Showing posts with label ದಂಡ. Show all posts
Showing posts with label ದಂಡ. Show all posts

Monday, October 27, 2025

PARYAYA: ಅಯೋಧ್ಯೆ ತೀರ್ಪು ರದ್ದು ಕೋರಿಕೆ: ವಕೀಲರಿಗೆ ₹6 ಲಕ್ಷ ದಂಡ

 ಅಯೋಧ್ಯೆ ತೀರ್ಪು ರದ್ದು ಕೋರಿಕೆ: ವಕೀಲರಿಗೆ ₹6 ಲಕ್ಷ ದಂಡ

ಒಂದು ಭಾಷಣದಲ್ಲಿ ಸುಪ್ರೀಂಕೋರ್ಟಿನ ಮಾಜಿ ಮುಖ್ಯ ನ್ಯಾಯಮೂರ್ತಿ (CJI) ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರು ನೀಡಿದ ಹೇಳಿಕೆಯನ್ನು ಉಲ್ಲೇಖಿಸಿ, 2019ರ ಅಯೋಧ್ಯೆ ತೀರ್ಪನ್ನು ರದ್ದುಪಡಿಸುವಂತೆ ಮನವಿ ಸಲ್ಲಿಸಿದ್ದ ವಕೀಲ ಮೆಹಮೂದ್ ಪ್ರಾಚಾ ಅವರಿಗೆ ದೆಹಲಿ ನ್ಯಾಯಾಲಯವು ಬರೋಬ್ಬರಿ ಲಕ್ಷ ರೂಪಾಯಿ ದಂಡ ವಿಧಿಸಿದೆ.

ಈ ಅರ್ಜಿಯನ್ನು 'ಫಲಹೀನ ಮತ್ತು ಐಷಾರಾಮಿ ವ್ಯಾಜ್ಯ' (frivolous and luxurious litigation) ಎಂದು ಕರೆದ ಪಟಿಯಾಲಾ ಹೌಸ್ ಕೋರ್ಟಿನ ಜಿಲ್ಲಾ ನ್ಯಾಯಾಧೀಶ ಧರ್ಮೇಂದರ್ ರಾಣಾ ಅವರುಕೆಳ ನ್ಯಾಯಾಲಯವು ಪ್ರಾಚಾ ಅವರಿಗೆವಿಧಿಸಿದ್ದ ಲಕ್ಷ ರೂಪಾಯಿ ದಂಡವನ್ನು ಎತ್ತಿಹಿಡಿದುಹೆಚ್ಚುವರಿಯಾಗಿ ಲಕ್ಷ ರೂಪಾಯಿ ದಂಡ ವಿಧಿಸಿದ್ದಾರೆ.

ದಂಡ ವಿಧಿಸಿದ್ದು ಏಕೆ?

ಆರು ಲಕ್ಷ ರೂಪಾಯಿ ದಂಡವನ್ನು 30 ದಿನಗಳೊಳಗೆ ದೆಹಲಿ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ (DLSA) ಜಮಾ ಮಾಡಬೇಕು ಎಂದು ಆದೇಶಿಸಿರುವ ನ್ಯಾಯಾಧೀಶರು, "ಕಿರಿಯ ನ್ಯಾಯಾಲಯವು ವಿಧಿಸಿದ್ದ ದಂಡವು ನಿರೋಧಕ ಪರಿಣಾಮವನ್ನು (deterrent effectಸಾಧಿಸುವ ಉದ್ದೇಶಿತ ಗುರಿಯನ್ನು ಸಾಧಿಸುವಲ್ಲಿ ಸ್ಪಷ್ಟವಾಗಿ ವಿಫಲವಾಗಿದೆ. ಆದ್ದರಿಂದಫಲಹೀನ ಮತ್ತು ಐಷಾರಾಮಿ ವ್ಯಾಜ್ಯದ ಪಿಡುಗನ್ನು ಪರಿಣಾಮಕಾರಿಯಾಗಿ ಪರಿಶೀಲಿಸಲು ಮತ್ತು ಅಪೇಕ್ಷಿತ ಫಲಿತಾಂಶಗಳನ್ನು ಪಡೆಯಲು ದಂಡದ ಮೊತ್ತವನ್ನು ಸೂಕ್ತವಾಗಿ ಹೆಚ್ಚಿಸಬೇಕೆಂಬುದನ್ನು ನಾನು ಪರಿಗಣಿಸಿದ್ದೇನೆ," ಎಂದು ಹೇಳಿದ್ದಾರೆ.

ಪ್ರಾಚಾ ಅವರ ವಾದವೇನು?

ಪ್ರಾಚಾ ಅವರು ಅಯೋಧ್ಯೆ ತೀರ್ಪನ್ನು ಶೂನ್ಯ ಮತ್ತು ಅನೂರ್ಜಿತ ಎಂದು ಘೋಷಿಸಲು ಮತ್ತು ಸುಪ್ರೀಂ ಕೋರ್ಟಿನಲ್ಲಿ ದಾಖಲಾದ ಸಿವಿಲ್ ಮೇಲ್ಮನವಿಗಳನ್ನು ಹೊಸದಾಗಿ ವಿಚಾರಣೆ ಮಾಡಲು ಕೋರಿ ಸಿವಿಲ್ ಮೊಕದ್ದಮೆ ಹೂಡಿದ್ದರು. ಈ ಮೊಕದ್ದಮೆಯನ್ನು ಏಪ್ರಿಲಿನಲ್ಲಿ ವಿಚಾರಣಾ ನ್ಯಾಯಾಲಯವು ಲಕ್ಷ  ರೂಪಾಯಿ ದಂಡದೊಂದಿಗೆ ವಜಾಗೊಳಿಸಿತ್ತು.

ಪ್ರಾಚಾ ಅವರು ತೀರ್ಪಿನ ಅರ್ಹತೆಯನ್ನು (meritsಪ್ರಶ್ನಿಸದೆನ್ಯಾಯಾಧೀಶರಾದ ಚಂದ್ರಚೂಡ್ ಅವರು ತೀರ್ಪು ಬರೆದವರಲ್ಲಿ ಲ್ಲಿ ಒಬ್ಬರಾಗಿದ್ದುಅವರೇ ತಮ್ಮ ಭಾಷಣವೊಂದರಲ್ಲಿ "ತಮ್ಮ ಮುಂದೆ ವಾದ ಮಂಡಿಸಿದ ಕಕ್ಷಿದಾರರೇ (litigant) ತಮಗೆ ಮಾರ್ಗ ತೋರಿಸಿದರು" ಎಂದು ಒಪ್ಪಿಕೊಂಡಿರುವುದರಿಂದ ತೀರ್ಪು ವಂಚನೆಯ ಆಧಾರದ (on the ground of fraud) ಮೇಲೆ ದೋಷಪೂರಿತವಾಗಿದೆ ಎಂದು ವಾದಿಸಿದ್ದರು.

ಮಾಜಿ ಸಿಜೆಐ ಚಂದ್ರಚೂಡ್ ಅವರು ಅಯೋಧ್ಯೆ ಪ್ರಕರಣವನ್ನು ಪರಿಹರಿಸಲು ತಾವು ದೇವರಿಗೆ ಪ್ರಾರ್ಥನೆ ಸಲ್ಲಿಸಿದ್ದಾಗಿ ಹೇಳಿದ್ದ ಉಲ್ಲೇಖವೇ ಈ ವಾದಕ್ಕೆ ಕಾರಣವಾಗಿತ್ತು. ಇಂತಹ ಪರಿಸ್ಥಿತಿಯು **'ಕಾನೂನುಬಾಹಿರ ಹಸ್ತಕ್ಷೇಪ'**ಕ್ಕೆ ಸಮನಾಗಿದೆ. ಆದ್ದರಿಂದ ತೀರ್ಪು ವಂಚನೆಯ ಆಧಾರದ ಮೇಲೆ ದೋಷಪೂರಿತವಾಗಿದೆ ಎಂದು ಪ್ರಾಚಾ ಪ್ರತಿಪಾದಿಸಿದ್ದರು.

ಕೋರ್ಟ್‌ನ ತೀಕ್ಷ್ಣ ಪ್ರತಿಕ್ರಿಯೆ

ಪ್ರಾಚಾ ಅವರ ಮನವಿಯನ್ನು ವಜಾಗೊಳಿಸಿದ ನ್ಯಾಯಾಧೀಶ ರಾಣಾ ಅವರುಜಸ್ಟಿಸ್ ಚಂದ್ರಚೂಡ್ ಅವರ ಭಾಷಣವನ್ನು ಉಲ್ಲೇಖಿಸಿʼಅವರು ಸರ್ವೋಚ್ಚ ಶಕ್ತಿಯಲ್ಲಿ (Supreme Being) ಮಾರ್ಗ ತೋರಿಸುವಂತೆ ಪ್ರಾರ್ಥಿಸಿದ್ದರು. ಆದರೆ ಅಯೋಧ್ಯೆ ಪ್ರಕರಣದಲ್ಲಿ ಅವರ ಮುಂದೆ ವಾದ ಮಂಡಿಸಿದ ಕಕ್ಷಿದಾರರು ಆ ಸರ್ವೋಚ್ಚ ಶಕ್ತಿಯಿಂದ ಭಿನ್ನವಾದ 'ಕಾನೂನು ವ್ಯಕ್ತಿತ್ವ' (Juristic Personality) ಹೊಂದಿದ್ದಾರೆʼ ಎಂದು ಹೇಳಿದರು.

"ಮೇಲ್ಮನವಿದಾರರು 'ಸರ್ವೋಚ್ಚ ದೇವರುಮತ್ತು ನ್ಯಾಯಾಲಯದ ಮುಂದೆ ವ್ಯಾಜ್ಯ ಹೂಡಿದ 'ಕಾನೂನು ವ್ಯಕ್ತಿತ್ವದನಡುವಿನ ಸೂಕ್ಷ್ಮ ವ್ಯತ್ಯಾಸವನ್ನು ಬಹುಶಃ ಕಾನೂನು ಮತ್ತು ಧರ್ಮದ ಬಗ್ಗೆ ತಪ್ಪು ತಿಳುವಳಿಕೆಯಿಂದಾಗಿ ಗ್ರಹಿಸುವಲ್ಲಿ ವಿಫಲರಾಗಿದ್ದಾರೆ. ಮೇಲ್ಮನವಿದಾರರು ಅಯೋಧ್ಯೆ ಪ್ರಕರಣದ ತೀರ್ಪನ್ನು ಓದುವ ಗೋಜಿಗೆ ಹೋಗಿಲ್ಲವೆಂದು ತೋರುತ್ತಿದೆಇಲ್ಲದಿದ್ದರೆ ಇಂತಹ ಗೊಂದಲ ಅವರಿಗೆ ಉಂಟಾಗುತ್ತಿರಲಿಲ್ಲ," ಎಂದು ನ್ಯಾಯಾಲಯವು ತೀಕ್ಷ್ಣವಾಗಿ ಪ್ರತಿಕ್ರಿಯಿಸಿತು.

"ಸರ್ವಶಕ್ತನಿಂದ ಮಾರ್ಗದರ್ಶನ ಪಡೆಯುವುದನ್ನು ಕಾನೂನಿನಲ್ಲಿ ಅಥವಾ ಯಾವುದೇ ಧರ್ಮದಲ್ಲಿ ಅನ್ಯಾಯದ ಲಾಭ ಪಡೆಯಲು ಮಾಡಿದ ವಂಚಕ ಕೃತ್ಯ ಎಂದು ನಿಂದಿಸಲಾಗದು. ಆದ್ದರಿಂದಮೇಲ್ಮನವಿದಾರರ ಹೇಳಿಕೆಗಳನ್ನು ನಂಬಿದರೂ ಸಹಮನವಿಯು ಯಾವುದೇ ಕಾನೂನುಬದ್ಧ ಕಾರಣವನ್ನು (cause of action) ಹೊಂದಿದೆ ಎಂದು ವಾದಿಸಲು ಅವಕಾಶವಿಲ್ಲ. ಹೀಗಾಗಿಅವರ ಮೊಕದ್ದಮೆಯನ್ನು ವಜಾಗೊಳಿಸಿದ ಕೆಳ ನ್ಯಾಯಾಲಯದ ವಿಧಾನದಲ್ಲಿ ಯಾವುದೇ ದೋಷವಿಲ್ಲ" ಎಂದು ನ್ಯಾಯಾಲಯ ಹೇಳಿತು.

"ಪರಿಹಾರವಾಗಲಿಲ್ಲ, ಸಮಸ್ಯೆಯಾದರು"

ಪ್ರಾಚಾ ಅವರು ಮಾಜಿ ಸಿಜೆಐ ಚಂದ್ರಚೂಡ್ ಅವರನ್ನು ವೈಯಕ್ತಿಕವಾಗಿ ವಿಚಾರಣೆಗೆ ಕರೆಯಬೇಕು ಮತ್ತು ಅವರನ್ನು ಈ ಪ್ರಕರಣದಲ್ಲಿ ಕಕ್ಷಿದಾರರನ್ನಾಗಿ ಮಾಡಬೇಕು ಎಂದು ಒತ್ತಾಯಿಸಿದ್ದನ್ನು ನ್ಯಾಯಾಧೀಶರು ತಳ್ಳಿಹಾಕಿದರು. ಮಾಜಿ ಸಿಜೆಐ ಅವರನ್ನು ಕಕ್ಷಿದಾರರನ್ನಾಗಿ ಮಾಡುವುದು ಕಾನೂನಿಗೆ ವಿರುದ್ಧವಾಗಿದೆ ಮತ್ತು ಪ್ರಾಚಾ ಅವರು 'ದುರುದ್ದೇಶಪೂರಿತ ಉದ್ದೇಶದಿಂದ' (oblique intent) ಪ್ರೇರಿತರಾಗಿದ್ದಾರೆ ಎಂದು ಕೋರ್ಟ್ ಹೇಳಿತು.

"ಸಾರ್ವಜನಿಕ ಸೇವಕರು ನಿವೃತ್ತರಾದ ನಂತರ ಅವರನ್ನು ಗುರಿಯಾಗಿಸುವ ಒಂದು ನಕಾರಾತ್ಮಕ ಪ್ರವೃತ್ತಿ ಇತ್ತೀಚೆಗೆ ಕಂಡುಬರುತ್ತಿದೆ. ಮಾಜಿ ಸಾರ್ವಜನಿಕ ಸೇವಕರು ತಮ್ಮ ಕಚೇರಿಯಿಂದ ನಿರ್ಗಮಿಸಿದ ನಂತರ ದುರ್ಬಲರಾಗುತ್ತಾರೆ ಮತ್ತು ಎಲ್ಲಾ ರೀತಿಯ ದುರುದ್ದೇಶಪೂರಿತ ದಾಳಿಗೆ ಗುರಿಯಾಗುತ್ತಾರೆ ಎಂಬ ತಪ್ಪು ಕಲ್ಪನೆಯನ್ನು ಕೆಲವು ನಿರ್ಲಜ್ಜ ವ್ಯಾಜ್ಯದಾರರು ಪೋಷಿಸುತ್ತಾರೆ," ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟರು.

"ಸಂರಕ್ಷಕನೇ ಪರಭಕ್ಷಕನಾದಾಗ (predator) ಪರಿಸ್ಥಿತಿ ತೀವ್ರ ತಳಮಳಕ್ಕೆ ಕಾರಣವಾಗುತ್ತದೆ. ಈ ಪ್ರಕರಣದಲ್ಲಿಮೇಲ್ಮನವಿದಾರರು ಸಾಕಷ್ಟು ಹಿರಿಯ ವಕೀಲರಾಗಿದ್ದರೂ ತಪ್ಪು ಮಾರ್ಗವನ್ನು ಆರಿಸಿಕೊಂಡಿದ್ದಾರೆ. ಪರಿಹಾರದಲ್ಲಿ ಭಾಗಿಯಾಗುವ ಬದಲುಸಮಸ್ಯೆಯನ್ನು ಹೆಚ್ಚಿಸಲು ಆರಿಸಿಕೊಂಡಿದ್ದಾರೆ. ಮೇಲ್ಮನವಿದಾರರು ಸುಳ್ಳು ಮತ್ತು ಫಲಹೀನ ಮೊಕದ್ದಮೆಯನ್ನು ಹೂಡಿದ್ದಲ್ಲದೆಸಂಪೂರ್ಣವಾಗಿ ಐಷಾರಾಮಿ ಮತ್ತು ಫಲಹೀನವಾದ ಮೇಲ್ಮನವಿಯನ್ನು ಸಹ ಸಲ್ಲಿಸಿದ್ದಾರೆ," ಎಂದು ನ್ಯಾಯಾಧೀಶರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಮಾಹಿತಿ ಮೂಲ: (ಲೈವ್‌ ಲಾ ವರದಿ)

PARYAYA: ಅಯೋಧ್ಯೆ ತೀರ್ಪು ರದ್ದು ಕೋರಿಕೆ: ವಕೀಲರಿಗೆ ₹6 ಲಕ್ಷ ದಂಡ:   ಅಯೋಧ್ಯೆ ತೀರ್ಪು ರದ್ದು ಕೋರಿಕೆ: ವಕೀಲ ರಿಗೆ ₹6 ಲಕ್ಷ ದಂಡ ಒಂ ದು ಭಾಷಣದಲ್ಲಿ ಸುಪ್ರೀಂಕೋರ್ಟಿನ ಮಾಜಿ ಮುಖ್ಯ ನ್ಯಾಯಮೂರ್ತಿ ( CJI) ನ್ಯಾಯಮೂರ್ತಿ ಡಿ.ವೈ. ಚಂದ್...

Saturday, July 5, 2025

PARYAYA: ಚಿಕಿತ್ಸೆಯಲ್ಲಿ ವಿಳಂಬ ಸೇವಾಲೋಪ: ಖಾಸಗಿ ವೈದ್ಯರಿಗೆ ₹20 ಲ...

 ಚಿಕಿತ್ಸೆಯಲ್ಲಿ ವಿಳಂಬ ಸೇವಾಲೋಪ: ಖಾಸಗಿ ವೈದ್ಯರಿಗೆ ₹20 ಲಕ್ಷ ದಂಡ

ತಿರುವಾರೂರು: ತಿರುವಾರೂರು ಜಿಲ್ಲಾ ಗ್ರಾಹಕ ನ್ಯಾಯಾಲಯವು (ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆ) ಒಂದು ಮಹತ್ವದ ಆದೇಶ ಹೊರಡಿಸಿದೆ. ಚಿಕಿತ್ಸೆಯಲ್ಲಿ ವಿಳಂಬವಾದುದನ್ನು ಸೇವಾ ನ್ಯೂನತೆ ಎಂಬುದಾಗಿ ಪರಿಗಣಿಸಿ ಸರ್ಕಾರಿ ವೈದ್ಯರೊಬ್ಬರ ತಂದೆಯ ಸಾವಿಗೆ ಕಾರಣರಾದುದಕ್ಕಾಗಿ ₹20 ಲಕ್ಷ ಪರಿಹಾರ ನೀಡುವಂತೆ ಖಾಸಗಿ ವೈದ್ಯರೊಬ್ಬರಿಗೆ ಆದೇಶ ನೀಡಿದೆ.

ಪ್ರಕರಣದ ಹಿನ್ನೆಲೆ

ಈ ಪ್ರಕರಣವು 2022ರಲ್ಲಿ ನಡೆದ ಘಟನೆಗೆ ಸಂಬಂಧಿಸಿದೆ. ಸರ್ಕಾರಿ ವೈದ್ಯರ ತಂದೆ, 67 ವರ್ಷದವರಾಗಿದ್ದುಅವರಿಗೆ ಕ್ಷಯ ರೋಗಕ್ಕೆ ಚಿಕಿತ್ಸೆಯಾಗಿ 2022ರ ಜುಲೈನಲ್ಲಿ ಬೆನ್ನುಮೂಳೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು.

ಶಸ್ತ್ರಚಿಕಿತ್ಸೆ ಆದ ಕೆಲವೇ ವಾರಗಳಲ್ಲಿ ಅವರ ಆರೋಗ್ಯ ಹದಗೆಟ್ಟಿತು. ಆಗ ಅವರ ಮಗ 2022ರ ಆಗಸ್ಟ್ 8ರಂದು ರಕ್ತದ ಮಾದರಿಗಳನ್ನು ತಿರುವಾರೂರಿನ ಖಾಸಗಿ ಲ್ಯಾಬೋರೇಟರಿಗೆ ಕಳುಹಿಸಿದ್ದರು.

ಚಿಕಿತ್ಸೆಯಲ್ಲಿ ವಿಳಂಬ ಮತ್ತು ಸಾವು

ಪರೀಕ್ಷಾ ವರದಿಗಳಲ್ಲಿ ಅವರಿಗೆ ಕಾಮಾಲೆ (jaundice) ಇರುವುದು ದೃಢಪಟ್ಟಿತು. ಕೂಡಲೇ, 2022ರ ಆಗಸ್ಟ್ 9ರಂದು ಬೆಗ್ಗೆ ಸುಮಾರು 9:30ಕ್ಕೆ ತಿರುವಾರೂರಿನ ಕಮಲಾಲಯಂ ಟ್ಯಾಂಕ್ ಬಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು.

ಆಸ್ಪತ್ರೆಗೆ ದಾಖಲಾದ ನಂತರರೋಗಿಯ ರಕ್ತದ ಮಾದರಿಗಳನ್ನು ಮತ್ತೆ ಸಂಗ್ರಹಿಸಿ ಅದೇ ಲ್ಯಾಬೋರೇಟರಿಗೆ ಮಧ್ಯಾಹ್ನ 3:30ರ ವೇಳೆಗೆ ಕಳುಹಿಸಲಾಯಿತು.

ಈ ನಡುವೆರೋಗಿಯ ಸ್ಥಿತಿ ಇನ್ನಷ್ಟು ಬಿಗಡಾಯಿಸಿತು. ಖಾಸಗಿ ವೈದ್ಯರು ಆಗಸ್ಟ್ 9ರ ರಾತ್ರಿ ರೋಗಿಯನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿದರು. ತಕ್ಷಣ ತಿರುಚಿಯಲ್ಲಿರುವ ಮತ್ತೊಂದು ಖಾಸಗಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕರೆದುಕೊಂಡು ಹೋಗಲು ಸಲಹೆ ನೀಡಿದರು.

ರೋಗಿಯನ್ನು ತಕ್ಷಣ ತಿರುಚಿಗೆ ಕರೆದೊಯ್ದು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆದುರದೃಷ್ಟವಶಾತ್ ಆಗಸ್ಟ್ 14ರಂದು ಅವರು ಮೃತರಾದರು.

ಗ್ರಾಹಕ ನ್ಯಾಯಾಲಯದ ಮೊರೆ

ತಿರುವಾರೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವಲ್ಲಿ ಆದ 'ವಿಳಂಬ'ದಿಂದ ಅಸಮಾಧಾನಗೊಂಡ ಸರ್ಕಾರಿ ವೈದ್ಯರುಈ ವರ್ಷದ ಜನವರಿಯಲ್ಲಿ ತಿರುವಾರೂರು ಜಿಲ್ಲಾ ಗ್ರಾಹಕ ನ್ಯಾಯಾಲಯಕ್ಕೆ ದೂರು ಸಲ್ಲಿಸಿದರು. ಖಾಸಗಿ ವೈದ್ಯರ 'ಸೇವಾ ನ್ಯೂನತೆ'ಯಿಂದ ತಮಗೆ ಉಂಟಾದ ಮಾನಸಿಕ ತೊಂದರೆ ಮತ್ತು ಒತ್ತಡಕ್ಕೆ ಪರಿಹಾರ ನೀಡುವಂತೆ ಕೋರಿದರು.

ಗ್ರಾಹಕ ನ್ಯಾಯಾಲಯವು ಚೆನ್ನೈ ರಾಜೀವ್ ಗಾಂಧಿ ಸರ್ಕಾರಿ ಜನರಲ್ ಆಸ್ಪತ್ರೆಯ ಹೆಪಟಾಲಜಿಸ್ಟ್‌ಗಳ (ಯಕೃತ್ ತಜ್ಞರು) ತಂಡದಿಂದ ಅಭಿಪ್ರಾಯಗಳನ್ನು ಪಡೆದುಕೊಂಡಿತು. ತಜ್ಞರ ವರದಿಗಳು ಮತ್ತು 2022ರ ಆಗಸ್ಟ್‌ 14ರಂದು ರೋಗಿಯ ಮರಣಕ್ಕೆ ಕಾರಣವಾದ ಘಟನೆಗಳ ವಿವರಗಳನ್ನು ಪರಿಶೀಲಿಸಿದ ನಂತರಅಧ್ಯಕ್ಷರಾದ ಮೋಹನ್‌ದಾಸ್ ಮತ್ತು ಸದಸ್ಯರಾದ ಬಾಲು ನೇತೃತ್ವದ ನ್ಯಾಯಾಲಯವುಖಾಸಗಿ ವೈದ್ಯರಿಂದ 'ಸೇವಾ ನ್ಯೂನತೆಆಗಿದೆ ಎಂದು ತೀರ್ಮಾನಿಸಿತು.

ನ್ಯಾಯಾಲಯದ ಆದೇಶ

ಆದ್ದರಿಂದನ್ಯಾಯಾಲಯವು ಸರ್ಕಾರಿ ವೈದ್ಯರಿಗೆ ₹20 ಲಕ್ಷ ಪರಿಹಾರದ ಜೊತೆಗೆವ್ಯಾಜ್ಯದ ವೆಚ್ಚವಾಗಿ ₹10,000 ಪಾವತಿ ಮಾಡುವಂತೆ ಖಾಸಗಿ ಆ ವೈದ್ಯರಿಗೆ ಆಜ್ಞಾಪಿಸಿತು. 

PARYAYA: ಚಿಕಿತ್ಸೆಯಲ್ಲಿ ವಿಳಂಬ ಸೇವಾಲೋಪ: ಖಾಸಗಿ ವೈದ್ಯರಿಗೆ ₹20 ಲ...:   ಚಿಕಿತ್ಸೆಯಲ್ಲಿ ವಿಳಂಬ ಸೇವಾಲೋಪ: ಖಾಸಗಿ ವೈದ್ಯರಿಗೆ ₹20 ಲಕ್ಷ ದಂಡ ತಿ ರುವಾರೂರು: ತಿರುವಾರೂರು ಜಿಲ್ಲಾ ಗ್ರಾಹಕ ನ್ಯಾಯಾಲಯ ವು ( ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹ...