Tuesday, March 13, 2018

ಇಂದಿನ ಇತಿಹಾಸ History Today ಮಾರ್ಚ್ 12

ಇಂದಿನ ಇತಿಹಾಸ History Today  ಮಾರ್ಚ್  12
2018: ಬೆಳಗಾವಿ: ಬೆಳಗಾವಿ ನಗರದ ಕಿಲ್ಲಾ ಕೆರೆಯ ಆವರಣದಲ್ಲಿ ಒಂದೂವರೆ ಕೋಟಿ ರೂಪಾಯಿಗೂ ಹೆಚ್ಚಿನ ವೆಚ್ಚದಲ್ಲಿ ನಿರ್ಮಿಸಲಾದ ದೇಶದಲ್ಲೇ ಅತ್ಯಂತ ಎತ್ತರದ ರಾಷ್ಟ್ರಧ್ವಜ ಸ್ತಂಭವನ್ನು  ರಾಷ್ಟ್ರಧ್ವಜ ಹಾರಿಸುವ ಮೂಲಕ ದೇಶಕ್ಕೆ ಸಮರ್ಪಿಸಲಾಯಿತು. ಧ್ವಜಸ್ತಂಭ ಸಮರ್ಪಣೆಯ ಈ ಚಾರಿತ್ರಿಕ ಸಮಾರಂಭಕ್ಕೆ ಸಾವಿರಾರು ನಾಗರಿಕರು ಸಾಕ್ಷಿಯಾದರು. ಶಾಸಕ  ಫಿರೋಜ್ ಸೇಠ್ ಅವರ ಆಸಕ್ತಿಯಿಂದಾಗಿ ತಲೆಯೆತ್ತಿರುವ ಈ ಧ್ವಜಸ್ತಂಭದ ರಾಷ್ಟ್ರಧ್ವಜಾರೋಹಣವನ್ನು ಉಸ್ತುವಾರಿ ಸಚಿವ  ರಮೇಶ ಜಾರಕಿಹೊಳಿ ನೆರವೇರಿಸಿದರು.  ಜಿಲ್ಲಾಧಿಕಾರಿ ಜಿಯಾ ಉಲ್ಲಾ, ಜಿಲ್ಲಾ ಪಂಚಾಯತ್ ಸಿಇಓ ರಾಮಚಂದ್ರನ್, ಮಹಾನಗರ ಪಾಲಿಕೆಯ ಆಯುಕ್ತ ಶಶಿಧರ ಕುರೇರ, ಬೂಡಾ ಆಯುಕ್ತ ಶಕೀಲ್ ಅಹ್ಮದ್ ಸೇರಿದಂತೆ ನೂರಾರು ಅಧಿಕಾರಿ, ಸಿಬ್ಬಂದಿ ಹಾಜರಿದ್ದರು. ಧ್ವಜಸ್ತಂಭ ಸಮರ್ಪಣಾ ಸಮಾರಂಭದಲ್ಲಿ ಹಿಂದೂ, ಸಿಖ್, ಮುಸ್ಲಿಮ್ ಮತ್ತು ಕ್ರೈಸ್ತ ಧರ್ಮ ಗುರುಗಳು ಹಾಜರಿದ್ದರು. ನಗರದ ವಿವಿಧ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ್ದರು. ಕಿಲ್ಲಾ ಕೆರೆಯ ಆವರಣ ತುಂಬಿ ತುಳುಕುತ್ತಿತ್ತು. ಸಮಾರಂಭವು ಅಗಸ್ಟ್ ೧೫ ರಂದು ನಡೆಯುವ ಸ್ವಾತಂತ್ರ್ಯ ದಿನಾಚರಣೆ ಸಮಾರಂಭವನ್ನು ನೆನಪಿಸುತ್ತಿತ್ತು. ಧ್ವಜ ಸ್ತಂಬದ ನಿರ್ಮಾಣದಲ್ಲಿ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾgವೂ ಮಹತ್ವದ ಪಾತ್ರವನ್ನು ವಹಿಸಿತ್ತು. ಐತಿಹಾಸಿಕ ಧ್ವಜಸ್ತಂಭ ೧೧೦ ಮೀಟರ್ ಎತ್ತರವಿದ್ದು, ವ್ಯಾಸ ೧.೯೦ ಮೀಟರ್. ಧ್ವಜಸ್ತಂಭ ನಿರ್ಮಾಣಕ್ಕೆ ಆಗಿರುವ ವೆಚ್ಚ ೧,೬೨,೫೦,೦೦೦ ರೂಪಾಯಿಗಳು.


2018: ಮುಂಬೈ: ಅಖಿಲ ಭಾರತ ಕಿಸಾನ್ ಸಭಾ (ಎಐಕೆಎಸ್) ನೇತೃತ್ವದಲ್ಲಿ ನಾಸಿಕ್ ನಿಂದ ೧೮೦ ಕಿಮೀ ದೂರದ ಪಾದಯಾತ್ರೆ ಮೂಲಕ ಮುಂಬೈಗೆ ಬಂದ ರೈತರ ಬೃಹತ್ ಜಾಥಾದ ಬೇಡಿಕೆಗಳನ್ನು ಈಡೇರಿಸಲು ಮಹಾರಾಷ್ಟ್ರ ಸರ್ಕಾರ ಸಮ್ಮತಿಸಿದ್ದು, ಪ್ರತಿಭಟನೆ ಹಿಂಪಡೆದು ವಿಶೇಷ ರೈಲುಗಳ ಮೂಲಕ ಹುಟ್ಟೂರಿಗೆ ವಾಪಸಾಗಲು ರೈತರು ಒಪ್ಪಿದರು.  ಸುಮಾರು ೧೫,೦೦೦ ರೈತರು ಅವರನ್ನು ಬೆಂಬಲಿಸಿದ ಬುಡಕಟ್ಟು ಜನ ಹಾಗೂ ಇತರರು ಸೇರಿದಂತೆ ೪೦,೦೦೦ ದಷ್ಟಿದ್ದ ಪ್ರತಿಭಟನಕಾರರ ನಿಯೋಗ ಮಧ್ಯಾಹ್ನ ಸರ್ಕಾರದ ಜೊತೆಗೆ ಮಾತುಕತೆ ನಡೆಸಿದ್ದು, ನೀರಾವರಿ ಸಚಿವ ಗಿರೀಶ್ ಮಹಾಜನ್ ಅವರು ಸರ್ಕಾರವು ರೈತರ ಬೇಡಿಕೆಗಳನ್ನು ಒಪ್ಪಿದೆ ಎಂದು ತಿಳಿಸಿದರು.  ‘ಭೂಮಿಯ ಹಕ್ಕು ವರ್ಗಾವಣೆ ಸೇರಿದಂತೆ ರೈತರ ಪ್ರತಿಶತ ೧೦೦ರಷ್ಟು ಬೇಡಿಕೆಗಳನ್ನೂ ಸರ್ಕಾರ ಒಪ್ಪಿದೆ ಎಂದು ಮಹಾಜನ್ ನುಡಿದರು. ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲು ರೈತರು ಒಪ್ಪಿದ್ದಾರೆ. ರೈತರಿಗೆ ಹುಟ್ಟೂರುಗಳಿಗೆ ವಾಪಸಾಗಲು ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದೆ ಎಂದು ಸಚಿವರು ಹೇಳಿದರು.  ಎಂಟು ಸದಸ್ಯರ ರೈತ ನಾಯಕರ ನಿಯೋಗ ಈದಿನ ವಿಧಾನ ಮಂಡಲಕ್ಕೆ ತೆರಳಿ ಸರ್ಕಾರದ ಜೊತೆ ಮಾತುಕತೆ ನಡೆಸಿತು.  ಕಳೆದ ವಾರ ನಾಸಿಕ್ ಜಿಲ್ಲೆಯ ಮುಳುಂದದಿಂದ ಹೊರಟಿದ್ದ ಕಿಸಾನ್ ಜಾಥಾ ಮಾರ್ಚ್ ೧೧ರ ಭಾನುವಾರ ಮುಂಬೈ ತಲುಪಿತ್ತು. ಸಾರ್ವಜನಿಕರಿಗೆ ತೊಂದರೆಯಾಗುವುದನ್ನು ತಪ್ಪಿಸುವ ಸಲುವಾಗಿ ರೈತರು ಹಗಲು ಜಾಥಾ ನಡೆಸುವ ಬದಲು ರಾತ್ರಿಯ ವೇಳೆಯಲ್ಲಿ ಪಾದಯಾತ್ರೆ ಮಾಡುತ್ತಾ ಮುಂಬೈಗೆ ಆಗಮಿಸಿದ್ದರು.  ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಈದಿನ  ವಿಧಾನಭವನಕ್ಕೆ ಮುತ್ತಿಗೆ ಹಾಕಲು ರೈತರು ಉದ್ದೇಶಿಸಿದ್ದರು. ಸಂಪೂರ್ಣ ಕೃಷಿ ಸಾಲ ಮನ್ನಾ, ಎಂ.ಎಸ್. ಸ್ವಾಮಿನಾಥನ್ ಆಯೋಗದ ಶಿಫಾರಸುಗಳ ಜಾರಿ, ಅರಣ್ಯ ಹಕ್ಕುಗಳನ್ನು ಒದಗಿಸುವುದು ಮತ್ತು ಸರ್ಕಾರವು ಸ್ವಾಧೀನ ಪಡಿಸಿಕೊಳ್ಳುವ ಭೂಮಿಗೆ ಉತ್ತಮ ಪರಿಹಾರ ಒದಗಿಸಬೇಕು ಮತ್ತಿತರ ಬೇಡಿಕೆಗಳನ್ನು ರೈತರು ಮುಂದಿಟ್ಟಿದ್ದರು.  ರಾಜಕೀಯ ಉದ್ದೇಶದ ಜಾಥಾ ಅಲ್ಲ-  ಕಾಂಗ್ರೆಸ್: ರೈತರು ಸಂಘಟಿಸಿದ ಈ ಜಾಥಾ ರಾಜಕೀಯ ಉದ್ದೇಶದ್ದಲ್ಲ ಎಂದು ಹೇಳಿದ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಮೋಹನ್ ಪ್ರಕಾಶ್ ಅವರು ’ಮೋದಿ ಅವರು ಅಧಿಕಾರಕ್ಕೆ ಬಂದಂದಿನಿಂದ ರಾಷ್ಟ್ರದ ರೈತರಿಗೆ ಅತ್ಯಂತ ಹೆಚ್ಚಿನ ತೊಂದರೆಯಾಗಿದೆ. ಮಹಾರಾಷ್ಟ್ರದಲ್ಲಿ ರಾಜ್ಯ ಸರ್ಕಾರವೂ ಬಿಜೆಪಿಯದ್ದೇ ಆಗಿರುವುದರಿಂದ ರೈತರ ದುಃಖ ದುಪ್ಪಟ್ಟಾಗಿದೆ. ರೈತರ ಉತ್ಪನ್ನಗಳ ಬೆಲೆ ನೆಲಕಚ್ಚಿದ್ದು ಅವರಿಗೆ ಬೇಕಾದ ಕಚ್ಛಾವಸ್ತುಗಳ ಬೆಲೆ ಗಗನಕ್ಕೇರಿದೆ. ರಾಹುಲ್ ಗಾಂಧಿಯವರು ರೈತರ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿದ್ದು, ಇಡೀ ಕಾಂಗ್ರೆಸ್ ನಿಮ್ಮ ಜೊತೆಗಿದೆ ಎಂದು ಹೇಳಿದರು.  ಮಾಧ್ಯಮ ಮಂದಿಯೊಂದಿಗೆ ಮಾತನಾಡಿದ ಅಶೋಕ ಚವಾಣ್ ಅವರು ’ಮಹಾರಾಷ್ಟ್ರದಲ್ಲಿ ಅತ್ಯಧಿಕ ಸಂಖ್ಯೆಯ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರು ತಮ್ಮ ಸಮಸ್ಯೆಗಳನ್ನು ಸರ್ಕಾರದಿಂದ ಬಗೆ ಹರಿಸಿಕೊಳ್ಳುವ ಸಲುವಾಗಿ ಇಷ್ಟೊಂದು ದೂರ ಪಾದಯಾತ್ರೆ ಮೂಲಕ ಜಾಥಾದಲ್ಲಿ ಬಂದಿದ್ದಾರೆ ಹೊರತು ಕೇವಲ ಮಾತುಕತೆ ನಡೆಸುವುದಕ್ಕಾಗಿ ಅಲ್ಲ. ಇದು ರಾಜಕೀಯ ಉದ್ದೇಶದ ಜಾಥಾ ಅಲ್ಲ, ನೈಜ ವಿಷಯಕ್ಕಾಗಿ ನಡೆದಿರುವ ಜಾಥಾ. ಇದನ್ನು ಗಂಭಿರವಾಗಿ ಪರಿಗಣಿಸುವಂತೆ ನಾನು ಸರ್ಕಾರಕ್ಕೆ ಮನವಿ ಮಾಡುವೆ ಎಂದು  ಹೇಳಿದರು. ಈ ಮಧ್ಯೆ ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೇಹಾದ್ ಮುಸ್ಲಿಮೀನ್ ಶಾಸಕರು ’ನಾವು ಸದಾ ಕಾಲವು ನಿಮ್ಮೊಂದಿಗೆ ಇದ್ದೇವೆ. ವಿಧಾನಮಂಡಲವಿರಲಿ, ಮಾಧ್ಯಮವಿರಲಿ ಅಥವಾ ಬಹಿರಂಗವಾಗಿಯೇ ಇರಲಿ ನಾವು ನಿಮ್ಮ ಹೋರಾಟದ ಜೊತೆಗಿದ್ದೇವೆ. ರೈತರು ನೈಸರ್ಗಿಕ ಪ್ರಕೋಪಗಳಿಂದಾಗಿ ನಷ್ಟಕ್ಕೆ ಒಳಗಾದರೆ ಅವರಿಗೆ ಪರಿಹಾರ ಒದಗಿಸಬೇಕಾದ್ದು ರಾಜ್ಯದ ಹೊಣೆಯಲ್ಲವೇನು?’ ಎಂದು ಪ್ರಶ್ನಿಸಿದರು.  ‘ರೈತರು ರಾಜ್ಯದ ಬೇರುಗಳು. ರಾಜ್ಯ ಅರಳಬೇಕಿದ್ದರೆ, ಬೇರುಗಳು ಪ್ರಬಲವಾಗಿರಬೇಕು. ಈ ರೈತರ ನೋವುಗಳನ್ನು ಅರಿಯಲು ಅವರ ಕಣ್ಣುಗಳನ್ನು ನೋಡಿ ಎಂದು ನಾನು ದೇವೇಂದ್ರ ಫಡ್ನವಿಸ್ ಅವರನ್ನು ಆಗ್ರಹಿಸುತ್ತೇನೆ. ಅವರು ನಿಮ್ಮನ್ನು ಅಧಿಕಾರಕ್ಕೆ ಏರಿಸಬಲ್ಲರಾದರೆ, ನಿಮ್ಮನ್ನು ಕಿತ್ತೊಗೆಯಲೂ ಬಲ್ಲರು. ಅವರ ಬೇಡಿಕೆಗಳನ್ನು ಈಡೇರಿಸದೇ ಇದ್ದರೆ, ಅವರು ನಿಮ್ಮನ್ನು ಕಿತ್ತೊಗೆಯುವುದು ಖಂಡಿತ ಎಂದೂ ಅವರು ಎಚ್ಚರಿಸಿದರು.  ಆಹಾರ ಒದಗಿಸಿದ ಡಬ್ಬಾವಾಲರು, ಮುಂಬೈಗರು: ಮುಂಬೈಯ ಹೆಸರುವಾಸಿ ಡಬ್ಬಾವಾಲಾರು ಮತ್ತು ಮುಂಬೈ ನಿವಾಸಿಗಳು, ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಸಹಸ್ರಾರು ಸಂಖ್ಯೆಯಲ್ಲಿ ನಾಸಿಕ್ ನಿಂದ ಮುಂಬೈಗೆ ಪಾದಯಾತ್ರೆ ಮೂಲಕ ಜಾಥಾದಲ್ಲಿ ಬಂದ ರೈತರಿಗೆ ಆಹಾರ ಮತ್ತು ನೀರು ಒದಗಿಸಿದರು. ಎರಡು ತಿಂಗಳಲ್ಲಿ ಪರಿಹಾರದ ಲಿಖಿತ ಕರಡು: ರೈತರಿಗೆ ಫಡ್ನವಿಸ್ ಭರವಸೆ
ಮಂದಿನ ಎರಡು ತಿಂಗಳುಗಳ ಒಳಗಾಗಿ ರೈತರ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ಲಿಖಿತ ಕರಡು ಪ್ರಕಟಿಸುವುದಾಗಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಸರ್ಕಾರ ಒಪ್ಪಿದ್ದನ್ನು ಅನುಸರಿಸಿ, ಮುಂಬೈಯಲ್ಲಿ ಬೀಡು ಬಿಟ್ಟಿರುವ ರೈತರು ತಮ್ಮ ಪ್ರತಿಭಟನೆಯನ್ನು ಹಿಂತೆಗೆದುಕೊಂಡರು.  ಪ್ರತಿಭಟನಕಾರ ರೈತರ ೧೨ ಸದಸ್ಯರ ನಿಯೋಗವು ಸರ್ಕಾರದ ೬ ಸದಸ್ಯರ ಸಮಿತಿಯ ಜೊತೆಗೆ ಮಾತುಕತೆ ನಡೆಸಿದ ಬಳಿಕ ಸರ್ಕಾರ ರೈತರ ಬೇಡಿಕೆಗಳನ್ನು ಈಡೇರಿಸಲು ಒಪ್ಪಿತು.  ಈ ಮಧ್ಯೆ ವಿಧಾನಮಂಡಲದಲ್ಲಿ ಹೇಳಿಕೆ ನೀಡಿದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ’ಮುಂಬೈಯ ಆಜಾದ್ ಮೈದಾನದಲ್ಲಿ ಬೀಡು ಬಿಟ್ಟಿರುವ ಪ್ರತಿಭಟನಕಾರರಲ್ಲಿ ಶೇಕಡಾ ೯೫ ಮಂದಿ ಬುಡಕಟ್ಟಿನ ಜನರೇ ಹೊರತು ತಾಂತ್ರಿಕವಾಗಿ ರೈತರಲ್ಲ ಎಂದು ಹೇಳಿದ್ದು ರೈತರನ್ನು ಇನ್ನಷ್ಟು ಕೆರಳಿಸಿತು.  ಮುಖ್ಯಮಂತ್ರಿಯ ಹೇಳಿಕೆಯನ್ನು ಸುಳ್ಳು ಎಂಬುದಾಗಿ ಖಂಡಿಸಿದ ರೈತ ನಾಯಕರು, ಸರ್ಕಾರವು ಪ್ರತಿಭಟನೆಯ ವಿಶ್ವಾಸಾರ್ಹತೆಯನ್ನು ಕುಗ್ಗಿಸಲು ಯತ್ನಿಸುತ್ತಿದೆ ಎಂದು ಹೇಳಿದರು.  ಬಿಜೆಪಿ ಸಂಸದೆ ಪೂನಂ ಮಹಾಜನ್ ಅವರು ಪ್ರತಿಭಟನಕಾರ ರೈತರನ್ನು ’ನಗರ ಮಾವೋವಾದಿಗಳು ಎಂಬುದಾಗಿ ಕರೆಯುವ ಮೂಲಕ ಇನ್ನೊಂದು ವಿವಾದವನ್ನು ಹುಟ್ಟು ಹಾಕಿದರು. ಪೂನಂ ಹೇಳಿಕೆಗೆ ಎದಿರೇಟು ನೀಡಿದ ಎಡಪಕ್ಷ ನಾಯಕ ಎಂ.ಬಿ. ರಾಜೇಶ್ ಅವರು ’ಪತ್ರಿಕೆಗಳನ್ನು ಓದಿ ಎಂದು ಅವರಿಗೆ ಸಲಹೆ ಮಾಡಿದರು.  ಎಡಪಕ್ಷಗಳ ಅಂಗಸಂಸ್ಥೆಯಾದ ಅಖಿಲ ಭಾರತ ಕಿಸಾನ್ ಸಭಾ (ಎಐಕೆಎಸ್) ನೇತೃತ್ವದಲ್ಲಿ ರೈತರು ನಾಸಿಕ್ ನಿಂದ ೧೮೦ ಕಿಮೀ ದೂರವನ್ನು ೬ ದಿನಗಳ ಕಾಲ ಪಾದಯಾತ್ರೆ ಮೂಲಕ ಕ್ರಮಿಸಿ ಭಾನುವಾರ ಮುಂಬೈ ತಲುಪಿದ್ದರು.
2018: ಚೆನ್ನೈ: ಥೇಣಿ ಜಿಲ್ಲೆಯಲ್ಲಿ ಪಶ್ಚಿಮ ಘಟ್ಟ ಪ್ರದೇಶದ ಕುರಂಗನಿ ಬೆಟ್ಟಗಳಲ್ಲಿ ಭಾನುವಾರ ಸಂಜೆ ಕಾಳ್ಗಿಚ್ಚಿಗೆ ಸಿಲುಕಿದ್ದ ಬಹುತೇಕ ಮಹಿಳೆಯರಿದ್ದ ೩೯ ಮಂದಿ ಚಾರಣಿಗರ ತಂಡದಲ್ಲಿ ೧೦ ಮಂದಿ ಅಸು ನೀಗಿದ್ದಾರೆ ಎಂದು ರಾಜ್ಯ ಸರ್ಕಾರ ದೃಢ ಪಡಿಸಿತು.  ಈ ಮಧ್ಯೆ ಕಾಳ್ಗಿಚ್ಚನ್ನು ನಿಯಂತ್ರಣಕ್ಕೆ ತರಲಾಗಿದ್ದು, ಕಾಳ್ಗಿಚ್ಚಿನಲ್ಲಿ ಸಿಲುಕಿದವರ ರಕ್ಷಣೆಗಾಗಿ ಮಾ.11ರ ಭಾನುವಾರ ಸಂಜೆ ಆರಂಭಿಸಿದ್ದ ತನ್ನ ಕಾರ್ಯಾಚರಣೆಯನ್ನು ವಾಯುಪಡೆ ಈದಿನ ಪೂರ್ಣಗೊಳಿಸಿದೆ ಎಂದು ಸುದ್ದಿ ಮೂಲಗಳು ತಿಳಿಸಿದವು.  ವಿದ್ಯಾರ್ಥಿ-ವಿದ್ಯಾರ್ಥಿನಿಯರ ತಂಡ ಕೇರಳದಲ್ಲಿನ ಮುನ್ನಾರಿನಿಂದ ಯಾವುದೇ ಅನುಮತಿ ಇಲ್ಲದೆ ಥೇಣಿ ಕಡೆಗೆ ಹೊರಟಿದ್ದಾಗ ಈ ದುರಂತ ಸಂಭವಿಸಿದೆ ಎಂದು  ಪ್ರಾಥಮಿಕ ವರದಿಗಳು ತಿಳಿಸಿದವು.  ಪಶ್ಚಿಮ ಘಟ್ಟದಲ್ಲಿ, ವಿಶೇಷವಾಗಿ ಥೇಣಿ ಮತ್ತು ಪಳನಿ ಬೆಟ್ಟಗಳಲ್ಲಿ ಇದು ಕಾಳ್ಚಿಚ್ಚಿನ ಕಾಲವಾಗಿದ್ದು, ಈ ಪ್ರದೇಶದಲ್ಲಿ ಯಾವುದೇ ಚಾರಣಕ್ಕೆ ಅರಣ್ಯ ಇಲಾಖೆ ಅನುಮತಿ ನೀಡುವುದಿಲ್ಲ.  ಕಾಳ್ಗಿಚ್ಚಿಗೆ ಸಿಲುಕಿದವರ ಪೈಕಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದ್ದು ಮಧುರೈಯ ಸರ್ಕಾರಿ ರಾಜಾಜಿ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.. ಇಬ್ಬರ ಸ್ಥಿತಿಯೂ ಅತ್ಯಂತ ಗಂಭೀರವಾಗಿದೆ ಎಂದು ಆಸ್ಪತ್ರೆಯ ಮುಖ್ಯಸ್ಥ ಡಿ. ಮರುತು ಪಾಂಡ್ಯನ್ ಹೇಳಿದರು.  ಥೇಣಿಯಿಂದ ಯಾರೇ ರೋಗಿಗಳನ್ನು ವಿಮಾನದಲ್ಲಿ ಕರೆತಂದರೂ ತತ್ ಕ್ಷಣ ಚಿಕಿತ್ಸೆ ಒದಗಿಸಲು ಅನುಕೂಲವಾಗುವಂತೆ ಆಂಬುಲೆನ್ಸ್‌ಗಳನ್ನು ಮಧುರೈ ವಿಮಾನ ನಿಲ್ದಾಣದಲ್ಲಿ ಸನ್ನದ್ಧ ಸ್ಥಿತಿಯಲ್ಲಿ ಇರಿಸಿದ್ದೇವೆ ಎಂದು ಅವರು ನುಡಿದರು.  ದುರಂತದಲ್ಲಿ ಚೆನ್ನೈಯ ೬ ಮಂದಿ ಚಾರಣಿಗರು ಮತ್ತು ಇರೋಡ್ ಜಿಲ್ಲೆಯ ಮೂವರು ಚಾರಣಿಗರು ಸಾವನ್ನಪ್ಪಿದ್ದಾರೆ ಎಂದು ಥೇಣಿ ಜಿಲ್ಲಾ ಆಡ:ಳಿತ ಪ್ರಕಟಿಸಿದೆ.  ಈ ಮಧ್ಯೆ ಥೇಣಿ ಜಿಲ್ಲೆಯಲ್ಲಿ ಭಾನುವಾರ ಸಂಜೆಯಿಂದ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದ ಭಾರತೀಯ ವಾಯುಪಡೆ ತನ್ನ ಕಾರ್ಯಾಚರಣೆಯನ್ನು ಪೂರ್ಣಗೊಳಿಸಿದ್ದು ಕಾಳ್ಗಿಚ್ಚಿನ ಬಗ್ಗೆ ವರದಿಗಳು ಬಂದಿರುವ ಸಮೀಪದ ಇತರ ಪ್ರದೇಶದತ್ತ ಹೆಲಿಕಾಪ್ಟರುಗಳು ತೆರಳಿವೆ ಎಂದು ವರದಿಗಳು ಹೇಳಿದವು. ‘ಬೆಂಕಿಯನ್ನು ಆರಿಸಿದ ಬಳಿಕ ವಾಯುಪಡೆಯು ರಾಜ್ಯದ ನಾಗರಿಕ ಆಡಳಿತದ ನಿರ್ದೇಶನ ಮತ್ತು ಮನವಿಗೆ ಅನುಗುಣವಾಗಿ ಮಾತ್ರ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವುದು ಎಂದು ವಾಯುಪಡೆ ಮೂಲಗಳು ತಿಳಿಸಿದವು.  ಕಾಳ್ಗಿಚ್ಚಿನಲ್ಲಿ ಸಿಲುಕಿ ಸುಟ್ಟ ಗಾಯಗಳಿಗೆ ಒಳಗಾಗಿರುವ ಚಾರಣಿಗರ ಪ್ರಾಣ ಉಳಿಸಲು ಮಧುರೈಯ ಸರ್ಕಾರಿ ರಾಜಾಜಿ ಆಸ್ಪತ್ರೆಯಲ್ಲಿ ತೀವ್ರ ಯತ್ನ ನಡೆಸಲಾಗುತ್ತಿದೆ, ಆಸ್ಪತ್ರೆಗೆ ೯ ಚಾರಣಿಗರನ್ನು ದಾಖಲಿಸಲಾಗಿದೆ ಎಂದು ತಮಿಳುನಾಡು ಗೃಹ ಕಾರ್ಯದರ್ಶಿ ಜೆ. ರಾಧಾಕೃಷ್ಣನ್ ನುಡಿದರು.  ೬ ಮಂದಿಯನ್ನು ಖಾಸಗಿ ಆಸ್ಪತ್ರೆಗಳಾದ ಮೀನಾಕ್ಷಿ ಮಿಷನ್, ಅಪೋಲೋ ಆಸ್ಪತ್ರೆ ಮತ್ತು ಗ್ರೇಸ್ ಕೆನ್ನೆಟ್ ಫೌಂಡೇಷನ್ ಆಸ್ಪತ್ರೆಗಳಿಗೆ ಸೇರಿಸಲಾಗಿತ್ತು.  ದುರಂತದಲ್ಲಿ ಚಾರಣಿಗರ ತಂಡದ 10  ಮಂದಿ ಸಾವನ್ನಪ್ಪಿದ್ದಾರೆ ಎಂದು ತಮಿಳುನಾಡು ಸರ್ಕಾರ ಈದಿನ ದೃಢ ಪಡಿಸಿತು.  ’10 ಮಂದಿ ಅಸು ನೀಗಿದ್ದಾರೆ. ರಕ್ಷಿಸಲ್ಪಟ್ಟ ೧೭ ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.. ೧೦ ಮಂದಿಯನ್ನು ಆಸ್ಪತ್ರೆಗೆ ದಾಖಲಿಸಬೇಕಾಗಿ ಬರಲಿಲ್ಲ ಎಂದು ಕಂದಾಯ ಆಡಳಿತ ಕಮೀಷನರ್ ಕೆ. ಸತ್ಯಗೋಪಾಲ್ ವರದಿಗಾರರಿಗೆ ತಿಳಿಸಿದರು.  ಕಾಳ್ಚಿಚ್ಚನ್ನು ನಿಯಂತ್ರಣಕ್ಕೆ ತರಲಾಗಿದ್ದು, ಕಮಾಂಡೋಗಳು ಪ್ರದೇಶದಲ್ಲಿ ಉಳಿದಿರಬಹುದಾದ ಇತರ ಶವಗಳಿಗಾಗಿ ಶೋಧ ನಡೆಸಿದರು.  ದೂಳು ಹಾಗು ಬೂದಿಯಿಂದಾಗಿ ರಕ್ಷಣಾ ಕಾರ್ಯಾಚರಣೆ ವಿಳಂಬಗೊಂಡಿತು. ಸುಮಾರು ೨೫೦ ಮಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಭಾರತೀಯ ವಾಯುಪಡೆಯ ದಕ್ಷಿಣ ವಾಯು ಕಮಾಂಡಿನ ಮೂರು ಹೆಲಿಕಾಪ್ಟರುಗಳು, ೧೬ ಗರುಡ ಕಮಾಂಡೋಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು ಎಂದು ವಾಯುಪಡೆ ಮೂಲಗಳು ಹೇಳಿದವು.

2018: ಕಠ್ಮಂಡು: ೭೧ ಮಂದಿಯನ್ನು ಒಯ್ಯುತ್ತಿದ್ದ್ದ ಅಮೆರಿಕ-ಬಾಂಗ್ಲಾ ಏರ್ ಲೈನ್ಸ್ ಪ್ಯಾಸೆಂಜರ್ ವಿಮಾನವು ನೇಪಾಳದ ರಾಜಧಾನಿಯಲ್ಲಿನ ವಿಮಾನ ನಿಲ್ದಾಣದಲ್ಲಿ ಇಳಿಯಲು ಬರುತ್ತಿದ್ದಾಗ ಪತನಗೊಂಡು ಸುಮಾರು 50ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದರು  ಎಂದು ಕಠ್ಮಂಡು ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ತಿಳಿಸಿದರು.  ದುರಂತಕ್ಕೆ ಈಡಾದ ವಿಮಾನದಲ್ಲಿದ್ದ ೧೭ ಜನರನ್ನು ರಕ್ಷಿಸಲಾಯಿತು  ಎಂದು ವಿಮಾನ ನಿಲ್ದಾಣದ ವಕ್ತಾರ ಬೀರೇಂದ್ರ ಪ್ರಸಾದ್ ಶ್ರೇಷ್ಠ ಹೇಳಿದರು.  ವಿಮಾನದ ಅವಶೇಷಗಳ ಎಡೆಯಲ್ಲಿ ದುರಂತದಲ್ಲಿ ಸಾವನ್ನಪ್ಪಿದ  ಹಲವಾರು ವ್ಯಕ್ತಿಗಳ ಶವಗಳು ಪತ್ತೆಯಾಗಿವೆ ಎಂದು ಸರ್ಕಾರಿ ವಕ್ತಾರ ನಾರಾಯಣ ಪ್ರಸಾದ್ ದುವಾಡಿ ನುಡಿದರು. ನೇಪಾಳದ ಏಕೈಕ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿರುವ ಕಠ್ಮಂಡು ನಿಲ್ದಾಣದ ಪೂರ್ವ ದಿಕ್ಕಿನಲ್ಲಿ ಇರುವ ಫುಟ್ಬಾಲ್ ಮೈದಾನದಲ್ಲಿ ವಿಮಾನ ನೆಲಕ್ಕೆ ಅಪ್ಪಳಿಸಿದ್ದು ಕರಿಯ ಧೂಮ ಪ್ರದೇಶವನ್ನು ಆವರಿಸಿತು ಎಂದು ವರದಿಗಳು ಹೇಳಿದವು. ವಿಮಾನದಲ್ಲಿ ೬೭ ಪ್ರಯಾಣಿಕರು ಮತ್ತು ನಾಲ್ವರು ಸಿಬ್ಬಂದಿ ಇದ್ದರು ಎಂದು ವಿಮಾನ ನಿಲ್ದಾಣದ ವಕ್ತಾರ ಪ್ರೇಮನಾಥ್ ಥಾಕುರ್ ನುಡಿದರು. ೨೦ ಮಂದಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಯಿತು.  ಪೊಲೀಸರು ಮತ್ತು ಸೇನಾ ಸಿಬ್ಬಂದಿ ಇತರರನ್ನು ರಕ್ಷಿಸಲು ವಿಮಾನದ ಅವಶೇಷವನ್ನು ಕತ್ತರಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ ಎಂದು ಅವರು ಹೇಳಿದರು. ವಿಮಾನ ನಿಲ್ದಾಣವನ್ನು ಮುಚ್ಚಲಾಯಿತು. ನೇಪಾಳದಲ್ಲಿ ಕೆಲಸ ಮಾಡುತ್ತಿರುವ ಅಮೆರಿಕದ ಅಮಂದಾ ಸಮ್ಮೆರ್‍ಸ್ ತನ್ನ ಗೃಹ ಕಚೇರಿಯ ತಾರಸಿಯಲ್ಲಿ ನಿಂತಿದ್ದಾಗ ವಿಮಾನ ಪತನದ ದೃಶ್ಯವನ್ನು ಪ್ರತ್ಯಕ್ಷ ವೀಕ್ಷಿಸಿದರು. ’ಅದು ಅತ್ಯಂತ ಕೆಳಗೆ ಹಾರುತ್ತಿತ್ತು. ಅದು ಬೆಟ್ಟದ ಕಡೆಗೆ ಓಡಲಿದೆ ಎಂದು ನಾನು ಯೋಚಿಸಿದೆ ಎಂದು ಅವರು ನುಡಿದರು. ನೆಲಕ್ಕೆ ಮುಟ್ಟಿದಾಗ ಅದು ರನ್ ವೇಯನ್ನು ತಲುಪಿತ್ತೇ ಎಂಬುದು ತಮಗೆ ಸ್ಪಷ್ಟವಾಗ ಲಿಲ್ಲ ಎಂದು ಅವರು ಹೇಳಿದರು. ’ದಿಢೀರನೆ ಸ್ಫೋಟದ ಸದ್ದು ಕೇಳಿಸಿತು. ಮರುಕ್ಷಣದಲ್ಲೇ ಇನ್ನೊಮ್ಮೆ ಸ್ಫೋಟದ ಸದ್ದು ಕೇಳಿತು ಎಂದು ಆಕೆ ನುಡಿದರು. ಅಗ್ನಿ ಶಾಮಕ ಸಿಬ್ಬಂದಿ ಅತ್ಯಂತ ತ್ವರಿತವಾಗಿ ಬಹುಶಃ ನಿಮಿಷದ ಒಳಗಾಗಿ ಬೆಂಕಿ ಆರಿಸುವ ಕಾರ್ಯದಲ್ಲಿ ಮಗ್ನರಾದರು. ಕ್ಷಣ ಮಾತ್ರದಲ್ಲೇ ದಟ್ಟ ಹೊಗೆ ಕಠ್ಮಂಡು ಬಾನನ್ನು ಆವರಿಸಿತು ಎಂದು ಆಕೆ ಹೇಳಿದರು.  ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ವಿಮಾನ ಬಾಂಗ್ಲಾದೇಶದ ರಾಜಧಾನಿ ಢಾಕಾ ಕಡೆಯಿಂದ ಬರುತ್ತಿತ್ತು. ವಿಮಾನ ನೆಲಕ್ಕೆ ಇಳಿಯುವುದಕ್ಕೆ ಮುನ್ನ ಬೆಂಕಿ ಹೊತ್ತಿಕೊಂಡಿತು ಎಂದು ಹೇಳಿದರು.  ೨೦೧೬ರಲ್ಲಿ ಅವಳಿ ಒಟ್ಟೆರ್ ಟರ್ಬೊಪ್ರೋಪ್ ವಿಮಾನವೊಂದು ನೇಪಾಳದ ಪರ್ವತಕ್ಕೆ ಡಿಕ್ಕಿ ಹೊಡೆದು ಸಂಭವಿಸಿದ ದುರಂತದಲ್ಲಿ ವಿಮಾನದಲ್ಲಿದ್ದ ೨೩ ಮಂದಿ ಅಸು ನೀಗಿದ್ದರು.  ಎರಡು ದಿನಗಳ ಬಳಿಕ ಪುಟ್ಟ ವಿಮಾನವೊಂದು ಬೆಟ್ಟಕ್ಕೆ ಅಪ್ಪಳಿಸಿ ಇಬ್ಬರು ಪೈಲಟ್‌ಗಳು ಸಾವನ್ನಪ್ಪಿದ್ದರು. ಯುಎಸ್-ಬಾಂಗ್ಲಾ ಏರ್‌ಲೈನ್ಸ್ ಕಂಪೆನಿಯು ಅಮೆರಿಕ-ಬಾಂಗ್ಲಾದೇಶದ ಜಂಟಿ ಉದ್ಯಮ ಸಂಸ್ಥೆಯಾದ ಯುಎಸ್-ಬಾಂಗ್ಲಾ ಸಮೂಹಕ್ಕೆ ಸೇರಿದ ವಿಮಾನವಾಗಿದ್ದು ೨೦೧೪ರ ಜುಲೈ ತಿಂಗಳಿನಲ್ಲಿ ವಿಮಾನ ಹಾರಾಟವನ್ನು ಆರಂಭಿಸಿತ್ತು. 

2018: ನವದೆಹಲಿ: ಪಕ್ಷದಿಂದ ಮೇಲ್ಮನೆಗೆ ಮರುನಾಮಕರಣಗೊಳ್ಳುವಲ್ಲಿ ವಿಫಲರಾಗಿರುವ ಸಮಾಜವಾದಿ ಪಕ್ಷದ ಸಂಸತ್ ಸದಸ್ಯ ನರೇಶ್ ಅಗರ್ ವಾಲ್ ಅವರು ಸಮಾಜವಾದಿ ಪಕ್ಷವನ್ನು ತ್ಯಜಿಸಿ ಬಿಜೆಪಿ ಸೇರಿದರು. ನರೇಶ್ ಅಗರ್ ವಾಲ್ ಅವರ ಬದಲಿಗೆ ಜಯಾ ಬಚ್ಚನ್ ಅವರನ್ನು ಸಮಾಜವಾದಿ ಪಕ್ಷವು ಮರುನಾಮಕರಣ ಮಾಡಿತ್ತು. ಬಿಜೆಪಿ ಸೇರಿದ ಮೊದಲ ದಿನವೇ ಸಮಾಜವಾದಿ ಪಕ್ಷವು ’ಚಿತ್ರಗಳಲ್ಲಿ ನರ್ತಿಸುವವವರಿಗೆ ಸಮಾನವಾಗಿ ನನ್ನನ್ನು ಕಂಡಿದೆ ಎಂಬುದಾಗಿ ಹೇಳಿಕೆ ನೀಡುವ ಮೂಲಕ ಅಗರ್ ವಾಲ್ ಪಕ್ಷಕ್ಕೆ ತೀವ್ರ ಮುಜುಗರ ಉಂಟು ಮಾಡಿದರು. ಈ ಹಿಂದೆ ಕೂಡಾ ತಮ್ಮ ಹೇಳಿಕೆಗಳ ಮೂಲಕ ವಿವಾದಗಳನ್ನು ಮೈಮೇಲೆ ಎಳೆದುಕೊಂಡಿರುವ ಅಗರ್ ವಾಲ್ ಈದಿನ ಕೇಂದ್ರ ಸಚಿವ ಪೀಯೂಶ್ ಗೋಯೆಲ್ ಸೇರಿದಂತೆ ಬಿಜೆಪಿ ನಾಯಕರು ಹಾಜರಿದ್ದ ಪತ್ರಿಕಾಗೋಷ್ಠಿಯಲ್ಲಿ ಪಕ್ಷ ಸೇರ್ಪಡೆ ಸಂದರ್ಭದಲ್ಲೇ ಪಕ್ಷಕ್ಕೆ ಮುಜುಗರವಾಗುವಂತಹ ಈ ಹೇಳಿಕೆ ನೀಡಿದರು.  ‘ಚಿತ್ರಗಳಲ್ಲಿ ನರ್ತಿಸುವವರ ಜೊತೆಗೆ ನನ್ನನ್ನು ಹೋಲಿಸಲಾಗಿದೆ ಎಂದು ಅಗರ್ ವಾಲ್ ಹೇಳಿದರು.  ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಅವರು ತತ್ ಕ್ಷಣವೇ ಪಕ್ಷಕ್ಕೂ ಅಗರ್ ವಾಲ್ ಟೀಕೆಗೂ ಸಂಬಂಧವಿಲ್ಲ ಎಂದು ಸ್ಪಷ್ಟ ಪಡಿಸಿ, ತಮ್ಮ ಪಕ್ಷವು ಎಲ್ಲ ರಂಗಗಳ ಜನರನ್ನು ಗೌರವಿಸುತ್ತದೆ ಮತ್ತು ಅವರನ್ನು ರಾಜಕೀಯಕ್ಕೆ ಸ್ವಾಗತಿಸುತ್ತದೆ ಎಂದು ಹೇಳಿದರು. ಅಗರ್ ವಾಲ್ ಅವರು ಸಮಾಜವಾದಿ ಪಕ್ಷದ ಪಿತಾಮಹ ಮುಲಾಯಂ ಸಿಂಗ್ ಯಾದವ್ ಮತ್ತು ಅವರ ಸಹೋದರ ಸಂಬಂಧಿ ರಾಮ ಗೋಪಾಲ್ ಯಾದವ್ ಅವರ ಬಗ್ಗೆ ತಮ್ಮ ಒಲವು ವ್ಯಕ್ತಪಡಿಸಿದರು. ಆದರೆ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದ ಬಲ ಕುಗ್ಗಿದೆ ಎಂದು ಹೇಳಿದರು.  ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷದ ಮುಖ್ಯಸ್ಥ ಅಮಿತ್ ಶಾ ಅವರನ್ನು ಶ್ಲಾಘಿಸಿದ ಅಗರ್ ವಾಲ್, ತಮ್ಮ ಸಮುದಾಯವು ಕೇಸರಿ ಪಕ್ಷದ ಹಿಂದೆ ದೃಢವಾಗಿ ನಿಂತಿದೆ ಎಂದರು.  ತಮ್ಮ ಶಾಸಕ ಪುತ್ರ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಮತಚಲಾಯಿಸುವರು ಎಂದು ಅವರು ಹೇಳಿದರು.  ಅಗರ್ ವಾಲ್ ಅವರ ರಾಜ್ಯಸಭಾ ಸದಸ್ಯತ್ವ ಏಪ್ರಿಲ್ ೨ರಂದು ಮುಕ್ತಾಯಗೊಳ್ಳಲಿದೆ. ಕಳೆದ ವರ್ಷ ಹಿಂದು ದೇವರನ್ನು ಲೇವಡಿ ಮಾಡಿ ಅಗರ್ ವಾಲ್ ನೀಡಿದ್ದ ಹೇಳಿಕೆ ಸದನದಲ್ಲಿ ಭಾರಿ ಕೋಲಾಹಲಕ್ಕೆ ಕಾರಣವಾಗಿತ್ತು . ಬಳಿಕ ಅವರು ವಿಷಾದ ವ್ಯಕ್ತ ಪಡಿಸಿದ್ದರು. ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರು  ಟ್ವೀಟ್ ಮಾಡಿ ಅಗರ್ ವಾಲ್ ಅವರು ಜಯಾಬಚ್ಚನ್ ಬಗ್ಗೆ ವ್ಯಕ್ತ ಪಡಿಸಿದ ಅಭಿಪ್ರಾಯವನ್ನು ಖಂಡಿಸಿದರು.ಪಕ್ಷಕ್ಕೆ ಅಗರ್ ವಾಲ್ ಅವರನ್ನು ಸ್ವಾಗತಿಸಿ ಮಾಡಿದ ಟ್ವೀಟಿನಲ್ಲೇ ಅವರು ಅಗರ್ ವಾಲ್ ಅವರನ್ನು ತರಾಟೆಗೆ ತೆಗೆದುಕೊಂಡರು.


2017: ಪಣಜಿ (ಗೋವಾ): ಗೋವಾ ರಾಜ್ಯಪಾಲರಾದ ಮೃದುಲಾ  ಸಿನ್ಹ ಅವರು ಈದಿನ ರಾತ್ರಿ ಗೋವಾದ ನೂತನ ಮುಖ್ಯಮಂತ್ರಿಯಾಗಿ ಕೇಂದ್ರ ರಕ್ಷಣಾ ಸಚಿವ ಮನೋಹರ ಪರಿಕ್ಕರ್ ಅವರನ್ನು ನೇಮಕ ಮಾಡಿದರು. ಪ್ರಮಾಣ ವಚನ ಬೋಧಿಸಿದ 15 ದಿನಗಳ ಒಳಗಾಗಿ ಗೋವಾ ವಿಧಾನಸಭೆಯಲ್ಲಿ ಬಹುಮತ ಸಾಬೀತು ಪಡಿಸುವಂತೆ ಸಿನ್ಹ ಅವರು ಪರಿಕ್ಕರ್ ಅವರಿಗೆ ಸೂಚಿಸಿದರು. ಪರಿಕ್ಕರ್ ಅವರು 21 ಸದಸ್ಯರ ಬೆಂಬಲ  ಇರುವ ಬಗ್ಗೆ ದಾಖಲೆಗಳನ್ನು ನೀಡಿದ ಬಳಿಕ ರಾಜ್ಯಪಾಲರು ಈ ಕ್ರಮ ಕೈಗೊಂಡರು ಎಂದು ರಾಜಭವನ ಮೂಲಗಳು ತಿಳಿಸಿದವು.  40 ಸದಸ್ಯ ಬಲದ ವಿಧಾನಸಭೆಯಲ್ಲಿ 13 ಸದಸ್ಯರನ್ನು ಹೊಂದಿರುವ ಬಿಜೆಪಿಗೆ ಪ್ರಾದೇಶಿಕ ಪಕ್ಷಗಳ ಬೆಂಬಲದೊಂದಿಗೆ  22 ಸದಸ್ಯರ ಬಲ ಲಭಿಸಿದೆ ಎಂದು ಹೇಳಲಾಯಿತು.
2017:  ನವದೆಹಲಿ:  ಪಂಚರಾಜ್ಯ ಚುನಾವಣೆಯಲ್ಲಿ ಭಾರಿ ಗೆಲುವು ತಂದುಕೊಟ್ಟ ಬಿಜೆಪಿ
ಕಾರ್ಯಕರ್ತರಿಗೆ ಧನ್ಯವಾದ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಹೋಳಿ ಹಬ್ಬದ ಶುಭ ಕೋರಿದರು. ದೆಹಲಿಯ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಪ್ರತಿ ಹಬ್ಬವೂ ಅಭಿವೃದ್ಧಿಯ ಸಂಕೇತವಾಗಿದೆ. ಎಲ್ಲರಿಗೂ ಹೋಳಿ ಹಬ್ಬದ ಶುಭಾಶಯಗಳು. ಅಭೂತಪೂರ್ವ ಗೆಲುವು ತಂದುಕೊಟ್ಟ ಮತದಾರರಿಗೆ ಅಭಿನಂದನೆಗಳು. ಮತದಾರರು ಕೇವಲ ಮತ ಹಾಕಲು ಸೀಮಿತ ಗೊಳ್ಳಬಾರದು. ರಾಷ್ಟ್ರ ನಿರ್ವಣದತ್ತ ಎಲ್ಲರೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು. ಪ್ರಸ್ತುತ ದೇಶದ ಬಡಜನತೆಯಲ್ಲಿ ಆಶಾಭಾವನೆ ಉಂಟಾಗಿದೆ. ನನಗೆ ನವಭಾರತದ ದರ್ಶನವಾಗುತ್ತಿದೆ. ನವಭಾರತ ನಿರ್ಮಾಣಕ್ಕೆ ನೀವೇ ಕಾರಣೀಭೂತರು. ದೇಶದ ಹಿತದೃಷ್ಟಿಯಿಂದ ಮತದಾನದ ಸಂಖ್ಯೆ ಹೆಚ್ಚಾಗಬೇಕು. ಮಹಿಳೆಯರು, ಯುವಕರು ಬಯಸುವ ಸದೃಢ ನವ ರಾಷ್ಟ್ರ ನಿರ್ಮಾಣವಾಗಬೇಕು. ಉತ್ತರ ಪ್ರದೇಶದ ಫಲಿತಾಂಶ ಎಲ್ಲ ವಿಶ್ಲೇಷಣೆಗಳನ್ನು ತಲೆಕೆಳಗಾಗಿಸಿದೆ. ಬಡವರಿಗೆ ನ್ಯಾಯ ಒದಗಿಸುವ ಏಕೈಕ ಪಕ್ಷ ಬಿಜೆಪಿ ಎಂಬುದು ಅರಿವಾಗಿದೆ. ಪಂಚರಾಜ್ಯ ಚುನಾವಣೆಯಲ್ಲಿ ಮತದಾನದ ಸಂಖ್ಯೆ ಹೆಚ್ಚಾಗಿರುವುದು ಒಂದು ಶುಭ ಸಂಕೇತವಾಗಿದೆ. ಪ್ರಜೆಗಳಿಗೆ ನೀಡಿದ ಎಲ್ಲ ಭರವಸೆಗಳನ್ನು ಈಡೇರಿಸುತ್ತೇವೆ. ಬಡಜನರು ಅಕ್ಷರಸ್ಥರಾದರೆ ದೇಶದ ಅಭಿವೃದ್ಧಿ ಸಾಧ್ಯ. ಜನರ ಸೇವೆ ಮಾಡುವ ಸಮಯ ಇದಾಗಿದೆ. ದೇಶದಲ್ಲಿ ಹೆಚ್ಚು ಸಮಸ್ಯೆ ಎದುರಿಸುತ್ತಿರುವುದು ಮಧ್ಯಮವರ್ಗ. ಬಡ, ಮಧ್ಯಮ ವರ್ಗದ ಜನರ ಅಭಿವೃದ್ಧಿಗೆ ಶ್ರಮಿಸಬೇಕು. ಈ ಗೆಲುವು ನಮ್ಮ ಜವಾಬ್ದಾರಿಯನ್ನು ಹೆಚ್ಚಿಸಿದೆ ಎಂದರು.
2009: ಬೆಂಗಳೂರಿಗೆ ಸುಮಾರು 50 ಕಿ.ಮೀ ದೂರದ ದಾಬಸ್‌ಪೇಟೆ ಬಳಿಯ ಬಿಪಿಎಲ್ ಕಾರ್ಖಾನೆಗೆ ಸೇರಿದ ಮಹಾತ್ಮಗಾಂಧಿ ಮೈದಾನದಲ್ಲಿ ಬೃಹತ್ ಸಂಖ್ಯೆಯಲ್ಲಿ ನೆರೆದಿದ್ದ ಕಾರ್ಯಕರ್ತರ ಸಮ್ಮುಖದಲ್ಲಿ ತೃತೀಯ ರಂಗಕ್ಕೆ ಅಧಿಕೃತ ಚಾಲನೆ ದೊರಕಿತು. ಎಡಪಕ್ಷಗಳ ಮುಖಂಡರಾದ ಪ್ರಕಾಶ್ ಕಾರಟ್, ಎ.ಬಿ.ಬರ್ಧನ್, ಜನತಾದಳ (ಎಸ್) ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ತೆಲುಗುದೇಶಂನ ಚಂದ್ರಬಾಬು ನಾಯ್ಡು, ಬಿಎಸ್ಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸತೀಶ್ ಮಿಶ್ರಾತೆಲಂಗಾಣ ರಾಷ್ಟ್ರೀಯ ಸಮಿತಿಯ ತಾರಕ ರಾಮರಾವ್ಎಐಎಡಿಎಂಕೆ ರಾಜ್ಯಸಭಾ ಸದಸ್ಯ ಡಾ.ಮೈತ್ರೇಯನ್ಹರಿಯಾಣದ ಜನಹಿತ ಕಾಂಗ್ರೆಸ್ ಕುಲದೀಪ್ ಬಿಷ್ಣೋಯಿಫಾರ್ವಡ್ ಬಾಕ್ಲ್ ಜಿ.ಆರ್.ಶಿವಶಂಕರ್ ಸಹ ಉಪಸ್ಥಿತರಿದ್ದರು.

2009: 
ತಮ್ಮ ಜೀವಕ್ಕೇ ಅಪಾಯ ಇದ್ದಾಗ ಅಂತಹ ಅಪಾಯ ಒಡ್ಡಿದವರನ್ನು ಆತ್ಮರಕ್ಷಣೆಗಾಗಿ ಕೊಲ್ಲುವುದು ತಪ್ಪಾಗುವುದಿಲ್ಲ ಎಂಬ ಮಹತ್ವದ ತೀರ್ಪನ್ನು ಸುಪ್ರೀಂ ಕೋರ್ಟ್ ನೀಡಿತು.
 
ನ್ಯಾಯಮೂರ್ತಿ ದಲ್ವೀರ್ ಭಂಡಾರಿ ಮತ್ತು ಎಚ್ಎಸ್ಬೇಡಿ ಅವರಿದ್ದ ಪೀಠ  ತೀರ್ಪು ನೀಡಿ, 30 ವರ್ಷಗಳ ಹಿಂದೆ ವ್ಯಕ್ತಿಯೊಬ್ಬನನ್ನು ಕೊಂದ ಇಬ್ಬರನ್ನು ದೋಷಮುಕ್ತಗೊಳಿಸಿತುಎದುರಿಗಿರುವ
 
ವ್ಯಕ್ತಿ ಅವನನ್ನು / ಅವಳನ್ನು ಕೊಲ್ಲುವುದು ಅಥವಾ ತೀವ್ರ ಗಾಯಗೊಳಿಸಿ ಕೊಲ್ಲಲು 
ಪ್ರಯತ್ನಿಸುವುದು
 ನಿಶ್ಚಿತ ಎಂಬುದು ಸ್ಪಷ್ಟವಾದರೆಉದ್ದೇಶಿತ ವ್ಯಕ್ತಿ ಅಂತಹ ದಾಳಿಗೆ 
ಮುಂದಾಗದಿದ್ದರೂ
 ಎದುರಿಗಿರುವ ವ್ಯಕ್ತಿಯನ್ನು ಆತ್ಮರಕ್ಷಣೆಗಾಗಿ ಕೊಲ್ಲುವುದು ತಪ್ಪಲ್ಲ ಎಂದು ಪೀಠ ಹೇಳಿತು. 1979 ಜನವರಿ 27ರಂದು ಮೀರತ್ತಿನಲ್ಲಿ ನಡೆದ ಲಖಿ ರಾಮ್ ಎಂಬವರ ಕೊಲೆಗೆ ಸಂಬಂಧಿಸಿದಂತೆ
 
ಗಜಯ್ ಸಿಂಗ್ ಮತ್ತು ರಾಜ್ಪಾಲ್ ಸಿಂಗ್ ಎಂಬವರನ್ನು ದೋಷಮುಕ್ತಗೊಳಿಸಿದ ಕ್ರಮವನ್ನು 
ಪ್ರಶ್ನಿಸಿ
 ಉತ್ತರ ಪ್ರದೇಶ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ಸುಪ್ರೀಂ ಕೋರ್ಟ್  ತೀರ್ಪು ನೀಡಿತು.
2009: ಚಿಕ್ಕಮಗಳೂರು ಜಿಲ್ಲೆಯ ಪಶ್ಚಿಮಘಟ್ಟ ಅರಣ್ಯ ಪ್ರದೇಶದಲ್ಲಿ ಅಪರೂಪದ ಸಸ್ಯ ಹಾಗೂ
 ಪಕ್ಷಿ ತ್ತೀಚೆಗೆ ಗೋಚರಿಸಿ ಪರಿಸರಾಸಕ್ತರ ಗಮನ ಸೆಳೆಯಿತುಡ್ರಾಸೆರಾ ಎಂಬ ಕೀಟಾಹಾರಿ ಸಸ್ಯ
 ಚಾರ್ಮಾಡಿ ಘಟ್ಟ ಪ್ರದೇಶದಲ್ಲಿ ಕಂಡು ಬಂದಿತುನೋಡಲು ಅತ್ಯಾಕರ್ಷಕವಾದ  ಸಸ್ಯ ತನ್ನ
ಮೇಲಿರುವ ಲೋಳೆಯಂಥ ಸಿಹಿ ಪದಾರ್ಥದಿಂದ ಕೀಟಗಳನ್ನು ಆಕರ್ಷಿಸಿ ಸ್ವಾಹಾ ಮಾಡುತ್ತದೆ.

2009: ಬಾಹ್ಯಾಕಾಶಕ್ಕೆ ತೆರಳಬೇಕಾಗಿದ್ದ 'ಡಿಸ್ಕವರಿನೌಕೆಯ ಉಡಾವಣೆಯನ್ನು ನಾಸಾ ಕೊನೆ
ಗಳಿಗೆಯಲ್ಲಿ ರದ್ದುಪಡಿಸಿತುನೌಕೆ ಹಾಗೂ ಅದರ ಹೊರಗಿನ ಇಂಧನ ಟ್ಯಾಂಕ್ ನಡುವಿನ
ಕೊಳವೆಯಲ್ಲಿ ಇಂಧನ ಸೋರಿಕೆ ಕಂಡು ಬಂದ ಹಿನ್ನೆಲೆಯಲ್ಲಿ ನೌಕೆ ಉಡಾವಣೆಗೆ ಕೆಲವೇ 
ಗಂಟೆಗಳ
 ಮೊದಲು ನಾಸಾ ಉಡಾವಣೆಯನ್ನು ರದ್ದುಗೊಳಿಸಿತು.

2009: ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ ವಿಶ್ವವಿದ್ಯಾಲಯ ವಿಶ್ವದ 15 ರಾಷ್ಟ್ರಗಳಲ್ಲಿ ನಡೆಸಿದ
 ಅಂತಾರಾಷ್ಟ್ರೀಯ ಶಾಲಾ ಮೌಲ್ಯಮಾಪನ ಪರೀಕ್ಷೆಯಲ್ಲಿ ಸ್ಥಳೀಯ ಚಂದನ ಶಾಲೆಯ ಮೂರನೇ
ತರಗತಿ ವಿದ್ಯಾರ್ಥಿನಿ ಆರ್ರಮಿತಾ ತೋರಿದ ಕಂಪ್ಯೂಟರ್ ಜಾಣ್ಮೆಗೆ ಬಂಗಾರದ ಪದಕ ದೊರಕಿತು. 2650 ಶಾಲೆಗಳ ಸುಮಾರು 3.5 ಲಕ್ಷ ವಿದ್ಯಾರ್ಥಿಗಳು ಇಂಗ್ಲಿಷ್ಗಣಿತವಿಜ್ಞಾನ ಮತ್ತು ಕಂಪ್ಯೂಟರ್
 ಜಾಣ್ಮೆ ಪರೀಕ್ಷೆಗೆ ಕುಳಿತಿದ್ದರು ಪೈಕಿ ವಿವಿಧ ತರಗತಿ ವಿಭಾಗದಲ್ಲಿ ಪ್ರಪಂಚದ 80 ಜನ
ವಿದ್ಯಾರ್ಥಿಗಳು ಸ್ವರ್ಣ ಪದಕ ಪಡೆದಿದ್ದು ರಮಿತಾ ಕೂಡ ಅವರಲ್ಲಿ ಒಬ್ಬಳಾಗಿದ್ದಾಳೆ.

2009: ಅಮೆರಿಕದ ಮಾಜಿ ಅಧ್ಯಕ್ಷ ಜಾರ್ಜ್ ಡಬ್ಲ್ಯೂ ಬುಶ್ ಅವರ ಮೇಲೆ ಪತ್ರಿಕಾಗೋಷ್ಠಿಯಲ್ಲಿ
ಬೂಟು ಎಸೆದು ಅವಮಾನಗೊಳಿಸಿ ಜಗದ್ವಿಖ್ಯಾತನಾಗಿದ್ದ ಇರಾಕಿ ಪತ್ರಕರ್ತನಿಗೆ ಬಾಗ್ದಾದ್ 
ನ್ಯಾಯಾಲಯ
 3 ವರ್ಷಗಳ ಜೈಲು ಶಿಕ್ಷೆ ವಿಧಿಸಿತುದೂರದರ್ಶನ ಮಾಧ್ಯಮದ ವರದಿಗಾರ
ಆರೋಪಿ ಮುಂತಾಜೇರ್ ಅಲ್ ಜೈದಿಯ (30) ವಿಚಾರಣೆಪೂರ್ಣಗೊಳಿಸಿದ ಇರಾಕಿನ ಕೇಂದ್ರ 
ಕ್ರಿಮಿನಲ್
 ನ್ಯಾಯಾಲಯ  ಶಿಕ್ಷೆ ವಿಧಿಸಿದೆ ಎಂದು ಆರೋಪಿ ಪರ ವಕೀಲ ಯಾಹಿಯಾ
ಅತ್ತಾಬ್ಬಿ ಸುದ್ದಿಗಾರರಿಗೆ ತಿಳಿಸಿದರುತೀರ್ಪನ್ನು ತಾವು ಸುಪ್ರೀಂ ಕೋರ್ಟ್ನಲ್ಲಿ 
ಪ್ರಶ್ನಿಸುವುದಾಗಿಯೂ
 ಅವರು ಹೇಳಿದರುಕಳೆದ ವರ್ಷ ಡಿಸೆಂಬರ್ 14ರಂದು ಬುಶ್ ಇಲ್ಲಿಗೆ
ಆಗಮಿಸಿದ್ದಾಗ ಅವರು ನಡೆಸುತ್ತಿದ್ದ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದ ಜೈದಿಅವರತ್ತ ಬೂಟು
 ಎಸೆದಿದ್ದರು.

2008: ಬೆಂಗಳೂರು ಮತ್ತು ಹೈದರಾಬಾದಿನ ಹಾಲಿ ವಿಮಾನ ನಿಲ್ದಾಣಗಳ ಮುಚ್ಚುವಿಕೆಯನ್ನು 
ವಿರೋಧಿಸಿ
 ವಿಮಾನ ನಿಲ್ದಾಣ ಪ್ರಾಧಿಕಾರ ನೌಕರರ ಯೂನಿಯನ್ ಕರೆಯ ಮೇರೆಗೆ ದೇಶಾದ್ಯಂತ
ಅನಿರ್ದಿಷ್ಟಾವಧಿಯ `ಅಸಹಕಾರಚಳವಳಿ ಆರಂಭಗೊಂಡಿತುಆದರೆ ಮುಷ್ಕರ ಕರೆಯಹಿನ್ನೆಲೆಯಲ್ಲಿ ಸರ್ಕಾರವು ದೇಶದ 21 ಪ್ರಮುಖ ನಿಲ್ದಾಣಗಳಲ್ಲಿ 479 ವಾಯುಪಡೆ ಸಿಬ್ಬಂದಿಯನ್ನುನಿಯೋಜಿಸಿದ್ದರಿಂದ ವಿವಿಧ ಸ್ಥಳಗಳಲ್ಲಿ ವಿಮಾನ ಹಾರಾಟ ಮತ್ತು ವಿಮಾನ ನಿಲ್ದಾಣ ಸೇವೆಗಳಲ್ಲಿ
ಹೆಚ್ಚಿನ ತೊಂದರೆ ಉಂಟಾಗಲಿಲ್ಲಮುಷ್ಕರ ವಿರುದ್ಧ ಬಳಸಲಾಗಿರುವ `ಎಸ್ಮಾ'ವನ್ನು 
ಹಿಂತೆಗೆದುಕೊಳ್ಳಬೇಕು
 ಎಂದು ಆಗ್ರಹಿಸಿ ಎಡಪಕ್ಷಗಳು ಲೋಕಸಭೆಯಲ್ಲಿ ಕಲಾಪ ಸ್ಥಗಿತಗೊಳಿಸಿದವು.

2008: ಬೆಂಗಳೂರು ಮತ್ತು ಹೈದರಾಬಾದಿನಲ್ಲಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣಗಳು
ಕಾರ್ಯಾರಂಭ ಮಾಡಿದ ಮೇಲೂ ಹಳೆಯ ವಿಮಾನನಿಲ್ದಾಣಗಳನ್ನು ಮುಚ್ಚುವುದಿಲ್ಲ ಎಂದು 
ಕೇಂದ್ರ
 ಸರ್ಕಾರ ಸಂಸತ್ತಿನಲ್ಲಿ ಸ್ಪಷ್ಟಪಡಿಸಿತು.

2008: ಜೈನರ ಪ್ರಸಿದ್ಧ ಕ್ಷೇತ್ರ ತುಮಕೂರು ತಾಲ್ಲೂಕಿನ ಪಂಡಿತನಹಳ್ಳಿಯ ಶ್ರೀ ಕ್ಷೇತ್ರ 
ಮಂಧರಗಿರಿಯಲ್ಲಿ
 ಏಕಶಿಲೆಯಲ್ಲಿ ಕೆತ್ತಲಾದ 21 ಅಡಿ ಎತ್ತರದ ಚಂದ್ರಪ್ರಭ ತೀರ್ಥಂಕರರ 
ಮೂರ್ತಿಯ
 ಪ್ರತಿಷ್ಠಾಪನಾ ಸಮಾರಂಭ ಶ್ರದ್ಧಾಭಕ್ತಿಯೊಂದಿಗೆ ನೆರವೇರಿತುಮುನಿಶ್ರೀ ಪ್ರಮುಖ
ಸಾಗರ್ ಜಿ ಮಹಾರಾಜ್ ಅವರು ಪ್ರತಿಷ್ಠಾಪನೆಗೊಂಡ ಮೂರ್ತಿಗೆ ಧಾರ್ಮಿಕ ಪೂಜಾ ವಿಧಿಗಳನ್ನು
 ಪೂರೈಸಿದರು.

2008: ನಾಗಾಲ್ಯಾಂಡಿನ ನೂತನ ಮುಖ್ಯಮಂತ್ರಿ ನೈಫಿಯು ರಿಯೊ ಮತ್ತು ಇತರ 11 ಮಂದಿ
 ಸಚಿವರನ್ನು ಒಳಗೊಂಡ ನೂತನ ಸರ್ಕಾರ ಕೊಹಿಮಾದಲ್ಲಿ ಅಧಿಕಾರ ಸ್ವೀಕರಿಸಿತುನಾಗಾಲ್ಯಾಂಡ್
ಪ್ರಜಾಸತ್ತಾತ್ಮಕ ಮೈತ್ರಿಕೂಟದಲ್ಲಿರುವ (ಡಿಎಎನ್ನಾಗಾಲ್ಯಾಂಡ್ ಪೀಪಲ್ಸ್ ಫ್ರಂಟಿನ (ಎನ್ ಪಿ ಎಫ್) 8, ಎನ್ ಸಿ ಪಿ ಮತ್ತು ಬಿಜೆಪಿಯ ತಲಾ ಒಬ್ಬರು ಹಾಗೂ ಒಬ್ಬರು ಪಕ್ಷೇತರ ಶಾಸಕರು ಅಧಿಕಾರ
ಸ್ವೀಕರಿಸಿದರುರಾಜ್ಯಪಾಲ ಕೆಶಂಕರನಾರಾಯಣನ್ ಅವರು ಪ್ರಮಾಣವಚನ ಬೋಧಿಸಿದರು.

2008: ಆಸ್ಟ್ರೇಲಿಯಾದಲ್ಲಿ 17 ಜನರ ಸಾವಿಗೆ ಕಾರಣರಾದ ಆರೋಪ ಎದುರಿಸುತ್ತಿರುವ ಭಾರತೀಯ
 ಮೂಲದ ವೈದ್ಯ ಜಯಂತ್ ಪಟೇಲ್ ಅವರನ್ನು ಅಮೆರಿಕದ ಓರೆಗಾನ್ ರಾಜ್ಯದಲ್ಲಿನ ಅವರ
ಮನೆಯಲ್ಲಿ ಎಫ್ ಬಿ  ಅಧಿಕಾರಿಗಳು ಬಂಧಿಸಿದರುಆಸ್ಟ್ರೇಲಿಯಾದ ಕ್ವೀನ್ಸ್ ಲ್ಯಾಂಡ್ ರಾಜ್ಯದ 
ಬುಂಡಬರ್ಗ್
 ಬೇಸ್ ಆಸ್ಪತ್ರೆಯಲ್ಲಿ 2003ರಲ್ಲಿ ವೈದ್ಯ ವೃತ್ತಿ ಆರಂಭಿಸಿದ್ದ ಪಟೇಲ್ (57), 2005ರಲ್ಲಿ ರೋಗಿಗಳ ಸಾವಿಗೆ ಸಂಬಂಧಿಸಿದಂತೆ ತನಿಖೆ ಆರಂಭಗೊಂಡ ನಂತರ ಅಮೆರಿಕಕ್ಕೆ
 ತಪ್ಪಿಸಿಕೊಂಡು ಹೋಗಿದ್ದರುಪಟೇಲ್ ವಿರುದ್ಧ 3 ಹತ್ಯೆ, 3 ದೇಹಗಳಿಗೆ ಹಾನಿ ಉಂಟು ಮಾಡಿದಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ 2 ಪ್ರಕರಣಗಳು, 5 ವಂಚನೆ ಪ್ರಕರಣಗಳು ಸೇರಿ ಇತರ ಮೊಕದ್ದಮೆಗಳನ್ನು ಹೂಡಲಾಗಿದೆ ಎಂದು ಓರೆಗಾನ್ ಸರ್ಕಾರಿ
ವಕೀಲರು ತಿಳಿಸಿದರುಆಸ್ಟ್ರೇಲಿಯಾ ಮಾಧ್ಯಮಗಳಿಂದ ಡಾಡೆತ್ ಎಂದು ಅನ್ವರ್ಥ ನಾಮ ಪಡೆದ ಪಟೇಲ್ ಅವರು ಗುಜರಾತಿನ ಜಾಮ್ ನಗರದವರು. 1977ರಲ್ಲಿ ಅಮೆರಿಕಕ್ಕೆ ತೆರಳಿ ನ್ಯೂಯಾರ್ಕ್ ಹಾಗೂ ಓರೆಗಾನಿನಲ್ಲಿ ವೈದ್ಯಕೀಯ ವೃತ್ತಿ 
ಆರಂಭಿಸಿದರು
ಕೆಲದಿನಗಳಲ್ಲಿಯೇ ಇವರ ಮೇಲೆ ವೈದ್ಯ ವೃತ್ತಿ ನಡೆಸದಂತೆ ನಿಷೇಧ ಹೇರಲಾಯಿತು
ಇದಾದ ನಂತರ ಅವರು ಆಸ್ಟ್ರೇಲಿಯಾಕ್ಕೆ ಪಯಣ ಬೆಳೆಸಿದ್ದರುಕ್ವೀನ್ಸ್ ಲ್ಯಾಂಡ್ ಅಟಾರ್ನಿ
ಜನರಲ್ ಇಲಾಖೆ ಪ್ರಕಾರ ತಲೆಮರೆಸಿಕೊಂಡಿದ್ದ ಜಯಂತ್ ಪತ್ತೆಗಾಗಿ ಆಸ್ಟ್ರೇಲಿಯಾ ಸರ್ಕಾರ
2006-07ರಲ್ಲಿ 5,61,000 ಡಾಲರ್ ಹಾಗೂ 2007-08ರಲ್ಲಿ 6,90,000 ಡಾಲರ್ ಹೀಗೆ ಒಟ್ಟು 12,51,000
ಡಾಲರ್ ವೆಚ್ಚ ಮಾಡಿದೆಆದರೆ ಡಾಜಯಂತ್ ಬಗ್ಗೆ ಆಸ್ಟ್ರೇಲಿಯಾ ಮಾಧ್ಯಮಗಳು ಮಾಡಿರುವುದು
ಅಪಪ್ರಚಾರ ಎಂಬುದು ಜಯಂತ್ ಸ್ನೇಹಿತರ ಹೇಳಿಕೆ.

2008: ಪಾಕಿಸ್ಥಾನ ಪೀಪಲ್ಸ್ ಪಾರ್ಟಿಯ ಸಹ-ಅಧ್ಯಕ್ಷ ಆಸೀಫ್ ಅಲಿ ಜರ್ದಾರಿ ಅವರು ತಮ್ಮ ವಿರುದ್ಧದ ವಂಚನೆ ಪ್ರಕರಣವೊಂದರಿಂದ
 ಖುಲಾಸೆಯಾದರುಇಸ್ಲಾಮಾಬಾದಿನ ಭ್ರಷ್ಟಾಚಾರ ವಿರೋಧಿ ನ್ಯಾಯಾಲಯವು ಜರ್ದಾರಿ 
ಅವರನ್ನು
  ಪ್ರಕರಣದಿಂದ ಮುಕ್ತಗೊಳಿಸಿತುಆದರೆ  ಸಂಬಂಧದ ಅಂತಿಮ ತೀರ್ಪನ್ನು
ಕಾದಿರಿಸಿತುಹಿಂದಿನವಾರವಷ್ಟೇ ರಾವಲ್ಪಿಂಡಿ ಭ್ರಷ್ಟಾಚಾರ ವಿರೋಧಿ ನ್ಯಾಯಾಲಯ ಜರ್ದಾರಿ
ವಿರುದ್ಧದ ಐದು ಪ್ರಕರಣಗಳನ್ನು ಕೈಬಿಟ್ಟಿತ್ತು.

2008: ಶ್ರೀಲಂಕಾ ವಿದೇಶಾಂಗ ಸಚಿವ ಲಕ್ಷ್ಮಣ ಕದಿರ್ ಗಮಾರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ
ಎಲ್ ಟಿ ಟಿ  ನಾಯಕ ವಿಫ್ರಭಾಕರನ್ ಮತ್ತು ಇತರ ನಾಲ್ವರ ವಿರುದ್ಧ ಕೊಲಂಬೋ 
ಹೈಕೋರ್ಟಿನಲ್ಲಿ
 ಆರೋಪಪಟ್ಟಿ ಸಲ್ಲಿಸಲಾಯಿತುಪ್ರಭಾಕರನ್ ಜೊತೆಗೆ ಎಲ್ ಟಿ ಟಿ  ಗುಪ್ತದಳದ 
ನಾಯಕ
 ಪೊಟ್ಟು ಅಮ್ಮನ್ ಮತ್ತು ಇತರ ಮೂವರು ಕಾರ್ಯಕರ್ತರ ವಿರುದ್ಧವೂ ಆರೋಪ ಪಟ್ಟಿ
ಸಲ್ಲಿಸಲಾಯಿತು. 2005 . 12ರಂದು ಕದಿರ್ ಗಮಾರ್ ಗುಂಡಿನ ದಾಳಿಯಲ್ಲಿ ಹತರಾಗಿದ್ದರು.

2007: ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಬಳಸಿಕೊಂಡು ಮನೆಯಲ್ಲಿನ ಕಂಪ್ಯೂಟರ್ ಹಾಗೂ 
ಅಂತರ್ಜಾಲದ
 ಮೂಲಕ ಕರ್ನಾಟಕ ರಾಜ್ಯ ರಸ್ತೆಸಾರಿಗೆ ಸಂಸ್ಥೆಯ ಬಸ್ ಟಿಕೆಟ್ ಕಾಯ್ದಿರಿಸುವ ಹೈಟೆಕ್ `ಅವತಾರ್' (ಎನಿ ವೇರ್ ಎನಿ ಟೈಮ್ ಅಡ್ವಾನ್ಸ್ ರಿಸರ್ವೇಷನ್ಯೋಜನೆಗೆ ಸಾರಿಗೆ ಸಚಿವ
ಎನ್ಚಲುವರಾಯಸ್ವಾಮಿ ಬೆಂಗಳೂರಿನಲ್ಲಿ ಚಾಲನೆ ನೀಡಿದರುಮನೆಯಲ್ಲೇ ಮೌಸ್ ಕ್ಲಿಕ್ 
ಮಾಡುವ
 ಮೂಲಕ ಕಂಪ್ಯೂಟರಿನಿಂದಲೇ ಎಲ್ಲಿಂದ ಎಲ್ಲಿಗೆ ಯಾವಾಗ ಬೇಕಾದರೂ  
ಯೋಜನೆಯನ್ವಯ
 ಟಿಕೆಟ್ ಮುಂಗಡ ಕಾಯ್ದಿರಿಸಬಹುದು.

2007: ಇಸ್ರೋ ನಿರ್ಮಿತ ಭಾರಿ ತೂಕದ ಇನ್ಸಾಟ್ 4 ಬಿ ಉಪಗ್ರಹವನ್ನು ಫ್ರೆಂಚ್ ಗಯಾನಾದ
ಕೌರುವಿನಿಂದ ಏರಿಯನ್ 5 ರಾಕೆಟ್ ಮೂಲಕ ಈದಿನ ಮುಂಜಾನೆ ಗಗನಕ್ಕೆ ಯಶಸ್ವಿಯಾಗಿ
 ಉಡಾವಣೆ ಮಾಡಲಾಯಿತುಇನ್ಸಾಟ್ ಸರಣಿಯ ಎರಡನೇ ಉಪಗ್ರಹವಾದ ಇನ್ಸಾಟ್ 4 ಬಿ
ಅಧಿಕ ಶಕ್ತಿಯ 12 ಕೆಯು ಬ್ರ್ಯಾಂಡ್ ಹಾಗೂ 12 ಸಿಬ್ರ್ಯಾಂಡ್ ಟ್ರಾನ್ಸ್ ಪಾಂಡರುಗಳನ್ನು 
ಹೊಂದಿದೆ
 ಉಪಗ್ರಹದಿಂದ ಮನೆಗೆ ನೇರ ಪ್ರಸಾರ (ಡಿಟಿಎಚ್), ಟಿ.ವಿಸೇವೆಹಾಗೂ
ಸಂಪರ್ಕಕ್ಕೆ ಅನುಕೂಲವಾಗಲಿದೆ.

2006: ತಮಿಳುನಾಡಿನ ಖ್ಯಾತ ನಟಿಗಾಯಕಿ ಸುಂದರಬಾಯಿ (83) ನಿಧನರಾದರುಮೂಲತಃ
ತಂಜಾವೂರಿನವರಾದ ಸುಂದರಬಾಯಿ 180ಕ್ಕೂ ಹೆಚ್ಚು ಚಿತ್ರಗಳಲ್ಲಿ ಪ್ರಧಾನ ಪಾತ್ರದಲ್ಲಿ
ಅಭಿನಯಿಸಿದ್ದರುತಮಿಳುನಾಡು ಸರ್ಕಾರನೀಡುವ ಕಲೈ ಮಾಮನಿ ಪ್ರಶಸ್ತಿ ಸೇರಿದಂತೆ ಹಲವಾರು 
ಪ್ರಶಸ್ತಿಗಳಿಗೆ
 ಅವರು ಭಾಜನರಾಗಿದ್ದರು.

2006: ಏಕದಿನಗಳ ಪಂದ್ಯಗಳ ಇತಿಹಾಸದಲ್ಲಿ ಎಂದೂ ದಾಟಲಾಗದ 400 ಮಾಯಾ ಸಂಖ್ಯೆಯನ್ನು
 ಮುರಿದು 50 ಓವರುಗಳಲ್ಲಿ ಆಸ್ಟ್ರೇಲಿಯಾ ಎಸೆದ ವಿಶ್ವದಾಖಲೆಯ 434 ರನ್ನುಗಳ ಸವಾಲನ್ನು
ಧೀರೋಧಾತ್ತವಾಗಿ ಎದುರಿಸಿ, 9 ವಿಕೆಟ್ ನಷ್ಟಕ್ಕೆ 438 ರನ್ ಗಳಿಕೆಯೊಂದಿಗೆ ವಿಶ್ವದಾಖಲೆ ಸ್ಥಾಪನೆಯ ಉತ್ತರ ನೀಡುವ ಮೂಲಕ 
ಮೂಲಕ
 ದಕ್ಷಿಣ ಆಫ್ರಿಕವು 3-2 ಅಂತರದಲ್ಲಿ ಐದು ಪಂದ್ಯಗಳ ಸರಣಿ ಗೆದ್ದುಕೊಂಡಿತು. 1996 ವಿಶ್ವ ಕಪ್ ಕ್ರಿಕೆಟಿನಲ್ಲಿ ಶ್ರೀಲಂಕಾ 5 ವಿಕೆಟ್ ಕಳೆದುಕೊಂಡು 398 ರನ್ ಗಳಿಸಿದ್ದು ಏಕದಿನ 
ಪಂದ್ಯಗಳಲ್ಲಿ
 ಅತ್ಯಧಿಕ ಮೊತ್ತವಾಗಿತ್ತು.

2006: ಅತ್ಯಧಿಕ ಲಿಮ್ಕಾ ದಾಖಲೆ ಮಾಡಿ ಮೂರು ಬಾರಿ ಗಿನ್ನೆಸ್ ದಾಖಲೆ ಸೃಷ್ಟಿಸಿರುವ ಗುಜರಾತಿನ
ಸೂರತ್ ನಗರದ ಫಿಟ್ನೆಸ್ ಗುರು ಆರ್ಜೀಸ್ ಕ್ಲಬ್ ಎಕ್ಸೆಲ್ ನಿರ್ದೇಶಕ ಕನ್ನಡಿಗ ರಾಜ್ ಅಶೋಕ ಶೆಟ್ಟಿಅವರು ಸೂರತ್ ನಗರದ 140ರಿಂದ 180 ಕೆ.ಜಿತೂಕದ ಐವತ್ತು ಸ್ಥೂಲಕಾಯದವರಿಗೆ ಕೇವಲ 6 
ತಿಂಗಳ
 ಅವದಿಯಲ್ಲಿ 50ರಿಂದ 60 ಕೆ.ಜಿ.ಗಳಷ್ಟು ತೂಕ ಇಳಿಸಿ ಮತ್ತೆ ಲಿಮ್ಕಾ ರಾಷ್ಟ್ರೀಯ ದಾಖಲೆಗೆ
ಸೇರ್ಪಡೆಯಾದರು.

2006: ನ್ಯಾಯಾಧೀಶರಿಗೆ ಮೈಲಾರ್ಡ್ ಎಂದು ಸಂಬೋಧಿಸುವುದನ್ನು ನಿಲ್ಲಿಸಿ ಗೌರವಾನ್ವಿತ 
ನ್ಯಾಯಾಲಯ
 ಅಥವಾ ಸರ್ ಪದ ಬಳಕೆಯ ತೀರ್ಮಾನವನ್ನು ರಾಜ್ಯ ವಕೀಲರ ಸಂಘದ ಸಭೆ 
ಕೈಗೊಂಡಿತು
ಅಖಿಲ ಭಾರತ ವಕೀಲರ ಸಂಘವೂ ಇಂತಹ ತೀರ್ಮಾನ ಕೈಗೊಂಡಿದ್ದುಎಲ್ಲ
ಸಂಘಗಳ ಅಭಿಪ್ರಾಯದ ಬಳಿಕ ಅಂತಿಮ ತೀರ್ಮಾನ ಆಗುವುದುನ್ಯಾಯಾಧೀಶರನ್ನು ಮೈಲಾರ್ಡ್
ಎಂದು ಸಂಬೋಧಿಸುವ ಸಂಪ್ರದಾಯ ನಿಲ್ಲಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿ 
ವಿಚಾರಣೆ
 ಕಾಲದಲ್ಲಿ ಸುಪ್ರೀಂಕೋರ್ಟ್ ಇದನ್ನು ವಕೀಲರ ಸಂಘ ನಿರ್ಧರಿಸಬೇಕು ಎಂದು
ಹೇಳಿತ್ತುರಾಜ್ಯದಲ್ಲಿ 1976ರಲ್ಲೇ  ಬಗ್ಗೆ ತೀರ್ಮಾನವಾಗಿತ್ತುಆದರೆ ನ್ಯಾಯವಾದಿಯೊಬ್ಬರು
ತುಂಬಿದ ನ್ಯಾಯಾಲಯದಲ್ಲಿ ಮೈ ಲಾರ್ಡ್ ನಿಮ್ಮನ್ನು ಮೈಲಾರ್ಡ್ ಎಂದು
 ಸಂಬೋಧಿಸುವುದನ್ನು ನಿಲ್ಲಿಸಲು ತೀರ್ಮಾನಿಸಿದ್ದೇವೆ ಎಂದು ಹೇಳುವ ಮೂಲಕ ವಿಷಯಕ್ಕೆ
ತೆರೆ ಬಿದ್ದಿತ್ತು.

2006: ಹದಿನೇಳು ವರ್ಷಗಳ ಹಿಂದೆ 1989ರಲ್ಲಿ ನಡೆದ ಆಗಿನ ಕೇಂದ್ರ ಗೃಹ ಸಚಿವ ಮುಫ್ತಿ 
ಮಹಮ್ಮದ್
 ಸಯೀದ್ ಪುತ್ರಿ ರುಬಿಯಾ ಸಯೀದ್ ಅವರ ವಿವಾದಾತ್ಮಕ ಅಪಹರಣ ಪ್ರಕರಣಕ್ಕೆ
ಸಂಬಂಧಿಸಿದಂತೆ 9 ಆರೋಪಿಗಳ ಪೈಕಿ 6 ಜನರ ವಿರುದ್ಧ ಜಮ್ಮು ಕಾಶ್ಮೀರದ ವಿಶೇಷ ಟಾಡಾ ಮತ್ತು
ಪೋಟಾ ನ್ಯಾಯಾಲಯ ಜಾಮೀನುರಹಿತ ಬಂಧನ ಆದೇಶಗಳನ್ನು ಹೊರಡಿಸಿತುಜಮ್ಮುವಿನ
ಟಾಡಾ/ಪೋಟಾ ವಿಶೇಷ ನ್ಯಾಯಾಲಯದ ಅಧ್ಯಕ್ಷ ಎನ್ಡಿವಾನಿ ಅವರು ಜಾವೇದ್ ಮೀರ್
ಮಹಮ್ಮದ್
 ರಫೀಕ್ ಪಹ್ಲೂವಜಾಹತ್ ಶಬೀರ್ಮೆಹ್ರಾಜ್-ಉದ್ದಿನ್ಇಕ್ಬಾಲ್ ಬಂಡು ಮತ್ತು ಯಾಕೂಬ್ ಪಂಡಿತ್ ಅವರ ವಿರುದ್ಧಬಂಧನ 
ವಾರಂಟ್ಗಳನ್ನು
 ಹೊರಡಿಸಿದರುರುಬಿಯಾ ಬಿಡುಗಡೆ ಸಲುವಾಗಿ ಆಗಿನ ವಿ.ಪಿಸಿಂಗ್ 
ನೇತೃತ್ವದ
 ಸರ್ಕಾರ ಜೆಕೆಎಲ್ಎಫ್ ಉಪ ದಂಡನಾಯಕ ಅಬ್ದುಲ್ ಹಮೀದ್ ಷೇಕ್ 
ಸೇರಿದಂತೆ
 ಐವರು ಉಗ್ರಗಾಮಿಗಳನ್ನು ಬಿಡುಗಡೆ ಮಾಡಿತ್ತು.

2006: ಎರಡು ವರ್ಷಗಳ ಹಿಂದೆ ಬಿಡುಗಡೆಯಾದ `ಗರ್ವ್ - ಪ್ರೈಡ್ ಅಂಡ್ ಆನರ್ಚಿತ್ರದಲ್ಲಿ
ನಟಿಸಿದ್ದಕ್ಕಾಗಿ ತನಗೆ ಬರಬೇಕಾಗಿದ್ದ 26.42 ಲಕ್ಷ ರೂಪಾಯಿಗಳ ಸಂಭಾವನೆ ವಸೂಲಿಗಾಗಿ
 ಚಿತ್ರ ನಟ ಸಲ್ಮಾನ್ ಖಾನ್ ಸಿನೆವಿಸ್ಟಾಸ್ ಲಿಮಿಟೆಡ್ಡಿನ ನಿರ್ದೇಶಕರಾದ ಸುನಿಲ್ ಮೆಹ್ತಾ ಮತ್ತು
 ಪ್ರೇಮ್ ಕಿಷನ್ ವಿರುದ್ಧ ಮುಂಬೈಯ ಮ್ಯಾಜಿಸ್ಟ್ರೇಟ್ ಕೋರ್ಟಿನಲ್ಲಿ 8 ಕ್ರಿಮಿನಲ್ 
ಮೊಕ್ದದಮೆಗಳನ್ನು
 ದಾಖಲಿಸಿದರು. `ಗರ್ವ್ ಚಿತ್ರದಲ್ಲಿ ಸಲ್ಮಾನ್ ಖಾನ್ ನಾಯಕನಟನ ಪಾತ್ರ ವಹಿಸಿದ್ದರುಅವರಿಗೆ 26.42 ಲಕ್ಷ
ರೂಪಾಯಿ ಸಂಭಾವನೆಯ ಭರವಸೆ ನೀಡಲಾಗಿತ್ತು ಸಂಬಂಧ 8 ಚೆಕ್ಕುಗಳನ್ನುನೀಡಲಾಗಿತ್ತು.
 ಆದರೆ ಅವೆಲ್ಲವೂ ಬ್ಯಾಂಕಿನಲ್ಲಿ ತಿರಸ್ಕೃತಗೊಂಡಿದ್ದವು ಸಂಬಂಧ ಕಳುಹಿಸಿದ ನೋಟಿಸಿಗೆ
 ಉತ್ತರ ಬಾರದೇ ಹೋದಾಗ ಸಲ್ಮಾನ್ ಖಾನ್ ನ್ಯಾಯಾಲಯದ ಮೆಟ್ಟಲೇರಿದರು.

1993: ಇಪ್ಪತ್ತೊಂಬತ್ತು ಮಹಡಿಗಳ ಮುಂಬೈ ಷೇರು ವಿನಿಮಯ ಕಟ್ಟಡ ಮತ್ತು ಏರ್ ಇಂಡಿಯಾ 
ಕಟ್ಟಡ
 ಸೇರಿದಂತೆಮುಂಬೈಯಲ್ಲಿ ಹಲವೆಡೆ ಸರಣಿ ಬಾಂಬ್ ಸ್ಫೋಟಗಳು ಸಂಭವಿಸಿದವು.
 ಸ್ಫೋಟಗಳಲ್ಲಿ 317 ಜನ ಮೃತರಾಗಿ 1100ಕ್ಕೂ ಹೆಚ್ಚು ಮಂದಿ ಗಾಯಗೊಂಡರುಭಾರತದ
ವಾಣಿಜ್ಯ ರಾಜಧಾನಿಯಾದ ಮುಂಬೈಯಲ್ಲಿ  ಸ್ಫೋಟಗಳಿಂದಾಗಿ 250 ಮಿಲಿಯನ್ ಡಾಲರುಗಳಿಗೂ ಹೆಚ್ಚಿನ ನಷ್ಟ ಸಂಭವಿಸಿತು.

1954: ನವದೆಹಲಿಯಲ್ಲಿ ಸಾಹಿತ್ಯ ಅಕಾಡೆಮಿ ಸ್ಥಾಪನೆಗೊಂಡಿತು.

1949: ಚಿತ್ರಕಲಾವಿದಕಲಾ ಸಂಘಟಕಕಲಾಶಿಕ್ಷಕರಾದ ಗಣೇಶ ಸೋಮಯಾಜಿ ಅವರು
ಬಿಸುಬ್ರಾಯ ಸೋಮಯಾಜಿಶಾರದಮ್ಮ ದಂಪತಿಯ ಮಗನಾಗಿ ಬಂಟ್ವಾಳದಲ್ಲಿ ಜನಿಸಿದರು.

1932: ಕಲಾವಿದ ಈಶ್ವರಪ್ಪ ಶಾಸ್ತ್ರಿ ಜಿ.ಆರ್ಜನನ.

1930: ಮಹಾತ್ಮಾ ಗಾಂಧಿಯವರು ಉಪ್ಪು ಉತ್ಪಾದನಯಲ್ಲಿ ಏಕಸ್ವಾಮ್ಯ ಸ್ಥಾಪಿಸುವ ಬ್ರಿಟಿಷ್
 ಕಾನೂನು ಉಲ್ಲಂಘಿಸಲು 240 ಮೈಲು ದೂರದ `ದಾಂಡಿಯಾತ್ರೆಪ್ರತಿಭಟನೆಗೆ ಚಾಲನೆ ನೀಡಿದರು.

1925: ಚೀನಾದ ಕುವೋಮಿಂಟಾಂಗ್ನ (ನ್ಯಾಷನಲಿಸ್ಟ್ ಪಾರ್ಟಿಕ್ರಾಂತಿಕಾರಿ ನಾಯಕ ಸನ್ ಯಾತ್-ಸೆನ್ ಅವರು ಪೆಕಿಂಗಿನಲ್ಲಿ ತಮ್ಮ 58ನೇ ವಯಸಿನಲ್ಲಿ ಮೃತರಾದರುಆಧುನಿಕ ಚೀನಾದ ಜನಕ 
ಎಂದೇ
 ಇವರು ಖ್ಯಾತರಾಗಿದ್ದಾರೆ.

1888: ಕಲಾವಿದ ಬೆಳಕವಾಡಿ ಶ್ರೀನಿವಾಸ ಅಯ್ಯಂಗಾರ್ ಜನನ.

1868: ಅಡಾಲ್ಫ್ ಸೈಮನ್ ಓಚ್ಸ್ (1868-1935) ಹುಟ್ಟಿದ ದಿನಅಮೆರಿಕನ್ ಪ್ರಕಾಶಕನಾದ ಈತ
`ನ್ಯೂಯಾರ್ಕ್ ಟೈಮ್ಸ್ಪತ್ರಿಕೆಯನ್ನು ವಿಶ್ವದ ಪ್ರತಿಷ್ಠಿತ ಸುದ್ದಿ ಪತ್ರಿಕೆಗಳಲ್ಲಿ ಒಂದನ್ನಾಗಿ ಬೆಳೆಸಿದ.

1864: ಡಬ್ಲ್ಯೂ ಎಚ್ ಆರ್ ರಿವರ್ಸ್ (1864-1922) ಹುಟ್ಟಿದ ದಿನಇಂಗ್ಲಿಷ್ ವೈದ್ಯಕೀಯ 
ಮನಃಶಾಸ್ತ್ರಜ್ಞನಾದ
 ಈತ ಭಾರತದ ತೋಡರ ಕುರಿತ ಅಧ್ಯಯನಕ್ಕಾಗಿ ಖ್ಯಾತಿ ಪಡೆದ.

1832: ಚಾರ್ಲ್ಸ್ ಕನ್ಹಿಂಗ್ಹ್ಯಾಮ್ ಬಾಯ್ಕಾಟ್ (1832-1897) ಹುಟ್ಟಿದ ದಿನಬ್ರಿಟಿಷ್ ಸೇನಾಕ್ಯಾಪ್ಟನ್ 
ಆದ
 ಈತನ ಹೆಸರಿನಿಂದಲೇ `ಬಾಯ್ಕಾಟ್' (ಬಹಿಷ್ಕಾರಶಬ್ದ ಹುಟ್ಟಿಕೊಂಡಿತು.

1831: ಕ್ಲೆಮೆಂಟ್ ಸ್ಟುಡ್ ಬೇಕರ್ (1831-1901) ಹುಟ್ಟಿದ ದಿನಅಮೆರಿಕದ  ವ್ಯಕ್ತಿ ಕುದುರೆ 
ಎಳೆಯುವ
 ವಾಹನಗಳ ಬಹುದೊಡ್ಡ ಉತ್ಪಾದಕನಾಗಿ ಜಾಗತಿಕ ಖ್ಯಾತಿ ಪಡೆದಮುಂದೆ 
ಆಟೋಮೊಬೈಲುಗಳ
 ಉತ್ಪಾದನೆಯಲ್ಲೂ ಮುಂಚೂಣಿಯ ನಾಯಕನಾಗಿ ಬೆಳೆದ. 
(
ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Post a Comment