಿಗೆ ಸೆಡ್ಡು ಹೊಡೆದು ಜಾತ್ಯತೀತ ಜನತಾದಳವನ್ನು ತೊರೆದ ಸಿದ್ದರಾಮಯ್ಯ ನವದೆಹಲಿಯಲ್ಲಿ ವಿಧಿವತ್ತಾಗಿ ಕಾಂಗ್ರೆಸ್ ಸೇರಿದರು.

2006: ರಾಷ್ಟ್ರಪತಿಯವರು ತಿರಸ್ಕರಿಸಿದ `ಲಾಭದ ಹುದ್ದೆ' ಮಸೂದೆಯನ್ನು ಯಾವ ಬದಲಾವಣೆಯನ್ನೂ ಮಾಡದೆ ಯಥಾವತ್ತಾಗಿ ಮತ್ತೆ ಸಂಸತ್ತಿನಲ್ಲಿ ಮಂಡಿಸಲು ಸರ್ಕಾರ ನಿರ್ಧರಿಸಿತು. ಮಸೂದೆಯನ್ನು ಯಥಾವತ್ತಾಗಿ ಅಂಗೀಕರಿಸಬೇಕಾದ ಅಗತ್ಯ ಬಗ್ಗೆ ಪ್ರಧಾನಿ ಮನಮೋಹನ್ ಸಿಂಗ್ ರಾಷ್ಟ್ರಪತಿಗೆ ವಿವರಿಸಿದರು. ಲಾಭದ ಹುದ್ದೆ ವಿನಾಯ್ತಿಗೆ ಬಳಸಿದ ಮಾನದಂಡ ಅಪೂರ್ಣ ಎಂದು ಹೇಳಿದ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ದೇಶವ್ಯಾಪಿ ಅನ್ವಯವಾಗುವಂತಹ ಏಕರೂಪಿ ಸೂತ್ರ ರೂಪಿಸಲು ಸಲಹೆ ಮಾಡಿದ್ದರು. ವಿನಾಯ್ತಿಗೆ ಬಳಸುವ ಮಾನದಂಡಗಳು ನಿಷ್ಪಕ್ಷಪಾತ, ಪಾರದರ್ಶಕ, ಗೊಂದಲ ರಹಿತವಾಗಿರಬೇಕು ಎಂದು ಅವರು ಸೂಚಿಸಿದ್ದರು.

2000: ಪಾಕಿಸ್ತಾನದ ನ್ಯಾಯಾಲಯವೊಂದು ನವಾಜ್ ಷರೀಫ್ ಅವರಿಗೆ 14 ವರ್ಷಗಳ ಶಿಕ್ಷೆ ಮತ್ತು 21 ವರ್ಷಗಳ ಅವಧಿಯ ರಾಜಕೀಯ ಬಹಿಷ್ಕಾರವನ್ನು ವಿಧಿಸಿತು.

1999: ಕರ್ನಾಟಕದ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ವಿಧಾನಸಭೆ ವಿಸರ್ಜಿಸುವಂತೆ ರಾಜ್ಯಪಾಲ ಖುರ್ಷಿದ್ ಆಲಂ ಖಾನ್ ಅವರಿಗೆ ಶಿಫಾರಸು ಮಾಡಿದರು.

1997: ಸೆಪ್ಟೆಂಬರ್ 15ರಿಂದ ಪ್ರಸಾರ ಭಾರತಿ ಕಾಯ್ದೆಯನ್ನು ಜಾರಿಗೊಳಿಸುವಂತೆ ಸರ್ಕಾರ ಸುತ್ತೋಲೆ ಹೊರಡಿಸಿತು.

1993: ವಿಲೆ ಪೋಸ್ಟ್ ಅವರು 7 ದಿನ 18 ಗಂಟೆ 49 ನಿಮಿಷದಲ್ಲಿ ವಿಶ್ವವನ್ನು ಸುತ್ತಿದ ಮೊದಲಿಗ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

1991: ಗಾಯಕ ಪಂಡಿತ ಬಸವರಾಜ ರಾಜಗುರು ನಿಧನ.

1981: ಭಾರತದ ಪ್ರಥಮ ಪ್ರಾಯೋಗಿಕ ಉಪಗ್ರಹ ಆ್ಯಪಲ್ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಣೆ ಪ್ರಾರಂಭಿಸಿ, ಎಲ್ಲ ನಿರೀಕ್ಷಿತ ಸಂಪರ್ಕ ಕಾರ್ಯಕ್ರಮ ಆರಂಭಿಸಿ ಸ್ಪಷ್ಟ ಚಿತ್ರಗಳನ್ನು ಪ್ರಸಾರ ಮಾಡಿತು.

1966: ಶಂಕರ ಬೈಚಬಾಳ ಜನನ.

1959: ಸಂಸದ, ಬಿಜೆಪಿ ನಾಯಕ ಅನಂತಕುಮಾರ ಜನನ.

1943: ಕುಮುದಾ ಪುರುಷೋತ್ತಮ ಜನನ.

1938: ಸಾಹಿತಿ ಕೆ.ಟಿ. ಗಟ್ಟಿ ಜನನ.

1929: ನವ್ಯ ಕಾದಂಬರಿಕಾರ, ವಿಮರ್ಶಕ, ಕಥೆಗಾರ ಶಾಂತಿನಾಥ ದೇಸಾಯಿ (22-7-1929ರಿಂದ 6-3-1998) ಅವರು ಈದಿನ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ಜನಿಸಿದರು. ಕರ್ನಾಟಕ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಹಾಗೂ ಜ್ಞಾನಪೀಠ ಪ್ರಶಸ್ತಿ ಸಲಹಾ ಸಮಿತಿಯ ಸಲಹೆಗಾರರಾಗಿದ್ದ ದೇಸಾಯಿ ಅವರಿಗೆ ಜನಪ್ರಿಯತೆ ತಂದು ಕೊಟ್ಟ ಕಥೆ ಇಂಗ್ಲೆಂಡಿಗೆ ಹಡಗಿನ ಪ್ರಯಾಣ ಕಾಲದಲ್ಲಿ ಬರೆದ `ಕ್ಷಿತಿಜ'. ಅವರ ಐವತ್ತಕ್ಕೂ ಹೆಚ್ಚು ಕಥೆಗಳು ಪ್ರಕಟವಾಗಿವೆ. ಕನ್ನಡವಲ್ಲದೆ ಇಂಗ್ಲಿಷ್ನಲ್ಲೂ ಕೃತಿಗಳನ್ನು ರಚಿಸಿದ ಅವರಿಗೆ ವರ್ಧಮಾನ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಲಭಿಸಿವೆ.

No comments:

Post a Comment