Showing posts with label Balaji. Show all posts
Showing posts with label Balaji. Show all posts

Sunday, March 22, 2026

PARYAYA: ಗೀತಾ ರಾಮಾಯಣ

 ಗೀತಾ ರಾಮಾಯಣ

ದು ಗೀತಾ ರಾಮಾಯಣದ ಒಂದು ದೃಶ್ಯ. ಬೆಂಗಳೂರಿನ ಯಕ್ಷ ಕಲಾ ಕೌಸ್ತುಭ ತಂಡದ ಮಕ್ಕಳು ಪ್ರದರ್ಶಿಸುತ್ತಿರುವುದು. ಇದು ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿವೆಂಕಟೇಶ್ವರಅಭಯ ಆಂಜನೇಯ ದೇವಸ್ಥಾನದಲ್ಲಿ ಅಭ್ಯಾಸ ನಡೆಸುತ್ತಿದ್ದಾಗಿನ ದೃಶ್ಯ. (ಸಮೀಪ ನೋಟಕ್ಕೆ ಮೇಲಿನ ಚಿತ್ರ ಕ್ಲಿಕ್‌ ಮಾಡಿ.)

ಅವರು ಅಭ್ಯಾಸ ಮಾಡುತ್ತಿದ್ದದು ಲವಕುಶ ಕಾಳಗದ ಒಂದು ದೃಶ್ಯ.

ಈ ಕಥೆ ಯಾವುದು, ಅದನ್ನು ಹೇಳುತ್ತಿರುವುದು ಏಕೆ? ಹೇಳುತ್ತಿರುವುದು ಯಾರು ಇವೆಲ್ಲ ಪ್ರಶ್ನೆಗಳಿಗೆ ಉತ್ತರ: ಬೆಂಗಳೂರಿನ ರಾಮಕೃಷ್ಣ ಹೆಗಡೆ ನಗರ ಸಮೀಪದ ಭಾರತೀಯ ಸಿಟಿಯ ನಿಕೂ ಹೋಮ್ಸ್‌ ನಲ್ಲಿ 2026 ಮಾರ್ಚ್‌ 27ರ ಸಂಜೆ 6.45 ಗಂಟೆಗೆ.

ಪೂರ್ತಿ ವಿಡಿಯೋ ನೋಡಲು ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ.


ಪರ್ಯಾಯ.ಕಾಮ್ ವೆಬ್‌ ಸೈಟಿನ ʼಯಕ್ಷಗಾನ ತಾಳಮದ್ದಳೆʼ ಪುಟಕ್ಕೆ ಭೇಟಿ ಕೊಡಿ

PARYAYA: ಗೀತಾ ರಾಮಾಯಣ:   ಗೀತಾ ರಾಮಾಯಣ ಇ ದು ಗೀತಾ ರಾಮಾಯಣದ ಒಂದು ದೃಶ್ಯ. ಬೆಂಗಳೂರಿನ ಯಕ್ಷ ಕಲಾ ಕೌಸ್ತುಭ ತಂಡದ ಮಕ್ಕಳು ಪ್ರದರ್ಶಿಸುತ್ತಿರುವುದು. ಇದು ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್...

Saturday, February 7, 2026

PARYAYA: ಉಚಿತ ಉಚಿತ ಉಚಿತ: ಆಟೋ ರಿಕ್ಷಾ ಕಸ ಸಾಗಣೆ ವ್ಯವಸ್ಥೆ!

 ಉಚಿತ ಉಚಿತ ಉಚಿತ: ಆಟೋ ರಿಕ್ಷಾ ಕಸ ಸಾಗಣೆ ವ್ಯವಸ್ಥೆ!

ದು ಬೆಂಗಳೂರಿನಲ್ಲಿ ಚಾಲ್ತಿಯಲ್ಲಿ ಇರುವ ಆಟೋ ರಿಕ್ಷಾ ಕಸ ಸಾಗಣೆ ವ್ಯವಸ್ಥೆ.

ಎಲ್ಲ ಕಡೆಯಲ್ಲೂ ಆಟೋ ರಿಕ್ಷಾ ಇರುವುದು ಪ್ರಯಾಣಿಕರನ್ನು ಕರೆದೊಯ್ಯಲು. ಆದರೆ ಇಲ್ಲಿ ಅಂದರೆ ರಾಮಕೃಷ್ಣ ಹೆಗಡೆ ನಗರದಲ್ಲಿ ಆಟೋರಿಕ್ಷಾಗಳು ಪ್ರಯಾಣಿಕರ ಜೊತೆಗೆ ಅವರ ಕಸವನ್ನೂ ಸಾಗಿಸುತ್ತವೆ.

ಯಾಕೆ ಎಂದು ಕೇಳುತ್ತೀರಲ್ಲವೇ?

ಪ್ರಯಾಣಿಕರಿಗೆ ತಮ್ಮ ಮನೆಯನ್ನು ಸ್ವಚ್ಚಗೊಳಿಸಿದ ಬಳಿಕ ಗೋಣಿಯಲ್ಲಿ ತುಂಬಿದ ಕಸವನ್ನು ಪಕ್ಕದ ಬಡಾವಣೆಯಲ್ಲಿ ಮನೆಗಳ ಮುಂದೆ ಸುರಿಯಲು ಅಷ್ಟೇ.

ಕೆಲವು ದಿನಗಳ ಹಿಂದೆ ಗ್ರೇಟರ್‌ ಬೆಂಗಳೂರು ಅಥಾರಿಟಿ ಹಿಂದಿನ ಬಿಬಿಎಂಪಿ ಸಿಬ್ಬಂದಿ ಸಾರ್ವಜನಿಕ ಸ್ಥಳ, ರಸ್ತೆಗಳಲ್ಲಿ ಕಸ ಬಿಸಾಕಿದವರ ಮನೆಗೆ ಕಸ ತಂದು ಸುರಿದು ದಂಡ ವಿಧಿಸುವ ಕ್ರಮ ಜರುಗಿಸಿದ್ದರು.

ಈಗ ಅವರ ಬದಲಿಗೆ ಜನರೇ ಒಂದು ಬಡಾವಣೆಯಿಂದ ಇನ್ನೊಂದು ಬಡಾವಣೆಗೆ ತಮ್ಮ ಮನೆಯ ಕಸ ಸಾಗಿಸಿ ಸುರಿಯುವ ಕೆಲಸಕ್ಕೆ ಹೊರಟಿದ್ದಾರೆ. ಅವರಿಗೆ ಕಸ ಒಯ್ಯಲು ನೆರವಾಗುತ್ತಿರುವುದು ಆಟೋ ರಿಕ್ಷಾಗಳು ಅದಕ್ಕೆ ಹೇಳಿದ್ದು ಇದು ಬೆಂಗಳೂರಿನ  ಆಟೋ ರಿಕ್ಷಾ ಕಸ ಸಾಗಣೆ ವ್ಯವಸ್ಥೆ ಎಂದು.

ಇಲ್ಲಿರುವ ವಿಡಿಯೋ ನೋಡಿ. ಇದು ಹೆಗಡೆ ನಗರದ ಬಸವಲಿಂಗಪ್ಪ ನಗರಲ್ಲಿ ಇರುವ ಹತ್ಮನೆ ಬಡಾವಣೆಯಿಂದ ೭ನೇ ಅಡ್ಡರಸ್ತೆಯ ಮೂಲಕ ಶ್ರೀ ಬಾಲಾಜಿ ಕೃಪಾ ಬಡಾವಣೆಗೆ ಬಂದು ೪೦೮ನೇ ನಂಬರಿನ ಮನೆಯ ಗೇಟಿನ ಮುಂದೆ ಜಾರಿಸಿ ಹೋದ ದೃಶ್ಯ. ಆಟೋ ರಿಕ್ಷಾ ೪೦೭ನೇ ನಂಬರಿನ ಮನೆಯ ಮುಂದೆ ಕಸದ ಮೂಟೆ ಇಟ್ಟುಕೊಂಡು ಬರುವುದು ಮತ್ತು ೪೦೮ನೇ ನಂಬರಿನ ಮನೆಯ ಮುಂದೆ ಜಾರಿಸಿ ಮುಂದಕ್ಕೆ ಹೋಗುವುದು ಈ ಎರಡೂ ಮನೆಗಳ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಹಾಂ. ಬಹಳ ಮುಖ್ಯವಾದದ್ದು ಏನು ಎಂದರೆ ಇದು ೨೦೨೬ ಫೆಬ್ರುವರಿ ೫ರಂದು ಮಟ ಮಟ ಮಧ್ಯಾಹ್ನ ೩.೩೦ರ ಸಮಯದಲ್ಲಿ ನಡೆದ ಘಟನೆ.

ರಾತ್ರಿ ಹೊತ್ತಿನಲ್ಲಿ ಇಲ್ಲಿನ ರಸ್ತೆ ರಸ್ತೆಗಳಿಗೂ ಹೀಗೆಯೇ ಕಸ ಬಂದು ಬೀಳುತ್ತಿರುತ್ತವೆ.

ರಿಕ್ಷಾಗಳಷ್ಟೇ ಅಲ್ಲ, ಸ್ಕೂಟರುಗಳಲ್ಲಿ ಹೀಗೆ ಕಸದ ಮೂಟೆ ತಂದು ಮನೆಗಳ ಮುಂದೆ ತಂದು ಇಟ್ಟು ಆ ಮನೆಯವರ ಮೂಲಕ ಅದನ್ನು ಬಿಬಿಎಂಪಿ ವಾಹನಕ್ಕೆ ತಲುಪಿಸುವವರೂ ಇದ್ದಾರೆ.

ಬಿಬಿಎಂಪಿ/ ಜಿಬಿಎಯ ʼದಂಡʼಕ್ಕೆ ಇವರು ಬಗ್ಗುವುದಿಲ್ಲ. ಇವರಿಗೆ ʼದಂಡಂ ದಶಗುಣಂʼ ಎನ್ನುವ ಹಾಗೆ  ಆರಡಿ ಉದ್ದದ ದಂಡಗಳಿಂದಲೇ ಬುದ್ದಿ ಕಲಿಸಬೇಕಾದ ಕಾಲ ಬರುತ್ತದೋ ಏನೋ.

ಬೆಂಗಳೂರಿನಲ್ಲಿ ಬೇರೆ ಯಾವುದಾದರೂ ಬಡಾವಣೆಯವರಿಗೆ ಇಂತಹ ಉಚಿತ ಕಸ ಸಾಗಣೆ ಆಟೋ ವ್ಯವಸ್ಥೆ ಬೇಕಾಗಿದ್ದರೆ ಅತ್ಯಂತ ವೇಗವಾಗಿ ನಂಬರ್‌ ಕೂಡಾ ಗೊತ್ತಾಗದಂತೆ ಸಾಗಿ ಹೋದ ಈ ಆಟೋ ರಿಕ್ಷಾದ ನಂಬರ್‌ ಗುರುತಿಸಿ ಅವರನ್ನೇ ಸಂಪರ್ಕಿಸಬಹುದು.

PARYAYA: ಉಚಿತ ಉಚಿತ ಉಚಿತ: ಆಟೋ ರಿಕ್ಷಾ ಕಸ ಸಾಗಣೆ ವ್ಯವಸ್ಥೆ!:   ಉಚಿತ ಉಚಿತ ಉಚಿತ: ಆಟೋ ರಿಕ್ಷಾ ಕಸ ಸಾಗಣೆ ವ್ಯವಸ್ಥೆ! ಇ ದು ಬೆಂಗಳೂರಿನಲ್ಲಿ ಚಾಲ್ತಿಯಲ್ಲಿ ಇರುವ ಆಟೋ ರಿಕ್ಷಾ ಕಸ ಸಾಗಣೆ ವ್ಯವಸ್ಥೆ. ಎಲ್ಲ ಕಡೆಯಲ್ಲೂ ಆಟೋ ರಿಕ್ಷಾ...

Thursday, February 5, 2026

PARYAYA: ಮಾಘ ಮಾಸದ ಸಂಕಷ್ಟಿ ಪೂಜಾ

 ಮಾಘ ಮಾಸದ ಸಂಕಷ್ಟಿ ಪೂಜಾ

ಬೆಂಗಳೂರಿನ ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ದೇವಸ್ಥಾನದಲ್ಲಿ ೨೦೨೬ ಫೆಬ್ರುವರಿ ೦೫ರ ಗುರುವಾರ ಮಾಘ ಮಾಸದ ಸಂಕಷ್ಟಿ ಪೂಜೆಯನ್ನು ಶ್ರದ್ಧಾ ಭಕ್ತಿಯೊಂದಿಗೆ ನೆರವೇರಿಸಲಾಯಿತು.

ಈ ಸಂದರ್ಭದ ಕೆಲವು ಚಿತ್ರಗಳು ಹಾಗೂ ವಿಡಿಯೋ ಇಲ್ಲಿದೆ.

ವಿಡಿಯೋ ನೋಡಲು ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ.

PARYAYA: ಮಾಘ ಮಾಸದ ಸಂಕಷ್ಟಿ ಪೂಜಾ:   ಮಾಘ ಮಾಸದ ಸಂಕಷ್ಟಿ ಪೂಜಾ ಬೆಂ ಗಳೂರಿನ ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ದೇವಸ್ಥಾನದಲ್ಲಿ ೨...

Saturday, January 10, 2026

PARYAYA: ನಿಮ್ಮ ಆರೋಗ್ಯದ ಬಗ್ಗೆ ನಿಮಗೆ ಕಾಳಜಿ ಇದೆಯೇ?

 ನಿಮ್ಮ ಆರೋಗ್ಯದ ಬಗ್ಗೆ ನಿಮಗೆ ಕಾಳಜಿ ಇದೆಯೇ?

ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ಇದ್ದಲ್ಲಿ ಈ ಕೆಳಗಿನ ಎರಡು ಅತ್ಯಪಯುಕ್ತ ವಿಡಿಯೋಗಳನ್ನು ನೀವು ಖಂಡಿತ ಪೂರ್ತಿಯಾಗಿ ವೀಕ್ಷಿಸುತ್ತೀರಿ ಮತ್ತು ನಿಮ್ಮ ಬಂಧು ಮಿತ್ರರಿಗೆ ಇವುಗಳನ್ನು ಕಳುಹಿಸಿಕೊಡುತ್ತೀರಿ.

ಇವು ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ , ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ನಡೆದ ʼಫೂಟ್‌ ಪಲ್ಸ್‌ʼ ಥೆರಪಿ ಶಿಬಿರದ ಸಂದರ್ಭದಲ್ಲಿ ನಡೆದ ಆರೋಗ್ಯ ಜಾಗೃತಿ ಕಾರ್ಯಕ್ರಮದಲ್ಲಿ ಆರೋಗ್ಯ ಸಂಪನ್ಮೂಲ ವ್ಯಕ್ತಿ ಡಾ. ರತ್ನಾಕರ ಶೆಟ್ಟಿ ಅವರು ಆಡಿದ ಮಾತುಗಳ ವಿಡಿಯೋಗಳು.

ಕೆಳಗೆ ಕ್ಲಿಕ್‌ ಮಾಡಿ ನೋಡಿ. ನಿಮ್ಮ ಬಂಧು ಮಿತ್ರರಿಗೂ ಕಳುಹಿಸಿಕೊಡಿ.



PARYAYA: ನಿಮ್ಮ ಆರೋಗ್ಯದ ಬಗ್ಗೆ ನಿಮಗೆ ಕಾಳಜಿ ಇದೆಯೇ?:   ನಿಮ್ಮ ಆರೋಗ್ಯದ ಬಗ್ಗೆ ನಿಮಗೆ ಕಾಳಜಿ ಇದೆಯೇ? ನಿ ಮ್ಮ ಆರೋಗ್ಯದ ಬಗ್ಗೆ ಕಾಳಜಿ ಇದ್ದಲ್ಲಿ ಈ ಕೆಳಗಿನ ಎರಡು ಅತ್ಯಪಯುಕ್ತ ವಿಡಿಯೋಗಳನ್ನು ನೀವು ಖಂಡಿತ ಪೂರ್ತಿಯಾಗಿ ವೀಕ...

Wednesday, January 7, 2026

PARYAYA: ಮೊಣಕಾಲು ಅಥವಾ ಮಂಡಿನೋವು ಬರುವುದು ಏಕೆ?

 ಮೊಣಕಾಲು ಅಥವಾ ಮಂಡಿನೋವು ಬರುವುದು ಏಕೆ?

ನೆಲದಲ್ಲಿ ಅಥವಾ ಕೆಳಗೆ ಕುಳಿತುಕೊಳ್ಳುವ ಅಭ್ಯಾಸವನ್ನು ಕೈಬಿಟ್ಟದ್ದೇ ಮೊಣಕಾಲು  ಅಥವಾ ಮಂಡಿ ನೋವು ಸೇರಿದಂತೆ ನಮ್ಮ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣ. ಅದರಲ್ಲೂ ಬಸ್ಕಿ ತೆಗೆಯುವುದು, ಕೂತು-ಏಳುವ ಅಭ್ಯಾಸ ಕಡಿಮೆ ಮಾಡಿಕೊಂಡದ್ದು ಇತ್ಯಾದಿ ಕೂಡಾ ನರಸಂಬಂಧಿ ಸಮಸ್ಯೆಗಳಿಗೆ ಮೂಲ

ಮಹಿಳೆಯರು ಹಿಂದೆ ನೆಲದಲ್ಲಿ ಕುಳಿತೇ ಅಡುಗೆ ಮಾಡುತ್ತಿದ್ದರು. ಈಗ ಅಡುಗೆ ಮನೆಯ ವಿನ್ಯಾಸವೇ ಬದಲಿಯಾಗಿದೆ. ನಿಂತುಕೊಂಡು ಅಡುಗೆ ಮಾಡುವುದೇ ಆರಾಮ ಎಂಬ ಭಾವನೆ ಇದೆ. ಇದರೊಂದಿಗೆ ಅತ್ತಿತ್ತ ಓಡಾಡುವ ಅಭ್ಯಾಸವೂ ಕಡಿಮೆ.

ಮನೆಯ ಹೊರಗೆ ಬಿಡಿ ಮನೆಯ ಒಳಗೂ ಬರಿಗಾಲಲ್ಲಿ ನಡೆಯುವ ಕ್ರಮ ಕ್ರಮೇಣ ಮಾಯವಾಗುತ್ತಿದೆ. ನಡೆದಾಡುವುದೇ ಕಡಿಮೆ, ಕಡಿಮೆ ನಡೆದಾಡುವುದರ ಜೊತೆ ಮನೆಯ ಹೊರಗೆ, ಒಳಗೆ ಚಪ್ಪಲಿಗೆ ಮುಕ್ತ ಪ್ರವೇಶ. ಪರಿಣಾಮ ಪಾದಗಳಿಗೆ ಭೂಮಿಯ ಸ್ಪರ್ಶವೇ ಇಲ್ಲ.

ಇದರಿಂದ ಆಗುವ ದೊಡ್ಡ ನಷ್ಟ- ಭೂಮಿಯ ಅಯಸ್ಕಾಂತ ಶಕ್ತಿಯನ್ನು ಸಂಪೂರ್ಣವಾಗಿ ಕಳೆದುಕೊಳ್ಳುವಿಕೆ. ಈ ಅಯಸ್ಕಾಂತ ಶಕ್ತಿ ಅಥವಾ ಮ್ಯಾಗ್ನೆಟ್‌ ಪವರ್‌ ದೇಹ ಸ್ವಾಸ್ಥ್ಯಕ್ಕೆ ಬಲುಮುಖ್ಯ.

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ಶ್ರೀ ಬಾಲಾಜಿ ಮಹಾಗಣಪತಿ ದೇವಸ್ಥಾನ ಸೇವಾ ಸಮಿತಿ ಮತ್ತು ಕಂಪಾನಿಯೋ ಸಂಸ್ಥೆಯ ಸಹಯೋಗದಲ್ಲಿ ನಡೆಯುತ್ತಿರುವ ʼಫೂಟ್‌ ಪಲ್ಸ್‌ʼ ಥೆರೆಪಿ ಶಿಬಿರದ ಸಂದರ್ಭದಲ್ಲಿ ಥೆರೆಪಿ ತಜ್ಞ ಕಾರ್ತಿಕ್‌ ಹೇಳಿದ ಸೂತ್ರಗಳಲ್ಲಿ ಇವೂ ಸೇರಿವೆ.

ಅವರ ಮಾತುಗಳ ವಿಡಿಯೋ ಇಲ್ಲಿದೆ. ಚಿತ್ರ ಕ್ಲಿಕ್‌ ಮಾಡಿ ನೋಡಿ. Youtube Video link: https://youtu.be/TlSSjnHtgJA

ರಂಗೋಲಿ ಸ್ಪರ್ಧೆ

ಹೇಳಬೇಕಾದ ಇನ್ನೊಂದು ಸುದ್ದಿ ಇಲ್ಲಿದೆ. ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಾಲಯದ ಆವರಣದಲ್ಲಿ ಜನವರಿ ೧೫ರಂದು ಬರಲಿರುವ ಮಕರ ಸಂಕ್ರಾಂತಿಯ ಪ್ರಯುಕ್ತ ಮಹಿಳೆಯರಿಗೆ ʼರಂಗೋಲಿʼ ಸ್ಪರ್ಧೆಯನ್ನು ೨೦೨೫ ಜನವರಿ ೧೧ರ ಭಾನುವಾರ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮ ಬೆಳಗ್ಗೆ ೧೦.೩೦ರಿಂದ ೧೨ರ ನಡುವಣ ಅವಧಿಯಲ್ಲಿ ನಡೆಯಲಿದೆ. ಪಾಲ್ಗೊಳ್ಳಬಯಸುವವರು ಮಮತಾ (೮೮೬೭೯೬೭೮೮೮) ಅಥವಾ ಸ್ವಾತಿ (೮೧೦೫೬೮೫೮೯೯) ಅವರನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ.


PARYAYA: ಮೊಣಕಾಲು ಅಥವಾ ಮಂಡಿನೋವು ಬರುವುದು ಏಕೆ?:   ಮೊಣಕಾಲು ಅಥವಾ ಮಂಡಿನೋವು ಬರುವುದು ಏಕೆ? ನೆ ಲದಲ್ಲಿ ಅಥವಾ ಕೆಳಗೆ ಕುಳಿತುಕೊಳ್ಳುವ ಅಭ್ಯಾಸವನ್ನು ಕೈಬಿಟ್ಟದ್ದೇ ಮೊಣಕಾಲು   ಅಥವಾ ಮಂಡಿ ನೋವು ಸೇರಿದಂತೆ ನಮ್ಮ ಹಲವಾರ...

Monday, January 5, 2026

PARYAYA: ಫೂಟ್‌ ಪಲ್ಸ್‌ ಥೆರೆಪಿ: ಏನೆಲ್ಲ ಅನುಕೂಲ ಉಂಟು?

ಫೂಟ್‌ ಪಲ್ಸ್‌ ಥೆರೆಪಿ: ಏನೆಲ್ಲ ಅನುಕೂಲ ಉಂಟು?

ಬೆಂಗಳೂರು ರಾಮಕೃಷ್ಣ ಹೆಗಡೆ ನಗರ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಉಚಿತ ಫುಟ್‌ ಪಲ್ಸ್‌ ಥೆರೆಪಿ ಶಿಬಿರವು ೨೦೨೬ ಜನವರಿ ೩ರಿಂದ ಆರಂಭಗೊಂಡಿದೆ.

ಪ್ರತಿದಿನ ಬೆಳಗ್ಗೆ ೯.೩೦ಕ್ಕೆ ಆರಂಭವಾಗಿ ಸಂಜೆ ೫ ಗಂಟೆಯವರೆಗೆ ನಡೆಯುವ ಈ ಶಿಬಿರವು ಜನವರಿ ೧೨ರವರೆಗೂ ನಡೆಯಲಿದೆ.


ಪ್ರತಿದಿನ ೩೦ ನಿಮಿಷಗಳ ಅವಧಿಯ ಚಿಕಿತ್ಸೆ ಪಡೆಯುವುದರಿಂದ ರಕ್ತ ಪರಿಚಲನೆ, ಮಾಂಸಖಂಡಗಳ ಸೆಳೆತ ಮತ್ತು ನರಗಳ ಯಾವುದೇ ಸರಳ ಮತ್ತು ದೀರ್ಘಕಾಲದ ಸಮಸ್ಯೆಗಳಿಗೆ ಔಷಧ ರಹಿತ ಹಾಗೂ ಅಡ್ಡ ಪರಿಣಾಮ ಇಲ್ಲದ ಪರಿಹಾರ ಲಭಿಸುತ್ತದೆ.

ಮಧುಮೇಹ, ಮಧುಮೇಹದಿಂದ ಬರುವ ಪಾದ ಉರಿಯೂತ, ಸಂಧಿವಾತ, ಕುತ್ತಿಗೆ ನೋವು ಇತ್ಯಾದಿ ಸಮಸ್ಯೆಗಳಿಗೂ ಈ ಚಿಕಿತ್ಸೆಯಲ್ಲಿ ಪರಿಹಾರ ಲಭ್ಯವಿದೆ. ಬಹುಮುಖ್ಯವಾಗಿ ಫಿಸಿಯೋಥೆರೆಪಿ ಅಗತ್ಯ ಉಳ್ಳವರಿಗೆ ಇದು ಅತ್ಯುತ್ತಮ ಎನ್ನುತ್ತಾರೆ ಈ ಚಿಕಿತ್ಸಾ ತಜ್ಞ ಕಾರ್ತಿಕ್.‌

ಚಿಕಿತ್ಸೆ ಬಗ್ಗೆ ಅವರೇನು ಹೇಳುತ್ತಾರೆ ? ಇಲ್ಲಿ 👇 ನೋಡಿ.


ಇದನ್ನೂ ನೋಡಿ:
PARYAYA: ಫೂಟ್‌ ಪಲ್ಸ್‌ ಥೆರೆಪಿ: ಏನೆಲ್ಲ ಅನುಕೂಲ ಉಂಟು?:   ಫೂಟ್‌ ಪಲ್ಸ್‌ ಥೆರೆಪಿ: ಏನೆಲ್ಲ ಅನುಕೂಲ ಉಂಟು? ಬೆಂ ಗಳೂರು ರಾಮಕೃಷ್ಣ ಹೆಗಡೆ ನಗರ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇ...

Monday, December 29, 2025

PARYAYA: ವೈಕುಂಠ ಏಕಾದಶಿಗೆ ಸಡಗರದ ಸಿದ್ಧತೆ

 ವೈಕುಂಠ ಏಕಾದಶಿಗೆ ಸಡಗರದ ಸಿದ್ಧತೆ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ೨೦೨೫ ಡಿಸೆಂಬರ್‌ ೩೦ ಮಂಗಳವಾರದ ವೈಕುಂಠ ಏಕಾದಶಿ ಆಚರಣೆಗೆ ಸಡಗರದ ಸಿದ್ಧತೆ, ಶ್ರಮದಾನ ಕಾರ್ಯಕ್ರಮಗಳು ಡಿಸೆಂಬರ್‌ ೨೯ರಂದು ಭರದಿಂದ ನಡೆದವು.

ಭಕ್ತಾದಿಗಳು ದೇವಾಲಯ ಸ್ವಚ್ಛತೆಯಿಂದ ಹಿಡಿದು ಅಲಂಕಾರದವರೆಗೆ ಎಲ್ಲ ರೀತಿಯ ಶ್ರಮದಾನದಲ್ಲಿ ಲಗುಬಗೆಯಿಂದ ಪಾಲ್ಗೊಂಡರು.

ಮಂಗಳವಾರ ಬೆಳಗ್ಗೆ ೪ ಗಂಟೆಗೆ ಬ್ರಾಹ್ಮೀ ಮುಹೂರ್ತದಲ್ಲಿ ಅಭಿಷೇಕ, ಸಂಕಲ್ಪದೊಂದಿಗೆ ಕಾರ್ಯಕ್ರಮ ಆರಂಭವಾಗಲಿದೆ. ಬಳಿಕ ವಿಶೇಷ ಪೂಜೆ, ಭಜನಾ ಕಾರ್ಯಕ್ರಮಗಳು ನಡೆಯಲಿವೆ. ಬೆಳಗ್ಗೆ ೧೧ ಗಂಟೆಗೆ ವಿದ್ಯಾ ರಘು ಪ್ರಸಾದ್‌ ತಂಡವು ಭಜನಾ ಕಾರ್ಯಕ್ರಮವನ್ನು ನೆರವೇರಿಸಿಕೊಡಲಿದೆ.

ವೈಕುಂಠ ದ್ವಾರವನ್ನು ಶನಿವಾರ ರಾತ್ರೆಯ ವೇಳಗೆ ಸಜ್ಜುಗೊಳಿಸಲಾಗಿದ್ದು ಬೆಳಗ್ಗೆಯಿಂದ ರಾತ್ರಿ ೯ ಗಂಟೆಯವರೆಗೆ ವೈಕುಂಠ ದ್ವಾರ ದರ್ಶನದ ವ್ಯವಸ್ಥೆ ಮಾಡಲಾಗಿದೆ. ರಾತ್ರಿ ೯ ಗಂಟೆಗೆ ಮಹಾಮಂಗಳಾರತಿ ನಡೆಯಲಿದೆ.

ಮಾಜಿ ಸಚಿವ ಮಾಲೂರು ಎಸ್.ಎನ್.‌ ಕೃಷ್ಣಯ್ಯ ಶೆಟ್ಟಿ ಅವರು ಉಚಿತ ಲಡ್ಡು ಪ್ರಸಾದ ವಿತರಣೆಗೆ ವ್ಯವಸ್ಥೆ ಮಾಡಿದ್ದಾರೆ.

PARYAYA: ವೈಕುಂಠ ಏಕಾದಶಿಗೆ ಸಡಗರದ ಸಿದ್ಧತೆ:   ವೈಕುಂಠ ಏಕಾದಶಿಗೆ ಸಡಗರದ ಸಿದ್ಧತೆ ಬೆಂ ಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದ...

Thursday, November 6, 2025

PARYAYA: ಯಕ್ಷಗಾನ ಅಂದರೇನು?

ಯಕ್ಷಗಾನ ಅಂದರೇನು?


ಯಕ್ಷಗಾನವು ನವರಸ ಭರಿತವಾದ ಒಂದು ಸಂಪೂರ್ಣ ಕಲೆ. ಈ ಕಲೆಯನ್ನು ಮುಂದಿನ ಜನಾಂಗಕ್ಕೆ ತಲುಪಿಸಬೇಕು ಎಂಬ ನಿಟ್ಟಿನಲ್ಲಿ ಹಲವಾರು ಕಡೆಗಳಲ್ಲಿ ಯತ್ನಗಳು ನಡೆಯುತ್ತಿವೆ. ತರಗತಿಗಳೂ ನಡೆಯುತ್ತಿವೆ.

ಬೆಂಗಳೂರಿನ ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿವೆಂಕಟೇಶ್ವರಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಯಕ್ಷ ಕಲಾ ಕೌಸ್ತುಭದ ವತಿಯಿಂದ ಇಂತಹದೊಂದು ಯತ್ನ ಆರಂಭವಾಗಿದೆ.

ಯಕ್ಷಗುರು ಶ್ರೀ ಉಮೇಶ ರಾಜ್‌ ಮಂದಾರ್ತಿ (ಫೋನ್‌ 
9663671591) ಅವರು ಯಕ್ಷಗಾನ ಕಲಿಯಬಯಸುವವರಿಗೆ ಯಕ್ಷಗಾನ ಕಲೆಯನ್ನು ಹೇಳಿಕೊಡುತ್ತಿದ್ದಾರೆ. ಮೊದಲ ತರಗತಿಯ ಒಂದು ದೃಶ್ಯ ಇಲ್ಲಿದೆ. 

ವಿಡಿಯೋ ನೋಡಲು ಕೆಳಗಿನ ಚಿತ್ರ ಕ್ಲಿಕ್‌ ಮಾಡಿ ಅಥವಾ ಯೂ ಟ್ಯೂಬ್‌ ಲಿಂಕ್‌ ಕ್ಲಿಕ್‌ ಮಾಡಿ: https://youtu.be/1EhpNPAlZA8


ವಿವರಗಳಿಗೆ:  paryaya.com ವೆಬ್‌ ಸೈಟಿನ ಯಕ್ಷಗಾನ / ತಾಳಮದ್ದಳೆ ಪುಟ ಕ್ಲಿಕ್‌ ಮಾಡಿರಿ.
PARYAYA: ಯಕ್ಷಗಾನ ಅಂದರೇನು?: ಯಕ್ಷಗಾನ ಅಂದರೇನು ? ಯಕ್ಷಗಾನವು ನವರಸ ಭರಿತವಾದ ಒಂದು ಸಂಪೂರ್ಣ ಕಲೆ. ಈ ಕಲೆಯನ್ನು ಮುಂದಿನ ಜನಾಂಗಕ್ಕೆ ತಲುಪಿಸಬೇಕು ಎಂಬ ನಿಟ್ಟಿನಲ್ಲಿ ಹಲವಾರು ಕಡೆಗಳಲ್ಲಿ ಯತ್ನಗಳು ನ...

Wednesday, November 5, 2025

PARYAYA: ಕಾರ್ತೀಕ ಸತ್ಯನಾರಾಯಣ ಪೂಜಾ

 ಕಾರ್ತೀಕ ಸತ್ಯನಾರಾಯಣ ಪೂಜಾ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಕಾರ್ತೀಕ ಮಾಸದ ಸತ್ಯನಾರಾಯಣ ಪೂಜೆಯನ್ನು ೨೦೨೫ ನವೆಂಬರ್‌ ೫ರ ಬುಧವಾರ ಶ್ರದ್ಧಾ ಭಕ್ತಿಗಳೊಂದಿಗೆ ನೆರವೇರಿಸಲಾಯಿತು.

ಈ ಸಂದರ್ಭದ ಕೆಲವು ಚಿತ್ರ, ವಿಡಿಯೋಗಳು ಇಲ್ಲಿವೆ.







PARYAYA: ಕಾರ್ತೀಕ ಸತ್ಯನಾರಾಯಣ ಪೂಜಾ:   ಕಾರ್ತೀಕ ಸತ್ಯನಾರಾಯಣ ಪೂಜಾ ಬೆಂ ಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲ...

Sunday, October 26, 2025

PARYAYA: ಯಕ್ಷಗಾನ ತರಗತಿ ಶುಭಾರಂಭ

 ಯಕ್ಷಗಾನ ತರಗತಿ ಶುಭಾರಂಭ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿವೆಂಕಟೇಶ್ವರಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ೨೦೨೫ ಅಕ್ಟೋಬರ್‌ ೨೬ರ ಭಾನುವಾರ ಯಕ್ಷ ಕಲಾ ಕೌಸ್ತುಭ ವತಿಯಿಂದ ಯಕ್ಷಗಾನ ತರಬೇತಿ ತರಗತಿ ಶುಭಾರಂಭಗೊಂಡಿತು.


ಶ್ರೀ ಮಹಾಗಣಪತಿ ಸನ್ನಿಧಿಯಲ್ಲಿ ಗಣಪತಿ ಸ್ತುತಿಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಯಕ್ಷಗಾನ ಗುರು ಶ್ರೀ ಉಮೇಶ ರಾಜ್‌ ಮಂದಾರ್ತಿ ಮತ್ತು ಅವರ ತಂಡದವರಿಂದ ನಡೆದ ಗಣಪತಿ ಸ್ತುತಿಯನ್ನು ನೆರವೇರಿಸಿದರು.
ಗಣಪತಿ ಸ್ತುತಿಯ ಬಳಿಕ ದೀಪ ಪ್ರಜ್ಞಲನೆ, ಚೌಕಿ ಗಣೇಶ ಸ್ತುತಿ ನಡೆಯಿತು.

ಶ್ರೀ ರಾಜೇಶ ಹೆಗಡೆ ಅವರು ಯಕ್ಷಗಾನದ ಮಹತ್ವದ ಬಗ್ಗೆ ವಿವರಿಸಿದರು. ಶ್ರೀ ಚೌಡರೆಡ್ಡಿ ಅವರು ದೇವಸ್ಥಾನದಲ್ಲಿ ಯಕ್ಷಗಾನ ಕಲಿಯಲು ಬರುವ ಎಲ್ಲರಿಗೂ ದೇವಸ್ಥಾನ ಸೇವಾ ಸಮಿತಿ ವತಿಯಿಂದ ಎಲ್ಲ ಸಹಕಾರವನ್ನು ನೀಡುವ ಭರವಸೆ ಕೊಟ್ಟರು.
ಶ್ರೀ ಉಮೇಶರಾಜ್‌ ಮಂದಾರ್ತಿ ಅವರು ಯಕ್ಷಗಾನವನ್ನು ಏಕೆ ಕಲಿಯಬೇಕು ಮತ್ತು ಕಲಿಸಬೇಕು ಎಂಬ ಬಗ್ಗೆ ವಿವರಿಸಿದರು. ಯಕ್ಷಗಾನದ ಪ್ರಾಥಮಿಕ ತರಬೇತಿಯನ್ನೂ ನೀಡಿದರು.

ಯಕ್ಷ ಕಲಾ ಕೌಸ್ತುಭ ತಂಡದ ಚೆಂಡೆ ವಾದಕ ಸುಬ್ರಹ್ಮಣ್ಯ
 ಸಾಸ್ತಾನ, ಮದ್ದಳೆ ವಾದಕ ನರಸಿಂಹ ಆಚಾರ್ಯ ಹಾಗೂ ಉದಯ ಮಂದಾರ್ತಿ ಅವರು ಹಾಜರಿದ್ದರು.
ಡಾಲರ್ಸ್‌ ಕಾಲೋನಿ, ಹೆಣ್ಣೂರು ರಸ್ತೆ, ಸಾತನೂರು ಸೇರಿದಂತೆ ಹೆಗಡೆ ನಗರದ ಆಸುಪಾಸಿನ ಬಹಳಷ್ಟು ಪೋಷಕರು ತಮ್ಮ ಮಕ್ಕಳೊಂದಿಗೆ ಕಾರ್ಯಕ್ರಮಕ್ಕೆ ಆಗಮಿಸಿದ್ದರು.
ಶ್ರೀ ಮಹಾಗಣಪತಿ ದೇವಸ್ಥಾನ ಸೇವಾ ಸಮಿತಿಯ ಅಧ್ಯಕ್ಷ ಶ್ರೀ ಚೌಡರೆಡ್ಡಿ, ಉಪಾಧ್ಯಕ್ಷ ಶಿವಪ್ಪ ಶಾಂತಪ್ಪನವರ, ಕಾರ್ಯದರ್ಶಿ ಶ್ರೀ ರಾಜೇಶ ಕಮಲಾಕರ ಹೆಗಡೆ, ಟ್ರಸ್ಟಿಗಳಾದ ಶ್ರೀ ಮುನಿರಾಜು, ಸುಗುಣನ್‌, ನೆತ್ರಕೆರೆ ಉದಯಶಂಕರ ಹಾಗೂ ಭಕ್ತಾದಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದ ಕೆಲವು ಚಿತ್ರಗಳು ಹಾಗೂ ವಿಡಿಯೋಗಳು ಇಲ್ಲಿವೆ.
ಚೌಕಿ ಪೂಜೆಯ ಸಂದರ್ಭದ ಗಣಪ ಸ್ತುತಿ ಇಲ್ಲಿದೆ:

ಯಕ್ಷಗಾನ ಪ್ರಾಥಮಿಕ ಅಭ್ಯಾಸದ ಒಂದು ವಿಡಿಯೋ ಕೆಳಗಿದೆ.

ದೇವರ ಸನ್ನಿಧಿಯಲ್ಲಿ ನಡೆದ ಗಣಪತಿಸ್ತುತಿಯ ವಿಡಿಯೋ ನೋಡಲು ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ. ಯೂ ಟ್ಯೂಬ್‌ ವಿಡಿಯೋ ನೋಡಲು ಯೂ ಟ್ಯೂಬ್‌ಲಿಂಕ್‌ ಕ್ಲಿಕ್‌ ಮಾಡಿರಿ: https://youtu.be/sbWyM8KaKX8

ಯಕ್ಷಗಾನ ಮಂಗಲ ಸಂದರ್ಭದ ವಿಡಿಯೋ ಇಲ್ಲಿದೆ. ನೋಡಲು ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ. ಅಥವಾ ಯೂಟ್ಯೂಬ್‌ ಲಿಂಕ್‌ ಕ್ಲಿಕ್‌ ಮಾಡಿರಿ: https://youtu.be/206hUkGzjVQ

ಇನ್ನಷ್ಟು ವಿಡಿಯೋಗಳು ಪರ್ಯಾಯ5 ಯೂಬ್‌ ಚಾನೆಲ್‌ನಲ್ಲಿಯೂ ಮೂಡಿ ಬರಲಿವೆ.

ಪ್ರತಿ ಭಾನುವಾರ ಬೆಳಗ್ಗೆ 10 ಗಂಟೆಯಿಂದ 12 ಗಂಟೆಯವರೆಗೆ ಯಕ್ಷಗಾನ ತರಗತಿಗಳು ನಡೆಯಲಿದ್ದು, ಆಸಕ್ತರು ಶ್ರೀ ಉಮೇಶರಾಜ್‌ ಮಂದಾರ್ತಿ (ಫೋನ್:‌ 9663671591)  ಅವರನ್ನು ಸಂಪರ್ಕಿಸಬಹುದು.

ಯಕ್ಷಗಾನ ಕುರಿತ ಇನ್ನಷ್ಟು ವಿಷಯಗಳಿಗೆ- ಪರ್ಯಾಯ ವೆಬ್‌ ಸೈಟಿನ ಯಕ್ಷಗಾನ/ತಾಳಮದ್ದಳೆ ಪುಟ ಕ್ಲಿಕ್‌ ಮಾಡಿರಿ. ಅಥವಾ ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ.

PARYAYA: ಯಕ್ಷಗಾನ ತರಗತಿ ಶುಭಾರಂಭ:   ಯಕ್ಷಗಾನ ತರಗತಿ ಶುಭಾರಂಭ ಯ ಕ್ಷಗಾನ ತರಗತಿ ಶುಭಾರಂಭ ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ , ವೆಂಕಟೇಶ್ವರ , ಅಭ...

Monday, October 20, 2025

PARYAYA: ದೀಪಾವಳಿ ಸಂಭ್ರಮ, ಕೇದಾರ ಗೌರಿ ವ್ರತ ಕಥಾಶ್ರವಣ

 ದೀಪಾವಳಿ ಸಂಭ್ರಮ, ಕೇದಾರ ಗೌರಿ ವ್ರತ ಕಥಾಶ್ರವಣ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಬೆಳಕಿನ ಹಬ್ಬ ದೀಪಾವಳಿಯನ್ನು ೨೦೨೫ ಅಕ್ಟೋಬರ್‌ ೨೦ರ ಸೋಮವಾರ ಸಂಭ್ರಮೋತ್ಸಾಹದೊಂದಿಗೆ ಆಚರಿಸಲಾಯಿತು.

ಕೇದಾರ ಗೌರೀ ವ್ರತ ಕಥಾಶ್ರವಣ ಸಹಿತವಾಗಿ ಲಕ್ಷ್ಮೀಪೂಜೆ, ಕೇದಾರನಾಥೇಶ್ವರ ಪೂಜೆಯನ್ನು ನೆರವೇರಿಸಲಾಯಿತು. ಭಕ್ತರು ಭಜನೆ ಹಾಡಿನೊಂದಿಗೆ, ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಿದರು.


PARYAYA: ದೀಪಾವಳಿ ಸಂಭ್ರಮ, ಕೇದಾರ ಗೌರಿ ವ್ರತ ಕಥಾಶ್ರವಣ:   ದೀಪಾವಳಿ ಸಂಭ್ರಮ, ಕೇದಾರ ಗೌರಿ ವ್ರತ ಕಥಾಶ್ರವಣ ಬೆಂ ಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನ...

Friday, October 10, 2025

PARYAYA: ಅಶ್ವಯುಜ ಮಾಸದ ಸಂಕಷ್ಟಿ ಪೂಜೆ

 ಅಶ್ವಯುಜ ಮಾಸದ ಸಂಕಷ್ಟಿ ಪೂಜೆ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ೨೦೨೫ ಅಕ್ಟೋಬರ್‌ ೧೦ರ ಶುಕ್ರವಾರ ಅಶ್ವಯುಜ ಮಾಸದ ಸಾಮೂಹಿಕ ಸಂಕಷ್ಟಿ ಪೂಜೆಯನ್ನು ಶ್ರದ್ಧಾ ಭಕ್ತಿಯೊಂದಿಗೆ ನೆರವೇರಿಸಲಾಯಿತು.

ಈ ಸಂದರ್ಭದ ಚಿತ್ರ, ವಿಡಿಯೋ (by Rashmi Rajesh Hegade) ಇಲ್ಲಿವೆ.






PARYAYA: ಅಶ್ವಯುಜ ಮಾಸದ ಸಂಕಷ್ಟಿ ಪೂಜೆ:   ಅಶ್ವಯುಜ ಮಾಸದ ಸಂಕಷ್ಟಿ ಪೂಜೆ ಬೆಂ ಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್...

Monday, October 6, 2025

PARYAYA: ಅಶ್ವಯುಜ ಮಾಸದ ಸತ್ಯನಾರಾಯಣ ಪೂಜೆ

 ಅಶ್ವಯುಜ ಮಾಸದ ಸತ್ಯನಾರಾಯಣ ಪೂಜೆ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ೨೦೨೫ ಅಕ್ಟೋಬರ್‌ ೬ರ ಸೋಮವಾರ ಅಶ್ವಯುಜ ಮಾಸದ ಸಾಮೂಹಿಕ ಸತ್ಯನಾರಾಯಣ ಪೂಜೆಯನ್ನು ಶ್ರದ್ಧಾ ಭಕ್ತಿಯೊಂದಿಗೆ ನೆರವೇರಿಸಲಾಯಿತು.

ಈ ಸಂದರ್ಭದ ಚಿತ್ರ, ವಿಡಿಯೋಗಳು ಇಲ್ಲಿವೆ.




PARYAYA: ಅಶ್ವಯುಜ ಮಾಸದ ಸತ್ಯನಾರಾಯಣ ಪೂಜೆ:   ಅಶ್ವಯುಜ ಮಾಸದ ಸತ್ಯನಾರಾಯಣ ಪೂಜೆ ಬೆಂ ಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇ...

Thursday, October 2, 2025

PARYAYA: ಮಹಾಗಣಪತಿಗೆ ಹಣ್ಣುಗಳ ಅಲಂಕಾರ

ಮಹಾಗಣಪತಿಗೆ ಹಣ್ಣುಗಳ ಅಲಂಕಾರ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶರವನ್ನವರಾತ್ರಿ ಮಹೋತ್ಸವದ ಹನ್ನೊಂದನೇ ದಿನವಾದ ೨೦೨೫ರ ಅಕ್ಟೋಬರ್ ‌೦೨ರ ಗುರುವಾರ ಶ್ರೀ ಬಾಲಾಜಿ ಮಹಾಗಣಪತಿಗೆ ಹಣ್ಣುಗಳ ಅಲಂಕಾರ.

ಮಹಿಳೆಯರಿಂದ ಸಾಮೂಹಿಕ ಭಜನಾ ಕಾರ್ಯಕ್ರಮ ನಡೆಯಿತು.

ರಾತ್ರಿ ಸಂಪೂರ್ಣ ತೈಲ ದೀಪದ ಬೆಳಕಿನಲ್ಲಿ ಮಹಾಮಂಗಳಾರತಿ ನಡೆಯಿತು.

ಶರನ್ನವರಾತ್ರಿ ಪೂಜಾ ಸಂದರ್ಭದಲ್ಲಿ ೧. ಸುಂದರ್‌ ರಾಜ್ + ಕುಟುಂಬದವರು ಗಣೇಶನಿಗೆ ಶ್ರೀಗಂಧ ಅಲಂಕಾರ, ೨. ರಶ್ಮಿ ರಾಜೇಶ  ಹೆಗಡೆ + ಕುಟುಂಬದವರು ಗಣೇಶನಿಗೆ ಅರಶಿನ ಅಲಂಕಾರ, ೩) ನೆತ್ರಕೆರೆ ಉದಯಶಂಕರ ನಾರಾಯಣ ಭಟ್+‌ ಕುಟುಂಬದವರು ಗಣೇಶನಿಗೆ ವಿಭೂತಿ ಅಲಂಕಾರ, ೪) ಶಕುಂತಲಾ ನಾಗರಾಜ್‌ + ಕುಟುಂಬದವರು- ವೆಂಕಟೇಶ್ವರನಿಗೆ ಕುಂಕುಮ ಅಲಂಕಾರ, ೫) ರಾಘವೇಂದ್ರ ಕಾಮತ್‌ + ಕುಟುಂಬದವರು –ಗಣೇಶನಿಗೆ ಅರಶಿನ – ಕುಂಕುಮ ಅಲಂಕಾರ, ೬) ಶ್ರೀ ಮುನಿರಾಜು – ಮಮತಾ + ಕುಟುಂಬದವರು ಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯರಿಗೆ ಡ್ರೈ ಫ್ರುಟ್ಸ್‌ ಅಲಂಕಾರ+ದೇವಸ್ಥಾನಕ್ಕೆ ಹೂವಿನ ಅಲಂಕಾರ, ಪ್ರಸಾದ, ೭) ಎಚ್‌ ಆರ್.‌ ಸೇತೂರಾಂ-ಶಾಂತಾ _- ಕುಟುಂಬದವರು- ಗಣೇಶನಿಗೆ ನವಧಾನ್ಯ ಅಲಂಕಾರ, ೮) ಅಲೋಕ್‌ ದಾಸ್ + ಕುಟುಂಬದವರು- ಗಣೇಶನಿಗೆ ತರಕಾರಿ ಅಲಂಕಾರ,
೯. ಗೌರವ್‌ ಮತ್ತು ಕುಟುಂಬ, ಗೀತಾ ಎಚ್.ವಿ. ಉದಯಶಂಕರ್‌ + ಕುಟುಂಬದವರು ಆಂಜನೇಯನಿಗೆ ನಾಣ್ಯ ಅಲಂಕಾರ, ಪ್ರಸಾದ, ೧೦.ತೇಜಸ್‌ ರೆಡ್ಡಿ + ಕುಟುಂಬದವರು ಗಣೇಶನಿಗೆ ಖರ್ಜೂರ ಅಲಂಕಾರ, ೧೧. ಸತ್ಯನಾರಾಯಣ + ಕುಟುಂಬದವರು ಗಣೇಶನಿಗೆ ಹಣ್ಣುಗಳ ಅಲಂಕಾರ ಸೇವೆ ಒದಗಿಸಿದ್ದರು.

ಈ ಅವಧಿಯಲ್ಲಿ ಈ ಎಲ್ಲ ಸೇವಾಕರ್ತರ ಅಲಂಕಾರ+ ಪ್ರಸಾದ ಸೇವೆಯ ಜೊತೆಗೆ ವಿಸ್ಮಯ್‌ ಮತ್ತು ಕುಟುಂಬ, ಉಮಾ ಜಯಶಂಕರ್‌ ಮತ್ತು ಕುಟುಂಬ, ಕೃಷ್ಣೋಜಿ ರಾವ್‌ ಮತ್ತು ಕುಟುಂಬ, ದಾಮೋದರ್‌ ಮತ್ತು ಕುಟುಂಬ, ರವಿಚಂದ್ರನ್‌ ಮತ್ತು ಕುಟುಂಬ, ಮನೋಹರ್‌ ಮತ್ತು ಕುಟುಂಬ, ರಮೇಶ ಜಿ ಮತ್ತು ಕುಟುಂಬ,  ಶ್ರೀನಿವಾಸ ಶಾಸ್ತ್ರಿ ಮತ್ತು ಕುಟುಂಬ, ಮೂಲ್ಯ ಮತ್ತು ಕುಟುಂಬದವರು ಪ್ರಸಾದ ಸೇವೆಯನ್ನು ಒದಗಿಸಿದ್ದರು.

PARYAYA: ಮಹಾಗಣಪತಿಗೆ ಹಣ್ಣುಗಳ ಅಲಂಕಾರ: ಮಹಾಗಣಪತಿಗೆ ಹಣ್ಣುಗಳ ಅಲಂಕಾರ ಬೆಂ ಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾ...

Wednesday, October 1, 2025

PARYAYA: ಖರ್ಜೂರ ಅಲಂಕಾರದಲ್ಲಿ ಕಂಗೊಳಿಸಿದ ಗಣಪ

 ಖರ್ಜೂರ ಅಲಂಕಾರದಲ್ಲಿ ಕಂಗೊಳಿಸಿದ ಗಣಪ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶರವನ್ನವರಾತ್ರಿ ಮಹೋತ್ಸವದ ಹತ್ತನೇ ದಿನವಾದ ೨೦೨೫ರ ಅಕ್ಟೋಬರ್ ‌೦೧ರ ಬುಧವಾರ ಶ್ರೀ ಬಾಲಾಜಿ ಮಹಾಗಣಪತಿಗೆ ಖರ್ಜೂರ ಅಲಂಕಾರ.

ಮಹಿಳೆಯರಿಂದ ಸಾಮೂಹಿಕ ಭಜನಾ ಕಾರ್ಯಕ್ರಮ ನಡೆಯಿತು.

ರಾತ್ರಿ ಸಂಪೂರ್ಣ ತೈಲ ದೀಪದ ಬೆಳಕಿನಲ್ಲಿ ಮಹಾಮಂಗಳಾರತಿ ನಡೆಯಿತು.


PARYAYA: ಖರ್ಜೂರ ಅಲಂಕಾರದಲ್ಲಿ ಕಂಗೊಳಿಸಿದ ಗಣಪ:   ಖರ್ಜೂರ ಅಲಂಕಾರದಲ್ಲಿ ಕಂಗೊಳಿಸಿದ ಗಣಪ ಬೆಂ ಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮ...

PARYAYA: ಅಭಯ ಆಂಜನೇಯನಿಗೆ ನಾಣ್ಯ ಅಲಂಕಾರ

 ಅಭಯ ಆಂಜನೇಯನಿಗೆ ನಾಣ್ಯ ಅಲಂಕಾರ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶರವನ್ನವರಾತ್ರಿ ಮಹೋತ್ಸವ ಒಂಭತ್ತನೇ ದಿನವಾದ ೨೦೨೫ರ ಸೆಪ್ಟೆಂಬರ್‌ ೩೦ರ ಮಂಗಳವಾರ ಶ್ರೀ ಅಭಯ ಆಂಜನೇಯ ಸ್ವಾಮಿಗೆ ನಾಣ್ಯಗಳ ಅಲಂಕಾರ.

ಮಹಿಳೆಯರಿಂದ ಭಜನಾ ಸೇವೆ ನೆರವೇರಿತು.

ರಾತ್ರಿ ಸಂಪೂರ್ಣ ತೈಲ ದೀಪದ ಬೆಳಕಿನಲ್ಲಿ ಮಹಾಮಂಗಳಾರತಿ ನಡೆಯಿತು.


PARYAYA: ಅಭಯ ಆಂಜನೇಯನಿಗೆ ನಾಣ್ಯ ಅಲಂಕಾರ:   ಅಭಯ ಆಂಜನೇಯನಿಗೆ ನಾಣ್ಯ ಅಲಂಕಾರ ಬೆಂ ಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವ...

Monday, September 29, 2025

PARYAYA: ಗಣಪನಿಗೆ ತರಕಾರಿ ಅಲಂಕಾರ

 ಗಣಪನಿಗೆ ತರಕಾರಿ ಅಲಂಕಾರ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶರವನ್ನವರಾತ್ರಿ ಮಹೋತ್ಸವ ಎಂಟನೇ ದಿನವಾದ ೨೦೨೫ರ ಸೆಪ್ಟೆಂಬರ್‌ ೨೯ರ ಸೋಮವಾರ ಶ್ರೀ ಬಾಲಾಜಿ ಮಹಾಗಣಪತಿಗೆ ತರಕಾರಿ ಅಲಂಕಾರ.

ಮಹಿಳೆಯರಿಂದ ಸಾಮೂಹಿಕ ಭಜನಾ ಕಾರ್ಯಕ್ರಮ ನಡೆಯಿತು.



ರಾತ್ರಿ ಸಂಪೂರ್ಣ ತೈಲ ದೀಪದ ಬೆಳಕಿನಲ್ಲಿ ಮಹಾಮಂಗಳಾರತಿ ನಡೆಯಿತು.

PARYAYA: ಗಣಪನಿಗೆ ತರಕಾರಿ ಅಲಂಕಾರ:   ಗಣಪನಿಗೆ ತರಕಾರಿ ಅಲಂಕಾರ ಬೆಂ ಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದ...

Sunday, September 28, 2025

PARYAYA: ಬಾಲಾಜಿ ಗಣಪನಿಗೆ ನವಧಾನ್ಯ ಅಲಂಕಾರ

 ಬಾಲಾಜಿ ಗಣಪನಿಗೆ ನವಧಾನ್ಯ ಅಲಂಕಾರ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶರವನ್ನವರಾತ್ರಿ ಮಹೋತ್ಸವ ಏಳನೇ ದಿನವಾದ ೨೦೨೫ರ ಸೆಪ್ಟೆಂಬರ್‌ ೨೮ರ ಭಾನುವಾರ ಶ್ರೀ ಬಾಲಾಜಿ ಮಹಾಗಣಪತಿಗೆ ನವಧಾನ್ಯ ಅಲಂಕಾರ.

ಮಹಿಳೆಯರಿಂದ ಸಾಮೂಹಿಕ ಭಜನಾ ಕೈಂಕರ್ಯ ನೆರವೇರಿತು.

ರಾತ್ರಿ ಸಂಪೂರ್ಣ ತೈಲ ದೀಪದ ಬೆಳಕಿನಲ್ಲಿ ಮಹಾಮಂಗಳಾರತಿ ನಡೆಯಿತು.



PARYAYA: ಬಾಲಾಜಿ ಗಣಪನಿಗೆ ನವಧಾನ್ಯ ಅಲಂಕಾರ:   ಬಾಲಾಜಿ ಗಣಪನಿಗೆ ನವಧಾನ್ಯ ಅಲಂಕಾರ ಬೆಂ ಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದ...

Saturday, September 27, 2025

PARYAYA: ತ್ರಿಮೂರ್ತಿಗಳಿಗೆ ಒಣಹಣ್ಣುಗಳ (ಡ್ರೈ ಫ್ರುಟ್ಸ್‌) ಅಲಂಕಾರ

 ತ್ರಿಮೂರ್ತಿಗಳಿಗೆ ಒಣಹಣ್ಣುಗಳ (ಡ್ರೈ ಫ್ರುಟ್ಸ್‌) ಅಲಂಕಾರ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶರವನ್ನವರಾತ್ರಿ ಮಹೋತ್ಸವ ಆರನೇ ದಿನವಾದ ೨೦೨೫ರ ಸೆಪ್ಟೆಂಬರ್‌ ೨೭ರ ಶನಿವಾರ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ ಮತ್ತು ಅಭಯ ಆಂಜನೇಯ ಸ್ವಾಮಿಗೆ ಒಣ್ಣ ಹಣ್ಣುಗಳ (ಡ್ರೈ ಫ್ರುಟ್ಸ್‌) ಅಲಂಕಾರ.

ರಾತ್ರಿ ಸಂಪೂರ್ಣ ತೈಲ ದೀಪದ ಬೆಳಕಿನಲ್ಲಿ ಮಹಾಮಂಗಳಾರತಿ ನಡೆಯಿತು. 





PARYAYA: ತ್ರಿಮೂರ್ತಿಗಳಿಗೆ ಒಣಹಣ್ಣುಗಳ (ಡ್ರೈ ಫ್ರುಟ್ಸ್‌) ಅಲಂಕಾರ:   ತ್ರಿಮೂರ್ತಿಗಳಿಗೆ ಒಣಹಣ್ಣುಗಳ  (ಡ್ರೈ ಫ್ರುಟ್ಸ್‌)   ಅಲಂಕಾರ ಬೆಂ ಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್...

Friday, September 26, 2025

PARYAYA: ಮಹಾಗಣಪತಿಗೆ ಕುಂಕುಮ-ಅರಶಿನ ಅಲಂಕಾರ

 ಮಹಾಗಣಪತಿಗೆ ಕುಂಕುಮ-ಅರಶಿನ ಅಲಂಕಾರ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶರವನ್ನವರಾತ್ರಿ ಮಹೋತ್ಸವ ಐದನೇ ದಿನವಾದ ೨೦೨೫ರ ಸೆಪ್ಟೆಂಬರ್‌ ೨೬ರ ಶುಕ್ರವಾರ ಶ್ರೀ ಬಾಲಾಜಿ ಮಹಾಗಣಪತಿಗೆ ಕುಂಕುಮ-ಅರಶಿನ ಅಲಂಕಾರ.


ಮಹಿಳೆಯರಿಂದ ಸಾಮೂಹಿಕ ಕುಂಕುಮಾರ್ಚನೆ ನಡೆಯಿತು.




ರಾತ್ರಿ ಸಂಪೂರ್ಣ ತೈಲ ದೀಪದ ಬೆಳಕಿನಲ್ಲಿ ಮಹಾಮಂಗಳಾರತಿ ನಡೆಯಿತು.
PARYAYA: ಮಹಾಗಣಪತಿಗೆ ಕುಂಕುಮ-ಅರಶಿನ ಅಲಂಕಾರ:   ಮಹಾಗಣಪತಿಗೆ ಕುಂಕುಮ-ಅರಶಿನ ಅಲಂಕಾರ ಬೆಂ ಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ...