Wednesday, December 23, 2020

ಇಂದಿನ ಇತಿಹಾಸ History Today ಡಿಸೆಂಬರ್ 23

 ಇಂದಿನ ಇತಿಹಾಸ  History Today ಡಿಸೆಂಬರ್ 23

2020: ತಿರುವನಂತಪುರ: ದೇಶವನ್ನೇ ಬೆಚ್ಚಿ ಬೀಳಿಸಿದ್ದ ಕೇರಳದ ಹದಿಹರೆಯದ ಕ್ರೈಸ್ತ ಸನ್ಯಾಸಿನಿ ಸಿಸ್ಟರ್ ಅಭಯಾ ಅವರ ಕೊಲೆಗಾಗಿ ಪಾದ್ರಿ ಥಾಮಸ್ ಕೊಟ್ಟೂರು ಮತ್ತು ಸಿಸ್ಟರ್ ಸೆಫಿ ಇಬ್ಬರು ಅಪರಾಧಿಗಳಿಗೆ ಕೇರಳದ ವಿಶೇಷ ಸಿಬಿಐ ನ್ಯಾಯಾಲಯವು  2020 ಡಿಸೆಂಬರ್ 23ರ ಬುಧವಾರ ಜೀವಾವಧಿ ಶಿಕ್ಷೆಯನ್ನು ವಿಧಿಸಿತು. ಸುಮಾರು ೨೮ ವರ್ಷಗಳ ನಂತರ, ಸುದೀರ್ಘ ವಿಚಾರಣೆಯ ಬಳಿಕ ತಪ್ಪಿತಸ್ಥರೆಂದು ಸಾಬೀತಾದ ಇವರಿಬ್ಬರ ಶಿಕ್ಷೆಯನ್ನು ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಕೆ ಸನಾಲ್ ಕುಮಾರ್ ಅವರು ಪ್ರಕಟಿಸಿದರು. ಜೀವಾವಧಿ ಸಜೆಯ ಜೊತೆಗೆ ಉಭಯ ಅಪರಾಧಿಗಳಿಗೂ ತಲಾ ಐದು ಲಕ್ಷ ರೂಪಾಯಿಗಳ ದಂಡವನ್ನೂ ನ್ಯಾಯಾಧೀಶರು ವಿಧಿಸಿದರು. ೧೯೯೨ರ ಮಾರ್ಚ್ ೨೭ರಂದು ಕೊಟ್ಟಾಯಂನ ಪಿಯಸ್ ಎಕ್ಸ್ ಕಾನ್ವೆಂಟ್‌ನ ಬಾವಿಯಲ್ಲಿ ಇಪ್ಪತ್ತೊಂದು ವರ್ಷದ ಸನ್ಯಾಸಿನಿ ಸಿಸ್ಟರ್ ಅಭಯಾ  ಶವ ಪತ್ತೆಯಾಗಿತ್ತು. ಮೊದಲ ಆರೋಪಿ ಪಾದ್ರಿ ಥಾಮಸ್ ಕೊಟ್ಟೂರು ಮತ್ತು ಮೂರನೇ ಆರೋಪಿ ಸಿಸ್ಟರ್ ಸೆಫಿ ವಿಚಾರಣೆಯನ್ನು ಎದುರಿಸಿದರು. ಎರಡನೇ ಆರೋಪಿ, ಪಾದ್ರಿ ಜೋಸ್ ಪೂತ್ರಿಕ್ಕಾಯಿಲ್ ಅವರ ಮನವಿಯನ್ನು ಅನುಸರಿಸಿ ಸಿಬಿಐ ನ್ಯಾಯಾಲಯವು ೨೦೧೮ರ ಮಾರ್ಚ್ ತಿಂಗಳಲ್ಲಿ ಬಿಡುಗಡೆ ಮಾಡಿತ್ತು. ಕೊಟ್ಟಾಯಂನ ಬಿಸಿಎಂ ಕಾಲೇಜಿನ ವಿದ್ಯಾರ್ಥಿನಿ ಮತ್ತು ಕ್ನಾನಯಾ ಕ್ಯಾಥೊಲಿಕ್ ಸಮುದಾಯದ ಸದಸ್ಯರಾದ ೧೯ ವರ್ಷದ ಸನ್ಯಾಸಿನಿ ಸಿಸ್ಟರ್ ಅಭಯಾ ೧೯೯೨ ಮಾರ್ಚ್ ೨೭ ರಂದು ಆತ್ಮಹತ್ಯೆಯಿಂದ ಸಾವನ್ನಪ್ಪಿದರು ಎಂದು ರಾಜ್ಯ ಪೊಲೀಸರು ಮೊದಲಿಗೆ ತೀರ್ಮಾನಿಸಿದ್ದರು. ಅಭಯಾ ಅವರು ತಮ್ಮ ಹಾಸ್ಟೆಲ್ ಕೊಠಡಿಯಿಂದ ಹೋಗುತ್ತಿದ್ದಾಗ ಬೆಳಿಗ್ಗೆ .೧೫ ಕ್ಕೆ ಅಡಿಗೆ ಕೋಣೆಗೆ ಹೋಗುತ್ತಿದ್ದಾಗ ಘಟನೆ ಸಂಭವಿಸಿದೆ ಎಂದು ಭಾವಿಸಲಾಗಿತ್ತು. (ವಿವರಗಳಿಗೆ  ಇಲ್ಲಿ ಕ್ಲಿಕ್   ಮಾಡಿರಿ)

2020: ಕಾಶ್ಮೀರ: ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದು ಪಡಿಸಿ ರಾಜ್ಯವನ್ನು ಕೇಂದ್ರಾಡಳಿತ ಪ್ರದೇಶವಾಗಿ ಪರಿವರ್ತಿಸಿದ ಬಳಿಕ ನಡೆದ ಮೊದಲ ಚುನಾವಣೆಯಾದ ಜಿಲ್ಲಾ ಅಭಿವೃದ್ಧಿ ಮಂಡಳಿಯ (ಡಿಡಿಸಿ) ಚೊಚ್ಚಲ ಚುನಾವಣೆಯಲ್ಲಿ ಪ್ರಾದೇಶಿಕ ಮತ್ತು ರಾಷ್ಟ್ರೀಯ ಪಕ್ಷಗಳ ಮೈತ್ರಿಕೂಟವಾದ ಪೀಪಲ್ಸ್ ಅಲೈಯನ್ಸ್ ಫಾರ್ ಗುಪ್ಕರ್ ಡಿಕ್ಲರೇಷನ್ (ಪಿಎಜಿಡಿ) ಪ್ರಚಂಡ ಜಯಗಳಿಸಿದೆ.ಆದರೂ ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.  ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ), ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ), ಪೀಪಲ್ಸ್ ಕಾನ್ಫರೆನ್ಸ್ (ಪಿಸಿ), ಪೀಪಲ್ಸ್ ಮೂವ್‌ಮೆಂಟ್ (ಪಿಎಂ), ಸಿಪಿಐ (ಎಂ), ಅವಾಮಿ ನ್ಯಾಷನಲ್ ಕಾನ್ಫರೆನ್ಸ್ (ಎಎನ್‌ಸಿ) ಮತ್ತು ಕಾಂಗ್ರೆಸ್  ಒಟ್ಟಿಗೆ  ೧೧೦ ಸ್ಥಾನಗಳನ್ನು ಗೆದ್ದಿವೆ. ಪಕ್ಷಗಳ ಮೈತ್ರಿಕೂಟದ ವಿರುದ್ಧ ಹೋರಾಟ ನೀಡಿದ್ದ ಭಾರತೀಯ ಜನತಾ ಪಕ್ಷ (ಬಿಜೆಪಿ) ೭೫ ಸ್ಥಾನಗಳನ್ನು ಪಡೆದು ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು.  ಪಿಎಜಿಡಿಯ ಪ್ರಭಾವವು ಹೆಚ್ಚಾಗಿ ಕಾಶ್ಮೀರ ಪ್ರದೇಶಕ್ಕೆ ಸೀಮಿತವಾಗಿತ್ತು. ಅದರ ಶೇಕಡಾ ೭೬ ಸ್ಥಾನಗಳು ಕಾಶ್ಮೀರ ಕಣಿವೆ ಪ್ರದೇಶದಿಂದಲೇ ಬಂದಿವೆ, ಶೇಕಡಾ ೨೪ರಷ್ಟು ಸ್ಥಾನಗಳು ಮಾತ್ರ ಜಮ್ಮು ಪ್ರದೇಶದಿಂದ ಬಂದವು. ಜಮ್ಮು  ಪ್ರದೇಶದಲ್ಲಿ ಗುಪ್ಕರ್ ಮೈತ್ರಿಕೂಟದ ಮಿತ್ರ ಪಕ್ಷಗಳು ಸೀಟು ಹಂಚಿಕೆಯಲ್ಲಿ ಒಮ್ಮತಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಮೈತ್ರಿಕೂಟದ ಮುಖ್ಯ ವಿರೋಧಿಗಳು ಬಿಜೆಪಿ ಮತ್ತು ಹೊಸದಾಗಿ ರೂಪುಗೊಂಡ ಅಪ್ನಿ ಪಕ್ಷ, ಇದು ಪಿಡಿಪಿ ಮಾಜಿ ಸಚಿವ ಅಲ್ತಾಫ್ ಬುಖಾರಿ ನೇತೃತ್ವದಲ್ಲಿದೆ, ಅವರು ಸಂವಿಧಾನದ ವಿಧಿ ೩೭೦ ಬೇಡಿಕೆಯಿಂದ ಆಚೆಗೆ ಸಾಗಿ ಬರಬೇಕು ಎಂದು ಸಲಹೆ ನೀಡುತ್ತಾರೆ. ಬಿಜೆಪಿ ಜಮ್ಮು ಪ್ರದೇಶದಲ್ಲಿ ತನ್ನ ಬೇರನ್ನು ಭದ್ರವಾಗಿ ಉಳಿಸಿಕೊಂಡಿದೆ ಮತ್ತು ಮೂರು ಸ್ಥಾನಗಳನ್ನು ಗೆಲ್ಲುವ ಮೂಲಕ ಕಾಶ್ಮೀರದಲ್ಲಿ ತನ್ನ ಖಾತೆಯನ್ನು ತೆರೆದಿದೆ. (ವಿವರಗಳಿಗೆ  ಇಲ್ಲಿ ಕ್ಲಿಕ್   ಮಾಡಿರಿ)

2020: ನವದೆಹಲಿ: ಚೊಚ್ಚಲ ಜಿಲ್ಲಾ ಅಭಿವೃದ್ಧಿ ಮಂಡಳಿ (ಡಿಡಿಸಿ) ಚುನಾವಣೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಮತ ಚಲಾಯಿಸಿದ್ದಕ್ಕಾಗಿ ಜಮ್ಮು ಮತ್ತು ಕಾಶ್ಮೀರದ ಜನರನ್ನು 2020 ಡಿಸೆಂಬರ್ 23ರ ಬುಧವಾರ ಅಭಿನಂದಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಚುನಾವಣೆಯಲ್ಲಿ ಬಿಜೆಪಿಯನ್ನು ಏಕೈಕ ದೊಡ್ಡ ಪಕ್ಷವಾಗಿ ಆಯ್ಕೆ ಮಾಡಿದ್ದಕ್ಕಾಗಿ ಜನರಿಗೆಹೃತ್ಪೂರ್ವಕ ಧನ್ಯವಾದ ಅರ್ಪಿಸಿದರು. "ಜಿಲ್ಲಾ ಅಭಿವೃದ್ಧಿ ಮಂಡಳಿ ಚುನಾವಣೆಯಲ್ಲಿ ಬಿಜೆಪಿಯನ್ನು ಏಕೈಕ ಅತಿದೊಡ್ಡ ಪಕ್ಷವಾಗಿ ಗೆಲ್ಲಿಸಿರುವುದಕ್ಕಾಗಿ ಜಮ್ಮು ಮತ್ತು ಕಾಶ್ಮೀರ ನಮ್ಮ ಸಹೋದರಿಯರು ಮತ್ತು ಸಹೋದರರಿಗೆ ಹೃತ್ಪೂರ್ವಕವಾಗಿ ಧನ್ಯವಾದ ಅರ್ಪಿಸುತ್ತೇನೆ. ಪ್ರಧಾನಿ ನರೇಂದ್ರ ಮೋದಿ ಜಿ ಅವರ ನೇತೃತ್ವದಲ್ಲಿ ಬಿಜೆಪಿ ಜಮ್ಮು-ಕಾಶ್ಮೀರ ಪ್ರದೇಶದ ಏಳಿಗೆ ಮತ್ತು ಅಭಿವೃದ್ಧಿಗೆ ಪಟ್ಟುಬಿಡದೆ ಕೆಲಸ ಮಾಡುವುದನ್ನು ಮುಂದುವರೆಸಲಿದೆ ಎಂದು ಶಾ ಬುಧವಾರ ಟ್ವೀಟ್ ಮಾಡಿದರು. "ಡಿಡಿಸಿ ಚುನಾವಣೆಯಲ್ಲಿ ಇಂತಹ ದೊಡ್ಡ ಮತದಾನಕ್ಕಾಗಿ ಜಮ್ಮು-ಕಾಶ್ಮೀರದ ಜನರಿಗೆ ಅಭಿನಂದನೆಗಳು. ಬಹು-ಹಂತದ ಚುನಾವಣೆಗಳನ್ನು ಯಶಸ್ವಿಯಾಗಿ ನಡೆಸುವಲ್ಲಿನ ನಮ್ಮ ಭದ್ರತಾ ಪಡೆ ಮತ್ತು ಸ್ಥಳೀಯ ಆಡಳಿತದ ಪ್ರಯತ್ನಗಳನ್ನು ನಾನು ಶ್ಲಾಘಿಸುತ್ತೇನೆ. ಇದು ಪ್ರಜಾಪ್ರಭುತ್ವದಲ್ಲಿ ಜೆ ಮತ್ತು ಕೆ ಜನರ ಮನೋಸ್ಥೈರ್ಯ ಮತ್ತು ವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದು ಅವರು ಹೇಳಿದರು. ಜಮ್ಮು ಮತ್ತು ಕಾಶ್ಮೀರದಲ್ಲಿ ತಳಮಟ್ಟದ ಪ್ರಜಾಪ್ರಭುತ್ವವನ್ನು ಪುನಃಸ್ಥಾಪಿಸಲು ಮೋದಿ ಸರ್ಕಾರ ಎಲ್ಲವನ್ನು ಮಾಡುತ್ತಿದೆ. ಜೆ ಮತ್ತು  ಕೆ ಇತಿಹಾಸದಲ್ಲಿ ಮೊದಲ ಬಾರಿಗೆ ಇತ್ತೀಚೆಗೆ ನಡೆದ ಡಿಡಿಸಿ ಚುನಾವಣೆಗಳು ಇದಕ್ಕೆ ಸಾಕ್ಷಿಯಾಗಿದೆ. ಚುನಾವಣೆಗಳಲ್ಲಿ ಸಾಮೂಹಿಕ ಭಾಗವಹಿಸುವಿಕೆಯು ಪ್ರಜಾಪ್ರಭುತ್ವದ ಬಗ್ಗೆ ಜನರ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆಎಂದು ಶಾ ಇನ್ನೊಂದು ಟ್ವೀಟಿನಲ್ಲಿ ಬರೆದರು. (ವಿವರಗಳಿಗೆ  ಇಲ್ಲಿ ಕ್ಲಿಕ್   ಮಾಡಿರಿ)

2020: ನವದೆಹಲಿ: ಕೇಂದ್ರದ ಮೂರು ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆಗಳು ೨೮ ನೇ ದಿನಕ್ಕೆ ಪ್ರವೇಶಿಸಿದ ವೇಳೆಯಲ್ಲಿ 2020 ಡಿಸೆಂಬರ್ 23ರ ಬುಧವಾರ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ಅವರು ಮತ್ತೊಮ್ಮೆ ಬಿಕ್ಕಟ್ಟು ಪರಿಹಾರದ ಬಗ್ಗೆ ಭರವಸೆ ವ್ಯಕ್ತಪಡಿಸಿದರು, ಸರ್ಕಾರವು ರೈತ ಸಂಘಗಳ ಜೊತೆ ಅವರಿಗೆ "ಅನುಕೂಲಕರವಾದ ಸಮಯ ಮತ್ತು ದಿನಾಂಕದಂದು ಚರ್ಚೆಗೆ ಸಿದ್ಧವಾಗಿದೆ ಎಂದು ಅವರು ಪುನರುಚ್ಚರಿಸಿದರು.  "ವಿವಿಧ ಯೋಜನೆಗಳ ಮೂಲಕ, ನಾವು ಕೃಷಿ ಕ್ಷೇತ್ರದ ಎಲ್ಲಾ ಅಂತರವನ್ನು ತುಂಬುತ್ತೇವೆ, ಅದು ರೈತರಿಗೆ ಪ್ರಯೋಜನವನ್ನು ನೀಡುತ್ತದೆ ಮತ್ತು ಅವರಿಗೆ ಸರಿಯಾದ ಬೆಲೆ ಸಿಗುತ್ತದೆ ಎಂದು ಖಚಿತಪಡಿಸುತ್ತದೆ ... ಕೋವಿಡ್ -೧೯ ಸಾಂಕ್ರಾಮಿಕ ಸಮಯದಲ್ಲಿ ಸಹ, ಕೃಷಿಗೆ ಸಂಬಂಧಿಸಿದ ಕೆಲಸಗಳ ಮೇಲೆ ದುಷ್ಪರಿಣಾಮ  ಬೀರದೇ ಇರುವುದನ್ನು ನಾವು ನೋಡಿದ್ದೇವೆ ಎಂದು ತೋಮರ್ ಅವರನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ. ಸಾಂಕ್ರಾಮಿಕ ಸಮಯದಲ್ಲಿ ಕೋಟಿಗೂ ಹೆಚ್ಚು ರೈತರನ್ನು ಕಿಸಾನ್ ಕ್ರೆಡಿಟ್ ವ್ಯಾಪ್ತಿಗೆ ತಂದಿರುವುದಕ್ಕಾಗಿ ನಾನು ಬ್ಯಾಂಕುಗಳಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಕಳೆದ ಎಂಟು ತಿಂಗಳಲ್ಲಿ ರೈತರಿಗಾಗಿ ಲಕ್ಷ ಕೋಟಿ ರೂ ಮೌಲ್ಯದ ಕೆಲವು ಸುಧಾರಣೆಗಳನ್ನು ನಾವು ಕೈಗೊಂಡಿದ್ದೇವೆ ಮತ್ತು ಅವರಿಗೆ ಭವಿಷ್ಯವನ್ನು ತರುತ್ತೇವೆ ಎಂದು ಅವರು ಹೇಳಿದರು.  ರೈತರ ಸಂಘಗಳು ನಮ್ಮ ವಿನಂತಿಯನ್ನು ಚರ್ಚಿಸುತ್ತವೆ ಎಂದು ನಾನು ಭಾವಿಸುತ್ತೇನೆ. ಅವರು ಸರ್ಕಾರದ ಪ್ರಸ್ತಾವನೆಯಿಂದ ಏನನ್ನು ಸೇರಿಸಲು ಮತ್ತು ಕಳೆಯಲು ಬಯಸುತ್ತಾರೆ ಎಂದು ಅವರು ನಮಗೆ ತಿಳಿಸಬೇಕು. ಅವರಿಗೆ ಅನುಕೂಲಕರವಾದ ಸಮಯ ಮತ್ತು ದಿನಾಂಕದಂದು ನಾವು ಚರ್ಚೆಗೆ ಸಿದ್ಧರಿದ್ದೇವೆ. ಪರಿಹಾರಕ್ಕಾಗಿ ನಾನು ಆಶಿಸುತ್ತಿದ್ದೇನೆ ಎಂದು ತೋಮರ್ ಹೇಳಿದರು. (ವಿವರಗಳಿಗೆ  ಇಲ್ಲಿ ಕ್ಲಿಕ್   ಮಾಡಿರಿ)

2020: ನವದೆಹಲಿ: ದೇಶದಲ್ಲಿ ನೇರ ಮನೆಗೆ ಟೆಲಿವಿಷನ್ (ಡೈರೆಕ್ಟ್-ಟು-ಹೋಮ್ ಟೆಲಿವಿಷನ್ -ಡಿಟಿಎಚ್) ಸೇವೆಗಳನ್ನು ಒದಗಿಸುವ ಮಾರ್ಗಸೂಚಿಗಳಲ್ಲಿ ಪರಿಷ್ಕರಣೆ ಮಾಡಲು ಕೇಂದ್ರ ಸಚಿವ ಸಂಪುಟವು ನಿರ್ಧರಿಸಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ( ಮತ್ತು ಬಿ) ಸಚಿವ ಪ್ರಕಾಶ ಜಾವಡೇಕರ್ 2020 ಡಿಸೆಂಬರ್ 23ರ ಬುಧವಾರ ಹೇಳಿದರು.  ಸಂಪುಟ ಸಭೆಯ ಬಳಿಕ, ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಜಾವಡೇಕರ್, ಡಿಟಿಎಚ್‌ಗೆ ೨೦ ವರ್ಷಗಳವರೆಗೆ ಪರವಾನಗಿ ನೀಡಲಾಗುವುದು ಮತ್ತು ತ್ರೈಮಾಸಿಕ ಆಧಾರದ ಮೇಲೆ ಪರವಾನಗಿ ಶುಲ್ಕವನ್ನು ಸಂಗ್ರಹಿಸಲಾಗುವುದು ಎಂದು ಹೇಳಿದರು.  ಹಿಂದೆ, ಎಲ್ಲಾ ಸೇವಾ ಪೂರೈಕೆದಾರರಿಗೆ ೧೦ ವರ್ಷಗಳ ಅವಧಿಗೆ ಪರವಾನಗಿ ನೀಡಲಾಗಿತ್ತು ಎಂದು ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್) ತಿಳಿಸಿದೆ.  ದೇಶದಲ್ಲಿ ಡಿಟಿಎಚ್ ಸೇವೆಗಳನ್ನು ಒದಗಿಸುವ ಮಾರ್ಗಸೂಚಿಗಳಲ್ಲಿ ಪರಿಷ್ಕರಣೆ ಅನುಮೋದಿಸಲು ಸಚಿವ ಸಂಪುಟವು ಬುಧವಾರ ನಿರ್ಧರಿಸಿದೆ. ಈಗ, ಡಿಟಿಎಚ್ ಪರವಾನಗಿಯನ್ನು ೨೦ ವರ್ಷಗಳವರೆಗೆ ನೀಡಲಾಗುವುದು, ಪರವಾನಗಿ ಶುಲ್ಕವನ್ನು ತ್ರೈಮಾಸಿಕವಾಗಿ ಸಂಗ್ರಹಿಸಲಾಗುವುದು ಎಂದು ಕೇಂದ್ರ ಸಚಿವರು ವಿವರಿಸಿದರು. ಇದಕ್ಕೂ ಮೊದಲು, ಡಿಟಿಎಚ್ ಸೇವೆಗಳಿಗೆ ಶಿಫಾರಸು ಮಾಡಲಾದ ನಿಯಂತ್ರಕ ಚೌಕಟ್ಟಿನ ಬಗ್ಗೆ ಅಭಿಪ್ರಾಯ/ ಟಿಪ್ಪಣಿಗಳನ್ನು ಕೋರಿ ಡಿಸೆಂಬರ್ ರಂದು ಸಮಾಲೋಚನಾ ಪತ್ರವನ್ನು ಬಿಡುಗಡೆ ಮಾಡಿತ್ತು. ಸಮಾಲೋಚನಾ ಪತ್ರದಲ್ಲಿ ಡಿಸೆಂಬರ್ ೧೪ ಮತ್ತು ಡಿಸೆಂಬರ್ ೧೯ ನಡುವಣ ಅವಧಿಯಲ್ಲಿ ಪಾಲುದಾರರಿಗೆ ಲಿಖಿತ ಪ್ರತಿಕ್ರಿಯೆ ಪಡೆಯಲಾಯಿತು. (ವಿವರಗಳಿಗೆ  ಇಲ್ಲಿ ಕ್ಲಿಕ್   ಮಾಡಿರಿ)

2020: ನವದೆಹಲಿ: ಪರಿಶಿಷ್ಟ ಜಾತಿ (ಎಸ್‌ಸಿ) ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ಯೋಜನೆಯ ಬಜೆಟನ್ನು ಐದು ಪಟ್ಟು ಹೆಚ್ಚಿಸುವ ಮೂಲಕ ಉನ್ನತ ಶಿಕ್ಷಣ ಪಡೆಯುವ ಅವರ ಪ್ರಯತ್ನಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸುವ ಕೊಡುಗೆ ನೀಡಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು (ಸಿಸಿಇಎ) 2020 ಡಿಸೆಂಬರ್ 23ರ ಬುಧವಾರ ನಿರ್ಧರಿಸಿತು. ಐದು ವರ್ಷಗಳಲ್ಲಿ ಕೋಟಿ ಪರಿಶಿಷ್ಟ ಜಾತಿ (ಎಸ್‌ಸಿ) ವಿದ್ಯಾರ್ಥಿಗಳಿಗೆ ೫೯,೦೦೦ ಕೋಟಿ ರೂ.ಗಳ ಮೌಲ್ಯದ ಮೆಟ್ರಿಕ್ ಬಳಿಕದ ವಿದ್ಯಾರ್ಥಿವೇತನ ಯೋಜನೆಗೆ ಸಂಪುಟ ಅನುಮೋದನೆ ನೀಡಿದೆ. ಯೋಜನೆಯನ್ನು ಸರಳಗೊಳಿಸಲು ಮತ್ತು ಹಣವನ್ನು ನೇರವಾಗಿ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲು ಕೇಂದ್ರವು ತೀರ್ಮಾನಿಸಿತು.  ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಥಾವರ್ ಚಂದ್ ಗೆಹ್ಲೋಟ್ ಅವರು ಪತ್ರಿಕಾಗೋಷ್ಠಿಯಲ್ಲಿ ವಿಚಾರವನ್ನು ತಿಳಿಸಿದರು.  ವಿದ್ಯಾರ್ಥಿ ವೇತನಕ್ಕೆ ಒದಗಿಸಲಾಗುವ ಹಣದಲ್ಲಿ ಕೇಂದ್ರದ ಪಾಲನ್ನು ಹೆಚ್ಚಿಸಲಾಗಿದೆ. ವಿದ್ಯಾರ್ಥಿವೇತನದ ಮೊತ್ತದ ಶೇಕಡಾ ೬೦ನ್ನು ಕೇಂದ್ರವು ಪಾವತಿಸಲಿದ್ದು, ರಾಜ್ಯಗಳು ಶೇಕಡಾ ೪೦ನ್ನು ಭರಿಸುತ್ತವೆ. ಕೇಂದ್ರವು ೩೫,೫೩೪ ರೂಗಳನ್ನು ಇದಕ್ಕಾಗಿ ಖರ್ಚು ಮಾಡುತ್ತದೆ ಮತ್ತು ಉಳಿದ ಹಣವನ್ನು ರಾಜ್ಯ ಸರ್ಕಾರಗಳು ಖರ್ಚು ಮಾಡುತ್ತವೆ ಎಂದು ಅವರು ಹೇಳಿದರು. ಮುಂದಿನ ಐದು ವರ್ಷಗಳಲ್ಲಿ ಕೋಟಿಗೂ (೪೦ ದಶಲಕ್ಷ) ಹೆಚ್ಚು ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಉದ್ದೇಶದಿಂದ ಕೇಂದ್ರೀಕೃತ ಪ್ರಾಯೋಜಿತ ಯೋಜನೆಯಾದ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ (ಪಿಎಂಎಸ್-ಎಸ್‌ಸಿ) ಬದಲಾವಣೆಗಳನ್ನು ಸಿಸಿಇಎ ಅನುಮೋದಿಸಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿತು. ಒಟ್ಟು ೫೯,೦೪೮ ಕೋಟಿ ರೂ.ಗಳ ಹೂಡಿಕೆಗೆ ಸಚಿವ ಸಂಪುಟವು ಅನುಮೋದನೆ ನೀಡಿದ್ದು, ಅದರಲ್ಲಿ ಕೇಂದ್ರವು ಶೇಕಡಾ ೬೦ ಪಾಲನ್ನು ನೀಡಲಿದೆ. ಉಳಿದ ಶೇಕಡಾ ೪೦ ಪಾಲು ಮೊತ್ತವನ್ನು ರಾಜ್ಯಗಳು ನೀಡುತ್ತವೆ. (ವಿವರಗಳಿಗೆ  ಇಲ್ಲಿ ಕ್ಲಿಕ್   ಮಾಡಿರಿ)

ಇಂದಿನ ಇತಿಹಾಸ  History Today ಡಿಸೆಂಬರ್ 23 (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

-ಸಂಗ್ರಹ: ನೆತ್ರಕೆರೆ ಉದಯಶಂಕರ

No comments:

Post a Comment