Showing posts with label ಚೀನಾ. Show all posts
Showing posts with label ಚೀನಾ. Show all posts

Monday, August 4, 2025

PARYAYA: "ನೀವು ನಿಜವಾದ ಭಾರತೀಯರಾಗಿದ್ದರೆ, ಇದನ್ನು ಹೇಳುತ್ತಿರಲಿಲ್ಲ!"

 "ನೀವು ನಿಜವಾದ ಭಾರತೀಯರಾಗಿದ್ದರೆಇದನ್ನು ಹೇಳುತ್ತಿರಲಿಲ್ಲ!"

ರಾಹುಲ್ ಗಾಂಧಿಗೆ ಸುಪ್ರೀಂ ಕೋರ್ಟ್ ಚಾಟಿ

ಭಾರತೀಯ ಸೇನೆಯ ಬಗ್ಗೆ ರಾಹುಲ್ ಗಾಂಧಿ ನೀಡಿದ ಹೇಳಿಕೆಗಳಿಗಾಗಿ ಅವರ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಗೆ ಸುಪ್ರೀಂ ಕೋರ್ಟ್ ಸೋಮವಾರ (ಆಗಸ್ಟ್ 4, 2025) ತಡೆಯಾಜ್ಞೆ ನೀಡಿತು. ಆದರೆ ಸೇನೆ ಬಗ್ಗೆ ಆಡಿದ ಮಾತುಗಳಿಗಾಗಿ ಅವರನ್ನು ತರಾಟೆಗೆ ತೆಗೆದುಕೊಂಡಿತು.

2020ರ ಗಾಲ್ವಾನ್ ಕಣಿವೆ ಸಂಘರ್ಷದ ಸಂದರ್ಭದಲ್ಲಿ ಚೀನಿಯರು ಭಾರತೀಯ ಭೂಪ್ರದೇಶವನ್ನು ಆಕ್ರಮಿಸಿಕೊಂಡಿದ್ದಾರೆ ಎಂಬ ರಾಹುಲ್ ಗಾಂಧಿಯವರ ಹೇಳಿಕೆ ಕುರಿತು ಸುಪ್ರೀಂ ಕೋರ್ಟ್ ಈ ಪ್ರತಿಕ್ರಿಯೆ ನೀಡಿದೆ.

ರಾಹುಲ್ ಗಾಂಧಿಯವರಿಗೆ ತಾತ್ಕಾಲಿಕ ಪರಿಹಾರ ಸಿಕ್ಕಿದರೂ, ವಿಚಾರಣೆಯ ವೇಳೆ ನ್ಯಾಯಮೂರ್ತಿಗಳಾದ ದೀಪಂಕರ್ ದತ್ತಾ ಮತ್ತು ಎ.ಜಿ. ಮಸಿಹ್ ಅವರನ್ನೊಳಗೊಂಡ ಪೀಠವು ಗಾಂಧಿಯವರ ಹೇಳಿಕೆಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.

ಸಂಸತ್ತಿನಲ್ಲಿ ಯಾಕೆ ಹೇಳಲಿಲ್ಲ?

ರಾಹುಲ್ ಗಾಂಧಿ ಪರ ವಾದ ಮಂಡಿಸಿದ ಹಿರಿಯ ವಕೀಲ ಡಾ. ಅಭಿಷೇಕ್ ಮನು ಸಿಂಘ್ವಿ, "ವಿರೋಧ ಪಕ್ಷದ ನಾಯಕರು ವಿಷಯಗಳನ್ನು ಪ್ರಸ್ತಾಪಿಸಲು ಸಾಧ್ಯವಾಗದಿದ್ದರೆ ಅದು ದುರದೃಷ್ಟಕರ" ಎಂದು ಹೇಳಿದರು. "ಪತ್ರಿಕೆಗಳಲ್ಲಿ ಪ್ರಕಟವಾದ ವಿಷಯಗಳನ್ನು ಅವರು ಹೇಳಲು ಸಾಧ್ಯವಾಗದಿದ್ದರೆಅವರು ವಿರೋಧ ಪಕ್ಷದ ನಾಯಕರಾಗಿರಲು ಸಾಧ್ಯವಿಲ್ಲ" ಎಂದೂ ಸಿಂಘ್ವಿ ವಾದಿಸಿದರು.

ಇದಕ್ಕೆ ನ್ಯಾಯಮೂರ್ತಿ ದತ್ತಾ, "ನಿಮಗೆ ಏನು ಹೇಳಬೇಕೋ ಅದನ್ನು ಸಂಸತ್ತಿನಲ್ಲಿ ಏಕೆ ಹೇಳಬಾರದುಸಾಮಾಜಿಕ ಮಾಧ್ಯಮದಲ್ಲಿ ಯಾಕೆ ಹೇಳಬೇಕು?" ಎಂದು ಪ್ರಶ್ನಿಸಿದರು.

"ನೀವು ನಿಜವಾದ ಭಾರತೀಯರಾಗಿದ್ದರೆ ಹೀಗೆ ಹೇಳುತ್ತಿರಲಿಲ್ಲ"

ಗಾಂಧಿಯವರ ಹೇಳಿಕೆಗಳ ಬಗ್ಗೆ ಮತ್ತಷ್ಟು ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಮೂರ್ತಿ ದತ್ತಾ, "ಡಾ. ಸಿಂಘ್ವಿಯವರಿಗೆ ಹೇಳಿ, 2000 ಚದರ ಕಿಲೋಮೀಟರ್ ಭಾರತೀಯ ಭೂಪ್ರದೇಶವನ್ನು ಚೀನಿಯರು ಆಕ್ರಮಿಸಿಕೊಂಡಿದ್ದಾರೆ ಎಂದು ನಿಮಗೆ ಹೇಗೆ ಗೊತ್ತಾಯಿತುನೀವು ಅಲ್ಲಿ ಇದ್ದಿರಾನಿಮ್ಮ ಬಳಿ ಯಾವುದೇ ವಿಶ್ವಾಸಾರ್ಹ ಮಾಹಿತಿ ಇದೆಯೇಯಾವುದೇ ಆಧಾರವಿಲ್ಲದೆ ಯಾಕೆ ಇಂತಹ ಹೇಳಿಕೆಗಳನ್ನು ನೀಡುತ್ತೀರಿನೀವು ನಿಜವಾದ ಭಾರತೀಯರಾಗಿದ್ದರೆಇವೆಲ್ಲವನ್ನೂ ಹೇಳುತ್ತಿರಲಿಲ್ಲ" ಎಂದು ತೀವ್ರವಾಗಿ ಚಾಟಿ ಬೀಸಿದರು.

ಇದಕ್ಕೆ ಉತ್ತರ ನೀಡಿದ ಸಿಂಘ್ವಿ, "ನಮ್ಮ 20 ಭಾರತೀಯ ಸೈನಿಕರನ್ನು ಥಳಿಸಿ ಕೊಲ್ಲಲಾಗಿದೆ ಮತ್ತು ಇದು ಆತಂಕಕಾರಿ ವಿಷಯ ಎಂದು ನಿಜವಾದ ಭಾರತೀಯ ಹೇಳಬಹುದು" ಎಂದರು.

"ಗಡಿಯಲ್ಲಿ ಸಂಘರ್ಷ ಇರುವಾಗ ಎರಡೂ ಕಡೆ ಸಾವು-ನೋವುಗಳು ಆಗುವುದು ಅಸಾಮಾನ್ಯವೇನಲ್ಲ ಅಲ್ಲವೇ?" ಎಂದು ನ್ಯಾಯಮೂರ್ತಿ ದತ್ತಾ ಮರುಪ್ರಶ್ನಿಸಿದರು.

ಗಾಂಧಿ ಕೇವಲ ಸರಿಯಾದ ಮಾಹಿತಿ ಬಹಿರಂಗಪಡಿಸುವಿಕೆ ಮತ್ತು ಮಾಹಿತಿ ಮುಚ್ಚಿಡುವಿಕೆಯ ಬಗ್ಗೆ ಕಳವಳ ವ್ಯಕ್ತಪಡಿಸುತ್ತಿದ್ದರು ಎಂದು ಸಿಂಘ್ವಿ ಹೇಳಿದರು. ಆದರೆ ಪ್ರಶ್ನೆಗಳನ್ನು ಎತ್ತಲು ಸರಿಯಾದ ವೇದಿಕೆ ಇದೆ ಎಂದು ನ್ಯಾಯಮೂರ್ತಿ ದತ್ತಾ ಹೇಳಿದರು.

ಮಾನನಷ್ಟ ಮೊಕದ್ದಮೆಗೆ ತಾತ್ಕಾಲಿಕ ತಡೆ

ತಮ್ಮ ಕಕ್ಷಿದಾರರು ಹೇಳಿಕೆಗಳನ್ನು ಉತ್ತಮವಾಗಿ ರೂಪಿಸಬಹುದಿತ್ತು ಎಂದು ಸಿಂಘ್ವಿ ಒಪ್ಪಿಕೊಂಡರು. ಆದರೆ ವಿರೋಧ ಪಕ್ಷದ ನಾಯಕರಾಗಿ ಪ್ರಶ್ನೆಗಳನ್ನು ಎತ್ತುವುದು ಅವರ ಕರ್ತವ್ಯವಾಗಿದ್ದುಮಗೆ ಕಿರುಕುಳ ನೀಡುವ ಪ್ರಯತ್ನ ಇದು ಎಂದು ಅವರು ವಾದಿಸಿದರು. ಕ್ರಿಮಿನಲ್ ದೂರು ದಾಖಲಿಸುವ ಮೊದಲು ಆರೋಪಿಯ ಪೂರ್ವಭಾವಿ ವಿಚಾರಣೆ ಕಡ್ಡಾಯವಾಗಿತ್ತುಆದರೆ ಈ ಪ್ರಕರಣದಲ್ಲಿ ಅದನ್ನು ಪಾಲಿಸಿಲ್ಲ ಎಂದು ಸೆಕ್ಷನ್ 223 ಬಿಎನ್‌ಎಸ್‌ಎಸ್ ಉಲ್ಲೇಖಿಸಿದರು. ಆದರೆ ಈ ಅಂಶವನ್ನು ಹೈಕೋರ್ಟ್ ಮುಂದೆ ಪ್ರಸ್ತಾಪಿಸಲಾಗಿಲ್ಲ ಎಂದು ನ್ಯಾಯಮೂರ್ತಿ ದತ್ತಾ ಗಮನಸೆಳೆದರು.

ಈ ವಿಷಯವನ್ನು ಮುಂದಿಡಲು ವಿಳಂಬವಾಯಿತು ಎಂದು ಸಿಂಘ್ವಿ ಒಪ್ಪಿಕೊಂಡರು. ದೂರುದಾರರು "ಬಾಧಿತ ವ್ಯಕ್ತಿ" ಅಲ್ಲದಿದ್ದರೂ, "ಮಾನಹಾನಿಯಾದ ವ್ಯಕ್ತಿ" ಎಂದು ಸಿಂಘ್ವಿ ಪ್ರತಿಪಾದಿಸಿದರು.

ಅಂತಿಮವಾಗಿಸುಪ್ರೀಂ ಕೋರ್ಟ್ ಈ ಅಂಶವನ್ನು ಪರಿಗಣಿಸಲು ಒಪ್ಪಿಕೊಂಡಿತು ಮತ್ತು ಅಲಹಾಬಾದ್ ಹೈಕೋರ್ಟ್‌ನ ತೀರ್ಪನ್ನು ಪ್ರಶ್ನಿಸಿ ಗಾಂಧಿಯವರ ವಿಶೇಷ ಅರ್ಜಿಯ ಕುರಿತು ನೋಟಿಸ್ ಜಾರಿ ಮಾಡಿತು. ಮೂರು ವಾರಗಳ ಕಾಲ ಮಧ್ಯಂತರ ತಡೆಯಾಜ್ಞೆಯನ್ನು ನೀಡಲಾಯಿತು.

ಲಕ್ನೋದ ಸಂಸದ- ಶಾಸಕರ ನ್ಯಾಯಾಲಯದಲ್ಲಿ ದಾಖಲಾದ ಮಾನನಷ್ಟ ಪ್ರಕರಣ ಮತ್ತು ಫೆಬ್ರವರಿ 2025 ರಲ್ಲಿ ನೀಡಿದ್ದ ಸಮನ್ಸ್ ಆದೇಶವನ್ನು ಪ್ರಶ್ನಿಸಿ ರಾಹುಲ್‌ ಗಾಂಧಿ ಹೈಕೋರ್ಟ್‌ಗೆ ಮೊರೆ ಹೋಗಿದ್ದರು. ಮೇ 29 ರಂದು ಅಲಹಾಬಾದ್ ಹೈಕೋರ್ಟ್ ಅವರ ಅರ್ಜಿಯನ್ನು ವಜಾಗೊಳಿಸಿತ್ತು. ಭಾರತೀಯ ಸೇನೆಗೆ ಮಾನಹಾನಿ ಮಾಡುವ ಹೇಳಿಕೆಗಳನ್ನು ನೀಡುವುದು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದಲ್ಲಿ ಸೇರಿಲ್ಲ ಎಂದು ಹೈಕೋರ್ಟ್‌ನ ನ್ಯಾಯಮೂರ್ತಿ ಸುಭಾಷ್ ವಿದ್ಯಾರ್ಥಿ ಅಭಿಪ್ರಾಯಪಟ್ಟಿದ್ದರು.

ಭಾರತ್ ಜೋಡೋ ಯಾತ್ರೆಯ ವೇಳೆ ನೀಡಿದ ಹೇಳಿಕೆಗಳು

ಮಾಜಿ ಗಡಿ ರಸ್ತೆ ಸಂಸ್ಥೆ (ಬಿ.ಆರ್.ಒ) ನಿರ್ದೇಶಕ ಉದಯ್ ಶಂಕರ್ ಶ್ರೀವಾಸ್ತವ ಅವರು ಈ ಮಾನನಷ್ಟ ದೂರು ದಾಖಲಿಸಿದ್ದಾರೆ. 2022ರ ಡಿಸೆಂಬರ್ 16 ರಂದು ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಯ ವೇಳೆ ನೀಡಿದ ಹೇಳಿಕೆಗಳೇ ಇದಕ್ಕೆ ಕಾರಣ. 2022ರ ಡಿಸೆಂಬರ್ ರಂದು ಭಾರತೀಯ ಮತ್ತು ಚೀನೀ ಸೇನೆಗಳ ನಡುವಿನ ಘರ್ಷಣೆಗೆ ಸಂಬಂಧಿಸಿದಂತೆ ಗಾಂಧಿಯವರ ಹೇಳಿಕೆಗಳು ಭಾರತೀಯ ಸೇನೆಗೆ ಮಾನಹಾನಿ ಮಾಡಿವೆ ಎಂದು ದೂರಿನಲ್ಲಿ ಹೇಳಲಾಗಿದೆ.

ಅರುಣಾಚಲ ಪ್ರದೇಶದಲ್ಲಿ ಚೀನೀ ಸೇನೆಯು ನಮ್ಮ ಸೈನಿಕರಿಗೆ 'ಥಳಿಸುತ್ತಿದೆಮತ್ತು ಈ ಬಗ್ಗೆ ಭಾರತೀಯ ಮಾಧ್ಯಮಗಳು ಯಾವುದೇ ಪ್ರಶ್ನೆ ಕೇಳುವುದಿಲ್ಲ ಎಂದು ಗಾಂಧಿ ಪದೇ ಪದೇ ಅವಹೇಳನಕಾರಿಯಾಗಿ ಹೇಳಿದ್ದಾರೆ ಎಂದು ನಿರ್ದಿಷ್ಟವಾಗಿ ಆರೋಪಿಸಲಾಗಿದೆ.

ಗಾಂಧಿಯವರ ಹೇಳಿಕೆಗಳು ಭಾರತೀಯ ಸೇನೆ ಮತ್ತು ಅದಕ್ಕೆ ಸಂಬಂಧಿಸಿದ ವ್ಯಕ್ತಿಗಳು ಮತ್ತು ಅವರ ಕುಟುಂಬದ ಸದಸ್ಯರ ಸ್ಥೈರ್ಯವನ್ನು ಕುಗ್ಗಿಸಿವೆ ಎಂದು ಲಕ್ನೋ ನ್ಯಾಯಾಲಯದ ಆದೇಶದಲ್ಲಿ ಪ್ರಾಥಮಿಕವಾಗಿ ಹೇಳಲಾಗಿದ್ದುಇದನ್ನು ಪ್ರಶ್ನಿಸಿ ಗಾಂಧಿ ಹೈಕೋರ್ಟ್ ಮೆಟ್ಟಿಲೇರಿದ್ದರು. 

ಇನ್ನಷ್ಟು ಸುದ್ದಿಗಳಿಗೆ ಈ ಚಿತ್ರ ಕ್ಲಿಕ್‌ ಮಾಡಿರಿ: 

PARYAYA: "ನೀವು ನಿಜವಾದ ಭಾರತೀಯರಾಗಿದ್ದರೆ, ಇದನ್ನು ಹೇಳುತ್ತಿರಲಿಲ್ಲ!":   " ನೀವು ನಿಜವಾದ ಭಾರತೀಯರಾಗಿದ್ದರೆ , ಇದನ್ನು ಹೇಳುತ್ತಿರಲಿಲ್ಲ!" ರಾಹುಲ್ ಗಾಂಧಿಗೆ ಸುಪ್ರೀಂ ಕೋರ್ಟ್ ಚಾಟಿ ಭಾ ರತೀಯ ಸೇನೆಯ ಬಗ್ಗೆ ರಾಹುಲ್ ಗಾಂಧಿ ನೀ...

Wednesday, September 7, 2022

PARYAYA: ರೊಬೋಟ್‌ ಮಹಿಳೆ ʼಮಿಸ್‌ ಟ್ಯಾಂಗ್‌ ಯುʼ: ವಿಶ್ವದ ಮೊತ್ತ ಮೊ...

 ರೊಬೋಟ್‌ ಮಹಿಳೆ ʼಮಿಸ್‌ ಟ್ಯಾಂಗ್‌ ಯುʼ: ವಿಶ್ವದ ಮೊತ್ತ ಮೊದಲ ಕಂಪೆನಿ ಸಿಇಒ

ಬೆಂಗಳೂರು: ವಿಶ್ವದಲ್ಲಿ ಇದೇ ಮೊತ್ತ ಮೊದಲ ಬಾರಿಗೆ ʼರೊಬೋಟ್‌ ಮಹಿಳೆʼ ಚೀನಾದ ಕಂಪೆನಿಯೊಂದರ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ (ಸಿಇಒ) ಆಗಿ ನೇಮಕಗೊಂಡಿದೆ. ಯಂತ್ರಗಳು ಮತ್ತು ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ/AI) ಶೀಘ್ರದಲ್ಲೇ ಗೇಮ್ ಚೇಂಜರ್ ಆಗಲಿವೆ ಎಂಬ ನಂಬಿಕೆ ಇದರೊಂದಿಗೆ ಇದೀಗ ನನಸಾಗಿದೆ.

ವೈಜ್ಞಾನಿಕ ಕಾಲ್ಪನಿಕ ಚಿತ್ರಗಳಲ್ಲಿ ಯಂತ್ರ ಮಾನವರು ಮಾನವರನ್ನೂ ಮೀರಿಸುವಂತೆ ವರ್ತಿಸುವುದನ್ನು ನಾವು ಕಂಡಿದ್ದೇವೆ. ಆದರೆ ಕೃತಕ ಬುದ್ಧಿಮತ್ತೆ ಇಂತಹ ಪರಿವರ್ತನೆಯನ್ನು ತರುವುದೇ ಎಂಬುದರ ಸ್ಪಷ್ಟ ಕಲ್ಪನೆ ಇನ್ನೂ ಮನುಷ್ಯರಿಗೆ ಬಂದಿಲ್ಲ. ಆದರೆ ಇದು ಸಾಧ್ಯ ಎಂಬುದನ್ನು ಚೀನಾದ ಮೆಟಾವರ್ಸ್‌ ಕಾರ್ಪೋರೇಷನ್‌ ಸಾಬೀತು ಪಡಿಸಿದೆ.

ಚೀನಾದ ಈ ಕಂಪೆನಿಯು ತನ್ನ ಸಿಇಒ ಆಗಿ ʼರೊಬೋಟ್‌ ಮಹಿಳೆʼಯನ್ನು ನೇಮಕ ಮಾಡಿದೆ.

ಚೀನಾದ ಮೆಟಾವರ್ಸ್ ಕಂಪೆನಿ ನೆಟ್‌ಡ್ರಾಗನ್ ವೆಬ್‌ಸಾಫ್ಟ್ ತನ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಆಗಿ ಮಿಸ್ ಟ್ಯಾಂಗ್ ಯು ಎಂದು ಹೆಸರಿಸಲಾದ ʼರೊಬೋಟ್‌ ಮಹಿಳೆʼಯನ್ನು (ಹುಮನಾಯ್ಡ್ ರೋಬೋಟ್) ನೇಮಿಸಿದೆ ಎಂದು ʼದಿ ಮೆಟ್ರೋʼ ವರದಿ ಮಾಡಿದೆ. ಕಂಪೆನಿಯೊಂದರಲ್ಲಿ ರೋಬೋಟ್‌ಗೆ ಆಡಳಿತಾತ್ಮಕ ಸ್ಥಾನವನ್ನು ನೀಡಿರುವುದು ಜಗತ್ತಿನಲ್ಲಿ ಇದೇ ಮೊದಲು.

ಈ ರೋಬೋಟ್ ಅನ್ನು ಮಹಿಳೆಯ ಮಾದರಿಯಲ್ಲಿ ರಚಿಸಲಾಗಿದೆ. ಇಂತಹ ಬೆಳವಣಿಗೆಯೊಂದನ್ನು ಅಲಿಬಾಬಾ ಸಂಸ್ಥಾಪಕ ಮತ್ತು ಅಧ್ಯಕ್ಷ ಜಾಕ್ ಮಾ 2017ರಲ್ಲಿ ʼಟೈಮ್‌ʼ ನಿಯತಕಾಲಿಕದಲ್ಲಿ ಅವರು ಭವಿಷ್ಯ ನುಡಿದಿದ್ದರುಮುಂದಿನ 10 ವರ್ಷಗಳಲ್ಲಿ ಸಿಇಒ ಆಗಿ ರೋಬೋಟ್ ಬರಲಿದೆ ಎಂದು ಜಾಕ್‌ ಮಾ ನಂಬಿದ್ದರು.  ಜಗತ್ತು ಅದನ್ನು ಕೇವಲ 5 ವರ್ಷದಲ್ಲಿ ಸಾಧ್ಯವಾಗಿಸಿದೆ.

ಟ್ಯಾಂಗ್ ಯು ಕಂಪೆನಿಯ ಸಿಇಒ (CEO) ಆಗಿ ವ್ಯವಹಾರದ ಸಂಘಟನೆ ಮತ್ತು ದಕ್ಷತೆಯ ವಿಭಾಗವನ್ನು ಮುನ್ನಡೆಸುತ್ತದೆ ಎಂದು ಕಂಪೆನಿ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. 10 ಶತಕೋಟಿ ಡಾಲರ್ (ರೂ. 7,97,05,05,00,000) ಮಾರುಕಟ್ಟೆ ಬಂಡವಾಳ ಹೊಂದಿರುವ ನೆಟ್‌ ಡ್ರ್ಯಾಗನ್‌ ವೆಬ್‌ ಸಾಫ್ಟ್‌ ಕಂಪೆನಿಯ ಕಾರ್ಯಾಚರಣೆಗಳನ್ನು ನಿರ್ವಹಿಸುವ ಜವಾಬ್ದಾರಿಯನ್ನು ʼಟ್ಯಾಂಗ್‌ ಯುʼ ಹೊರುತ್ತದೆ.

"ಕೃತಕ ಬುದ್ಧಿಮತ್ತೆಯು (AI) ಕಾರ್ಪೊರೇಟ್ ನಿರ್ವಹಣೆಯ ಭವಿಷ್ಯ ಎಂದು ನಾವು ನಂಬುತ್ತೇವೆ ಮತ್ತು ಮಿಸ್‌. ಟ್ಯಾಂಗ್ ಯು ಕೆಲಸವು, ನಮ್ಮ ಕಾರ್ಯಾಚರಣೆಯ ವಿಧಾನ ಬದಲಾಯಿಸಲು ಕೃತಕ ಬುದ್ಧಿಮತ್ತೆ (AI )ಬಳಕೆಯನ್ನು ನಿಜವಾಗಿಯೂ ಅಳವಡಿಸಿಕೊಳ್ಳುವ ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ” ಎಂದು ನೆಟ್‌ ಡ್ರ್ಯಾಗನ್‌ ಅಧ್ಯಕ್ಷ ಡಾ. ಡೆಜಿಯನ್ ಲಿಯು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.

ವ್ಯಾಪಾರ ಮತ್ತು ಅಂತಿಮವಾಗಿ ನಮ್ಮ ಭವಿಷ್ಯದ ಕಾರ್ಯತಂತ್ರದ ಬೆಳವಣಿಗೆಗೆ ಚಾಲನೆ ನೀಡಲಿರುವ ಟ್ಯಾಂಗ್ ಯು ಕೆಲಸವು ಕಾರ್ಯಚಟುವಟಿಕೆಗಳ ಗುಣಮಟ್ಟದಕ್ಷತೆ ಮತ್ತು ಪ್ರಕ್ರಿಯೆಯ ಹರಿವನ್ನು ಸುಧಾರಿಸುತ್ತದೆ. ಟ್ಯಾಂಗ್ ಯು ನೈಜ-ಸಮಯದ ಡೇಟಾ ಹಬ್ ಮತ್ತು ಹೆಚ್ಚು ಪರಿಣಾಮಕಾರಿ ಅಪಾಯ ನಿರ್ವಹಣಾ ವ್ಯವಸ್ಥೆಯ ಅಭಿವೃದ್ಧಿ ನಿಟ್ಟಿನಲ್ಲಿ ಸಹಾಯ ಮಾಡಲು ವಿಶ್ಲೇಷಣಾತ್ಮಕ ಸಾಧನವಾಗಿ ಕಾರ್ಯನಿರ್ವಹಿಸುತ್ತದೆಜೊತೆಗೆ ದಿನನಿತ್ಯದ ಕಾರ್ಯಾಚರಣೆಗಳಲ್ಲಿ ತರ್ಕಬದ್ಧ ನಿರ್ಧಾರ ತೆಗೆದುಕೊಳ್ಳುವಿಕೆಯನ್ನು ಉತ್ತೇಜಿಸುತ್ತದೆ.” ಎಂದು ಲಿಯು ಹೇಳಿದ್ದಾರೆ.

ನೆಟ್‌ಡ್ರಾಗನ್ ವೆಬ್‌ಸಾಫ್ಟ್ ಮಲ್ಟಿಪ್ಲೇಯರ್  ಕಂಪೆನಿಯು ಮೊಬೈಲ್ ಅಪ್ಲಿಕೇಶನ್‌ಗಳನ್ನು ರಚಿಸುವುದರ ಜೊತೆಗೆಆನ್‌ಲೈನ್ ಆಟಗಳನ್ನು ನಿರ್ಮಿಸುತ್ತದೆ ಮತ್ತು ನಿರ್ವಹಿಸುತ್ತದೆ.


PARYAYA: ರೊಬೋಟ್‌ ಮಹಿಳೆ ʼಮಿಸ್‌ ಟ್ಯಾಂಗ್‌ ಯುʼ: ವಿಶ್ವದ ಮೊತ್ತ ಮೊ...:   ರೊಬೋಟ್‌ ಮಹಿಳೆ ʼ ಮಿಸ್‌ ಟ್ಯಾಂಗ್‌ ಯು ʼ: ವಿಶ್ವದ ಮೊತ್ತ ಮೊದಲ ಕಂಪೆನಿ ಸಿಇಒ ಬೆಂಗಳೂರು : ವಿಶ್ವದಲ್ಲಿ ಇದೇ ಮೊತ್ತ ಮೊದಲ ಬಾರಿಗೆ ʼ ರೊಬೋಟ್‌ ಮಹಿಳೆ ʼ ಚೀನಾದ ಕಂಪ...

Saturday, August 17, 2019

ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನಕ್ಕೆ ಚೀನಾ ಒಂದೇ ಬೆಂಬಲಿಗ..! ಕನ್ನಡಿ ಹಿಡಿದ ಪಾಕ್ ಪತ್ರಿಕೆ ‘ಡಾನ್’

ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನಕ್ಕೆ ಚೀನಾ ಒಂದೇ ಬೆಂಬಲಿಗ..! 

ಕನ್ನಡಿ ಹಿಡಿದ ಪಾಕ್ ಪತ್ರಿಕೆ ‘ಡಾನ್’

ನವದೆಹಲಿ:   ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ  (ಯುಎನ್ಎಸ್ಸಿ) ಚೀನಾ ಮಾತ್ರ ಪಾಕಿಸ್ತಾನವನ್ನು "ಬಹಿರಂಗವಾಗಿ ಬೆಂಬಲಿಸುತ್ತಿದೆ" ಎಂದು ಪಾಕಿಸ್ತಾನದ ಪ್ರಮುಖ ಪತ್ರಿಕೆ ‘ಡಾನ್’  ಟೀಕಿಸಿದ್ದು, ವಿಶ್ವ ವಿಶೇಷ ಸಂಸ್ಥೆಯ ಪ್ರಸ್ತುತ ಸಂಯೋಜನೆಯ ಉನ್ನತ ಅಂಗವು ಇಸ್ಲಾಮಾಬಾದಿಗೆ  ಅನುಕೂಲಕರವಾಗಿ ಕಾಣುತ್ತಿಲ್ಲ ಎಂದು ಇಮ್ರಾನ್ ಖಾನ್ ಸರ್ಕಾರಕ್ಕೆ ಕನ್ನಡಿ ಹಿಡಿದು ತೋರಿಸಿದೆ..

 ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಭಾರತ ರದ್ದುಪಡಿಸಿದ ನಂತರ ವಿಶ್ವಸಂಸ್ಥೆ ಭದ್ರತಾ ಮಂಡಳಿಯು  2019 ಆಗಸ್ಟ್ 16ರ ಶುಕ್ರವಾರ  ಕಾಶ್ಮೀರ ಬೆಳವಣಿಗೆಗೆ ಸಂಬಂಧಿಸಿದಂತೆ  ಅಪರೂಪದ  ರಹಸ್ಯ ಸಭೆ ನಡೆಸಿತ್ತು.

ಜಮ್ಮು ಮತ್ತು ಕಾಶ್ಮೀರಕ್ಕೆ  ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದು ಪಡಿಸಿ, ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸುವ ಮೂಲಕ ಭಾರತವು ಪಾಕಿಸ್ತಾನದ ಜೊತೆ ಹೊಸ ವಿವಾದ ಹುಟ್ಟು ಹಾಕಿದೆ ಎಂದು ಆಪಾದಿಸಿ ಪಾಕಿಸ್ತಾನವು ವಿಶ್ವಸಂಸ್ಥೆ ಭದ್ರತಾ ಮಂಡಳಿಗೆ ಪತ್ರ ಬರೆದಿತ್ತು.
ಮುಚ್ಚಿದ ಬಾಗಿಲುಗಳ ಹಿಂದೆ  ನಡೆದ ರಹಸ್ಯ ಸಭೆಯಲ್ಲಿ ಕೇವಲ ಐದು ಖಾಯಂ ಸದಸ್ಯರು ಮತ್ತು ೧೦ ಖಾಯಮೇತರ ಸದಸ್ಯರು ಮಾತ್ರ ಹಾಜರಿದ್ದರು.

ಜಮ್ಮು ಮತ್ತು ಕಾಶ್ಮೀರಕ್ಕೆ  ವಿಶೇಷ ಸ್ಥಾನಮಾನವನ್ನು  ನೀಡಿದ್ದ ಭಾರತೀಯ  ಸಂವಿಧಾನದ ೩೭೦ ನೇ ವಿಧಿಯನ್ನು ರದ್ದುಪಡಿಸುವ  ಕ್ರಮವು ಆಂತರಿಕ ವಿಷಯವಾಗಿದೆ  ಎಂದು ಅಂತಾರಾಷ್ಟ್ರೀಯ ಸಮುದಾಯಕ್ಕೆ  ಖಡಾಖಂಡಿತವಾಗಿ  ಹೇಳಿದ್ದ ಭಾರತ  ವಾಸ್ತವವನ್ನು ಒಪ್ಪಿಕೊಳ್ಳುವಂತೆ ಪಾಕಿಸ್ತಾನಕ್ಕೆ ಸಲಹೆ ನೀಡಿತ್ತು.
ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಹಿಂತೆಗೆದುಕೊಳ್ಳುವ ಭಾರತದ ನಿರ್ಧಾರವು ದಕ್ಷಿಣ ಏಷ್ಯಾದ ಶಾಂತಿ ಮತ್ತು ಸ್ಥಿರತೆಗೆ ಹೇಗೆ ಧಕ್ಕೆ ತರುತ್ತದೆ ಎಂಬುದಾಗಿ ವಿಶ್ವಸಂಸ್ಥೆ ಭದ್ರತಾ ಮಂಡಳಿ ಸದಸ್ಯರಿಗೆ ನಾಟುವಂತೆ ತಿಳಿಹೇಳಲು ಪಾಕಿಸ್ತಾನದ  ವಿಶ್ವಸಂಸ್ಥೆಯಲ್ಲಿನ ರಾಯಭಾರಿ ಮಲೀಹಾ ಲೋಧಿ ಮತ್ತು ಅವರ ತಂಡವು ತಿಂಗಳ ಆರಂಭದಿಂದಲೂ  ದಣಿವರಿವು ಇಲ್ಲದೆ  ಕೆಲಸ ಮಾಡಿತ್ತು ಎಂದು ವಿಶ್ವಸಂಸ್ಥೆ ಕೇಂದ್ರ  ಕಚೇರಿಯಿಂದ  ಮಾಡಲಾದ ಡಾನ್’ ವರದಿ ತಿಳಿಸಿದೆ.
"ಆದರೆ ಮಂಡಳಿಯ ಪ್ರಸ್ತುತ ಸಂಯೋಜನೆಯು ಪಾಕಿಸ್ತಾನಕ್ಕೆ ಒಲವು ತೋರುತ್ತಿಲ್ಲ" ಎಂದು ಪತ್ರಿಕೆ ಬರೆದಿದೆ.
ಜಮ್ಮು ಮತ್ತು ಕಾಶ್ಮೀರದ ಹಾಲಿ  ಪರಿಸ್ಥಿತಿಯ ಬಗ್ಗೆ ಚರ್ಚಿಸಲು ಇಸ್ಲಾಮಾಬಾದ್  ಮಾಡಿದ ಮನವಿಯ ಮೇರೆಗೆ ಪಾಕಿಸ್ತಾನದ  ಸಾರ್ವಕಾಲಿಕ  ಮಿತ್ರ ಚೀನಾ  ಮಂಡಳಿಯು ರಹಸ್ಯ ಸಭೆಗೆ ಆಗ್ರಹಿಸಿತ್ತು.
"ಐವರು ಖಾಯಂ ಸದಸ್ಯರಲ್ಲಿ ಒಬ್ಬರಾದ  ಚೀನಾ ಚೀನಾ  ಬಹಿರಂಗವಾಗಿ ಪಾಕಿಸ್ತಾನವನ್ನು ಬೆಂಬಲಿಸಿತು’  ಎಂದು ಡಾನ್ ವರದಿ  ಹೇಳಿತು.

ಉಳಿದ ನಾಲ್ಕು ಖಾಯಂ ಸದಸ್ಯರಾದ ಬ್ರಿಟನ್, ಫ್ರಾನ್ಸ್, ರಶ್ಯಾ ಮತ್ತು  ಅಮೆರಿಕ ಕಾಶ್ಮೀರ ವಿವಾದವನ್ನು  ಭಾರತ ಮತ್ತು ಪಾಕಿಸ್ತಾನ ದ್ವಿಪಕ್ಷೀಯ ಮಾತುಕತೆ ಮೂಲಕ  ಪರಿಹರಿಸಬೇಕೆಂದು ಬಯಸಿದವು  ಎಂದು ‘ಡಾನ್’ ಹೇಳಿತು.
ಭಾರತವೂ  ಇದೇ  ತಾಳಿದ್ದರೂ, ಕಾಶ್ಮೀರದ ಬಗ್ಗೆ ಯಾವುದೇ ಮಾತುಕತೆ ನಡೆಸಲು ನಿರಾಕರಿಸುತ್ತಿದೆ. ಕಾಶ್ಮೀರ ಸಮಸ್ಯೆಯನ್ನು ಆಂತರಿಕ ವಿಷಯವೆಂದು ಅದು ಹೇಳುತ್ತಿದೆ  ಎಂದು ವರದಿ ತಿಳಿಸಿದೆ.

ಬೆಲ್ಜಿಯಂ, ಕೋಟ್ ಡಿ ಐವೊಯಿರ್, ಡೊಮಿನಿಕನ್ ರಿಪಬ್ಲಿಕ್, ಈಕ್ವಟೋರಿಯಲ್ ಗಿನಿಯಾ, ಜರ್ಮನಿ, ಇಂಡೋನೇಷ್ಯಾ, ಕುವೈತ್, ಪೆರು, ಪೋಲೆಂಡ್ ಮತ್ತು ದಕ್ಷಿಣ ಆಫ್ರಿಕಾಇವು ವಿಶ್ವಸಂಸ್ಥೆ ಸಾಮಾನ್ಯ ಸಭೆಯಿಂದ  ಎರಡು ವರ್ಷಗಳ ಅವಧಿಗೆ ಆಯ್ಕೆಯಾಗಿರುವ ಭದ್ರತಾ ಮಂಡಳಿಯ  ೧೦ ಖಾಯಮೇತರ ಸದಸ್ಯರು

ಇವರ ಪೈಕಿ  ಇಂಡೋನೇಷ್ಯಾ ಮತ್ತು ಕುವೈತ್  ಇವರಿಬ್ಬರು ಈ ಹಿಂದೆ ಪಾಕಿಸ್ತಾನದ ಬಗ್ಗೆ ಸಹಾನುಭೂತಿ  ಹೊಂದಿದ್ದರೂ,  ಚೀನಾದ ಕೋರಿಕೆಯನ್ನು ಬೆಂಬಲಿಸುವ ನಿಟ್ಟಿನಲ್ಲಿ ಇತರರನ್ನು ಮನವೊಲಿಸುವುದು ಕಷ್ಟಕರ ಎಂದು ಡಾನ್ ವರದಿ ತಿಳಿಸಿದೆ.

ಈಮಧ್ಯೆ, ಪಾಕಿಸ್ತಾನ ಸರ್ಕಾರವು ಜಾಗತಿಕ ಬೆಂಬಲವನ್ನು ಕ್ರೋಡೀಕರಿಸಲು  ಹೊರಟಿದ್ದರೂ, ಆರ್ಗನೈಸೇಶನ್ ಆಫ್ ಇಸ್ಲಾಮಿಕ್ ಕೋಆಪರೇಷನ್ (ಒಐಸಿ) ಮತ್ತು ಮುಸ್ಲಿಮ್  ರಾಷ್ಟ್ರಗಳಿಂದ ಪ್ರತ್ಯೇಕವಾಗಿ  ಲಭ್ಯವಾದ  ಪ್ರತಿಕ್ರಿಯೆಗಳು ಮತ್ತು ಬೆಂಬಲ ದುರ್ಬಲವಾಗಿವೆ ಎಂದು ‘ ದಿ ನ್ಯೂಸ್ ಇಂಟರ್ನ್ಯಾಷನಲ್’  ಪತ್ರಿಕೆ ತಿಳಿಸಿದೆ.
ಸುಮಾರು ೫೦ ವರ್ಷದ ಒಐಸಿಯು ಬಿಡುಗಡೆ ಮಾಡಿರುವ  ರಾಜತಾಂತ್ರಿಕ ಪರಿಭಾಷೆಯ ಕೆಲವು ಹೇಳಿಕೆಗಳು ಯಾವುದೇ ಬದ್ಧತೆಯನ್ನೂ ವ್ಯಕ್ತ ಪಡಿಸಿಲ್ಲ ಎಂದು  ಪತ್ರಿಕೆಯಲ್ಲಿನ ಲೇಖನವೊಂದು ತಿಳಿಸಿದೆ.

ಒಐಸಿ ಸದಸ್ಯ ರಾಷ್ಟ್ರಗಳ ಜೊತೆಗಿನ  ಭಾರತೀಯ ವ್ಯಾಪಾರ ಮತ್ತು ವ್ಯವಹಾರದ ಶಕ್ತಿಯು, ಅದರ ವ್ಯಾಪಾರ ಪಾಲುದಾರರು ನಿರ್ಲಕ್ಷಿಸಲಾಗದಷ್ಟು ಪ್ರಬಲವಾಗಿದೆ, ಅವರಲ್ಲಿ ಯಾರೂ ಪಾಕಿಸ್ತಾನದ  ಪ್ರಸ್ತುತ ಮನವಿಯತ್ತ ಯಾವುದೇ ಗಮನವನ್ನೂ ಹರಿಸುತ್ತಿಲ್ಲ ಎಂದು ಪತ್ರಿಕೆ ಹೇಳಿದೆ.