Tuesday, July 23, 2019

ಇಂದಿನ ಇತಿಹಾಸ History Today ಜುಲೈ 23

ಇಂದಿನ ಇತಿಹಾಸ History Today ಜುಲೈ 23
2019: ಬೆಂಗಳೂರು:  6 ದಿನಗಳ ಪ್ರಹಸನದ ಬಳಿಕ ವಿಶ್ವಾಸ ಮತದಲ್ಲಿ  ಮತಗಳ ಅಂತರದಲ್ಲಿ ಸೋಲುವ ಮೂಲಕ ಮುಖ್ಯಮಂತ್ರಿ ಎಚ್.ಡಿಕುಮಾರ ಸ್ವಾಮಿ ನೇತೃತ್ವದ ೧೪ ತಿಂಗಳುಗಳ ಜನತಾದಳ (ಎಸ್)- ಕಾಂಗ್ರೆಸ್ ಮೈತ್ರಿ ಸರ್ಕಾರ  ಈದಿನ ರಾತ್ರಿ  ರಾತ್ರಿ ಪತನಗೊಂಡಿತುವಿಧಾನಸಭೆಯಲ್ಲಿ ವಿಶ್ವಾಸ ಮತ ನಿರ್ಣಯಕ್ಕೆ ಸೋಲಾಗುತ್ತಿದ್ದಂತೆಯೇ ಕುಮಾರ ಸ್ವಾಮಿಯವರು ರಾಜ್ಯಪಾಲ ವಜುಭಾಯಿ ವಾಲಾ ಅವರನ್ನು ಭೇಟಿ ಮಾಡಿ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದರು೨೦೧೮ರ ಮೇ  ೨೩ರಂದು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದ ಕುಮಾರ ಸ್ವಾಮಿಯರು ತಾವು ಅಧಿಕಾರ ವಹಿಸಿಕೊಂಡ ದಿನಾಂಕದಂದೇ ರಾಜೀನಾಮೆ ಸಲ್ಲಿಸಿದ್ದುರಾಜ್ಯಪಾಲರು ರಾಜೀನಾಮೆಯನ್ನು ಅಂಗೀಕರಿಸಿಪರ್ಯಾಯ ವ್ಯವಸ್ಥೆ ಆಗುವವರೆಗೆ ಹಂಗಾಮೀ  ಮುಖ್ಯಮಂತ್ರಿಯಾಗಿ ಮುಂದುವರೆಯುವಂತೆ ಸೂಚಿಸಿದರು. ಕಾಂಗ್ರೆಸ್ ಮತ್ತು ಜನತಾದಳದ ೧೬ ಮಂದಿ ಶಾಸಕರ ರಾಜೀನಾಮೆಯ ಹಿನ್ನೆಲೆಯಲ್ಲಿ ಜುಲೈ ೧೮ರಂದು ಮಂಡಿಸಲಾದ  ವಿಶ್ವಾಸಮತ ನಿರ್ಣಯವನ್ನು  ಈದಿನ ರಾತ್ರಿ ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ ಕುಮಾರ್ ಅವರು ಮತಕ್ಕೆ ಹಾಕಿದಾಗ ಸದನದಲ್ಲಿ ಹಾಜರಿದ್ದ ಸದಸ್ಯರ ಪೈಕಿ ನಿರ್ಣಯದ ಪರವಾಗಿ ೯೯ ಮಂದಿ ಮತ ಚಲಾಯಿಸಿದರೆ ನಿರ್ಣಯದ ವಿರುದ್ಧವಾಗಿ ೧೦೫ ಮಂದಿ  ಮತಚಲಾಯಿಸಿದರು. ವಿಶ್ವಾಸ ಮತ ನಿರ್ಣಯದ ಮೇಲೆ ನಡೆದ ಚರ್ಚೆಗೆ ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರು ಉತ್ತರ ನೀಡಿದ ಬಳಿಕ ಸಭಾಧ್ಯಕ್ಷರು ಮೊದಲು ಧ್ವನಿ ಮತದ ಮೂಲಕ ನಿರ್ಣಯಕ್ಕೆ ಒಪ್ಪಿಗೆ ಕೇಳಿದರುಬಳಿಕ ವಿರೋಧ ಪಕ್ಷದ ನಾಯಕರು ಮತವಿಭಜನೆಗೆ ಕೋರಿದಾಗ ಸಭಾಧ್ಯಕ್ಷರು ನಿರ್ಣಯವನ್ನು ಮತಕ್ಕೆ ಹಾಕಿದರುವಿಶ್ವಾಸಮತ ಕಲಾಪ ಮುಕ್ತಾಯದ ಬಳಿಕ ಸಭಾಧ್ಯಕ್ಷರು ಸದನವನ್ನು ಅನಿರ್ದಿಷ್ಟ ಅವಧಿಗೆ ಮುಂದೂಡಿದರುವಿಶ್ವಾಸಮತ ನಿರ್ಣಯ ಮಂಡಿಸಿದ ಬಳಿಕ ಇಲ್ಲಿಯವರೆಗೆ ನಡೆದ ಚರ್ಚೆಗೆ ಉತ್ತರ ನೀಡಿದ ಕುಮಾರ ಸ್ವಾಮಿ ಅವರು ತಮ್ಮ ಬಗೆಗಿನ ನಕಾರಾತ್ಮಕ ವರದಿಗಳು ತಮಗೆ ಅತ್ಯಂತ ವೇದನೆ ಉಂಟು ಮಾಡಿವೆಆದ್ದರಿಂದ ಮುಖ್ಯಮಂತ್ರಿ ಪದವನ್ನು ’ಅತ್ಯಂತ ಖುಷಿಯೊಂದಿಗೆ’ ತ್ಯಜಿಸಲು ತಾನು ಸಿದ್ಧನಾಗಿದ್ದೇನೆ ಎಂದು ಹೇಳಿದರುತಾವು ಮುಖ್ಯಮಂತ್ರಿ ಸ್ಥಾನಕ್ಕೆ ಏರಿದಂದಿನಿಂದ ಇಲ್ಲಿಯವರೆಗಿನ ಘಟನಾವಳಿಗಳನ್ನು ನೆನಪು ಮಾಡಿಕೊಂಡ ಅವರು  ’ನಿರಂತರ ಪತನ ಭೀತಿಯಲ್ಲೇ ನಾನು ಸರ್ಕಾರವನ್ನು ನಡೆಸಿದ್ದೇನೆ ಎಂದು ಹೇಳಿದರು.  ತಮ್ಮ ಸರ್ಕಾರದ ಬಗೆಗಿನ ಆರೋಪಗಳೆಲ್ಲವನ್ನೂ ಅಲ್ಲಗಳೆದ ಮುಖ್ಯಮಂತ್ರಿ ’ನನ್ನನ್ನು ವಚನ ಭ್ರಷ್ಟ’ ಎಂಬುದಾಗಿ ಕರೆಯಬೇಡಿ ಎಂದು ಕೋರಿದರುಕಲಾಪದ ಮಧ್ಯೆ ಒಂದು ಹಂತದಲ್ಲಿ ಮಧ್ಯಪ್ರವೇಶ ಮಾಡಿದ ಸಭಾಧ್ಯಕ್ಷ ರಮೇಶ ಕುಮಾರ್ ಅವರು ’ಈದಿನ ಯಾವುದೇ ಪರಿಸ್ಥಿತಿ ಎದುರಿಸಲೂ ನಾನು ಸಜ್ಜಾಗಿಯೇ ಬಂದಿದ್ದೇನೆ’ ಎಂಬುದಾಗಿ ಹೇಳಿ ತಾವು ಬರೆದು ಕಿಸೆಯಲ್ಲಿ ಇಟ್ಟುಕೊಂಡಿದ್ದ ರಾಜೀನಾಮೆ ಪತ್ರವನ್ನು ಓದುವಂತೆ ವಿರೋಧ ಪಕ್ಷದ ನಾಯಕ ಬಿ.ಎಸ್ಯಡಿಯೂರಪ್ಪ ಅವರಿಗೆ ಕಳುಹಿಸಿಕೊಟ್ಟರು.  ವಿಧಾನಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಶಾಸಕರನ್ನು ದ್ರೋಹಿಗಳು ಎಂಬುದಾಗಿ ಟೀಕಿಸಿದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ’ಅವರನ್ನು ಎಂದಿಗೂ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ’ ಎಂಬುದಾಗಿ ಸದನದಿಂದಲೇ ರಾಜೀನಾಮೆ ನೀಡಿದ ಶಾಸಕರಿಗೆ ಎಚ್ಚರಿಕೆ ರವಾನಿಸಿದರು.  ರಾಜೀನಾಮೆ ನೀಡಿದ ಶಾಸಕರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬೇಡಿ ಎಂದು ಬಿಜೆಪಿಗೆ ಸಲಹೆ ಮಾಡಿದ ಸಿದ್ದರಾಮಯ್ಯ ’ಅಧಿಕಾರಕ್ಕೆ ಬಂದ ಸ್ವಲ್ಪ ದಿನದಲ್ಲೇ ನಿಮಗೂ ಅನುಭವ ಆಗಲಿದೆಆಗ ನಿಮ್ಮ ಶಾಸಕರು ನಮ್ಮ ಕಡೆಗೆ ಬರಲಿದ್ದಾರೆ’ ಎಂದು ಭವಿಷ್ಯ ನುಡಿದರು.  ರೈತರ ಸಾಲಮನ್ನಾದಿಂದ ಹಿಡಿದು ಬರಗಾಲಕೊಡಗಿನ ಅತಿವೃಷ್ಟಿ ಸಂದರ್ಭದಲ್ಲಿ ನೀಡಿದ ನೆರವನ್ನು ನೆನಪಿಸಿದ ಮುಖ್ಯಮಂತ್ರಿ ಕುಮಾರ ಸ್ವಾಮಿತಾವು ಕೊಟ್ಟ ಭರವಸೆಗಳೆಲ್ಲವನ್ನೂ ಈಡೇರಿಸಿರುವುದಾಗಿ ಪ್ರತಿಪಾದಿಸಿದರು. ’ಕಿಸಾನ್ ಸಮ್ಮಾನ್’ ಯೋಜನೆಯ ಫಲಾನುಭವಿ ರೈತರ ಹೆಸರುಗಳನ್ನು ಕೂಡಾ ನಮ್ಮ ಅಧಿಕಾರಿಗಳು ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಟ್ಟಿದ್ದಾರೆ ಎಂದು ವಿವರಿಸಿದರುರಾಜೀನಾಮೆ ಕೊಟ್ಟ ಶಾಸಕರು ತಮ್ಮ ಬಗ್ಗೆ ಮಾಡಿದ ಆಪಾದನೆಗಳನ್ನು ಕೂಡಾ ತಳ್ಳಿಹಾಕಿದ ಮುಖ್ಯಮಂತ್ರಿ ಬಂಡಾಯಶಾಸಕರ ಕ್ಷೇತ್ರಗಳಿಗೆ ಬಿಡುಗಡೆ ಮಾಡಿದ ಅನುದಾನಅವರಿಗೆ ಕೊಟ್ಟ ಅಧಿಕಾರದ ಹುದ್ದೆಗಳನ್ನು ನೆನಪಿಸಿದರು.  ಜುಲೈ 18ರ ಗುರುವಾರದಿಂದ  ಈದಿನದವರೆಗೂ ನಿರ್ಣಯದ ಮೇಲೆ ವಿಶ್ವಾಸ ಮತಯಾಚನೆ ಮಾಡುವಂತೆ ವಿರೋಧಿ ಬಿಜೆಪಿಯ ಆಗ್ರಹದ ಜೊತೆಗೆ ರಾಜ್ಯಪಾಲರೂ ಎರಡು ಬಾರಿ ಗಡುವುಗಳನ್ನು ನೀಡಿದ್ದರುಜುಲೈ 20ರ ಶನಿವಾರ ವಿಶ್ವಾಸಮತ ಕಲಾಪವನ್ನು ಮುಗಿಸುವಂತೆ ಸಭಾಧ್ಯಕ್ಷ ರಮೇಶ ಕುಮಾರ್ ಅವರು ಮೈತ್ರಿ ಸರ್ಕಾರಕ್ಕೆ  ಪಟ್ಟು ಹಿಡಿದು ಸೂಚಿಸಿದ್ದರುಆದರೆ ಮುಖ್ಯಮಂತ್ರಿ  ಕುಮಾರ ಸ್ವಾಮಿ ಮತ್ತು ಆಡಳಿತಾರೂಢ ಮೈತ್ರಿ ಸರ್ಕಾರದ ನಾಯಕ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿದ ಶಾಸಕರು ಕಲಾಪದಲ್ಲಿ ಪಾಲ್ಗೊಳ್ಳುವಂತೆ ಒತ್ತಾಯಿಸುವಂತಿಲ್ಲ ಎಂಬುದಾಗಿ ನೀಡಿರುವ ಸುಪ್ರೀಂಕೋರ್ಟಿನ ತೀರ್ಪಿನಿಂದ ತಮ್ಮ ವಿಪ್ ನೀಡಿಕೆ ಹಕ್ಕಿಗೆ ಧಕ್ಕೆಯಾಗಿದೆ ಎಂದು ಹೇಳಿ ಅದರ ಬಗ್ಗೆ ಮೊದಲು ಇತ್ಯರ್ಥವಾಗಬೇಕು ಎಂದು ಆಗ್ರಹಿಸಿದ್ದರು ವಿಚಾರವಾಗಿ ಕಾಂಗ್ರೆಸ್ ಮತ್ತು ಮುಖ್ಯಮಂತ್ರಿಯವರು ಸುಪ್ರೀಂಕೋರ್ಟ್ನಲ್ಲಿ ಸಲ್ಲಿಸಿದ ಅರ್ಜಿಯ ಬಗೆಗಿನ ಸುಪ್ರೀಂಕೋರ್ಟ್ ತೀರ್ಮಾನದವರೆಗೂ ಕಾಯಬೇಕು ಎಂದು ಆಗ್ರಹಿಸಿದ್ದರು.  ಜುಲೈ  22ರ ಸೋಮವಾರ ಕಲಾಪ ಮುಕ್ತಾಯಗೊಳಿಸುವುದಾಗಿ ಆಡಳಿತ ಪಕ್ಷ ನೀಡಿದ ಭರವಸೆಯನ್ನು ಅನುಸರಿಸಿ ಸಭಾಧ್ಯಕ್ಷರು ಶುಕ್ರವಾರ ಕಲಾಪವನ್ನು  ಮುಂದೂಡಿದ್ದರುಆದರೆ  ಜುಲೈ 22ರ ಸೋಮವಾರ ಕೂಡಾ ಆಡಳಿತಾರೂಢ ಮೈತ್ರಿಕೂಟದ ಸದಸ್ಯರ ಗದ್ದಲದಿಂದಾಗಿ ಕಲಾಪ ರಾತ್ರಿ ೧೧ ಗಂಟೆಯವರೆಗೂ ಪೂರ್ಣಗೊಳ್ಳದೆ ಸಭಾಧ್ಯಕ್ಷರು ಈದಿನಕ್ಕೆ ಕಲಾಪವನ್ನು ಮುಂದೂಡಿದ್ದರುಏನಿದ್ದರೂ ಸಂಜೆ ೬ಗಂಟೆಯ ಒಳಗಾಗಿ ಕಲಾಪ ಮುಕ್ತಾಯಗೊಳಿಸಲೇಬೇಕು ಎಂಬುದಾಗಿ ಗಡುವು  ನೀಡಿದ್ದರು ಮಧ್ಯೆ ಪಕ್ಷೇತರ ಸದಸ್ಯರು ಮತ್ತು ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯನ್ನು ಬೆಳಗ್ಗೆ ವಿಚಾರಣೆಗೆ ಎತ್ತಿಕೊಂಡ ಸುಪ್ರೀಂಕೋರ್ಟ್ ಈದಿನ ಸಂಜೆಯ ಒಳಗಾಗಿ ವಿಶ್ವಾಸಮತ ಕಲಾಪ ಮುಕ್ತಾಯಗೊಳ್ಳುವ ವಿಶ್ವಾಸ ವ್ಯಕ್ತ ಪಡಿಸಿ ವಿಚಾರಣೆಯನ್ನು  ಮುಂದೂಡಿತ್ತು ಮಧ್ಯೆರಾಜೀನಾಮೆ ಸಲ್ಲಿಸಿಮುಂಬೈಗೆ ತೆರಳಿದ್ದ ಬಂಡಾಯ ಶಾಸಕರು ತಾವು ಅಧಿವೇಶನದಲ್ಲಿ ಪಾಲ್ಗೊಳ್ಳುವುದಿಲ್ಲ ಎಂಬ ಖಡಾಖಂಡಿತ ಸಂದೇಶವನ್ನು ವಿಡಿಯೋ ಮೂಲಕ ನೀಡಿದ್ದರುಬೆಳಗ್ಗೆ ಕಲಾಪ ಆರಂಭವಾದರೂ ಮುಖ್ಯಮಂತ್ರಿ ಸದನಕ್ಕೆ ಆಗಮಿಸದೆ ಕಾಂಗ್ರೆಸ್ ನಾಯಕರ ಜೊತೆಗೆ ಸಮಾಲೋಚನೆಗಳಲ್ಲಿ ಮಗ್ನರಾಗಿದ್ದರುಬಿಜೆಪಿಯು ಟ್ವೀಟ್ ಮೂಲಕ ಮುಖ್ಯಮಂತ್ರಿಯ ವರ್ತನೆಯನ್ನು ಟೀಕಿಸಿತ್ತುಮಧ್ಯಾಹ್ನ ಮೈತ್ರಿನಾಯಕರು ಸದನಕ್ಕೆ ಆಗಮಿಸಿ ಕಲಾಪದಲ್ಲಿ ಪಾಲ್ಗೊಂಡರುಕಾಂಗ್ರೆಸ್ ನಾಯಕ ಡಿ.ಕೆಶಿವಕುಮಾರ್ ಸುದೀರ್ಘವಾಗಿ ಮಾತನಾಡಿ ತಮ್ಮ ರಾಜಕೀಯಆರೋಪಗಳ ಬಗ್ಗೆ ನೆನಪು ಮಾಡಿದರುರಾಜೀನಾಮೆ ನೀಡಿದ ಶಾಸಕರು ಬಿಜೆಪಿ ಭರವಸೆಗೆ ಬಲಿಯಾಗದೆ ಸದನಕ್ಕೆ ಬರಬೇಕು ಎಂದು  ಹಂತದಲ್ಲೂ ಅವರು ಮನವಿ ಮಾಡಿದರುಬರದೇ ಇದ್ದಲ್ಲಿ ಅವರು ಸದಸ್ಯತ್ವದಿಂದ ಅನರ್ಹಗೊಂಡು ಶಾಶ್ವತವಾಗಿ ತಮ್ಮ ರಾಜಕೀಯ ಭವಿಷ್ಯವನ್ನು ಹಾಳು ಮಾಡಿಕೊಳ್ಳಲಿದ್ದಾರೆ ಎಂದೂ ಎಚ್ಚರಿಸಿದರು೨೨೫ ಸದಸ್ಯಬಲದ ವಿಧಾನಸಭೆಯಲ್ಲಿ ಆಡಳಿತಾರೂಢ ಕಾಂಗ್ರೆಸ್-ಜನತಾದಳ (ಎಸ್)ಮೈತ್ರಿ ಸರ್ಕಾರ ೧೧೭ ಸದಸ್ಯರನ್ನು ಹೊಂದಿತ್ತುಅವರ ಪೈಕಿ ೭೮ ಮಂದಿ ಕಾಂಗ್ರೆಸ್೩೭ ಮಂದಿ ಜೆಡಿ(ಎಸ್ಮತ್ತು ಒಬ್ಬರು ಬಿಎಸ್ಪಿ ಸದಸ್ಯರಾಗಿದ್ದರೆಒಬ್ಬರು ನಾಮನಿರ್ದೇಶಿತ ಸದಸ್ಯ ಮತ್ತು ಒಬ್ಬರು ಸಭಾಧ್ಯಕ್ಷರುಇಬ್ಬರು ಪಕ್ಷೇತರರ ಬೆಂಬಲದೊಂದಿಗೆ ಬಿಜೆಪಿ ವಿಧಾನಸಭೆಯಲ್ಲಿ ೧೦೭ ಸದಸ್ಯರ ಬೆಂಬಲ ಪಡೆದಿತ್ತು. ೧೬ ಮಂದಿ ಶಾಸಕರ ರಾಜೀನಾಮೆಯ ಪರಿಣಾಮವಾಗಿ ಆಡಳಿತಾರೂಢ ಮೈತ್ರಿ ಸರ್ಕಾರದ ಸದಸ್ಯ ಬಲ ೧೦೧ಕ್ಕೆ ಇಳಿದು ಅದು ಅಲ್ಪಮತಕ್ಕೆ ಕುಸಿದಿತ್ತುವಿಶ್ವಾಸ ಮತವನ್ನು ಈದಿನ ಮತಕ್ಕೆ ಹಾಕಿದಾಗ ಆಡಳಿತಾರೂಢ ಮೈತ್ರಿಕೂಟದ ೧೭ ಸದಸ್ಯರು ಸೇರಿದಂತೆ ಒಟ್ಟು ೨೦ ಶಾಸಕರು ಸದನದಲ್ಲಿ ಗೈರು ಹಾಜರಾಗಿದ್ದರುಗೈರುಹಾಜರಾದವರಲ್ಲಿ ಇಬ್ಬರು ಪಕ್ಷೇತರರಾದರೆಇನ್ನೊಬ್ಬ ಸದಸ್ಯ ಬಿಎಸ್ಪಿಯ ಎನ್.ಮಹೇಶ್ಬಿಎಸ್ಪಿ ಸದಸ್ಯ ಕೊಳ್ಳೆಗಾಲದ ಮಹೇಶ್ ಅವರಿಗೆ ಮೈತ್ರಿ ಸರ್ಕಾರವನ್ನು ಬೆಂಬಲಿಸುವಂತೆ ನಾಯಕಿ ಮಾಯಾವತಿ ಸೂಚಿಸಿತ್ತುಆದರೆಮಹೇಶ್ ಅವರು ಅದನ್ನು ನಿರ್ಲಕ್ಷಿಸಿದ್ದರು.  ಸರ್ಕಾರ ಪತನದ ಬೆನ್ನಲ್ಲೇ  ಬಿಎಸ್ ಪಿ ನಾಯಕ ಮಾಯಾವತಿ ಅವರು ಮಹೇಶ್ ಅವರನ್ನು ಪಕ್ಷದಿಂದ ಉಚ್ಚಾಟಿಸಿರುವುದಾಗಿ ಟ್ವೀಟ್ ಮಾಡಿದರು.
2019: ನವದೆಹಲಿ:  ಪ್ರಧಾನಿ ನರೇಂದ್ರ ಮೋದಿ ಅವರು ಮುದ್ದಾದ ಮಗು ಒಂದರ ಜೊತೆಗೆ ಆಟವಾಡುತ್ತಿರುವ ಎರಡು ಸುಂದರ ಫೋಟೋಗಳನ್ನು ತಮ್ಮ ಅಧಿಕೃತ ಇನ್ಸ್ಟಾ ಗ್ರಾಮ್ ಖಾತೆಯಲ್ಲಿ  ಈದಿನ  ಪ್ರಕಟಿಸಿದ್ದು ಚಿತ್ರಗಳು ಸಾಮಾಜಿಕ ಮಾಧ್ಯಮವನ್ನು ಹುಚ್ಚೆಬ್ಬಿಸಿದವು. ‘ಮೋದಿ ಅವರ ಕೈಗಳಲ್ಲಿ ಕಿಸಿ ಕಿಸಿ ನಗುತ್ತಿರುವ  ಮಗು ಯಾರು?’ ಎಂಬ ಪ್ರಶ್ನೆ ಇನ್ಸ್ಟಾ ಗ್ರಾಮ್ ಮತ್ತು ಟ್ವಿಟ್ಟರಿನಲ್ಲಿ ವೈರಲ್ ಆಯಿತು.  ‘ಮೋದಿಯವರು  ಚಿತ್ರಗಳ ಜೊತೆಗೆ  ’ಸಂಸತ್ತಿಗೆ ತಮ್ಮನ್ನು ಭೇಟಿ ಮಾಡಲು ಬಂದ ವಿಶೇಷ  ಗೆಳೆಯ’ ಎಂಬುದಾಗಿ ಉಲ್ಲೇಖಿಸಿದ್ದರು.  ’ಅತ್ಯಂತ ವಿಶೇಷ ಗೆಳೆಯರೊಬ್ಬರು ನನ್ನನ್ನು ಭೇಟಿ ಮಾಡಲು ಈದಿನ ಸಂಸತ್ತಿಗೆ ಬಂದಿದ್ದಾರೆ’ ಎಂಬುದಾಗಿ ಪ್ರಧಾನಿ ಮೊದಲ ಫೋಟೋ ಕೆಳಗೆ ಕ್ಯಾಪ್ಷನ್ ಬರೆದಿದ್ದರು. ಮೊದಲ ಫೋಟೋದಲ್ಲಿ ಮಗು ಮೋದಿಯವರನ್ನು ನೋಡುತ್ತಾ ನಗುತ್ತಿರುವ ದೃಶ್ಯವಿತ್ತು.  ಎರಡನೇ ಫೊಟೋದಲ್ಲಿ ಮಗು ತನ್ನ ಮುಂದೆ ಮೇಜಿನ ಮೇಲೆ ಇಡಲಾಗಿದ್ದ ಚಾಕೋಲೇಟ್ ಬಾರ್ಗಳನ್ನು ಸೆಳೆದುಕೊಳ್ಳಲು ಹವಣಿಸುತ್ತಿರುವಂತಿಂತಿತ್ತು. ಪ್ರಧಾನಿ ಮೋದಿಯವರು ಮಕ್ಕಳ ಜೊತೆಗೆ ಫೊಟೋ ತೆಗೆಸಿಕೊಳ್ಳುವುದು ಇದೇ ಮೊದಲೇನಲ್ಲಆದರೆ  ಮಗುವನ್ನು ಅವರು ’ವಿಶೇಷ ಗೆಳೆಯ’ ಎಂಬುದಾಗಿ ಕರೆದಿರುವುದು ಅಚ್ಚರಿಗೆ ಕಾರಣವಾಗಿದೆಹಾಗಿದ್ದರೆ  ಮಗು ನಿಜವಾಗಿ ಯಾರು ಎಂಬ ಪ್ರಶ್ನೆಯನ್ನು ಎಲ್ಲರಲ್ಲೂ ಹುಟ್ಟು ಹಾಕಿತು. ಚಿತ್ರಕ್ಕೆ ಇನ್ಸ್ಟಾಗ್ರಾಮ್ನಲ್ಲಿ  ಲಕ್ಷಕ್ಕೂ ಹೆಚ್ಚು ಲೈಕ್ಗಳು ಮತ್ತು ಪ್ರತಿಕ್ರಿಯೆಗಳಂತೂ ಬಂದಿದ್ದು ಬಹುತೇಕ ಮಂದಿ  ಮಗು ಯಾರು ಇರಬಹುದು ಎಂಬುದಾಗಿ ಪ್ರಶ್ನೆ ಕೇಳಿದರು ಇಲ್ಲವೇ ಊಹೆ ಮಾಡಿದರುಇನ್ಸ್ಟಾಗ್ರಾಮ್ ಪ್ರತಿಕ್ರಿಯೆಗಳ ವಿಭಾಗದಲ್ಲಿ ಪ್ರಶ್ನೆಗಳ ಪ್ರವಾಹವೇ ಹರಿಯಿತು. ಇನ್ಸಾಗ್ರಾಮ್ ಬಳಕೆದಾರರೊಬ್ಬರು  ಮಗು ರೋಹಿತ್ ಶರ್ಮ ಅವರ ಪುತ್ರಿ ಇರಬಹುದು ಎಂದು ಊಹೆ ಮಾಡಿದರೆ,   ಇನ್ನೊಬ್ಬರು ಗೃಹ ಸಚಿವ ಅಮಿತ್ ಶಾ ಅವರ ಮೊಮ್ಮಗು ಇರಬಹುದು ಎಂದು ಬರೆದರು. ಆದರೆ  ಉತ್ತರ ಮಾತ್ರ ಯಾರಿಗೂ ಲಭಿಸಲಿಲ್ಲ.
2019: ನವದೆಹಲಿಕಾಶ್ಮೀರ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಯಾವುದೇ ಮನವಿಯನ್ನೂ ಮಾಡಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ಜೈಶಂಕರ್ ಅವರು  ಸಂಸತ್ತಿನ ಉಭಯ ಸದನಗಳಲ್ಲೂ ಸ್ಪಷ್ಟ ಪಡಿಸಿದರು.  ‘ಅಂತಹ ಯಾವುದೇ ಮನವಿಯನ್ನೂ ಪ್ರಧಾನಿ ಮೋದಿಯವರು ಮಾಡಿಲ್ಲ ಎಂಬುದಾಗಿ  ಸದನಕ್ಕೆ ನಾನು ಖಡಾಖಂಡಿತ ಭರವಸೆ ನೀಡಲು ಇಚ್ಛಿಸುತ್ತೇನೆ’ ಎಂದು ಜೈಶಂಕರ್ ಅವರು ಸಂಸತ್ತಿನ ಉಭಯ ಸದನಗಳಲ್ಲೂ ನೀಡಿದ ಒಂದೇ ರೀತಿಯ ಹೇಳಿಕೆಗಳಲ್ಲಿ ತಿಳಿಸಿದರು.  ಲೋಕಸಭೆಯಲ್ಲಿ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟಿಸಿದ ವಿರೋಧಿ ಸದಸ್ಯರು ಪ್ರಧಾನಿ ಮೋದಿ ಅವರ ಹೇಳಿಕೆಗಾಗಿ ಆಗ್ರಹಿಸಿಬಳಿಕ ಸಭಾತ್ಯಾಗ ಮಾಡಿದರು.  ಇದಕ್ಕೂ ಮುನ್ನ ರಾಜ್ಯಸಭೆಯಲ್ಲಿ ಮಾತನಾಡಿದ ವಿದೇಶಾಂಗ ಸಚಿವರು ಪಾಕಿಸ್ತಾನದ ಜೊತೆಗಿನ  ಯಾವುದೇ ಬಾಕಿ ವಿಷಯಗಳನ್ನು ದ್ವಿಪಕ್ಷೀಯವಾಗಿ ಮಾತ್ರವೇ ಚರ್ಚಿಸಲಾಗುವುದು ಎಂಬುದು ಭಾರತ ನಿರಂತರವಾಗಿ ತಾಳಿರುವ ನಿಲುವು ಎಂದು ಹೇಳಿದರು. ‘ಶಿಮ್ಲಾ ಒಪ್ಪಂದ ಮತ್ತು ಲಾಹೋರ್ ಘೋಷಣೆಯು ಭಾರತ ಮತ್ತು ಪಾಕಿಸ್ತಾನದ ನಡುವಣ ಎಲ್ಲ ವಿಷಯಗಳನ್ನೂ ದ್ವಿಪಕ್ಷೀಯವಾಗಿ ಇತ್ಯರ್ಥ ಪಡಿಸಲು ಅಡಿಪಾಯ ಒದಗಿಸಿವೆ’ ಎಂದು ಜೈಶಂಕರ್ ನುಡಿದರು.  ಅಮೆರಿಕಕ್ಕೆ ಭೇಟಿ ನೀಡಿರುವ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರ ಜೊತೆಗೆ ಸೋಮವಾರ ನಡೆಸಿದ ಪ್ರಾಥಮಿಕ ಮಾತುಕತೆ ವೇಳೆಯಲ್ಲಿ ಟ್ರಂಪ್ ಅವರು ಭಾರತ ಮತ್ತು ಪಾಕಿಸ್ತಾನ ನಡುವಣ ಕಾಶ್ಮೀರ ವಿಷಯವನ್ನು ಇತ್ಯರ್ಥ ಪಡಿಸಲು ನೆರವು ನೀಡುವುದಾಗಿ ತಿಳಿಸಿದ ಬಗೆಗಿನ ವರದಿಗಳು ಪ್ರಕಟವಾದ ಒಂದು ದಿನದ ಬಳಿಕ ಸಚಿವರು  ಸ್ಪಷ್ಟನೆ ನೀಡಿದರು.  ಪ್ರಧಾನಿ ಮೋದಿ ಅವರು ಕೆಲವು ವಾರಗಳ ಹಿಂದೆ ತಮ್ಮ ಜೊತೆಗಿನ ಭೇಟಿ ಕಾಲದಲ್ಲಿ ಇಂತಹುದೇ ಮನವಿಯನ್ನು ಮಾಡಿದ್ದರು ಎಂಬುದಾಗಿ ಟ್ರಂಪ್ ಹೇಳಿದ್ದರುಟ್ರಂಪ್ ಅವರ  ಪ್ರತಿಪಾದನೆಯನ್ನು ಭಾರತ ತಿರಸ್ಕರಿಸಿತ್ತು.  ‘ನಾನು ನೆರವು ನೀಡಲು ಸಾಧ್ಯವಾಗುವುದಾದರೆಮಧ್ಯಸ್ಥಿಕೆದಾರನಾಗಲು ನಾನು ಇಷ್ಟಪಡುತ್ತೇನೆ’ ಎಂದು ಟ್ರಂಪ್ ಹೇಳಿದ್ದರುಶ್ವೇತಭವನದಲ್ಲಿ ಜಂಟಿಯಾಗಿ ಕಾಣಿಸಿಕೊಂಡ ವೇಳೆಯಲ್ಲಿ ಇಮ್ರಾನ್ ಖಾನ್ ಅವರು ಕಾಶ್ಮೀರ ವಿಷಯವನ್ನು ಇತ್ಯರ್ಥಪಡಿಸಲು ಅಮೆರಿಕದ ನೆರವನ್ನು ತಾವು ಇಷ್ಟ ಪಡುವುದಾಗಿ ಹೇಳಿದ್ದನ್ನು ಅನುಸರಿಸಿ ಟ್ರಂಪ್ ಮಧ್ಯಸ್ಥಿಕೆದಾರನಾಗುವ  ಕೊಡುಗೆ ಮುಂದಿಟ್ಟಿದ್ದರುಏನಿದ್ದರೂಕಾಶ್ಮೀರವು ’ದ್ವಿಪಕ್ಷೀಯ ವಿಷಯವಾಗಿದ್ದು’ ಉಭಯ ರಾಷ್ಟ್ರಗಳು ಬಯಸಿದರೆ ಮಾತ್ರ ತಾನು ಭಾರತ-ಪಾಕಿಸ್ತಾನಕ್ಕೆ ನೆರವು ನೀಡುವುದಾಗಿ ಹೇಳುವ ಮೂಲಕ ಅಮೆರಿಕವು ತನ್ನ ಹೇಳಿಕೆಯಿಂದ  ಈದಿನ ಹಿಂದೆ ಸರಿಯಿತು.  ‘ಭಯೋತ್ಪಾದನೆ ನಿಗ್ರಹ ಕ್ರಮಗಳನ್ನು ಸಮಪರ್ಕಕವಾಗಿ ಕೈಗೊಳ್ಳುವ ಅಗತ್ಯವಿದೆ ಎಂಬುದಾಗಿ ತಿಳಿಸುವ ಮೂಲಕ ವಿವಾದ ಇತ್ಯರ್ಥಕ್ಕೆ ಪಾಕಿಸ್ತಾನವೇ ಜವಾಬ್ದಾರಿ ಮತ್ತು ಉತ್ತರದಾಯಿ’ ಎಂದು ಪಾಕಿಸ್ತಾನಕ್ಕೆ ಖಡಾಖಂಡಿತ ಮಾತುಗಳಲ್ಲಿ ಅಮೆರಿಕ ನೆನಪಿಸಿತು.  ‘ಭಾರತ ಮತ್ತು ಪಾಕಿಸ್ತಾನದ ನಡುವಣ ಯಾವುದೇ ಯಶಸ್ವೀ ಮಾತುಕತೆಗೆ ಪಾಕಿಸ್ತಾನವು ಉಗ್ರಗಾಮಿಗಳು ಮತ್ತು ಭಯೋತ್ಪಾದಕರ ವಿರುದ್ಧ ತನ್ನ ನೆಲದಲ್ಲಿ  ಕೈಗೊಳ್ಳುವ ದೃಢ ಮತ್ತು ಶಾಶ್ವತ ಕ್ರಮಗಳೇ ಆಧಾರ’ ಎಂದು ಅಮೆರಿಕದ ವಿದೇಶಾಂಗ ಇಲಾಖೆ ವಕ್ತಾರರು ಹೇಳಿದರು.  ಪ್ರಧಾನಿಯಿಂದ ದ್ರೋಹರಾಹುಲ್ ಮಧ್ಯೆಕಾಶ್ಮೀರ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸಲು ಭಾರತದ ಪ್ರಧಾನಿಯವರು ತಮ್ಮನ್ನು ಕೋರಿದ್ದಾರೆ ಎಂಬ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪ್ರತಿಪಾದನೆ ನಿಜವಾಗಿದ್ದರೆನರೇಂದ್ರ ಮೋದಿಯವರು ರಾಷ್ಟ್ರದ ಹಿತಾಸಕ್ತಿಗಳಿಗೆ ದ್ರೋಹ ಎಸಗಿದ್ದಾರೆ (ಎಂದು ಅರ್ಥ)’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂಗಳವಾರ ಟೀಕಿಸಿದರು.  ಟ್ವೀಟ್ ಒಂದನ್ನು ಮಾಡಿದ ರಾಹುಲ್ ’ವಿದೇಶಾಂಗ ಸಚಿವಾಲಯದ ದುರ್ಬಲ ನಿರಾಕರಣೆಯಿಂದ ಪ್ರಯೋಜನವಿಲ್ಲಟ್ರಂಪ್ ಜೊತೆಗಿನ ತಮ್ಮ ಮಾತುಕತೆಯಲ್ಲಿ ಏನು ನಡೆಯಿತು ಎಂಬುದನ್ನು ಮೋದಿಯವರು ರಾಷ್ಟ್ರಕ್ಕೆ ವಿವರಿಸಬೇಕು’ ಎಂದು ಆಗ್ರಹಿಸಿದರು.   ಮಧ್ಯೆ ಕಾಂಗ್ರೆಸ್ ಪಕ್ಷವು ಕಾಶ್ಮೀರ ವಿಷಯದಲ್ಲಿ ಮೂರನೇ ವ್ಯಕ್ತಿ ಶಾಮೀಲಾಗುವ ಪ್ರಶ್ನೆಯಿಲ್ಲ ಎಂಬ ಭಾರತದ ನಿಲುವನ್ನು ಪುನರುಚ್ಚರಿಸಿದ್ದನ್ನು ಕಾಂಗ್ರೆಸ್ ಸ್ವಾಗತಿಸಿತುಆದರೆ ಟ್ರಂಪ್ ಅವರ ಪ್ರತಿಪಾದನೆ ಬಗ್ಗೆ ಮೋದಿಯವರು ಏಕೆ ಮೌನ ತಾಳಿದ್ದಾರೆ ಎಂದು ಪಕ್ಷ ಪ್ರಶ್ನಿಸಿತು.  ಕಾಶ್ಮೀರ ವಿವಾದ ಇತ್ಯರ್ಥಕ್ಕೆ ಮಧ್ಯಸ್ಥಿಕೆ ವಹಿಸುವಂತೆ ಮೋದಿಯವರು ತಮಗೆ ಮನವಿ ಮಾಡಿದ್ದರು ಎಂಬುದಾಗಿ ಟ್ರಂಪ್ ಅವರು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಭೇಟಿ ಸಂದರ್ಭದಲ್ಲಿ ಹೇಳಿದ್ದನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ತಿರಸ್ಕರಿಸಿತ್ತು.

2019: ನವದೆಹಲಿ: ಅಸ್ಸಾಮ್ ವಿಧಾನಸಭೆಯಲ್ಲಿ ರಾಷ್ಟ್ರೀಯ ಪೌರ ದಾಖಲೆಯನ್ನು (ಎನ್ಆರ್ಸಿಪ್ರಕಟಿಸುವ ಅಂತಿಮ ಗಡುವನ್ನು ಸುಪ್ರೀಂಕೋರ್ಟ್ ಮಂಗಳವಾರ ಒಂದು ತಿಂಗಳ ಅವಧಿಗೆಜುಲೈ ೩೧ರ ಬದಲಿಗೆ ಆಗಸ್ಟ್ ೩೧ರವರೆಗೆ ವಿಸ್ತರಿಸಿತುಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವರ ಹೆಸರುಗಳನ್ನು ತಪ್ಪಾಗಿ ಸೇರಿಸಲಾಗಿದೆ ಅಥವಾ ಕೈಬಿಡಲಾಗಿದೆಯಾದ್ದರಿಂದ ಅಂತಿಮ ದಾಖಲೆ ಪ್ರಕಟಣೆಗೆ ಸಮಯ ಬೇಕು ಎಂದು ಸುಪ್ರೀಂಕೋರ್ಟಿಗೆ ಮನವಿ ಮಾಡಿದ ಬಳಿಕ ಸುಪ್ರೀಂಕೋರ್ಟ್ ಅಂತಿಮ ದಾಖಲೆ ಪ್ರಕಟಣೆಯ ಗಡುವನ್ನು ವಿಸ್ತರಣೆ ಮಾಡಿತುಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜುಲೈ ೧೭ರಂದು ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿ ಬಾಂಗ್ಲಾದೇಶದ ಗಡಿಯಲ್ಲಿರುವ ಅಸ್ಸಾಮಿನ ಜಿಲ್ಲೆಗಳಲ್ಲಿನ ಶೇಕಡಾ ೨೦ರಷ್ಟು ಹೆಸರುಗಳನ್ನು ಮತ್ತು ಉಳಿದ ಜಿಲ್ಲೆಗಳ ಶೇಕಡಾ ೧೦ರಷ್ಟು ಹೆಸರುಗಳನ್ನು ಅಂತಿಮ ರಾಷ್ಟ್ರೀಯ ಪೌರ ದಾಖಲೆಗೆ ಸೇರಿಸಿರುವ ಬಗ್ಗೆ ಮರು ಪರಿಶೀಲನೆ ಮಾಡುವಂತೆ ನಿರ್ದೇಶನ ನೀಡುವಂತೆ ಕೋರಿದ್ದವುಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ಮತ್ತು ನ್ಯಾಯಮೂರ್ತಿ ಆರ್ ಎಫ್ ನಾರಿಮನ್ ಅವರನ್ನು ಒಳಗೊಂಡ ಪೀಠವು ಅಸ್ಸಾಮ್ ರಾಷ್ಟ್ರೀಯ ಪೌರ ದಾಖಲೆ ಸಮನ್ವಯಕಾರ ಪ್ರತೀಕ್ ಹಜೇಲ ಅವರು ಸಲ್ಲಿಸಿದ ವರದಿಗಳನ್ನು ಪರಿಶೀಲಿಸಿ ಆದೇಶವನ್ನು ನೀಡಿತು.  ಕೇಂದ್ರ ಮತ್ತು ಅಸ್ಸಾಮ್ ಸರ್ಕಾರದ ನಿಲುವನ್ನು ಕ್ರಮವಾಗಿ ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಮತ್ತು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಸುಪ್ರೀಂಕೋರ್ಟಿನ ಮುಂದಿಟ್ಟರುಉಭಯ ಸರ್ಕಾರಗಳೂ ಜುಲೈ ೧೯ರಂದು ’ಭಾರತವು ವಿಶ್ವದ ನಿರಾಶ್ರಿತರ ರಾಜಧಾನಿಯಾಗಬಾರದು’ ಎಂದು ಹೇಳಿಅಸ್ಸಾಮ್ ಪೌರ ದಾಖಲೆಯನ್ನು ಪೂರ್ಣಗೊಳಿಸಲು ನೀಡಲಾದ ಜುಲೈ ೩೧ರ ಗಡುವನ್ನು ವಿಸ್ತರಿಸುವಂತೆ ಮನವಿ ಮಾಡಿದ್ದವುಬಾಂಗ್ಲಾದೇಶದ ಗಡಿಭಾಗದ ಜಿಲ್ಲೆಗಳಲ್ಲಿ ರಾಷ್ಟ್ರೀಯ ಪೌರ ದಾಖಲೆಯಲ್ಲಿ ಹಲವಾರು ಅಕ್ರಮ ವಲಸಿಗರ ಹೆಸರುಗಳು ನುಸುಳಿವೆ ಎಂಬ ಗುಮಾನಿಗಳನ್ನು ನಿವಾರಿಸಲು ಮಾದರಿ ಮರುಪರಿಶೀಲನೆ ನಡೆಸಲಾಗುವುದುಇಂತಹ ಮರುಪರಿಶಿಲನೆಯನ್ನು ರಾಜ್ಯ ಸರ್ಕಾರದ ಬೇರೆ ಜಿಲ್ಲೆಗಳ ಅನುಭವಸ್ಥ ಮೊದಲ ದರ್ಜೆ ಅಧಿಕಾರಿಗಳು ನಡೆಸುವಂತೆ ನಿರ್ದೇಶನ ನೀಡಬೇಕೆಂದೂ ಕೇಂದ್ರ ಕೋರಿತ್ತುಮಾದರಿ ಮರುಪರಿಶೀಲನೆಗೆ ಪ್ರಾಥಮಿಕ ರಾಷ್ಟ್ರೀಯ ಪೌರ ದಾಖಲೆ ತಯಾರಿಸಿದ ಸ್ಥಳಕ್ಕೆ ಸಮೀಪದಲ್ಲಿ ಇರದ ಸ್ಥಳವನ್ನು ನಿಗದಿಪಡಿಸುವಂತೆಯೂ ಉಭಯ ಸರ್ಕಾರಗಳು ಕೋರಿದ್ದವುಪ್ರಭಾವಪಕ್ಷಪಾತಬೆದರಿಕೆಗಳು ನಡೆಯದಂತೆ ಎಚ್ಚರ ವಹಿಸಲು ಇಂತಹ ಕ್ರಮ ಅಗತ್ಯ ಎಂದು ಅವು ಹೇಳಿದ್ದವುಭಾರತೀಯ ನಾಗರಿಕರ ಹೆಸರುಗಳನ್ನು ದಾಖಲೆಯಿಂದ ಕೈಬಿಡಲಾಗಿದ್ದು ಅಕ್ರಮ ಬಾಂಗ್ಲಾದೇಶಿ ವಲಸಿಗರ ಹೆಸರುಗಳು ಕರಡುದಾಖಲೆಯಲ್ಲಿ ಸೇರ್ಪಡೆಯಾಗಿದ್ದವು ಎಂದೂ ಸರ್ಕಾರಗಳು ಆಪಾದಿಸಿದ್ದವುಅಸ್ಸಾಮ್  ರಾಷ್ಟ್ರೀಯ ಪೌರ ದಾಖಲೆಯ ಮೊದಲ ಕರಡನ್ನು ೨೦೧೭ರ ಡಿಸೆಂಬರ್ ೩೧ ಮತ್ತು ೨೦೧೮ರ ಜನವರಿ೧ರ ನಡುವಣ ರಾತ್ರಿ ಸುಪ್ರೀಂಕೋರ್ಟಿನ ಆದೇಶದ ಪ್ರಕಾರ ಪ್ರಕಟಿಸಿಲಾಗಿತ್ತು.೨೯ ಕೋಟಿ ಅರ್ಜಿದಾರರ ಪೈಕಿ . ಕೋಟಿ ಜನರ ಹೆಸರನ್ನು ದಾಖಲೆಗೆ ಸೇರ್ಪಡೆ ಮಾಡಲಾಗಿತ್ತು೨೦ನೇ ಶತಮಾನದ ಆದಿಯಿಂದಬಾಂಗ್ಲಾದೇಶದಿಂದ ಹೆಚ್ಚಿನ ಸಂಖ್ಯೆಯಲ್ಲಿ ವಲಸಿರುವ ಬರುತ್ತಿರುವ ಅಸ್ಸಾಂ ರಾಜ್ಯದಲ್ಲಿ ಮಾತ್ರವೇ ರಾಷ್ಟ್ರೀಯ ಪೌರ ದಾಖಲೆಯನ್ನು ತಯಾರಿಸಲಾಗಿದ್ದುಮೊದಲ ದಾಖಲೆಯನ್ನು ೧೯೫೧ರಲ್ಲಿ ತಯಾರಿಸಲಾಗಿತ್ತು.

2018:  ನವದೆಹಲಿ: ರಾಜಸ್ಥಾನದ ಆಳ್ವಾರ್ನಲ್ಲಿ ಇತ್ತೀಚೆಗೆ ಗೋ ಕಳ್ಳಸಾಗಣೆಗಾರನೆಂಬ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬನನ್ನು ಗುಂಪುಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಕೇಂದ್ರ  ವಿತ್ತ ಸಚಿವ ಪಿಯೂಷ್ ಗೋಯಲ್  ಅವರು "ದ್ವೇಷದ ದಲ್ಲಾಳಿ’ ಎಂದು ಟೀಕಿಸಿದರು.  ‘ರಾಜಸ್ಥಾನ ಸರ್ಕಾರವು ಗುಂಪು ಹಿಂಸೆಯ ಅಪರಾಧಿಗಳನ್ನು ಕಠಿಣವಾಗಿ ಶಿಕ್ಷಿಸುವುದಾಗಿ ಹೇಳಿ ಈಗಾಗಲೇ ಚುರುಕಿನ ತನಿಖೆಯನ್ನು ನಡೆಸುತ್ತಿದೆಹಾಗಿದ್ದರೂ ರಾಹುಲ್ ಗಾಂಧಿ ಅವರು ಮೊಸಳೆ ಕಣ್ಣೀರು ಸುರಿಸಿ ಚುನಾವಣಾ ಲಾಭಕ್ಕಾಗಿ ಸಮಾಜವನ್ನು ಒಡೆಯಲು ಯತ್ನಿಸುತ್ತಿದ್ದಾರೆ’ ಎಂದು ಗೋಯಲ್ ಅವರು ಟ್ವಿಟರ್ನಲ್ಲಿ ಬೆಂಕಿ ಉಗುಳಿದರು.  ‘ಪ್ರತಿಬಾರಿಯೂ ಅಪರಾಧ ಸಂಭವಿಸಿದಾಗ ಖುಷಿ ಪಡುವುದನ್ನು ನಿಲ್ಲಿಸಿ’ ಎಂದು ಗೋಯಲ್ ರಾಹುಲ್ ಅವರನ್ನು ಒತ್ತಾಯಿಸಿದರುಆಳ್ವಾರ್ ಗುಂಪು ದಾಳಿಯಲ್ಲಿ ಗಾಯಗೊಂಡು ಜೀವನ್ಮರಣ ಹೋರಾಟ ನಡೆಸುತ್ತಿದ್ದ ವ್ಯಕ್ತಿಯನ್ನು ಕೆಲವೇ ಕೆಲವು ಕಿಮೀಗಳಷ್ಟು ದೂರವಿದ್ದ ಆಸ್ಪತ್ರೆಗೆ ಒಯ್ಯಲು ಪೊಲಿಸರು ಮೂರು ಗಂಟೆಗಳನ್ನು ತೆಗೆದುಕೊಂಡರು ಎಂದು ರಾಹುಲ್ ಗಾಂಧಿ ಆಪಾದಿಸಿದ್ದರು. ‘’ಕೇವಲ  ಕಿಮೀ ದೂರವಿದ್ದ ಆಸ್ಪತ್ರೆಗೆ ಗುಂಪುದಾಳಿಯಿಂದ ಗಾಯಗೊಂಡ ರಕ್ಬರ್ ಖಾನ್ ಅವರನ್ನು ಒಯ್ಯಲು ಆಳ್ವಾರ್ ಪೊಲೀಸರು  ಗಂಟೆ ತೆಗೆದುಕೊಂಡರುಏಕೆಮಾರ್ಗಮಧ್ಯದಲ್ಲಿ ಅವರು ಚಹಕ್ಕಾಗಿ ವಾಹನ ನಿಲ್ಲಿಸಿದರುಇದು ಮೋದಿ ಕ್ರೌರ್ಯದ ’ಹೊಸ ಭಾರತ’, ಇಲ್ಲಿ ಮಾನವೀಯತೆಯ ಜಾಗವನ್ನು ದ್ವೇಷ ಆಕ್ರಮಿಸಿದೆ ಮತ್ತು ಜನರನ್ನು ಚಚ್ಚಿ ಕೊಲ್ಲಲಾಗುತ್ತಿದೆ’ ಎಂದು ಕಾಂಗ್ರೆಸ್ ಅಧ್ಯಕ್ಷ ಟ್ವೀಟ್ ಮಾಡಿದ್ದರು.  ‘ರಾಜ್ಯ ಸರ್ಕಾರ ಈಗಾಗಲೇ ಸೂಕ್ತವಾದ ಕಠಿಣ ಕ್ರಮ ಕೈಗೊಂಡಿದೆಕಾಂಗ್ರೆಸ್ ಅಧ್ಯಕ್ಷರು ಮೊಸಳೆ ಕಣ್ಣೀರು ಸುರಿಸುವುದನ್ನು ನಿಲ್ಲಿಸಬೇಕು’ ಎಂದು ಗೋಯಲ್ ಸೂಚಿಸಿದರುಇದೇ ವೇಳೆ ಕೇಂದ್ರ ಸಚಿವೆಯಾಗಿರುವ ಬಿಜೆಪಿ ನಾಯಕಿ ಸ್ಮತಿ ಇರಾನಿ ಅವರು ಕೂಡ ತಮ್ಮ ಟ್ವಿಟರ್ ಖಾತೆಯಲ್ಲಿ "ರಾಹುಲ್ ಗಾಂಧಿ ಅವರು ರಾಜಕೀಯ ಲಾಭಕ್ಕಾಗಿ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ” ಎಂದು ಆರೋಪಿಸಿದರು.  "೧೯೮೪ರ ಸಿಖ್ ವಿರೋಧಿ ಹಿಂಸೆಯಲ್ಲಿ ರಾಹುಲ್ ಗಾಂಧಿ ಕುಟುಂಬ  ಘೋರ ಪ್ರಕರಣದ ನೇತೃತ್ವವನ್ನೇ ವಹಿಸಿತ್ತುಮಾತ್ರವಲ್ಲದೆ ಭಾಗಲ್ಪುರ ಮತ್ತು ನೆಲ್ಲೀ ಹಾಗೂ ಅಂತಹ ಇತರ ಪ್ರಕರಣಗಳಲ್ಲಿ ಕೂಡ ಕಾಂಗ್ರೆಸ್ ಪಕ್ಷ  ಹಿಂಸೆಯ ರೂವಾರಿಯಾಗಿತ್ತುರಾಹುಲ್ ಅವರು ತಮ್ಮ ರಾಜಕೀಯ ಲಾಭಕ್ಕಾಗಿ ಸಮಾಜವನ್ನು ಒಡೆಯುವ ಒಂದೇ ಒಂದು ಅವಕಾಶವನ್ನು ಕೂಡ ಬಿಟ್ಟುಕೊಡುತ್ತಿಲ್ಲ’ ಎಂದು ಇರಾನಿ ಟೀಕಿಸಿದರು.  ಹರಿಯಾಣದ ಮೇವತ್ ಜಿಲ್ಲೆಯ ಕೊಲ್ಗಾಂವ್ ಗ್ರಾಮದ ಮುಸ್ಲಿಮ್ ಡೈರಿ ಮಾಲೀಕ ರಕ್ಬಾರ್ ಖಾನ್ ಅವರನ್ನು ರಾಜಸ್ಥಾನದ ಆಳ್ವಾರ್ ಜಿಲ್ಲೆಯಲ್ಲಿ  ಮಂದಿಯ ಗುಂಪೊಂದು ಅಕ್ರಮ ದನ ಸಾಗಣೆ ಮಾಡುತ್ತಿರುವುದಾಗಿ ಶಂಕಿಸಿ ಗುಂಪು ಹತ್ಯೆ ಗೈದಿತ್ತು.  ೨೮ರ ಹರೆಯದ ವ್ಯಕ್ತಿಯ ಗುಂಪುಹತ್ಯೆ ಘಟನೆ ನಡೆದ ಕೆಲವೇ ಗಂಟೆಗಳ ಬಳಿಕ ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘ್ವಾಲ್ ಅವರು ಹೆಚ್ಚುತ್ತಿರುವ ಮೋದಿ ಜನಪ್ರಿಯತೆಗೂ  ಘಟನೆಗೂ ನಂಟು ಬೆಸೆದು ಬಿಜೆಪಿ ಮತ್ತು ಕೇಂದ್ರ ಸರ್ಕಾರಕ್ಕೆ ೨೦೧೯ರ ಲೋಕಸಭಾ ಚುನಾವಣೆಗೆ ಮುನ್ನ ಮಸಿ ಬಳಿಯಲು ಸಂಚು ನಡೆದಿದೆ ಎಂದು ಆಪಾದಿಸಿದ್ದರು.  ಗುಂಪು ಹತ್ಯೆಯನ್ನು ಅನುಸರಿಸಿ ರಾಜಸ್ಥಾನ ಪೊಲೀಸರು ಇಬ್ಬರು ಆರೋಪಿಗಳಾದ ಧರ್ಮೇಂದ್ರ ಯಾದವ್ ಮತ್ತು ಪರಮಜೀತ್ ಸಿಂಗ್ ಅವರನ್ನು ಶನಿವಾರ ಬಂಧಿಸಿದ್ದುನರೇಶ ಸಿಂಗ್ ಎಂಬ ಮೂರನೇ ಆರೋಪಿಯನ್ನು ಬಳಿಕ ಬಂಧಿಸಿದರು.  ಮೂರೂ ಮಂದಿ ಆರೋಪಿಗಳನ್ನು ರಾಮಗಢ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಅವರ ಮುಂದೆ ಹಾಜರು ಪಡಿಸಲಾಗಿದ್ದುನ್ಯಾಯಾಲಯವು ಅವರನ್ನು ಐದು ದಿನಗಳ ಅವಧಿಗೆ ಪೊಲೀಸ್ ವಶಕ್ಕೆ ನೀಡಿತ್ತು೨೦೧೭ರಲ್ಲಿ ಪೆಹ್ಲು ಖಾನ್ ಎಂಬ ಡೈರಿ ರೈತನೊಬ್ಬನನ್ನು ಅಕ್ರಮ ಜಾನುವಾರು ಸಾಗಣೆ ಮಾಡುತ್ತಿರುವ ಶಂಕೆಯಲ್ಲಿ ರಾಜಸ್ಥಾನದ ಆಳ್ವಾರ್ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಂಪು ದಾಳಿಯಲ್ಲಿ ಹತ್ಯೆ ಮಾಡಲಾಗಿತ್ತು.

2018: ನವದೆಹಲಿರಫೇಲ್ ಯುದ್ದ ವಿಮಾನ ವ್ಯವಹಾರದ ವಿವರಗಳಿಗೆ ಸಂಬಂಧಿಸಿದಂತೆ ಲೋಕಸಭೆಯನ್ನು ದಾರಿ ತಪ್ಪಿಸಿದ್ದಕ್ಕಾಗಿ ರಕ್ಷಣಾ ಸಚಿವ ನಿರ್ಮಲಾ ಸೀತಾರಾಮನ್ ವಿರುದ್ಧ ಹಕ್ಕುಚ್ಯುತಿ ನಿರ್ಣಯ ತರುವುದಾಗಿ ಕಾಂಗ್ರೆಸ್ ಪ್ರಕಟಿಸಿತು.  ‘ಬೆಲೆಯನ್ನು ಬಹಿರಂಗ ಪಡಿಸಲು ಸರ್ಕಾರಕ್ಕೆ ಅವಕಾಶ ನೀಡದಂತಹ ಯಾವುದೇ ವಿಷಯ ರಕ್ಷಣಾ ಒಪ್ಪಂದದಲಿ ಇಲ್ಲ’ ಎಂಬುದಾಗಿ ಮಾಜಿ ರಕ್ಷಣಾ ಸಚಿವ .ಕೆಆಂಟನಿ ಅವರು ಹೇಳಿದ್ದಾರೆಫ್ರೆಂಚ್ ನಿರ್ಮಿತ ಮಿರಾಜ್ ವಿಮಾನ ಸೇರಿದಂತೆ ಹಲವಾರು ವ್ಯವಹಾರಗಳ ಮೌಲ್ಯವನ್ನು ತಾನು ಬಹಿರಂಗ ಪಡಿಸಿದ್ದೇನೆ ಎಂದು ಅವರು ದೃಢ ಪಡಿಸಿದರು.  ‘ ಘಟನೆ ಲೋಕಸಭೆಯಲ್ಲಿ ಘಟಿಸಿರುವುದರಿಂದ ಹಕ್ಕುಚ್ಯುತಿಗೆ ಸಂಬಂಧಿಸಿದಂತೆ ಸದನದ ಸದಸ್ಯರು ಸೂಕ್ತ ಕ್ರಮ ಕೈಗೊಳ್ಳುವರು’ ಎಂದು ರಾಜ್ಯಸಭೆಯ ಕಾಂಗ್ರೆಸ್ ಸದಸ್ಯ ಆನಂದ ಶರ್ಮ ಹೇಳಿದರು. ‘ಬೆಲೆಯನ್ನು ಮಹಾಲೇಖಪಾಲ (ಸಿಎಜಿಕಂಪ್ಟ್ರೋಲರ್ ಅಂಡ್ ಅಡಿಟರ್ ಜನರಲ್ಮತ್ತು ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ತಿಳಿಸಬೇಕು ಎಂದು ಸಂವಿದಾನವೇ ಹೇಳುತ್ತದೆ’ ಎಂದೂ ಆಂಟನಿ ಹೇಳಿದರುಪಕ್ಷವು ಹಕ್ಕುಚ್ಯುತಿ ನಿರ್ಣಯವನ್ನು ತರಲಿದೆಆದರೆ ಕೇವಲ ರಕ್ಷಣಾ ಸಚಿವರ ವಿರುದ್ಧ ಹಕ್ಕುಚ್ಯುತಿ ನಿರ್ಣಯ ಮಂಡಿಸಬೇಕೆ ಅಥವಾ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧವೂ ಹಕ್ಕುಚ್ಯುತಿ ನಿರ್ಣಯ ತರಬೇಕೆ ಎಂಬ ಬಗ್ಗೆ ಇನ್ನೂ ನಿರ್ಧರಿಸಲಾಗಿಲ್ಲ ಎಂದು ಕಾಂಗ್ರೆಸ್ ಲೋಕಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ನುಡಿದರು.  ‘ರಫೇಲ್ ವ್ಯವಹಾರಕ್ಕೆ ಸಂಬಂಧಿಸಿದಂತೆ ಮೋದಿ ಮತ್ತು ಶ್ರೀಮತಿ ಸೀತಾರಾಮನ್ ಅವರು ದೇಶಕ್ಕೆ ಸುಳ್ಳು ಹೇಳಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಅವಿಶ್ವಾಸ ನಿರ್ಣಯದ ಚರ್ಚೆಯ ವೇಳೆಯಲ್ಲಿ ಮಾಡಿದ ತಮ್ಮ ಭಾಷಣದಲ್ಲಿ ಆಪಾದಿಸಿದ್ದರು.  ಇದಕ್ಕೆ ಉತ್ತರ ನೀಡಿದ ಸೀತಾರಾಮನ್ ಅವರು ಆಗಿನ ರಕ್ಷಣಾ ಸಚಿವರು ಒಪ್ಪಂದದ ರಹಸ್ಯಕ್ಕೆ ಸಂಬಂಧಿಸಿದಂತೆ ಸಹಿ ಹಾಕಿದ್ದು  ಒಪ್ಪಂದವು ಸ್ಪಷ್ಟವಾಗಿ ವಿಮಾನಗಳ ಮೌಲ್ಯವನ್ನು ಬಹಿರಂಗ ಪಡಿಸುವಂತಿಲ್ಲ ಎಂದು ಹೇಳಿದೆ ಎಂದು ತಿಳಿಸಿದ್ದರು.

2018:  ಪಾಟ್ನಾ: ಬಿಹಾರಿನ ಮುಜಾಫ್ಫರಪುರದ ಸರ್ಕಾರಿ ನೆರವಿನ ಮಕ್ಕಳ ಅಶ್ರಯ ಧಾಮದಲ್ಲಿ ಕನಿಷ್ಠ ೩೦ಕ್ಕೂ ಹೆಚ್ಚು ಮಂದಿ ಬಾಲಕಿಯರು ನಿತ್ಯಹಿಂಸೆಕ್ರೌರ್ಯಅತ್ಯಾಚಾರಗಳ ಪರಿಣಾಮವಾಗಿ ಖಿನ್ನತೆಗೆ ಒಳಗಾಗಿದ್ದು ಸ್ವತಃ ಗಾಯಮಾಡಿಕೊಳ್ಳುವಿಕೆ ಇಲ್ಲವೇ ಆತ್ಯಹತ್ಯೆ ಯತ್ನ ನಡೆಸುತ್ತಿರುವ ಪ್ರಕರಣ ವರದಿಯಾಯಿತುಕನಿಷ್ಠ ಎರಡು ಪ್ರತಿಷ್ಠಿತ ವೈದ್ಯಕೀಯ ಕಾಲೇಜುಗಳಾದ ನಲಂದಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ (ಎನ್ ಎಂಸಿಎಚ್ಹಾಗೂ ಕೊಯಿಲ್ವಾರ್ ಮಾನಸಿಕ ಆಸ್ಪತ್ರೆಯ ವೈದ್ಯರು  ಬಾಲಕಿಯರ ಆರೋಗ್ಯದಲ್ಲಿ ಯಾವುದೇ ಸುಧಾರಣೆಯೂ ಕಾಣುತ್ತಿಲ್ಲ ಎಂದು ಹೇಳಿದ್ದುಹೈದರಾಬಾದ್ ಮೂಲದ ಎನ್ ಫೋಲ್ಡ್ ಇಂಡಿಯಾ ಮತ್ತು ದೆಹಲಿಯ ಏಮ್ಸ್ ನನ್ನು ನೆರವಿಗಾಗಿ ಸಂಪರ್ಕಿಸಿದರು.  ಎನ್ ಫೋಲ್ಡ್ ಇಂಡಿಯಾ ಮತ್ತು ಏಮ್ಸ್  ವೈದ್ಯರು ಮತ್ತು ಮಾನಸಿಕ ತಜ್ಞರನ್ನು ಒಳಗೊಂಡ ವಿಶೇಷ ತಜ್ಞರ ತಂಡ ಸೋಮವಾರ ಇಲ್ಲಿಗೆ ಆಗಮಿಸಿದೆ ಎಂದು ರಾಜ್ಯದ ಸಮಾಜ ಕಲ್ಯಾಣ ಇಲಾಖೆಯ ನಿರ್ದೇಶಕ ರಾಜ್ ಕುಮಾರ್ ಹೇಳಿದರು.  ಸಣ್ಣ ಪತ್ರಕರ್ತ ಮತ್ತು ಸ್ಥಳೀಯವಾಗಿ ಪ್ರಬಲ ವ್ಯಕ್ತಿಯಾಗಿರುವ ಬೃಜೇಶ್ ಥಾಕುರ್ ಮಾಲೀಕತ್ವದ ಸರ್ಕಾರೇತರ ಸಂಘಟನೆ ಸೇವಾ ಸಂಕಲ್ಪ ಏವಂ ವಿಕಾಸ ಸಮಿತಿ ನಡೆಸುತ್ತಿರುವ ಮುಜಾಫ್ಫರಪುರದ ’ಬಾಲಿಕಾ ಗೃಹದಲ್ಲಿ ೪೨ ಬಾಲಕಿಯರಿದ್ದುಅವರ ಮೇಲೆ ನಡೆಯುತ್ತಿರುವ ಲೈಂಗಿಕ ಶೋಷಣೆಯನ್ನು ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ (ಟಿಐಎಸ್ ಎಸ್ವರದಿಯು ಬಹಿರಂಗ ಪಡಿಸಿದ ಬಳಿಕ  ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಕ್ಕಾಗಿ ಬೃಜೇಶ್ ಥಾಕುರ್ ಮತ್ತು ಇತರ ಒಂಬತ್ತು ಮಂದಿಯನ್ನು ಬಂಧಿಸಲಾಗಿತ್ತುಏಳರ ಹರೆಯದ ಬಾಲಕಿಯೊಬ್ಬಳೂ ಸೇರಿದಂತೆ ಅಪ್ರಾಪ್ತ ವಯಸ್ಸಿನ ೨೪ ಮಂದಿ ಬಾಲಕಿಯರು ಅತ್ಯಾಚಾರಕ್ಕೆ ಒಳಗಾಗಿದ್ದು ಅವರನ್ನು ದೈಹಿಕವಾಗಿಯೂ ಚಿತ್ರಹಿಂಸೆಗೆ ಗುರಿಪಡಿಸಲಾಗಿದೆ ಎಂದು ವೈದ್ಯಕೀಯ ತಪಾಸಣೆಯು ಖಚಿತ ಪಡಿಸಿತುಲೈಂಗಿಕ ಶೋಷಣೆಯ ಜೊತೆಗೆ  ಬಾಲಕಿಯರ ದೇಹದಲ್ಲಿ ಸುಟ್ಟ ಹಾಗೂ ಗಾಯಗೊಳಿಸಿದ ಗುರುತುಗಳು ಕಂಡು ಬಂದಿದ್ದು ಅವರನ್ನು ನಿರಂತರ ಚಿತ್ರಹಿಂಸೆಗೆ ಗುರಿಮಾಡುತ್ತಿದ್ದುದು ವೈದ್ಯಕೀಯ ತಪಾಸಣೆಗಳಿಂದ ಸ್ಪಷ್ಟವಾಗಿದೆ ಎಂದು ಟಿಐಎಸ್ ಎಸ್ ವರದಿ ಹೇಳಿತುಮುಜಾಫ್ಫರಪುರ ಆಶ್ರಯಧಾಮದ ಬಾಲಕಿಯರ ವಿರುದ್ಧದ  ಅಪರಾಧ ಕೃತ್ಯದಲ್ಲಿ ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯರು ಮತ್ತು ಸಂಸ್ಥೆಯ ಮುಖ್ಯಸ್ಥನೇ ಶಾಮೀಲಾಗಿರುವುದಾಗಿ ಆರೋಪಿಸಲಾಗಿದ್ದುಬಾಲಕಿಯರನ್ನು ರಕ್ಷಿಸುವ ಹೊಣೆಗಾರಿಕೆ ಹೊರಬೇಕಾಗಿದ್ದವರೇ ’ರಾಕ್ಷಸರಾದ ಘಟನೆ  ಪ್ರಕರಣದಲ್ಲಿ ಘಟಿಸಿದೆ ಎಂದು ವರದಿ ತಿಳಿಸಿತುಪ್ರತಿಭಟಿಸಿದ ಬಾಲಕಿಯೊಬ್ಬಳನ್ನು ಥಳಿಸಿ ಕೊಂದು ಆಶ್ರಯಧಾಮದ ಆವರಣದಲ್ಲೇ ಹುಗಿಯಲಾಗಿದೆ ಎಂದೂ ವರದಿ ಹೇಳಿತುಆರ್ ಜೆಡಿ ನಾಯಕ ತೇಜಸ್ವಿ ಯಾದವ್ ಅವರು ಅಪರಾಧ ನಿಗ್ರಹ ನಿಟ್ಟಿನಲ್ಲಿ ವಿಫಲವಾದುದಕ್ಕಾಗಿ ರಾಜ್ಯ ಆಡಳಿತವನ್ನು ತರಾಟೆಗೆ ತೆಗೆದುಕೊಂಡು ಟ್ವೀಟ್ ಮಾಡಿರುವುದು ರಾಜ್ಯದ ಮುಖ್ಯಮಂತ್ರಿ ನಿತೀಶ್ ಕುಮಾರ್ ಸರ್ಕಾರವನ್ನು ಇನ್ನಷ್ಟು ಒತ್ತಡದಲ್ಲಿ ಸಿಲುಕಿಸಿದೆಪ್ರಕರಣಕ್ಕೆ ಸಂಬಂಧಿಸಿದಂತೆ ಮುಜಾಫ್ಫರಪುರ ಪೊಲೀಸರು ವಾರದ ಒಳಗೆ ದೋಷಾರೋಪ ಪಟ್ಟಿ (ಚಾರ್ಜ್ಶೀಟ್ಸಲ್ಲಿಸುವ ಸಾಧ್ಯತೆಗಳಿವೆ.  ಶಂಕಿತರ ವಿರುದ್ಧ ಕ್ರಮ ಕೈಗೊಂಡ ಬೆನ್ನಲ್ಲೇ ಮೇ ೩೧ರಂದು ಆಶ್ರಯಧಾಮದ ಎಲ್ಲ ಬಾಲಕಿಯರನ್ನೂ ಪಟ್ನಾ ಮತ್ತು ಮಧುಬನಿಗೆ ಅಧಿಕಾರಿಗಳು ಸ್ಥಳಾಂತರಿಸಿದ್ದಾರೆಆದರೆ  ಬಳಿಕ ಕೆಲವೇ ದಿನಗಳಲ್ಲಿ ಅವರಲ್ಲಿ ಬಹುತೇಕ ಬಾಲಕಿಯರಲ್ಲಿ ತೀವ್ರ ಖಿನ್ನತೆಯ ಲಕ್ಷಣಗಳು ಕಂಡು ಬಂದಿವೆ ಎಂದು ಮೂಲಗಳು ಹೇಳಿವೆಚಿಕಿತ್ಸೆಯ ಕಾಲದಲ್ಲಿ  ಬಾಲಕಿಯರು ತೀವ್ರವಾಗಿ ವ್ಯಗ್ರರಾಗುತ್ತಿದ್ದಾರೆ ಎಂದು ರಾಜ್ ಕುಮಾರ್ ಹೇಳಿದರು.   ಬಾಲಕಿಯರ ನರಕವಾಸದ ಅನುಭವವನ್ನು ವಿವರಿಸಿದ ರಾಜ್ ಕುಮಾರ್, ’ ಬಾಲಕಿಯರಿಗೆ ಪ್ರತಿನಿತ್ಯ ಮಾದಕ ದ್ರವ್ಯದ ಚುಚ್ಚುಮದ್ದು ನೀಡಿ ಬಳಿಕ ಅತ್ಯಾಚಾರ ನಡೆಸಲಾಗುತ್ತಿತ್ತುಅವರ ದೇಹದಲ್ಲಿ ಇಂಜೆಕ್ಷನ್ ಗಾಯಗಳು ಕಂಡು ಬಂದಿವೆಮಾದಕ ದ್ರವ್ಯದ ಪರಿಣಾಮವಾಗಿ ಅವರೀಗ ವ್ಯಗ್ರ ವರ್ತನೆ ತೋರುತ್ತಿದ್ದಾರೆಕೆಲವರು ತಮ್ಮ ತಲೆಗಳನ್ನು ಎದುರು ಕಾಣಿಸುವ ಯಾವುದೇ ಲೋಹಕ್ಕೆ ಚಚ್ಚಲು ಯತ್ನಿಸುತ್ತಿದ್ದಾರೆಎದುರಿಗೆ ಎಲೆಕ್ಟ್ರಿಕ್ ಸ್ವಿಚ್ ಬೋರ್ಡ್ ಕಂಡರೂ ಅದಕ್ಕೆ ತಲೆ ಚಚ್ಚಿಕೊಳ್ಳಲು ಯತ್ನಿಸುತ್ತಿದ್ದಾರೆ’ ಎಂದು ಅವರು ನುಡಿದರು.  ಸಂತ್ರಸ್ಥ ಬಾಲಕಿಯರ ಜೊತೆ ಕಾಲ ಕಳೆದಿರುವ ಯುನಿಸೆಫ್  ಸುನಿಲ್ ಝಾ ಅವರು ’ನಿರಂತರ ಚಿತ್ರಹಿಂಸೆಯು ಅವರ ಹೃದಯಗಳನ್ನು ಛಿದ್ರಗೊಳಿಸಿದೆಸಾಮಾನ್ಯ ಬದುಕಿನ ಭರವಸೆಯನ್ನೇ ಅವರು ಕಳೆದುಕೊಂಡಿದ್ದಾರೆ’ ಎಂದು ಹೇಳಿದರುಚಾರ್ಜ್ಶೀಟ್ ಸಲ್ಲಿಕೆಯ ಬಳಿಕ ನ್ಯಾಯಾಲಯದಲ್ಲಿ ಸಾಕ್ಷ್ಯ ನೀಡಬೇಕಾಗಿರುವುದರಿಂದ  ಬಾಲಕಿಯರ ಸ್ಥಿತಿ ಸುಧಾರಣೆಗೆ ಅಧಿಕಾರಿಗಳು ಆದ್ಯತೆ ನೀಡಿದರು.

2018: ನವದೆಹಲಿ: ಧರಣಿಪ್ರತಿಭಟನೆಸಾರ್ವಜನಿಕ ಭಾಷಣ ಕಾರ್ಯಕ್ರಮ ಇತ್ಯಾದಿಗಳಿಗೆ ಖ್ಯಾತಿ ಪಡೆದಿರುವ ದೆಹಲಿಯ  ಜಂತರ್ ಮಂತರ್ ಮತ್ತು ಬೋಟ್ ಕ್ಲಬ್ ಪ್ರದೇಶಗಳಲ್ಲಿ ಪ್ರತಿಭಟನೆಧರಣಿ ನಡೆಸುವುದರ ವಿರುದ್ಧ ಸರ್ಕಾರ ವಿಧಿಸಿದ್ದ ಸಂಪೂರ್ಣ ನಿಷೇಧವನ್ನು ಸುಪ್ರೀಂ ಕೋರ್ಟ್ ತೆರವುಗೊಳಿಸಿತು.  ಸಾರ್ವಜನಿಕರು ಸೇರುವ ಇಂತಹ ತಾಣಗಳಲ್ಲಿ ಪ್ರತಿಭಟನೆಧರಣಿಗಳಿಗೆ ಸಂಪೂರ್ಣ ನಿಷೇಧ ಹೇರುವಂತಿಲ್ಲ ಎಂದು ನ್ಯಾಯಾಲಯ ಹೇಳಿತುನಿಷೇಧಕ್ಕೆ ಸಂಬಂಧಿಸಿದಂತೆ ಎರಡು ತಿಂಗಳ ಒಳಗಾಗಿ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಿ ತನ್ನ ಮುಂದೆ ಮಂಡಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್  ನಿರ್ದೇಶಿಸಿತು.  ಪರಸ್ಪರ ವಿರೋಧಾತ್ಮಕವಾಗಿರುವ ಪ್ರತಿಭಟನೆಯ ಹಕ್ಕು ಮತ್ತು ಶಾಂತಿಯುತ ಬಾಳ್ವೆಯ ಪ್ರಜಾ ಹಕ್ಕು ಇವುಗಳ ನಡುವೆ ಸಮತೋಲನ ಕಾಯ್ದುಕೊಳ್ಳುವ ಅಗತ್ಯವಿದೆ ಎಂದು ನ್ಯಾಯಮೂರ್ತಿಗಳಾದ   ಕೆ ಸಿಕ್ರಿ ಮತ್ತು ಅಶೋಕ್ ಭೂಷಣ್ ಅವರನ್ನು ಒಳಗೊಂಡ ಸುಪ್ರೀಂಕೋರ್ಟ್ ಪೀಠ ಹೇಳಿತು.  ಜಂತರ್ ಮಂತರ್ ಮತ್ತು ಬೋಟ್ ಕ್ಲಬ್ನಂತಹ ಪ್ರದೇಶಗಳಲ್ಲಿ ಎಲ್ಲ ರೀತಿಯ ಪ್ರತಿಭಟನೆಗಳನ್ನೂ ನಿಷೇಧಿಸುವ ನಿರ್ಧಾರವನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್ ಜಿಟಿಕೈಗೊಂಡಿತ್ತುಅದನ್ನು ಮಜ್ದೂರ್ ಕಿಸಾನ್ ಶಕ್ತಿ ಸಂಘಟನ್ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದವು

2018: ನವದೆಹಲಿ: ವದಂತಿಗಳಿಗೆ ಕಿವಿಗೊಟ್ಟು ಮಕ್ಕಳ ಕಳ್ಳರೆಂದುಕೋಳಿ ಕಳ್ಳರೆಂದು ಕೆಲವು ವ್ಯಕ್ತಿಗಳ ಮೇಲೆ ಗುಂಪು ಹಲ್ಲೆ ನಡೆಸಿ ಹತ್ಯೆ ನಡೆಸುವ ಪ್ರಕರಣಗಳು ಹೆಚ್ಚುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರಇದನ್ನು ತಡೆಗಟ್ಟಲು ಮಾರ್ಗೋಪಾಯಗಳನ್ನು ಕಂಡುಹಿಡಿಯಲು ಮುಂದಾಯಿತು.   ಸಂಬಂಧ ಕೇಂದ್ರ ಗೃಹ ಕಾರ್ಯದರ್ಶಿ ರಾಜೀವ್ ಗೌಬಾ ಅಧ್ಯಕ್ಷತೆಯಲ್ಲಿ ಅಧ್ಯಯನ ಸಮಿತಿ ಹಾಗೂ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿಯನ್ನು ಕೇಂದ್ರ ಸರ್ಕಾರ ರಚಿಸಿತುಗುಂಪು ದಾಳಿಗಳನ್ನು ನಿಯಂತ್ರಿಸುವ ಬಗ್ಗೆ ಅಧ್ಯಯನ ಸಮಿತಿಯು ಸಲಹೆಸೂಚನೆಶಿಫಾರಸುಗಳನ್ನು ಉನ್ನತ ಮಟ್ಟದ ಸಮಿತಿಗೆ ಸಲ್ಲಿಸಲಿದೆ.  ಕಾನೂನುನ್ಯಾಯಾಂಗ ಮತ್ತು ಸಾಮಾಜಿಕ ಮತ್ತು ಸಬಲೀಕರಣ ಇಲಾಖೆಯ ಕಾರ್ಯದರ್ಶಿಗಳುತಜ್ಞರು ಅಧ್ಯಯನ ಸಮಿತಿಯ ಸದಸ್ಯರಾಗಿದ್ದಾರೆ.  ರಾಜೀವ್ ಗೌಬಾ ನೇತೃತ್ವದ ಸಮಿತಿಯುವ ನೀಡುವ ವರದಿಯನ್ನು ಪರಿಶೀಲಿಸಿ ಅಂತಿಮ ವರದಿಯನ್ನು ಗೃಹ ಸಚಿವ ರಾಜ್ನಾಥ್ ಸಿಂಗ್ ನೇತೃತ್ವದ ಉನ್ನತ ಮಟ್ಟದ ಸಚಿವರ ಸಮಿತಿಯು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲಿಸಲಿದೆ.
2018: ಮುಂಬೈ: ಚಾಣಕ್ಯನ ನಿಜವಾದ ಬೋಧನೆಗಳನ್ನು ಅಳವಡಿಸಿಕೊಳ್ಳುವಂತೆ ಮತ್ತು ಅವನ ’ನೀತಿಯನ್ನು ರಾಷ್ಟ್ರದ ಹಿತಕ್ಕಾಗಿ ಬಳಸಿಕೊಳ್ಳುವಂತೆ ಶಿವಸೇನಾ ಅಧ್ಯಕ್ಷ ಉದ್ಧವ್ ಠಾಕ್ರೆ ಭಾರತೀಯ ಜನತಾ ಪಕ್ಷ (ಬಿಜೆಪಿನಾಯಕತ್ವಕ್ಕೆ ತಿಳಿ ಹೇಳಿದರುಸಾಮ್ನಾ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಬಿಜೆಪಿಗೆ  ಬೋಧನೆ ಮಾಡಿರುವ ಉದ್ಧವ್ ಠಾಕ್ರೆ, ’ಚಾಣಕ್ಯನ ಬೋಧನೆಗಳನ್ನು ಆಧುನಿಕ ಚಾಣಕ್ಯರು ನಿಜವಾಗಿಯೂ ಅಳವಡಿಸಿಕೊಂಡಿದ್ದಾರೆಯೇ’ ಎಂದು ಪ್ರಶ್ನಿಸಿದರು.  ‘ಮೂಲ ಪ್ರಶ್ನೆ ಏನೆಂದರೆ  ಆಧುನಿಕ ಚಾಣಕ್ಯರು ತಮ್ಮ ನೀತಿಯನ್ನು ರಾಷ್ಟ್ರಕ್ಕಾಗಿ ಬಳಸುತ್ತಿದ್ದಾರೆಯೇ ಅಥವಾ ತಮ್ಮ ಪಕ್ಷಕ್ಕಾಗಿ ಬಳಸುತ್ತಿದ್ದಾರೆಯೇ ಎಂಬುದು’ ಎಂದು ಅವರು ನುಡಿದರು.
 
2017: ನವದೆಹಲಿನಿರ್ಗಮಿತ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರಿಗೆ ಸಂಸತ್ತು ಈದಿನ ಗೌರವ ಪೂರ್ವಕ ವಿದಾಯ ಹೇಳಿತುತಮ್ಮ ಅಧಿಕಾರ ಅವಧಿಯಲ್ಲಿ ಕಾರ್ಯ ನಿರ್ವಹಿಸಲು ಬೆಂಬಲ ನೀಡಿದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಎಲ್ಲರಿಗೂ ಅವರು ಧನ್ಯವಾದ ಹೇಳಿದರುಸಂಸತ್ತಿನಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭದ ವೇಳೆ ವಿದಾಯ ಭಾಷಣ ಮಾಡಿದ ಪ್ರಣವ್ ಮುಖರ್ಜಿ ಅವರು, “ನನ್ನ ಅಧಿಕಾರವಧಿಯಲ್ಲಿ ನಾನು ಉತ್ತಮವಾಗಿ ಕಾರ್ಯನಿರ್ವಹಿಸಲು ಎಲ್ಲರೂ ಬೆಂಬಲಿಸಿದ್ದು ಸಂತಸ ತಂದಿದೆಇನ್ನು ನನಗೆ ಅದ್ಧೂರಿ ಬೀಳ್ಕೊಡುಗೆ ನೀಡಿದವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ’ ಎಂದರು.  ಸಂಸತ್ತಿನಲ್ಲಿ ಐತಿಹಾಸಿಕ ಸರಕು ಮತ್ತು ಸೇವಾ ತೆರಿಗೆ ಮಸೂದೆಯನ್ನು  ಅಂಗೀಕರಿಸಿರುವುದು ಪ್ರಜಾಪ್ರಭುತ್ವದ ಪ್ರಬುದ್ಧತೆಯನ್ನು ಮತ್ತು ದೇಶದ ಆಡಳಿತ ವ್ಯವಸ್ಥೆಯ ಒಗ್ಗಟ್ಟನ್ನು ತೋರಿಸುತ್ತದೆ ಎಂದು ಹೇಳಿದರು
2017: ಲಂಡನ್‌: ಐತಿಹಾಸಿಕ ಲಾರ್ಡ್ಸ್‌ ಮೈದಾನದಲ್ಲಿ  ನಡೆದ ಐಸಿಸಿ ಮಹಿಳಾ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ತಂಡವನ್ನು 9 ರನ್ ಗಳ ಅಂತರದಲ್ಲಿ ಮಣಿಸಿದ ಇಂಗ್ಲೆಂಡ್ ವಿಶ್ವಕಪ್ಪನ್ನು ಮುಡಿಗೇರಿಸಿಕೊಂಡಿತುಇಂಗ್ಲೆಂಡ್ ನೀಡಿದ್ದ 228 ರನ್ ಗಳ  ಮೊತ್ತವನ್ನು ಬೆನ್ನಟ್ಟಿದ  ಮಿಥಾಲಿ ರಾಜ್ ಪಡೆ ಕೇವಲ 219 ರನ್ ಗಳಿಸಿ ಆಲೌಟ್ ಆಯಿತು ಮೂಲಕ ಇಂಗ್ಲೆಂಡ್ ವಿರುದ್ಧ 9 ರನ್ ಗಳ ಅಂತರದಲ್ಲಿ ವಿರೋಚಿತ ಸೋಲು ಅನುಭವಿಸಿತು.

2017ನವದೆಹಲಿ ಉಗ್ರರಿಗೆ ನೆರವು ನೀಡುವ ವಿಚಾರದಲ್ಲಿ ಪಾಕಿಸ್ಥಾನ ವಿರುದ್ಧ ಎನ್ಡಿಎ ಉಪರಾಷ್ಟ್ರಪತಿ ಅಭ್ಯರ್ಥಿ ವೆಂಕಯ್ಯ ನಾಯ್ಡು ಕಿಡಿ ಕಾರಿದರುಕಾರ್ಗಿಲ್‌ ಪರಾಕ್ರಮ ಪರೇಡ್‌ ಕಾರ್ಯಕ್ರಮದಲ್ಲಿ ಮಾಡತನಾಡಿದ ನಾಯ್ಡು 'ಪಾಕ್‌ ಉಗ್ರರಿಗೆ ನೆರವು ನೀಡುವುದನ್ನು ಬಿಡಬೇಕು. 1971  ಯುದ್ಧದಲ್ಲಿ ಏನಾಗಿದೆ ಎಂದು ನೆನಪು ಮಾಡಿಕೊಳ್ಳಿಉಗ್ರವಾದವನ್ನು ಪೋಷಿಸುವುದರಿಂದ ನಿಮ್ಮ ಅಭಿವೃದ್ಧಿ ಸಾಧ್ಯವಿಲ್ಲಎಂದು ಎಚ್ಚರಿಸಿದರು. 'ಮಾನವತೆಯ ವಿರೋಧಿ ಉಗ್ರವಾದ,ಅದನ್ನು ಪಾಕ್‌ ಧರ್ಮದಲ್ಲಿ ಬೆರೆಸಿದೆ ಮತ್ತು ದುರದೃಷ್ಟವಷಾತ್‌ ರಾಜನೀತಿಯನ್ನಾಗಿಸಿಕೊಂಡಿದೆಎಂದರು. 'ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂದು ಪುನಃರುಚ್ಚರಿಸಿದ ಅವರು ಒಂದು ಇಂಚು ಭೂಮಿಯನ್ನು ಪಾಕ್ಗೆ ಬಿಟ್ಟುಕೊಡುವ ಪ್ರಶ್ನೆ ಇಲ್ಲಎಂದು ಹೇಳಿದರು.  'ನಮ್ಮದು ಶಾಂತಿ ಬಯಸುವ ದೇಶಯುದ್ಧ ನಮಗೆ ಬೇಡ.ಆದರೆ ತಾಳ್ಮೆ ಕೆಡಿಸುವ ಯತ್ನ ಮಾಡಿದರೆ ನಮ್ಮ ಸೈನಿಕರು ದಿಟ್ಟ ಉತ್ತರ ನೀಡಲಿದ್ದಾರೆಎಂದರು. 1971 ರಲ್ಲಿ ಬಾಂಗ್ಲಾ ವಿಮೋಚನೆಗಾಗಿ 13 ದಿನಗಳ ಕಾಲ ನಡೆದ ಯುದ್ಧದಲ್ಲಿ ಪಾಕ್‌ ಸೋತು ಸುಣ್ಣವಾಗಿತ್ತು
2017: ಮುಂಬೈವಿದ್ಯುನ್ಮಾನ ಮತಯಂತ್ರಗಳು (ಇವಿಎಂಸಂಪೂರ್ಣ ದೋಷಮುಕ್ತ ಎಂಬುದಾಗಿ ಭಾರತದ ಚುನಾವಣಾ ಆಯೋಗ ನಿರಂತರ ಪ್ರತಿಪಾದಿಸುತ್ತಿದ್ದರೂಇವಿಎಂ ಅಸಮರ್ಪಕವಾಗಿ ಕಾರ್ಯ ನಿರ್ವಹಿಸಿದ ಪ್ರಕರಣ ಮಹಾರಾಷ್ಟ್ರದಲ್ಲಿ ಘಟಿಸಿತುಮಾಹಿತಿ ಹಕ್ಕು ಕಾಯ್ದೆಯ ಅಡಿ ಒದಗಿಸಲಾದ ಮಾಹಿತಿಯಿಂದ ಇದು ಬೆಳಕಿಗೆ ಬಂದಿತುಬುಲ್ದಾನ ಜಿಲ್ಲಾ ಪರಿಷತ್ ಚುನಾವಣೆಯಲ್ಲಿ ಸುಲ್ತಾನಪುರ ಮತಗಟ್ಟೆಯಲ್ಲಿ  ಘಟನೆ ಘಟಿಸಿತುಯಾರೇ ವ್ಯಕ್ತಿ ಪಕ್ಷೇತರ ಅಭ್ಯರ್ಥಿ ಒಬ್ಬರ ತೆಂಗಿನಕಾಯಿ ಚಿಹ್ನೆಗೆ ಮತ ಹಾಕಿದಾಗಲೆಲ್ಲಬಿಜೆಪಿಯ ಕಮಲ ಚಿಹ್ನೆಯ ಮುಂಭಾಗದ ಎಲ್ಇಡಿ ಬಲ್ಬ್ ಮಿನುಗುತ್ತಿತ್ತು ಎಂದು ಆರ್ ಟಿಐ ಮಾಹಿತಿ ಹೇಳಿತುಇತರ ಅಭ್ಯರ್ಥಿಗಳಿಗೆ ಮತ ಹಾಕಿದಾಗಲೂ ಹೀಗೆಯೇ ಆಗುತ್ತಿತ್ತುಚುನಾವಣಾಧಿಕಾರಿ  ವಿಷಯವನ್ನು ಜಿಲ್ಲಾಧಿಕಾರಿಗೆ ವರದಿ ಮಾಡಿದ್ದರು ಎಂದು ಆರ್ ಟಿ  ಮಾಹಿತಿ ತಿಳಿಸಿತು.

2016: ನವದೆಹಲಿಇಪ್ಪತ್ತನಾಲ್ಕು ಗಂಟೆ ಕಳೆದರೂ ನಾಪತ್ತೆಯಾದ ವಾಯುಪಡೆ ವಿಮಾನ ಎಎನ್-32 ಇನ್ನೂ ಪತ್ತೆಯಾಗಲಿಲ್ಲವಾಯುಪಡೆನೌಕಾಪಡೆಕರಾವಳಿ ಕಾವಲುಪಡೆಗಳು ಬಂಗಾಳ ಕೊಲ್ಲಿಯಲ್ಲಿ ನಿರಂತರ ಹುಡುಕಾಟ ನಡೆಸಿದವು. 12 ಗಂಟೆಗಳಿಂದ ಜಲಾಂತರ್ಗಾಮಿ ನೌಕೆಯೂ ಹುಡುಕಾಟ ನಡೆಸಿತು ನಡುವೆ ಈದಿನ ಬೆಳಗ್ಗೆ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಘಟನೆಗೆ ಸಂಬಂಧಿಸಿ ವೈಮಾನಿಕ ಸಮೀಕ್ಷೆ ನಡೆಸಿಐಎಎಫ್ ಅಧಿಕಾರಿಗಳಿಂದ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡರುಹಿಂದಿನ ದಿನ ಬೆಳಗ್ಗೆ ಚೆನ್ನೈನಿಂದ ಹಾರಿದ ವಿಮಾನ ಅಂಡಮಾನ್ ನಿಕೋಬಾರ್ ಪೋರ್ಟ್ ಬ್ಲೇರ್ಗೆ 11.30 ವೇಳೆಗೆ ತಲುಪಬೇಕಿತ್ತುಆದರೆ ನಾಪತ್ತೆಯಾದ ವಿಮಾನದ ಬಗ್ಗೆ ಯಾವುದೇ ಸುಳಿವು ಸಿಗಲಿಲ್ಲ. .

2016: ಕಾಬೂಲ್ಆಫ್ಘಾನಿಸ್ತಾನದ ಕಾಬೂಲ್ನಲ್ಲಿ ಪ್ರತಿಭಟನಾ ಮೆರವಣಿಗೆ ಮೇಲೆ ನಡೆದ ಅವಳಿ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 80 ಜನ ಸಾವನ್ನಪ್ಪಿ, 231ಕ್ಕೂ ಹೆಚ್ಚು ಮಂದಿ ಗಾಯಗೊಂಡರುಕಾಬೂಲಿನಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದ ಶಿಯಾ ಹಜಾರಸ್ ಸಮುದಾಯದವರ ಮೇಲೆ ಬಾಂಬ್ ದಾಳಿ ನಡೆಯಿತುದಾಳಿಯ ಹೊಣೆಯನ್ನು ಐಸಿಸ್ ಸಂಘಟನೆ ಹೊತ್ತು ಕೊಂಡಿತು.

2016: ನವದೆಹಲಿಭಾರತೀಯ ನವ್ಯ ಚಿತ್ರಕಲಾವಿದರಾಗಿ ಖ್ಯಾತಿಗಳಿಸಿದ್ದ ಎಸ್.ಎಚ್ರಜ ಈದಿನ ಬೆಳಗ್ಗೆ ನವದೆಹಲಿಯಲ್ಲಿ ನಿಧನರಾದರುಕಳೆದ ಕೆಲದಿನಗಳಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರುಮೃತರಿಗೆ 94 ವರ್ಷ ವಯಸ್ಸಾಗಿತ್ತುಕಳೆದ ಎರಡು ತಿಂಗಳಿನಿಂದ ವಯೋಸಹಜ ಅನಾರೋಗ್ಯದ ಹಿನ್ನೆಲೆಯಲ್ಲಿ ರಜ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರುಈದಿನ ಬೆಳಗ್ಗೆ 11 ಗಂಟೆ ಸುಮಾರಿಗೆ ಕೊನೆಯುಸಿರೆಳೆದರು ಎಂದು ರಜ ಅವರ ಆಪ್ತ ಸ್ನೇಹಿತ ಕವಿ ಅಶೋಕ್ ವಾಜಪೇಯಿ ತಿಳಿಸಿದರುದೇಶದ ಖ್ಯಾತನಾಮ ಚಿತ್ರಕಲಾವಿದರಲ್ಲಿ ಒಬ್ಬರಾಗಿದ್ದ ರಜ ಪದ್ಮಶ್ರೀ ಪ್ರಶಸ್ತಿಗೂ ಭಾಜನರಾಗಿದ್ದರು. 

2016: ಚೆನ್ನೈ: ‘ಸೂಪರ್ ಸ್ಟಾರ್’ ರಜನಿಕಾಂತ್ ಅಭಿನಯದ ‘ಕಬಾಲಿ’ ಚಿತ್ರ ಮೊದಲ ದಿನವೇ 250 ಕೋಟಿ ರೂಕಲೆಕ್ಷನ್ ಮಾಡಿದ್ದು ಮೂಲಕ ಹಿಂದಿನ ಎಲ್ಲಾ ದಾಖಲೆಗಳನ್ನು ಧೂಳಿಪಟ ಮಾಡಿ ಮುನ್ನುಗ್ಗಿತುಚಿತ್ರದ ಕಲೆಕ್ಷನ್ ಕುರಿತು ನಿರ್ಮಾಪಕರು ಮಾಹಿತಿ ಬಿಡುಗಡೆ ಮಾಡಿದರುಕಬಾಲಿ ತಮಿಳುನಾಡಿನಲ್ಲೇ 100 ಕೋಟಿ ರೂಗಳಿಸಿದ್ದುದೇಶದ ವಿವಿಧ ರಾಜ್ಯಗಳಲ್ಲಿ ಮತ್ತು ಹೊರ ದೇಶಗಳಲ್ಲಿ ಒಟ್ಟು 150 ಕೋಟಿ ರೂಗಳಿಸಿದೆಮೊದಲ ದಿನ ಒಟ್ಟು 250 ಕೋಟಿ ರೂಗಳಿಸಿದೆ ಹಿಂದೆ ಬೇರೆ ಯಾವ ಚಿತ್ರವೂ ಒಂದೇ ದಿನಕ್ಕೆ ಇಷ್ಟು ಕಲೆಕ್ಷನ್ ಮಾಡಿದ ದಾಖಲೆ ಇಲ್ಲ ಎಂದು ನಿರ್ಮಾಪಕ ಎಸ್ಥನು ತಿಳಿಸಿದರುಅಮೆರಿಕದಲ್ಲಿ 480, ಮಲೇಷ್ಯಾದಲ್ಲಿ 490 ಮತ್ತು ಕೊಲ್ಲಿ ರಾಷ್ಟ್ರಗಳಲ್ಲಿ 500 ಸ್ಕ್ರೀನ್ ಸೇರಿ ಕಬಾಲಿ ಚಿತ್ರ ವಿಶ್ವದಾದ್ಯಂತ ಸುಮಾರು 8 ಸಾವಿರದಿಂದ 10 ಸಾವಿರ ಸ್ಕ್ರೀನ್ಗಳಲ್ಲಿ ಬಿಡುಗಡೆಯಾಗಿತ್ತುಜತೆಗೆ ಬ್ರಿಟನ್ಆಸ್ಟ್ರೇಲಿಯಾನ್ಯೂಜಿಲೆಂಡ್ಶ್ರೀಲಂಕಾಸ್ವಿಜರ್ಲೆಂಡ್ಡೆನ್ಮಾರ್ಕ್ಹಾಲೆಂಡ್ಸ್ವೀಡನ್ದಕ್ಷಿಣ ಆಫ್ರಿಕಾನೈಜೀರಿಯಾದಲ್ಲೂ ಚಿತ್ರ ಬಿಡುಗಡೆಯಾಗಿತ್ತು.
2008: ಅಣು ಒಪ್ಪಂದ ವಿಷಯದಲ್ಲಿ ಎಡಪಕ್ಷಗಳನ್ನು ಬೆಂಬಲಿಸದೇ ನಿಷ್ಪಕ್ಷಪಾತವಾಗಿ ನಡೆದುಕೊಂಡ ಕಾರಣಕ್ಕೆ ಲೋಕಸಭಾಧ್ಯಕ್ಷ ಸೋಮನಾಥ ಚಟರ್ಜಿ ಕೊನೆಗೂ ತಲೆದಂಡ ತೆತ್ತರುಹುದ್ದೆಗೆ ರಾಜೀನಾಮೆ ನೀಡಬೇಕೆಂಬ ಸೂಚನೆ ಪಾಲಿಸದ ಹಿನ್ನೆಲೆಯಲ್ಲಿ ಸಿಪಿಎಂಚಟರ್ಜಿ ಅವರನ್ನು ಪಕ್ಷದಿಂದ ಉಚ್ಚಾಟಿಸಿತುಸುಮಾರು 40 ವರ್ಷಗಳಿಂದ ಸಿಪಿಎಂನಲ್ಲಿದ್ದು, 10 ಬಾರಿ ಸಂಸದರಾಗಿ ಆಯ್ಕೆಯಾದ ಚಟರ್ಜಿತಮ್ಮ 79 ನೇ ಜನ್ಮದಿನ ಆಚರಣೆಗೆ ಎರಡು ದಿನ ಮೊದಲು ಪಕ್ಷದಿಂದ ಉಚ್ಚಾಟಿತರಾದರು.

2007: ಉಪರಾಷ್ಟ್ರಪತಿ ಸ್ಥಾನಕ್ಕೆ ಆಗಸ್ಟ್ 10 ರಂದು ನಡೆಯುವ ಚುನಾವಣೆಗಾಗಿ ಯುಪಿಎ ಹಾಗೂ ಎಡಪಕ್ಷ ಬೆಂಬಲಿತ ಅಭ್ಯರ್ಥಿ ಮಾಜಿ ಕೇಂದ್ರ ಸಚಿವ ಮೊಹ್ಮದ್ ಹಮೀದ್ ಅನ್ಸಾರಿ ಹಾಗೂ ಎನ್ ಡಿಎ ಅಭ್ಯರ್ಥಿ ನಜ್ಮಾ ಹೆಫ್ತುಲ್ಲಾ ಅವರು ನಾಮಪತ್ರ ಸಲ್ಲಿಸಿದರುಉಭಯ ಸ್ಪರ್ಧಿಗಳೂ ತಮ್ಮ ತಮ್ಮ ಪಕ್ಷಗಳ ಮುಖಂಡರ ಜೊತೆಗೆ ಆಗಮಿಸಿ ಚುನಾವಣಾಧಿಕಾರಿ ಯೋಗೇಂದ್ರ ನಾರಾಯಣ್ ಅವರಿಗೆ ತಮ್ಮ ನಾಮಪತ್ರ ಸಲ್ಲಿಸಿದರು.

2007: ಆಫ್ಘಾನಿಸ್ಥಾನದ ಕೊನೆಯ ದೊರೆ ಮಹಮ್ಮದ್ ಜಾಹಿರ್ ಷಾ (92) ಅವರು ಈದಿನ ನಿಧನರಾದರುಆಫ್ಘಾನಿಸ್ಥಾನದಲ್ಲಿ 1973ರಲ್ಲಿ ಆಡಳಿತ ನಡೆಸುತ್ತಿದ್ದ ದೊರೆ ಷಾ ವಿರುದ್ಧ ಅವರ ಸಂಬಂಧಿ ಮೊಹಮದ್ ದಾವೂದ್ ದಂಗೆ ಎದ್ದರುದೊರೆ ಆಗ ದೇಶದಲ್ಲಿ ಇರಲಿಲ್ಲಇಟಲಿಯಲ್ಲಿ ರಜಾ ದಿನ ಕಳೆಯುತ್ತಿದ್ದರುದಂಗೆಯ ವಿಷಯ ಕೇಳಿ ಅಲ್ಲಿಂದಲೇ ಅವರು ಅಧಿಕಾರ ತ್ಯಜಿಸಿದರುಮತ್ತೆ ಅವರು ದೇಶಕ್ಕೆ ವಾಪಸಾದದ್ದು ತಾಲಿಬಾನ್ ಆಡಳಿತ ಅಂತ್ಯಗೊಂಡ (2001) ಹಲವು ತಿಂಗಳುಗಳ ನಂತರಸುಮಾರು 29 ವರ್ಷಗಳ ನಂತರ ದೇಶಕ್ಕೆ ವಾಪಸಾದ ಅವರನ್ನು ಆಫ್ಘನ್ನಿನ ಹೊಸ ಸರ್ಕಾರ `ರಾಷ್ಟ್ರಪಿತಎಂಬ ಬಿರುದು ನೀಡಿ ಗೌರವಿಸಿತಷ್ಟೆ ಅಲ್ಲದೊರೆ ಆಳಿದ 40 ವರ್ಷಗಳ ಕಾಲ ದೇಶದಲ್ಲಿ ಶಾಂತಿ ಮತ್ತು ಸ್ಥಿರತೆ ನೆಲೆಸಿತ್ತು ಎಂದು ಬಣ್ಣಿಸಿತುದೊರೆ ದೇಶಕ್ಕೆ ವಾಪಸಾದ ಕೆಲ ದಿನಗಳ ನಂತರ 2002ರಲ್ಲಿ ಅವರ ಪತ್ನಿ ಹೊಮೈರಾ ಸಹ ದೇಶಕ್ಕೆ ವಾಪಸಾಗಲು ಸಿದ್ಧತೆ ನಡೆಸಿದ್ದರು ಸಂದರ್ಭದಲ್ಲಿ ಅವರು ನಿಧನ ಹೊಂದಿದರು.

2007: ಮಾಜಿ ನಟಿಭೂಗತ ದೊರೆ ಅಬು ಸಲೇಮ್ ಪ್ರೇಯಸಿ ಮೋನಿಕಾ ಬೇಡಿ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲು ಸುಪ್ರೀಂ ಕೋರ್ಟ್ ಆದೇಶಿಸಿತುನಕಲಿ ಪಾಸ್ಪೋರ್ಟ್ ಸಂಬಂಧದಲ್ಲಿ ಆಕೆಗೆ ಆಂಧ್ರಪ್ರದೇಶ ಹೈಕೋರ್ಟ್ ಮೂರು ವರ್ಷ ಸೆರೆವಾಸದ ಶಿಕ್ಷೆ ವಿಧಿಸಿತ್ತುಆದರೆ ಮುಂಬೈ ಪ್ರಾದೇಶಿಕ ಪಾಸ್ಪೋರ್ಟ್ ಕಚೇರಿ 1999 ಜೂನ್ 24ರಂದು ನೀಡಿದ್ದ ಪಾಸ್ಪೋರ್ಟ್ ಕಳೆದು ಹೋಗಿದೆಹೀಗಾಗಿ ಅದನ್ನು ಕೋರ್ಟಿಗೆ ಸಲ್ಲಿಸಲು ಸಾಧ್ಯವಿಲ್ಲ ಎಂದು ಆಕೆಯ ತಂದೆ ಪ್ರಮಾಣಪತ್ರ ಸಲ್ಲಿಸಿದ್ದರು ಪಾಸ್ಪೋರ್ಟ್ ರದ್ದು ಪಡಿಸಿಜಾಮೀನಿನ ಮೇಲೆ ಬೇಡಿ ಅವರನ್ನು ಬಿಡುಗಡೆ ಮಾಡುವಂತೆ ವಿಶೇಷ ಸಿಬಿಐ ನ್ಯಾಯಾಲಯಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತು.

2007: ಲೇಖಕ ಡಾ.ಬಂಜಗೆರೆ ಜಯಪ್ರಕಾಶ್ ಅವರ ವಿವಾದಿತ `ಆನು ದೇವಾ ಹೊರಗಣವನು...' ಕೃತಿಯನ್ನು ತತ್ ಕ್ಷಣದಿಂದಲೇ ಜಾರಿಗೆ ಬರುವಂತೆ ಕರ್ನಾಟಕ ಸರ್ಕಾರ ಮುಟ್ಟುಗೋಲು ಹಾಕಿಕೊಂಡಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಎಚ್ಎಸ್ಮಹದೇವಪ್ರಸಾದ್ ವಿಧಾನಸಭೆಯಲ್ಲಿ ಪ್ರಕಟಿಸಿದರು.

2006: ನವದೆಹಲಿಯಲ್ಲಿ ನಡೆದ ಎಂಟನೆಯ ಏಷ್ಯಾ ಸಿನೆಮಾ ಉತ್ಸವದ ಭಾರತೀಯ ಸ್ಪರ್ಧಾ ವಿಭಾಗದಲ್ಲಿ ರಾಮಚಂದ್ರ ಪಿ.ಎನ್ಅವರ ಚೊಚ್ಚಲ `ಸುದ್ದ' (ತಿಥಿತುಳು ಚಲನಚಿತ್ರವು ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಹಾಗೂ ಖ್ಯಾತ ನಿರ್ದೇಶಕ ಗಿರೀಶ ಕಾಸರವಳ್ಳಿ ಅವರ `ನಾಯಿ ನೆರಳುಕನ್ನಡ ಚಲನ ಚಿತ್ರವು ವಿಶೇಷ ಪ್ರಶಸ್ತಿಯನ್ನು ಗೆದ್ದುಕೊಂಡವು.

2006: ಭಾರತದ ಮೊತ್ತ ಮೊದಲ ಬೌದ್ಧಿಕ ಆಸ್ತಿಗಳ ಹಕ್ಕು ಶಾಲೆ (Intellectual Property Right School) ಈದಿನ ಖರಗಪುರದ ಭಾರತೀಯ ತಂತ್ರಜ್ಞಾನ ಸಂಸ್ಥೆಯಲ್ಲಿ ಆರಂಭಗೊಂಡಿತು.

2006: ಆರು ವರ್ಷದ `ಬೆತ್ತಲೆ ರಾಜಕುಮಾರಪ್ರಿನ್ಸ್ ಈದಿನ ಸಂಜೆ 7.45ಕ್ಕೆ ಶ್ವೇತವಸ್ತ್ರ ಸುತ್ತಿಕೊಂಡು ಸೈನಿಕನ ಬೆಚ್ಚನೆಯ ತೋಳಿನ ಮೂಲಕ 60 ಅಡಿ ಆಳದ ಕೊಳವೆಬಾವಿಯ ಒಳಗಿನಿಂದ ಹೊರಕ್ಕೆ ಬಂದಹರಿಯಾಣದ ಕುರುಕ್ಷೇತ್ರ ಬಳಿಯ ಹಲ್ವೇರಿ ಗ್ರಾಮದಲ್ಲಿ ಜುಲೈ 21ರಂದು ಆಕಸ್ಮಿಕವಾಗಿ  ಕೊಳವೆ ಬಾವಿಯೊಳಕ್ಕೆ ಬಿದ್ದ ಪ್ರಿನ್ಸ್ 49 ಗಂಟೆಗಳ ಕಾಲ ಅದರೊಳಗೆ ಜವರಾಯನ ಜೊತೆಗೆ ಹೋರಾಟ ನಡೆಸಿದ್ದಕೊಳವೆ ಬಾವಿಯಿಂದ 10 ಅಡಿ ದೂರದಲ್ಲಿ ಇನ್ನೊಂದು ಬಾವಿ ತೋಡಿ ಅದರ ಮೂಲಕ ಇಳಿದು ಅದಕ್ಕೆ ಅಡ್ಡ ಸುರಂಗ ಕೊರೆದು ಬಾಲಕನನ್ನು ರಕ್ಷಿಸುವ ಕಾರ್ಯಾಚರಣೆ ನಡೆಸಲಾಗಿತ್ತು.

2006: ಆಂಧ್ರಪ್ರದೇಶದ ಜಲ್ಲಮಲ್ಲ ಅರಣ್ಯದಲ್ಲಿ ಈದಿನ ನಸುಕಿನಲ್ಲಿ ನಡೆದ ಘರ್ಷಣೆಯಲ್ಲಿ ಮಾವೋವಾದಿ ನಕ್ಸಲೀಯರ ಉನ್ನತ ನಾಯಕ ಮಾಧವನನ್ನು ಪೊಲೀಸರು ಕೊಂದು ಹಾಕಿದರುಘರ್ಷಣೆಯಲ್ಲಿ ಐವರು ಮಹಿಳೆಯರು ಸೇರಿ 7 ಜನ ಅಸು ನೀಗಿದರು.
1981: ಇಂದಿರಾಗಾಂಧಿ ಅವರು ಅಧ್ಯಕ್ಷರಾಗಿರುವ ಕಾಂಗ್ರೆಸ್ ಪಕ್ಷವೇ `ನಿಜ'ವಾದ ಭಾರತ ರಾಷ್ಟ್ರೀಯ ಕಾಂಗ್ರೆಸ್ ಎಂದು ಈದಿನ ಮಾನ್ಯತೆ ನೀಡಿದ ಚುನಾವಣಾ ಆಯೋಗವು ದೇವರಾಜ ಅರಸು ಅಧ್ಯಕ್ಷೆಯ ಪಕ್ಷದ ಮಾನ್ಯತೆಯನ್ನು ರದ್ದು ಮಾಡಿತು.

1948: ಭಾಗೀರಥಿ ಹೆಗಡೆ ಜನನ.

1936: ಸಾಹಿತಿ ವೆಂಕಟೇಶ ಕುಲಕರ್ಣಿ ಜನನ.

1930: ರತ್ನಮ್ಮ ಸುಂದರರಾವ್ ಜನನ.

1908: ನವೋದಯ ಕಾಲದ ಪ್ರತಿಭಾನ್ವಿತ ಕವಿ ಗಣಪತಿ ರಾವ್ ಪಾಂಡೇಶ್ವರ ಅವರು ರಾಮಚಂದ್ರರಾಯಸೀತಮ್ಮ ದಂಪತಿಯ ಪುತ್ರನಾಗಿ ಬ್ರಹ್ಮಾವರದಲ್ಲಿ ಜನಿಸಿದರುಮುಳಿಯ ತಿಮ್ಮಪ್ಪಯ್ಯಐರೋಡಿ ಶಿವರಾಮಯ್ಯ ಅವರ ಶಿಷ್ಯರಾಗಿ ಕನ್ನಡಇಂಗ್ಲಿಷ್ಸಂಸ್ಕೃತ  ಮೂರೂ ಭಾಷೆಗಳಲ್ಲಿ ಸಮಾನ ವಿದ್ವತ್ ಗಳಿಸಿದ್ದ ಪಾಂಡೇಶ್ವರ 17 ಹರೆಯದಲ್ಲೇ `ವಿವೇಕಾನಂದ ಚರಿತಂಕವನ ಬರೆದು ಖ್ಯಾತಿ ಪಡೆದಿದ್ದರು.

1906: ಹದಿಹರೆಯದಲ್ಲೇ ಬ್ರಿಟಿಷರಿಗೆ ಸೆಡ್ಡು ಹೊಡೆದ ಕ್ರಾಂತಿಕಾರಿ ಹೋರಾಟಗಾರ ಚಂದ್ರಶೇಖರ ಆಜಾದ್ ಮಧ್ಯಪ್ರದೇಶದ ಝಾಬ್ರಾದಲ್ಲಿ ಈದಿನ ಜನಿಸಿದರುಬ್ರಿಟಿಷರ ಕೆಂಗಣ್ಣಿಗೆ ಗುರಿಯಾಗಿ ಪ್ರಾಣತೆತ್ತ ಆಜಾದ್ ಸ್ವಾತಂತ್ರ್ಯ ಕಲಿಗಳಿಗೆ ಆದರ್ಶಪ್ರಾಯರಾದರು.

1856: ಸ್ವಾತಂತ್ರ್ಯ ಸಂಗ್ರಾಮಕ್ಕೆ ಅಡಿಪಾಯ ಹಾಕಿದ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರಪಂಡಿತಗಣಿತಜ್ಞತತ್ವಜ್ಞಾನಿ ಲೋಕಮಾನ್ಯ ಬಾಲ ಗಂಗಾಧರ ತಿಲಕ್ ಅವರು  ದಿನ ಮಹಾರಾಷ್ಟ್ರದ ರತ್ನಗಿರಿಯಲ್ಲಿ ಜನಿಸಿದರು.


No comments:

Post a Comment