Friday, July 19, 2019

ಇಂದಿನ ಇತಿಹಾಸ History Today ಜುಲೈ 19

ಇಂದಿನ ಇತಿಹಾಸ History Today ಜುಲೈ 19
2019: ಬೆಂಗಳೂರು:  2019 ಜುಲೈ 19ರ ಶುಕ್ರವಾರ ಸಂಜೆ ಗಂಟೆಯ ಒಳಗಾಗಿ ಬಹುಮತ ಸಾಬೀತು ಪಡಿಸುವಂತೆ ರಾಜ್ಯಪಾಲ ವಜುಭಾಯಿ ವಾಲಾ ಅವರಿಂದ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಅವರಿಗೆ ಎರಡನೇ ನಿರ್ದೇಶದ ಹೊರತಾಗಿಯೂ, ಕಾಂಗ್ರೆಸ್ ಮತ್ತು ಜನತಾದಳ (ಎಸ್) ಸದಸ್ಯರ ಆಗ್ರಹಕ್ಕೆ ಮಣಿದ ವಿಧಾನಸಭಾಧ್ಯಕ್ಷ ಕೆ.ಆರ್. ರಮೇಶ ಕುಮಾರ್ ಅವರು ಈದಿನ  ರಾತ್ರಿ ವಿಧಾನಸಭಾ ಕಲಾಪವನ್ನು 2019 ಜುಲೈ 22ರ ಸೋಮವಾರ ಬೆಳಗ್ಗೆ ೧೧ ಗಂಟೆಗೆ ಮುಂದೂಡಿದರು. ಇದರೊಂದಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮಂಡಿಸಿದ ವಿಶ್ವಾಸ ಮತಯಾಚನೆ ಕಲಾಪ ಅಯೋಮಯಗೊಂಡಿತು. ರಾಜ್ಯಪಾಲರು ತಮ್ಮ ಎರಡನೇ ನಿರ್ದೇಶನದ ಪಾಲನೆ ಆಗದೇ ಇರುವ ಬಗ್ಗೆ ಮುಂದೇನು ಕ್ರಮ ಕೈಗೊಳ್ಳುವರು ಎಂಬ ಕುತೂಹಲ ಮೂಡಿತು.  ಇದಕ್ಕೆ ಮುನ್ನ ಮಧ್ಯಾಹ್ನ .೩೦ರ ಒಳಗೆ ವಿಶ್ವಾಸಮತ ಕಲಾಪ ಮುಕ್ತಾಯಗೊಳಿಸುವಂತೆ ನೀಡಲಾಗಿದ್ದ ತಮ್ಮ ನಿರ್ದೇಶನವನ್ನು ಸದನವು ನಿರ್ಲಕ್ಷಿಸಿದ ಬಗ್ಗೆ ರಾಜ್ಯಪಾಲರು ಕೇಂದ್ರಕ್ಕೆ ವರದಿ ಕಳುಹಿಸಿದ್ದಾರೆ ಎಂದು ಸುದ್ದಿ ಮೂಲಗಳು ತಿಳಿಸಿದ್ದವು. ಇದಕ್ಕೆ ಮುನ್ನ ತಮ್ಮನ್ನು ಕಲಾಪ ವಿಳಂಬದ ತಪ್ಪಿತಸ್ಥನನ್ನಾಗಿ ಮಾಡಬೇಡಿ ಎಂಬುದಾಗಿ ಹೇಳಿದ್ದ ಸಭಾಧ್ಯಕ್ಷರು ರಾತ್ರಿ .೩೦ರ ಒಳಗಾಗಿ ಚರ್ಚೆ ಮುಕ್ತಾಯಗೊಳಿಸಿ, ಕಲಾಪವನ್ನು ಈದಿನವೇ ಮುಗಿಸೋಣ ಎಂದು ಹೇಳಿದ್ದರು. ವಿಶ್ವಾಸಮತ ಕಲಾಪವನ್ನು ಮುಂದೂಡುವಂತೆ ಕಾಂಗ್ರೆಸ್ ಮತ್ತು ಜನತಾದಳ (ಎಸ್) ಸದಸ್ಯರು ತೀವ್ರವಾಗಿ ಆಗ್ರಹಿಸಿದಾಗ, ಬಿಜೆಪಿ ನಾಯಕ ಬಿ.ಎಸ್. ಯಡಿಯೂರಪ್ಪ ಅವರು ಈದಿನ ಮಧ್ಯರಾತ್ರಿಯವರೆಗಾದರೂ ಸರಿ, ಇದೇ ದಿನ ನಿರ್ಣಯವನ್ನು ಮತಕ್ಕೆ ಹಾಕಬೇಕು ಎಂದು ಆಗ್ರಹಿಸಿದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜುಲೈ 22ರ ಸೋಮವಾರ ಎಲ್ಲದಕ್ಕೂ ತೆರೆ ಎಳೆಯೋಣ ಎಂದು ಸಲಹೆ ಮಾಡಿದರು. ಸಿದ್ದರಾಮಯ್ಯ ಸಲಹೆಯ ಬಳಿಕ ಸಭಾಧ್ಯಕ್ಷರು ಕಲಾಪವನ್ನು  ಮುಂದೂಡಲಾಗಿದೆ ಎಂದು ಘೋಷಿಸಿದರು. ೧೫ ಮಂದಿ ಬಂಡಾಯ ಶಾಸಕರು ತಾವು ವಿಶ್ವಾಸ ಮತ ಕಲಾಪದಲ್ಲಿ ಪಾಲ್ಗೊಳ್ಳುವುದಿಲ್ಲ ಎಂಬುದಾಗಿ ಪಟ್ಟು ಹಿಡಿದು ಮುಂಬೈಯಲ್ಲೇ ವಾಸ್ತವ್ಯ ಹೂಡಿದ ಹಿನ್ನೆಲೆಯಲ್ಲಿ ೧೩ ತಿಂಗಳುಗಳ ಜನತಾದಳ (ಎಸ್)- ಕಾಂಗ್ರೆಸ್ ಮೈತ್ರಿ ಸರ್ಕಾರ ಪತನದ ಅಂಚಿಗೆ ಬಂದು ನಿಂತಿತ್ತು. ಹಿಂದಿನ ದಿನ  ಕಲಾಪಗಳನ್ನು ಕೋಲಾಹಲದ ಮಧ್ಯೆ  ಮುಂದೂಡಿದ ಬೆನ್ನಲ್ಲೇ ರಾಜ್ಯಪಾಲರು ಮುಖ್ಯಮಂತ್ರಿಯವರಿಗೆ ಜುಲೈ 19ರ ಶುಕ್ರವಾರ ಮಧ್ಯಾಹ್ನ .೩೦ರ ಒಳಗೆ ಬಹುಮತ ಸಾಬೀತು ಪಡಿಸುವಂತೆ ಮೊದಲ ನಿರ್ದೇಶನ ನೀಡಿದ್ದರು.  ಸಂಜೆ ಚರ್ಚೆಯಲ್ಲಿ ಪಾಲ್ಗೊಂಡ ಗೃಹ ಸಚಿವ ಎಂ.ಬಿ. ಪಾಟೀಲ್ ಅವರು ಸಭಾಧ್ಯಕ್ಷರ ನಿರ್ದೇಶನದ ಮೇರೆಗೆ ರಾಜ್ಯ ಪೊಲೀಸರು ಮುಂಬೈಗೆ ತೆರಳಿರುವ ಶಾಸಕ ಶ್ರೀಮಂತ ಪಾಟೀಲ್ ಅವರ ವಿಷಯದ ಬಗ್ಗೆ ತನಿಖೆ ನಡೆಸಿದ್ದಾರೆ ಎಂದು ಹೇಳಿದರು. ನಮ್ಮ ಪೊಲೀಸರು ಶಾಸಕನ ಕುಟುಂಬ ಸದಸ್ಯರನ್ನು ಭೇಟಿ ಮಾಡಿದ್ದಾರೆ. ಶಾಸಕರು ಸ್ವ ಇಚ್ಛೆಯಿಂದಲೇ ಮುಂಬೈಗೆ ಹೋಗಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಆದರೆ ನಮ್ಮ ಪೊಲೀಸ್ ತಂಡಕ್ಕೆ ಮುಂಬೈ ಆಸ್ಪತ್ರೆಯಲ್ಲಿ ಶಾಸಕರನ್ನು ಭೇಟಿ ಮಾಡಲು ಅವಕಾಶ ನೀಡಲಿಲ್ಲ.. ಶಾಸಕರೂ ಪೊಲೀಸರನ್ನು ಭೇಟಿ ಮಾಡಲು ಇಚ್ಛಿಸಲಿಲ್ಲಎಂದ ಪಾಟೀಲ್ ಅವರು ವರದಿಯನ್ನ ಸದನದಲ್ಲಿ ಮಂಡಿಸುತ್ತಾ ಹೇಳಿದರು. ಹಿರಿಯ ಸಚಿವ ಕೃಷ್ಣ ಬೈರೇಗೌಡ ಅವರು ಸೋಮವಾರ ವಿಶ್ವಾಸ ಮತ ಕಲಾಪವನ್ನು ಪೂರ್ಣಗೊಳಿಸುವ ಬಗ್ಗೆ ಮೈತ್ರಿಕೂಟವು ಭರವಸೆ ನೀಡುತ್ತದೆ ಎಂದು ಸಭಾಧ್ಯಕ್ಷರಿಗೆ ತಿಳಿಸಿದರು. ಹಿರಿಯ ಕಾಂಗ್ರೆಸ್ ಶಾಸಕ ಎಚ್.ಕೆ. ಪಾಟೀಲ್ ಅವರು ಮುಂಬೈಯಲ್ಲಿ ಇರುವ ಶಾಸಕರಿಗೆ ಸದನಕ್ಕೆ ಆಗಮಿಸುವಂತೆ ಸೂಚಿಸಿ ಎಂಬುದಾಗಿ ಕೋರಿಕೆ ಮಂಡಿಸಿದರು. ಅದಕ್ಕೆ ಸಭಾಧ್ಯಕ್ಷ ರಮೇಶ ಕುಮಾರ್ ಅವರು ತಮಗೂ ಅದಕ್ಕೂ ಸಂಬಂಧವಿಲ್ಲ ಎಂದು ಸ್ಪಷ್ಟ ಪಡಿಸಿದರು. ’ಶಾಸಕರನ್ನು ಸದನಕ್ಕೆ ಬರುವಂತೆ ನಾನು ಒತ್ತಾಯಿಸಲಾರೆ ಮತ್ತು ಒತ್ತಾಯಿಸಲು ಬಯಸುವುದೂ ಇಲ್ಲಎಂದು ಅವರು ನುಡಿದರು. ಡಿಕೆ. ಶಿವಕುಮಾರ್ ಅವರು ಬಂಡಾಯ ಶಾಸಕರನ್ನು ಮುಂಬೈಯಲ್ಲಿ ದಿಗ್ಬಂಧನದಲ್ಲಿ ಇಡಲಾಗಿದೆ. ಮತ್ತು ಹೇಳಿಕೆಗಳನ್ನು ನೀಡುವಂತೆ ಬಲಾತ್ಕರಿಸಲಾಗುತ್ತಿದೆ ಎಂದು ಹೇಳಿದರು. ಅವರನ್ನು ಗನ್ ಪಾಯಿಂಟ್ನಲ್ಲಿ ಇರಿಸಲಾಗಿದೆ ಎಂದು ಸೂಚಿಸಲು ಅವರು ಕೈ ಸಂಜ್ಞೆಗಳನ್ನು ಬಳಸಿದರು. ಸದನದ ಹೊರಗೆ ಏನಾಗುತ್ತಿದೆ ಎಂಬ ವರದಿಗಳನ್ನು ನಾನು ಪರಿಗಣಿಸಲು ಸಾಧ್ಯವಿಲ್ಲ ಎಂದು ಸಭಾಧ್ಯಕ್ಷರು ನುಡಿದರು. ಅವರ ರಕ್ತಸಂಬಂಧಿಗಳು ನನಗೆ ಪತ್ರ ಬರೆದು ಅವರನ್ನು ದಿಗ್ಬಂಧನದಲ್ಲಿ ಇಡಲಾಗಿದೆ ಎಂದು ತಿಳಿಸಿ ರಕ್ಷಣೆ ಕೋರಿದರೆ ಮಾತ್ರ ನಾನು ಅದನ್ನು ಪರಿಗಣಿಸಬಹುದುಎಂದು ಸಭಾಧ್ಯಕ್ಷರು ಸ್ಪಷ್ಟ ಪಡಿಸಿದರು.  ಬಿಜೆಪಿ ನಾಯಕ ಹಾಗೂ ಮಾಜಿ ಸಚಿವ ಸುರೇಶ ಕುಮಾರ್ ಅವರು ವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯನ್ನು ಮುಂದಕ್ಕೆ ಎಳೆಯುತ್ತಾ ಹೋಗುವುದು ಸರಿಯಲ್ಲ ಎಂದು ಹೇಳಿದರು. ’ಹೀಗೆ ಆದಲ್ಲಿ ವಿಶ್ವಾಸಮತ ನಿರ್ಣಯದ ಮೇಲಿನ ಪಾವಿತ್ರ್ಯ ನಷ್ಟವಾಗುತ್ತದೆಎಂದು ಅವರು ನುಡಿದರು. ಎಷ್ಟು ಹೊತ್ತಾದರೂ ಸರಿ, ಇಂದೇ ಇದನ್ನು ಸಮಾಪ್ತಗೊಳಿಸಿ ಎಂದು ಅವರು ಕೋರಿದರು. ಚರ್ಚೆ ಮುಕ್ತಾಯದ ಹಂತ ಕಾಣದೇ ಇದ್ದಾಗ ಒಂದು ಹಂತದಲ್ಲಿ ಸಭಾಧ್ಯಕ್ಷ ರಮೇಶ ಕುಮಾರ್ ಅವರುಸದನ ಕಲಾಪವನ್ನು ನಾನು ವಿಳಂಬಿಸುತ್ತಿದ್ದೇನೆ ಎಂಬುದಾಗಿ ಬಿಂಬಿಸಲ್ಪಡಲು ನಾನು ಸಿದ್ಧನಿಲ್ಲಎಂದು ಕೃಷ್ಣ ಬೈರೇಗೌಡರಿಗೆ ಹೇಳಿದರು. ’ಇನ್ನೂ ಹಲವರು ಮಾತನಾಡಲಿದ್ದಾರೆ. ಅದ್ದರಿಂದ ಸಭಾಧ್ಯಕ್ಷರು ಹೆಚ್ಚಿನ ಕಾಲಾವಕಾಶ ನೀಡಬೇಕುಎಂದು ಕೃಷ್ಣ ಬೈರೇಗೌಡರು ಹೇಳಿದಾಗ ಸಭಾಧ್ಯಕ್ಷರು ಉತ್ತರ ನೀಡಿದರು. ಕಲಾಪವನ್ನು ಎಳೆಯುತ್ತಾ ಹೋಗುವುದಕ್ಕೆ ಅರ್ಥವಿಲ್ಲ, ಅದನ್ನು ಈದಿನವೇ ಮುಗಿಸೋಣ ಎಂದು ಸಭಾಧ್ಯಕ್ಷರು ಹೇಳಿದರು. ‘ಕಲಾಪವನ್ನು ಎಳೆಯುತ್ತಿದ್ದೇನೆ ಎಂದು ನನ್ನ ಮೇಲೆ ಆರೋಪ ಬರಲು ನಾನು ಇಚ್ಛಿಸುವುದಿಲ್ಲ. ಆದರೆ ಶಾಸಕರಿಗೆ ಮಾತನಾಡಲು ನಾನು ಅವಕಾಶ ನೀಡಿಲ್ಲ ಎಂದೂ ಅನ್ನಿಸಬಾರದುಎಂದು ಅವರು ನುಡಿದರು. ಬಿಜೆಪಿಯ ಮಾಧುಸ್ವಾಮಿ ಅವರು ರಾತ್ರಿ ಎಷ್ಟು ಹೊತ್ತಿನವರೆಗೆ ಬೇಕಾದರೂ ಕುಳಿತುಕೊಳ್ಳಲು ಬಿಜೆಪಿ ಶಾಸಕರು ಸಿದ್ಧರಿದ್ದಾರೆ ಎಂದು ಹೇಳಿದರು. ಸಭಾಧ್ಯಕ್ಷರು ಈದಿನವೇ ಕಲಾಪ ಮುಕ್ತಾಯಗೊಳಿಸಬೇಕು ಎಂದು ಅವರು ಸಲಹೆ ಮಾಡಿದರು. ಆದರೆ ಕಾಂಗೆಸ್ ಮತ್ತು ಜೆಡಿಎಸ್ ಶಾಸಕರು ಕಲಾಪ ಮುಂದೂಡಿಕೆಗೆ ಪಟ್ಟು ಹಿಡಿದರು. ಮಧ್ಯೆ, ಎಲ್ಲರೂ ಮಾತನಾಡಿದ ಬಳಿಕ ಕೊನೆಗೆ ಪುನಃ ಮಾತನಾಡಲು ತಾನು ಬಯಸಿದ್ದೇನೆ ಎಂದು ಹೇಳಿದ ಮುಖ್ಯಮಂತ್ರಿನಾವು ಸೋಮವಾರ ಕಲಾಪವನ್ನು ಸಮಾಪ್ತಗೊಳಿಸಬಹುದುಎಂದು ಹೇಳಿದರು. ತಾವು ತಮ್ಮ ಕ್ಷೇತ್ರಗಳಿಗೆ ಹೋಗಬೇಕಾಗಿರುವುದರಿಂದ ಕಲಾಪವನ್ನು ಮುಂದೂಡಬೇಕು ಎಂದೂ ಕಾಂಗ್ರೆಸ್- ಜೆಡಿಎಸ್ ಶಾಸಕರು ಆಗ್ರಹಿಸಿದರು.

2019: ನವದೆಹಲಿ: ಕಾಂಗ್ರೆಸ್ ಮತ್ತು ಜನತಾದಳ (ಎಸ್) ಪಕ್ಷಗಳ ೧೫ ಮಂದಿ ಬಂಡಾಯ ಶಾಸಕರ ರಾಜೀನಾಮೆಗಳಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಜುಲೈ ೧೭ರಂದು ನೀಡಿದ ಆದೇಶವು ವಿಧಾನಸಭೆಯಲ್ಲಿ ನಡೆಯುತ್ತಿರುವ ವಿಶ್ವಾಸಮತ ಪ್ರಕ್ರಿಯೆಗೆ ಸಂಬಂಧಿಸಿದಂತೆ ವಿಪ್ ಜಾರಿಗೊಳಿಸಲು ಪಕ್ಷಕ್ಕೆ ಅಡ್ಡಿಯಾಗಿದೆ  ಎಂದು ಪ್ರತಿಪಾದಿಸಿ ಕರ್ನಾಟಕ ಕಾಂಗ್ರೆಸ್ ಪಕ್ಷವು  ಸುಪ್ರೀಂಕೋರ್ಟ್ ಮೆಟ್ಟಿಲೇರಿತು. ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿಯವರೂ ಸುಪ್ರೀಂಕೋರ್ಟಿನ ಜುಲೈ 17ರ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿದರು. ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರಿಂದ ಸಲ್ಲಿಕೆಯಾಗಿರುವ ಅರ್ಜಿಯು ಬಂಡಾಯ ಶಾಸಕರನ್ನು ಹಾಲಿ ವಿಧಾನಸಭಾ ಕಲಾಪಗಳಲ್ಲಿ ಪಾಲ್ಗೊಳ್ಳುವಂತೆ ಬಲಾತ್ಕರಿಸುವಂತಿಲ್ಲ ಎಂಬುದಾಗಿ ತಿಳಿಸಿರುವ ಸುಪ್ರೀಂಕೋರ್ಟಿನ ಆದೇಶದ ಬಗ್ಗೆ ಸ್ಪಷ್ಟನೆ ಕೋರಿದೆ. ಸುಪ್ರಿಂಕೋರ್ಟಿನ ಸದರಿ ನಿರ್ದೇಶನವು ಪಕ್ಷದ ವಿಪ್ ಜಾರಿಗೊಳಿಸುವ ಹಕ್ಕಿಗೆ ಅಡ್ಡಿಯಾಗಿದೆ ಎಂದು ಅರ್ಜಿ ತಿಳಿಸಿತು. ಸುಪ್ರೀಂಕೋರ್ಟಿನ ಆದೇಶವು ತನ್ನ ಶಾಸಕರಿಗೆ ವಿಪ್ ಜಾರಿಗೊಳಿಸುವ ರಾಜಕೀಯ ಪಕ್ಷದ ಅಧಿಕಾರವನ್ನು ಕೆಳಕ್ಕೆ ಎಸೆದಿದೆ. ರಾಜಕೀಯ ಪಕ್ಷದ ಅಧಿಕಾರವು ಸಾವಿಧಾನಿಕ ಹಕ್ಕು ಆಗಿದ್ದು, ನ್ಯಾಯಾಲಯವು ಇದನ್ನು ನಿರ್ಬಂಧಿಸಲು ಸಾಧ್ಯವಿಲ್ಲ ಎಂದು ಅರ್ಜಿ ಪ್ರತಿಪಾದಿಸಿತು. ಕರ್ನಾಟಕ ವಿಧಾನಸಭೆಯಲ್ಲಿ ಪ್ರಸ್ತುತ ೭೯ ಮಂದಿ ಶಾಸಕರನ್ನು ಹೊಂದಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷವನ್ನು ಕಕ್ಷಿದಾರರನ್ನಾಗಿ ಮಾಡದೆಯೇ ಆದೇಶವನ್ನು ನೀಡಲಾಗಿದೆ ಎಂದೂ ಅರ್ಜಿ ತಿಳಿಸಿತು. ‘ಜುಲೈ ೧೭ರ ಆದೇಶದ ಪರಿಣಾಮವಾಗಿ ಸಂವಿಧಾನದ ಹತ್ತನೇ ಶೆಡ್ಯೂಲಿನ ಅಡಿಯಲ್ಲಿನ ಅರ್ಜಿದಾರನ ಸಾಂವಿಧಾನಿಕ ಹಕ್ಕುಗಳು ಮೊಟಕುಗೊಂಡಿವೆ ಎಂಬುದಾಗಿ ವಿನೀತರಾಗಿ ತಿಳಿಸಬಯಸುತ್ತಿದ್ದೇವೆಆದ್ದರಿಂದ ಅರ್ಜಿಯನ್ನು ಸಲ್ಲಿಸಲಾಗುತ್ತಿದೆಎಂದೂ ಅರ್ಜಿ ಹೇಳಿತು. ಸಂವಿಧಾನದ ೧೦ನೇ ಶೆಡ್ಯೂಲಿನ ಅಡಿಯಲ್ಲಿ ರಾಜಕೀಯ ಪಕ್ಷಕ್ಕೆ ತನ್ನ ಶಾಸಕರಿಗೆ ವಿಪ್ ಜಾರಿಗೊಳಿಸುವ ಹಕ್ಕಿದೆ. ಸಂವಿಧಾನದ ಅಡಿಯಲ್ಲಿ ನೀಡಲಾಗಿರುವ ಈಹಕ್ಕಿನ ಚಲಾವಣೆಯು ಯಾವುದೇ ಶರತ್ತಿಗೆ ಒಳಪಟ್ಟಿಲ್ಲ ಇಲ್ಲವೇ ವಿಪ್ ನೀಡುವುದಕ್ಕೂ ಮುನ್ನವೇ ನೀಡಲಾಗುವ ಯಾವುದೇ ನ್ಯಾಯಾಲಯದ ಆದೇಶ ಕೂಡಾ ನಿರ್ಬಂಧಿಸಲಾಗದು ಎಂದೂ ಕಾಂಗ್ರೆಸ್ ಪಕ್ಷವು ತನ್ನ ಅರ್ಜಿಯಲ್ಲಿ ತು. ಇದಕ್ಕಿಂತಲೂ ಮುಖ್ಯವಾಗಿ ಹತ್ತನೇ ಶೆಡ್ಯೂಲಿನ ಉದ್ದೇಶಗಳ ಕುರಿತ ಯಾವುದೇ ತನಿಖೆಯು ಸಂವಿಧಾನದ ೨೧೨ನೇ ವಿಧಿಯ ಪ್ರಕಾರ ರಾಜ್ಯ ಶಾಸನಸಭೆಯ ಕಲಾಪವಾಗಿದೆ ಎಂದೂ  ಅರ್ಜಿ ಹೇಳಿತು. ಸುಪ್ರೀಂಕೋರ್ಟಿನ ಸಂವಿಧಾನ ಪೀಠವು ನೀಡಿದ ಜುಲೈ ೧೭ರ ಆದೇಶವು ತನ್ನ ಶಾಸಕರಿಗೆ ವಿಪ್ ಜಾರಿಗೊಳಿಸುವ ರಾಜಕೀಯ ಪಕ್ಷದ ಸಂವಿಧಾನದತ್ತ ಅಧಿಕಾರವನ್ನು ಪತನಗೊಳಿಸಿದೆ. ಆದ್ದರಿಂದ ಜುಲೈ ೧೭ರ ನಿರ್ದೇಶನವು ಸಂವಿಧಾನದ ೧೦ನೇ ಶೆಡ್ಯೂಲಿನ ಅಡಿಯಲ್ಲಿ ಮುಂದುವರೆಯಲು ರಾಜಕೀಯ ಪಕ್ಷಕ್ಕೆ ಇರುವ ಹಕ್ಕುಗಳಿಗೆ ಸಂಬಂಧಪಟ್ಟದ್ದಲ್ಲ ಎಂಬ ಸ್ಪಷ್ಟನೆ ನೀಡುವಂತೆ ಅರ್ಜಿ ಸುಪ್ರೀಂಕೋರ್ಟನ್ನು ಕೋರಿತು. ಸುಪ್ರೀಂಕೋರ್ಟಿನ ಮುಂದಿರುವ ಬಂಡಾಯ ಶಾಸಕರು ಸಲ್ಲಿಸಿರುವ ಅರ್ಜಿಗಳ ಮೇಲೆ ಜುಲೈ ೧೭ರಂದು ಆದೇಶ ನೀಡುವಾಗ ಪಕ್ಷವು ಕಕ್ಷಿದಾರನಾಗಿ ಇಲ್ಲದೇ ಇದ್ದುದರಿಂದ ಪಕ್ಷವನ್ನು ಪ್ರಕರಣದಲ್ಲಿ ಕಕ್ಷಿದಾರನಾಗಿ ಸೇರಿಸಿಕೊಳ್ಳಬೇಕು ಎಂದೂ ಕರ್ನಾಟಕ ಕಾಂಗ್ರೆಸ್ ಮನವಿ ಮಾಡಿತು. ಕಾಂಗ್ರೆಸ್ ಮತ್ತು ಜೆಡಿ(ಎಸ್) ಪಕ್ಷಗಳ ೧೫ ಮಂದಿ ಬಂಡಾಯ ಕಾಂಗ್ರೆಸ್ ಶಾಸಕರನ್ನು ಹಾಲಿ ವಿಧಾನಸಭಾ ಅಧಿವೇಶನದಲ್ಲಿ ಪಾಲ್ಗೊಳ್ಳುವಂತೆ ಬಲಾತ್ಕರಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ತನ್ನ ಜುಲೈ ೧೭ರ ಆದೇಶದಲ್ಲಿ ಹೇಳಿತ್ತು. ಕಲಾಪದಲ್ಲಿ ಪಾಲ್ಗೊಳ್ಳುವ ಅಥವಾ ಪಾಲ್ಗೊಳ್ಳದಿರುವ ಬಗೆಗೆ ನಿರ್ಧರಿಸಲು ಶಾಸಕರಿಗೆ ವಿವೇಚನಾ ಹಕ್ಕು ಇದೆ ಎಂದೂ ಕೋರ್ಟ್ ಹೇಳಿತ್ತುಮುಖ್ಯ ನ್ಯಾಯಮುರ್ತಿ ರಂಜನ್ ಗೊಗೋಯಿ ನೇತೃತ್ವದ ಪೀಠವು ೧೫ ಮಂದಿ ಶಾಸಕರ ರಾಜೀನಾಮೆಗಳ ಬಗ್ಗೆ ಕಾಲಮಿತಿಯೊಳಗೆ ನಿರ್ಧರಿಸುವ ಅಧಿಕಾರ ವಿಧಾನಸಭಾಧ್ಯಕ್ಷ ಕೆ.ಆರ್ ರಮೇಶ ಕುಮಾರ್ ಅವರಿಗೆ ಸೇರಿದ್ದು ಎಂದೂ ಹೇಳಿತ್ತು. ಕಾಲಮಿತಿಯ ನಿರ್ಧಾರವನ್ನೂ ಅದು ಸಭಾಧ್ಯಕ್ಷರಿಗೇ ವಹಿಸಿತ್ತು.  ನ್ಯಾಯಮೂರ್ತಿಗಳಾದ ದೀಪಕ್ ಗುಪ್ತ ಮತ್ತು ಅನಿರುದ್ಧ ಬೋಸ್ ಅವರೂ ಇದ್ದ ಪೀಠವು ಶಾಸಕರ ರಾಜೀನಾಮೆ ಬಗ್ಗೆ ನಿರ್ಧರಿಸುವ ಸಭಾಧ್ಯಕ್ಷರ ವಿವೇಚನೆಗೆ ನ್ಯಾಯಾಲಯದ ನಿರ್ದೇಶನ ಅಡ್ಡಿಯಾಗುವುದಿಲ್ಲ ಎಂದೂ ತನ್ನ ಪುಟಗಳ ಆದೇಶದಲ್ಲಿ ಹೇಳಿತ್ತು.

2019: ನವದೆಹಲಿ:  ಎಲ್.ಕೆ. ಅಡ್ವಾಣಿ, ಮುರಳಿ ಮನೋಹರ ಜೋಶಿ ಮತ್ತು ಉಮಾ ಭಾರತಿಯಂತಹ ಬಿಜೆಪಿ ಮತ್ತು ಸಂಘ ಪರಿವಾರದ ನಾಯಕರ ವಿರುದ್ಧ ಕ್ರಿಮಿನಲ್ ಒಳಸಂಚು ಆರೋಪವಿರುವ ಬಾಬರಿ ಮಸೀದಿ ನೆಲಸಮ ಪ್ರಕರಣದ ವಿಚಾರಣೆಯನ್ನು  ತಿಂಗಳಲ್ಲಿ ಪೂರ್ಣಗೊಳಿಸುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿತು. ನ್ಯಾಯಮೂರ್ತಿ ರೋಹಿಂಟನ್ ನಾರಿಮನ್ ನೇತೃತ್ವದ ಪೀಠವು ಎರಡು ಪ್ರಕರಣಗಳ ಜಂಟಿ ವಿಚಾರಣೆ ನಡೆಸುತ್ತಿರುವ ವಿಶೇಷ ನ್ಯಾಯಾಧೀಶರ ಅವಧಿಯನ್ನು ವಿಸ್ತರಿಸಿತು. ಸೆಪ್ಟೆಂಬರ್ ೩೦ರಂದು ನಿವೃತ್ತರಾಗಬೇಕಾಗಿದ್ದ ವಿಶೇಷ ನ್ಯಾಯಾಧೀಶರು ಪ್ರಕರಣದ ವಿಚಾರಣೆಯನ್ನು ಪೂರ್ಣಗೊಳಿಸಲು ಇನ್ನಷ್ಟು ಕಾಲಾವಕಾಶ ನೀಡುವಂತೆ ಮನವಿ ಮಾಡಿದ್ದರು. ೧೬ನೇ ಶತಮಾನದ ವಿವಾದಾತ್ಮಕ ಕಟ್ಟಡವನ್ನು ೧೯೯೨ರ ಡಿಸೆಂಬರ್ ೬ರಂದು ನೆಲಸಮಗೊಳಿಸಿದ ಸಂಬಂಧ ನಾಯಕರ ವಿರುದ್ಧದ ಕ್ರಿಮಿನಲ್ ಒಳಸಂಚು ಆರೋಪ ಪ್ರಕರಣವನ್ನು ೨೦೧೭ರ ಏಪ್ರಿಲ್ ೧೯ರಂದು ಪುನರುಜ್ಜೀವನಗೊಳಿಸಿದ ಸುಪ್ರೀಂಕೋರ್ಟ್, ನ್ಯಾಯಾಧೀಶರಿಗೆ ಪ್ರಕರಣದ ವಿಚಾರಣೆ ಪೂರ್ಣಗೊಳಿಸಲು ಎರಡು ವರ್ಷಗಳ ಕಾಲಾವಕಾಶ ನೀಡಿತ್ತು. ಸಂವಿಧಾನದ ೧೪೨ನೇ ವಿಧಿಯ ಅಡಿಯಲ್ಲಿ ತನ್ನ ಅಸಾಧಾರಣ ಸಾಂವಿಧಾನಿಕ ಬಲವನ್ನು ಪ್ರಯೋಗಿಸಿದ್ದ ಸುಪ್ರೀಂಕೋರ್ಟ್, ಕ್ರಿಮಿನಲ್ ಒಳಸಂಚು ಪ್ರಕರಣವನ್ನು ಪುನರಜ್ಜೀವನಗೊಳಿಸಿಸ್ವರ್ಗವೇ ಕುಸಿದು ಬಿದ್ದರೂ ಸರಿ ನ್ಯಾಯ ಸಿಗಬೇಕುಎಂದು ಹೇಳಿತ್ತು.  ಅಗತ್ಯ ಬಿದ್ದಾಗ ನ್ಯಾಯದಾನದ ಕರ್ತವ್ಯವನ್ನು ಪೂರ್ಣಗೊಳಿಸಲು ತನ್ನ ಅಸಾಧಾರಣ ಬಲವನ್ನು ಬಳಸಿಕೊಳ್ಳುತ್ತಿರುವುದಾಗಿ ತನ್ನ ೪೦ ಪುಟಗಳ ತೀರ್ಪಿನಲ್ಲಿ ಹೇಳಿದ್ದ ಸುಪ್ರೀಂಕೋರ್ಟ್, ಹಾಲಿ ಪ್ರಕರಣದಲ್ಲಿ ಭಾರತೀಯ ಸಂವಿಧಾನದ ಜಾತ್ಯತೀತ ವ್ಯವಸ್ಥೆಯನ್ನೇ ಅಲುಗಾಡಿಸುವಂತಹ ಅಪರಾಧಗಳು ೨೫ ವರ್ಷಗಳ ಹಿಂದೆ ಘಟಿಸಿದ ಆಪಾದನೆ ಇದೆ ಎಂದು ತಿಳಿಸಿತ್ತು.  ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿದ್ದ ರಾಯ್ ಬರೇಲಿ ಪ್ರಕರಣವನ್ನು ಸುಪ್ರೀಂಕೋರ್ಟ್ ೨೦೧೭ರಲ್ಲಿ ಲಕ್ನೋದ ಸಿಬಿಐ ನ್ಯಾಯಾಲಯಕ್ಕೆ ಲಕ್ನೋ ಪ್ರಕರಣದ ಜೊತೆಗೆ ವಿಚಾರಣೆ ನಡೆಸುವ ಸಲುವಾಗಿ ವರ್ಗಾಯಿಸಿತ್ತು. ಲಕ್ನೋ ಪ್ರಕರಣವು ನೆಲಸಮ ಮತ್ತು ಹಿಂಸಾಚಾರ ಎಸಗಿದ ಲಕ್ಷಾಂತರ ಮಂದಿ ಅಪರಿಚಿತ ಕರಸೇವಕರ ವಿರುದ್ಧ ದಾಖಲಾದ ಪ್ರಕರಣವಾಗಿದ್ದು ಸಿಬಿಐ  ಅದರ ತನಿಖೆ ನಡೆಸುತ್ತಿತ್ತು. ರಾಯ್ ಬರೇಲಿ ಪ್ರಕರಣದಲ್ಲಿ ಬಿಜೆಪಿ ಮತ್ತು ಸಂಘ ಪರಿವಾರದ ನಾಯಕರು ವೈರತ್ವಕ್ಕೆ ಪ್ರಚೋದನೆ ನೀಡುವಂತಹ ಭಾಷಣಗಳನ್ನು ಮಾಡಿ ರಾಷ್ಟ್ರೀಯ ಸಮಗ್ರತೆಗೆ ಬೆದರಿಕೆ ಒಡ್ಡಿದ್ದರು ಎಂದು ಪ್ರಕರಣದಲ್ಲಿ ಆಪಾದಿಸಲಾಗಿತ್ತು. ಪ್ರತಿದಿನವೂ ವಿಚಾರಣೆ ನಡೆಸಿ ಎರಡು ವರ್ಷಗಳಲ್ಲಿ ತೀರ್ಪು ಪ್ರಕಟಿಸುವಂತೆ ಲಕ್ನೋ ಸಿಬಿಐ ನ್ಯಾಯಾಧೀಶರಿಗೆ ಸುಪ್ರೀಂಕೋರ್ಟ್ ಆದೇಶ ನೀಡಿತ್ತು. ನ್ಯಾಯಾಧೀಶರ ವರ್ಗಾವಣೆ ಮಾಡದಂತೆ ಮತ್ತು ಕಲಾಪಗಳನ್ನು ಮುಂದೂಡಿಕೆ ಮಾಡದಂತೆಯೂ ಸುಪ್ರೀಂಕೋರ್ಟ್ ನಿರ್ದೇಶಿಸಿತ್ತು. ಏನಾದರೂ ಸಮಸ್ಯೆಗಳಿದ್ದಲ್ಲಿ ನೇರವಾಗಿ ತನ್ನ ಗಮನಕ್ಕೆ ತರಬೇಕು ಎಂದೂ ಸುಪ್ರೀಂಕೋರ್ಟ್ ಹೇಳಿತ್ತು. ನಿರ್ದೇಶನಗಳು ಚಾಚೂ ತಪ್ಪದೆ ಪಾಲನೆಯಾಗಬೇಕು ಎಂದೂ ಸುಪ್ರೀಂಕೋರ್ಟ್ ಎಚ್ಚರಿಕೆ ನೀಡಿತ್ತುಕ್ರಿಮಿನಲ್ ಒಳಸಂಚು ಪ್ರಕರಣವನ್ನು ಪುನರುಜ್ಜೀವನಗೊಳಿಸುವ ಹಾಗೂ ಎರಡೂ ಪ್ರಕರಣಗಳನ್ನು ಒಟ್ಟುಗೂಡಿಸುವುದರೊಂದಿಗೆ, ಆರೋಪಿತ ರಾಜಕೀಯ ನಾಯಕರನ್ನು ೧೯೯೩ರ ಅಕ್ಟೋಬರ್ ೫ರಂದು ಸಿಬಿಐ ಸಲ್ಲಿಸಿದ್ದ ಸಂಯುಕ್ತ ದೋಷಾರೋಪ ಪಟ್ಟಿಯ ಅಡಿಯಲ್ಲಿ ವಿಚಾರಣೆಗೆ ಗುರಿಪಡಿಸಲು ಸೂಚಿಸಲಾಗಿತ್ತು. ನಾಯಕರಿಂದ ಕ್ರಿಮಿನಲ್ ಒಳಸಂಚು ಮತ್ತು ಕರಸೇವಕರಿಂದ ನಡೆದ ನೈಜ ನೆಲಸಮ ಕೃತ್ಯಗಳು ಜಂಟಿ ವಿಚಾರಣೆಗೆ ಗುರಿಪಡಿಸಬಹುದಾದ ಒಂದೇ ಘಟನೆಯ ವಿದ್ಯಮಾನಗಳು ಎಂದು ಪೀಠ ಒಪ್ಪಿತ್ತುಅಡ್ವಾಣಿ, ಜೋಶಿ ಮತ್ತು ಉಮಾಭಾರತಿ ಅವರ ಹೊರತಾಗಿ ವಿನಯ ಕಟಿಯಾರ್, ಸಾಧ್ವಿ ಋತಂಬರಾ, ವಿಷ್ಣು ಹರಿ ದಾಲ್ಮಿಯಾ, ಚಂಪತ್ ರೈ ಬನ್ಸಲ್, ಸತೀಶ್ ಪ್ರಧಾನ್, ಧರಮ್ ದಾಸ್, ಮಹಂತ ನೃತ್ಯ ಗೋಪಾಲದಾಸ್, ಮಹಮಾದೇಶ್ವರ ಜಗದೀಶ ಮುನಿ, ರಾಮ ಬಿಲಾಸ್ ವೇದಾಂತಿ, ವೈಕುಂಠ ಲಾಲ್ ಶರ್ಮ ಮತ್ತು ಸತೀಶ ಚಂದ್ರ ಅವರ ವಿರುದ್ಧವೂ ಒಳಸಂಚು ದೋಷಾರೋಪ ಹೊರಿಸುವಂತೆ ಲಕ್ನೋ ಕೋರ್ಟಿಗೆ ಸುಪ್ರೀಂಕೋರ್ಟ್ ಆದೇಶ ನೀಡಿತ್ತು. ಇವರೆಲ್ಲರನ್ನೂ ೧೯೯೩ರಲ್ಲಿ ಸಿಬಿಐ ದೋಷಾರೋಪ ಪಟ್ಟಿಯಲ್ಲಿ ಆರೋಪಿಗಳಾಗಿ ಹೆಸರಿಸಲಾಗಿತ್ತು. ತಪ್ಪಿತಸ್ಥರೆಂದು ಸಾಬೀತಾದರೆ, ಆರೋಪಿಗಳು ಮೂರರಿಂದ ಐದು ವರ್ಷಗಳ ಸೆರೆವಾಸವನ್ನು ಎದುರಿಸಬೇಕಾಗುತ್ತದೆ. ಪರಿಣಾಮವಾಗಿ ಅವರು ಶಿಕ್ಷೆ ಪೂರ್ಣಗೊಳಿಸಿದ ಬಳಿಕ ವರ್ಷಗಳ ಅವಧಿಗೆ ಚುನಾವಣೆಯಲ್ಲಿ ಪಾಲ್ಗೊಳ್ಳುವಿಕೆಯಿಂದ ನಿಷೇಧಿತರಾಗುತ್ತಾರೆ. ಸಂವಿಧಾನದ ೧೪೨ನೇ ವಿಧಿಯನ್ನು ಬಳಸಿಕೊಳ್ಳುವ ಮೂಲಕ ಸುಪ್ರೀಂಕೋರ್ಟ್ ತಮ್ಮ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿದೆ ಎಂಬುದಾಗಿ ಅಡ್ವಾಣಿ ಮತ್ತು ಜೋಶಿ ಅವರು ಎತ್ತಿದ ಆಕ್ಷೇಪಗಳನ್ನು ತೀಪು| ಬದಿಗೊತ್ತಿದೆ. ಬಾಬರಿ ಪ್ರಕರಣದ ವಿಚಾರಣೆಗಳು ಕಾಲುಶತಮಾನಕ್ಕೂ ಹೆಚ್ಚುಕಾಲ ಸ್ಥಗಿತಗೊಂಡು ನ್ಯಾಯದಾನವೇ ಆಗದೇ ಇರುವಾಗ ತಮ್ಮ ಮೂಲಭೂತ ಹಕ್ಕುಗಳ ಬಗ್ಗೆ ಅವರು ಹೇಗೆ ಚಿಂತೆಗೆ ಒಳಗಾಗಿರುವುದು ಹೇಗೆ ಎಂದು ಕೋರ್ಟ್ ಅಚ್ಚರಿ ವ್ಯಕ್ತ ಪಡಿಸಿತು. ಉಭಯ ಪ್ರಕರಣಗಳಲ್ಲಿ ಒಟ್ಟು ೯೦೦ ಮಂದಿ ಸಾಕ್ಷಿದಾರರಿದ್ದು ಅವರು ತಮ್ಮ ಸಾಕ್ಷ್ಯ ನೀಡಲು ಕಾದಿದ್ದರು.
2019: ನವದೆಹಲಿ: ಉತ್ತರ ಪ್ರದೇಶದ ಸೋನಭದ್ರ ಜಿಲ್ಲೆಯಲ್ಲಿ ಭೂವಿವಾದದ ಹಿನ್ನೆಲೆಯಲ್ಲಿ ಸಂಭವಿಸಿದ್ದ ಗುಂಡಿನ ಘರ್ಷಣೆಯಲ್ಲಿ ಸಾವನ್ನಪ್ಪಿದ ವ್ಯಕ್ತಿಗಳ ಕುಟುಂಬ ಸದಸ್ಯರನ್ನು ಭೇಟಿ ಮಾಡಲು ಹೊರಟಿದ್ದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರ ಅವರನ್ನು  ಪೊಲೀಸರು ತಡೆದು ತಮ್ಮ ವಶಕ್ಕೆ ಪಡೆದುಕೊಂಡರು. ಘೋರವಾಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗ್ರಾಮದ ಮುಖ್ಯಸ್ಥ ಮತ್ತು ಆತನ ಬೆಂಬಲಿಗರು ಪ್ರತಿಸ್ಪರ್ಧಿ ಗುಂಪಿನ ಮೇಲೆ ಭೂವಿವಾದದ ಜಗಳ ಕಾಲದಲ್ಲಿ ಗುಂಡು ಹಾರಿಸಿದ ಪರಿಣಾಮವಾಗಿ ಮೂವರು ಮಹಿಳೆಯರು ಸೇರಿದಂತೆ ೧೦ ಮಂದಿ ಬುಧವಾರ ಸಾವನ್ನಪ್ಪಿದ್ದರು. ಘಟನೆಯಲ್ಲಿ ಇತರ ೧೯ಮಂದಿ ಗಾಯಗೊಂಡಿದ್ದರು. ಘಟನೆಯಲ್ಲಿ ಸಾವನ್ನಪ್ಪಿದವರು ಗೊಂಡ ಬುಡಕಟ್ಟಿಗೆ ಸೇರಿದವರಾಗಿದ್ದರು.  ‘ಅವರು ತಾವು ಬಯಸಿದಂತೆ ಮಾಡಬಹುದು, ಆದರೆ ನಮ್ಮನ್ನು ಬಗ್ಗಿಸಲಾಗುವುದಿಲ್ಲ. ನಾವು ಶಾಂತಿಯುತವಾಗಿ ಸಾವನ್ನಪ್ಪಿದವರ ಕುಟುಂಬಗಳನ್ನು ಭೇಟಿ ಮಾಡಿ ಮಾಡಲು ಹೋಗುತ್ತಿದ್ದೇವೆ. ಅವರು ಏಕೆ ನನ್ನನ್ನು ಒಯ್ಯುತ್ತಿದ್ದಾರೆ ಎಂದು ನನಗೆ ಗೊತ್ತಿಲ್ಲ. ನಾವು ಎಲ್ಲಿಗೆ ಬೇಕಾದರೂ ಹೋಗಲು ಸಿದ್ಧಎಂದು ಪ್ರಿಯಾಂಕಾ ಅವರನ್ನು ಉಲ್ಲೇಖಿಸಿದ ಸುದ್ದಿ ಸಂಸ್ಥೆ ವರದಿ ತಿಳಿಸಿತು. ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ಹಾಗೂ ಪ್ರಿಯಾಂಕಾ ಅವರ ಸಹೋದರ ರಾಹುಲ್ ಗಾಂಧಿ ಅವರುಉತ್ತರ ಪ್ರದೇಶದ ಸೋನಭದ್ರದಲ್ಲಿ ಪ್ರಿಯಾಂಕಾ ಅವರ ಅಕ್ರಮ ಬಂಧನವು ಚಿಂತಾಜನಕವಾದದ್ದು. ಭೂಮಿ ತೆರವಿಗೆ ನಿರಾಕರಿಸಿದ್ದಕ್ಕಾಗಿ ಗುಂಡಿನ ದಾಳಿಗೆ ಬಲಿಯಾದ ೧೦ ಮಂದಿ ಆದಿವಾಸಿ ರೈತರ ಕುಟುಂಬಗಳನ್ನು ಭೇಟಿ ಮಾಡಲು ಹೊರಟಿದ್ದ ಪ್ರಿಯಾಂಕಾ ಅವರನ್ನು ತಡೆಯಲು  ನಡೆಸಲಾಗಿರುವ ಅಧಿಕಾರದ ನಿರಂಕುಶ ಬಳಕೆಯು ಬಿಜೆಪಿ ಸರ್ಕಾರದ ಹೆಚ್ಚುತ್ತಿರುವ ಅಭದ್ರತೆಯ ಭೀತಿಯನ್ನು ತೋರಿಸಿದೆಎಂದು ಟ್ವೀಟ್ ಮಾಡಿದರು. ಇದಕ್ಕೆ ಮುನ್ನ ಪ್ರಿಯಾಂಕಾ ಗಾಂಧಿಯವರು ಅಧಿಕಾರಿಗಳು ಸಂತ್ರಸ್ಥ ಕುಟುಂಬಗಳನ್ನು ಭೇಟಿಯಾಗಲು ತಮಗೆ ಅವಕಾಶ ನೀಡುತ್ತಿಲ್ಲ ಎಂದು ಆಪಾದಿಸಿದ್ದರು. ಗುಂಡಿನ ಘರ್ಷಣೆಯಲಿ ಗಾಯಗೊಂಡಿದ್ದವರನ್ನೂ ಅವರು ಭೇಟಿ ಮಾಡಿದರು.  ‘ಸಂತ್ರಸ್ಥರ ಕುಟುಂಬಗಳನ್ನು ಭೇಟಿ ಮಾಡಲು ಬಯಸಿದ್ದೇನೆ. ನನ್ನ ಜೊತೆಗೆ ನಾಲ್ವರನ್ನು ಮಾತ್ರ ಕರೆದೊಯ್ಯುವೆ ಎಂದು ಕೂಡಾ ಹೇಳಿದ್ದೇನೆ. ಆದರೂ ಆಡಳಿತವು ನನಗೆ ಅಲ್ಲಿಗೆ ಹೋಗಲು ಬಿಡುತ್ತಿಲ್ಲ. ನಮ್ಮನ್ನು ಇಲ್ಲಿ ತಡೆದದ್ದು ಏಕೆ ಎಂದು ಅವರು ಹೇಳಬೇಕು. ನಾವು ಇಲ್ಲೇ ಶಾಂತವಾಗಿ ಕುಳಿತುಕೊಳ್ಳುತ್ತೇವೆಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದರು. ಭಾರತೀಯ ಆಡಳಿತ ಸೇವೆಗೆ (ಐಎಎಸ್) ಸೇರಿದ ಅಧಿಕಾರಿಯೊಬ್ಬರು ತಮ್ಮ ೯೦ ಬಿಘಾ ಭೂಮಿಯನ್ನು ಗ್ರಾಮದ ಮುಖ್ಯಸ್ಥ ಯಜ್ಞ ದತ್ತ ಎಂಬವರಿಗೆ ಎರಡು ವರ್ಷಗಳ ಹಿಂದೆ ಮಾರಾಟ ಮಾಡಿದ್ದರು. ದತ್ತ ಅವರು ಜಾಗವನ್ನು ಸ್ವಾಧೀನಕ್ಕೆ ಪಡೆಯಲು ಬಯಸಿದ್ದರು ಎಂದು ಉತ್ತರ ಪ್ರದೇಶದ ಪೊಲೀಸ್ ಮಹಾ ನಿರ್ದೇಶಕ (ಡಿಜಿಪಿ) ಒಪಿ ಸಿಂಗ್  ತಿಳಿಸಿದ್ದರು. ಗುಂಡಿನ ಘರ್ಷಣೆ ಘಟನೆಗೆ ಸಂಬಂಧಿಸಿದಂತೆ ವಿರೋಧ ಪಕ್ಷಗಳು ಉತ್ತರ ಪ್ರದೇಶ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದಿವೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದಕ್ಕೆ ಶೂಟೌಟ್ ಘಟನೆ ಕನ್ನಡಿಯಾಗಿದೆ ಎಂದು ಅವರು ಹೇಳಿದ್ದರು.

2019: ರಾಯ್ಪುರ: ರಾಯ್ ಪುರದ ಹೊರವಲಯದಲ್ಲಿ ಸಂಭವಿಸಿದ ಟ್ರಕ್-ಕಾರು ಡಿಕ್ಕಿಯಲ್ಲಿ ಹಲವಾರು ಹಿಂದಿ ಟಿವಿ ಸರಣಿಗಳಲ್ಲಿ ನಟಿಸಿದ್ದ ೧೪ರ ಹರೆಯದ ಬಾಲನಟ ಶಿವಲೇಖ್ ಸಿಂಗ್ ಸಾವನ್ನಪ್ಪಿದ್ದು, ದುರಂತದಲ್ಲಿ ಅವರ ಕಾರಿನಲ್ಲಿದ್ದ ಅವರ ತಂದೆ, ತಾಯಿ ಮತ್ತು ಇನ್ನೊಬ್ಬ ವ್ಯಕ್ತಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದರು. 2019 ಜುಲೈ 18ರ ಗುರುವಾರ ಮಧ್ಯಾಹ್ನ ಗಂಟೆ ವೇಳೆಗೆ ಧಾರೀಶ್ವರ ಪ್ರದೇಶದಲ್ಲಿ ಅಪಘಾತ ಸಂಭವಿಸಿತು ಎಂದು ರಾಯ್ ಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರಿಫ್ ಶೇಖ್ ಹೇಳಿದರು. ಅವರ ಕಾರು ಬಿಲಾಸಪುರದಿಂದ ರಾಯ್ ಪುರದತ್ತ ಹೊರಟಿತ್ತು. ಹಿಂದಿನಿಂದ ಬಂದ ಟ್ರಕ್ ಬದಿಯಿಂದ ಅವರ ಕಾರಿಗೆ ಡಿಕ್ಕಿ ಹೊಡೆಯಿತು. ಶಿವಲೇಖ್ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಅವರ ತಾಯಿ ಲೇಖನ ಮತ್ತು ತಂದೆ ಶಿವೇಂದ್ರ ಸಿಂಗ್ ಹಾಗೂ ನವೀನ್ ಸಿಂಗ್ ಎಂಬುದಾಗಿ ಗುರುತಿಸಲಾದ ಇನ್ನೊಬ್ಬ ವ್ಯಕ್ತಿ ಗಾಯಗೊಂಡಿದ್ದಾರೆ. ಲೇಖನಸಿಂಗ್ ಅವರ ಸ್ಥಿತಿ ಗಂಭೀರವಾಗಿದೆ ಎಂದೂ ಅವರು ಹೇಳಿದರು.  ಪರಾರಿಯಾಗಿರುವ ಟ್ರಕ್ ಚಾಲನಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ನುಡಿದರು. ಶಿವಲೇಖ್ ಅವರು ರಾಯ್ ಪುರಕ್ಕೆ ಮಾಧ್ಯಮ ಸಂದರ್ಶನಕ್ಕಾಗಿ ಬರುತ್ತಿದ್ದಾಗ ದುರಂತ ಸಂಭವಿಸಿದೆ ಎಂದು ಕುಟುಂಬದ ಗೆಳೆಯ ಧೀರೇಂದ್ರ ಕುಮಾರ್ ಶರ್ಮ ತಿಳಿಸಿದರು. ಛತ್ತೀಸ್ ಗಢದ ಜಂಗೀರ್ -ಚಂಪಾದ ನಿವಾಸಿಯಾದ ಶಿವಲೇಖ್ ಮತ್ತು ಅವರ ಪಾಲಕರು ಕಳೆದ ೧೦ ವರ್ಷಗಳಿಂದ ಮುಂಬೈಯಲ್ಲಿ ವಾಸವಾಗಿದ್ದರು. ಅವರುಸಂಕಟಮೋಚನ ಹನುಮಾನ್ಮತ್ತುಸಸುರಾಲ್ ಸಿಮರ್ ಕಾಸರಣಿ ಸೇರಿದಂತೆ ಹಲವಾರು ಟಿವಿ ಧಾರಾವಾಹಿಗಳಲ್ಲಿ ನಟಿಸಿದ್ದರು. ಅವರು ಟಿವಿ ರಿಯಾಲಿಟಿ ಶೋಗಳಲ್ಲೂ ಭಾಗವಹಿಸಿದ್ದರು.

2019: ಬೆಂಗಳೂರು : ಐಎಂಎ ಕಂಪೆನಿ ಬಹುಕೋಟಿ ವಂಚನೆ ಪ್ರಕರಣದ ಪ್ರಮುಖ ಆರೋಪಿ ಐಎಂಎ  ಜ್ಯುವೆಲ್ಸ್ ಮಾಲೀಕ ಮನ್ಸೂರ್ ಖಾನ್ನನ್ನು ಬಂಧಿಸುವಲ್ಲಿ ಪೊಲೀಸ್ ಅಧಿಕಾರಿಗಳು ಯಶಸ್ವಿಯಾದರು. 2 ಸಾವಿರ ಕೋಟಿ ರೂ. ವಂಚನೆ ಮಾಡಿ ದುಬೈಯಲ್ಲಿ ತಲೆಮರೆಸಿಕೊಂಡಿದ್ದ ಮೊಹಮ್ಮದ್ಮನ್ಸೂರ್ಖಾನ್ದೆಹಲಿಯಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿರುವುದಾಗಿ ವರದಿಗಳು ತಿಳಿಸಿದವು. ತನಗೆ ಆರೋಗ್ಯ ಸರಿಯಿಲ್ಲದ ಕಾರಣ ವಿಶ್ರಾಂತಿ ಪಡೆಯುತ್ತಿದ್ದೆ ಎಂದು ವಿಡಿಯೋ ಮಾಡಿ ಪೊಲೀಸ್ಕಮಿಷನರ್ಗೆ ಕಳುಹಿಸಿದ್ದ ಮನ್ಸೂರ್ಖಾನ್​ 2019 ಜುಲೈ 14ರ  ಭಾನುವಾರ 24 ಗಂಟೆಗಳಲ್ಲಿ ಬೆಂಗಳೂರಿಗೆ ವಾಪಾಸ್ಆಗುವುದಾಗಿ ತಿಳಿಸಿದ್ದ. ಆದರೆ, ಆತ ಸುಳ್ಳು ಹೇಳಿದ್ದಾನೆಂದು ಗೊತ್ತಾಗುತ್ತಿದ್ದಂತೆ ಎಸ್ಐಟಿ ಅಧಿಕಾರಿಗಳು ಮತ್ತೆ ಚುರುಕಾಗಿದ್ದರು. ಹಿಂದಿನ ದಿನ ದೆಹಲಿ ವಿಮಾನ ನಿಲ್ದಾಣಕ್ಕೆ ದುಬೈಯಿಂದ ತಡರಾತ್ರಿ ಆಗಮಿಸಿದ ಮನ್ಸೂರ್ಖಾನ್ನನ್ನು ವಲಸೆ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಬಳಿಕ, ವಿಶೇಷ ತನಿಖಾ ತಂಡ (ಎಸ್ಐಟಿ) ಬದಲಿಗೆ  ಜಾರಿ ನಿರ್ದೇಶನಾಲಯ  ವಶಕ್ಕೆ ಮನ್ಸೂರ್ಖಾನ್ನನ್ನು ನೀಡಲಾಯಿತು.

2018: ಉಡುಪಿ: ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಶಿರೂರು ಮಠದ ಶ್ರೀಶ್ರೀ ಲಕ್ಷ್ಮೀವರ ತೀರ್ಥ ಶ್ರೀಪಾದ ಸ್ವಾಮೀಜಿ ಅವರು ಗುರುವಾರ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ವಿಧಿವಶರಾದರು. ಅವರಿಗೆ ೫೫ ವರ್ಷ ವಯಸ್ಸಾಗಿತ್ತು. ವಿಷಾಹಾರ ಹಾಗೂ ಅತಿಸಾರದ ಪರಿಣಾಮವಾಗಿ ರಕ್ತದೊತ್ತಡ ಏರುಪೇರಾಗಿ ಅಸ್ವಸ್ಥರಾದ ಸ್ವಾಮೀಜಿ ಅವರನ್ನು ಕಸ್ತೂರ್ಬಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಬಹು ಅಂಗಾಂಗ ವೈಫಲ್ಯ ಮತ್ತು ಉಸಿರಾಟದ ತೊಂದರೆಯ ಪರಿಣಾಮವಾಗಿ ಅವರು ಆಸ್ಪತ್ರೆಯಲ್ಲಿ ಕೊನೆಯುಸಿರು ಎಳೆದರುಅವರ ಪಾರ್ಥಿವ ಶರೀರವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿದವು. ಅದಮಾರು ಮಠಕ್ಕೆ ಇತ್ತೀಚೆಗೆ ನೀಡಲಾಗಿದ್ದ ಶಿರೂರು ಮಠದ ಪಟ್ಟದ ದೇವರ ವಾಪಸಾತಿಗೆ ಸಂಬಂಧಿಸಿದ ವಿವಾದದ ಪರಿಣಾಮವಾಗಿ ಶಿರೂರು ಶ್ರೀಗಳು ಸುದ್ದಿಯಲ್ಲಿದ್ದರು. ಕೆಲವು ತಿಂಗಳುಗಳ ಹಿಂದೆ ಅಸ್ವಾಸ್ಥ್ಯದ ಹಿನ್ನೆಲೆಯಲ್ಲಿ ತಮ್ಮ ಮಠದಶ್ರೀ ಅನ್ನ ವಿಠಲ’ ಪಟ್ಟದ ದೇವರನ್ನು ಅದಮಾರು ಮಠದ ಕಿರಿಯ ಸ್ವಾಮೀಜಿ ಈಶಪ್ರಿಯ ತೀರ್ಥ ಸ್ವಾಮೀಜಿ ಅವರಿಗೆ ಶಿರೂರು ಶ್ರೀಗಳು ಒಪ್ಪಿಸಿದ್ದರುಆರೋಗ್ಯದಲ್ಲಿ ಚೇತರಿಕೆಯಾದ ಬಳಿಕ ಪಟ್ಟದ ದೇವರನ್ನು ಹಿಂದಿರುಗಿಸುವಂತೆ ಶ್ರೀಗಳು ಕೋರಿದ್ದರು. ಆದರೆ ಉಳಿದ ಆರು ಮಠಗಳ ಸ್ವಾಮೀಜಿಗಳು ಶಿರೂರು ಶ್ರೀಗಳು ಯತಿಧರ್ಮವನ್ನು ಪಾಲಿಸುತ್ತಿಲ್ಲ ಎಂದು ಕಾರಣಕ್ಕಾಗಿ ಪಟ್ಟದ ದೇವರನ್ನು ಹಿಂದಿರುಗಿಸಲು ನಿರಾಕರಿಸಿದ್ದರು. ಪಟ್ಟದ ದೇವರನ್ನು ಹಿಂದಿರುಗಿಸಲು ಶಿರೂರು ಶ್ರೀಗಳು ಶಿಷ್ಯ ಸ್ವೀಕಾರ ಮಾಡಬೇಕು ಎಂದು ಅವರು ಶರತ್ತು ಒಡ್ಡಿದ್ದರು ಶರತ್ತು ಶಿರೂರು ಶ್ರೀಗಳಿಗೆ ಸಮ್ಮತವಿರಲಿಲ್ಲ. ಪಟ್ಟದ ದೇವರನ್ನು ಹಿಂದಿರುಗಿಸದೇ ಇದ್ದಲ್ಲಿ ಕ್ರಿಮಿನಲ್ ದಾವೆ ದಾಖಲಿಸುವುದಾಗಿಯೂ ಶ್ರೀಗಳು ಜುಲೈ ೧೬ರಂದು ಎಚ್ಚರಿಸಿದ್ದರು. ಕನ್ನಡ ಟಿವಿ ವಾಹಿನಿಯೊಂದರಲ್ಲಿ ಮಾರ್ಚ್ ೧೩ರಂದು ಪ್ರಸಾರವಾದ ಸಂದರ್ಶನ ಒಂದರಲ್ಲಿ ಶಿರೂರು ಶ್ರೀಗಳು ಅಷ್ಟಮಠಗಳ ಇತರ ಯತಿಗಳ ಬಗ್ಗೆ ಕೀಳಾಗಿ ಮಾತನಾಡಿದ್ದರು ಎಂಬ ವಿವಾದವೂ ಎದ್ದಿತ್ತು. ಆದರೆ ಶ್ರೀಗಳು ಬಳಿಕ ತಮ್ಮ ಸಂದರ್ಶನವನ್ನು ತಿರುಚಲಾಗಿದೆ, ತಾವು ಇತರ ಯತಿಗಳ ಬಗ್ಗೆ ಅಂತಹ ಭಾಷೆಯಲ್ಲಿ ಮಾತನಾಡಿಲ್ಲ ಎಂದು ಸ್ಪಷ್ಟ ಪಡಿಸಿದ್ದರುಆದರೆ ವಿಡಿಯೋದಲ್ಲಿ ಪ್ರಸಾರವಾಗಿದ್ದ ಟೀಕೆಗಳು ಅಷ್ಟಮಠಗಳ ಇತರ ಯತಿಗಳಲ್ಲಿ ತೀವ್ರ ಅಸಮಾಧಾನವನ್ನು ಹುಟ್ಟು ಹಾಕಿತ್ತು. ವಿಷಯಕ್ಕೆ ಸಂಬಂಧಿಸಿದಂತೆ ಸರಣಿ ಸಭೆಗಳನ್ನು ನಡೆಸಿದ್ದ ಇತರ ಯತಿಗಳು ಕಡೆಗೆ ಶಿರೂರು ಮಠದ ಪಟ್ಟದ ದೇವರನ್ನು ಹಿಂದಿರುಗಿಸಬಾರದೆಂಬ ತೀರ್ಮಾನಕ್ಕೆ ಬಂದಿದ್ದರು೨೦೧೮ರ ಮಾರ್ಚ್ ತಿಂಗಳಲ್ಲಿ ಕರ್ನಾಟಕ ವಿಧಾನ ಸಭಾ ಚುನಾವಣೆಯ ವೇಳೆಯಲ್ಲಿ ತಾವು ಸ್ಪರ್ಧಿಸುವುದಾಗಿ ಶಿರೂರು ಶ್ರೀಗಳು ಮಾಡಿದ್ದ ಪ್ರಕಟಣೆಯೂ ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಭಾರತೀಯ ಜನತಾ ಪಕ್ಷದಿಂದ ಸ್ಪರ್ಧಿಸಬಯಸಿದ್ದ ಅವರಿಗೆ ಬಿಜೆಪಿ ಟಿಕೆಟ್ ಸಿಗದೇ ಹೋದಾಗ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದರು. ಮೂಲಕ ಚುನಾವಣಾ ಕಣಕ್ಕೆ ಇಳಿದ ಅಷ್ಟ ಮಠಗಳ ಮೊದಲ ಸ್ವಾಮೀಜಿ ಎನಿಸಿದ್ದರು. ಆದರೆ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರ ಬಗೆಗಿನ ಅಭಿಮಾನದ ಕಾರಣಕ್ಕಾಗಿ ತಾವು ನಾಮ ಪತ್ರ ಹಿಂತೆಗೆದುಕೊಳ್ಳುವುದಾಗಿ ಪ್ರಕಟಿಸಿ, ನಾಮಪತ್ರ ಹಿಂತೆಗೆದುಕೊಂಡಿದ್ದರುತಮ್ಮ ಎಂಟನೇ ವಯಸ್ಸಿನಲ್ಲಿಸನ್ಯಾಸ ಆಶ್ರಮಕ್ಕೆ ಕಾಲಿರಿಸಿದ್ದ ಶಿರೂರು ಶ್ರೀಗಳು ಶಿರೂರು ಮಠದ ಮುಖ್ಯಸ್ಥರಾಗಿದ್ದ ತಮ್ಮ ೪೭ ವರ್ಷಗಳ ಅವಧಿಯಲ್ಲಿ ಮೂರು ಪರ್ಯಾಯಗಳಲ್ಲಿ (೧೯೭೮-೮೦, ೧೯೯೪-೯೬ ಮತ್ತು ೨೦೧೦-೧೨) ಶ್ರೀಕೃಷ್ಣನ ಪೂಜಾ ಕೈಂಕರ್ಯ ನೆರವೇರಿಸಿದ್ದರುಶ್ರೀಕೃಷ್ಣ ವಿಗ್ರಹವನ್ನು ವೈವಿಧ್ಯಮಯ ರೀತಿಯಲ್ಲಿ ಸುಂದರವಾಗಿ ಅಲಂಕರಿಸುವುದರಲ್ಲಿ ಶಿರೂರು ಶ್ರೀಗಳು ಖ್ಯಾತಿ ಪಡೆದಿದ್ದರು. ಈಜು, ಡ್ರಮ್ ಬಾರಿಸುವುದರಲ್ಲಿ ಪರಿಣಿತರಾಗಿದ್ದ ಶ್ರೀಗಳೂ ಉತ್ತಮ ಕರಾಟೆ ಪಟುವೂ ಆಗಿದ್ದರು. ಅಂತಾರಾಷ್ಟ್ರೀಯ ಖ್ಯಾತಿಯ ಡ್ರಮ್ ವಾದಕ ಶಿವಮಣಿ ಅವರ ಜೊತೆಗೆ ಶ್ರೀಗಳು ತಿಂಗಳ ಹಿಂದೆಯಷ್ಟೇ ಡ್ರಮ್ ಬಾರಿಸಿ ಎಲ್ಲರ ಮೆಚ್ಚುಗೆ ಗಳಿಸಿದ್ದರು. ಶಿವಮಣಿ ಅವರ ಸಹಕಾರದೊಂದಿಗೆ ಸಂಗೀತ ಅಕಾಡೆಮಿ ಸ್ಥಾಪಿಸಿ ಸಂಗೀತ ಶಾಲೆ ಆರಂಭಿಸುವ ಗುರಿ ಹೊಂದಿದ್ದ ಶ್ರೀಗಳು ಅಕಾಡೆಮಿಗಾಗಿ ಶಿಲಾನ್ಯಾಸ ನೆರವೇರಿಸಿದ್ದರು. 

2018: ನವದೆಹಲಿ: ಮಹಾತ್ಮಾ ಗಾಂಧಿ (ಹೊಸ) ನೋಟುಗಳ ಸರಣಿಯಲ್ಲಿ ೧೦೦ ರೂಪಾಯಿ ಮುಖಬೆಲೆಯ ಹೊಸ ನೋಟನ್ನು ಬಿಡುಗಡೆ ಮಾಡಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿ ) ಸಜ್ಜಾಯಿತು. ತನ್ನ ನಿಯಮಿತ ಚಟುವಟಿಕೆಗಳ ಅಡಿಯಲ್ಲಿ ಆರ್ ಬಿ ಹೊಸ ನೋಟುಗಳನ್ನು ಬಿಡುಗಡೆ ಮಾಡಲಿದೆ.  ನೂರು ರೂಪಾಯಿ ಮುಖಬೆಲೆಯ ಹೊಸ ಕರೆನ್ಸಿ ನೋಟು ಗುಜರಾತಿನ ಚಾರಿತ್ರಿಕ ರಾಣಿಯ ಕಲ್ಯಾಣಿಯ ಮುದ್ರೆಯನ್ನು ಹೊಂದಿರಲಿದ್ದು ರಾಷ್ಟ್ರದ ಸಾಂಸ್ಕೃತಿಕ ಹಿರಿಮೆಯನ್ನು ಬಿಂಬಿಸಲಿದೆ. ನೀಲಿ, ನೇರಳೆ, ಗುಲಾಬಿ (ಲ್ಯಾವೆಂಡರ್) ಬಣ್ಣಗಳ ಹಿನ್ನೆಲೆಯನ್ನು ಹೊಸ ೧೦೦ ರೂಪಾಯಿ ನೋಟು ಹೊಂದಿರುತ್ತದೆ ಎಂದು ಭಾರತೀಯ ರಿಸರ್ವ್ ಬ್ಯಾಂಕಿನ ಪ್ರಕಟಣೆ ತಿಳಿಸಿತು.  ಹೊಸ ೧೦೦ ರೂಪಾಯಿ ನೋಟು, ಹಿಂದಿನ ನೂರು ರೂಪಾಯಿ ನೋಟಿನ ಗಾತ್ರಕ್ಕಿಂತ ಕಿರಿದಾಗಿದ್ದು. ೧೦ ರೂಪಾಯಿ ನೋಟಿಗಿಂತ ಸ್ವಲ್ಪ ದೊಡ್ಡದಾಗಿರುತ್ತದೆ.. ತೂಕ ಹಳೆಯ ೧೦೦ ರೂಪಾಯಿ ನೋಟಿಗಿಂತ ಕಡಿಮೆ ಇರುತ್ತದೆ.  ೧೦೦ ರೂಪಾಯಿಯ ಹೊಸ ನೋಟಿನ ಮುದ್ರಣ ಈಗಾಗಲೇ ದೇವಾಸ್ ಮುದ್ರಣಾಲಯದಲ್ಲಿ ಆರಂಭವಾಗಿದೆ. ನೋಟುಗಳ ಮುದ್ರಣಕ್ಕೆ ದೇಶೀ ನಿರ್ಮಿತ ಶಾಯಿ (ಇಂಕ್) ಬಳಸಲಾಗುತ್ತಿದೆ. ಹೊಸ ನೋಟಿಗೆ ಅನುಗುಣವಾಗಿ ಬ್ಯಾಂಕುಗಳು ತಮ್ಮ ಎಟಿಎಂಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಹೊಸ ನೋಟಿನಲ್ಲಿ ಹಲವಾರು ಸೂಕ್ಷ್ಮ ಭದ್ರತಾ ವೈಶಿಷ್ಟ್ಯಗಳನ್ನು ಅಳವಡಿಸಲಾಗಿದೆ. ನೇರಳಾತೀತ (ಅಲ್ಟ್ರಾ ವಯೋಲೆಟ್) ಬೆಳಕಿನ ಕೆಳಗೆ ಮಾತ್ರ ಭದ್ರತಾ ವೈಶಿಷ್ಟ್ಯಗಳನ್ನು ಪತ್ತೆ ಹಚ್ಚಬಹುದು ಎಂದು ಮೂಲಗಳು ಹೇಳಿವೆ.

2018: ನವದೆಹಲಿ: ಕಾನೂನು ಪ್ರಕ್ರಿಯೆಯನ್ನು ತಪ್ಪಿಸಿಕೊಂಡು ವಿದೇಶಕ್ಕೆ ಪರಾರಿಯಾಗುವ ದೇಶಭ್ರಷ್ಟ ಪ್ರಭಾವಿ ವ್ಯಕ್ತಿಗಳ ದೇಶದೊಳಗಿನ ಆಸ್ತಿಪಾಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಅವಕಾಶ ಕಲ್ಪಿಸುವ ದೇಶಭ್ರಷ್ಟ ಆರ್ಥಿಕ ಅಪರಾಧಿಗಳ ಮಸೂದೆಗೆ (೨೦೧೮) ಲೋಕಸಭೆ ತನ್ನ ಅನುಮೋದನೆ ನೀಡಿತು.   ನಿಟ್ಟಿನಲ್ಲಿ ಸುಗ್ರೀವಾಜ್ಞೆ ಹೊರಡಿಸಿದ್ದ ಸರ್ಕಾರ ಬಳಿಕ ಆರ್ಥಿಕ ಅಪರಾಧಿಗಳಿಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಲು ಮತ್ತು ಅಂತಹ ಆರ್ಥಿಕ ಅಪರಾಧಿಗಳ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಭಾರತೀಯ ಅಧಿಕಾರಿಗಳಿಗೆ ಅಧಿಕಾರ ನೀಡುವ ಕ್ರಮಗಳನ್ನು ತಾನು ಕೈಗೊಳ್ಳುತ್ತಿರುವುದಾಗಿ ಪ್ರಕಟಿಸಿತ್ತುಪ್ರಸ್ತುತ ಲೋಕಸಭೆಯು ಅಂಗೀಕರಿಸಿರುವ ಮಸೂದೆಯುಆರ್ಥಿಕ ಅಪರಾಧಿಗಳು ಭಾರತೀಯ ಕಾನೂನು ಪ್ರಕ್ರಿಯೆಯಿಂದ ತಪ್ಪಿಸಿಕೊಳ್ಳದಂತೆ ಸೂಕ್ತ ಕ್ರಮ ಕೈಗೊಳ್ಳಲು ಭಾರತೀಯ ಅಧಿಕಾರಿಗಳಿಗೆ ಅಧಿಕಾರ ಕಲ್ಪಿಸುವುದು ಮತ್ತು ಅಂತಹ ಅಪರಾಧಿಗಳ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಅಧಿಕಾರ ಒದಗಿಸುವುದು’ ಎಂದು ಸರ್ಕಾರ ಹೇಳಿತು. ಮಸೂದೆಯು ಹಣ ವರ್ಗಾವಣೆ ತಡೆ ಕಾಯ್ದೆಯ (೨೦೦೨) ಅಡಿಯಲ್ಲಿ ವಿಶೇಷ ನ್ಯಾಯಾಲಯ ರಚನೆಗೆ ಪ್ರಸ್ತಾಪಿಸಿದೆ ಮತ್ತು ಅಂತಹವರನ್ನು ದೇಶಭ್ರಷ್ಟ ಆರ್ಥಿಕ ಅಪರಾಧಿಗಳು ಎಂಬುದಾಗಿ ಘೋಷಿಸಲು ನ್ಯಾಯಾಲಯಗಳಿಗೆ ಅಧಿಕಾರ ನೀಡುತ್ತದೆ. ನ್ಯಾಯಾಲಯಗಳು ಅಥವಾ ನ್ಯಾಯಾಧಿಕರಣಗಳು (ಟ್ರಿಬ್ಯೂನಲ್) ಇಂತಹ ಅಪರಾಧಿಗಳನ್ನು ಅಥವಾ ಅವರಿಗೆ ಸಂಬಂಧಿಸಿದ ಕಂಪೆನಿಗಳನ್ನು ತನ್ನ ಮುಂದೆ ಸಿವಿಲ್ ಪ್ರತಿಪಾದನೆಗಳ ಅರ್ಜಿ ಸಲ್ಲಿಕೆ ಮತ್ತು ರಕ್ಷಣೆ ಮಾಡಿಕೊಳ್ಳದಂತೆ ನಿರ್ಬಂಧಿಸಬಹುದು. ಹಣಕಾಸು ಸಚಿವಾಲಯದ ದೇಶಭ್ರಷ್ಟ ಆರ್ಥಿಕ ಅಪರಾಧಿಗಳ ಮಸೂದೆ, ೨೦೧೭ರ ಕರಡನ್ನು ಸೆಪ್ಟೆಂಬರ್ ತಿಂಗಳಲ್ಲಿ ಕಾನೂನು ಸಚಿವಾಲಯ ಅನುಮೋದಿಸಿತ್ತು. ಈಗ ಲೋಕಸಭೆಯ ಅನುಮೋದನೆಯಿಂದಾಗಿ ಮಸೂದೆ ತ್ವರಿತವಾಗಿ ಕಾನೂನಾಗಿ ಪರಿವರ್ತನೆಗೊಳ್ಳುತ್ತಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಹಗರಣದ ಹಿನ್ನೆಲೆಯಲ್ಲಿ ಕಾನೂನಿನ ತ್ವರಿತ ಜಾರಿಗೆ ನರೇಂದ್ರ ಮೋದಿ ಸರ್ಕಾರವೂ ಆದ್ಯತೆ ನೀಡಿದೆ. 

2018: ನವದೆಹಲಿ : ಲೋಕಸಭೆಯಲ್ಲಿ ಜುಲೈ ೨೦ರ ಶುಕ್ರವಾರ ನಡೆಯಲಿರುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧದ ಅವಿಶ್ವಾಸ ನಿರ್ಣಯ ಕಲಾಪಕ್ಕೆ ಮುಂಚಿತವಾಗಿಯೇ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಶಿವಸೇನೆಯ ಮುಖ್ಯಸ್ಥ ಉದ್ಧವ್ ಠಾಕರೆ ಜತೆಗೆ ಮಾತನಾಡಿ ಶಿವಸೇನೆಯ ಬೆಂಬಲವನ್ನು ಖಾತರಿಪಡಿಸಿಕೊಂಡರುಉದ್ಧವ್ ಠಾಕರೆ ಅವರು ಲೋಕಸಭೆಯಲ್ಲಿ ಬಿಜೆಪಿಯನ್ನು  ಬೆಂಬಲಿಸುವುದಾಗಿ ಹೇಳಿದ್ದಾರೆ ಎಂದು ಅಮಿತ್ ಶಾ ಸುದ್ದಿಗಾರರಿಗೆ ತಿಳಿಸಿದರು.  ಆದರೆ ಶಿವಸೇನೆಯ ಸಂಸತ್ ಸದಸ್ಯ ಸಂಜಯ್ ರಾವತ್ ಅವರು ಅವಿಶ್ವಾಸ ನಿರ್ಣಯ ಮೇಲಿನ ಚರ್ಚೆಯ ವೇಳೆಯಲ್ಲಿ ಶಿವಸೇನೆಗೆ ಬಹಳಷ್ಟು ವಿಷಯಗಳನ್ನು  ಹೇಳಲಿಕ್ಕಿದೆ ಎಂದು ಹೇಳಿದರು. "ನೀವು ೨೪ ತಾಸು ಕಾಯಬೇಕು; ಸದನದಲ್ಲಿ ಶುಕ್ರವಾರ ಚರ್ಚೆ ನಡೆಯಲಿ. ಶಿವಸೇನೆಗೂ ಬಹಳಷ್ಟು ವಿಷಯಗಳನ್ನು  ಹೇಳುವುದಕ್ಕಿದೆ. ವಿರೋಧ ಪಕ್ಷಗಳ ಮಾತುಗಳನ್ನು ಸರ್ಕಾರ ಆಲಿಸಬೇಕು; ಪ್ರಜಾಪ್ರಭುತ್ವದಲ್ಲಿ ಇದು ಬಹಳ ಮುಖ್ಯ’ ಎಂದು ರಾವತ್ ನುಡಿದರುಸಂಖ್ಯಾ ಆಟಕ್ಕೆ ಸಂಬಂಧಿಸಿದಂತೆ ಲೋಕಸಭೆಯಲ್ಲಿ ಬಿಜೆಪಿ ಸುಭದ್ರ ಸ್ಥಿತಿಯಲ್ಲಿದೆ. ಲೋಕಸಭೆಯ ಸದನ ಬಲ ಈಗ ೫೩೩ಕ್ಕೆ ಇಳಿದಿದೆ. ಲೋಕಸಭಾಧ್ಯಕ್ಷೆ ಸುಮಿತ್ರಾ ಮಹಾಜನ್ ಅವರು ಈಚೆಗೆ ಬಿಜೆಡಿ ಸಂಸತ್ ಸದಸ್ಯ ಬೈಜಯಂತ್ ಜಯ ಪಂಡಾ ಅವರ ರಾಜೀನಾಮೆಯನ್ನು ಸ್ವೀಕರಿಸಿದ್ದಾರೆ ಮತ್ತು ಕೇರಳ ಕಾಂಗ್ರೆಸ್ (ಎಂ) ಜೋಸ್ ಕೆ ಮಾಣಿ ಅವರು ರಾಜ್ಯಸಭೆಗೆ ನಾಮ ನಿರ್ದೇಶನಗೊಂಡಿದ್ದಾರೆ. ಹತ್ತು ಸ್ಥಾನಗಳು ಖಾಲಿ ಇವೆ; ಹೀಗಾಗಿ ಬಹುಮತಕ್ಕಾಗಿ ಸರ್ಕಾರವು ೨೬೬ ಮತಗಳನ್ನು ಪಡೆಯಬೇಕಾಗುತ್ತದೆಬಿಜೆಪಿಯ ಕೈಯಲ್ಲಿ ೨೭೪ ಸ್ಥಾನಗಳು ಮತ್ತು  ಶಿವಸೇನೆಯ ಕೈಯಲ್ಲಿ ೧೮ ಸ್ಥಾನಗಳು ಇವೆ. ಎನ್ಡಿಎ ಕೂಟದ ಒಟ್ಟು ಸದಸ್ಯ ಬಲ ಸದನದಲ್ಲಿ ೩೧೪ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಾಲ್ಕು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಅವಿಶ್ವಾಸ ನಿರ್ಣಯ ಮಂಡನೆಯಾಗಿದೆ.    ಮಧ್ಯೆ ಅವಿಶ್ವಾಸ ನಿರ್ಣಯವನ್ನು ಗೆಲ್ಲಿಸಲು ಸಾಕಷ್ಟು ಬೆಂಬಲ ವಿರೋಧ ಪಕ್ಷಗಳೀಗೆ ಇದೆ ಎಂಬುದಾಗಿ ಕಾಂಗ್ರೆಸ್ ಪಕ್ಷವು ಮಾಡುತ್ತಿರುವ ಪ್ರತಿಪಾದನೆಯನ್ನು ಬಿಜೆಪಿ ತಿರಸ್ಕರಿಸಿತು. ವಿರೋಧ ಪಕ್ಷಗಳು ಅವಿಶ್ವಾಸ ನಿರ್ಣಯವನ್ನು ಗೆಲ್ಲಿಸಲು ಅಗತ್ಯ ಸಂಖ್ಯಾ ಬಲ ಹೊಂದಿವೆ ಎಂಬುದಾಗಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಪ್ರತಿಪಾದಿಸಿರುವ ಬಗ್ಗೆ ಮಾತನಾಡಿದ ಸಂಸದೀಯ ವ್ಯವಹಾರಗಳ ಸಚಿವ ಅನಂತ ಕುಮಾರ್ ಅವರುಸೋನಿಯಾ ಗಾಂಧಿ ಅವರ ಗಣಿತ ತುಂಬ ದುರ್ಬಲವಾದದ್ದು’ ಎಂದು ಹೇಳಿದರು೧೯೯೯ರಲ್ಲಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್ ಡಿಎ ಸರ್ಕಾರ ಪತನದ ಬಳಿಕ ಲೋಕಸಭೆಯಲ್ಲಿ ತಮಗೆ ೨೭೨ ಸಂಸತ್ ಸದಸ್ಯರ ಬಹುಮತದ ಬೆಂಬಲ ಇದೆ ಎಂದು ಕಾಂಗ್ರೆಸ್ ಮುಖ್ಯಸ್ಥರಾಗಿದ್ದ ಸೋನಿಯಾ ಗಾಂಧಿ ಪ್ರತಿಪಾದಿಸಿದ್ದರು ಎಂದು ಅನಂತ ಕುಮಾರ್  ನುಡಿದರುಇಂತಹುದೇ ಭಾವನೆ ವ್ಯಕ್ತ ಪಡಿಸಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಅವರು ಸರ್ಕಾರವು ಅವಿಶ್ವಾಸ ನಿರ್ಣಯವನ್ನು ಪರಾಭವಗೊಳಿಸಲು ಬೇಕಾದ ಬಲವನ್ನು ಹೊಂದಿದೆ. ಸೋನಿಯಾ ಗಾಂಧಿ ಅವರಿಗೆ ಸ್ವಲ್ಪವಾದರೂ ಗಣಿತ ಗೊತ್ತಿದೆಯೇ? ಎಂದು ಪ್ರಶ್ನಿಸಿದರುಆಳುವ ಪಕ್ಷದ ಮೂಲಗಳ ಪ್ರಕಾರ ಶುಕ್ರವಾರ ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯವನ್ನು ಮತಕ್ಕೆ ಹಾಕಿದಾಗ ಸರ್ಕಾರವು ಕನಿಷ್ಠ ೩೧೪ ಸಂಸತ್ ಸದಸ್ಯರ ಬೆಂಬಲವನ್ನು ಗಳಿಸುತ್ತದೆ ಎಂದು ಆಳುವ ಪಕ್ಷದ ಮೂಲಗಳು ಹೇಳಿದವು. ಬಿಜೆಪಿಯ ಸದನ ನಿರ್ವಾಹಕರ ಅಂದಾಜಿನ ಪ್ರಕಾರ, ಸರ್ಕಾರವು ಪಿಎಂಕೆ ಮತ್ತು ರಾಜು ಶೆಟ್ಟಿ ನೇತೃತ್ವದ ಸ್ವಾಭಿಮಾನಿ ಪಕ್ಷದಂತಹ ಎನ್ ಡಿಎಯ ಹೊರಗಿರುವ ಸಣ್ಣ ಪಕ್ಷಗಳ ಬೆಂಬಲವನ್ನೂ ಪಡೆಯಲಿದೆ

2018: ನವದೆಹಲಿ: ಏರ್ಸೆಲ್ ಮ್ಯಾಕ್ಸಿಸ್ ಹಣ ವರ್ಗಾವಣೆ ಪ್ರಕರಣದ ತನಿಖೆ ನಡೆಸುತ್ತಿರುವ ಕೇಂದ್ರೀಯ ತನಿಖಾ ದಳವು (ಸಿಬಿಐ) ತನ್ನ ದೋಷಾರೋಪ ಪಟ್ಟಿಯಲ್ಲಿ (ಚಾರ್ಜ್ಶೀಟ್) ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಮತ್ತು ಅವರ ಪುತ್ರ ಕಾರ್ತಿ ಚಿದಂಬರಂ ಅವರನ್ನು ಆರೋಪಿಗಳು ಎಂಬುದಾಗಿ ಹೆಸರಿಸಿತು. ತನಿಖಾ ಸಂಸ್ಥೆಯು ಪಾಟಿಯಾಲ ಹೌಸ್ ನ್ಯಾಯಾಲಯದಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ಪೂರಕ ದೋಷಾರೋಪ ಪಟ್ಟಿಯನ್ನು ಸಲ್ಲಿಸಿತು.  ತಿಂಗಳ ಹಿಂದೆ ಜಾರಿ ನಿರ್ದೇಶನಾಲಯವು ಪ್ರಕರಣಕ್ಕೆ ಸಂಬಂಧಿಸಿದಂತೆ ದೋಷಾರೋಪ ಪಟ್ಟಿಯನ್ನು ಸಲ್ಲಿಸಿತ್ತು. ಚಿದಂಬರಂ ಅವರು ತಮ್ಮ ಅಧಿಕಾರದ ದುರುಪಯೋಗ ಮಾಡಿದ್ದಾರೆ ಎಂದು ಸಿಬಿಐ ಆಪಾದಿಸಿತು.  ಮೆಸರ್ಸ್ ಗ್ಲೋಬಲ್ ಕಮ್ಯುನಿಕೇಶನ್ ಹೋಲ್ಡಿಂಗ್ ಸರ್ವೀಸಸ್ ಲಿಮಿಟೆಡ್ ಸಂಸ್ಥೆಗೆ ಏರ್ಸೆಲ್ ನಲ್ಲಿ ಹೂಡಿಕೆ ಮಾಡಲು ಅನುಮತಿ ನೀಡುವ ಸಲುವಾಗಿ ವಿದೇಶೀ ಹೂಡಿಕೆ ಅಭಿವೃದ್ಧಿ ಮಂಡಳಿಯ ನಿಯಮಾವಳಿಗಳನ್ನು ಚಿದಂಬರಂ ಅವರು ಗಾಳಿಗೆ ತೂರಿದರು ಎಂದು ಸಿಬಿಐ ಆಪಾದಿಸಿತುಪ್ರಕರಣದಲ್ಲಿ ಹಿರಿಯ ಕಾಂಗ್ರೆಸ್ ನಾಯಕರೊಬ್ಬರನ್ನು ತಪ್ಪಿತಸ್ಥ ಎಂಬುದಾಗಿ ನೇರವಾಗಿ ಹೆಸರಿಸಿದ್ದು ಇದೇ ಮೊದಲು. ಜಾರಿ ನಿರ್ದೇಶನಾಲಯ ಕೂಡಾ ತನ್ನ ದೋಷಾರೋಪ ಪಟ್ಟಿಯಲ್ಲಿ ಹಲವೆಡೆ ಚಿದಂಬರಂ ಅವರ ಹೆಸರುಗಳನ್ನು ಪ್ರಸ್ತಾಪಿಸಿತು, ಆದರೆ ಆರೋಪಿಯಾಗಿ ಎಲ್ಲೂ ನೇರವಾಗಿ ಹೆಸರಿಸಿರಲಿಲ್ಲ.  ಚಿದಂಬರಂ ಮತ್ತು ಅವರ ಪುತ್ರ ಕಾರ್ತಿ ಚಿದಂಬರಂ ಹೊರತಾಗಿ, ಒಂಬತ್ತು ಮಂದಿ ಸರ್ಕಾರಿ ಸೇವಕರು ಮತ್ತು ಏರ್ಸೆಲ್ ಮ್ಯಾಕ್ಸಿಸ್ ಅಧಿಕಾರಿಗಳನ್ನು ಸಿಬಿಐ ಹೆಸರಿಸಿದೆ. ನ್ಯಾಯಾಲಯವು ಜುಲೈ ೩೧ರಂದು ದೋಷಾರೋಪ ಪಟ್ಟಿಯನ್ನು ಪರಿಗಣನೆಗೆ ಎತ್ತಿಕೊಳ್ಳಲಿದೆ.  ಸಿಬಿಐ ಪ್ರಕಾರ, ಮಾರಿಷಸ್ ಮೂಲದ ಗ್ಲೋಬಲ್ ಸರ್ವೀಸಸ್ ಹೋಲ್ಡಿಂಗ್ಸ್ (ಮ್ಯಾಕ್ಸಿಸ್ ಆಧೀನ ಸಂಸ್ಥೆ) ಏರ್ಸೆಲ್ ಟೆಲಿಕಾಂ  ಸಂಸ್ಥೆಯಲ್ಲಿ ೮೦೦೦ ಲಕ್ಷ (೮೦ ಕೋಟಿ) ಅಮೆರಿಕನ್ ಡಾಲರುಗಳ ಹೂಡಿಕೆಗೆ ಅನುಮತಿ ಕೋರಿತ್ತುಪ್ರಧಾನಿ ನೇತೃತ್ವದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯಿಂದ ಇದಕ್ಕೆ ಒಪ್ಪಿಗೆ ಲಭಿಸಬೇಕಾಗಿತ್ತು. ಆದರೆ ಒಪ್ಪಿಗೆ ಆಗ ಚಿದಂಬರಂ ಅವರು ಮುಖ್ಯಸ್ಥರಾಗಿದ್ದ ಹಣಕಾಸು ಸಚಿವಾಲಯದಿಂದ ಬಂದಿತ್ತು. ಹಣಕಾಸು ಸಚಿವಾಲಯಕ್ಕೆ ಒಟ್ಟು ೬೦೦ ಕೋಟಿ ರೂಪಾಯಿಗಳವರೆಗಿನ ಹೂಡಿಕೆಗೆ ಅನುಮತಿ ಕೊಡುವ ಅಧಿಕಾರ ಮಾತ್ರ ಇತ್ತು.  ಹೂಡಿಕೆಗೆ ಅನುಮತಿ ಲಭಿಸಿದ ಬಳಿಕ ಏರ್ಸೆಲ್ ಟೆಲಿವೆಂಚರ್ಸ್ ಲಿಮಿಟೆಡ್ ಕಾರ್ತಿ ಚಿದಂಬರಂ ಅವರಿಗೆ ಸಂಬಂಧಿಸಿದ ಕಂಪೆನಿಗೆ ೨೬ ಲಕ್ಷ ರೂಪಾಯಿಗಳನ್ನು ಪಾವತಿ ಮಾಡಿತು ಎಂದು ಸಿಬಿಐ ಆಪಾದಿಸಿದೆ. ಕಳೆದ ವರ್ಷ ಸೆಪ್ಟೆಂಬರಿನಲ್ಲಿ ಜಾರಿ ನಿರ್ದೇಶನಾಲಯವು ಕಾರ್ತಿ ಚಿದಂಬರಂ ಅವರಿಗೆ ಸೇರಿದ ಮತ್ತು ಅವರೊಂದಿಗೆ ಸಂಪರ್ಕವಿದ್ದ ಸಂಸ್ಥೆಯೊಂದರಿಂದ .೧೬ ಕೋಟಿ ರೂಪಾಯಿ ಮೊತ್ತದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿತ್ತು.  ಚಿದಂಬರಂ ಅವರಿಗೆ ಆಗಸ್ಟ್ ೭ರವರೆಗೆ ನ್ಯಾಯಾಲಯವು ಬಂಧನದಿಂದ ರಕ್ಷಣೆ ಒದಗಿಸಿದೆ. ಕೆಲವೇ ದಿನಗಳ ಹಿಂದೆ ನ್ಯಾಯಾಲಯವು ಅವರಿಗೆ ನೀಡಲಾಗಿದ್ದ ನಿರೀಕ್ಷಣಾ ಜಾಮೀನನ್ನು ಮೂರನೇ ಬಾರಿಗೆ ವಿಸ್ತರಿಸಿತ್ತು. ಚಿದಂಬರಂ ಅವರು ತಮ್ಮ ಮೇಲಿನ ಆಪಾದನೆಗಳನ್ನು ನಿರಾಕರಿಸಿದ್ದರು ಮತ್ತು ಪ್ರಕರಣವನ್ನು ತಮ್ಮ ವಿರುದ್ಧದ ಮಾಟಬೇಟೆ ಹಾಗೂ ತಪ್ಪುಗಳ ಮಿಶ್ರಣ ಎಂದು ಹೇಳಿದ್ದರು. 

2018: ನವದೆಹಲಿ: ದೆಹಲಿ ಸರ್ಕಾರ ಮತ್ತು ಲೆಫ್ಟಿನೆಂಟ್ ಗವರ್ನರ್ ಜಟಾಪಟಿ ಮುಗಿಯುವಂತೆ ಕಾಣುತ್ತಿಲ್ಲ. ಚುನಾಯಿತ ಸರ್ಕಾರ ಮತ್ತು ಲೆಫ್ಟಿನೆಂಟ್ ಗವರ್ನರ್ ಅವರ ಅಧಿಕಾರ ವಿಭಜನೆ ಮಾಡಿ ಸುಪ್ರೀಂಕೋರ್ಟ್ ಸಂವಿಧಾನಪೀಠವು ತೀರ್ಪು ನೀಡಿದ ಕೆಲವೇ ದಿನಗಳ ಬಳಿಕ ಕೇಂದ್ರವು ಎರಡನೇ ಸುತ್ತಿನ ಕಾನೂನು ಸಮರವನ್ನು ತೀಕ್ಷ್ಣಗೊಳಿಸಲು ನಿರ್ಧರಿಸಿತು. ಹರೀಶ್ ಸಾಳ್ವೆ, ಸಿಎ ಸುಂದರಂ ಮತ್ತು ರಾಕೇಶ್ ದ್ವಿವೇದಿ ಮೂವರು ಹಿರಿಯ ವಕೀಲರನ್ನು ಕೇಂದ್ರವು ಸೇವೆಗಳು ಮತ್ತು ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಗಳನ್ನು ಉಳಿಸಿಕೊಳ್ಳುವ ಹೋರಾಟಕ್ಕಾಗಿ ನಿಯೋಜಿಸಿತು. ಮೂವರು ಹಿರಿಯ ವಕೀಲರನ್ನು ಸುಪ್ರೀಂಕೋರ್ಟಿನ ಇಬ್ಬರು ನ್ಯಾಯಮೂರ್ತಿಗಳ ಪೀಠದ ಮುಂದೆ ವಾದಿಸಲು ನಿಯೋಜಿಸಿರುವ ನಿರ್ಧಾರವನ್ನು ತಿಳಿಸಿ ಗೃಹ ವ್ಯವಹಾರಗಳ ಸಚಿವಾಲಯ, ಕೇಂದ್ರಾಡಳಿತ ಡಿವಿಷನ್ಗಳು ಮತ್ತು ಕಾನೂನು ಸಚಿವಾಲಯಕ್ಕೆ ಪತ್ರ ಬರೆಯಿತು.  ಸಂಬಂಧಪಟ್ಟ ಕಡತಗಳನ್ನು ಇಲಾಖೆಯ ಕಾನೂನು ವ್ಯವಹಾರಗಳ ವಿಭಾಗಕ್ಕೆ ಕಾಲಾನುಕ್ರಮದಲ್ಲಿ ಕಳುಹಿಸಲಾಗುವುದು’ ಎಂದು ಪತ್ರ ತಿಳಿಸಿತು. ಅಡಿಷನಲ್ ಸಾಲಿಸಿಟರ್ ಜನರಲ್ ಮಣೀಂದರ್ ಸಿಂಗ್ ಅವರು ಪ್ರಕರಣದಲ್ಲಿ ಈವರೆಗೆ ಕೇಂದ್ರ ಸರ್ಕಾರ ಮತ್ತು ಲೆಫ್ಟಿನೆಂಟ್ ಗವರ್ನರ್ ಅವರ ಪರವಾಗಿ ನ್ಯಾಯಾಲಯದಲ್ಲಿ ಪ್ರತಿನಿಧಿಸುತ್ತಿದ್ದರು.  ಇನ್ನೊಂದೆಡೆ, ಗೋಪಾಲ ಸುಬ್ರಮಣಿಯಂ, ರಾಜೀವ್ ಧವನ್, ಪಿ. ಚಿದಂಬರಂ, ಶೇಖರ್ ನಫಡೆ ಮತ್ತು ಇಂದಿರಾ ಜೈಸಿಂಗ್ ಸೇರಿದಂತೆ ಹಿರಿಯ ವಕೀಲರ ಸಮೂಹ ಆಪ್ ಸರ್ಕಾರವನ್ನು ನ್ಯಾಯಾಲಯದಲ್ಲಿ ಪ್ರತಿನಿಧಿಸುತ್ತಿದೆ.  ಸಂವಿಧಾನ ಪೀಠದ ತೀರ್ಪಿನ ಬಳಿಕ ಘಟಾನುಘಟಿ ವಕೀಲರ ತಂಡವನ್ನು ನೇಮಿಸುವ ಮೂಲಕ ಲೆಫ್ಟಿನೆಂಟ್ ಗವರ್ನರ್ ವಿರುದ್ಧ ಯಾವುದೇ ಆದೇಶ ಬರದಂತೆ ಹಾಗೂ ಅವರು ಯಾವುದೇ ಮುಜುಗರಕ್ಕೆ ಈಡಾಗದಂತೆ ನೋಡಿಕೊಳ್ಳಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಮೂಲಗಳು ಹೇಳಿದವು. ಆಮ್ ಆದ್ಮಿ ಪಕ್ಷದ ಸರ್ಕಾರಕ್ಕೆ ಲಭಿಸಿದ ಪ್ರಮುಖ ವಿಜಯ ಎಂಬುದಾಗಿ ಭಾವಿಸಲಾಗಿರುವ ಜುಲೈ ೪ರ ತೀರ್ಪಿನಲ್ಲಿ ಲೆಫ್ಟಿನೆಂಟ್ ಗವರ್ನರ್ ಸ್ವತಂತ್ರವಾಗಿ ಕಾರ್ ನಿರ್ವಹಿಸುವಂತಿಲ್ಲ, ಚುನಾಯಿತ ಸರ್ಕಾರದ ನೀತಿನಿರ್ಧಾರಗಳಿಗೆ ಅಡ್ಡಿ ಮಾಡುವಂತಿಲ್ಲ ಮತ್ತು ಸರ್ಕಾರದ ನೆರವು ಮತ್ತು ಸಲಹೆಗಳಿಗೆ ಅವರು ಬದ್ಧರಾಗಿರಬೇಕು ಎಂದು ಸಂವಿಧಾನ ಪೀಠವು ಹೇಳಿತ್ತುಲೆಫ್ಟಿನೆಂಟ್ ಗವರ್ನರ್ ಮತ್ತು ಸರ್ಕಾರದ ಅಧಿಕಾರಗಳ ನಡುವೆ ಗೆರೆ ಎಳೆದ ಬಳಿಕ ಸಂವಿಧಾನಪೀಠವು ತನ್ನ ತೀರ್ಪಿನ ವಿಶಾಲ ತತ್ವಗಳ ಅಡಿಯಲ್ಲಿ ವೈಯಕ್ತಿಕ ಪ್ರಕರಣಗಳನ್ನು ಇತ್ಯರ್ಥ ಪಡಿಸುವಂತೆ ಸೂಚಿಸಿ ಕಿರಿಯ ಪೀಠಕ್ಕೆ ವರ್ಗಾಯಿಸಿತ್ತು.  ನ್ಯಾಯಮೂರ್ತಿಗಳಾದ ಎಕೆ ಸಿಕ್ರಿ ಮತ್ತು ಅಶೋಕ ಭೂಷಣ್ ಅವರ ಪೀಠವು ಬಳಿಕ ವಿಚಾರಣೆಯನ್ನು ಎತ್ತಿಕೊಂಡಿದ್ದು, ಅದು ಲೆಫ್ಟಿನೆಂಟ್ ಗವರ್ನರ್ ಅವರು ಆಪ್ ಸರ್ಕಾರದ ವರ್ಗಾವಣೆ ಮತ್ತು ದೆಹಲಿಯಲ್ಲಿ ಅಧಿಕಾರಿಗಳ ನಿಯೋಜನೆ ಅಧಿಕಾರವನ್ನು ಕಿತ್ತುಕೊಂಡದ್ದಕ್ಕೆ ಸಂಬಂಧಿಸಿದ ಅಧಿಸೂಚನೆಗಳ ವಿಚಾರವನ್ನು ಇತ್ಯರ್ಥಗೊಳಿಸಬೇಕಾಗಿದೆ.  ಅಧಿಕಾರಗಳನ್ನು ಕಿತ್ತುಕೊಂಡದ್ದಲ್ಲದೆ, ದೆಹಲಿ ಪೊಲೀಸರು ಸೇರಿದಂತೆ ಕೇಂದ್ರ ಸರ್ಕಾರಿ ನೌಕರರ ವಿರುದ್ಧದ ಅಪರಾಧಗಳ ವಿಚಾರಣೆಯನ್ನು ಎಸಿಬಿ ನಡೆಸುವಂತಿಲ್ಲ ಎಂದೂ ಅಧಿಸೂಚನೆ ಹೇಳಿತ್ತು.   ಎರಡು ವಿಷಯಗಳು ಉಭಯ ಕಡೆಗಳ ನಡುವಣ ಘರ್ಷಣೆಯ ಪ್ರಮುಖ ಅಂಶಗಳಾಗಿವೆ ಮತ್ತು ತನ್ನ ನಿಯಂತ್ರಣವನ್ನು ಉಳಿಸಿಕೊಳ್ಳುವುದಕ್ಕಾಗಿ ಕೇಂದ್ರವು ಇದೀಗ ಮೂವರು ಹಿರಿಯ ವಕೀಲರನ್ನು ಕಣಕ್ಕೆ ಇಳಿಸಿದೆ. ಕಿರಿಯ ಪೀಠವು ಗುರುವಾರ ವಿಚಾರಣೆಗೆ ಬಂದಾಗ, ಆಪ್ ಸರ್ಕಾರದ ಪರ ಹಾಜರಾದ ಹಿರಿಯ ವಕೀಲ ಪಿ. ಚಿದಂಬರಂ ಅವರು ಸಂವಿಧಾನ ಪೀಠದ ತೀರ್ಪಿನ ಹೊರತಾಗಿಯೂ ನಗರದ ಆಡಳಿತ ಊನಗೊಂಡಿದೆ ಎಂದು ದೂರಿದ್ದರು. ಆಗ ನ್ಯಾಯಾಲಯವು ಪ್ರಕರಣದ ಮುಂದಿನ ವಿಚಾರಣೆಗೆ ಜುಲೈ ೨೬ರ ದಿನಾಂಕವನ್ನು ನಿಗದಿಪಡಿಸಿತ್ತು. 

2018: ಕೋಲ್ಕತ: ವಿಶ್ವ ವ್ಯಾಪಾರ ಸಂಸ್ಥೆಯಲ್ಲಿ (ಡಬ್ಲ್ಯೂಟಿಒ) ರಫ್ತು ಸಬ್ಸಿಡಿಗಳಿಗೆ ಸಂಬಂಧಿಸಿದಂತೆ ಭಾರತದ ವಿರುದ್ಧ ಅಮೆರಿಕವು ಹೂಡಿರುವ ಖಟ್ಲೆಯಲ್ಲಿ ಭಾರತವು ಸೋಲುವ ನೈಜ’ ಸಾಧ್ಯತೆಗಳಿವೆ ಎಂದು ವಾಣಿಜ್ಯ ಕಾರ್ಯದರ್ಶಿ ರೀಟಾ ಟಿಯೋಷಿಯ ಅವರು ಇಲ್ಲಿ ಹೇಳಿದರು.  ಭಾರತದಲ್ಲಿದ ಆದಾಯ ಮಟ್ಟಗಳು ಸಬ್ಸಿಡಿ ನೀಡಲು ರಫ್ತುಗಳ ಮೇಲೆ ಇರುವ ಮಿತಿಯನ್ನು ದಾಟಿರುವುದು ಇದಕ್ಕೆ ಕಾರಣ’ ಎಂದು ಅವರು ನುಡಿದರು. ರಫ್ತುಗಳಿಗೆ ಸಬ್ಸಿಡಿ ನೀಡುತ್ತಿರುವುದಕ್ಕೆ ಸಂಬಂಧಿಸಿದಂತೆ ಡಬ್ಲ್ಯೂಟಿ ಒದಲ್ಲಿ ಭಾರತದ ವಿರುದ್ಧ ಅಮೆರಿಕವು ಹೂಡಿರುವ ತಕರಾರಿನಲ್ಲಿ ಭಾರತವು ಸೋಲುವ ನೈಜ ಸಾಧ್ಯತೆಗಳಿವೆ’ ಎಂದು ಅವರು ಕೋಲ್ಕತದಲ್ಲಿ ನಡೆದ ಐಸಿಸಿ ಸಂವಾದ ಕಾರ್ಯಕ್ರಮದಲ್ಲಿ ಹೇಳಿದರು. ಏನಿದ್ದರೂ, ಅಮೆರಿಕದ ಆಪಾದನೆಗಳ ವಿರುದ್ಧ ಭಾರತ ಪ್ರಬಲ ಪ್ರತಿಪಾದನೆ ಮಾಡುತ್ತಿದೆ ಎಂದು ಟಯೋಷಿಯ ಹೇಳಿದರು.  ರಫ್ತಿಗೆ ನೇರ ಸಬ್ಸಿಡಿ ನೀಡಲು ಸಾಧ್ಯವಿಲ್ಲದ ಕಾರಣ, ಸರ್ಕಾರವು ಇತರ ರಾಷ್ಟ್ರಗಳಲ್ಲಿನ ನಿಯಂತ್ರಣಗಳಿಗೆ ಅನುಗುಣವಾಗಿ ಶಾಸನಬದ್ಧ ಬೆಂಬಲವನ್ನು ನೀಡಬಹುದು. ರಫ್ತು ಸೇವೆಗಳಿಗೆ ನೀಡಲಾಗುವ ಸವಲತ್ತುಗಳನ್ನು ಮುಟ್ಟಲು ಸಾಧ್ಯವಿಲ್ಲ ಮತ್ತು ರಫ್ತುದಾರರಿಗೆ ನೀಡಲಾಗುವ ಜಿಎಎಸ್ಟಿ ಮರುಪಾವತಿಗಳು ಅಬಾಧಿತವಾಗಿ ಮುಂದುವರೆಯುತ್ತವೆ’ ಎಂದು ಅವರು ನುಡಿದರು.  ಒಳಸುರಿ ಸಬ್ಸಿಡಿಗೆ ಬೆಂಬಲ ನೀಡುವುದು ಕೂಡಾ ಶಾಸನಬದ್ಧವೇ’ ಎಂದು ವಾಣಿಜ್ಯ ಕಾರ್ಯದರ್ಶಿ ಹೇಳಿದರು. ಏನಿದ್ದರೂ ರಫ್ತುಗಳಿಗೆ ಮಾತ್ರವೇ ಪ್ರೋತ್ಸಾಹಕ ನೀಡಿಕೆ ಸಾಧ್ಯವಿಲ್ಲ. ವೆಚ್ಚ ಇರಬೇಕು ಮತ್ತು ಬಳಿಕ ಪರಿಹಾರ ನೀಡಬೇಕು’ ಎಂದು ಅವರು ಹೇಳಿದರು. ಡಬ್ಲ್ಯೂಟಿ ಒದಲ್ಲಿ ನೀಡಲಾಗಿರುವ ದೂರನ್ನು ಪರಿಶೀಲಿಸಲು ಸರ್ಕಾರವು ಈಗಾಗಲೇ ತಜ್ಞರ ತಂಡವನ್ನು ರಚಿಸಿದೆ. ರಫ್ತಿಗೆ ಬೆಂಬಲ ಮತ್ತು ಕರಡು ಯೋಜನೆಗಳನ್ನು ಚರ್ಚೆಯ ಸಲುವಾಗಿ ಪ್ರಕಟಿಸಲಾಗುವುದು ಎಂದು ಅವರು ನುಡಿದರು.  ವಿವಾದವು ಇನ್ನೂ ಇತ್ಯರ್ಥಗೊಳ್ಳದೇ ಇರುವ ಕಾರಣ ಹಾಲಿ ರಫ್ತು ಸಬ್ಸಿಡಿ ಯೋಜನೆಗಳು ಮುಂದುವರೆಯುತ್ತಿವೆ ಎಂದೂ ಅವರು ಹೇಳಿದರು.  ೨೦೧೮ರ ಮಾರ್ಚ್ ತಿಂಗಳಲ್ಲಿ ಅಮೆರಿಕವು ವಿಶ್ವ ವ್ಯಾಪಾರ ಸಂಸ್ಥೆಯಲ್ಲಿ ಭಾರತದ ವಿರುದ್ಧ ದೂರು ನೀಡಿ ರಫ್ತು ಸಬ್ಸಿಡಿಗಳಿಗೆ ಸಂಬಂಧಿಸಿದ ವ್ಯವಸ್ಥೆ ಕುರಿತ ವಿವಾದವನ್ನು ಇತ್ಯರ್ಥ ಪಡಿಸಬೇಕು ಎಂದು ಕೋರಿಕೆ ಸಲ್ಲಿಸಿತ್ತು. ಭಾರತವು ನೀಡುತ್ತಿರುವ ರಫ್ತು ಸಬ್ಸಿಡಿಯು ಅಮೆರಿಕದ ಕಂಪೆನಿಗಳಿಗೆ ಹಾನಿ ಉಂಟು ಮಾಡುತ್ತಿದೆ ಎಂದು ಅಮೆರಿಕ ಆಪಾದಿಸಿತ್ತು. ಭಾರತದಿಂದ ರಫ್ತಾಗುವ ಬಿಕರಿ ಮಾಲು ಸಬ್ಸಿಡಿಯಂತಹ ಯೋಜನೆಗಳನ್ನು ವಿಶ್ವ ವ್ಯಾಪಾರ ಸಂಸ್ಥೆಯಲ್ಲಿ ಪ್ರಶ್ನಿಸಿದ ಅಮೆರಿಕ, ಉಪಕ್ರಮಗಳು ಅಸಮಾನ ಆಟದ ಮೈದಾನವನ್ನು ಸೃಷ್ಟಿಸುವ ಮೂಲಕ ತನ್ನ ಕಂಪೆನಿಗಳಿಗೆ ಹಾನಿ ಉಂಟು ಮಾಡುತ್ತವೆ ಎಂದು ದೂರಿತ್ತು. ಭಾರತದ ಸಹಸ್ರಾರು ಕಂಪೆನಿಗಳು ವಾರ್ಷಿಕ ೭೦೦ ಕೋಟಿ ಅಮೆರಿಕನ್ ಡಾಲರ್ ಮೌಲ್ಯದ ಲಾಭಗಳನ್ನು ಇಂತಹ ವಿವಿಧ ರಫ್ತು ಅಭಿವೃದ್ಧಿ ಸಬ್ಸಿಡಿ ಯೋಜನೆಗಳ ಮೂಲಕ ಪಡೆಯುತ್ತಿವೆ ಎಂದು ಅಮೆರಿಕ ಆಪಾದಿಸಿತ್ತು. 

2017: ಭುವನೇಶ್ವರ : ಒಡಿಶಾ ಮುಖ್ಯಮಂತ್ರಿ ನವೀನ್ಪಟ್ನಾಯಕ್ ಅವರು ರಾಜ್ಯದ ಅತೀ ಉದ್ದದ ಸೇತುವೆಯನ್ನು ಲೋಕಾರ್ಪಣೆಗೈದು ಅದಕ್ಕೆ ನೇತಾಜಿ ಸುಭಾಸ್ಚಂದ್ರ ಬೋಸ್ಹೆಸರನ್ನು ಇಟ್ಟರು. ರಾಜ್ಯದ ರಾಜಧಾನಿ ಭುವನೇಶ್ವರವನ್ನು ಕಟಕ್ನೊಂದಿಗೆ ಜೋಡಿಸುವ ಮೂಲಕ ಉಭಯ ನಗರಗಳ ನಡುವಿನ ದೂರವನ್ನು 12 ಕಿ.ಮೀ.ನಷ್ಟು ಕಡಿಮೆ ಮಾಡುವ ಕಠಜೋಡಿ ನದಿಯ ಮೇಲಿನ, ರಾಜ್ಯದ ಅತೀ ಉದ್ದದ ಸೇತುವೆಯು  2.88 ಕಿ.ಮೀ. ಉದ್ದವಿದೆರಾಜ್ಯದ ಹಾಗೂ ಜನತೆಯ ಅಭಿವೃದ್ಧಿಯನ್ನು ಸಾಧಿಸುವ ನಿಟ್ಟಿನಲ್ಲಿ ಆಧುನಿಕ ಮೂಲ ಸೌಕರ್ಯಗಳನ್ನು ಕಲ್ಪಿಸುವ ರಾಜ್ಯ ಸರಕಾರದ ನಿರಂತರ ಪ್ರಯತ್ನಕ್ಕೆ ಸೇತುವೆಯು ಒಂದು ಸಾಕ್ಷಿಯಾಗಿದೆ ಎಂದು  ಸಿಎಂ ಪಟ್ನಾಯಕ್ ಸೇತುವೆಯನ್ನು ಉದ್ಘಾಟಿಸಿ ಹೇಳಿದರು.
2017: ಬೀಜಿಂಗ್‌: ಎರಡು ತಿಂಗಳಿಂದ ಸಿಕ್ಕಿಂ ಗಡಿಯಲ್ಲಿನ ವಿವಾದಿತ ಡೋಕ್ಲಾಮ್ ಪ್ರದೇಶದಲ್ಲಿ ಭಾರತ - ಚೀನ
ಸೇನೆ ಮುಖಾಮುಖೀಯಾಗಿ ಉದ್ವಿಗ್ನತೆಗೆ ಕಾರಣವಾಗಿರುವ ನಡುವೆಯೇ ಚೀನ ಕಳೆದ ಮಾಸಾಂತ್ಯದಲ್ಲಿ ಡೋಕ್ಲಾಮ್ ಗೆ ಸಮೀಪದ ಟಿಬೆಟ್ಪರ್ವತ ಪ್ರಾಂತ್ಯದಲ್ಲಿ  ಭಾರೀ ಪ್ರಮಾಣದ ತನ್ನ ಸೇನಾ ಘನ ಪರಿಕರಗಳನ್ನು ತಂದಿರಿಸಿರುವುದಾಗಿ ವರದಿಗಳು ತಿಳಿಸಿದವು. ರೈಲು ಮತ್ತು ರಸ್ತೆ ಮಾರ್ಗವಾಗಿ ಭಾರೀ ಮಿಲಿಟರಿ ಪರಿಕರಗಳನ್ನು ಚೀನ, ಭಾರತದೊಂದಿಗೆ ಯಾವುದೇ ಹೊತ್ತಿನಲ್ಲಿ ಸಂಘರ್ಷಕ್ಕೆ ಸನ್ನದ್ಧನಾಗಿರುವ ಉದ್ದೇಶದಿಂದ ತಂದಿರಿಸಿರುವುದಾಗಿ ಪಿಎಲ್ ಮುಖವಾಣಿ ಹೇಳಿಕೊಂಡಿತು. ಚೀನ ತನ್ನ ಘನ ಮಿಲಿಟರಿ ಸೇನಾ ಪರಿಕರಗಳನ್ನು ತಂದು ನಿಲ್ಲಿಸಿರುವುದು ಉತ್ತರ ಟಿಬೆಟ್ನಲ್ಲಿರುವ ಕುನ್ಲುನ್ಪರ್ವತದ ದಕ್ಷಿಣ ಭಾಗದಲ್ಲಿ. ಚೀನ ಸೇನೆಯ ವೆಸ್ಟರ್ನ್ ಥಿಯೇಟರ್ಕಮಾಂಡ್ ಸನ್ನದ್ಧತೆಯನ್ನು ಅಣಿಗೊಳಿಸಿದೆ ಎಂದು ವರದಿ ಹೇಳಿತು. ಚೀನ ತನ್ನ ಘನ ಮಿಲಿಟರಿ ಪರಿಕರಗಳನ್ನು ಭಾರೀ ಪ್ರಮಾಣದಲ್ಲಿ ತಂದಿರಿಸಿರುವ ಪ್ರದೇಶವು ಪ್ರಕ್ಷುಬ್ಧ ಟಿಬೆಟ್ಮತ್ತು ಕ್ಸಿಂಜಿಯಾಂಗ್ಗೆ ಮುಖ ಮಾಡಿಕೊಂಡಿದೆಚೀನದ ಸರಕಾರಿ ಒಡೆತನದ ಸುದ್ದಿ ಮಾಧ್ಯಮ ಭಾರತದೊಂದಿಗೆ ಪೂರ್ಣ ಪ್ರಮಾಣದ ಸಂಘರ್ಷಕ್ಕೆ ಚೀನ ಸೇನೆ ಯಾವುದೇ ಹೊತ್ತಿಗೆ ಮುಂದಾಗುವ ಸಾಧ್ಯತೆ ಇದ್ದು ಭಾರತ ಅದಕ್ಕಾಗಿ ಸಿದ್ಧವಾಗಿರುವುದು ಒಳಿತೆಂಬ ಬುದ್ಧಿವಾದವನ್ನು ಹೇಳುತ್ತಿವೆ. ಹಾಗಿದ್ದರೂ ಚೀನ ತನ್ನ ಸಮರ ನೀತಿಯನ್ನು ಇನ್ನೂ ಬಹಿರಂಗಪಡಿಸಿಲ್ಲಕಳೆದ ವಾರವಷ್ಟೇ ಚೀನದ ಪೀಪಲ್ಸ್ಲಿಬರೇಶನ್ಆರ್ಮಿ ಟಿಬೆಟ್ಪೀಠಭೂಮಿಯಲ್ಲಿ  ಸೇನಾ ಕವಾಯತು ನಡೆಸಿ ತನ್ನ ಸಮರ ಸನ್ನದ್ಧತೆ ಮತ್ತು ಕ್ಷಮತೆಯನ್ನು ಪರೀಕ್ಷಿಸಿಕೊಂಡು ಅದರ ಅಧಿಕೃತ ವಿಡಿಯೋವನ್ನು ಬಿಡುಗಡೆಗೊಳಿಸಿತ್ತುಇದೀಗ ಚೀನ ತನ್ನ ಘನ ಮಿಲಿಟರಿ ಸರಕು ಸರಂಜಾಮು ಹಾಗೂ ಶಸ್ತ್ರಾಸ್ತ್ರಗಳನ್ನು ಕಲೆ ಹಾಕಿರುವ ಪ್ರದೇಶವು ಡೋಕ್ಲಾಮ್ ಪ್ರದೇಶಕ್ಕೆ ನಿಕಟದಲ್ಲಿರುವುದೇ ಗಡಿ ಉದ್ವಿಗ್ನತೆ ಹೆಚ್ಚಲು ಕಾರಣವೆಂದು ಹೇಳಲಾಯಿತು. 

2017: ನವದೆಹಲಿಎಂಟು ಸಾವಿರ ಕೋಟಿ ಬ್ಯಾಂಕ್ಸಾಲ ಸುಸ್ತಿಗಾರನಾಗಿ ವಿದೇಶಕ್ಕೆ ಪಲಾಯನ ಮಾಡಿರುವ
ಮದ್ಯ ದೊರೆ ವಿಜಯ್ಮಲ್ಯ ಅವರನ್ನು ಭಾರತಕ್ಕೆ ಗಡೀಪಾರು ಮಾಡಿಸಿಕೊಳ್ಳುವ ಕ್ರಮದಲ್ಲಿ ಚಾರ್ಜ್ಶೀಟ್ಸಲ್ಲಿಸುವುದಕ್ಕಾಗಿ ಪ್ರಕೃತ ಜಾರಿ ನಿರ್ದೇಶನಾಲಯದ ತಂಡವೊಂದು ಈಗ ಲಂಡನ್ನಲ್ಲಿದೆ ಎಂದು ಹಿರಿಯ ಅಧಿಕಾರಿ  ಹೇಳಿದರು. 2 ದಿನ ಹಿಂದೆ ಕಾನೂನು ಸಲಹೆಗಾರ ಸೇರಿದಂತೆ ಇಬ್ಬರು ಸದಸ್ಯರ ತಂಡವು ಲಂಡನ್ಗೆ ಎರಡು ದಿನಗಳ ಭೇಟಿಗಾಗಿ ಪ್ರಯಾಣಿಸಿದ್ದು ಇದೇ 20ರಂದು  ದೇಶಕ್ಕೆ ಮರಳಲಿದೆ ಎಂದು ಇಡಿ ಅಧಿಕಾರಿ ಹೇಳಿದರು. ವಿಜಯ್ಮಲ್ಯ ವಿರುದ್ಧ ಸಿದ್ಧಪಡಿಸಲಾಗಿರುವ 5,500 ಪುಟಗಳ ಸುದೀರ್ಘಚಾರ್ಜ್ಶೀಟನ್ನು ಲಂಡನ್ ಕ್ರೌನ್ಪ್ರಾಸಿಕ್ಯೂಶನ್ಕಚೇರಿಯಲ್ಲಿ ಸಲ್ಲಿಸಲು ದ್ವಿಸದಸ್ಯ ಇಡಿ ತಂಡ ಈಗ ಲಂಡನ್ನಲ್ಲಿದೆ ಎಂದವರು ಹೇಳಿದರು.

2017: ನವದೆಹಲಿ: ಆಧಾರ್ ಹೊಂದಿರುವವರ ವೈಯಕ್ತಿಕ ಮಾಹಿತಿಯು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ 210
ವೆಬ್ಸೈಟ್ಗಳಲ್ಲಿ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಾಗುವಂತಿದೆ ಎಂದು ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಖಾತೆಯ ರಾಜ್ಯ ಸಚಿವ ಪಿ.ಪಿ. ಚೌಧರಿ ಲೋಕಸಭೆಗೆ ತಿಳಿಸಿದರು. ‘ವಿವಿಧ ಯೋಜನೆಗಳ ಫಲಾನುಭವಿಗಳ ವೈಯಕ್ತಿಯ ಮಾಹಿತಿಯನ್ನು ಆಧಾರ್ಸಂಖ್ಯೆ ಸಹಿತ ವೆಬ್ಸೈಟ್ಗಳಲ್ಲಿ ಹಾಕಲಾಗಿದೆ. ಮಾಹಿತಿ ಸಾರ್ವಜನಿಕರ ವೀಕ್ಷಣೆಗೂ ಸಿಗುವಂತಿದೆಎಂದು ಚೌಧರಿ ತಿಳಿಸಿದರು. ‘ ಬಗ್ಗೆ ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ) ಮಾಹಿತಿ ಕಲೆ ಹಾಕಿದ್ದು, ಎಲ್ಲ ವೆಬ್ಸೈಟ್ಗಳಿಂದ ಆಧಾರ್ಸಂಖ್ಯೆಯೊಂದಿಗೆ ಹಾಕಿರುವ ವೈಯಕ್ತಿಕ ಮಾಹಿತಿಯನ್ನು ಸಾರ್ವಜನಿಕರ ವೀಕ್ಷಣೆಗೆ ಸಿಗದಂತೆ ನಿರ್ಬಂಧಿಸಲಾಗುವುದುಎಂದು ಚೌಧರಿ ಹೇಳಿದರು. ‘ಯುಐಡಿಎಐಯಿಂದ ಆಧಾರ್ಮಾಹಿತಿ ಸೋರಿಕೆಯಾಗಿಲ್ಲಎಂದು ಇದೇ ವೇಳೆ ಚೌಧರಿ ತಿಳಿಸಿದರು.

2017:  ನವದೆಹಲಿನಮ್ಮೊಂದಿಗೆ ಆಧಾರ್ ಇಟ್ಟುಕೊಳ್ಳಲು ಪರ್ಸ್, ಕಾರ್ಡ್ ಕವರ್ಗಳ ಅಗತ್ಯವಿಲ್ಲ.
ಮೊಬೈಲ್ಇದ್ದರೆ ಆಧಾರ್ಇದ್ದಂತೆ! ನಿತ್ಯದ ಬಹಳಷ್ಟು ವ್ಯವಹಾರಗಳಲ್ಲಿ ಆಧಾರ್ಕಾರ್ಡ್ ಬಳಕೆ ಹೆಚ್ಚಿದೆ. ‘ಎಂಆಧಾರ್‌’ ಆ್ಯಪ್ಬಿಡುಗಡೆಯಾಗಿದ್ದು, ಆಧಾರ್‌  ಸಂಪರ್ಕಿತ ಸೇವೆಗಳಲ್ಲಿ ದೃಢೀಕರಣಕ್ಕಾಗಿ ಕಾರ್ಡ್ತೆಗೆದುಕೊಂಡು ಹೋಗುವ ಅಗತ್ಯತೆ ಕೊನೆಗೊಳ್ಳಲಿದೆಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ(ಯುಐಡಿಎಐ) ಬಿಡುಗಡೆ ಮಾಡಿರುವ ಎಂಆಧಾರ್‌’ ಆ್ಯಪ್ ಮೂಲಕ ಸ್ಮಾರ್ಟ್ ಫೋನ್ನಲ್ಲಿ ಆಧಾರ್ ಸಂಖ್ಯೆಯನ್ನು ಒಳಗೊಂಡ ಮಾಹಿತಿ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದ್ದು, ಆಧಾರ್ ಪ್ರತಿ ತೆಗೆದುಕೊಂಡು ಹೋಗುವ ಅಗತ್ಯವಿರುವುದಿಲ್ಲ. ಆ್ಯಪ್ ಡೌನ್ಲೋಡ್: ಪ್ರಸ್ತುತ ಆ್ಯಂಡ್ರಾಯ್ಡ್ ಬಳಕೆದಾರರು ಗೂಗಲ್ ಪ್ಲೇ ಮೂಲಕ ಎಂಆಧಾರ್‌’ಡೌನ್ಲೋಡ್ ಮಾಡಿಕೊಳ್ಳಬಹುದು.

2008: ಶಂಕಿತ ಗೆರಿಲ್ಲಾಗಳು ವಾಹನದ ಮೇಲೆ ನಡೆಸಿದ ಶಕ್ತಿಶಾಲಿ ಬಾಂಬ್ ಸ್ಫೋಟದಿಂದ ಭಾರತೀಯ ಸೇನಾಪಡೆಗೆ ಸೇರಿದ ಕನಿಷ್ಠ 10 ಸೈನಿಕರು ಮೃತರಾಗಿ, 20ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ಶ್ರೀನಗರದ ಹೊರವಲಯದಲ್ಲಿ ನಡೆಯಿತು. ಪಾಕ್ ಆಕ್ರಮಿತ ಕಾಶ್ಮೀರದ ಮುಜಾಫರಾಬಾದಿಗೆ ಸಂಪರ್ಕ ಕಲ್ಪಿಸುವ ಶ್ರೀನಗರ- ಬಾರಾಮುಲ್ಲಾ ಹೆದ್ದಾರಿಯಲ್ಲಿ ಘಟನೆ ಸಂಭವಿಸಿತು.

2007: 1993 ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ಟಾಡಾ ನ್ಯಾಯಾಲಯವು ಮತ್ತೆ ಮೂವರಿಗೆ ಗಲ್ಲು ಶಿಕ್ಷೆ ವಿಧಿಸಿತು. ತಲೆಮರೆಸಿಕೊಂಡಿರುವ ಪ್ರಕರಣದ ಪ್ರಮುಖ ಆರೋಪಿ ಟೈಗರ್ ಮೆಮೊನ್ನ ಆಪ್ತರಾದ ಅಸ್ಗರ್ ಮುಕದಮ್, ಷಾನವಾಜ್ ಖುರೇಶಿ ಮತ್ತು ಮೊಹಮದ್ ಶೋಯಿಬ್ ಘನ್ಸಾರ್ಗೆ ಟಾಡಾ ನ್ಯಾಯಾಧೀಶರು ಗಲ್ಲು ಶಿಕ್ಷೆ ಮತ್ತು ತಲಾ ರೂ. 4ಲಕ್ಷ ದಂಡ ವಿಧಿಸಿದರು. ಇದರೊಂದಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಒಟ್ಟು ಆರು ಮಂದಿಗೆ ಮರಣದಂಡನೆ ವಿಧಿಸಿದಂತಾಯಿತು. 1992ರಿಂದ ಮೆಮೊನ್ ನೌಕರನಾಗಿದ್ದ ಮುಕದಮ್, ಕಳೆದ ಸೆಪ್ಟೆಂಬರ್ 18ರಂದು ಅಪರಾಧಿ ಎಂದು ತೀರ್ಮಾನವಾಗಿತ್ತು. ಬಾಂಬ್ ಸ್ಫೋಟದ ಸಂಚು ರೂಪಿಸುವಲ್ಲಿಂದ ಹಿಡಿದು ಕಾರ್ಯಾಚರಣೆ ಪೂರ್ತಿಗೊಳ್ಳುವವರೆಗೂ ಸಕ್ರಿಯವಾಗಿ ಪಾಲ್ಗೊಂಡಿದ್ದ ಮುಕದಮ್, ದಾದರಿನ ಪ್ಲಾಜಾ ಚಿತ್ರ ಮಂದಿರದಲ್ಲಿ ನಿಲ್ಲಿಸಲಾಗಿದ್ದ ಕಾರಿನಲ್ಲಿ ಆರ್ ಡಿ ಎಕ್ಸ್ ಇರಿಸಿದ್ದ. ಸ್ಫೋಟದಲ್ಲಿ ಹತ್ತು ಮಂದಿ ಸತ್ತು 36 ಮಂದಿ ಗಾಯಗೊಂಡಿದ್ದರು. ಸುಮಾರು 87 ಲಕ್ಷ ರೂಪಾಯಿ ಮೌಲ್ಯದ ಆಸ್ತಿಪಾಸ್ತಿಗೆ ಹಾನಿ ಉಂಟಾಗಿತ್ತು. ಶಿಕ್ಷೆಗೆ ಒಳಗಾಗಿರುವ ಮೂವರನ್ನು ಮುಕದಮ್ ಹೋಟೆಲ್ಗಳಿಗೆ ತಲುಪಿಸಿದ್ದ. ಹೋಟೆಲುಗಳಲ್ಲಿ ಸ್ಫೋಟ ಸಂಭವಿಸಿತ್ತು.

2007: ಮುಂಬೈ ಉಪನಗರದ ಬೋರಿವಿಲಿಯ ಬಬಾಯಿ ನಾಕಾ ಪ್ರದೇಶದಲ್ಲಿ ಕುಸಿದು ಬಿದ್ದ ಏಳು ಮಹಡಿಗಳ `ಲಕ್ಷ್ಮಿ ಛಾಯಾ' ಕಟ್ಟಡದ ಅವಶೇಷದಿಂದ ಹೊರತರಲಾದ ವ್ಯಕ್ತಿಯೊಬ್ಬ ಮುಂಬೈಯ ಭಗವತಿ ಆಸ್ಪತ್ರೆಯಲ್ಲಿ ಮೃತನಾದ. ಇದರಿಂದಾಗಿ ದುರಂತದಲ್ಲಿ ಮಡಿದವರ ಸಂಖ್ಯೆ 26ಕ್ಕೇರಿತು.

2007: ವಸತಿ ಯೋಜನೆಗಳ ಫಲಾನುಭವಿಗಳ ಆಯ್ಕೆಯ ಅಧಿಕಾರವನ್ನು ಗ್ರಾಮಪಂಚಾಯ್ತಿ ವ್ಯಾಪ್ತಿಯ ಗ್ರಾಮ ಸಭೆಗಳ ಬದಲಿಗೆ ವಿಧಾನಸಭಾ ಸದಸ್ಯರ ನೇತೃತ್ವದ ಸಮಿತಿಗೆ ನೀಡುವ ಕರ್ನಾಟಕ ಪಂಚಾಯತ್ ರಾಜ್ (ತಿದ್ದುಪಡಿ) ಮಸೂದೆ- 2007ನ್ನು ರಾಜ್ಯಪಾಲ ಟಿ.ಎನ್.ಚತುರ್ವೇದಿ ವಾಪಸು ಕಳುಹಿಸಿದರು.

2007: ಪಾಕಿಸ್ತಾನದ ಎರಡು ಕಡೆ ಆತ್ಮಹತ್ಯಾ ಬಾಂಬ್ ಸ್ಫೋಟ ಸಂಭವಿಸಿ ಕನಿಷ್ಠ 38 ಮಂದಿ ಮೃತರಾದರು. ದಕ್ಷಿಣ ಪಾಕಿಸ್ತಾನದ ಹಬ್ ಎಂಬಲ್ಲಿ ಜನನಿಬಿಡ ಮಾರುಕಟ್ಟೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಎಂಟು ಪೊಲೀಸರು ಸೇರಿ 30 ಮಂದಿ ಮೃತರಾದರು. ವಾಯವ್ಯ ಭಾಗದ ಹಂಗು ಎಂಬಲ್ಲಿ ಆತ್ಮಹತ್ಯಾ ಪಡೆಯ ಸದಸ್ಯನೊಬ್ಬ ಪೊಲೀಸ್ ತರಬೇತಿ ಕೇಂದ್ರದ ಒಳಗೆ ಕಾರು ನುಗ್ಗಿಸಿ ಬಾಂಬ್ ಸ್ಫೋಟಿಸಿದ್ದರಿಂದ 8 ಮಂದಿ ಮೃತರಾದರು.

2007: ಕ್ಯಾಲಿಫೋರ್ನಿಯಾದ ಬರ್ಕ್ಲಿಯಲ್ಲಿರುವ ಎಂಜಿನಿಯರಿಂಗ್ ವಿಶ್ವವಿದ್ಯಾಲಯದ ಮುಖ್ಯಸ್ಥರಾಗಿ ಹೈದರಾಬಾದ್ ಮೂಲದ ಶಂಕರಶಾಸ್ತ್ರಿ ನೇಮಕಗೊಂಡರು. ಹೈದರಾಬಾದಿನಲ್ಲಿ ಜನಿಸಿದ ಶಾಸ್ತ್ರಿ ತಮ್ಮ ವಿದ್ಯಾಬ್ಯಾಸವನ್ನು ಪುಣೆಯಲ್ಲಿ ಮುಗಿಸಿ ವಿದೇಶದಲ್ಲಿನ ವಿವಿಗೆ ಮುಖ್ಯಸ್ಥರಾಗಿ ಆಯ್ಕೆಯಾಗಿರುವ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
2006: ಜಾರ್ಖಂಡಿನ ಗುಡ್ಡಗಾಡು ಮಹಿಳೆ ಲಕ್ಷ್ಮಿ ಲಕ್ರಾ (27) ಉತ್ತರ ರೈಲ್ವೆಯಲ್ಲಿ ಮೊತ್ತ ಮೊದಲ ಮಹಿಳಾ ರೈಲು ಚಾಲಕಿ ಎಂಬ ಹೆಗ್ಗಳಿಕೆಗೆ ಪಾತ್ರರಾದಳು. ಮೂಲತಃ ಮುಂಬೈಯವಳಾದ ಲಕ್ಷ್ಮಿ 1992ರಲ್ಲಿ ರೈಲ್ವೆ ಇಲಾಖೆಗೆ ಸೇರಿದ್ದು, ಏಷ್ಯಾದ ಮೊದಲ ಮಹಿಳಾ ರೈಲು ಚಾಲಕಿ ಸುರೇಖಾ ಯಾದವ್ ಮಾರ್ಗದಲ್ಲಿ ಮುನ್ನಡೆದರು.

2006: ತಿರುಮಲ ತಿರುಪತಿ ದೇವಸ್ಥಾನವು ತನ್ನ ಎಲ್ಲ 10,000 ಮಂದಿ ನೌಕರರಿಗೂ ಹಣೆಯಲ್ಲಿ `ತಿಲಕ' ಧರಿಸುವುದನ್ನು ಕಡ್ಡಾಯಗೊಳಿಸಿ ನಿರ್ದೇಶನ ನೀಡಿತು.

2006: ಒರಿಸ್ಸಾದ ಪುರಿ ಮತ್ತು ಕೊನಾರ್ಕ್ ನಡುವೆ ಭಾರತದ ಮೊದಲ ವೇದಾಂತ ಅಂತರ್ರಾಷ್ಟ್ರೀಯ ವಿಶ್ವವಿದ್ಯಾಲಯ ಸ್ಥಾಪಿಸಲು ಅಗರ್ವಾಲ್ ಪ್ರತಿಷ್ಠಾನ ಮತ್ತು ಒರಿಸ್ಸಾ ಸರ್ಕಾರ ಭುವನೇಶ್ವರದಲ್ಲಿ ಒಪ್ಪಂದಕ್ಕೆ ಸಹಿ ಹಾಕಿದವು. 8000 ಎಕರೆ ವಿಸ್ತೀರ್ಣದಲ್ಲಿ 15,000 ಕೋಟಿ ರೂಪಾಯಿ ವೆಚ್ಚದಲ್ಲಿ ಸ್ಥಾಪನೆಯಾಗಲಿರುವ ವಿಶ್ವವಿದ್ಯಾಲಯ ಲಕ್ಷ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಲಿದೆ.

2006: ಸರ್ಕಾರಿ ಸೇವೆಯಲ್ಲಿ ಒಬಿಸಿ (ಇತರ ಹಿಂದುಳಿದ ವರ್ಗಗಳು) ಮೀಸಲು ಸೌಲಭ್ಯಕ್ಕೆ ಸಂಬಂಧಿಸಿದಂತೆ `ಕೆನೆಪದರ' ಪಟ್ಟಿಯನ್ನು ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ ಪಟ್ಟಿಯಲ್ಲಿ ಇರುವವರ ಮಕ್ಕಳು ಮೀಸಲು ಸೌಲಭ್ಯಕ್ಕೆ ಅರ್ಹರಲ್ಲ ಎಂದು ಪ್ರಕಟಿಸಿತು.

1993: ಹಿರಿಯ ಪತ್ರಕರ್ತ ಗಿರಿಲಾಲ್ ಜೈನ್ ನಿಧನ.

1969: ದೇಶದ 14 ಪ್ರಮುಖ ವಾಣಿಜ್ಯ ಬ್ಯಾಂಕುಗಳನ್ನು ಕೇಂದ್ರ ಸರ್ಕಾರ ರಾಷ್ಟ್ರೀಕರಣ ಮಾಡಿತು.

1965: ಜ್ಯೋತಿ ಗುರುಪ್ರಸಾದ್ ಜನನ.

1954: ಕೆ.ಎಂ. ವಿಜಯಲಕ್ಷ್ಮಿ ಜನನ.

1945: ರೂಪ ಕುಲಕರ್ಣಿ ಜನನ.

1938: ಖ್ಯಾತ ಬಾಹ್ಯಾಕಾಶ ವಿಜ್ಞಾನಿ ಜಯಂತ ವಿಷ್ಣು ನಾರಳೀಕರ್ ಜನನ.

1920: ಕಾದಂಬರಿಕಾರ, ಕಥೆ, ನಾಟಕಕಾರ ತ್ರಿವಿಕ್ರಮ (19-7-1920ರಿಂದ 9-1-1998ರವರೆಗೆ) ಅವರು ಕೆ.ಎಸ್. ಕೃಷ್ಣಮೂರ್ತಿ- ಜಯಲಕ್ಷ್ಮಮ್ಮ ದಂಪತಿಯ ಮಗನಾಗಿ ತುಮಕೂರಿನಲ್ಲಿ ಜನಿಸಿದರು.

No comments:

Post a Comment