Showing posts with label Modi. Show all posts
Showing posts with label Modi. Show all posts

Saturday, January 3, 2026

PARYAYA: ಭಾರತಕ್ಕೆ ಮರಳಿತು ಬುದ್ಧನ ಅವಶೇಷ..

 ಭಾರತಕ್ಕೆ ಮರಳಿತು ಬುದ್ಧನ ಅವಶೇಷ..

ತಮಾನಕ್ಕೂ ಅಧಿಕ ಕಾಲದ ಕಾಯುವಿಕೆಯ ನಂತರಭಗವಾನ್ ಬುದ್ಧನಿಗೆ ಸಂಬಂಧಿಸಿದ ಪವಿತ್ರ ಪಿಪ್ರಹ್ವಾ ಅವಶೇಷಗಳು (Piprahwa Relics) ಭಾರತಕ್ಕೆ ಮರಳಿವೆ.

ಈ ಕ್ಷಣ ಭಾರತೀಯರೆಲ್ಲರಿಗೂ ಹೆಮ್ಮೆಯಭಕ್ತಿಯ ಹಾಗೂ ಸಾಂಸ್ಕೃತಿಕ ಭಾವೈಕ್ಯತೆಯ ಕ್ಷಣ. ದೆಹಲಿಯಲ್ಲಿ ೨೦೨೬ ಜನವರಿ ೩ರ ಶನಿವಾರ ನಡೆದ ಕಾರ್ಯಕ್ರಮದ ಪ್ರಮುಖ ಹೈಲೈಟ್ಸ್ ಇಲ್ಲಿದೆ:

  • ಭವ್ಯ ಉದ್ಘಾಟನೆ: ನವದೆಹಲಿಯ ರೈ ಪಿತೋರಾ ಸಾಂಸ್ಕೃತಿಕ ಸಂಕೀರ್ಣದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು "ದಿ ಲೈಟ್ ಅಂಡ್ ದಿ ಲೋಟಸ್: ರೆಲಿಕ್ಸ್ ಆಫ್ ದಿ ಅವೇಕನ್ಡ್ ಒನ್" ಎಂಬ ಶೀರ್ಷಿಕೆಯಡಿ ಆಯೋಜಿಸಲಾದ ಪವಿತ್ರ ಪಿಪ್ರಹ್ವಾ ಅವಶೇಷಗಳ ಬೃಹತ್ ಅಂತರರಾಷ್ಟ್ರೀಯ ಪ್ರದರ್ಶನವನ್ನು ಉದ್ಘಾಟಿಸಿದರು.
  • ಹೆಮ್ಮೆಯ ನುಡಿಗಳು: ಈ ಸಂದರ್ಭದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿಯವರು, "ಸುಮಾರು 125 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರಭಾರತದ ಪರಂಪರೆ ಮತ್ತು ಅದರ ಸಾಂಸ್ಕೃತಿಕ ಶ್ರೀಮಂತಿಕೆ ಮತ್ತೆ ತನ್ನ ತಾಯ್ನಾಡಿಗೆ ಮರಳಿದೆ," ಎಂದು ಸಂತಸ ವ್ಯಕ್ತಪಡಿಸಿದರು.
  • ಭಾರತದ ಅಸ್ಮಿತೆ: ಈ ಅವಶೇಷಗಳ ಆಗಮನವು ಕೇವಲ ಇತಿಹಾಸದ ಮರುಕಳಿಕೆಯಷ್ಟೇ ಅಲ್ಲ, ಬದಲಿಗೆ ಭಗವಾನ್ ಬುದ್ಧನ ಶಾಂತಿ ಮತ್ತು ಜ್ಞಾನದ ಸಂದೇಶವನ್ನು ಜಗತ್ತಿಗೆ ಸಾರುವ ಭಾರತದ ಸಾಂಸ್ಕೃತಿಕ ಶಕ್ತಿಯ ಸಂಕೇತ. ಈ ಸಂದರ್ಭದ ವಿಡಿಯೋ ಇಲ್ಲಿದೆ.
PARYAYA: ಭಾರತಕ್ಕೆ ಮರಳಿತು ಬುದ್ಧನ ಅವಶೇಷ..:   ಭಾರತ ಕ್ಕೆ ಮರಳಿತು ಬುದ್ಧನ ಅವಶೇಷ.. ಶ ತಮಾನಕ್ಕೂ ಅಧಿಕ ಕಾಲದ ಕಾಯುವಿಕೆಯ ನಂತರ , ಭಗವಾನ್ ಬುದ್ಧನಿಗೆ ಸಂಬಂಧಿಸಿದ ಪವಿತ್ರ ಪಿಪ್ರಹ್ವಾ ಅವಶೇಷಗಳು ( Piprahwa Rel...

Tuesday, December 16, 2025

PARYAYA: ವಿಬಿ-ಜಿ ರಾಮ್‌ ಜಿ ಮಸೂದೆ ಮಂಡನೆ

 ವಿಬಿ-ಜಿ ರಾಮ್‌ ಜಿ ಮಸೂದೆ ಮಂಡನೆ

ವಿಪಕ್ಷಗಳ ತೀವ್ರ ವಿರೋಧದ ಮಧ್ಯೆ ವಿಕಸಿತ ಭಾರತ-ಗ್ಯಾರಂಟಿ ಉದ್ಯೋಗ ಮತ್ತು ಜೀವನೋಪಾಯ ಮಿಷನ್‌ (ಗ್ರಾಮೀಣ)- ʼವಿಬಿ-ಜಿ ರಾಮ್‌ ಜಿʼ ಮಸೂದೆ ೨೦೨೫ನ್ನು ಕೇಂದ್ರ ಸರ್ಕಾರವು ೨೦೨೫ ಡಿಸೆಂಬರ್‌ ೧೬ರ ಮಂಗಳವಾರ ಲೋಕಸಭೆಯಲ್ಲಿ ಮಂಡಿಸಿತು.

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ) ಹೆಸರಿನಲ್ಲಿ ಮಹಾತ್ಮ ಗಾಂಧಿ ಹೆಸರು ಕೈಬಿಟ್ಟದ್ದು, ರಾಜ್ಯಗಳ ಮೇಲೆ ಶೇಕಡಾ ೪೦ರಷ್ಟು ಹೊರೆ ಹಾಕಿರುವುದು ಸೇರಿದಂತೆ ಹಲವಾರು ವಿಷಯಗಳಿಗೆ ವಿಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತ ಪಡಿಸಿದವು.

ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು ಮಸೂದೆಯನ್ನು ಮಂಡಿಸಿದರು. ವಿಪಕ್ಷಗಳು ನೂತನ ಮಸೂದೆ ವಿರುದ್ಧ ಮಹಾತ್ಮ ಗಾಂಧಿಯವರ ಚಿತ್ರಗಳನ್ನು ಹಿಡಿದು ಮಹಾತ್ಮ ಗಾಂಧಿ ಪ್ರತಿಮೆಯ ಮುಂದೆ ಪ್ರದರ್ಶನ ನಡೆಸಿದವು.

ಈ ಹಿಂದೆ ನರೇಗಾ ಕಾಯ್ದೆಯ ಹೆಸರನ್ನು ʼಪೂಜ್ಯ ಬಾಪು ಗ್ರಾಮೀಣ ರೋಜಗಾರ್‌ ಯೋಜನೆʼ ಎಂಬುದಾಗಿ ಬದಲಿಸಲು ಕೇಂದ್ರ ನಿರ್ಧರಿಸಿತ್ತು. ಆದರೆ ಕೊನೆಗೆ ನರೇಗಾ ಕಾಯಿದೆಯನ್ನೇ ಹಿಂಪಡೆದು ಹೊಸ ಮಸೂದೆಯನ್ನು ಮಂಡಿಸಿದೆ.

ಮಸೂದೆ ಮಂಡನೆ ಆಗುತ್ತಿದ್ದಂತೆಯೇ ಕಾಂಗ್ರೆಸ್ಸಿನ ಪ್ರಿಯಾಂಕಾ ಗಾಂಧಿ ವಾದ್ರಾ, ಸಮಾಜವಾದಿ ಪಕ್ಷದ ಅಖಿಲೇಶ್‌ ಯಾದವರ್‌, ಡಿಎಂಕೆಯ ಟಿ.ಆರ್.‌ ಬಾಲು, ಆರ್‌ ಎಸ್‌ ಪಿಯ ಎನ್.‌ ಜೆ. ಪ್ರೇಮಚಂದ್ರನ್‌ ಸೇರಿದಂತೆ ಹಲವಾರು ವಿಪಕ್ಷ ಸದಸ್ಯರು ಎದ್ದು ನಿಂತು ಆಕ್ಷೇಪಿಸಿ, ಮಸೂದೆಯನ್ನು ಸ್ಥಾಯಿ ಸಮಿತಿಗೆ ಕಳುಹಿಸುವಂತೆ ಆಗ್ರಹಿಸಿದರು.
 ಏನಿದು ವಿಬಿ-ಜಿ ರಾಮ್‌ ಜಿ? ಕೆಳಗಿನ ಚಿತ್ರ ಕ್ಲಿಕ್‌ ಮಾಡಿ ವಿಡಿಯೋ ನೋಡಿರಿ.


PARYAYA: ವಿಬಿ-ಜಿ ರಾಮ್‌ ಜಿ ಮಸೂದೆ ಮಂಡನೆ:   ವಿಬಿ-ಜಿ ರಾಮ್‌ ಜಿ  ಮಸೂದೆ  ಮಂಡನೆ ವಿ ಪಕ್ಷಗಳ ತೀವ್ರ ವಿರೋಧದ ಮಧ್ಯೆ ವಿಕಸಿತ ಭಾರತ-ಗ್ಯಾರಂಟಿ ಉದ್ಯೋಗ ಮತ್ತು ಜೀವನೋಪಾಯ ಮಿಷನ್‌ (ಗ್ರಾಮೀಣ)- ʼ ವಿಬಿ-ಜಿ ರಾಮ್‌ ಜ...

Monday, December 15, 2025

PARYAYA: ಹೋಗಲಿದೆ ಎಂಜಿನರೇಗಾ, ಬರಲಿದೆ ವಿಬಿ-ಜಿ ರಾಮ್‌ ಜಿ

 ಹೋಗಲಿದೆ ಎಂಜಿನರೇಗಾ, ಬರಲಿದೆ ವಿಬಿ-ಜಿ ರಾಮ್‌ ಜಿ

ಗ್ರಾಮೀಣ ಉದ್ಯೋಗ ಕ್ಷೇತ್ರದಲ್ಲಿ ಐತಿಹಾಸಿಕ ಬದಲಾವಣೆ!

ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ದೇಶದ ಮಹತ್ವಾಕಾಂಕ್ಷೆಯ ಉದ್ಯೋಗ ಯೋಜನೆಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ 2005 (MGNREGA) ಅನ್ನು ಸಂಪೂರ್ಣವಾಗಿ ಬದಲಾಯಿಸಿ'ವಿಕಸಿತ ಭಾರತ - ಉದ್ಯೋಗ ಮತ್ತು ಜೀವನೋಪಾಯ ಮಿಷನ್‌ಗೆ ಗ್ಯಾರಂಟಿ (ಗ್ರಾಮೀಣ) VB—G RAM G ಕಾಯ್ದೆ, 2025' ಇದನ್ನು ಜಾರಿಗೆ ತರಲು ಸಜ್ಜಾಗಿದೆ.

ಈ ಹೊಸ ಶಾಸನವು 'ವಿಕಸಿತ ಭಾರತ @2047' ರ ರಾಷ್ಟ್ರೀಯ ದೃಷ್ಟಿಕೋನಕ್ಕೆ ಅನುಗುಣವಾಗಿಪ್ರವರ್ಧಮಾನಕ್ಕೆ ಬರುತ್ತಿರುವ ಮತ್ತು ಸ್ಥಿತಿಸ್ಥಾಪಕ ಗ್ರಾಮೀಣ ಭಾರತಕ್ಕಾಗಿ ಒಂದು ಅಭಿವೃದ್ಧಿ ಚೌಕಟ್ಟನ್ನು ಸ್ಥಾಪಿಸಲಿದೆ.

VB-G RAM G ಕಾಯ್ದೆಯ ಮುಖ್ಯಾಂಶಗಳು:

  1. ಉದ್ಯೋಗ ಖಾತರಿ ಹೆಚ್ಚಳ: ಕಾಯ್ದೆಯು ಇನ್ನು ಮುಂದೆ ಪ್ರತಿ ಆರ್ಥಿಕ ವರ್ಷದಲ್ಲಿ ಕೌಶಲ್ಯರಹಿತ ಕೂಲಿ ಕೆಲಸ ಮಾಡಲು ಬಯಸುವ ಗ್ರಾಮೀಣ ಪ್ರದೇಶದ ವಯಸ್ಕ ಸದಸ್ಯರುಳ್ಳ ಪ್ರತಿ ಕುಟುಂಬಕ್ಕೆ ನೂರ ಇಪ್ಪತ್ತೈದು (125) ದಿನಗಳ (ಹಿಂದಿನ 100 ದಿನಗಳಿಗಿಂತ ಹೆಚ್ಚು) ಕೂಲಿ ಉದ್ಯೋಗದ ಶಾಸನಬದ್ಧ ಖಾತರಿ ನೀಡುತ್ತದೆ.
  2. ರಾಷ್ಟ್ರೀಯ ಗ್ರಾಮೀಣ ಮೂಲಸೌಕರ್ಯ ಶ್ರೇಣಿ: ಹೊಸ ಯೋಜನೆಯು ಸಬಲೀಕರಣಬೆಳವಣಿಗೆಸಮನ್ವಯ ಮತ್ತು ಸಂಪೂರ್ಣ ವ್ಯಾಪ್ತಿಯ ಮೇಲೆ ಗಮನ ಕೇಂದ್ರೀಕರಿಸಿ'ವಿಕಸಿತ ಭಾರತ ರಾಷ್ಟ್ರೀಯ ಗ್ರಾಮೀಣ ಮೂಲಸೌಕರ್ಯದ ಶ್ರೇಣಿ' (Viksit Bharat National Rural Infrastructure Stack) ರಚಿಸುವ ಗುರಿಯನ್ನು ಹೊಂದಿದೆ. ನೀರಿನ ಭದ್ರತೆಮೂಲಭೂತ ಗ್ರಾಮೀಣ ಮೂಲಸೌಕರ್ಯ ಮತ್ತು ಜೀವನೋಪಾಯ-ಸಂಬಂಧಿತ ಕಾಮಗಾರಿಗಳಿಗೆ ವಿಶೇಷ ಒತ್ತು ನೀಡಲಾಗುವುದು.
  3. ಕೃಷಿ ಕಾರ್ಯಗಳಿಗೆ ನಿರ್ಬಂಧ: ಕೃಷಿಯ ಗರಿಷ್ಠ ಅವಧಿಯಲ್ಲಿ ಕೃಷಿ ಕಾರ್ಮಿಕರ ಸಾಕಷ್ಟು ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲುಈ ಕಾಯ್ದೆಯಡಿ ಯಾವುದೇ ಕಾಮಗಾರಿಗಳನ್ನು ಪ್ರಾರಂಭಿಸುವುದನ್ನು ಅಥವಾ ಕಾರ್ಯಗತಗೊಳಿಸುವುದನ್ನು ಮೊದಲ ಬಾರಿಗೆ ನಿಷೇಧಿಸಲಾಗಿದೆ.
  4. ನಿರುದ್ಯೋಗ ಭತ್ಯೆ ಗ್ಯಾರಂಟಿ: ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದ 15 ದಿನಗಳಲ್ಲಿ ಕೆಲಸ ನೀಡದಿದ್ದರೆಅರ್ಜಿದಾರರಿಗೆ ಕಾಯ್ದೆಯ ನಿಬಂಧನೆಗಳ ಪ್ರಕಾರ ದೈನಂದಿನ ನಿರುದ್ಯೋಗ ಭತ್ಯೆಗೆ ಅರ್ಹರಾಗಿರುತ್ತಾರೆ.

ಹಣಕಾಸು ಮತ್ತು ಆಡಳಿತದ ಬದಲಾವಣೆ:

  • ವೆಚ್ಚ ಹಂಚಿಕೆ ಸ್ವರೂಪ: MGNREGAಗೆ ಕೇಂದ್ರವು ಶೇ. 100ರಷ್ಟು ಧನಸಹಾಯ ನೀಡುತ್ತಿತ್ತು. ಆದರೆಹೊಸ ಯೋಜನೆಯು ಕೇಂದ್ರ ಪ್ರಾಯೋಜಿತವಾಗಿದ್ದುವೆಚ್ಚ ಹಂಚಿಕೆ ಬದಲಾಗಲಿದೆ:
    • ಈಶಾನ್ಯ ಮತ್ತು ಹಿಮಾಲಯ ರಾಜ್ಯಗಳಿಗೆ: 90:10 (ಕೇಂದ್ರ:ರಾಜ್ಯ).
    • ಇತರೆ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ: 60:40 (ಕೇಂದ್ರ:ರಾಜ್ಯ). ಇದು ಹೆಚ್ಚಿನ ರಾಜ್ಯ ಸರ್ಕಾರಗಳ ಮೇಲಿನ ವೆಚ್ಚದ ಹೊರೆಯನ್ನು ಹೆಚ್ಚಿಸಲಿದೆ.
  • ಹೊಸ ಆಡಳಿತ ಮಂಡಳಿಗಳು: ಯೋಜನೆಯನ್ನು ನಿರ್ವಹಿಸಲು ಮತ್ತು ಮೇಲ್ವಿಚಾರಣೆ ಮಾಡಲು ಕೇಂದ್ರ ಸರ್ಕಾರದಿಂದ ಕೇಂದ್ರ ಗ್ರಾಮೀಣ ಉದ್ಯೋಗ ಖಾತರಿ ಪರಿಷತ್ತು (Central Gramin Rozgar Guarantee Council) ಮತ್ತು ರಾಜ್ಯಮಟ್ಟದಲ್ಲಿ ರಾಜ್ಯ ಗ್ರಾಮೀಣ ಉದ್ಯೋಗ ಖಾತರಿ ಪರಿಷತ್ತು ರಚನೆಯಾಗಲಿದೆ.
  • ಪಂಚಾಯತ್ ಸಬಲೀಕರಣ: ಜಿಲ್ಲಾಮಧ್ಯಂತರ ಮತ್ತು ಗ್ರಾಮ ಮಟ್ಟದ ಪಂಚಾಯತ್ ಸಂಸ್ಥೆಗಳು ಯೋಜನೆಯ ಯೋಜನೆಅನುಷ್ಠಾನ ಮತ್ತು ಮೇಲ್ವಿಚಾರಣೆಗೆ ಪ್ರಮುಖ ಪ್ರಾಧಿಕಾರಗಳಾಗಿ ಕಾರ್ಯನಿರ್ವಹಿಸಲಿವೆ.

ಈ ಪ್ರಸ್ತಾವಿತ ಕಾನೂನು ಇತರ ಕಾನೂನುಗಳ ಮೇಲೆ ಮೇಲುಗೈ ಸಾಧಿಸಲಿದೆಆದರೆ ಉತ್ತಮ ಉದ್ಯೋಗ ಖಾತರಿ ನೀಡುವ ರಾಜ್ಯಗಳು ತಮ್ಮದೇ ಕಾಯ್ದೆಯನ್ನು ಜಾರಿಗೆ ತರುವ ಅವಕಾಶವನ್ನು ಹೊಂದಿರುತ್ತವೆ.

PARYAYA: ಹೋಗಲಿದೆ ಎಂಜಿನರೇಗಾ, ಬರಲಿದೆ ವಿಬಿ-ಜಿ ರಾಮ್‌ ಜಿ:   ಹೋಗಲಿದೆ ಎಂಜಿನರೇಗಾ, ಬರಲಿದೆ ವಿಬಿ-ಜಿ ರಾಮ್‌ ಜಿ ಗ್ರಾಮೀಣ ಉದ್ಯೋಗ ಕ್ಷೇತ್ರದಲ್ಲಿ ಐತಿಹಾಸಿಕ ಬದಲಾವಣೆ! ಪ್ರ ಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ದೇ...

Monday, October 20, 2025

PARYAYA: ಐಎನ್‌ಎಸ್‌ ವಿಕ್ರಾಂತ್‌ ನಲ್ಲಿ ದೀಪಾವಳಿ ಸಂಭ್ರಮ

 ಐಎನ್‌ಎಸ್‌ ವಿಕ್ರಾಂತ್‌ ನಲ್ಲಿ ದೀಪಾವಳಿ ಸಂಭ್ರಮ

ದೀಪಾವಳಿ ಹಬ್ಬವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿವರ್ಷದಂತೆ, ಈದಿನ (೨೦.೧೦.೨೦೨೫) ಭಾರತದ ನೌಕಾಕಾಪಡೆಯ ಯೋಧರ ಜೊತೆಗೆ ಆಚರಿಸಿದರು.

ಗೋವಾದ ಕರಾವಳಿಯಲ್ಲಿ ಮತ್ತು ಐಎನ್‌ಎಸ್‌ ವಿಕ್ರಾಂತ್‌ನಲ್ಲಿ ಯೋಧರ ಜೊತೆಗೆ ಸಂವಾದ ನಡೆಸಿದ ಪ್ರಧಾನಿ, ಅವರೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲೂ ಪಾಲ್ಗೊಂಡರು.

ಐಎನ್‌ ಎಸ್‌ ವಿಕ್ರಾಂತ್‌ ನಲ್ಲಿ ಯೋಧರು ಮತ್ತು ಸಿಬ್ಬಂದಿ ಪ್ರದರ್ಶಿಸಿದ “ಕಸಮ್‌ ಸಿಂದೂರ್‌ ಕಿʼ ಹಾಡನ್ನು ಮೆಚ್ಚಿಕೊಂಡರು.

ಐಎನ್‌ಎಸ್‌ ಮುಖಾಂತರ ಪ್ರದರ್ಶನಗೊಂಡ ವಾಯುಬಲದ ವಿಡಿಯೋವನ್ನೂ ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡರು.

ಪ್ರಧಾನಿ ಹಂಚಿಕೊಂಡ ವಿಡಿಯೋಗಳು ಇಲ್ಲಿವೆ.


PARYAYA: ಐಎನ್‌ಎಸ್‌ ವಿಕ್ರಾಂತ್‌ ನಲ್ಲಿ ದೀಪಾವಳಿ ಸಂಭ್ರಮ:   ಐಎನ್‌ಎಸ್‌ ವಿಕ್ರಾಂತ್‌ ನಲ್ಲಿ ದೀಪಾವಳಿ ಸಂಭ್ರಮ ದೀ ಪಾವಳಿ ಹಬ್ಬವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿವರ್ಷದಂತೆ, ಈದಿನ (೨೦.೧೦.೨೦೨೫) ಭಾರತದ ನೌಕಾಕಾಪಡೆಯ ಯ...

Wednesday, August 13, 2025

PARYAYA: ಬೆಂಗಳೂರು ಮೆಟ್ರೋದ ಅದ್ಭುತ ವಿಡಿಯೋ !

 ಬೆಂಗಳೂರು ಮೆಟ್ರೋದ ಅದ್ಭುತ ವಿಡಿಯೋ !

ಬೆಂಗಳೂರು ಮೆಟ್ರೋದ ಹಳದಿ ಮತ್ತು ಹಸಿರು ಮಾರ್ಗಗಳು ಒಂದನ್ನೊಂದು ದಾಟಿ ಸಾಗುತ್ತಿರುವ ಅದ್ಭುತ ಡ್ರೋನ್ ವಿಡಿಯೋ ಇಂಟರ್ನೆಟ್‌ನಲ್ಲಿ ಸಂಚಲನ ಮೂಡಿಸಿದೆ! ಒಂದೇ ಫ್ರೇಮ್‌ನಲ್ಲಿ ನಾಲ್ಕು ಮೆಟ್ರೋ ರೈಲುಗಳು ಏಕಕಾಲದಲ್ಲಿ ಚಲಿಸುತ್ತಿರುವ ಅಪರೂಪದ ದೃಶ್ಯವನ್ನು ಈ ವಿಡಿಯೋ ಸೆರೆಹಿಡಿದಿದೆ.

ಆರ್‌ವಿ ರಸ್ತೆ ಇಂಟರ್‌ಚೇಂಜ್ ಬಳಿ ಸೆರೆಹಿಡಿಯಲಾದ ಈ ವಿಡಿಯೋನಗರವಾಸಿಗಳು ಮತ್ತು ಮೆಟ್ರೋ ಪ್ರಯಾಣಿಕರ ಪ್ರಶಂಸೆಗೆ ಪಾತ್ರವಾಗಿದೆ. ಬೆಂಗಳೂರು ಮೂಲದ ವಿಷಯ ರಚನೆಕಾರ ಶ್ರೀಹರಿ ಕಾರಂತ್ ಅವರು ತಮ್ಮ X (ಹಿಂದೆ ಟ್ವಿಟರ್) ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ನಗರದ ರಮಣೀಯ ದೃಶ್ಯಗಳನ್ನು ಸೆರೆಹಿಡಿಯುವುದರಲ್ಲಿ ಹೆಸರುವಾಸಿಯಾಗಿರುವ ಶ್ರೀಹರಿ, "ಈ ಪರಿಪೂರ್ಣ ಶಾಟ್‌ಗಾಗಿ ಬಹಳ ಸಮಯ ಕಾಯುತ್ತಿದ್ದೆ – ಹಳದಿ ಮತ್ತು ಹಸಿರು ಮಾರ್ಗಗಳು ಒಂದೇ ಫ್ರೇಮ್‌ನಲ್ಲಿ!" ಎಂದು ಶೀರ್ಷಿಕೆಯಲ್ಲಿ ಬರೆದಿದ್ದಾರೆ.

ಕೆಳಗೆ ಕ್ಲಿಕ್‌ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿರುವ ಈ ದೃಶ್ಯ ವೈಭವವನ್ನು ನೀವೂ ಕಣ್ತುಂಬಿಕೊಳ್ಳಿ ಅಥವಾ ಶ್ರೀ ಹರಿ ಕಾರಂತ್‌ ಅವರ ಈ ಎಕ್ಸ್‌ ಲಿಂಕ್‌ ಕ್ಲಿಕ್‌ ಮಾಡಿರಿ


ಇನ್ನಷ್ಟು ಸುದ್ದಿಗಳಿಗೆ ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ.
PARYAYA: ಬೆಂಗಳೂರು ಮೆಟ್ರೋದ ಅದ್ಭುತ ವಿಡಿಯೋ !:   ಬೆಂಗಳೂರು ಮೆಟ್ರೋದ ಅದ್ಭುತ ವಿಡಿಯೋ ! ಬೆಂ ಗಳೂರು ಮೆಟ್ರೋದ ಹಳದಿ ಮತ್ತು ಹಸಿರು ಮಾರ್ಗಗಳು ಒಂದನ್ನೊಂದು ದಾಟಿ ಸಾಗುತ್ತಿರುವ ಅದ್ಭುತ ಡ್ರೋನ್ ವಿಡಿಯೋ ಇಂಟರ್ನೆಟ್‌ನಲ...

Sunday, August 10, 2025

PARYAYA: ಬೆಂಗಳೂರು: ಈಗ ದೇಶದ ಅತಿದೊಡ್ಡ ಮೆಟ್ರೋ ಜಾಲ ಹೊಂದಿದ ೨ನೇ ನಗರ

 ಬೆಂಗಳೂರು: ಈಗ ದೇಶದ ಅತಿದೊಡ್ಡ ಮೆಟ್ರೋ ಜಾಲ ಹೊಂದಿದ ೨ನೇ ನಗರ

ಮೆಟ್ರೋ ಹಳದಿ ಮಾರ್ಗ, ವಂದೇ ಮಾತರಂ ಎಕ್ಸ್‌ ಪ್ರಸ್‌ ರೈಲಿಗೆ ಪ್ರಧಾನಿ ಹಸಿರು ನಿಶಾನೆ

ಬೆಂಗಳೂರು: ದೇಶದಲ್ಲಿ ಅತಿದೊಡ್ಡ ಮೆಟ್ರೋ ಜಾಲವನ್ನು ಹೊಂದಿರುವ ಎರಡನೇ ನಗರ ಎಂಬ ಹೆಗ್ಗಳಿಕೆಗೆ ಬೆಂಗಳೂರು ೨೦೨೫ ಆಗಸ್ಟ್‌ ೧೦ರ ಭಾನುವಾರ ಪಾತ್ರವಾಯಿತು. ಬೆಂಗಳೂರಿನ ರಾಗಿಗುಡ್ಡದಲ್ಲಿ ʼನಮ್ಮ ಮೆಟ್ರೋʼ ಹಳದಿ ಮಾರ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡುವುದರೊಂದಿಗೆ ಈ ಹೆಗ್ಗಳಿಕೆ ಬೆಂಗಳೂರಿನ ಮುಡಿಗೇರಿತು.

ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಚಿವರ ಸಮ್ಮುಖದಲ್ಲಿ ಪ್ರಧಾನಿ ಹಳದಿ ಮಾರ್ಗಕ್ಕೆ ಹಸಿರು ನಿಶಾನೆ ತೋರಿಸಿದರು. ಬಳಿಕ ಅಲ್ಲಿಂದ ಎಲೆಕ್ಟ್ರಾನಿಕ್‌ ಸಿಟಿವರೆಗೆ ಮೆಟ್ರೋದಲ್ಲೇ ಪಯಣಿಸಿದರು. ಸಿದ್ದರಾಮಯ್ಯ, ಶಿವಕುಮಾರ್‌ ಸೇರಿದಂತೆ ಇತರ ಗಣ್ಯರೂ ಪ್ರಧಾನಿಯರೊಂದಿಗೆ ಇದ್ದರು.

೧೯.೧೫ ಕಿಮೀ ಉದ್ದದ ಹಳದಿ ಮಾರ್ಗದ ಉದ್ಘಾಟನೆಯೊಂದಿಗೆ ಬೆಂಗಳೂರಿನ ಮೆಟ್ರೋ ಜಾಲ ೭೬.೯೫ ಕಿಮೀಯಿಂದ ೯೬.೧೦ ಕಿಮೀಗೆ ವಿಸ್ತರಣೆಗೊಂಡಿತು. ಈ ಮಾರ್ಗದಲ್ಲಿ ೧೬ ನಿಲ್ದಾಣಗಳಿದ್ದು  ಮೂರು ರೈಲುಗಳು ನಿತ್ಯ ಸಂಚರಿಸಲಿವೆ.

ಇದಕ್ಕೂ ಮುನ್ನ ಪ್ರಧಾನಿಯವರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಬೆಳಗಾವಿ- ಬೆಂಗಳೂರು ವಂದೇ ಭಾರತ್‌ ಎಕ್ಸ್‌ ಪ್ರಸ್‌ ರೈಲಿಗೆ ಹಸಿರು ನಿಶಾನೆ ತೋರಿಸಿದರು. ಇದೇ ಸಂದರ್ಭದಲ್ಲಿ ಜಮ್ಮು ಕಾಶ್ಮೀರದ ಕಟ್ರಾ ಮತ್ತು ಮಹಾರಾಷ್ಟ್ರದ ಪುಣೆ-ಅಜ್ನಿ (ನಾಗ್ಪುರ) ವಂದೇ ಭಾರತ್‌ ಎಕ್ಸ್‌ ಪ್ರಸ್‌ ರೈಲುಗಳ ಸಂಚಾರವನ್ನು ವರ್ಚುವಲ್‌ ಆಗಿ ಉದ್ಘಾಟಿಸಿದರು.

ಇಲ್ಲಿದೆ ಭಾರತದ ಮೆಟ್ರೋ ಕಥೆ

ಇಲ್ಲಿದೆ ಭಾರತದ ಮೆಟ್ರೋ ಕಥೆಯ ವಿಡಿಯೋ. ಇದನ್ನು ಈದಿನ ಮೆಟ್ರೋ ಹಳದಿ ಮಾರ್ಗದ ಉದ್ಘಾಟನೆಯ ಸಂದರ್ಭದಲ್ಲಿ ಪ್ರದರ್ಶಿಸಲಾಯಿತು.

ವಿಡಿಯೋ ನೋಡಲು ಕೆಳಗಿನ ಚಿತ್ರ ಅಥವಾ ಯೂ ಟ್ಯೂಬ್‌ ವಿಡಿಯೋ ಲಿಂಕ್‌ ಕ್ಲಿಕ್‌ ಮಾಡಿರಿ.


ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಏನು ಹೇಳಿದರು?

ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ

ಇನ್ನಷ್ಟು ಸುದ್ದಿಗಳಿಗಾಗಿ ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ
PARYAYA: ಬೆಂಗಳೂರು: ಈಗ ದೇಶದ ಅತಿದೊಡ್ಡ ಮೆಟ್ರೋ ಜಾಲ ಹೊಂದಿದ ೨ನೇ ನಗರ:   ಬೆಂಗಳೂರು: ಈಗ ದೇಶದ ಅತಿದೊಡ್ಡ ಮೆಟ್ರೋ ಜಾಲ ಹೊಂದಿದ ೨ನೇ ನಗರ ಮೆಟ್ರೋ ಹಳದಿ ಮಾರ್ಗ, ವಂದೇ ಮಾತರಂ ಎಕ್ಸ್‌ ಪ್ರಸ್‌ ರೈಲಿಗೆ ಪ್ರಧಾನಿ ಹಸಿರು ನಿಶಾನೆ ಬೆಂ ಗಳೂರು: ...

Monday, April 14, 2025

PARYAYA: ಪ್ರಧಾನಿ ಹೀಗೆ ಬೂಟು ಹಿಡಿದು ಗದರಿದ್ದೇಕೆ?

ಪ್ರಧಾನಿ ಹೀಗೆ ಬೂಟು ಹಿಡಿದು ಗದರಿದ್ದೇಕೆ?

ಪ್ರಧಾನಿ ನರೇಂದ್ರ ಮೋದಿ ಅವರು ಈದಿನ (೨೦೨೫ ಏಪ್ರಿಲ್‌ ೧೪) ಯಮುನಾ ನಗರದಲ್ಲಿ ರಾಮ್‌ ಪಾಲ್‌ ಕಶ್ಯಪ್‌ ಎಂಬವರಿಗೆ ತಮ್ಮ ಕೈಯಾರೆ ಬೂಟುಗಳನ್ನು ನೀಡಿ ಅವುಗಳನ್ನು ಧರಿಸುವಂತೆ ವಿನಂತಿಸಿದರು.

ಏಕೆ ಗೊತ್ತೇ?

ಈ ವ್ಯಕ್ತಿ ೧೪ ವರ್ಷಗಳ ಹಿಂದೆ ಪ್ರತಿಜ್ಞೆಯೊಂದನ್ನು ಮಾಡಿ ಪಾದರಕ್ಷೆ ಧರಿಸುವುದನ್ನು ಬಿಟ್ಟು ಬಿಟ್ಟಿದ್ದರು. ಪಾದರಕ್ಷೆ ಧಾರಣೆಯನ್ನು ಬಿಟ್ಟ ಈ ಸಂದರ್ಭದಲ್ಲಿ ಅವರು ಮಾಡಿದ್ದ ಪ್ರತಿಜ್ಞೆ ಏನೆಂದರೆ ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ತನಗೆ ಅವರ ಭೇಟಿಯ ಅವಕಾಶ ಲಭಿಸಿದ ಬಳಿಕ ಮಾತ್ರವೇ ಪಾದರಕ್ಷೆ ಧರಿಸುವೆ ಅಂತ.

ಈ ವಿಷಯ ನರೇಂದ್ರ ಮೋದಿ ಅವರಿಗೆ ಈದಿನ ಗೊತ್ತಾಯಿತು. ಯಮುನಾ ನಗರದಲ್ಲಿ ಸಾರ್ವಜನಿಕ ಸಭೆಯ ಸಂದರ್ಭದಲ್ಲಿ ಆ ವ್ಯಕ್ತಿಯನ್ನು ಕರೆಸಿಕೊಂಡು ತಮ್ಮ ಕೈಗಳಿಂದಲೇ ಅವರಿಗೆ ಪಾದರಕ್ಷೆಗಳನ್ನು ನೀಡಿದ ಮೋದಿ ಹೀಗೆ ಮಾಡಿದ್ದು ಏಕೆ ಎಂದು ಗದರಿದರು. ಮುಂದೆಂದೂ ಹೀಗೆಲ್ಲ ಮಾಡಬಾರದು. ಸಾಮಾಜಿಕ ಕೆಲಸ ಮಾಡಿ ಎಂದು ಕಿವಿ ಮಾತು ಹೇಳಿದರು.

ಈ ವಿಡಿಯೋವನ್ನು ಎಕ್ಸ್‌ ನಲ್ಲಿ (ಹಿಂದಿನ ಟ್ವಿಟ್ಟರ್)‌ ಹಂಚಿಕೊಂಡ ಪ್ರಧಾನಿಯವರು ʼಅಭಿಮಾನಿಗಳ ಇಂತಹ ಪ್ರೀತಿಯನ್ನು ಗೌರವಿಸುತ್ತೇನೆ. ಆದರೆ ಇಂತಹ ಪ್ರತಿಜ್ಞೆಗಳನ್ನೆಲ್ಲ ಮಾಡುವ ಬದಲಿಗೆ ಸಾಮಾಜಿಕ ಕೆಲಸ ಮಾಡಿ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಸಂಬಂಧಿಸಿದ ಯಾವುದಾದರೂ ಕೆಲಸ ಮಾಡಿʼ ಎಂದು ಮನವಿ ಮಾಡಿದ್ದಾರೆ.

ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

PARYAYA: ಕೈಯಾರೆ ಬೂಟು ಕೊಟ್ಟು ಧರಿಸಲು ಹೇಳಿದ ಪ್ರಧಾನಿ:   ಕೈಯಾರೆ ಬೂಟು ಕೊಟ್ಟು ಧರಿಸಲು ಹೇಳಿದ ಪ್ರಧಾನಿ ಪ್ರ ಧಾನಿ ನರೇಂದ್ರ ಮೋದಿ ಅವರು ಈದಿನ (೨೦೨೫ ಏಪ್ರಿಲ್‌ ೧೪) ಯಮುನಾ ನಗರದಲ್ಲಿ ರಾಮ್‌ ಪಾಲ್‌ ಕಶ್ಯಪ್‌ ಎಂಬವರಿಗೆ ತಮ್...

Sunday, April 6, 2025

PARYAYA: ಸಮುದ್ರದ ಮೇಲಿನ “ಲಿಫ್ಟ್‌ʼ ಸೇತುವೆ ಲೋಕಾರ್ಪಣೆ

 ಸಮುದ್ರದ ಮೇಲಿನ “ಲಿಫ್ಟ್‌ʼ ಸೇತುವೆ ಲೋಕಾರ್ಪಣೆ

ಬೆಂಗಳೂರು: ಸಮುದ್ರದ ಮೇಲೆ ನಿರ್ಮಿಸಿರುವ ದೇಶದ ಮೊತ್ತ ಮೊದಲ ಲಿಫ್ಟ್‌ ಸೇತುವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಸುಮಾರು ೫೦೦ ಕೋಟಿ ರೂಪಾಯಿಗಳ ವೆಚ್ಚದ ತಮಿಳುನಾಡಿನ ರಾಮೇಶ್ವರಂ ಬಳಿಯ ನೂತನ  ಪಂಬನ್‌ ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ೨೦೨೬ರ ರಾಮನವಮಿಯ ದಿನವಾಗಿರುವ ಈದಿನ (೦೬ ಏಪ್ರಿಲ್)‌ ಲೋಕಾರ್ಪಣೆ ಮಾಡಿದರು.

ಶ್ರೀರಾಮನು ಲಂಕೆಯಲ್ಲಿ ರಾವಣನನ್ನು ವಧಿಸಿ ಅಯೋಧ್ಯೆಗೆ ವಾಪಸಾಗುವಾಗ ರಾಮೇಶ್ವರಂಗೆ ಭೇಟಿ ನೀಡಿ ಜ್ಯೋತಿರ್ಲಿಂಗ ದರ್ಶನ  ಪಡೆದಿದ್ದನೆಂಬ ಪ್ರತೀತಿ ಇದೆ.

ಕಾಕತಾಳೀಯವಾಗಿ ಪ್ರಧಾನಿ ನರೇಂದ್ರ ಮೋದಿ ಕೂಡಾ ಶ್ರೀಲಂಕಾ ಪ್ರವಾಸದಿಂದ ವಾಪಸಾಗುವಾಗ ರಾಮೇಶ್ವರದಲ್ಲಿ  ದೇವಾಲಯಕ್ಕೆ ತೆರಳಿ ದೇವರ ದರ್ಶನ ಮಾಡಿ ನಂತರ ನೂತನ ಪಂಬನ್‌ ಸೇತುವೆಯನ್ನು ಲೋಕಾರ್ಪಣೆ ಮಾಡಿದರು. ಲೋಕಾರ್ಪಣೆಯ ವಿಡಿಯೋ ಇಲ್ಲಿದೆ ನೋಡಿರಿ:


ಕಾರ್ಯಕ್ರಮದ ನೇರ ಪ್ರಸಾರ ವೀಕ್ಷಣೆಗಾಗಿ ಇಲ್ಲಿ ಕ್ಲಿಕ್‌ ಮಾಡಿರಿ. ಅಥವಾ ಕೆಳಗಿನ ಚಿತ್ರವನ್ನು ಕ್ಲಿಕ್‌ ಮಾಡಿರಿ.

ಇವುಗಳನ್ನೂ ನೋಡಿರಿ/ ಓದಿರಿ:

ಸಮುದ್ರದ ಮೇಲೊಂದು ಸೇತುವೆ ಕೌತುಕ!

ಇದು ಮೇಲಕ್ಕೆ ಧುಮುಕುವ ಜಲಪಾತ..!

ಚಂದ್ರನಲ್ಲಿ ಇಳಿದ ಹರ್ಷ: ಈ ದಿನದ ನೆನಪು ಇನ್ನು ಪ್ರತಿವರ್ಷ!

ಝಾನ್ಸಿಯಲ್ಲಿ ಭೂತಚೇಷ್ಟೆ..! ಪೊಲೀಸರಿಗೆ ಕಂಡದ್ದೇನು?

ಪ್ರಧಾನಿ ನರೇಂದ್ರ ಮೋದಿ ಮೆಚ್ಚಿದ ಆ ʼವಿಡಿಯೋʼ ಯಾವುದು?

https://youtu.be/MIP4rO3Gejg


PARYAYA: ಸಮುದ್ರದ ಮೇಲಿನ “ಲಿಫ್ಟ್‌ʼ ಸೇತುವೆ ಲೋಕಾರ್ಪಣೆ:   ಸಮುದ್ರದ ಮೇಲಿನ “ಲಿಫ್ಟ್‌ ʼ ಸೇತುವೆ ಲೋಕಾರ್ಪಣೆ ಬೆಂ ಗಳೂರು: ಸಮುದ್ರದ ಮೇಲೆ ನಿರ್ಮಿಸಿರುವ ದೇಶದ ಮೊತ್ತ ಮೊದಲ ಲಿಫ್ಟ್‌ ಸೇತುವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರ...

Saturday, April 5, 2025

PARYAYA: ಸಮುದ್ರದ ಮೇಲೊಂದು ಸೇತುವೆ ಕೌತುಕ!

 ಸಮುದ್ರದ ಮೇಲೊಂದು ಸೇತುವೆ ಕೌತುಕ!

ದೇಶದಲ್ಲೇ ಮೊದಲು ಇಂತಹ ಸೇತುವೆ

ರಾಮೇಶ್ವರವನ್ನು ಸಂಪರ್ಕಿಸಲು ನೂತನವಾಗಿ ನಿರ್ಮಿಸಲಾಗಿರುವ ಪಂಬನ್‌ ಸೇತುವೆ ದೇಶದಲ್ಲೇ ಈ ಮಾದರಿಯ ಸೇತುವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ೧೯೧೪ರಲ್ಲಿ ನಿರ್ಮಿಸಲಾಗಿದ್ದ ಹಳೆಯ ಸೇತುವೆ ಶಿಥಿಲಗೊಂಡ ಹಿನ್ನೆಲೆಯಲ್ಲಿ ಸುಮಾರು ೫೦೦ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಸೇತುವೆ ಅತ್ಯಾಧುನಿಕ ಎಂಜಿನಿಯರಿಂಗ್‌ ಪದ್ಧತಿಯನ್ನು ಒಳಗೊಂಡಿದೆ. ಹಡಗುಗಳ ಸಂಚಾರಕ್ಕೆ ಅನುಕೂಲವಾಗಲು ಇಲ್ಲಿ ನಿರ್ಮಿಸಲಾಗಿರುವ ʼವರ್ಟಿಕಲ್‌ ಲಿಫ್ಟ್‌ʼ (ಲಂಬ ಎತ್ತು ಸೇತುವೆ) ಸಮುದ್ರದ ಮೇಲಿನ ಕೌತುಕ ಎಂದರೆ ತಪ್ಪಿಲ್ಲ..

ಹಳೆಯ ಸೇತುವೆ ಪಕ್ಕದಲ್ಲೇ ಹೊಸದಾಗಿ ನಿರ್ಮಿಸಲಾಗಿರುವ ಈ ನೂತನ ಸೇತುವೆ ಸುಮಾರು ೨ ಕಿಲೋ ಮೀಟರಿನಷ್ಟು ಉದ್ದವಿದೆ. ಈ ಸೇತುವೆಯಲ್ಲಿ ಸುರಕ್ಷತೆಗಾಗಿ, ವೇಗ ನಿಯಂತ್ರಣಕ್ಕಾಗಿ ಆಧುನಿಕ ಎಂಜಿನಿಯರಿಂಗ್‌ ವಿಧಾನವನ್ನು ಬಳಸಿ ಪ್ರಯಾಣಿಕರ ಹಾಗೂ ರೈಲಿನ ಸುರಕ್ಷತೆಗೆ ವಿಶೇಷ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಆರ್‌ ವಿ ಎನ್‌ ಎಲ್‌ನ ಹಿರಿಯ ಅಧಿಕಾರಿ ಆರ್.‌ ಶ್ರೀನಿವಾಸನ್‌ ಹೇಳುತ್ತಾರೆ.

 ಈ ವಿಡಿಯೋ ನೋಡಿ. ಅಂದಾಜು ೫೦೦ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಈ ಹೊಸ ರೈಲು ಸೇತುವೆಯ ಮೇಲೆ ಹೇಗೆ ಸರಾಗವಾಗಿ ಸಾಗಿ ಹೋಗುತ್ತದೆ.

ಆದರೆ ಈ ಸೇತುವೆಯ ಕೆಳಭಾಗದಲ್ಲಿ ಹಡಗು ಬಂದರೆ?

ಅಂತಹ ಹಡಗುಗಳಿಗೆ ಸಾಗಿ ಹೋಗಲು ಇಲ್ಲಿ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಕೆಳಗೆ ಹಡಗು ಬಂದಾಗ ಸೇತುವೆಯ ಈ ಲಿಫ್ಟ್‌ ಮಾದರಿಯ ಭಾಗವನ್ನು ನಿಧಾನವಾಗಿ ಲಂಬಾಕಾರವಾಗಿ ಅಂದರೆ ನೇರವಾಗಿ ಮೇಲಕ್ಕೆ ಎತ್ತಲಾಗುತ್ತದೆ.

ಹಡಗುಗಳಿಗೆ ಹೋಗಲು ವ್ಯವಸ್ಥೆ ಮಾಡುವ ಈ ಕೆಲಸಕ್ಕೆ ಹಿಂದೆ ೪೫ ನಿಮಿಷ ಬೇಕಾಗಿದ್ದರೆ, ಈಗ ಕೇವಲ ೫ ನಿಮಿಷದಲ್ಲಿ ಈ ಕೆಲಸ ಆಗುತ್ತದೆ.

ಲಿಫ್ಟ್‌ ಮಾದರಿಯ ಸೇತುವೆಯ ಭಾಗವೇ ಈ ಪಂಬನ್‌ ನೂತನ ಸೇತುವೆಯ ವಿಶೇಷ. ಲಂಬಾಕಾರವಾಗಿ ಹೀಗೆ ಸೇತುವೆಯ ಭಾಗವನ್ನೇ ಮೇಲಕ್ಕೆ ಎತ್ತುವ ತಂತ್ರಜ್ಞಾನದ ಬಳಕೆಯಾಗಿರುವ ಇಂತಹ ಸೇತುವೆ ಇಡೀ ದೇಶದಲ್ಲಿ ಬೇರೆ ಇಲ್ಲ. ದೇಶಕ್ಕೆ ಇದೇ ಮೊದಲನೆಯದು. ಲಿಫ್ಟ್‌ ಮಾದರಿಯ ಈ ಭಾಗದ ಉದ್ದ ೭೨ ಮೀಟರಿನಷ್ಟಿದೆ. ಈ ಲಿಫ್ಟ್‌ ೨೨ ಮೀಟರಿನಷ್ಟು ಎತ್ತರಕ್ಕೆ ಏರಬಲ್ಲುದು.

 ಈ ವಿಶೇಷ ವ್ಯವಸ್ಥೆಯಿಂದ ರೈಲಿನ ಸರಾಗ ಸಂಚಾರಕ್ಕೆ ವ್ಯವಸ್ಥೆ ಆಗಿದೆ. ಜೊತೆಗೆ ಕೆಳಗೆ ಸಮುದ್ರದಲ್ಲಿ ಬರುವ ಹಡಗುಗಳ ಸಂಚಾರಕ್ಕೂ ತೊಂದರೆ ಇಲ್ಲ.

ಈ ನೂತನ ಸೇತುವೆ ದೇಶದ ಅರ್ಥ ವ್ಯವಸ್ಥೆಗೆ ದೊಡ್ಡ ಲಾಭವನ್ನು ತಂದು ಕೊಡಲಿದೆ. ದೇಶದ ʼಚಾರ್‌ ಧಾಮ್ ಯಾತ್ರೆʼ ಪರಿಪೂರ್ಣವಾಗಲು ರಾಮೇಶ್ವರಂಗೆ ಯಾತ್ರಿಕರು ಭೇಟಿ ಕೊಡಲೇಬೇಕು. ಈ ಸೇತುವೆಯಿಂದಾಗಿ ಇಂತಹ ಯಾತ್ರಿಕರಿಗೆ ಅನುಕೂಲವಾಗಲಿದೆ. ಹಾಗೆಯೇ ವಿದೇಶೀ ಪ್ರವಾಸಿಗಳಿಗೂ ಅನುಕೂಲವಾಗಲಿದೆ. ರಾಮೇಶ್ವರಕ್ಕೆ ಭೇಟಿ ನೀಡುವವರ ಸಂಖ್ಯೆ ಇನ್ನಷ್ಟು ಹೆಚ್ಚಲಿದೆ.

ಯೂಟ್ಯೂಬ್‌ ವಿಡಿಯೋ ನೋಡಲು ಕೆಳಗಿನ ಚಿತ್ರ  ಅಥವಾ ಲಿಂಕ್‌ ಕ್ಲಿಕ್‌ ಮಾಡಿರಿ:

Video link:

https://youtu.be/MIP4rO3Gejg

ಇವುಗಳನ್ನೂ ನೋಡಿರಿ/ ಓದಿರಿ:

ಇದು ಮೇಲಕ್ಕೆ ಧುಮುಕುವ ಜಲಪಾತ..!

ಚಂದ್ರನಲ್ಲಿ ಇಳಿದ ಹರ್ಷ: ಈ ದಿನದ ನೆನಪು ಇನ್ನು ಪ್ರತಿವರ್ಷ!

ಝಾನ್ಸಿಯಲ್ಲಿ ಭೂತಚೇಷ್ಟೆ..! ಪೊಲೀಸರಿಗೆ ಕಂಡದ್ದೇನು?

ಪ್ರಧಾನಿ ನರೇಂದ್ರ ಮೋದಿ ಮೆಚ್ಚಿದ ಆ ʼವಿಡಿಯೋʼ ಯಾವುದು?

PARYAYA: ಸಮುದ್ರದ ಮೇಲೊಂದು ಸೇತುವೆ ಕೌತುಕ!:   ಸಮುದ್ರದ ಮೇಲೊಂದು ಸೇತುವೆ ಕೌತುಕ! ದೇಶದಲ್ಲೇ ಮೊದಲು ಇಂತಹ ಸೇತುವೆ ರಾ ಮೇಶ್ವರವನ್ನು ಸಂಪರ್ಕಿಸಲು ನೂತನವಾಗಿ ನಿರ್ಮಿಸಲಾಗಿರುವ ಪಂಬನ್‌ ಸೇತುವೆ ದೇಶದಲ್ಲೇ ಈ ಮಾದರ...

Monday, December 23, 2024

PARYAYA: ವಾಟ್- ಸುದ್ದಿ

ಹಗರಣ-ದೂರು-ತನಿಖೆ-ನಿಂದನೆ!

ದೆಹಲಿಯ ಆಪ್‌ ಸರ್ಕಾರದ ಹಗರಣಗಳ ಕುರಿತು ಸಂಸತ್ತಿನಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ವಂದನೆ ಸಲ್ಲಿಸುವ ಸಂದರ್ಭದಲ್ಲಿ ಪ್ರಧಾನಿ ಮೋದಿ ಪ್ರಸ್ತಾಪಿಸಿದರು.
ಈ ಸಂಬಂಧವಾಗಿ ಸಂಸತ್ತಿನಲ್ಲಿ ಕಾಂಗ್ರೆಸ್‌ ಮಾಡಿದ್ದ ಆರೋಪಕ್ಕೆ ಪ್ರಧಾನಿ ನೀಡಿದ್ದ ಉತ್ತರದಲ್ಲಿನ ಈ ಭಾಗದ ವಿಡಿಯೋ ತುಣುಕು ಇದೀಗ ಎಕ್ಸ್‌ (ಹಿಂದಿನ ಟ್ವಿಟ್ಟರ್)‌ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ವಿಡಿಯೋ ನೋಡಲು ಕೆಳಗೆ ಕ್ಲಿಕ್‌ ಮಾಡಿರಿ:
PARYAYA: ವಾಟ್- ಸುದ್ದಿ: ಹಗರಣ-ದೂರು-ತನಿಖೆ-ನಿಂದನೆ! ದೆ ಹಲಿಯ ಆಪ್‌ ಸರ್ಕಾರದ ಹಗರಣಗಳ ಕುರಿತು ಸಂಸತ್ತಿನಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ವಂದನೆ ಸಲ್ಲಿಸುವ ಸಂದರ್ಭದಲ್ಲಿ ಪ್ರಧಾನಿ ಮೋದಿ ಪ್ರಸ್ತ...

Sunday, June 9, 2024

ನರೇಂದ್ರ ದಾಮೋದರದಾಸ್‌ ಮೋದಿ 3.0 ಯುಗಾರಂಭ

 ನರೇಂದ್ರ ದಾಮೋದರದಾಸ್‌ ಮೋದಿ 3.0 ಯುಗಾರಂಭ


ನವದೆಹಲಿ: ನರೇಂದ್ರ ದಾಮೋದರದಾಸ್‌ ಮೋದಿ ಅವರು 2024 ಜೂನ್‌ 09ರ ಭಾನುವಾರ ಸಂಜೆ 7.24 ಗಂಟೆಗೆ ಭಾರತದ ಪ್ರಧಾನಿಯಾಗಿ ಸತತ ಮೂರನೇ ಅವಧಿಗೆ ಪ್ರಮಾಣವಚನ ಸ್ವೀಕರಿಸುವುದರೊಂದಿಗೆ ಮೋದಿ ಅವರ ಮೂರನೇ ಅವಧಿಯ ಆಡಳಿತ ಆರಂಭಗೊಂಡಿತು.

ಈಶ್ವರನ ಹೆಸರಿನಲ್ಲಿ ಮೋದಿ ಅವರು ಪ್ರಮಾಣವಚನ ಸ್ವೀಕರಿಸಿದರು.




ಮೋದಿ ಅವರ ಜೊತೆಗೆ 71 ಮಂದಿ ಸಂಸದರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇದರೊಂದಿಗೆ ಒಟ್ಟು 72 ಮಂದಿಯ ಸಚಿವ ಸಂಪುಟ ರಚನೆಯಾಗಿದೆ.

ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದವರು:
ಸಂಪುಟ ದರ್ಜೆ:
೧. ರಾಜನಾಥ ಸಿಂಗ್‌,
. ಅಮಿತ್‌ ಶಾ,
೩. ನಿತಿನ್‌ ಗಡ್ಕರಿ,
 ೪. ಜೆ.ಪಿ. ನಡ್ಡಾ,
೫. ಶಿವರಾಜ್‌ ಸಿಂಗ್‌ ಚೌಹಾಣ್‌,
೬. ನಿರ್ಮಲಾ ಸೀತಾರಾಮನ್‌ ,
೭. ಸುಬ್ರಹ್ಮಣ್ಯನ್‌ ಜೈಶಂಕರ್,
೮. ಮನೋಹರ ಲಾಲ್‌,
೯. ಎಚ್.‌ ಡಿ. ಕುಮಾರ ಸ್ವಾಮಿ,
೧೦. ಪೀಯೂಷ್‌ ವೇದ ಪ್ರಕಾಶ್‌ ಗೋಯಲ್‌,
೧೧. ಧರ್ಮೇಂದ್ರ ಪ್ರಧಾನ್,
 ೧೨. ಜಿತನ್‌ ರಾಮ್‌ ಮಾಂಝಿ,
 ೧೩.  ರಾಜೀವ್‌ ರಂಜನ್‌ ಸಿಂಗ್‌,
೧೪. ಸರ್ವಾನಂದ್‌ ಸೋನುವಾಲ್‌,
 ೧೫ .ಡಾ. ವೀರೇಂದ್ರ ಕುಮಾರ್‌,
 ೧೬. ಕೆಂಜಿರಾಪು ರಾಮಮೋಹನ್‌ ನಾಯ್ಡು,
೧೭. ಪ್ರಹ್ಲಾದ್‌ ಜೋಶಿ,
 ೧೮. ಜೋಯಲ್‌ ಉರಾನ್‌,
೧೯ . ಗಿರಿರಾಜ್‌ ಸಿಂಗ್‌,
೨೦. ಅಶ್ವನಿ ವೈಷ್ಣವ್‌
೨೧. ಜ್ಯೋತಿರಾದಿತ್ಯ ಎಂ. ಸಿಂಧಿಯಾ
೨೨. ಉಪೇಂದ್ರ ಯಾದವ್
‌೨೩. ಗಜೇಂದ್ರ ಸಿಂಗ್‌ ಶೇಖಾವತ್
‌೨೪. ಶ್ರೀಮತಿ ಅನ್ನಪೂರ್ಣ ದೇವಿ
೨೫. ಕಿರಣ್‌ ರಿಜಿಜು
೨೬. ಹರದೀಪ್‌ ಸಿಂಗ್‌ ಪುರಿ
೨೭. ಡಾ. ಮನ್ಸುಕ್‌ ಮಾಂಡವೀಯ
೨೮. ಗಂಗಾಪುರಂ ಕಿಶನ್‌ ರೆಡ್ಡಿ
೨೯. ಚಿರಾಗ್‌ ಪಾಸ್ವಾನ್
೩‌೦.‌ ಸಿ.ಆರ್.‌ ಪಾಟೀಲ್

ರಾಜ್ಯ ಸಚಿವರು (ಸ್ವತಂತ್ರ ಹೊಣೆ)

೧. ಇಂದ್ರಜಿತ್‌ ಸಿಂಗ್
೨.‌ ಡಾ. ಜಿತೇಂದ್ರ ಸಿಂಗ್
೩ ಅರ್ಜುನ್‌ ರಾಮ್‌ ಮೇಘ್ವಾಲ್
‌೪. ಪ್ರತಾಪ್‌ ರಾವ್‌ ಗಣಪತ್‌ ರಾವ್‌ ಜಾಧವ್
‌೫. ಜಯಂತ್‌ ಚೌಧರಿ

 ರಾಜ್ಯ ಸಚಿವರು

೧. ಜಿತನ್‌ ಪ್ರಸಾದ್
೨. ಶ್ರೀಪಾದ್‌ ಯೆಸೋ ನಾಯಕ್
‌೩. ಪಂಕಜ್‌ ಚೌಧರಿ
೪. ಕೃಷ್ಣ ಪಾಲ್ / ಕಿಷನ್‌ ಪಾಲ್
‌೫.‌ ರಾಮದಾಸ್‌ ಅಠಾವಳೆ
೬. ರಾಮನಾಥ್‌ ಠಾಕೂರ್
‌೭. ನಿತ್ಯಾನಂದ ರಾಯ್
‌೮.‌ ಶ್ರೀಮತಿ ಅನುಪ್ರಿಯಾ ಪಟೇಲ್
೯. ವಿ. ಸೋಮಣ್ಣ
೧೦. ಡಾ. ಚಂದ್ರಶೇಖರ್‌ ಪೆಮ್ಮಸಾನಿ
೧೧. ಪ್ರೊ. ಎಸ್.‌ ಪಿ. ಸಿಂಗ್‌ ಬಘೇಲ್
‌೧೨. ಶೋಭಾ ಕರಂದ್ಲಾಜೆ
೧೩. ಕೀರ್ತಿ ವರ್ಧನ್‌ ಸಿಂಗ್
‌೧೪. ಬಿ.ಎಲ್.‌ ವರ್ಮಾ
೧೫. ಶಾಂತನು ಠಾಕೂರ್
‌೧೬. ಸುರೇಶ್‌ ಗೋಪಿ
೧೭. ಡಾ. ಎಲ್‌. ಮುರುಗನ್
‌೧೮. ಅಜಯ್‌ ಟಮ್ಟಾ
೧೯. ಬಂಡಿ ಸಂಜಯ್‌ ಕುಮಾರ್
೨೦. ಕಮಲೇಶ್‌ ಪಾಸ್ವಾನ್
‌೨೧. ಭಾಗೀರತ್‌ ಚೌಧರಿ
೨೨. ಸತೀಶ್‌ ಚಂದ್ರ ದುಬೆ
೨೩. ಸಂಜಯ್‌ ಸೇಠ್
‌೨೪. ರವನೀತ್‌ ಸಿಂಗ್‌
೨೫. ದುರ್ಗಾದಾಸ್‌ ವಿಕೆ
೨೬. ಶ್ರೀಮತಿ ರಕ್ಷಾ ನಿಖಿಲ್‌ ಖಡ್ಸೆ
೨೭. ಶುಕಾಂತ ಮಜುಂದಾರ್
೨೮. ಶ್ರೀಮತಿ ಸಾವಿತ್ರಿ ಠಾಕೂರ್
‌೨೯. ತೋಕನ್‌ ಸಾಹು
೩೦. ರಾಜ್‌ ಭೂಷಣ್‌ ಚೌಧರಿ
೩೧. ಭೂಪತಿ ರಾಜು ಶ್ರೀನಿವಾಸ್‌ ವರ್ಮಾ
೩೨. ಶ್ರೀ ಹರ್ಷ ಮಲ್ಹೋತ್ರ.
೩೩. ಶ್ರೀಮತಿ ನಿಮುಬೆನ್‌ ಬಂಭನಿಯಾ
೩೪. ಮುರಳೀಧರ ಮೋಹನ್
೩೫. ಜಾರ್ಜ್‌ ಕುರಿಯನ್
‌೩೬. ಪವಿತ್ರ ಮಾರ್ಗರೇಟ

ಕರ್ನಾಟಕದಿಂದ ಐವರು ಸಚಿವರು

ಕರ್ನಾಟಕದಿಂದ ನಿರ್ಮಲಾ ಸೀತಾರಾಮನ್‌, ಎಚ್.‌ ಡಿ. ಕುಮಾರಸ್ವಾಮಿ, ಪ್ರಹ್ಲಾದ್‌ ಜೋಶಿ, ವಿ. ಸೋಮಣ್ಣ ಮತ್ತು ಶೋಭಾ ಕರಂದ್ಲಾಜೆ ಸಚಿವರಾಗಿದ್ದಾರೆ.

ನರೇಂದ್ರ ಮೋದಿಯವರ ಪ್ರಮಾಣ ವಚನ ಸಮಾರಂಭದ ಲೈವ್ ಅಪ್‌ಡೇಟ್‌ಗಳನ್ನು ಇಲ್ಲಿ ವೀಕ್ಷಿಸಿ- ಕೆಳಗಿನ ಚಿತ್ರ ಕ್ಲಿಕ್‌ ಮಾಡಿ:

ಇವುಗಳನ್ನೂ ಓದಿ:

ಮೋದಿ 3.0 ಯುಗ: 5 ವರ್ಷಗಳ ಕಾರ್ಯಸೂಚಿ ಸಿದ್ಧ

ಮೋದಿ 3.0 ಆಡಳಿತ ಆರಂಭ: ನೆರೆ ರಾಷ್ಟ್ರಗಳಿಂದ ಯಾರು ಬರ್ತಿದ್ದಾರೆ?

ದೆಹಲಿ ಹಾರಾಟ ನಿಷೇಧ ವಲಯ, ಜೂನ್‌ 9ಕ್ಕೆ ಮೋದಿ ಪ್ರಮಾಣ
ಮೋದಿಗೆ ನಿತೀಶ್ ಕುಮಾರ್, ಚಂದ್ರಬಾಬು ನಾಯ್ಡು ಲಿಖಿತ ಬೆಂಬಲ

ಪ್ರಧಾನಿ ಮೋದಿ ರಾಜೀನಾಮೆ, ಶನಿವಾರ ಪ್ರಮಾಣ ವಚನ?
ಇವರೆಲ್ಲ ಭಾರತದ ಈವರೆಗಿನ ಪ್ರಧಾನಿಗಳು, ಮುಂದಿನ ಪ್ರಧಾನಿ …… ?

ಕನ್ಯಾಕುಮಾರಿಯ ಧ್ಯಾನ: ಪ್ರಧಾನಿ ಮೋದಿ ಹೊಸ ಸಂಕಲ್ಪಗಳು

Wednesday, June 21, 2023

PARYAYA: ಪ್ರಧಾನಿ ಮೋದಿ ನೇತೃತ್ವದ ವಿಶ್ವಸಂಸ್ಥೆ ಯೋಗ: ಗಿನ್ನೆಸ್‌ ವಿಶ್ವದಾಖಲೆ

 ಪ್ರಧಾನಿ ಮೋದಿ ನೇತೃತ್ವದ ವಿಶ್ವಸಂಸ್ಥೆ ಯೋಗ: ಗಿನ್ನೆಸ್‌ ವಿಶ್ವದಾಖಲೆ

ನ್ಯೂಯಾರ್ಕ್: ಯೋಗ ಕಾರ್ಯಕ್ರಮದಲ್ಲಿ ಅತ್ಯಂತ ಹೆಚ್ಚು ರಾಷ್ಟ್ರೀಯತೆಗಳ (ಜನರ) ಪಾಲ್ಗೊಳ್ಳುವಿಕೆಗಾಗಿ ನ್ಯೂಯಾರ್ಕಿನ ವಿಶ್ವಸಂಸ್ಥೆಯ ಲಾನಿನಲ್ಲಿ ೨೦೨೩ ಜೂನ್‌ ೨೧ರ ಬುಧವಾರ ಬೆಳಗ್ಗೆ (ಭಾರತದಲ್ಲಿ ಬುಧವಾರ ರಾತ್ರಿ) ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಯೋಗ ಕಾರ್ಯಕ್ರಮವು ಗಿನ್ನೆಸ್‌ ವಿಶ್ವದಾಖಲೆಯನ್ನು ಸ್ಥಾಪಿಸಿತು.

ನ್ಯೂಯಾರ್ಕ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಸಂದರ್ಭದಲ್ಲಿ ಈ ಯೋಗ ಕಾರ್ಯಕ್ರಮ ನಡೆಯಿತು.

ಗಿನ್ನೆಸ್ ವಿಶ್ವ ದಾಖಲೆಯ ಅಧಿಕಾರಿ ಮೈಕೆಲ್ ಎಂಪ್ರಿಕ್ ಅವರು ಬುಧವಾರ ಬೆಳಗ್ಗೆ (ಸ್ಥಳೀಯ ಕಾಲಮಾನ) ವಿಶ್ವಸಂಸ್ಥೆಯ ಪ್ರಧಾನ ಕಛೇರಿಯ ಲಾನಿನಲ್ಲಿ ಪ್ರಧಾನಿ ನರೇಂದ್ರ ಮೋದಿವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧ್ಯಕ್ಷ ಸಿಸಾಬಾ ಕೊರೊಸಿ ಮತ್ತು ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ರುಚಿರಾ ಕಾಂಬೋಜ್ ಅವರಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಿದರು. .

ಇಂದು ಯೋಗ ಕಾರ್ಯಕ್ರಮದಲ್ಲಿ ೧೪೦ ರಾಷ್ಟ್ರೀಯತೆಗಳು ಇರಬೇಕಾಗಿತ್ತು. ಈದಿನದ ಕಾರ್ಯಕ್ರಮದಲ್ಲಿ ೧೩೫ ರಾಷ್ಟ್ರೀಯತೆಗಳು ಇದ್ದವು. ಇದು ಹೊಸ ಗಿನ್ನೆಸ್‌ ವಿಶ್ವದಾಖಲೆಯಾಗಿದೆ: ಎಂದು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಅಧಿಕೃತ ತೀರ್ಪುಗಾರ ಮೈಕೆಲ್ ಎಂಪ್ರಿಕ್ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕಾರ್ಯಕ್ರಮದಲ್ಲಿ 100 ಕ್ಕೂ ಹೆಚ್ಚು ರಾಷ್ಟ್ರಗಳ ಪ್ರತಿನಿಧಿಗಳುಅಮೆರಿಕದ ಎಲ್ಲ ವರ್ಗಗಳ ಜನರುನ್ಯೂಯಾರ್ಕಿನ ಪ್ರಮುಖರು, ಹಾಲಿವುಡ್ ಸೆಲೆಬ್ರಿಟಿಗಳು ಮತ್ತು ಭಾರತೀಯ ಸಮುದಾಯದ ಸದಸ್ಯರು ಭಾಗವಹಿಸಿದ್ದರು.

"ನಿಮ್ಮೆಲ್ಲರನ್ನೂ ನೋಡಲು ನನಗೆ ಸಂತೋಷವಾಗಿದೆ ಮತ್ತು ನೀವೆಲ್ಲರೂ ಇಲ್ಲಿಗೆ ಬಂದಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳು. ಇಂದು ಇಲ್ಲಿ ಪ್ರತಿಯೊಂದು ರಾಷ್ಟ್ರೀಯತೆಯನ್ನು ಪ್ರತಿನಿಧಿಸಲಾಗಿದೆ ಮತ್ತು ನಮ್ಮನ್ನು ಒಟ್ಟುಗೂಡಿಸಲು ಯೋಗ ಕಾರಣವಾಗಿದೆ. ಯೋಗ ಎಂದರೆ ಒಂದಾಗುವುದು. ಒಗ್ಗೂಡುವುದು ಯೋಗದ ಇನ್ನೊಂದು ರೂಪವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.


ಎಲ್ಲ ಭಾರತೀಯ ಸಂಪ್ರದಾಯಗಳಂತೆಯೋಗವು ಕ್ರಿಯಾತ್ಮಕವಾಗಿದೆ. ಇದು ರಾಯಧನಹಕ್ಕುಸ್ವಾಮ್ಯ ಮತ್ತು ಪೇಟೆಂಟ್‌ಗಳಿಂದ ಮುಕ್ತವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು. “ನೀವು ಯೋಗವನ್ನು ಮನೆಯಲ್ಲಿಕೆಲಸದಲ್ಲಿ ಅಥವಾ ಪಯಣದಲ್ಲಿದ್ದಾಗಲೂ ಮಾಡಬಹುದು. ಇದನ್ನು ನೀವು ಶಿಕ್ಷಕರಿಂದ ಕಲಿಯಬಹುದು ಅಥವಾ ಸ್ವಯಂ-ಕಲಿಬಹುದು, ”ಎಂದು ಪ್ರಧಾನಿ ಮೋದಿ ಹೇಳಿದರು.

"ಯುದ್ಧಗಳುಲಿಂಗ ಹಿಂಸಾಚಾರಆಹಾರದ ಅಭದ್ರತೆ ಮತ್ತು ನಮ್ಮ ಗ್ರಹದ ನಾಶದ ವಿರುದ್ಧ ಹೋರಾಡಲು ಯೋಗವನ್ನು ಬಳಸಿ" ಎಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನ್ಯೂಯಾರ್ಕ್ ಮೇಯರ್ ಎರಿಕ್ ಆಡಮ್ಸ್ ಹೇಳಿದರು.

ಯೋಗವು ಮನಸ್ಸು ಮತ್ತು ದೇಹವನ್ನು ಒಂದುಗೂಡಿಸುವ ಒಂದು ಮಾರ್ಗವಾಗಿದೆ ಮತ್ತು ವ್ಯಕ್ತಿಯ ಬೌದ್ಧಿಕ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ ಎಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧ್ಯಕ್ಷ ಸಿಸಾಬಾ ಕೊರೊಸಿ ಹೇಳಿದರು

PARYAYA: ಪ್ರಧಾನಿ ಮೋದಿ ನೇತೃತ್ವದ ವಿಶ್ವಸಂಸ್ಥೆ ಯೋಗ: ಗಿನ್ನೆಸ್‌ ವ...:   ಪ್ರಧಾನಿ ಮೋದಿ ನೇತೃತ್ವದ ವಿಶ್ವಸಂಸ್ಥೆ ಯೋಗ: ಗಿನ್ನೆಸ್‌ ವಿಶ್ವದಾಖಲೆ ನ್ಯೂಯಾರ್ಕ್: ಯೋಗ ಕಾರ್ಯಕ್ರಮದಲ್ಲಿ ಅತ್ಯಂತ ಹೆಚ್ಚು ರಾಷ್ಟ್ರೀಯತೆಗಳ (ಜನರ) ಪಾಲ್ಗೊಳ್ಳುವ...