Tuesday, December 10, 2019

ಇಂದಿನ ಇತಿಹಾಸ History Today ಡಿಸೆಂಬರ್ 10

2019: ನವದೆಹಲಿ: ಸಾರ್ವತ್ರಿಕ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವು (ಬಿಜೆಪಿ) ಭರ್ಜರಿ ಗೆಲುವು ಸಾಧಿಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಕಟಿಸಿದ್ದ ’ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್’ ಟ್ವೀಟ್ ಭಾರತದ ’ಗೋಲ್ಡನ್ ಟ್ವೀಟ್ ಆಫ್ ೨೦೧೯’ ಎಂದು ಟ್ವಿಟರ್  2019 ಡಿಸೆಂಬರ್ 10ರ ಮಂಗಳವಾರ ಘೋಷಿಸಿತು. ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಳಿಕ ಪ್ರಧಾನಿ ಮೋದಿ, ’ಭಾರತ ಮತ್ತೆ ಗೆದ್ದಿದೆ. ಜೊತೆಯಾಗಿ ನಾವು ಬಲಿಷ್ಠ ಮತ್ತು ಐಕ್ಯ ಭಾರತ ಕಟ್ಟೋಣ’ ಎಂದು ಟ್ವೀಟಿಸಿದ್ದರು. ಆ ಟ್ವೀಟ್ ೪,೨೦,೦೦೦ ಸಾವಿರಕ್ಕೂ ಅಧಿಕ ಲೈಕ್ ಪಡೆಯುವುದರ ಜೊತೆಗೆ  ೧,೧೭,೧೦೦ಕ್ಕೂ ಹೆಚ್ಚು ಬಾರಿ ರಿ ಟ್ವೀಟ್ ಆಗಿತ್ತು.  ೨೦೧೯ರ ಮೇ ೨೩ರಂದು ಮಧ್ಯಾಹ್ನ ೨.೪೨ಕ್ಕೆ ಟ್ವೀಟ್ ಪ್ರಕಟಗೊಂಡಿತ್ತು. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ೩೦೩ ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು.  (ವಿವರಗಳಿಗೆ ಇಲ್ಲಿ  ಕ್ಲಿಕ್ಕಿಸಿ)

2019: ನವದೆಹಲಿ
:
ಲೋಕಸಭೆಯಲ್ಲಿ ಬೆಂಬಲ ನೀಡಿದ್ದ ಶಿವಸೇನೆಯಯು ಟರ್ನ್ಸುಳಿವು
ಈಶಾನ್ಯರಾಜ್ಯಗಳಲ್ಲಿ ಪ್ರತಿಭಟನೆ, ಬಂದ್ ಹಾಗೂ ೬೦೦ಕ್ಕೂ ಹೆಚ್ಚು ಬುದ್ಧಿ ಜೀವಿಗಳಿಗಳಿಂದ ಮಸೂದೆ ವಿರುದ್ಧ ಮನವಿಯ ಮಧ್ಯೆ, ರಾಜ್ಯಸಭೆಯಲ್ಲಿ 2019 ಡಿಸೆಂಬರ್ 11ರ ಬುಧವಾರ ಮಧ್ಯಾಹ್ನ ಗಂಟೆಗೆ ಪೌರತ್ವ (ತಿದ್ದುಪಡಿ) ಮಸೂದೆಯನ್ನು ಮಂಡಿಸಲು ಕೇಂದ್ರ  ಸರ್ಕಾರವು ಸಜ್ಜಾಯಿತು. ವಿರೋಧ ಪಕ್ಷಗಳ ವಿರೋಧದ ನಡುವೆ 2019 ಡಿಸೆಂಬರ್ 9ರ ಸೋಮವಾರ ಮಧ್ಯರಾತ್ರಿಯ ವೇಳೆಗೆ ಲೋಕಸಭೆ ಅನುಮೋದನೆ ನೀಡಿದ್ದ ಪೌರತ್ವ (ತಿದ್ದುಪಡಿ) ಮಸೂದೆಯನ್ನು ಬುಧವಾರ ರಾಜ್ಯಸಭೆಯಲ್ಲಿ ಮಂಡಿಸಲು ಕೇಂದ್ರ ಸರ್ಕಾರವು 2019 ಡಿಸೆಂಬರ್ 10ರ ಮಂಗಳವಾರ ನಿರ್ಧರಿಸಿದ್ದು, ಭಾರತೀಯ ಜನತಾ ಪಕ್ಷ ಮತ್ತು ಕಾಂಗ್ರೆಸ್ ಸದನದಲ್ಲಿ ಕಡ್ಡಾಯವಾಗಿ ಹಾಜರು ಇರುವಂತೆ ತಮ್ಮ ಸದಸ್ಯರಿಗೆ ವಿಪ್ ಜಾರಿ ಮಾಡಿದವು. ಉದ್ಧವ್ ಠಾಕ್ರೆ ತಿಪ್ಪರಲಾಗ: ಲೋಕಸಭೆಯಲ್ಲಿ ಮಸೂದೆಯನ್ನು ಬೆಂಬಲಿಸಿದ್ದ ಶಿವಸೇನೆ ಮುಖ್ಯಸ್ಥ, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಇದೀಗ ತಿಪ್ಪರಲಾಗ ಹೊಡೆದಿದ್ದು, ತನ್ನ ಸಲಹೆಗಳನ್ನು ಅಂಗೀಕರಿಸುವವರೆಗೆ ಮಸೂದೆಗೆ ರಾಜ್ಯಸಭೆಯಲ್ಲಿ ಬೆಂಬಲ ನೀಡುವುದಿಲ್ಲ ಎಂದು ಮಂಗಳವಾರ ಹೇಳಿದರು. (ವಿವರಗಳಿಗೆ  ಇಲ್ಲಿ ಕ್ಲಿಕ್ಕಿಸಿ)

2019: ಲಕ್ನೋ: ಬನಾರಸ್ ಹಿಂದೂ ವಿಶ್ವ ವಿದ್ಯಾಲಯದ (ಬಿಎಚ್ಯುಸಂಸ್ಕೃತ ವಿದ್ಯಾ ಧರ್ಮ 

ಶಾಖೆಗೆನೇಮಕಗೊಂಡಿದ್ದ ಮುಸ್ಲಿಮ್ ಪ್ರೊಫೆಸರ್ ಫಿರೋಜ್ ಖಾನ್ ಅವರು ವಿದ್ಯಾರ್ಥಿಗಳ ತೀವ್ರ ಪ್ರತಿಭಟನೆಯ ಬಳಿಕ 2019 ಡಿಸೆಂಬರ್ 10ರ ಮಂಗಳವಾರ ರಾಜೀನಾಮೆ ನೀಡಿದರು. ಹಿಂದೂಯೇತರ ವ್ಯಕ್ತಿ ಸದರಿ ಶಾಖೆಯಲ್ಲಿ ಸಂಸ್ಕೃತ ವಿಷಯವನ್ನು ಬೋಧಿಸುವುದನ್ನು ವಿದ್ಯಾರ್ಥಿಗಳು ತೀವ್ರವಾಗಿ ವಿರೋಧಿಸಿದ್ದರುಇದೀಗ ಫಿರೋಜ್ ಖಾನ್ ಅವರು ವಿಶ್ವ ವಿದ್ಯಾಲಯದ ಇತರ ವಿವಿಧ ವಿಭಾಗಗಳಲ್ಲಿ ಸಂಸ್ಕೃತ ಬೋಧನೆ ಮಾಡಲಿದ್ದಾರೆವಿಶ್ವ ವಿದ್ಯಾಲಯದ ಆಡಳಿತ ಮತ್ತು ಸುಮಾರು ಒಂದು ತಿಂಗಳಿನೀಂದ ಧರಣಿ ನಡೆಸುತ್ತಿದ್ದ ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮಧ್ಯೆ ನಡೆದ ಸಂಧಾನ ಮಾತುಕತೆಗಳ ಬಳಿಕ ವಿಶ್ವ ವಿದ್ಯಾಲಯವು ಪ್ರೊಫೆಸರ್ ಖಾನ್ ಅವರನ್ನು ಬೇರೆ ವಿಭಾಗಕ್ಕೆ ವರ್ಗಾಯಿಸುವ ನಿರ್ಧಾರಕ್ಕೆ ಬಂದಿತುವಿಶ್ವ ವಿದ್ಯಾಲಯದ ಸಂಸ್ಕೃತ ವಿದ್ಯಾ ಧರ್ಮ ಶಾಖೆಯು ಧರ್ಮ ಮತ್ತು ಸಾಹಿತ್ಯಕ್ಕೆ ಸಂಬಂಧಿಸಿದ ವಿಭಾಗವಾದ್ದರಿಂದ ಹಿಂದೂಯೇತರ ಪ್ರಾಧ್ಯಾಪಕರು ಇಲ್ಲಿ ಬೋಧನೆ ಮಾಡಬಾರದು ಎಂದು ಆಗ್ರಹಿಸಿ ವಿದ್ಯಾರ್ಥಿಗಳು ಚಳವಳಿಗೆ ಇಳಿದಿದ್ದರು(ವಿವರಗಳಿಗೆ  ಇಲ್ಲಿ  ಕ್ಲಿಕ್ಕಿಸಿ)
2019: ಹೆಲ್ಸಿಂಕಿ: ಫಿನ್ಲೆಂಡ್ ದೇಶದ ಪ್ರಧಾನಿಯಾಗಿ ೩೪ ವರ್ಷ ವಯಸ್ಸಿನ ಸನ್ನಾ ಮರಿನ್ 2019
ಡಿಸೆಂಬರ್ 10ರ ಮಂಗಳವಾರ ಆಯ್ಕೆಯಾದರು. ಇವರು ಜಗತ್ತಿನ ಅತಿ ಕಿರಿಯ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.  ಸಂಸತ್ತಿನ ೨೦೦ ಸದಸ್ಯರ ಪೈಕಿ ೯೯ ಸದಸ್ಯರು ಸನ್ನಾ ಮರಿನ್ ನಾಮನಿರ್ದೇಶನದ ಪರವಾಗಿ ಮತ್ತು ೭೦ ಸದಸ್ಯರು ವಿರುದ್ಧ ಮತ ಹಾಕಿದ್ದರು. ಮೂವತ್ತು ಸದಸ್ಯರು ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾಗಿರಲಿಲ್ಲ.  ’ಪ್ರತಿ ಮಗುವೂ ಬಯಸಿದ ಸಾಧನೆ, ಎತ್ತರಕೆ ಬೆಳೆಯಲು ಅನುವಾಗುವ ಸಮಾಜವನ್ನು ನಿರ್ಮಾಣ ಮಾಡಲು ಬಯಸುತ್ತೇನೆ. ಅಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಅತ್ಯಂತ ಗೌರವದಿಂದ ಬದುಕಿ, ಬಾಳುವರು.’ ಎಂದು ಮರಿನ್ ಟ್ವೀಟಿಸಿದರು.  ಫಿನ್ಲೆಂಡಿನಲ್ಲಿ ನಡೆದ ’ಪೋಸ್ಟಲ್ ಸ್ಟ್ರೈಕ್’ ನಿರ್ವಹಣೆಯಲ್ಲಿ ಸರ್ಕಾರ ಎಡವಿದೆ ಎಂದು ಮೈತ್ರಿ ಪಕ್ಷ ಸೆಂಟ್ರೆ ಪಾರ್ಟಿ ಅವಿಶ್ವಾಸ ಮಂಡಿಸಿದ ಪರಿಣಾಮ ಸೋಶಿಯಲ್ ಡೆಮೊಕ್ರಾಟ್ ಪಕ್ಷದ  ಪ್ರಧಾನಿ ಅಂಟಿ ರಿನೆ ಕೆಳದವಾರ ರಾಜೀನಾಮೆ ನೀಡಿದ್ದರು. ಸಂಸತ್ತಿನ ಅನುಮೋದನೆಯ ಬಳಿಕ ಫಿನ್ಲೆಂಡಿನ ಅಧ್ಯಕ್ಷರು ಮರಿನ್ ಅವರ ಐದು ಮೈತ್ರಿ ಪಕ್ಷಗಳ ಸಂಪುಟಕ್ಕೆ ನಾಮನಿರ್ದೇಶನ ಮಾಡಲಿದ್ದಾರೆ. ಸಂಪುಟವು ೧೨ ಮಂದಿ ಮಹಿಳಾ ಸಚಿವರು ಮತ್ತು ೭ ಮಂದಿ ಪುರುಷ ಸಚಿವರನ್ನು ಹೊಂದಲಿದೆ.  (ವಿವರಗಳಿಗೆ  ಇಲ್ಲಿ ಕ್ಲಿಕ್ಕಿಸಿ)

2019: ನವದೆಹಲಿ
:
ಭಾರತದ ಪೌರತ್ವ ತಿದ್ದುಪಡಿ ಮಸೂದೆಗೆ ಸಂಬಂಧಿಸಿದಂತೆ ಅಮೆರಿಕದ ಧಾರ್ಮಿಕಸ್ವಾತಂತ್ರ್ಯದ ಹಕ್ಕುಗಳ ಆಯೋಗ ನೀಡಿರುವ ಹೇಳಿಕೆ ಅಸಮರ್ಪಕ, ಅನಗತ್ಯ ಮತ್ತು ಅಧಿಕಾರ ವ್ಯಾಪ್ತಿ ಮೀರಿದ್ದು ವಿದೇಶಾಂಗ ವ್ಯವಹಾರಗಳ ಸಚಿವಾಲಯ 2019 ಡಿಸೆಂಬರ್ 10ರ ಮಂಗಳವಾರ ತಿರುಗೇಟು ನೀಡಿತು. ಅಮೆರಿಕದ ಆಯೋಗವು ತನಗೆ ಅಧಿಕಾರ ವ್ಯಾಪ್ತಿ ಇಲ್ಲದ ವಿಷಯಕ್ಕೆ ಸಂಬಂಧಿಸಿದಂತೆ ಪಕ್ಷಪಾತದ ಹೇಳಿಕೆ ನೀಡಿದೆ ಎಂದು ಭಾರತ ಹೇಳಿತು. ‘ಅಮೆರಿಕದ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗವು ಮಸೂದೆಗೆ ಸಂಬಂಧಿಸಿದಂತೆ ನೀಡಿರುವ ಹೇಳಿಕೆಯು ಸಮರ್ಪಕವೂ ಅಲ್ಲ ಅಪೇಕ್ಷಿತವೂ ಅಲ್ಲಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಹೇಳಿದರು. ‘ಪೌರತ್ವ ತಿದ್ದುಪಡಿ ಮಸೂದೆಯಾಗಲೀ, ಇಲ್ಲವೇ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್ಸಿ) ಪ್ರಕ್ರಿಯೆಯಾಗಲೀ ಭಾರತದ ಯಾವುದೇ ಮತ ನಂಬಿಕೆಯ ಯಾರೇ ನಾಗರಿಕನನ್ನು ಪೌರತ್ವ ವಂಚಿತನನ್ನಾಗಿ ಮಾಡುವುದಿಲ್ಲಎಂದು ಅವರು ನುಡಿದರು. ‘ಯುಎಸ್ಸಿಐಆರ್ಎಫ್ ನಿಲುವು, ಅದರ ಹಿಂದಿನ ದಾಖಲೆಗಳನ್ನು ಅಧ್ಯಯನ ಮಾಡಿದರೆ ಅಚ್ಚರಿಯದೇನೂ ಅಲ್ಲ. ಆದಾಗ್ಯೂ, ಆಯೋಗವು ವಿಷಯಕ್ಕೆ ಸಂಬಂಧಿಸಿದಂತೆ ತನ್ನ ಪೂರ್ವಾಗ್ರಹಗಳಿಗೆ ಅನುಗುಣವಾಗಿ ಪಕ್ಷಪಾತದ ವರ್ತನೆ ತೋರಿರುವುದು ವಿಷಾದನೀಯ. ವಿಷಯಕ್ಕೆ ಸಂಬಂಧಿಸಿದಂತೆ ಅದಕ್ಕೆ ಅತ್ಯಲ್ಪ ಜ್ಞಾನ ಇದೆ ಎಂಬುದು ಸ್ಪಷ್ಟವಾಗಿದೆ. ಅಲ್ಲದೆ ಅದಕ್ಕೆ ವಿಷಯದಲ್ಲಿ ಹಸ್ತಕ್ಷೇಪ ನಡೆಸಲು ಅಧಿಕಾರ ವ್ಯಾಪ್ತಿ ಕೂಡಾ ಇಲ್ಲಎಂದು ರವೀಶ್ ಕುಮಾರ್ ಹೇಳಿದರು.  ಲೋಕಸಭೆಯು 2019 ಡಿಸೆಂಬರ್ 09ರ ಸೋಮವಾರ ಮಧ್ಯರಾತ್ರಿಗೆ ಸ್ವಲ್ಪ ಮುನ್ನ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಆಫ್ಘಾನಿಸ್ಥಾನದಿಂದ ಧಾರ್ಮಿಕ ಕಿರುಕುಳದ ಹಿನ್ನೆಲೆಯಲ್ಲಿ ಭಾರತಕ್ಕೆ ಬರುವ ಮುಸ್ಲಿಮೇತರ ಅಲ್ಪಸಂಖ್ಯಾತ ನಿರಾಶ್ರಿತರಿಗೆ ಭಾರತೀಯ ಪೌರತ್ವ ನೀಡುವ ಪೌರತ್ವ (ತಿದ್ದುಪಡಿ) ಮಸೂದೆಗೆ ತನ್ನ ಅಂಗೀಕಾರವನ್ನು ನೀಡಿತ್ತು. (ವಿವರಗಳಿಗೆ  ಇಲ್ಲಿ  ಕ್ಲಿಕ್ಕಿಸಿ)




No comments:

Post a Comment