Showing posts with label demonitisation. Show all posts
Showing posts with label demonitisation. Show all posts

Thursday, January 3, 2019

ರೂ ೨,೦೦೦ ನೋಟು ಮುದ್ರಣ ಸ್ಥಗಿತ, ಕರೆನ್ಸಿ ಮಾನ್ಯತೆ ಮುಂದುವರಿಕೆ


ರೂ ,೦೦೦ ನೋಟು ಮುದ್ರಣ ಸ್ಥಗಿತ, ಕರೆನ್ಸಿ ಮಾನ್ಯತೆ ಮುಂದುವರಿಕೆ

ನವದೆಹಲಿ: ಭಾರತವು 2016ರಲ್ಲಿ ನೋಟು ಅಮಾನ್ಯೀಕರಣ ಕಾಲದಲ್ಲಿ ಚಾಲ್ತಿಗೆ ತಂದ 2000 ರೂಪಾಯಿಗಳ ನೋಟಿನ ಮುದ್ರಣವನ್ನು ಸ್ಥಗಿತಗೊಳಿಸಿದೆ ಎಂದು ಉನ್ನತ ಸರ್ಕಾರಿ ಮೂಲಗಳು ತನಗೆ ತಿಳಿಸಿರುವುದಾಗಿದಿ ಪ್ರಿಂಟ್ವರದಿ ಮಾಡಿದೆ.

2000
ರೂಪಾಯಿ ಕರೆನ್ಸಿಯ ಪ್ರಸಾರವನ್ನು ಕ್ರಮೇಣ ತಗ್ಗಿಸುವ ಸಲುವಾಗಿ ಸರ್ಕಾರ ಕ್ರಮ ಕೈಗೊಂಡಿದೆ.

2000 ರೂಪಾಯಿ ನೋಟುಗಳ ಮುದ್ರಣ ಸ್ಥಗಿತದಿಂದ ಚಾಲ್ತಿಯಲ್ಲಿರುವ ನೋಟುಗಳು ಅಮಾನ್ಯವಾಗಿವೆ ಎಂದು ಅರ್ಥವಲ್ಲ. ಅವುಗಳ ಮಾನ್ಯತೆ ಮುಂದುವರೆದಿದೆ. ಆದರೆ ಕ್ರಮೇಣವಾಗಿ ನೋಟುಗಳು ಮಾರುಕಟ್ಟೆಯಿಂದ ಕಣ್ಮರೆಯಾಗುವ ಸಾಧ್ಯತೆ ಇದೆ.

ಕಾಳಧನ ಸಂಗ್ರಹ, ಹಣ ವರ್ಗಾವಣೆಗಳಿಗೆ ದೊಡ್ಡ ಪ್ರಮಾಣದಲ್ಲಿ ಉನ್ನತ ಮೌಲ್ಯದ ನೋಟುಗಳನ್ನು ಬಳಸಲಾಗುತ್ತಿದೆ ಎಂಬ ಹಿನ್ನೆಲೆಯಲ್ಲಿ ಸರ್ಕಾರ ನಿರ್ಧಾರಕ್ಕೆ ಬಂದಿದೆ ಎಂದು ಮೂಲಗಳು ಹೇಳಿವೆ.

ನೋಟು ಮುದ್ರಣ ಸ್ಥಗಿತ ಬಗ್ಗೆ ಮಿಂಚಂಚೆ ಮೂಲಕ ಕೇಳಲಾದ ಸ್ಪಷ್ಟನೆಗೆ ಭಾರತದ ಕೇಂದ್ರೀಯ ಬ್ಯಾಂಕ್ ಹಾಗೂ ಕರೆನ್ಸಿ ವಿತರಣಾ ಸಂಸ್ಥೆಯಾಗಿರುವ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಉತ್ತರ ನೀಡಿಲ್ಲ. ಅದು ಸ್ಪಂದಿಸಿದಾಗ ವರದಿಯನ್ನು ಪರಿಷ್ಕರಿಸಲಾಗುವುದು ಎಂದುದಿ ಪ್ರಿಂಟ್ವರದಿ ತಿಳಿಸಿದೆ.

ಕಾಳಸಂತೆ, ಕಪ್ಪು ಹಣ ನಿಗ್ರಹಕ್ಕಾಗಿ ಸರ್ಕಾರವು 2016ರಲ್ಲಿ 1000 ರೂಪಾಯಿ ಮತ್ತು 500 ರೂಪಾಯಿಗಳ ನೋಟುಗಳನ್ನು ಅಮಾನ್ಯೀಕರಣಗೊಳಿಸಿತ್ತು. ಬಳಿಕ ನವೆಂಬರ್ ತಿಂಗಳಲ್ಲಿ 2000 ರೂಪಾಯಿಗಳ ಹೊಸ ನೋಟನ್ನು ಬಿಡುಗಡೆ ಮಾಡಲಾಗಿತ್ತು.

ವಿವರಗಳಿಗೆ ಕೆಳಗಿನ ಚಿತ್ರ ಕ್ಲಿಕ್ ಮಾಡಿರಿ:


Monday, April 3, 2017

ಬ್ಯಾಂಕುಗಳ ಯದ್ವಾತದ್ವ ಶುಲ್ಕ ವಿರುದ್ಧ ಜನಾಂದೋಲನ No Bank transaction day on 6th April 2017

ಬ್ಯಾಂಕುಗಳ ಯದ್ವಾತದ್ವ ಶುಲ್ಕ
ವಿರುದ್ಧ ಜನಾಂದೋಲನ
ಏಪ್ರಿಲ್‌ 6 ನೋ ಟ್ರಾನ್ಸಾಕ್ಷನ್ಡೇ
ಬೆಂಗಳೂರು:  ಬ್ಯಾಂಕುಗಳ ಯದ್ವಾತದ್ವ  ಶುಲ್ಕ ಏರಿಕೆಯನ್ನು ವಿರೋಧಿಸಿ ಏಪ್ರಿಲ್‌ 6ರಂದು ಬ್ಯಾಂಕ್ವಹಿವಾಟು ಬಹಿಷ್ಕರಿಸಲು  (ನೋ ಟ್ರಾನ್ಸಾಕ್ಷನ್ಡೇ) ಆನ್ಲೈನ್ಅಭಿಯಾನ ಆರಂಭವಾಗಿದೆ.

ಬ್ಯಾಂಕಿನ ಎಟಿಎಂನಲ್ಲಿ ಹಣವಿಲ್ಲದೇ ಗ್ರಾಹಕರ ಮೇಲೆ 23 ರೂ. ಶುಲ್ಕ ವಿಧಿಸಿದ ಅನುಭವ ಈಗಾಗಲೇ ಹಲವರಿಗೆ ಆಗಿರಬಹುದು. ಎಸ್ಬಿಐ ಈಗಾಗಲೆ ತನ್ನ ಪರಿಷ್ಕೃತ ಶುಲ್ಕವನ್ನು ಜಾರಿಗೆ ತಂದಿದೆ. ಇದನ್ನು ವಿರೋಧಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಶುರುವಾಗಿದೆ.

 ‘ಏಪ್ರಿಲ್‌ 6ರಂದು ಬ್ಯಾಂಕ್ವಹಿವಾಟು ಬಹಿಷ್ಕರಿಸಿ ಬ್ಯಾಂಕ್ಗಳಿಗೆ ತಮ್ಮ ತಪ್ಪಿನ ಅರಿವಾಗುವಂತೆ ಮಾಡೋಣಎಂಬ ಸಂದೇಶಗಳು ವಾಟ್ಸ್ಆ್ಯಪ್ನಲ್ಲಿ ಹರಿದಾಡುತ್ತಿವೆ.
ಬ್ಯಾಂಕ್ಗಳ ಹೆಚ್ಚುವರಿ ಶುಲ್ಕಗಳ ವಿರುದ್ಧ ಹಾಗೂ ಸದ್ಯದ ಬ್ಯಾಂಕಿಂಗ್ನೀತಿಯ ವಿರುದ್ಧ ಈ ಜನಾಂದೋಲನ  ಎಂದು ವಾಟ್ಸ್ ಆ್ಯಪ್ ಸಂದೇಶಗಳು ಹೇಳುತ್ತಿವೆ.
ಸಾಮಾಜಿಕ ಜಾಲತಾಣ ಹಾಗೂ ಚೇಂಚ್ಡಾಟ್ಒಆರ್ಜಿ ತಾಣದಲ್ಲಿ (www.change.org) ಅಭಿಯಾನ ಆರಂಭವಾಗಿದೆ. change.org ತಾಣದಲ್ಲಿ 56 ಸಾವಿರಕ್ಕೂ ಹೆಚ್ಚು ಮಂದಿ ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದಾರೆ.
ಬ್ಯಾಂಕ್ಗಳು ವರ್ಷದಿಂದ ವರ್ಷಕ್ಕೆ ತಮಗೆ ಇಷ್ಟ ಬಂದಂತೆ ಶುಲ್ಕಗಳನ್ನು ಏರಿಸುತ್ತಿವೆ. ಬ್ಯಾಂಕ್ಗಳು ಗ್ರಾಹಕ ವಿರೋಧಿ ನೀತಿಯನ್ನು ಅಳವಡಿಸಿಕೊಂಡಿವೆ. ಬ್ಯಾಂಕ್ಗಳು ಲಾಭಗಳಿಕೆಯಷ್ಟೇ ಉದ್ದೇಶವಾಗಿಸಿಕೊಂಡಂತೆ ಬ್ಯಾಂಕಿಂಗ್ನಡೆಸುತ್ತಿವೆ. ಇದರಿಂದ ತೆರಿಗೆದಾರರು, ಮಧ್ಯಮ ವರ್ಗದ ಗ್ರಾಹಕರು ಸಂಕಷ್ಟ ಅನುಭವಿಸುವಂತಾಗಿದೆಎಂದು ಅಭಿಯಾನ ಆಯೋಜಿಸಿರುವ ಸಂಘಟಕರು ಆಪಾದಿಸಿದ್ದಾರೆ.
ಬ್ಯಾಂಕುಗಳ ಗ್ರಾಹಕ ವಿರೋಧಿ ನೀತಿಯ ವಿಚಾರದಲ್ಲಿ ಭಾರತೀಯ ರಿಸರ್ವ್ಬ್ಯಾಂಕ್ಜಾಣ ಮೌನ ವಹಿಸಿದೆ. ಬ್ಯಾಂಕ್ಗಳ ವರ್ತನೆಯ ವಿರುದ್ಧ ದೂರುಗಳು ಬಂದರೂ ಸಹ ಆರ್ಬಿಐನ ಒಂಬಡ್ಸ್ಮನ್ಗಳು ಬ್ಯಾಂಕ್ಗಳ ಪರವಾಗಿದ್ದು ಬ್ಯಾಂಕ್ಗಳನ್ನು ರಕ್ಷಿಸುತ್ತಿದ್ದಾರೆಎಂದು ಸಂಘಟಕರು ದೂರಿದ್ದಾರೆ.
ಬ್ಯಾಂಕ್ಗಳು ಡಿಜಿಟಲ್ ಬ್ಯಾಂಕಿಂಗ್ಗೆ ಉತ್ತೇಜನ ನೀಡುವಂತೆ ಅದರ ಸುರಕ್ಷತೆಗೂ ಗಮನ ಹರಿಸಬೇಕು. ಬ್ಯಾಂಕ್ಅಕೌಂಟ್ಅನ್ನು ಬೇರೊಂದು ಬ್ಯಾಂಕ್ಗೆ ಬದಲಿಸಿಕೊಳ್ಳುವ (ಪೋರ್ಟ್‌) ವ್ಯವಸ್ಥೆ ಜಾರಿಗೆ ಬರಬೇಕು. ಬ್ಯಾಂಕ್ಗಳು ತಮಗೆ ಅನುಕೂಲವಾಗುವಂತೆ ಒಪ್ಪಂದ ಪತ್ರ ರೂಪಿಸುವುದನ್ನು ನಿಲ್ಲಿಸಬೇಕು. ಮನಸೋಇಚ್ಛೆ ಶುಲ್ಕಗಳನ್ನು ಏರಿಸುವುದನ್ನು ನಿಯಂತ್ರಿಸುವ ವ್ಯವಸ್ಥೆ ಜಾರಿಯಾಗಬೇಕುಎಂದು ಸಂಘಟಕರು ಒತ್ತಾಯಿಸಿದ್ದಾರೆ.
ಬಗ್ಗೆ ಸಂಘಟಕರು ರಿಸರ್ವ್ ಬ್ಯಾಂಕ್ ಗವರ್ನರ್ಉರ್ಜಿತ್ಪಟೇಲ್ಹಾಗೂ ಕೇಂದ್ರ ಹಣಕಾಸು ಸಚಿವ ಅರುಣ್ಜೇಟ್ಲಿ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ.
ಇದು ವಾಟ್ಸ್ ಆ್ಯಪ್ ಮನವಿ
ಒಂದು ಸೇವೆಗೆ ಪ್ರತಿಯಾಗಿ ಹಣ ಪಾವತಿ ಮಾಡಬೇಕು ಅಂತ ಹೇಳಿದರೆ ಒಪ್ಪಿಕೊಳ್ಳಬಹುದು. ಆದರೇ ಏನು ಮಾಡದೇನೆ ತೆರಿಗೆ ಹಾಕುವುದನ್ನು  ಹಣ ವಸೂಲಿ ದಂದೆ ಅನ್ನದೇ ಮತ್ತೇನು ಹೇಳಲು ಸಾಧ್ಯ..!!
"ಹಣ ಇಲ್ಲ" ಎಂದು ಬ್ಯಾಂಕಿನ . ಟಿ.ಎಂ ನಲ್ಲಿ ಬರೆದು ತೋರಿಸುವುದಕ್ಕೆ ನಾವು 23 ರೂಪಾಯಿ ಹಣ ಕೊಡಬೇಕು ಅಂತ ಹೇಳಿದರೆ ಇದೆಲ್ಲಿಯ ನ್ಯಾಯ...?

ನಮ್ಮ ಹಣ ಬ್ಯಾಂಕಿನಲ್ಲಿದೆ ಆದರೆ . ಟಿ .ಎಂ ನಲ್ಲಿ ಇಲ್ಲ ಅಂದ್ರೆ ಅದಕ್ಕೆ ನಾವು ಜವಾಬ್ದಾರರೇ..?
ಅದಕ್ಕೆ ನಾವ್ಯಾಕೆ ನಷ್ಟ ಅನುಭವಿಸಬೇಕು?

ನೂರು ಜನ .ಟಿ.ಎಂ  ಉಪಯೋಗ ಮಾಡಿದರೇ ಬ್ಯಾಂಕಿಗೆ ಲಾಭ 2300/-ರೂಪಾಯಿ. ರೀತಿಯ ಕೊಳ್ಳೆ ಹೊಡೆಯುವುದಕ್ಕಿಂತ ಒಬ್ಬ ಗೂಂಡಾ ದಂದೆಯನ್ನು ಸಹಿಸುವುದು ಲೇಸು ಎಂದು ಕೆಲವರ ಚಿಂತನೆ.

2000/- ರೂಪಾಯಿ ಮಾತ್ರವೇ .ಟಿ.ಎಂ ನಲ್ಲಿ ಇದೆ. 1000/-ರೂಪಾಯಿಗೆ ಹೋದರೇ ' ಸಾವಿರ ರೂಪಾಯಿ ಇಲ್ಲಾ ' ಅನ್ನುವುದಕ್ಕೆ ನಾನು 23 ರೂಪಾಯಿ ಬ್ಯಾಂಕಿಗೆ ಪಾವತಿ ಮಾಡಬೇಕು.
ಯಾವಾಗಲೂ 500 ರೂಪಾಯಿ ಇರುವುದೇ ಇಲ್ಲಾ, 4500 ಅದುಮಿದರೆ ಸಿಗಲ್ಲ, ಅವಾಗ 4000 ಕ್ಕೆ ಒತ್ತಿದರೆ 2000 ರದ ನೋಟ್ ಗಳು ಬರುತ್ತವೆ. ಅದಕ್ಕೆ ಖರ್ಚಾಗುವ ಹಣ 46 ರೂಪಾಯಿ.
3 ಬಾರಿ ಗಿಂತ ಅಧಿಕವಾಗಿ ಹಣ ಪಡೆದರೆ ಅದ್ಕಕ್ಕೂ ದಂಡ..... ಇಟ್ಟರೂ ದಂಡ....
ಮಿನಿಮಮ್ ಹಣ ಇಲ್ಲದಿದ್ದರೆ ಅದಕ್ಕೂ ದಂಡ....!

ಹೋಗಲಿ ಬಿಡಿ ಹಣ ತೆಗೆಯದೇ ಬ್ಯಾಂಕ್ ನಲ್ಲೇ ಇರಲಿ ಅಂತ ಇಟ್ಟು  ಬ್ಯಾಂಕ್ ವಹಿವಾಟು ನಡೆಸದೇ ಇದ್ದರೇ ಅದಕ್ಕೂ ದಂಡ ಕಟ್ಟ ಬೇಕು.. ಬ್ಯಾಂಕ್  ವಹಿವಾಟು ಬೇಡವೇ ಬೇಡ ಅಂತ ಇದ್ದುಬಿಟ್ಟರೆ ಬಿಸಿನೆಸ್  ವಹಿವಾಟು ಎಲ್ಲವೂ ಬ್ಯಾಂಕ್ ಮುಖಾಂತರವೇ ನಡೆಸಬೇಕೆಂಬ ಸುಗ್ರೀವಾಜ್ಞೆ ಬೇರೆ..!
ನಮ್ಮ ಸಂಪಾದನೆಯ  ಮೌಲ್ಯ ತೆಗೆದು ಉಪಯೋ ಗಿಸಲು ನಾವು ಮತ್ತೊಬ್ಬ ಏಜೆನ್ಸಿ ಗೆ ಕಮಿಷನ್ ರೂಪದಲ್ಲಿ ಕೊಡಬೇಕಾಗುತ್ತದೆಅದು ಆಗಿದೆ ಬಿಸಿನೆಸ್..??
ಎಂದಾದರೇ  ಬ್ಯಾಂಕ್ ಎಂಬ ಹೆಸರು ತೆಗೆದು ಹಾಕಿ ಯಾವುದಾದರೂ ಫೈನಾನ್ಸ್ ಅಥವಾ ಹಣ ವಸೂಲಿ ದಂದೆ ಕಂಪೆನಿ ಅಂತ ಮಾಡಬಹುದು ಅಲ್ಲವೇ.. ಹೀಗೆ ಮುಂದುವರೆದರೆ "ಡಿಜಿಟಲ್ ಇಂಡಿಯಾ" ಎಷ್ಟು ಸುಂದರವಾಗಿರಬಹುದು?
ಇದಕ್ಕೆ ನಾವೆಲ್ಲರೂ ಪ್ರತಿಕ್ರಿಯೆ ನೀಡಬೇಕು.

2017 ಏಪ್ರಿಲ್ 6ಕ್ಕೆ ಬ್ಯಾಂಕ್ ವಹಿವಾಟುಗಳು ಬಹಿಷ್ಕರಿಷಿ ವ್ಯಕ್ತಿಗಳು ಹಾಗೂ ಸ್ಥಾಪನ ಮೇಧಾವಿಗಳು ಒಂದು ಒಳ್ಳೆಯ ಕಾರ್ಯಕ್ಕೆ ದಾಯವಾಗಿ ಸಹಕರಿಸಬೇಕಾಗಿದೆಮತ್ತೂ ಮುಂದುವರಿದಲ್ಲಿ ಮುಂದಿನ ದಿನಗಳಲ್ಲಿ ಇನ್ನಷ್ಟು ಕಠಿಣ ವಾಗಿ ನಾವು ವಿರೋಧವನ್ನು ವ್ಯಕ್ತ ಪಡಿಸ ಬೇಕಾಗಿದೆ.