Friday, October 31, 2025

PARYAYA: ಬಂದರೋ ಬಂದರು ಭಾವ ಬಂದರು..!

ಬಂದರೋ ಬಂದರು ಭಾವ ಬಂದರು…!

ವಿವರಕ್ಕೆ ಮೇಲಿನ ಚಿತ್ರ ಕ್ಲಿಕ್‌ ಮಾಡಿ ಅಥವಾ paryaya.comನ   ʼವಾಟ್‌ ಸುದ್ದಿʼ ಪುಟ ಕ್ಲಿಕ್‌ ಮಾಡಿ.

PARYAYA: ಬಂದರೋ ಬಂದರು ಭಾವ ಬಂದರು..!:   ಬಂದರೋ ಬಂದರು ಭಾವ ಬಂದರು…! ವಿವರಕ್ಕೆ ಮೇಲಿನ ಚಿತ್ರ ಕ್ಲಿಕ್‌ ಮಾಡಿ ಅಥವಾ ಮೇಲಿನ ʼ ವಾಟ್‌ ಸುದ್ದಿ ʼ ಪುಟ ಕ್ಲಿಕ್‌ ಮಾಡಿ.

Thursday, October 30, 2025

PARYAYA: ಬೆಂಗಳೂರಿಗೆ ಬಂತು ʼಕಸ ಸುರಿಯುವ ಹಬ್ಬʼ!

 ಬೆಂಗಳೂರಿಗೆ ಬಂತು ʼಕಸ ಸುರಿಯುವ ಹಬ್ಬʼ!

ಬೆಂಗಳೂರಿನ ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ಎಲ್ಲೆಂದರಲ್ಲಿ ಕಸ ಎಸೆಯುವ ಪ್ರವೃತ್ತಿ. ಹೀಗೆ  ಕಸ ಎಸೆಯಬಾರದೆಂದು ಎಷ್ಟು ಜಾಗೃತಿ ಮೂಡಿಸಿದರೂ ವ್ಯರ್ಥ. ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಕಸ ವಿಲೇವಾರಿ ವಾಹನಗಳು ಬಂದು ಕಸ ಎತ್ತಿಕೊಂಡು ಹೋದ ಮರುಕ್ಷಣದಲ್ಲೇ ಅಲೊಂದಷ್ಟು ಕಸದ ಚೀಲಗಳು ಬಂದು ಬಿದ್ದು ಬಿಡುತ್ತವೆ.

ಇಂದು ಬೆಳಗ್ಗೆ ಸುಮಾರು 10 ಗಂಟೆಯ ಸಮಯ. ಎಂದಿನಂತೆ ವ್ಯಕ್ತಿಯೊಬ್ಬ ಕಸದ ಚೀಲ ಹಿಡಿದುಕೊಂಡು ಕಸ ಎಸೆಯಲೆಂದು ಬಂದಿದ್ದ. ಅದೇ ಹೊತ್ತಿಗೆ ಜಿಬಿಎ ತ್ಯಾಜ್ಯ ನಿರ್ವಹಣಾ ಸಿಬ್ಬಂದಿಯ ಜೊತೆಗೆ ಮಾರ್ಷಲ್‌ ಗಳು ಪ್ರತ್ಯಕ್ಷ. ಪ್ರತಿದಿನ ಬೆಳಗ್ಗೆ 9 ಗಂಟೆಯ ಒಳಗೆ ಕಸದ ಗಾಡಿ ಬರುತ್ತದೆ. ಅದಕ್ಕೆ ಕಸ ಕೊಡುವ ಬದಲು ಹೀಗೆ ಬಂದು ಕಸ ಎಸೆಯುತ್ತೀರಲ್ಲ? ಏಕೆ? ಎಂಬ ಪ್ರಶ್ನೆಗಳ ಸುರಿಮಳೆ ಅವರಿಂದ ಕಸ ಎಸೆಯುವ ವ್ಯಕ್ತಿಗೆ.

ಆತ ಮಾತನಾಡಲಿಲ್ಲ. ʼಬನ್ನಿ ನಿಮ್ಮ ಮನೆಗೇ ಬರುತ್ತೇವೆʼ ಅಂತ ಹೇಳಿ ಅವರೆಲ್ಲ ಆತನ ಮನೆಯ ಎದುರಿಗೇ ಬಂದರು. ಅವರ ಜೊತೆಗೆ ಕಸ ತುಂಬಿದ ಗಾಡಿ ಕೂಡಾ. ಆತ ನೋಡ ನೋಡುತ್ತಿದ್ದಂತೆಯೇ ಮನೆಯ ಮುಂದೆ ಗಾಡಿಯಲ್ಲಿದ್ದ ಕಸ ಸುರಿದರು. ನೋಡಿ ಇನ್ನು ಮುಂದೆ ಎಲ್ಲೆಂದರಲ್ಲಿ ಕಸ ಎಸೆದರೆ ಇದೇ ಗತಿ. ನಿಮ್ಮ ಮನೆ ಮುಂದೆಯೇ ಬಂದು ಕಸ ಸುರಿಯುತ್ತೇವೆ. ಜೊತೆಗೆ ದಂಡ ಕೂಡಾ.

ಸ್ವಲ್ಪ ಹೊತ್ತಿನ ಬಳಿಕ ಜಿಬಿಎ ಸಿಬ್ಬಂದಿಯೇ ಆ ಕಸವನ್ನು ತೆಗೆದರು. ಇಂತಹ ಘಟನೆ ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ಮಾತ್ರವೇ ಅಲ್ಲ. ಬೆಂಗಳೂರಿನಾದ್ಯಂತ ಹಲವಡೆಗಳಲ್ಲಿ 2025 ಅಕ್ಟೋಬರ್‌ 30ರ ಗುರುವಾರ ನಡೆಯಿತು. ಇದಕ್ಕೆ ʼಕಸ ಸುರಿಯುವ ಹಬ್ಬʼ ಎಂದೇ ಕರೆಯಲಾಗಿತ್ತು.

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯು (ಬಿಬಿಎಂಪಿ) ಗ್ರೇಟರ್‌ ಬೆಂಗಳೂರು ಪ್ರಾಧಿಕಾರವಾಗಿ (ಜಿಬಿಎ) ಬದಲಾದ ಬಳಿಕ ಘನ ತ್ಯಾಜ್ಯ ನಿರ್ವಹಣೆಯ ಹೊಣೆಯನ್ನು ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತ (BSWML) ಇದಕ್ಕೆ ವಹಿಸಲಾಗಿದೆ. ಜನರಲ್ಲಿ ಎಲ್ಲೆಂದರಲ್ಲಿ ಕಸ ಎಸೆಯುವ ಅಭ್ಯಾಸದ ವಿರುದ್ಧ ಜಾಗೃತಿ ಮೂಡಿಸಲು ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಕಾರಣಕ್ಕಾಗಿಯೇ ಜಿಬಿಎ ಜೊತೆಗೆ ಬಿಎಸ್‌ ಡಬ್ಲ್ಯೂಎಂಎಲ್‌ ಸೇರಿಕೊಂಡೇ ಈ ʼಕಸ ಸುರಿಯುವ ಹಬ್ಬʼವನ್ನು ಸಂಘಟಿಸಿತ್ತು.

ಬೆಂಗಳೂರಿನ ಹಲವೆಡೆಗಳಲ್ಲಿ ಹಲವಾರು ಮಂದಿ ಕಸ ಎಸೆಯುವವರಿಗೆ ಈದಿನ ಈ ಆಘಾತ ತಟ್ಟಿತು. ಪುನರಾವರ್ತಿತ ಜಾಗೃತಿ ಕಾರ್ಯಕ್ರಮಗಳ ಹೊರತಾಗಿಯೂ ಸಾರ್ವಜನಿಕ ಪ್ರದೇಶಗಳಲ್ಲಿ, ರಸ್ತೆಗಳಲ್ಲಿ ಕಸ ಎಸೆಯುವ ಪ್ರವೃತ್ತಿಗೆ ಕಡಿವಾಣ ಹಾಕಲೇಂದೇ ಇಂತಹ ಕಠಿಣ ಉಪಕ್ರಮ ಕೈಗೊಳ್ಳಲು ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತ ನಿರ್ಧರಿಸಿದೆ ಎಂದು ಅದರ ವ್ಯವಸ್ಥಾಪಕ ನಿರ್ದೇಶಕ ಕರಿಗೌಡ ಹೇಳಿದ್ದಾರೆ.

ಈ ಉಪಕ್ರಮದ ಪ್ರಕಾರ, ನಗರ ಮಾರ್ಷಲ್‌ಗಳು ಸಾರ್ವಜನಿಕ ಪ್ರದೇಶಗಳಲ್ಲಿ ಕಸ ಎಸೆಯುವವರ ವಿಡಿಯೋಗಳನ್ನು ರೆಕಾರ್ಡ್ ಮಾಡುತ್ತಾರೆ. ಗುರುತಿಸಿದ ನಂತರಅಪರಾಧಿಗಳ ಮನೆಗಳನ್ನು ಪತ್ತೆಹಚ್ಚಿಟ್ರಕ್‌ ಲೋಡ್‌ನಷ್ಟು ಕಸವನ್ನು ಅವರ ಮನೆ ಬಾಗಿಲಿಗೆ ಸುರಿಯಲಾಗುತ್ತದೆ. ಈ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿಯೂ ಹಂಚಿಕೊಂಡುಪದೇ ಪದೇ ತಪ್ಪೆಸಗುವವರ ಹೆಸರುಗಳನ್ನು ಬಹಿರಂಗಪಡಿಸಿ ಅವರು ನಾಚಿಕೆ ಪಡುವಂತೆ ಮಾಡಲಾಗುತ್ತದೆ.

"ಮಾರ್ಷಲ್‌ಗಳು ಈಗಾಗಲೇ ಅಂತಹ ಉಲ್ಲಂಘನೆಗಳನ್ನು ದಾಖಲಿಸಲು ಸಿದ್ಧರಾಗಿದ್ದಾರೆ. ಕಸವನ್ನು ಸುರಿದ ಕೆಲವೇ ಗಂಟೆಗಳ ನಂತರ ಅದನ್ನು ತೆರವುಗೊಳಿಸಲಾಗುತ್ತದೆಆದರೆ ಅಪರಾಧಿಗಳಿಗೆ 2,000 ರೂಪಾಯಿಯಿಂದ  10,000 ರೂಪಾಯಿವರೆಗೆ ದಂಡ ವಿಧಿಸಲಾಗುತ್ತದೆ. ಯಾವುದೇ ವಾದಗಳಿಗೆ ಅವಕಾಶವಿರುವುದಿಲ್ಲನಾವು ಅವರಿಗೆ ವಿಡಿಯೋ ಸಾಕ್ಷ್ಯವನ್ನು ತೋರಿಸುತ್ತೇವೆ" ಎನ್ನುತ್ತಾರೆ ಕರೀಗೌಡ.

 "ಬೆಂಗಳೂರನ್ನು ಸ್ವಚ್ಛವಾಗಿಡಲು ನಾವು ನಿರ್ಧರಿಸಿದ್ದೇವೆಇನ್ನು ಮುಂದೆ ಕಸ ಎಸೆಯುವವರ ವಿಷಯದಲ್ಲಿ ಶೂನ್ಯ ಸಹಿಷ್ಣುತೆ ಇರುತ್ತದೆ" ಎಂದೂ ಅವರು ಎಚ್ಚರಿಸಿದ್ದಾರೆ.

ಶ್ರಿ ಬಾಲಾಜಿ ಕೃಪಾ ಬಡಾವಣೆಯಲ್ಲಿ ನಡೆದ ಕಸ ಸುರಿಯುವ ಹಬ್ಬದ ವಿಡಿಯೋ ಇಲ್ಲಿದೆ. ಇದರೊಂದಿಗೆ ಇನ್‌ ಸ್ಟಾಗ್ರಾಮ್‌ ನಲ್ಲಿ ಬೆಂಗಳೂರು ಬ್ರೊ ಪ್ರಕಟಿಸಿದ ವಿಡಿಯೋ ಕೂಡಾ ಇಲ್ಲಿದೆ.

ʼಕಸ ಸುರಿಯುವ ಹಬ್ಬʼ ಉಪಕ್ರಮ ಬೆಂಗಳೂರಿನಲ್ಲಿ ಸ್ವಚ್ಛತೆ ಬಯಸುವ ನಾಗರಿಕರಿಗೆಲ್ಲ ಖುಷಿಯನ್ನು ಕೊಟ್ಟಿದೆ. ಬಹುತೇಕ ಮಂದಿ ಇದನ್ನು ಮೆಚ್ಚಿದ್ದಾರೆ. ಹಾಗೆಯೇ ಇದು ಕೇವಲ ಪ್ರಚಾರದ ಪರಿಯಾಗದಿರಲಿ, ನಿತ್ಯಾನುಷ್ಠಾನದ ಉಪಕ್ರಮವಾಗಲಿ ಎಂದು ಹಾರೈಸಿದ್ದಾರೆ.

PARYAYA: ಬೆಂಗಳೂರಿಗೆ ಬಂತು ʼಕಸ ಸುರಿಯುವ ಹಬ್ಬʼ!:   ಬೆಂಗಳೂರಿಗೆ ಬಂತು ʼ ಕಸ ಸುರಿಯುವ ಹಬ್ಬ ʼ! ಬೆಂ ಗಳೂರಿನ ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ಎಲ್ಲೆಂದರಲ್ಲಿ ಕಸ ಎಸೆಯುವ ಪ್ರವೃತ್ತಿ. ಹೀಗೆ  ಕ...

Monday, October 27, 2025

PARYAYA: ಅಯೋಧ್ಯೆ ತೀರ್ಪು ರದ್ದು ಕೋರಿಕೆ: ವಕೀಲರಿಗೆ ₹6 ಲಕ್ಷ ದಂಡ

 ಅಯೋಧ್ಯೆ ತೀರ್ಪು ರದ್ದು ಕೋರಿಕೆ: ವಕೀಲರಿಗೆ ₹6 ಲಕ್ಷ ದಂಡ

ಒಂದು ಭಾಷಣದಲ್ಲಿ ಸುಪ್ರೀಂಕೋರ್ಟಿನ ಮಾಜಿ ಮುಖ್ಯ ನ್ಯಾಯಮೂರ್ತಿ (CJI) ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರು ನೀಡಿದ ಹೇಳಿಕೆಯನ್ನು ಉಲ್ಲೇಖಿಸಿ, 2019ರ ಅಯೋಧ್ಯೆ ತೀರ್ಪನ್ನು ರದ್ದುಪಡಿಸುವಂತೆ ಮನವಿ ಸಲ್ಲಿಸಿದ್ದ ವಕೀಲ ಮೆಹಮೂದ್ ಪ್ರಾಚಾ ಅವರಿಗೆ ದೆಹಲಿ ನ್ಯಾಯಾಲಯವು ಬರೋಬ್ಬರಿ ಲಕ್ಷ ರೂಪಾಯಿ ದಂಡ ವಿಧಿಸಿದೆ.

ಈ ಅರ್ಜಿಯನ್ನು 'ಫಲಹೀನ ಮತ್ತು ಐಷಾರಾಮಿ ವ್ಯಾಜ್ಯ' (frivolous and luxurious litigation) ಎಂದು ಕರೆದ ಪಟಿಯಾಲಾ ಹೌಸ್ ಕೋರ್ಟಿನ ಜಿಲ್ಲಾ ನ್ಯಾಯಾಧೀಶ ಧರ್ಮೇಂದರ್ ರಾಣಾ ಅವರುಕೆಳ ನ್ಯಾಯಾಲಯವು ಪ್ರಾಚಾ ಅವರಿಗೆವಿಧಿಸಿದ್ದ ಲಕ್ಷ ರೂಪಾಯಿ ದಂಡವನ್ನು ಎತ್ತಿಹಿಡಿದುಹೆಚ್ಚುವರಿಯಾಗಿ ಲಕ್ಷ ರೂಪಾಯಿ ದಂಡ ವಿಧಿಸಿದ್ದಾರೆ.

ದಂಡ ವಿಧಿಸಿದ್ದು ಏಕೆ?

ಆರು ಲಕ್ಷ ರೂಪಾಯಿ ದಂಡವನ್ನು 30 ದಿನಗಳೊಳಗೆ ದೆಹಲಿ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ (DLSA) ಜಮಾ ಮಾಡಬೇಕು ಎಂದು ಆದೇಶಿಸಿರುವ ನ್ಯಾಯಾಧೀಶರು, "ಕಿರಿಯ ನ್ಯಾಯಾಲಯವು ವಿಧಿಸಿದ್ದ ದಂಡವು ನಿರೋಧಕ ಪರಿಣಾಮವನ್ನು (deterrent effectಸಾಧಿಸುವ ಉದ್ದೇಶಿತ ಗುರಿಯನ್ನು ಸಾಧಿಸುವಲ್ಲಿ ಸ್ಪಷ್ಟವಾಗಿ ವಿಫಲವಾಗಿದೆ. ಆದ್ದರಿಂದಫಲಹೀನ ಮತ್ತು ಐಷಾರಾಮಿ ವ್ಯಾಜ್ಯದ ಪಿಡುಗನ್ನು ಪರಿಣಾಮಕಾರಿಯಾಗಿ ಪರಿಶೀಲಿಸಲು ಮತ್ತು ಅಪೇಕ್ಷಿತ ಫಲಿತಾಂಶಗಳನ್ನು ಪಡೆಯಲು ದಂಡದ ಮೊತ್ತವನ್ನು ಸೂಕ್ತವಾಗಿ ಹೆಚ್ಚಿಸಬೇಕೆಂಬುದನ್ನು ನಾನು ಪರಿಗಣಿಸಿದ್ದೇನೆ," ಎಂದು ಹೇಳಿದ್ದಾರೆ.

ಪ್ರಾಚಾ ಅವರ ವಾದವೇನು?

ಪ್ರಾಚಾ ಅವರು ಅಯೋಧ್ಯೆ ತೀರ್ಪನ್ನು ಶೂನ್ಯ ಮತ್ತು ಅನೂರ್ಜಿತ ಎಂದು ಘೋಷಿಸಲು ಮತ್ತು ಸುಪ್ರೀಂ ಕೋರ್ಟಿನಲ್ಲಿ ದಾಖಲಾದ ಸಿವಿಲ್ ಮೇಲ್ಮನವಿಗಳನ್ನು ಹೊಸದಾಗಿ ವಿಚಾರಣೆ ಮಾಡಲು ಕೋರಿ ಸಿವಿಲ್ ಮೊಕದ್ದಮೆ ಹೂಡಿದ್ದರು. ಈ ಮೊಕದ್ದಮೆಯನ್ನು ಏಪ್ರಿಲಿನಲ್ಲಿ ವಿಚಾರಣಾ ನ್ಯಾಯಾಲಯವು ಲಕ್ಷ  ರೂಪಾಯಿ ದಂಡದೊಂದಿಗೆ ವಜಾಗೊಳಿಸಿತ್ತು.

ಪ್ರಾಚಾ ಅವರು ತೀರ್ಪಿನ ಅರ್ಹತೆಯನ್ನು (meritsಪ್ರಶ್ನಿಸದೆನ್ಯಾಯಾಧೀಶರಾದ ಚಂದ್ರಚೂಡ್ ಅವರು ತೀರ್ಪು ಬರೆದವರಲ್ಲಿ ಲ್ಲಿ ಒಬ್ಬರಾಗಿದ್ದುಅವರೇ ತಮ್ಮ ಭಾಷಣವೊಂದರಲ್ಲಿ "ತಮ್ಮ ಮುಂದೆ ವಾದ ಮಂಡಿಸಿದ ಕಕ್ಷಿದಾರರೇ (litigant) ತಮಗೆ ಮಾರ್ಗ ತೋರಿಸಿದರು" ಎಂದು ಒಪ್ಪಿಕೊಂಡಿರುವುದರಿಂದ ತೀರ್ಪು ವಂಚನೆಯ ಆಧಾರದ (on the ground of fraud) ಮೇಲೆ ದೋಷಪೂರಿತವಾಗಿದೆ ಎಂದು ವಾದಿಸಿದ್ದರು.

ಮಾಜಿ ಸಿಜೆಐ ಚಂದ್ರಚೂಡ್ ಅವರು ಅಯೋಧ್ಯೆ ಪ್ರಕರಣವನ್ನು ಪರಿಹರಿಸಲು ತಾವು ದೇವರಿಗೆ ಪ್ರಾರ್ಥನೆ ಸಲ್ಲಿಸಿದ್ದಾಗಿ ಹೇಳಿದ್ದ ಉಲ್ಲೇಖವೇ ಈ ವಾದಕ್ಕೆ ಕಾರಣವಾಗಿತ್ತು. ಇಂತಹ ಪರಿಸ್ಥಿತಿಯು **'ಕಾನೂನುಬಾಹಿರ ಹಸ್ತಕ್ಷೇಪ'**ಕ್ಕೆ ಸಮನಾಗಿದೆ. ಆದ್ದರಿಂದ ತೀರ್ಪು ವಂಚನೆಯ ಆಧಾರದ ಮೇಲೆ ದೋಷಪೂರಿತವಾಗಿದೆ ಎಂದು ಪ್ರಾಚಾ ಪ್ರತಿಪಾದಿಸಿದ್ದರು.

ಕೋರ್ಟ್‌ನ ತೀಕ್ಷ್ಣ ಪ್ರತಿಕ್ರಿಯೆ

ಪ್ರಾಚಾ ಅವರ ಮನವಿಯನ್ನು ವಜಾಗೊಳಿಸಿದ ನ್ಯಾಯಾಧೀಶ ರಾಣಾ ಅವರುಜಸ್ಟಿಸ್ ಚಂದ್ರಚೂಡ್ ಅವರ ಭಾಷಣವನ್ನು ಉಲ್ಲೇಖಿಸಿʼಅವರು ಸರ್ವೋಚ್ಚ ಶಕ್ತಿಯಲ್ಲಿ (Supreme Being) ಮಾರ್ಗ ತೋರಿಸುವಂತೆ ಪ್ರಾರ್ಥಿಸಿದ್ದರು. ಆದರೆ ಅಯೋಧ್ಯೆ ಪ್ರಕರಣದಲ್ಲಿ ಅವರ ಮುಂದೆ ವಾದ ಮಂಡಿಸಿದ ಕಕ್ಷಿದಾರರು ಆ ಸರ್ವೋಚ್ಚ ಶಕ್ತಿಯಿಂದ ಭಿನ್ನವಾದ 'ಕಾನೂನು ವ್ಯಕ್ತಿತ್ವ' (Juristic Personality) ಹೊಂದಿದ್ದಾರೆʼ ಎಂದು ಹೇಳಿದರು.

"ಮೇಲ್ಮನವಿದಾರರು 'ಸರ್ವೋಚ್ಚ ದೇವರುಮತ್ತು ನ್ಯಾಯಾಲಯದ ಮುಂದೆ ವ್ಯಾಜ್ಯ ಹೂಡಿದ 'ಕಾನೂನು ವ್ಯಕ್ತಿತ್ವದನಡುವಿನ ಸೂಕ್ಷ್ಮ ವ್ಯತ್ಯಾಸವನ್ನು ಬಹುಶಃ ಕಾನೂನು ಮತ್ತು ಧರ್ಮದ ಬಗ್ಗೆ ತಪ್ಪು ತಿಳುವಳಿಕೆಯಿಂದಾಗಿ ಗ್ರಹಿಸುವಲ್ಲಿ ವಿಫಲರಾಗಿದ್ದಾರೆ. ಮೇಲ್ಮನವಿದಾರರು ಅಯೋಧ್ಯೆ ಪ್ರಕರಣದ ತೀರ್ಪನ್ನು ಓದುವ ಗೋಜಿಗೆ ಹೋಗಿಲ್ಲವೆಂದು ತೋರುತ್ತಿದೆಇಲ್ಲದಿದ್ದರೆ ಇಂತಹ ಗೊಂದಲ ಅವರಿಗೆ ಉಂಟಾಗುತ್ತಿರಲಿಲ್ಲ," ಎಂದು ನ್ಯಾಯಾಲಯವು ತೀಕ್ಷ್ಣವಾಗಿ ಪ್ರತಿಕ್ರಿಯಿಸಿತು.

"ಸರ್ವಶಕ್ತನಿಂದ ಮಾರ್ಗದರ್ಶನ ಪಡೆಯುವುದನ್ನು ಕಾನೂನಿನಲ್ಲಿ ಅಥವಾ ಯಾವುದೇ ಧರ್ಮದಲ್ಲಿ ಅನ್ಯಾಯದ ಲಾಭ ಪಡೆಯಲು ಮಾಡಿದ ವಂಚಕ ಕೃತ್ಯ ಎಂದು ನಿಂದಿಸಲಾಗದು. ಆದ್ದರಿಂದಮೇಲ್ಮನವಿದಾರರ ಹೇಳಿಕೆಗಳನ್ನು ನಂಬಿದರೂ ಸಹಮನವಿಯು ಯಾವುದೇ ಕಾನೂನುಬದ್ಧ ಕಾರಣವನ್ನು (cause of action) ಹೊಂದಿದೆ ಎಂದು ವಾದಿಸಲು ಅವಕಾಶವಿಲ್ಲ. ಹೀಗಾಗಿಅವರ ಮೊಕದ್ದಮೆಯನ್ನು ವಜಾಗೊಳಿಸಿದ ಕೆಳ ನ್ಯಾಯಾಲಯದ ವಿಧಾನದಲ್ಲಿ ಯಾವುದೇ ದೋಷವಿಲ್ಲ" ಎಂದು ನ್ಯಾಯಾಲಯ ಹೇಳಿತು.

"ಪರಿಹಾರವಾಗಲಿಲ್ಲ, ಸಮಸ್ಯೆಯಾದರು"

ಪ್ರಾಚಾ ಅವರು ಮಾಜಿ ಸಿಜೆಐ ಚಂದ್ರಚೂಡ್ ಅವರನ್ನು ವೈಯಕ್ತಿಕವಾಗಿ ವಿಚಾರಣೆಗೆ ಕರೆಯಬೇಕು ಮತ್ತು ಅವರನ್ನು ಈ ಪ್ರಕರಣದಲ್ಲಿ ಕಕ್ಷಿದಾರರನ್ನಾಗಿ ಮಾಡಬೇಕು ಎಂದು ಒತ್ತಾಯಿಸಿದ್ದನ್ನು ನ್ಯಾಯಾಧೀಶರು ತಳ್ಳಿಹಾಕಿದರು. ಮಾಜಿ ಸಿಜೆಐ ಅವರನ್ನು ಕಕ್ಷಿದಾರರನ್ನಾಗಿ ಮಾಡುವುದು ಕಾನೂನಿಗೆ ವಿರುದ್ಧವಾಗಿದೆ ಮತ್ತು ಪ್ರಾಚಾ ಅವರು 'ದುರುದ್ದೇಶಪೂರಿತ ಉದ್ದೇಶದಿಂದ' (oblique intent) ಪ್ರೇರಿತರಾಗಿದ್ದಾರೆ ಎಂದು ಕೋರ್ಟ್ ಹೇಳಿತು.

"ಸಾರ್ವಜನಿಕ ಸೇವಕರು ನಿವೃತ್ತರಾದ ನಂತರ ಅವರನ್ನು ಗುರಿಯಾಗಿಸುವ ಒಂದು ನಕಾರಾತ್ಮಕ ಪ್ರವೃತ್ತಿ ಇತ್ತೀಚೆಗೆ ಕಂಡುಬರುತ್ತಿದೆ. ಮಾಜಿ ಸಾರ್ವಜನಿಕ ಸೇವಕರು ತಮ್ಮ ಕಚೇರಿಯಿಂದ ನಿರ್ಗಮಿಸಿದ ನಂತರ ದುರ್ಬಲರಾಗುತ್ತಾರೆ ಮತ್ತು ಎಲ್ಲಾ ರೀತಿಯ ದುರುದ್ದೇಶಪೂರಿತ ದಾಳಿಗೆ ಗುರಿಯಾಗುತ್ತಾರೆ ಎಂಬ ತಪ್ಪು ಕಲ್ಪನೆಯನ್ನು ಕೆಲವು ನಿರ್ಲಜ್ಜ ವ್ಯಾಜ್ಯದಾರರು ಪೋಷಿಸುತ್ತಾರೆ," ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟರು.

"ಸಂರಕ್ಷಕನೇ ಪರಭಕ್ಷಕನಾದಾಗ (predator) ಪರಿಸ್ಥಿತಿ ತೀವ್ರ ತಳಮಳಕ್ಕೆ ಕಾರಣವಾಗುತ್ತದೆ. ಈ ಪ್ರಕರಣದಲ್ಲಿಮೇಲ್ಮನವಿದಾರರು ಸಾಕಷ್ಟು ಹಿರಿಯ ವಕೀಲರಾಗಿದ್ದರೂ ತಪ್ಪು ಮಾರ್ಗವನ್ನು ಆರಿಸಿಕೊಂಡಿದ್ದಾರೆ. ಪರಿಹಾರದಲ್ಲಿ ಭಾಗಿಯಾಗುವ ಬದಲುಸಮಸ್ಯೆಯನ್ನು ಹೆಚ್ಚಿಸಲು ಆರಿಸಿಕೊಂಡಿದ್ದಾರೆ. ಮೇಲ್ಮನವಿದಾರರು ಸುಳ್ಳು ಮತ್ತು ಫಲಹೀನ ಮೊಕದ್ದಮೆಯನ್ನು ಹೂಡಿದ್ದಲ್ಲದೆಸಂಪೂರ್ಣವಾಗಿ ಐಷಾರಾಮಿ ಮತ್ತು ಫಲಹೀನವಾದ ಮೇಲ್ಮನವಿಯನ್ನು ಸಹ ಸಲ್ಲಿಸಿದ್ದಾರೆ," ಎಂದು ನ್ಯಾಯಾಧೀಶರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಮಾಹಿತಿ ಮೂಲ: (ಲೈವ್‌ ಲಾ ವರದಿ)

PARYAYA: ಅಯೋಧ್ಯೆ ತೀರ್ಪು ರದ್ದು ಕೋರಿಕೆ: ವಕೀಲರಿಗೆ ₹6 ಲಕ್ಷ ದಂಡ:   ಅಯೋಧ್ಯೆ ತೀರ್ಪು ರದ್ದು ಕೋರಿಕೆ: ವಕೀಲ ರಿಗೆ ₹6 ಲಕ್ಷ ದಂಡ ಒಂ ದು ಭಾಷಣದಲ್ಲಿ ಸುಪ್ರೀಂಕೋರ್ಟಿನ ಮಾಜಿ ಮುಖ್ಯ ನ್ಯಾಯಮೂರ್ತಿ ( CJI) ನ್ಯಾಯಮೂರ್ತಿ ಡಿ.ವೈ. ಚಂದ್...

Sunday, October 26, 2025

PARYAYA: ಯಕ್ಷಗಾನ ತರಗತಿ ಶುಭಾರಂಭ

 ಯಕ್ಷಗಾನ ತರಗತಿ ಶುಭಾರಂಭ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿವೆಂಕಟೇಶ್ವರಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ೨೦೨೫ ಅಕ್ಟೋಬರ್‌ ೨೬ರ ಭಾನುವಾರ ಯಕ್ಷ ಕಲಾ ಕೌಸ್ತುಭ ವತಿಯಿಂದ ಯಕ್ಷಗಾನ ತರಬೇತಿ ತರಗತಿ ಶುಭಾರಂಭಗೊಂಡಿತು.


ಶ್ರೀ ಮಹಾಗಣಪತಿ ಸನ್ನಿಧಿಯಲ್ಲಿ ಗಣಪತಿ ಸ್ತುತಿಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಯಕ್ಷಗಾನ ಗುರು ಶ್ರೀ ಉಮೇಶ ರಾಜ್‌ ಮಂದಾರ್ತಿ ಮತ್ತು ಅವರ ತಂಡದವರಿಂದ ನಡೆದ ಗಣಪತಿ ಸ್ತುತಿಯನ್ನು ನೆರವೇರಿಸಿದರು.
ಗಣಪತಿ ಸ್ತುತಿಯ ಬಳಿಕ ದೀಪ ಪ್ರಜ್ಞಲನೆ, ಚೌಕಿ ಗಣೇಶ ಸ್ತುತಿ ನಡೆಯಿತು.

ಶ್ರೀ ರಾಜೇಶ ಹೆಗಡೆ ಅವರು ಯಕ್ಷಗಾನದ ಮಹತ್ವದ ಬಗ್ಗೆ ವಿವರಿಸಿದರು. ಶ್ರೀ ಚೌಡರೆಡ್ಡಿ ಅವರು ದೇವಸ್ಥಾನದಲ್ಲಿ ಯಕ್ಷಗಾನ ಕಲಿಯಲು ಬರುವ ಎಲ್ಲರಿಗೂ ದೇವಸ್ಥಾನ ಸೇವಾ ಸಮಿತಿ ವತಿಯಿಂದ ಎಲ್ಲ ಸಹಕಾರವನ್ನು ನೀಡುವ ಭರವಸೆ ಕೊಟ್ಟರು.
ಶ್ರೀ ಉಮೇಶರಾಜ್‌ ಮಂದಾರ್ತಿ ಅವರು ಯಕ್ಷಗಾನವನ್ನು ಏಕೆ ಕಲಿಯಬೇಕು ಮತ್ತು ಕಲಿಸಬೇಕು ಎಂಬ ಬಗ್ಗೆ ವಿವರಿಸಿದರು. ಯಕ್ಷಗಾನದ ಪ್ರಾಥಮಿಕ ತರಬೇತಿಯನ್ನೂ ನೀಡಿದರು.

ಯಕ್ಷ ಕಲಾ ಕೌಸ್ತುಭ ತಂಡದ ಚೆಂಡೆ ವಾದಕ ಸುಬ್ರಹ್ಮಣ್ಯ
 ಸಾಸ್ತಾನ, ಮದ್ದಳೆ ವಾದಕ ನರಸಿಂಹ ಆಚಾರ್ಯ ಹಾಗೂ ಉದಯ ಮಂದಾರ್ತಿ ಅವರು ಹಾಜರಿದ್ದರು.
ಡಾಲರ್ಸ್‌ ಕಾಲೋನಿ, ಹೆಣ್ಣೂರು ರಸ್ತೆ, ಸಾತನೂರು ಸೇರಿದಂತೆ ಹೆಗಡೆ ನಗರದ ಆಸುಪಾಸಿನ ಬಹಳಷ್ಟು ಪೋಷಕರು ತಮ್ಮ ಮಕ್ಕಳೊಂದಿಗೆ ಕಾರ್ಯಕ್ರಮಕ್ಕೆ ಆಗಮಿಸಿದ್ದರು.
ಶ್ರೀ ಮಹಾಗಣಪತಿ ದೇವಸ್ಥಾನ ಸೇವಾ ಸಮಿತಿಯ ಅಧ್ಯಕ್ಷ ಶ್ರೀ ಚೌಡರೆಡ್ಡಿ, ಉಪಾಧ್ಯಕ್ಷ ಶಿವಪ್ಪ ಶಾಂತಪ್ಪನವರ, ಕಾರ್ಯದರ್ಶಿ ಶ್ರೀ ರಾಜೇಶ ಕಮಲಾಕರ ಹೆಗಡೆ, ಟ್ರಸ್ಟಿಗಳಾದ ಶ್ರೀ ಮುನಿರಾಜು, ಸುಗುಣನ್‌, ನೆತ್ರಕೆರೆ ಉದಯಶಂಕರ ಹಾಗೂ ಭಕ್ತಾದಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದ ಕೆಲವು ಚಿತ್ರಗಳು ಹಾಗೂ ವಿಡಿಯೋಗಳು ಇಲ್ಲಿವೆ.
ಚೌಕಿ ಪೂಜೆಯ ಸಂದರ್ಭದ ಗಣಪ ಸ್ತುತಿ ಇಲ್ಲಿದೆ:

ಯಕ್ಷಗಾನ ಪ್ರಾಥಮಿಕ ಅಭ್ಯಾಸದ ಒಂದು ವಿಡಿಯೋ ಕೆಳಗಿದೆ.

ದೇವರ ಸನ್ನಿಧಿಯಲ್ಲಿ ನಡೆದ ಗಣಪತಿಸ್ತುತಿಯ ವಿಡಿಯೋ ನೋಡಲು ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ. ಯೂ ಟ್ಯೂಬ್‌ ವಿಡಿಯೋ ನೋಡಲು ಯೂ ಟ್ಯೂಬ್‌ಲಿಂಕ್‌ ಕ್ಲಿಕ್‌ ಮಾಡಿರಿ: https://youtu.be/sbWyM8KaKX8

ಯಕ್ಷಗಾನ ಮಂಗಲ ಸಂದರ್ಭದ ವಿಡಿಯೋ ಇಲ್ಲಿದೆ. ನೋಡಲು ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ. ಅಥವಾ ಯೂಟ್ಯೂಬ್‌ ಲಿಂಕ್‌ ಕ್ಲಿಕ್‌ ಮಾಡಿರಿ: https://youtu.be/206hUkGzjVQ

ಇನ್ನಷ್ಟು ವಿಡಿಯೋಗಳು ಪರ್ಯಾಯ5 ಯೂಬ್‌ ಚಾನೆಲ್‌ನಲ್ಲಿಯೂ ಮೂಡಿ ಬರಲಿವೆ.

ಪ್ರತಿ ಭಾನುವಾರ ಬೆಳಗ್ಗೆ 10 ಗಂಟೆಯಿಂದ 12 ಗಂಟೆಯವರೆಗೆ ಯಕ್ಷಗಾನ ತರಗತಿಗಳು ನಡೆಯಲಿದ್ದು, ಆಸಕ್ತರು ಶ್ರೀ ಉಮೇಶರಾಜ್‌ ಮಂದಾರ್ತಿ (ಫೋನ್:‌ 9663671591)  ಅವರನ್ನು ಸಂಪರ್ಕಿಸಬಹುದು.

ಯಕ್ಷಗಾನ ಕುರಿತ ಇನ್ನಷ್ಟು ವಿಷಯಗಳಿಗೆ- ಪರ್ಯಾಯ ವೆಬ್‌ ಸೈಟಿನ ಯಕ್ಷಗಾನ/ತಾಳಮದ್ದಳೆ ಪುಟ ಕ್ಲಿಕ್‌ ಮಾಡಿರಿ. ಅಥವಾ ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ.

PARYAYA: ಯಕ್ಷಗಾನ ತರಗತಿ ಶುಭಾರಂಭ:   ಯಕ್ಷಗಾನ ತರಗತಿ ಶುಭಾರಂಭ ಯ ಕ್ಷಗಾನ ತರಗತಿ ಶುಭಾರಂಭ ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ , ವೆಂಕಟೇಶ್ವರ , ಅಭ...

Tuesday, October 21, 2025

PARYAYA: ದೀಪಾವಳಿ: ದೀಪ, ಪಟಾಕಿ ಬಾಣಗಳ ಹಬ್ಬ!

 ದೀಪಾವಳಿ: ದೀಪ, ಪಟಾಕಿ ಬಾಣಗಳ ಹಬ್ಬ!

ಇದು ಸುವರ್ಣ ನೋಟ

ದೀಪಾವಳಿ ದೀಪಗಳ ಹಬ್ಬ, ಪಟಾಕಿ ಬಾಣಗಳ ಬಿರುಸಿನ ಹಬ್ಬ.

ಶ್ರೀರಾಮಚಂದ್ರನು ರಾವಣನನ್ನು ವಧಿಸಿದ ಬಳಿಕ ಅಯೋಧ್ಯೆಗೆ ವಾಪಸಾಗಿ ಪಟ್ಟವನ್ನೇರಿದ ಹಬ್ಬ. ಅಸುರ ನರಕಾಸುರನನ್ನು ವಧಿಸಿದ ದಿನದ ಹಬ್ಬ. ವಿಷ್ಣುವು ವಾಮನರೂಪಿಯಾಗಿ ಬಂದು ಮೂರು ಅಡಿ ಭೂಮಿಯನ್ನು ದಾನವಾಗಿ ಪಡೆದು ಬಲಿಯೇಂದ್ರ ಚಕ್ರವರ್ತಿಯನ್ನು ಪಾತಾಳಕ್ಕೆ ಕಳುಹಿಸಿದ ಹಬ್ಬ. ಪಾರ್ವತಿಯ ಕೇದಾರೇಶ್ವರನನ್ನಪೂಜಿಸಿ ಈಶ್ವರನನ್ನು ಪತಿಯಾಗಿ ಪಡೆದ ಹಬ್ಬ. ಲಕ್ಷ್ಮಿಯು ಪೂಜೆ ಸ್ವೀಕರಿಸಿ ಭಕ್ತರನ್ನು ಹರಸುವ ಹಬ್ಬ.ಗೋಮಾತೆಯನ್ನು ಪೂಜಿಸುವ ಹಬ್ಬ.

ಈ ಹಬ್ಬಕ್ಕೆ ದೇವರಿಗೆ ಹೂಗಳ ಸಿಂಗಾರದೊಂದಿಗೆ ಸಾಲು ದೀಪಗಳ ಹಣತೆ ಬೆಳಗಿಸುವುದರ ಜೊತೆಗೆ ಪಟಾಕಿ ಬಾಣಗಳ ಬಿರುಸು ಸಂಭ್ರಮವನ್ನು ಇಮ್ಮಡಿಗೊಳಿಸುತ್ತದೆ.

ಈ ದೃಶ್ಯಗಳನ್ನು ಸೆರೆ ಹಿಡಿದು ದೀಪಾವಳಿ ಹಬ್ಬದ ಸಂಭ್ರಮಕ್ಕೆ ಹಿರಿಯ ಪತ್ರಿಕಾ ಛಾಯಾಗ್ರಾಹಕ ವಿಶ್ವನಾಥ ಸುವರ್ಣ ಅವರು ಕಳೆಗಟ್ಟಿಸಿರುವುದು ಹೀಗೆ.

ಪಟಾಕಿ ಬಾಣಗಳ ಸುಂದರ ಛಾಯಾಚಿತ್ರಗಳನ್ನು ಪರ್ಯಾಯದ 
ʼಸುವರ್ಣ ನೋಟʼಕ್ಕೆ ಒದಗಿಸಿದ್ದಾರೆ.









ಈ ಚಿತ್ರಗಳಿಗೆ ಚಲನೆ ನೀಡಿ ವಿಡಿಯೋ ರೂಪಿಸಿದ್ದು ನೆತ್ರಕೆರೆ ಉದಯಶಂಕರ.

ಚಿತ್ರ ಹಾಗೂ ವಿಡಿಯೋದ ಸಂಗಮ ಇಲ್ಲಿದೆ.👇

ಚಿತ್ರಗಳ ಸಮೀಪ ನೋಟಕ್ಕೆ ಚಿತ್ರಗಳನ್ನು ಕ್ಲಿಕ್‌ ಮಾಡಿ. ವಿಡಿಯೋದ ವೀಕ್ಷಣೆಗೆ ಕೆಳಗಿನ ಚಿತ್ರ ಕ್ಲಿಕ್‌ ಮಾಡಿ. ಇಲ್ಲವೇ ಇಲ್ಲಿರುವ ಯೂ ಟ್ಯೂಬ್‌ವಿಡಿಯೋ ಲಿಂಕ್‌ ಕ್ಲಿಕ್‌ ಮಾಡಿ: https://youtu.be/ZqJD3In5guY?list=PLv2kXf-8UHyK3E-4qT6ApslDz_pUNsCZO




PARYAYA: ದೀಪಾವಳಿ: ದೀಪ, ಪಟಾಕಿ ಬಾಣಗಳ ಹಬ್ಬ!:   ದೀಪಾವಳಿ: ದೀಪ, ಪಟಾಕಿ ಬಾಣಗಳ ಹಬ್ಬ! ಇದು ಸುವರ್ಣ ನೋಟ ದೀ ಪಾವಳಿ ದೀಪಗಳ ಹಬ್ಬ, ಪಟಾಕಿ ಬಾಣಗಳ ಬಿರುಸಿನ ಹಬ್ಬ. ಶ್ರೀರಾಮಚಂದ್ರನು ರಾವಣನನ್ನು ವಧಿಸಿದ ಬಳಿಕ ಅಯೋ...

Monday, October 20, 2025

PARYAYA: ದೀಪಾವಳಿ ಸಂಭ್ರಮ, ಕೇದಾರ ಗೌರಿ ವ್ರತ ಕಥಾಶ್ರವಣ

 ದೀಪಾವಳಿ ಸಂಭ್ರಮ, ಕೇದಾರ ಗೌರಿ ವ್ರತ ಕಥಾಶ್ರವಣ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಬೆಳಕಿನ ಹಬ್ಬ ದೀಪಾವಳಿಯನ್ನು ೨೦೨೫ ಅಕ್ಟೋಬರ್‌ ೨೦ರ ಸೋಮವಾರ ಸಂಭ್ರಮೋತ್ಸಾಹದೊಂದಿಗೆ ಆಚರಿಸಲಾಯಿತು.

ಕೇದಾರ ಗೌರೀ ವ್ರತ ಕಥಾಶ್ರವಣ ಸಹಿತವಾಗಿ ಲಕ್ಷ್ಮೀಪೂಜೆ, ಕೇದಾರನಾಥೇಶ್ವರ ಪೂಜೆಯನ್ನು ನೆರವೇರಿಸಲಾಯಿತು. ಭಕ್ತರು ಭಜನೆ ಹಾಡಿನೊಂದಿಗೆ, ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಿದರು.


PARYAYA: ದೀಪಾವಳಿ ಸಂಭ್ರಮ, ಕೇದಾರ ಗೌರಿ ವ್ರತ ಕಥಾಶ್ರವಣ:   ದೀಪಾವಳಿ ಸಂಭ್ರಮ, ಕೇದಾರ ಗೌರಿ ವ್ರತ ಕಥಾಶ್ರವಣ ಬೆಂ ಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನ...

PARYAYA: ಐಎನ್‌ಎಸ್‌ ವಿಕ್ರಾಂತ್‌ ನಲ್ಲಿ ದೀಪಾವಳಿ ಸಂಭ್ರಮ

 ಐಎನ್‌ಎಸ್‌ ವಿಕ್ರಾಂತ್‌ ನಲ್ಲಿ ದೀಪಾವಳಿ ಸಂಭ್ರಮ

ದೀಪಾವಳಿ ಹಬ್ಬವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿವರ್ಷದಂತೆ, ಈದಿನ (೨೦.೧೦.೨೦೨೫) ಭಾರತದ ನೌಕಾಕಾಪಡೆಯ ಯೋಧರ ಜೊತೆಗೆ ಆಚರಿಸಿದರು.

ಗೋವಾದ ಕರಾವಳಿಯಲ್ಲಿ ಮತ್ತು ಐಎನ್‌ಎಸ್‌ ವಿಕ್ರಾಂತ್‌ನಲ್ಲಿ ಯೋಧರ ಜೊತೆಗೆ ಸಂವಾದ ನಡೆಸಿದ ಪ್ರಧಾನಿ, ಅವರೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲೂ ಪಾಲ್ಗೊಂಡರು.

ಐಎನ್‌ ಎಸ್‌ ವಿಕ್ರಾಂತ್‌ ನಲ್ಲಿ ಯೋಧರು ಮತ್ತು ಸಿಬ್ಬಂದಿ ಪ್ರದರ್ಶಿಸಿದ “ಕಸಮ್‌ ಸಿಂದೂರ್‌ ಕಿʼ ಹಾಡನ್ನು ಮೆಚ್ಚಿಕೊಂಡರು.

ಐಎನ್‌ಎಸ್‌ ಮುಖಾಂತರ ಪ್ರದರ್ಶನಗೊಂಡ ವಾಯುಬಲದ ವಿಡಿಯೋವನ್ನೂ ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡರು.

ಪ್ರಧಾನಿ ಹಂಚಿಕೊಂಡ ವಿಡಿಯೋಗಳು ಇಲ್ಲಿವೆ.


PARYAYA: ಐಎನ್‌ಎಸ್‌ ವಿಕ್ರಾಂತ್‌ ನಲ್ಲಿ ದೀಪಾವಳಿ ಸಂಭ್ರಮ:   ಐಎನ್‌ಎಸ್‌ ವಿಕ್ರಾಂತ್‌ ನಲ್ಲಿ ದೀಪಾವಳಿ ಸಂಭ್ರಮ ದೀ ಪಾವಳಿ ಹಬ್ಬವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿವರ್ಷದಂತೆ, ಈದಿನ (೨೦.೧೦.೨೦೨೫) ಭಾರತದ ನೌಕಾಕಾಪಡೆಯ ಯ...

PARYAYA: ಲೋಕಸಭಾ ಚುನಾವಣೆ 2029 ?

 ಲೋಕಸಭಾ ಚುನಾವಣೆ 2029 ?

ದೆಹಲಿ: ಖ್ಯಾತ ಜ್ಯೋತಿಷಿ ಮತ್ತು ಸಂಖ್ಯಾಶಾಸ್ತ್ರಜ್ಞೆ ಡಾ. ಜೈ ಮದಾನ್ ಅವರು 2029ರ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಒಂದು ಮಹತ್ವದ ಭವಿಷ್ಯ ನುಡಿದಿದ್ದಾರೆ. ಕೇಂದ್ರದಲ್ಲಿ ಮತ್ತೆ ಬಿಜೆಪಿ ಅಧಿಕಾರ ಉಳಿಸಿಕೊಳ್ಳಲಿದೆ ಎಂದು ಅವರು ಹೇಳಿದ್ದಾರೆ. ಟೈಮ್ಸ್‌ ನೌ ಈ ಸುದ್ದಿಯನ್ನು ವರದಿ ಮಾಡಿದೆ.

ಟೈಮ್ಸ್ ನೌ ಸಮೂಹದ ಪ್ರಧಾನ ಸಂಪಾದಕಿ ನವಿಕಾ ಕುಮಾರ್ ಅವರೊಂದಿಗಿನ ವಿಶೇಷ ಸಂವಾದದಲ್ಲಿ ಮಾತನಾಡಿದ ಡಾ. ಜೈ ಮದಾನ್ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಗ್ರಹಗತಿಗಳು ಅತ್ಯಂತ ಉಜ್ವಲವಾಗಿವೆ. "ಅವರು ಏನೇ ಏರುಪೇರುಗಳನ್ನು ಎದುರಿಸಿದರೂಅದು ವಿಫಲತೆಗೆ ಕಾರಣವಾಗುವುದಿಲ್ಲ" ಎಂದು ವಿವರಿಸಿದರು.

"ಪ್ರಧಾನಿ ಮೋದಿ ದೈವಾನುಗ್ರಹ ಹೊಂದಿದ್ದಾರೆ. ಅವರು ಸದಾ ಪ್ರಗತಿಯ ಹಾದಿಯಲ್ಲಿದ್ದಾರೆ. ರಾಷ್ಟ್ರ ಮೊದಲು ಎಂಬ ಭಾವನೆಯನ್ನು ಹೊಂದಿರುವ ಅವರುರಾಷ್ಟ್ರವನ್ನು ಮೊದಲ ಸ್ಥಾನದಲ್ಲಿ ಇರಿಸುತ್ತಾರೆ... 2029ರಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆಎಂದು ಡಾ. ಜೈ ಮದಾನ್ ದೃಢವಾಗಿ ನುಡಿದರು. ಮುಖ್ಯಮಂತ್ರಿಯಿಂದ ಪ್ರಧಾನ ಮಂತ್ರಿಯಾಗುವವರೆಗೆಅವರಿಗೆ ಯಾವುದೇ ಕೆಲಸ ಅಡ್ಡಿ ಬಂದರೂ ಅದು ಕೊನೆಗೆ ನೆರವೇರುತ್ತಾ ಬಂದಿದೆ ಎಂದು ಹೇಳಿದ್ದಾರೆ.

"ಪ್ರತಿ ಬಾರಿಯೂ ಅವರು ಇನ್ನಷ್ಟು ಶಕ್ತಿಶಾಲಿಉತ್ತಮ ಮತ್ತು ಹೆಚ್ಚು ಚೈತನ್ಯಶಾಲಿಯಾಗಿ ಮರಳಿದ್ದಾರೆ. ಅವರು ಸ್ಥಿರವಾದ ಮಾರ್ಗದಲ್ಲಿಲ್ಲಬದಲಿಗೆ ಪ್ರಗತಿಪರ ಮಾರ್ಗದಲ್ಲಿ ಮುನ್ನಡೆದು ನಿರಂತರವಾಗಿ ಏರುಗತಿಯಲ್ಲಿ ಇದ್ದಾರೆಎಂದು ಡಾ. ಜೈ ಮದಾನ್ ನುಡಿದರು. ಮೋದಿ ರಾಷ್ಟ್ರ ಮೊದಲು ಎಂದು ಭಾವಿಸುವ ದೇಶಪ್ರೇಮಿಮತ್ತು ಇದೇ ಅವರ ಗೌರವವನ್ನು ಹೆಚ್ಚಿಸುತ್ತದೆ ಎಂದು ಡಾ. ಮದಾನ್ ಹೇಳಿದರು..

 ಕೋಪ ಮತ್ತು ದ್ವೇಷದ ಹೊರತಾಗಿಯೂದೇಶವು ಹೆಚ್ಚು ದೇಶಭಕ್ತ ಆಗಲಿದೆಮತ್ತು ಆರ್ಥಿಕತೆ ಹಾಗೂ ವ್ಯವಹಾರಗಳು ಹೆಚ್ಚು ಸ್ವಾವಲಂಬಿ ಆಗಲಿವೆ ಎಂದು ಜ್ಯೋತಿಷಿ ಭವಿಷ್ಯ ನುಡಿದರು. ಜಾಗತಿಕ ಬದಲಾವಣೆಗಳಿಂದ ತೊಂದರೆಗೊಳಗಾದ ಅನಿವಾಸಿ ಭಾರತೀಯರು (NRIs) ಸಹ ತಮ್ಮ ಹಣವನ್ನು ತಮ್ಮದೇ ದೇಶದಲ್ಲಿ ಹೂಡಿಕೆ ಮಾಡುವ ಬಗ್ಗೆ ಯೋಚಿಸಲಿದ್ದಾರೆಮತ್ತು ಎಲ್ಲಾ ಭಾರತೀಯರು ಈಗ ಒಗ್ಗಟ್ಟಾಗಲಿದ್ದಾರೆ ಎಂದೂ ಅವರು ನುಡಿದರು.

ಮುಂಬರುವ ಬಿಹಾರ ಚುನಾವಣೆಯ ಬಗ್ಗೆ ?

ಬಿಹಾರ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇರುವಾಗಜ್ಯೋತಿಷಿ ಡಾ. ಜೈ ಮದಾನ್ ಅವರುಬಿಹಾರದಲ್ಲಿ ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗದಿರಬಹುದುಆದರೆ ಬಿಜೆಪಿ ಬಲಿಷ್ಠವಾಗಿ ಹೊರಹೊಮ್ಮುವ ಸಾಧ್ಯತೆಯಿದೆ ಎಂದು ನುಡಿದಿದ್ದಾರೆ.

"ಬಿಜೆಪಿಗೆ ಬಲವಾದ ಬೆಂಬಲ ಸಿಗಲಿದೆ. ನಿತೀಶ್ ಕುಮಾರ್ ಈ ಬಾರಿ ಸಿಎಂ ಆಗದಿರಬಹುದು ಮತ್ತು ಅವರಿಗೆ ಬೇರೆ ಹುದ್ದೆಯನ್ನು ನೀಡಬಹುದು. ಚಿರಾಗ್ ಪಾಸ್ವಾನ್ ಬಿಹಾರದಲ್ಲಿ 'ಉದಯಿಸುತ್ತಿರುವ ಸೂರ್ಯ'ನಂತೆ ಹೊರಹೊಮ್ಮಬಹುದು," ಎಂದು ಡಾ. ಜೈ ಮದಾನ್ ಹೇಳಿದರು.

2028ರ ವೇಳೆಗೆ ಕಾಂಗ್ರೆಸ್ಗೆ ಹೊಸ ಮುಖ

ಕಾಂಗ್ರೆಸ್ ಪಕ್ಷದ ಕುರಿತು ಮಾತನಾಡಿದ ಜ್ಯೋತಿಷಿ, "ಹಳೆಯ ದೊಡ್ಡ ಪಕ್ಷವಾದ (ಕಾಂಗ್ರೆಸ್) 2028ರ ವೇಳೆಗೆ ಹೊಸ ಮುಖಗಳನ್ನು ಪರಿಚಯಿಸಬಹುದುಪ್ರಿಯಾಂಕಾ ಗಾಂಧಿ ಅವರ ಮಗ ರೈಹಾನ್ ಅವರು 'ವಾದ್ರಾಎಂಬ ಉಪನಾಮವನ್ನು ಕೈಬಿಟ್ಟಿರುವುದನ್ನು ನೀವು ನೋಡಬಹುದು. ಅವರಿಗೆ ಪ್ರಬಲವಾದ ಗ್ರಹಬಲವಿದೆ," ಎಂದು ಹೇಳಿದರು.

ಇನ್ನೊಂದು ಕುತೂಹಲಕಾರಿ ಎಚ್ಚರಿಕೆಯನ್ನು ಜ್ಯೋತಿಷಿ ಡಾ. ಜೈ ಮದಾನ್ ನೀಡಿದರು: "ಜ್ಯೋತಿಷ್ಯದ ಉದ್ದೇಶ ನಿಮಗೆ ಮಾರ್ಗದರ್ಶನ ನೀಡುವುದುಆದರೆ ಅದನ್ನು ಭವಿಷ್ಯ ಎಂದು ಪರಿಗಣಿಸಲು ಪ್ರಾರಂಭಿಸಿದರೆಅದು ಮೂಢನಂಬಿಕೆಯಾಗುತ್ತದೆ”. 

ಜೈ ಮದಾನ್‌ ಅವರು ಈ ಹಿಂದೆ ಕೋವಿಡ್‌ ಸಾಂಕ್ರಾಮಿಕದ ಎರಡನೇ ಅಲೆಯ ಬಗ್ಗೆ ಒಂದು ವರ್ಷ ಮುಂಚಿತವಾಗಿಯೇ ಭವಿಷ್ಯ ನುಡಿದಿದ್ದರು.

PARYAYA: ಲೋಕಸಭಾ ಚುನಾವಣೆ 2029 ?:   ಲೋಕಸಭಾ ಚುನಾವಣೆ 2029 ? ನ ವ ದೆಹಲಿ: ಖ್ಯಾತ ಜ್ಯೋತಿಷಿ ಮತ್ತು ಸಂಖ್ಯಾಶಾಸ್ತ್ರಜ್ಞೆ ಡಾ. ಜೈ ಮದಾನ್ ಅವರು 2029 ರ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಒಂದು ಮಹತ್...

Saturday, October 18, 2025

PARYAYA: ಯಕ್ಷಗಾನ ಕಲಿಯಲು ಇಲ್ಲಿಗೆ ಬನ್ನಿ

 ಯಕ್ಷಗಾನ ಕಲಿಯಲು ಇಲ್ಲಿಗೆ ಬನ್ನಿ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ 2025 ನವೆಂಬರ್‌ 26ರ ಭಾನುವಾರ ಯಕ್ಷ ಕಲಾ ಕೌಸ್ತುಭ ವತಿಯಿಂದ ಯಕ್ಷಗಾನ ತರಬೇತಿ ತರಗತಿಗಳು ಆರಂಭವಾಗಲಿವೆ.
ತರಗತಿಗಳು ನವೆಂಬರ್‌ 26ರಿಂದ ಪ್ರತೀ ಭಾನುವಾರ ಬೆಳಗ್ಗೆ 10ರಿಂದ 12 ಗಂಟೆಯವರೆಗೆ ನಡೆಯಲಿವೆ.

ಯಕ್ಷಗಾನವು ಕರ್ನಾಟಕದ ಪರಂಪರಾಗತ ಹೆಮ್ಮೆಯ ಶ್ರೀಮಂತ ಕಲೆ. ಇದನ್ನು ಕಲಿಯಲು ಇಚ್ಛಿಸುವವರು ಹೆಚ್ಚಿನ ಮಾಹಿತಿಗಾಗಿ ಉಮೇಶ್‌ ರಾಜ್‌ ಮಂದಾರ್ತಿ (ಫೋನ್‌ ನಂಬರ್:‌9663671591) ಅವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಯಕ್ಷ ಕಲಾ ಕೌಸ್ತುಭ ಗುರುಗಳು ಮಾಗಡಿ ರಸ್ತೆ ಹುಲಿಯೂರು ದುರ್ಗದ ದೇವ ಪಟ್ಟಣ ಶ್ರೀವಿದ್ಯಾ ಚೌಡೇಶ್ವರಿ ದೇವಾಲಯದಲ್ಲಿ ನೀಡಿದ ಯಕ್ಷಗಾನ ಸೇವೆ ಒಂದರ ಝಲಕ್‌ ಇಲ್ಲಿದೆ.

PARYAYA: ಯಕ್ಷಗಾನ ಕಲಿಯಲು ಇಲ್ಲಿಗೆ ಬನ್ನಿ:   ಯಕ್ಷಗಾನ ಕಲಿಯಲು ಇಲ್ಲಿಗೆ ಬನ್ನಿ ಬೆಂ ಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇ...

Sunday, October 12, 2025

PARYAYA: ಆರೆಸ್ಸೆಸ್‌ ಶತಮಾನ ಉತ್ಸವ, ವಿಜಯದಶಮಿ ಪಥ ಸಂಚಲನ

 ಆರೆಸ್ಸೆಸ್‌ ಶತಮಾನ ಉತ್ಸವ, ವಿಜಯದಶಮಿ ಪಥ ಸಂಚಲನ

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕೃಷ್ಣರಾಜಪುರಂ ಭಾಗದ ಹೆಗಡೆ ನಗರ ಘಟಕವು ಸಂಘದ ಶತಮಾನೋತ್ಸವ ಆಚರಣೆ ಅಂಗವಾಗಿ ೨೦೨೫ ಅಕ್ಟೋಬರ್‌ ೧೨ರ ಭಾನುವಾರ ರಾಮಕೃಷ್ಣ ಹೆಗಡೆ ನಗರದಲ್ಲಿ ಪಥ ಸಂಚಲನ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.

ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಶಾಲಾ ಮೈದಾನದಿಂದ ಆರಂಭವಾದ ಪಥ ಸಂಚಲನವು ಥಣಿಸಂದ್ರ ಮುಖ್ಯರಸ್ತೆ, ಕೆಂಪೇಗೌಡ ವೃತ್ತ ಹೆಗಡೆ ನಗರ, ಶಬರಿ ನಗರ, ಗಣೇಶ ದೇವಸ್ಥಾನ, ಕೆ. ನಾರಾಯಣಪುರ ಮುಖ್ಯರಸ್ತೆ ಮೂಲಕ ಸಾಗಿ, ರಾಷ್ಟ್ರೋತ್ಥಾನ ಶಾಲೆಯಲ್ಲಿ ಕೊನೆಗೊಂಡಿತು.

ಪಥ ಸಂಚಲನ ಮಾರ್ಗದಲ್ಲಿ ಅಲ್ಲಲ್ಲಿ ಭಗವಾಧ್ವಜಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು.

ಈ ಸಂದರ್ಭದ ಕೆಲವು ಚಿತ್ರಗಳು, ವಿಡಿಯೋ ಇಲ್ಲಿದೆ.

ವಿಡಿಯೋ ನೋಡಲು ಕೆಳಗಿನ ಚಿತ್ರ ಕ್ಲಿಕ್‌ ಮಾಡಿ ಅಥವಾ ಯೂ ಟ್ಯೂಬ್‌ ಲಿಂಕ್‌  - https://youtu.be/a1Wl8kglycc

ಕ್ಲಿಕ್‌ ಮಾಡಿ.



PARYAYA: ಆರೆಸ್ಸೆಸ್‌ ಶತಮಾನ ಉತ್ಸವ, ವಿಜಯದಶಮಿ ಪಥ ಸಂಚಲನ:   ಆರೆಸ್ಸೆಸ್‌ ಶತಮಾನ ಉತ್ಸವ, ವಿಜಯದಶಮಿ ಪಥ ಸಂಚಲನ ರಾ ಷ್ಟ್ರೀಯ ಸ್ವಯಂ ಸೇವಕ ಸಂಘದ ಕೃಷ್ಣರಾಜಪುರಂ ಭಾಗದ ಹೆಗಡೆ ನಗರ ಘಟಕವು ಸಂಘದ ಶತಮಾನೋತ್ಸವ ಆಚರಣೆ ಅಂಗವಾಗಿ ೨೦೨೫ ...