Thursday, March 29, 2018

ಇಂದಿನ ಇತಿಹಾಸ History Today ಮಾರ್ಚ್ 28

ಇಂದಿನ ಇತಿಹಾಸ History Today  ಮಾರ್ಚ್ 28
2018: ಬೆಂಗಳೂರು: ಕರ್ನಾಟಕ ರಾಜ್ಯ ಯಕ್ಷಗಾನ ಅಕಾಡೆಮಿ ಕಚೇರಿಯನ್ನು ಮಂಗಳೂರಿಗೆ ಸ್ಥಳಾಂತರಿಸಿ ರಾಜ್ಯ ಸರಕಾರ ಆದೇಶಿಸಿತು.  ಬೆಂಗಳೂರಿನಲ್ಲಿರುವ ಕರ್ನಾಟಕ ಯಕ್ಷಗಾನ ಅಕಾಡೆಮಿಯನ್ನು ಸಿಬ್ಬಂದಿ ಸಮೇತ ಮಂಗಳೂರಿಗೆ ಸ್ಥಳಾಂತರಿಸುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಅವರು ಹಿಂದೆ ಮೌಖಿಕವಾಗಿ ಆದೇಶ ಮಾಡಿದ್ದರು. ಮಾ.23 ರಂದು ಅಧಿಕೃತ ಆದೇಶ ಹೊರಬಿದ್ದಿರುವುದು ಈದಿನ ಬೆಳಕಿಗೆ ಬಂತು. ದಕ್ಷಿಣ ಕನ್ನಡ, ಕರಾವಳಿ ಪ್ರದೇಶದಲ್ಲಿ ಯಕ್ಷ ಗಾನ, ಬಯಲಾಟದ ಕಲಾವಿದರು ಹೆಚ್ಚಿದ್ದು, ಅಕಾಡೆಮಿಯನ್ನು ಅಲ್ಲಿಗೆ ವರ್ಗಾಯಿಸಿದರೆ ಸೂಕ್ತ ಎಂಬ ಮಾತುಗಳು ಹಿಂದೆ ಕೇಳಿಬಂದಿದ್ದವು. ಅದೀಗ ಕಾರ್ಯರೂಪಕ್ಕೆ ಬಂದಿದೆ.  ಒಂದು ವರ್ಷದ ಹಿಂದೆ ಯಕ್ಷಗಾನ ಮತ್ತು ಬಯಲಾಟ ಅಕಾಡೆಮಿಯಿಂದ ಬಯಲಾಟವನ್ನು ಬೇರ್ಪಡಿಸಲಾಗಿತ್ತು. ಬಯಲಾಟಕ್ಕೆ ಬಾಗಲಕೋಟದಲ್ಲಿ ಪ್ರತ್ಯೇಕ ಅಕಾಡೆಮಿಯನ್ನು ಸ್ಥಾಪಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

2018: ಲಂಡನ್‌: ಭೂಮಿಯಿಂದ 26 ಕೋಟಿ ಬೆಳಕಿನ ವರ್ಷಗಳಷ್ಟು ದೂರದಲ್ಲಿ ಕುಬ್ಜ ನಕ್ಷತ್ರವೊಂದನ್ನು ಸುತ್ತುತ್ತಿರುವ ಭೂಮಿಯ ಗಾತ್ರದ ಸುಡುವ ಲೋಹದಂತಹ ಗ್ರಹವೊಂದನ್ನು ವಿಜ್ಞಾನಿಗಳು ಪತ್ತೆಹಚ್ಚಿದರು.   ಇದಕ್ಕೆ ಕೆ2-229ಬಿ ಎಂದು ಹೆಸರಿಡಲಾಗಿದೆ. ಇದು ನಮ್ಮ ಪೃಥ್ವಿಗಿಂತ ಗಾತ್ರದಲ್ಲಿ ಶೇ 20ರಷ್ಟು ದೊಡ್ಡದಾಗಿದೆ. ಗ್ರಹದ ದ್ರವ್ಯರಾಶಿ ಭೂಮಿಗಿಂತ ಎರಡೂವರೆ ಪಟ್ಟು ಹೆಚ್ಚಾಗಿದೆ. ಅಲ್ಲದೆ ಹಗಲಿನಲ್ಲಿ ಗ್ರಹದ ತಾಪಮಾನ 2000 ಡಿಗ್ರಿ ಸೆಲ್ಶಿಯಸ್ದಾಟುತ್ತದೆ ಎಂದು ವಿಜ್ಞಾನಿಗಳು ಅಂದಾಜಿಸಿದರು.  ನಮ್ಮ ಭೂಮಿ ಮತ್ತು ಸೂರ್ಯನ ನಡುವಣ ದೂರಕ್ಕಿಂತ ನೂತನ ಗ್ರಹ ಮತ್ತು ಅದರ ಸೂರ್ಯನ ನಡುವಣ ಅಂತರ ನೂರನೇ ಒಂದು ಪಾಲಿನಷ್ಟಿದೆ. ಕನ್ಯಾ ರಾಶಿಯಲ್ಲಿರುವ ಕುಬ್ಜ ನಕ್ಷತ್ರ ಮಧ್ಯಮಗಾತ್ರದ್ದಾಗಿದೆ. ಕೆ2-229ಬಿ ಗ್ರಹವು ಪ್ರತಿ 14 ಗಂಟೆಗಳಿಗೊಮ್ಮೆ ನಕ್ಷತ್ರದ ಸುತ್ತ ಪರಿಭ್ರಮಣ ನಡೆಸುತ್ತದೆ.  ಫ್ರಾನ್ಸ್ ಎಐಎಕ್ಸ್ಮರ್ಸಿಲ್ಯುನಿವರ್ಸಿಟಿ ಹಾಗೂ ಯುಕೆಯ ಯುನಿವರ್ಸಿಟಿ ಆಫ್ವಾವ್ರಿಕ್ ಸಂಶೋಧಕರ ತಂಡ ಕೆ2 ದೂರದರ್ಶಕ ಮತ್ತು ಡೋಪ್ಲರ್ ಸ್ಪೆಕ್ಟ್ರೋಸ್ಕೋಪಿ ತಂತ್ರಜ್ಞಾನ ಬಳಸಿ ಗ್ರಹವನ್ನು ಪತ್ತೆ ಮಾಡಿದ್ದಾರೆ.
2018: ನವದೆಹಲಿ: ಪ್ರತಿಷ್ಠಿತ ಮೇಡಮ್ಟುಸ್ಸಾಡ್ಸ್ ನವದೆಹಲಿ ಶಾಖೆಯಲ್ಲಿ ಭಾರತ ಕ್ರಿಕೆಟ್ತಂಡದ ನಾಯಕ ವಿರಾಟ್ಕೊಹ್ಲಿ ಅವರ ಮೇಣದ ಮೂರ್ತಿ ಶೀಘ್ರವೇ ಅನಾವರಣಗೊಳ್ಳಲಿದೆ.  ಲಂಡನ್ನಿಂದ ಬಂದಿದ್ದ ವಿಶ್ವ ಪ್ರಸಿದ್ಧ ಕಲಾವಿದರನ್ನು ಒಳಗೊಂಡ ತಂಡ ಈದಿನ  ಕೊಹ್ಲಿ ಅವರನ್ನು ಭೇಟಿ ಮಾಡಿ ಅವರ ದೇಹದ ಎಲ್ಲಾ ಅಂಗಗಳ ಅಳತೆ ತೆಗೆದುಕೊಂಡಿತು.  ಟುಸ್ಸಾಡ್ಸ್ಕೇಂದ್ರದಲ್ಲಿ ಕ್ರಿಕೆಟ್ದಿಗ್ಗಜರಾದ ಕಪಿಲ್ದೇವ್‌, ಸಚಿನ್ತೆಂಡೂಲ್ಕರ್‌, ಅರ್ಜೆಂಟೀನಾದ ಫುಟ್ಬಾಲ್ಆಟಗಾರ ಲಯೊನೆಲ್ಮೆಸ್ಸಿ ಅವರ ಮೇಣದ ಪ್ರತಿಮೆಗಳನ್ನು ಈಗಾಗಲೇ ನಿರ್ಮಿಸಲಾಗಿದೆ.  2006ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್ಗೆ ಅಡಿ ಇಟ್ಟಿದ್ದ ಕೊಹ್ಲಿ, 2008ರಲ್ಲಿ 19 ವರ್ಷದೊಳಗಿನವರ ವಿಶ್ವಕಪ್ಗೆದ್ದ ಭಾರತ ತಂಡದ ನಾಯಕರಾಗಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿರುವ ಅವರು ಅರ್ಜುನ, ಐಸಿಸಿ ವಿಶ್ವದ ಶ್ರೇಷ್ಠ ಕ್ರಿಕೆಟಿಗ, ಬಿಸಿಸಿಐನಿಂದ ನೀಡುವ ವರ್ಷದ ಶ್ರೇಷ್ಠ ಆಟಗಾರ ಮತ್ತು ಪದ್ಮಶ್ರೀ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.  ‌‘ಪ್ರತಿಷ್ಠಿತರ ಮೇಣದ ಪ್ರತಿಮೆಗಳಿಗೆ ಹೆಸರಾಗಿರುವ ಮೇಡಮ್ಟುಸ್ಸಾಡ್ಸ್ನಲ್ಲಿ ಇನ್ನು ಮುಂದೆ ನನ್ನ ಮೂರ್ತಿಯೂ ಇರಲಿದೆ ಎಂಬುದು ಖುಷಿಯ ವಿಷಯ. ಇದು ನನಗೆ ಸಿಕ್ಕ ಅತ್ಯಂತ ದೊಡ್ಡ ಗೌರವ. ಇದಕ್ಕಾಗಿ ಟುಸ್ಸಾಡ್ಸ್ತಂಡಕ್ಕೆ ಆಭಾರಿಯಾಗಿದ್ದೇನೆಎಂದು ಕೊಹ್ಲಿ ಖುಷಿ ವ್ಯಕ್ತಪಡಿಸಿದರು.

2018: ನವದೆಹಲಿ:  ಮಹಾತ್ಮಾಗಾಂಧಿ ಅವರ ಹತ್ಯೆಯ ಮರುವಿಚಾರಣೆ ಕೋರಿ ಸಲ್ಲಿಸಲಾಗಿದ್ದ ಮನವಿಯನ್ನು ಸುಪ್ರೀಂಕೋರ್ಟ್  ಈದಿನ  ವಜಾಗೊಳಿಸಿತು.  ಮುಂಬೈ ಮೂಲದ ಅಭಿನವ ಭಾರತದ ಪಂಕಜ್ ಫಡ್ನಿಸ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿಗಳಾದ ಎಸ್.. ಬೊಬ್ಡೆ ಮತ್ತು ಎಲ್. ನಾಗೇಶ್ವರ ರಾವ್ ಅವರನ್ನು ಒಳಗೊಂಡ ಪೀಠವು ಈದಿನ ಅರ್ಜಿಯನ್ನು ವಜಾ ಮಾಡಿತು.  ಪೀಠವು ಮಾರ್ಚ್ ೬ರಂದು ಅರ್ಜಿಯ ಬಗೆಗಿನ ತೀರ್ಪನ್ನು ಕಾಯ್ದಿರಿಸಿತ್ತು. ತೀರ್ಪನ್ನು ಕಾಯ್ದಿರಿಸುವ ವೇಳೆಯಲ್ಲಿ ಪೀಠವು ತಾನು ಭಾವನೆಗಳನ್ನು ಆಧರಿಸಿ ತೀರ್ಪು ನೀಡುವುದಿಲ್ಲ, ಶಾಸನಬದ್ಧ ಅಹವಾಲುಗಳನ್ನಷ್ಟೇ ಪರಿಶೀಲಿಸುವುದಾಗಿ ಹೇಳಿತ್ತು.  ಶೈಕ್ಷಣಿಕ ಅಧ್ಯಯನವನ್ನು ಆಧರಿಸಿ ಪ್ರಕರಣದ ಮರುವಿಚಾರಣೆಗೆ ಮನವಿ ಕೋರಿತ್ತು. ಆದರೆ ವರ್ಷಗಳಷ್ಟು ಹಿಂದೆ ಘಟಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಪ್ರಕರಣದ ಮರುವಿಚಾರಣೆಗೆ ಶೈಕ್ಷಣಿಕ ಅಧ್ಯಯನ ಸೂಕ್ತ  ನೆಲೆಯಾಗುವುದಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿತು.  ಅರ್ಜಿದಾರರು ವಿವಿಧ ನ್ಯಾಯಾಲಯಗಳು ಗಲ್ಲಿಗೇರಿಸಲ್ಪಟ್ಟ ನಾಥೂರಾಮ್ ಗೋಡ್ಸೆ ಮತ್ತು ನಾರಾಯಣ ಆಪ್ಟೆ ಅವರಿಗೆ ಶಿಕ್ಷೆ ವಿಧಿಸಲು ನೆಚ್ಚಿಕೊಂಡಿದ್ದ ಮೂರು ಗುಂಡುಗಳ (ಬುಲೆಟ್) ಸಿದ್ಧಾಂತವನ್ನು ಅರ್ಜಿದಾರರು ಪ್ರಶ್ನಿಸಿದ್ದರು. ನಾಲ್ಕನೇ ಗುಂಡನ್ನು ಹಾರಿಸಲಾಗಿತ್ತೇ? ಮತ್ತು ಅದನ್ನು ಗೋಡ್ಸೆ ಹೊರತಾದ ಬೇರೆ ವ್ಯಕ್ತಿ ಹಾರಿಸಿದ್ದರೇ ಎಂಬ ಬಗ್ಗೆ ಪರಿಶೀಲಿಸಬೇಕಾದ ಅಗತ್ಯವಿದೆ ಎಂದು ಅರ್ಜಿದಾರರು ಪ್ರತಿಪಾದಿಸಿದ್ದರು.  ಅಭಿನವ ಭಾರತ್ ದತ್ತಿ ಸಂಸ್ಥೆಯ ಟ್ರಸ್ಟಿ ಆಗಿರುವ ಫಡ್ನಿಸ್ ಅವರು, ’ಕಪೂರ್ ಆಯೋಗವು ೧೯೬೯ರ ತನ್ನ ವರದಿಯಲ್ಲಿ ವಿನಾಯಕ ದಾಮೋದರ ಸಾವರ್ಕರ್  ವಿರುದ್ಧ ಮಾಡಿದ ಪ್ರತಿಕೂಲಕರ, ಬುಡರಹಿತ ಟೀಕೆಗಳನ್ನು ಹೊಡೆದುಹಾಕಬೇಕು ಮತ್ತು ಘಟನೆಯ ಹಿಂದಿನ ಸಂಚಿನ ಬಗ್ಗೆ ತನಿಖೆ ನಡೆಸಲು ಆಯೋಗವನ್ನು ರಚಿಸಬೇಕು ಎಂದೂ ಮನವಿ ಮಾಡಿದ್ದರು.  ಸಾರ್ವರ್ಕರ್ ವಿರುದ್ಧ ಮಾಡಿದ್ದ ಪ್ರತಿಕೂಲಕರ ಟೀಕೆಯಿಂದ ಮರಾಠಾ ಸಮುದಾಯವನ್ನು ದೂಷಿಸಿದಂತಾಗಿದೆ. ಆದ್ದರಿಂದ ಅದನ್ನು ಕಿತ್ತು ಹಾಕಬೇಕು ಎಂದು ಫಡ್ನಿಸ್ ಹೇಳಿದ್ದರು. ೧೯೪೯ರ ನವೆಂಬರ್ ೧೫ರಂದು ಗೋಡ್ಸೆ ಮತ್ತು ಆಪ್ಟೆ ಅವರನ್ನು ಗಲ್ಲಿಗೇರಿಸಲು ಕಾರಣವಾದ ಪ್ರಕರಣದ ಮರುವಿಚಾರಣೆ ನಡೆಯಬೇಕು ಎಂದು ಅವರು ಕೋರಿದ್ದರು.  ಏನಿದ್ದರೂ ಮರಾಠಾ ಸಮುದಾಯವನ್ನು ದೂಷಿಸಿದಂತಾಗಿದೆ ಎಂಬ ಅವರ ಭಾವನೆಗಳನ್ನು ತಾನು ಹಂಚಿಕೊಳ್ಳಲಾಗದು ಎಂದು ಹೇಳಿದ ನ್ಯಾಯಾಲಯ, ’ಇದೆಲ್ಲದರ ಹೊರತಾಗಿಯೂ ಮರಾಠಾ ಜನರು ಚೆನ್ನಾಗಿಯೇ ಇದ್ದಾರೆ. ಕಾಕತಾಳೀಯವಾಗಿ ಮಹಾರಾಷ್ಟ್ರದವರಾದ ಇಬ್ಬರು ವ್ಯಕ್ತಿಗಳ ಬಗ್ಗೆ ನೀವು ಮಾತನಾಡುತ್ತಿದ್ದೀರಿ. ಅವರು ರಾಜ್ಯವನ್ನು ಪ್ರತಿನಿಧಿಸುವುದಿಲ್ಲ. ಇಬ್ಬರು ವ್ಯಕ್ತಿಗಳ ಬಗ್ಗೆ ಮಾಡಿದ ವಿಶ್ಲೇಷಣೆಯು ಇಡೀ ಮರಾಠಿ ಸಮುದಾಯದ ದೂಷಣೆ ಆಗುವುದಿಲ್ಲ ಎಂದು ಪೀಠ ಹೇಳಿತು.  ಕೊಲೆ ಪ್ರಕರಣದ ವಿಚಾರಣೆಯು ಸುಪ್ರೀಂಕೋರ್ಟಿನಿಂದ ಅಂತಿಮತ್ವವನ್ನು ಪಡೆಯುವುದಕ್ಕೆ ಮುಂಚಿತವಾಗಿಯೇ ಸಂಚು ಆರೋಪಿತರನ್ನು ಗಲ್ಲಿಗೇರಿಸಲಾಯಿತು ಎಂದು ಫಡ್ನಿಸ್ ಅವರು ತಮ್ಮ ಅಫಿದವಿಟ್ ನಲ್ಲಿ  ಪ್ರತಿಪಾದಿಸಿದ್ದರು.  ಗಾಂಧಿ ಅವರನ್ನು ೧೯೪೮ರ ಜನವರಿ ೩೦ರಂದು ಹಿಂದೂ ರಾಷ್ಟ್ರೀಯತೆಯನ್ನು ಪ್ರತಿಪಾದಿಸುತ್ತಿದ್ದ ನಾಥೂರಾಮ್ ಗೋಡ್ಸೆ ಅವರು ನವದೆಹಲಿಯಲ್ಲಿ ಪಾಯಿಂಟ್ ಬ್ಲಾಂಕ್ ರೇಂಜ್ನಲ್ಲಿ ಗುಂಡು ಹೊಡೆದು ಕೊಂದಿದ್ದರು. ಹತ್ಯೆ ಪ್ರಕರಣದ ವಿಚಾರಣೆ ಬಳಿಕ ೧೯೪೯ರ ನವೆಂಬರ್ ೧೫ರಂದು ಗೋಡ್ಸೆ ಮತ್ತು ಆಪ್ಟೆ ಅವರನ್ನು ತಪ್ಪಿತಸ್ಥರೆಂದು ಘೋಷಿಸಿ ಗಲ್ಲಿಗೇರಿಸಲಾಗಿತ್ತು. ಸಾವರ್ಕರ್ ಅವರಿಗೆ ಸಾಕ್ಷ್ಯಾಧಾರದ ಕೊರತೆಯ ಕಾರಣ ಅನುಮಾನದ ಲಾಭವನ್ನು ನೀಡಲಾಗಿತ್ತು.  ಫಡ್ನಿಸ್ ಅವರು ತೀರ್ಪನ್ನು ಬಾಂಬೆ ಹೈಕೋರ್ಟಿನಲ್ಲಿ ಪ್ರಶ್ನಿಸಿದ್ದರು. ಬಾಂಬೆ ಹೈಕೋರ್ಟ್ ಅದನ್ನು ೨೦೧೬ರ ಜೂನ್ ೬ರಂದು ತಿರಸ್ಕರಿಸಿತ್ತು. ಕಪೂರ್ ಆಯೋಗವು ೧೯೬೯ರಲ್ಲಿ ತನ್ನ ವರದಿಯನ್ನು ಸಲ್ಲಿಸಿ ಉಲ್ಲೇಖಿತ ಟೀಕೆಗಳನ್ನು ಮಾಡಿದೆ. ಆದರೆ ಅರ್ಜಿಯನ್ನು ೪೬ವರ್ಷಗಳ ಬಳಿಕ ಸಲ್ಲಿಸಲಾಗಿದೆ ಎಂದು ಹೈಕೋರ್ಟ್ ಹೇಳಿತ್ತು.

2018: ನವದೆಹಲಿ: ಪ್ರಶ್ನೆ ಪತ್ರಿಕೆಗಳು ಸೋರಿಕೆಯಾದ ವರದಿಗಳ ಹಿನ್ನೆಲೆಯಲ್ಲಿ ಕೇಂದ್ರೀಯ ಮಾಧ್ಯಮಿಕ ಪರೀಕ್ಷಾ ಮಂಡಳಿಯು (ಸಿಬಿಎಸ್ ) ೧೨ನೇ ತರಗತಿಯ ಅರ್ಥಶಾಸ್ತ್ರ (ಇಕನಾಮಿಕ್ಸ್) ಮತ್ತು ೧೦ನೇ ತರಗತಿಯ ಗಣಿತ (ಮ್ಯಾಥ್ಸ್) ವಿಷಯಗಳಲ್ಲಿ ಮರು ಪರೀಕ್ಷೆ ನಡೆಸುವುದಾಗಿ ಪ್ರಕಟಿಸಿತು.  ಗಣಿತ ಪ್ರಶ್ನೆ ಪತ್ರಿಕೆಯು ಕಳೆದ ರಾತ್ರಿ ಸೋರಿಕೆಯಾಗಿದ್ದು, ಸೋರಿಕೆಯಾಗಿರುವ ಪ್ರಶ್ನೆ ಪತ್ರಿಕೆ ಮೂಲ ಪ್ರಶ್ನೆಪತ್ರಿಕೆಯೊಂದಿಗೆ ತಾಳೆಯಾಯಿತು. . ೧೨ನೇ ತರಗತಿಯ ಅರ್ಥಶಾಸ್ತ್ರ ಪರೀಕ್ಷೆ ಮಂಗಳವಾರ ನಡೆದಿದ್ದರೆ, ೧೦ನೇ ತರಗತಿಯ ಗಣಿತ ಪರೀಕ್ಷೆಯ ಬುಧವಾರ ನಡೆಯಿತು.   ಕೆಲವು ಪರೀಕ್ಷೆಗಳನ್ನು ನಡೆಸುವ ಸಂದರ್ಭಗಳಲ್ಲಿ ಘಟಿಸುತ್ತಿರುವ ವಿದ್ಯಮಾನಗಳನ್ನು ಮಂಡಳಿಯು ಗಮನಕ್ಕೆ ತೆಗೆದುಕೊಂಡಿದೆ. ಮಂಡಳಿ ಪರೀಕ್ಷೆಗಳ ಪಾವಿತ್ರ್ಯವನ್ನು ಎತ್ತಿ ಹಿಡಿಯುವುದಕ್ಕಾಗಿ ಮತ್ತು ವಿದ್ಯಾರ್ಥಿಗಳ ಹಿತಾಸಕ್ತಿ ಕಾಪಾಡುವ ಸಲುವಾಗಿ ಮಂಡಳಿಯು ಕೆಳಕಂಡ ವಿಷಯಗಳಲ್ಲಿ ಮರುಪರೀಕ್ಷೆ ನಡೆಸಲು ನಿರ್ಧರಿಸಿದೆ. ಮರು ಪರೀಕ್ಷೆ ದಿನಾಂಕ ಮತ್ತಿತರ ವಿವರಗಳನ್ನು ಸಿಬಿಎಸ್ ವೆಬ್ ಸೈಟಿನಲ್ಲಿ ವಾರದೊಳಗೆ ಪ್ರಕಟಿಸಲಾಗುವುದು ಎಂದು ಪರೀಕ್ಷಾ ನಿಯಂತ್ರಕರ ಸಹಿ ಸಹಿತವಾದ ಹೇಳಿಕೆಯಲ್ಲಿ ಮಂಡಳಿ ತಿಳಿಸಿತು.  ಇದಕ್ಕೆ ಮುನ್ನ ಅಕೌಂಟೆನ್ಸಿ ಪ್ರಶ್ನೆ ಪತ್ರಿಕೆ ಸೋರಿಕೆಯ ವರದಿಗಳನ್ನು ಸಿಬಿಎಸ್ ನಿರಾಕರಿಸಿತ್ತು. ’ಎಲ್ಲ ಕೇಂದ್ರಗಳಲ್ಲೂ ಎಲ್ಲ ಮೊಹರುಗಳೂ ಯಥಾಸ್ಥಿತಿಯಲ್ಲಿರುವುದು ಕಂಡು ಬಂದಿದೆ. ಪರೀಕ್ಷೆ ಪ್ರಕ್ರಿಯೆ ನಡೆಯುತ್ತಿರುವಾಗ ಕೆಲವು ದುಷ್ಕರ್ಮಿಗಳು ಸ್ಥಳೀಯ ಮಟ್ಟದಲ್ಲಿ ವಾಟ್ಸ್ ಅಪ್ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ತಪ್ಪು ಸಂದೇಶಗಳನು ಹರಿಯಬಿಟ್ಟು ಕಿಡಿಗೇಡಿತನ ಪ್ರದರ್ಶಿಸಿದ್ದಾರೆ ಎಂದು ಮಂಡಳಿ ಹಿಂದಿನ ತನ್ನ ಹೇಳಿಕೆಯಲ್ಲಿ ತಿಳಿಸಿತ್ತು.  ಪರೀಕ್ಷೆ ಶುರುವಾಗುವುದಕ್ಕೆ ಕೆಲವೇ ನಿಮಿಷಗಳ ಮುನ್ನಸೋರಿಕೆಯಾದ ಪ್ರಶ್ನೆ ಪತ್ರಿಕೆ ದೆಹಲಿಯ ಶಿಕ್ಷಣ ಸಚಿವ ಮನಿಶ್ ಸಿಸೋಡಿಯಾ ಅವರಿಗೆ ತಲುಪುವುದರೊಂದಿಗೆ ಇಕನಾಮಿಕ್ಸ್ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರ ಬೆಳಕಿಗೆ ಬಂದಿತ್ತು. ಅವರು ತತ್ ಕ್ಷಣವೇ ಸಿಬಿಎಸ್ ಮುಖ್ಯಸ್ಥರು ಮತ್ತು ಶಿಕ್ಷಣ ಕಾರ್ಯದಶಿಯ  ಗಮನಕ್ಕೆ ವಿಷಯವನ್ನು ತಂದಿದ್ದರು. ಅವರು ಪ್ರಶ್ನೆ ಪತ್ರಿಕೆಗಳನ್ನು ಪರಿಶೀಲಿಸಿದಾಗ ಸೆಟ್ ಅಕೌಂಟ್ಸ್ ಪ್ರಶ್ನೆ ಪತ್ರಿಕೆಯು ಮೂಲ ಪ್ರಶ್ನೆ ಪತ್ರಿಕೆಯ ಜೊತೆಗೆ ತಾಳೆಯಾದುದು ಬೆಳಕಿಗೆ ಬಂದಿತ್ತು.  ವಿಷಯಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ಸಿಬಿಎಸ್ ಗೆ ದೂರು ನೀಡುವಂತೆ ಶಿಕ್ಷಣ ನಿರ್ದೇಶನಾಲಯದ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ತುರ್ತು ಕ್ರಮ ಕೈಗೊಳ್ಳಬೇಕು. ಕಠಿಣ ಶ್ರಮವಹಿಸಿ ಓದುವ ಮಕ್ಕಳಿಗೆ ಸಿಬಿಎಸ್ ನಿರ್ಲಕ್ಷ್ಯದ ಪರಿಣಾಮವಾಗಿ ತೊಂದರೆ ಆಗಬಾರದು ಎಂದು ಸಿಸೋಡಿಯಾ ಟ್ವೀಟ್ ಮಾಡಿದ್ದರು.

2018: ಸಿಡ್ನಿ: ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಚೆಂಡು ವಿರೂಪಗೊಳಿಸುವ (ಬಾಲ್ ಟ್ಯಾಂಪರಿಂಗ್)  ಮೂಲಕ ಕಳಂಕ ತಂದ ಆಟಗಾರರ ವಿರುದ್ದ ಕ್ರಿಕೆಟ್ ಆಸ್ಟ್ರೇಲಿಯಾ ಕಠಿಣ ಕ್ರಮ ಕೈಗೊಂಡಿದ್ದು  ಸ್ಟೀವನ್ ಸ್ಮಿತ್ ಮತ್ತು ಡೆವಿಡ್ ವಾರ್ನರ್ ಅವರಿಗೆ ತಲಾ ವರ್ಷಗಳ ನಿಷೇಧ ವಿಧಿಸಿತು.  ಆರಂಭಿಕ ಆಟಗಾರ ಕ್ಯಾಮರೂನ್  ಬ್ಯಾನ್ಕಾಪ್ಟ್ ಅವರಿಗೆ ತಂಡವನ್ನು ಪ್ರತಿನಿಧಿಸದಂತೆ ತಿಂಗಳ ಕಾಲ ನಿಷೇಧ ಹೇರಲಾಗಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದವು.  ಚೆಂಡು ವಿರೂಪ ವಿಚಾರ ಸುದ್ದಿಯಾದ ಬೆನ್ನಲ್ಲೇ ಕ್ರಿಕೆಟ್ ಆಸ್ಟ್ರೇಲಿಯಾ ತನಿಖೆಗೆ ಆದೇಶ ನೀಡಿತ್ತು.  ಈದಿನ  ಮಹತ್ವದ ಸಭೆ ಕರೆದು ಮೂವರು ಆಟಗಾರರಿಗೆ ನಿಷೇಧದ ಶಿಕ್ಷೆ ನೀಡಿದೆ ಎಂದು ವರದಿ ತಿಳಿಸಿತು.  ಆಸೀಸ್ ನಿಷೇಧ ಹೇರಿದ ಬೆನ್ನಲ್ಲೇ ಸ್ಮಿತ್ ಮತ್ತು ವಾರ್ನರ್ ಅವರಿಗೆ ಪ್ರಸಕ್ತ ಸಾಲಿನ ಐಪಿಎಲ್ ಪಂದ್ಯಾವಳಿಗಳಲ್ಲಿ ಆಡದಂತೆಯೂ ಬಿಸಿಸಿಐ ನಿಷೇಧ ವಿಧಿಸಿತು.  ಸ್ಮಿತ್ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕತ್ವ ಮತ್ತು ವಾರ್ನರ್ ಹೈದರಾಬಾದ್ ತಂಡದ ನಾಯಕತ್ವ ವಹಿಸಬೇಕಾಗಿತ್ತು. ಆರೋಪ ಕೇಳಿ ಬಂದ ತಕ್ಷಣ ಇಬ್ಬರನ್ನೂ ನಾಯಕತ್ವದಿಂದ ಕೈ ಬಿಡಲಾಗಿತ್ತು.  ಐಪಿಎಲ್ ನಾಯಕತ್ವ ತೊರೆದರು:  ಐಪಿಎಲ್ ಸನ್ ರೈಸರ್ಸ್ ಹೈದರಾಬಾದ್ ತಂಡದ ನಾಯಕ ಸ್ಥಾನದಿಂದ ಡೇವಿಡ್ ವಾರ್ನರ್ ಹೊರ ಬಂದಿರುವುದಾಗಿ ಫ್ರಾಂಚೈಸಿ ಪ್ರಕಟಿಸಿತು. ೨೦೧೮ನೇ ಸಾಲಿನ ಐಪಿಎಲ್ ಪಂದ್ಯಾವಳಿಗೆ ಸನ್ ರೈಸರ್ಸ್ ಹೈದರಾಬಾದ್ ಡೇವಿಡ್ ವಾರ್ನರ್ ಅವರನ್ನು ೧೨. ಕೋಟಿ ರೂಪಾಯಿಗಳಿಗೆ ತಂಡದಲ್ಲಿ ಉಳಿಸಿಕೊಂಡಿತ್ತು. ಇದೇ ಏಪ್ರಿಲ್ ೭ರಿಂದ ಐಪಿಎಲ್ ಪಂದ್ಯಗಳು ಪ್ರಾರಂಭವಾಗಲಿದ್ದು, ಅದಕ್ಕೂ ಮುನ್ನ ನಿರ್ಧಾರ ಹೊರ ಬಿದ್ದಿತು. ಸ್ಟೀವ್ ಸ್ಮಿತ್ ಐಪಿಎಲ್ ನಲ್ಲಿ ಆಡುವ ರಾಜಸ್ಥಾನ ರಾಯಲ್ಸ್ ತಂಡದ ನಾಯಕತ್ವವನ್ನು ಸೋಮವಾರ ತೊರೆದಿದ್ದರು. ತಂಡವನ್ನು ಅಜಿಂಕ್ಯಾ ರಹಾನೆ ಮುನ್ನಡೆಸುವರು.  ಹಿನ್ನೆಲೆ: ನ್ಯೂಲ್ಯಾಂಡಿನಲ್ಲಿ ನಡೆದ ಮೂರನೇ ಟೆಸ್ಟಿನ ಮೂರನೇ ದಿನ ಬ್ಯಾಟ್ಸ್ಮನ್ ಬ್ಯಾಂಕ್ರಾಫ್ಟ್ ಹರಿತವಾದ ಸಾಧನದಿಂದ ಚೆಂಡನ್ನು ಕೆರೆದಿದ್ದರು. ನಂತರ ವಸ್ತುವನ್ನು ಒಳ ಉಡುಪಿನೊಳಗೆ ಬಚ್ಚಿಟ್ಟಿದ್ದರು. ಇದು ಟಿವಿ ದೃಶ್ಯಾವಳಿಗಳಲ್ಲಿ ಸೆರೆಯಾಗಿತ್ತು.  ಇದು ಬಯಲಾದ ನಂತರ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ನಾಯಕ ಸ್ಮಿತ್ ಮತ್ತು ಉಪನಾಯಕ ಡೇವಿಡ್ ವಾರ್ನರ್ ಅವರನ್ನು ಅವರ ಸ್ಥಾನದಿಂದ ವಜಾಗೊಳಿಸಿತ್ತು. ನಾಯಕತ್ವದ ಜವಾಬ್ದಾರಿಯನ್ನು ವಿಕೆಟ್ ಕೀಪರ್ ಟಿಮ್ ಪೈನೆಗೆ ವಹಿಸಿತ್ತು.  ಐಸಿಸಿ, ಸ್ಮಿತ್ ಮೇಲೆ ಒಂದು ಟೆಸ್ಟ್ ಪಂದ್ಯದ ನಿಷೇಧ ಹಾಗೂ ಪಂದ್ಯ ಶುಲ್ಕದ ಶೇ ನೂರರಷ್ಟು ದಂಡ ಹೇರಿತ್ತು. ಕ್ಯಾಮರಾನ್ ಬ್ಯಾಂಕ್ರಾಫ್ಟ್ಗೆ ಪಂದ್ಯ ಶುಲ್ಕದ ಶೇ ೭೫ರಷ್ಟು ದಂಡ ಹೇರಿತ್ತು. ಪ್ರಕರಣದ ತನಿಖೆ ನಡೆಸಿದ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ತಂಡದ ಕೋಚ್ ಡರೆನ್ ಲೆಹ್ಮನ್ ಅವರಿಗೆ ಕ್ಲೀನ್ ಚಿಟ್ ನೀಡಿ, ಸ್ಥಾನದಲ್ಲಿ ಮುಂದುವರಿಸಲು ನಿರ್ಧರಿಸಿತ್ತು

2009: ಪ್ರಚೋದನಕಾರಿ ಭಾಷಣದ ಆರೋಪಕ್ಕೆ ಗುರಿಯಾದ ಬಿಜೆಪಿಯ ಲೋಕಸಭಾ ಚುನಾವಣಾ ಅಭ್ಯರ್ಥಿ ವರುಣ್ ಗಾಂಧಿ ಉತ್ತರಪ್ರದೇಶದ ಪಿಲಿಭಿಟ್ ನ್ಯಾಯಾಲಯಕ್ಕೆ ಶರಣಾದರು. ನಂತರ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಯಿತು. ಮುಸ್ಲಿಮ್ ವಿರೋಧಿ ಭಾಷಣದ ಹಿನ್ನೆಲೆಯಲ್ಲಿ ತೀವ್ರ ವಿವಾದಕ್ಕೆ ಗುರಿಯಾದ ವರುಣ್ ತಾವು ಜೈಲಿಗೆ ಹೋಗಲು ಸಿದ್ಧ ಎಂದು ಹೇಳಿದ ಕೆಲವೇ ಕ್ಷಣದಲ್ಲಿ ನ್ಯಾಯಾಧೀಶರು ಈ ಆದೇಶ ನೀಡಿದರು. ಇದಕ್ಕೆ ಮುನ್ನ ತಮ್ಮ ಪರ ಘೋಷಣೆ ಕೂಗುತ್ತಾ ಬಿಜೆಪಿಯ ಧ್ವಜ ಹಿಡಿದಿದ್ದ ಬೃಹತ್ ಸಂಖ್ಯೆಯ ಬೆಂಬಲಿಗರೊಂದಿಗೆ ನವದೆಹಲಿಯಿಂದ ಬಂದ ಅವರು ನ್ಯಾಯಾಲಯದ ಆವರಣ ಪ್ರವೇಶಿಸಿದ್ದರು.

2009: ಭೂಮಿಯನ್ನು ತಾಪಮಾನ ಹೆಚ್ಚಳದಿಂದ ರಕ್ಷಿಸುವ ಉದ್ದೇಶದಿಂದ ಸಿಡ್ನಿಯಲ್ಲಿ ಈದಿನ ರಾತ್ರಿ ಒಂದು ಗಂಟೆ ವಿದ್ಯುದ್ದೀಪಗಳನ್ನು (ಸ್ಥಳೀಯ ಕಾಲಮಾನದ ಪ್ರಕಾರ ರಾತ್ರಿ 8.30 ರಿಂದ 9.30) ಆರಿಸಿ ಜಗತ್ತಿನ ಇತರೆಡೆಗಳಿಗಿಂತ ಮೊದಲಾಗಿ ಜಾಗತಿಕ 'ಅರ್ತ್ ಅವರ್' ಆಚರಿಸಲಾಯಿತು. ಹೀಗಾಗಿ ಸದಾ ವಿದ್ಯುದ್ದೀಪಗಳಿಂದ ಝಗಮಗಿಸುವ ಸಿಡ್ನಿಯ ಒಪೆರಾ ಹೌಸ್ ಹಾಗೂ ಹಾರ್ಬರ್ ಬ್ರಿಜ್‌ನಲ್ಲಿ ರಾತ್ರಿ ಒಂದು ತಾಸು ಗಾಢಾಂಧಕಾರ ಕವಿದಿತ್ತು. ಪೆಸಿಫಿಕ್ ದ್ವೀಪಸಮೂಹಗಳಲ್ಲಿಯೇ ಅತ್ಯಂತ ದೊಡ್ಡದಾದ ಚಥಂ ದ್ವೀಪದಲ್ಲಿಯೂ 'ಡಿಸೇಲ್ ಜನರೇಟರ್' ಸ್ಥಗಿತಗೊಳಿಸುವ ಮೂಲಕ 'ಅರ್ತ್ ಅವರ್' ಆಚರಿಸಲಾಯಿತು. ವ್ಯಾಟಿಕನ್, ನಯಾಗರಾ ಜಲಪಾತ, ಐಫೆಲ್ ಗೋಪುರ, ಲಾಸ್ ವೇಗಾಸ್, ಕೆಸಿನೊ ಜಲಸಂಧಿ, ಬೀಜಿಂಗಿನ ಒಲಿಂಪಿಕ್ ಸ್ಟೇಡಿಯಂ - ಇವೇ ಮುಂತಾದ ವಿಶ್ವದ ಸುಮಾರು 371 ಪ್ರಸಿದ್ಧ ಸ್ಥಳಗಳಲ್ಲಿ ಒಂದು ತಾಸು ವಿದ್ಯುತ್‌ದೀಪ ಆರಿಸಿ 'ಅರ್ತ್ ಅವರ್' ಆಚರಿಸಲಾಯಿತು.

2009: ಕಾಂಗ್ರೆಸ್ ಪಕ್ಷವು ತನ್ನ ಚುನಾವಣಾ ಪ್ರಚಾರಕ್ಕೆ ಬಳಸಿಕೊಂಡ ಸ್ಲಂಡಾಗ್ ಮಿಲಿಯನೇರ್ ಚಿತ್ರದ 'ಜೈ ಹೋ' ಗೀತೆಯ ವಿರುದ್ಧ ಬಿಜೆಪಿ 'ಭಯ್‌ ಹೋ' ಎಂಬ ಅದೇ ಮಾದರಿಯ ಸ್ವರವಿರುವ ಅಣಕು ಗೀತೆಯೊಂದನ್ನು ಛೂ ಬಿಟ್ಟಿತು. 'ನಮ್ಮ ಹೊಸ ಗೀತೆ ದೇಶದ ನಿಜವಾದ ಸ್ಥಿತಿಯನ್ನು ಬಿಂಬಿಸುವುದು. ಅದು ಭಯ್ ಹೋ (ಹೆದರಿಕೆ ಇದೆ), ಭೂಕ್ ಹೋ (ಹಸಿವಿದೆ), ಅಂತಕ್ ಹೋ (ಭಯೋತ್ಪಾದಕರಿದ್ದಾರೆ), ಮಹಂಗಾಯೀ ಹೋ (ಹಣದುಬ್ಬರ ಇದೆ) ಆದಾಗ್ಯೂ ಜೈ ಹೋ' ಎಂದು ಹಾಡುತ್ತಾ ಕಾಂಗ್ರೆಸ್ ಪಕ್ಷವನ್ನು ಚುಚ್ಚಲಿದೆ' ಎಂದು ಬಿಜೆಪಿಯ ವಕ್ತಾರ ಸಿದ್ಧಾರ್ಥನಾಥ್ ಸಿಂಗ್ ಹೇಳಿದರು.

2009: ಗುಜರಾತಿನ ಗೋಧ್ರಾ ಗಲಭೆಯ ಸಂಚು ನಡೆಸಿದ ಆರೋಪಕ್ಕಾಗಿ ನರೇಂದ್ರ ಮೋದಿ ಸರ್ಕಾರದ ಶಿಕ್ಷಣ ಸಚಿವೆ ಮಾಯಾ ಕೊದ್ನಾನಿ ಮತ್ತು ವಿಶ್ವಹಿಂದೂಪರಿಷತ್ ಮುಖಂಡ ಜೈದೀಪ್ ಪಟೇಲ್ ಅವರನ್ನು ಹೆಚ್ಚಿನ ವಿಚಾರಣೆಗಾಗಿ ಏಪ್ರಿಲ್ 1ರ ವರೆಗೆ ಪೊಲೀಸ್ ವಶಕ್ಕೆ ಪಡೆಯಲಾಯಿತು. ಬಂಧನ ತಪ್ಪಿಸಲು ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದ ಮಾಯಾಗೆ ಅದನ್ನು ನಿರಾಕರಿಸಲಾಗಿತ್ತು. ಬಳಿಕ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ, ನ್ಯಾಯಾಲಯಕ್ಕೆ ಶರಣಾಗಿದ್ದರು. ಆಕೆಯನ್ನು ನಂತರ ಪ್ರಕರಣದ ವಿಶೇಷ ತನಿಖಾ ತಂಡದ ಮುಂದೆಯೂ ಹಾಜರು ಪಡಿಸಲಾಯಿತು.

2009: ಕೇಂದ್ರ ಆರೋಗ್ಯ ಸಚಿವ ಅನ್ಬುಮಣಿ ರಾಮದಾಸ್ ಹಾಗೂ ರೈಲ್ವೆ ರಾಜ್ಯ ಸಚಿವ ಆರ್.ವೇಲು ತಮ್ಮ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಿದರು. ಆಡಳಿತಾರೂಢ ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟದಿಂದ ತಮ್ಮ ಪಕ್ಷವಾದ ಪಿಎಂಕೆ ಹೊರಬರುವ ಇಂಗಿತ ವ್ಯಕ್ತಪಡಿಸಿದ ಎರಡು ದಿನಗಳ ನಂತರ ಅವರು ಈ ಕ್ರಮಕ್ಕೆ ಮುಂದಾದರು.

2009: ಮದರ್ ತೆರೆಸಾ ನಂತರ ಆ ಸ್ಥಾನದ ಜವಾಬ್ದಾರಿ ವಹಿಸಿಕೊಂಡಿದ್ದ 'ಸುಪೀರಿಯರ್ ಜನರಲ್' ಸಿಸ್ಟರ್ ನಿರ್ಮಲ ಅವರು ಅನಾರೋಗ್ಯದ ಕಾರಣದಿಂದ ತನ್ನ ಹನ್ನೆರಡು ವರ್ಷಗಳ ಸೇವೆಗೆ ವಿದಾಯ ಹೇಳಿದರು. ತನ್ನ ನಂತರದ ಸ್ಥಾನದಲ್ಲಿದ್ದ ಸಿಸ್ಟರ್ ಪ್ರೇಮಾ ಅವರಿಗೆ ಕೋಲ್ಕತದಲ್ಲಿ 'ಸುಪರೀಯರ್ ಜನರಲ್' ಪದವಿಯನ್ನು ಹಸ್ತಾಂತರಿಸಿದರು. ಸಿಸ್ಟರ್ ಪ್ರೇಮಾ ಅವರು ಕ್ರೈಸ್ತ ಸನ್ಯಾಸಿನಿಯರಲ್ಲೇ ಅತಿ ಹಿರಿಯರು. ದುರ್ಬಲ ವರ್ಗದವರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುವ ಮನಸ್ಸು ಅವರದು. ಈ ಸೇವೆಯನ್ನು ಪರಿಗಣಿಸಿದ ದಿ ಮಿಷನರೀಸ್ ಆಫ್ ಚಾರಿಟಿ ಅವರನ್ನು 'ಮೂರನೇ ಸುಪೀರಿಯರ್ ಜನರಲ್' ಎಂದು ಅಧಿಕೃತವಾಗಿ ಘೋಷಿಸಿತು. ಮಿಷನರೀಸ್ ಆಫ್ ಚಾರಿಟಿ ಆರು ವರ್ಷಗಳಿಗೊಮ್ಮೆ'ಸುಪೀರಿಯರ್ ಜನರಲ್' ಅವರನ್ನು ಆಯ್ಕೆ ಮಾಡುತ್ತದೆ. ಇದೇ ಜವಾಬ್ದಾರಿ ಹೊತ್ತಿದ್ದ ಸಿಸ್ಟರ್ ನಿರ್ಮಲ ಅವರು ಎರಡು ಅವಧಿಯಲ್ಲಿ (1996 ಮತ್ತು 2002) ಸೇವೆ ಸಲ್ಲಿಸಿದ್ದರು. ಮಾರ್ಚ್ 13ರಂದು ಅವರನ್ನು ಇದೇ ಪದವಿಗೆ ಅವಿರೋಧವಾಗಿ ಮತ್ತೆ ಆಯ್ಕೆ ಮಾಡಲಾಗಿತ್ತು.

2009: ಶ್ರೀಲಂಕಾದ ಹಿಂಸಾಪೀಡಿತ ಉತ್ತರ ಭಾಗದಲ್ಲಿ ಎಲ್‌ಟಿಟಿಇ ಆಕ್ರಮಣವನ್ನು ಹಿಮ್ಮೆಟ್ಟಿಸಿದ ಲಂಕಾ ಭದ್ರತಾ ಪಡೆ ಕಾರ್ಯಾಚರಣೆಯಲ್ಲಿ 31ಉಗ್ರರು, 6 ಸೈನಿಕರು ಮೃತರಾಗಿ, 30 ಕ್ಕೂ ಅಧಿಕ ಮಂದಿ ಗಾಯಗೊಂಡರು. ಇರನಪಲೈ ಉತ್ತರ, ಪುತುಕುಡಿಯಿರುಪ್ಪು ಪೂರ್ವದಲ್ಲಿ ಎಲ್‌ಟಿಟಿ ಇಯು ಮುಂಚೂಣಿ ಸೇನಾ ನೆಲೆಯನ್ನು ಉಲ್ಲಂಘಿಸಲು ಯತ್ನಿಸಿದಾಗ ಅದನ್ನು ಹಿಮ್ಮೆಟ್ಟಿಸಲಾಯಿತು.

2009: 'ಉತ್ತರ ಅಮೆರಿಕ ವಿಶ್ವ ಕನ್ನಡ ಸಂಸ್ಥೆ' (ನಾರ್ತ್ ಅಮೆರಿಕ ವಿಶ್ವ ಕನ್ನಡ ಅಸೋಸಿಯೇಶನ್-ನಾವಿಕ) ಹೆಸರಿನ ಕನ್ನಡಪರ ಸಂಸ್ಥೆ ಅಮೆರಿಕದ ಫಾರ್ಲಿಡಾ ನಗರದಲ್ಲಿ ಸ್ಥಾಪನೆಯಾಯಿತು. ಉತ್ತರ ಅಮೆರಿಕ ಹಾಗೂ ವಿಶ್ವದ ನಾನಾ ಭಾಗಗಳಲ್ಲಿ ನೆಲೆಸಿದ ಹೊರನಾಡ ಕನ್ನಡಿಗರೆಲ್ಲಾ ಒಂದುಗೂಡಿ ಈ ಸಂಸ್ಥೆಯನ್ನು ಹುಟ್ಟುಹಾಕಿದರು. ಈ ಮೂಲಕ 'ಅಕ್ಕ' ಸಂಸ್ಥೆಯಂತೆ ಮತ್ತೊಂದು ಕನ್ನಡ ಸಂಸ್ಥೆ ಮೈದಳೆದಿದ್ದು, ಜಾಗತಿಕ ಮಟ್ಟದಲ್ಲಿ ಕನ್ನಡ ಸಂಸ್ಕೃತಿಯನ್ನು ಇನ್ನಷ್ಟು ಪ್ರಚಾರ ಮಾಡಲು ಸಜ್ಜಾಯಿತು.

2008: ಚಿಪಾಕ್ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಹಣಾಹಣಿಯಲ್ಲಿ ಅತಿ ವೇಗದ ತ್ರಿಶತಕ ದಾಖಲಿಸಿದ ಭಾರತ ತಂಡದ ವೀರೇಂದ್ರ ಸೆಹ್ವಾಗ್ ವಿಶ್ವ ಕ್ರಿಕೆಟ್ನ್ಲಲಿ ಅತ್ಯಂತ ಗೌರವದಿಂದ ಹೆಸರಿಸಲಾಗುವ `ಡಾನ್' ಬ್ರಾಡ್ಮನ್ ಸಾಧನೆಯನ್ನು ಸರಿಗಟ್ಟಿ ನಿಂತರು. ಅತಿ ಹೆಚ್ಚು ತ್ರಿಶತಕ ಗಳಿಸಿದ ಸಾಧಕರ ಪಟ್ಟಿಯಲ್ಲಿ ಭಾರತದ ಆರಂಭಿಕ ಆಟಗಾರನಿಗೆ ಸ್ಥಾನ ಸಿಕ್ಕಿತು. ಅತಿ ಕಡಿಮೆ ಪಂದ್ಯಗಳಲ್ಲಿ ಎರಡು ಬಾರಿ ಇಷ್ಟೊಂದು ದೊಡ್ಡ ಮೊತ್ತದ ಸಾಧನೆ ಮಾಡಿದ ಬಲಗೈ ಬ್ಯಾಟ್ಸ್ಮನ್, ಇಂತಹದೇ ಶ್ರೇಯಕ್ಕೆ ಪಾತ್ರರಾದ ವೆಸ್ಟ್ ಇಂಡೀಸಿನ ಬ್ರಯನ್ ಲಾರಾಗಿಂತ ಸೆಹ್ವಾಗ್ ಮೇಲೆ ನಿಂತರು. ಆದರೆ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಬ್ರಾಡ್ಮನ್ ಗಿಂತ ಸ್ವಲ್ಪ ಕೆಳಗುಳಿದರು.

2008: ರಾಷ್ಟ್ರೀಯ ರಾಜಧಾನಿ ದೆಹಲಿಯಲ್ಲಿ ಬಿಗಿ ಭದ್ರತೆಯಿರುವ ಪ್ರಧಾನಿ ಕಚೇರಿಯ ಹೊರಭಾಗದಲ್ಲಿ ಸಂಭವಿಸಿದ ಗುಂಡು ಹಾರಾಟದಲ್ಲಿ ದೆಹಲಿ ಪೊಲೀಸ್ ಕಮಾಂಡೋ ಒಬ್ಬರು ಗಾಯಗೊಂಡರು. ಪೊಲೀಸ್ ಕಮಾಂಡೋ ಸಂಜಯ್ ಅವರಿಗೆ ಘಟನೆಯಲ್ಲಿ ಗುಂಡು ತಗುಲಿ ಪೃಷ್ಠದ ಬಳಿ ಗಾಯವಾಯಿತು.

2008: ಮುಂಬರುವ ಸಾರ್ವತ್ರಿಕ ಚುನಾವಣೆಗಳಿಗೆ ಮುನ್ನವೇ ತೃತೀಯ ರಂಗ ರಚನೆಯ ಸಾಧ್ಯತೆಗಳನ್ನು ತಳ್ಳಿ ಹಾಕಿದ ಸಿಪಿಐ, ತಾನು ರಾಜ್ಯಗಳ ಪರಿಸ್ಥಿತಿಗೆ ಅನುಗುಣವಾಗಿ ವಿವಿಧ ರಾಜಕೀಯ ಪಕ್ಷಗಳ ಜೊತೆಗೆ ಮೈತ್ರಿ ಮಾಡಿಕೊಳ್ಳುವುದಾಗಿ ಹೇಳಿತು.

2008: ಲೋಹ ಮತ್ತು ಆಹಾರ ವಸ್ತುಗಳ ದರ ಏರಿಕೆಯು ಹಣದುಬ್ಬರ ದರವನ್ನು ಶೇಕಡಾ 6.68ಕ್ಕೆ ಏರಿಸಿ ಕಳೆದ ಒಂದು ವರ್ಷದಲ್ಲೇ ಅತಿ ಹೆಚ್ಚಿನ ದರ ಏರಿಕೆಯ ದಾಖಲೆಯನ್ನು ನಿರ್ಮಿಸಿತು. ಪರಿಣಾಮವಾಗಿ ಸದ್ಯೋಭವಿಷ್ಯದಲ್ಲಿ ಬಡ್ಡಿದರಗಳು ಇಳಿಯುವ ಆಶೆ ನುಚ್ಚು ನೂರಾಯಿತು. ಇತ್ತೀಚಿನ ತಿಂಗಳುಗಳಲ್ಲಿ ಶೇಕಡಾ 4ರ ಸನಿಹದಲ್ಲಿದ್ದ ಹಣದುಬ್ಬರ ಮೇಲ್ಮುಖವಾಗಿ ಸಾಗುತ್ತಾ ಮಾರ್ಚ್ 15ರಂದು ಕೊನೆಗೊಂಡ ವಾರಾಂತ್ಯ ವೇಳೆಗೆ ಶೇಕಡಾ 0.76ರಷ್ಟು ಹೆಚ್ಚಿತ್ತು.

2008: ಐವತ್ತು ಕೋಟಿ ರೂಪಾಯಿ ಆದಾಯ ತೆರಿಗೆ ವಂಚಿಸಿದ ಪ್ರಕರಣವೊಂದರಲ್ಲಿ ಭೂಗತ ದೊರೆ ದಾವೂದ್ ಇಬ್ರಾಹಿಂ ಆಪ್ತ ಎನ್ನಲಾದ ರೊಮೇಶ್ ಶರ್ಮಾ ತಪ್ಪಿತಸ್ಥ ಎಂದು ಸ್ಥಳೀಯ ನ್ಯಾಯಾಲಯ ತೀರ್ಪು ನೀಡಿತು. 12 ವರ್ಷಗಳ ಹಿಂದಿನ ಪ್ರಕರಣವೊಂದರಲ್ಲಿ ಆದಾಯ ತೆರಿಗೆ ಕಾಯ್ದೆ ಅಡಿ ಆತನನ್ನು ತಪ್ಪಿತಸ್ಥ ಎಂದು ಘೋಷಿಸಿ ದೆಹಲಿ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಕನ್ವಲ್ ಜಿತ್ ಅರೋರಾ ಆದೇಶ ನೀಡಿದರು.

2007: ಫಿಲಿಪ್ಪೀನ್ಸ್ ರಾಜಧಾನಿ ಮನಿಲಾದಲ್ಲಿ 32 ಪುಟ್ಟ ಪುಟ್ಟ ಕೊಳೆಗೇರಿ ಮಕ್ಕಳನ್ನು ಅಪಹರಿಸಿ, ಬಸ್ಸಿನಲ್ಲಿ ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡ ಶಿಶುವಿಹಾರ ಕೇಂದ್ರದ ಮಾಲೀಕ ಡ್ಯೂಕಾಟ್ 10 ಗಂಟೆಗಳ ಕಾಲ ಆತಂಕ ಸೃಷ್ಟಿಸಿದ. ಅಪಹೃತ 32 ಮಕ್ಕಳು ಸೇರಿದಂತೆ ಶಿಶುವಿಹಾರದ 145 ಮಕ್ಕಳಿಗೆ ಉಚಿತ ವಸತಿ ವ್ಯವಸ್ಥೆ ಹಾಗೂ ಶಿಕ್ಷಣ ಒದಗಿಸಬೇಕು ಮತ್ತು ಭ್ರಷ್ಟಾಚಾರ ನಿರ್ಮೂಲನೆ ಅಗಬೇಕು ಎಂಬುದು ಆತನ ಬೇಡಿಕೆಗಳಾಗಿದ್ದವು. ಚಿತ್ರನಟ, ಸಂಸದ ಸೆನ್ ರೋಮನ್ `ಬಾಂಗ್' ರೆವಿಲ್ಲಾ ಜ್ಯೂನಿಯರ್ ಅವರು ಅಪಹರಣಕಾರನ ಜೊತೆಗೆ ಮಾತುಕತೆ ನಡೆಸಿ ಸಂಜೆ ವೇಳೆಗೆ ಮಕ್ಕಳನ್ನು ಬಂಧಮುಕ್ತಗೊಳಿಸಿದರು. ಅಪಹರಣ ಮುಗಿಯುತ್ತಿದ್ದಂತೆಯೇ ಗೊಂಬೆ, ಆಟಿಕೆ, ತಿಂಡಿ ಪೊಟ್ಟಣಗಳೊಂದಿಗೆ ಅಪಹೃತ ಮಕ್ಕಳು ಮತ್ತು ಅಪಹರಣಕಾರ ಅಪಹೃತ ಬಸ್ಸಿನಿಂದ ಹೊರಕ್ಕೆ ಬಂದರು. ಅಪಹರಣಕಾರ ಪ್ರತಿ ಮಗುವಿಗೂ ಮುತ್ತಿಟ್ಟು, ತನ್ನ ಬಳಿ ಇದ್ದ ಗ್ರೆನೇಡನ್ನು ಪ್ರಾಂತೀಯ ಗವರ್ನರರಿಗೆ ಒಪ್ಪಿಸಿ ಶರಣಾಗತನಾದ. ಹಿಂದೆ ವೇತನ ವಿವಾದಕ್ಕೆ ಸಂಬಂಧಿಸಿದಂತೆ ಈತ ಇಬ್ಬರು ಕ್ಯಾಥೋಲಿಕ್ ಪಾದ್ರಿಗಳನ್ನು ಅಪಹರಿಸಿದ್ದ.

2007: ಪತಿಯೊಡನೆ ವಾಸಿಸಲು ನಿರಾಕರಣೆ ಮತ್ತು ಮಗು ಬೇಡ ಎಂದು ಏಕಪಕ್ಷೀಯ ನಿರ್ಧಾರ ಕೈಗೊಳ್ಳುವ ಪತ್ನಿಯ ವರ್ತನೆ ಮಾನಸಿಕ ಹಿಂಸೆ ಎನಿಸಿಕೊಳ್ಳುತ್ತದೆ. ಇದೇ ಕಾರಣಕ್ಕೆ ಪತಿ ವಿಚ್ಛೇದನ ಕೇಳಬಹುದು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿತು. 22 ವರ್ಷದ ಹಿಂದೆ ಮದುವೆಯಾಗಿ ಕಳೆದ 16 ವರ್ಷಗಳಿಂದಲೂ ಪ್ರತ್ಯೇಕವಾಗಿ ವಾಸಿಸಿದ ಪಶ್ಚಿಮ ಬಂಗಾಳದ ಐಎಎಸ್ ದಂಪತಿ ಸಮೀರ್ ಘೋಷ್ ಮತ್ತು ಜಯಾ ಘೋಷ್ ಅವರ ವಿಚ್ಛೇದನ ಅರ್ಜಿಯನ್ನು ನ್ಯಾಯಾಲಯ ಇದೇ ಆಧಾರದಲ್ಲಿ ಇತ್ಯರ್ಥ ಪಡಿಸಿ, ವಿಚ್ಛೇದನ ಮಂಜೂರು ಮಾಡಿತು.

2007: ಜಾಗತಿಕ ತಾಪಮಾನದ ಪರಿಣಾಮವಾಗಿ ಹಿಮಾಲಯದ ನೀರ್ಗಲ್ಲುಗಳು ಶೀಘ್ರವಾಗಿ ಕರಗುತ್ತಿವೆ ಎಂದು ಫ್ರೆಂಚ್ ಸಂಶೋಧಕರು ಉಪಗ್ರಹ ಚಿತ್ರಗಳನ್ನು ಅಧರಿಸಿ ಬಹಿರಂಗ ಪಡಿಸಿದರು. ಹಿಮಾಲಯದ ನೀರ್ಗಲ್ಲುಗಳು ಕ್ರಮೇಣ ಕರಗುತ್ತಿರುವ ಚಿತ್ರಗಳನ್ನು ಬಿಡುಗಡೆ ಮಾಡಿದ ಅವರು ವಾರ್ಷಿಕ 8ರಿಂದ 10 ಮೀಟರಿನಷ್ಟು ನೀರ್ಗಲ್ಲುಗಳು ಕರಗುತ್ತಿವೆ ಎಂದು ಅವರು ಪ್ರಕಟಿಸಿದರು.

2006: ದೇಶದಲ್ಲೇ ಅಪರೂಪದ್ದಾದ ಜೀವಂತ ಮನುಷ್ಯನ ಇಡೀ ದೇಹದ ಅಚ್ಚು ತೆಗೆಯುವ ಶಿಲ್ಪಕಲಾ ಪ್ರಯೋಗ ಚಿಕ್ಕಮಗಳೂರಿನ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಯಶಸ್ವಿಯಾಯಿತು. `ಸ್ಲೀಪಿಂಗ್ ಗರ್ಲ್' ಕಲಾಕೃತಿಗೆ ವಿದ್ಯಾಲಯದ ವಿದ್ಯಾರ್ಥಿನಿ ಜ್ಯೋತಿ ಮತ್ತು `ಥಿಂಕಿಂಗ್ ಮ್ಯಾನ್' ಕಲಾಕೃತಿಗೆ ಸಂಚಾರಿ ಪೊಲೀಸ್ ಪೇದೆ ಕಿರಣ್ ಸ್ವಯಂಸ್ಫೂರ್ತಿಯಿಂದ ರೂಪದರ್ಶಿಗಳಾದರು. ಪ್ರಾಚಾರ್ಯ ವಿಶ್ವಕರ್ಮ ಆಚಾರ್ಯ ಮತ್ತು ಇತರ ಉಪನ್ಯಾಸಕರ ನೇತೃತ್ವದಲ್ಲಿ 40 ವಿದ್ಯಾರ್ಥಿಗಳ ತಂಡ ದಶಮಾನೋತ್ಸವದ ಅಂಗವಾಗಿ ಬೆಳಗ್ಗೆಯಿಂದ ರಾತ್ರಿಯವರೆಗೆ ಶ್ರಮಿಸಿ ಈ ಕಲಾಕೃತಿಗಳನ್ನು ನಿರ್ಮಿಸಿತು. ಜೀವಂತ ಮನುಷ್ಯನನ್ನೇ ಸಂಪೂರ್ಣವಾಗಿ `ಪ್ಲಾಸ್ಟರ್ ಆಫ್ ಪ್ಯಾರಿಸ್' ನಿಂದ ಮುಚ್ಚಿ ಪಡಿಯಚ್ಚು ತೆಗೆದು ಫೈಬರಿಗೆ ಅಳವಡಿಸುವ ಈ ಕಲೆ ಅತ್ಯಂತ ವಿರಳ. ದೇಹದ ಒಂದಂಗುಲವನ್ನೂ ಬಿಡದೆ ಸಂಪೂರ್ಣವಾಗಿ ಮುಚ್ಚಿ ಮೂಗಿಗೆ ಉಸಿರಾಡಲು ಮಾತ್ರ ಪೈಪ್ ಅಳವಡಿಸಿ ಸುಮಾರು 20 ನಿಮಿಷ ಒಂದೇ ಭಂಗಿಯಲ್ಲಿ ಕೂರಿಸಿ ಈ ಪಡಿಯಚ್ಚು ತೆಗೆಯಲಾಯಿತು.

2006: ಗೋಧ್ರಾ ಹತ್ಯಾಕಾಂಡದ ಬಳಿಕ 2002ರ ಏಪ್ರಿಲಿನಲ್ಲಿ ಗುಜರಾತಿನ ಅಹಮದಾಬಾದಿನ ಧನಿಲಿಮ್ಡಾ ಪ್ರದೇಶದಲ್ಲಿ ನಡೆದ ಕೋಮು ಗಲಭೆ ಪ್ರಕರಣದ ಪ್ರಮುಖ ಆರೋಪಿ ಮುಷ್ತಾಕ್ ಕನಿಯೊ ಮತ್ತು ಇತರ 8 ಆರೋಪಿಗಳಿಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಯಿತು.

2006: ಆಧುನಿಕ ಹರಿಯಾಣದ ಶಿಲ್ಪಿ ಎಂದೇ ಪರಿಗಣಿಸಲಾಗಿದ್ದ ಕಾಂಗ್ರೆಸ್ಸಿನ ಹಿರಿಯ ಮುಖಂಡ, ರಾಜ್ಯದ ಮಾಜಿ ಮುಖ್ಯಮಂತ್ರಿ ಬನ್ಸಿಲಾಲ್ (79) ನವದೆಹಲಿಯಲ್ಲಿ ನಿಧನರಾದರು. ನಾಲ್ಕು ಬಾರಿ ಹರಿಯಾಣದ ಮುಖ್ಯಮಂತ್ರಿ ಆಗಿದ್ದ ಬನ್ಸಿಲಾಲ್ ತುರ್ತುಪರಿಸ್ಥಿತಿ ಸಂದರ್ಭದಲ್ಲಿ ರಕ್ಷಣಾ ಸಚಿವರಾಗಿ ಇಂದಿರಾಗಾಂಧಿ ಪುತ್ರ ಸಂಜಯಗಾಂಧಿ ನಿಕಟವರ್ತಿಯಾಗಿ ಸಾಕಷ್ಟು ವಾದಕ್ಕೂ ಗುರಿಯಾಗಿದ್ದರು. ನಂತರ ಕಾಂಗ್ರೆಸ್ಸಿನಿಂದ ಹೊರನಡೆದು ಹರಿಯಾಣ ವಿಕಾಸ ಪಕ್ಷ ಸ್ಥಾಪಿಸಿದ್ದರು. 2004ರಲ್ಲಿ ಕಾಂಗ್ರೆಸ್ಸಿಗೆ ಮರಳಿದ್ದರು.

2006: ಟೆಂಪಲ್ ಆಫ್ ಕಾನ್ಷಿಯಸ್ನೆಸ್ಸಿನ ಮುಖ್ಯಸ್ಥ ಆಧ್ಯಾತ್ಮಿಕ ಗುರು ವೇದಾಂತಿ ಮಹರ್ಷಿ (96) ಅಳಿಯಾರಿನಲ್ಲಿ ಹೃದಯಾಘಾತದಿಂದ ನಿಧನರಾದರು.

2006: ಇಸ್ರೇಲ್ ಚುನಾವಣೆ ಬಿಗಿ ಭದ್ರತೆಯ ನಡುವೆ ನಡೆಯಿತು. ಐವತ್ತು ಲಕ್ಷ ಮಂದಿ ಮತ ಚಲಾಯಿಸಿದರು. ಆದರೆ 1999 ಹಾಗೂ 2003ರ ಚುನಾವಣೆಗೆ ಹೋಲಿಸಿದರೆ ಮತ ಚಲಾವಣೆ ಪ್ರಮಾಣ ಕುಸಿಯಿತು.

1979: ಅಮೆರಿಕದ ಅತಿಭೀಕರ ಪರಮಾಣು ವಿದ್ಯುತ್ ಸ್ಥಾವರ ದುರಂತ ಸಂಭವಿಸಿದ ದಿನ. ಪೆನ್ಸಿಲ್ವೇನಿಯಾದ ಥ್ರೀ ಮೈಲ್ ಐಲ್ಯಾಂಡಿನ ಯುನಿಟ್ ಟು ರಿಯಾಕ್ಟರಿನಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ವಿಕಿರಣ ಹೊರಸೂಸಿದ ಪರಿಣಾಮವಾಗಿ ಈ ದುರಂತ ಘಟಿಸಿತು.

1959: ಕಲಾವಿದ ಸಿಂಧೆ ಡಿ.ಕೆ. ಜನನ.

1958: ಕಲಾವಿದ ವಾಗೀಶ ಭಟ್ ಜನನ.

1955: ಆಕ್ಲೆಂಡಿನ ಈಡನ್ ಪಾರ್ಕಿನಲ್ಲಿ ಇಂಗ್ಲೆಂಡ್ ವಿರುದ್ಧ ಆಡಿದ ನ್ಯೂಜಿಲ್ಯಾಂಡ್ 26 ರನ್ನುಗಳಿಗೆ ಆಲ್ ಔಟ್ ಆಗಿ ಟೆಸ್ಟ್ ಕ್ರಿಕೆಟಿನಲ್ಲಿ ಅತ್ಯಂತ ಕಡಿಮೆ ಸ್ಕೋರ್ ದಾಖಲಿಸಿತು.

1951: ಕಲಾವಿದ ಶರಣಪ್ಪ ಜಿ. ಶೆಟಗಾರ ಜನನ.

1940: ಕಲಾವಿದ ಶಕುಂತಲಾ ನರಸಿಂಹನ್ ಜನನ.

1939: ಜನರಲ್ ಫ್ರಾಂಕೋಗೆ ಮ್ಯಾಡ್ರಿಡ್ ಶರಣಾಗತಿಯೊಂದಿಗೆ ಸ್ಪಾನಿಶ್ ಅಂತರ್ಯುದ್ಧ ಕೊನೆಗೊಂಡಿತು. ಈ ಗೆಲುವಿನ ಹಿನ್ನೆಲಯಲ್ಲಿ ಫ್ರಾಂಕೋ ಅವರನ್ನು `ಕಾಡಿಲೋ' ಅಂದರೆ ರಾಷ್ಟ್ರದ ನಾಯಕ ಎಂದು ಗೌರವಿಸಲಾಯಿತು.

1930: ಟರ್ಕಿಯಲ್ಲಿನ ಅಂಗೋರಾ ಮತ್ತು ಕಾನ್ ಸ್ಟಾಂಟಿನೋಪಲ್ ನಗರಗಳ ಹೆಸರುಗಳನ್ನು ಕ್ರಮವಾಗಿ ಅಂಕಾರ ಮತ್ತು ಇಸ್ತಾಂಬುಲ್ ಎಂಬುದಾಗಿ ಬದಲಾಯಿಸಲಾಯಿತು.

1926: ಭಾರತದ ಮಾಜಿ ಕ್ರಿಕೆಟ್ ಕ್ಯಾಪ್ಟನ್ ಪಾಲಿ ಉಮ್ರಿಗಾರ್ ಜನ್ಮದಿನ. ಇವರು ಟೆಸ್ಟ್ ಕ್ರಿಕೆಟಿನಲ್ಲಿ ದ್ವಿಶತಕ ಭಾರಿಸಿದ ಮೊಟ್ಟ ಮೊದಲ ಭಾರತೀಯ ಕ್ರಿಕೆಟಿಗ.

1916: ಸಂಗೀತ, ಚಿತ್ರಕಲೆ, ರಂಗಭೂಮಿ ಇತ್ಯಾದಿ ಹಲವಾರು ಪ್ರಕಾರಗಳಲ್ಲಿ ಪರಿಣತಿ ಪಡೆದಿದ್ದ ಕಾಳಪ್ಪ ಪತ್ತಾರ ಅವರು ಬಡವಿಶ್ವಕರ್ಮ ಕುಟುಂಬದ ಸದಸ್ಯರಾಗಿ ರಾಯಚೂರು ಜಿಲ್ಲೆಯ ತಳಕಲ್ಲಿನಲ್ಲಿ ಜನಿಸಿದರು.

1862: ಅರಿಸ್ಟೈಡ್ ಬ್ರಿಯಾಂಡ್ (1862-1932) ಹುಟ್ಟಿದ ದಿನ. ಹನ್ನೊಂದು ಬಾರಿ ಫ್ರಾನ್ಸಿನ ಪ್ರಧಾನಿಯಾದ ಇವರು `ಲೀಗ್ ಆಫ್ ನೇಷನ್ಸ್' ಸ್ಥಾಪನೆ ಮತ್ತು ವಿಶ್ವಶಾಂತಿಗಾಗಿ ತೀವ್ರವಾಗಿ ಶ್ರಮಿಸಿದರು. ಈ ಯತ್ನಗಳು ಇವರಿಗೆ 1926ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿಯನ್ನು ತಂದು ಕೊಟ್ಟವು. 1926ರ ನೊಬೆಲ್ ಶಾಂತಿ ಪ್ರಶಸ್ತಿ ಇವರ ಜೊತೆಗೆ ಜರ್ಮನಿಯ ಗುಸ್ತಾವ್ ಸ್ಟ್ರೆಸ್ ಮ್ಯಾನ್ ಅವರಿಗೂ ಲಭಿಸಿತು.

1851: ಬರ್ನಾರ್ಡಿನೊ ಲೂಯಿ ಮಚಾಡೊ (1851-1944) ಹುಟ್ಟಿದ ದಿನ. ಬ್ರೆಜಿಲ್ ಸಂಜಾತ ರಾಜಕೀಯ ನಾಯಕನಾದ ಇವರು ಎರಡು ಅವಧಿಗೆ ಪೋರ್ಚುಗಲ್ ಅಧ್ಯಕ್ಷರಾಗಿದ್ದರು.

No comments:

Post a Comment