Friday, June 8, 2018

ಕೊನೆಗೂ ಆಯ್ತು ಖಾತೆ ಹಂಚಿಕೆ; ಕುಮಾರ ಸ್ವಾಮಿಗೇ 'ಪವರ್‌'


ಕೊನೆಗೂ ಆಯ್ತು ಖಾತೆ ಹಂಚಿಕೆ; ಕುಮಾರ ಸ್ವಾಮಿಗೇ 'ಪವರ್‌'

ಬೆಂಗಳೂರು:  ಭಿನ್ನಮತದ ಅಲೆಗಳ ನಡುವೆಯೇ  ಜನತಾದಳ (ಎಸ್) – ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಸಚಿವರ ಖಾತೆ ಹಂಚಿಕೆಯಾಗಿದ್ದು, ಸಚಿವರ ಖಾತೆಗಳ ಪಟ್ಟಿಗೆ ರಾಜ್ಯಪಾಲ ವಜುಭಾಯಿ ವಾಲಾ ಅವರ ಸಮ್ಮತಿಯ ಮುದ್ರೆ ಬಿದ್ದಿದೆ.

ಭಾರಿ ಹಗ್ಗ ಜಗ್ಗಾಟಕ್ಕೆ ಕಾರಣವಾಗಿದ್ದ ಇಂಧನ ಖಾತೆಯನ್ನು ಸ್ವತಃ ಕುಮಾರಸ್ವಾಮಿ ಅವರೇ ಉಳಿಸಿಕೊಂಡಿದ್ದಾರೆ.

ಖಾತೆಗಳ ವಿವರ ಹೀಗಿದೆ:
ಎಚ್ಡಿ ಕುಮಾರಸ್ವಾಮಿ (ಮುಖ್ಯಮಂತ್ರಿ) - ಹಣಕಾಸು, ವಾರ್ತಾ ಮತ್ತು ಸಂಪರ್ಕ, ಇಂಧನ, ಅಬಕಾರಿ, ಗುಪ್ತಚರ, ಜವಳಿ, ಯೋಜನಾ ಮತ್ತು ಸಾಂಖ್ಯಿಕ
ಡಾ.ಜಿ. ಪರಮೇಶ್ವರ್‌ (ಉಪ ಮುಖ್ಯಮಂತ್ರಿ) - ಗೃಹ, ಬೆಂಗಳೂರು ಅಭಿವೃದ್ಧಿ, ಯುವಜನ, ಕ್ರೀಡೆ

ಕಾಂಗ್ರೆಸ್ಸಚಿವರು:

ಆರ್.ವಿ. ದೇಶಪಾಂಡೆ - ಕಂದಾಯ, ಕೌಶಲ್ಯ ಅಭಿವೃದ್ಧಿ
ಡಿ.ಕೆ.ಶಿವಕುಮಾರ್ - ಜಲಸಂಪನ್ಮೂಲ/ ವೈದ್ಯಕೀಯ ಶಿಕ್ಷಣ
ಕೆ.ಜೆ. ಜಾರ್ಜ್ - ಬೃಹತ್ ಕೈಗಾರಿಕೆ, ಐಟಿ-ಬಿಟಿ
ಕೃಷ್ಣ ಬೈರೇಗೌಡ - ಗ್ರಾಮೀಣಾಭಿವೃದ್ಧಿ ಪಂಚಾಯತ್ರಾಜ್‌, ಕಾನೂನು
ಶಿವಶಂಕರ ರೆಡ್ಡಿ - ಕೃಷಿ
ರಮೇಶ್ ಜಾರಕಿಹೊಳಿ - ಪೌರಾಡಳಿತ, ನಗರ, ಸ್ಥಳೀಯ ಸಂಸ್ಥೆ, ಬಂದರು, ಒಳನಾಡು ಸಾರಿಗೆ
ಪ್ರಿಯಾಂಕ್ ಖರ್ಗೆ - ಸಮಾಜ ಕಲ್ಯಾಣ
ಯು.ಟಿ. ಖಾದರ್ - ನಗರಾಭಿವೃದ್ಧಿ (ಬೆಂಗಳೂರು, ಬಿಪಿಎಂಪಿ ಹೊರತುಪಡಿಸಿ) ವಸತಿ
ಜಮೀರ್ ಅಹ್ಮದ್ - ಆಹಾರ ಮತ್ತು ನಾಗರಿಕ ಪೂರೈಕೆ, ಅಲ್ಪಸಂಖ್ಯಾತ ಕಲ್ಯಾಣ, ವಕ್ಫ್
ಶಿವಾನಂದ ಪಾಟೀಲ್ - ಆರೋಗ್ಯ
ವೆಂಕಟರಮಣಪ್ಪ - ಕಾರ್ಮಿಕ
ರಾಜಶೇಖರ್ ಪಾಟೀಲ್ - ಗಣಿ ಮತ್ತು ಭೂ ವಿಜ್ಞಾನ, ಮುಜರಾಯಿ
ಪುಟ್ಟರಂಗಶೆಟ್ಟಿ - ಹಿಂದುಳಿದ ವರ್ಗಗಳ ಕಲ್ಯಾಣ
ಶಂಕರ್ - ಅರಣ್ಯ, ಪರಿಸರ ವಿಜ್ಞಾನ
ಜಯಮಾಲಾ - ಮಹಿಳಾ ಮತ್ತು ಮಕ್ಕಳ ಕಲ್ಯಾಣ

ಜೆಡಿಎಸ್ಸಚಿವರು:

ಎಚ್.ಡಿ.ರೇವಣ್ಣ - ಲೋಕೋಪಯೋಗಿ
ಬಂಡೆಪ್ಪ ಕಾಶೆಂಪುರ - ಸಹಕಾರ
ಜಿ.ಟಿ. ದೇವೇಗೌಡ - ಉನ್ನತ ಶಿಕ್ಷಣ
ಮನಗೂಳಿ - ತೋಟಗಾರಿಕೆ
ಗುಬ್ಬಿ ಶ್ರೀನಿವಾಸ್ - ಸಣ್ಣ ಕೈಗಾರಿಕೆ
ವೆಂಕಟರಾವ್ ನಾಡಗೌಡ - ಪಶು ಸಂಗೋಪನಾ
ಸಿ.ಎಸ್.ಪುಟ್ಟರಾಜು - ಸಣ್ಣ ನೀರಾವರಿ
ಸಾ.ರಾ.ಮಹೇಶ್ - ಪ್ರವಾಸೋದ್ಯಮ, ರೇಷ್ಮೆ
ಎನ್.ಮಹೇಶ್ - ಪ್ರಾಥಮಿಕ, ಪ್ರೌಢ ಶಿಕ್ಷಣ
ಡಿ.ಸಿ ತಮ್ಮಣ್ಣ - ಸಾರಿಗೆ

No comments:

Post a Comment