Showing posts with label Pakistan. Show all posts
Showing posts with label Pakistan. Show all posts

Wednesday, April 15, 2026

PARYAYA: ಕೊಲ್ಲಿ ಯುದ್ಧ ಮಧ್ಯಸ್ಥಿಕೆ: ಹೊಟೇಲ್‌ ಬಿಲ್‌ ಪಾವತಿಗೂ ಪಾಕ...

  ಕೊಲ್ಲಿ ಯುದ್ಧ ಮಧ್ಯಸ್ಥಿಕೆ: ಹೊಟೇಲ್‌ ಬಿಲ್‌ ಪಾವತಿಗೂ ಪಾಕ್‌ ಪರದಾಟ!

ಸ್ಲಾಮಾಬಾದ್: ಅಂತರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಮಟ್ಟದ ರಾಜತಾಂತ್ರಿಕ ವಿಜಯ ಸಾಧಿಸಲು ಹೊರಟಿದ್ದ ಪಾಕಿಸ್ತಾನಕ್ಕೆ ಈಗ ಭಾರಿ ಮುಖಭಂಗವಾಗಿದೆ. ಅಮೆರಿಕ ಮತ್ತು ಇರಾನ್ ನಡುವಿನ ಉನ್ನತ ಮಟ್ಟದ ಮಾತುಕತೆಗೆ ಆತಿಥ್ಯ ವಹಿಸಿದ್ದ ಪಾಕಿಸ್ತಾನ ಸರ್ಕಾರಕಾರ್ಯಕ್ರಮ ನಡೆದ ಹೋಟೆಲ್‌ನ ಬಾಕಿ ಹಣವನ್ನು ಪಾವತಿಸಲಾಗದೆ ಸಂಕಷ್ಟಕ್ಕೆ ಸಿಲುಕಿದೆ.

ಘಟನೆಯ ಹಿನ್ನೆಲೆ:

ಇಸ್ಲಾಮಾಬಾದ್‌ನ ಪ್ರತಿಷ್ಠಿತ **'ಸೆರೆನಾ ಹೋಟೆಲ್'**ನಲ್ಲಿ ಅಮೆರಿಕ ಮತ್ತು ಇರಾನ್ ಪ್ರತಿನಿಧಿಗಳ ನಡುವೆ ಮಹತ್ವದ ಚರ್ಚೆಗಳು ನಡೆದಿದ್ದವು. ಪ್ರಾದೇಶಿಕ ಮಧ್ಯಸ್ಥಿಕೆದಾರನಾಗಿ ತನ್ನ ಇಮೇಜ್ ಹೆಚ್ಚಿಸಿಕೊಳ್ಳಲು ಪಾಕಿಸ್ತಾನ ಈ ಅವಕಾಶವನ್ನು ಬಳಸಿಕೊಂಡಿತ್ತು. ಆದರೆಹೋಟೆಲ್ ಬಿಲ್ ಪಾವತಿಸುವಲ್ಲಿ ವಿಫಲವಾದ ಕಾರಣ ಈಗ ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನದ ಆರ್ಥಿಕ ದುಸ್ಥಿತಿ ಹರಾಜಾಗಿದೆ.

ವಿವಾದದ ಮುಖ್ಯಾಂಶಗಳು:

  • ಮಾಲೀಕರೇ ಬಿಲ್ ಕಟ್ಟುವ ಸ್ಥಿತಿ: ವರದಿಗಳ ಪ್ರಕಾರಹೋಟೆಲ್ ಬಿಲ್ ಪಾವತಿಸಲು ಸರ್ಕಾರದ ಬಳಿ ಹಣವಿಲ್ಲದ ಕಾರಣ ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು. ಕೊನೆಗೆ ಹೋಟೆಲ್ ಮಾಲೀಕರೇ ಮಧ್ಯಪ್ರವೇಶಿಸಿ ಬಾಕಿಯನ್ನು ಚುಕ್ತಾ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು ಎಂದು ಮೂಲಗಳು ತಿಳಿಸಿವೆ.
  • ದುಬಾರಿ ವಾಸ್ತವ್ಯ: ಈ ಪಂಚತಾರಾ ಹೋಟೆಲ್‌ನಲ್ಲಿ ಒಂದು ಸಾಮಾನ್ಯ ಕೋಣೆಯ ಬಾಡಿಗೆ ಸುಮಾರು ₹13,000 ($160) ಇದ್ದರೆಪ್ರೆಸಿಡೆನ್ಶಿಯಲ್ ಸೂಟ್‌ನ ಬೆಲೆ ಪ್ರತಿ ರಾತ್ರಿಗೆ ಅಂದಾಜು ₹2 ಲಕ್ಷಕ್ಕೂ ಅಧಿಕ ($2,375).
  • ಪ್ರತಿಷ್ಠೆಗೆ ಬಿದ್ದ ಪೆಟ್ಟು: "ಒಂದು ಕಡೆ ರಾಜತಾಂತ್ರಿಕ ವಿಜಯದ ಬಗ್ಗೆ ಮಾತನಾಡುತ್ತಾಇನ್ನೊಂದು ಕಡೆ ಹೋಟೆಲ್ ಬಿಲ್ ಕಟ್ಟಲು ಸಾಧ್ಯವಾಗದ ಸ್ಥಿತಿಯಲ್ಲಿ ಪಾಕಿಸ್ತಾನವಿದೆ" ಎಂದು ಗುಪ್ತಚರ ಮೂಲಗಳು ವ್ಯಂಗ್ಯವಾಡಿವೆ.

ಆರ್ಥಿಕ ಮುಗ್ಗಟ್ಟಿನ ಪ್ರತಿಬಿಂಬ:

ಪಾಕಿಸ್ತಾನವು ಈಗಾಗಲೇ ಅಂತರಾಷ್ಟ್ರೀಯ ಹಣಕಾಸು ನಿಧಿ (IMF) ಕಠಿಣ ನಿಗಾ ಮತ್ತು ಆರ್ಥಿಕ ಬಿಕ್ಕಟ್ಟಿನ ಸುಳಿಯಲ್ಲಿದೆ. ಇಂತಹ ಸಮಯದಲ್ಲಿ ಒಂದು ಅಂತರಾಷ್ಟ್ರೀಯ ಮಟ್ಟದ ಕಾರ್ಯಕ್ರಮದ ಕನಿಷ್ಠ ವೆಚ್ಚವನ್ನೂ ಭರಿಸಲಾಗದ ಪಾಕಿಸ್ತಾನದ ಸ್ಥಿತಿಆ ದೇಶದ ಆಡಳಿತಾತ್ಮಕ ಮತ್ತು ಆರ್ಥಿಕ ದುರ್ಬಲತೆಯನ್ನು ಎತ್ತಿ ತೋರಿಸುತ್ತಿದೆ.

"ರಾಜತಾಂತ್ರಿಕ ಮಹತ್ವಾಕಾಂಕ್ಷೆಗಳಿಗೂ ಮತ್ತು ದೇಶದ ಆರ್ಥಿಕ ವಾಸ್ತವಕ್ಕೂ ತಾಳೆಯೇ ಆಗುತ್ತಿಲ್ಲ" ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಮಾತುಕತೆಯಲ್ಲಿ ಯಾವುದೇ ದೊಡ್ಡ ಒಪ್ಪಂದ ನಡೆಯದಿದ್ದರೂಕದನ ವಿರಾಮ ಮುಗಿಯುವ ಮೊದಲು ಅಮೆರಿಕ ಮತ್ತು ಇರಾನ್ ಮತ್ತೊಮ್ಮೆ ಮಾತುಕತೆ ನಡೆಸುವ ಸಾಧ್ಯತೆಯಿದೆ. ಆದರೆ ಪಾಕಿಸ್ತಾನಕ್ಕೆ ಮಾತ್ರ ಈ ಘಟನೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

PARYAYA: ಕೊಲ್ಲಿ ಯುದ್ಧ ಮಧ್ಯಸ್ಥಿಕೆ: ಹೊಟೇಲ್‌ ಬಿಲ್‌ ಪಾವತಿಗೂ ಪಾಕ...:     ಕೊಲ್ಲಿ ಯುದ್ಧ ಮಧ್ಯಸ್ಥಿಕೆ: ಹೊಟೇಲ್‌ ಬಿಲ್‌ ಪಾವತಿಗೂ ಪಾಕ್‌ ಪರದಾಟ! ಇ ಸ್ಲಾಮಾಬಾದ್:   ಅಂತರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಮಟ್ಟದ ರಾಜತಾಂತ್ರಿಕ ವಿಜಯ ಸಾಧಿಸಲು ...

Saturday, January 31, 2026

PARYAYA: ಭಿಕ್ಷೆ ಬೇಡುವಾಗ ನಾಚಿಕೆಯಾಗುತ್ತದೆ: ಪಾಕ್ ಪ್ರಧಾನಿ ಷರೀಫ್

 ಭಿಕ್ಷೆ ಬೇಡುವಾಗ ನಾಚಿಕೆಯಾಗುತ್ತದೆ: ಪಾಕ್ ಪ್ರಧಾನಿ ಷರೀಫ್

ಪಾಕಿಸ್ತಾನದ ಪ್ರಧಾನ ಮಂತ್ರಿ ಶೆಹಬಾಜ್ ಷರೀಫ್ ಅವರು ತಮ್ಮ ದೇಶದ ಆರ್ಥಿಕ ಸಂಕಷ್ಟದ ಬಗ್ಗೆ ಅತ್ಯಂತ ಕಟು ಸತ್ಯವೊಂದನ್ನು ಒಪ್ಪಿಕೊಂಡಿದ್ದಾರೆ. ಇತ್ತೀಚೆಗೆ ಇಸ್ಲಾಮಾಬಾದ್‌ನಲ್ಲಿ ನಡೆದ ಉನ್ನತ ರಫ್ತುದಾರರ ಸಭೆಯಲ್ಲಿ ಮಾತನಾಡುತ್ತಾತಮ್ಮ ದೇಶ ಸಾಲದ ಸುಳಿಗೆ ಸಿಲುಕಿರುವುದರ ಬಗ್ಗೆ ಅವರು ಸಂಕಟ ವ್ಯಕ್ತಪಡಿಸಿದ್ದಾರೆ ಎಂದು ಎನ್‌ ಡಿಟಿವಿ ವರದಿ ಮಾಡಿದೆ.

ಷರೀಫ್ ಅವರ ಭಾಷಣದ ಪ್ರಮುಖ ಅಂಶಗಳು ಇಲ್ಲಿವೆ:

ಸಾಲ ಪಡೆಯುವುದು ಒಂದು ಹೊರೆ

"ನಾನು ಮತ್ತು ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಆಸಿಮ್ ಮುನೀರ್ ಅವರು ಹಣಕ್ಕಾಗಿ ಜಗತ್ತಿನಾದ್ಯಂತ ಕೈ ಚಾಚುತ್ತಾ (Beggingಹೋಗುವಾಗ ನಮಗೆ ಅತೀವ ನಾಚಿಕೆಯಾಗುತ್ತದೆ. ಸಾಲ ಪಡೆಯುವುದು ನಮ್ಮ ಸ್ವಾಭಿಮಾನದ ಮೇಲೆ ಬಿದ್ದಿರುವ ದೊಡ್ಡ ಹೊರೆ. ಅವರ ಮುಂದೆ ಹೋದಾಗ ಅವಮಾನದಿಂದ ನಮ್ಮ ತಲೆ ತಗ್ಗಿ ಹೋಗುತ್ತದೆ," ಎಂದು ಷರೀಫ್ ಬಹಿರಂಗವಾಗಿ ಹೇಳಿದ್ದಾರೆ.

ಅನಿವಾರ್ಯವಾದ ರಾಜಿ

ಸಾಲ ನೀಡುವ ದೇಶಗಳ ಶರತ್ತುಗಳಿಗೆ ಬದ್ಧರಾಗಬೇಕಾದ ಅಸಹಾಯಕತೆಯನ್ನು ವಿವರಿಸುತ್ತಾ, "ಸಾಲ ಪಡೆಯುವವನ ತಲೆ ಯಾವಾಗಲೂ ಬಾಗಿರುತ್ತದೆ. ಅವರು ನಮಗೆ ಬೇಡವೆಂದರೂ ಕೆಲವು ಕೆಲಸಗಳನ್ನು ಮಾಡುವಂತೆ ಒತ್ತಾಯಿಸುತ್ತಾರೆಆಗ ನಾವು ಅವರಿಗೆ 'ಇಲ್ಲಎಂದು ಹೇಳಲು ಸಾಧ್ಯವಾಗುವುದಿಲ್ಲ. ಹಲವು ವಿಷಯಗಳಲ್ಲಿ ನಾವು ರಾಜೀ ಮಾಡಿಕೊಳ್ಳಬೇಕಾಗುತ್ತದೆ," ಎಂದು ಅವರು ಈ ಸಂದರ್ಭದಲ್ಲಿ ಬೇಸರ ವ್ಯಕ್ತಪಡಿಸಿದರು. 
ವಿಡಿಯೋ ನೋಡಲು ಕೆಳಗೆ ಕ್ಲಿಕ್‌ ಮಾಡಿ.

ಆರ್ಥಿಕ ಪರಿಸ್ಥಿತಿಯ ಏರುಪೇರು

ಪಾಕಿಸ್ತಾನದ ವಿದೇಶಿ ವಿನಿಮಯ ಮೀಸಲು ನಿಧಿಯು ಸದ್ಯಕ್ಕೆ ದ್ವಿಗುಣಗೊಂಡಿದ್ದರೂಅದರಲ್ಲಿ ಮಿತ್ರ ರಾಷ್ಟ್ರಗಳ ಸಾಲದ ಪಾಲು ಹೆಚ್ಚಿದೆ ಎಂದು ಅವರು ಸ್ಪಷ್ಟಪಡಿಸಿದರು. ಸದ್ಯ ಪಾಕಿಸ್ತಾನವು IMF (ಅಂತಾರಾಷ್ಟ್ರೀಯ ಹಣಕಾಸು ನಿಧಿ) ಜೊತೆಗೆ ಆರ್ಥಿಕ ಬೆಳವಣಿಗೆಯ ಯೋಜನೆಗಳ ಬಗ್ಗೆ ಗಂಭೀರ ಚರ್ಚೆಯಲ್ಲಿದೆ.

  • ಇತ್ತೀಚಿನ ಬೆಳವಣಿಗೆ: ಪಾಕಿಸ್ತಾನವು ಇತ್ತೀಚೆಗೆ IMF ನಿಂದ $1.2 ಬಿಲಿಯನ್ ಸಾಲವನ್ನು ಪಡೆದಿದೆ.
  • ಮೀಸಲು ನಿಧಿ: ಡಿಸೆಂಬರ್ ವೇಳೆಗೆ ಪಾಕಿಸ್ತಾನದ ವಿದೇಶಿ ವಿನಿಮಯ ಮೀಸಲು ನಿಧಿಯು ದಾಖಲೆಯ $20 ಬಿಲಿಯನ್ ದಾಟಲಿದೆ ಎಂದು ಅಂದಾಜಿಸಲಾಗಿದೆ. ಆದರೆಇದಕ್ಕಾಗಿ ದೇಶವು ಕಠಿಣ ಆರ್ಥಿಕ ನೀತಿಗಳನ್ನು ಅನುಸರಿಸಬೇಕಿದೆ.

ಮುಂದಿನ ಗುರಿ: ಉದ್ಯೋಗ ಸೃಷ್ಟಿ

ಹಣಕಾಸು ಸಚಿವ ಮುಹಮ್ಮದ್ ಔರಂಗಜೇಬ್ ನೇತೃತ್ವದ ತಂಡವು IMF ಮುಂದೆ ಪ್ರಬಲವಾದ ವಾದವನ್ನು ಮಂಡಿಸಿದೆ ಎಂದ ಷರೀಫ್, "ನಾವು ಈಗ ಸ್ಥಿರತೆಯನ್ನು ಸಾಧಿಸಿದ್ದೇವೆ. ಇನ್ನು ಮುಂದೆ ಉದ್ಯೋಗ ಸೃಷ್ಟಿ ಮಾಡುವುದು ಮತ್ತು ಬಡತನ ನಿರ್ಮೂಲನೆ ಮಾಡುವುದೇ ನಮ್ಮ ಮುಂದಿರುವ ಮುಖ್ಯ ಗುರಿ," ಎಂದು ಉದ್ಯಮಿಗಳಿಗೆ ಭರವಸೆ ನೀಡಿದರು.

ಸಾರಾಂಶ: ಪಾಕಿಸ್ತಾನದ ಪ್ರಧಾನಿಯ ಈ ಹೇಳಿಕೆಯು ಆ ದೇಶದ ಆರ್ಥಿಕ ದಿವಾಳಿತನ ಎಷ್ಟು ಗಂಭೀರವಾಗಿದೆ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅದು ಎಂತಹ ಮುಜುಗರವನ್ನು ಎದುರಿಸುತ್ತಿದೆ ಎಂಬುದಕ್ಕೆ ಹಿಡಿದ ಕೈಗನ್ನಡಿ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

PARYAYA: ಭಿಕ್ಷೆ ಬೇಡುವಾಗ ನಾಚಿಕೆಯಾಗುತ್ತದೆ: ಪಾಕ್ ಪ್ರಧಾನಿ ಷರೀಫ್:   ಭಿಕ್ಷೆ ಬೇಡು ವಾಗ ನಾಚಿಕೆಯಾಗುತ್ತದೆ: ಪಾಕ್ ಪ್ರಧಾನಿ ಷರೀಫ್ ಪಾ ಕಿಸ್ತಾನದ ಪ್ರಧಾನ ಮಂತ್ರಿ ಶೆಹಬಾಜ್ ಷರೀಫ್ ಅವರು ತಮ್ಮ ದೇಶದ ಆರ್ಥಿಕ ಸಂಕಷ್ಟದ ಬಗ್ಗೆ ಅತ್ಯಂತ ಕಟು...

Wednesday, October 1, 2025

PARYAYA: ಸಿನಿಮಾ ದೃಶ್ಯವಲ್ಲ, ಪಾಕ್‌ ಆಕ್ರಮಿತ ಕಾಶ್ಮೀರದ ವಾಸ್ತವ!

 ಸಿನಿಮಾ ದೃಶ್ಯವಲ್ಲ, ಪಾಕ್‌ ಆಕ್ರಮಿತ ಕಾಶ್ಮೀರದ ವಾಸ್ತವ!

2025 ಅಕ್ಟೋಬರ್ 1ರ ಬುಧವಾರ ಪಾಕಿಸ್ತಾನದ ಪಂಜಾಬಿ ಸೈನ್ಯವು ಕಾಶ್ಮೀರಿ ಪ್ರತಿಭಟನಾಕಾರರನ್ನು ತಡೆಯಲು ದಾದ್ಯಾಲ್‌ನ ಪಾಲಕ್ ಸೇತುವೆಯ ಮೇಲೆ ಮೂರು ದೊಡ್ಡ ಕಂಟೈನರ್‌ಗಳನ್ನು ಇಟ್ಟು ಮಾರ್ಗವನ್ನು ಬಂದ್ ಮಾಡಿತ್ತು.

ಆದರೆಸ್ಥಳೀಯರು ಯಾವುದೇ ಸಾಧನಗಳಿಲ್ಲದೆಬರಿಗೈಯಲ್ಲೇ ಆ ಬೃಹತ್ ಕಂಟೈನರ್‌ಗಳನ್ನು ಸೇತುವೆಯಿಂದ ಕೆಳಗೆಮಂಗ್ಲಾ ಜಲಾಶಯಕ್ಕೆ ತಳ್ಳಿಬಿಟ್ಟಿದ್ದಾರೆ!

ಹಣದುಬ್ಬರ ಮತ್ತು ಆರ್ಥಿಕ ಸಂಕಷ್ಟಗಳ ವಿರುದ್ಧ ಸಿಡಿದೆದ್ದ ಜನರ ಆಕ್ರೋಶದ ಮುಂದೆ ಕಂಟೈನರ್‌ಗಳ ಬ್ಲಾಕೇಡ್ ನಡೆಯಲಿಲ್ಲ.

ಈ ಘಟನೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ  (Pak occupied Kashmir /PoK) ತೀವ್ರಗೊಳ್ಳುತ್ತಿರುವ ಅಶಾಂತಿಗೆ ಸಾಕ್ಷಿಯಾಗಿದೆ. ಘರ್ಷಣೆಗಳಲ್ಲಿ ಇಬ್ಬರು ಪ್ರತಿಭಟನಾಕಾರರು ಮೃತಪಟ್ಟುಹಲವರು ಗಾಯಗೊಂಡಿದ್ದಾರೆ. ಆವಾಮಿ ಆಕ್ಷನ್ ಕಮಿಟಿ ಬಂದ್‌ಗೆ ಕರೆ ನೀಡಿದೆ.

ಉಗ್ರ ಆಕ್ರೋಶದಲ್ಲಿರುವ ಜನರನ್ನು ತಡೆಯಲು ಯಾವುದೇ ಶಕ್ತಿಗೂ ಸಾಧ್ಯವಿಲ್ಲ ಎಂದು ಈ ಘಟನೆ ಸಾರಿ ಹೇಳುತ್ತಿದೆ! ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಜನರ ಪ್ರತಿಭಟನೆಯ ಅಲೆ ದಿನದಿಂದ ದಿನಕ್ಕೆ ವ್ಯಾಪಕಗೊಳ್ಳುತ್ತಿದೆ ಎಂದು ವರದಿಗಳು ಹೇಳುತ್ತಿವೆ

ಎಕ್ಸ್‌ (ಹಿಂದಿನ ಟ್ವಿಟ್ಟರ್)‌ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಗೊಂಡಿರುವ ಈ ವಿಡಿಯೋ ಪೋಸ್ಟ್‌ ಒಂದೇ ದಿನದಲ್ಲಿ ಒಂದು ಲಕ್ಷಕ್ಕೂ  ಹೆಚ್ಚು ವೀಕ್ಷಣೆಗಳನ್ನು ಕಂಡಿದೆ.

PARYAYA: ಸಿನಿಮಾ ದೃಶ್ಯವಲ್ಲ, ಪಾಕ್‌ ಆಕ್ರಮಿತ ಕಾಶ್ಮೀರದ ವಾಸ್ತವ!:  ಸಿನಿಮಾ ದೃಶ್ಯವಲ್ಲ , ಪಾಕ್‌ ಆಕ್ರಮಿತ ಕಾಶ್ಮೀರದ ವಾಸ್ತವ! 2025 ಅಕ್ಟೋಬರ್ 1ರ ಬುಧವಾರ  ಪಾಕಿಸ್ತಾನದ ಪಂಜಾಬಿ ಸೈನ್ಯವು ಕಾಶ್ಮೀರಿ ಪ್ರತಿಭಟನಾಕಾರರನ್ನು ತಡೆಯಲು ದಾ...

Sunday, March 16, 2025

PARYAYA: ೨೦೨೩ರ ರಾಜೌರಿ ದಾಳಿಯ ಸೂತ್ರಧಾರಿ ಅಬು ಕತಾಲ್ ಹತ್ಯೆ

 ೨೦೨೩ರ ರಾಜೌರಿ ದಾಳಿಯ ಸೂತ್ರಧಾರಿ ಅಬು ಕತಾಲ್ ಹತ್ಯೆ

ವದೆಹಲಿ: ಲಷ್ಕರ್--ತೈಬಾ ಸಂಘಟನೆಗೆ ಸೇರಿದ ʼಮೋಸ್ಟ್ ವಾಂಟೆಡ್ʼ ಭಯೋತ್ಪಾದಕರಲ್ಲಿ ಒಬ್ಬನಾದ ಅಬು ಕತಾಲ್ ಯಾನೆ ಫೈಸಲ್‌ ನದೀಮ್‌ ೨೦೨೫ ಮಾರ್ಚ್‌ ೧೫ರ ಶನಿವಾರ ರಾತ್ರಿ ಪಾಕಿಸ್ತಾನದಲ್ಲಿ ಹತನಾಗಿದ್ದಾನೆ ಎಂದು ವರದಿಗಳು ತಿಳಿಸಿವೆ.

ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಯಲ್ಲಿ ಈತ ಪ್ರಮುಖ ವ್ಯಕ್ತಿಯಾಗಿದ್ದ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಹಲವಾರು ದಾಳಿಗಳನ್ನು ಆಯೋಜಿಸುವ ಜವಾಬ್ದಾರಿಯನ್ನು ಹೊಂದಿದ್ದ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

ವರದಿಗಳ ಪ್ರಕಾರಪಾಕಿಸ್ತಾನದ ಝೇಲಂನ ದಿನಾ ಪ್ರದೇಶದಲ್ಲಿ ಅಪರಿಚಿತ ವ್ಯಕ್ತಿಯಿಂದ ಕತಾಲ್ ಹತ್ಯೆಗೀಡಾಗಿದ್ದಾನೆ

೨೬/೧೧ ಮುಂಬೈ ದಾಳಿಯ ಸೂತ್ರಧಾರ ಹಫೀಜ್ ಸಯೀದನ ಆಪ್ತ ಸಹಚರನಾಗಿದ್ದ ಅಬು ಕತಾಲ್ ಜೂನ್ 9 ರಂದು ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ಶಿವ ಖೋರಿ ದೇವಸ್ಥಾನದಿಂದ ಹಿಂತಿರುಗುತ್ತಿದ್ದ ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಬಸ್ ಮೇಲೆ ನಡೆದ ದಾಳಿಯಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ. ಕತಾಲ್ ನೇತೃತ್ವದಲ್ಲಿ ಈ ದಾಳಿಯನ್ನು ಆಯೋಜಿಸಲಾಗಿತ್ತು.

ಜನವರಿ ೧೨೦೨೩ ರಂದುರಾಜೌರಿಯ ಧಂಗ್ರಿ ಗ್ರಾಮದಲ್ಲಿ ನಾಗರಿಕರನ್ನು ಗುರಿಯಾಗಿಸಿಕೊಂಡು ಭಯೋತ್ಪಾದಕ ದಾಳಿ ನಡೆಸಲಾಗಿತ್ತು. ದಾಳಿಯ ನಂತರ ಮರುದಿನ ಐಇಡಿ ಸ್ಫೋಟ ಸಂಭವಿಸಿತ್ತು. ಇಬ್ಬರು ಮಕ್ಕಳು ಸೇರಿದಂತೆ ಏಳು ಜನರು ಪ್ರಾಣ ಕಳೆದುಕೊಂಡಿದ್ದರು. ಇತರ ಹಲವರು ತೀವ್ರ ಗಾಯಗೊಂಡಿದ್ದರು.

ಹಫೀಜ್ ಸಯೀದ್ ಅಬು ಕತಾಲ್ ನನ್ನು ಲಷ್ಕರ್--ತೈಬಾದ ಮುಖ್ಯ ಕಾರ್ಯಾಚರಣಾ ಕಮಾಂಡರ್ ಆಗಿ ನೇಮಿಸಿದ್ದ. ಹಫೀಜ್ ಸಯೀದ್ ಅಬು ಕತಾಲ್ ಗೆ ಆದೇಶ ನೀಡುತ್ತಿದ್ದ. ಅದರಂತೆ ಕತಾಲ್ ಕಾಶ್ಮೀರದಲ್ಲಿ ಪ್ರಮುಖ ದಾಳಿಗಳನ್ನು ನಡೆಸುತ್ತಿದ್ದ.

೨೦೨೩ ರ ರಾಜೌರಿ ದಾಳಿಯಲ್ಲಿ ಅಬು ಕತಾಲ್ ಪಾತ್ರಕ್ಕಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತನ್ನ ಆರೋಪಪಟ್ಟಿಯಲ್ಲಿ ಅಬು ಕತಾಲ್‌ನನ್ನು ಹೆಸರಿಸಿತ್ತು.

ರಾಜೌರಿ ದಾಳಿಗೆ ಸಂಬಂಧಿಸಿದಂತೆಎನ್‌ಐಎ ಐದು ಆರೋಪಿಗಳ ಮೇಲೆ ಆರೋಪಪಟ್ಟಿ ಸಲ್ಲಿಸಿದೆಅವರಲ್ಲಿ ಮೂವರು ನಿಷೇಧಿತ ಲಷ್ಕರ್- -ತೈಬಾಕ್ಕೆ ಸೇರಿದ ಪಾಕಿಸ್ತಾನೀಯರು.

ನಾಗರಿಕರನ್ನುವಿಶೇಷವಾಗಿ ಜಮ್ಮು ಮತ್ತು ಕಾಶ್ಮೀರದ ಅಲ್ಪಸಂಖ್ಯಾತ ಸಮುದಾಯದ ನಾಗರಿಕರನ್ನು ಮತ್ತು ಭದ್ರತಾ ಸಿಬ್ಬಂದಿಯನ್ನು ಗುರಿಯಾಗಿಸಲು ಪಾಕಿಸ್ತಾನದಿಂದ ಎಲ್‌ಇಟಿ ಭಯೋತ್ಪಾದಕರ ನೇಮಕಾತಿ ಮತ್ತು ರವಾನೆಯನ್ನು ಈ ಮೂವರು ಸಂಘಟಿಸಿದ್ದರು ಎಂದು ಎನ್‌ಐಎ ತನಿಖೆಗಳು ಬಹಿರಂಗಪಡಿಸಿವೆ.

ಜಮ್ಮು ಮತ್ತು ಕಾಶ್ಮೀರದಾದ್ಯಂತ ಹಲವಾರು ಭಯೋತ್ಪಾದನಾ ಸಂಬಂಧಿತ ಘಟನೆಗಳಲ್ಲಿ ಭಾಗಿಯಾಗಿದ್ದಕ್ಕಾಗಿ ಅಬು ಕತಾಲ್ ಮೇಲೆ ಸೇನೆ ಸೇರಿದಂತೆ ಹಲವಾರು ಭದ್ರತಾ ಸಂಸ್ಥೆಗಳು ನಿಗಾ ಇಟ್ಟಿದ್ದವು.

ಕೆಳಗಿನವುಗಳನ್ನೂ ಓದಿರಿ:

ಬಾನಿನಿಂದ ಬಂತು ಸಾವು: ಅಮೆರಿಕದ ಕ್ಷಿಪಣಿ ದಾಳಿಐಸಿಸ್ ಮುಖ್ಯಸ್ಥ ಖತಂ

ಭಯೋತ್ಪಾದನೆಯ 'ಪೆಡಂಭೂತ': ವಾಸ್ತವದ ಮರೆವು ಮುಳುವಾಯಿತೇ?

PARYAYA: ೨೦೨೩ರ ರಾಜೌರಿ ದಾಳಿಯ ಸೂತ್ರಧಾರಿ ಅಬು ಕತಾಲ್ ಹತ್ಯೆ:   ೨೦೨೩ ರ ರಾಜೌರಿ ದಾಳಿಯ ಸೂತ್ರಧಾರಿ ಅಬು ಕತಾಲ್ ಹತ್ಯೆ ನ ವದೆಹಲಿ: ಲಷ್ಕರ್- ಇ -ತೈಬಾ ಸಂಘಟನೆಗೆ ಸೇರಿದ ʼ ಮೋಸ್ಟ್ ವಾಂಟೆಡ್ ʼ ಭಯೋತ್ಪಾದಕರಲ್ಲಿ ಒಬ್ಬನಾದ ಅಬು ಕತ...

Saturday, July 15, 2023

PARYAYA: ಪಾಕಿಸ್ತಾನ ವರ್ಸಸ್‌ ಭಾರತ: ಇಲ್ಲಿ ಉಂಟು 'ಆದ್ಯತೆʼ!

 ಪಾಕಿಸ್ತಾನ ವರ್ಸಸ್‌ ಭಾರತಇಲ್ಲಿ ಉಂಟು 'ಆದ್ಯತೆʼ!

ಬೆಂಗಳೂರು:  ಭಾರತವು ನಡೆಸಿರುವ ಚಂದ್ರಯಾನ-3 ರ ಉಡಾವಣೆಯು ರಾಷ್ಟ್ರದಾದ್ಯಂತ ಹೆಮ್ಮೆ ಮತ್ತು ಸಂಭ್ರಮದ ಭಾವನೆಯನ್ನು ಹುಟ್ಟುಹಾಕಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ 2023 ಜುಲೈ 14ರ ಶುಕ್ರವಾರ ಈ ಚಾರಿತ್ರಿಕ ಘಟನೆ ಘಟಿಸಿದ್ದ್ದದುಸಹಸ್ರಾರು ಉತ್ಸಾಹಿ ಪ್ರೇಕ್ಷಕರು ಕನಸಿನ ಬಾಹ್ಯಾಕಾಶ ಯಾತ್ರೆಗೆ ಸಾಕ್ಷಿಯಾದರು.

ಈ ಮಧ್ಯೆ ಮಹತ್ವದ ಸಂದರ್ಭವನ್ನು ಸಂಭ್ರಮಿಸಲು ಹಲವಾರು ಮಂದಿ ಆನ್‌ಲೈನ್ ಬಳಕೆದಾರರು ಈ ಘಟನೆಯ ಸಂದೇಶಗಳು, ಚಿತ್ರಗಳು, ವಿಡಿಯೋಗಳನ್ನು ಟ್ವಿಟ್ಟರಿನಲ್ಲಿ ಹಂಚಿಕೊಂಡರು. ಇದೇ ಸಮಯದಲ್ಲಿ ಪಾಕಿಸ್ತಾನಿ ವ್ಯಕ್ತಿಯೊಬ್ಬರು ಪಾಕಿಸ್ತಾನದಿಂದ ತಮ್ಮ ಟ್ವೀಟ್‌ ಪ್ರಕಟಿಸಿದರು. ಇದು ಭಾರತೀಯನ ಟ್ವೀಟ್‌ ಗಿಂತ ಮೇಲ್ಭಾಗದಲ್ಲಿ ಇತ್ತು.

ʼಅಬ್‌ ಆಯೇಗಾ ನ ಮಜಾ.. ಆವಾಜ್‌ ಸುನ್‌ ರಹೇ ಹೋ? ಘೋರ್‌ ಸೇ ಸುನೋ… ಯೇ ಪೂರೀ ದುನಿಯಾ ಕೆ ಕಾಂಪನೇ ಕೀ ಆವಾಜ್‌ ಹೈʼ ಎಂಬುದಾಗಿ ಬರೆದಿದ್ದ ಈ ಟ್ವಿಟ್ಟರ್‌ ಸಂದೇಶ ಪಾಕಿಸ್ತಾನದ ತೋಳ್ಬಲವನ್ನು ಸಾರುವಂತಿತ್ತು. ಇದರ ಕೆಳಗಿದ್ದ ಭಾರತೀಯನ ಟ್ವೀಟಿನಲ್ಲಿ “ಇಂಡಿಯಾ ಇಂಡಿಯಾʼ ಬರಹದೊಂದಿಗೆ ಭಾರತದ ಚಂದ್ರಯಾನ -3 ಚಿತ್ರವಿತ್ತು.

ಪಾಕಿಸ್ತಾನ ಮತ್ತು ಭಾರತದ ʼಆದ್ಯತೆʼಗಳನ್ನು ಸಾರುವಂತೆ ಕಾಣುತ್ತಿದ್ದ ಈ ಟ್ವೀಟ್‌ ಸರಣಿಯ ಸ್ಕೀನ್‌ ಶಾಟ್‌ ತೆಗೆದುಕೊಂಡ ಇನ್ನೊಬ್ಬ ಪಾಕಿಸ್ತಾನಿ ಇದನ್ನು ತನ್ನ ಟ್ವಿಟ್ಟರ್‌ ಸಂದೇಶದಲ್ಲಿ ಪ್ರಕಟಿಸಿ ತನ್ನ ಪ್ರತಿಕ್ರಿಯೆಯಾಗಿ ʼನೋವಿನೊಂದಿಗೆ ನಗುತ್ತಿರುವ ʼಎಮೋಜಿʼಯನ್ನೂ ಹಾಕಿದರು. ಉಭಯ ದೇಶಗಳ ವ್ಯತಿರಿಕ್ತ ಆದ್ಯತೆಗಳನ್ನು ಇದು ಎತ್ತಿ ತೋರಿಸುತ್ತಿತ್ತು.

ಟ್ವಿಟರ್ ಬಳಕೆದಾರ ಅಲಿ ಶಾನ್ ಮೊಮಿನ್ ಹಂಚಿಕೊಂಡಿರುವ  ಈ ಸ್ಕ್ರೀನ್‌ಶಾಟ್ಲಾಹೋರಿನಲ್ಲಿ 500 ಅಡಿ ಎತ್ತರದ ಧ್ವಜವನ್ನು ಹಾರಿಸುವ ಪಾಕಿಸ್ತಾನದ ಯೋಜನೆಯನ್ನು ಚರ್ಚಿಸುವ ಪಾಕಿಸ್ತಾನಿ ಬಳಕೆದಾರರ ಟ್ವೀಟನ್ನು ಪ್ರಮುಖವಾಗಿ ಪ್ರದರ್ಶಿಸುತ್ತದೆಇದು ಈ ಪ್ರದೇಶದಲ್ಲಿ ಅತಿ ಎತ್ತರದ ಧ್ವಜ ಎನಿಸಿಕೊಳ್ಳಲು ಸಿದ್ಧವಾಗಿದೆ. 2023 ರಲ್ಲಿ ಪಾಕಿಸ್ತಾನದ ಸ್ವಾತಂತ್ರ್ಯ ದಿನದಂದು ನಡೆಯಲಿರುವ ಈ ಧ್ವಜಾರೋಹಣ ಸಮಾರಂಭಕ್ಕೆ 400 ದಶಲಕ್ಷ ರೂಪಾಯಿ (400 ಮಿಲಿಯನ್ ರೂ) ನಿಗದಿಪಡಿಸಲಾಗಿದೆ. ಈ ಧ್ವಜಕ್ಕೆ ಧ್ವನಿ ವರ್ಧಕ ವ್ಯವಸ್ಥೆ ಅಳವಡಿಸಲಾಗಿದ್ದು ಬಹುದೂರದವರೆಗೆ ಇದರ ಸದ್ದು ಕೇಳಲಿದೆಯಂತೆ.

ಇದಕ್ಕೆ ತದ್ವಿರುದ್ಧವಾಗಿಈ ಟ್ವೀಟ್‌ನ ಕೆಳಗಿನ ಟ್ವೀಟ್‌  ಚಂದ್ರಯಾನ-3 ಸಾಧನೆಯೊಂದಿಗೆ ಭಾರತದ ವಿಜಯೋತ್ಸವ ಸಂದರ್ಭದ  ಭಾರತೀಯರ ಸಂಭ್ರಮವನ್ನು ಅಭಿವ್ಯಕ್ತಿಸಿದೆ..

ಭಾರತವು ಬಾಹ್ಯಾಕಾಶ ಪರಿಶೋಧನೆಯಲ್ಲಿ ತನ್ನ ಗಮನಾರ್ಹ ಸಾಧನೆಯನ್ನು ಆಚರಿಸಿದರೆ, ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ತನ್ನ ಪ್ರಗತಿಯನ್ನು ಪ್ರದರ್ಶಿಸುತ್ತಿದೆ. ನೆರೆಯ ಪಾಕಿಸ್ತಾನಿಯನ ಟ್ವೀಟ್‌ ವಿಭಿನ್ನ ರಾಷ್ಟ್ರೀಯ ಕಾಳಜಿಯನ್ನು ಪ್ರತಿಬಿಂಬಿಸುತ್ತದೆ., ಇದು ಎತ್ತರದ ಧ್ವಜವನ್ನು ಸ್ಥಾಪಿಸುವ ಮೂಲಕ ಭಾರತವನ್ನು ಮೀರಿಸಲು ಬಯಸುತ್ತಿದೆ ಎಂಬುದನ್ನು ತೋರಿಸುತ್ತಿದೆ.

ಸ್ಕ್ರೀನ್‌ಶಾಟ್‌ನೊಂದಿಗೆ ಸರಳವಾದ 'ನೋವಿನ ಮೂಲಕ ನಗುತ್ತಿರುವಎಮೋಜಿಯು ಎರಡು ದೇಶಗಳ ವಿಭಿನ್ನ 'ಆದ್ಯತೆಗಳನ್ನುಬಹಿರಂಗಪಡಿಸುವಾಗ ಪೋಸ್ಟ್‌ನ ಸಾರವನ್ನು ಸೆರೆಹಿಡಿಯುತ್ತದೆ.


PARYAYA: ಪಾಕಿಸ್ತಾನ ವರ್ಸಸ್‌ ಭಾರತ: ಇಲ್ಲಿ ಉಂಟು 'ಆದ್ಯತೆʼ!:   ಪಾಕಿಸ್ತಾನ ವರ್ಸಸ್‌ ಭಾರತ : ಇಲ್ಲಿ ಉಂಟು ' ಆದ್ಯತೆ ʼ! ಬೆಂಗಳೂರು:   ಭಾರತ ವು ನಡೆಸಿರುವ ಚಂದ್ರಯಾನ- 3 ರ ಉಡಾವಣೆಯು ರಾಷ್ಟ್ರದಾದ್ಯಂತ ಹೆಮ್ಮೆ ಮತ್ತು ಸ...

Wednesday, August 24, 2022

PARYAYA: ಭಾರತೀಯ ಸೇನೆ ಮೇಲೆ ದಾಳಿಗೆ ಪಾಕ್‌ ಕರ್ನಲ್‌ ನಿಂದ ರೂ. 30,...

 ಭಾರತೀಯ ಸೇನೆ ಮೇಲೆ ದಾಳಿಗೆ ಪಾಕ್‌ ಕಾಸು
ಕರ್ನಲ್‌ ನಿಂದ ರೂ. 30,000 ರೂಪಾಯಿ

ನವದೆಹಲಿ:  ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ನೌಶೇರಾ ಸೆಕ್ಟರಿನ ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್‌ಒಸಿ) ಆಗಸ್ಟ್ 21 ರಂದು ಭಾರತೀಯ ಸೇನೆ ಸೆರೆ ಹಿಡಿದ ಪಾಕ್‌ ಆಕ್ರಮಿತ ಕಾಶ್ಮೀರದ (ಪಿಒಕೆ) 'ಫಿದಾಯೀನ್' (ಆತ್ಮಹತ್ಯಾ) ದಾಳಿಕೋರಪಾಕ್‌ ಕರ್ನಲ್‌ ಸೂಚನೆ ಮೇರೆಗೆ ತಾನು ಭಾರತೀಯ ಸೇನೆ ಮೇಲೆ ದಾಳಿ ನಡೆಸುವ ಕೃತ್ಯಕ್ಕೆ ಇಳಿದುದಾಗಿ 2022 ಆಗಸ್ಟ್‌ 24ರ ಬುಧವಾರ ಒಪ್ಪಿಕೊಂಡಿದ್ದಾನೆ.

ಭಾರತೀಯ ಸೈನಿಕರ ಮೇಲೆ ದಾಳಿ ಮಾಡುವ ಯೋಜನೆ ಕಾರ್ಯಗತಗೊಳಿಸಲು ಪಾಕಿಸ್ತಾನಿ ಸೇನೆಯ ಪಾಕಿಸ್ತಾನಿ ಕರ್ನಲ್ ಯೂನಸ್ ಚೌಧರಿ ತನಗೆ ಸುಮಾರು 30,000 ರೂ. ನೀಡಿರುವುದಾಗಿ ತಬಾರಕ್ ಹುಸೇನ್ ಎಂಬುದಾಗಿ ಗುರುತಿಸಲಾಗಿರುವ ದ ಭಯೋತ್ಪಾದಕ ಹೇಳಿದ್ದಾನೆ.

ಒಳನುಸುಳುವಿಕೆ ಪ್ರಯತ್ನದ ಸಮಯದಲ್ಲಿ ಗಾಯಗೊಂಡು ಕಾಶ್ಮೀರದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹುಸೇನ್ ಎಎನ್‌ ಐ ಸುದ್ದಿ ಸಂಸ್ಥೆ ಜೊತೆಗೆ ಮಾತನಾಡುತ್ತಾ ತಾನು ನಾಲ್ಕೈದು ಮಂದಿಯೊಂದಿಗೆ ಭಾರತೀಯ ಪ್ರದೇಶಕ್ಕೆ ನುಸುಳಲು ಯತ್ನಿಸಿದ್ದಾಗಿ ಹೇಳಿದ್ದಾನೆ.

ಎಎನ್‌ ಐ ಸುದ್ದಿ ಸಂಸ್ಥೆಯು ಟ್ವಿಟ್ಟರಿನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಹುಸೇನ್, ಇತರ ಭಯೋತ್ಪಾದಕರ ಜೊತೆಗೆ ಸೂಕ್ತ ಸಮಯದಲ್ಲಿ ಭಾರತೀಯ ಸೈನಿಕರನ್ನು ಗುರಿಯಾಗಿಸಿ ದಾಳಿ ನಡೆಸುವ ಉದ್ದೇಶದಿಂದ ಭಾರತದ ಮುಂಚೂಣಿ ಗಡಿ ಠಾಣೆಗಳ ಮೇಲೆ ಆತ್ಮಾಹುತಿ ದಾಳಿ ನಡೆಸಲು ಎರಡು-ಮೂರು ಬಾರಿ ಯತ್ನಿಸಿದ್ದಾಗಿ ಒಪ್ಪಿಕೊಂಡಿದ್ದಾನೆ.

ಹುಸೇನ್ ಪಾಕ್ ಆಕ್ರಮಿತ ಕಾಶ್ಮೀರದ ಕೋಟಿಯ ಸಬ್‌ಕೋಟ್ ಗ್ರಾಮದ ನಿವಾಸಿಯಾಗಿದ್ದಾನೆ.

ಹುಸೇನ್ ಭಯೋತ್ಪಾದಕರೊಂದಿಗೆ ಒಳನುಸುಳಲು ಪ್ರಯತ್ನಿಸುತ್ತಿದ್ದಾಗ ಭಾರತೀಯ ಸೇನೆಯು ಆತನನ್ನು ವಶಕ್ಕೆ ತೆಗೆದುಕೊಂಡಿತು. “ನಾನು ಇತರ ನಾಲ್ಕೈದು ಜನರೊಂದಿಗೆ ಆತ್ಮಹತ್ಯಾ ಕಾರ್ಯಾಚರಣೆಗಾಗಿ ಇಲ್ಲಿಗೆ ಬಂದಿದ್ದೆ. ನಮ್ಮನ್ನು ಪಾಕಿಸ್ತಾನ ಸೇನೆಯ ಕರ್ನಲ್ ಯೂನಸ್ ಕಳುಹಿಸಿದ್ದುಅವರು ಭಾರತೀಯ ಸೇನೆಯನ್ನು ಗುರಿಯಾಗಿಸಲು 30,000 ರೂ. ನೀಡಿದ್ದರು” ಎಂದು ಭಯೋತ್ಪಾದಕ ಹೇಳಿದ.

ಇದಕ್ಕೆ ಮುನ್ನಜಮ್ಮು ಪ್ರದೇಶದಲ್ಲಿ 48 ಗಂಟೆಗಳ ಅವಧಿಯಲ್ಲಿ ನೌಶೇರಾ ಸೆಕ್ಟರ್‌ನ ಎಲ್‌ಒಸಿ ಉದ್ದಕ್ಕೂ ಭಯೋತ್ಪಾದಕರು ನಡೆಸಿದ ಎರಡು ಒಳನುಸುಳುವಿಕೆ ಪ್ರಯತ್ನಗಳನ್ನು ಯಶಸ್ವಿಯಾಗಿ ನಿಗ್ರಹಿಸುವ ಮೂಲಕ ಶಾಂತಿ ಕದಡುವ ಪಾಕಿಸ್ತಾನದ "ಕೆಟ್ಟ ಪ್ರಯತ್ನ" ವನ್ನು ವಿಫಲಗೊಳಿಸಲಾಗಿದೆ ಎಂದು ಭಾರತೀಯ ಸೇನೆ ಹೇಳಿತ್ತು.

ಆಗಸ್ಟ್ 21 ಮತ್ತು 22 ರಂದು ಝಂಗಾರ್ ಮತ್ತು ಲ್ಯಾಮ್ ಪ್ರದೇಶಗಳಲ್ಲಿ ಒಳನುಸುಳುವಿಕೆ ಯತ್ನಗಳು, ಇಬ್ಬರು ಭಯೋತ್ಪಾದಕರ ಸಾವಿಗೆ ಕಾರಣವಾದವು ಮತ್ತು ಕುಖ್ಯಾತ ಭಯೋತ್ಪಾದಕ ಮಾರ್ಗದರ್ಶಿಯನ್ನು ಬಂಧಿಸಲಾಯಿತುಪಾಕಿಸ್ತಾನದ ಗುಪ್ತಚರ ಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು ಭಾರತದ ಕಡೆಗೆ ಒಂದು ಗುಂಪನ್ನು ನುಗ್ಗಿಸುವ ಕಾರ್ಯಾಚರಣೆಗೆ ಇಳಿದಿದ್ದರು. ಅವರಿಂದ ಸೇನಾ ಪೋಸ್ಟ್ ಮೇಲೆ ದಾಳಿ ನಡೆದಿದೆ ಎಂದು ಸೇನೆಯ 80 ಪದಾತಿ ದಳದ ಕಮಾಂಡರ್ ಬ್ರಿಗೇಡಿಯರ್ ಕಪಿಲ್ ರಾಣಾ ತಿಳಿಸಿದ್ದರು.

ಎಎನ್‌ ಐ ಸುದ್ದಿ ಸಂಸ್ಥೆಯು ಟ್ವಿಟ್ಟರಿನಲ್ಲಿ ಪ್ರಕಟಿಸಿದ ಫಿದಾಯೀನ್‌ ದಾಳಿಕೋರನ ತಪ್ಪೊಪ್ಪಿಗೆಯ ವಿಡಿಯೋ ಕೆಳಗಿದೆ:


PARYAYA: ಭಾರತೀಯ ಸೇನೆ ಮೇಲೆ ದಾಳಿಗೆ ಪಾಕ್‌ ಕರ್ನಲ್‌ ನಿಂದ ರೂ. 30,...:   ಭಾರತೀಯ ಸೇನೆ ಮೇಲೆ ದಾಳಿ ಗೆ   ಪಾಕ್‌ ಕಾಸು ಕರ್ನಲ್‌ ನಿಂದ ರೂ. 30,000 ರೂಪಾಯಿ ನವದೆಹಲಿ:   ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ನೌಶೇರಾ ಸೆಕ್ಟ ರಿನ ಗಡ...

Thursday, October 24, 2019

ಕರ್ತಾರಪುರ ಕಾರಿಡಾರ್ ಕಾರ್ಯಗತ ಒಪ್ಪಂದಕ್ಕೆ ಭಾರತ- ಪಾಕ್ ಸಹಿ

ಕರ್ತಾರಪುರ ಕಾರಿಡಾರ್ ಕಾರ್ಯಗತ
ಒಪ್ಪಂದಕ್ಕೆ
ಭಾರತ- ಪಾಕ್ ಸಹಿ

ನವದೆಹಲಿ: ಸಿಖ್ ಪಂಥದ ಸಂಸ್ಥಾಪಕ ಗುರುನಾನಕ್  ದೇವ್ ಅವರು ತಮ್ಮ ಜೀವನದ ಅಂತಿಮ ವರ್ಷಗಳನ್ನು ಕಳೆದ ಸ್ಥಳದಲ್ಲಿ ನಿರ್ಮಿಸಲಾದ ಗುರುದ್ವಾರವನ್ನು ಸಂದರ್ಶನಕ್ಕೆ  ಭಾರತೀಯ ಯಾತ್ರಾರ್ಥಿಗಳಿಗೆ ಅವಕಾಶ ನೀಡುವ ಕರ್ತಾರಪುರ ಕಾರಿಡಾರ್ ಕಾರ್ಯಗತ ಒಪ್ಪಂದಕ್ಕೆ  ಭಾರತ ಮತ್ತು ಪಾಕಿಸ್ತಾನ 2019 ಅಕ್ಟೋಬರ್ 24ರ ಗುರುವಾರ ಗಡಿಯಲ್ಲಿನ ‘ಶೂನ್ಯ ರೇಖೆ’ ಯಲ್ಲಿ ಸಹಿ ಮಾಡಿದವು. ಉಭಯ ರಾಷ್ಟ್ರಗಳ  ಅಧಿಕಾರಿಗಳು ಒಪ್ಪಂದಕ್ಕೆ ಸಹಿ ಹಾಕಿದರು.

ಒಪ್ಪಂದಕ್ಕೆ ಸಹಿ ಹಾಕಲು ಅಕ್ಟೋಬರ್ ೨೩ ರ ದಿನಾಂಕವನ್ನು ಭಾರತವು ಸೋಮವಾರ ಪ್ರಸ್ತಾಪಿಸಿತ್ತು. ಆದರೆ ಪಾಕಿಸ್ತಾನದ ಕಡೆಯಆಡಳಿತಾತ್ಮಕ ಸಮಸ್ಯೆಗಳ’ ಕಾರಣ ಈ ದಿನಾಂಕವನ್ನು ಒಂದು ದಿನ ಮುಂದೂಡಬೇಕಾಯಿತು ಎಂದು ಅಧಿಕಾರಿಗಳು ತಿಳಿಸಿದರು. ಪಾಕಿಸ್ತಾನ ನಿಯೋಗದ ನೇತೃತ್ವವನ್ನು ವಿದೇಶಾಂಗ ಕಚೇರಿ ವಕ್ತಾರ ಮೊಹಮ್ಮದ್ ಫೈಸಲ್ ವಹಿಸಿದ್ದರು.

ಕರ್ತಾರಪುರ ಸಾಹಿಬ್  ತಲುಪಲು ಕರ್ತಾರಪುರ ಕಾರಿಡಾರ್ ತೆರೆಯುವ ಬಗೆಗಿನ ಐತಿಹಾಸಿಕ ಪಾಕಿಸ್ತಾನ- ಭಾರತ ಒಪ್ಪಂದಕ್ಕೆ ಸಹಿ ಹಾಕಲು  ತೆರಳುತ್ತಿರುವೆ.  ನವೆಂಬರ್ ರಂದು ಪಾಕಿಸ್ತಾನದ ನರೋವಾಲದಲ್ಲಿ  ಕರ್ತಾರಪುರ ಸಾಹಿಬ್ ಕಾರಿಡಾರನ್ನು ಪ್ರಧಾನಿ ಇಮ್ರಾನ್ ಖಾನ್ ಉದ್ಘಾಟಿಸಲಿದ್ದಾರೆಎಂದು ಶೂನ್ಯ ರೇಖೆಯತ್ತ ಹೊರಡುವ ಮುನ್ನ ಫೈಸಲ್ ಟ್ವೀಟ್ ಮಾಡಿದ್ದರು.
ಗುರುನಾನಕ್ ದೇವ್ ಅವರ ೫೫೦ ನೇ ಜನ್ಮದಿನಾಚರಣೆಯ ಮುನ್ನ ಕಾರಿಡಾರ್  ಕಾರ್ಯಗತಕ್ಕಾಗಿ ಭಾರತ ಮತ್ತು ಪಾಕಿಸ್ತಾನ  ಉನ್ನತ ಮಟ್ಟದ ಮಾತುಕತೆ ನಡೆಸಿವೆ. ಕಾರಿಡಾರ್ ಭಾರತೀಯ ಯಾತ್ರಿಕರ ವೀಸಾ ಮುಕ್ತ ಸಂಚಾರಕ್ಕೆ ಅನುಕೂಲವಾಗಲಿದೆ.

೧೫೨೨
ರಲ್ಲಿ ಸಿಖ್ ಪಂಥದ  ಸಂಸ್ಥಾಪಕ ಗುರುನಾನಕ್ ದೇವ್ ಅವರು ಸ್ಥಾಪಿಸಿದ ಕರ್ತಾರಪುರ ಸಾಹಿಬ್ಗೆ ಭೇಟಿ ನೀಡಲು ಈ ಕಾರಿಡಾರಿನಿಂದಾಗಿ ಭಾರತೀಯ  ಯಾತ್ರಿಕರು ಅನುಮತಿ ಪಡೆದರೆ ಸಾಕಾಗುತ್ತದೆ.

Thursday, August 29, 2019

ಪಾಕಿಸ್ತಾನದಿಂದ ಪರಮಾಣು ಸಾಮರ್ಥ್ಯದ ಖಂಡಾಂತರ ಕ್ಷಿಪಣಿ ಪರೀಕ್ಷೆ

ಪಾಕಿಸ್ತಾನದಿಂದ ಪರಮಾಣು ಸಾಮರ್ಥ್ಯದ ಖಂಡಾಂತರ ಕ್ಷಿಪಣಿ ಪರೀಕ್ಷೆ
ನವದೆಹಲಿ: ಯುದ್ಧೋನ್ಮತ್ತ  ಪಾಕಿಸ್ತಾನವು ಮೇಲ್ಮೈಯಿಂದ ಮೇಲ್ಮೈಗೆ ಚಿಮ್ಮುವ ಖಂಡಾಂತರ ಘಜ್ನವಿ ಕ್ಷಿಪಣಿಯ ರಾತ್ರಿ ತರಬೇತಿ ಪರೀಕ್ಷೆಯನ್ನು  2019 ಆಗಸ್ಟ್ 29ರ  ಗುರುವಾರ ನಸುಕಿನಲ್ಲಿ ನಡೆಸಿತು. 

ಕಾಶ್ಮೀರ ವಿಷಯವನ್ನು ಅಂತಾರಾಷ್ಟ್ರೀಯ ಸಮಸ್ಯೆಯನ್ನಾಗಿ ಮಾಡುವ ತನ್ನ ಯತ್ನಗಳ ನಡುವೆಯೇ ಪಾಕಿಸ್ತಾನ
ಅಣ್ವಸ್ತ್ರ ಸಾಗಣೆ ಶಕ್ತಿಯನ್ನು ಹೊಂದಿರುವ ಕ್ಷಿಪಣಿ ಪರೀಕ್ಷೆಯನ್ನು ನಡೆಸಿದೆ.
ಕ್ಷಿಪಣಿ ಉಡಾವಣೆ ಯಶಸ್ವಿಯಾಗಿದೆ ಎಂದು ಪಾಕಿಸ್ತಾನ ಸಶಸ್ತ್ರ ಪಡೆಗಳ ವಕ್ತಾರ ಮೇಜರ್ ಜನರಲ್ ಆಸಿಫ್ ಗಫೂರ್ ಟ್ವೀಟ್ ಮಾಡಿದರು.
ಘಜ್ನವಿ ಖಂಡಾಂತರ ಕ್ಷಿಪಣಿಯು ೨೯೦ ಕಿ.ಮೀ ವರೆಗೆ  ಹಲವಾರು ಮಾದರಿಯ ಸಿಡಿತಲೆಗಳನ್ನು ತಲುಪಿಸುವ ಸಾಮರ್ಥ್ಯ ಹೊಂದಿದೆ ಎಂದು ಮಿಲಿಟರಿ ವಕ್ತಾರರು ತಿಳಿಸಿದರು.

 ಪಾಕಿಸ್ತಾನದ  ಅಧ್ಯಕ್ಷ ಆರಿಫ್ ಅಲ್ವಿ ಮತ್ತು ಪ್ರಧಾನಿ ಇಮ್ರಾನ್ ಖಾನ್  ಈ ಸಾಧನೆಗಾಗಿ ವಿಜ್ಞಾನಿಗಳ ತಂಡಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಮತ್ತು ರಾಷ್ಟ್ರವನ್ನು ಅಭಿನಂದಿಸಿದ್ದಾರೆ ಎಂದು ಗಫೂರ್  ಹೇಳಿದರು.

ಪಾಕಿಸ್ತಾನವು ಮಿಲಿಟರಿ ಕ್ಷಿಪಣಿ ಉಡಾವಣೆಯ ೩೦ ಸೆಕೆಂಡುಗಳ ವಿಡಿಯೋ ತುಣುಕನ್ನು ಮತ್ತು ಉಡಾವಣೆಗೆ ಮುನ್ನ ಕ್ಷಿಪಣಿಯೊಂದಿಗೆ ಪೋಸ್ ನೀಡಿದ ಮಿಲಿಟರಿ ಅಧಿಕಾರಿಗಳ ಗುಂಪನ್ನು ಸಹ ಟ್ವೀಟ್ ಮಾಡಿತು.
ಕಾಶ್ಮೀರ ಸಮಸ್ಯೆಯನ್ನು ರಾಜತಾಂತ್ರಿಕ ಮಟ್ಟದಲ್ಲಿ ಅಂತರರಾಷ್ಟ್ರೀಯವನ್ನಾಗಿ ಮಾಡುವ ಹಾಗೂ ಉಭಯ ದೇಶಗಳ ನಡುವೆ ಪರಮಾಣು ಯುದ್ಧ ಭೀತಿಯನ್ನು ಹೆಚ್ಚಿಸುವ  ದ್ವಿಮುಖ ಪ್ರಯತ್ನದ ಭಾಗವಾಗಿ ಈ ಕ್ಷಿಪಣಿ ಪರೀಕ್ಷೆ ನಡೆದಿದೆ ಎಂದು ರಾಜತಾಂತ್ರಿಕ ವಲಯಗಳು ಭಾವಿಸಿವೆ.

Saturday, August 17, 2019

ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನಕ್ಕೆ ಚೀನಾ ಒಂದೇ ಬೆಂಬಲಿಗ..! ಕನ್ನಡಿ ಹಿಡಿದ ಪಾಕ್ ಪತ್ರಿಕೆ ‘ಡಾನ್’

ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನಕ್ಕೆ ಚೀನಾ ಒಂದೇ ಬೆಂಬಲಿಗ..! 

ಕನ್ನಡಿ ಹಿಡಿದ ಪಾಕ್ ಪತ್ರಿಕೆ ‘ಡಾನ್’

ನವದೆಹಲಿ:   ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ  (ಯುಎನ್ಎಸ್ಸಿ) ಚೀನಾ ಮಾತ್ರ ಪಾಕಿಸ್ತಾನವನ್ನು "ಬಹಿರಂಗವಾಗಿ ಬೆಂಬಲಿಸುತ್ತಿದೆ" ಎಂದು ಪಾಕಿಸ್ತಾನದ ಪ್ರಮುಖ ಪತ್ರಿಕೆ ‘ಡಾನ್’  ಟೀಕಿಸಿದ್ದು, ವಿಶ್ವ ವಿಶೇಷ ಸಂಸ್ಥೆಯ ಪ್ರಸ್ತುತ ಸಂಯೋಜನೆಯ ಉನ್ನತ ಅಂಗವು ಇಸ್ಲಾಮಾಬಾದಿಗೆ  ಅನುಕೂಲಕರವಾಗಿ ಕಾಣುತ್ತಿಲ್ಲ ಎಂದು ಇಮ್ರಾನ್ ಖಾನ್ ಸರ್ಕಾರಕ್ಕೆ ಕನ್ನಡಿ ಹಿಡಿದು ತೋರಿಸಿದೆ..

 ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಭಾರತ ರದ್ದುಪಡಿಸಿದ ನಂತರ ವಿಶ್ವಸಂಸ್ಥೆ ಭದ್ರತಾ ಮಂಡಳಿಯು  2019 ಆಗಸ್ಟ್ 16ರ ಶುಕ್ರವಾರ  ಕಾಶ್ಮೀರ ಬೆಳವಣಿಗೆಗೆ ಸಂಬಂಧಿಸಿದಂತೆ  ಅಪರೂಪದ  ರಹಸ್ಯ ಸಭೆ ನಡೆಸಿತ್ತು.

ಜಮ್ಮು ಮತ್ತು ಕಾಶ್ಮೀರಕ್ಕೆ  ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದು ಪಡಿಸಿ, ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸುವ ಮೂಲಕ ಭಾರತವು ಪಾಕಿಸ್ತಾನದ ಜೊತೆ ಹೊಸ ವಿವಾದ ಹುಟ್ಟು ಹಾಕಿದೆ ಎಂದು ಆಪಾದಿಸಿ ಪಾಕಿಸ್ತಾನವು ವಿಶ್ವಸಂಸ್ಥೆ ಭದ್ರತಾ ಮಂಡಳಿಗೆ ಪತ್ರ ಬರೆದಿತ್ತು.
ಮುಚ್ಚಿದ ಬಾಗಿಲುಗಳ ಹಿಂದೆ  ನಡೆದ ರಹಸ್ಯ ಸಭೆಯಲ್ಲಿ ಕೇವಲ ಐದು ಖಾಯಂ ಸದಸ್ಯರು ಮತ್ತು ೧೦ ಖಾಯಮೇತರ ಸದಸ್ಯರು ಮಾತ್ರ ಹಾಜರಿದ್ದರು.

ಜಮ್ಮು ಮತ್ತು ಕಾಶ್ಮೀರಕ್ಕೆ  ವಿಶೇಷ ಸ್ಥಾನಮಾನವನ್ನು  ನೀಡಿದ್ದ ಭಾರತೀಯ  ಸಂವಿಧಾನದ ೩೭೦ ನೇ ವಿಧಿಯನ್ನು ರದ್ದುಪಡಿಸುವ  ಕ್ರಮವು ಆಂತರಿಕ ವಿಷಯವಾಗಿದೆ  ಎಂದು ಅಂತಾರಾಷ್ಟ್ರೀಯ ಸಮುದಾಯಕ್ಕೆ  ಖಡಾಖಂಡಿತವಾಗಿ  ಹೇಳಿದ್ದ ಭಾರತ  ವಾಸ್ತವವನ್ನು ಒಪ್ಪಿಕೊಳ್ಳುವಂತೆ ಪಾಕಿಸ್ತಾನಕ್ಕೆ ಸಲಹೆ ನೀಡಿತ್ತು.
ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಹಿಂತೆಗೆದುಕೊಳ್ಳುವ ಭಾರತದ ನಿರ್ಧಾರವು ದಕ್ಷಿಣ ಏಷ್ಯಾದ ಶಾಂತಿ ಮತ್ತು ಸ್ಥಿರತೆಗೆ ಹೇಗೆ ಧಕ್ಕೆ ತರುತ್ತದೆ ಎಂಬುದಾಗಿ ವಿಶ್ವಸಂಸ್ಥೆ ಭದ್ರತಾ ಮಂಡಳಿ ಸದಸ್ಯರಿಗೆ ನಾಟುವಂತೆ ತಿಳಿಹೇಳಲು ಪಾಕಿಸ್ತಾನದ  ವಿಶ್ವಸಂಸ್ಥೆಯಲ್ಲಿನ ರಾಯಭಾರಿ ಮಲೀಹಾ ಲೋಧಿ ಮತ್ತು ಅವರ ತಂಡವು ತಿಂಗಳ ಆರಂಭದಿಂದಲೂ  ದಣಿವರಿವು ಇಲ್ಲದೆ  ಕೆಲಸ ಮಾಡಿತ್ತು ಎಂದು ವಿಶ್ವಸಂಸ್ಥೆ ಕೇಂದ್ರ  ಕಚೇರಿಯಿಂದ  ಮಾಡಲಾದ ಡಾನ್’ ವರದಿ ತಿಳಿಸಿದೆ.
"ಆದರೆ ಮಂಡಳಿಯ ಪ್ರಸ್ತುತ ಸಂಯೋಜನೆಯು ಪಾಕಿಸ್ತಾನಕ್ಕೆ ಒಲವು ತೋರುತ್ತಿಲ್ಲ" ಎಂದು ಪತ್ರಿಕೆ ಬರೆದಿದೆ.
ಜಮ್ಮು ಮತ್ತು ಕಾಶ್ಮೀರದ ಹಾಲಿ  ಪರಿಸ್ಥಿತಿಯ ಬಗ್ಗೆ ಚರ್ಚಿಸಲು ಇಸ್ಲಾಮಾಬಾದ್  ಮಾಡಿದ ಮನವಿಯ ಮೇರೆಗೆ ಪಾಕಿಸ್ತಾನದ  ಸಾರ್ವಕಾಲಿಕ  ಮಿತ್ರ ಚೀನಾ  ಮಂಡಳಿಯು ರಹಸ್ಯ ಸಭೆಗೆ ಆಗ್ರಹಿಸಿತ್ತು.
"ಐವರು ಖಾಯಂ ಸದಸ್ಯರಲ್ಲಿ ಒಬ್ಬರಾದ  ಚೀನಾ ಚೀನಾ  ಬಹಿರಂಗವಾಗಿ ಪಾಕಿಸ್ತಾನವನ್ನು ಬೆಂಬಲಿಸಿತು’  ಎಂದು ಡಾನ್ ವರದಿ  ಹೇಳಿತು.

ಉಳಿದ ನಾಲ್ಕು ಖಾಯಂ ಸದಸ್ಯರಾದ ಬ್ರಿಟನ್, ಫ್ರಾನ್ಸ್, ರಶ್ಯಾ ಮತ್ತು  ಅಮೆರಿಕ ಕಾಶ್ಮೀರ ವಿವಾದವನ್ನು  ಭಾರತ ಮತ್ತು ಪಾಕಿಸ್ತಾನ ದ್ವಿಪಕ್ಷೀಯ ಮಾತುಕತೆ ಮೂಲಕ  ಪರಿಹರಿಸಬೇಕೆಂದು ಬಯಸಿದವು  ಎಂದು ‘ಡಾನ್’ ಹೇಳಿತು.
ಭಾರತವೂ  ಇದೇ  ತಾಳಿದ್ದರೂ, ಕಾಶ್ಮೀರದ ಬಗ್ಗೆ ಯಾವುದೇ ಮಾತುಕತೆ ನಡೆಸಲು ನಿರಾಕರಿಸುತ್ತಿದೆ. ಕಾಶ್ಮೀರ ಸಮಸ್ಯೆಯನ್ನು ಆಂತರಿಕ ವಿಷಯವೆಂದು ಅದು ಹೇಳುತ್ತಿದೆ  ಎಂದು ವರದಿ ತಿಳಿಸಿದೆ.

ಬೆಲ್ಜಿಯಂ, ಕೋಟ್ ಡಿ ಐವೊಯಿರ್, ಡೊಮಿನಿಕನ್ ರಿಪಬ್ಲಿಕ್, ಈಕ್ವಟೋರಿಯಲ್ ಗಿನಿಯಾ, ಜರ್ಮನಿ, ಇಂಡೋನೇಷ್ಯಾ, ಕುವೈತ್, ಪೆರು, ಪೋಲೆಂಡ್ ಮತ್ತು ದಕ್ಷಿಣ ಆಫ್ರಿಕಾಇವು ವಿಶ್ವಸಂಸ್ಥೆ ಸಾಮಾನ್ಯ ಸಭೆಯಿಂದ  ಎರಡು ವರ್ಷಗಳ ಅವಧಿಗೆ ಆಯ್ಕೆಯಾಗಿರುವ ಭದ್ರತಾ ಮಂಡಳಿಯ  ೧೦ ಖಾಯಮೇತರ ಸದಸ್ಯರು

ಇವರ ಪೈಕಿ  ಇಂಡೋನೇಷ್ಯಾ ಮತ್ತು ಕುವೈತ್  ಇವರಿಬ್ಬರು ಈ ಹಿಂದೆ ಪಾಕಿಸ್ತಾನದ ಬಗ್ಗೆ ಸಹಾನುಭೂತಿ  ಹೊಂದಿದ್ದರೂ,  ಚೀನಾದ ಕೋರಿಕೆಯನ್ನು ಬೆಂಬಲಿಸುವ ನಿಟ್ಟಿನಲ್ಲಿ ಇತರರನ್ನು ಮನವೊಲಿಸುವುದು ಕಷ್ಟಕರ ಎಂದು ಡಾನ್ ವರದಿ ತಿಳಿಸಿದೆ.

ಈಮಧ್ಯೆ, ಪಾಕಿಸ್ತಾನ ಸರ್ಕಾರವು ಜಾಗತಿಕ ಬೆಂಬಲವನ್ನು ಕ್ರೋಡೀಕರಿಸಲು  ಹೊರಟಿದ್ದರೂ, ಆರ್ಗನೈಸೇಶನ್ ಆಫ್ ಇಸ್ಲಾಮಿಕ್ ಕೋಆಪರೇಷನ್ (ಒಐಸಿ) ಮತ್ತು ಮುಸ್ಲಿಮ್  ರಾಷ್ಟ್ರಗಳಿಂದ ಪ್ರತ್ಯೇಕವಾಗಿ  ಲಭ್ಯವಾದ  ಪ್ರತಿಕ್ರಿಯೆಗಳು ಮತ್ತು ಬೆಂಬಲ ದುರ್ಬಲವಾಗಿವೆ ಎಂದು ‘ ದಿ ನ್ಯೂಸ್ ಇಂಟರ್ನ್ಯಾಷನಲ್’  ಪತ್ರಿಕೆ ತಿಳಿಸಿದೆ.
ಸುಮಾರು ೫೦ ವರ್ಷದ ಒಐಸಿಯು ಬಿಡುಗಡೆ ಮಾಡಿರುವ  ರಾಜತಾಂತ್ರಿಕ ಪರಿಭಾಷೆಯ ಕೆಲವು ಹೇಳಿಕೆಗಳು ಯಾವುದೇ ಬದ್ಧತೆಯನ್ನೂ ವ್ಯಕ್ತ ಪಡಿಸಿಲ್ಲ ಎಂದು  ಪತ್ರಿಕೆಯಲ್ಲಿನ ಲೇಖನವೊಂದು ತಿಳಿಸಿದೆ.

ಒಐಸಿ ಸದಸ್ಯ ರಾಷ್ಟ್ರಗಳ ಜೊತೆಗಿನ  ಭಾರತೀಯ ವ್ಯಾಪಾರ ಮತ್ತು ವ್ಯವಹಾರದ ಶಕ್ತಿಯು, ಅದರ ವ್ಯಾಪಾರ ಪಾಲುದಾರರು ನಿರ್ಲಕ್ಷಿಸಲಾಗದಷ್ಟು ಪ್ರಬಲವಾಗಿದೆ, ಅವರಲ್ಲಿ ಯಾರೂ ಪಾಕಿಸ್ತಾನದ  ಪ್ರಸ್ತುತ ಮನವಿಯತ್ತ ಯಾವುದೇ ಗಮನವನ್ನೂ ಹರಿಸುತ್ತಿಲ್ಲ ಎಂದು ಪತ್ರಿಕೆ ಹೇಳಿದೆ.