ನಾನು ಮೆಚ್ಚಿದ ವಾಟ್ಸಪ್

Monday, February 25, 2019

ರಾಷ್ಟ್ರೀಯ ಸಮರ ಸ್ಮಾರಕ ಲೋಕಾರ್ಪಣೆ ಮಾಡಿದ ಪ್ರಧಾನಿ ಮೋದಿ

ರಾಷ್ಟ್ರೀಯ ಸಮರ ಸ್ಮಾರಕ ಲೋಕಾರ್ಪಣೆ
ಮಾಡಿದ ಪ್ರಧಾನಿ ಮೋದಿ
ನವದೆಹಲಿ: ರಾಜಧಾನಿಯ ಹೃದಯಭಾಗದಲ್ಲಿರುವ ಐಕಾನಿಕ್ ಇಂಡಿಯಾ ಗೇಟ್ ಸಮುಚ್ಚಯದ ಸಮೀಪ ನಿರ್ಮಿಸಲಾಗಿರುವರಾಷ್ಟ್ರೀಯ ಸಮರ ಸ್ಮಾರಕವನ್ನು ಪ್ರಧಾನಿ ನರೇಂದ್ರ ಮೋದಿ ಅವರು 2019 ಫೆಬ್ರುವರಿ 25ರ ಸೋಮವಾರ ಲೋಕಾರ್ಪಣೆ ಮಾಡಿದರು. ಇದರೊಂದಿಗೆ ಸ್ವಾತಂತ್ರ್ಯಾ ನಂತರ ಹುತಾತ್ಮರಾದ ಯೋಧರ ಗೌರವಾರ್ಥ ಇಂತಹದ್ದೊಂದು ಸ್ಮಾರಕ ನಿರ್ಮಿಸಬೇಕೆಂಬ ಕನಸು ಸುಮಾರು ೬೦ ವರ್ಷಗಳ ಬಳಿಕ ಸಾಕಾರಗೊಂಡಿತು.

ಸುಮಾರು ೪೦ ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗಿರುವ ಸ್ಮಾರಕವುಅಮರ ಚಕ್ರ, ’ವೀರತಾ ಚಕ್ರ, ’ತ್ಯಾಗ ಚಕ್ರ ಮತ್ತುರಕ್ಷಕ ಚಕ್ರ ಎಂಬ ನಾಲ್ಕು ಕೇಂದ್ರೀಕೃತ ವಲಯಗಳನ್ನು ಹೊಂದಿದೆ. ಇವುಗಳಲ್ಲಿ ೨೫,೯೪೨ ಯೋಧರ ಹೆಸರುಗಳನ್ನು ಸುವರ್ಣಾಕ್ಷರಗಳಲ್ಲಿ ಕೆತ್ತಿ ಇರಿಸಲಾಗಿದೆ.

ಸ್ಮಾರಕವು ನಿರಂತರ ಉರಿಯುವ ಜ್ವಾಲೆ ಹಾಗೂ ಆರು ಕಂಚಿನ ಉಬ್ಬು ಕಲಾಕೃತಿಗಳನ್ನು  (ಮುರಾಲ್ಸ್) ಒಳಗೊಂಡಿದೆ. ಕಲಾಕೃತಿಗಳು ಭಾರತೀಯ ಸೇನೆ, ವಾಯುಪಡೆ ಮತ್ತು ನೌಕಾಪಡೆ ನಡೆಸಿ ಪ್ರಖ್ಯಾತ ಸಮರಗಳನ್ನು ಚಿತ್ರಿಸಿದೆ.

೧೭೬ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ರಾಷ್ಟ್ರೀಯ ಸಮರ ಸ್ಮಾರಕದಲ್ಲಿ ನಿರಂತರ ಜ್ವಾಲೆಯನ್ನು ಪ್ರಜ್ವಲಿಸುವ ಮೂಲಕ ಪ್ರಧಾನಿಯವರು ಸ್ಮಾರಕವನ್ನು ಲೋಕಾರ್ಪಣೆ ಮಾಡಿದರು.
ಪ್ರಧಾನಿಯವರು
ಸ್ಮಾರಕವನ್ನು ಉದ್ಘಾಟಿಸುತ್ತಿದ್ದಂತೆಯೇ ಭಾರತೀಯ ವಾಯಪಡೆಯ ಹೆಲಿಕಾಪ್ಟರುಗಳು ಗುಲಾಬಿ ಹೂದಳಗಳ ಮಳೆಗರೆದವು. ಇದಕ್ಕಾಗಿ ಹೆಲಿಕಾಪ್ಟರುಗಳುಕಣ್ಮರೆಯಾದ ಮಾನವ (ಮಿಸ್ಸಿಂಗ್ ಮ್ಯಾನ್) ರಚನೆಯನ್ನು ಬಾನಿನಲ್ಲಿ ರಚಿಸಿದ್ದವು.

ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸ್ಮಾರಕವು ಭಾರತೀಯರ ಪಾಲಿಗೆ ಇನ್ನೊಂದು ಯಾತ್ರಾಸ್ಥಳವಾಗಲಿದ್ದು, ಜನರಿಗೆ ಕೆಚ್ಚೆದೆಯ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸುವ ತಾಣವಾಗಲಿದೆ ಎಂದು ಹೇಳಿದರು.

No comments:

Post a Comment