Monday, July 20, 2020

ಇಂದಿನ ಇತಿಹಾಸ History Today ಜುಲೈ 20

ಇಂದಿನ ಇತಿಹಾಸ  History Today ಜುಲೈ 20 

2020: ನವದೆಹಲಿ: ಕೋವಿಡ್-೧೯ರಕ್ಕೆ ಆಕ್ಸ್ ಫರ್ಡ್ ವಿಶ್ವವಿದ್ಯಾಲಯವು ನಡೆಸಿದ ಮೊದಲ ಹಂತದ ಪ್ರಾಯೋಗಿಕ ಪರೀಕ್ಷೆಯ ಫಲಿತಾಂಶ  2020 ಜುಲೈ 20ರ ಸೋಮವಾರ ಪ್ರಕಟಗೊಂಡಿದ್ದು, ಲಸಿಕೆಯ ಸುರಕ್ಷಿತ, ಸಹನೆ ಯೋಗ್ಯ ಹಾಗೂ ರೋಗ ನಿರೋಧಕ ಪ್ರತಿಕ್ರಿಯೆ ಉಂಟು ಮಾಡುತ್ತದೆ ಎಂಬುದು ಸ್ಪಷ್ಟವಾಗಿದೆ. ಪ್ರಾಥಮಿಕ ಪರೀಕ್ಷಾ ವರದಿಯು ಕೋವಿಡ್-೧೯ರ ಸಾಂಕ್ರಾಮಿಕವನ್ನು ಗುಣಪಡಿಸುವ ಭರವಸೆಯನ್ನು ಮೂಡಿಸಿದೆ ಎಂದು ಇಂಗ್ಲೆಂಡಿನ ದಿ ಲಾನ್ಸೆಟ್ವೈದ್ಯಕೀಯ ನಿಯತಕಾಲಿಕದ ಮುಖ್ಯ ಸಂಪಾದಕರು ಬರೆದರು. ಪ್ರಾಯೋಗಿಕ ಕೊರೋನಾವೈರಸ್ ಲಸಿಕೆಯು ಪ್ರಾಥಮಿಕ ಪರೀಕ್ಷೆಯು ಸುರಕ್ಷಿತ ಮತ್ತು ಜನರಲ್ಲಿ ಪ್ರತಿರೋಧ ಶಕ್ತಿಯನ್ನು ಹೆಚ್ಚಿಸುವುದನ್ನು ಖಚಿತ ಪಡಿಸಿದೆ ಎಂದು ಆಕ್ಸ್ ಫರ್ಡ್ ವಿಶ್ವ ವಿದ್ಯಾಲಯದ ವಿಜ್ಞಾನಿಗಳು ತಿಳಿಸಿದ್ದಾರೆ. ವ್ಯಾಪಕವಾಗಿ ಅನುಸರಿಸುತ್ತಿರುವ ಪ್ರಯೋಗವು ಪ್ರಸ್ತುತ ಸುಧಾರಿತ ಹಂತದಲ್ಲಿದೆ, ಇಂಗ್ಲೆಂಡ್, ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಪ್ರಯೋಗಗಳು ನಡೆಯುತ್ತಿವೆ. ಅಂತಿಮ ಫಲಿತಾಂಶಗಳು ಸಹ ಸಕಾರಾತ್ಮಕವಾಗಿದ್ದರೆ ಲಸಿಕೆಯನ್ನು ಸಾಮೂಹಿಕ ಪ್ರಮಾಣದಲ್ಲಿ ಉತ್ಪಾದಿಸಲು ಆಕ್ಸ್ಫರ್ಡ್, ಇಂಗ್ಲೆಂಡ್ ಸರ್ಕಾರ ಮತ್ತು ಬಯೋಫಾರ್ಮಾ ಸಂಸ್ಥೆ ಆಸ್ಟ್ರಾಜೆನೆಕಾ ನಡುವೆ ಈಗಾಗಲೇ ಸಹಮತಕ್ಕೆ ಬರಲಾಗಿದೆ. ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಅದರ ಉತ್ಪಾದನೆಗೆ ಜಾಗತಿಕ ಪಾಲುದಾರರಲ್ಲಿ ಒಂದಾಗಿದೆ. ಚೀನಾದಲ್ಲಿ ಲಸಿಕೆ ಪ್ರಯೋಗದ ನೇ ಹಂತವು ಸುರಕ್ಷಿತವಾಗಿದೆ ಎಂದು ಕಂಡುಬಂದಿದೆ ಮತ್ತು ಪ್ರತಿರಕ್ಷಣಾ ಪ್ರತಿಕ್ರಿಯೆಯನ್ನು ಪ್ರೇರೇಪಿಸುತ್ತದೆ ಎಂದು ನಿಯತಕಾಲಿಕ ವರದಿ ಮಾಡಿದೆ. ಮರುಸಂಘಟನೆಯ ಅಡೆನೊವೈರಸ್ ಟೈಪ್ --ವೆಕ್ಟರ್ಡ್ ಕೋವಿಡ್ -೧೯ ಲಸಿಕೆ (ಆಡ್ -ವೆಕ್ಟರ್ಡ್ ಕೋವಿಡ್ -೧೯ ಲಸಿಕೆ) ಯಾದೃಚ್ಛಿಕ ನಿಯಂತ್ರಿತ ಪ್ರಯೋಗವನ್ನು ಚೀನಾದಲ್ಲಿ ಏಪ್ರಿಲ್ನಲ್ಲಿ ನಡೆಸಲಾಯಿತು ಮತ್ತು ೫೦೦ ಕ್ಕೂ ಹೆಚ್ಚು ಜನರನ್ನು ಒಳಗೊಂಡಿತ್ತು. (ವಿವರಗಳಿಗೆ  ಇಲ್ಲಿ  ಕ್ಲಿಕ್   ಮಾಡಿರಿ)

2020: ನವದೆಹಲಿ: ಅಯೋಧ್ಯೆಯ ರಾಮಜನ್ಮಭೂಮಿ ಪ್ರದೇಶದಲ್ಲಿ ದೊರೆತ ವಸ್ತುಗಳನ್ನು ಸಂರಕ್ಷಿಸಿ ಇಡುವಂತೆ ಕೋರಿ ಸಲ್ಲಿಸಲಾಗಿದ್ದ ಎರಡು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸುಪ್ರೀಂಕೋರ್ಟ್ 2020 ಜುಲೈ 20ರ ಸೋಮವಾರ ವಜಾಗೊಳಿಸಿತು. ‘ಕ್ಷುಲ್ಲಕ ಅರ್ಜಿಸಲ್ಲಿಸಿದ್ದಕ್ಕಾಗಿ ಅರ್ಜಿದಾರರಿಗೆ ತಲಾ ಲಕ್ಷ ರೂಪಾಯಿಗಳ ದಂಡ ಕೂಡಾ ವಿಧಿಸಲಾಗಿದ್ದು, ದಂಡವನ್ನು ಒಂದು ತಿಂಗಳೊಳಗೆ ಪಾವತಿಸುವಂತೆ ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ, ಬಿ.ಆರ್.ಗವಾಯಿ ಮತ್ತು ಕೃಷ್ಣನ್ ಮುರಾರಿ ಅವರ ಪೀಠ ಆಜ್ಞಾಪಿಸಿತು.  ಐವರು ನ್ಯಾಯಮೂರ್ತಿಗಳ sಸಂವಿಧಾನ ಪೀಠವು ಈಗಾಗಲೇ ರಾಮಜನ್ಮಭೂಮಿ ಸಂಬಂಧ ತೀರ್ಪನ್ನು ನೀಡಿದೆ. ಅರ್ಜಿಗಳು ತೀರ್ಪನ್ನು ಪ್ರಶ್ನಿಸುವಂತಿವೆ. ಇವು ಗಂಭೀರವಲ್ಲದ ಕ್ಷುಲ್ಲಕಅರ್ಜಿಗಳು ಎಂದು ಪೀಠ ಹೇಳಿತುರಾಮಜನ್ಮಭೂಮಿ ಟ್ರಸ್ಟ್ ಕಲಾಕೃತಿ ಮತ್ತು ದೊರೆತ ವಸ್ತುಗಳನ್ನು ರಕ್ಷಿಸುವುದಾಗಿ ಹೇಳಿದೆ. ಆದರೂ, ಅರ್ಜಿದಾರರು ಸಂವಿಧಾನದ ೩೨ನೇ ವಿಧಿಯನ್ವಯ ಕೋರ್ಟ್ ಮುಂದೆ ಬಂದಿರುವುದು ಏಕೆ ಎಂದು ಪೀಠ ಪ್ರಶ್ನಿಸಿತು. ಅರ್ಜಿದಾರರಾದ ಸತೀಶ್ ಚಿಂದೂಜಿ ಶಂಭರ್ಕರ್ ಮತ್ತು ಡಾ.ಅಂಬೇಡ್ಕರ್ ಫೌಂಡೇಶನ್ ಗೆ ದಂಡ ವಿಧಿಸಬೇಕು ಎಂದು ಸರ್ಕಾರದ ಪರ ವಾದಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ನ್ಯಾಯಾಲಯಕ್ಕೆ ಮನವಿ ಮಾಡಿದರು. ಇದನ್ನು ಪೀಠ ಪುರಸ್ಕರಿಸಿತು. ಅಯೋಧ್ಯೆಯಲ್ಲಿ ದೊರೆತ ವಸ್ತುಗಳನ್ನು ಸಂರಕ್ಷಿಸುವಂತೆ ಭಾರತೀಯ ಪುರಾತತ್ವ ಇಲಾಖೆಗೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ನ್ಯಾಯಾಲಯವನ್ನು ಕೋರಿದ್ದರುನೀವು ಇಂತಹ ಕ್ಷುಲ್ಲಕ ಅರ್ಜಿ ಸಲ್ಲಿಸುವುದನ್ನು ನಿಲ್ಲಿಸಬೇಕು. ಅರ್ಜಿ ಮೂಲಕ ನೀವು ಏನು ಹೇಳಲು ಹೊರಟಿದ್ದೀರಿ? ಕಾನೂನಿನ ಆಡಳಿತ ಇಲ್ಲ ಮತ್ತು ನ್ಯಾಯಾಲಯದ ಐವರು ನ್ಯಾಯಮೂರ್ತಿಗಳ ಪೀಠದ ತೀರ್ಪನ್ನು ಯಾರೊಬ್ಬರೂ ಪಾಲಿಸುತ್ತಿಲ್ಲ ಎಂದು ನೀವು ಹೇಳುತ್ತೀರಾ? ಎಂದು ಅರ್ಜಿದಾರರನ್ನು ಪೀಠ ಪ್ರಶ್ನಿಸಿತು. ಕೇಂದ್ರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ ಮೆಹ್ತಾ ಅವರು ನ್ಯಾಯಾಲಯವು ದಂಡ ವಿಧಿಸುವ ಬಗ್ಗೆ ಕೂಡಾ ಪರಿಗಣಿಸಬೇಕುಎಂದು ಹೇಳಿದರು. (ವಿವರಗಳಿಗೆ  ಇಲ್ಲಿ  ಕ್ಲಿಕ್   ಮಾಡಿರಿ)

2020: ಅಯೋಧ್ಯೆ: ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ ರಂದು ರಾಮಮಂದಿರ  ನಿರ್ಮಾಣಕ್ಕೆ ಅಡಿಪಾಯ ಹಾಕುವ ಸಾಧ್ಯತೆ ಇದೆ ಎಂದು ಅಯೋಧ್ಯಾ ಮಂದಿರದ ಅರ್ಚಕರು ಹೇಳಿದ್ದು, ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಕೂಡಾ ಸಮಾರಂಭದಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ ಎಂದು ಸುದ್ದಿ ಮೂಲಗಳು 2020 ಜುಲೈ 20ರ ಸೋಮವಾರ ತಿಳಿಸಿದವು. ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ ಭಾಗವತ್ ಅವರಿಗೂ ಆಹ್ವಾನಗಳನ್ನು ಕಳುಹಿಸಲಾಗಿದೆ. ಪಟ್ಟಿಯಲ್ಲಿ ಇತರ ಮುಖ್ಯಮಂತ್ರಿಗ ಜೊತೆಗೆ ನಿತೀಶ್ ಕುಮಾರ್ ಹೆಸರು  ಕೂಡಾ ಇದೆ. ಒಟ್ಟಾರೆಯಾಗಿ, ಸುಮಾರು ೩೦೦ ಜನರಿಗೆ ಆಹ್ವಾನವನ್ನು ಕಳುಹಿಸುವ ಸಾಧ್ಯತೆಯಿದೆ. ಆಗಸ್ಟ್ ರಿಂದ ಅಯೋಧ್ಯೆಯ ರಾಮ ಜನ್ಮಭೂಮಿ ಸ್ಥಳದಲ್ಲಿ ಮೂರು ದಿನಗಳ ವೈದಿಕ ಆಚರಣೆಗಳೊಂದಿಗೆ ನಡೆಯುವ ಸಮಾರಂಭದ ವಿಸ್ತಾರವಾದ ಯೋಜನೆಯನ್ನು ಅರ್ಚಕರು ಸಿದ್ಧಪಡಿಸಿದ್ದಾರೆ. ಬಳಿಕ ಆಗಸ್ಟ್ ರಂದು ರಾಮಚಾರ್ಯ ಪೂಜೆಮತ್ತು ಆಗಸ್ಟ್ ರಂದು ಭೂಮಿ ಪೂಜೆನಡೆಯಲಿದೆ. ಭೂಮಿ ಪೂಜೆಯು ಮಧ್ಯಾಹ್ನ ೧೨.೧೫ರ ವೇಳೆಗೆ ನಡೆಯಲಿದೆ. ಪ್ರಧಾನಿ ಮೋದಿಯವರು ಎರಡನೇ ಅವಧಿಗೆ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಅಯೋಧ್ಯೆ ಮತ್ತು ರಾಮ ಮಂದಿರ ನೀಡುತ್ತಿರುವ ಮೊದಲ ಭೇಟಿ ಇದು. ಫೆಬ್ರವರಿ ರಂದು ಪ್ರಧಾನಿಯವರು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ರಚನೆ ಘೋಷಿಸಿದ್ದರು. ಭೂಮಿ ಪೂಜೆಸಮಾರಂಭದಲ್ಲಿ ಗರ್ಭಗೃಹದೊಳಗೆ ಐದು ಬೆಳ್ಳಿ ಇಟ್ಟಿಗೆಗಳನ್ನು ಸ್ಥಾಪಿಸಲಾಗುವುದು. ಮೊದಲನೆಯದನ್ನು ಪ್ರಧಾನಿ ಮೋದಿ ಇಡಲಿದ್ದಾರೆ. ಐದು ಇಟ್ಟಿಗೆಗಳು ಹಿಂದೂ ಪುರಾಣದ ಪ್ರಕಾರ ಐದು ಗ್ರಹಗಳನ್ನು ಸಂಕೇತಿಸುತ್ತವೆ ಎಂದು ನಂಬಲಾಗಿದೆ. ದೇವಾಲಯದ ವಿನ್ಯಾಸ ಮತ್ತು ವಾಸ್ತುಶಿಲ್ಪವು ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ಪ್ರಸ್ತಾಪಿಸಿದಂತೆಯೇ ಇರುತ್ತದೆ. ವಿನ್ಯಾಸವು ವಿಷ್ಣು ದೇವಾಲಯದ ನಾಗರ ಶೈಲಿಯನ್ನು ಅನುಸರಿಸುತ್ತದೆ ಮತ್ತು ಗರ್ಭ ಗೃಹಅಷ್ಟ ಭುಜಾಕೃತಿಯಾಗಿರುತ್ತದೆ. . (ವಿವರಗಳಿಗೆ  ಇಲ್ಲಿ  ಕ್ಲಿಕ್   ಮಾಡಿರಿ)

2020: ನವದೆಹಲಿ: ಬಂಡಾಯ ಕಾಂಗ್ರೆಸ್ ಮುಖಂಡ ಸಚಿನ್ ಪೈಲಟ್ ಮತ್ತು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ ಗೆಹ್ಲೋಟ್ ಅವರ ವಾಕ್ಸಮರವು 2020 ಜುಲೈ 20ರ ಸೋಮವಾರ ಕೂಡಾ ಮುಂದುವರೆದಿದ್ದು, ಸಚಿನ್ ಪೈಲಟ್ ಅವರು ಸರ್ಕಾರ ಉರುಳಿಸಲು ಬಿಜೆಪಿ ಜೊತೆ ಕೈಜೋಡಿಸಿದ್ದಾರೆ ಎಂದು ಆಪಾದಿಸಿದರೆ, ಪೈಲಟ್ ಅದನ್ನು ಆಧಾರರಹಿತ ಎಂದು ಅಲ್ಲಗಳೆದರು. ಪಕ್ಷದ ಶಾಸಕರೊಬ್ಬರಿಗೆ ಬಿಜೆಪಿಯತ್ತ ಸಾಗಲು ಹಣ ನೀಡಲಾಗಿದೆಎಂಬ ಆರೋಪದಿಂದ ನನಗೆ ದುಃಖವಾಗಿದೆ, ಆದರೆ ಅಚ್ಚರಿ ಇಲ್ಲಎಂದು ಸಚಿನ್ ಪೈಲಟ್ ಹೇಳಿದರು. ಹಣ ನೀಡುವ ಆರೋಪ ಆಧಾರ ರಹಿತಎಂಬುದಾಗಿ ಹೇಳಿದ ರಾಜಸ್ಥಾನದ ಮಾಜಿ ಉಪ ಮುಖ್ಯಮಂತ್ರಿ ಇದು ತಮ್ಮ ಪ್ರತಿಷ್ಠೆಯನ್ನು ಹಾಳುಮಾಡುವ ಮತ್ತು ಪಕ್ಷದ ರಾಜ್ಯ ನಾಯಕತ್ವದ ವಿರುದ್ಧ ತಾವು ಎತ್ತಿರುವ ಮಹತ್ವದ ವಿಷಯದಿಂದ ಗಮನವನ್ನು ಬೇರೆಡೆಗೆ ಸೆಳೆಯುವ ಸ್ಪಷ್ಟ ಪ್ರಯತ್ನವಾಗಿದೆ ಎಂದು ಹೇಳಿದರು. "ನಾನು ದುಃಖಿತನಾಗಿದ್ದೇನೆ ಆದರೆ ಇಂತಹ ಆಧಾರರಹಿತ ಮತ್ತು ಅಸಹ್ಯಕರ ಆರೋಪಗಳನ್ನು ನನ್ನ ವಿರುದ್ಧ ಹೊರಿಸಲಾಗುತ್ತಿರುವುದಕ್ಕೆ ಆಶ್ಚರ್ಯವಿಲ್ಲ. ಭಾರತ ರಾಷ್ಟ್ರೀಯ ಕಾಂಗ್ರೆಸ್ಸಿನ ಸದಸ್ಯ ಮತ್ತು ಶಾಸಕನಾಗಿ ನಾನು ಪಕ್ಷದ ನಾಯಕತ್ವದ ವಿರುದ್ಧ ಎತ್ತಿರುವ ನ್ಯಾಯಸಮ್ಮತವಾದ ಕಳವಳಗಳನ್ನು ತಳ್ಳಿಹಾಕುವ ಸಲುವಾಗಿ ಮಾತ್ರ ಇದನ್ನು ಮಾಡಲಾಗಿದೆ. ಪ್ರಯತ್ನವು ನನ್ನನ್ನು ಕೆಣಕುವ ಮತ್ತು ನನ್ನ ವಿಶ್ವಾಸಾರ್ಹತೆಯ ಮೇಲೆ ಆಕ್ರಮಣ ಮಾಡುವ ಉದ್ದೇಶವನ್ನು ಹೊಂದಿದೆಎಂದು ಸಚಿನ್ ಪೈಲಟ್ ಹೇಳಿಕೆಯೊಂದರಲ್ಲಿ ತಿಳಿಸಿದರು. ರಾಜಸ್ಥಾನ ಕಾಂಗ್ರೆಸ್ ಶಾಸಕ ಗಿರಿರಾಜ್ ಸಿಂಗ್ ಮಾಲಿಂಗ ಅವರು ಪೈಲಟ್ ಮನೆಯಲ್ಲಿ ನಡೆದ ಮಾತುಕತೆಯಲ್ಲಿ ಬಿಜೆಪಿಯತ್ತ ನಿಷ್ಠೆ ಬದಲಿಸಲು ತಮಗೆ ಹಣದ ಆಮಿಷ ಒಡ್ಡಲಾಯಿತು ಎಂಬುದಾಗಿ ಹೇಳಿದ್ದರು. ಆದರೆ ಹಣದ ಮೊತ್ತವನ್ನು ಅವರು ಪ್ರಕಟಿಸಿರಲಿಲ್ಲ. ಯೋಜನೆಯ ಬಗ್ಗೆ ಮುಖ್ಯಮಂತ್ರಿ ಅಶೋಕ ಗೆಹ್ಲೋಟ್ ಅವರಿಗೆ ತಿಳಿಸಿದ್ದೇನೆಎಂದು ಶಾಸಕ ಹೇಳಿದ್ದರು. . (ವಿವರಗಳಿಗೆ  ಇಲ್ಲಿ  ಕ್ಲಿಕ್   ಮಾಡಿರಿ)

ಇಂದಿನ ಇತಿಹಾಸ  History Today ಜುಲೈ 20  (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

-ಸಂಗ್ರಹ: ನೆತ್ರಕೆರೆ ಉದಯಶಂಕರ


No comments:

Post a Comment