Saturday, July 27, 2019

ಇಂದಿನ ಇತಿಹಾಸ History Today ಜುಲೈ 27




2019: ಮುಂಬೈ:  ಮುಂಬೈ ಸೇರಿದಂತೆ ಮಹಾರಾಷ್ಟ್ರದಲ್ಲಿ ಸುರಿದ ವ್ಯಾಪಕ ಮಳೆಗೆ ದೇಶದ ವಾಣಿಜ್ಯ ರಾಜಧಾನಿ ತತ್ತರಿಸಿ, ಜನಜೀವನ ಹಾಗೂ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು.  ಎಲ್ಲೆಂದರಲ್ಲಿ ನೀರು ತುಂಬಿಕೊಂಡಿದ್ದು, ಮಹಾಮಳೆಯಿಂದಾಗಿ ಕಲ್ಯಾಣ ಮತ್ತು ವಂಗಾನಿ ನಿಲ್ದಾಣಗಳ ಮಧ್ಯೆ ನೀರಿನಲ್ಲಿ  ಸಿಕ್ಕಿಹಾಕಿಕೊಂಡು ಸಂಚಾರ ಸ್ಥಗಿತಗೊಂಡ ಮುಂಬಯಿ-ಕೊಲ್ಹಾಪುರ ಮಹಾಲಕ್ಷ್ಮಿ ಎಕ್ಸ್ಪ್ರೆಸ್ ರೈಲಿನಲ್ಲಿದ್ದ ೧೦೦೦ಕ್ಕೂ ಹೆಚ್ಚು ಪ್ರಯಾಣಿಕರನ್ನು ಇಡೀದಿನ ನಡೆಸಿದ ಕ್ಷಿಪ್ರ ರಕ್ಷಣಾ ಕಾರ್ಯಾಚರಣೆಯಲ್ಲಿ ರಕ್ಷಿಸಿದ ಅತ್ಯರೂಪದ ಘಟನೆ ಘಟಿಸಿತು.  ಮಹಾಲಕ್ಷ್ಮಿ ಎಕ್ಸ್ಪ್ರೆಸ್ ರೈಲಿನಿಂದ ಎಲ್ಲ ಪ್ರಯಾಣಿಕರನ್ನೂ ರಕ್ಷಿಸಲಾಗಿದೆ. ಅವರಿಗೆ ಆಹಾರ ಮತ್ತು ವೈದ್ಯಕೀಯ ನೆರವು ಒದಗಿಸಲಾಗಿದೆ. ರೈಲಿನಲ್ಲಿ ಒಂಬತ್ತು ಮಂದಿ ಗರ್ಭಿಣಿಯರಿದ್ದರು. ಅವರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಅವರ ಪೈಕಿ ಒಬ್ಬರನ್ನು ಆರೋಗ್ಯ ತಪಾಸಣೆಗಾಗಿ ಸಮೀಪದ ಆಸ್ಪತ್ರೆಗೆ ದಾಖಲು ಮಾಡಲಾಗಿದೆಎಂದು ಥಾಣೆ ಜಿಲ್ಲಾಧಿಕಾರಿ ರಾಜೇಶ್ ನಾರ್ವೇಕರ್ ಸಂಜೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದರು. ರೈಲಿನಲ್ಲಿದ್ದ ಎಲ್ಲ ಪ್ರಯಾಣಿಕರನ್ನೂ ಹಗ್ಗದ ನೆರವಿನೊಂದಿಗೆ ತೆರವುಗೊಳಿಸಿ ೧೯ ಬೋಗಿಗಳ ವಿಶೇಷ ರೈಲಿನ ಮೂಲಕ ಕಲ್ಲಾಣದಿಂದ ಕೊಲ್ಲಾಪುರಕ್ಕೆ ಕರೆತರಲಾಯಿತು ಎಂದು ಮಧ್ಯ ರೈಲ್ವೇಯು ತಿಳಿಸಿತು. ಪ್ರಯಾಣಿಕರ ರಕ್ಷಣೆಗೆ ಎನ್ಡಿಆರ್ಎಫ್, ಸೇನೆ, ಭಾರತೀಯ ನೌಕಾಪಡೆ, ಪೊಲೀಸರು, ಮತ್ತು ಇತರ ಸಿಬ್ಬಂದಿ ನಡೆಸಿದ ಜಂಟಿ ಕ್ಷಿಪ್ರ ಕಾರ್ಯಾಚರಣೆಯನ್ನು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹಾಗೂ ಕೇಂದ್ರ ಗೃಹಸಚಿವ ಅಮಿತ್ ಶಾ ಶ್ಲಾಘಿಸಿದರು.  ಭಾರೀ ಮಳೆ ಹಾಗೂ ತಗ್ಗು ಪ್ರದೇಶಗಳು ಜಲಾವೃತವಾದ ಹಿನ್ನೆಲೆಯಲ್ಲಿ ಮಧ್ಯ ರೈಲ್ವೇಯ ಮುಂಬಯಿ ವಿಭಾಗದಲ್ಲಿ ರೈಲುಗಳ ಸಂಚಾರವನ್ನು ಅರ್ಧಕ್ಕೆ ಮೊಟಕುಗೊಳಿಸಲಾಯಿತು.  ಎರಡು ರೈಲುಗಳ ಸಂಚಾರ ರದ್ದುಪಡಿಸಲಾಯಿತು ಮತ್ತು ರೈಲುಗಳ ಮಾರ್ಗ ಬದಲಿಸಲಾಯಿತು ಎಂದು ಮಧ್ಯ ರೈಲ್ವೇ ಪ್ರಕಟಣೆಯೊಂದರಲ್ಲಿ ತಿಳಿಸಿತು.  ಹಿಂದಿನ ದಿನ  ಇಡೀರಾತ್ರಿ ಸುರಿದ ಜಡಿ ಮಳೆಯಿಂದಾಗಿ ಮುಂಬಯಿ ಮಹಾನಗರದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿತು. ಭಾರೀ ಮಳೆಯ ಹಿನ್ನೆಲೆಯಲ್ಲಿ  ಮುಂಬಯಿ ವಿಮಾನ ನಿಲ್ದಾಣದಿಂದ ೧೧ ವಿಮಾನಗಳ ಹಾರಾಟವನ್ನು ರದ್ದುಪಡಿಸಲಾಯಿತು. ಮುಂಬೈಗೆ ಆಗಮಿಸಬೇಕಿದ್ದ ವಿಮಾನಗಳ ಮಾರ್ಗ ಬದಲಿಸಿ, ಸಮೀಪದ ಇತರ ವಿಮಾನ ನಿಲ್ದಾಣಗಳಿಗೆ ಕಳುಹಿಸಲಾಯಿತು ಎಂದು ಎಂದು ಅಧಿಕೃತ ಮೂಲಗಳು ತಿಳಿಸಿದವು.  ಮುಂಬಯಿ-ಕೊಲ್ಹಾಪುರ ಮಹಾಲಕ್ಷ್ಮಿ ಎಕ್ಸ್ಪ್ರೆಸ್ ರೈಲು ಮುಂಬಯಿಯಿಂದ ೧೦೦ ಕಿ.ಮೀ ದೂರದ ವಂಗಾನಿ ಮತ್ತು ಬದ್ಲಾಪುರ್ ನಿಲ್ದಾಣಗಳ ಮಧ್ಯೆ ನಸುಕಿನ ಗಂಟೆಯಿಂದ ಸ್ಥಗಿತಗೊಂಡಿತ್ತು. ರೈಲಿನೊಳಗಿದ್ದ ಪ್ರಯಾಣಿಕರೇ ವಿಷಯ ತಿಳಿಸಿದ್ದು, ಸುಮಾರು ೧೦೦೦ ಮಂದಿ ಪ್ರಯಾಣಿಕರು ಮಾರ್ಗ ಮಧ್ಯೆ ಸಿಕ್ಕಿಹಾಕಿಕೊಂಡಿದ್ದರು. ಇದಕ್ಕೆ ಮೊದಲು ಸುಮಾರು ೨೦೦೦ ಮಂದಿ ಪ್ರಯಾಣಿಕರು ಸಿಕ್ಕಿ ಹಾಕಿಕೊಂಡಿದ್ದಾರೆ ಎಂದು ಅಂದಾಜಿಸಲಾಗಿತ್ತು.  ಹಳಿಗಳು ಜಲಾವೃತಗೊಂಡ ಪರಿಣಾಮವಾಗಿ ಸಂಚಾರ ಸ್ಥಗಿತಗೊಂಡು ರೈಲುಗಾಡಿ ನಿಂತಿದ್ದ ಸ್ಥಳಕ್ಕೆ ದೋಣಿಗಳನ್ನು ಕಳುಹಿಸಿದ ಜಿಲ್ಲಾಡಳಿತ ಪ್ರಯಾಣಿಕರ ತೆರವಿಗೆ ಕ್ಷಿಪ್ರ ಕಾರ್ಯಾಚರಣೆ ನಡೆಸಿತು. ಮಧ್ಯಾಹ್ನ ಆರಂಭಗೊಂಡ ತೆರವು ಕಾರ್ಯಾಚರಣೆ ಪೂರ್ಣಗೊಳ್ಳಲು ಮೂರು ಗಂಟೆಗಳು ಬೇಕಾದವು ಎಂದು ಸುದ್ದಿ ಮೂಲಗಳು ತಿಳಿಸಿದವು. ರಾಷ್ಟ್ರೀಯ ವಿಕೋಪ ಸ್ಪಂದನಾ ಪಡೆ (ಎನ್ಡಿಆರ್ಎಫ್) ಮತ್ತು ನೌಕಾಪಡೆ ವ್ಯಾಪಕ ರಕ್ಷಣಾ ಕಾರ್ಯಾಚರಣೆ ನಡೆಸಿತು. ೧೫೦ ಪ್ರಯಾಣಿಕರ ಮೊದಲ ತಂಡವನ್ನು ಮಧ್ಯಾಹ್ನದ ವೇಳೆಗೆ ರಕ್ಷಿಸಲಾಯಿತು. ಮುಂಬೈಯಿಂದ ೯೦ ಕಿಮೀ ದೂರದಲ್ಲಿ ಸುಮಾರು ಗಂಟೆಗಳ ಕಾಲ ನೀರಿನ ಮಧ್ಯೆ ರೈಲು ಸಿಕ್ಕಿಹಾಕಿಕೊಂಡಿತ್ತು. ರೈಲು ಜಲಾವೃತಗೊಂಡ ಹಳಿಗಳಲ್ಲಿ ಸಿಕ್ಕಿಹಾಕಿಕೊಂಡ ಸುದ್ದಿ ಹರಡುತ್ತಿದ್ದಂತೆಯೇ ತಲಾ ೪೫ ಮಂದಿಯಿದ್ದ ಎನ್ಡಿಆರ್ ಎಫ್ ಎರಡು ತಂಡಗಳು ಪುಣೆಯಿಂದ ಮತ್ತು ಎರಡು ತಂಡಗಳು ಮುಂಬೈಯಿಂದ ಧಾವಿಸಿದರೆ, ನೌಕಾಪಡೆಯ ಎಂಟು ರಕ್ಷಣಾ ತಂಡಗಳು, ಪ್ರವಾಹ ಪರಿಹಾರ ತಂಡಗಳು ಮತ್ತು ವಿಶೇಷ ಈಜಗಾರರ ತಂಡಗಳು ಮುಂಬೈಗೆ ಆಗಮಿಸಿದವು. ರಾಜ್ಯ ಸರ್ಕಾರದ ಕೋರಿಕೆ ಮೇರೆಗೆ ಎರಡು ಹೆಲಿಕಾಪ್ಟರುಗಳನ್ನು ಕೂಡಾ ರಕ್ಷಣಾ ಪಡೆ ಸ್ಥಳಕ್ಕೆ ಕಳುಹಿಸಿತು.  ಮುಂಬೈ-ಕೊಲ್ಹಾಪುರ ಮಹಾಲಕ್ಷ್ಮಿ ಎಕ್ಸ್ಪ್ರೆಸ್ ರೈಲು ಹಿಂದಿನ  ರಾತ್ರಿ .೧೫ ಗಂಟೆಗೆ ಮುಂಬೈಯಿಂದ ಹೊರಟಿತ್ತು. ನಸುಕಿನ ಗಂಟೆಯ ವೇಳೆಗೆ ಅದು ಕಲ್ಯಾಣ ಮತ್ತು ವಾಂಗನಿ ನಿಲ್ದಾಣದ ಮಧ್ಯೆ ಜಲಾವೃತಗೊಂಡ ಹಳಿಗಳಲ್ಲಿ ಮುಂದಕ್ಕೆ ಸಂಚರಿಸಲಾಗದೆ ನಿಂತುಕೊಂಡಿತು. ಬೆಳಗ್ಗೆ ರೈಲ್ವೇ ಸುರಕ್ಷತಾ ಪಡೆ, ಸ್ಥಳೀಯ ಪೊಲೀಸರು ಮತ್ತು ಇತರ ತಂಡಗಳು ರೈಲುಗಾಡಿ ಸಿಕ್ಕಿಹಾಕಿಕೊಂಡಿದ್ದ ಸ್ಥಳವನ್ನು ತಲುಪಿದವು ಮತ್ತು ಸಿಕ್ಕಿಹಾಕಿಕೊಂಡಿದ್ದ ಪ್ರಯಾಣಿಕರಿಗೆ ಬಿಸ್ಕತ್ ಮತ್ತು ನೀರು ವಿತರಿಸಿದರು. ನೆರೆಯ ಥಾಣೆ ಮತ್ತು ರಾಯಗಡ ಜಿಲ್ಲೆಗಳಲ್ಲಿ ಕಳೆದ ರಾತ್ರಿಯಿಂದೀಚೆಗೆ ಭಾರೀ ಮಳೆ ಸುರಿದ ಪರಿಣಾಮವಾಗಿ ಕಲ್ಯಾಣ ಮತ್ತು ವಾಂಗನಿ ನಿಲ್ದಾಣದ ನಡುವೆ ಹಳಿಗಳು ಜಲಾವೃತಗೊಂಡು ಹಲವಾರು ಹೊರವಲಯ ಮತ್ತು ಸ್ಥಳೀಯ ರೈಲುಗಾಡಿಗಳೂ ಸಿಕ್ಕಿಹಾಕಿಕೊಂಡವು. ಕಲ್ಯಾಣ ಮತ್ತು ಕರ್ಜತ್ ನಡುವಣ ರೈಲುಸೇವೆಯನ್ನು ಅಮಾನತುಗೊಳಿಸಲಾಯಿತು. ಉಲ್ಹಾಸ್ ನದಿ ಉಕ್ಕಿ ಹರಿಯುತ್ತಿರುವ ಕಾರಣ ವಾಂಗನಿಯಲ್ಲಿ ರೈಲು ಹಳಿಗಳು ಜಲಾವೃತಗೊಂಡವು. ಹೀಗಾಗಿ ರೈಲುಗಳ ಸಂಚಾರವನ್ನು ಕರ್ಜತ್ - ಪನ್ವೇಲ್ - ದಿವಾ ಮಾರ್ಗಕ್ಕೆ ತಿರುಗಿಸಲಾಯಿತು ಎಂದು ಮಧ್ಯ ರೈಲ್ವೇ ಮೂಲಗಳು ಹೇಳಿವೆ. ರೈಲ್ವೇಗೆ ಹೋಲಿಸಿದರೆ, ವಿಮಾನ ಸಂಚಾರ ಸ್ವಲ್ಪ ಮಟ್ಟಿಗೆ ಸುಗಮವಾಗಿತ್ತು. ಮುಂಬೈಯಲ್ಲಿ ಶನಿವಾರ ಬೆಳಗ್ಗೆ ವಿಮಾನಗಳು ಮಾಮೂಲಿ ಸಂಚಾರ ಆರಂಭಿಸಿದವು. ಶುಕ್ರವಾರ ಭಾರೀ ಮಳೆಯ ಕಾರಣ ೧೭ ವಿಮಾನಗಳ ಮಾರ್ಗ ಬದಲಿಸಲಾಗಿತ್ತು. ವಾರಾಂತ್ಯದಲ್ಲಿ ಭಾರೀ ಮಳೆ ಸುರಿಯುವ ಬಗ್ಗೆ ಹವಾಮಾನ ಕಚೇರಿ ಮುನ್ಸೂಚನೆ ನೀಡಿತ್ತು. ಬೆಳಗ್ಗೆ .೪೨ರ ವೇಳೆಗೆ ಏಳು ವಿಮಾನಗಳು ಮುಂಬೈ ವಿಮಾನ ನಿಲ್ದಾಣದಿಂದ ಪಯಣ ಹೊರಟವು. ಅವುಗಳಲ್ಲಿ ಐದು ಇಂಡಿಗೋ, ಒಂದು ಏರ್ ಇಂಡಿಯಾ ಮತ್ತು ಒಂದು ಎಮಿರೇಟ್ಸ್ ವಿಮಾನ ಇದ್ದವು. ಶುಕ್ರವಾರದ ಜಡಿಮಳೆಯ ಹಿನ್ನೆಲೆಯಲ್ಲಿ ಮುಂಬೈಯಿಂದ ಹೊರಹೋಗುವ ವಿಮಾನಗಳು ಮತ್ತು ಮುಂಬೈಗೆ ಬರುವ ವಿಮಾನಗಳ ಪಯಣವನ್ನು ರದ್ದು ಪಡಿಸಿದರೆ, ವಿಮಾನಗಳನ್ನು ಆಕಾಶದಲ್ಲಿ ಸುತ್ತು ಹೊಡೆಯಲು ಸೂಚಿಸಲಾಗಿತ್ತು ಮತ್ತು ವಿಮಾನಗಳನ್ನು ಮಧ್ಯರಾತ್ರಿಗೆ ಸ್ವಲ್ಪ ಮುನ್ನ ಬೇರೆ ವಿಮಾನ ನಿಲ್ದಾಣಗಳತ್ತ ಕಳುಹಿಸಲಾಗಿತ್ತು. ಹಿಂದಿನ ದಿನದ  ಮಹಾಮಳೆಯಿಂದಾಗಿ ಹಲವಾರು ಪ್ರಮುಖ ರಸೆಗಳು ಜಲಾವೃತಗೊಂಡು ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು.  ಈದಿನವೂ  ಬೆಳಗ್ಗೆ ನಗರ ಹೊರವಲಯದಲ್ಲಿ ಮಳೆ ಮುಂದುವರೆಯಿತು. ಏನಿದ್ದರೂ ಬೆಳಗ್ಗೆ ಗಂಟೆಯ ಬಳಿಕ ದಕ್ಷಿಣ ಮತ್ತು ಮಧ್ಯ ಮುಂಬೈಯಲ್ಲಿ ಮಳೆ ಸ್ವಲ್ಪ ತಗ್ಗಿತು. ಹಿಂದಿನ ದಿನ  ಬೆಳಗ್ಗೆ .೩೦ ಗಂಟೆಯಿಂದ  ಈದಿನ  ಬೆಳಗ್ಗೆ .೩೦ ಗಂಟೆ ನಡುವಣ ೨೪ ಗಂಟೆಗಳ ಅವಧಿಯಲ್ಲಿ ೨೧೯. ಮಿಮೀ (ಭಾರೀ ಮಳೆ) ಹೊರವಲಯದಲ್ಲಿ ಸುರಿದಿರುವುದನ್ನು ಸಾಂತಾಕ್ರೂಜ್ ಹವಾಮಾನ ವೀಕ್ಷಣಾಲಯ ದಾಖಲಿಸಿತು.. ಇದರಲ್ಲಿ ೧೯೬ ಮಿಮೀ ಮಳೆ  ಹಿಂದಿನ ದಿನ ಸಂಜೆ .೩೦ರಿಂದ  ಈದಿನ ಬೆಳಗಿನ .೩೦ರ ನಡುವಣ ೧೫ ಗಂಟೆಗಳ ಅವಧಿಯಲ್ಲಿ ಸುರಿದಿತ್ತು.  ದಕ್ಷಿಣ ಮುಂಬೈಯಲ್ಲಿ ಕಳೆದ ೨೪ ಗಂಟೆಯಲ್ಲಿ ೯೯ ಮಿಮೀ ಮಳೆ ಸುರಿಯಿತು. ಹಿಂದಿನ ದಿನ ಸಂಜೆಯಿಂದ ಈದಿನ ಬೆಳಗಿನವರೆಗೆ ಸುರಿದ ಮಳೆ ಭಾರೀ ಮಳೆ ಎಂಬುದಾಗಿ ಪರಿಗಣಿತವಾಗಿದ್ದರೂ ಇದು ಜುಲೈ ಮತ್ತು ೩ರ ನಡುವಣ ಅವಧಿಯಲ್ಲಿ ಸುರಿದ ೩೭೫ ಮಿಮೀ ಮಳೆಗಿಂತ ಕಡಿಮೆಯೇ. ಜುಲೈ ಮತ್ತು ೩ರ ನಡುವೆ ಸುರಿದ ಮಳೆ ೨೦೦೫ರ ಜುಲೈಯಿಂದೀಚೆಗೆ ಸುರಿದ ಮಳೆಗಳಲ್ಲೇ ಅತ್ಯಧಿಕ ಎಂಬುದಾಗಿ ಪರಿಗಣನೆಗೊಂಡಿದೆ.  ಮುಂಬೈಗೆ ಸಮೀಪದ ಪ್ರದೇಶಗಳಲ್ಲೂ ಭಾರೀ ಮಳೆ ಸುರಿದಿದ್ದು, ಕರ್ಜತ್ನಲ್ಲಿ ೨೪ ಗಂಟೆಗಳ ಅವಧಿಯಲ್ಲಿ ೩೦೩ ಮಿಮೀ ಮಳೆ ಸುರಿದಿದೆ. ಥಾಣೆ, ನವಿ ಮುಂಬೈ, ಬದ್ಲಾಪುರ, ಕಲ್ಯಾಣ ಮತ್ತು ದೊಂಬಿವಿಲಿಯಲ್ಲಿ ೧೪೦-೧೬೦ ಮಿಮೀ ಮಳೆ ಸುರಿದಿದ್ದು ಹಲವಾರು ಪ್ರದೇಶಗಳು ಜಲಾವೃತಗೊಂಡವು.
2019: ಶ್ರೀನಗರ: ಜೈಶ್--ಮೊಹಮ್ಮದ್ ಭಯೋತ್ಪಾದಕ ಸಂಘಟನೆಯ ಉನ್ನತ ಕಮಾಂಡರ್, ಬಾಂಬ್ ತಯಾರಕ ಮುನ್ನಾ ಭಾಯಿಯನ್ನು ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಇಡೀ ರಾತ್ರಿ ನಡೆದ ಕಾರ್ಯಾಚರಣೆಯ ಅಂತ್ಯದಲ್ಲಿ ಈದಿನ  ಬೆಳಗ್ಗೆ ನಡೆದ ಗುಂಡಿನ ಘರ್ಷಣೆಯಲ್ಲಿ ಭದ್ರತಾ ಪಡೆಗಳು  ಕೊಂದು ಹಾಕಿದವು.  ಮುನ್ನಾಭಾಯಿಯ ಸಹಚರ ಶೋಪಿಯಾನ್ ಜೀನತ್-ಉಲ್-ಇಸ್ಲಾಮ್ ಕೂಡಾ ಇದೇ ಕಾರ್ಯಾಚರಣೆಯಲ್ಲಿ ಹತನಾದ. ಛೋಟಾ ಬುರ್ಮಿ ಎಂಬುದಾಗಿಯೂ ಪರಿಚಿತನಾಗಿರುವ ಮುನ್ನಾ ಲಹೋರಿ ಪಾಕಿಸ್ತಾನದವನಾಗಿದ್ದು, ದಕ್ಷಿಣ ಕಾಶ್ಮೀರ ಪ್ರದೇಶದಲ್ಲಿ ಇನ್ನೊಬ್ಬ ಪಾಕಿಸ್ತಾನಿ ಜೈಶ್ ಕಮಾಂಡರ್ ಇಸ್ಮಾಯಿಲ್ ಜೊತೆ ಸೇರಿ ಹಲವಾರು ಐಇಡಿ ದಾಳಿಗಳನ್ನು ಯೋಜಿಸುತ್ತಿದ್ದ ಎಂದು ಆಪಾದಿಸಲಾಗಿತ್ತು. ಇವರಿಬ್ಬರೂ ಜಮ್ಮು ಮತ್ತು ಕಾಶ್ಮೀರದಲ್ಲಿ ಹಲವಾರು ಬಾಂಬ್ ಸ್ಫೋಟಗಳಿಗೆ ಕಾರಣನಾಗಿದ್ದುದು ಮಾತ್ರವಲ್ಲ, ದಕ್ಷಿಣ ಕಾಶ್ಮೀರದಲ್ಲಿ ಸ್ಥಳೀಯ ಭಯೋತ್ಪಾದಕರಿಗೆ ತರಬೇತಿ ನೀಡುತ್ತಿದ್ದರು ಮತ್ತು ಓಡಾಟಗಳಿಗೆ ಬೇಕಾದ ಬೆಂಬಲ ಕೊಡುತ್ತಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು. ಕಾಶ್ಮೀರ ಕಣಿವೆಯಲ್ಲಿ ಯುವಕರ ಬ್ರೈನ್ ವಾಶ್ ಮಾಡುವ ಕೆಲಸದಲ್ಲೂ ಜೈಶ್--ಮೊಹಮ್ಮದ್ ಸಂಘಟನೆ ಈತನನ್ನು ಬಳಸಿಕೊಳ್ಳುತ್ತಿತ್ತು. ಶೋಪಿಯಾನ್ ಜಿಲ್ಲೆಯ ಬಂಡೇ ಮೊಹಲ್ಲಾದ ಬೋನ್ ಬಜಾರ್ ಪ್ರದೇಶಕ್ಕೆ ಭದ್ರತಾ ಪಡೆಗಳು ಮುತ್ತಿಗೆ ಹಾಕಿ ಶೋಧ ಕಾರ್ಯಾಚರಣೆ ನಡೆಸಿದ ಬಳಿಕ  ಈದಿನದ  ಪ್ರಚಂಡ ಯಶಸ್ಸು ಸಾಧ್ಯವಾಯಿತು ಎಂದು ಪೊಲೀಸರು ಹೇಳಿದರು. ಹಿಂದಿನ ದಿನ  ಸಂಜೆಯಿಂದ ನಡೆಸಲಾದ ಶೋಧ ಕಾರ್ಯಾಚರಣೆಯ ವೇಳೆಯಲ್ಲಿ ಮುನ್ನಾ ಭಾಯಿ ಮತ್ತು ಜೀನತ್ ಉಲ್-ಇಸ್ಲಾಮ್ ಶೋಧ ತಂಡದ ಮೇಲೆ ಗುಂಡು ಹಾರಿಸಿದರು. ಭದ್ರತಾ ಪಡೆಗಳೂ ಪ್ರತಿಗುಂಡು ಹಾರಿಸಿದವು. ಇದು ಗುಂಡಿನ ಘರ್ಷಣೆಗೆ ಮೂಲವಾಯಿತುಎಂದು ಪೊಲೀಸ್ ಹೇಳಿಕೆ  ನೀಡಿತು.   ಗುಂಡಿನ ಕದನ ಇಡೀ ರಾತ್ರಿ ಮುಂದುವರೆಯಿತು. ೧೯ರ ಹರೆಯದ ಮುನ್ನಾ ಭಾಯಿ ಪಾಕಿಸ್ತಾನದಿಂದ ಕಾಶ್ಮೀರಕ್ಕೆ  ಹಿಂದಿನ  ವರ್ಷ ಬಂದಿದ್ದು, ಬಾಂಬ್ಗಳನ್ನು ಸ್ಫೋಟಿಸಲು ವಾಹನಗಳನ್ನು ಬಳಸುವ ಭಯೋತ್ಪಾದಕ ಸಂಘಟನೆಯ ತಂತ್ರವನ್ನು ಜಾರಿಗೊಳಿಸಿದ್ದ. ತಂತ್ರ ಬಳಕೆಯಿಂದ ತಮ್ಮ ಪ್ರಾಣಗಳನ್ನು ಅಪಾಯಕ್ಕೆ ಒಡ್ಡದೆಯೇ ಬಾಂಬ್ ದಾಳಿಗಳನ್ನು ನಡೆಸಲು ಅವರಿಗೆ ಸಾಧ್ಯವಾಗಿತ್ತು. ಸ್ಪೋಟಕಗಳ ತಯಾರಿ ಮತ್ತು ಅವುಗಳನ್ನು ಗರಿಷ್ಠ ಪರಿಣಾಮ ಬೀರುವಂತೆ ಮಾಡಲು ವಾಹನಗಳಿಗೆ ಅಳವಡಿಸುವುದರಲ್ಲಿ ಮುನ್ನಭಾಯಿ ಸಿದ್ಧಹಸ್ತನಾಗಿದ್ದ.  ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐಯ ಭಾಗವಾಗಿದ್ದ ಮುನ್ನಾಭಾಯಿ ಮತ್ತು ಇಸ್ಮಾಯಿಲ್ ಕಾಶ್ಮೀರದಲ್ಲಿ ನಡೆಯುತ್ತಿದ್ದ ಭಯೋತ್ಪಾದಕ ದಾಳಿಗಳಲ್ಲಿ ನೇರವಾಗಿ ಪಾಲ್ಗೊಳ್ಳುತ್ತಿರಲಿಲ್ಲ. ಹೀಗಾಗಿ ಅವರ ಮೇಲೆ ಯಾರಿಗೂ ಗುಮಾನಿ ಮೂಡುತ್ತಿರಲಿಲ್ಲ. ಹೀಗಾಗಿ ಭದ್ರತಾ ಪಡೆಗಳ ಕಣ್ಗಾವಲಿನಿಂದ ಅವರು ತಪ್ಪಿಸಿಕೊಂಡಿದ್ದರು. ಕಾಶ್ಮೀರ ಕಣಿವೆಯಲ್ಲಿ ಇಬ್ಬರು ಭಯೋತ್ಪಾದಕರು ಇರುವ ಬಗ್ಗೆ ಕೇಂದ್ರೀಯ ಗುಪ್ತಚರ ಸಂಸ್ಥೆಗಳಿಗೆ ಮೊದಲ ಸುಳಿವು ಲಭಿಸಿದ್ದು ಹೇಗೆ ಎಂಬುದಾಗಿ ಹಿರಿಯ ಅಧಿಕಾರಿಯೊಬ್ಬರು ನೆನಪು ಮಾಡಿಕೊಂಡರು. ವರ್ಷದ ಹಿಂದೆ ಸುಳಿವು ಲಭಿಸಿದ್ದರೂ ಅವರನ್ನು ಗುರುತಿಸಿ ಪತ್ತೆ ಮಾಡಲು ಹಲವಾರು ತಿಂಗಳುಗಳೇ ಹಿಡಿಯಿತು ಎಂದು ಅಧಿಕಾರಿ ನುಡಿದರು. ಜೂನ್ ೧೭ರಂದು ರಾಷ್ಟ್ರೀಯ ರೈಫಲ್ಸ್ ಸಂಚಾರಿ ಪಹರೆ ತಂಡ ಒಂದರ ಮೇಲೆ ನಡೆದ ಭಯೋತ್ಪಾದಕ ದಾಳಿ ಮತ್ತು ಜೈಶ್ ಕಮಾಂಡರ್ಗೆ ಇದ್ದ ಸಂಬಂಧವನ್ನು ಗುಪ್ತಚರ ಅಧಿಕಾರಿಗಳು ಪತ್ತೆ ಹಚ್ಚಿದ ಬಳಿಕ ಭದ್ರತಾ ಪಡೆಗಳು ಮುನ್ನಾಭಾಯಿಗಾಗಿ ಶೋಧ ತೀವ್ರಗೊಳಿಸಿದ್ದವು.  ಪುಲ್ವಾಮದ ಅರಿಹಾಲ್ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಇಬ್ಬರು ಯೋಧರು ಹತರಾಗಿ, ನಾಗರಿಕರೂ ಸೇರಿದಂತೆ ಇತರ ಹಲವರು ಗಾಯಗೊಂಡಿದ್ದರು. ವರ್ಷ ಫೆಬ್ರುವರಿಯಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ಯೋಧರ ಮೇಲೆ ವಾಹನ ಗುದ್ದಿಸಿ ನಡೆದ ಆತ್ಮಹತ್ಯಾದಾಳಿ ಸ್ಥಳದಿಂದ ಕೇವಲ ೩೦ ಕಿಮೀ ದೂರದಲ್ಲಿ ದಾಳಿ ನಡೆದಿತ್ತು. ಜಮ್ಮು ಮತ್ತು ಕಾಶ್ಮೀರದ ಬನಿಹಾಲ್ನಲ್ಲಿ ಮಾರ್ಚ್ ೩೦ರಂದು ಭದ್ರತಾ ಪಡೆಗಳ ತುಕಡಿಯೊಂದರ ಮೇಲೆ ನಡೆದ ವಾಹನ ಬಾಂಬ್ ದಾಳಿಯಲ್ಲೂ ಮುನ್ನಾ ಶಾಮೀಲಾಗಿದ್ದ. 
2019: ಮುಜಾಫ್ಫರಪುರ (ಬಿಹಾರ): ಅಲ್ಪಸಂಖ್ಯಾತರ ಗುಂಪು ಹತ್ಯೆ ಮತ್ತು ದ್ವೇಷ ಅಪರಾಧಗಳ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದ ೪೯ ಮಂದಿ ಗಣ್ಯರ ವಿರುದ್ಧ ಬಿಹಾರ ನ್ಯಾಯಾಲಯದಲ್ಲಿ ಅರ್ಜಿಯೊಂದನ್ನು ದಾಖಲಿಸಲಾಯಿತು. ವಕೀಲ ಸುಧೀರ್ ಕುಮಾರ್ ಓಜಾ ಅವರು ಚೀಫ್ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಕೋರ್ಟಿನಲ್ಲಿ ರಾಷ್ಟ್ರದ್ರೋಹ, ಧಾರ್ಮಿಕ ಭಾವನೆಗಳಿಗೆ ಘಾಸಿ ಉಂಟು ಮಾಡುವಿಕೆ ಇತ್ಯಾದಿಗಳ ಕುರಿತಂತೆ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಅರ್ಜಿಯನ್ನು ಸಲ್ಲಿಸಿದರು. ಪತ್ರವನ್ನು  ವಿರೋಧಿಸಿದ ಚಿತ್ರನಟಿ ಕಂಗನಾ ರಣಾವತ್, ನಿರ್ದೇಶಕರಾದ ಮಾಧುರಿ ಭಂಡಾರ್ಕಾರ್ ಮತ್ತು ವಿವೇಕ ಅಗ್ನಿಹೋತ್ರಿ ಮತ್ತಿತರ ೬೧ ಮಂದಿಯನು ಪ್ರಕರಣದಲ್ಲಿ ಸಾಕ್ಷಿಯಾಗಿ ಪರಿಗಣಿಸಬೇಕು ಎಂದು ಅರ್ಜಿದಾರರು ಕೋರಿದರು. ಪತ್ರಕ್ಕೆ ಸಹಿ ಮಾಡಿದ ೪೯ ಮಂದಿ, ತಮ್ಮ ಕೃತ್ಯದ ಮೂಲಕ ರಾಷ್ಟ್ರದ ವರ್ಚಸ್ಸಿಗೆ ಮಸಿ ಬಳಿದಿದ್ದಾರೆ ಮತ್ತು ಪ್ರಧಾನಿಯವರ ಸಾಧನೆಯನ್ನು ಗೌಣಗೊಳಿಸಲು ಯತ್ನಿಸಿದ್ದಾರೆ ಮತ್ತು ಪ್ರತ್ಯೇಕತಾವಾದಿ ಪ್ರವೃತ್ತಿಗಳನ್ನು ಬೆಂಬಲಿಸಿದ್ದಾರೆ ಎಂದೂ ಅರ್ಜಿದಾರರು ಆಪಾದಿಸಿದರು.  ಅರ್ಜಿಯು ಆಗಸ್ಟ್ ೩ರಂದು ವಿಚಾರಣೆಗೆ ಬರುವ ನಿರೀಕ್ಷೆ ಇದೆ.  ಚಿತ್ರ ನಿರ್ಮಾಪಕರಾದ ಮಣಿರತ್ನಂ, ಅನುರಾಗ ಕಶ್ಯಪ್, ಶ್ಯಾಮ್ ಬೆನೆಗಲ್, ಅಪರ್ಣಾ ಸೆನ್ ಮತ್ತು ಗಾಯಕಿ ಶುಭಾ ಮುದ್ಗಲ್ ಹಾಗೂ ಇತಿಹಾಸಕಾರ ರಾಮಚಂದ್ರ ಗುಹ ಸೇರಿದಂತೆ ೪೯ ಮಂದಿ ಗಣ್ಯರು ಧಾರ್ಮಿಕತೆಯನ್ನು ಆಧರಿಸಿ ನಡೆಯುತ್ತಿರುವ ದ್ವೇಪ ಅಪರಾಧಗಳ ಬಗ್ಗೆ ಕಳವಳ ವ್ಯಕ್ತ ಪಡಿಸಿ ಮಂಗಳವಾರ ಪ್ರಧಾನಿಗೆ ಪತ್ರ ಬರೆದಿದ್ದರು.  ‘ಜೈ ಶ್ರೀರಾಮ್ಘೋಷಣೆ ಸಮರಘೋಷಣೆಯಂತೆ ಭಾಸವಾಗುತ್ತಿದೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದರು.
2019: ನವದೆಹಲಿ: ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲನಾಥ್ ಅವರ ಸೋದರಳಿಯ ರತುಲ್ ಪುರಿ ಅವರು ವಿವಿಐಪಿ ಅಗಸ್ಟಾ ಹೆಲಿಕಾಪ್ಟರ್ ಹಣ ವರ್ಗಾವಣೆ ಪ್ರಕರಣದ ತನಿಖೆ ನಡೆಸುತ್ತಿದ್ದ ಸಂದರ್ಭದಲ್ಲಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳಿಗೆ ಕೈಕೊಟ್ಟು ಪರಾರಿಯಾಗಿರುವ ಘಟನೆ ಘಟಿಸಿತು. ಪ್ರಕರಣದ ಸಂಬಂಧವಾಗಿ ಪ್ರಶ್ನಿಸಲು ರತುಲ್ ಪುರಿ ಅವರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ಕಳುಹಿಸಿತ್ತು ಎಂದು ಅಧಿಕಾರಿಗಳು ತಿಳಿಸಿದರು. ಉದ್ಯಮಿಯಾಗಿರುವ ಪುರಿ ಅವರು ಇಲ್ಲಿನ ಜಾರಿ ನಿರ್ದೇಶನಾಲಯದ ಕಚೇರಿಗೆ  2019 ಜುಲೈ 26ರ ಶುಕ್ರವಾರ ಪ್ರಶ್ನೆಗಳಿಗೆ ಉತ್ತರಿಸುವ ಸಲುವಾಗಿ ಆಗಮಿಸಿದ್ದರು. ಏನಿದ್ದರೂ ವಿಚಾರಣೆಯ ಮಧ್ಯೆ, ಪುರಿ ಅವರು ಶೌಚಾಲಯಕ್ಕೆ ಹೋಗಬೇಕು ಎಂಬುದಾಗಿ ತನಿಖಾಧಿಕಾರಿಗಳಿಗೆ ಹೇಳಿ ಹೋದವರು ಅಲ್ಲಿಂದಲೇ ಪರಾರಿಯಾದರು ಎಂದು ಅಧಿಕಾರಿಗಳು ಆಪಾದಿಸಿದರು. ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮೊಬೈಲ್ ಮೂಲಕ ಪುರಿ ಅವರನ್ನು ಸಂಪರ್ಕಿಸಲು ಯತ್ನಿಸಿದರು. ಆದರೆ ಅದು ಸ್ವಿಚ್ ಆಫ್ ಆಗಿತ್ತು. ಸಂಸ್ಥೆಯು ಈಗ ಪ್ರಶ್ನಿಸುವ ಸಲುವಾಗಿ ಅವರನ್ನು ಇನ್ನೊಮ್ಮೆ ಕರೆಸಿಕೊಳ್ಳುವ ಬಗ್ಗೆ ಚಿಂತಿಸುತ್ತಿದೆ ಎಂದು ಅಧಿಕಾರಿಗಳು ಹೇಳಿದರು. ಪುರಿ ಅವರು ಬಳಿಕ ಜುಲೈ ೨೯ರ ಮಧ್ಯಾಹ್ನ ಗಂಟೆಯವರೆಗೆ ಬಂಧಿಸದಂತೆ ನ್ಯಾಯಾಲಯದಿಂದ ಮಧ್ಯಂತರ ರಕ್ಷಣೆ ಪಡೆದರು.  ವಿಷಯವು ವಿಚಾರಣೆಗಾಗಿ ಜಿಲ್ಲಾ ನ್ಯಾಯಾಧೀಶರ ಮುಂದೆ ಬರಲಿದೆ ಮತ್ತು ಪುರಿ ಅವರಿಗೆ ದೆಹಲಿಯ ಜಾರಿ ನಿರ್ದೇಶನಾಲಯ ಕಟ್ಟಡದಲ್ಲಿ ಸಂಜೆ ಗಂಟೆಗೆ ಹಾಜರಾಗುವಂತೆ ನಿರ್ದೇಶನಾಲಯ ನಿರ್ದೇಶಿಸಿತು. ಹಿಂದುಸ್ಥಾನ್ ಪವರ್ ಪ್ರೊಜೆಕ್ಟ್ಸ್ ಲಿಮಿಟೆಡ್ ಅಧ್ಯಕ್ಷರಾಗಿರುವ ಪುರಿ ಅವರನ್ನು ಸಂಸ್ಥೆಯು ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೆಯೂ ಪ್ರಶ್ನಿಸಿದೆ. ಪುರಿ ಅವರು ಕಮಲನಾಥ್ ಅವರ ಸಹೋದರಿಯಾಗಿರುವ ನೀತಾ ಮತ್ತು ಮೊಸೆರ್ ಬೇಯರ್ ಆಪ್ಟಿಕಲ್ ಸ್ಟೋರೇಜ್ ಮೀಡಿಯಾ ಸಂಸ್ಥೆಯ ಸಿಎಂಡಿ ದೀಪಕ್ ಪುರಿ ಅವರ ಪುತ್ರ.ಅಗಸ್ಟಾ ವೆಸ್ಟ್ಲ್ಯಾಂಡ್ ಹೆಲಿಕಾಪ್ಟರುಗಳನ್ನು ವಿವಿಐಪಿಗಳಿಗಾಗಿ ಖರೀದಿಸುವ ,೬೦೦ ಕೋಟಿ ರೂಪಾಯಿಗಳ ವಹಿವಾಟನ್ನು ಭಾರತವು ಭ್ರಷ್ಟಾಚಾರ ಮತ್ತು ಲಂಚ ಆರೋಪಗಳ ಹಿನ್ನೆಲೆಯಲ್ಲಿ ರದ್ದು ಪಡಿಸಿತ್ತು. ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ಪ್ರಕರಣದ ತನಿಖೆ ನಡೆಸುತ್ತಿದ್ದು ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವಾರು ದೋಷಾರೋಪ ಪಟ್ಟಿಗಳನ್ನು ಈಗಾಗಲೇ ಸಲ್ಲಿಸಿತ್ತು.

2018: ನವದೆಹಲಿ: ಗುಂಪು ಹತ್ಯೆಯ ಘಟನೆಗಳನ್ನು ದಮನಿಸಲು ರಾಷ್ಟ್ರಕ್ಕೆ ಪ್ರತ್ಯೇಕ ಬಿಗಿ ಕಾನೂನಿನ ಅಗತ್ಯವಿದೆಯೇ ಎಂಬುದಾಗಿ ಪರಿಶೀಲಿಸಲು ರಚಿಸಲಾಗಿರುವ ಉನ್ನತ ಮಟ್ಟದ ಸಮಿತಿಯು ಕಲ್ಲೆತದ ಪ್ರಕರಣಗಳನ್ನೂ ಇದರ ವ್ಯಾಪ್ತಿಗೆ ತರಲಿದೆ ಎಂದು ಕೇಂದ್ರ ಸಚಿವ ರಾಜ್ಯವರ್ಧನ ರಾಥೋಡ್ ಅವರು ಇಲ್ಲಿ ಹೇಳಿದರುಮಾಧ್ಯಮ ಒಂದರ ಜೊತೆಗೆ ಮಾತನಾಡುತ್ತಿದ್ದ ಅವರು ’ಪ್ರತಿಯೊಂದು ಹಿಂಸೆಯನ್ನೂ ತಿರಸ್ಕರಿಸಬೇಕು ಮತ್ತು ಖಂಡಿಸಬೇಕುಇಂತಹ ಘಟನೆಗಳನ್ನು ನೀವು ರಾಜಕೀಯಗೊಳಿಸುವಂತಿಲ್ಲಪೊಲೀಸ್ ಪೇದೆಯೊಬ್ಬ ಕರ್ತವ್ಯ ನಿರತನಾಗಿದ್ದಾಗ ಗುಂಪುದಾಳಿಯಿಂದ ಹತನಾದರೆ ಅದು ಕೂಡಾ ಗುಂಪುಹತ್ಯೆಯೇ ಮತ್ತು ಯಾರಾದರೂ ಒಬ್ಬ ವ್ಯಕ್ತಿ ಕಲ್ಲೇಟಿನಿಂದ ಸತ್ತರೆ ಅದು ಕೂಡಾ ಗುಂಪು ಹತ್ಯೆಯೇ’ ಎಂದು ನುಡಿದರುನೂತನ ಕಾನೂನು ರಚಿಸುವ ಸಲುವಾಗಿ ಸಮಿತಿಯು ಎಲ್ಲ ರೀತಿಯ ಗುಂಪು ಹಿಂಸಾಚಾರಗಳನ್ನೂ ಪರಿಗಣಿಸುವುದು ಎಂದು ಅವರು ಹೇಳಿದರುಗುಂಪು ಹತ್ಯೆಗಳ ದಮನಕ್ಕಾಗಿ ಕಾನೂನು ರೂಪಿಸುವ ಸಲುವಾಗಿ ರಚಿಸಲಾಗಿರುವ ಉನ್ನತ ಸಮಿತಿಯು ತನ್ನ ಶಿಫಾರಸುಗಳನ್ನು ಸಚಿವರ ಸಮಿತಿಗೆ ಸಲ್ಲಿಸಲಿದ್ದುಸಚಿವರ ಸಮಿತಿಯು ನಾಲ್ಕು ವಾರಗಳ ಒಳಗಾಗಿ ಅದನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಳುಹಿಸುವ ನಿರೀಕ್ಷೆ ಇದೆಚೆನ್ನೈಯ ಪ್ರವಾಸಿಯೊಬ್ಬರು ಇತ್ತೀಚೆಗೆ ಕಾಶ್ಮೀರದಲ್ಲಿ ಕಲ್ಲೆಸೆಯುತ್ತಿದ್ದ  ಗುಂಪಿನ ದಾಳಿಗೆ ಸಿಲುಕಿ ಸಾವನ್ನಪ್ಪಿದ ಘಟನೆಯನ್ನು ಉಲ್ಲೇಖಿಸಿದ ರಾಥೋಡ್ ’ಗುಂಪು ಹತ್ಯೆ ನಿಗ್ರಹ ಕಾನೂನು ಬಗ್ಗೆ ಪರಿಶೀಲನೆಗಾಗಿ ರಚಿಸಲಾಗಿರುವ ನಾಲ್ವರು ಸದಸ್ಯರ ಸಮಿತಿಯು ವಿಷಯಕ್ಕೆ ಸಂಬಂಧಿಸಿದ ವ್ಯಾಪ್ತಿಯನ್ನು ವಿಸ್ತರಿಸಲಿದೆ’ ಎಂದು ಹೇಳಿದರು.  ಕಳೆದ ವರ್ಷ ಮನೆಗೆ ಹೊರಟಿದ್ದ ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಅಧಿಕಾರಿಯೊಬ್ಬರನ್ನು ಗುಂಪೊಂದು ಹೊಡೆದು ಸಾಯಿಸಿದ ಪ್ರಕರಣವನ್ನೂ ಪ್ರಸ್ತಾಪಿಸಿದ ರಾಥೋಡ್ ಇಂತಹ ಘಟನೆಗಳನ್ನೂ ಗಮನಿಸಿ  ಸಮಿತಿಯ ಕಾರ್ ವ್ಯಾಪ್ತಿಯನ್ನು ವಿಸ್ತರಿಸಲಾಗುತ್ತದೆ ಎಂದು ನುಡಿದರುಕಳೆದ ವರ್ಷ ಜೂನ್ ತಿಂಗಳಲ್ಲಿ ಡೆಪ್ಯುಟಿ ಎಸ್ ಪಿ (ಭದ್ರತೆಮೊಹಮ್ಮದ್ ಅಯೋಬ್ ಪಂಡಿತ್ ಅವರು ನಾಗರಿಕ ದುಸ್ತಿನಲ್ಲಿ ಮಸೀದಿಯೊಂದರ ಹೊರಭಾಗದಲ್ಲಿ ಚಿತ್ರಗಳನ್ನು ತೆಗೆಯುತ್ತಿದ್ದಾಗ ಗುಂಪೊಂದು ಅವರ ಮೇಲೆ ದಾಳಿ ನಡೆಸಿತ್ತುಪೊಲೀಸ್ ಅಧಿಕಾರಿ ಸ್ವರಕ್ಷಣೆಗಾಗಿ ತಮ್ಮ ಸರ್ವೀಸ್ ಪಿಸ್ತೂಲಿನಿಂದ ಗುಂಡು ಹಾರಿಸಿದಾಗ ಮೂವರು ಗಾಯಗೊಂಡಿದ್ದರುಸಿಟ್ಟಿಗೆದ್ದ ಗುಂಪು ಅವರನ್ನು ಚಚ್ಚಿ ಕೊಂದು ಹಾಕಿತ್ತು.

2018: ವಿಶ್ವಸಂಸ್ಥೆವಿಶ್ವಸಂಸ್ಥೆಯು ಹಣದ ಅಭಾವವನ್ನು ಎದುರಿಸಬೇಕಾದ ಪರಿಸ್ಥಿತಿ ಬರಬಹುದು ಎಂದು ವಿಶ್ವಸಂಸ್ಥೆ ಮುಖ್ಯಸ್ಥರು ಎಚ್ಚರಿಸಿದ್ದುಕಡ್ಡಾಯ ದೇಣಿಗೆಗಳನ್ನು ಸಕಾಲದಲ್ಲಿ ಪೂರ್ತಿಯಾಗಿ ಪಾವತಿ ಮಾಡುವ ಮೂಲಕ ವಿಶ್ವಸಂಸ್ಥೆಯು ತನ್ನ ಪ್ರಮುಖ ಕಾರ್ಯಗಳನ್ನು ಮಾಡಲು ಅಡ್ಡಿಯಾಗದಂತೆ ನೋಡಿಕೊಳ್ಳಬೇಕು ಎಂದು ಸದಸ್ಯ ರಾಷ್ಟ್ರಗಳನ್ನು ಆಗ್ರಹಿಸಿದರುವಿಶ್ವ ಸಂಸ್ಥೆ ಸಿಬ್ಬಂದಿಗೆ ಬರೆದ ಪತ್ರದಲ್ಲಿ ಸೆಕ್ರೆಟರಿ ಜನರಲ್ ಆಂಟೋನಿಯೋ ಗುಟೆರ್ರೆಸ್ ಅವರು ತಾವು ಜಾಗತಿಕ ಸಂಸ್ಥೆಯು ಎದುರಿಸುತ್ತಿರುವ ಕಠಿಣ ಹಣಕಾಸು ಪರಿಸ್ಥಿತಿಯ ಬಗ್ಗೆ ಸದಸ್ಯ ರಾಷ್ಟ್ರಗಳಿಗೆ ಪತ್ರ ಬರೆದಿರುವುದಾಗಿ ತಿಳಿಸಿದರು. ರೆಗ್ಯುಲರ್ ಬಜೆಟ್ ಕಾಣಿಕೆಯನ್ನು ಪಾವತಿ ಮಾಡುವಲ್ಲಿ ಸದಸ್ಯ ರಾಷ್ಟ್ರಗಳು ವಿಳಂಬ ಮಾಡುತ್ತಿರುವುದು ವಿಶ್ವಸಂಸ್ಥೆಯಲ್ಲಿ ಹಣದ ಅಭಾವ ತಲೆದೋರಲು ಮುಖ್ಯ ಕಾರಣವಾಗಿದ್ದು ಬಾರಿಯ ನಗದು ಅಭಾವ ಹಿಂದೆ ಸಂಭವಿಸಿದ ಹಣದ ಅಭಾವಗಳಂತಲ್ಲ ಎಂದು ಗುಟೆರ್ರ್ರೆಸ್ ತಮ್ಮ ಪತ್ರದಲ್ಲಿ ತಿಳಿಸಿದರು. ನಮ್ಮ ನಗದು ಹಣದ ಹರಿವು  ವರ್ಷ ಅತ್ಯಂತ ಕಡಿಮೆಯಾಗಿದ್ದು ಹಿಂದೆಂದೂ ಇಷ್ಟೊಂದು ಕಡಿಮೆಯಾಗಿರಲಿಲ್ಲಪರಿಸ್ಥಿತಿ ಸುಧಾರಿಸುವ ಲಕ್ಷಣಗಳೂ ಕಾಣುತ್ತಿಲ್ಲಹೀಗಾಗಿ ಶೀಘ್ರದಲ್ಲೇ ನಾವು ತೀವ್ರ ಹಣದ ಅಭಾವ ಎದುರಿಸಬೇಕಾದ ಪರಿಸ್ಥಿತಿ ಬರಬಹುದು ಎಂದು ಗುಟೆರ್ರೆಸ್ ಪತ್ರ ಹೇಳಿತುಜುಲೈ ೨೬ರವರೆಗಿನ ಅವಧಿಯಲ್ಲಿ  ವರ್ಷ ಭಾರತ ಸೇರಿದಂತೆ ೧೧೨ ಸದಸ್ಯ ರಾಷ್ಟ್ರಗಳು ತಮ್ಮ ರೆಗ್ಯುಲರ್ ಬಜೆಟ್ ಕಾಣಿಕೆಯನ್ನು ಪೂರ್ತಿಯಾಗಿ ಪಾವತಿ ಮಾಡಿವೆಭಾರತವು ೧೭.೯೧ ಮಿಲಿಯನ್ (೧೭.೯೧ ಕೋಟಿಡಾಲರ್ ಗಳನ್ನು  ವರ್ಷ ಜನವರಿ ೨೯ರಂದೇ ಪಾವತಿ ಮಾಡಿದೆ.   ವರ್ಷದ ಜೂನ್ ಅಂತ್ಯದ ವೇಳೆಗೆ ೨೦೧೮ರ ಸಾಲಿಗಾಗಿ ಸದಸ್ಯರಾಷ್ಟ್ರಗಳು ಸುಮಾರು ೧೪೯ ಕೋಟಿ (.೪೯ ಬಿಲಿಯನ್ಅಮೆರಿಕನ್ ಡಾಲರ್ ಹಣವನ್ನು ಪಾವತಿ ಮಾಡಿವೆಕಳೆದ ವರ್ಷ ಇದೇ ಅವಧಿಯಲ್ಲಿ ರೆಗ್ಯುಲರ್ ಬಜೆಟ್ ಗೆ ಪಾವತಿ ಮಾಡಲಾಗಿದ್ದ ಮೊತ್ತ ೧೭೦ ಕೋಟಿ (.೭೦ ಬಿಲಿಯನ್ಅಮೆರಿಕನ್ ಡಾಲರುಗಳಿಗಿಂತ ಸ್ವಲ್ಪ ಹೆಚ್ಚು.  ಈವರೆಗೆ  ತಿಂಗಳಲ್ಲಿ ಇರಾಖ್ಮಾಲ್ದೋವಜಪಾನ್ಲಿಥುವೇನಿಯಾ ಮತ್ತು ಮೆಕ್ಸಿಕೊ ತಮ್ಮ ೨೦೧೮ರ ಸಾಲಿನ ಕಾಣಿಕೆಯಾಗಿ ಸ್ವಲ್ಪ ಹಣ ಪಾವತಿ ಮಾಡಿದ್ದರೂ೮೧ ಕೋಟಿ (೮೧೦ ಮಿಲಿಯನ್ಅಮೆರಿಕನ್ ಡಾಲರುಗಳನ್ನು ಬಾಕಿ ಇರಿಸಿವೆಒಟ್ಟು ೮೧ ರಾಷ್ಟ್ರಗಳು ತಮ್ಮ ರೆಗ್ಯುಲರ್ ಬಜೆಟ್ ಕಾಣಿಕೆಯನ್ನೇ ಇನ್ನೂ ಪಾವತಿ ಮಾಡಿಲ್ಲ ರಾಷ್ಟ್ರಗಳ ಸಾಲಿನಲ್ಲಿ ಆಫ್ಘಾನಿಸ್ಥಾನಬಾಂಗ್ಲಾದೇಶಬ್ರೆಜಿಲ್ಈಜಿಪ್ಟ್ಇಸ್ರೇಲ್ಮಾಲ್ದೀವ್ಸ್ಪಾಕಿಸ್ತಾನಸೌದಿ ಅರೇಬಿಯಾಸಿಚೆಲ್ಲೆಸ್ಸುಡಾನ್ಸಿರಿಯಾ ಮತ್ತು ಅಮೆರಿಕ ಹಾಗೂ ಜಿಂಬಾಬ್ವೆ ಸೇರಿವೆ.  ಅಮೆರಿಕವು ವಿಶ್ವಸಂಸ್ಥೆಗೆ ಅತಿದೊಡ್ಡ ಕಾಣಿಕೆ ನೀಡುತ್ತಿರುವ ರಾಷ್ಟ್ರವಾಗಿದ್ದು ೫೪೦ ಕೋಟಿ (. ಬಿಲಿಯನ್ಅಮೆರಿಕನ್ ಡಾಲರ್ ಮೊತ್ತದ ಮುಖ್ಯ ಬಜೆಟಿನ (ಕೋರ್ ಬಜೆಟ್ಶೇಕಡಾ ೨೨ನ್ನು ಮತ್ತು ೭೯೦ ಕೋಟಿ (. ಬಿಲಿಯನ್ ) ಅಮೆರಿಕನ್ ಡಾಲರ್ ಮೊತ್ತದ ಶಾಂತಿಪಾಲನಾ ಬಜೆಟಿನ ಶೇಕಡಾ ೨೮.೫ನ್ನು ಭರಿಸುತ್ತದೆಅಮೆರಿಕದ ಪಾಲು ಶೇಕಡಾ ೨೫ಕ್ಕೆ ಮಿತಿಯಾಗುವಂತೆ ನೋಡಿಕೊಳ್ಳುವ ಸಲುವಾಗಿ ಇತರ ರಾಷ್ಟ್ರಗಳು ತಮ್ಮ ಕಾಣಿಕೆಯ ಪಾಲನ್ನು ಹೆಚ್ಚಿಸಬೇಕು ಎಂದು ವಿಶ್ವಸಂಸ್ಥೆಯಲ್ಲಿನ ಅಮೆರಿಕದ ರಾಯಭಾರಿ ನಿಕ್ಕಿ ಹಾಲೇ ಅವರು ಹೇಳಿದ್ದಾರೆ.  ಕಳೆದ ವರ್ಷ ವಿಶ್ವಸಂಸ್ಥೆಯು ೨೦೧೮-೧೯ರ ಹಣಕಾಸು ವರ್ಷಕ್ಕೆ ೫೪೦ ಕೋಟಿ (. ಬಿಲಿಯನ್ಅಮೆರಿಕನ್ ಡಾಲರ್ ಮೊತ್ತದ ಬಜೆಟಿಗೆ ವಿಶ್ವಸಂಸ್ಥೆ ಒಪ್ಪಿತ್ತು.   ಬಜೆಟಿನಿಂದ ೨೮.೫೦ ಕೋಟಿ (೨೮೫ ಮಿಲಿಯನ್ಅಮೆರಿಕನ್ ಡಾಲರ್ ನಷ್ಟು ಮೊತ್ತವನ್ನು ಇಳಿಸುವಂತೆ ಅಮೆರಿಕ ಮಾತುಕತೆ ನಡೆಸಿತ್ತು. ’ವಿಶ್ವಸಂಸ್ಥೆಯ ಅದಕ್ಷತೆ ಮತ್ತು ಅತಿಯಾದ ವೆಚ್ಚವು ಎಲ್ಲರಿಗೂ ಗೊತ್ತಿರುವಂತಹುದೇಆದ್ದರಿಂದ ಅಮೆರಿಕದ ಜನರ ಉದಾರತೆಯ ಲಾಭ ಪಡೆಯಲು ಅಥವಾ ಅದನ್ನು ತಪಾಸಿಸದೇ ಇರಲು ಇನ್ನು ಅವಕಾಶ ನೀಡುವುದಿಲ್ಲ’ ಎಂದು ಅಮೆರಿಕ ಹೇಳಿತ್ತು.  ತಮ್ಮ ತಮ್ಮ ಬಜೆಟ್ ಕಾಣಿಕೆಯನ್ನು ಸಕಾಲಕ್ಕೆಪೂರ್ಣವಾಗಿ ಪಾವತಿ ಮಾಡುವಂತೆ ತಾನು ಸದಸ್ಯ ರಾಷ್ಟ್ರಗಳಿಗೆ ಮನವಿ ಮಾಡಿದ್ದುಹಣದ ಅಭಾವವಾದರೆ ವಿಶ್ವಸಂಸ್ಥೆಗೆ ತನ್ನ ಕಾರ್ಯಗಳನ್ನು ಅನುಷ್ಠಾನಗೊಳಿಸಲು ಸಾಧ್ಯವಾಗದುಇದರಿಂದ ಸಂಸ್ಥೆಯ ಪ್ರತಿಷ್ಠೆಗೂ ಧಕ್ಕೆಯಾಗಬಹುದು ಎಂದು ಗುಟೆರ್ರೆಸ್ ಹೇಳಿದರುಕೆಲವು ಸದಸ್ಯ ರಾಷ್ಟ್ರಗಳ ಹಣಕಾಸು ವರ್ಷಗಳು ಭಿನ್ನವಾಗಿವೆ ಎಂಬುದು ವಿಶ್ವಸಂಸ್ಥೆಗೆ ಗೊತ್ತಿದೆಆದರೆ ಹಿಂದಿನ ವರ್ಷಗಳಲ್ಲಿ ಎಂದೂ  ವರ್ಷದಂತೆ ನಗದು ಹಣದ ಹರಿವು ಇಳಿದಿರಲಿಲ್ಲ ಎಂದು ಜನರಲ್ ಸೆಕ್ರೆಟರಿ ಅವರ ವಕ್ತಾರ ಸ್ಟೀಫನ್ ಡುಜರ್ರಿಕ್ ಪತ್ರಕರ್ತರೊಂದಿಗೆ ಮಾತನಾಡುತ್ತಾ ಹೇಳಿದರುವಿಶ್ವಸಂಸ್ಥೆಯು ತನ್ನ ಖರ್ಚುವೆಚ್ಚಗಳಿಗೆ ಸದಸ್ಯ ರಾಷ್ಟ್ರಗಳ ಕೊಡುಗೆಯ ಸಕಾಲಿಕಪೂರ್ಣ ಪಾವತಿಯನ್ನೇ ನೆಚ್ಚಿಕೊಂಡಿದ್ದುಅದಕ್ಕೆ ಬೇರೆ ಆದಾಯಗಳಿಲ್ಲ ಎಂದೂ ಅವರು ನುಡಿದರುವಿಶ್ವಸಂಸ್ಥೆ ಸಚಿವಾಲಯವು ಈಗ ವೆಚ್ಚ ಇಳಿಕೆಯ ದಾರಿಗಳನ್ನು ಅನ್ವೇಷಿಸುತ್ತಿದ್ದುಸಿಬ್ಬಂದಿಯೇತರ ವೆಚ್ಚ ಇಳಿಕೆ ಬಗ್ಗೆ ಗಮನ ಹರಿಸಿದೆ ಎಂದೂ ಅವರು ಹೇಳಿದರು.

2018: ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನ ಮುಕ್ತಾಯವಾಗುವುದರ ಒಳಗಾಗಿ ಪರಿಶಿಷ್ಟ ಜಾತಿಪರಿಶಿಷ್ಟ ಪಂಗಡ (ಎಸ್ಸಿ/ಎಸ್ಟಿದೌರ್ಜನ್ಯ ತಡೆ ಮಸೂದೆಗೆ ತಿದ್ದುಪಡಿಗಳನ್ನು ತರುವಂತೆ ಎನ್ ಡಿಎ ಮಿತ್ರಪಕ್ಷವಾಗಿರುವ ಲೋಕಜನಶಕ್ತಿ ಪಕ್ಷವು ಗಡುವು ನೀಡಿದ್ದುಇಲ್ಲದೇ ಇದ್ದಲ್ಲಿ ಚಳವಳಿ ಆರಂಭಿಸುವ ಬೆದರಿಕೆ ಹಾಕಿತು.
ಬಿಹಾರದಲ್ಲಿ ಬಿಜೆಪಿಯ ಮಿತ್ರ ಪಕ್ಷವಾಗಿರುವ ಲೋಕಜನ ಶಕ್ತಿ ಪಕ್ಷವು ದುರ್ಬಲ ವರ್ಗಗಳಿಗೆ ಜಾತಿ ತಾರತಮ್ಯ ಮತ್ತು ಹಿಂಸೆಯಿಂದ ರಕ್ಷಣೆ ಒದಗಿಸುವ ಸಲುವಾಗಿ ಕಾಯ್ದೆಗೆ ಬದಲಾವಣೆಗಳನ್ನು ಮಾಡದೇ ಇದ್ದಲ್ಲಿ ಚಳವಳಿ ಆರಂಭಿಸುವುದಾಗಿ ಎಚ್ಚರಿಕೆ ನೀಡಿತುಪಕ್ಷದ ಸಂಸತ್ ಸದಸ್ಯ ಹಾಗೂ ಸಂಸದೀಯ ಮಂಡಳಿ ಅಧ್ಯಕ್ಷ ಚಿರಾಗ್ ಪಾಸ್ವಾನ್ ಅವರು ’ದಲಿತರ ಸಹನೆ ಮೀರುತ್ತಿದೆನಮ್ಮ ಬೇಡಿಕೆಗಳನ್ನು ಆಗಸ್ಟ್ ೯ರ ಒಳಗಾಗಿ ಈಡೇರಿಸದೇ ಇದ್ದಲ್ಲಿ ಆಗ ದಲಿತ ಸೇನೆಯು ರಸ್ತೆಗಳಿಗೆ ಇಳಿಯುವುದು  ಅನಿವಾರ್ಯವಾಗುತ್ತದೆಎಲ್ ಜೆಪಿಯು ಯಾವುದೇ ನಿರ್ಧಾರ ಕೈಗೊಳ್ಳಬಹುದುಈಗ ನಡೆಯುತ್ತಿರುವ ಸಂಸತ್ತಿನ ಮುಂಗಾರು ಅಧಿವೇಶನ ಮುಂದೂಡಿಕೆಯಾದಲ್ಲಿ ಕೇಂದ್ರ ಸರ್ಕಾರವು ಎಸ್ ಸಿ /ಎಸ್ ಟಿ ಕಾಯ್ದೆಗೆ ಸಂಬಂಧಿಸಿದಂತೆ ಸುಗ್ರೀವಾಜ್ಞೆ ಹೊರಡಿಸಬೇಕು ಎಂದು ಆಗ್ರಹಿಸಿದರು.  ಸುಪ್ರೀಂಕೋರ್ಟ್  ವರ್ಷ ಆದಿಯಲ್ಲಿ ನೀಡಿದ್ದ ತನ್ನ ಆದೇಶದಲ್ಲಿ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಾದ ತತ್ ಕ್ಷಣವೇ ಆರೋಪಿಯನ್ನು ಬಂಧಿಸಲಾಗದು ಎಂದು ತಿಳಿಸಿತ್ತುದಲಿತ ಸಂಘಟನೆಗಳು ಸುಪ್ರೀಂಕೋರ್ಟಿನ  ತೀರ್ಪಿನ ವಿರುದ್ಧ ಏಪ್ರಿಲ್ ಮೊದಲ ವಾರದಲ್ಲಿ ರಾಷ್ಟ್ರವ್ಯಾಪಿ ಪ್ರತಿಭಟನೆಗಳನ್ನು ನಡೆಸಿದ್ದವುಪ್ರತಿಭಟನೆ ಹಿಂಸೆಗೆ ತಿರುಗಿದ ಪರಿಣಾಮವಾಗಿ  ಮಂದಿ ಜೀವ ಕಳೆದುಕೊಂಡಿದ್ದರುತೀರ್ಪನ್ನು ಮರುಪರಿಶೀಲನೆ ಮಾಡುವಂತೆ ಕೋರಿ ಸರ್ಕಾರ ಸಲ್ಲಿಸಿದ್ದ ಪುನರ್ ಪರಿಶೀಲನಾ ಅರ್ಜಿಯನ್ನೂ ಸುಪ್ರೀಂಕೋರ್ಟ್ ತಳ್ಳಿಹಾಕಿತ್ತುಸಂಸತ್ತಿನಲ್ಲಿ ತಿದ್ದುಪಡಿಗಳನ್ನು ತರುವ ಮೂಲಕ ಕಾಯ್ದೆಯಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡುವಂತೆ ವಿರೋಧ ಪಕ್ಷಗಳು ಮತ್ತು ಎನ್ ಡಿ  ಮಿತ್ರ ಪಕ್ಷಗಳು ಅಂದಿನಿಂದಲೇ ಸರ್ಕಾರವನ್ನು ಒತ್ತಾಯಿಸುತ್ತಾ ಬಂದಿದ್ದವುಎಲ್ ಜೆಪಿ ಮುಖ್ಯಸ್ಥ ಮತ್ತು ಕೇಂದ್ರ ಸಚಿವ ರಾಮ್ ವಿಲಾಸ ಪಾಸ್ವಾನ್ ಅವರ ನಿವಾಸದಲ್ಲಿ ಈವಾರ ಸಭೆ ಸೇರಿದ್ದ ಎನ್ ಡಿಎ ಸಂಸತ್ ಸದಸ್ಯರು ಮತ್ತು ನ್ಯಾಯಮೂರ್ತಿ ಎಕೆ ಗೋಯೆಲ್ ಅವರನ್ನು ರಾಷ್ಟ್ರೀಯ ಹಸಿರು ಪೀಠದ ಅಧ್ಯಕ್ಷರಾಗಿ ನೇಮಿಸುವುದಕ್ಕೆ ಆಕ್ಷೇಪ ವ್ಯಕ್ತ ಪಡಿಸಿದ್ದರುನ್ಯಾಯಮೂರ್ತಿ ಗೋಯೆಲ್ ಮತ್ತು ನ್ಯಾಯಮೂರ್ತಿ ಯು ಯು ಲಲಿತ್ ಅವರನ್ನು ಒಳಗೊಂಡ ಪೀಠವು ಪರಿಶಿಷ್ಟ ಜಾತಿಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆಗೆ ಸಂಬಂಧಿಸಿದಂತೆ  ವರ್ಷ ಮಾರ್ಚ್ ತಿಂಗಳಲ್ಲಿ ತೀರ್ಪು ನೀಡಿತ್ತು.  ಬಿಜೆಪಿ ಸಂಸತ್ ಸದಸ್ಯ ಉದಿತ್ ರಾಜ್ ಅವರು  ವಾರಾರಂಭದಲ್ಲಿ ಲೋಕಸಭೆಯಲ್ಲಿ ವಿಷಯವನ್ನು ಪ್ರಸ್ತಾಪಿಸಿದ್ದರು.

2018: ನವದೆಹಲಿ: ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಜೈಶ್--ಮೊಹಮ್ಮದ್ (ಜೆಇಎಂಪಂಜಾಬ್ ಪ್ರಾಂತ್ಯದ ಬಹವಾಲ್ ಪುರ ನಗರದ ಹೊರವಲಯದ ೧೫ ಎಕರೆ ಪ್ರದೇಶದಲ್ಲಿ ಸಹಸ್ರಾರು ಮಂದಿ ಎಳೆಯ ಮಕ್ಕಳಿಗೆ ಜೆಹಾದ್ ಸಲುವಾಗಿ ಬಲಿದಾನಕ್ಕೆ ಸಜ್ಜಗೊಳಿಸುವ ಬೃಹತ್ ತರಬೇತಿ ಸಮುಚ್ಚಯವನ್ನು ರಹಸ್ಯವಾಗಿ ನಿರ್ಮಿಸುತ್ತಿದೆ ಎಂದು ಮಾಧ್ಯಮವೊಂದು ವರದಿ ಮಾಡಿತು. ಸಮುಚ್ಚಯದ ಛಾಯಾಚಿತ್ರಗಳು  ಸಂಕೀರ್ಣವು ನಿಷೇಧಿತ ಸಂಘಟನೆಯು ನಗರದಲ್ಲಿ ಹೊಂದಿರುವ ಹಾಲಿ ಕೇಂದ್ರ ಕಚೇರಿಯ ಐದು ಪಟ್ಟು ದೊಡ್ಡದಾಗಿರುವುದನ್ನು ತೋರಿಸುತ್ತವೆಕಳೆದ ಮೂರು ತಿಂಗಳುಗಳಿಂದ  ಸ್ಥಳದಲ್ಲಿ ಸಮುಚ್ಚಯ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಗೆ ನಡೆದ ಮಹಾಚುನಾವಣೆಯಲ್ಲಿ ಸ್ಪರ್ಧಿಸಿದ್ದ ರಾಜಕಾರಣಿಯಾಗಿ ಪರಿವರ್ತನೆಗೊಂಡಿರುವ ಕ್ರಿಕೆಟಿಗ ಇಮ್ರಾನ್ ಖಾನ್ ಅವರ ಗೆಲುವು ಮತ್ತು ಜೆಇಎಂ ತರಬೇತಿ ಸಮುಚ್ಚಯದ ವಿಸ್ತರಣೆ ಯೋಜನೆ ಕಾಕತಾಳೀಯ ಏನಲ್ಲವಾಸ್ತವವಾಗಿ ಕಾಶ್ಮೀರವನ್ನು ಭಾರತದಿಂದ ಪ್ರತ್ಯೇಕಿಸಿ ಬಳಿಕ ಪಾಕಿಸ್ತಾನದ ಜೊತೆ ವಿಲೀನಗೊಳಿಸುವ ಗುರಿ ಇಟ್ಟುಕೊಂಡಿರುವ ಜೆಇಎಂ ಚುನಾವಣೆಯಲ್ಲಿ ಪ್ರಸ್ತುತ ಪಾಕ್ ಪ್ರಧಾನಿಯಾಗಿ ನಿಯೋಜಿತರಾಗಿರುವ ಇಮ್ರಾನ್ ಖಾನ್ ಅವರಿಗೆ ಸಕ್ರಿಯ ಬೆಂಬಲ ನೀಡಿತ್ತುಹೀಗಾಗಿ ಅದು ಈಗ ಇಮ್ರಾನ್ ಖಾನ್ ಅವರಿಗೆ ಸಾಲ ಮರುಪಾವತಿ ಮಾಡುವಂತೆ ಕೋರಿದರೆ ಅಚ್ಚರಿಯೇನಿಲ್ಲಜೆಇಎಂ ಸಂಘಟನೆಯು ಖಾನ್ ಅವರ ಪಾಕಿಸ್ತಾನ ತೆಹ್ರೀಕ್ --ಇನ್ಸಾಫ್ ಪಕ್ಷದ ಪರವಾಗಿ ಅವರ ಪ್ರಮುಖ ಪ್ರತಿಸ್ಪರ್ಧಿಯಾಗಿದ್ದ ನವಾಜ್ ಶರೀಫ್ ವಿರುದ್ಧ ವ್ಯಾಪಕ ಪ್ರಚಾರ ನಡೆಸಿತ್ತುನವಾಜ್ ಶರೀಫ್ ಅವರನ್ನು ಸಂಘಟನೆಯು ಪಾಕಿಸ್ತಾನ ಮತ್ತು ಇಸ್ಲಾಮಿನ ದ್ರೋಹಿ ಎಂಬುದಾಗಿ ಬಣ್ಣಿಸಿತ್ತುತನ್ನ ನೆಲದಲ್ಲಿ ಕಾರ್ಯಾಚರಿಸುತ್ತಿರುವ ಭಯೋತ್ಪಾದಕ ಗುಂಪುಗಳ ವಿರುದ್ಧ ಕ್ರಮ ಕೈಗೊಳ್ಳಲು ವಿಫಲವಾಗಿರುವುದಕ್ಕಾಗಿ ಅಂತಾರಾಷ್ಟ್ರೀಯ ದಿಗ್ಬಂಧನವನ್ನು ಎದುರಿಸುತ್ತಿರುವ ಪಾಕಿಸ್ತಾನ ಭಯೋತ್ಪಾದಕ ಗುಂಪುಗಳ ವಿರುದ್ಧ ಈವರೆಗೂ ಕೈಗೊಂಡಿರುವ ಕ್ರಮ ಅತ್ಯಲ್ಪವೇಜೆಇಎಂ ನಂತಹ ಭಯೋತ್ಪಾದಕ ಗುಂಪುಗಳ ದಮನಕ್ಕಾಗಿ ಕಳೆದ ವರ್ಷ ಸೆಪ್ಟೆಂಬರಿನಿಂದ ೨೬ ಅಂಶಗಳ ಕಾರ್ಯಯೋಜನೆಯನ್ನೂ ಅದು ಜಾರಿಗೊಳಿಸಲೂ ಪಾಕಿಸ್ತಾನ ಬದ್ಧವಾಗಿದೆಆದರೆ ವಾಸ್ತವವಾಗಿ ನಿಷೇಧಿತ ಸಂಘಟನೆಗಳು ಪಾಕ್ ನೆಲದಲ್ಲಿ ಮುಕ್ತವಾಗಿಯೇ ಕಾರ್ಯಾಚರಿಸುತ್ತಿವೆಸ್ಥಳೀಯ ಸರ್ಕಾರಿ ದಾಖಲೆಗಳ ಪ್ರಕಾರ ನೂತನ ಬಹಾವಲ್ಪುರ ಸಮುಚ್ಚಯಕ್ಕಾಗಿ ಭೂಮಿಯನ್ನು ನೇರವಾಗಿ ಸಂಘಟನೆಯ ಕಮಾಂಡರ್ ಮಸೂದ್ ಅಜರ್ ಖರೀದಿಸಿದ್ದಾನೆಈತ ಭಾರತದಲ್ಲಿ ನಡೆದ ಹಲವಾರು ಭಯೋತ್ಪಾದಕ ಕೃತ್ಯಗಳ ಕಾರಣಕರ್ತ ಎಂದು ಭಾರತ ಆಪಾದಿಸಿದೆ.  ಸೆಂಬರ್ ೨೦೦೧ರಲ್ಲಿ ನಡೆದ ಸಂಸತ್ ಮೇಲಿನ ದಾಳಿ೨೦೧೬ರಲ್ಲಿ ಪಠಾಣ್ ಕೋಟ್ ವಾಯುನೆಲೆ ಮೇಲೆ ನಡೆದ ಭಯೋತ್ಪಾದಕ ದಾಳಿಯ ಹೊಣೆಗಾರನಾಗಿರುವ ಮಸೂದ್ ಅಜರ್ ನನ್ನು ವಿಶ್ವಸಂಸ್ಥೆಯೇ ನಿಯೋಜಿತ ಭಯೋತ್ಪಾದಕ ಎಂಬುದಾಗಿ ಘೋಷಿಸುವಂತೆ ಮಾಡುವ ನಿಟ್ಟಿನಲ್ಲಿ ಭಾರತ ಸರ್ಕಾರ ತೀವ್ರ ಯತ್ನ ನಡೆಸಿದೆಆದರೆ ಚೀನಾ ಹಲವಾರು ಬಾರಿ ವಿಶ್ವಸಂಸ್ಥೆಯಲ್ಲಿ  ಯತ್ನವನ್ನು ತಡೆದಿದೆಸಮುಚ್ಚಯ ನಿರ್ಮಾಣವಾಗುತ್ತಿರುವ  ಪ್ರದೇಶದಲ್ಲಿ ಭೂಮಿಯ ಬೆಲೆ ಎಕರೆಗೆ ೮೦ರಿಂದ ೯೦ ಲಕ್ಷ ರೂಪಾಯಿಗಳಿವೆಮೂಲಗಳ ಪ್ರಕಾರ ಸಮುಚ್ಚಯದಲ್ಲಿ ಈಗಾಗಲೇ ಅಡಿಗೆಕೋಣೆಗಳನ್ನು ನಿರ್ಮಿಸಲಾಗಿದ್ದು ವೈದ್ಯಕೀಯ ಸವಲತ್ತುಬೋಧನಾ ಕೊಠಡಿಗಳು ಮತ್ತು ಸುಭದ್ರ ವಸತಿ ಇಲ್ಲವೇ ಗುಂಡು ಹಾರಿಸುವ ಒಳಾಂಗಣ ಜಾಗಕ್ಕಾಗಿ ವಿಶಾಲವಾದ ಭೂಗತ ಸವಲತ್ತನ್ನು ನಿರ್ಮಿಸಲಾಗುತ್ತಿದೆಈಜುಕೊಳಬಿಲ್ಲುಗಾರಿಕೆ ವಲಯಕ್ರೀಡಾ ಮೈದಾನಗಳಿಗೂ ಯೋಜಿಸಲಾಗಿದ್ದು  ಸಮುಚ್ಚಯವು ತನ್ನ ಎಲ್ಲ ಜೆಹಾದಿ ಕಾರ್ಯಾಚರಣೆಗಳ ಕೇಂದ್ರವಾಗಲಿದೆ ಎಂದು ಜೆಇಎಂ ಆಶಿಸಿದೆ ಎಂದು ವರದಿಗಳು ಹೇಳಿವೆಅಲ್ ರಹಮತ್ ಟ್ರಸ್ಟ್ ಮೂಲಕ ಹಜ್ ಯಾತ್ರಿಗಳಿಂದ ಇದಕ್ಕಾಗಿ ನಿಧಿ ಸಂಗ್ರಹ ಮಾಡಲಾಗುತ್ತಿದೆ ಎಂದೂ ವರದಿ ಹೇಳಿತು. ಮಾಜಿ ಪ್ರಧಾನಿ ನವಾಜ್ ಶರೀಫ್ ಅವರು ಜೆಇಎಂ ಚಟುವಟಿಕೆಗಳನ್ನು ನಿಲ್ಲಿಸಲು ಯತ್ನಿಸಿದ್ದಲ್ಲದೆ ಅಜರ್ ಬಂಧನಕ್ಕೂ ಆಜ್ಞಾಪಿಸಿದ್ದರುಆದರೆ ಈಗ ಶರೀಪ್ ಮೂಲೆಗುಂಪಾಗಿದ್ದುಜೆಇಎಂ ಬೆಂಬಲ ಪಡೆದ ಇಮ್ರಾನ್ ಖಾನ್ ಅವರೇ ಅಧಿಕಾರಕ್ಕೆ ಬರುತ್ತಿರುವುದರಿಂದ ಜೆಇಎಂ ಚಟುವಟಿಕೆಗಳು ಇನ್ನಷ್ಟು ವೇಗ ಪಡೆಯುವ ಸಾಧ್ಯತೆಗಳು ಇವೆ ಎನ್ನಲಾಯಿತು.

2018: ನವದೆಹಲಿ: ಮಂಗಳ ಗ್ರಹದಲ್ಲಿ ನೀರಿಗಾಗಿ ಹುಡುಕಾಡುತ್ತಿದ್ದ ವಿಜ್ಞಾನಿಗಳಿಗೆ ಮೊದಲ ಬಾರಿಗೆ ದೊಡ್ಡ ಮಟ್ಟದ ಯಶಸ್ಸು ಸಿಕ್ಕಿತುಕೆಂಪು ಗ್ರಹದ ಅಂಗಳದಲ್ಲಿ ಹುದುಗಿರುವ ಭೂಗತ ಉಪ್ಪು ನೀರಿನ ಸರೋವರವನ್ನು ಇಟಲಿಯ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆಮಂಗಳ ಗ್ರಹದಲ್ಲಿ ಜೀವಿಗಳಿದ್ದಿರಬಹುದಾದ ಸಾಧ್ಯತೆಗಳನ್ನು ಇದು ಮತ್ತಷ್ಟು ಹೆಚ್ಚಿಸಿತುಮಂಗಳ ಗ್ರಹದ ಸುತ್ತ ಸುತ್ತುತ್ತಿರುವ ಯುರೋಪಿಯನ್ ಸ್ಪೇಸ್ ಏಜೆನ್ಸಿಯ ಮಾರ್ಸ್ ಎಕ್ಸ್ಪ್ರೆಸ್ ಉಪಗ್ರಹದಲ್ಲಿರುವ ‘ಮಾರ್ಸಿಸ್’ ರಾಡಾರ್  ಸರೋವರವನ್ನು ಪತ್ತೆ ಹಚ್ಚಿದೆಮಂಗಳ ಗ್ರಹದ ದಕ್ಷಿಣ ದ್ರುವದಲ್ಲಿ  ಸರೋವರವಿದ್ದು, ‘ಇದು ತುಂಬಾ ದೊಡ್ಡ ಸರೋವರವೇನಲ್ಲ’ ಎನ್ನುತ್ತಾರೆ  ಅಧ್ಯಯನವನ್ನು ಮುನ್ನಡೆಸಿದ ಇಟಲಿಯ ಖಗೋಳ ವಿಜ್ಞಾನಿ ರಾಬರ್ಟೋ ಒರಸಾಯ್ಸರೋವರ ಕನಿಷ್ಟ  ಮೀಟರ್ ಆಳವಿದೆ ಮತ್ತು ಸುಮಾರು೨೦ ಕಿಲೋಮೀಟರ್ ವ್ಯಾಪ್ತಿಯಲ್ಲಿದೆ ಎಂದು ಅಂದಾಜಿಸಲಾಗಿದೆ.

ಮಂಗಳ ಗ್ರಹದಲ್ಲಿ ಸರೋವರ ಭೂಗತವಾಗಿರುವುದು ದೊಡ್ಡ ಅಚ್ಚರಿಯೇನಲ್ಲದ್ರವ ರೂಪದಲ್ಲಿ ನೀರು ಮಂಗಳ ಗ್ರಹದ ಮೇಲ್ಮೈಯಲ್ಲಿ ಇರಲು ಸಾಧ್ಯವಿಲ್ಲಕಾರಣ ಮಂಗಳ ಗ್ರಹದ ವಾತಾವರಣದಲ್ಲಿರುವ ಒತ್ತಡ ತೀರಾ ಕಡಿಮೆಯಾಗಿದೆ,” ಎನ್ನುತ್ತಾರೆ ಡಬ್ಲಿನ್ ಇನ್ಸ್ಟ್ಯೂಟ್ ಫಾರ್ ಅಡ್ವಾನ್ಸ್ಡ್ ಸ್ಟಡೀಸ್ ಲಿಯೋ ಎನ್ರೈಟ್ಸರೋವರ ಮೇಲ್ಮೈನಿಂದ . ಕಿಲೋಮೀಟರ್ ಆಳದಲ್ಲಿದೆಇಲ್ಲಿನ ವಾತಾವರಣ -೧೦ ರಿಂದ -೩೦ ಡಿಗ್ರಿ ಸೆಲ್ಸಿಯಸ್ನಷ್ಟು ಶೀತವಾಗಿರುವುದರಿಂದ ನೀರು ತೀರಾ ಉಪ್ಪಾಗಿರಬಹುದು ಎಂಬುದು ಎನ್ರೈಟ್ ಅಂದಾಜುನೀರಿನ ಅನ್ವೇಷಣೆ ಅಂಗಾರಕನ ಅಂಗಳದಲ್ಲಿ ಜೀವಿಗಳುಇದ್ದಿರಬಹುದಾದ ಸಾಧ್ಯತೆಗಳಿಗೆ ಸಾಕ್ಷಿ ಎನ್ನುತ್ತಾರೆ ಅವರು.  ‘ಮಂಗಳ ಗ್ರಹದಲ್ಲಿ ಜೀವಿಗಳು ಇದ್ದಿರಬಹುದು’ ಎಂದು ವಿಜ್ಞಾನಿಗಳು ತುಂಬಾ ಹಿಂದೆಯೇ ಅಂದಾಜಿಸಿದ್ದರುಮತ್ತು ಕಳೆದೊಂದು ವರ್ಷದಲ್ಲಿ ಹಲವಾರು ‘ಮಂಗಳಯಾನಗಳು  ನಿಟ್ಟಿನಲ್ಲಿ ಅಧ್ಯಯನದಲ್ಲಿ ತೊಡಗಿಸಿಕೊಂಡಿದ್ದವುಇವುಗಳಲ್ಲಿ ಗ್ರಹದ ಮೇಲ್ಮೈ ಮೇಲೆ ಉಪ್ಪು ನೀರು ಹರಿದಿರುವ ಲಕ್ಷಣಗಳು ಗೋಚರಿಸಿತ್ತುಇದೀಗ ಜೀವಿಗಳು ಇದ್ದಿರಬಹುದಾದ ಸಾಧ್ಯತೆಗಳಿಗೆ ಸಾಕ್ಷಿಯಾಗಿ ದ್ರವ ರೂಪದ ನೀರು ಪತ್ತೆಯಾಗಿದೆ

2008: ಗುಜರಾತಿನ ಅಹಮದಾಬಾದ್ ಸರಣಿ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ 45ಕ್ಕೆ ಹಾಗೂ ಗಾಯಾಳುಗಳ ಸಂಖ್ಯೆ 162ಕ್ಕೆ ಏರಿತು.

2006: ಹಿರಿಯ ಜಾನಪದ ವಿದ್ವಾಂಸ ಮತಿಘಟ್ಟ ಕೃಷ್ಣಮೂರ್ತಿ (94) ಬೆಂಗಳೂರಿನಲ್ಲಿ ನಿಧನರಾದರು. ಹಾಸನ ಮತಿಘಟ್ಟ ಮೂಲದ ಕೃಷ್ಣಮೂರ್ತಿ `ಕಳಸಾಪುರದ ಹುಡುಗರು', `ಗೃಹಿಣಿ ಗೀತ', `ಸಾಂಪ್ರದಾಯಿಕ ಗೀತೆಗಳು', `ಶಕುನದ ಹಕ್ಕಿ', `ಹೊನ್ನ ಹೊತ್ತಿಗೆ', `ಮರುಗಿ', `ನಾಡಪದಗಳು' `ನಮ್ಮ ಹಳ್ಳಿಯ ಹಾಡು' ಸೇರಿದಂತೆ ಹಲವಾರು ಪುಸ್ತಕ ಬರೆದಿದ್ದರು. 50,000ಕ್ಕೂ ಹೆಚ್ಚು ಜನಪದ ಹಾಡು ಕಥೆಗಳನ್ನು ಸಂಗ್ರಹಿಸಿದ್ದಲ್ಲದೆ, ಬ್ರಿಟಿಷ್ ಆಡಳಿತ ವಿರುದ್ಧ ಹೋರಾಡಿ ಜೈಲಿಗೂ ಹೋಗಿದ್ದರು.

2006: ಭಾರತ- ಅಮೆರಿಕ ಪರಮಾಣು ಶಕ್ತಿ ಒಪ್ಪಂದವನ್ನು ಅಮೆರಿಕದ ಕಾಂಗ್ರೆಸ್ (ಪ್ರತಿನಿಧಿಗಳ ಸಭೆ) ಅನುಮೋದಿಸಿತು. 4 ಗಂಟೆಗಳ ಚರ್ಚೆಯ ಬಳಿಕ 435 ಸದಸ್ಯ ಬಲದ ಸದನವು 359 ಪರ ಮತ್ತು 68 ವಿರೋಧಿ ಮತಗಳಿಂದ ಒಪ್ಪಂದಕ್ಕೆ ಅನುಮೋದನೆ ನೀಡಿತು.

2006: ಬೆಂಗಳೂರಿನ ಕಾಲ್ ಸೆಂಟರ್ ಉದ್ಯೋಗಿ ತಾನಿಯಾ ಬ್ಯಾನರ್ಜಿ ಕೊಲೆ ಆರೋಪಿ, ಆಕೆಯ ಪ್ರಿಯಕರ ಗುರುರಾಜ ಕಿಶೋರನನ್ನು ಪೊಲೀಸರು ಬಂಧಿಸಿದರು. ಮದುವೆಯಾಗಲು ನಿರಾಕರಿಸಿದ್ದರಿಂದ ಕೊಲೆ ಮಾಡಿದುದಾಗಿ ಆತ ಪೊಲೀಸರಲ್ಲಿ ತಪ್ಪು ಒಪ್ಪಿಕೊಂಡ.

2006: ಕ್ರೊಯೇಷಿಯಾದ ಜಾಗ್ರೆಬಿನಲ್ಲಿ ನಡೆದ 49ನೇ ಐಎಸ್ಸೆಸ್ಸೆಫ್ ವಿಶ್ವ ಶೂಟಿಂಗ್ ಚಾಂಪಿಯನ್ಶಿಪ್ನ ಪುರುಷರ ವೈಯಕ್ತಿಕ ಟ್ರ್ಯಾಪ್ ಶೂಟಿಂಗ್ ವಿಭಾಗದಲ್ಲಿ ಭಾರತದ ಮಾನವ್ ಜಿತ್ ಸಿಂಗ್ ಸಂಧು ಚಿನ್ನದ ಪದಕ ಗೆದ್ದರು.

2006: ರಾಷ್ಟ್ರದ ಸಮುದಾಯ ಸೇವೆಗೆ ತೊಡಗಿಸಿಕೊಂಡವರಿಗೆ ಜೀವಮಾನದ ಸಾಧನೆಗಾಗಿ ನೀಡಲಾಗುವ ಕೆನಡಾದ ಎರಡನೇ ಉನ್ನತ ನಾಗರಿಕ ಪ್ರಶಸ್ತಿ `ಆರ್ಡರ್ ಆಫ್ ಕೆನಡಾ'ಕ್ಕೆ ಭಾರತದ ಅರ್ಥಶಾಸ್ತ್ರಜ್ಞ ಮಾನವ ಹಕ್ಕುಗಳ ಹೋರಾಟಗಾರ ವಿಠ್ಠಲ್ ರಾಜನ್ ಮತ್ತು ಆರೋಗ್ಯ ಸೇವಾ ಕಾರ್ಯಕರ್ತೆ ಲಲಿತಾ ಮಲ್ಹೋತ್ರ ಆಯ್ಕೆಯಾದರು.

1992: ಖ್ಯಾತ ಹಿಂದಿ ಚಿತ್ರನಟ ಅಮ್ಜದ್ ಖಾನ್ ನಿಧನ.

1972: ನಕ್ಸಲ್ ಚಳವಳಿಯ ಧುರೀಣ ಚಾರು ಮಜುಂದಾರ್ ಅವರು ಕಾರಾಗೃಹದಲ್ಲಿ ಈದಿನ ನಿಧನರಾದರು. ನಕ್ಸಲ್ ಚಳವಳಿಯ ನೇತೃತ್ವ ವಹಿಸಿ ಅವರು ಬಹಳ ಕಾಲ ಭೂಗತರಾಗಿ ಚಳವಳಿ ಮುಂದುವರೆಸಿದ್ದರು.

1928: ಸಾಹಿತಿ ಶ್ರೀನಿವಾಸ ಕುಲಕರ್ಣಿ ಜನನ.

1928: ಖ್ಯಾತ ಲೇಖಕ, ವಕೀಲ, ಪತ್ರಕರ್ತ ರಾಮೇಶ್ವರ ಸಹಾಯ್ ಸಕ್ಸೇನಾ ಜನನ.

1910: ಸಾಹಿತಿ ಜೋಳದರಾಶಿ ದೊಡ್ಡನಗೌಡರ ಜನನ.

1910: ಖ್ಯಾತ ಗಾಯಕ ಬಂದೇ ಅಲಿಖಾನ್ ನಿಧನ.

1906: ಮದ್ರಾಸು ವಿಶ್ವ ವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಮೂರು ದಶಕಗಳ ಕಾಲ ಸೇವೆ ಸಲ್ಲಿಸಿದ್ದ ಪಂಡಿತ, ನಿಘಂಟು ತಜ್ಞ, ಸಂಶೋಧಕ ಪ್ರೊ. ಮರಿಯಪ್ಪ ಭಟ್ಟ (27-7-1906ರಿಂದ 21-3-1980) ಅವರು ಗೋವಿಂದ ಭಟ್ಟ- ಕಾವೇರಿ ಅಮ್ಮ ದಂಪತಿಯ ಮಗನಾಗಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಸಮೀಪದ ಮುಂಗ್ಲಿ ಮನೆಯಲ್ಲಿ ಜನಿಸಿದರು. ಹವ್ಯಕ- ಇಂಗ್ಲಿಷ್ ನಿಘಂಟು, ತುಳು- ಇಂಗ್ಲಿಷ್ ನಿಘಂಟು, ರೆ.ಎಫ್. ಕಿಟೆಲ್ ಅವರ ಕನ್ನಡ- ಇಂಗ್ಲಿಷ್ ನಿಘಂಟನ್ನು ಪರಿಷ್ಕರಿಸಿ ವಿಸ್ತಾರಗೊಳಿಸಿ, ರಚಿಸಿದ ನಿಘಂಟು ಅವರ ಮಹತ್ವದ ಕಾಣಿಕೆಗಳಲ್ಲಿ ಕೆಲವು.


No comments:

Post a Comment