Monday, June 10, 2019

ಇಂದಿನ ಇತಿಹಾಸ History Today ಜೂನ್ 10

ಇಂದಿನ ಇತಿಹಾಸ History Today ಜೂನ್ 10
2019: ಬೆಂಗಳೂರು: ಬಹು ಅಂಗಾಂಗ ವೈಫಲ್ಯ ದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪ್ರಗತಿಪರ ಚಿಂತಕ, ಜ್ಞಾನಪೀಠ ಪುರಸ್ಕೃತ ಸಾಹಿತಿ ಗಿರೀಶ್ ಕಾರ್ನಾಡ್ (೮೧) ಅವರು ಈದಿನ ವಿಧಿವಶರಾದರು. ಸಾಹಿತ್ಯ, ನಾಟಕ ಹಾಗೂ ಸಿನಿಮಾ ಕ್ಷೇತ್ರಗಳಿಗೆ ಅಪಾರವಾದ ಕೊಡುಗೆ ನೀಡಿದ್ದ ಕಾರ್ನಾಡರ ಅಗಲಿಕೆಗೆ ಸಾಹಿತ್ಯ, ರಾಜಕೀಯ, ಸಿನಿಮಾ, ನಾಟಕ ರಂಗದ ಗಣ್ಯರು ಹಾಗೂ ಅವರ ಅಭಿಮಾನಿಗಳು ಕಂಬನಿ ಮಿಡಿದರು. ಸಂತಾಪ ಸೂಚಕವಾಗಿ  ಶಾಲಾ ಕಾಲೇಜು ಹಾಗೂ ಸರ್ಕಾರಿ ಕಚೇರಿ ಗಳಿಗೆ ರಜೆ ಘೋಷಿಸಲಾಯಿತು. ಮೂರು ದಿನಗಳ ಕಾಲ ಶೋಕಾಚರಣೆ ನಡೆಸಲು ಸರ್ಕಾರ ತೀರ್ಮಾನಿಸಿತು. ಉತ್ಕೃಷ್ಟ ಬರವಣಿಗೆ ಹಾಗೂ ತಮ್ಮ ಮನೋಜ್ಞ ಅಭಿನಯದ ಮೂಲಕ ಸಮಾಜ ಅಂಕುಡೊಂಕುಗಳನ್ನು ತಿದ್ದಿ, ಸಾಹಿತ್ಯ ಲೋಕದ ವಕ್ತಾರ ಎನಿಸಿಕೊಂಡಿದ್ದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ, ನಾಟಕಕಾರ, ಹಾಗೂ ಸಾಹಿತಿ ಗಿರೀಶ್ ಕಾರ್ನಡ್, ಕನ್ನಡ ಮಾತ್ರವಲ್ಲದೆ, ದೇಶದ ಶ್ರೇಷ್ಠ ಸಾಹಿತಿಗಳಲ್ಲಿ ಒಬ್ಬರಾಗಿದ್ದರು.  ಕಳೆದ ಹಲವು ದಿನಗಳಿಂದ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರು. ಈದಿನ  ಬೆಳಗ್ಗೆ ಗಂಟೆಗೆ ಬೆಂಗಳೂರಿನ ಲ್ಯಾವೆಲ್ಲೆ ರಸ್ತೆಯ ನಿವಾಸದಲ್ಲಿ ಕೊನೆಯುಸಿರೆಳೆದರು.  ಮೃತರು ಪತ್ನೀ, ಪುತ್ರ, ಪುತ್ರಿ ಸೇರಿದಂತೆ ಅಪಾರ ಸಂಖ್ಯೆಯ ಅಭಿಮಾನಿಗಳು, ಸಾಹಿತಿ ಗಳು, ಬರಹಗಾರರು, ನಾಟಕಕಾರರು, ಚಿಂತಕ ರನ್ನು ಬಿಟ್ಟು ಆಗಲಿದ್ದಾರೆ. ಗಿರೀಶ್ ಕಾರ್ನಾಡ್ ಅವರ ಅಂತ್ಯಕ್ರಿಯೆಯನ್ನು ಬೈಯ್ಯಪ್ಪನಹಳ್ಳಿಯ ಕಲ್ಲಹಳ್ಳಿ ವಿದ್ಯುತ್ ಚಿತಗಾರದಲ್ಲಿ ಯಾವುದೇ ರೀತಿಯ ಸಂಪ್ರಾದಾಯಗಳನ್ನು ಅನುಸರಿಸದೆ ಅವರ ಇಷ್ಟದಂತೆಯೇ ಸರಳವಾಗಿ ನೇರವೇ ರಿಸಲಾಯಿತು.  ರಾಜ್ಯ ಸರ್ಕಾರ ಸಕಲ ಗೌರವದೊಂದಿಗೆ ಅಂತ್ಯಕ್ರಿಯೆ ನೇರವೇರಿಸುವುದಾಗಿ ಹೇಳಿತ್ತು. ಆದರೆ, ಸ್ವತಃ ಕಾರ್ನಾಡ್ ಅವರೇ ನನ್ನ ಅಂತ್ಯ ಸಂಸ್ಕಾರವನ್ನು ಯಾವುದೇ ವಿಧಿ ವಿಧಾನ ಇಲ್ಲದೆ ಹಾಗೂ ಸರ್ಕಾರದಿಂದ ಗೌರವ ವನ್ನು ಪಡೆಯದೇ ಸರಳವಾಗಿ ಮಾಡುವಂತೆ ತಮ್ಮ ಕುಟುಂಬದ ಸದಸ್ಯರಿಗೆ ಬದುಕಿದ್ದಾಗಲೇ ಸೂಚನೆ ಕೊಟ್ಟಿದ್ದರು. ಹೀಗಾಗಿ ಅವರ ಇಚ್ಛೆ ಯಂತೆಯೇ ಅಂತ್ಯ ಸಂಸ್ಕ್ರಾರ ಮಾಡಲಾ ಯಿತು. ಸರ್ಕಾರದ ಪರವಾಗಿ ಸಚಿವ ಡಿ.ಕೆ.ಶಿವಕುಮಾರ್, ಬಿಬಿಎಂಪಿ ಮೇಯರ್ ಗಂಗಾಂಬಿಕೆ ಸೇರಿದಂತೆ ಸಾಹಿತಿಗಳು, ಚಿತ್ರ ರಂಗದ ಗಣ್ಯರು ಮತ್ತಿತರರು ಭಾರವಾದ ಮನಸ್ಸಿನಿಂದ ಬೀಳೊಟ್ಟರು. ಕನ್ನಡ ಸಾಹಿತ್ಯ ಲೋಕ ಕಂಡ ಅದ್ಭುತ ನಾಟಕಕಾರ, ಸಾಹಿತಿ , ಚಿತ್ರ ನಟ ಮತ್ತು ನಿರ್ದೇಶಕ. ಕನ್ನಡ, ಹಿಂದಿ, ತೆಲಗು,ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ತಮ್ಮ ಅಭಿ ನಯದಿಂದ ವಿಶಿಷ್ಟ ಮುದ್ರೆ ಒತ್ತಿರುವ ಇವರು ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡದ ಏಳನೇ ಸಾಹಿತಿ.  ಪ್ರಗತಿಶೀಲ ಸಮತಾವಾದ ಮತ್ತು ಜಾತ್ಯ ತೀತತೆಯನ್ನು ಪ್ರತಿಪಾದಿಸುತ್ತಿದ್ದ ಇವರು ಕೆಲವು ಬಾರಿ ತಮ್ಮ ನೇರ ನುಡಿಗಳ ಮೂಲಕ ಹಲವು ವಿವಾದಗಳಲ್ಲಿ ಸಿಲುಕಿದ್ದುಂಟು.  ೧೯೩೮ ಮೇ ೧೯ ರಂದು ಮಹಾರಾಷ್ಟ್ರದ ಮಾಥೇರಾನದಲ್ಲಿ ಜನಿಸಿದರು. ಇವರ ತಂದೆ ರಘುನಾಥ ಕಾರ್ನಾಡ ಮುಂಬೈಯಲ್ಲಿ ವೈದ್ಯ ರಾಗಿ ಸೇವೆ ಸಲ್ಲಿಸುತ್ತಿದ್ದರು. ತಾಯಿ ಕೃಷ್ಣಾ ಬಾಯಿ ಬಾಲ್ಯವಿವಾಹವಾಗಿ ಒಂದು ಮಗು ವಾದ ನಂತರ ವಿಧವೆಯಾಗಿದ್ದರು. ರಘುನಾಥ ಆಸ್ಪತ್ರೆಯಲ್ಲಿ ಶುಶ್ರೂಷಕಿಯಾಗಿ ಸೇವೇ ಸಲ್ಲಿಸುವಾಗ ಪರಿಚಯವಾದ ಇವರನ್ನು ಆಗಿನ ಸಮಾಜಿಕ ಕಟ್ಟುಪಾಡುಗಳ ವಿರುದ್ಧವಾಗಿ ರಘುನಾಥರು ಕೈಹಿಡಿದರು. ನಂತರ ದಂಪತಿಗಳ ಮೂರನೇ ಮಗನಾಗಿ ಗಿರೀಶ್ ಜನಿಸಿದರು.  ಬಾಲ್ಯದಲ್ಲಿ ಕೆಲಕಾಲ ಮರಾಠಿ ಶಿಕ್ಷಣ ಪಡೆದ ನಂತರ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿ ಧಾರವಾಡದ ಬಾಸೆಲ್ ಮಿಶನ್ನಲ್ಲಿ ಹೈಸ್ಕೂಲ್ ಓದಿದ ನಂತರ ಕರ್ನಾಟಕ ಕಾಲೇಜಿನಲ್ಲಿ ಪದವಿ ಶಿಕ್ಷಣವನ್ನು ಮುಗಿಸಿದರು. ನಂತರ ಹೋರ್ಡ್ಸ್ ಸ್ಕಾಲರ್ಶಿಪ್ ಪಡೆದುಕೊಂಡು ಆಕ್ಸ್ಫರ್ಡ್ ಯೂನಿವರ್ಸಿಟಿಯಲ್ಲಿ ರಾಜ ಕೀಯಶಾಸ್ತ್ರ, ತತ್ವಶಾಸ್ತ್ರ ಮತ್ತು ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ೧೯೬೩ ರಲ್ಲಿ ಚರ್ಚಾಕೂಟದ ವೇದಿಕೆಯಾದ ಆಕ್ಸ್ಫರ್ಡ್ ಯೂನಿಯನ್ ಆಧ್ಯಕ್ಷರಾದರು.  ವೃತ್ತಿ ಜೀವನ: ಚೆನ್ನೈನಲ್ಲಿ ಆಕ್ಸ್ಫರ್ಡ್ ಯೂನಿವರ್ಸಿಟಿ ಪ್ರೆಸ್ನಲ್ಲಿ ಸುಮಾರು ವರ್ಷ ಕೆಲಸ ಮಾಡಿದ ಇವರು ನಂತರ ಅಮೇರಿಕಾದ ಚಿಕಾಗೋ ಯೂನಿವರ್ಸಿಟಿಯಲ್ಲಿ ಒಂದು ವರ್ಷ ಅತಿಥಿ ಪ್ರಾಧ್ಯಾಪಕರಾಗಿ ಕೆಲಸ ಮಾಡಿ ದರು. ಇವೆಲ್ಲರ ಮಧ್ಯೆಯೇ ನಾಟಕ ಬರಹ ದಲ್ಲಿ ತೊಡಗಿದ್ದರು. ಇವರು ಕೆಲಕಾಲ ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆ ಮತ್ತು ಸಂಗೀತ ನಾಟಕ ಅಕಾಡೆಮಿ ಅಧ್ಯಕ್ಷ ರಾಗಿ ಕಾರ್ಯ ನಿರ್ವಹಿಸಿದ್ದರು. ೧೯೮೦ ರಲ್ಲಿ ಡಾ.ಸರಸ್ವತಿ ಗಣಪತಿಯವರನ್ನು ಮದುವೆ ಯಾದರು.೨೦೧೧ ರಲ್ಲಿ ತಮ್ಮ ಆತ್ಮಕಥೆಯಾದಆಡಾಡತ ಆಯುಷವನ್ನು ರಚಿಸಿದರುಕಾರ್ನಾಡರ ನಾಟಕ ಪ್ರಪಂಚ: ಇವರು ಬರೆದನಾಗಮಂಡಲ ಒಂದು ಜನಪದ ಕಥೆಯಾಗಿದ್ದು, ಇವರಿಗೆ ಕರ್ನಾಟಕ ಸಾಹಿತ್ಯ ಪ್ರಶಸ್ತಿ ದೊರೆಕಿಸಿ ಕೊಟ್ಟಿತು. ಇದು ಮನುಷ್ಯನ ಕಾಮವನ್ನು ಬಹುರೂಪಿ ಸರ್ಪದೊಂದಿಗೆ ಸಮೀಕರಿಸಿ ಬರೆದಂತಹ ನಾಟಕವಾಗಿತ್ತು. ಇದು ಮುಂದೆ ೧೯೯೭ ರಲ್ಲಿ ಟಿ.ಎಸ್.ನಾಗಾಭರಣರ ನಿರ್ದೇಶನದಲ್ಲಿ ಚಲನಚಿತ್ರವಾಗಿ ಮೂಡಿತುಮಹಾಭಾರತದ ಪಾತ್ರ ಯಯಾತಿ ಮೇಲೆ ಹೊರಬಂದ ನಾಟಕಯಯಾತಿ ವಿವಾಹಿತ ರಾಜನ ಅತೃಪ್ತ ಕಾಮ ವಾಸನೆ ಮತ್ತು ಅತಿಲೋಲುಪತೆಯ ಮೇಲೆ ಬೆಳುಕು ಚೆಲ್ಲಿತು. ನೆಹರೂ ಕಾಲದ ಅತಿಯಾದ ಆದರ್ಶವಾದ ಮತ್ತು ಅದು ಹತಾಶೆಯಲ್ಲಿ ಪರ್ಯವಸಾನಗೊಂಡ ವ್ಯಥೆಯನ್ನು ತುಘಲಕ್ನೊಂದಿಗೆ ಸಮೀಕರಿಸಿ ಐತಿಹಾಸಿಕತುಘಲಕ್ ನಾಟಕ ರಚಿಸಿದರುಕಥಾಸರಿತ್ಸಾಗರದ ಕಥೆಯಾಧಾರಿತಹಯವದನ ಮನುಷ್ಯನ ಅಪೂರ್ಣತೆ, ಪೂರ್ಣತೆಯೆಡಗಿನ ಬಯಕೆಯ ಮೇಲೆ ಬೆಳಕು ಚೆಲ್ಲಿತು. ನಂತರ ಬಂದತೆಲೆದಂಡ ೧೨ ನೇ ಶತಮಾನದಲ್ಲಿ ಬಸವಕಲ್ಯಾಣದಲ್ಲಿ ಬಸವಾದಿ ಪ್ರಮಥರ ಮೇಲೇ ನಡೆದಂತ ದಬ್ಬಾಳಿಕೆ, ಕಗ್ಗೊಲೆಗಳನ್ನು ತೆರೆದಿಟ್ಟಿತು. ಇವರಅಂಜು ಮಲ್ಲಿಗೆ ನಾಟಕ ಸಹೋದರ- ಸಹೋದರಿಯ ನಡುವೆ ಮೂಡುವ ನಿಷಿದ್ಧ ಪ್ರೇಮದೆಡೆಗೆ ಬೆಳಕು ಚೆಲ್ಲಿತ್ತದೆ. ಹೀಗೆ ಕಾರ್ನಾಡರ ನಾಟಕ ಪ್ರಪಂಚ ಬದುಕಿನ ಮತ್ತು ಮನುಷ್ಯನ ಜೀವನ ಘಟ್ಟದ ಹಲವಾರು ಆಯಾಮಗಳ ಪರಿಚಯ ಮಾಡಿಸಿಕೊಡುತ್ತವೆ. ಸಿನಿಜೀವನ: ೧೯೭೦ ರಲ್ಲಿ ತೆರೆಕಂಡ ಯು.ಆರ್.ಅನಂತಮೂರ್ತಿ ಕಾದಂಬರಿ ಆಧಾರಿತಸಂಸ್ಕಾರ ಚಿತ್ರದ ಮೂಲಕ ನಟನೆಗೆ ಇಳಿದರು.   ಚಿತ್ರದಲ್ಲಿನ ಪ್ರಾಣೇಶಾಚಾರ್ಯ ಪಾತ್ರವನ್ನು ತುಂಬಾ ಪ್ರಬುದ್ಧರಾಗಿ ನಿಭಾಯಿಸಿದರು. ಚಿತ್ರಕ್ಕೆ ಚಿತ್ರಕಥೆ ಮತ್ತು ಸಂಭಾಷಣೆಯನ್ನು ಕೂಡ ಇವರೇ ಬರೆದಿದ್ದರು.ನಂತರ ಶಂಕರ ನಾಗ್ ನಿರ್ದೇಶನದಮಾಲ್ಗುಡಿ ಡೇಸ್ ಕಿರುತೆರೆ ಧಾರಾವಾಹಿಯಲ್ಲಿ ನಟಸಿದರು. ಎಸ್.ಎಲ್. ಭೈರಪ್ಪನವರ ಕಾದಂಬರಿ ಆಧಾರಿತವಂಶವೃಕ್ಷವನ್ನು ತೆರೆಗೆ ತರುವ ಮೂಲಕ ಚಿತ್ರ ನಿರ್ದೇಶನಕ್ಕೂ ಕಾಲಿಟ್ಟರು. ಚಿತ್ರಕ್ಕಾಗಿ ರಾ?ಷ್ಟ್ರ ಪ್ರಶಸ್ತಿ ಪಡೆದರು. ಕುವೆಂಪುರವರಕಾನೂರು ಹೆಗ್ಗಡತಿ ಕೃತಿಯನ್ನು ಪರದೆಗೆ ತಂದ ಕೀರ್ತಿ ಕಾರ್ನಾಡರದು. ನಂತರ ಹಲವಾರು ಚಿತ್ರಗಳನ್ನು ಮತ್ತು ಸಾಕ್ಷ್ಯ ಚಿತ್ರಗಳನ್ನು ನಿರ್ದೇಶಿಸಿದರು.  ತಮ್ಮ ನಟನೆಯಿಂದಲೂ ಪ್ರಸಿದ್ಧರಾಗಿದ್ದ ಇವರು ಹಲವು ಕನ್ನಡ,ತೆಲಗು ಮತ್ತು ಹಿಂದಿ ಚಿತ್ರಗಳಲ್ಲಿ ಅಭಿನಯಿಸಿದ್ದರು.  ಜ್ಞಾನಪೀಠ ಪುರಸ್ಕೃತ ಹಿರಿಯ ಸಾಹಿತಿ ಡಾ. ಗಿರೀಶ್ ಕಾರ್ನಾಡ್ಅವರ ನಿಧನಕ್ಕೆ ರಾಷ್ಟ್ರಪತಿ ರಾಮನಾಥ್ಕೋವಿಂದ್ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಸಂತಾಪ ಸೂಚಿಸಿದರು. ಭಾರತೀಯ ರಂಗಭೂಮಿಯ ಹಿರಿಯ ನಟ, ಸಾಹಿತಿ ಗಿರೀಶ್ ಕಾರ್ನಾಡ್ ಅವರು ನಿಧನರಾದ ಸುದ್ದಿ ಕೇಳಿ ಬಹಳ ದುಃಖವಾ ಯಿತು. ನಮ್ಮ ಸಾಂಸ್ಕೃತಿಕ ಜಗತ್ತು ಇಂದು ಬಡ ವಾಗಿದೆ ಎಂದು ಟ್ವಿಟ್ಟರ್ನಲ್ಲಿ ರಾಷ್ಟ್ರಪತಿ ಬರೆದರು. ಗಿರೀಶ್ ಕಾರ್ನಾಡ್ ಅವರು ತಮ್ಮ ಅದ್ಭುತ ನಟನೆಯಿಂದ ಎಲ್ಲಾ ಮಾಧ್ಯಮಗಳಲ್ಲೂ ಹೆಸರು ಮಾಡಿದವರು. ಹಾಗೆಯೇ ಒಳ್ಳೆಯ ವಿಚಾರಗಳಿಗೆ ಭಾವೋದ್ವೇಗದಿಂದ ಮಾತನಾ ಡುವುದು ಅವರಿಗೆ ಅಚ್ಚುಮೆಚ್ಚು. ಅವರ ಕೃತಿ ಗಳು ಹೀಗೆಯೇ ಮುಂಬರುವ ವರ್ಷಗಳಲ್ಲೂ ಜನಪ್ರಿಯವಾಗಿರಲಿ. ಅವರ ಸಾವಿನಿಂದ ದುಃಖಿತನಾಗಿದ್ದೇನೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಧಾನಿ ಕೋರಿದರು.

2019: ಮುಂಬೈ: ಭಾರತೀಯ ಕ್ರಿಕೆಟ್ ಪ್ರಖ್ಯಾತ ಆಲ್ ರೌಂಡರ್ ೨೦೦೭ರ ಟ್ವಿ-೨೦ ವಿಶ್ವಕಪ್ ಹಾಗೂ ೨೦೧೧ರ ಏಕದಿನ ವಿಶ್ವಕಪ್ ಹೀರೋ ಎಂದೇ ಕರೆಸಿಕೊಳ್ಳುವ ಯುವರಾಜ್ ಸಿಂಗ್ ಎಲ್ಲ ಮಾದರಿಯ ಅಂತಾ ರಾಷ್ಟ್ರೀಯ ಕ್ರಿಕೆಟಿಗೆ ನಿವೃತ್ತಿ ಘೋಷಿಸಿದರು. ಸಿಕ್ಸರ್ ಕಿಂಗ್ ಯುವರಾಜ್ ನಿವೃತ್ತಿ ಹೇಳ ಲಿದ್ದಾರೆಂದು ಸಾಮಾಜಿಕ ತಾಣಗಳಲ್ಲಿ ಭಾರೀ ಸುದ್ದಿಯಾಗಿತ್ತು. ಅಂತೆಯೇ  ಈದಿನ  ಮುಂಬೈ ಯಲ್ಲಿ ಸುದ್ದಿಗೋಷ್ಠಿ ನಡೆಸಿ ಯುವರಾಜ್ ಸಿಂಗ್ ತಮ್ಮ ಕ್ರಿಕೆಟ್ ಜೀವನದ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಂಡು ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಗುಡ್ ಬೈ ಹೇಳಿದರು. ಯುವರಾಜ್ ಸಿಂಗ್ ಆಲ್ರೌಂಡರ್ ಆಗಿ ಭಾರತದ ತಂಡದಲ್ಲಿ ಹಲವು ವರ್ಷಗಳ ಕಾಲ ಕ್ರಿಕೆಟ್ ವೃತ್ತಿಯಲ್ಲಿ ಮಿಂಚಿದ್ದರು. ೨೦೦೭ರ ಟಿ೨೦ ವಿಶ್ವಕಪ್ ಹಾಗೂ ೨೦೧೧ರ ವಿಶ್ವಕಪ್ನಲ್ಲಿ ಆಡಿದ್ದ ಯುವರಾಜ್ ವಿಶ್ವಕಪ್ ಹೀರೋ ಎಂದು ಕರೆಸಿಕೊಂಡಿದ್ದರು.   ಹಿಂದೆ ಮುಂಬರುವ ೨೦೧೯ ಐಸಿಸಿ ವಿಶ್ವಕಪ್ ಬಳಿಕ ತಮ್ಮ ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಘೋಷಿಸುವ ಕುರಿತು ನಿರ್ಧಾರ ಕೈಗೊಳ್ಳುವುದಾಗಿ ೨೦೧೧ ವಿಶ್ವ ಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಆಲ್ ರೌಂಡರ್ ಯುವರಾಜ್ ಸಿಂಗ್ ಹೇಳಿದ್ದರುಖಾಸಗಿ ಮಾಧ್ಯಮವೊಂದಕ್ಕೆ ಕುರಿತು ಪ್ರತಿಕ್ರಿಯಿಸಿದ್ದ ೩೭ ವರ್ಷದ ಯುವರಾಜ್ ಸಿಂಗ್, ಸದ್ಯ ೨೦೧೯ ವಿಶ್ವಕಪ್ ವೇಳೆ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯುವ ಕಡೆ ಗಮನ ಹರಿಸಿದ್ದು, ಬಳಿಕ ನಿವೃತ್ತಿಯ ಕುರಿತು ನಿರ್ಧಾರ ತೆಗೆದುಕೊಳ್ಳುತ್ತೇನೆ. ಕಳೆದ ಎರಡು ದಶಕಗಳಿಂದ ತಾನು ಭಾರತದ ತಂಡದ ಪರ ಆಡುತ್ತಿದ್ದೇನೆ. ಆದರೆ ಮುಂದೊಂದು ದಿನ ನನ್ನ ನಿವೃತ್ತಿಯ ಜೀವನ ಎದುರಾಗುತ್ತದೆ ಎಂದು ತಿಳಿಸಿದ್ದರು.  ೨೦೦೦ ರಲ್ಲಿ ಕೀನ್ಯಾ ವಿರುದ್ಧ ಏಕದಿನ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದ ಯುವಿ ಇದುವ ರೆಗೂ ೩೦೪ ಏಕದಿನ ಪಂದ್ಯಗಳಲ್ಲಿ ,೭೦೧ ರನ್ ಸಿಡಿಸಿದ್ದರು.  ೨೦೧೭ ರಲ್ಲಿ ವೆಸ್ಟ್ ಇಂಡೀಸ್ ಪ್ರವಾಸ ದಲ್ಲಿ ಕೊನೆ ಬಾರಿಗೆ ಏಕದಿನ ಪಂದ್ಯವನ್ನಾ ಡಿದ್ದರು.  ೨೦೦೩ ರಲ್ಲಿ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದು, ೪೦ ಪಂದ್ಯ ಗಳಲ್ಲಿ ,೯೦೦ ರನ್ ಗಳಿಸಿದ್ದರು. ೨೦೦೭ ರಲ್ಲಿ ಮೊದಲ ಟಿ೨೦ ಕ್ರಿಕೆಟ್ ಪಂದ್ಯವನ್ನು ಸ್ಕಾಟ್ ಲ್ಯಾಂಡ್ ವಿರುದ್ಧ ಆಡಿದ್ದು, ಇದುವರೆಗೂ ೫೮ ಪಂದ್ಯಗಳಿಂದ ,೧೭೭ ರನ್ ಸಿಡಿಸಿದ್ದರು.  ಉಳಿದಂತೆ ಲೆಗ್ ಸ್ಪಿನ್ ಬೌಲರ್ ಆಗಿ ಟೆಸ್ಟ್, ಏಕದಿನ, ಟಿ೨೦ ಮಾದರಿಯಲ್ಲಿ ಕ್ರಮವಾಗಿ , ೧೧೧, ೨೮ ವಿಕೆಟ್ ಪಡೆದಿದ್ದರು. ಕ್ರಿಕೆಟ್ ವೃತ್ತಿ ಜೀವನದ ಆರಂಭ , ವರ್ಷಗಳ ಕಾಲ ಉತ್ತಮವಾಗಿ ಆಡಿದ್ದೇನೆ. ನಂತರ ಅವಧಿಯಲ್ಲಿ ಯುವ ಆಟಗಾರರು ಉತ್ತಮ ಪ್ರದರ್ಶನ ನೀಡಿದ್ದರಿಂದ ನನಗೆ ಅವಕಾಶಗಳು ಕಡಿಮೆಯಾದವು. ಅದೇ ಸಂದರ್ಭದಲ್ಲಿ ಕ್ಯಾನ್ಸರ್ ನನ್ನನ್ನು ಕಾಡಿತು. ಆದರೆ ಕ್ಯಾನ್ಸರ್ ನಿಂದ ಗುಣಮುಖನಾದೆ. ಬಳಿಕ ತಂಡದಲ್ಲಿ ನನಗೆ ನಿರಂತರವಾಗಿ ಅವಕಾಶ ಸಿಗಲಿಲ್ಲ. ಕೆಲವು ಪಂದ್ಯಗಳಲ್ಲಿ ಮಾತ್ರ ಆಡಲು ಸಾಧ್ಯವಾಯಿತು ಎಂದು ಹಿಂದೆ ಯುವಿ ತಿಳಿಸಿದ್ದರು೨೦೧೧ರ ವಿಶ್ವಕಪ್ ವರೆಗೂ ಟೀಂ ಇಂಡಿಯಾ ತಂಡದಲ್ಲಿ ನಿರಂತರವಾಗಿ ಆಡಿದ್ದ ಯುವಿ ಆನಂತರ ಕ್ಯಾನ್ಸರ್ ನಿಂದ ಬಳಲಿದ್ದರು. ಆದರೆ ಕ್ಯಾನ್ಸರ್ ವಿರುದ್ಧ ಹೋರಾಟ ನಡೆಸಿ ಗೆದ್ದು ಬಂದ ಅವರು ಬಳಿಕ ಫಾರ್ಮ್ ಸಮಸ್ಯೆಯಿಂದ ಬಳಲಿದ್ದರು. ಯುರಾಜ್ ಸಿಂಗ್ ಅವರಿಗೆ ಬಾರಿ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ಜೀವದಾನ ನೀಡಿತ್ತು. ಯುವಿ ಮೂಲ ಬೆಲೆ ಕೋಟಿ ರೂ. ಗೆ ಖರೀದಿ ಮಾಡಿತ್ತು. ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಯುವರಾಜ್ ರನ್ನು ಖರೀದಿ ಮಾಡಲು ಫ್ರಾಂಚೈಸಿಗಳು ಹಿಂದೇಟು ಹಾಕಿದ್ದರು. ಮೊದಲ ಸುತ್ತಿನಲ್ಲಿ ಯುವಿರನ್ನು ಖರೀದಿ ಮಾಡಲು ಯಾವ ತಂಡಗಳು ಮುಂದೆ ಬರಲಿಲ್ಲ. ಬಳಿಕ ೨ನೇ ಸುತ್ತಿನಲ್ಲಿ ಮುಂಬೈ ಖರೀದಿ ಮಾಡಿತು. ತಮ್ಮ ವೃತ್ತಿ ಜೀವನದ ಅತ್ಯುನ್ನತ್ತ ಶಿಖರದಲ್ಲಿರುವಾಗ ಯುವಿ ೨೦೧೪ ರಲ್ಲಿ ಬರೋಬ್ಬರಿ ೧೬ ಕೋಟಿ ರೂ. ಹಾಗೂ ೨೦೧೫ರಲ್ಲಿ ೧೬ ಕೋಟಿ ರೂ. ಗಳಿಗೆ ಹರಾಜುಗೊಳ್ಳುವ ಮೂಲಕ ದುಬಾರಿ ಆಟಗಾರನೆಂಬ ದಾಖಲೆ ಬರೆದಿದ್ದರು. ಆದರೆ ಬಳಿಕ ೨೦೧೭, ೨೦೧೮, ೨೦೧೯ ರಲ್ಲಿ ಕ್ರಮವಾಗಿ , , ಕೋಟಿ ರೂ.ಗೆ ಹರಾಜು ಆಗಿದ್ದರು.ಕಳೆದ ಐಪಿಎಲ್ ಆವೃತ್ತಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಆಡಿದ್ದರು. ಆದರೆ ಟೂರ್ನಿಯಲ್ಲಿ ಇನ್ನಿಂಗ್ಸ್ ಗಳಿಂದ ಕೇವಲ ೬೫ ರನ್ ಮಾತ್ರ ಗಳಿಸಿ ನಿರಾಸೆ ಮೂಡಿಸಿದ್ದರು.

2019: ನವದೆಹಲಿ: ದೇಶಾದ್ಯಂತ ಕುತೂಹಲ ಕೆರಳಿಸಿದ್ದ ಜಮ್ಮು ಮತ್ತು ಕಾಶ್ಮೀರದ ಕಥುವಾದ ವರ್ಷದ ಬಾಲಕಿಯ ಮೇಲಿನ ಭೀಕರ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರು ಮಂದಿಯನ್ನು ತಪ್ಪಿತಸ್ಥರು ಎಂಬುದಾಗಿ  ತೀರ್ಪು ನೀಡಿರುವ ಪಂಜಾಬಿನ ಪಠಾಣ್ ಕೋಟ್ ವಿಶೇಷ ನ್ಯಾಯಾಲಯವು ಪ್ರಕರಣದ ಮೂವರು ಮುಖ್ಯ ಅಪರಾಧಿಗಳಿಗೆ ಜೀವಾವಧಿ ಮತ್ತು ಇತರ ಮೂವರಿಗೆ ವರ್ಷಗಳ ಸೆರೆವಾಸದ ಶಿಕ್ಷೆ ವಿಧಿಸಿ, ಒಬ್ಬನನ್ನು ಖುಲಾಸೆ ಮಾಡಿತು. ಅಪರಾಧದ ಸೂತ್ರಧಾರಿ,  ಅಪರಾಧ ಘಟಿಸಿದ ದೇವಾಲಯದ ಮುಖ್ಯಸ್ಥ ಹಾಗೂ ಮಾಜಿ ಕಂದಾಯ ಅಧಿಕಾರಿ ಸಾಂಜಿರಾಮ್, ವಿಶೇಷ ಪೊಲೀಸ್ ಅಧಿಕಾರಿ ದೀಪಕ್ ಖಜೂರಿಯಾ ಮತ್ತು ನಾಗರಿಕ ಪರ್ವೇಶ್ ಕುಮಾರ್ ಅವರಿಗೆ ರಣಬೀರ್ ಅಪರಾಧ ಸಂಹಿತೆಯ ಕ್ರಿಮಿನಲ್ ಸಂಚು, ಕೊಲೆ, ಅಪಹರಣ, ಸಾಮೂಹಿಕ ಅತ್ಯಾಚಾರ, ಸಾಕ್ಷ್ಯನಾಶ, ಸಂತ್ರಸ್ಥೆಗೆ ಮಾದಕ ದ್ರವ್ಯ ನೀಡಿಕೆ ಹಾಗೂ ಸಮಾನ ಉದ್ದೇಶದ ಅಪರಾಧಗಳಿಗಾಗಿ ಶಿಕ್ಷೆ ವಿಧಿಸಲಾಗಿದೆ ಎಂದು ವಕೀಲರು ತಿಳಿಸಿದರು. ಸಾಂಜೀರಾಮ್ ಪುತ್ರ ವಿಶಾಲ್ ಜಂಗೋತ್ರನನ್ನು ಮಾತ್ರ ಸಂಶಯದ ಲಾಭ ನೀಡಿ ಖುಲಾಸೆ ಮಾಡಲಾಯಿತು.  ಅಪರಾಧಿಗಳಿಗೆ ಜೀವಾವಧಿ ಶಿಕ್ಷೆಯ ಜೊತೆಗೆ ಕೊಲೆಗಾಗಿ ತಲಾ ಲಕ್ಷ ರೂಪಾಯಿಗಳ ದಂಡ ವಿಧಿಸಲಾಗಿದೆ. ಅಪರಾಧಿಗಳ ಸಹಚರರಾಗಿದ್ದ ಸಬ್ ಇನ್ಸ್ಪೆಕ್ಟರ್ ಆನಂದ್ ದತ್ತ, ಹೆಡ್ ಕಾನ್ ಸ್ಟೇಬಲ್ ತಿಲಕ್ ರಾಜ್ ಮತ್ತು ವಿಶೇಷ ಪೊಲೀಸ್ ಅಧಿಕಾರಿ ಸುರೇಂದರ್ ವರ್ಮ ಅವರಿಗೆ ಸಾಕ್ಷ್ಯನಾಶಕ್ಕಾಗಿ ಐದು ವರ್ಷಗಳ ಸೆರೆವಾಸವನ್ನು ವಿಧಿಸಲಾಯಿತು. ನ್ಯಾಯಾಲಯ ಶಿಕ್ಷೆಯ ಪ್ರಮಾಣವನ್ನು ಘೋಷಿಸಿದ ಬೆನ್ನಲ್ಲೇ ಎಲ್ಲ ಆರೂ ಮಂದಿ ಅಪರಾಧಿಗಳನ್ನೂ ಸೆರೆಮನೆಗೆ ಒಯ್ಯಲಾಯಿತುಮೇಲ್ಮನವಿ: ನ್ಯಾಯಾಲಯವು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದ ಬೆನ್ನಲ್ಲೇ ಪ್ರಾಸೆಕ್ಯೂಷನ್ ಮುಖ್ಯ ಆರೋಪಿಯ ಪುತ್ರ ವಿಶಾಲ್ ಖುಲಾಸೆಯನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವುದಾಗಿ ಹೇಳಿತು.. ಆತ ಬಾಲಾಪರಾಧಿ ಎಂದು ಹೇಳಲಾಗುತ್ತಿದೆ. ಅಪರಾಧಿಗಳಿಗೆ ಮರಣದಂಡನೆ ವಿಧಿಸಬೇಕು ಎಂದು ಪ್ರಾಸೆಕ್ಯೂಷನ್ ಮೇಲ್ಮನವಿ ಸಲ್ಲಿಸಲಿದೆ. ರಣಬೀರ್ ಅಪರಾಧ ಸಂಹಿತೆ (ರಣಬೀರ್ ಪೀನಲ್ ಕೋಡ್- ಆರ್ಪಿಸಿ) ಅಂದರೇನು?  ಜಮ್ಮು ಮತ್ತು ಕಾಶ್ಮೀರದಲ್ಲಿ ಅನ್ವಯವಾಗುವ ಮುಖ್ಯ ಅಪರಾಧ ದಂಡ ಸಂಹಿತೆ ಇದು. ಭಾರತೀಯ ಸಂವಿಧಾನದ ೩೭೦ನೇ ವಿಧಿಯ ಅನ್ವಯ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ದಂಡ ಸಂಹಿತೆ ಅನ್ವಯವಾಗುವುದಿಲ್ಲ, ಬದಲಿಗೆ ರಣಬೀರ್ ಅಪರಾಧ ಸಂಹಿತೆ (ಆರ್ಪಿಸಿ) ಅನ್ವಯವಾಗುತ್ತದೆ. ಸಂಹಿತೆಯು ಜಮ್ಮು ಮತ್ತು ಕಾಶ್ಮೀರದಲ್ಲಿ ೧೯೩೨ರಲ್ಲಿ ಜಾರಿಗೆ ಬಂದಿತ್ತು. ೧೫ ಪುಟಗಳ ದೋಷಾರೋಪ ಪಟ್ಟಿಯ ಪ್ರಕಾರ ಕಳೆದ ವರ್ಷ ಜನವರಿ ೧೦ರಂದು ಎಂಟು ವರ್ಷದ ಬಾಲಕಿಯನ್ನು ಅಪಹರಿಸಿ, ಕಥುವಾ ಜಿಲ್ಲೆಯ ಪುಟ್ಟ ಗ್ರಾಮ ಒಂದರ ದೇವಾಲಯದಲ್ಲಿ ಅಕ್ರಮವಾಗಿ ದಿನಗಳ ಕಾಲ ಬಂಧಿಸಿ ಇಟ್ಟು, ಆಕೆಗೆ ಮಾದಕ ದ್ರವ್ಯ ತಿನ್ನಿಸಿ, ನಿರಂತರ ಸಾಮೂಹಿಕ ಅತ್ಯಾಚಾರ ನಡೆಸಿ ಬಳಿಕ ಕತ್ತು ಹಿಸುಕಿ ಕೊಲೆಗೈಯ್ಯಲಾಗಿತ್ತು.  ಕಳೆದ ವರ್ಷ ಜೂನ್ ತಿಂಗಳ ಮೊದಲ ವಾರ ಪ್ರಕರಣದ ದೈನಂದಿನ ವಿಚಾರಣೆ ಪಂಜಾಬಿನ ಪಠಾಣ್ ಕೋಟ್ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ನಡೆದಿತ್ತು. ಸುಪ್ರೀಂಕೋರ್ಟ್ ಆದೇಶದ ಮೇರೆಗೆ ಜಮ್ಮುವಿನಿಂದ ೧೦೦ ಕಿಮೀ ಮತ್ತು  ಕಥುವಾದಿಂದ ೩೦ ಕಿಮೀ ದೂರದ ಪಠಾಣ್ ಕೋಟ್ ನ್ಯಾಯಾಲಯಕ್ಕೆ ಪ್ರಕರಣದ ವಿಚಾರಣೆಯನ್ನು ವರ್ಗಾಯಿಸಲಾಗಿತ್ತು. ದೇಶಾದ್ಯಂತ ವ್ಯಾಪಕ ಪ್ರತಿಭಟನೆಗಳನ್ನು ಹುಟ್ಟು ಹಾಕಿದ್ದ ಪ್ರಕರಣದಲ್ಲಿ ನಿವೃತ್ತ ಸರ್ಕಾರಿ ಅಧಿಕಾರಿ ಒಬ್ಬರು ಸೇರಿದಂತೆ ಆರು ಮಂದಿ ದೋಷಿಗಳು ಎಂದು ಪಠಾಣ್ ಕೋಟ್ ವಿಶೇಷ ನ್ಯಾಯಾಲಯ ಬೆಳಗ್ಗೆ ತೀರ್ಪು ನೀಡಿತ್ತು. ಒಬ್ಬನನ್ನು ಖುಲಾಸೆ ಮಾಡಲಾಗಿತ್ತು. ೨೦೧೮ರ ಜನವರಿಯಲ್ಲಿ ಅಲ್ಪಸಂಖ್ಯಾತ ಅಲೆಮಾರಿ ಸಮುದಾಯವನ್ನು ಬೇರೆ ಪ್ರದೇಶಕ್ಕೆ ಓಡಿಸುವ ಸಂಚಿನ ಭಾಗವಾಗಿ  ಬಾಲಕಿಯನ್ನು ಅಪಹರಿಸಿ ಒಯ್ದು ಬಂಧನದಲ್ಲಿಟ್ಟು ಮಾದಕ ದ್ರವ್ಯಗಳನ್ನು ತಿನ್ನಿಸಿ, ಬಳಿಕ ಆಕೆಯ ಮೇಲೆ ಪದೇ ಪದೇ ಸಾಮೂಹಿಕ ಅತ್ಯಾಚಾರ ನಡೆಸಲಾಗಿತ್ತು, ನಾಲ್ಕು ದಿನಗಳ ಬಳಿಕ ಕತ್ತು ಹಿಸುಕಿ ಕೊಲೆ ಮಾಡಿ, ಸತ್ತಿರುವುದನ್ನು ಖಚಿತ ಪಡಿಸಿಕೊಳ್ಳಲು ಬಡಿಗೆಯಿಂದ ಥಳಿಸಲಾಗಿತ್ತುಆರು ಮಂದಿಯ ಪೈಕಿ ಮೂವರನ್ನು ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಅಪರಾಧಿಗಳು ಎಂದು ನ್ಯಾಯಾಲಯ ಹೇಳಿದೆ. ಉಳಿದ ಮೂವರಲ್ಲಿ ಇಬ್ಬರು ಪೊಲೀಸರಾಗಿದ್ದು ಅವರಿಗೆ ಕೊಲೆ ಪ್ರಕರಣದ ಪ್ರಾಥಮಿಕ ತನಿಖೆಯ ಹೊಣೆ ಒಪ್ಪಿಸಲಾಗಿತ್ತು. ಆದರೆ ಅವರು ಸಾಕ್ಷ್ಯನಾಶಕ್ಕೆ ಯತ್ನಿಸಿದರು ಎಂದು ನ್ಯಾಯಾಲಯ ಹೇಳಿದೆ. ಪ್ರಕರಣದ ಏಳನೇ ಆರೋಪಿಯನ್ನು ನ್ಯಾಯಾಲಯ ಖುಲಾಸೆ ಮಾಡಿತು. ನಿವೃತ್ತ ಕಂದಾಯ ಅಧಿಕಾರಿ ಸಾಂಜಿ ರಾಮ್ ಇಡೀ ಪ್ರಕರಣದ ಸೂತ್ರಧಾರಿ ಎಂದು ನ್ಯಾಯಾಲಯ ಹೇಳಿತು.  ಪೊಲೀಸರ ಪ್ರಕಾರ ಆತ ಅಲೆಮಾರಿ ಹಿಂದುಳಿದ ಸಮುದಾಯದ ಸದಸ್ಯರನ್ನು ತನ್ನ ಹುಟ್ಟೂರು ರಸನಾ ಗ್ರಾಮದಿಂದ ಬೇರೆ ಕಡೆಗೆ ಓಡಿಸಲು ಬಯಸಿದ್ದ ಮತ್ತು ಅದಕ್ಕಾಗಿ ಬಾಲಕಿಯನ್ನು ಅಪಹರಿಸುವಂತೆ ತನ್ನ ಸೋದರಳಿಯನನ್ನು ಪ್ರಚೋದಿಸಿದ್ದ. ಸುಪ್ರೀಂಕೋರ್ಟಿನ ಆದೇಶದ ಮೇರೆಗೆ ಪ್ರಕರಣದ ವಿಚಾರಣೆಯನ್ನು ಜಮ್ಮು ಮತ್ತು ಕಾಶ್ಮೀರದಿಂದ ಪಂಜಾಬಿನ ಪಠಾಣ್ ಕೋಟ್  ವಿಶೇಷ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿತ್ತು. ಕುಟುಂಬ ಸದಸ್ಯರಿಗೆ, ಮಿತ್ರರಿಗೆ ಮತ್ತು ಸಾಕ್ಷಿಗಳಿಗೆ ಪ್ರಾಣಭಯ ಇರುವುದರಿಂದ ಪ್ರಕರಣವನ್ನು ಜಮ್ಮು ಮತ್ತು ಕಾಶ್ಮೀರದಿಂದ ಹೊರಕ್ಕೆ ವರ್ಗಾಯಿಸಬೇಕು ಎಂದು ಬಾಲಕಿಯ ಪಾಲಕರು ಸುಪ್ರೀಂಕೋರ್ಟಿನ ಮೊರೆಹೊಕ್ಕಿದ್ದರು. ವೇಳೆಗೆ, ಜಮ್ಮು ಮತ್ತು ಕಾಶ್ಮೀರದ ಅಪರಾಧ ವಿಭಾಗವು ಬಲಪಂಥೀಯ ಹಿಂದು ಏಕತಾ ಮಂಚ್ ಮತ್ತು ಬಿಜೆಪಿ ಶಾಸಕರ ಬೆಂಬಲ ಪಡೆದಿದ್ದ ಆರೋಪಿಗಳನ್ನು ಬಂಧಿಸಲು ಹೊರಟಿದ್ದರು. ರಾಜ್ಯದ ಇಬ್ಬರು ಬಿಜೆಪಿ ಸಚಿವರು ಆರೋಪಿಗಳನ್ನು ಬೆಂಬಲಿಸಿ ಮಾಡಿದ್ದ ಭಾಷಣದ ವಿಡಿಯೋಟೇಪ್ ತೀವ್ರ ವಿವಾದವನ್ನು ಹುಟ್ಟು ಹಾಕಿತ್ತು. ಹಿನ್ನೆಲೆಯಲ್ಲಿ ಮೆಹಬೂಬಾ ಮುಫ್ತಿ ಅವರ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷ ಮತ್ತು ಬಿಜೆಪಿಯ ಸಮ್ಮಿಶ್ರ ಸರ್ಕಾರ ಪತನದ ಅಂಚಿಗೆ ಬಂದಿತ್ತು. ಆಗ ಹೆಚ್ಚುತ್ತಿದ್ದ ಸಾರ್ವಜನಿಕ ರೋಷಕ್ಕೆ ಸ್ಪಂದಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಇಂತಹ ಘಟನೆಗಳು ಯಾವುದೇ ನಾಗರಿಕ ಸಮಾಜಕ್ಕೆ ಭೂಷಣವಲ್ಲ ಎಂದು ಹೇಳಿ ಅಪರಾಧಿಗಳು ತಪ್ಪಿಸಿಕೊಳ್ಳಲು ಅವಕಾಶ ನೀಡುವುದಿಲ್ಲ ಎಂದು ಭರವಸೆ ಕೊಟ್ಟಿದ್ದರು. ಮೆಹಬೂಬಾ ಮುಫ್ತಿ ಸರ್ಕಾರದಲ್ಲಿದ್ದ ವಿವಾದಾತ್ಮಕ ಭಾಷಣ ಮಾಡಿದ್ದ ಇಬ್ಬರು ಬಿಜೆಪಿ ಸಚಿವರಾದ ಕೈಗಾರಿಕಾ ಸಚಿವ ಚಂದ್ರ ಪ್ರಕಾಶ ಗಂಗಾ ಮತ್ತು ಅರಣ್ಯ ಸಚಿವಲಾಲ್ ಸಿಂಗ್ ಅವರಿಗೆ ಕೆಳಗಿಳಿಯುವಂತೆ ಒತ್ತಡ ಹಾಕಲಾಗಿತ್ತು. ಲಾಲ್ ಸಿಂಗ್ ಅವರು ಬಳಿಕ ಪಕ್ಷದ ಸಂಪರ್ಕ ಕಡಿದುಕೊಂಡು ತಮ್ಮದೇ ಪಕ್ಷ ಸ್ಥಾಪಿಸಿದ್ದರು.

2019: ಚೆನ್ನೈ: ತಮಿಳು ರಂಗಭೂಮಿಯ ಹಿರಿಯ ಕಲಾವಿದ ಹಾಗೂ ತಮಿಳು ಚಿತ್ರಕಥೆಗಾರಕ್ರೇಜಿ ಮೋಹನ್ ಅವರು ಹೃದಯಾಘಾತದಿಂದ ಚೆನ್ನೈಯಲ್ಲಿ  ನಿಧನರಾದರು. ಅವರಿಗೆ ೬೭ ವರ್ಷ ವಯಸ್ಸಾಗಿತ್ತು.  ೧೯೫೨ರಲ್ಲಿ ಜನಿಸಿದ್ದ ಮೋಹನ್ ರಂಗಾಚಾರಿ ಅವರ ಹೆಸರಿಗೆ ಅವರಕ್ರೇಜಿ ಥೀವ್ಸ್ ಇನ್ ಪಳವಕ್ಕಮ್ ನಾಟಕ ಜನಪ್ರಿಯಗೊಂಡ ಬಳಿಕಕ್ರೇಜಿ ಅಡ್ಡ ಹೆಸರು ಅಂಟಿಕೊಂಡಿತ್ತು. ಬಳಿಕ ನಾಟಕ ಟೆಲಿವಿಷನ್ ಸರಣಿ ರೂಪದಲ್ಲೂ ಪ್ರದರ್ಶನಗೊಂಡಿತ್ತು. ನಾಟಕದ ಬಳಿಕ ರಂಗಭೂಮಿಯನ್ನೇ ತಮ್ಮ ವೃತ್ತಿಯನ್ನಾಗಿ ಮಾಡಿಕೊಂಡ ಕ್ರೇಜಿ ಮೋಹನ್ ಮತ್ತು ಅವರ ಸಹೋದರ ಬಾಲಾಜಿ ಹಲವಾರು ನಾಟಕಗಳನ್ನು ಬರೆದರು. ೧೯೭೦ರ ದಶಕದಲ್ಲಿ ಗುಯಿಂಡಿಯಲ್ಲಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಎಂಜಿನಿಯರ್ ಪದವಿ ಪಡೆದಿದ್ದ ಮೋಹನ್, ೧೯೭೯ರಲ್ಲಿ ರಂಗಭೂಮಿಯ ಸೆಳೆತ ಹೆಚ್ಚಾಗಿಕ್ರೇಜಿ ಕ್ರಿಯೇಷನ್ಸ್ ಹೆಸರಿನ ಸ್ವಂತ ನಾಟಕ ತಂಡಕಟ್ಟಿಕೊಂಡು ಹಲವಾರು ನಾಟಕಗಳನ್ನು ಪ್ರದರ್ಶಿಸಿದ್ದರುಬಳಿಕ ಚಲನಚಿತ್ರಗಳಿಗೂ ಚಿತ್ರಕಥೆಗಳನ್ನು ಬರೆದ ಮೋಹನ್ ಹಲವಾರು ಹಾಸ್ಯಮಯ ತಮಿಳು ಚಲನಚಿತ್ರಗಳಿಗಾಗಿ ಕಮಲಹಾಸನ್ ಜೊತೆಗೆ ಕೆಲಸ ಮಾಡಿದ್ದರು.  

2019: ಇಸ್ಲಾಮಾಬಾದ್ (ಪಾಕಿಸ್ತಾನ): ಪಾಕಿಸ್ತಾನದ ಮಾಜಿ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ಅವರನ್ನು  ಭ್ರಷ್ಟಾಚಾರ ಆರೋಪದಲ್ಲಿ ಬಂಧಿಸಲಾಗಿದೆ ಎಂದು ಪಾಕಿಸ್ತಾನದ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆಗೆ ತಿಳಿಸಿದರು.  ಇದರೊಂದಿಗೆ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿಗೆ (ಪಿಪಿಪಿ) ಭಾರೀ ಹೊಡೆತ ಬಿದ್ದಂತಾಯಿತು.  ಜರ್ದಾರಿ ಅವರನ್ನು ಬಂಧಿಸಲಾಗಿದೆ ಎಂದು ನ್ಯಾಷನಲ್ ಅಕೌಂಟೆಬಿಲಿಟಿ ಬ್ಯೂರೋ (ಎನ್ಎಬಿ) ವಕ್ತಾರ ನವಾಜಿಶ್ ಅಲಿ ಹೇಳಿದರು.  ಆದರೆ ಹೆಚ್ಚಿನ ವಿವರಗಳನ್ನು ಅವರು ನೀಡಿಲ್ಲ. ನ್ಯಾಷನಲ್ ಅಕೌಂಟೆಬಿಲಿಟಿ ಬ್ಯೂರೋವು ಜರ್ದಾರಿ ಅವರನ್ನು ನಕಲಿ ಬ್ಯಾಂಕ್ ಖಾತೆಗಳು ಮತ್ತು ಹಣ ವರ್ಗಾವಣೆ ಪ್ರಕರಣಗಳ ತನ್ನ ತನಿಖೆ ಸಂಬಂಧವಾಗಿ ಬಂಧಿಸಿದೆ ಎಂದು ಸ್ಥಳೀಯ ಸುದ್ದಿವಾಹಿನಿ ಮಾಧ್ಯಮಗಳು ವರದಿ ಮಾಡಿದವು. ಮಾಜಿ ಅಧ್ಯಕ್ಷರು ಪ್ರತಿಕ್ರಿಯೆಗೆ ಲಭ್ಯರಾಗಲಿಲ್ಲ.  ಆದರೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಯಾವುದೇ ತಪ್ಪು ಎಸಗಿರುವುದನ್ನು ಅವರು ನಿರಾಕರಿಸಿದ್ದಾರೆ ಮತ್ತು ಅವರ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿಯು ಪ್ರಕರಣಗಳು ರಾಜಕೀಯ ದುರುದ್ದೇಶದ ಪ್ರಕರಣಗಳು ಎಂದು ಹೇಳಿರುವುದಾಗಿ ಮಾಧ್ಯಮಗಳು ಹೇಳಿದವು. ಪ್ರಧಾನಿ ಇಮ್ರಾನ್ ಖಾನ್ ಅವರು ಕಳೆದ ವರ್ಷ ಅಧಿಕಾರ ವಹಿಸಿಕೊಂಡ ಬಳಿಕ ಭ್ರಷ್ಟಾಚಾರ ಆರೋಪದಲ್ಲಿ ಹಲವಾರು ರಾಜಕಾರಣಿಗಳನ್ನು ಭ್ರಷ್ಟಾಚಾರ ನಿಗ್ರಹ ದಳವು ಬಂಧಿಸಿದೆ. ಖಾನ್ ಅವರ ಪೂರ್ವಾಧಿಕಾರಿ ನವಾಜ್ ಶರೀಫ್ ಅವರನ್ನು ಭ್ರಷ್ಟಾಚಾರ ಆರೋಪದಲ್ಲಿ ಸುಪ್ರೀಂಕೋರ್ಟ್ ಆದೇಶದ ಬಳಿಕ ಭ್ರಷ್ಟಾಚಾರ ನಿಗ್ರಹ ದಳವು ಬಂಧಿಸಿತ್ತು. ಹತ್ಯೆಗೀಡಾಗಿದ್ದ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಅವರ ಪತಿ ಅಸಿಫ್ ಅಲಿ ಜರ್ದಾರಿ ಅವರು ೨೦೦೮ರಲ್ಲಿ ಅಧ್ಯಕ್ಷರಾಗುವುದಕ್ಕೆ ಮುನ್ನ ಭ್ರಷ್ಟಾಚಾರ ಮತ್ತು ಕೊಲೆ ಆರೋಪಗಳಿಗಾಗಿ ೧೧ ವರ್ಷ ಸೆರೆವಾಸ ಅನುಭವಿಸಿದ್ದರು. ಆದರೆ ಯಾವುದೇ ಅಪರಾಧಕ್ಕಾಗಿ ಅವರಿಗೆ ಎಂದೂ ಶಿಕ್ಷೆಯಾಗಿಲ್ಲ. ತಾವು ಯಾವುದೇ ತಪ್ಪೆಸಗಿರುವ ಆರೋಪವನ್ನು ಅವರು ನಿರಾಕರಿಸಿದ್ದರು. ೨೦೦೮ರಿಂದ ೨೦೧೩ರ ಅವಧಿಯಲ್ಲಿ ಅವರು ಪಾಕಿಸ್ತಾನದ ಅಧ್ಯಕ್ಷರಾಗಿದ್ದರು. ಜರ್ದಾರಿ ಮತ್ತು ಅವರ ಸಹೋದರಿ ಫರ್ಯಾಲ್ ತಲ್ಪುರ್ ಅವರಿಗೆ ಜಾಮೀನು ವಿಸ್ತರಿಸಲು ನ್ಯಾಯಾಲಯ ನಿರಾಕರಿಸಿದ  ಕೆಲವೇ ಗಂಟೆಗಳಲ್ಲಿ ಜರ್ದಾರಿ ಅವರನ್ನು ಬಂಧಿಸಲಾಯಿತುಹಣ ವರ್ಗಾವಣೆ ಮತ್ತು ನಕಲಿ ಬ್ಯಾಂಕ್ ಖಾತೆಗಳಿಗೆ ಸಂಬಂಧಿಸಿದಂತೆ ಜರ್ದಾರಿ ಮತ್ತು ತಲ್ಪುರ್ ಸೇರಿದಂತೆ ಸುಮಾರು ಎರಡು ಡಜನ್ಗೂ ಹೆಚ್ಚಿನ ರಾಜಕಾರಣಿಗಳು ಮತ್ತು ಇತರರನ್ನು ತನಿಖೆಗೆ ಗುರಿಪಡಿಸಲಾಗಿತ್ತು. ಜರ್ದಾರಿ ಅವರ ನಿಕಟವರ್ತಿ ಹುಸೈನ್ ಲವಾಯಿ ಅವರನ್ನು ಜುಲೈ ತಿಂಗಳಲಿ ತನಿಖೆಗೆ ಸಂಬಂಧಿಸಿದಂತೆ ಬಂಧಿಸಲಾಗಿತ್ತು. ಓಮ್ನಿ ಸಮೂಹದ ಅಧ್ಯಕ್ಷ ಮಜೀದ್ ಮತ್ತು ಅವರ ಪುತ್ರ, ಅಬ್ದುಲ್ ಘನಿ ಅವರನ್ನು ಪೆಡರಲ್ ತನಿಖಾ ಸಂಸ್ಥೆಯು ಆಗಸ್ಟ್ ತಿಂಗಳಲ್ಲಿ ಬಂಧಿಸಿತ್ತು. ಸುದ್ದಿ ಸಂಸ್ಥೆಯ ಪ್ರಕಾರ ೨೦ಕ್ಕೂ ಹೆಚ್ಚುಬೇನಾಮಿ ಖಾತೆಗಳನ್ನು ಕೆಲವು ಖಾಸಗಿ ಬ್ಯಾಂಕುಗಳಲ್ಲಿ ೨೦೧೩, ೨೦೧೪ ಮತ್ತು ೨೦೧೫ರಲ್ಲಿ ತೆರೆದು ಕೋಟ್ಯಂತರ ರೂಪಾಯಿ ಮೌಲ್ಯದ ವಹಿವಾಟು ನಡೆಸಲಾಗಿದೆ. ಫೆಡರಲ್ ತನಿಖಾ ಸಂಸ್ಥೆ (ಎಫ್ಐಎ) ಮೂಲಗಳ ಪ್ರಕಾರ ವಿವಿಧ ಕಿಕ್ ಬ್ಯಾಕ್, ಕಮೀಷನ್ ಮತ್ತು ಲಂಚ ನೀಡಿಕೆ ಮೂಲಕ ಕಾಳಧನ ಸಂಗ್ರಹವಾಗಿದೆ ಎನ್ನಲಾಯಿತು.


2019: ಮಂಗಳೂರು: ಅರಬ್ಬೀ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ಕರಾವಳಿಯಲ್ಲಿ  ’ವಾಯು ಚಂಡಮಾರುತ ಬೀಸಲಿದ್ದು, ಗಂಟೆಗೆ ೫೫ರಿಂದ ೬೦ ಕಿಮೀ ವೇಗದದ ಗಾಳಿಯೊಂದಿಗೆ ಭಾರೀ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿತು. ವಾಯುಭಾರ ಕುಸಿತದ ಪರಿಣಾಮವಾಗಿ ಈದಿನ  ಬೆಳಗ್ಗಿನಿಂದ ಪಶ್ಚಿಮ ಕರಾವಳಿಯಲ್ಲಿ ಮೋಡ ಕವಿ ವಾತಾವರಣವಿತ್ತು. ಮಂಗಳೂರು ನಗರದಲ್ಲಿ ತುಂತುರು ಮಳೆಯಾಯಿತು.  ‘ವಾಯು ಚಂಡಮಾರುತ ಅರಬ್ಬೀ ಸಮುದ್ರದಲ್ಲಿ ಕರಾವಳಿಯಿಂದ ೫೦೦ ಕಿಮೀ. ದೂರದಲ್ಲಿ ಕೇಂದ್ರೀಕೃತವಾಗಿದ್ದು, ರಾಜಸ್ತಾನದ ಕಡೆಗೆ ಸಾಗುವ ಸಾಧ್ಯತೆಗಳಿವೆ. ಪರಿಣಾಮವಾಗಿ ಮುಂದಿನ ಎರಡು ಮೂರು ದಿನಗಳ ಕಾಲ ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಕರಾವಳಿ ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರಿ ಮಳೆಯಾಗುವ ಸಾಧ್ಯತೆಗಳಿವೆ. ರಾಜ್ಯದ ಹಲವೆಡೆ ಹಾಗೂ ಲಕ್ಷದ್ವೀಪ, ಕೇರಳ ಹಾಗೂ ಮಹಾರಾಷ್ಟ್ರದಲ್ಲಿ ಮಳೆಯಾಗಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವಿಜ್ಞಾನಿ ಎಸ್.ಎಸ್.ಎಂ. ಗಾವಸ್ಕರ್ ಹೇಳಿದರು.
2018: ನವದೆಹಲಿ: ಭಾರತದ ಪ್ರಜೆಗಳು ಕಾಶ್ಮೀರ ಶೃಂಗಕ್ಕೆ ಕೆಲವು ದಿನ ಮುಂಚಿತವಾಗಿ ಮ್ಯಾನ್ ಹಟ್ಟನ್ ನಲ್ಲಿ ಭಯೋತ್ಪಾದಕ ದಾಳಿ ನಡೆಸಲು ಯೋಜಿಸಿ ಅದರ ಹೊಣೆಯನ್ನು ಪಾಕಿಸ್ತಾನದ ತಲೆಗೆ ಕಟ್ಟಲು ಯತ್ನಿಸಿದಂತೆ ತೋರಿಸಲಾದ ಅಮೆರಿಕದಕ್ವಾಂಟಿಕೋ ಸರಣಿಯಲ್ಲಿನ ಇತ್ತೀಚಿನ ಕಥಾಚಿತ್ರದಲ್ಲಿ ವಹಿಸಿದ ಪಾತ್ರಕ್ಕಾಗಿ ಅಂತಾರಾಷ್ಟ್ರೀಯ ಚಿತ್ರನಟಿ ಪ್ರಿಯಾಂಕಾ ಚೋಪ್ರಾ ಅವರು ಕ್ಷಮೆ ಯಾಚಿಸಿದರು.  ಕ್ವಾಂಟಿಕೋದ ಇತ್ತೀಚಿನ ಸರಣಿಯು ಕೆಲವರ ಭಾವನೆಗಳಿಗೆ ನೋವು ಉಂಟು ಮಾಡಿದ್ದಕ್ಕಾಗಿ ನಾನು ಅತ್ಯಂತ ಬೇಸರಗೊಂಡಿದ್ದೇನೆ. ಯಾರೇ ವ್ಯಕ್ತಿಯ ಮನ ನೋಯಿಸುವುದು ನನ್ನ ಉದ್ದೇಶವಾಗಿರಲಿಲ್ಲ. ನನಲ್ಲಿ ಎಂದೂ ಅಂತಹ ಉದ್ದೇಶವೂ ಇಲ್ಲ. ನಾನು ಪ್ರ್ರಾಮಾಣಿಕವಾಗಿ ಇದಕ್ಕಾಗಿ ಕ್ಷಮೆ ಕೇಳುತ್ತೇನೆ. ನಾನು ಒಬ್ಬ ಹೆಮ್ಮೆಯ ಭಾರತೀಯ ಪ್ರಜೆಯಾಗಿದ್ದು, ನನ್ನ ನಿಲುವು ಎಂದಿಗೂ ಬದಲಾಗುವುದಿಲ್ಲ ಎಂದು ಚೋಪ್ರಾ ಟ್ವೀಟ್ ಮಾಡಿದರು. ಕ್ವಾಂಟಿಕೋ ಸರಣಿಯ ಇತ್ತೀಚಿನ ಕಥೆಗೆ ಸಂಬಂಧಿಸಿದಂತೆ ಎಬಿಸಿ ಸ್ಟುಡಿಯೋಸ್ ವಿಷಾದ ವ್ಯಕ್ತ ಪಡಿಸಿದ ಬಳಿಕ ಚೋಪ್ರಾ ಅವರು ಕ್ಷಮೆ ಯಾಚಿಸಿದರು. ಸರಣಿಯಲ್ಲಿನ ಕಥೆಯು ಸಂಕೀರ್ಣ ರಾಜಕೀಯ ವಿಷಯವಾಗಿತ್ತು ಎಂದು ಎಬಿಸಿ ಸ್ಟುಡಿಯೋಸ್ ಹೇಳಿತ್ತು.  ದಿ ಬ್ಲಡ್ ಆಫ್ ರೋಮಿಯೋ ಶೀರ್ಷಿಕೆಯ ಎಪಿಸೋಡ್ ಬಗ್ಗೆ ಭಾರತೀಯ ಅಭಿಮಾನಿಗಳಿಂದ ತೀವ್ರ ಟೀಕೆ ವ್ಯಕ್ತವಾಗಿತ್ತು. ಕಥಾಚಿತ್ರವು ಭಾರತದ ಬಗ್ಗೆ ನಕಾರಾತ್ಮಕ ಬೆಳಕು ಚೆಲ್ಲುತ್ತದೆ ಎಂದು ಹೇಳಿದ ಅಭಿಮಾನಿಗಳು ಸರಣಿಯಲ್ಲಿನ ಪಾತ್ರಕ್ಕಾಗಿ ಪ್ರಿಯಾಂಕಾ ಚೋಪ್ರಾ ಅವರನ್ನೂ ತರಾಟೆಗೆ ತೆಗೆದುಕೊಂಡಿದ್ದರು. ಕಥೆ ಬರೆದವರು ಭಾರತ- ಪಾಕಿಸ್ತಾನದ ವಿಷಯವನ್ನು ಸಾಕಷ್ಟು ತಿಳಿವಳಿಕೆ ಇಲ್ಲದೇ ಬರೆದಿದ್ದಾರೆ ಎಂದೂ ಅವರು ಹೇಳಿದ್ದರು.  ಕ್ವಾಂಟಿಕೋ ಸರಣಿಯ ಇತ್ತೀಚಿನ ಕಂತುದಿ ಬ್ಲಡ್ ಆಫ್ ರೋಮಿಯೋ ನಮ್ಮ ವೀಕ್ಷಕರಿಗೆ ನೋವು ಉಂಟು ಮಾಡಿದ್ದಕ್ಕಾಗಿ ನಾವು ಅವರ ಕ್ಷಮೆ ಯಾಚಿಸುತ್ತೇವೆ ಎಂದು ಎಬಿಸಿ ಸ್ಟುಡಿಯೋಸ್ ಮತ್ತುಕ್ವಾಂಟಿಕೋ ಎಕ್ಸಿಕ್ಯೂಟಿವ್ ನಿರ್ಮಾಪಕರು ಹೇಳಿಕೆಯೊಂದರಲ್ಲಿ ತಿಳಿಸಿದ್ದರು.   ಕ್ವಾಂಟಿಕೋ ಕಾಲ್ಪನಿಕ ಕಥೆ. ವಿಭಿನ್ನ ಜನಾಂಗಗಳ ವಿರೋಧಿಗಳು ಮತ್ತು ಹಿನ್ನೆಲೆಯನ್ನು ಇದು ತೋರಿಸುತ್ತದೆ. ಆದರೆ ಕಂತಿನಲ್ಲಿ ಪ್ರಮಾದವಶಾತ್ ಮತ್ತು ವಿಷಾದಕರವಾಗಿ ಸಂಕೀರ್ಣ ರಾಜಕೀಯ ವಿಷಯವನ್ನು ತೆಗೆದುಕೊಳ್ಳಲಾಗಿದೆ. ಯಾರನ್ನೂ ಘಾಸಿಗೊಳಿಸುವುದು ಖಂಡಿತವಾಗಿ ನಮ್ಮ ಉದ್ದೇಶವಾಗಿರಲಿಲ್ಲ ಎಂದು ಹೇಳಿಕೆ ತಿಳಿಸಿತ್ತು.  ಪ್ರಕರಣಕ್ಕಾಗಿ ಚೋಪ್ರಾ ಅವರನ್ನು ದೂಷಿಸುವುದು ಸರಿಯಲ್ಲ. ಆಕೆ ಕಥೆಯನ್ನು ಸೃಷ್ಟಿಸಿಲ್ಲ ಅಥವಾ ಅದರ ಮೇಲೆ ಯಾವುದೇ ಸೃಜನಾತ್ಮಕ ನಿಯಂತ್ರಣವನ್ನೂ ಹೊಂದಿಲ್ಲ ಎಂದು ಸರಣಿ ನಿರ್ಮಾಪಕರು ಸ್ಪಷ್ಟ ಪಡಿಸಿದ್ದರು.  ಸರಣಿಯು ದೊಡ್ಡ ಪ್ರಮಾಣದಲ್ಲಿ ಭಾವುಕ ಪ್ರತಿಕ್ರಿಯೆಗೆ ಕಾರಣವಾಗಿದೆ ಮತ್ತು ಪ್ರಿಯಾಂಕಾ ಚೋಪ್ರಾ ಬಗ್ಗೆ ಅನ್ಯಾಯವಾಗಿ ಟೀಕೆಗಳು ಬಂದಿವೆ. ಪ್ರಿಯಾಂಕಾ ಚೋಪ್ರಾ ಅವರು ಸರಣಿಯನ್ನು ಸೃಷ್ಟಿಸಿಲ್ಲ, ಬರೆದಿಲ್ಲ ಅಥವಾ ನಿರ್ದೇಶಿಸಿಲ್ಲ. ಸರಣಿಯ ಕಥಾ ಹಂದರದಲ್ಲಿ ಅವರು ಯಾವುದೇ ರೀತಿಯಲ್ಲೂ ಶಾಮೀಲಾಗಿಲ್ಲ ಎಂದು ಸರಣಿ ನಿರ್ಮಾಪಕರು ಸ್ಪಷ್ಟ ಪಡಿಸಿದ್ದರು. ಪ್ರಿಯಾಂಕಾ ಚೋಪ್ರಾ ಅವರು ಅಮೆರಿಕದ ಟಿವಿ ಸರಣಿಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಮೊತ್ತ ಮೊದಲ ಭಾರತೀಯ ಪ್ರಜೆಯಾಗಿದ್ದು, ಸರಣಿಯಲ್ಲಿ ಎಫ್ ಬಿಐ ಏಜೆಂಟ್ ಅಲೆಕ್ಸ್ ಪ್ಯಾರಿಶ್ ಪತ್ರವನ್ನು ವಹಿಸಿದ್ದಾರೆ. ಈಗಿನ ಕಂತು ಸರಣಿಯ ಕೊನೆಯ ಕಂತಾಗಿದೆ.

2018: ಕ್ವಿಂಗ್ಡಾವೊ (ಚೀನಾ): ಶಾಂಘಾಯಿ ಸಹಕಾರ ಸಂಘಟನೆಯ (ಎಸ್ ಸಿಒ) ಶೃಂಗಸಭೆಯಲ್ಲಿ ಮೊತ್ತ ಮೊದಲನೆಯದಾಗಿ ಪೂರ್ಣ ಸದಸ್ಯನಾಗಿ ಪಾಲ್ಗೊಂಡ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು  ನೆರೆಯೊಂದಿಗೆ ಸಂಪರ್ಕ ಸಾಧನೆಗೆ ಭಾರತ ಅಗ್ರ ಪ್ರಾಶಸ್ತ್ಯ ನೀಡಿದೆ ಎಂದು ಹೇಳಿದರು.  ಎಸ್ ಸಿಒ ಶೃಂಗಸಭೆಯ ಸೀಮಿತ ಸಮಾವೇಶದಲ್ಲಿ ಮಾತನಾಡಿದ ಅವರುಸೆಕ್ಯೂರ್ (ಎಸ್ ಇಸಿಯು ಆರ್) ಕಲ್ಪನೆಯನ್ನು ಸಭೆಯ ಮುಂದಿಟ್ಟರು. ’ಸೆಕ್ಯೂರ್ ಕಲ್ಪನೆಯಲ್ಲಿನ  ಎಸ್ ನಾಗರಿಕರಿಗೆ ಭದ್ರತೆ, ’ ಆರ್ಥಿಕ ಅಭಿವೃದ್ಧಿ, ’ಸಿ ಪ್ರದೇಶದಲ್ಲಿ ಸಂಪರ್ಕ, ’ಯು ಏಕತೆ ಮತ್ತುಆರ್ ಸಾರ್ವಭೌಮತ್ವಕ್ಕೆ ಗೌರವ ಮತ್ತು ಸಮಗ್ರತೆ ಹಾಗೂ ಪರಿಸರ ಸಂರಕ್ಷಣೆಯನ್ನು ಸೂಚಿಸುತ್ತದೆ ಎಂದು ಮೋದಿ ವಿವರಿಸಿದರು.   ಭೌತಿಕ ಮತ್ತು ಡಿಜಿಟಲ್ ಸಂಪರ್ಕವು ಭೂಗೋಳಶಾಸ್ತ್ರದ ವಿವರಣೆಯನ್ನು ಬದಲಾಯಿಸುತ್ತಿರುವ ಹಂತವನ್ನು ನಾವು ತಲುಪಿದ್ದೇವೆ. ಆದ್ದರಿಂದ ನಮ್ಮ ನೆರೆಹೊರೆಯ ಜೊತೆಗೆ ಮತ್ತು ಎಸ್ ಸಿಒ ಪ್ರದೇಶದಲ್ಲಿ ಸಂಪರ್ಕಕ್ಕೆ ನಾವು ಮೊದಲ ಆದ್ಯತೆ ನೀಡುತ್ತೇವೆ ಎಂದು ಮೋದಿ ನುಡಿದರು.  ಹಸ್ತಲಾಘವ, ಚುಟುಕು ಮಾತು: ಶೃಂಗ ಸಭೆಯ ಸಂದರ್ಭದಲ್ಲಿ ಪಾಕಿಸ್ತಾನದ ಅಧ್ಯಕ್ಷ ಮಮ್ನೂನ್ ಹುಸೈನ್ ಅವರಿಗೆ ಹಸ್ತಲಾಘವ ನೀಡಿದ ಮೋದಿ ಅವರ ಜೊತೆಗೆ ಚುಟುಕು ಸಂಭಾಷಣೆ ನಡೆಸಿದರು. ಎಂಟು ರಾಷ್ಟ್ರಗಳ ಕೂಟದ ಸದಸ್ಯ ರಾಷ್ಟ್ರಗಳು ಒಪ್ಪಂದಗಳಿಗೆ ಸಹಿ ಹಾಕಿದ ಬಳಿಕ ಉಭಯ ನಾಯಕರೂ ಸಂಕ್ಷಿಪ್ತ ಸಭೆ ನಡೆಸಿದರು.  ಪಾಕಿಸ್ತಾನದ ಜೊತೆಗೆ ಭಾರತವೂ ಎಸ್ ಸಿಒ ಶೃಂಗದ ಪೂರ್ಣ ಪ್ರಮಾಣದ ಸದಸ್ಯನಾದ ಬಳಿಕ ಭಾರತದ ಪ್ರಧಾನಿ ಶೃಂಗಸಭೆಯಲ್ಲಿ ಪಾಲ್ಗೊಂಡದ್ದು ಇದೇ ಪ್ರಥಮ. ಚೀನಾ ಮತ್ತು ರಷ್ಯಾ ಪ್ರಬಲವಾಗಿರುವ ಗುಂಪು  ನ್ಯಾಟೋಗೆ ಪ್ರತಿಸ್ಪರ್ಧಿ ಎಂದೇ ಪರಿಗಣಿತವಾಗಿದೆ. ಭಾರತವು ಶೃಂಗಸಭೆಯ ಯಶಸ್ಸಿಗೆ ಪೂರ್ಣ ಸಹಕಾರ ನೀಡಲು ಬದ್ಧವಾಗಿದೆ ಎಂದು ಮೋದಿ ನುಡಿದರು.  ಭಾರತಕ್ಕೆ ಬರುವ ಪ್ರವಾಸಿಗರಲ್ಲಿ ಶೇಕಡಾ ೬ರಷ್ಟು ಮಂದಿ ಮಾತ್ರ ಎಸ್ ಸಿಒ ರಾಷ್ಟ್ರಗಳಿಂದ ಬರುತ್ತಾರೆ ಎಂಬುದನ್ನು ಪ್ರಸ್ತಾಪಿಸಿದ ಪ್ರಧಾನಿ ಇದನ್ನು ಸುಲಭವಾಗಿಯೇ ದುಪ್ಪಟ್ಟುಗೊಳಿಸಬಹುದು ಎಂದು ಹೇಳಿದರು.  ನಮ್ಮ ಸಂಸ್ಕೃತಿಗಳು ಪರಸ್ಪರ ಹಂಚಿಕೊಳ್ಳಲ್ಪಟ್ಟಿರುವ ಸಂಸ್ಕೃತಿಗಳು ಎಂಬ ಅರಿವನ್ನು ಹೆಚ್ಚಿಸುವ ಮೂಲಕ ಪ್ರವಾಸಿಗರ ಸಂಖ್ಯೆಯನ್ನು ವೃದ್ಧಿಸಲು ಸಾಧ್ಯವಿದೆ. ನಾವು ಭಾರತದಲ್ಲಿ ಎಸ್ ಸಿಒ ಆಹಾರ ಉತ್ಸವ ಮತ್ತು ಬೌದ್ಧ ಉತ್ಸವವನ್ನು ಸಂಘಟಿಸುತ್ತೇವೆ ಎಂದು ಅವರು ನುಡಿದರು.  ಭಯೋತ್ಪಾದನೆಯ ಪರಿಣಾಮವನ್ನು ಅನುಭವಿಸುತ್ತಿರುವ ರಾಷ್ಟ್ರಕ್ಕೆ ಆಫ್ಘಾನಿಸ್ಥಾನ ಒಂದುದುರದೃಷ್ಟಕರ ಉದಾಹರಣೆ ಎಂದು ಹೇಳಿದ ಮೋದಿ, ಆಫ್ಘಾನಿಸ್ಥಾನದ ಅಧ್ಯಕ್ಷ ಅಶ್ರಫ್ ಘನಿ ಅವರು ಶಾಂತಿಯ ಸಲುವಾಗಿ ಕೈಗೊಂಡ ಧೈರ್ಯಶಾಲಿ ಕ್ರಮಗಳನ್ನು ಪ್ರದೇಶದಲ್ಲಿನ ಎಲ್ಲರೂ ಗೌರವಿಸುವರು ಎಂದು ಹಾರೈಸುವುದಾಗಿ, ಈದ್ ಹಬ್ಬದ ಸಂದರ್ಭದಲ್ಲಿ ಆಫ್ಘನ್ ನಾಯಕ ಕದನ ವಿರಾಮ ಘೋಷಿಸಿದ್ದನ್ನು ಉಲ್ಲೇಖಿಸುತ್ತಾ ನುಡಿದರು. ಎಸ್ ಸಿ ಪ್ರಸ್ತುತ ಎಂಟು ಸದಸ್ಯ ರಾಷ್ಟ್ರಗಳನ್ನು ಹೊಂದಿದ್ದು ರಾಷ್ಟ್ರಗಳು ವಿಶ್ವದ ಜನಸಂಖ್ಯೆಯ ಶೇಕಡಾ ೪೨ನ್ನು ಮತ್ತು ಜಾಗತಿಕ ಜಿಡಿಪಿಯ ಶೇಕಡಾ ೨೦ನ್ನು ಪ್ರತಿನಿಧಿಸುತ್ತವೆ.  ಮೋದಿ ಹೊರತಾಗಿ, ಚೀನಾದ ಅಧ್ಯಕ್ಷ ಕ್ಷಿ ಜಿನ್ ಪಿಂಗ್, ರಷ್ಯಾದ ಅಧ್ಯಕ್ಷ ವ್ಲಾದಿಮೀರ್ ಪುಟಿನ್, ಇರಾನ್ ಅಧ್ಯಕ್ಷ ಹಸನ್ ರೌಹಾನಿ ಮತ್ತು ಪಾಕಿಸ್ತಾನದ ಅಧ್ಯಕ್ಷ ಮಮ್ನೂನ್ ಹುಸೈನ್ ಶೃಂಗದಲ್ಲಿ ಪಾಲ್ಗೊಂಡಿದ್ದರು. ೨೦೦೧ರಲ್ಲಿ ಶಾಂಘಾಯಿಯಲ್ಲಿ ನಡೆದ ಶೃಂಗ ಸಭೆಯಲ್ಲಿ ಎಸ್ ಸಿಒ ವನ್ನು ಸ್ಥಾಪಿಸಲಾಗಿತ್ತು. ಶೃಂಗ ಸಭೆಯಲ್ಲಿ ರಷ್ಯಾ, ಚೀನಾ, ಕಿರ್ಗಿಜ್ ರಿಪಬ್ಲಿಕ್, ಕಜಕಸ್ಥಾನ, ತಾಜಿಕಿಸ್ಥಾನ ಮತ್ತು ಉಜ್ಬೆಕಿಸ್ಥಾನ ಪಾಲ್ಗೊಂಡಿದ್ದವು. ಭಾರತ ಮತ್ತು ಪಾಕಿಸ್ತಾನ ಕಳೆದ ವರ್ಷ ಎಸ್ ಸಿಒ ಸದಸ್ಯ ರಾಷ್ಟ್ರಗಳಾದವು.
2018: ನವದೆಹಲಿ: ೧೮ನೇ ಶಾಂಘಾಯಿ ಸಹಕಾರ ಸಂಘಟನೆ (ಎಸ್ಸಿಒ) ಕ್ವಿಂಗ್ಡಾವೊ ಜಂಟಿ ಘೋಷಣೆಯಲ್ಲಿ ಚೀನೀ ಅಧ್ಯಕ್ಷ ಕ್ಷಿ ಜಿನ್ ಪಿಂಗ್ ಅವರ ಅಚ್ಚುಮೆಚ್ಚಿನಒನ್ ಬೆಲ್ಟ್, ಒನ್ ರೋಡ್ (ಒಬಿಒಆರ್-ಒಬೊರ್) ಯೋಜನೆಯನ್ನು ಒಂದು ಭಾಗವಾಗಿ ಸೇರ್ಪಡೆ ಮಾಡುವ ಸಲಹೆಯನ್ನು ಅನುಮೋದಿಸಲು ಭಾರತ ನಿರಾಕರಿಸಿದೆ. ಎಂಟು ರಾಷ್ಟ್ರಗಳ ಕೂಟದಲ್ಲಿ ಹೀಗೆ ನಿರಾಕರಿಸಿದ ಏಕೈಕ ರಾಷ್ಟ್ರ ಭಾರತವಾಗಿದೆ.  ಎಸ್ ಸಿಒ ಪೂರ್ಣ ಪ್ರಮಾಣದ ಸದಸ್ಯನಾಗಿ ಶೃಂಗಸಭೆಯಲ್ಲಿ ಮೊತ್ತ ಮೊದಲ ಬಾರಿಗೆ ಪಾಲ್ಗೊಂಡಿರುವ ಭಾರತವು ಪ್ರಾದೇಶಿಕ ವಿಷಯಗಳಿಗೆ ಸಂಬಂಧಿಸಿದಂತೆ ರಾಜಿ ಮಾಡಿಕೊಳ್ಳುವಂತಿಲ್ಲ ಎಂಬುದಾಗಿ ಭಾರತ ಅಂಗೀಕರಿಸಿರುವ ನೀತಿಗೆ ಅನುಗುಣವಾಗಿ ಕ್ವಿಂಗ್ಡಾವೊ ಘೋಷಣೆಗೆ ಒಬೊರ್ ಸೇರ್ಪಡೆಯನ್ನು ವಿರೋಧಿಸಿದೆ ಎಂದು ಸರ್ಕಾರದ ಉನ್ನತ ಮೂಲಗಳು ಇಲ್ಲಿ ತಿಳಿಸಿದವು.  ‘ಸಿಲ್ಕ್ ರೋಡ್ ಪ್ರಾಜೆಕ್ಟ್ ಎಂಬುದಾಗಿಯೂ ಬಣ್ಣಿಸಲಾಗಿರುವ ಒಬೊರ್ ಯೋಜನೆಯಲ್ಲಿ ಚೀನಾ ಪಾಕಿಸ್ತಾನ ಆರ್ಥಿಕ ಕಾರಿಡಾರ್ (ಸಿಪಿಇಸಿ) ಯೋಜನೆಯೂ ಒಳಗೊಂಡಿರುವುದರಿಂದ ಅದು ತನ್ನ ಸಾರ್ವಭೌಮಕ್ಕೆ ಬೆದರಿಕೆಯಾಗಿದೆ ಎಂದು ಭಾರತ ಬಣ್ಣಿಸಿದೆ. ಚೀನಾ ಪಾಕಿಸ್ತಾನ ಆರ್ಥಿಕ ಕಾರಿಡಾರ್ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮೂಲಕ ಹಾದು ಹೋಗುತ್ತದೆ. ೩೦೦೦ ಕಿಮೀ ಉದ್ದದ ಸಿಪಿಇಸಿ, ಚೀನಾ ಮತ್ತು ಪಾಕಿಸ್ತಾನವನ್ನು ರೈಲು, ರಸ್ತೆ, ಪೈಪ್ ಲೈನುಗಳು ಮತ್ತು ಆಪ್ಟಿಕಲ್ ಫೈಬರ್ ಕೇಬಲ್ ಜಾಲಗಳ ಮೂಲಕ ಸಂಪರ್ಕಿಸುತ್ತದೆ.  ಚೀನಾ ಪಾಕಿಸ್ತಾನ ಆರ್ಥಿಕ ಕಾರಿಡಾರ್ ಚೀನಾದ ಕ್ಷಿನ್ಜಿಯಾಂಗ್ ಪ್ರಾಂತವನ್ನು ಪಾಕಿಸ್ತಾನದ ಗ್ವಾದರ್ ಬಂದರಿನ ಜೊತೆಗೆ ಜೋಡಿಸುತ್ತದೆ. ತನ್ಮೂಲಕ ಚೀನಾಕ್ಕೆ ಅರಬ್ಬಿ ಸಮುದ್ರವನ್ನು ತಲುಪಲು ಮಾರ್ಗವನ್ನು ಕಲ್ಪಿಸುತ್ತದೆ. ಯೋಜನೆ ಪೂರ್ಣಗೊಂಡಾಗ ಚೀನಾವು ಮಧ್ಯಪ್ರಾಚ್ಯದಿಂದ ತನ್ನ ತೈಲ ಸರಬರಾಜನ್ನು ಪೈಪ್ ಲೈನುಗಳ ಮೂಲಕ ಕ್ಷಿನ್ ಜಿಯಾಂಗ್ ಪ್ರಾಂತ್ಯಕ್ಕೆ ತರುವ ಮಾರ್ಗವನ್ನು ಹೊಂದುತ್ತದೆ. ಇದರಿಂದ ಚೀನೀ ಹಡಗುಗಳು ಚೀನಾಕ್ಕೆ ಪ್ರಯಾಣ ಮಾಡಲು ತಗಲುವ ವೇಳೆ ಗಣನೀಯವಾಗಿ ತಗ್ಗುತ್ತದೆ.  ಭಾರತವು ವರ್ಷ ಏಪ್ರಿಲ್ ತಿಂಗಳಲ್ಲಿ ಬೀಜಿಂಗಿನಲ್ಲಿ ನಡೆದ ವಿದೇಶಾಂಗ ಸಚಿವರ ಸಭೆಯಲ್ಲಿ ಸಂಬಂಧ ಜಂಟಿ ಪ್ರಕಟಣೆ ನೀಡದಂತೆಯೂ ತಡೆದಿತ್ತು.  ಪ್ರಧಾನಿ ನರೇಂದ್ರ ಮೋದಿ ಅವರು ಕ್ವಿಂಗ್ಡಾವೊದಲ್ಲಿ ನಡೆಯುತ್ತಿರುವ ೧೮ನೇ ಎಸ್ ಸಿಒ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದು, ಚೀನೀ ಅಧ್ಯಕ್ಷ ಕ್ಷಿ ಜಿನ್ ಪಿಂಗ್ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ಹಾಗೆಯೇ ಪಾಕಿಸ್ತಾನಿ ಅಧ್ಯಕ್ಷ ಮಮ್ನೂನ್ ಹುಸೈನ್  ಅವರಿಗೆ ಹಸ್ತಲಾಘವ ನೀಡಿ ಚುಟುಕು ಮಾತುಕತೆ ನಡೆಸಿದರು.
2018: ನವದೆಹಲಿ: ಕೇಂದ್ರೀಯ ಜಾಗೃತಾ ಆಯೋಗದ (ಸೆಂಟ್ರಲ್ ವಿಜಿಲೆನ್ಸ್ ಕಮೀಷನ್- ಸಿವಿಸಿ) ಜಾಗೃತಾ ಆಯುಕ್ತರಾಗಿ (ವಿಜಿಲೆನ್ಸ್ ಕಮೀಷನರ್) ೨೦೧೭ರಲ್ಲಿ ನಿವೃತ್ತರಾದ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್ ಐಎ ) ಮಾಜಿ ಮುಖ್ಯಸ್ಥ ಶರದ್ ಕುಮಾರ್ ಅವರನ್ನು ನೇಮಕ ಮಾಡಲಾಯಿತು. ೬೨ರ ಹರೆಯದ ಶರದ್ ಕುಮಾರ್ ಅವರು ಹರಿಯಾಣದಿಂದ ಬಂದಿರುವ, ೧೯೭೯ರ ಐಪಿಎಸ್ ತಂಡದ ಅಧಿಕಾರಿಯಾಗಿದ್ದು, ೨೦೧೭ರ ಸೆಪ್ಟೆಂಬರ್ ತಿಂಗಳಲ್ಲಿ ಎನ್ ಐಎ ಮುಖ್ಯಸ್ಥ ಹುದ್ದೆಯಿಂದ ನಿವೃತ್ತರಾಗಿದ್ದರು. ಭಯೋತ್ಪಾದನಾ ನಿಗ್ರಹ ಸಂಸ್ಥೆಯಾಗಿರುವ ಎನ್ ಐಎ ಮುಖ್ಯಸ್ಥರಾಗಿ ಅವರು ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದರು. ಅಧಿಕೃತ ಆದೇಶದ ಪ್ರಕಾರ ಶರದ್ ಕುಮಾರ್ ಅವರನ್ನು ಕೇಂದ್ರೀಯ ಜಾಗೃತಾ ಆಯೋಗದಲ್ಲಿ ಜಾಗೃತಾ ಆಯುಕ್ತರಾಗಿ ವರ್ಷಗಳ ಅವಧಿಗೆ ಅಥವಾ ೬೫ನೇ ವಯಸ್ಸಿನಲ್ಲಿ ನಿವೃತ್ತಿ ಹೊಂದುವವರೆಗೆ ನೇಮಕ ಮಾಡಲಾಗಿದೆ. ಹುದ್ದೆಯು ಕಳೆದ ಫೆಬ್ರುವರಿಯಿಂದ ಖಾಲಿ ಇತ್ತು.  ನಿಯಮಾವಳಿಗಳ ಪ್ರಕಾರ ಕುಮಾರ್ ಅವರ ಅಧಿಕಾರಾವಧಿ ೨೦೨೦ರ ಅಕ್ಟೋಬರ್ ತಿಂಗಳಲ್ಲಿ ಕೊನೆಗೊಳ್ಳುವುದು.  ಆಯೋಗವು ಕೇಂದ್ರೀಯ ಜಾಗೃತಾ ಆಯುಕ್ತ ಮತ್ತು ಇಬ್ಬರು ಜಾಗೃತಾ ಆಯುಕ್ತರನ್ನು ಹೊಂದಿರುತ್ತದೆ. ಪ್ರಸ್ತುತ ಕೆ.ವಿ. ಚೌಧರಿ ಅವರು ಕೇಂದ್ರೀಯ ಜಾಗೃತಾ ಆಯುಕ್ತರಾಗಿದ್ದು (ಸಿವಿಸಿ), ಟಿ.ಎಂ. ಭಾಸಿನ್ ಅವರು ಇನ್ನೊಬ್ಬ ಜಾಗೃತಾ ಆಯುಕ್ತರಾಗಿದ್ದರು.
2018: ಕ್ವಿಂಗ್ಡಾವೊ (ಚೀನಾ): ಭಾರತ ಮತ್ತು ಶಾಂಘಾಯಿ ಸಹಕಾರ ಸಂಘಟನೆಯ (ಎಸ್ ಸಿಒ) ಇತರ ಸದಸ್ಯರು ಇಲ್ಲಿ ಯುವಕರಿಗೆ ಭಯೋತ್ಪಾದನೆ ವಿರುದ್ಧ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಂಟಿ ಮನವಿ ಮಾಡಿದರು.  ಜಂಟಿ ಮನವಿಯ ಪ್ರಕಾರ ಯುವಕರು ಭಯೋತ್ಪಾದಕ, ಪ್ರತ್ಯೇಕತಾವಾದಿ ಮತ್ತ್ತು ಉಗ್ರವಾದಿ ಗುಂಪುಗಳ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ತಡೆಯುವ ಯತ್ನವಾಗಿ, ಸಮಗ್ರ ಶೈಕ್ಷಣಿಕ ಕೆಲಸ ಮತ್ತು ಆಧ್ಯಾತ್ಮಿಕ ಮತ್ತು ನೈತಿಕ ಶಿಕ್ಷಣ ಒದಗಿಸುವ ಕಾರ್ಯಕ್ರಮಗಳನ್ನು ಯುವಕರಿಗಾಗಿ ಹಮ್ಮಿಕೊಳ್ಳುವ ನಿರ್ಧಾರವನ್ನು ಕೈಗೊಳ್ಳಲಾಯಿತು.  ಎರಡು ದಿನಗಳ ಶೃಂಗಸಭೆಯ ಅಂತಿಮ ದಿನವಾದ ಈದಿನ  ಎಂಟು ಎಸ್ ಸಿಒ ಸದಸ್ಯ ರಾಷ್ಟ್ರಗಳ ನಾಯಕರು ಕ್ವಿಂಗ್ಡಾವೊ ಘೋಷಣೆಗೆ ಸಹಿ ಹಾಕಿದರು. ಪ್ರಧಾನಿ ನರೇಂದ್ರ ಮೋದಿ, ಚೀನೀ ಅಧ್ಯಕ್ಷ ಕ್ಷಿ ಜಿನ್ ಪಿಂಗ್, ರಷ್ಯಾದ ಅಧ್ಯಕ್ಷ ವ್ಲಾದಿಮೀರ್ ಪುಟಿನ್ ಮತ್ತು ಇತರ ಎಸ್ ಸಿಒ ನಾಯಕರು ಶೃಂಗದಲ್ಲಿ ಪಾಲ್ಗೊಂಡಿದ್ದರು. ಉಜ್ಬೆಕಿಸ್ಥಾನದ ಅಧ್ಯಕ್ಷ ಶೌಕತ್ ಮಿರ್ಜಿಯೊಯೆವ್ ಅವರು ಮಂಡಿಸಿದ ಪ್ರಸ್ತಾಪವನ್ನು ಎಸ್ ಸಿಒ ಶೃಂಗವುಯುವಕರಿಗೆ ಎಸ್ ಸಿಒ ರಾಷ್ಟ್ರಗಳ ಪ್ರಮುಖರ ಜಂಟಿ ಮನವಿ ಎಂಬುದಾಗಿ ಅನುಮೋದಿಸಿತು. ಉಪಕ್ರಮವನ್ನು ಉಜ್ಬೆಕ್ ಅಧ್ಯಕ್ಷರು ೨೦೧೭ರಲ್ಲಿ ಮೊದಲು ಪ್ರಕಟಿಸಿದ್ದರು.  ಭಯೋತ್ಪಾದಕ, ಪ್ರತ್ಯೇಕತಾವಾದಿ ಮತ್ತು ಉಗ್ರಗಾಮಿ ಗುಂಪುಗಳ ಚಟುವಟಿಕೆಗಳಲ್ಲಿ ಯುವಜನರು ಪಾಲ್ಗೊಳ್ಳುತ್ತಿರುವುದಕ್ಕೆ ವಿರುದ್ಧವಾಗಿ ಅಂತಾರಾಷ್ಟ್ರೀಯ ಸಮುದಾಯದ ಪ್ರಯತ್ನಗಳನ್ನು ಒಗ್ಗೂಡಿಸಬೇಕಾದ ಮಹತ್ವವನ್ನು ಸದಸ್ಯ ರಾಷ್ಟ್ರಗಳು ಗುರುತಿಸಿವೆ ಎಂದು ಎಸ್ ಸಿಒ ರಾಷ್ಟ್ರಗಳ ಪ್ರಮುಖರ ಮಂಡಳಿಯ ಕ್ವಿಂಗ್ಡಾವೊ  ಘೋಷಣೆ ತಿಳಿಸಿತು. ಯುವಕರಿಗೆ ಜಂಟಿ ಮನವಿಯನ್ನು ಅಂಗೀಕರಿಸಿದ ಎಸ್ ಸಿಒ ಪ್ರಮುಖರು ಅದರಲ್ಲಿ ಸಮಗ್ರ ಶೈಕ್ಷಣಿಕ ಕಾರ್ಯಗಳನ್ನು ಸಂಘಟಿಸುವ ಮತ್ತು ಯುವ ಜನಾಂಗಕ್ಕೆ ಆಧ್ಯಾತ್ಮಿಕ  ಮತ್ತು ನೈತಿಕ ಶಿಕ್ಷಣವನ್ನು ಒದಗಿಸುವ ಇಂಗಿತವನ್ನು ಪ್ರಕಟಿಸಿದವು.  ಜಂಟಿ ಮನವಿಯ ಮಹತ್ವವನ್ನು ಪ್ರಸ್ತಾಪಿಸಿದ ಜೆ ಎಸ್ ಮತ್ತು ರಾಷ್ಟ್ರೀಯ ಸಮನ್ವಯಕಾರ್ತಿ (ಎಸ್ ಸಿಒ) ಮಧುಮಿತಾ ಹಜಾರಿಕಾ ಭಗತ್ ಅವರುಇದು ಶೃಂಗಸಭೆಯ ಅತ್ಯಂತ ಮಹತ್ವದ ಫಲಶ್ರುತಿ ಎಂದು ಹೇಳಿದರು.
2018: ಸಿಂಗಾಪುರ: ಉತ್ತರ ಕೊರಿಯಾದ ಬತ್ತಳಿಕೆಯಲ್ಲಿರುವ ಅಣ್ವಸ್ತ್ರಗಳ ಭವಿಷ್ಯವನ್ನು ನಿರ್ಧರಿಸಲಿರುವ ಅಭೂತಪೂರ್ವ ಅಮೆರಿಕ- ಉತ್ತರ ಕೊರಿಯಾ ಶೃಂಗ ಸಭೆಗಾಗಿ ಕ್ಷಣಗಣನೆ ಆರಂಭವಾಗಿದ್ದು, ಕೆಲವೇ ದಿನಗಳ ಹಿಂದೆ ಪರಸ್ಪರ ಬೆಂಕಿ ಉಗುಳಿಕೊಳ್ಳುತ್ತಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉತ್ತರ ಕೊರಿಯಾದ ಮುಖ್ಯಸ್ಥ ಕಿಮ್ ಅವರು ಸಿಂಗಾಪುರ ತಲುಪಿದರು. ಕಿಮ್ ಅವರು ತಮ್ಮ ಚಿರಪರಿಚಿತವಾದ ಕರಿಯಮಾವೋ ಉಡುಪು ಧರಿಸಿ ಸಿಂಗಾಪುರ ತಲುಪಿದ ಕೆಲವು ಗಂಟೆಗಳ ಬಳಿಕ ಟ್ರಂಪ್ ಅವರು ಚಾರಿತ್ರಿಕ ಶೃಂಗದಲ್ಲಿ ಪಾಲ್ಗೊಳ್ಳುವ ಸಲುವಾಗಿ ಸಿಂಗಾಪುರಕ್ಕೆ ಆಗಮಿಸಿದರು. ಸಿಂಗಾಪುರದ ಪವ ಲೆಬರ್ ವಾಯುನೆಲೆಗೆ ಏರ್ ಫೋರ್ಸ್ ಒನ್ ವಿಮಾನದ ಮೂಲಕ ಬಂದಿಳಿದರು.  ಕೆನಡಾದಿಂದ ೨೦ ಗಂಟೆಗಳಷ್ಟು ಪ್ರಯಾಣ ಮಾಡಿ ಸಿಂಗಾಪುರಕ್ಕೆ ಆಗಮಿಸಿದ ಟ್ರಂಪ್ ಅವರನ್ನು ಸಿಂಗಾಪುರದ ವಿದೇಶಾಂಗ ಸಚಿವ ವಿವಿಯನ್ ಬಾಲಕೃಷ್ಣನ್ ವಾಯುನೆಲೆಯಲ್ಲಿ ಸ್ವಾಗತಿಸಿದರು. ‘ಶೃಂಗದ ಬಗ್ಗೆ ಏನು ಅನ್ನಿಸುತ್ತಿದೆ?’ ಎಂಬ ವರದಿಗಾರರ ಪ್ರಶ್ನೆಗೆವೆರಿ ಗುಡ್ ಎಂಬ ಉತ್ತರವನ್ನು ನೀಡಿ ಅವರು ತಮ್ಮನ್ನು ಕಾಯುತ್ತಿದ್ದ ವಾಹನದತ್ತ ಮುಂದುವರೆದರು. ಉಭಯ ನಾಯಕರೂ ಜೂನ್ 12ರ ಮಂಗಳವಾರ ಸೆಂಟೋಸಾ ರಿಸಾರ್ಟ್ ದ್ವೀಪದಲ್ಲಿ ಸಭೆ ನಡೆಸುವರು. ಅಮೆರಿಕ ಮತ್ತು ಉತ್ತರ ಕೊರಿಯಾ ನಾಯಕನ ನಡುವಣ ಮೊತ್ತ ಮೊದಲ ಮಾತುಕತೆ ಇದು. ಕೆಲವು ತಿಂಗಳುಗಳ ಹಿಂದೆ ಇಂತಹದೊಂದು ಮಾತುಕತೆ ಬಗ್ಗೆ ಊಹಿಸುವುದೂ ಸಾಧ್ಯವಿರಲಿಲ್ಲ. ಆಗ ಟ್ರಂಪ್ ಮತ್ತು ಕಿಮ್ ಪರಸ್ಪರ ದೂಷಣೆ, ಬೆದರಿಕೆಗಳನ್ನು ಒಡ್ಡುತ್ತಿದ್ದ ರೀತಿಯಿಂದ ಇಡೀ ಪ್ರದೇಶದಲ್ಲಿ ಸಮರದ ಭೀತಿ ತಲೆದೋರಿತ್ತು. ಆದರೆ ಉತ್ತರ ಕೊರಿಯಾ, ದಕ್ಷಿಣ ಕೊರಿಯಾ ಮತ್ತು ಅಮೆರಿಕ ಮಧ್ಯೆ ನಡೆದ ಸರಣಿ ರಾಜತಾಂತ್ರಿಕ ಸಭೆಗಳ ಬಳಿಕ ಉಭಯ ರಾಷ್ಟ್ರಗಳ ನಡುವಣ ಪ್ರಕ್ಷುಬ್ಧತೆ ಕಡಿಮೆಯಾಗಿ ಕಡೆಗೆ ಮಾರ್ಚ್ ತಿಂಗಳಲ್ಲಿ ಪರಸ್ಪರ ಭೇಟಿ ಮಾಡುವ ಕಿಮ್ ಆಹ್ವಾನವನ್ನು ಟ್ರಂಪ್ ಸ್ವೀಕರಿಸಿದ್ದರು.  ಟ್ರಂಪ್ ಅವರು ಉತ್ತರ ಕೊರಿಯಾದ ಬತ್ತಳಿಕೆಯಲ್ಲಿರುವ ಅಣ್ವಸ್ತ್ರಗಳನ್ನು ಸಂಪೂರ್ಣವಾಗಿ ತೊಡೆದುಹಾಕುವ ಆಶಯ ಹೊಂದಿದ್ದರೂ, ಕಿಮ್ ಅವರು ಅಣ್ವಸ್ತ್ರಗಳನ್ನು ನಿಷ್ಕ್ರಿಯಗೊಳಿಸುವ ನಿಟ್ಟಿನಲ್ಲಿ ಹೆಚ್ಚು ಆಸಕ್ತರಾಗಿ ಇದ್ದಂತಿಲ್ಲ ಎನ್ನಲಾಗಿದೆ. ಅವರ ಮುಖ್ಯ ಗುರಿ ತಮ್ಮ ಕುಟುಂಬದ ಆಳ್ವಿಕೆಯನ್ನು ಉಳಿಸಿಕೊಂಡು ಹೋಗುವ ಮಾರ್ಗ ಕಂಡುಕೊಳ್ಳುವ ಬಗ್ಗೆ ಅವರು ಹೆಚ್ಚು ಆಸಕ್ತರಾಗಿದ್ದಾರೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದರು. ಅಮೆರಿಕ ನೇತೃತ್ವದ ಆರ್ಥಿಕ ದಿಗ್ಬಂಧನಗಳು, ರಾಜತಾಂತ್ರಿಕ ಕ್ರಮಗಳು ಮತ್ತು ಮಿಲಿಟರಿ ಬೆದರಿಕೆಗಗಳು ಕಿಮ್ ಅವರನ್ನು ಸಂಧಾನದ ಮೇಜಿಗೆ ಬರುವಂತೆ ಮಾಡಿವೆ ಎಂದು ಟ್ರಂಪ್ ಮತ್ತು ಅವರ ನಿಕಟವರ್ತಿಗಳು ಭಾವಿಸಿದ್ದರು.
2018: ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಕೆರಾನ್ಸೆಕ್ಟರ್ನಲ್ಲಿ  ಪಾಕ್ನಿಂದ ಗಡಿನುಸುಳುತ್ತಿದ್ದ  6 ಮಂದಿ ಉಗ್ರರನ್ನು ಗಡಿ ಭದ್ರತಾ ಪಡೆಗಳು ಹತ್ಯೆಗೈದವು. ಈಗಾಗಲೇ ಗಡಿಯಲ್ಲಿ ವ್ಯಾಪಕ ಕಟ್ಟೆಚ್ಚರ ವಹಿಸಲಾಗಿದ್ದು ,ಉಗ್ರರು ನುಸುಳುವುದು ಕಂಡೊಡನೆಯೇ ಬಿಎಸ್ಎಫ್ ಪಡೆಗಳು ಗುಂಡಿನ ದಾಳಿ ನಡೆಸಿ ಉಗ್ರರ ಯತ್ನ ವಿಫಲಗೊಳಿಸಿವೆ ಎಂದು ವರದಿಯಾಯಿತು.  ಸಬ್ಜಿಯಾನ್ಸೆಕ್ಟರ್ನಲ್ಲಿ  ಸೈನಿಕರು ಕಾಮಗಾರಿಯಲ್ಲಿ ನಿರತರಾಗಿದ್ದ ವೇಳೆ ಸೈನಿಕರೊಬ್ಬರು ಆಕಸ್ಮಿಕವಾಗಿ ಲ್ಯಾಂಡ್ಮೈನ್ಮೇಲೆ ಕಾಲಿಟ್ಟು ಗಂಭೀರವಾಗಿ ಗಾಯಗೊಂಡಿರುವ ಘಟನೆ ಘಟಿಸಿತು.


2017: ಶ್ರೀನಗರ: ಅಮೀರ್ ಖಾನ್ ಅಭಿನಯದ 'ದಂಗಲ್' ಚಿತ್ರದಲ್ಲಿ ಕುಸ್ತಿಪಟು ಗೀತಾ ಫೋಗಟ್
ಪಾತ್ರ ನಿರ್ವಹಿಸಿದ್ದ ಕಾಶ್ಮೀರಿ ಹುಡುಗಿ ಝೈರಾ ವಾಸಿಂ ಅವರು ಪ್ರಯಾಣಿಸುತ್ತಿದ್ದ ಕಾರು ಹಿಂದಿನ ದಿನ ರಾತ್ರಿ ಶ್ರೀನಗರದಲ್ಲಿ ಅಪಘಾತಕ್ಕೀಡಾಗಿದ್ದು, ಝೈರಾ ಅಪಾಯದಿಂದ ಪಾರಾದರು. ಝೈರಾ ಪ್ರಯಾಣಿಸುತ್ತಿದ್ದ ಕಾರು ರಾತ್ರಿ 9ರ ಸುಮಾರಿಗೆ ಪಲ್ಟಿಯಾಗಿ, ದಾಲ್ ಸರೋವರಕ್ಕೆ ಬಿದ್ದಿತು. ಕಾರು ಬಿದ್ದಿರುವುದನ್ನು ಗಮನಿಸಿದ ಸ್ಥಳೀಯರು ಝೈರಾ ಮತ್ತು ಆಕೆಯ ಸ್ನೇಹಿತ ಆರಿಫ್ ಅಹಮದ್‌ ಅವರನ್ನು ರಕ್ಷಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದವು. ‘ಘಟನೆಯಲ್ಲಿ ಅವರಿಬ್ಬರೂ ಬದುಕುಳಿದಿದ್ದಾರೆ. ಆದರೆ, ಝರಾ ಜತೆಗಿದ್ದ ಸ್ಥಳೀಯ ಪಿಡಿಪಿ ಮುಖಂಡನ ಮಗ ಆರಿಫ್‌ಗೆ ಹಲವು ಗಾಯಗಳಾಗಿವೆ’ ಎಂದು ಸ್ಥಳೀಯರು ಹೇಳಿದರು. ವಾಹನವು ಅತಿ ವೇಗದಲ್ಲಿ ಚಲಿಸುತ್ತಿತ್ತು ಮತ್ತು ಚಾಲಕ ಅದರ ಮೇಲೆ ನಿಯಂತ್ರಣ ಕಳೆದುಕೊಂಡು ಘಟನೆ ಸಂಭವಿಸಿದೆ ಎಂದು ಸ್ಥಳೀಯರು ಹೇಳಿದರು. ಅಮೀರ್‌ ಖಾನ್‌ ಅವರ ಬ್ಲಾಕ್‌ ಬಸ್ಟರ್‌ ಎನ್ನಲಾದ ‘ದಂಗಲ್‌’ ಚಿತ್ರದಲ್ಲಿ ಕುಸ್ತಿಪಟುವಾಗಿ ಅಭಿನಯಿಸಿ ಗೀತಾ ಪೋಗಟ್‌ ಪಾತ್ರಕ್ಕೆ ಝೈರಾ ಖ್ಯಾತಿ ತಂದುಕೊಟ್ಟಿದ್ದರು. ಜನವರಿಯಲ್ಲಿ ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಅವರನ್ನು ಭೇಟಿಯಾದ ಬಳಿಕ ಫೇಸ್‌ಬುಕ್ ಮತ್ತು ಟ್ವಿಟರ್‌ನಲ್ಲಿ ಝೈರಾ ಸುದ್ದಿಯಾಗಿದ್ದರು.
2017: ನವದೆಹಲಿ: ಜುಲೈ 1ರಿಂದ ಪ್ಯಾನ್‌ ಕಾರ್ಡ್‌ಗೆ ಅರ್ಜಿ ಮತ್ತು ಆದಾಯ ತೆರಿಗೆ ಲೆಕ್ಕಪತ್ರ
ಮಾಹಿತಿ (ಐಟಿಆರ್‌) ಸಲ್ಲಿಸಲು ಆಧಾರ್‌ ಸಂಖ್ಯೆ ಕಡ್ಡಾಯ ಎಂದು ಕೇಂದ್ರ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ಹೇಳಿತು. ಆಧಾರ್‌ ಕಡ್ಡಾಯಗೊಳಿಸುವ ಕಾನೂನಿನ ಸಿಂಧುತ್ವವನ್ನು ಸುಪ್ರೀಂಕೋರ್ಟ್‌ ಹಿಂದಿನ ದಿನ  ಎತ್ತಿಹಿಡಿದಿತ್ತು. ಆದರೆ, ಆಧಾರ್‌ ಸಂಖ್ಯೆ ಹೊಂದಿಲ್ಲದವರಿಗೆ ಇದರಿಂದ ತಾತ್ಕಾಲಿಕ ವಿನಾಯಿತಿಯನ್ನು ಸುಪ್ರೀಂಕೋರ್ಟ್‌ ನೀಡಿತ್ತು. ಈಗ ಸಿಬಿಡಿಟಿ ಮಾರ್ಗಸೂಚಿಯ ಪ್ರಕಾರ ಜುಲೈ 1ರಿಂದ ಪ್ಯಾನ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಮತ್ತು ಆದಾಯ ತೆರಿಗೆ ಲೆಕ್ಕಪತ್ರ ಮಾಹಿತಿ (ಐಟಿಆರ್‌) ಸಲ್ಲಿಸಲು ಆಧಾರ್‌ ಸಂಖ್ಯೆ ಕಡ್ಡಾಯವಾಗಲಿದೆ. ಇದರಿಂದಾಗಿ ಆಧಾರ್‌ ಸಂಖ್ಯೆ ಹೊಂದಿಲ್ಲದವರು ಪ್ಯಾನ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಮತ್ತು ಆದಾಯ ತೆರಿಗೆ ಲೆಕ್ಕಪತ್ರ ಮಾಹಿತಿ ಸಲ್ಲಿಸಲು ಜೂನ್‌ 30 ಕೊನೆ ದಿನವಾಗಿದೆ.
2017: ಮುಂಬೈ: ಮಹಾರಾಷ್ಟ್ರದಲ್ಲಿ ಸುರಿದ ಭಾರೀ ಮಳೆಗೆ ಈವರೆಗೆ ಮೃತರಾದವರ ಸಂಖ್ಯೆ 16ಕ್ಕೆ
ಏರಿಕೆಯಾಯಿತು. ಮಹಾರಾಷ್ಟ್ರದ ಪಶ್ಚಿಮ ಕರಾವಳಿ ಭಾಗದಲ್ಲಿ ಈದಿನ ಭಾರೀ ಮಳೆಯಾಯಿತು. ಮುಂಬೈ ಸುತ್ತಮುತ್ತಲಿನ ಥಾಣೆ, ರಾಯಘಡ ಮತ್ತು ಪಾಲ್ಘರ್‌ ಜಿಲ್ಲೆಗಳಲ್ಲಿ ಗುಡುಗು ಮಿಂಚು ಸಹಿತ ಭಾರಿ ಮಳೆ ಸುರಿಯಿತು. ವಿದರ್ಭದ ಪೂರ್ವ ವಲಯದ ಜಿಲ್ಲೆಯಾದ ಗಡ್‌ಚಿರೋಲಿಯಲ್ಲಿ ಸುರಿದ ಮಳೆಗೆ 4 ಮಂದಿ ಸಾವನ್ನಪ್ಪಿ, 8 ಮಂದಿ ಗಾಯಗೊಂಡರು. ಮರಾಠವಾಡದ ಲಾತೂರ್‌ನಲ್ಲಿ ಇಬ್ಬರು, ನಾಸಿಕ್‌ನಲ್ಲಿ ಒಬ್ಬರು ಮೃತರಾದರು. ಅಹ್ಮದಾಬಾದ್‌ ಜಿಲ್ಲೆಯ ನೇವಸದಲ್ಲಿ ಶಾಲಾ ಬಾಲಕ ಚರಂಡಿ ನೀರಿನಲ್ಲಿ ಕೊಚ್ಚಿಹೋದ.

2017: ಇಸ್ಲಾಮಾಬಾದ್: ಒಬ್ಬ ವ್ಯಕ್ತಿಗೆ ಹೆಚ್ಚೆಂದೆರೆ ಎಷ್ಟು ಮಕ್ಕಳಿರಬಹುದು? ಈ ಪ್ರಶ್ನೆಗೆ ಊಹೆಗೂ
ನಿಲುಕದ ಉತ್ತರವೊಂದು ಪಾಕಿಸ್ತಾನದಲ್ಲಿ ದೊರಕಿತು. ಪಾಕಿಸ್ತಾನದ ಮೂವರು ವ್ಯಕ್ತಿಗಳು ಒಟ್ಟು 96 ಮಕ್ಕಳನ್ನು ಹೊಂದಿರುವ ಮೂಲಕ ಗಮನ ಸೆಳೆದರು. 19 ವರ್ಷಗಳ ಬಳಿಕ ಪಾಕಿಸ್ತಾನ ಜನಗಣತಿಗೆ ಮುಂದಾಗಿರುವ ಸಂದರ್ಭದಲ್ಲಿ ಇಂಥದ್ದೊಂದು ಅಚ್ಚರಿಯ ಸುದ್ದಿ ಬೆಳಕಿಗೆ ಬಂದಿತು. ಇಷ್ಟೊಂದು ಮಕ್ಕಳನ್ನು ಹೊಂದಿರುವ ಮೂವರೂ ಪುರುಷರು, ಮಕ್ಕಳನ್ನೆಲ್ಲ ದೇವರು ಸಲಹುತ್ತಾನೆ ಎಂದು ಬಲವಾಗಿ ನಂಬಿದವರು. ಪಾಕಿಸ್ತಾನದ ದಕ್ಷಿಣ ಖೈಬರ್ ಪಖ್ತುಂಖ್ವಾದ ಬನ್ನೂ ನಗರದ ಸಮೀಪದ ನಿವಾಸಿಯಾಗಿರುವ 57 ವರ್ಷ ವಯಸ್ಸಿನ ಗುಲ್ಜರ್ ಖಾನ್ 36 ಮಕ್ಕಳ ತಂದೆ. ‘ಎಲ್ಲ ಮಾನವರಿಗಾಗಿ ದೇವರು ಈ ಜಗತ್ತನ್ನು ಸೃಷ್ಟಿಸಿದ್ದಾನೆ. ಹಾಗಿದ್ದಮೇಲೆ ನೈಸರ್ಗಿಕ ಪ್ರಕ್ರಿಯೆಯಾದ ಮಕ್ಕಳ ಜನನವನ್ನು ನಾವ್ಯಾಕೆ ತಡೆಯಬೇಕು’ ಎಂದು ಗುಲ್ಜರ್ ಖಾನ್ ಪ್ರಶ್ನಿಸುತ್ತಾರೆ. ಪಾಕಿಸ್ತಾನದಲ್ಲಿ ಬಹುಪತ್ನಿತ್ವಕ್ಕೆ ಕಾನೂನಿನ ಮಾನ್ಯತೆ ಇದ್ದರೂ ಅದನ್ನು ಅಳವಡಿಸಿಕೊಳ್ಳುವವರ ಸಂಖ್ಯೆ ವಿರಳ. ಆದರೆ, ಎಲ್ಲೋ ಗುಲ್ಜರ್‌ ಖಾನ್‌ ಅವರಂಥ ಕೆಲವರು ಮಾತ್ರ ಅನೇಕ ಪತ್ನಿಯರನ್ನು ಹೊಂದಿರುತ್ತಾರಷ್ಟೆ ಗುಲ್ಜರ್ ಖಾನ್ ಅವರ 15 ಸಹೋದರರ ಪೈಕಿ ಒಬ್ಬರು ಮಸ್ತಾನ್ ಖಾನ್ ವಜೀರ್. ಇವರು 22 ಮಕ್ಕಳ ತಂದೆಯಾಗಿದ್ದು ಮೂವರು ಪತ್ನಿಯರನ್ನು ಹೊಂದಿದ್ದಾರೆ. ‘ಬದುಕಲು ಬೇಕಾಗಿರುವ ಆಹಾರ ಮತ್ತು ಸಂಪನ್ಮೂಲಗಳನ್ನು ಒದಗಿಸುವುದಾಗಿ ದೇವರೇ ಹೇಳಿದ್ದಾರೆ. ಆದರೆ, ಜನರಿಗೆ ನಂಬಿಕೆ ಇಲ್ಲ’ ಎಂಬುದು ಮಸ್ತಾನ್ ಹೇಳಿಕೆ. ಮೂರನೇಯವರು ಬಲೂಚಿಸ್ತಾನದ ನೈಋತ್ಯ ಕ್ವೆಟ್ಟಾ ನಗರದ ಜಾನ್ ಮೊಹಮ್ಮದ್. ಇವರಿಗೆ 38 ಮಕ್ಕಳಿದ್ದಾರೆ. ಮೂವರು ಪತ್ನಿಯರನ್ನು ಹೊಂದಿರುವ ಇವರು ನಾಲ್ಕನೇ ಮದುವೆಯಾಗುವ ಬಯಕೆ ಹೊಂದಿರುವುದಾಗಿ ತಿಳಿಸಿದ್ದಾರೆ. ‘ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿ ಬೆಳವಣಿಗೆ ಹೊಂದಿದರೆ ಅವರ ಶತ್ರುಗಳು ಹೆದರುತ್ತಾರೆ. ಮುಸ್ಲಿಮರ ಸಂಖ್ಯೆ ಹೆಚ್ಚಾಗಬೇಕು’ ಎಂದು ಅವರು ಹೇಳಿದರು. ವಿಶ್ವಬ್ಯಾಂಕ್ ಮತ್ತು ಸರ್ಕಾರದ ಅಂಕಿಅಂಶಗಳ ಪ್ರಕಾರ, ಪಾಕಿಸ್ತಾನವು ದಕ್ಷಿಣ ಏಷ್ಯಾದಲ್ಲೇ ಹೆಚ್ಚಿನ ಜನನ ಪ್ರಮಾಣ ಹೊಂದಿರುವ ದೇಶವಾಗಿದೆ. ಕಳೆದ ಬಾರಿ 1998ರಲ್ಲಿ ಜನಗಣತಿ ನಡೆಸಲಾಗಿತ್ತು. ಆಗ ಪಾಕಿಸ್ತಾನದ ಜನಸಂಖ್ಯೆ 13.5 ಕೋಟಿಯಷ್ಟಿತ್ತು. ಈ ವರ್ಷ ಜನಗಣತಿ ನಡೆಸಲು ಉದ್ದೇಶಿಸಲಾಗಿದ್ದು, ಜನಸಂಖ್ಯೆ ಸುಮಾರು 20 ಕೋಟಿ ತಲುಪಿರಬಹುದು ಎಂದು ಅಂದಾಜಿಸಲಾಗಿದೆ. ಈ ಪೈಕಿ ಸುಮಾರು 6 ಕೋಟಿ ಜನ ಬಡತನ ರೇಖೆಗಿಂತ ಕೆಳಗಿದ್ದಾರೆ ಎನ್ನಲಾಯಿತು. ‘ಅತಿ ಹೆಚ್ಚಿನ ಜನಸಂಖ್ಯೆ ಒಂದು ಸಮಸ್ಯೆಯಾಗಿದ್ದು, ಅಭಿವೃದ್ಧಿ ಮೇಲೂ ಪರಿಣಾಮ ಬೀರುತ್ತಿದೆ’ ಎಂದು ವಿಶ್ವಸಂಸ್ಥೆಯ ಪಾಕಿಸ್ತಾನ ಘಟಕದ ನಿರ್ದೇಶಕ ಜೆಬಾ ಎ. ಸತ್ತಾರ್ ಅಭಿಪ್ರಾಯ.
2016: ಶ್ರೀನಗರಜಮ್ಮುಕಾಶ್ಮೀರದ ಶ್ರೀನಗರ ಹೊರ ವಲಯದ ಪಾಂಪೊರದ ಸರ್ಕಾರಿ ಕಟ್ಟಡದಲ್ಲಿ ಅವಿತಿರುವ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದು, ರಾತ್ರಿಯವರೆಗೂ ಅವರೊಂದಿಗೆ  ಭದ್ರತಾ ಪಡೆಗಳು ಗುಂಡಿನ ಘರ್ಷಣೆ ನಡೆಸಿದರು. ಗುಂಡಿನ ಘರ್ಷಣೆಯಲ್ಲಿ ಒಬ್ಬ ಯೋಧ ಮತ್ತು ಒಬ್ಬ ಪೊಲೀಸ್ ಗಾಯಗೊಂಡರು. ಉಗ್ರರು ಅವಿತಿರುವ ಇದೇ ಕಟ್ಟಡದಲ್ಲಿ ಫೆಬ್ರುವರಿಯಲ್ಲಿ ಆತ್ಮಹತ್ಯೆ ಬಾಂಬ್ದಾಳಿ ನಡೆದಿತ್ತು. ಇಲ್ಲಿನ ಇಡಿಐನ ಕಟ್ಟದಲ್ಲಿ ಇಬ್ಬರು ಅಥವಾ ಮೂವರು ಉಗ್ರರು ಪ್ರವೇಶಿಸಿದ್ದಾರೆ ಎಂದು ಹೇಳಲಾಯಿತು..

2016: ಇಂಗ್ಲೆಂಡ್ : ಮನೆಯ ಮುಂಭಾಗ ಅಥವಾ ಟೆರೇಸ್ ಮೇಲೆ ಗಿಡ, ಅಲಂಕಾರಿಕ ಸಸ್ಯಗಳನ್ನು ಬೆಳೆಸುವುದು ಸಾಮಾನ್ಯ. ಆದರೆ ಇಂಗ್ಲೆಂಡ್ ವಿಮಾನ ನಿಲ್ದಾಣದ ಗೋಡೆಯ ಮೇಲೆ ಉದ್ಯಾನ ( ವರ್ಟಿಕಲ್ ಗಾರ್ಡನ್) ನಿರ್ವಿುಸಲಾಗಿದೆ. ಈ ಉದ್ಯಾನ ಈದಿನ ಉದ್ಘಾಟನೆಗೊಂಡಿತು. ಇಲ್ಲಿ ಬೆಳೆಸಿರುವ ಗಿಡಗಳು ಔಷಧೀಯ ಗುಣಹೊಂದಿವೆ. ಇವು ವ್ಯಕ್ತಿಯ ಒತ್ತಡ ಕಡಿಮೆ ಮಾಡುವ ಸಾಮರ್ಥ್ಯ ಹೊಂದಿವೆ ಎನ್ನುತ್ತಾರೆ ತಜ್ಞರು. ವಿಮಾನ ನಿಲ್ದಾಣದ ಟರ್ವಿುನಲ್ 3ರಲ್ಲಿ 1680 ಬಗೆಯ ಸಸ್ಯಗಳನ್ನು ಗೋಡೆ ಮೇಲೆ ಬೆಳೆಸಲಾಗಿದೆ. ಇವುಗಳು ಗಾಳಿಯನ್ನು ಶುದ್ಧೀಕರಿಸುವ ಸಾಮರ್ಥ್ಯ ಹೊಂದಿವೆ. ಜತೆಗೆ ವ್ಯಕ್ತಿಯ ಒತ್ತಡ ಕಡಿಮೆ ಮಾಡುವ ಸಾಮರ್ಥ್ಯ ಹೊಂದಿವೆ. ವಿಧದ ಸಸ್ಯಗಳನ್ನು ಇಂಟರ್ನ್ಯಾಷನಲ್ ಸ್ಪೇಸ್ ರಿಸರ್ಚ್ ಸೆಂಟರ್ನಲ್ಲಿ ಬೆಳೆಸಲಾಗಿದೆ. ಪೀಸ್ ಲಿಲಿ, ಇಂಗ್ಲಿಷ್ ಐವಿ ಸೇರಿ ಅನೇಕ ಸಸ್ಯಗಳನ್ನು ಗಾರ್ಡನ್ ಒಳಗೊಂಡಿದೆ. ಕೆಲ ಸಸ್ಯಗಳು ವ್ಯಕ್ತಿಯ ರಕ್ತದೊತ್ತಡ ಸೇರಿ ಅನೇಕ ಬಗೆಯ ಸಮಸ್ಯೆಗಳ ನಿವಾರಣೆ ಮಾಡುತ್ತವೆ ಎಂಬುದು ಅಧ್ಯಯನದಿಂದ ತಿಳಿದುಬಂದಿದೆ. ಹೀಗಾಗಿ ಗೋಡೆ ಮೇಲೆ ಗಾರ್ಡನ್ ನಿರ್ಮಾಣ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. ವಿಮಾನ ನಿಲ್ದಾಣದಂತಹ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಗಾರ್ಡನ್ ಬೆಳೆಸುವಷ್ಟು ಪ್ರದೇಶ ಇರುವುದಿಲ್ಲ. ಇಂಥ ಸಂದರ್ಭಗಳಲ್ಲಿ ರೀತಿಯ ಗಾರ್ಡನ್ ಬೆಳೆಸುವುದು ಸಹಕಾರಿಯಾಗಲಿದೆ. ಇದರಿಂದ ಜಾಗದ ಉಳಿತಾಯವಾಗಲಿದೆ ಎಂದು ಅಧಿಕಾರಿಗಳು ಹೇಳಿದರು.
2009: ಮೈಸೂರು ನಗರದ ಶಾರದಾ ವಿಲಾಸ ಫಾರ್ಮಸಿ ಕಾಲೇಜಿನ ಉಪ ಪ್ರಾಂಶುಪಾಲೆ ಪ್ರೊ. ಚಂದ್ರಲೇಖಾ ಗುರ್ಜರ್ (54) ಅವರನ್ನು ಕಾಲೇಜಿನ ವ್ಯವಸ್ಥಾಪಕ ಪುಟ್ಟಣ್ಣ ಎಂಬಾತ ಹಾಡಹಗಲೇ ಚಾಕುವಿನಿಂದ ಕುತ್ತಿಗೆಗೆ ಇರಿದು ಕೊಲೆ ಮಾಡಿರುವ ಘಟನೆ ನಡೆಯಿತು. ಎಂದಿನಂತೆ ತರಗತಿ ಮುಗಿಸಿ ಬೆಳಿಗ್ಗೆ 10.45ರ ಸುಮಾರಿಗೆ ಸಿಬ್ಬಂದಿ ಕೊಠಡಿಗೆ ತೆರಳಿದ ಚಂದ್ರಲೇಖ ಅವರು ವಿಶ್ರಾಂತಿ ಪಡೆಯುತ್ತಿದ್ದರು. ಈ ಸಂದರ್ಭದಲ್ಲಿ ಕೊಠಡಿಯಲ್ಲಿ ಯಾರೂ ಇರಲಿಲ್ಲ. ಕೂಡಲೇ ಒಳಹೋದ ಪುಟ್ಟಣ್ಣ ಚಾಕುವಿನಿಂದ ಚಂದ್ರಲೇಖ ಅವರ ಕುತ್ತಿಗೆ ಭಾಗಕ್ಕೆ ಏಕಾಏಕಿ ಇರಿದಾಗ ಚಂದ್ರಲೇಖ  ಕುಸಿದು ಬ್ದಿದು ಸ್ಥಳದಲ್ಲೇ ಸಾವನ್ನಪ್ಪಿದರು.

2009: ವಿಶ್ವದ ಮೊದಲ ಸೌರ ಶಕ್ತಿ ಚಾಲಿತ  ರೂ 2799 ಬೆಲೆಯ ಮೊಬೈಲ್ ಫೋನನ್ನು ಭಾರತೀಯ ಮಾರುಕಟ್ಟೆಗೆ  ಎಲೆಕ್ಟ್ರಾನಿಕ್ಸ್ ದೈತ್ಯ ಸಂಸ್ಥೆ ಸ್ಯಾಮ್‌ಸಂಗ್ ಈದಿನ ನವದೆಹಲಿಯಲ್ಲಿ ಬಿಡುಗಡೆ ಮಾಡಿತು. ಈ ಹ್ಯಾಂಡ್‌ಸೆಟ್ 'ಸೋಲಾರ್ ಗುರು'ವನ್ನು ಸೌರಶಕ್ತಿ ಬಳಸಿ ಬಳಕೆದಾರರು ಚಾರ್ಜ್ ಮಾಡಿಕೊಳ್ಳಬಹುದು. ವಿದ್ಯುತ್ ಸರಬರಾಜು ನಿಯಮಿತವಾಗಿಲ್ಲದ ಪ್ರದೇಶಗಳಲ್ಲಿ ವಾಸಿಸುವ ಭಾರತೀಯ ಗ್ರಾಹಕರ  ಅಗತ್ಯಗಳನ್ನು ಗಮನಿಸಿ 'ಸೋಲಾರ್ ಗುರು' ಅಭಿವೃದ್ಧಿಪಡಿಸಲಾಗಿದೆ ಎಂದು ಸ್ಯಾಮ್‌ಸಂಗ್‌ನ ಭಾರತದ ಮುಖ್ಯಸ್ಥ (ಮೊಬೈಲ್ ವಿಭಾಗ) ಸುನಿಲ್ ದತ್ ಹೇಳಿದರು. ಈ ಹ್ಯಾಂಡ್‌ಸೆಟ್ಟಿನಲ್ಲಿ  ಎಫ್‌ಎಂ ರೇಡಿಯೊ, ಎಂಪಿ3 ರಿಂಗ್ ಟೋನ್‌ಗಳು, ಗೇಮ್‌ಗಳು ಹಾಗೂ ಟಾರ್ಚ್‌ಲೈಟ್ ಅಡಕವಾಗಿದ್ದವು.

2009:  ಮುಂಬೈ ಮೇಲೆ ದಾಳಿ ನಡೆಸಿದ ಉಗ್ರರು ಛತ್ರಪತಿ ಶಿವಾಜಿ ಟರ್ಮಿನಸ್‌ನಲ್ಲಿ ಯದ್ವಾತದ್ವ ಗುಂಡು ಹಾರಿಸಿದಾಗ ಗಾಯಗೊಂಡಿದ್ದ 10 ವರ್ಷದ ಹುಡುಗಿಯೊಬ್ಬಳು ಆರೋಪಿ ಅಜ್ಮಲ್ ಕಸಾಬ್‌ನನ್ನು ಗುರುತಿಸಿದಳು. ಇದೇ ಸಂದರ್ಭದಲ್ಲಿ ತನ್ನ ಮಗಳ ಭವಿಷ್ಯ ಹಾಳುಮಾಡಿದ ಕಸಾಬ್‌ನನ್ನು ಗಲ್ಲಿಗೇರಿಸಿ ಎಂದು ಆಕೆಯ ತಂದೆ ಕೂಗಾಡಿದ ಪ್ರಸಂಗ  ನಡೆಯಿತು. ವಿಶೇಷ ನ್ಯಾಯಾಧೀಶ ಎಂ.ಎಲ್. ತಹಲಿಯಾನಿ ಅವರ ನ್ಯಾಯಾಲಯದಲ್ಲಿ ಅತ್ಯಂತ ಭಾವನಾತ್ಮಕ ವಾತಾವರಣ  ನೆಲೆಸಿತ್ತು.  ಬಲಗಾಲಿಗೆ ಗಾಯವಾಗಿ ಶಾಶ್ವತ ಅಂಗವೈಕಲ್ಯಕ್ಕೆ ಒಳಗಾದ ದೇವಿಕಾ ರೋತ್ವಾನ್ ಊರುಗೋಲು ಸಹಾಯದಿಂದ ಸಾಕ್ಷಿಯ ಕಟಕಟೆಗೆ ಬಂದು ಮೂವರು ಆರೋಪಿಗಳ ಪೈಕಿ ನಿರ್ದಿಷ್ಟವಾಗಿ ಕಸಾಬ್‌ನನ್ನು ಗುರುತು ಹಿಡಿದು ಬೆಟ್ಟು ಮಾಡಿದಳು. ಆರೋಪಿಯನ್ನು ಗುರುತಿಸುವ ಸರದಿ ಆಕೆಯ ತಂದೆ ರೋತ್ವಾನ್‌ಗೆ ಬಂದಾಗ ಅವರು ಭಾವಾವೇಶಕ್ಕೆ ಒಳಗಾದರು. 'ನನ್ನ ಮಗಳಿಗೆ ತೊಂದರೆ ಮಾಡಿದ ಇವನನ್ನು ಗಲ್ಲಿಗೇರಿಸಲೇಬೇಕು' ಎಂದು ಅವರು ಕಿರುಚಿದರು. ನ್ಯಾಯಾಧೀಶರು ಸಮಾಧಾನಗೊಳ್ಳುವಂತೆ ಕೇಳಿದಾಗ, 'ತೊಂದರೆಗೆ ಒಳಗಾದವರಿಗೆ ಮಾತ್ರ ಈ ನೋವು ಅರ್ಥವಾಗುತ್ತದೆ' ಎಂದರು. 'ಇಂತಹ ವ್ಯಕ್ತಿಗಳಿಗೆ ದಯೆ ಎಂಬುದಿದೆಯೇ, ಈತನಿಗೂ ಹೆತ್ತವರು ಇಲ್ಲವೇ? ಇದು ನನ್ನ ಮಗಳ ಜೀವನದ ಪ್ರಶ್ನೆ' ಎಂದು ರೋತ್ವಾನ್ ಆರೋಪಿಯನ್ನು ಉಲ್ಲೇಖಿಸಿ ಹೇಳಿದಾಗ ಎದುರುತ್ತರ ನೀಡುವವರು ಯಾರೂ ಇರಲಿಲ್ಲ.

2009: ನಕ್ಸಲ್‌ಪೀಡಿತ ಜಾರ್ಖಂಡಿನ ಪಶ್ಚಿಮ ಸಿಂಗ್‌ಭೂಮ್ ಜಿಲ್ಲೆಯ ಸೆರ್ದೆಂಗಾ-ಅರುಂಗಾ ಗ್ರಾಮದಲ್ಲಿ ಮಾವೋವಾದಿ ನಕ್ಸಲೀಯರು ಹುದುಗಿಸಿದ್ದ ನೆಲಬಾಂಬ್ ಸ್ಫೋಟಗೊಂಡು 11 ಮಂದಿ ಪೊಲೀಸರು ಮೃತರಾಗಿ ಇತರ ಆರು ಮಂದಿ ಗಾಯಗೊಂಡರು. ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಮತ್ತು ಸ್ಥಳೀಯ ಪೊಲೀಸರನ್ನೊಳಗೊಂಡ ಜಂಟಿ ತಂಡವೊಂದು ನಕ್ಸಲ್ ಪೀಡಿತ ಸರಂದಾ ಅರಣ್ಯ ಪ್ರದೇಶದಲ್ಲಿ ಎರಡು ದಿನಗಳ ಕಾಲ ತಪಾಸಣೆ ನಡೆಸಿ ಮಿನಿ ಟ್ರಕ್ಕಿನಲ್ಲಿ ಹಿಂದಿರುಗುತ್ತಿದ್ದಾಗ ಈ ಘಟನೆ ಸಂಭವಿಸಿತು. ಪಶ್ಚಿಮ ಸಿಂಗ್‌ಭೂಮ್ ಜಿಲ್ಲೆಯಲ್ಲಿ 2002 ರಿಂದ ಈಚೆಗೆ ನಕ್ಸಲೀಯರು ಪೊಲೀಸರ ಮೇಲೆ ನಡೆಸಿದ ನಾಲ್ಕನೇ ಅತಿ ದೊಡ್ಡ ದಾಳಿ ಇದು. 2002ರಲ್ಲಿ ಮೋಹರ್ ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಬಿಕಿಲ್‌ಸೋಯ್ ಎಂಬಲ್ಲಿ ನಡೆದ ದುಷ್ಕೃತ್ಯದಲ್ಲಿ 17 ಮಂದಿ ಪೊಲೀಸರು, 2004ರಲ್ಲಿ ಗುವಾ ಪೊಲೀಸ್ ಠಾಣಾ ವ್ಯಾಪ್ತಿಯ ಬಾಲಿವಾದಲ್ಲಿ 29 ಮಂದಿ ಪೊಲೀಸರು ಹಾಗೂ 2007ರಲ್ಲಿ ಜೆರೈಕೆಲಾದಲ್ಲಿ 11 ಮಂದಿ ಸಿಆರ್‌ಪಿಎಫ್ ಸಿಬ್ಬಂದಿ ಮೃತರಾಗಿದ್ದರು.

 2009: ನೀವು ಗಣಿತದಲ್ಲಿ ಹೆಚ್ಚು ಅಂಕ ಗಳಿಸ ಬಯಸಿರುವ ವಿದ್ಯಾರ್ಥಿಗಳೇ? ಹಾಗಿದ್ದರೆ ನಿಮಗೊಂದು ಕಿವಿಮಾತು ಇಲ್ಲಿದೆ: ಅದೆಂದರೆ 'ನೀವು ನಿರಾತಂಕವಾಗಿ ನಿದ್ರೆ ಮಾಡಿ'! ಇದು ಯಾರೋ ಕುಂಭಕರ್ಣನ ವಂಶಸ್ಥರು ನೀಡಿರುವ ಪುಕ್ಕಟೆ ಸಲಹೆಯಲ್ಲ; ಅಮೆರಿಕದ ಪಿಟ್ಸ್‌ಬರ್ಗ್ ವಿಶ್ವವಿದ್ಯಾನಿಲಯ ಹಲವರ ಪಾಲಿಗೆ 'ಕಬ್ಬಿಣದ ಕಡಲೆ' ಆಗಿರುವ ಗಣಿತದಲ್ಲಿ ಹೆಚ್ಚು ಅಂಕ ಗಳಿಸುವವರಿಗೂ ಉತ್ತಮ ನಿದ್ರೆಗೂ ಇರುವ ಅವಿನಾಭಾವ ಸಂಬಂಧದ ಬಗ್ಗೆ ನಡೆಸಿದ ಸಂಶೋಧನೆ ಬಹಿರಂಗಪಡಿಸಿದ ಸತ್ಯ. ಅದರ ಪ್ರಕಾರ ಗಣಿತದಲ್ಲಿ ಅಧಿಕ ಅಂಕ ಗಳಿಸಿರುವ ವಿದ್ಯಾರ್ಥಿಗಳ ನಿದ್ರಾ ಗುಣಮಟ್ಟ ಅತ್ಯುತ್ತಮವಾಗಿದೆ. ಯಾರು ನಿದ್ರೆಯ ಗುಣಮಟ್ಟವನ್ನು ವೃದ್ಧಿಸಿಕೊಳ್ಳುತ್ತಾ ಬರುವರೋ ಗಣಿತದ ಬಗೆಗಿನ ಅವರ ಸಾಮರ್ಥ್ಯವೂ ಹೆಚ್ಚುತ್ತಾ ಬರುತ್ತದೆ. 'ನಿದ್ರಾಹೀನತೆ ಹದಿವಯಸ್ಕರಿಗೆ ಸಾಕಷ್ಟು ತೊಂದರೆ ತಂದೊಡ್ಡುತ್ತದೆ' ಎಂಬುದು ವಿಶ್ವವಿದ್ಯಾನಿಲಯದ ಜೆನ್ನಿಫರ್ ಕಸಿನ್ಸ್ ಅಭಿಮತ.

  2009: ದಕ್ಷಿಣ ಇರಾಕ್‌ನ ಧಿಖಾರ್ ಪ್ರಾಂತ್ಯದ ನಸಿರಿಯಾಹ್ ಮಾರ್ಕೆಟ್‌ನಲ್ಲಿ ಸಂಭವಿಸಿದ ಕಾರ್‌ಬಾಂಬ್ ಸ್ಫೋಟದಲ್ಲಿ ಮಹಿಳೆ, ಮಕ್ಕಳು ಸೇರಿದಂತೆ 30 ಮಂದಿ ಮೃತರಾಗಿ 70 ಮಂದಿ ಗಾಯಗೊಂಡರು.

2009:  ಪರಿಸರ ಸಂರಕ್ಷಣೆ ಮತ್ತು ವ್ಯವಸ್ಥಾಪನಾ ಕ್ಷೇತ್ರಕ್ಕೆ ಕೊಡುಗೆ ನೀಡಿದ ರಾಜ್ಯದ ಮೂವರು ವ್ಯಕ್ತಿಗಳು ಮತ್ತು ಮೂರು ಸಂಸ್ಥೆಗಳನ್ನು ಪರಿಸರ ಇಲಾಖೆಯ 'ರಾಜ್ಯ ಪರಿಸರ ಪ್ರಶಸ್ತಿ'ಗೆ ಆಯ್ಕೆ ಮಾಡಲಾಯಿತು. ದಾವಣಗೆರೆಯ ಬಾಪೂಜಿ ಎಂಜಿನಿ ಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಡಾ.ಎಸ್.ಮಂಜಪ್ಪ, ಬೆಂಗಳೂರು ಆಕಾಶವಾಣಿ ಕೇಂದ್ರದ ಪ್ರಸಾರ ನಿರ್ವಾಹಕಿ ಸುಮಂಗಳ ಎಸ್.ಮುಮ್ಮಿ ಗಟ್ಟಿ, ಕೊಡಗು ಜಿಲ್ಲೆಯ ಗೋಣಿಕೊಪ್ಪದ ಉರಗ ತಜ್ಞ 'ಸ್ನೇಕ್' ಸತೀಶ್, ಗದಗದ ಕಪೋತಗಿರಿ ಶ್ರೀನಂದಿವೀರಿ ಮಹಾಸಂಸ್ಥಾನ ಮಠ, ಟಿ.ಕೆ.ಪಟೇಲ್ ಬೆನಕಟ್ಟಿ ಚಾರಿಟೆಬಲ್ ಟ್ರಸ್ಟ್, ಹೊಸನಗರ ತಾಲ್ಲೂಕಿನ ಕರ್ನಾಗಿರಿಯ ಗ್ರಾಮ ಭಾರತಿ ಟ್ರಸ್ಟ್-ಗಳಿಗೆ ರಾಜ್ಯ ಪರಿಸರ ಪ್ರಶಸ್ತಿ ಲಭಿಸಿತು. ರಾಜ್ಯದ ಜೀವ ವೈವಿಧ್ಯ ಸಂರಕ್ಷಣೆ, ನಿರ್ವಹಣೆ ಮತ್ತು ಅಭಿವೃದ್ಧಿ ಕ್ಷೇತ್ರದಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದ ಕಾರ್ಕಳದ ಪ್ರಾಧ್ಯಾಪಕ ಪ್ರಭಾಕರ ಆಚಾರ್, ಬೆಳ್ತಂಗಡಿಯ ನಾಗರಿಕ ಸೇವಾ ಟ್ರಸ್ಟಿನ ಅಧ್ಯಕ್ಷ ಸೋಮನಾಥ ನಾಯಕ್, ಧರ್ಮಸ್ಥಳದ ಮಂಜುನಾಥೇಶ್ವರ ಕಾಲೇಜುಗಳಿಗೆ ಜೀವ ವೈವಿಧ್ಯ ಪ್ರಶಸ್ತಿಯನ್ನು ಘೋಷಿಸಲಾಯಿತು.

2008: ಕಾರ್ಟೋಮ್ ವಿಮಾನ ನಿಲ್ದಾಣದಲ್ಲಿ ಸೂಡಾನಿಗೆ ಸೇರಿದ ವಿಮಾನವೊಂದು ಇಳಿಯುತ್ತಿದ್ದಂತೆ ಬೆಂಕಿಗಾಹುತಿಯಾಗಿ ನೂರಾರು ಪ್ರಯಾಣಿಕರು ಸಾವಿಗೀಡಾದ ಹೃದಯ ವಿದ್ರಾವಕ ಘಟನೆ  ಸಂಭವಿಸಿತು. ವಿಮಾನ ಇಳಿಯುತ್ತಿದ್ದ ಸಂದರ್ಭದಲ್ಲಿ ಧೂಳಿನಿಂದ ಕೂಡಿದ ಬಿರುಗಾಳಿ ಬೀಸುತ್ತಿತ್ತು. ಈ  ವಾತಾವರಣದಲ್ಲಿ ಇಳಿಯುತ್ತಿದ್ದಾಗ ವಿಮಾನದ ಎಂಜಿನ್ನಿಗೆ ಬೆಂಕಿ ತಗುಲಿತು. ಈ ನತದೃಷ್ಟ ವಿಮಾನದಲ್ಲಿ 203 ಪ್ರಯಾಣಿಕರಿದ್ದರು.

2007: ಇಂಗ್ಲೆಂಡಿನ ಶೆಫಿಲ್ಡಿನಲ್ಲಿ ನಡೆದ ಅಂತಾರಾಷ್ಟ್ರೀಯ ಭಾರತೀಯ ಚಿತ್ರ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಜೇಶ ಮೆಹ್ತಾ ನಿರ್ಮಾಣದ `ರಂಗ ದೆ ಬಸಂತಿ' ಉತ್ತಮ ಚಿತ್ರ ಪ್ರಶಸ್ತಿ ಸೇರಿದಂತೆ ಒಟ್ಟು 11 ಪ್ರಶಸ್ತಿಗಳನ್ನು ತನ್ನ ಬಗಲಿಗೆ ಏರಿಸಿಕೊಂಡಿತು. ರಾಣಿ ಮುಖರ್ಜಿ ಅತ್ಯುತ್ತಮ ನಟಿ (ಕಭಿ ಅಲ್ವಿದಾ ನಾ ಕೆಹನಾ), ಹೃತಿಕ್ ರೋಷನ್ ಅತ್ಯುತ್ತಮ ನಟ (ಕೃಷ್), ರಾಜಕುಮಾರ್ ಹೀರಾನಿ ಶ್ರೇಷ್ಠ ನಿರ್ದೇಶಕ ( ಲಗೇ ರಹೋ ಮುನ್ನಾ ಭಾಯಿ) ಪ್ರಶಸ್ತಿ ಗಳಿಸಿದರು.

2007: ಆಪ್ಘಾನಿಸ್ಥಾನದ ಅಧ್ಯಕ್ಷ ಹಮೀದ್ ಕರ್ಜೈ ಅವರನ್ನು ಗುರಿಯಾಗಿಟ್ಟುಕೊಂಡು ತಾಲಿಬಾನ್ ಉಗ್ರಗಾಮಿಗಳು ಕಾಬೂಲಿನಲ್ಲಿ ರಾಕೆಟ್ ದಾಳಿ ನಡೆಸಿದರು. ಆದರೆ ಕರ್ಜೈ ಅವರು ಅಪಾಯದಿಂದ ಪಾರಾದರು.

2007: ಸಂಚಾರ ನಿಯಮ ಉಲ್ಲಂಘಿಸಿ ವಾಹನ ಓಡಿಸಿದ್ದಕ್ಕಾಗಿ ಖ್ಯಾತ ಪಾಪ್ ಗಾಯಕ ಜಾರ್ಜ್ ಮೈಕೆಲ್ ಮತ್ತು ಅಮೆರಿಕದ ರಿಯಾಲಿಟಿ ಶೋ ತಾರೆ ಪ್ಯಾರಿಸ್ ಹಿಲ್ಟನ್ ಸೆರೆವಾಸದ ಶಿಕ್ಷೆಗೆ ಗುರಿಯಾದರು. ಮೈಕೆಲ್ ಗೆ ಲಂಡನ್ನಿನ ಬ್ರೆಂಟ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು 100 ತಾಸು ಸಮಾಜ ಸೇವೆ ಕೈಗೊಳ್ಳುವಂತೆ ವಿಶೇಷ ಶಿಕ್ಷೆ ವಿಧಿಸಿತು. ಎರಡು ವರ್ಷಗಳ ಕಾಲ ವಾಹನ ಓಡಿಸದಂತೆ ಅವರ ಮೇಲೆ ನಿಷೇಧ ವಿಧಿಸಿತು. ಮದ್ಯಪಾನ ಮಾಡಿ ವಾಹನ ಓಡಿಸಿದ ಪ್ರಕರಣದ ಸಂಬಂಧ ಗೃಹ ಬಂಧನದಲ್ಲಿದ್ದ ಪ್ಯಾರಿಸ್ ಹಿಲ್ಟನಳನ್ನು (26) ನ್ಯಾಯಾಲಯದ ಆದೇಶದ ಮೇರೆಗೆ ಲಾಸ್ ಏಂಜೆಲಿಸ್ ನಲ್ಲಿ ಸೆರೆಮನೆಗೆ ಕಳುಹಿಸಲಾಯಿತು.

2007: ಕಕ್ಷೆಗೆ ಏರಿದ ಅತಿ ಹೆಚ್ಚು ಭಾರದ ಗಗನ ನೌಕೆ ಎಂಬ ಹೆಗ್ಗಳಿಕೆಗೆ ಪಾತ್ರವಾದ ಅಟ್ಲಾಂಟಿಸ್ ಗಗನನೌಕೆಯು ಬಾಹ್ಯಾಕಾಶದಲ್ಲಿ ಇರುವ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದೊಂದಿಗೆ ಸಂಪರ್ಕ ಸಾಧಿಸಿತು.

2007: ಉಡುಪಿ ಶಿರೂರು ಮಠದ ಯತಿ ಲಕ್ಷ್ಮೀವರ ತೀರ್ಥ ಶ್ರೀಪಾದರು ಕುಂದಾಪುರದ ಖಾರ್ವಿಕೇರಿ ಹೊಳೆಯಲ್ಲಿ ಸುಮಾರು ಮುಕ್ಕಾಲು ಗಂಟೆ ಕಾಲ ವಿವಿಧ ಭಂಗಿಗಳಲ್ಲಿ ಈಜುವ ಮೂಲಕ ದಾಖಲೆ ನಿರ್ಮಿಸಿದರು. ಗಂಗೊಳ್ಳಿ ಸಮುದ್ರ ಕಿನಾರೆಯಿಂದ ಕುಂದಾಪುರ ಸಂಗಮ್ ಪರಿಸರದ ಖಾರ್ವಿಕೇರಿ ಹೊಳೆಯವರೆಗೆ ಸುಮಾರು 25 ಕಿ.ಮೀ. ದೂರವನ್ನು ಕೈಕಾಲುಗಳಿಗೆ ಸಂಕೋಲೆ ತೊಟ್ಟು ಈಜಿ ಶಹಬ್ಬಾಸ್ ಇಂಡಿಯಾ ಬುಕ್ ಆಫ್ ರೆಕಾರ್ಡಿನಲ್ಲಿ ದಾಖಲಾದ ಖಾರ್ವಿಕೇರಿಯ ಬಾಲಕ ಮಾಸ್ಟರ್ ಹರ್ಷಿತ್ ಜೊತೆ ಸ್ವಾಮೀಜಿ ಈ ಸಾಹಸ ಮಾಡಿದರು.

 2006: ಹಳೆಯ ಪಠ್ಯಪುಸ್ತಕಗಳಲ್ಲಿದ್ದ ಪ್ರಾಚೀನ ಭಾರತದ ಗೋಮಾಂಸ ಭಕ್ಷಣೆ ಹವ್ಯಾಸಗಳಿಗೆ ಸಂಬಂಧಿಸಿದ ಉಲ್ಲೇಖಗಳನ್ನು ಶಿಕ್ಷಣ ಸಂಶೋಧನೆ ಮತ್ತು ತರಬೇತಿಯ ರಾಷ್ಟ್ರೀಯ ಮಂಡಳಿಯು (ಎನ್ಸಿಇಆರ್ಟಿ) ಹೊಸದಾಗಿ ಪ್ರಕಟಿಸಿರುವ ಪಠ್ಯಪುಸ್ತಕಗಳಿಂದ ಕೈಬಿಟ್ಟಿತು. 6 ಮತ್ತು 11ನೇ ತರಗತಿಗಳ ಇತಿಹಾಸ ಪಠ್ಯಗಳಲ್ಲಿ ಈ ಉಲ್ಲೇಖಗಳಿದ್ದವು.

2006: ತಮ್ಮ ಬೇಡಿಕೆ ಈಡೇರಿಸಲಿಲ್ಲ ಎಂಬ ಕಾರಣಕ್ಕಾಗಿ ನೈಸ್ ಕಂಪೆನಿ ವಿರುದ್ಧ ಆಕ್ರೋಶಗೊಂಡ ಗ್ರಾಮಸ್ಥರು ಬೆಂಗಳೂರಿನ ಕನಕಪುರ- ಕೆಂಗೇರಿ ಮಾರ್ಗದ ಹೆಮ್ಮಿಗೆಪುರದ ಬಳಿ ರಸ್ತೆ ಅಗೆದು ಬಿಎಂಐಸಿ ಯೋಜನೆ ಕಾಮಗಾರಿಯನ್ನು ನಿಲ್ಲಿಸಿದರು.

1961: ಕಲಾವಿದ ಡಿ.ಎಸ್. ಚೌಗಲೆ ಜನನ.

1961: ಕಲಾವಿದೆ ಮಂಜುಳಾ ಗುರುರಾಜ್ ಜನನ.

1956: ಭಾರತದ ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆ ಜನ್ಮದಿನ. 1980ರಲ್ಲಿ ಇವರು ಆಲ್ ಇಂಗ್ಲೆಂಡ್ ಚಾಂಪಿಯನ್ ಶಿಪ್ ಗೆದ್ದುಕೊಂಡ ಪ್ರಥಮ ಭಾರತೀಯರೆಂಬ ಹೆಗ್ಗಳಿಕೆಗೆ ಪಾತ್ರರಾದರು.

1955: ಕಲಾವಿದ ಫಕೀರೇಶ ಕಣವಿ ಜನನ.

1948: ಸಾಹಿತಿ ದೇವನೂರು ಮಹಾದೇವ ಜನನ.

1944: ನಾಟ್ಸಿಗಳು ಫ್ರಾನ್ಸಿನ ಒರಾಡೌರ್-ಸುರ್-ಗ್ಲೇನ್ ಎಂಬ ಗ್ರಾಮವನ್ನು ಧ್ವಂಸ ಮಾಡಿದರು. ಲಿಮೋಜಿಸ್ ಗೆ ಸಮೀಪದ ಈ ಗ್ರಾಮದ ಎಲ್ಲ 652 ಜನರನ್ನು ಕೊಠಡಿಯೊಂದರ ಒಳಗೆ ಕೂಡಿಹಾಕಿ ಬೆಂಕಿ ಹಚ್ಚಲಾಯಿತು. ಬದುಕಿ ಉಳಿದವರನ್ನು ಮೆಷಿನ್ ಗನ್ನಿನಿಂದ ಗುಂಡು ಹಾರಿಸಿ ಕೊಲ್ಲಲಾಯಿತು..

1942: ತಮ್ಮ ನಾಯಕ ರಿನ್ಹಾರ್ಡ್ ಹೀಡ್ರಿಚ್ ಹತ್ಯೆಯ ಸೇಡು ತೀರಿಸಲು ನಾಟ್ಸಿಗಳು ಜೆಕಾಸ್ಲಾವಕಿಯಾದ ಲಿಡೀಸ್ ಗ್ರಾಮವನ್ನು ಧ್ವಂಸ ಮಾಡಿದರು. ಜನರ ಕಗ್ಗೊಲೆಗೈದು ನಂತರ ಗ್ರಾಮಕ್ಕೆ ಬೆಂಕಿ ಹಚ್ಚಿ ಅಳಿದು ಉಳಿದುದರ ನಾಶಕ್ಕಾಗಿ ಡೈನಮೈಟ್ ಇಡಲಾಯಿತು. 1947ರಲ್ಲಿ ಇದರ ಸಮೀಪ ಹೊಸ ಗ್ರಾಮ ನಿರ್ಮಿಸಿ ಮೂಲ ಗ್ರಾಮದ ನೆನಪಿಗಾಗಿ ಒಂದು ಮ್ಯೂಸಿಯಂ, ಸ್ಮಾರಕ ಮತ್ತು ಗುಲಾಬಿ ತೋಟವನ್ನು ನಿರ್ಮಿಸಲಾಯಿತು.

1938: ಭಾರತೀಯ ಕೈಗಾರಿಕೋದ್ಯಮಿ ರಾಹುಲ್ ಬಜಾಜ್ ಜನ್ಮದಿನ.

1937: ಕವಿ, ನಾಟಕಕಾರ, ವಾಗ್ಮಿ `ಜೀವಿ' ಎಂದೇ ಖ್ಯಾತರಾಗಿದ್ದ ಗುರುನಾಥ ವಿಠ್ಠಲ ರಾವ್ ಕುಲಕರ್ಣಿ ಅವರು ವಿಠ್ಠಲರಾವ್ ರಾಮಚಂದ್ರರಾವ್ ಕುಲಕರ್ಣಿ- ರುಕ್ಮಿಣಿ ಬಾಯಿ ದಂಪತಿಯ ಪುತ್ರನಾಗಿ ವಿಜಾಪುರದ ಡೊಮ್ನಾಳದಲ್ಲಿ ಜನಿಸಿದರು.

1937: ಸಾಹಿತಿ ವೇಣುಗೋಪಾಲ ಸೊರಬ ಜನನ.

1922: ಗಾಯಕ, ಸಂಗೀತಜ್ಞ, ವಾಗ್ಗೇಯಕಾರ ಎಂ.ಆರ್. ಶಂಕರಮೂರ್ತಿ ಅವರು ರಾಮಕೃಷ್ಣಯ್ಯ- ನಂಜಮ್ಮ ದಂಪತಿಯ ಮಗನಾಗಿ ಹಾಸನ ಜಿಲ್ಲೆ ಮುದಲಾಪುರದಲ್ಲಿ ಜನಿಸಿದರು.

1920: ಸಾಹಿತಿ ಎನ್. ಪ್ರಹ್ಲಾದರಾವ್ ಜನನ.

1832: ಸರ್ ಎಡ್ವಿನ್ ಅರ್ನಾಲ್ಡ್ ಜನ್ಮದಿನ. ಪೂನಾದ (ಈಗಿನ ಪುಣೆ) ಬ್ರಿಟಿಷ್ ಸರ್ಕಾರಿ ಕಾಲೇಜಿನ ಪ್ರಿನ್ಸಿಪಾಲರಾಗಿದ್ದ ಇವರು  ಕವಿ ಹಾಗೂ ವಿದ್ವಾಂಸರು. ಗೌತಮ ಬುದ್ಧನ ಬದುಕು ಹಾಗೂ ಬೋಧನೆಗಳನ್ನು ವಿವರಿಸುವ `ದಿ ಲೈಟ್ ಆಫ್ ಏಷ್ಯ' ಕೃತಿ ಇವರ ಪ್ರಮುಖ ಗ್ರಂಥ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Post a Comment