Showing posts with label Bangalore. Show all posts
Showing posts with label Bangalore. Show all posts

Friday, December 27, 2024

PARYAYA: ವಿಶ್ವ ಹವ್ಯಕ ಸಮ್ಮೇಳನ ೨ನೇ ದಿನ

ವಿಶ್ವ ಹವ್ಯಕ ಸಮ್ಮೇಳನ ೨ನೇ ದಿನ

ವಿಶ್ವ ಹವ್ಯಕ ಸಮ್ಮೇಳನ ೨ನೇ ದಿನದ ಸಂಭ್ರಮಕ್ಕೆ ಕಾಲಿಟ್ಟಿದೆ. ಈ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ಮೇಲಿನ ಚಿತ್ರ ಕ್ಲಿಕ್‌ ಮಾಡಿರಿ

ವಿವಿಧ ಬ್ರಾಹ್ಮಣ ಸಂಸ್ಥೆಗಳಿಗೆ ಸನ್ಮಾನ


ಕೆಳಗಿನದ್ದನ್ನೂ ನೋಡಿರಿ: 

ವಿಶ್ವ ಹವ್ಯಕ ಸಮ್ಮೇಳನ ಪಾರ್ಶ್ವನೋಟಗಳು

PARYAYA: ವಿಶ್ವ ಹವ್ಯಕ ಸಮ್ಮೇಳನ ೨ನೇ ದಿನ: ವಿಶ್ವ ಹವ್ಯಕ ಸಮ್ಮೇಳನ ೨ನೇ ದಿನ ವಿಶ್ವ ಹವ್ಯಕ ಸಮ್ಮೇಳನ ೨ನೇ ದಿನದ ಸಂಭ್ರಮಕ್ಕೆ ಕಾಲಿಟ್ಟಿದೆ. ಈ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ಮೇಲಿನ ಚಿತ್ರ ಕ್ಲಿಕ್‌ ಮಾಡಿರಿ ಕೆ...

PARYAYA: ವಿಶ್ವ ಹವ್ಯಕ ಸಮ್ಮೇಳನ ಪಾರ್ಶ್ವನೋಟಗಳು

ವಿಶ್ವ  ಹವ್ಯಕ ಸಮ್ಮೇಳನ ಪಾರ್ಶ್ವನೋಟಗಳು

ಬೆಂಗಳೂರಿನ ಅರಮನೆ ಮೈದಾನದಲ್ಲಿ ೨೧.೧೨.೨೦೨೪ರ ಶುಕ್ರವಾರ ಆರಂಭವಾದ ತೃತೀಯ ವಿಶ್ವ ಹವ್ಯಕ ಸಮ್ಮೇಳನದ ಕೆಲವು ಪಾರ್ಶ್ವನೋಟಗಳ ಚಿತ್ರಗಳು ಇಲ್ಲಿವೆ.

































ಸಮೀಪ ನೋಟಕ್ಕೆ ಚಿತ್ರಗಳನ್ನು ಕ್ಲಿಕ್‌ ಮಾಡಿರಿ.
ಸಮ್ಮೇಳನದ ನೇರ ಪ್ರಸಾರ ವೀಕ್ಷಣೆಗೆ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿರಿ:

PARYAYA: ವಿಶ್ವ ಹವ್ಯಕ ಸಮ್ಮೇಳನ ಪಾರ್ಶ್ವನೋಟಗಳು: ವಿಶ್ವ  ಹವ್ಯಕ ಸಮ್ಮೇಳನ ಪಾರ್ಶ್ವನೋಟಗಳು ಬೆಂಗಳೂರಿನ ಅರಮನೆ ಮೈದಾನದಲ್ಲಿ ೨೧.೧೨.೨೦೨೪ರ ಶುಕ್ರವಾರ ಆರಂಭವಾದ ತೃತೀಯ ವಿಶ್ವ ಹವ್ಯಕ ಸಮ್ಮೇಳನದ ಕೆಲವು ಪಾರ್ಶ್ವನೋಟಗಳ ಚಿತ...

Thursday, December 26, 2024

PARYAYA: ಹವ್ಯಕ ಸಮ್ಮೇಳನ ಸಡಗರ ಆರಂಭ

 ಹವ್ಯಕ ಸಮ್ಮೇಳನ ಸಡಗರ ಆರಂಭ


ಬೆಂಗಳೂರಿನಲ್ಲಿ ತೃತೀಯ ವಿಶ್ವ ಹವ್ಯಕ ಸಮ್ಮೇಳನದ ಸಡಗರ ಆರಂಭಗೊಂಡಿದೆ.

ಶನಿವಾರ ರಾತ್ರಿ ಮೇಲಾರಕ್ಕೆ ಕೊರೆಯುವ ಸಂಭ್ರಮದೊಂದಿಗೆ ಸಮ್ಮೇಳನದ ಕಳೆಗಟ್ಟತೊಡಗಿದೆ.

ಭವ್ಯವಾದ ವೇದಿಕೆ ಸಜ್ಜುಗೊಂಡಿದೆ.



ಸಮ್ಮೇಳನದ ಸಡಗರದ ಕೆಲವು ಚಿತ್ರಗಳು, ವಿಡಿಯೋ  ನೋಡಲು ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ.



PARYAYA: ಹವ್ಯಕ ಸಮ್ಮೇಳನ ಸಡಗರ ಆರಂಭ:   ಹವ್ಯಕ ಸಮ್ಮೇಳನ ಸಡಗರ ಆರಂಭ ಬೆಂ ಗಳೂರಿನಲ್ಲಿ ತೃತೀಯ ವಿಶ್ವ ಹವ್ಯಕ ಸಮ್ಮೇಳನದ ಸಡಗರ ಆರಂಭಗೊಂಡಿದೆ. ಶನಿವಾರ ರಾತ್ರಿ ಮೇಲಾರಕ್ಕೆ ಕೊರೆಯುವ ಸಂಭ್ರಮದೊಂದಿಗೆ ಸಮ್ಮ...

Monday, September 18, 2023

PARYAYA: ಮುನೇಶ್ವರ ಬ್ಲಾಕಿಗೆ ಬಂತು ಉಕ್ಕಿನಡ್ಕಾಸ್‌ ಆಯುರ್ವೇದ

 ಮುನೇಶ್ವರ ಬ್ಲಾಕಿಗೆ ಬಂತು ಉಕ್ಕಿನಡ್ಕಾಸ್‌ ಆಯುರ್ವೇದ

ಬೆಂಗಳೂರು: ಕರ್ನಾಟಕ ಮತ್ತು ಕೇರಳ ರಾಜ್ಯಗಳ ಗಡಿಯಲ್ಲಿರುವ ಕಾಸರಗೋಡಿನ ʼಉಕ್ಕಿನಡ್ಕಾಸ್‌ ಆಯುರ್ವೇದʼ ಇದೀಗ ಬೆಂಗಳೂರಿನಲ್ಲಿ ತನ್ನ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಂಡಿದೆ. ಇಲ್ಲಿಯವರೆಗೆ ಸಂಸ್ಥೆಯು ಬೆಂಗಳೂರಿನಲ್ಲಿ ಶ್ರೀನಗರ ಸಮೀಪದ ಅಪೆಕ್ಸ್‌ ಬ್ಯಾಂಕ್‌ ಸಮೀಪ ಕಾರ್ಯ ನಿರ್ವಹಿಸುತ್ತಿತ್ತು.

ಬೆಂಗಳೂರಿನ ಗಿರಿನಗರಕ್ಕೆ ಸಮೀಪದ ಮುನೇಶ್ವರ ಬ್ಲಾಕಿನ ಶನೈಶ್ಚರ ದೇವಸ್ಥಾನದ ಎದುರಿನಲ್ಲಿರುವ ಸ್ವಂತ ಕಟ್ಟಡಕ್ಕೆ ಉಕ್ಕಿನಡ್ಕಾಸ್‌ ಸ್ಥಳಾಂತರ ಸಮಾರಂಭ  2023 ಸೆಪ್ಟೆಂಬರ್‌ 17ರ ಭಾನುವಾರ ಸರಳವಾಗಿ ನಡೆಯಿತು. ಚಿತ್ರ ನಟಿ ಸೋನುಗೌಡ ಅವರು ಸಮಾರಂಭವನ್ನು ಉದ್ಘಾಟಿಸಿದರು.


ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ನಾಯಕ ಶ್ರೀಧರ ಸಾಗರ್‌ ಜಿ,  ಮಂಗಳೂರಿನ ಖ್ಯಾತ ಜಾಹೀರಾತು ಸಂಸ್ಥೆ ʼಕಲ್ಕೂರ ಆರ್ಟ್ಸ್‌ʼ ಸಂಸ್ಥಾಪಕ ಪ್ರದೀಪ ಕುಮಾರ ಕಲ್ಕೂರ ಮುಖ್ಯ ಅತಿಥಿಗಳಾಗಿದ್ದರು. ಹಿರಿಯ ಸಾಹಿತಿ ಶಾಂತರಾಜ್‌ ಐತಾಳ್‌ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಇದೇ ಸಂದರ್ಭದಲ್ಲಿ ಚರ್ಮಕ್ಕೆ ಸಂಬಂಧಿಸಿದಂತೆ ವಿಶೇಷ ಆಯುರ್ವೇದ ಉಪಚಾರ ನೀಡುವಂತಹ ʼಕಾಸ್ಮೆಟಿಕ್‌ ಚಿಕಿತ್ಸಾʼ ವಿಭಾಗವನ್ನೂ ಸೋನುಗೌಡ ಉದ್ಘಾಟಿಸಿದರು.  ಸಂಸ್ಥೆಯ ವೈದ್ಯೆ ಡಾ. ನ್ಯಾನ್ಸಿ ಆಯುರ್ವೇದ ಕಾಸ್ಮೆಟಿಕ್ಸ್‌ ಚಿಕಿತ್ಸಾ ಸೌಲಭ್ಯದ ಬಗ್ಗೆ ವಿವರಿಸಿದರು.


ಸಂಸ್ಥೆಯ ಮುಖ್ಯಸ್ಥ ಡಾ. ಜಯಗೋವಿಂದ ಅವರು ಸ್ವಾಗತ ಕೋರಿ, 1950ರಲ್ಲಿ ಸ್ಥಾಪನೆಯಾದ ಉಕ್ಕಿನಡ್ಕಾಸ್‌ ಸಂಸ್ಥೆ  ಇಲ್ಲಿಯವರೆಗೆ ನಡೆದು ಬಂದ ದಾರಿಯನ್ನು ವಿವರಿಸಿದರು.  ಸಂಸ್ಥೆಯ ಎಕ್ಸಿಕ್ಯೂಟಿವ್‌ ಡೈರೆಕ್ಟರ್‌ ಡಾ. ಸಪ್ನಾ ಜಯಗೋವಿಂದ ವಂದನಾರ್ಪಣೆ ಸಲ್ಲಿಸಿದರು. ಬೆಂಗಳೂರಿನಲ್ಲಿ ಸ್ವಂತ ಕಟ್ಟಡಕ್ಕೆ ಕಾಲಿಡಲು ನೆರವಾದ ಎಲ್ಲರಿಗೂ ಈ ಸಂದರ್ಭದಲ್ಲಿ ಕಿರುಕಾಣಿಕೆ ನೀಡಿ ಸತ್ಕರಿಸಲಾಯಿತು. 
ಉಕ್ಕಿನಡ್ಕಾಸ್‌ ಆಯುರ್ವೇದ ಫಾರ್ಮೆಸಿ ವಿಭಾಗದ ಚಂದನ್‌ ಕಾರ್ಯಕ್ರಮ ನಿರ್ವಹಿಸಿದರು. 

ಇದನ್ನೂ ನೋಡಿ: 

ಬೆಂಗಳೂರಿನಲ್ಲಿ ಹೊಸ ಜಾಗಕ್ಕೆ ಉಕ್ಕಿನಡ್ಕಾಸ್‌ ಆಯುರ್ವೇದ

PARYAYA: ಮುನೇಶ್ವರ ಬ್ಲಾಕಿಗೆ ಬಂತು ಉಕ್ಕಿನಡ್ಕಾಸ್‌ ಆಯುರ್ವೇದ:  ಮುನೇಶ್ವರ ಬ್ಲಾಕಿಗೆ ಬಂತು ಉಕ್ಕಿನಡ್ಕಾಸ್‌ ಆಯುರ್ವೇದ ಬೆಂಗಳೂರು : ಕರ್ನಾಟಕ ಮತ್ತು ಕೇರಳ ರಾಜ್ಯಗಳ ಗಡಿಯಲ್ಲಿರುವ ಕಾಸರಗೋಡಿನ ʼಉಕ್ಕಿನಡ್ಕಾಸ್‌ ಆಯುರ್ವೇದʼ ಇದೀಗ ಬೆಂ...

Wednesday, July 14, 2021

ಕಡೆಗೂ ಹಾರಿತು ಹದ್ದಿನ ಮರಿ ….!

 ಕಡೆಗೂ ಹಾರಿತು ಹದ್ದಿನ ಮರಿ ….!


ಬೆಂಗಳೂರಿನ ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆ. 2021 ಜುಲೈ 13ರ ಮಂಗಳವಾರ ಬೆಳಗ್ಗೆ 9.36ರ ಸಮಯ. ಬಡಾವಣೆಯ ವಾಟ್ಸಪ್ ಗುಂಪಿನಲ್ಲಿ ಮರವೊಂದರಲ್ಲಿ ಹಕ್ಕಿ ನೇತಾಡುತ್ತಿರುವ ಚಿತ್ರದ ಸಹಿತ ಸಂದೇಶ ಒಂದು ಪ್ರಕಟವಾಯಿತು. ಆರೋನ್ ಎಂಬವರು ಪ್ರಕಟಿಸಿದ ಚಿತ್ರದ ಮರದಲ್ಲಿ ಬಾವಲಿಯಂತೆ ಹಕ್ಕಿಯೊಂದು ನೇತಾಡುತ್ತಿತ್ತು.

‘ಈ ಬಡಪಾಯಿ ಹಕ್ಕಿಗೆ (ಈಗಲ್ - ಹದ್ದು) ಹಾರಲು ಯಾರಾದರೂ ನೆರವಾಗುತ್ತೀರಾ? ಇದರ ರೆಕ್ಕೆಗೆ  ಗಾಳಪಟದ ನೂಲು ಸಿಕ್ಕಿ ಹಾಕಿಕೊಂಡಿದೆ. ಅದರಿಂದ ತಪ್ಪಿಸಿಕೊಳ್ಳಲು ನಡೆಸಿದ ಯತ್ನದಲ್ಲಿ ಅದು ನೂಲಿನಲ್ಲಿ ಇನ್ನಷ್ಟು ಸಿಕ್ಕಿ ಹಾಕಿಕೊಂಡಿದೆ. ಅದಕ್ಕೆ ತಾನಾಗಿಯೇ ಹಾರಲು ಸಾಧ್ಯವಾಗುತ್ತಿಲ್ಲ. ಈ ಹಕ್ಕಿ ಸಿಕ್ಕಿಹಾಕಿಕೊಂಡಿರುವ ಜಾಗ ಬಡಾವಣೆಯ 2ನೇ ಕ್ರಾಸಿನ ದಕ್ಷಿಣ ಬದಿ’ ಎಂದು ಆರೋನ್ ಬರೆದಿದ್ದರು.


ಅಗ್ನಿಶಾಮಕ ದಳದ ಮಂದಿ ಈ ಪ್ರಕರಣದಲ್ಲಿ ನೆರವಾಗಬಹುದೇನೋ ಎಂದು ಯೋಚಿಸುತ್ತಿದ್ದೇನೆ. ಏಕೆಂದರೆ ಅವರ ಬಳಿ ದೊಡ್ಡ ಏಣಿಗಳು ಇರುತ್ತವೆ. ಈ ಏಣಿಗಳೂ ಈ ಎತ್ತರವನ್ನು ತಲುಪಬಹುದು. ಕೆಲವು ವರ್ಷಗಳ ಹಿಂದೆ ನನ್ನ ಕಚೇರಿಯ ಸಮೀಪ ಪಾರಿವಾಳವೊಂದು ಗಗನಚುಂಬಿ ಕಟ್ಟಡದಲ್ಲಿ ಹೀಗೆ ಸಿಕ್ಕಿಹಾಕಿಕೊಂಡಿತ್ತು. ಅಗ್ನಿಶಾಮಕ ದಳದವರು ಅಲ್ಲಿಗೆ ಬಂದು ತಮ್ಮ  ಎತ್ತರದ ಏಣಿಗಳನ್ನು ಬಳಸಿ ರಕ್ಷಿಸಿದ್ದರು’ ಕಾರ್ತಿಕ್ ಅದಕ್ಕೆ ಪ್ರತಿಕ್ರಿಯಿಸಿದರು.

‘ಹೌದು ನೀವು ಅವರನ್ನ ಕರೆಯಬಹುದು’  ಬಡಾವಣೆಯ ಸಂಘದ ಸಹಕಾರ್ಯದರ್ಶಿ ರಾಘವೇಂದ್ರ ಕಾಮತ್  ಸೂಚಿಸಿದರು. ‘ಹೌದು’ ಇದು ಈಗಲ್ ಮರಿ’ ಎಂದೂ ಹಕ್ಕಿಯ ಚಿತ್ರವನ್ನು ಹಿರಿದುಗೊಳಿಸಿ ಅವರು ವಿವರಿಸಿದರು.

‘ಹತ್ತಿರದಲ್ಲೇ ಪ್ರಾಣಿ ರಕ್ಷಣಾ ಕೇಂದ್ರದವರಿದ್ದಾರೆಯೇ ಎಂದು ನೀವು ಪರಿಶೀಲಿಸಬಹುದು. ಅವರು ನೆರವು ನೀಡಬಹುದು’ ಎಂದು ಸೂಚನೆ ಸೈಯದ್ ವಾಸೀಮ್ ಅವರಿಂದ ಬಂತು. ಹಕ್ಕಿ ಸಂರಕ್ಷಣಾ ಕೇಂದ್ರದ ನಂಬರ್ 944964222 ಇದನ್ನೂ ಅವರು ನಮೂದಿಸಿದರು.  ‘ಸಂಪರ್ಕಿಸಲು ಯತ್ನಿಸುತ್ತಿದ್ದೇನೆ ಬಿಜಿ ಬರುತ್ತಿದೆ’ ಎಂದು ವಾಸೀಮ್ ಬರೆದರು.

‘ಬೆಸ್ಕಾಮ್ ಅಥವಾ ಬಿಬಿಎಂಪಿಯವರನ್ನು ಕರೆಯಿರಿ. ಅವರ ಬಳಿಯೂ  ದೊಡ್ಡ ದೊಡ್ಡ ಏಣಿಗಳಿವೆ. ಅವರು ನೆರವಾಗಬಹುದು’ ಎಂದರು ಮಂಜುಳಾ.

‘ಅವರನ್ನು ಕೂಡಾ ಕರೆಯಲು ಯತ್ನಿಸುತ್ತೇನೆ’ ಉತ್ತಿಸಿದರು ವಾಸೀಮ್. ‘ಪೀಪಲ್ ಫಾರ್ ಎನಿಮಲ್ಸ್’ನವರನ್ನು ಕರೆಯಿರಿ. ಇದು ಅವರ ನಂಬರ್  9900025370. ನಾನು ಈಗಷ್ಟೇ  ಅವರ ಬಳಿ ಮಾತನಾಡಿದೆ. ಅವರಿಗೆ ಲೊಕೇಷನ್ ಮತ್ತು ವಿಡಿಯೋ ಬೇಕಂತೆ’ ಸುಧೀರ್ ತಮ್ಮ ಸಂದೇಶವನ್ನು ಪ್ರಕಟಿಸಿದರು.


‘ಹಿಂದೊಮ್ಮೆ ಕಾಗೆ ಮರಿಯೊಂದು ಈ ಬಡಾವಣೆಯ 3ನೇ ಕ್ರಾಸಿನಲ್ಲಿ ಹೀಗೆ ಸಿಕ್ಕಿ ಹಾಕಿಕೊಂಡಿತ್ತು. ನಾನು ಅದನ್ನು ಉದ್ದವಾದ ಕೋಲಿನ ನೆರವಿನಿಂದ ಬಿಡಿಸಿದ್ದೆ’ ಮಧು ನಾಯರ್ ಅವರಿಗೆ ಹಿಂದಿನ ಘಟನೆ ನೆನಪಾಯಿತು.

‘ಇದು ಪೀಪಲ್ ಫಾರ್ ಎನಿಮಲ್ಸ್’ನವರ  ಸ್ಥಿರ ದೂರವಾಣಿ ಸಂಖ್ಯೆ ‘080-28611986’ ಇದಕ್ಕೂ ಕರೆ ಮಾಡಿ’ ಸುಧೀರ್ ಮತ್ತೆ ಸೂಚಿಸಿದರು.

‘ಈಗಾಗಲೇ ತಿಳಿಸಿ ಆಗಿದೆ. ಅವರು ಬಾಕಿ ಇರುವ ಪ್ರಕರಣಗಳನ್ನು ಮುಗಿಸಿಕೊಂಡು ಬರುತ್ತಾರಂತೆ. ಆದರೆ ಅದು ತಡವಾಗಬಹುದೇನೋ?’ ನಾನು ಗಾಳಿಪಟದ ನೂಲನ್ನು ಕತ್ತರಿಸಿದೆ. ಆದರೆ ನೂಲು ರೆಕ್ಕೆಗಳಿಗೆ ಸುತ್ತಿಕೊಂಡು ಕೊಂಬೆಗೆ ಸಿಕ್ಕಿ ಹಾಕಿಕೊಂಡಿದೆ’ ರಾಘವೇಂದ್ರ ಕಾಮತ್ ಆತಂಕ ವ್ಯಕ್ತ ಪಡಿಸಿದರು. ‘ಹೌದಾ’ ಮಧು ನಾಯರ್ ಅವರಿಂದ  ಅಸಹಾಯಕತೆಯ  ಭಾವ ವ್ಯಕ್ತವಾಯಿತು.

‘ಉದಯಶಂಕರ್ ಅವರು ಬೀದಿ ದೀಪ ಸರಿ ಪಡಿಸುವವರನ್ನು ಕರೆದಿದ್ದಾರೆ. ಬಹುಶ ಅವರು ನೆರವಿಗೆ ಬರಬಹುದುರಾಘವೇಂದ್ರ ಕಾಮತ್ ಆಶಾಭಾವನೆ ವ್ಯಕ್ತ ಪಡಿಸಿದರು.

‘ಇದು ಹೊರಮಾವು ಘಟಕದ ನಂಬರ್ 9449642222’ ಸುಧೀರ್ ಇನ್ನೊಂದು ಮೊಬೈಲ್ ನಂಬರ್  ನೀಡಿದರು.


‘ನಾನೂ ಪ್ರಯತ್ನಿಸಿದೆ. ನಾವು ಕೊಂಬೆ ಕಡಿಯಬೇಕಾಗಬಹುದು. ಆದರೆ ಅದು ತುಂಬಾ ಎತ್ತರದಲ್ಲಿದೆ. ಅಲ್ಲಿಗೆ ಏರುವುದು ಕಷ್ಟ. ಮೇಲಿನ ಯಾವುದಾದರೂ ತಂಡ ಬರಬಹುದು ಎಂದು ಆಶಿಸೋಣ’ ಮಧು ನಾಯರ್  ಆಸೆ. ‘ಹಕ್ಕಿಈಗ ಸದ್ದಿಲ್ಲದೆ ನೇತಾಡುತ್ತಿದೆ. ಹೀಗೆ ಸದ್ದಿಲ್ಲದೆ ನೇತಾಡುತ್ತಿದ್ದರೆ, ಸ್ವಲ್ಪ  ತಡವಾದರೂ ಅದಕ್ಕೆ ಹಾನಿ ಆಗದೇ ಇರಬಹುದು  ನಾಯರ್ ಸಂದೇಶಕ್ಕೆ  ಸ್ವಲ್ಪ ನಿರಾಳತೆಯ ವಾಕ್ಯ ಸೇರಿತ್ತು.

‘ಈಗ ಬರಬಹುದು. ನನಗೆ ಉದ್ದವಾದ ಪೈಪ್ ಸಿಕ್ಕಿದೆ’ ನಾಯರ್, ಕಾಮತ್ ಸಂದೇಶಕ್ಕೆ  ಸಂಘದ ಆಂತರಿಕ ಲೆಕ್ಕ ಪರಿಶೋಧಕ ಮೊಹ್ಸಿನ್  ಪ್ರತಿಕ್ರಿಯಿಸಿದರು.

 ‘ಪ್ರಯತ್ನಿಸಿದೆ, ಅದೂ ಸಾಲುತ್ತಿಲ್ಲ’ ಮೊಹ್ಸಿನ್ ನಿರಾಶೆ.

‘ಇರಲಿ, ಹೇಗಿದ್ದರೂ ಅವರು ಬರುತ್ತಿದ್ದಾರಲ್ಲ. ಕಾಯೋಣ’ ಮಧು ನಾಯರ್.

ಗಂಟೆ 11.31 ಆಗಿತ್ತು. ಹಕ್ಕಿ ಸಿಕ್ಕಿ ಹಾಕಿಕೊಂಡು ಅದಾಗಲೇ ಸುಮಾರು 2 ಗಂಟೆಗಳಾಗಿತ್ತು. ಹಕ್ಕಿಯಿಂದ ಯಾವ ಸದ್ದೂ ಇರಲಿಲ್ಲ.

‘ಓಹ್ ಬಂದರು’ ಮೊಹ್ಸಿನ್ ಖುಷಿಯ ಸಂದೇಶ. ಮಧು ನಾಯರ್ ಅವರಿಂದಲೂ ಖುಷಿಯ ಸಂಕೇತ.


ಬೆಳಗ್ಗೆ 11.31ರಿಂದ 11.51ರವರೆಗೆ  ಸ್ಮಶಾನ ಮೌನ. ಹಕ್ಕಿಗೆ ಏನಾಗಿದೆಯೋ ಏನೋ ಎಂಬ ಆತಂಕ.

ಸುಮಾರು 20  ನಿಮಿಷಗಳ ಬಳಿಕ ರಾಘವೇಂದ್ರ ಕಾಮತ್ ಸಂದೇಶ  ಪ್ರಕಟವಾಯಿತು: ‘ಹಕ್ಕಿಯ ರಕ್ಷಣೆಯಾಯಿತು. ಧನ್ಯವಾದಗಳು ಎಆರ್ ಆರ್ ಸಿ  ಹಕ್ಕಿ ರಕ್ಷಣಾ ತಂಡಕ್ಕೆ’

ಸಂದೇಶದ ಜೊತೆಗೆ ಎಆರ್ ಆರ್ ಸಿ ತಂಡದ ಕಾರು, ಏಣಿ, ನೂಲಿನ ಜೊತೆಗೆ ತಂಡದ ಕಾರ್ಯಾಚರಣೆಯ ವಿಡಿಯೋವನ್ನೂ ಕಾಮತ್  ಸಂದೇಶ ಹಂಚಿಕೊಂಡಿತ್ತು.

‘ಓಹ್. ನಿಮಗೆ ಇಡೀ ತಂಡಕ್ಕೆ ಧನ್ಯವಾದಗಳು’ ಆರೋನ್  ಕೃತಜ್ಞತೆ ಸಲ್ಲಿಸಿದರು. ‘ ಎಆರ್ ಆರ್ ಸಿ ತಂಡಕ್ಕೆ ಧನ್ಯವಾದಗಳು’ ಸೈಯದ್ ವಾಸೀಮ್  ಸಂದೇಶ  ಅದಕ್ಕೆ ಜೋಡಿಯಾಯಿತು. ಮಂಜುಳಾ, ಮಧು ನಾಯರ್  ಅವರಿಂದಲೂ ಖುಷಿಯ ಸಂದೇಶ ಹೊರ ಹೊಮ್ಮಿತು.

‘ಎಆರ್ ಆರ್ ಸಿ ತಂಡದಿಂದ ಅತ್ಯಂತ ಅದ್ಭತ ಕೆಲಸ. ನಾನು ಅಭಿನಂದನೆಗಳನ್ನು ಸಲ್ಲಿಸುತ್ತೇನೆ’-ಇಡೀ ಬಡಾವಣೆಯ ಪರವಾಗಿ ತಮ್ಮ ಕೃತಜ್ಞತೆ ಸಲ್ಲಿಸಿದರು ಸಂಘದ ಅಧ್ಯಕ್ಷ ಶಿವಪ್ಪ ಶಾಂತಪ್ಪನವರ್. ‘ಉತ್ತಮ ಕೆಲಸ’  ಎಂದು ದನಿ ಗೂಡಿಸಿದರು ವಿಕಾಸ್ ವರ್ಮಾ.

ಸುಮಾರು ಎರಡು ಗಂಟೆಗಳ ಕಾಲ ಜೀವನ್ಮರಣ ಹೋರಾಟ ನಡೆಸಿದ ಪುಟ್ಟ ಹಕ್ಕಿ ಮರಿ ಕಡೆಗೂ ಸ್ವಚ್ಚಂದವಾಗಿ ಬಾನಿನಲ್ಲಿ ಹಾರಿತ್ತು. ಗಾಳಿಪಟದ  ನೂಲು ಎಂಬ ‘ಮೃತ್ಯು ಪಾಶ’ದಿಂದ ಪಾರಾಗಿತ್ತು.

ಹಾಗಾದರೆ ಎ ಆರ್ ಆರ್ ಸಿ ತಂಡದವರು ಮಾಡಿದ್ದೇನು?

ಈ ಪುಟ್ಟ ವಿಡಿಯೋ ನೋಡಿ:





-ನೆತ್ರಕೆರೆ ಉದಯಶಂಕರ  

Wednesday, March 20, 2019

ಗೊತ್ತಾ? ವಿಶ್ವದ ಅತಿ ಅಗ್ಗದ 3 ಸ್ಥಳಗಳಲ್ಲಿ ಬೆಂಗಳೂರು ಕೂಡಾ ಒಂದು

ಗೊತ್ತಾ? ವಿಶ್ವದ ಅತಿ ಅಗ್ಗದ 3 ಸ್ಥಳಗಳಲ್ಲಿ

ಬೆಂಗಳೂರು ಕೂಡಾ ಒಂದು

ನ್ಯೂಯಾರ್ಕ್: ಪ್ಯಾರಿಸ್, ಸಿಂಗಾಪುರ ಮತ್ತು ಹಾಂಕಾಂಗ್ ವಿಶ್ವದ ಅತ್ಯಂತ ದುಬಾರಿ ನಗರಗಳು ಎಂದೇ ಪ್ರಖ್ಯಾತಿ ಪಡೆದಿವೆ.  ಆದರೆ  ದೆಹಲಿ, ಚೆನ್ನೈ ಮತ್ತು ಬೆಂಗಳೂರು ನಗರಗಳು ಬದುಕಲು ಅತ್ಯಂತ ಅಗ್ಗದ ಮೂರು ಸ್ಥಳಗಳು ಎಂಬುದಾಗಿ ಗುರುತಿಸಲ್ಪಟ್ಟಿವೆ.

ಎಕನಾಮಿಸ್ಟ್ ಇಂಟೆಲಿಜೆನ್ಸ್ ಘಟಕದ ೨೦೧೯ರ  ವಿಶ್ವವ್ಯಾಪಿ ಬದುಕಿನ ವೆಚ್ಚದ ಸಮೀಕ್ಷೆಯ ಪ್ರಕಾರ.
ಮೂರು ಪ್ರಮುಖ ನಗರಗಳು ಅಗ್ಗದ ನಗರಗಳ ಪೈಕಿ ಮುಂಚೂಣಿ ಸ್ಥಾನದಲ್ಲಿವೆ ಎಂದು ಸಿಎನ್ಎನ್ ಉಲ್ಲೇಖಿಸಿದೆ.

 ಸಮೀಕ್ಷೆಯು ವಿಶ್ವಾದ್ಯಂತದ ೧೩೩ ನಗರಗಳಲ್ಲಿ ೧೫೦ ಕ್ಕಿಂತಲೂ ಹೆಚ್ಚಿನ ವಸ್ತುಗಳ ಬೆಲೆಯನ್ನು ಮೌಲ್ಯಮಾಪನ ಮಾಡಿದೆ.

ಸ್ವಿಜರ್ಲೆಂಡಿನ ಜುರಿಚ್  ನಗರ ನಾಲ್ಕನೇ ಸ್ಥಾನದಲ್ಲಿದೆ. ಜಪಾನಿನ ಒಸಾಕಾ ಮತ್ತು ಸ್ವಿಜರ್ಲೆಂಡಿನ ಜಿನೇವಾ 5ನೇ ಸ್ಥಾನವನ್ನು ಹಂಚಿಕೊಂಡಿವೆ. ಸಿಯೋಲ್ (ದಕ್ಷಿಣ ಕೊರಿಯಾ), ಕೋಪನ್ ಹ್ಯಾಗನ್ (ಡೆನ್ಮಾರ್ಕ್) ಮತ್ತು ನ್ಯೂಯಾರ್ಕ್ (ಯುಎಸ್) ಜಂಟಿಯಾಗಿ ಏಳನೇ ಸ್ಥಾನದಲ್ಲಿದೆ. ಇಸ್ರೇಲಿನ  ಟೆಲ್ ಅವಿವ್ ಜೊತೆಗೆ, ಲಾಸ್ ಎಂಜಲೀಸ್ (ಯುಎಸ್) ವಿಶ್ವದ ಅತ್ಯಂತ ದುಬಾರಿ ನಗರಗಳಲ್ಲಿ ೧೦ ನೇ ಸ್ಥಾನ ಪಡೆದಿವೆ.
ವಿಶ್ವದ ಅಗ್ಗದ ನಗರಗಳಲ್ಲಿ ಕಾರಾಕಾಸ್ (ವೆನೆಜುವೆಲಾ), ಡಮಾಸ್ಕಸ್ (ಸಿರಿಯಾ), ತಾಷ್ಕೆಂಟ್ (ಉಜ್ಬೆಕಿಸ್ತಾನ), ಅಲ್ಮಾಟಿ (ಕಜಕಸ್ತಾನ), ಕರಾಚಿ (ಪಾಕಿಸ್ತಾನ), ಲಾಗೋಸ್ (ನೈಜೀರಿಯಾ), ಬ್ಯೂನಸ್  ಐರಿಸ್  (ಅರ್ಜೆಂಟೀನಾ) ಹಾಗೂ ಭಾರತದ ಬೆಂಗಳೂರು, ಚೆನ್ನೈ ಮತ್ತು ದೆಹಲಿ ಸೇರಿವೆ.

ವಿವರಗಳಿಗೆ ಕೆಳಗಿನ ಚಿತ್ರ ಕ್ಲಿಕ್ ಮಾಡಿ:

Monday, November 12, 2018

‘ಅನಂತ’ ನೆನಪು...

ಅನಂತನೆನಪು...

ಅದು ತೊಂಬತ್ತರ ದಶಕ. ನಾನು ಪ್ರಜಾವಾಣಿ ವರದಿಗಾರನಾಗಿ ಹುಬ್ಬಳ್ಳಿಯಲ್ಲಿ ಇದ್ದ ಸಮಯ. ಈದ್ಗಾ ಮೈದಾನದ ಧ್ವಜ ವಿವಾದದ  ಬಿಸಿ ಎಲ್ಲಡೆ ಹರಡಿತ್ತು.
 
ನಾನು ಕಚೇರಿಯಲ್ಲಿ ಕಾರ್ಯನಿರತನಾಗಿದ್ದ ಹೊತ್ತು. ಫೋನ್ ರಿಂಗಣಿಸಿತು. ಕೈಗೆ ತೆಗೆದುಕೊಂಡರೆ ಕಡೆಯ ಧ್ವನಿ ಕೇಳಿತು: ಉದಯಶಂಕರ್ ಇದ್ದಾರಾ?

ಹೌದು ನಾನೇ ಎಂದು ಉತ್ತರಿಸುತ್ತಿದ್ದಂತೆಯೇ. ನೀವೇನಾ? ಉಶಂನಾಭ ಅವರೇ ನಾನು ಅನಂತ ಮಾತನಾಡುತ್ತಿದ್ದೇನೆ ಗುರುತು ಸಿಕ್ಕಿತಾ?’ ಎಂಬ ಪ್ರಶ್ನೆ ಬಂತು ಕಡೆಯಿಂದ.

ಓ.. ಗೊತ್ತಾಯಿತು, ಬಿಡಿ, ಎಲ್ಲಿದ್ದೀರಿ?’ ಪ್ರಶ್ನಿಸಿದೆ.

ಶ್. ಎಲ್ಲಿದ್ದೇನೆ ಎಂದು ಕೇಳಬೇಡಿ. ಅಜ್ಞಾತವಾಸಿಯಾಗಿದ್ದೇನೆ. ಇನ್ನೂ ಸುರಕ್ಷಿತ ಸ್ಥಳ ಬೇಕಾಗಿದೆ. ನಿಮ್ಮ ಮನೆಗೇ ಬಂದು ಬಿಡಲಾ? ಪೊಲೀಸರ ಕಣ್ಣು ಬೀಳದಲ್ಲವೇ?’ ಎಂಬ ಮರುಪ್ರಶ್ನೆ ಬಂತು ಕಡೆಯಿಂದ.

ಒಮ್ಮಿಂದೊಮ್ಮೆಗೇ ಬಂದ ಪ್ರಶ್ನೆಗೆ ಏನು ಉತ್ತರ ಕೊಡಲಿ ಎಂದು ಯೋಚಿಸುವಷ್ಟರಲ್ಲಿ, ‘ಸಧ್ಯಕ್ಕೆ ಬೇಡ ಬಿಡಿ. ಅಂತಹ ಅಗತ್ಯ ಇದ್ದರೆ ಮತ್ತೆ ಫೋನ್ ಮಾಡುವೆಎಂದು ಉತ್ತರಿಸಿತ್ತು ಕಡೆಯ ಧ್ವನಿ.

ಹೌದು. ಫೋನ್ ಮಾಡಿದ್ದ ವ್ಯಕ್ತಿ ಅನಂತ ಕುಮಾರ್.

ಈದ್ಗಾ ಮೈದಾನದಲ್ಲಿ ಗಣರಾಜ್ಯೋತ್ಸವದ ದಿನ ರಾಷ್ಟ್ರಧ್ವಜ ಹಾರಿಸಿಯೇ ಸಿದ್ಧ ಎಂದು ಬಿಜೆಪಿ, ಏನಾದರೂ ಸರಿ ಧ್ವಜ ಹಾರಿಸಲು ಬಿಡೆವು ಎಂದು ಪೊಲೀಸರು ಪಟ್ಟು ಹಿಡಿದಿದ್ದ ಸಂದರ್ಭವದು.
 
ಈದ್ಗಾ ಮೈದಾನದಲ್ಲಿ ಧ್ವಜ ಹಾರಿಸುವ ಯೋಜನೆಯ ಜಾರಿಯಲ್ಲಿ ಅವರ ಪಾತ್ರವೇ ಮಹತ್ವದ್ದಾಗಿತ್ತು. ಸಾಧ್ವಿ ಉಮಾ ಭಾರತಿ ಅವರನ್ನೂ ಕಾರ್ಯಕ್ರಮಕ್ಕಾಗಿ ಕರೆಸಿದ್ದರು.

ಹುಬ್ಬಳ್ಳಿಯಲ್ಲೇ ಕ್ಯಾಂಪ್ ಹೂಡಿದ್ದ ಐಜಿಪಿ ಬರ್ಮನ್ಈದ್ಗಾ ಮೈದಾನದಲ್ಲಿ ಒಂದು ಸೊಳ್ಳೆಯೂ ಹಾರಲು ಸಾಧ್ಯವಿಲ್ಲಎಂದಿದ್ದರು.

ಆದರೆ, ಗಣರಾಜ್ಯೋತ್ಸವದ ದಿನ ಬೆಳ್ಳಂಬೆಳಗ್ಗೆಯೇ ಒಂದಿಬ್ಬರು ತರುಣರು ಈದ್ಗಾ ಮೈದಾನ ಪ್ರವೇಶಿಸಿ ಧ್ವಜ ಹಿಡಿದುಕೊಂಡು ಮೈದಾನದ ಒಳಗಿನ ಬೇಲಿಯ ಬದಿಯಲ್ಲೇ ಓಡಿದ್ದರು. ‘ಮೈದಾನದಲ್ಲಿ ಧ್ವಜ ಅರಳಿಯೇ ಬಿಟ್ಟಿತ್ತು!’

ಬಳಿಕ ಮೈದಾನದತ್ತ ಮೆರವಣಿಗೆಯಲ್ಲಿ ಹೊರಟಿದ್ದ ಅನಂತಕುಮಾರ್, ಉಮಾಭಾರತಿ ಮತ್ತಿತರ ನಾಯಕರನ್ನು ಪೊಲೀಸರು ಬಂಧಿಸಿದ್ದರು.

ಧ್ವಜ ಹಿಡಿದು ಓಡಿದ್ದ ಅನಂತಕುಮಾರ ಹೆಗಡೆ ಮತ್ತುಇನ್ನೊಬ್ಬ ವ್ಯಕ್ತಿ ಪೊಲೀಸರ ಲಾಠಿ ಏಟಿನಿಂದ ಜರ್ಜರಿತರಾಗಿ ಆಸ್ಪತ್ರೆ ಸೇರಿದ್ದರು.

ಅನಂತ ಕುಮಾರ್ ಪೂರ್ತಿ ಹೆಸರು ಎಚ್.ಎನ್. ಅನಂತ ಕುಮಾರ್ ನನಗೆ ಪರಿಚಿತರಾಗಿದ್ದುದು ಅದಕ್ಕೂ ಸುಮಾರು ಒಂದು ದಶಕಕ್ಕೂ ಹಿಂದೆ. ಅಂದರೆ 1979-80 ಅವಧಿಯಲ್ಲಿ. ನಾನು ಬೆಂಗಳೂರಿಗೆ ಬಂದ ಹೊಸತರಲ್ಲಿ ಬೆಂಗಳೂರು ಕಾಟನ್ ಪೇಟೆಯಲ್ಲಿದ್ದ ವಿದ್ಯಾರ್ಥಿ ಪರಿಷತ್ತಿನ ಕಚೇರಿಯಲ್ಲಿ.

ಬೆಂಗಳೂರಿಗೆ ಬಂದ ಹೊಸತರಲ್ಲಿ ನನಗೆ ವಸತಿ ಒದಗಿಸಿದ್ದು ವಿದ್ಯಾರ್ಥಿ ಪರಿಷತ್ ಕಚೇರಿಯೇ. ಪ್ರಸ್ತುತ ಆರೆಸ್ಸೆಸ್ ಪ್ರಮುಖರಾಗಿರುವ ದತ್ತಾತ್ರೇಯ ಹೊಸಬಾಳೆ, ಪ್ರೇಮ್ ಕುಮಾರ್ ಮತ್ತಿತರರು ಅಲ್ಲಿಯೇ ವಾಸವಾಗಿದ್ದರು.

ಕಚೇರಿಯಲ್ಲಿಯೇ ಒಂದು ಕೊಠಡಿಯಲ್ಲಿ ನಾವು ಅಡುಗೆ ಮಾಡಿಕೊಳ್ಳುತ್ತಿದ್ದೆವು. ನಾವು ತಯಾರು ಮಾಡುತ್ತಿದ್ದ ಅಡುಗೆಯನ್ನೇ ಕಚೇರಿಗೆ ಬರುತ್ತಿದ್ದ ಇತರ ಕೆಲವು ಕಾರ್ಯಕರ್ತರು ಉಣ್ಣುತ್ತಿದ್ದುದೂ ಇತ್ತು. ಹಾಗೆ ನಮ್ಮೊಂದಿಗೆ ಊಟ ಜೊತೆಯಾಗಿ ಊಟ ಮಾಡುತ್ತಿದ್ದ ಕಾರ್ಯಕರ್ತರಲ್ಲಿ ಒಬ್ಬರಾಗಿದ್ದರು ಅನಂತ ಕುಮಾರ್.

ನನ್ನ ಹೆಸರು ಬಹಳ ಉದ್ದವಾಗಿದೆ ಎಂದು ಅನಂತಕುಮಾರ್, ಹೊಸಬಾಳೆ, ಬಪ (ಬಸವರಾಜ ಪಾಟೀಲ), ಮಸೂದೆ (ಮಧು ಸೂಧನ ದೇಸಾಯಿ), ಮಾಪಣ್ಣ (ಮಹಾಬಲೇಶ್ವರ ಭಟ್) ಮತ್ತಿತರರೆಲ್ಲ ಸೇರಿಉಶಂನಾಭ ಅಡ್ಡ ಹೆಸರಿಟ್ಟಿದ್ದರು.

ಪರಿಷತ್ತಿನವಿದ್ಯಾರ್ಥಿ ಪಥಪತ್ರಿಕೆಯನ್ನು ರೂಪಿಸುವ ಹೊಣೆಗಾರಿಕೆಯನ್ನು ನಾವೆಲ್ಲ ಒಟ್ಟಾಗಿ ಆಗ ನಿಭಾಯಿಸುತ್ತಿದ್ದೆವು.

ಕೆಲಸ ಮುಗಿದ ಬಳಿಕ ರಾತ್ರಿ ಒಟ್ಟಾಗಿ ಕಾಂತಿ ಸ್ವೀಟ್ಸ್ ಗೆ ಹೋಗಿಬಾದಾಮಿ ಹಾಲುಕುಡಿದು ಬರುತ್ತಿದ್ದೆವು.

ಹುಬ್ಬಳ್ಳಿಯ ಈದ್ಗಾ ಮೈದಾನದ ವಿವಾದ ಕಡೆಗೂ ಬಿಜೆಪಿಗೆ ದೊಡ್ಡ ವರದಾನವಾಗಿತ್ತು. ನಂತರದ ಚುನಾವಣೆಗಳಲ್ಲಿ ಬಿಜೆಪಿ ಪಡೆದ ಯಶಸ್ಸುಗಳಿಗೆ ಈದ್ಗಾ ವಿವಾದ ಮೂಲ ಮೆಟ್ಟಿಲಾಗಿತ್ತು.

ಮುಂದೆ ನಡೆದ ಲೋಕಸಭಾ ಚುನಾವಣೆಯಲ್ಲಿ ಗೆದ್ದ ಅನಂತಕುಮಾರ್ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಸಚಿವರಾದರು.

ಸಚಿವರಾದ ಮೇಲೆ ಹುಬ್ಬಳ್ಳಿಗೆ ಬಂದ ಅನಂತಕುಮಾರ್ ಪತ್ರಕರ್ತರನ್ನು ಭೇಟಿ ಮಾಡಿದಾಗ, ಬೆಂಗಳೂರಿನ ಹಳೆಯ ದಿನಗಳ ಮೆಲುಕು ಹಾಕುವುದನ್ನು ಮರೆಯಲಿಲ್ಲ. ಪತ್ರಕರ್ತ ಮಿತ್ರರೊಂದಿಗೂಇವರು ನನ್ನ ಹಳೆಯ ಗೆಳೆಯ ಉಶಂನಾಭಎಂದು ಹೇಳಿಕೊಂಡಿದ್ದರು.

ಇಂತಹ ಸ್ನೇಹಶೀಲಅನಂತಈದಿನ (12.11.2018)ಅನಂತದಲ್ಲಿ ಲೀನರಾಗಿದ್ದಾರೆ. ಅವರ ಆತ್ಮಕ್ಕೆ ಚಿರಶಾಂತಿ ಲಭಿಸಲಿ ಎಂದು ಪ್ರಾರ್ಥಿಸುವೆ.