ನಾನು ಮೆಚ್ಚಿದ ವಾಟ್ಸಪ್

Friday, November 29, 2019

ಇಂದಿನ ಇತಿಹಾಸ History Today ನವೆಂಬರ್ 29

2019: ನವದೆಹಲಿ: ಮಲಯಾಳದ ಖ್ಯಾತ ಕವಿ ಅಕ್ಕಿಥಮ್ ಅವರು ಪ್ರಸಕ್ತ ವರ್ಷದ ಜ್ಞಾನಪೀಠ ಪ್ರಶಸ್ತಿಗೆ ಭಾಜನರಾದರು. 2019 ನವೆಂಬರ್ 29ರ  ಶುಕ್ರ ವಾರ ಕುರಿತು ಘೋಷಣೆ ಹೊರಡಿಸಿದ ಜ್ಞಾನಪೀಠ ಆಯ್ಕೆ ಸಮಿತಿ, “೫೫ನೇ ಜ್ಞಾನಪೀಠ ಪ್ರಶಸ್ತಿಗೆ ಮಲಯಾಳದ ಪ್ರಸಿದ್ಧ ಕವಿ ಅಕ್ಕಿಥಮ್ ಅಚ್ಯುತನ್ ನಂಬೂದಿರಿ ಆಯ್ಕೆ ಯಾಗಿದ್ದಾರೆಎಂದು ತಿಳಿಸಿತು.  ಕೇವಲ ಕವಿತೆಗಳು ಮಾತ್ರವಲ್ಲದೇ ನಾಟಕ, ಸ್ಮರಣ ಗ್ರಂಥಗಳು, ವಿಮರ್ಶಾ ಪ್ರಬಂಧಗಳು, ಮಕ್ಕಳ ಸಾಹಿತ್ಯ, ಸಣ್ಣಕಥೆಗಳು, ಭಾಷಾಂತರ ಕೃತಿಗಳನ್ನು ಕೂಡ ಇವರು ರಚಿಸಿದ್ದಾರೆ. ೧೯೨೬ರಲ್ಲಿ ಜನಿಸಿದ ಅಕ್ಕಿಥಮ್ ಅವರು ಈವರೆಗೆ ೫೫ ಕೃತಿಗಳನ್ನು ರಚಿಸಿದ್ದು, ಪೈಕಿ ೪೫ ಕವನ ಸಂಕಲನಗಳಾಗಿವೆ. ಖಂಡ ಕಾವ್ಯಗಳು, ಕಥಾ ಕಾವ್ಯಗಳು, ಚರಿತ ಕಾವ್ಯಗಳು ಹಾಗೂ ಕವನಗಳು ಇವುಗಳಲ್ಲಿ ಸೇರಿವೆ. ಪದ್ಮಶ್ರೀ ಪುರಸ್ಕೃತರಾಗಿರುವ ಅವರು, ಸಾಹಿತ್ಯ ಅಕಾಡೆಮಿ ಪ್ರಶಸ್ತಿ (೧೯೭೩), ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ(೧೯೭೨ ಮತ್ತು ೧೯೮೮), ಮಾತೃಭೂಮಿ ಪ್ರಶಸ್ತಿ, ವಯಲಾರ್ ಪ್ರಶಸ್ತಿ, ಕಬೀರ್ ಸಮ್ಮಾನ್ ಸೇರಿದಂತೆ ಅನೇಕ ಸಾಹಿತ್ಯ ಸಂಬಂಧಿ ಗೌರವಗಳಿಗೂ ಪಾತ್ರ ರಾಗಿದ್ದಾರೆ. ಇವರ ಕೃತಿಗಳು ಭಾರತದ ಇತರೆ ಭಾಷೆಗಳು ಹಾಗೂ ವಿದೇಶಿ ಭಾಷೆಗಳಿಗೂ ತರ್ಜುಮೆಗೊಂಡಿವೆ. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)


No comments:

Post a Comment