ನಾನು ಮೆಚ್ಚಿದ ವಾಟ್ಸಪ್

Friday, October 30, 2020

ಇಂದಿನ ಇತಿಹಾಸ History Today ಅಕ್ಟೋಬರ್ 30

 ಇಂದಿನ ಇತಿಹಾಸ  History Today ಅಕ್ಟೋಬರ್ 30

2020: ಕೆವಾಡಿಯಾ, ಗುಜರಾತ್: ಗುಜರಾತಿನ ನರ್ಮದಾ ಜಿಲ್ಲೆಯ ಕೆವಾಡಿಯಾ ಗ್ರಾಮದಲ್ಲಿರುವ ಏಕತಾ ಪ್ರತಿಮೆಯ ಬಳಿ ಔಷಧೀಯ ಸಸ್ಯ ಮತ್ತು ಗಿಡಮೂಲಿಕೆಗಳ ಉದ್ಯಾನವನ  ಆರೋಗ್ಯ ವನ’ವನ್ನು ಪ್ರಧಾನಿ ನರೇಂದ್ರ ಮೋದಿ ಅವರು 2020 ಅಕ್ಟೋಬರ್ 30 ಶುಕ್ರವಾರ ಉದ್ಘಾಟಿಸಿದರು. ‘ಆರೋಗ್ಯ ವನ’ (ಆರೋಗ್ಯ ಅರಣ್ಯ) ಸುಮಾರು ೧೭ ಎಕರೆ ಪ್ರದೇಶದಲ್ಲಿ ವ್ಯಾಪಿಸಿದೆ, ಇದು ಮಾನವರ ಯೋಗಕ್ಷೇಮದಲ್ಲಿ ಪ್ರಮುಖ ಪಾತ್ರವಹಿಸುವ ವ್ಯಾಪಕ ಶ್ರೇಣಿಯ ಔಷಧೀಯ ಸಸ್ಯಗಳನ್ನು ಹೊಂದಿದೆ ಎಂದು ಅಧಿಕಾರಿಗಳು ಹೇಳಿಕೆಯಲ್ಲಿ ತಿಳಿಸಿದರು. ಗುಜರಾತ್ ಜನಪ್ರಿಯ ಪ್ರವಾಸೀ ಆಕರ್ಷಣೆಯಾಗಿ ಹೊರಹೊಮ್ಮಿರುವ ಸರ್ದಾರ್ ಪಟೇಲರಿಗೆ ಮೀಸಲಾಗಿರುವ ಅತ್ಯುನ್ನತ ಸ್ಮಾರಕವಾದ ಏಕತಾ ಪ್ರತಿಮೆ (ಸ್ಯಾಚ್ಯೂ ಆಫ್ ಯೂನಿಟಿ) ಬಳಿ ಶುಕ್ರವಾರ ಮತ್ತು ಶನಿವಾರ ಪ್ರಧಾನ ಮಂತ್ರಿಯವರು ಉದ್ಘಾಟಿಸುತ್ತಿರುವ ೧೭ ಯೋಜನೆಗಳಲ್ಲಿಆರೋಗ್ಯ ವನ’ ಒಂದು. ಆರೋಗ್ಯ ಅರಣ್ಯವು ಜನರ ಜೀವನದಲ್ಲಿ ಯೋಗ, ಆಯುರ್ವೇದ ಮತ್ತು ಧ್ಯಾನದ ಮಹತ್ವವನ್ನು ಒತ್ತಿಹೇಳುತ್ತದೆ. ವಿಸ್ತಾರವಾದ ಉದ್ಯಾನದಲ್ಲಿ ೩೮೦ ಆಯ್ದ ಜಾತಿಗಳ ಐದು ಲಕ್ಷ ಸಸ್ಯಗಳನ್ನು ಬೆಳೆಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ. ‘ಆರೋಗ್ಯ ವನದಲ್ಲಿ ಕಮಲದ ಕೊಳ, ಆಲ್ಬಾ ಗಾರ್ಡನ್, ಸುವಾಸನೆಯ ಉದ್ಯಾನ, ಯೋಗ ಮತ್ತು ಧ್ಯಾನ ಉದ್ಯಾನ, ಒಳಾಂಗಣ ಸಸ್ಯ ವಿಭಾಗ, ಡಿಜಿಟಲ್ ಮಾಹಿತಿ ಕೇಂದ್ರ, ಸ್ಮರಣ ಸಂಚಿಕೆ ಅಂಗಡಿ ಮತ್ತು ಆಯುರ್ವೇದ ಆಹಾರವನ್ನು ಪೂರೈಸುವ ಕೆಫೆಟೇರಿಯಾ ಸೇರಿವೆ.  (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿ: ಭಾರತದ ಕೋವಿಡ್-೧೯ ಪ್ರಕರಣಗಳ ಸಂಖ್ಯೆ 2020 ಅಕ್ಟೋಬರ್ 30 ಶುಕ್ರವಾರ ೮೧ ಲಕ್ಷದ ಸಮೀಪಕ್ಕೆ ತಲುಪಿದೆ. ಕೇರಳದಲ್ಲಿ ಅತ್ಯಧಿಕ ಪ್ರಕರಣಗಳು ದಾಖಲಾಗಿವೆ. ಇದೇ ವೇಳೆಗೆ ಕಳೆದ ಒಂದು ದಿನದಲ್ಲಿ ವಿಶ್ವಾದ್ಯಂತವೂ ಕೊರೋನಾವೈರಸ್ ಪ್ರಕರಣಗಳ ಸಂಖ್ಯೆ ದಾಖಲೆ ಪ್ರಮಾಣದಲ್ಲಿ ಏರಿದೆ. ಭಾರತದಲ್ಲಿ ಕಳೆದ ೨೪ ಗಂಟೆಗಳ ಅವಧಿಯಲ್ಲಿ ೪೮,೬೪೮ ಹೊಸ ಸೋಂಕಿನ ಪ್ರಕರಣಗಳು ವರದಿಯಾಗಿದ್ದು ಒಟ್ಟು ಪ್ರಕರಣಗಳ ಸಂಖ್ಯೆ ೮೦,೮೮,೮೫೧ಕ್ಕೆ ಏರಿತು. ಆದರೆ ಸಕ್ರಿಯ ಪ್ರಕರಣಗಳು ,೦೦,೦೦೦ ಕ್ಕಿಂತ ಕೆಳಗಿಳಿದಿದ್ದು, ರಾಷ್ಟ್ರೀಯ ಚೇತರಿಕೆ ಪ್ರಮಾಣವು ಶೇಕಡಾ ೯೧ನ್ನು ದಾಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿಯು ಶುಕ್ರವಾರ ತಿಳಿಸಿದೆ. ೫೬೩ ಹೊಸ ಸಾವುಗಳೊಂದಿಗೆ ದೇಶದ ಕೋವಿಡ್-೧೯ ಸಾವಿನ ಸಂಖ್ಯೆ ,೨೧,೦೯೦ಕ್ಕೆ ಏರಿದೆ ಎಂದು ಬೆಳಗ್ಗೆ ಗಂಟೆಗೆ ನವೀಕರಿಸಿದ ಮಾಹಿತಿ ತೋರಿಸಿದೆ. ಒಟ್ಟು ೭೩,೭೩,೩೭೫ ಜನರು ಕೋವಿಡ್-೧೯ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ, ಇದು ರಾಷ್ಟ್ರೀಯ ಚೇತರಿಕೆ ಪ್ರಮಾಣವನ್ನು ಶೇಕಡಾ ೯೧.೧೫ ಕ್ಕೆ ಏರಿಸಿದೆ. ಇದೇ ವೇಳೆಗೆ ಕೊರೋನಾ ಸಾವಿನ ಪ್ರಮಾಣವು ಶೇಕಡಾ .೫೦ಕ್ಕೆ ಇಳಿದಿದೆ. ದೇಶದಲ್ಲಿ ,೯೪,೩೮೬ ಕೊರೋನಾವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳಿವೆ, ಇದು ಒಟ್ಟು ಪ್ರಕರಣಗಳ ಶೇಕಡಾ .೩೫ ರಷ್ಟಿದೆ ಎಂದು ಮಾಹಿತಿ ತಿಳಿಸಿತು. (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿ: ವಿಮಾನದಲ್ಲಿ ಪ್ರಯಾಣಿಸುವವರಿಗಿಂತ ರೆಸ್ಟೋರೆಂಟ್ಗಳಲ್ಲಿ ತಿನ್ನುವ ಮತ್ತು ಕಿರಾಣಿಗಾಗಿ ಶಾಪಿಂಗ್ ಮಾಡಲು ಹೊರಡುವ ವ್ಯಕ್ತಿಗಳು ಹೆಚ್ಚಾಗಿ ಕೊರೊನಾವೈರಸ್ ಕಾಯಿಲೆಗೆ (ಕೋವಿಡ್ -೧೯) ತುತ್ತಾಗುವ ಅಪಾಯವಿದೆ ಎಂದು ಹಾರ್ವರ್ಡ್ ಸಂಶೋಧಕರ ವರದಿ  2020 ಅಕ್ಟೋಬರ್ 30 ಶುಕ್ರವಾರ ಬಹಿರಂಗ ಪಡಿಸಿತು. ಹಾರ್ವರ್ಡ್ ಟಿಎಚ್ ಚಾನ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ವಿಜ್ಞಾನಿಗಳು ವಾರಏವಿಯೇಷನ್ - ಪಬ್ಲಿಕ್ ಹೆಲ್ತ್ ಇನಿಶಿಯೇಟಿವ್ ಎಂಬ ಹೆಸರಿನ ಅಧ್ಯಯನವನ್ನು ಪ್ರಕಟಿಸಿದರು.   ಅಧ್ಯಯನದಲ್ಲಿ ವಿಜ್ಞಾನಿಗಳು ಸಾಂಕ್ರಾಮಿಕವನ್ನು ಮುಂಚಿತವಾಗಿ ತಡೆಗಟ್ಟುವ ಕ್ರಮಗಳನ್ನು ಅನುಸರಿಸಲು ಪ್ರೋತ್ಸಾಹಿಸಿದರೆ ಪ್ರಯಾಣಿಕರಲ್ಲಿ ಕೋವಿಡ್ -೧೯ ಹರಡುವಿಕೆಯ ಪ್ರಮಾಣವನ್ನು ತೀವ್ರವಾಗಿ ಕಡಿಮೆ ಮಾಡಬಹುದು ಎಂದು ಹೇಳಿದ್ದಾರೆ. ವೈರಸ್ ಹರಡುವುದನ್ನು ತಡೆಯುವ ಮಾರ್ಗಸೂಚಿಗಳಾದ ಆಗಾಗ್ಗೆ ಸೋಪಿನಿಂದ ಕೈ ತೊಳೆಯುವುದು, ಎಲ್ಲಾ ಸಮಯದಲ್ಲೂ ಮುಖಗವಸು ಧರಿಸುವುದು, ವಿಮಾನ ಮತ್ತು ವಿಮಾನ ನಿಲ್ದಾಣದಲ್ಲಿ ನಿರಂತರ ಗಾಳಿ ಮತ್ತು ಗಾಳಿಯ ಹರಿವನ್ನು ಖಾತ್ರಿಪಡಿಸುವುದು ಮತ್ತು ನಿಯಮಿತವಾಗಿ ವಿಮಾನಗಳನ್ನು ಸ್ವಚ್ಛಗೊಳಿಸುವುದು ಇವುಗಳನ್ನು ಅನುಸರಿಸುವುದು ಸೋಂಕು ಪ್ರಸರಣವನ್ನು ತಡೆಗಟ್ಟಲು ಪರಿಣಾಮಕಾರಿ ಆಗಬಲ್ಲುದು ಎಂದು ತಿಳಿಸಿದ್ದಾರೆ. (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿ: ೨೦೧೯ ಪುಲ್ವಾಮಾ ಭಯೋತ್ಪಾದಕ ದಾಳಿಗೆ ಪಾಕಿಸ್ತಾನವೇ ಕಾರಣ ಎಂದು ಪಾಕಿಸ್ತಾನ ಸಚಿವರೊಬ್ಬರು ಬಹಿರಂಗವಾಗಿ ಒಪ್ಪಿಕೊಂಡಿರುವುದು ಕಾಂಗ್ರೆಸ್ ಮತ್ತು ಅದರ ನಾಯಕರನ್ನು ಅನಾವರಣಗೊಳಿಸಿದೆ, ಅವರು ಈಗ ಪ್ರಧಾನಿ ನರೇಂದ್ರ ಮೋದಿಯವರಿಗೆ ಕ್ಷಮೆಯಾಚಿಸಬೇಕು ಎಂದು ಬಿಜೆಪಿ 2020 ಅಕ್ಟೋಬರ್ 30 ಶುಕ್ರವಾರ ಆಗ್ರಹಿಸಿತು. ೪೦ ಮಂದಿ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್) ಸಿಬ್ಬಂದಿಯನ್ನು ಹುತಾತ್ಮರನ್ನಾಗಿಸಿ,  ಉಭಯ ದೇಶಗಳನ್ನು ಯುದ್ಧದ ಅಂಚಿಗೆ ತಂದ ಪುಲ್ವಾಮಾ ಭಯೋತ್ಪಾದಕ ದಾಳಿಗೆ ಪಾಕಿಸ್ತಾನವೇ ಕಾರಣ ಎಂದು ಪಾಕಿಸ್ತಾನದ ಹಿರಿಯ ಸಚಿವ ಫವಾದ್ ಚೌಧರಿ ಗುರುವಾರ ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಒಪ್ಪಿಕೊಂಡಿದ್ದರು. ಆದರೆ ಬಳಿಕತಮ್ಮನ್ನು ತಪ್ಪಾಗಿ ಉಲ್ಲೇಖಿಲಾಗಿದೆ ಎಂದು ಸಮಜಾಯಿಷಿ ನೀಡಿದ್ದರು. ತಾವು ಮಾತನಾಡಿದ್ದು ಪಾಕಿಸ್ತಾನದ "ಪುಲ್ವಾಮಾ ನಂತರದ ಕ್ರಮ" ವನ್ನು ಎಂದು ಅವರು ಪ್ರತಿಪಾದಿಸಿದ್ದರು. ‘ಪುಲ್ವಾಮಾ ಭಯೋತ್ಪಾದಕ ದಾಳಿಯ ಹಿಂದೆ ತನ್ನ ಕೈ ಇತ್ತೆಂಬುದನ್ನು ಪಾಕಿಸ್ತಾನ ಒಪ್ಪಿಕೊಂಡಿದೆ. ಈಗ, ಫಿತೂರಿ ಸಿದ್ಧಾಂತಗಳ ಬಗ್ಗೆ ಮಾತನಾಡಿದ್ದ ಕಾಂಗ್ರೆಸ್ ಮತ್ತು ಇತರರು ದೇಶದ ಕ್ಷಮೆಯಾಚಿಸಬೇಕು ಎಂದು ಕೇಂದ್ರ ಸಚಿವ ಮತ್ತು ಬಿಜೆಪಿ ಮುಖಂಡ ಪ್ರಕಾಶ ಜಾವಡೇಕರ್ ಟ್ವೀಟ್ ಮಾಡಿದ್ದಾರೆ. "ವಿಶ್ವದ ಎಲ್ಲಿಯಾದರೂ ನಡೆಯುವ ಭಯೋತ್ಪಾದನೆಯ ಬೇರುಗಳು ಪಾಕಿಸ್ತಾನದಲ್ಲಿಯೇ ಇರುತ್ತವೆ. ಆದರೆ, ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷದ ಅವರ ಸಹಚರರು ಪುಲ್ವಾಮಾ ದಾಳಿಯನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಇಮ್ರಾನ್ ಖಾನ್ ನಡುವಿನ ಪಂದ್ಯದ ಫಿಕ್ಸಿಂಗ್ ಎಂದು ಬಣ್ಣಿಸಿದ್ದು ವಿಪರ್ಯಾಸ. ಇದು ಕಾಂಗ್ರೆಸ್ ಮತ್ತು ಅದರ ನಾಯಕರು ಮೋದಿಯವರ ಮೇಲಿನ ದ್ವೇಷದ ನೆಪದಲ್ಲಿ ಭಾರತ ವಿರೋಧಿಗಳಾಗಿದ್ದಾರೆ ಎಂಬುದನ್ನು ತೋರಿಸಿದೆ ಎಂದು ಬಿಜೆಪಿಯ ರಾಷ್ಟ್ರೀಯ ವಕ್ತಾರ ಸಂಬಿತ್ ಪತ್ರ ಹೇಳಿದ್ದಾರೆ. (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿ: ಮಾದರಿ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಮಧ್ಯಪ್ರದೇಶದ ಕಾಂಗ್ರೆಸ್ ನಾಯಕ ಮಾಜಿ ಮುಖ್ಯಮಂತ್ರಿ ಕಮಲನಾಥ್ ಅವರತಾರಾ ಪ್ರಚಾರಕ ಸ್ಥಾಮಾನವನ್ನು 2020 ಅಕ್ಟೋಬರ್ 30 ಶುಕ್ರವಾರ ರದ್ದು ಪಡಿಸಿದ ಚುನಾವಣಾ ಆಯೋಗವು, ಕಮಲನಾಥ್ ವಿರುದ್ಧಚುನ್ನುಮುನ್ನು ಪದ ಬಳಸಿದ್ದಕ್ಕಾಗಿ ಬಿಜೆಪಿ ನಾಯಕ ಕೈಲಾಶ್ ವಿಜಯವರ್ಗೀಯ ಅವರನ್ನು ತರಾಟೆಗೆ ತೆಗೆದುಕೊಂಡಿತು. ಮಧ್ಯಪ್ರದೇಶದ ಸಚಿವೆ ಹಾಗೂ ಮಹಿಳಾ ಅಭ್ಯರ್ಥಿ ವಿರುದ್ಧಐಟಂ ಪದವನ್ನು ಬಳಸಿದ್ದಕ್ಕಾಗಿ ಆಯೋಗವು ಕಮಲನಾಥ್ ವಿರುದ್ಧ ವಾಗ್ದಾಳಿ ನಡೆಸಿ, ಮಹಿಳೆಯ ವಿರುದ್ಧ ಇಂತಹ ಪದದ ಬಳಕೆಯು ಆಯೋಗವು ಹೊರಡಿಸಿರುವ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ ಎಂದು ಹೇಳಿತು.  ಪದ ಬಳಕೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತ ಪಡಿಸಿದ ಆಯೋಗ, ರಾಜಕೀಯ ಪಕ್ಷದ ನಾಯಕರಾಗಿದ್ದರು, ನಾಥ್ ಅವರು ನೀತಿ ಸಂಹಿತೆಯ ನಿಬಂಧನೆಗಳನ್ನು ಪದೇ ಪದೇ ಉಲ್ಲಂಘಿಸುತ್ತಿದ್ದಾರೆ. ಜೊತೆಗೇ ನೈತಿಕ ಮತ್ತು ಘನತೆಯುಕ್ತ ನಡವಳಿಕೆಯನ್ನು ಉಲ್ಲಂಘಿಸುತ್ತಿದ್ದಾರೆ ಎಂದು ಹೇಳಿತು. ರಾಜ್ಯದ ಹಾಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ವಿರುದ್ಧ ಕಾಂಗ್ರೆಸ್ ಮುಖಂಡರು ಎಲ್ಲಿ ಮಾತನಾಡಿದ್ದಾರೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಆಯೋಗದ ವರದಿಯು ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯನ್ನು ಖಚಿತಪಡಿಸಿತು. (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ)

2020: ದುಬೈ: ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ವ್ಯಂಗ್ಯಚಿತ್ರದ ಹಕ್ಕನ್ನು ರಕ್ಷಿಸುವುದಾಗಿ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಅವರು ಮಾಡಿರುವ ಪ್ರತಿಜ್ಞೆಗೆ ಮುಸ್ಲಿಂ ಜಗತ್ತಿನಲ್ಲಿ ವ್ಯಾಪಕ ಪ್ರತಿರೋಧ ವ್ಯಕ್ತವಾಗಿದ್ದು, 2020 ಅಕ್ಟೋಬರ್ 30 ಶುಕ್ರವಾರ ಪ್ರಾರ್ಥನೆಯ ಬಳಿಕ ಸಹಸ್ರಾರು ಮಂದಿ ರಸ್ತೆಗಳಿಗೆ ಇಳಿದು ಫ್ರಾನ್ಸ್ ವಿರುದ್ಧ ಪ್ರತಿಭಟನೆ ನಡೆಸಿದರು. ಪ್ರವಾದಿ ಮಹಮ್ಮದ್ ಅವರ ಜನ್ಮದಿನವಾದ ಮಾವ್ಲಿದ್ ಆಚರಿಸುವ ಅಂದಾಜು ,೦೦೦ ಆರಾಧಕರು ಪಾಕಿಸ್ತಾನದ ಪೂರ್ವ ನಗರವಾದ ಲಾಹೋರಿನಲ್ಲಿ ಬೀದಿಗಿಳಿದರು. ಇಸ್ಲಾಮಿಕ್ ಪಕ್ಷಗಳ ನೇತೃತ್ವದ ಜನಸಮೂಹವು ಫ್ರಾನ್ಸ್ ವಿರೋಧಿ ಘೋಷಣೆಗಳನ್ನು ಕೂಗಿತು, ಬ್ಯಾನರ್ಗಳನ್ನು ಪ್ರದರ್ಶಿಸಿತು ಮತ್ತು ಸೂಫಿ ಪ್ರಾರ್ಥನಾಮಂದಿರಕ್ಕೆ ಹೋಗುವ ಮಾರ್ಗದಲ್ಲಿ ಪ್ರಮುಖ ರಸ್ತೆಗಳನ್ನು ಮುಚ್ಚಿಹಾಕಿತು. ಡಜನ್ಗಟ್ಟಲೆ ಜನರು ಕೋಪದಿಂದ ಫ್ರೆಂಚ್ ಧ್ವಜಗನ್ನು ತುಳಿಯುತ್ತಾ ಹೆಜ್ಜೆ ಹಾಕಿದರು ಮತ್ತು ಫ್ರೆಂಚ್ ಉತ್ಪನ್ನಗಳ ಬಹಿಷ್ಕಾರಕ್ಕಾಗಿ ಒತ್ತಾಯಿಸಿದರು. ಪಾಕಿಸ್ತಾನದ ಪೂರ್ವ ಪಂಜಾಬ್ ಪ್ರಾಂತ್ಯದ ಮುಲ್ತಾನ್ನಲ್ಲಿ, ಸಾವಿರಾರು ಜನರು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಪ್ರತಿಮೆಯನ್ನು ಸುಟ್ಟುಹಾಕಿದರು ಮತ್ತು ಪಾಕಿಸ್ತಾನವು ಫ್ರಾನ್ಸಿನೊಂದಿಗೆ ಸಂಬಂಧವನ್ನು ಕಡಿದುಕೊಳ್ಳಬೇಕೆಂದು ಒತ್ತಾಯಿಸಿದರು. (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿ: ಶಿಕ್ಷಕನೊಬ್ಬನ ಶಿರಚ್ಛೇದ ಘಟನೆಯ ಬಳಿಕ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರೋನ್ ಅವರ ಮೇಲೆ ವೈಯಕ್ತಿಕ ದಾಳಿಗಳು ನಡೆದುದನ್ನು ಅನುಸರಿಸಿ ಭಾರತವು ಫ್ರಾನ್ಸ್ ಜೊತೆ ಒಗ್ಗಟ್ಟು ವ್ಯಕ್ತ ಪಡಿಸಿದ ಒಂದು ದಿನದ ಬಳಿಕ ಮುಂಬೈ ಮತ್ತು ಭೋಪಾಲ್ನಲ್ಲಿ ಪ್ರತಿಭಟನೆಗಳು ನಡೆದಿದ್ದು, ಪ್ರತಿಭಟನಕಾರರ ತುಳಿತಕ್ಕೆ ಒಳಗಾಗಿದ್ದ ಮ್ಯಾಕ್ರೋನ್ ಪೋಸ್ಟರುಗಳನ್ನು ಪೊಲೀಸರು 2020 ಅಕ್ಟೋಬರ್ 30 ಶುಕ್ರವಾರ ರಸ್ತೆಗಳಿಂದ ತೆಗೆದುಹಾಕಿದರು. ಮ್ಯಾಕ್ರೋನ್ ಪೋಸ್ಟರುಗಳ ಮೇಲೆ ಜನರು ವಾಕಿಂಗ್ ಮಾಡುವ, ವಾಹನಗಳು ಸಂಚರಿಸುವ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಪ್ರತಿಭಟನೆಯ ಹಿಂದೆ ರಝಾ ಅಕಾಡೆಮಿ ಮುಸ್ಲಿಂ ಸಂಘಟನೆ ಇದೆ ಎಂದು ವರದಿಗಳು ತಿಳಿಸಿದವು. ಫ್ರೆಂಚ್ ಶಿಕ್ಷಕನ ಹತ್ಯೆ ಮತ್ತು ಮ್ಯಾಕ್ರೋನ್ ಮೇಲೆ ವೈಯಕ್ತಿಕ ದಾಳಿಯನ್ನು ಖಂಡಿಸಿ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯ, "ಅಂತಾರಾಷ್ಟ್ರೀಯ ಭಾಷಣದ ಅತ್ಯಂತ ಮೂಲಭೂತ ಮಾನದಂಡಗಳನ್ನು ಉಲ್ಲಂಘಿಸಿ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಅವರ ಮೇಲೆ ಸ್ವೀಕಾರಾರ್ಹವಲ್ಲದ ಭಾಷೆಯಲ್ಲಿ ನಡೆದಿರುವ ವೈಯಕ್ತಿಕ ದಾಳಿಯನ್ನು ನಾವು ಬಲವಾಗಿ ವಿವರಿಸುತ್ತೇವೆ ಎಂದು ಹೇಳಿದೆ. ‘ಫ್ರೆಂಚ್ ಶಿಕ್ಷಕನ ಪ್ರಾಣವನ್ನು ಭಯಂಕರ ರೀತಿಯಲ್ಲಿ ತೆಗೆದ ಕ್ರೂರ ಭಯೋತ್ಪಾದಕ ದಾಳಿಯನ್ನು ನಾವು ಖಂಡಿಸುತ್ತೇವೆ, ಅದು ಜಗತ್ತನ್ನು ಬೆಚ್ಚಿಬೀಳಿಸಿದೆ. ಯಾವುದೇ ಕಾರಣಕ್ಕೂ ಅಥವಾ ಯಾವುದೇ ಸಂದರ್ಭದಲ್ಲೂ ಭಯೋತ್ಪಾದನೆಗೆ ಯಾವುದೇ ಸಮರ್ಥನೆ ಇಲ್ಲ ಎಂದು ಹೇಳಿಕೆ ತಿಳಿಸಿತು. (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿ: ಕೇವಲ ಮದುವೆಯ ಸಲುವಾಗಿ ಮತಾಂತರವನ್ನು ಒಪ್ಪಲು ಸಾಧ್ಯವಿಲ್ಲ ಎಂಬುದಾಗಿ ಮಹತ್ವದ ತೀರ್ಪೊಂದನ್ನು ನೀಡಿರುವ ಅಲಹಾಬಾದ್ ಹೈಕೋರ್ಟ್, ಪೊಲೀಸ್ ರಕ್ಷಣೆ ಕೋರಿ ವಿವಾಹಿತ ದಂಪತಿ ಸಲ್ಲಿಸಿದ್ದ ರಿಟ್ ಅರ್ಜಿಯನ್ನು 2020 ಅಕ್ಟೋಬರ್ 30 ಶುಕ್ರವಾರ ವಜಾಗೊಳಿಸಿತು. ಮಹಿಳೆ ಮುಸ್ಲಿಮಳಾಗಿದ್ದು, ಮದುವೆ ಕೇವಲ ಒಂದು ತಿಂಗಳು ಮುಂಚಿತವಾಗಿ ಹಿಂದೂಧರ್ಮಕ್ಕೆ ಮತಾಂತರಗೊಂಡಿದ್ದಳು ಎಂಬುದನ್ನು ಹೈಕೋರ್ಟ್ ಗಮನಿಸಿದೆ ಎಂದು ವರದಿ ತಿಳಿಸಿದೆ. ನ್ಯಾಯಮೂರ್ತಿ ಮಹೇಶ್ ಚಂದ್ರ ತ್ರಿಪಾಠಿ ಅವರುಪ್ರಕರಣದಲ್ಲಿ ಮತಾಂತರವು ವಿವಾಹದ ಉದ್ದೇಶಕ್ಕಾಗಿ ಮಾತ್ರ ನಡೆದಿರುವುದನ್ನು ಸ್ಪಷ್ಟವಾಗಿ ತಿಳಿಸುತ್ತದೆ ಎಂದು ಹೇಳಿದರು. ನ್ಯಾಯಮೂರ್ತಿ ತ್ರಿಪಾಠಿ ಅವರು ೨೦೧೪ ತೀರ್ಪನ್ನು ಉಲ್ಲೇಖಿಸಿ ತೀರ್ಪನ್ನು ನೀಡಿದ್ದಾರೆ. ೨೦೧೪ರ ತೀರ್ಪಿನಲ್ಲಿ ಇದೇ ನ್ಯಾಯಾಲಯವು ಕೇವಲ ವಿವಾಹದ ಉದ್ದೇಶಕ್ಕಾಗಿ ಮತಾಂತರವು ಸ್ವೀಕಾರಾರ್ಹವಲ್ಲ ಎಂದು ಹೇಳಿತ್ತು. ಬಳಿಕ ನ್ಯಾಯಾಲಯವು ರಿಟ್ ಅರ್ಜಿಯನ್ನು ವಜಾಗೊಳಿಸಿ, ಭಾರತದ ಸಂವಿಧಾನದ ೨೨೬ ನೇ ವಿಧಿ ಅನ್ವಯ ವಿಷಯದಲ್ಲಿ ಹಸ್ತಕ್ಷೇಪ ಮಾಡಲು ತಾನು ಒಲವು ತೋರಿಲ್ಲ ಎಂದು ಹೇಳಿದೆ. (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ)

ಇಂದಿನ ಇತಿಹಾಸ  History Today ಅಕ್ಟೋಬರ್ 30 (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

-ಸಂಗ್ರಹ: ನೆತ್ರಕೆರೆ ಉದಯಶಂಕರ

No comments:

Post a Comment