Showing posts with label Naredra Modi. Show all posts
Showing posts with label Naredra Modi. Show all posts

Thursday, February 27, 2025

PARYAYA: ಮಹಾಕುಂಭ ಮುಗಿಯಿತು.....


ಪೂರ್ತಿ ವಿವರ ನೋಡಲು
 ಇಲ್ಲಿ ಕ್ಲಿಕ್‌ ಮಾಡಿ ಅಥವಾ ಕೆಳಗಿನ ಪುಟದ ಲಿಂಕ್‌ ಕ್ಲಿಕ್‌ ಮಾಡಿರಿ

PARYAYA: ಮಹಾಕುಂಭ ಮುಗಿಯಿತು.....:  ಮಹಾಕುಂಭ ಮುಗಿಯಿತು.... ಪೂರ್ತಿ ವಿವರ ನೋಡಲು ಇಲ್ಲಿ ಕ್ಲಿಕ್‌ ಮಾಡಿ ಅಥವಾ ಮೇಲಿನ ಪುಟಗಳಿಗೆ ಹೋಗಿ ʼ ಮಹಾಕುಂಭ ಮುಗಿಯಿತುʼ ಕ್ಲಿಕ್‌ ಮಾಡಿರಿ.

Monday, August 5, 2019

ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು

ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು
ಐತಿಹಾಸಿಕ ನಿರ್ಧಾರ, ಇಡೀ ದೇಶಕ್ಕೆ ಒಂದೇ ಸಂವಿಧಾನ, ಧ್ವಜ
ನವದೆಹಲಿ: ಜಮ್ಮು-ಕಾಶ್ಮೀರದಲ್ಲಿ ಕಳೆದ ಒಂದು ವಾರದ ಬೆಳವಣಿಗೆಗೆ ೨೦೧೯ ಆಗಸ್ಟ್ ೫ರ ಸೋಮವಾರ ತೆರೆ ಬಿದ್ದಿದ್ದು, ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಪಡಿಸಲು ಸರ್ಕಾರ ತೀರ್ಮಾನಿಸಿರುವುದಾಗಿ  ರಾಜ್ಯಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಿಸಿದ್ದಾರೆಇದೇ ಘೋಷಣೆಯನ್ನು ಅವರು ಬಳಿಕ ಲೋಕಸಭೆಯಲ್ಲೂ ಮಾಡಿದರು.
ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಆದೇಶಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಸಹಿ ಮಾಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ಪುನರ್ ವಿಂಗಡಣಾ ಮಸೂದೆಯನ್ನು ಶಾ ಅವರು ವಿರೋಧ ಪಕ್ಷಗಳ ತೀವ್ರ ಪ್ರತಿಭಟನೆಯ ಮಧ್ಯೆ ಸದನದಲ್ಲಿ ಮಂಡಿಸಿದರು. ಕಾಶ್ಮೀರಕ್ಕೆ ಸಂಬಂಧಿಸಿದಂತೆ  4 ನಿರ್ಣಯಗಳನ್ನು ಮಂಡಿಸಲಾಗಿದ್ದು ಈದಿನವೇ ಅಂಗೀಕಾರಗೊಳ್ಳುವ ನಿರೀಕ್ಷೆ ಇದೆ.

ಶಾ ಹೇಳಿದ್ದೇನು?
ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಪಡಿಸಲಾಗಿದೆ. ೩೭೦ನೇ ವಿಧಿಯನ್ನು ಹಾಗೂ  ೩೫ಎ ವಿಧಿಯನ್ನು ಕೂಡಾ ರದ್ದುಪಡಿಸಲಾಗಿದೆ ಎಂದು ಅಮಿತ್ ಶಾ ರಾಜ್ಯಸಭೆಯಲ್ಲಿ ಘೋಷಿಸಿದ್ದಾರೆ.

 ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿರುವ ಸಂವಿಧಾನದ  ೩೭೦ನೇ ವಿಧಿಯನ್ನು ಸಂವಿಧಾನಬದ್ಧವಾಗಿ ರದ್ದುಪಡಿಸಲು ತೀರ್ಮಾನಿಸಲಾಗಿದೆ  ಎಂದು ಅಮಿತ್ ಶಾ ರಾಜ್ಯಸಭೆಯಲ್ಲಿ ಪ್ರಕಟಿಸಿದರು..

ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ನಿವಾಸದಲ್ಲಿ ಮಹತ್ವದ ಸಭೆ ನಡೆದಿತ್ತು. ಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ವಿದೇಶಾಂಗ ಸಚಿವ ಜೈಶಂಕರ್ ಭಾಗವಹಿಸಿದ್ದರು.

 ಪರಿಣಾಮ ಏನು?
·     
  ಇಡೀ ರಾಷ್ಟ್ರಕ್ಕೆ ಒಂದೇ ಸಂವಿಧಾನ. ಒಂದೇ ಧ್ವಜ. ಜಮ್ಮು ಕಾಶ್ಮೀರ ರಾಜ್ಯಕ್ಕಿದ್ದ ವಿಶೇಷಾಧಿಕಾರ ರದ್ದು. ಇನ್ಮುಂದೆ ಸಾಮಾನ್ಯ ರಾಜ್ಯಗಳಂತೆ  ಜಮ್ಮು ಕಾಶ್ಮೀರ.  ಒಂದೇ ಬಾವುಟ ಹಾರಾಟ,  ೨ನೇ ಧ್ವಜ ಹಾರಾಟಕ್ಕೆ ಬ್ರೇಕ್ .  ಜಮ್ಮುಕಾಶ್ಮೀರ ಭೌಗೋಳಿಕವಾಗಿ ವಿಭಜನೆ.  ಜಮ್ಮು ಕಾಶ್ಮೀರ  2 ಭಾಗಗಳಾಗಿ ವಿಭಜನೆ.  ಜಮ್ಮು ಮತ್ತು  ಕಾಶ್ಮೀರ ಕೇಂದ್ರಾಡಳಿತ ಪ್ರದೇಶ. ವಿಧಾನಸಭೆ ಸಹಿತ ಕೇಂದ್ರಾಡಳಿತ ಪ್ರದೇಶ.  ಲಡಾಖ್ ಕೂಡಾ ಕೇಂದ್ರಾಡಳಿತ ಪ್ರದೇಶ.  ಶಿಕ್ಷಣ, ವಿದ್ಯಾರ್ಥಿವೇತನ, ಉದ್ಯೋಗ ಎಲ್ಲರೂ ಅರ್ಹ. ಮಹಿಳೆಯರು ಬೇರೆ ರಾಜ್ಯದವರನ್ನು ವಿವಾಹವಾಗಬಹುದು.  ಜಮ್ಮು-ಕಾಶ್ಮೀರದಲ್ಲಿ ಮುಂದಿನ ದಿನಗಳಲ್ಲಿ ಭಾರತದ ಸಂವಿಧಾನವೇ ಅನ್ವಯವಾಗಲಿದೆ.

ಸರ್ಕಾರ
ಮಹತ್ವದ ಆದೇಶ ಹೊರಡಿಸುವ ಉದ್ದೇಶದಿಂದ ಕಣಿವೆ ರಾಜ್ಯದಲ್ಲಿ ಬಿಗಿ ಭದ್ರತೆ ಒದಗಿಸಲಾಗಿತ್ತು

Monday, February 25, 2019

ರಾಷ್ಟ್ರೀಯ ಸಮರ ಸ್ಮಾರಕ ಲೋಕಾರ್ಪಣೆ ಮಾಡಿದ ಪ್ರಧಾನಿ ಮೋದಿ

ರಾಷ್ಟ್ರೀಯ ಸಮರ ಸ್ಮಾರಕ ಲೋಕಾರ್ಪಣೆ
ಮಾಡಿದ ಪ್ರಧಾನಿ ಮೋದಿ
ನವದೆಹಲಿ: ರಾಜಧಾನಿಯ ಹೃದಯಭಾಗದಲ್ಲಿರುವ ಐಕಾನಿಕ್ ಇಂಡಿಯಾ ಗೇಟ್ ಸಮುಚ್ಚಯದ ಸಮೀಪ ನಿರ್ಮಿಸಲಾಗಿರುವರಾಷ್ಟ್ರೀಯ ಸಮರ ಸ್ಮಾರಕವನ್ನು ಪ್ರಧಾನಿ ನರೇಂದ್ರ ಮೋದಿ ಅವರು 2019 ಫೆಬ್ರುವರಿ 25ರ ಸೋಮವಾರ ಲೋಕಾರ್ಪಣೆ ಮಾಡಿದರು. ಇದರೊಂದಿಗೆ ಸ್ವಾತಂತ್ರ್ಯಾ ನಂತರ ಹುತಾತ್ಮರಾದ ಯೋಧರ ಗೌರವಾರ್ಥ ಇಂತಹದ್ದೊಂದು ಸ್ಮಾರಕ ನಿರ್ಮಿಸಬೇಕೆಂಬ ಕನಸು ಸುಮಾರು ೬೦ ವರ್ಷಗಳ ಬಳಿಕ ಸಾಕಾರಗೊಂಡಿತು.

ಸುಮಾರು ೪೦ ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗಿರುವ ಸ್ಮಾರಕವುಅಮರ ಚಕ್ರ, ’ವೀರತಾ ಚಕ್ರ, ’ತ್ಯಾಗ ಚಕ್ರ ಮತ್ತುರಕ್ಷಕ ಚಕ್ರ ಎಂಬ ನಾಲ್ಕು ಕೇಂದ್ರೀಕೃತ ವಲಯಗಳನ್ನು ಹೊಂದಿದೆ. ಇವುಗಳಲ್ಲಿ ೨೫,೯೪೨ ಯೋಧರ ಹೆಸರುಗಳನ್ನು ಸುವರ್ಣಾಕ್ಷರಗಳಲ್ಲಿ ಕೆತ್ತಿ ಇರಿಸಲಾಗಿದೆ.

ಸ್ಮಾರಕವು ನಿರಂತರ ಉರಿಯುವ ಜ್ವಾಲೆ ಹಾಗೂ ಆರು ಕಂಚಿನ ಉಬ್ಬು ಕಲಾಕೃತಿಗಳನ್ನು  (ಮುರಾಲ್ಸ್) ಒಳಗೊಂಡಿದೆ. ಕಲಾಕೃತಿಗಳು ಭಾರತೀಯ ಸೇನೆ, ವಾಯುಪಡೆ ಮತ್ತು ನೌಕಾಪಡೆ ನಡೆಸಿ ಪ್ರಖ್ಯಾತ ಸಮರಗಳನ್ನು ಚಿತ್ರಿಸಿದೆ.

೧೭೬ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ರಾಷ್ಟ್ರೀಯ ಸಮರ ಸ್ಮಾರಕದಲ್ಲಿ ನಿರಂತರ ಜ್ವಾಲೆಯನ್ನು ಪ್ರಜ್ವಲಿಸುವ ಮೂಲಕ ಪ್ರಧಾನಿಯವರು ಸ್ಮಾರಕವನ್ನು ಲೋಕಾರ್ಪಣೆ ಮಾಡಿದರು.
ಪ್ರಧಾನಿಯವರು
ಸ್ಮಾರಕವನ್ನು ಉದ್ಘಾಟಿಸುತ್ತಿದ್ದಂತೆಯೇ ಭಾರತೀಯ ವಾಯಪಡೆಯ ಹೆಲಿಕಾಪ್ಟರುಗಳು ಗುಲಾಬಿ ಹೂದಳಗಳ ಮಳೆಗರೆದವು. ಇದಕ್ಕಾಗಿ ಹೆಲಿಕಾಪ್ಟರುಗಳುಕಣ್ಮರೆಯಾದ ಮಾನವ (ಮಿಸ್ಸಿಂಗ್ ಮ್ಯಾನ್) ರಚನೆಯನ್ನು ಬಾನಿನಲ್ಲಿ ರಚಿಸಿದ್ದವು.

ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸ್ಮಾರಕವು ಭಾರತೀಯರ ಪಾಲಿಗೆ ಇನ್ನೊಂದು ಯಾತ್ರಾಸ್ಥಳವಾಗಲಿದ್ದು, ಜನರಿಗೆ ಕೆಚ್ಚೆದೆಯ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸುವ ತಾಣವಾಗಲಿದೆ ಎಂದು ಹೇಳಿದರು.

Tuesday, January 15, 2019

ಶೇ.10 ಆರ್ಥಿಕ ಮೀಸಲಾತಿ ಈ ವರ್ಷವೇ ಜಾರಿ

ಶೇ.10 ಆರ್ಥಿಕ ಮೀಸಲಾತಿ ಈ ವರ್ಷವೇ ಜಾರಿ
ನವದೆಹಲಿ: ಸಾಮಾನ್ಯ ವರ್ಗದ ಬಡವರಿಗೆ ಶೇಕಡಾ 10 ಮೀಸಲಾತಿಯನ್ನು 2019 ಶೈಕ್ಷಣಿಕ ವರ್ಷದಿಂದ ಜಾರಿಗೆ ತರಲಾಗುತ್ತಿದ್ದು, ರಾಷ್ಟ್ರಾದ್ಯಂ ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ವಿಶ್ವ ವಿದ್ಯಾಲಯಗಳಲ್ಲಿ ಸೀಟುಗಳ ಸಂಖ್ಯೆಯನ್ನು ಶೇಕಡಾ 25ರಷ್ಟು ಹೆಚ್ಚಿಸಲಾಗುವುದು ಎಂದು ಮಾನವ ಸಂಪನ್ಮೂಲ ಸಚಿವಾಲಯವು 2019 ಜನವರಿ 15 ಮಂಗಳವಾರ ಪ್ರಕಟಿಸಿತು.

ಸಚಿವಾಲಯ, ವಿಶ್ವ ವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಮತ್ತು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯ (ಎಐಸಿಟಿಇ) ಅಧಿಕಾರಿಗಳ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ ಜಾವಡೇಕರ್ ತಿಳಿಸಿದರು.

‘2019-20 ಶೈಕ್ಷಣಿಕ ಸಾಲಿನಿಂದಲೇ ಆರ್ಥಿಕ ಮೀಸಲಾತಿಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಪರಿಶಿಷ್ಟ  ಜಾತಿ, ಪರಿಶಿಷ್ಟ ವರ್ಗ ಮತ್ತು ಇತರೆ ಹಿಂದುಳಿದ ವರ್ಗಗಳಿಗೆ ನೀಡಲಾಗಿರುವ ಮೀಸಲಾತಿಗೆ ಧಕ್ಕೆಯಾಗದಂತೆ ನೋಡಿಕೊಳ್ಳುವ ಸಲುವಾಗಿ ಸೀಟುಗಳ ಸಂಖ್ಯೆಯನ್ನು ಶೇಕಡಾ 25ರಷ್ಟು ಹೆಚ್ಚಿಸಲಾಗುವುದು.
ದೇಶಾದ್ಯಂತ ಸುಮಾರು 40,000 ಕಾಲೇಜುಗಳು ಮತ್ತು 900 ವಿಶ್ವವಿದ್ಯಾಲಯಗಳಲ್ಲಿ ಪೂರಕ ಮೀಸಲಾತಿ ಜಾರಿಗೆ ಬರಲಿದೆ  ಎಂದು ಸಚಿವರು ನುಡಿದರು.

ಹೆಚ್ಚಿನ ವಿವರಗಳಿಗೆ ಕೆಳಗಿನ ಚಿತ್ರ ಕ್ಲಿಕ್ ಮಾಡಿರಿ:


Thursday, January 3, 2019

ರೂ ೨,೦೦೦ ನೋಟು ಮುದ್ರಣ ಸ್ಥಗಿತ, ಕರೆನ್ಸಿ ಮಾನ್ಯತೆ ಮುಂದುವರಿಕೆ


ರೂ ,೦೦೦ ನೋಟು ಮುದ್ರಣ ಸ್ಥಗಿತ, ಕರೆನ್ಸಿ ಮಾನ್ಯತೆ ಮುಂದುವರಿಕೆ

ನವದೆಹಲಿ: ಭಾರತವು 2016ರಲ್ಲಿ ನೋಟು ಅಮಾನ್ಯೀಕರಣ ಕಾಲದಲ್ಲಿ ಚಾಲ್ತಿಗೆ ತಂದ 2000 ರೂಪಾಯಿಗಳ ನೋಟಿನ ಮುದ್ರಣವನ್ನು ಸ್ಥಗಿತಗೊಳಿಸಿದೆ ಎಂದು ಉನ್ನತ ಸರ್ಕಾರಿ ಮೂಲಗಳು ತನಗೆ ತಿಳಿಸಿರುವುದಾಗಿದಿ ಪ್ರಿಂಟ್ವರದಿ ಮಾಡಿದೆ.

2000
ರೂಪಾಯಿ ಕರೆನ್ಸಿಯ ಪ್ರಸಾರವನ್ನು ಕ್ರಮೇಣ ತಗ್ಗಿಸುವ ಸಲುವಾಗಿ ಸರ್ಕಾರ ಕ್ರಮ ಕೈಗೊಂಡಿದೆ.

2000 ರೂಪಾಯಿ ನೋಟುಗಳ ಮುದ್ರಣ ಸ್ಥಗಿತದಿಂದ ಚಾಲ್ತಿಯಲ್ಲಿರುವ ನೋಟುಗಳು ಅಮಾನ್ಯವಾಗಿವೆ ಎಂದು ಅರ್ಥವಲ್ಲ. ಅವುಗಳ ಮಾನ್ಯತೆ ಮುಂದುವರೆದಿದೆ. ಆದರೆ ಕ್ರಮೇಣವಾಗಿ ನೋಟುಗಳು ಮಾರುಕಟ್ಟೆಯಿಂದ ಕಣ್ಮರೆಯಾಗುವ ಸಾಧ್ಯತೆ ಇದೆ.

ಕಾಳಧನ ಸಂಗ್ರಹ, ಹಣ ವರ್ಗಾವಣೆಗಳಿಗೆ ದೊಡ್ಡ ಪ್ರಮಾಣದಲ್ಲಿ ಉನ್ನತ ಮೌಲ್ಯದ ನೋಟುಗಳನ್ನು ಬಳಸಲಾಗುತ್ತಿದೆ ಎಂಬ ಹಿನ್ನೆಲೆಯಲ್ಲಿ ಸರ್ಕಾರ ನಿರ್ಧಾರಕ್ಕೆ ಬಂದಿದೆ ಎಂದು ಮೂಲಗಳು ಹೇಳಿವೆ.

ನೋಟು ಮುದ್ರಣ ಸ್ಥಗಿತ ಬಗ್ಗೆ ಮಿಂಚಂಚೆ ಮೂಲಕ ಕೇಳಲಾದ ಸ್ಪಷ್ಟನೆಗೆ ಭಾರತದ ಕೇಂದ್ರೀಯ ಬ್ಯಾಂಕ್ ಹಾಗೂ ಕರೆನ್ಸಿ ವಿತರಣಾ ಸಂಸ್ಥೆಯಾಗಿರುವ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಉತ್ತರ ನೀಡಿಲ್ಲ. ಅದು ಸ್ಪಂದಿಸಿದಾಗ ವರದಿಯನ್ನು ಪರಿಷ್ಕರಿಸಲಾಗುವುದು ಎಂದುದಿ ಪ್ರಿಂಟ್ವರದಿ ತಿಳಿಸಿದೆ.

ಕಾಳಸಂತೆ, ಕಪ್ಪು ಹಣ ನಿಗ್ರಹಕ್ಕಾಗಿ ಸರ್ಕಾರವು 2016ರಲ್ಲಿ 1000 ರೂಪಾಯಿ ಮತ್ತು 500 ರೂಪಾಯಿಗಳ ನೋಟುಗಳನ್ನು ಅಮಾನ್ಯೀಕರಣಗೊಳಿಸಿತ್ತು. ಬಳಿಕ ನವೆಂಬರ್ ತಿಂಗಳಲ್ಲಿ 2000 ರೂಪಾಯಿಗಳ ಹೊಸ ನೋಟನ್ನು ಬಿಡುಗಡೆ ಮಾಡಲಾಗಿತ್ತು.

ವಿವರಗಳಿಗೆ ಕೆಳಗಿನ ಚಿತ್ರ ಕ್ಲಿಕ್ ಮಾಡಿರಿ: