2019: ಮುಂಬೈ : ಮಹಾರಾಷ್ಟ್ರದ ೧೮ನೇ ಮುಖ್ಯಮಂತ್ರಿಯಾಗಿ ಗುರುವಾರ ಪ್ರಮಾಣವಚನ ಸ್ವೀಕರಿಸಿದ್ದ ಉದ್ಧವ್ ಠಾಕ್ರೆ ಶನಿವಾರ ಮಹಾರಾಷ್ಟ್ರ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ನಡೆದ ವಿಶ್ವಾಸಮತ ಯಾಚನೆಯಲ್ಲಿ ಬಹುಮತ ಸಾಬೀತುಪಡಿಸಿದ್ದು ,
ಈ ಸಂದರ್ಭದಲ್ಲಿ ಬಿಜೆಪಿ
ಸದಸ್ಯರು ಕಲಾಪ ಬಹಿಷ್ಕರಿಸಿ ಹೊರನಡೆದ ಘಟನೆ ನಡೆಯಿತು .
ನಂತರ ಸುಪ್ರೀಂಕೋರ್ಟ್ ಆದೇಶದಂತೆ ತಲೆ ಎಣಿಕೆ ಮೂಲಕ ವಿಶ್ವಾಸಮತ ಯಾಚನೆ ಪ್ರಕ್ರಿಯೆಯನ್ನು ಹಂಗಾಮಿ ಸ್ಪೀಕರ್ ದಿಲೀಪ್ ಪಾಟೀಲ್ ನಡೆಸಿದರು .
ವಿಶ್ವಾಸಮತದ ಪರ ಇರುವ ಶಾಸಕರ
ತಲೆ ಎಣಿಕೆ ಮೊದಲಿಗೆ ಮಾಡಲಾಯಿತು .
ವಿಶ್ವಾಸಮತ ಯಾಚನೆಯಲ್ಲಿ ಶಿವಸೇನಾ ,
ಎನ್ ಸಿಪಿ ,
ಕಾಂಗ್ರೆಸ್ ಮೈತ್ರಿಕೂಟದ ಸರ್ಕಾರಕ್ಕೆ ೧೬೯ ಶಾಸಕರ ಮತ ಸಿಕ್ಕಿದೆ .
೨೮೮
ಶಾಸಕರ ಬಲದ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಹುಮತಕ್ಕೆ ೧೪೫ ಶಾಸಕರ ಬೆಂಬಲದ ಅಗತ್ಯವಿದೆ .
ಶಿವಸೇನಾ ,
ಎನ್ ಸಿಪಿ ಹಾಗೂ ಕಾಂಗ್ರೆಸ್ ಸೇರಿ ಮೂರು ಪಕ್ಷಗಳ ಶಾಸಕರ ಸಂಖ್ಯೆ ೧೫೪ .
ವಿಶ್ವಾಸಮತ ಯಾಚನೆ ವೇಳೆ ಬಹುಜನ್ ವಿಕಾಸ್ ಅಘಾಡಿ ಮತ್ತು ಪಕ್ಷೇತರರು ಕೆಲವು ಶಾಸಕರು ಉದ್ಧವ್ ಠಾಕ್ರೆಗೆ ಬೆಂಬಲ ನೀಡಿದ್ದಾರೆ .
ವಿಶ್ವಾಸಮತ ಯಾಚನೆ ಪ್ರಕ್ರಿಯೆಗೂ ಮೊದಲು ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ನೇತೃತ್ವದಲ್ಲಿ ೧೦೫ ಬಿಜೆಪಿ ಶಾಸಕರು ಕಲಾಪದಿಂದ ಹೊರನಡೆದಿದ್ದರು .
ವಿಶ್ವಾಸಮತ ಯಾಚನೆ ಪ್ರಕ್ರಿಯೆಗೂ ಮೊದಲು ಹಂಗಾಮಿ ಸ್ಪೀಕರ್ ಕಾಳಿದಾಸ್ ಅವರನ್ನು ಬದಲಿಸಿ ಕಾಂಗ್ರೆಸ್ ನ ದಿಲೀಪ್ ಪಾಟೀಲ್
ಅವರನ್ನು ನೇಮಕ ಮಾಡಿರುವುದಕ್ಕೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು .
ಈ ಸಂದರ್ಭದಲ್ಲಿ ಪ್ರೋ
ಟೆಮ್ ಸ್ಪೀಕರ್ ದಿಲೀಪ್ ಪಾಟೀಲ್ ,
ಗದ್ದಲ ನಡೆಸದಂತೆ ಮನವಿ ಮಾಡಿಕೊಂಡರು . (
ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)
2019: ಪುಣೆ : ಭಯೋತ್ಪಾದನೆ ಮೂಲಕ ಪಾಕಿಸ್ತಾನವು ಭಾರತದ ವಿರುದ್ಧ ಛಾಯಾಸಮರ ಹೂಡಿದ್ದು ,
ಅದರಲ್ಲಿ ಅದು ಸೋಲುವುದು ಖಚಿತ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶನಿವಾರ ಇಲ್ಲಿ ಹೇಳಿದರು .
ಇಲ್ಲಿನ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯಲ್ಲಿ ೧೩೭ ನೇ ತಂಡದ ನಿರ್ಗಮನ
ಪೆರೇಡ್ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು .
ಇದೇ ವೇಳೆ ಭಯೋತ್ಪಾದಕರನ್ನು ಬಗ್ಗು ಬಡಿಯುತ್ತಿರುವ ಸಶಸ್ತ್ರ ಪಡೆಗಳನ್ನು ಶ್ಲಾಘಿಸಿದ ಸಚಿವರು ’
ಇವರು ದೇಶದ ಶಕ್ತಿ .
ಪಾಕಿಸ್ತಾನ ಈಗ ಭಯೋತ್ಪಾದನೆಯಿಂದಾಗಿ ವಿಶ್ವ ಮಟ್ಟದಲ್ಲಿ
ಏಕಾಂಗಿಯಾಗಿದೆ ’ ಎಂದು
ಹೇಳಿದರು .
ವಿದೇಶಿ ವಿದ್ಯಾರ್ಥಿಗಳೂ ಸೇರಿದಂತೆ ೨೮೪ ಮಂದಿ ವಿದ್ಯಾರ್ಥಿಗಳು ಈ ಬಾರಿ ಪದವಿಗಳನ್ನು
ಸ್ವೀಕರಿಸಿದ್ದಾರೆ .
ಇದರೊಂದಿಗೆ ಸುಖೋಯ್ ,
ಸಾರಂಗ್ ಹೆಲಿಕಾಪ್ಟರುಗಳನ್ನು ಚಾಲನೆ ಮಾಡಿ ವಿವಿಧ ಕಸರತ್ತುಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು . (
ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ )
2019: ನವದೆಹಲಿ : ದೇಶಾದ್ಯಂತ ಉದ್ಯೋಗ ಕೊರತೆ ಕಾಡಿರುವಂತೆಯೇ ,
ಕೇಂದ್ರ ಸರ್ಕಾರದ ಇಲಾಖೆಗಳಲ್ಲಿ
ಸುಮಾರು ೭ ಲಕ್ಷ ಹುದ್ದೆಗಳು
ಖಾಲಿ ಇರುವ ಸಂಗತಿ ಬಯಲಾಯಿತು. ೨೦೧೪ರ
ಬಳಿಕ ಇಷ್ಟೊಂದು ಹುದ್ದೆಗಳು ೨೦೧೮ರವರೆಗೆ ಖಾಲಿಯಿದ್ದವು ಎಂದು ಕೇಂದ್ರ ಸಿಬಂದಿ ಸಚಿವಾಲಯ ಇತ್ತೀಚೆಗೆ ಲೋಕಸಭೆಗೆ ತಿಳಿಸಿತು. ಸಿಬಂದಿ ಸಚಿವಾಲಯ ತಿಳಿಸಿದಂತೆ ,
೨೦೧೮
ಮಾ .
೧ರವರೆಗೆ ೩೧ .
೧೮ ಲಕ್ಷ
ಸಿಬಂದಿಯಷ್ಟೇ ಕೇಂದ್ರದ ಅಧೀನ ಇಲಾಖೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ .
ಇಲ್ಲಿನ ಸಿಬಂದಿ ಸಾಮರ್ಥ್ಯ ಒಟ್ಟು ೩೮ ಲಕ್ಷದಷ್ಟು ಇದೆ .
೨೦೧೪ರ ಬಳಿಕ ಸುಮಾರು ೧ .
೫೭ ಲಕ್ಷ
ಹುದ್ದೆ ನೇಮಕಾತಿಗೆ ಸರ್ಕಾರ ಮುಂದಾಗಿದ್ದರೂ ,
೨೦೧೮ರ ವೇಳೆಗೆ ೩೨ .
೨೩ ಲಕ್ಷದಷ್ಟು
ಸಿಬಂದಿ ಮಾತ್ರ ಹುದ್ದೆಯಲ್ಲಿದ್ದಾರೆ ಎಂದು ಮಾಹಿತಿ ತಿಳಿಸಿತು. ರೈಲ್ವೇ ಇಲಾಖೆ ಅತಿ ದೊಡ್ಡ ಸಂಖ್ಯೆಯಲ್ಲಿ ಸಿಬಂದಿಗಳನ್ನು ಹೊಂದಿದ್ದು ,
ಇದರಲ್ಲಿ ೨ .
೫ ಲಕ್ಷದಷ್ಟು
ಹುದ್ದೆಗಳು ೨೦೧೮ ಮಾ .
೧ರ ವೇಳೆಗೆ
ಖಾಲಿ ಇದ್ದವು .
ರಕ್ಷಣಾ ಖಾತೆ (
ಸಿವಿಲ್ )
ನಲ್ಲಿ ೧ .
೯ ಲಕ್ಷದಷ್ಟು
ಹುದ್ದೆಗಳು ಖಾಲಿ ಇವೆ ಎಂದು ಹೇಳಲಾಯಿತು. ಇದೇ ವೇಳೆ ೨೦೧೭ -
೧೮ರ ಅವಧಿಯಲ್ಲಿ ಕೇಂದ್ರ ಸರ್ಕಾರ ಸಿಬ್ಬಂದಿಗೆ ೧ .
೯೦ ಲಕ್ಷ
ಕೋಟಿ ರೂ .
ವೇತನ ,
ಭತ್ಯೆಗಳನ್ನು ಪಾವತಿಸಿದೆ ಎಂದು ಇಲಾಖೆ ಹೇಳಿದೆ . (
ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)
2019: ರಾಂಚಿ :
ಜಾರ್ಖಂಡ್ ವಿಧಾನಸಭೆಯ ೧೩ ವಿಧಾನಸಭಾ ಕ್ಷೇತ್ರಗಳಿಗಾಗಿ
ಶನಿವಾರ ಮೊದಲ ಹಂತದ ಮತದಾನ ನಡೆದಿದ್ದು ,
ಶೇಕಡಾ ೬೨ .
೮೭ರಷ್ಟು ಮತದಾನ
ನಡೆಯಿತು. ಚುನಾವಣೆ ಬಹಿಷ್ಕರಿಸುವಂತೆ
ಮಾವೋವಾದಿ ನಕ್ಸಲೀಯರು ನೀಡಿದ್ದ ಕರೆಗೆ ಸೊಪ್ಪು ಹಾಕದ ಮತದಾರರು ಮತಗಟ್ಟೆಗಳಲ್ಲಿ ಭಾರೀ ಸಂಖ್ಯೆಯಲ್ಲಿ ಸಾಲುಗಟ್ಟಿ ನಿಂತು ಮತ ಚಲಾಯಿಸಿದರು ಎಂದು
ವರದಿಗಳು ತಿಳಿಸಿದವು. ಚುನಾವಣಾ ಆಯೋಗದ ಪ್ರಕಾರ ಶೇಕಡಾ ೬೨ .
೮೭ರಷ್ಟು ಮತದಾನವಾಗಿದೆ .
ಬಿಷ್ಣುಪುರದಲ್ಲಿ ಅತ್ಯಂತ ಹೆಚ್ಚು -
ಶೇಕಡಾ ೬೭ .
೦೪ರಷ್ಟು ಮತದಾನವಾಗಿದ್ದು ,
ಮನಿಕಾ ಸ್ಥಾನಕ್ಕೆ ಅತ್ಯಂತ ಕಡಿಮೆ -
ಶೇಕಡಾ ೫೭ .
೬೧ರಷ್ಟು ಮತದಾನವಾಗಿದೆ .
ಡಾಲ್ಟನ್ ಗಂಜ್ ವಿಧಾನಸಭಾ ಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷ (
ಬಿಜೆಪಿ )
ಮತ್ತು ಕಾಂಗ್ರೆಸ್ ಕಾರ್
ಯಕರ್ತರ ಮಧ್ಯೆ ಘರ್ಷಣೆ ನಡೆದ ಬಗ್ಗೆ ವರದಿಯಾಯಿತು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ )
2019: ನವದೆಹಲಿ :
ಮಲಯಾಳದ ಖ್ಯಾತ ಕವಿ ಅಕ್ಕಿಥಮ್ ಅವರು ಪ್ರಸಕ್ತ ವರ್ಷದ ಜ್ಞಾನಪೀಠ ಪ್ರಶಸ್ತಿಗೆ ಭಾಜನರಾದರು. 2019 ನವೆಂಬರ್ 29ರ ಶುಕ್ರ
ವಾರ ಈ ಕುರಿತು ಘೋಷಣೆ
ಹೊರಡಿಸಿದ ಜ್ಞಾನಪೀಠ ಆಯ್ಕೆ ಸಮಿತಿ , “
೫೫ನೇ ಜ್ಞಾನಪೀಠ ಪ್ರಶಸ್ತಿಗೆ ಮಲಯಾಳದ ಪ್ರಸಿದ್ಧ ಕವಿ ಅಕ್ಕಿಥಮ್ ಅಚ್ಯುತನ್ ನಂಬೂದಿರಿ ಆಯ್ಕೆ ಯಾಗಿದ್ದಾರೆ ’ ಎಂದು
ತಿಳಿಸಿತು. ಕೇವಲ
ಕವಿತೆಗಳು ಮಾತ್ರವಲ್ಲದೇ ನಾಟಕ ,
ಸ್ಮರಣ ಗ್ರಂಥಗಳು ,
ವಿಮರ್ಶಾ ಪ್ರಬಂಧಗಳು ,
ಮಕ್ಕಳ ಸಾಹಿತ್ಯ ,
ಸಣ್ಣಕಥೆಗಳು ,
ಭಾಷಾಂತರ ಕೃತಿಗಳನ್ನು ಕೂಡ ಇವರು ರಚಿಸಿದ್ದಾರೆ .
೧೯೨೬ರಲ್ಲಿ ಜನಿಸಿದ ಅಕ್ಕಿಥಮ್ ಅವರು ಈವರೆಗೆ ೫೫ ಕೃತಿಗಳನ್ನು ರಚಿಸಿದ್ದು ,
ಈ ಪೈಕಿ ೪೫ ಕವನ ಸಂಕಲನಗಳಾಗಿವೆ .
ಖಂಡ ಕಾವ್ಯಗಳು ,
ಕಥಾ ಕಾವ್ಯಗಳು ,
ಚರಿತ ಕಾವ್ಯಗಳು ಹಾಗೂ ಕವನಗಳು ಇವುಗಳಲ್ಲಿ ಸೇರಿವೆ .
ಪದ್ಮಶ್ರೀ ಪುರಸ್ಕೃತರಾಗಿರುವ ಅವರು ,
ಸಾಹಿತ್ಯ ಅಕಾಡೆಮಿ ಪ್ರಶಸ್ತಿ (
೧೯೭೩ ),
ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (
೧೯೭೨ ಮತ್ತು ೧೯೮೮ ),
ಮಾತೃಭೂಮಿ ಪ್ರಶಸ್ತಿ ,
ವಯಲಾರ್ ಪ್ರಶಸ್ತಿ ,
ಕಬೀರ್ ಸಮ್ಮಾನ್ ಸೇರಿದಂತೆ ಅನೇಕ ಸಾಹಿತ್ಯ ಸಂಬಂಧಿ ಗೌರವಗಳಿಗೂ ಪಾತ್ರ ರಾಗಿದ್ದಾರೆ .
ಇವರ ಕೃತಿಗಳು ಭಾರತದ ಇತರೆ ಭಾಷೆಗಳು ಹಾಗೂ ವಿದೇಶಿ ಭಾಷೆಗಳಿಗೂ ತರ್ಜುಮೆಗೊಂಡಿವೆ . (
ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)
2019: ಪತ್ತನಂತಿಟ್ಟ (ಕೇರಳ ): ಕೇರಳದ ಶಬರಿಮಲೈ ಅಯ್ಯಪ್ಪಸ್ವಾಮಿ ದೇವಾಲಯಕ್ಕೆ ಸಹಸ್ರಾರು ಭಕ್ತರ ಚಾರಣದೊಂದಿಗೆ ೪೧ ದಿನಗಳ ವಾರ್ಷಿಕ
ತೀರ್ಥಯಾತ್ರೆ 2019
ನವೆಂಬರ್ 16ರ ಶನಿವಾರ ಆರಂಭಗೊಂಡಿದ್ದು ,
೧೦ ಮಂದಿ ಮಹಿಳೆಯರನ್ನು
ವಾಪಸ್ ಕಳುಹಿಸಿದ ಬಳಿಕ ಸಂಜೆ ’
ಮಂಡಲ
ಮಕರವಿಳಕ್ಕು ಪೂಜೆ ’ ಗಾಗಿ ದೇವಾಲಯದ ಮಹಾದ್ವಾರವನ್ನು ತೆರೆಯಲಾಯಿತು .
ಬೆಟ್ಟದ ಮೇಲಿನ ದೇವಾಲಯದ ಸುತ್ತಮುತ್ತಣ ಪ್ರದೇಶದಲ್ಲಿ ರಾಜ್ಯ ಸರ್ಕಾರವು ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಿದೆ .
ಚಾರಣಕ್ಕೆ ಬಂದ ಹಿರಿಯ ಮಹಿಳೆಯರಿಗೆ ವಯಸ್ಸಿನ ದಾಖಲೆ ಒದಗಿಸುವಂತೆ ದೇವಾಲಯದಿಂದ ೫ ಕಿಮೀ ದೂರದಲ್ಲಿರುವ
ಪಂಬಾ ತಳ ಶಿಬಿರದಲ್ಲೇ ಪೊಲೀಸ್
ಸೂಚನೆ ನೀಡಿದರು .
ಸುಪ್ರೀಂಕೋರ್ಟಿನ ಇತ್ತೀಚಿನ ತೀರ್ಪು ಹೊರಬಿದ್ದ ಎರಡು ದಿನಗಳ ಬಳಿಕ ,
ಕೆಲವು ಮಹಿಳಾ ಕಾರ್ಯಕರ್ತರು ಪೂಜೆ ಸಲ್ಲಿಸಲು ಬೆಟ್ಟದ ಮೇಲಿನ ದೇಗುಲವನ್ನು ಪ್ರವೇಶಿಸುವುದಾಗಿ ಬೆದರಿಕೆ ಹಾಕಿರುವುದರ ಮಧ್ಯೆಯೇ ಶಬರಿಮಲೈ ದೇವಾಲಯದ ಮುಖ್ಯ ಅರ್ಚಕ ಅಥವಾ ತಂತ್ರಿಗಳು ಶನಿವಾರ ಸಂಜೆ ೫ ಗಂಟೆಗೆ ಮೂರು
ತಿಂಗಳ ತೀರ್ಥಯಾತ್ರಾ ಋತುವಿಗಾಗಿ ಅಯ್ಯಪ್ಪ ಸ್ವಾಮಿ ದೇಗುಲದ ಮಹಾದ್ವಾರವನ್ನು ತೆರೆದರು .
ಋತುಮತಿ ವಯೋಮಾನದ ಕನಿಷ್ಠ ೧೦ ಮಂದಿ ಮಹಿಳೆಯರನ್ನು
ಪೊಲೀಸರು ವಾಪಸ್ ಕಳುಹಿಸಿದರು .
ತಮ್ಮನ್ನು ದೇವಾಲಯದ ಮೆಟ್ಟಿಲು ಏರಲು ಬಿಡುವಂತೆ ಆ ಮಹಿಳೆಯರು ಆಗ್ರಹಿಸಿದಾಗ ,
೧೦ರಿಂದ ೫೦ ವರ್ಷ ನಡುವಣ
ವಯೋಮಾನದ ಮಹಿಳೆಯರನ್ನು ಬಿಡದಂತೆ ತಮಗೆ ಕಟ್ಟುನಿಟ್ಟಿನ ಆದೇಶವಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದರು .
ಮಹಿಳಾ ಭಕ್ತರಿಗೆ ತಾನು ರಕ್ಷಣೆಗೆ ಒದಗಿಸಲಾಗದು ಎಂದು ರಾಜ್ಯ ಸರ್ಕಾರವು ಈಗಾಗಲೇ ಪ್ರಕಟಿಸಿದೆ .
ಆದರೆ ಹಲವಾರು ಮಹಿಳಾ ಕಾರ್
ಯಕರ್ತರು ದೇವಾಲಯ ಪ್ರವೇಶಿಸುವ ತಮ್ಮ ಯೋಜನೆಯನ್ನು ಪ್ರಕಟಿಸಿದ್ದಾರೆ .
ಇದಕ್ಕೆ ಪ್ರತಿಯಾಗಿ ಉನ್ನತ ಹಿಂದೂ ಸಂಘಟನೆ ಶಬರಿಮಲೈ ಕರ್ಮ ಸಮಿತಿಯು ದೇವಾಯ ಪ್ರವೇಶಿಸುವ ಮಹಿಳೆಯರನ್ನು ತಾನು ತಡೆಯುವುದಾಗಿ ಹೇಳಿದೆ .
ಮೊದಲ ಒಂದು ಗಂಟೆಯ ಅವಧಿಯಲ್ಲಿ ೧೦ ,
೦೦೦ಕ್ಕೂ ಹೆಚ್ಚು
ಮಂದಿ ಭಕ್ತರು ಪೊಲೀಸ್ ಚೆಕ್ ಪೋಸ್ಟ್ ಮೂಲಕ ಹಾದು ಹೋಗಿದ್ದಾರೆ ಎಂದು ಪಂಬಾದಲ್ಲಿನ ಹಿರಿಯ ಪೊಲೀಸ್ ಅಧಿಕಾರಿ ನುಡಿದರು . (
ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ )
2019: ಮುಂಬೈ / ನವದೆಹಲಿ :
ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಜೊತೆಗೆ ನಿಗದಿಯಾಗಿದ್ದ ’
ಮಹಾಮೈತ್ರಿ ’
(
ಶಿವಸೇನೆ -
ಎನ್
ಸಿಪಿ -
ಕಾಂಗ್ರೆಸ್ )
ನಾಯಕರ ಭೇಟಿ 2019
ನವೆಂಬರ್ 16ರ ಶನಿವಾರ ದಿಢೀರನೆ ರದ್ದಾಯಿತು .
ಎಲ್ಲ ನಾಯಕರು ತಮ್ಮ ಕ್ಷೇತ್ರಗಳಲ್ಲಿ ಇರುವುದರಿಂದ ರಾಜ್ಯಪಾಲರ ಜೊತೆಗಿನ ನಿಗದಿತ ಭೇಟಿ ರದ್ದಾಗಿದೆ ಎಂದು ಉದ್ಧವ್ ಠಾಕ್ರೆ ನೇತೃತ್ವದ ಪಕ್ಷ ಪ್ರಕಟಿಸಿತು .
ನೂತನ ಮೈತ್ರಿಕೂಟದ ನಾಯಕರ ಜಂಟಿ ನಿಯೋಗವು ರಾಜ್ಯಪಾಲ ಕೋಶಿಯಾರಿ ಅವರನ್ನು ಸಂಜೆ ೪ .
೩೦ ಗಂಟೆಗೆ
ಭೇಟಿ ಮಾಡಬೇಕಾಗಿತ್ತು .
ಈ ಮಧ್ಯೆ ,
ದೆಹಲಿಯಲ್ಲಿ
ಸಂಸತ್ತಿನ ಉಭಯ ಸದನಗಳಲ್ಲಿ ಶಿವಸೇನಾ ಸಂಸತ್ ಸದಸ್ಯರ ಆಸನ ವ್ಯವಸ್ಥೆ ಬದಲಾಗಿದೆ .
ಅವರು ಈಗ ವಿರೋಧ ಪಕ್ಷಗಳ
ಸಾಲಿನಲ್ಲಿ ಕೂರುವರು ಎಂದು ಸಂಸತ್ ಮೂಲಗಳು ತಿಳಿಸಿದವು. ಶಿವಸೇನಾ ಮೂಲಗಳು ಮತ್ತು ಕಾಂಗ್ರೆಸ್ ವಕ್ತಾರರೊಬ್ಬರ ಪ್ರಕಾರ ಎನ್
ಸಿಪಿ ,
ಶಿವಸೇನೆ ಮತ್ತು ಕಾಂಗ್ರೆಸ್ ಪಕ್ಷಗಳ ಬಹುತೇಕ ನಾಯಕರು ಲಭ್ಯರಿಲ್ಲವಾದ ಕಾರಣ ರಾಜ್ಯಪಾಲರ ಜೊತೆಗಿನ ನಿಗದಿತ ಭೇಟಿಯನ್ನು ರದ್ದು ಪಡಿಸಲಾಯಿತು .
ರಾಜ್ಯಪಾಲ ಕೋಶಿಯಾರಿ ಜೊತೆಗಿನ ಶಿವಸೇನಾ -
ಎನ್
ಸಿಪಿ -
ಕಾಂಗ್ರೆಸ್ ನಾಯಕರ ಭೇಟಿ ಮುಂದೂಡಿಕೆಯಾಗಿದ್ದು ,
ಮುಂದಿನ ಭೇಟಿಗೆ ರಾಜ್ಯಪಾಲರಿಂದ ಇನ್ನೂ ಸಮಯ ಲಭಿಸಿಲ್ಲ ಎಂದು ಮೂಲಗಳು ಹೇಳಿದವು. ತಾವು ರಾಜ್ಯಪಾಲರನ್ನು ಭೇಟಿ ಮಾಡುತ್ತಿರುವುದು ರಾಜ್ಯದ ಗ್ರಾಮೀಣ ಸಂಕಷ್ಟಕ್ಕೆ ಸಂಬಂಧಿಸಿದಂತೆ ಚರ್ಚಿಸಲು ಹೊರತು ಸರ್ಕಾರ ರಚನೆಯ ಹಕ್ಕು ಮಂಡನೆಗಾಗಿ ಅಲ್ಲ ಎಂದು ಈ ಪಕ್ಷಗಳು ಪ್ರತಿಪಾದಿಸಿದ್ದವು .
‘
ಮಳೆಯಿಂದ ತೊಂದರೆಗೆ ಒಳಗಾದ ರೈತರಿಗೆ ತುರ್ತು ನೆರವು ನೀಡಿಕೆ ಸಂಬಂಧವಾಗಿ ಚರ್ಚಿಸಲು ರಾಜ್ಯಪಾಲ ಕೋಶಿಯಾರಿ ಅವರನ್ನು ತಾವು ಭೇಟಿ ಮಾಡುತ್ತಿದ್ದೇವೆ ಹೊರತು ಸರ್ಕಾರ ರಚನೆಯ ವಿಷಯ ಮಾತನಾಡಲು ಅಲ್ಲ ’ ಎಂದು ಮೈತ್ರಿಕೂಟದ ಮೂಲಗಳು ಇದಕ್ಕೆ ಮುನ್ನ ಹೇಳಿದ್ದವು .
ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಅವರು ಶುಕ್ರವಾರ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರನ್ನು ಭೇಟಿ ಮಾಡಿ ರೈತರ ವಿಷಯಗಳ ಬಗ್ಗೆ ಚರ್ಚಿಸಿದ್ದರು . (
ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ )
2019: ಪಣಜಿ : ಭಾರತೀಯ ನೌಕಾಪಡೆಯ ಮಿಗ್ 29 ಕೆ
ವಿಮಾನ 2019 ನವೆಂಬರ್ 16ರ ಶನಿವಾರ ಗಗನಕ್ಕೆ ಏರಿದ ಕೆಲವೇ ಕ್ಷಣಗಳಲ್ಲಿ
ಗೋವಾದ ಡಾಬೋಲಿಮ್ನಲ್ಲಿ ಅಪಘಾತಕ್ಕೀಡಾಗಿದ್ದು , ಅದೃಷ್ಟವಶಾತ್
ಇಬ್ಬರು ತರಬೇತಿ
ಪಡೆಯುತ್ತಿದ್ದ ಪೈಲಟ್ ಗಳು ಪ್ರಾಣಾಪಾಯದಿಂದ ಪಾರಾದರು .
ತರಬೇತಿಗಾಗಿ ಬಳಸುವ ಮಿಗ್ 29 ಕೆ
ವಿಮಾನದಲ್ಲಿದ್ದ ಪೈಲಟ್ ಗಳಾದ ಕ್ಯಾಪ್ಟನ್ ಎಂ . ಶಿಯೋಖಂದ್ ಮತ್ತು ಲೆಫ್ಟಿನೆಂಟ್ ಕಮಾಂಡರ್ ದೀಪಕ್ ಯಾದವ್ ಪವಾಡಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ನೌಕದಳ
ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿತು .
ತರಬೇತಿಯ ಮಿಗ್ 29 ಕೆ
ಟೇಕ್ ಗಗನಕ್ಕೇರಿದ ಹೊತ್ತಿನಲ್ಲಿಯೇ ಹಕ್ಕಿಗಳ ಹಿಂಡು ಬಂದು ಬಡಿದ ಪರಿಣಾಮ ಬಲಭಾಗದ ಎಂಜಿನ್ನಿನಲ್ಲಿ
ಬೆಂಕಿ ಹೊತ್ತಿಕೊಂಡಿತ್ತು . ನಂತರ
ಎಡಭಾಗದ ಎಂಜಿನ್ ಸ್ಥಗಿತವಾಗಿರುವುದಾಗಿ ವರದಿ ವಿವರಿಸಿತು .
ಗೋವಾದ ನೌಕಾನೆಲೆ ಡಾಬೋಲಿಮ್ ನಲ್ಲಿರುವ ಐಎನ್ ಎಸ್ ಹನ್ಸ್ ನಿಂದ ಮಿಗ್ 29 ಕೆ
ಗಗನಕ್ಕೆ ಏರಿದಾಗ ಹಕ್ಕಿಗಳ ಹಿಂಡು ಬಡಿದಿತ್ತು . ಈ
ಸಂದರ್ಭದಲ್ಲಿ ಎಂಜಿನ್ನಿಗೆ
ಬೆಂಕಿ ಹೊತ್ತಿಕೊಂಡಿರುವುದನ್ನು ಗಮನಿಸಿದ ಪೈಲಟ್ಗಳು
ಇಬ್ಬರು ಧೈರ್ಯಗೆಡದೆ ಪರಿಸ್ಥಿತಿಯನ್ನು ನಿಭಾಯಿಸಿರುವುದಾಗಿ ನೌಕಾದಳದ ಪ್ರಕಟಣೆ ವಿವರಿಸಿತು .
ಬೆಂಕಿ ಹೊತ್ತಿಕೊಂಡ ಮಿಗ್ 29 ಕೆ
ಜನನಿಭಿಡ ಪ್ರದೇಶದಿಂದ ದೂರದಲ್ಲಿ ತೆರೆದ ಜಾಗದಲ್ಲಿ ಅಪಘಾತಕ್ಕೀಡಾಗಿತ್ತು ಎಂದು ವರದಿ ತಿಳಿಸಿತು .
(
ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ )
2019: ನವದೆಹಲಿ :
ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಅಸೋಸಿಯೇಶನ್ ಅಧ್ಯಕ್ಷ ಸ್ಥಾನಕ್ಕೆ ರಜತ್ ಶರ್ಮ 2019 ನವೆಂಬರ್ 16ರ ಶನಿವಾರ ರಾಜೀನಾಮೆ ನೀಡಿದರು .
ರಾಜೀನಾಮೆಯ ನಂತರ ಮಾತನಾಡಿದ ರಜತ್ ಶರ್ಮ , ಅಧ್ಯಕ್ಷನಾಗಿದ್ದ
ವೇಳೆ ನನ್ನ ಮೇಲೆ ನಂಬಿಕೆ ಇಟ್ಟ ಎಲ್ಲರಿಗೂ ನಾನು ಆಭಾರಿಯಾಗಿದ್ದೇನೆ . ಸಿಕ್ಕ
ಅವಕಾಶದಲ್ಲಿ ಸಂಸ್ಥೆಯ ಅಭಿವೃದ್ಧಿಗಾಗಿ ಪ್ರಾಮಾಣಿಕತೆಯಿಂದ ದುಡಿದಿದ್ದೇನೆ ಎಂದರು . ನಾನು
ಪ್ರಾಮಾಣಿಕತೆ , ಪಾರದರ್ಶಕತೆಯಿಂದ
ಕೆಲಸ ಮಾಡಬೇಕೆಂದು ಬಂದವ . ಆದರೆ
ದೆಹಲಿ ಕ್ರಿಕೆಟ್ ಸಂಸ್ಥೆಯಲ್ಲಿ ಅದು ಸಾಧ್ಯವಿಲ್ಲ . ಪಟ್ಟ
ಭದ್ರ ಹಿತಾಸಕ್ತಿಗಳ ನಡುವೆ ಕೆಲಸ ಮಾಡುವುದು ಕಷ್ಟ ಎಂದು ಶರ್ಮ ಹೇಳಿದರು . ಹಿರಿಯ
ಪತ್ರಕರ್ತರಾಗಿರುವ ರಜತ್ ಶರ್ಮಾ 20 ತಿಂಗಳ
ಹಿಂದಷ್ಟೇ ದೆಹಲಿ ಕ್ರಿಕೆಟ್ ಅಸೋಸಿಯೇಶನ್ ಅಧ್ಯಕ್ಷ ಗಾದಿಗೇರಿದ್ದರು . (
ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ )
2019: ಉಡುಪಿ : ಮೊಬೈಲ್ ಕವರಿನ ಹಿಂದೆ ತುಳಸಿ ದಳಗಳನ್ನು ಇಟ್ಟುಕೊಂಡರೆ ವಿಕಿರಣದಿಂದ ರಕ್ಷಣೆ ಪಡೆಯಬಹುದು ಎಂದು ಯೋಗಗುರು ಬಾಬಾ ರಾಮದೇವ್ 2019 ನವೆಂಬರ್ 16 ರ ಶನಿವಾರ ಇಲ್ಲಿ
ಬಹಿರಂಗ ಪಡಿಸಿದರು . ಕೃಷ್ಣಮಠದ ಪಾರ್ಕಿಂಗ್ ಪ್ರದೇಶದಲ್ಲಿ ನಡೆದ ಬೃಹತ್ ಯೋಗ ಶಿಬಿರದಲ್ಲಿ , ವಿಕಿರಣದಿಂದ ( ರೇಡಿಯೇಷನ್ ) ಹೇಗೆ ರಕ್ಷಣೆ ಪಡೆಯಬಹುದು ಎಂಬುದನ್ನು ಮಠದ ಸಿಬ್ಬಂದಿಯೊಬ್ಬರ ಮೊಬೈಲ್ ಪಡೆದುಕೊಂಡು ಪ್ರಾತ್ಯಕ್ಷಿಕೆ ಮೂಲಕ ರಾಮದೇವ್ ತೋರಿಸಿದರು . ಮನೆಯಲ್ಲಿರುವ ಟಿವಿ , ಲ್ಯಾಪ್ ಟಾಪ್ , ಮೊಬೈಲ್ ಹಾಗೂ ಎಲೆಕ್ಟ್ರಾನಿಕ್ ವಸ್ತುಗಳು ವಿಕಿರಣಗಳನ್ನು ಹೊರಸೂಸುತ್ತವೆ . ಇದರಿಂದ ರಕ್ಷಣೆ ಪಡೆಯಬೇಕಾದರೆ ಮನೆಯಲ್ಲಿ ತುಳಸಿ ಗಿಡವನ್ನು ಬೆಳೆಸಬೇಕು ಎಂದು ಸಲಹೆ ನೀಡಿದರು . ತುಳಸಿ ದಳ ಬಳಸಿ ವಿಕಿರಣದಿಂದ ರಕ್ಷಣೆ ಪಡೆಯಬಹುದು ಎಂಬ ವಿಚಾರವನ್ನು ಇದೇ ಮೊದಲ ಬಾರಿಗೆ ಬಹಿರಂಗಗೊಳಿಸುತ್ತಿರುವುದಾಗಿಯೂ ಬಾಬಾ ರಾಮದೇವ್ ಹೇಳಿದರು . (
ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ )
2019: ಮುಂಬೈ : ರಿಲಯನ್ಸ್ ಕಮ್ಯುನಿಕೇಷನ್ಸ್ ನಿರ್ದೇಶಕ ಹುದ್ದೆಗೆ ಉದ್ಯಮಿ ಅನಿಲ್ ಧೀರೂಭಾಯಿ ಅಂಬಾನಿ ರಾಜೀನಾಮೆ ನೀಡಿದ್ದಾರೆ ಎಂಬುದನ್ನು ಮುಂಬೈ ಷೇರುಪೇಟೆ ಅಧಿಸೂಚನೆ 2019 ನವೆಂಬರ್ 16 ರ ಶನಿವಾರ ಬಹಿರಂಗ ಪಡಿಸಿತು . ಅಂಬಾನಿ ಮಾತ್ರವಲ್ಲದೆ , ಛಾಯಾ ವೀರಾನಿ , ರಾನ್ ಕರಾನಿ , ಮಂಜರಿ ಕೇಕರ್ ಮತ್ತು ಸುರೇಶ್ ರಂಗಾಚಾರ್ ಕೂಡ ನಿರ್ದೇಶಕ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂದು ಮುಂಬೈ ಷೇರುಪೇಟೆ ( ಬಿಎಸ್ ಇ ) ಅಧಿಸೂಚನೆ ತಿಳಿಸಿತು . ಅಂಬಾನಿ , ಛಾಯಾ ವೀರಾನಿ , ಮಂಜರಿ ಕೇಕರ್ ನ . 15 ರಂದು , ರಾನ್ ಕರಾನಿ ನ . 14 ರಂದು ಮತ್ತು ಸುರೇಶ್ ರಂಗಾಚಾರ್ ನ . 13 ರಂದು ರಾಜೀನಾಮೆ ನೀಡಿದ್ದಾರೆ . ಮಣಿಕಂಠನ್ ವಿ . ಅವರು ಕಂಪನಿಯ ನಿರ್ದೇಶಕ ಹಾಗೂ ಮುಖ್ಯ ಹಣಕಾಸು ಅಧಿಕಾರಿ ಸ್ಥಾನಕ್ಕೆ ಅಕ್ಟೋಬರ್ 4 ರಂದೇ ರಾಜೀನಾಮೆ ನೀಡಿದ್ದರು . ಮಣಿಕಂಠನ್ ಅವರ ರಾಜೀನಾಮೆ ಮತ್ತು ನಿರ್ದೇಶಕ ಹಾಗೂ ಮುಖ್ಯ ಹಣಕಾಸು ಅಧಿಕಾರಿ ಸ್ಥಾನಕ್ಕೆ ಡಿ . ವಿಶ್ವನಾಥ್ ಅವರ ನೇಮಕಾತಿಗೆ ಸಾಲಗಾರರ ಸಮಿತಿಯ ( ಸಿಒಸಿ ) ಅನುಮೋದನೆ ದೊರೆಯಬೇಕಾಗಿದೆ . ಅನುಮೋದನೆ ದೊರೆತ ಬಳಿಕ ಮುಂದಿನ ಪ್ರಕಟಣೆ ಹೊರಡಿಸಲಾಗುವುದು ಎಂದು ಅಧಿಸೂಚನೆಯಲ್ಲಿ ಉಲ್ಲೇಖಿಸಲಾಯಿತು . ದಿವಾಳಿ ಪ್ರಕ್ರಿಯೆ ಎದುರಿಸುತ್ತಿರುವ ಕಂಪನಿಯು ಜುಲೈ – ಸೆಪ್ಟೆಂಬರ್ ಅವಧಿಯಲ್ಲಿ 30,142 ಕೋಟಿ ರೂಪಾಯಿ ನಷ್ಟ ಅನುಭವಿಸಿದೆ . (
ವಿವರಗಳಿಗೆಇಲ್ಲಿ ಕ್ಲಿಕ್ಕಿಸಿ)