Friday, December 20, 2019

ಇಂದಿನ ಇತಿಹಾಸ History Today ಡಿಸೆಂಬರ್ 20

2019: ನವದೆಹಲಿ/ ಲಕ್ನೋ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧ ಪ್ರತಿಭಟನೆಯ ಉತ್ತರ ಪ್ರದೇಶದಲ್ಲಿ 2019 ಡಿಸೆಂಬರ್ 20 ಶುಕ್ರವಾರ ಇನ್ನಷ್ಟು ನಗರಗಳಿಗೆ ವ್ಯಾಪಿಸಿದ್ದು, ರಾಜ್ಯದ ವಿವಿಧೆಡೆಗಳಲ್ಲಿ ಹಿಂಸಾಚಾರಕ್ಕೆ  ಮಂದಿ ಬಲಿಯಾಗಿದ್ದು, ಸಾವಿನ ಸಂಖ್ಯೆ ೭ಕ್ಕೆ ಏರಿದೆ ಎಂದು ವರದಿಗಳು ತಿಳಿಸಿದವು. ಉತ್ತರ ಪ್ರದೇಶದ ಬುಲಂದ ಶಹರ್, ಗೋರಖ್ ಪುರ, ಫಿರೋಜಾಬಾದ್ ಮತ್ತು ಹಾಪುರ್ ನಿಂದ ಕಿಚ್ಚಿಡುವಿಕೆ ಮತ್ತು ಕಲ್ಲೆಸೆತದ ವರದಿಗಳು ಬಂದಿದ್ದು ಪರಿಸ್ಥಿತಿ ಪ್ರಕ್ಷುಬ್ಧವಾಗಿದೆ ಎಂದು ವರದಿಗಳು ಹೇಳಿದವು.  ಉತ್ತರ ಪ್ರದೇಶದ ಫಿರೋಜಾಬಾದ್, ಕಾನ್ಪುರ, ಮೀರತ್ ಮತ್ತು ಸಂಭಲ್ ಜಿಲ್ಲೆಗಳಲ್ಲಿ ತಲಾ ಒಬ್ಬರು ಮತ್ತು  ಬಿಜ್ನೂರಿನಲ್ಲಿ ಇಬ್ಬರು 2019 ಡಿಸೆಂಬರ್ 20 ಶುಕ್ರವಾರ ಪೌರತ್ವ ಕಾಯ್ದೆ ವಿರೋಧಿ ಪ್ರತಿಭಟನಕಾರರು ಪೊಲೀಸರ ಜೊತೆಗೆ ಘರ್ಷಿಸಿದಾಗ ಸಾವನ್ನಪ್ಪಿರುವುದಾಗಿ ವರದಿಗಳು ತಿಳಿಸಿದವು. ಫಿರೋಜಾಬಾದ್ ಮತ್ತು ಭದೋಹಿ ಸೇರಿದಂತೆ ಹಿಂದೆ ಚಳವಳಿ ನಡೆಯದೇ ಇದ್ದ ಹಲವಾರು ನಗರಗಳಿಗೂ ಶುಕ್ರವಾರ ಹಿಂಸಾಚಾರ ಹರಡಿದ್ದು, ಜನರು ಕಲ್ಲೆಸೆತದಲ್ಲಿ ತೊಡಗುವುದರ ಜೊತೆಗೆ ಕೆಲವು ಪ್ರದೇಶಗಳಲ್ಲಿ ರ್ಯಾಲಿ ತಡೆದಾಗ ವಾಹನಗಳಿಗೆ ಕಲ್ಲು ತೂರಿದ ಹಾಗೂ ಬೆಂಕಿ ಹಚ್ಚಿನ ಘಟನೆಗಳು ಘಟಿಸಿವೆ ಎಂದು ವರದಿಗಳು ಹೇಳಿದವು. ಹಿಂಸಾಚಾರ ವ್ಯಾಪಿಸಿದ ಹೊಸ ಪ್ರದೇಶಗಳಲ್ಲಿ ಭದೋಹಿ, ಬಹರಾಯಿಚ್, ಫರೂಖಾಬಾದ್ ಸೇರಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಗುರುವಾರ ಗೋರಖ್ ಪುರ ಮತ್ತು ಸಂಭಾಲ್ನಲ್ಲಿ ಮಾತ್ರ ಹಿಂಸಾತ್ಮಕ ಪ್ರತಿಭಟನೆಗಳು ಕಂಡು ಬಂದಿದ್ದವು.  ಫಿರೋಜಾಬಾದಿನಲ್ಲಿ ಸಂಭವಿಸಿದ ಸಾವು ಕಳೆದ ೨೪ ಗಂಟೆಗಳಲ್ಲಿ ಸಂಭವಿಸಿದ ಎರಡನೇ ಸಾವಿನ ಘಟನೆಯಾಗಿದೆ. ಗುರುವಾರ ಪ್ರತಿಭಟನೆ ಕಾಲದಲ್ಲಿ ಪ್ರತಿಭಟನಕಾರನೊಬ್ಬ ಅಸು ನೀಗಿದ್ದ.   (ವಿವರಗಳಿಗೆ  ಇಲ್ಲಿ ಕ್ಲಿಕ್ಕಿಸಿ)

2019: ಜೈಪುರ: ೨೦೦೮ರಲ್ಲಿ ಜೈಪುರದಲ್ಲಿ ೮೦ರ ಸಾವಿಗೆ ಕಾರಣವಾಗಿದ್ದ ಸರಣಿ ಬಾಂಬ್ ಸ್ಫೋಟಗಳಲ್ಲಿ ಶಾಮೀಲಾಗಿದ್ದುದು ಸಾಬೀತಾದ ಹಿನ್ನೆಲೆಯಲ್ಲಿ ನಾಲ್ಕು ಮಂದಿಗೆ ರಾಜಸ್ಥಾನದ ರಾಜಧಾನಿಯ ನ್ಯಾಯಾಲಯವು 2019 ಡಿಸೆಂಬರ್ 20ರ ಶುಕ್ರವಾರ ಮರಣದಂಡನೆಯನ್ನು ವಿಧಿಸಿತು. ಪ್ರಕರಣದ ಆರೋಪಿಗಳ ಪೈಕಿ ಒಬ್ಬನನ್ನು ಖುಲಾಸೆ ಮಾಡಲಾಯಿತು. ೧೧ ವರ್ಷಗಳ ಹಿಂದೆ ಸಂಭವಿಸಿದ್ದ ಭೀಕರ ದಾಳಿಗಳಿಗೆ ೮೦ ಮಂದಿ ಬಲಿಯಾಗಿದ್ದುದರ ಹೊರತಾಗಿ ಇತರ ೧೭೦ ಮಂದಿ ಗಾಯಗೊಂಡಿದ್ದರು. ಮೊಹಮ್ಮದ್ ಸೈಫ್, ಸರ್ವಾರ್ ಆಜ್ಮಿ, ಸಲ್ಮಾನ್ ಮತ್ತು ಸೈಫುರ್ ರಹಮಾನ್ ಅವರು ಮರಣದಂಡನೆಗೆ ಗುರಿಯಾಗಿರುವ ಅಪರಾಧಿಗಳಾಗಿದ್ದು, ಶಾಬಾಜ್ ಹುಸೈನ್ ಹೆಸರಿನ ಐದನೇ ಆರೋಪಿಯನ್ನು ಖುಲಾಸೆ ಮಾಡಲಾಯಿತು. ಪ್ರಕರಣಕ್ಕೆ ಸಂಬಂಧಿಸಿದ ಇನ್ನೂ ಮೂವರು ಆರೋಪಿಗಳು ದೆಹಲಿಯ ತಿಹಾರ್ ಸೆರೆಮನೆಯಲ್ಲಿ ಇದ್ದಾರೆ. ಜೈಪುರ ಸ್ಫೋಟಗಳ ಸಂಪೂರ್ಣ ಸಂಚನ್ನು ಉತ್ತರಪ್ರದೇಶದ ಮೊಹಮ್ಮದ್ ಅತಿನ್ ಎಂಬಾತ ಯೋಜಿಸಿದ್ದ ಎಂದು ನಂಬಲಾಗಿದೆ. ಈತ ದೆಹಲಿಯಲ್ಲಿ ನಡೆದ ಬಾಟ್ಲ ಹೌಸ್ ಎನ್ ಕೌಂಟರಿನಲ್ಲಿ ಸಾವನ್ನಪ್ಪಿದ್ದ.  ಗಲ್ಲು ಶಿಕ್ಷೆಗೆ ಗುರಿಯಾಗಿರುವ ಎಲ್ಲ ನಾಲ್ವರೂ ಉತ್ತರ ಪ್ರದೇಶದ ನಿವಾಸಿಗಳಾಗಿದ್ದು ಅತಿನ್ ಸೂಚನೆ ಮೇರೆಗೆ ಸ್ಫೋಟ ಕಾರ್ಯಾಚರಣೆಗಳನ್ನು ನಡೆಸಿದ್ದರು. ಅವರು ಸ್ಫೋಟಕಗಳಾದ ಅಮೋನಿಯಯಂ ನೈಟ್ರೇಟ್ನ್ನು ತಂದು ಅದನ್ನು ಸಿಡಿದ ಬಾಂಬ್ ಚೂರುಗಳ ಜೊತೆ ಸೇರಿಸಿ ನಗರದ ಒಂಬತ್ತು ಕಡೆಗಳಲ್ಲಿ ನಿಲ್ಲಿಸಲಾಗಿದ್ದ ಸೈಕಲ್ಗಳಲ್ಲಿ ಇರಿಸಿದ್ದರು. ಎಲ್ಲ ಬಾಂಬ್ಗಳೂ ರಾತ್ರಿ .೨೦ರಿಂದ .೪೫ರ ನಡುವಣ ಅವಧಿಯಲ್ಲಿ ಸ್ಫೋಟಗೊಂಡಿದ್ದವು.   ಪ್ರಕರಣದ ಇನ್ನೂ ಇಬ್ಬರು ಆರೋಪಿಗಳು ದೆಹಲಿಯ ಬಾಟ್ಲಾ ಹೌಸ್ನಲ್ಲಿ ನಡೆದ ಘರ್ಷಣೆಯಲ್ಲಿ ಸತ್ತಿದ್ದಾರೆ ಎಂಬ ಪ್ರಾಸೆಕ್ಯೂಷನ್ ವಾದವನ್ನು ನ್ಯಾಯಾಲಯವು ಗುರುವಾರ ಎತ್ತಿ ಹಿಡಿದಿತ್ತು. (ವಿವರಗಳಿಗೆ  ಇಲ್ಲಿ ಕ್ಲಿಕ್ಕಿಸಿ)

2019: ಇಸ್ಲಾಮಾಬಾದ್:   ಜನರಲ್ (ನಿವೃತ್ತ) ಪರ್ವೇಜ್ ಮುಷರಫ್ಗೆ ಗಲ್ಲು ಶಿಕ್ಷೆ ವಿಧಿಸಿ, ಸಂಸತ್ತಿಗೆ  ಶವವನ್ನು ತಂದು  ಮೂರು ದಿನಗಳ ಕಾಲ ಬಹಿರಂಗವಾಗಿ ನೇತುಹಾಕಬೇಕು ಎಂದು ಪೇಷಾವರ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಖರ್ ಅಹ್ಮದ್ ಸೇಠ್ ನೇತೃತ್ವದ ತ್ರಿಸದಸ್ಯ ಪೀಠ ನೀಡಿದ ತೀರ್ಪಿನಿಂದ ಇರುಸುಮುರುಸಿಗೆ ಒಳಗಾಗಿ ಸಿಟ್ಟಿಗೆದ್ದಿರುವ ಪಾಕಿಸ್ತಾನಿ ಸರ್ಕಾರವುಮಾನಸಿಕವಾಗಿ ಅನರ್ಹನಾದ ನ್ಯಾಯಾಧೀಶನನ್ನು ಹುದ್ದೆಯಿಂದ ಪದಚ್ಯುತಿಗೊಳಿಸಲು ಇಚ್ಛಿಸಿತು. ‘ಮಾನಸಿಕ ಅನರ್ಹನ್ಯಾಯಾಧೀಶನನ್ನು ಪದಚ್ಯುತಗೊಳಿಸುವಂತೆ ಸರ್ಕಾರವು ಸುಪ್ರೀಂಕೋರ್ಟ್ ಜ್ಯುಡಿಷಿಯಲ್ ಕೌನ್ಸಿಲ್ಗೆ ಅರ್ಜಿ ಸಲ್ಲಿಸಲಿದೆ ಎಂದು ಸರ್ಕಾರೀ ಮೂಲಗಳು 2019 ಡಿಸೆಂಬರ್ 20ರ ಶುಕ್ರವಾರ ತಿಳಿಸಿದವು.  ಪೇಷಾವರ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಖರ್ ಅಹ್ಮದ್ ಸೇಠ್ ಅವರು 2019 ಡಿಸೆಂಬರ್ 19ರ ಗುರುವಾರ ಬಹಿರಂಗೊಳಿಸಿರುವ ತನ್ನ ೧೬೭ ಪುಟಗಳ ತೀರ್ಪಿನಲ್ಲಿ ವಿಶೇಷ ನ್ಯಾಯಾಲಯವುಶಿಕ್ಷಿತ ಅಪರಾಧಿಯನ್ನು ಪ್ರತಿ ಆಪಾದನೆಗೂ ಆತ ಸಾಯುವವರೆಗೆ ಕೊರಳಿಗೆ ಉರುಳು ಹಾಕಿ ನೇತಾಡಿಸಬೇಕುಎಂದು ಹೇಳಿದೆ. ‘ಶಿಕ್ಷಿತ ಅಪರಾಧಿಗೆ ಆತ ಸತ್ತದ್ದನ್ನು ಖಚಿತಪಡಿಸಿಕೊಳ್ಳುವವರೆಗೂ ಶಿಕ್ಷೆ ವಿಧಿಸಲು ಸರ್ವ ಪ್ರಯತ್ನ ಮಾಡಬೇಕು ಮತ್ತು ಆತನ ಶವವನ್ನು ಪಾಕಿಸ್ತಾನದ ಇಸ್ಲಾಮಾಬಾದಿನ ಡಿ-ಚೌಕಕ್ಕೆ ಎಳೆದು ತಂದು ಅಲ್ಲಿ ದಿನಗಳ ಕಾಲ ನೇತಾಡಿಸಬೇಕುಎಂದು ಮುಖ್ಯ ನ್ಯಾಯಮೂರ್ತಿ ಸೇಠ್ ತೀರ್ಪಿನಲ್ಲಿ ಬರೆದಿದ್ದಾರೆ. ಡಿ-ಚೌಕ ಅಥವಾ ಡೆಮಾಕ್ರಸಿ ಚೌಕವು ಹಲವಾರು ಮಹತ್ವದ ಸರ್ಕಾರಿ ಕಟ್ಟಡಗಳು ಇರುವ ಪ್ರದೇಶವಾಗಿದ್ದು, ಅಧ್ಯಕ್ಷರ ಭವನ, ಪ್ರಧಾನಿ ಕಚೇರಿ, ಸಂಸತ್ತು ಮತ್ತು ಸುಪ್ರೀಂಕೋರ್ಟ್ ಪ್ರದೇಶದಲ್ಲಿಯೇ ಇವೆ. ವಿಸ್ತೃತ ತೀರ್ಪು ಹೊರಬಿದ್ದೊಡನೆಯೇ ಪ್ರಧಾನಿ ಇಮ್ರಾನ್ ಖಾನ್ ಅವರು ತಮ್ಮ ಕಾನೂನು ತಂಡದ ಜೊತೆಗೆ ಸಮಾಲೋಚಿಸಿದರು ಮತ್ತು ಸಭೆಯ ನಿರ್ಧಾರವನ್ನು ಅವರ ಉನ್ನತ ಸಹಾಯಕ ಅಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು(ವಿವರಗಳಿಗೆ  ಇಲ್ಲಿ ಕ್ಲಿಕ್ಕಿಸಿ)

2019: ನವದೆಹಲಿ: ಉನ್ನಾವ್ ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ದೆಹಲಿಯ ತೀಸ್  ಹಜಾರಿ  ನ್ಯಾಯಾಲಯದಿಂದ ದೋಷಿ ಎಂದು ಘೋಷಿಸಲ್ಪಟ್ಟಿದ್ದ ಬಿಜೆಪಿಯ ಉಚ್ಛಾಟಿತ ಶಾಸಕ ಕುಲದೀಪ್ ಸಿಂಗ್ ಸೆಂಗರ್ ಗೆ ಜೀವಾವಧಿ ಶಿಕ್ಷೆಯಾಗಿದೆ. ಜೀವಾವಧಿ ಶಿಕ್ಷೆಯ ಜೊತೆಯಲ್ಲಿ ಸೆಂಗರ್ ಅವರಿಗೆ ನ್ಯಾಯಾಲಯವು ೨೫ ಲಕ್ಷರೂಪಾಯಿಗಳ ದಂಡವನ್ನೂ ಸಹ ವಿಧಿಸಿದೆ. ಇದಲರಲ್ಲಿ ೧೦ ಲಕ್ಷ ರೂಪಾಯಿಗಳನ್ನು ಅತ್ಯಾಚಾರ ಸಂತ್ರಸ್ತೆಗೆ ನೀಡುವಂತೆ ನ್ಯಾಯಾಲವು  2019 ಡಿಸೆಂಬರ್ 20ರ ಶುಕ್ರವಾರ ತನ್ನ ಆದೇಶದಲ್ಲಿ ತಿಳಿಸಿತು. ದೆಹಲಿಯ ಜಿಲ್ಲಾ ನ್ಯಾಯಾಲಯವು ಡಿಸೆಂಬರ್ ೧೬ರಂದು ನೀಡಿದ್ದ ತನ್ನ ತೀರ್ಪಿನಲ್ಲಿ ಸೆಂಗರ್ ಅವರನ್ನು ದೋಷಿ ಎಂದು ಘೋಷಿಸಿತ್ತು ಮತ್ತು ಅವರ ಶಿಕ್ಷೆಯ ಪ್ರಮಾಣವನ್ನು 2019 ಡಿಸೆಂಬರ್ 20ರ ಶುಕ್ರವಾರ  ಘೋಷಿಸುವುದಾಗಿ ತನ್ನ ತೀರ್ಪಿನಲ್ಲಿ ತಿಳಿಸಿತ್ತು. ೨೦೧೭ರಲ್ಲಿ ಅಪ್ರಾಪ್ತೆಯೊಬ್ಬಳನ್ನು ಅಪಹರಿಸಿ ಅತ್ಯಾಚಾರ ಮಾಡಿದ್ದ ಪ್ರಕರಣದಲ್ಲಿ ಸೆಂಗರ್ ಅವರ ಮೇಲೆ ಫೋಕ್ಸೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿತ್ತು ಮತ್ತು ಪ್ರಕರಣದ ತನಿಖೆಯನ್ನು ಸಿಬಿಐ ನಡೆಸಿತ್ತು. ತೀಸ್ ಹಜಾರಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಧರ್ಮೇಶ್ ಶರ್ಮಾ ಅವರು ಸೆಂಗರ್ ಅವರ ಶಿಕ್ಷೆಯ ಪ್ರಮಾಣವನ್ನು ಘೋಷಿಸಿದರು. ಪ್ರಕರಣವು ನ್ಯಾಯಕ್ಕಾಗಿ ವ್ಯವಸ್ಥೆಯ ವಿರುದ್ಧ ಒಬ್ಬ ವ್ಯಕ್ತಿಯ ಹೋರಾಟವಾಗಿದ್ದ ಕಾರಣ ಇಲ್ಲಿ ಅಪರಾಧಿಗೆ ಜೀವಾವಧಿ ಶಿಕ್ಷೆಯನ್ನು ನೀಡಬೇಕೆಂದು ಸಿಬಿಐ ನ್ಯಾಯಾಲಯದಲ್ಲಿ ವಾದ ಮಂಡಿಸಿತ್ತು. ಸಂತ್ರಸ್ತೆಗೆ ಪ್ರಕರಣದಲ್ಲಿ ದೀರ್ಘಕಾಲೀನ ಕಹಿ ಅನುಭವ ಆಗಿರುವುದರಿಂದ ಅಪರಾಧಿಗೆ ಗರಿಷ್ಠ ಪ್ರಮಾಣದ ಶಿಕ್ಷೆಯನ್ನು ನೀಡಬೇಕು ಎಂಬ ವಾದವನ್ನು ಸಂತ್ರಸ್ತೆಯ ಪರ ವಕೀಲರೂ ಸಹ ಅನುಮೋದಿಸಿದ್ದರು ಮಾತ್ರವಲ್ಲದೇ ಸಂತ್ರಸ್ತೆಗೆ ಸೂಕ್ತ ಪರಿಹಾರವನ್ನೂ ನೀಡಬೇಕೆಂದು ಅವರು ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದರು. ತನ್ನ ಕಕ್ಷಿದಾರರಿಗೆ ಹಿಂದೆ ಯಾವುದೆ ಕ್ರಿಮಿನಲ್ ಚಟುವಟಿಕೆಯ ಹಿನ್ನಲೆ ಇಲ್ಲದೇ ಇರುವುದರಿಂದ ಅವರಿಗೆ ೧೦ ವರ್ಷಗಳ ಜೈಲುವಾಸದ  ಕನಿಷ್ಠ ಶಿಕ್ಷೆಯನ್ನು ವಿಧಿಸಬೇಕು ಎಂದು ಸೆಂಗರ್ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಭಾರತೀಯ ದಂಡ ಸಂಹಿತೆ ಮತ್ತು ಪೋಸ್ಕೋ ಕಾಯ್ದೆಗಳ ಅಡಿಯಲ್ಲಿ ಅಪ್ರಾಪ್ತೆಯ ಮೇಲೆ ಅತ್ಯಾಚಾರ ನಡೆಸಿರುವ ಆರೋಪ ಸಾಬೀತುಗೊಂಡ ಹಿನ್ನಲೆಯಲ್ಲಿ ನ್ಯಾಯಾಲಯವು ಸೆಂಗರ್ ಅವರನ್ನು ದೋಷಿ ಎಂದು ಘೋಷಿಸಿತ್ತು. ಉತ್ತರಪ್ರದೇಶದಿಂದ ದೆಹಲಿಯ ನ್ಯಾಯಾಲಯಕ್ಕೆ ವರ್ಗಾವಣೆಗೊಂಡಿದ್ದ ಒಟ್ಟು ಐದು ಪ್ರಕರಣಗಳಲ್ಲಿ ಒಂದರಲ್ಲಿ ದೋಷಿ ಎಂದು ಘೋಷಿಸಲ್ಪಟ್ಟಿದ್ದರು. (ವಿವರಗಳಿಗೆ  ಇಲ್ಲಿ ಕ್ಲಿಕ್ಕಿಸಿ)

2019: ನವದೆಹಲಿ: ದೆಹಲಿ ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶ (ಎನ್ಸಿಆರ್) ಸೇರಿದಂತೆ ಉತ್ತರ ಭಾರತದಲ್ಲಿ 2019  ಡಿಸೆಂಬರ್ 20ರ ಶುಕ್ರವಾರ ಸಂಜೆ .೧೩ರ ವೇಳೆಗೆ ಭೂಮಿ ಕಂಪಿಸಿತು. ಭೂಕಂಪನವು ಸುಮಾರು ಒಂದು ನಿಮಿಷ ಕಾಲ ಭೂಮಿಯನ್ನು ನಡುಗಿಸಿತು. ಆಫ್ಘಾನಿಸ್ಥಾನದ ಹಿಂದುಕುಶ್ ಪ್ರದೇಶದಲ್ಲಿ, ಸಂಭವಿಸಿದ ಭೂಕಂಪನದ ತೀವ್ರತೆ  ರಿಕ್ಟರ್ ಮಾಪಕದಲ್ಲಿ .೮ರಷ್ಟು ಇತ್ತು. ಜಮ್ಮು ಮತ್ತು ಕಾಶ್ಮೀರ, ಉತ್ತರ ಪ್ರದೇಶ ಮತ್ತು ಪಂಜಾಬಿನಲ್ಲೂ ಭೂಮಿ ಕಂಪಿಸಿದ ವರದಿಗಳು ಬಂದವು. ‘. ತೀವ್ರತೆಯ ಭೂಕಂಪನದ ಅಧಿಕೇಂದ್ರವು ಹಿಂದುಕುಶ್ನಲ್ಲಿ ಇತ್ತು  ಎಂದು ಭೂಕಂಪ ಶಾಸ್ತ್ರ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರುಭೂಕಂಪನದಿಂದ ಸಂಭವಿಸಿದ ಸಾವು ನೋವು ಸಂಭವಿಸಿದ ಬಗ್ಗೆ ತತ್ ಕ್ಷಣಕ್ಕೆ ವರದಿಗಳು ಬಂದಿಲ್ಲ. ‘ರಿಕ್ಟರ್ ಮಾಪಕದಲ್ಲಿ .೩ರಷ್ಟು ತೀವ್ರತೆಯ ಭೂಕಂಪ ಶುಕ್ರವಾರ ಸಂಜೆ .೦೯ಕ್ಕೆ ಸಂಭsವಿಸಿದ್ದು, ಇದರ ಕೇಂದ್ರ ಬಿಂದು ಆಫ್ಘಾನಿಸ್ಥಾನದ ರಾಜಧಾನಿ ಕಾಬೂಲಿನಿಂದ ೨೫೦ ಕಿಮೀ ದೂರದಲ್ಲಿತ್ತುಎಂದು ಭೂಕಂಪ ಶಾಸ್ತ್ರದ ರಾಷ್ಟ್ರೀಯ ಕೇಂದ್ರವು ತಿಳಿಸಿತು.  ಗುರುಗ್ರಾಮದಲ್ಲಿ ಟ್ಯೂಬ್ ಲೈಟ್ಗಳು ನಡುಗಿದ್ದುದನ್ನು ಅಧಿಕಾರಿಗಳು ಗಮನಿಸಿದ್ದು, ೧೯೦ ಕಿಮೀ ಆಳದಲ್ಲಿ ಭೂಕಂಪನ ಸಂಭವಿಸಿದೆ ಎಂದು ಅಂದಾಜು ಮಾಡಲಾಗಿದೆ. ಪಾಕಿಸ್ತಾನ, ಉತ್ತರ ಭಾರತದ ಬಹುತೇಕ ಭಾಗದಲ್ಲಿ ಭೂಮಿ ಕಂಪಿಸಿದೆ. ದೇಶದ ಹಲವು ಭಾಗಗಳಲ್ಲಿ ಜನರು ಕಟ್ಟಡಗಳಿಂದ ಹೊರಕ್ಕೆ ಓಡಿದ ಬಗ್ಗೆ ವರದಿಗಳು ಬಂದವು. ರಷ್ಯಾದ ತಾಷ್ಕೆಂಟಿನಿಂದ ಸುಮಾರು ೧೫೦೦ ಕಿಮೀ ದೂರದಲ್ಲಿರುವ ನವದೆಹಲಿಯವರೆಗೂ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ಪ್ಯಾರಿಸ್ಸಿನ ಯುರೋಪಿಯನ್ - ಮೆಡಿಟರೇನಿಯನ್ ಸೆಷ್ಮೊಲಾಜಿಕಲ್ ಸೆಂಟರ್ ತಿಳಿಸಿತು. (ವಿವರಗಳಿಗೆ  ಇಲ್ಲಿ ಕ್ಲಿಕ್ಕಿಸಿ)

2019: ದೋಹಾ (ಕತಾರ್): ಮಾಜಿ ವಿಶ್ವ ಚಾಂಪಿಯನ್ ಮೀರಾಬಾಯಿ ಚಾನು ೬ನೇ “ಕತಾರ್
ಇಂಟರ್ನ್ಯಾಶನಲ್ ಕಪ್ ವೇಟ್ಲಿಫ್ಟಿಂಗ್ ಟೂರ್ನಿಯಲ್ಲಿ  2019 ಡಿಸೆಂಬರ್ 20ರ ಶುಕ್ರವಾರ ಚಿನ್ನದ ಪದಕ ಗೆದ್ದು ಭಾರತದ ಖಾತೆ ತೆರೆದರು. ವನಿತೆಯರ ೪೯ ಕೆಜಿ ವಿಭಾಗದಲ್ಲಿ ಅವರು ಈ ಸಾಧನೆ ಮಾಡಿದರು. ಒಟ್ಟು ೧೯೪ ಕೆಜಿ ಭಾರವನ್ನೆತ್ತಿದ ೨೫ರ ಹರೆಯದ ಮೀರಾಬಾಯಿ ಚಾನು ಬಂಗಾರಕ್ಕೆ ಕೊರಳೊಡ್ಡಿದರು. ಅವರು ಸ್ನ್ಯಾಚ್ನಲ್ಲಿ ೮೩ ಕೆಜಿ, ಕ್ಲೀನ್  ಮತ್ತು  ಜರ್ಕ್ನಲ್ಲಿ ೧೧೧ ಕೆಜಿ ಭಾರ ಎತ್ತಿದರು. ಫ್ರಾನ್ಸಿನ ಅನೈಸ್ ಮೈಕೆಲ್ ಬೆಳ್ಳಿ (೧೭೨ ಕೆಜಿ) ಮತ್ತು ಮಾನನ್ ಲೊರೆಂಜ್ ಕಂಚು ಗೆದ್ದರು (೧೬೫ ಕೆಜಿ). ಆದರೆ ಇದು ಚಾನು ಅವರ ವೈಯಕ್ತಿಕ ಶ್ರೇಷ್ಠ ಸಾಧನೆಗಿಂತ ಕಡಿಮೆ ಮಟ್ಟದ್ದಾಗಿತ್ತು. ಇದೇ ವರ್ಷ ಥಾಯ್ಲೆಂಡಿನಲ್ಲಿ  ನಡೆದ ವರ್ಲ್ಡ್ ಚಾಂಪಿಯನ್ ಶಿಪ್ ನಲ್ಲಿ  ಅವರು ೨೦೧ ಕೆಜಿ ಭಾರವೆತ್ತಿದ್ದು ಅತ್ಯುತ್ತಮ ಪ್ರದರ್ಶನವಾಗಿತ್ತು. (ವಿವರಗಳಿಗೆ  ಇಲ್ಲಿ ಕ್ಲಿಕ್ಕಿಸಿ)


2019: ಬೆಂಗಳೂರು:  ಹಿರಿಯ ಸಾಹಿತಿ ಎಲ್.ಎಸ್. ಶೇಷಗಿರಿರಾವ್ ಅವರು 2019 ಡಿಸೆಂಬರ್ 20ರ
ಶುಕ್ರವಾರ ನಿಧನರಾದರು. ಅವರಿಗೆ ೯೫ ವರ್ಷ ವಯಸ್ಸಾಗಿತ್ತು. ಕನ್ನಡ, ಇಂಗ್ಲಿಷ್ ಭಾಷೆಗಳಲ್ಲಿ ಸಮಾನ ಪ್ರಭುತ್ವ ಹೊಂದಿದ್ದ ವಾಮನರೂಪಿ ತ್ರಿವಿಕ್ರಮ ಸಾಹಿತಿ ಎಲ್.ಎಸ್.ಶೇಷಗಿರಿ ರಾವ್ ಎಲ್ಲೆಸೆಸ್ ಎಂದೇ ಖ್ಯಾತರಾಗಿದ್ದರು.  ತಂದೆ ಲಕ್ಷ್ಮೇಶ್ವರ ಸ್ವಾಮಿರಾವ್- ತಾಯಿ ಕಮಲಾಬಾಯಿ. ೧೯೨೫ರ ಫೆಬ್ರುವರಿ ೧೬ರಂದು ಜನಿಸಿದ ಎಲ್ಲೆಸೆಸ್ ಬೆಂಗಳೂರು, ಮೈಸೂರಿನಲ್ಲಿ ವಿದ್ಯಾಭ್ಯಾಸ ಮಾಡಿ, ನಾಗಪುರ ವಿ.ವಿಯ ಇಂಗ್ಲಿಷ್ ಎಂ.ಎ. ಪದವೀಧರರಾಗಿದ್ದರು. ಕಾಲೇಜು ಶಿಕ್ಷಣ ಇಲಾಖೆಗೆ ಸೇರಿ ಕೋಲಾರ, ಮಡಿಕೇರಿ, ಬೆಂಗಳೂರುಗಳಲ್ಲಿ ಕಾಲೇಜು ಅಧ್ಯಾಪಕರಾಗಿ, ಬೆಂಗಳೂರು ವಿವಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಥಮ ಅಧ್ಯಕ್ಷರಾಗಿ ಕೆಲಸ ಮಾಡಿದ ಎಲ್ಲೆಸ್ಸೆಸ್ ೧೯೪೭-೫೦ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾಗಿ, ಬಿ.ಎಂ.ಶ್ರೀ ಸ್ಮಾರಕ ಪ್ರತಿಷ್ಠಾನದ ಅಧ್ಯಕ್ಷರಾಗಿ, ಕೇಂದ್ರ ಸಾಹಿತ್ಯ ಅಕಾಡೆಮಿ ನ್ಯಾಷನಲ್ ಬುಕ್ ಟ್ರಸ್ಟ್ ಸೇರಿದಂತೆ ಹಲವು ಸಮಿತಿಗಳಲ್ಲಿ ಕಾರ್ಯನಿರ್ವಹಿಸಿದ್ದರು. ೨೦೦೭ರಲ್ಲಿ ಉಡುಪಿಯಲ್ಲಿ ನಡೆದ ೭೪ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ,  ರಾಜ್ಯೋತ್ಸವ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ, ಅನಕೃ ಪ್ರತಿಷ್ಠಾನ ಪ್ರಶಸ್ತಿ, ಕಾವ್ಯಾನಂದ ಪುರಸ್ಕಾರ, ಬಿಎಂಶ್ರೀ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದರು.  (ವಿವರಗಳಿಗೆ  ಇಲ್ಲಿ ಕ್ಲಿಕ್ಕಿಸಿ)



No comments:

Post a Comment