Showing posts with label United Nations. Show all posts
Showing posts with label United Nations. Show all posts

Sunday, November 7, 2021

PARYAYA: ವಿಶ್ವ ಸಂಸ್ಥೆಯಲ್ಲಿ ಡೈನೋಸಾರ್..!

ವಿಶ್ವ ಸಂಸ್ಥೆಯಲ್ಲಿ ಡೈನೋಸಾರ್..!

ವಿಶ್ವಸಂಸ್ಥೆಯಲ್ಲಿ ಇತ್ತೀಚೆಗೆ ಜಾಗತಿಕ ಹವಾಮಾನ ಸ್ಥಿತಿಗತಿ ಬಗ್ಗೆ ಚರ್ಚೆ ನಡೆಯಿತು. ವಿಶ್ವವನ್ನು ದುರಂತದೆಡೆಗೆ ತಳ್ಳುತ್ತಿರುವ ಪಳೆಯುಳಿಕೆ ಇಂಧನಗಳ ಮೇಲಿನ ಅವಲಂಬನೆಯನ್ನು ತಗ್ಗಿಸಬೇಕಾದ ಅಗತ್ಯದ ಬಗ್ಗೆ ವಿವಿಧ ಅಭಿಪ್ರಾಯಗಳು ವ್ಯಕ್ತವಾದವು.

ಪ್ರಧಾನಿ ನರೇಂದ್ರ ಮೋದಿ ಅವರು ಭೂಮಿಯ ಮಂದಿ ಮತ್ತೆ ಸೂರ್ಯನತ್ತ ಹೋಗಬೇಕಾದ ಅಗತ್ಯವನ್ನು ಬಲವಾಗಿ ಪ್ರತಿಪಾದಿಸಿದರು. ‘ಒಬ್ಬ ಸೂರ್ಯ, ಒಂದು ಜಗತ್ತು, ಒಂದು ಜಾಲಇಂದಿನ ಅಗತ್ಯ ಎಂದು ಅವರು ಒತ್ತಿ ಹೇಳಿದರು.

ಇದೇ ಸಂದರ್ಭದಲ್ಲಿ ವಿಶ್ವಸಂಸ್ಥೆಯು ಒಂದು ವಿಡಿಯೋವನ್ನು ಪ್ರಸಾರ ಮಾಡಿತು. ವಿಡಿಯೋ ಸಂದೇಶ ಏನು ಎಂಬದನ್ನು ಕನ್ನಡದಲ್ಲಿ ನೋಡಿ.

ವಿಡಿಯೋ ನೋಡಲು ಮೇಲಿನ ಚಿತ್ರ/ ಕೆಳಗಿನ ಚಿತ್ರ ಕ್ಲಿಕ್ ಮಾಡಿರಿ

PARYAYA: ವಿಶ್ವ ಸಂಸ್ಥೆಯಲ್ಲಿ ಡೈನೋಸಾರ್..!:   ವಿಶ್ವ ಸಂಸ್ಥೆಯಲ್ಲಿ ಡೈನೋಸಾರ್ ..! ವಿಶ್ವಸಂಸ್ಥೆಯಲ್ಲಿ ಇತ್ತೀಚೆಗೆ ಜಾಗತಿಕ ಹವಾಮಾನ ಸ್ಥಿತಿಗತಿ ಬಗ್ಗೆ ಚರ್ಚೆ ನಡೆಯಿತು . ವಿಶ್ವವನ್ನು ದುರಂತದೆಡೆಗೆ ...

Saturday, August 17, 2019

ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನಕ್ಕೆ ಚೀನಾ ಒಂದೇ ಬೆಂಬಲಿಗ..! ಕನ್ನಡಿ ಹಿಡಿದ ಪಾಕ್ ಪತ್ರಿಕೆ ‘ಡಾನ್’

ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನಕ್ಕೆ ಚೀನಾ ಒಂದೇ ಬೆಂಬಲಿಗ..! 

ಕನ್ನಡಿ ಹಿಡಿದ ಪಾಕ್ ಪತ್ರಿಕೆ ‘ಡಾನ್’

ನವದೆಹಲಿ:   ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ  (ಯುಎನ್ಎಸ್ಸಿ) ಚೀನಾ ಮಾತ್ರ ಪಾಕಿಸ್ತಾನವನ್ನು "ಬಹಿರಂಗವಾಗಿ ಬೆಂಬಲಿಸುತ್ತಿದೆ" ಎಂದು ಪಾಕಿಸ್ತಾನದ ಪ್ರಮುಖ ಪತ್ರಿಕೆ ‘ಡಾನ್’  ಟೀಕಿಸಿದ್ದು, ವಿಶ್ವ ವಿಶೇಷ ಸಂಸ್ಥೆಯ ಪ್ರಸ್ತುತ ಸಂಯೋಜನೆಯ ಉನ್ನತ ಅಂಗವು ಇಸ್ಲಾಮಾಬಾದಿಗೆ  ಅನುಕೂಲಕರವಾಗಿ ಕಾಣುತ್ತಿಲ್ಲ ಎಂದು ಇಮ್ರಾನ್ ಖಾನ್ ಸರ್ಕಾರಕ್ಕೆ ಕನ್ನಡಿ ಹಿಡಿದು ತೋರಿಸಿದೆ..

 ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಭಾರತ ರದ್ದುಪಡಿಸಿದ ನಂತರ ವಿಶ್ವಸಂಸ್ಥೆ ಭದ್ರತಾ ಮಂಡಳಿಯು  2019 ಆಗಸ್ಟ್ 16ರ ಶುಕ್ರವಾರ  ಕಾಶ್ಮೀರ ಬೆಳವಣಿಗೆಗೆ ಸಂಬಂಧಿಸಿದಂತೆ  ಅಪರೂಪದ  ರಹಸ್ಯ ಸಭೆ ನಡೆಸಿತ್ತು.

ಜಮ್ಮು ಮತ್ತು ಕಾಶ್ಮೀರಕ್ಕೆ  ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದು ಪಡಿಸಿ, ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸುವ ಮೂಲಕ ಭಾರತವು ಪಾಕಿಸ್ತಾನದ ಜೊತೆ ಹೊಸ ವಿವಾದ ಹುಟ್ಟು ಹಾಕಿದೆ ಎಂದು ಆಪಾದಿಸಿ ಪಾಕಿಸ್ತಾನವು ವಿಶ್ವಸಂಸ್ಥೆ ಭದ್ರತಾ ಮಂಡಳಿಗೆ ಪತ್ರ ಬರೆದಿತ್ತು.
ಮುಚ್ಚಿದ ಬಾಗಿಲುಗಳ ಹಿಂದೆ  ನಡೆದ ರಹಸ್ಯ ಸಭೆಯಲ್ಲಿ ಕೇವಲ ಐದು ಖಾಯಂ ಸದಸ್ಯರು ಮತ್ತು ೧೦ ಖಾಯಮೇತರ ಸದಸ್ಯರು ಮಾತ್ರ ಹಾಜರಿದ್ದರು.

ಜಮ್ಮು ಮತ್ತು ಕಾಶ್ಮೀರಕ್ಕೆ  ವಿಶೇಷ ಸ್ಥಾನಮಾನವನ್ನು  ನೀಡಿದ್ದ ಭಾರತೀಯ  ಸಂವಿಧಾನದ ೩೭೦ ನೇ ವಿಧಿಯನ್ನು ರದ್ದುಪಡಿಸುವ  ಕ್ರಮವು ಆಂತರಿಕ ವಿಷಯವಾಗಿದೆ  ಎಂದು ಅಂತಾರಾಷ್ಟ್ರೀಯ ಸಮುದಾಯಕ್ಕೆ  ಖಡಾಖಂಡಿತವಾಗಿ  ಹೇಳಿದ್ದ ಭಾರತ  ವಾಸ್ತವವನ್ನು ಒಪ್ಪಿಕೊಳ್ಳುವಂತೆ ಪಾಕಿಸ್ತಾನಕ್ಕೆ ಸಲಹೆ ನೀಡಿತ್ತು.
ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಹಿಂತೆಗೆದುಕೊಳ್ಳುವ ಭಾರತದ ನಿರ್ಧಾರವು ದಕ್ಷಿಣ ಏಷ್ಯಾದ ಶಾಂತಿ ಮತ್ತು ಸ್ಥಿರತೆಗೆ ಹೇಗೆ ಧಕ್ಕೆ ತರುತ್ತದೆ ಎಂಬುದಾಗಿ ವಿಶ್ವಸಂಸ್ಥೆ ಭದ್ರತಾ ಮಂಡಳಿ ಸದಸ್ಯರಿಗೆ ನಾಟುವಂತೆ ತಿಳಿಹೇಳಲು ಪಾಕಿಸ್ತಾನದ  ವಿಶ್ವಸಂಸ್ಥೆಯಲ್ಲಿನ ರಾಯಭಾರಿ ಮಲೀಹಾ ಲೋಧಿ ಮತ್ತು ಅವರ ತಂಡವು ತಿಂಗಳ ಆರಂಭದಿಂದಲೂ  ದಣಿವರಿವು ಇಲ್ಲದೆ  ಕೆಲಸ ಮಾಡಿತ್ತು ಎಂದು ವಿಶ್ವಸಂಸ್ಥೆ ಕೇಂದ್ರ  ಕಚೇರಿಯಿಂದ  ಮಾಡಲಾದ ಡಾನ್’ ವರದಿ ತಿಳಿಸಿದೆ.
"ಆದರೆ ಮಂಡಳಿಯ ಪ್ರಸ್ತುತ ಸಂಯೋಜನೆಯು ಪಾಕಿಸ್ತಾನಕ್ಕೆ ಒಲವು ತೋರುತ್ತಿಲ್ಲ" ಎಂದು ಪತ್ರಿಕೆ ಬರೆದಿದೆ.
ಜಮ್ಮು ಮತ್ತು ಕಾಶ್ಮೀರದ ಹಾಲಿ  ಪರಿಸ್ಥಿತಿಯ ಬಗ್ಗೆ ಚರ್ಚಿಸಲು ಇಸ್ಲಾಮಾಬಾದ್  ಮಾಡಿದ ಮನವಿಯ ಮೇರೆಗೆ ಪಾಕಿಸ್ತಾನದ  ಸಾರ್ವಕಾಲಿಕ  ಮಿತ್ರ ಚೀನಾ  ಮಂಡಳಿಯು ರಹಸ್ಯ ಸಭೆಗೆ ಆಗ್ರಹಿಸಿತ್ತು.
"ಐವರು ಖಾಯಂ ಸದಸ್ಯರಲ್ಲಿ ಒಬ್ಬರಾದ  ಚೀನಾ ಚೀನಾ  ಬಹಿರಂಗವಾಗಿ ಪಾಕಿಸ್ತಾನವನ್ನು ಬೆಂಬಲಿಸಿತು’  ಎಂದು ಡಾನ್ ವರದಿ  ಹೇಳಿತು.

ಉಳಿದ ನಾಲ್ಕು ಖಾಯಂ ಸದಸ್ಯರಾದ ಬ್ರಿಟನ್, ಫ್ರಾನ್ಸ್, ರಶ್ಯಾ ಮತ್ತು  ಅಮೆರಿಕ ಕಾಶ್ಮೀರ ವಿವಾದವನ್ನು  ಭಾರತ ಮತ್ತು ಪಾಕಿಸ್ತಾನ ದ್ವಿಪಕ್ಷೀಯ ಮಾತುಕತೆ ಮೂಲಕ  ಪರಿಹರಿಸಬೇಕೆಂದು ಬಯಸಿದವು  ಎಂದು ‘ಡಾನ್’ ಹೇಳಿತು.
ಭಾರತವೂ  ಇದೇ  ತಾಳಿದ್ದರೂ, ಕಾಶ್ಮೀರದ ಬಗ್ಗೆ ಯಾವುದೇ ಮಾತುಕತೆ ನಡೆಸಲು ನಿರಾಕರಿಸುತ್ತಿದೆ. ಕಾಶ್ಮೀರ ಸಮಸ್ಯೆಯನ್ನು ಆಂತರಿಕ ವಿಷಯವೆಂದು ಅದು ಹೇಳುತ್ತಿದೆ  ಎಂದು ವರದಿ ತಿಳಿಸಿದೆ.

ಬೆಲ್ಜಿಯಂ, ಕೋಟ್ ಡಿ ಐವೊಯಿರ್, ಡೊಮಿನಿಕನ್ ರಿಪಬ್ಲಿಕ್, ಈಕ್ವಟೋರಿಯಲ್ ಗಿನಿಯಾ, ಜರ್ಮನಿ, ಇಂಡೋನೇಷ್ಯಾ, ಕುವೈತ್, ಪೆರು, ಪೋಲೆಂಡ್ ಮತ್ತು ದಕ್ಷಿಣ ಆಫ್ರಿಕಾಇವು ವಿಶ್ವಸಂಸ್ಥೆ ಸಾಮಾನ್ಯ ಸಭೆಯಿಂದ  ಎರಡು ವರ್ಷಗಳ ಅವಧಿಗೆ ಆಯ್ಕೆಯಾಗಿರುವ ಭದ್ರತಾ ಮಂಡಳಿಯ  ೧೦ ಖಾಯಮೇತರ ಸದಸ್ಯರು

ಇವರ ಪೈಕಿ  ಇಂಡೋನೇಷ್ಯಾ ಮತ್ತು ಕುವೈತ್  ಇವರಿಬ್ಬರು ಈ ಹಿಂದೆ ಪಾಕಿಸ್ತಾನದ ಬಗ್ಗೆ ಸಹಾನುಭೂತಿ  ಹೊಂದಿದ್ದರೂ,  ಚೀನಾದ ಕೋರಿಕೆಯನ್ನು ಬೆಂಬಲಿಸುವ ನಿಟ್ಟಿನಲ್ಲಿ ಇತರರನ್ನು ಮನವೊಲಿಸುವುದು ಕಷ್ಟಕರ ಎಂದು ಡಾನ್ ವರದಿ ತಿಳಿಸಿದೆ.

ಈಮಧ್ಯೆ, ಪಾಕಿಸ್ತಾನ ಸರ್ಕಾರವು ಜಾಗತಿಕ ಬೆಂಬಲವನ್ನು ಕ್ರೋಡೀಕರಿಸಲು  ಹೊರಟಿದ್ದರೂ, ಆರ್ಗನೈಸೇಶನ್ ಆಫ್ ಇಸ್ಲಾಮಿಕ್ ಕೋಆಪರೇಷನ್ (ಒಐಸಿ) ಮತ್ತು ಮುಸ್ಲಿಮ್  ರಾಷ್ಟ್ರಗಳಿಂದ ಪ್ರತ್ಯೇಕವಾಗಿ  ಲಭ್ಯವಾದ  ಪ್ರತಿಕ್ರಿಯೆಗಳು ಮತ್ತು ಬೆಂಬಲ ದುರ್ಬಲವಾಗಿವೆ ಎಂದು ‘ ದಿ ನ್ಯೂಸ್ ಇಂಟರ್ನ್ಯಾಷನಲ್’  ಪತ್ರಿಕೆ ತಿಳಿಸಿದೆ.
ಸುಮಾರು ೫೦ ವರ್ಷದ ಒಐಸಿಯು ಬಿಡುಗಡೆ ಮಾಡಿರುವ  ರಾಜತಾಂತ್ರಿಕ ಪರಿಭಾಷೆಯ ಕೆಲವು ಹೇಳಿಕೆಗಳು ಯಾವುದೇ ಬದ್ಧತೆಯನ್ನೂ ವ್ಯಕ್ತ ಪಡಿಸಿಲ್ಲ ಎಂದು  ಪತ್ರಿಕೆಯಲ್ಲಿನ ಲೇಖನವೊಂದು ತಿಳಿಸಿದೆ.

ಒಐಸಿ ಸದಸ್ಯ ರಾಷ್ಟ್ರಗಳ ಜೊತೆಗಿನ  ಭಾರತೀಯ ವ್ಯಾಪಾರ ಮತ್ತು ವ್ಯವಹಾರದ ಶಕ್ತಿಯು, ಅದರ ವ್ಯಾಪಾರ ಪಾಲುದಾರರು ನಿರ್ಲಕ್ಷಿಸಲಾಗದಷ್ಟು ಪ್ರಬಲವಾಗಿದೆ, ಅವರಲ್ಲಿ ಯಾರೂ ಪಾಕಿಸ್ತಾನದ  ಪ್ರಸ್ತುತ ಮನವಿಯತ್ತ ಯಾವುದೇ ಗಮನವನ್ನೂ ಹರಿಸುತ್ತಿಲ್ಲ ಎಂದು ಪತ್ರಿಕೆ ಹೇಳಿದೆ.

Saturday, October 13, 2018

ವಿಶ್ವಸಂಸ್ಥೆ ಮಾನವ ಹಕ್ಕುಗಳ ಮಂಡಳಿಗೆ ಭಾರತ ಆಯ್ಕೆ


ವಿಶ್ವಸಂಸ್ಥೆ ಮಾನವ ಹಕ್ಕುಗಳ ಮಂಡಳಿಗೆ ಭಾರತ ಆಯ್ಕೆ

ವಿಶ್ವಸಂಸ್ಥೆ: ಭಾರತವು ವಿಶ್ವಸಂಸ್ಥೆಯ ಉನ್ನತ ಮಾನವ ಹಕ್ಕುಗಳ ಮಂಡಳಿಗೆ ಜನವರಿ , ೨೦೧೯ ರಿಂದ ಮೂರು ವರ್ಷಗಳ ಅವಧಿಗೆ 12 ಅಕ್ಟೋಬರ್ 2018ರ ಶುಕ್ರವಾರ ಆಯ್ಕೆಯಾಯಿತು. ಏಷ್ಯ--ಪೆಸಿಫಿಕ್ ವಿಭಾಗದಲ್ಲಿ 188 ಮತಗಳೊಂದಿಗೆ, ಅಭ್ಯರ್ಥಿಗಳ ಪೈಕಿ ಭಾರತವೇ ಅತ್ಯಧಿಕ ಮತಗಳನ್ನು ಪಡೆಯಿತು.

ವಿಶ್ವಸಂಸ್ಥೆಯ 193 ಸದಸ್ಯ ಬಲದ ಮಾನವ ಹಕ್ಕುಗಳ ಮಂಡಳಿಗೆ ಹೊಸ ಸದಸ್ಯರ  ಆಯ್ಕೆಗಾಗಿ ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ಚುನಾವಣೆ ನಡೆಯಿತು. ರಹಸ್ಯ ಮತದಾನದ ಮೂಲಕ ೧೮ ಹೊಸ ಸದಸ್ಯರನ್ನು ಸಂಪೂರ್ಣ ಬಹುಮತದೊಂದಿಗೆ ಚುನಾಯಿಸಲಾಯಿತು. ಮಂಡಳಿಗೆ ಚುನಾಯಿತರಾಗುವ ರಾಷ್ಟ್ರಗಳು ಕನಿಷ್ಟ 97 ಮತಗಳನ್ನು ಪಡೆಯಬೇಕಾಗಿತ್ತು.

ಏಷ್ಯಾ ಪೆಸಿಫಿಕ್ ವಿಭಾಗದಲ್ಲಿ ಭಾರತವು ಸ್ಥಾನಕ್ಕೆ ಸ್ಪರ್ಧಿಸಿತ್ತು. ಭಾರತ ಜೊತೆಗೆ, ಬಹ್ರೇನ್, ಬಾಂಗ್ಲಾದೇಶ, ಫಿಜಿ ಮತ್ತು ಫಿಲಿಪೈನ್ಸ್ ದೇಶಗಳು ಅದೇ ಪ್ರಾದೇಶಿಕ ಗುಂಪಿನಲ್ಲಿ ಸ್ಪರ್ಧಿಸಿದ್ದವು.  ಏಷ್ಯಾ ಪೆಸಿಫಿಕ್ ವಿಭಾಗದಲ್ಲಿ ಐದು ಸ್ಥಾನಗಳಿಗೆ ಆಯ್ಕೆಯಾಗಬೇಕಾಗಿದ್ದು, ಭಾರತದ ಆಯ್ಕೆ ಖಚಿತವಾಗಿತ್ತು.

ವಿಶ್ವಸಂಸ್ಥೆಯಲ್ಲಿ ಭಾರತದ  ಕಾಯಂ ರಾಯಭಾರಿಯಾಗಿರುವ  ಸೈಯದ್ ಅಕ್ಬರುದ್ದೀನ್  ಅವರು, ‘ಭಾರತದ ವಿಜಯವು ಅಂತಾರಾಷ್ಟ್ರೀಯ ಸಮುದಾಯದಲ್ಲಿ ದೇಶದ ನಿಲುವನ್ನು ಪ್ರತಿಫಲಿಸಿದೆ’ ಎಂದು ಹೇಳಿದರು.

ಚುನಾವಣೆಯ ಬಳಿಕ ಅಕ್ಬರುದ್ದೀನ್  ಅವರು "ಸಂತಸದ ಫಲಿತಾಂಶಕ್ಕಾಗಿ ಮತದಾನ. ವಿಶ್ವಸಂಸ್ಥೆಯಲ್ಲಿ ನಮ್ಮ ಎಲ್ಲ ಸ್ನೇಹಿತರ ಬೆಂಬಲದೊಂದಿಗೆ ಭಾರತವು ಎಲ್ಲ ಅಭ್ಯರ್ಥಿಗಳ ಪೈಕಿ ಅತ್ಯಧಿಕ ಮತಗಳೊಂದಿಗೆ ಮಾನವ ಹಕ್ಕುಗಳ ಮಂಡಳಿಗೆ ಆಯ್ಕೆಯಾಗಿದೆ’ ಎಂದು ಟ್ವೀಟ್ ಮಾಡಿದರು.

ಹೊಸ ಸದಸ್ಯರು ಮುಂದಿನ ವರ್ಷ ಜನವರಿ ರಿಂದ ಮೂರು ವರ್ಷಗಳ ಅವಧಿಗೆ ಸೇವೆ ಸಲ್ಲಿಸುವರು. ಭಾರತವು ಹಿಂದೆ ಜಿನಿವಾ ಮೂಲದ ಮಾನವ ಹಕ್ಕುಗಳ ಮಂಡಳಿಗೆ ೨೦೧೧-೨೦೧೪ ಮತ್ತು ೨೦೧೪-೨೦೧೭ ಅವಧಿಗೆ ಆಯ್ಕೆಯಾಗಿತ್ತು. ಅದರ ಕೊನೆಯ ಅಧಿಕಾರಾವಧಿಯು ಡಿಸೆಂಬರ್ ೩೧, ೨೦೧೭ ರಂದು ಅಂತ್ಯಗೊಂಡಿತ್ತು. ನಿಯಮಗಳ ಅನುಸಾರ, ಎರಡು ಬಾರಿ ಸತತ ಅವಧಿಗೆ ಸೇವೆ ಸಲ್ಲಿಸಿದ್ದರಿಂದ ತಕ್ಷಣವೇ ಮರು-ಚುನಾವಣೆಗೆ ಭಾರತಕ್ಕೆ ಅರ್ಹತೆ ಇರಲಿಲ್ಲ.

ಮಾನವ ಹಕ್ಕುಗಳೊಂದಿಗೆ ವ್ಯವಹರಿಸುವ ವಿಶ್ವಸಂಸ್ಥೆ ಮಾನವ ಹಕ್ಕುಗಳ ಮಂಡಳಿಯು 2006ರ ಮಾರ್ಚ್ ತಿಂಗಳಲ್ಲಿ ಸ್ಥಾಪನೆಗೊಂಡಿದ್ದು, 47 ಚುನಾಯಿತ ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿದೆ. ಸಮಾನ ಭೌಗೋಳಿಕ ವಿತರಣೆಯ ಆಧಾರದ ಮೇಲೆ ಮಂಡಳಿಯ ಸ್ಥಾನಗಳನ್ನು ಐದು ಪ್ರಾದೇಶಿಕ ಗುಂಪುಗಳಿಗೆ ಹಂಚಲಾಗುತ್ತದೆ: ಆಫ್ರಿಕನ್ ರಾಜ್ಯಗಳು 13 ಸ್ಥಾನಗಳು; ಏಷ್ಯ-ಪೆಸಿಫಿಕ್ ರಾಜ್ಯಗಳು 13 ಸ್ಥಾನಗಳು; ಪೂರ್ವ ಯುರೋಪಿಯನ್ ರಾಜ್ಯಗಳು 6 ಸ್ಥಾನಗಳು; ಲ್ಯಾಟಿನ್ ಅಮೆರಿಕ ಮತ್ತು ಕೆರಿಬಿಯನ್ ರಾಜ್ಯಗಳು 8 ಸ್ಥಾನಗಳು; ಮತ್ತು ಪಶ್ಚಿಮ ಯುರೋಪಿಯನ್ ಮತ್ತು ಇತರ ರಾಜ್ಯಗಳು, 7 ಸ್ಥಾನಗಳನ್ನು ಪಡೆದಿವೆ.

ಜನರಲ್ ಅಸೆಂಬ್ಲಿಯ ಎಲ್ಲಾ ಐದು ಪ್ರಾದೇಶಿಕ ಗುಂಪುಗಳು ಪೈಪೋಟಿ-ಮುಕ್ತ ಸ್ಲಾಟ್ಗಳನ್ನು  ಸಲ್ಲಿಸಿದ್ದವು. ಅಂದರೆ ಎಲ್ಲಾ ಅಭ್ಯರ್ಥಿಗಳೂ ತಮ್ಮ ಹಕ್ಕುಗಳ ದಾಖಲೆಗಳನ್ನು ಲೆಕ್ಕಿಸದೆ, ಮಂಡಳಿ ಸದಸ್ಯತ್ವ ಪಡೆಯುವುದು ಖಚಿತವಿತ್ತು.
.
ಮಾನವ ಹಕ್ಕುಗಳ ಮಂಡಳಿಗಾಗಿ ನಡೆಯುವ ಚುನಾವಣೆಯಲ್ಲಿ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳು ಫಿಲಿಪೈನ್ಸ್ ಮತ್ತು ಎರಿಟ್ರಿಯಾದ ಅಭ್ಯರ್ಥಿಗಳನ್ನು ವಿರೋಧಿಸಬೇಕು ಎಂದು ಮಾನವ ಹಕ್ಕುಗಳ ಕಣ್ಗಾವಲು ಸಮೂಹವು ಸೂಚಿಸಿತ್ತು. ಬಹ್ರೇನ್ ಮತ್ತು ಕ್ಯಾಮರೂನಿನಲ್ಲಿ ಮಾನವ ಹಕ್ಕುಗಳ ತೀವ್ರ ಉಲ್ಲಂಘನೆ ಹಿನ್ನೆಲೆಯಲ್ಲಿ ಈ ಕರೆ ನೀಡಲಾಗಿತ್ತು.

ಚಿಲಿಯ ಮಾಜಿ ಅಧ್ಯಕ್ಷ ಮಿಚೆಲ್ ಬ್ಯಾಚೆಲೆಟ್ ಅವರು ವರ್ಷದ ಸೆಪ್ಟಂಬರಿನಲ್ಲಿ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯುಕ್ತರ ಹುದ್ದೆಯನ್ನು ನಿರ್ವಹಿಸಿದ್ದರು. ಅವರ  ಪೂರ್ವಾಧಿಕಾರಿಯಾದ   ಜೋರ್ಡಾನ್ ರಾಯಭಾರಿ ಝೀದ್ ರಾದ್ ಅಲ್-ಹುಸೇನ್ ಅವರು ವರ್ಷದ ಜೂನ್ ತಿಂಗಳಲ್ಲಿ ಕಾಶ್ಮೀರ ಕುರಿತು ಚೊಚ್ಚಲ ವರದಿಯನ್ನು ಬಿಡುಗಡೆ ಮಾಡಿದ್ದರು. ಭಾರತ ಅದನ್ನು ತಿರಸ್ಕರಿಸಿತ್ತು.