ನಾನು ಮೆಚ್ಚಿದ ವಾಟ್ಸಪ್

Saturday, June 6, 2020

ಇಂದಿನ ಇತಿಹಾಸ History Today ಜೂನ್ 06

ಇಂದಿನ ಇತಿಹಾಸ  History Today ಜೂನ್  06 

2020: ವಿಶ್ವಸಂಸ್ಥೆ: ಭಾರತದಲ್ಲಿ ಕೊರೋನಾವೈರಸ್ ರೋಗಸ್ಫೋಟಗೊಂಡಿಲ್ಲ, ಆದರೆ ಕೋವಿಡ್-೧೯ನ್ನು ತಡೆಯಲು ಮಾರ್ಚ್ ತಿಂಗಳಲ್ಲಿ ಜಾರಿಗೊಳಿಸಲಾಗಿದ್ದ ರಾಷ್ಟ್ರವ್ಯಾಪಿ ದಿಗ್ಬಂಧನವನ್ನು (ಲಾಕ್ ಡೌನ್) ತೆರವುಗೊಳಿಸುವತ್ತ (ಅನ್ ಲಾಕ್) ದೇಶ ಸಾಗುತ್ತಿರುವುದರಿಂ ಕೊರೋನಾ ಸ್ಫೋಟದ ಅಪಾಯ ಈಗಲೂ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯೂ ಎಚ್ ) ಉನ್ನತ ತಜ್ಞರೊಬ್ಬರು ಹೇಳಿದರು. ಪ್ರಸ್ತುತ ಹಂತದಲ್ಲಿ ಭಾರತದಲ್ಲಿ ಕೊರೋನಾವೈರಸ್ ಪ್ರಕರಣಗಳು ಮೂರುವಾರಗಳಿಗೆ ಒಮ್ಮೆ ದುಪ್ಪಟ್ಟಾಗುತ್ತಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ತುರ್ತು ಕಾರ್ಯಕ್ರಮ ಆಡಳಿತ ನಿರ್ದೇಶಕ ಮೈಕೆಲ್ ರಾನ್  2020 ಜೂನ್  05ರ ಶುಕ್ರವಾರ ಹೇಳಿದರು.  "ಆದ್ದರಿಂದ ಸಾಂಕ್ರಾಮಿಕ ರೋಗದ ಪ್ರಯಾಣದ ದಿಕ್ಕು ಘಾತಕರವಾದುದಲ್ಲ, ಆದರೆ ಅದು ಇನ್ನೂ ಬೆಳೆಯುತ್ತಿದೆ" ಎಂದು ಅವರು ಹೇಳಿದರು, ಸಾಂಕ್ರಾಮಿಕದ ಪರಿಣಾಮವು ಭಾರತದ ವಿವಿಧ ಭಾಗಗಳಲ್ಲಿ ವಿಭಿನ್ನವಾಗಿದೆ ಮತ್ತು ನಗರ ಮತ್ತು ಗ್ರಾಮೀಣ ಪ್ರದೇಶಗಳ ನಡುವೆ ಬದಲಾಗುತ್ತವೆ ಎಂದು ಅವರು ನುಡಿದರು.  ‘ದಕ್ಷಿಣ ಏಷ್ಯಾದಲ್ಲಿ, ಭಾರತದಲ್ಲಿ ಮಾತ್ರವಲ್ಲ ಬಾಂಗ್ಲಾದೇಶದಲಿ, ಪಾಕಿಸ್ತಾದಲ್ಲಿ ಮತ್ತು ದಕ್ಷಿಣ ಏಷ್ಯಾದ ಇತರ ದೇಶಗಳಲ್ಲಿ ದಟ್ಟವಾದ ಜನಸಂಖ್ಯೆ ಇದೆ, ರೋಗವು ಸ್ಫೋಟಗೊಂಡಿಲ್ಲ. ಆದರೆ ಅದು ಸಂಭವಿಸುವ ಅಪಾಯ ಯಾವಾಗಲೂ ಇರುತದೆ ಎಂದು ರಿಯಾನ್ ಜಿನೀವಾದಲ್ಲಿ ಹೇಳಿದರು.  ರೋಗವು ಸಮುದಾಯಗಳಲ್ಲಿ ಹುಟ್ಟುತ್ತದೆ ಮತ್ತು ನೆಲೆಯೂರುತ್ತಾ ಹೋಗುತ್ತದೆ. ಅದು ಯಾವುದೇ ಸಮಯದಲ್ಲಿ ತ್ವರಿತಗೊಳ್ಳಬಹುದು ಮತ್ತು ಹಲವು ವ್ಯವಸ್ಥೆಗಳಲ್ಲಿ ಕಾಣಿಸಬಹುದು ಎಂದು ಅವರು ನುಡಿದರು.  (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020:  ನವದೆಹಲಿ: ೯೮೮೭ ಕೊರೋನಾ ಸೋಂಕು ಪ್ರಕರಣಗಳ ಏಕದಿನ ದಾಖಲೆಯೊಂದಿಗೆ ಭಾರತವು 2020 ಜೂನ್ 06ರಶನಿವಾರ ಇಟಲಿಯನ್ನು ಹಿಂದಿಕ್ಕಿ, ಕೋವಿಡ್-೧೯ ಸಾಂಕ್ರಾಮಿಕದಿಂದ ಅತಿಬಾಧೆಗೆ ಒಳಗಾದ ವಿಶ್ವದ ರಾಷ್ಟ್ರಗಳಲ್ಲಿ ೬ನೇ ಸ್ಥಾನಕ್ಕೆ ಏರಿತು. ಭಾರತವು ಶನಿವಾರ ಒಂದೇದಿನ ದಾಖಲೆಯ ,೮೮೭ ಕೊರೊನಾವೈರಸ್ ಪ್ರಕರಣಗಳು ಮತ್ತು ೨೯೪ ಸಾವುಗಳನ್ನು ಕಂಡಿದ್ದು, ರಾಷ್ಟ್ರವ್ಯಾಪಿ ಸೋಂಕು ,೩೬,೬೫೭ ಕ್ಕೆ ಮತ್ತು ಸಾವಿನ ಸಂಖ್ಯೆ ,೬೪೨ ಕ್ಕೆ ತಲುಪಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿತು. ಆದರೆ ಇದುವರೆಗೆ ,೧೪,೦೭೨ ಜನರು ಚೇತರಿಸಿಕೊಂಡಿದ್ದು, ಚೇತರಿಕೆಯ ಪ್ರಮಾಣ ಶೇಕಡಾ ೪೮ರಷ್ಟಿದೆ. ಉಳಿದ ,೧೫,೯೪೨ ಪ್ರಕರಣಗಳು ಸಕ್ರಿಯ ಪ್ರಕರಣಗಳಾಗಿ ಉಳಿದಿವೆ. ಭಾರತ ಸತತ ಮೂರನೇ ದಿನ ,೦೦೦ ಪ್ರಕರಣಗಳನ್ನು ದಾಖಲಿಸಿದೆ. ಭಾರತದಲ್ಲಿ ಕೊರೋನಾ ಸೋಂಕು ಪ್ರಸರಣವನ್ನು ತಡೆಯಲು ಮಾರ್ಚ್ ೨೫ರಂದು ಮೊತ್ತ ಮೊದಲಿಗೆ ರಾಷ್ಟ್ರವ್ಯಾಪಿ ದಿಗ್ಬಂಧನ (ಲಾಕ್ಡೌನ್) ಜಾರಿಗೊಳಿಸಲಾಯಿತು. ಬಳಿಕ ಅದನ್ನು  ೨೧ ದಿನಗಳವರೆಗೆ ವಿಸ್ತರಿಸಲಾಯಿತು, ಎರಡನೇ ಹಂತದ ನಿರ್ಬಂಧಗಳು ಏಪ್ರಿಲ್ ೧೫ ರಿಂದ ಪ್ರಾರಂಭವಾಗಿ ಮೇ ರವರೆಗೆ ೧೯ ದಿನಗಳ ಕಾಲ ವಿಸ್ತರಿಸಲ್ಪಟ್ಟವು. ಲಾಕ್ಡೌನ್ ಮೂರನೇ ಹಂತವು ೧೪ ದಿನಗಳವರೆಗೆ ಜಾರಿಯಲ್ಲಿತ್ತು ಮತ್ತು ಮೇ ೧೭ ರಂದು ಕೊನೆಗೊಂಡಿತು. ನಾಲ್ಕನೇ ಹಂತವು ಮೇ ೩೧ ರಂದು ಕೊನೆಗೊಂಡಿತು. ಮಾರ್ಚ್ ೨೪ ರವರೆಗೆ ದೇಶವು ೫೧೨ ಕರೋನವೈರಸ್ ಸೋಂಕು ಪ್ರಕರಣಗಳನ್ನು ದಾಖಲಿಸಿತ್ತು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020:  ನವದೆಹಲಿ: ಪೂರ್ವ ಲಡಾಖ್ನಲ್ಲಿ ಸಂಭವಿಸಿದ ಇತ್ತೀಚಿನ ಗಡಿ ಬಿಕ್ಕಟ್ಟನ್ನು ಇತ್ಯರ್ಥ ಪಡಿಸುವ ಸಲುವಾಗಿ ಭಾರತ ಮತ್ತು ಚೀನಾದ ಸೇನಾ ಜನರಲ್ಗಳು ಉನ್ನತ ಮಟ್ಟದ ಮಾತುಕತೆಯನ್ನು ಚೀನಾದ ಬದಿಯಲ್ಲಿರುವ ಹಿಮಾಲಯನ್ ಹೊರಠಾಣಾ ಪ್ರದೇಶದಲ್ಲಿ 2020 ಜೂನ್ 06ರಶನಿವಾರ  ಆರಂಭಿಸಿದರು.  ಲಡಾಖ್ ಪ್ರದೇಶದಲ್ಲಿ ಉಭಯ ಕಡೆಗಳ ಸೇನೆ ಬೃಹತ್ ಪ್ರಮಾಣದಲ್ಲಿ ಜಮಾವಣೆಗೊಂಡಿರುವ ಹಿನ್ನೆಲೆಯಲ್ಲಿ ಸಭೆ ನಡೆಯುತ್ತಿದೆ. ಉಭಯ ದೇಶಗಳೂ ಮೇ ಮೊದಲ ವಾರದ ಘರ್ಷಣೆಯ ಬಳಿಕ ಲಡಾಖ್ ಪ್ರದೇಶಕ್ಕೆ ನೂರಾರು ಸಂಖ್ಯೆಯಲ್ಲಿ ಹೆಚ್ಚುವರಿ ಪಡೆಗಳನ್ನು ರವಾನಿಸಿವೆ. ಭಾರತೀಯ ಅಧಿಕಾರಿಗಳ ನಿಯೋಗದ ನೇತೃತ್ವವನ್ನು ೧೪ ಕೋರ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಹರಿಂದರ್ ಸಿಂಗ್ ವಹಿಸಿದ್ದು, ಹಿಂದಿನ ಸಭೆಗಳಲ್ಲಿ ಪಾಲ್ಗೊಂಡಿದ್ದ ಇತರ ೧೦ ಮಂದಿ ಅಧಿಕಾರಿಗಳೂ ನಿಯೋಗದಲ್ಲಿ ಇದ್ದಾರೆ. ಚೀನಾ ನಿಯೋಗದ ನೇತೃತ್ವವನ್ನು ಕೋರ್ ಕಮಾಂಡರ್ ಮೇಜರ್ ಜನರಲ್ ಲಿನ್ ಲಿಯು ವಹಿಸಿದ್ದು, ದಕ್ಷಿಣ ಕ್ಸಿನ್ಜಿಯಾಂಗ್ ಮಿಲಿಟರಿ ವಿಭಾಗ ಮತ್ತು ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್) ಇತರ ೧೦ ಅಧಿಕಾರಿಗಳು ಚೀನೀ ನಿಯೋಗದಲ್ಲಿ ಇದ್ದಾರೆ. ಬೆಳಿಗ್ಗೆ ೧೧ ಸುಮಾರಿಗೆ ಚುಶುಲ್-ಮೊಲ್ಡೊ ಬಾರ್ಡರ್ ಮೀಟಿಂಗ್ ಪಾಯಿಂಟ್ನಲ್ಲಿ ಮಾತುಕತೆ ಪ್ರಾರಂಭವಾಯಿತು. ವಿವಾದಿತ ಗಡಿಯಲ್ಲಿ ಉದ್ವಿಗ್ನತೆ ನಿವಾರಣೆ ಬಗ್ಗೆ ಉಭಯ ರಾಷ್ಟ್ರಗಳ ವಿದೇಶಾಂಗ ಸಚಿವಾಲಯದ ಅಧಿಕಾರಿಗಳು ಶುಕ್ರವಾರ ಚರ್ಚಿಸಿದ ಒಂದು ದಿನದ ಮಾತುಕತೆಯ ನಂತರ ಈದಿನ ಉನ್ನತ ಮಟ್ಟದ ಸೇನಾ ನಿಯೋಗಗಳ ಮಾತುಕತೆ ನಡೆದಿದೆ. ವಿದೇಶಾಂಗ ಸಚಿವಾಲಯ ಅಧಿಕಾರಿಗಳ ಸಭೆಯು ಭಿನ್ನಾಭಿಪ್ರಾಯಗಳನ್ನು ಶಾಂತಿಯುತವಾಗಿ ಬಗೆಹರಿಸಲು ನಿರ್ಧರಿಸಿತ್ತು. ‘ಪರಸ್ಪರರ ಸೂಕ್ಷ್ಮತೆ, ಕಾಳಜಿ ಮತ್ತು ಆಕಾಂಕ್ಷೆಗಳನ್ನು ಗೌರವಿಸುವುದರ ಪ್ರಾಮುಖ್ಯತೆಯನ್ನು ಮನಸ್ಸಿನಲ್ಲಿಟ್ಟುಕೊಂಡು ಅವುಗಳು ವಿವಾದಗಳಾಗದಂತೆ ನೋಡಿಕೊಳ್ಳಲಾಗುವುದು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿತ್ತು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ) 

2020: ಧರ್ಮಶಾಲಾ (ಹಿಮಾಚಲ ಪ್ರದೇಶ): ಕೇರಳದಲ್ಲಿ ಗರ್ಭಿಣಿ ಆನೆ ಹಣ್ಣಿನೊಳಗಿದ್ದ ಸ್ಫೋಟಕದ ತಿಂದು ಗಾಯಗೊಂಡು ನೋವಿನಿಂದ ಚಡಪಡಿಸಿದ ದಾರುಣ ಸಾವು ಕಂಡ ಘಟನೆಯ ನೆನಪು ಹಸಿ ಹಸಿಯಾಗಿರುವಾಗಲೇ ಇಂತಹುದೇ ಘಟನೆಯೊಂದರಲ್ಲಿ ಹಸು ಒಂದು ಗಾಯಗೊಂಡ ಘಟನೆ ಹಿಮಾಚಲ ಪ್ರದೇಶದ ಬಿಲಾಸ್ಪುರ ಜಿಲ್ಲೆಯಲ್ಲಿ ಘಟಿಸಿದ್ದು ಬೆಳಕಿಗೆ ಬಂದಿತು. ಗೋಧಿ ಹಿಟ್ಟಿನ ಉಂಡೆಯೊಳಗಿದ್ದ ಪಟಾಕಿಗಳನ್ನು ತಿಂದ ಪರಿಣಾಮವಾಗಿ ಬಾಯಿಯೊಳಗೆ ಸ್ಫೋಟ ಸಂಭವಿಸಿ ಹಸು ಗಾಯಗೊಂಡಿದೆ. ಗೋಧಿ ಹಿಟ್ಟಿನಲ್ಲಿ ಸುತ್ತಿದ್ದ ಪಟಾಕಿಗಳನ್ನು ಸೇವಿಸಿದ ನಂತರ ಹಸುವಿನ ಬಾಯಿ ಸುಟ್ಟು ಹೋಗಿದೆ. ಘಟನೆ ಮೇ ೨೬ ರಂದು ಬಿಲಾಸಪುರದ ಜಂದುಟ್ಟಾ ಪ್ರದೇಶದಲ್ಲಿ ಘಟಿಸಿದೆ. ಆನೆಯ ಹತ್ಯೆ ಬೆಳಕಿಗೆ ಬಂದ ನಂತರ, ಹಸುವಿನ ಮುಖ ಊದಿದ ಚಿತ್ರಗಳೂ ವೈರಲ್ ಆಗಿದ್ದವು. ಹಸುವನ್ನು ಗಾಯಗೊಳಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ನೆಟ್ಟಣಿಗರು (ನೆಟಿಜನ್) ಒತ್ತಾಯಿಸಿದ್ದಾರೆ. ಘಟನೆಯಲ್ಲಿ ತೀವ್ರವಾಗಿ ಸಿಡಿಯುವ ಪಟಾಕಿ, "ಆಲು ಬಾಂಬ್"ನ್ನು ಗೋಧಿ ಹಿಟ್ಟಿನ ಉಂಡೆಯೊಳಗೆ  ಇರಿಸಲಾಗಿದ್ದು, ಹಸು ಅದನ್ನು ಜಗಿಯುವಾಗ ಸ್ಫೋಟಗೊಂಡು ಬಾಯಿಗೆ ತೀವ್ರ ಗಾಯವಾಗಿದೆ ಎಂದು ಬಿಲಾಸಪುರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವಾಕರ್ ರ್ಮ ಹೇಳಿದ್ದಾರೆ. ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯ ಸೆಕ್ಷನ್ ೨೮೬ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದಲ್ಲಿ ಮುಖ್ಯ ಆರೋಪಿ ಮತ್ತು ಇತರ ಜನರ ಪಾತ್ರದ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಶರ್ಮ ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ಅಹ್ಮದಾಬಾದ್: ಅಮುಲ್ ಬ್ರಾಂಡ್ ಮಾಲೀಕರಾದ ಗುಜರಾತ್ ಸಹಕಾರಿ ಹಾಲು ಮಾರ್ಕೆಟಿಂಗ್ ಫೆಡರೇಶನ್ ಟ್ವಿಟ್ಟರ್ ಖಾತೆಯನ್ನು ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಒತ್ತಾಯಿಸುವ ಕಾರ್ಟೂನನ್ನು ಪೋಸ್ಟ್ ಮಾಡಿದ ನಂತರ ಸಂಕ್ಷಿಪ್ತವಾಗಿ ನಿರ್ಬಂಧಿಸಿದ ಘಟನೆ  2020 ಜೂನ್ 06ರ ಶನಿವಾರ ಘಟಿಸಿತು.  ಅಮುಲ್ ಜಾಹೀರಾತು ಸಂಸ್ಥೆಯು ತನ್ನ ಮ್ಯಾಸ್ಕಾಟ್ಅಮುಲ್ ಗರ್ಲ್ ಒಳಗೊಂಡ ಕಾರ್ಟೂನನ್ನುಡ್ರ್ಯಾಗನ್ನಿಂದ ನಿರ್ಗಮಿಸಿ (ಎಕ್ಸಿಟ್ ದಿ ಡ್ರ್ಯಾಗನ್) ಶೀರ್ಷಿಕೆಯೊಂದಿಗೆ ಗುರುವಾರ ರಾತ್ರಿ ಪ್ರಕಟಿಸಿದ ಬಳಿಕ ಟ್ವಿಟರ್ ತನ್ನ ಹ್ಯಾಂಡಲ್ @ ಅಮುಲ್_ಕೂಪ್ ಅನ್ನು ನಿರ್ಬಂಧಿಸಿದೆ ಎಂದು ಜಿಸಿಎಂಎಂಎಫ್ ವ್ಯವಸ್ಥಾಪಕ ನಿರ್ದೇಶಕ ಆರ್ ಎಸ್ ಸೋಧಿ ಹೇಳಿದರು. ಕಾರ್ಟೂನಿನ ಕೆಳಗಿನ ಬಲ ಮೂಲೆಯಲ್ಲಿ, ಜಾಹೀರಾತಿನಲ್ಲಿಅಮುಲ್ ಮೇಡ್ ಇನ್ ಇಂಡಿಯಾ ಎಂಬ ಪದಗಳಿವೆ. ಪ್ರಧಾನಿ ನರೇಂದ್ರ ಮೋದಿ ಅವರು ರೂಪಿಸಿದ ಹೊಸಆತ್ಮ ನಿರ್ಭರ ಭಾರತ ನೀತಿಯನ್ನು ಬೆಂಬಲಿಸುವುದರ ಜೊತೆಗೆ ಪೂರ್ವ ಲಡಾಕ್ನಲ್ಲಿ ಉಭಯ ದೇಶಗಳ ನಡುವಿನ ನಿಲುವಿನ ಹಿನ್ನೆಲೆಯ ವಿರುದ್ಧ ಭಾರತೀಯ ಸಾಮಾಜಿಕ ಮಾಧ್ಯಮಗಳಲ್ಲಿ ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಕಾರ್ಟೂನ್ ಒತ್ತಾಯಿಸಿದೆ. ಶನಿವಾರ ಮಧ್ಯಾಹ್ನ ಪರಿಶೀಲಿಸಿದಾಗ ಅಮುಲ್ ಅವರ ಟ್ವಿಟರ್ ಹ್ಯಾಂಡಲ್ ಅನ್ನು ಪ್ರವೇಶಿಸಬಹುದು ಮತ್ತು ಕಾರ್ಟೂನ್ ಹೊಂದಿರುವ ಪೋಸ್ಟ್ ಸಹ ಗೋಚರಿಸಿರುವುದು ಬೆಳಕಿಗೆ ಬಂದಿತು. "ಟ್ವಿಟ್ಟರಿನಿಂದ ಯಾವುದೇ ಅಧಿಕೃತ ಹೇಳಿಕೆ ನಮಗೆ ಬಂದಿಲ್ಲ. ಆದ್ದರಿಂದ ಖಾತೆಯನ್ನು ಏಕೆ ನಿರ್ಬಂಧಿಸಲಾಗಿದೆ ಎಂದು ನಮಗೆ ತಿಳಿದಿಲ್ಲ .... ಅಮುಲ್ ಯಾರ ವಿರುದ್ಧವೂ ಯಾವುದೇ ಅಭಿಯಾನವನ್ನು ನಡೆಸಿಲ್ಲ" ಎಂದು ಸೋಧಿ ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

ಇಂದಿನ ಇತಿಹಾಸ  History Today ಜೂನ್  06  (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

-ಸಂಗ್ರಹ: ನೆತ್ರಕೆರೆ ಉದಯಶಂಕರ

No comments:

Post a Comment