Showing posts with label ಶ್ರೀ ಬಾಲಾಜಿ ಕೃಪಾ ಬಡಾವಣೆ. Show all posts
Showing posts with label ಶ್ರೀ ಬಾಲಾಜಿ ಕೃಪಾ ಬಡಾವಣೆ. Show all posts

Saturday, November 1, 2025

PARYAYA: ಏರಲಿ ಹಾರಲಿ ಕನ್ನಡ ಧ್ವಜ

 ಏರಲಿ ಹಾರಲಿ ಕನ್ನಡ ಧ್ವಜ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ಶ್ರೀ ಬಾಲಾಜಿ ಕೃಪಾ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ೨೦೨೫ ನವೆಂಬರ್‌ ೧ರ ಶನಿವಾರ ಸರಳವಾಗಿ ೭೦ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.

ಚೆನ್ನೈಯ ಬಿನ್ನಿಮಿಲ್‌ ಮತ್ತು ಮೈಸೂರು ಸಮೀಪದ ನಂಜನಗೂಡಿನಲ್ಲಿ ಡನ್‌ ಫೋರ್ಡ್‌ ಫ್ಯಾಬ್ರಿಕ್ಸ್‌ನಲ್ಲಿ ನಿವೃತ್ತಿಯ ನಂತರ ಸೇವೆ ಸಲ್ಲಿಸಿದ್ದ ಹಿರಿಯ ವ್ಯಕ್ತಿ ಶ್ರೀ ಸಿ. ವರದನ್‌ ಧ್ವಜಾರೋಹಣ ನೆರವೇರಿಸಿದರು. ಸಂಘದ ಅಧ್ಯಕ್ಷ ಶ್ರೀ ರಾಜೇಶ ಕೆ. ಹೆಗಡೆ ಕನ್ನಡ ಭುವನೇಶ್ವರಿಗೆ ಪೂಜೆ ಸಲ್ಲಿಸಿದರು.


ಶ್ರೀ ಸಿ. ವರದನ್‌ ಅವರನ್ನು ಶ್ರೀ ಮುನಿರಾಜು, ಶ್ರೀ ಚೌಡರೆಡ್ಡಿ, ಶ್ರೀ ಉದಯಶಂಕರ್‌ ಸನ್ಮಾನಿಸಿ ಗೌರವಿಸಿದರು.

ಶ್ರೀ ಬಾಲಾಜಿ ಕೃಪಾ ಬಡಾವಣೆ ನಿವಾಸಿಗಳ ಸಂಘದ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಸಂಘದ ಮಾಜಿ ಅಧ್ಯಕ್ಷ ಶಿವಪ್ಪ ಶಾಂತಪ್ಪನವರ, ಹಿರಿಯ ಸದಸ್ಯ ಶ್ರೀ ರವಿಚಂದ್ರನ್‌ ಅವರ ಪತ್ನಿ, ಶ್ರೀ ವರದನ್‌ ಅವರ ಪುತ್ರಿ ಹೇಮಾ, ಸಂಘದ ಅಧ್ಯಕ್ಷ ಶ್ರೀ ರಾಜೇಶ ಹೆಗಡೆ ಮಾತನಾಡಿದರು. ಶ್ರೀ ನೆತ್ರಕೆರೆ ಉದಯಶಂಕರ ಭಟ್‌ ಕಾರ್ಯಕ್ರಮ ನಿರ್ವಹಿಸಿದರು.


ಈ ಸಂದರ್ಭದ ಕೆಲವು ಚಿತ್ರಗಳು ಹಾಗೂ ವಿಡಿಯೋ ಇಲ್ಲಿದೆ.



PARYAYA: ಏರಲಿ ಹಾರಲಿ ಕನ್ನಡ ಧ್ವಜ:   ಏರಲಿ ಹಾರಲಿ ಕನ್ನಡ ಧ್ವಜ ಬೆಂ ಗಳೂರು ರಾಮಕೃಷ್ಣ ಹೆಗಡ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ಶ್ರೀ ಬಾಲಾಜಿ ಕೃಪಾ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ವತಿಯಿ...

Sunday, September 7, 2025

PARYAYA: ಸತ್ಯನಾರಾಯಣ ಪೂಜೆ, ಗಣಪ ವಿಸರ್ಜನೆ

 ಸತ್ಯನಾರಾಯಣ ಪೂಜೆ, ಗಣಪ ವಿಸರ್ಜನೆ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರಿ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ ದೇವಸ್ಥಾನದಲ್ಲಿ ಮೂರು ದಿನಗಳಿಂದ ನಡೆದ ಸಾರ್ವಜನಿಕ ಗಣೇಶೋತ್ಸವ ೨೦೨೫ ಸೆಪ್ಟೆಂಬರ್‌ ೦೮ರ ಭಾನುವಾರ ಸಂಜೆ ಮುಕ್ತಾಯಗೊಂಡಿತು.


ಬೆಳಗ್ಗೆ  ಗಣಪತಿ ಉಪನಿಷತ್‌ ಸಹಿತ ಪೂಜೆ, ಶ್ರೀ ಸತ್ಯನಾರಾಯಣ ಪೂಜೆಯ ಬಳಿಕ ವಿಸರ್ಜನಾ ಪೂಜೆ ನಡೆಯಿತು.

ಕಂದಾಯ ಸಚಿವ ಹಾಗೂ ಬ್ಯಾಟರಾಯನಪುರ ಕ್ಷೇತ್ರದ ಶಾಸಕ ಶ್ರೀ ಕೃಷ್ಣ ಬೈರೇಗೌಡ, ಮಾಜಿ ಸಚಿವ‌ ಶ್ರೀ ಎಸ್.ಎನ್.‌ ಕೃಷ್ಣಯ್ಯ ಶೆಟ್ಟಿ ಅವರ ಪರವಾಗಿ ಶ್ರೀ ರಮೇಶ್‌,  ಜನತಾದಳ ನಾಯಕ ವೇಣುಗೋಪಾಲ್‌, ಕಾಂಗ್ರೆಸ್‌ ಯುವ ನಾಯಕ ಎಚ್.ಎ. ಶಿವಕುಮಾರ್‌, ವೇದಿಕೆ ಪ್ರಾಯೋಜಕ ಸಿರಾಜ್‌ ಪಾಲ್ಗೊಂಡಿದ್ದರು.


ಉತ್ಸವದ ಕೊನೆಯ ದಿನ ವಿವಿಧ ಆಟೋಟಗಳಲ್ಲಿ ವಿಜೇತರಾದ ಮಕ್ಕಳು, ಮಹಿಳೆಯರು ಮತ್ತು ಪುರುಷರಿಗೆ ಬಹುಮಾನಗಳನ್ನು ವಿತರಿಸಲಾಯಿತು.


ಸಂಜೆ ಬಡಾವಣೆಯ ಪ್ರಮುಖ ರಸ್ತೆಗಳಲ್ಲಿ ತಮಿಳ್ನಾಡಿನಿಂದ ಆಗಮಿಸಿದ ತಮಟೆ ತಂಡದ ತಮಟೆ ವಾದ್ಯದೊಂದಿಗೆ ಗಣಪತಿ ಶೋಭಾಯಾತ್ರೆ ನಡೆದು ರಾಚೇನಹಳ್ಳಿ ಕಲ್ಯಾಣಿಯಲ್ಲಿ ಗಣಪನ ವಿಸರ್ಜನೆ ಮಾಡಲಾಯಿತು.

ಈ ಸಂದರ್ಭದ ಕೆಲವು ಚಿತ್ರಗಳು ಹಾಗೂ ವಿಡಿಯೋಗಳು ಇಲ್ಲಿವೆ.




PARYAYA: ಸತ್ಯನಾರಾಯಣ ಪೂಜೆ, ಗಣಪ ವಿಸರ್ಜನೆ:   ಸತ್ಯನಾರಾಯಣ ಪೂಜೆ, ಗಣಪ ವಿಸರ್ಜನೆ ಬೆಂ ಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರಿ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ ದೇವಸ್ಥಾನದಲ್ಲಿ ಮೂರು ದಿನಗಳಿಂದ ನಡೆದ...

Saturday, September 6, 2025

PARYAYA: ತುಳಸಿ ಗಿಡ ವಿತರಣೆ, ಗಾನ ಗಣಪ ರಸ ಮಂಜರಿ

 ತುಳಸಿ ಗಿಡ ವಿತರಣೆ, ಗಾನ ಗಣಪ ರಸ ಮಂಜರಿ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಸಾರ್ವಜನಿಕ ಗಣೇಶೋತ್ಸವದ ಎರಡನೇ ದಿನದ ಕಾರ್ಯಕ್ರಮ ೨೦೨೫ ಸೆಪ್ಟೆಂಬರ್‌ ೬ರ ಶನಿವಾರ ನೆರವೇರಿತು.

ಕಾರ್ಯಕ್ರಮದಲ್ಲಿ ಬೆಳಗ್ಗೆ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದ ವತಿಯಿಂದ ʼಮನೆ ಮನೆಗೆ ತುಳಸಿಗಿಡʼ ಕಾರ್ಯಕ್ರಮದ ಅಂಗವಾಗಿ ದೇವಸ್ಥಾನದಲ್ಲಿ ಬಂದ ಭಕ್ತರಿಗೆ ತುಳಸಿ ಗಿಡಗಳನ್ನು ವಿತರಿಸಲಾಯಿತು.


ಮಧ್ಯಾಹ್ನ ಮಕ್ಕಳಿಗೆ ವಿವಿಧ ಆಟೋಟ ಸ್ಫರ್ಧೆಗಳು ನಡೆದವು. ಸಾಯಂಕಾರ ಸ್ವರ ಚಿರಂತನ ತಂಡದಿಂದ ಎಂಪಿಎಂ ವೀರೇಶ್‌ ಸಾರಥ್ಯದಲ್ಲಿ ಗಾನ ಗಣಪ ರಸಮಂಜರಿ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಕೆಲವು ಚಿತ್ರಗಳು ಹಾಗೂ ವಿಡಿಯೋಗಳು ಇಲ್ಲಿವೆ.




PARYAYA: ತುಳಸಿ ಗಿಡ ವಿತರಣೆ, ಗಾನ ಗಣಪ ರಸ ಮಂಜರಿ:   ತುಳಸಿ ಗಿಡ ವಿತರಣೆ, ಗಾನ ಗಣಪ ರಸ ಮಂಜರಿ ಬೆಂ ಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವ...

Friday, September 5, 2025

PARYAYA: ಹೆಗಡೆ ನಗರದಲ್ಲಿ ಗಣಪ ಸಂಭ್ರಮ

 ಹೆಗಡೆ ನಗರದಲ್ಲಿ ಗಣಪ ಸಂಭ್ರಮ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ೨೦೨೫ ಸೆಪ್ಟೆಂಬರ್‌ ೫ರ ಶುಕ್ರವಾರ ಗಣಪ ಸಂಭ್ರಮ.

ಬಡಾವಣೆಯ ೨೫ನೇ ವರ್ಷ ಹಾಗೂ ದೇವಸ್ಥಾನದ ೨ನೇ ವರ್ಷದ ಮೂರು ದಿನಗಳ ಗಣೇಶೋತ್ಸವ ಶುಕ್ರವಾರ ಆರಂಬವಾಯಿತು.


ಬೆಳಗ್ಗೆ ಗಣಪತಿ ಪ್ರತಿಷ್ಠಾಪನೆ ಮಂಗಳಾರತಿಯ ಬಳಿಕ ಭಕ್ತರಿಗೆ, ದೇವಸ್ಥಾನದಲ್ಲಿ ಇದೇ ಪ್ರಪ್ರಥಮ ಬಾರಿಗೆ ದೇವಾಲಯದಲ್ಲೇ ತಯಾರಿಸಿದ ಪ್ರಸಾದ ಸೇವೆಯ ವ್ಯವಸ್ಥೆ ಮಾಡಲಾಗಿತ್ತು. ಅಡುಗೆಗೆ ಬೇಕಾದ ಸಕಲ ಪರಿಕರಗಳನ್ನು ದೇವಸ್ಥಾನ ಸೇವಾಸಮಿತಿಯ ಅಧ್ಯಕ್ಷ ಶ್ರೀ ಚೌಡರೆಡ್ಡಿ ಅವರು ಕಾಣಿಕೆ ರೂಪದಲ್ಲಿ ಸಲ್ಲಿಸಿದ್ದರು. ಅಡುಗೆಗೆ ಬೇಕಾದ ಸುವಸ್ತುಗಳನ್ನು ಭಕ್ತರು ಕಾಣಿಕೆ ರೂಪದಲ್ಲಿ ಒದಗಿಸಿದ್ದರು.

ಮಧ್ಯಾಹ್ನದ ಬಳಿಕ ಮಹಿಳೆಯರಿಗೆ ವಿವಿಧ ಆಟೋಟಗಳನ್ನು ಏರ್ಪಡಿಸಲಾಗಿತ್ತು. ಸಂಜೆ ಕೇರಳದ ಚೆಂಡೆವಾದಕರಿಂದ ಕೇರಳ, ದಕ್ಷಿಣಕನ್ನಡದ ದೇವಸ್ಥಾನಗಳಲ್ಲಿ ನಡೆಯುವ ಪರಂಪರಾಗತ ಚೆಂಡೆ ವಾದನದ ಕಾರ್ಯಕ್ರಮ, ಬಡಾವಣೆಯ ನಿವಾಸಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಚೆಂಡೆ ವಾದಕರೊಂದಿಗೆ ಬಡಾವಣೆಯ ಪ್ರಮುಖ ರಸ್ತೆಗಳಲ್ಲಿ ಘೋಷಯಾತ್ರಾ ಕಾರ್ಯಕ್ರಮ ನಡೆಯಿತು.

ಬಡಾವಣೆಯ ಪುಟಾಣಿ ಸ್ಫೂರ್ತಿ ಹಾಗೂ ಪರಶಿವಮೂರ್ತಿ-ಮಾಧವಿ ದಂಪತಿಯ ಪುತ್ರ ಪ್ರತೀಕ್ಷಾ ಸುಂದರವಾದ ಭರತನಾಟ್ಯ ಪ್ರದರ್ಶನಗಳನ್ನು ನೀಡಿದರು. ಭಕ್ತರಿಂದ ಭಜನೆ ಕೂಡಾ ಜರುಗಿತು.

ಚೆಂಡೆವಾದನದೊಂದಿಗೆ ಮಹಾಪೂಜೆ- ಮಹಾಮಂಗಳಾರತಿಯ ಬಳಿಕ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.

ಈ ಸಂದರ್ಭದ ಕೆಲವು ಚಿತ್ರ ಹಾಗೂ ವಿಡಿಯೋಗಳು ಇಲ್ಲಿವೆ.







PARYAYA: ಹೆಗಡೆ ನಗರದಲ್ಲಿ ಗಣಪ ಸಂಭ್ರಮ:   ಹೆಗಡೆ ನಗರದಲ್ಲಿ ಗಣಪ ಸಂಭ್ರಮ ಬೆಂ ಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ೨೦೨೫ ಸೆಪ್ಟೆಂಬರ್‌ ...

Wednesday, September 3, 2025

PARYAYA: ಗಣೇಶ ಉತ್ಸವ 2025 ಸಿದ್ಧತೆ, ಶ್ರಮದಾನ

 ಗಣೇಶ ಉತ್ಸವ 2025 ಸಿದ್ಧತೆಶ್ರಮದಾನ 

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿವೆಂಕಟೇಶ್ವರಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ 2025 ಸಾಲಿನ ಗಣೇಶ ಉತ್ಸವದ ಪೂರ್ವಭಾವಿಯಾಗಿ 2025 ಸೆಪ್ಟೆಂಬರ್‌ 3 ಬುಧವಾರ ಭಕ್ತರು ಶ್ರಮದಾನ ನೆರವೇರಿಸಿದರು.

  ಬಾರಿಯ ಗಣೇಶ ಉತ್ಸವವು ದೇವಸ್ಥಾನದ ಎರಡನೇ ಉತ್ಸವವಾಗಿದ್ದುಬಡಾವಣೆಯ ರಜತವರ್ಷದ ಉತ್ಸವವಾಗಿದೆ.

 ಗಣೇಶ ಉತ್ಸವವು ಸೆಪ್ಟೆಂಬರ್‌ ೫ರಿಂದ ೭ರವರೆಗೆ ನಡೆಯಲಿದೆ. ಶ್ರಮದಾನ ಸಂದರ್ಭದ ವಿಡಿಯೋ ಇಲ್ಲಿದೆ



PARYAYA: ಗಣೇಶ ಉತ್ಸವ 2025 ಸಿದ್ಧತೆ, ಶ್ರಮದಾನ:   ಗಣೇಶ ಉತ್ಸವ 2025 ಸಿದ್ಧತೆ , ಶ್ರಮದಾನ   ಬೆಂ ಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ , ವೆಂಕಟೇಶ್ವರ ,...

Friday, January 10, 2025

PARYAYA: ವೈಕುಂಠ ಏಕಾದಶಿ ಮಹೋತ್ಸವ

 ವೈಕುಂಠ ಏಕಾದಶಿ ಮಹೋತ್ಸವ



ದೇಶಾದ್ಯಂತ ೨೦೨೫ ಜನವರಿ ೧೦ರ ಶುಕ್ರವಾರದ ಈದಿನ ಸಡಗರೋತ್ಸಾದೊಂದಿಗೆ ವೈಕುಂಠ ಏಕಾದಶಿ ಮಹೋತ್ಸವವನ್ನು ಭಕ್ತರು ಆಚರಿಸಿದರು. ಈ ಸಂದರ್ಭದಲ್ಲಿ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನಡೆದರು.

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಮಹಾಗಣಪತಿಶ್ರೀ ವೆಂಕಟೇಶ್ವರಶ್ರೀ ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಮಹೋತ್ಸವವನ್ನು ಶ್ರದ್ಧಾ ಭಕ್ತಿಗಳೊಂದಿಗೆ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಎಲ್ಲ ದೇವತಾ ವಿಗ್ರಹದೇವಸ್ಥಾನಕ್ಕೆ ವಿಶೇಷ ಅಲಂಕಾರ ಮಾಡಲಾಗಿತ್ತು. ಭಕ್ತರು ಉತ್ಸಾಹದಿಂದ ಪಾಲ್ಗೊಂಡಿದ್ದರು.

ಬಡಾವಣೆಯ ನಿರ್ಮಾಪಕ
ಶ್ರೀ ಬಾಲಾಜಿ ಮಹಾಗಣಪತಿ ದೇವಸ್ಥಾನ ಸಮಿತಿಯ ಗೌರವಾಧ್ಯಕ್ಷ ಶ್ರೀ ಎಸ್.ಎನ್.‌ ಕೃಷ್ಣಯ್ಯ ಶೆಟ್ಟಿ ಅವರು ವಿಶೇಷ ಲಾಡು ಪ್ರಸಾದದ ವ್ಯವಸ್ಥೆ ಮಾಡಿದ್ದರು.

ಈ ಸಂದರ್ಭದ ಕೆಲವು ಚಿತ್ರಗಳು ಮತ್ತು ವಿಡಿಯೋ ಇಲ್ಲಿದೆ.



ಚಿತ್ರಗಳ ಸಮೀಪ ನೋಟಕ್ಕೆ ಅವುಗಳನ್ನು ಕ್ಲಿಕ್‌ ಮಾಡಿರಿ.










ವಿಡಿಯೋ ನೋಡಲು ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ.


PARYAYA: ವೈಕುಂಠ ಏಕಾದಶಿ ಮಹೋತ್ಸವ:   ವೈಕುಂಠ ಏಕಾದಶಿ ಮಹೋತ್ಸವ ದೇಶಾದ್ಯಂತ ೨೦೨೫ ಜನವರಿ ೧೦ರ ಶುಕ್ರವಾರ ದ ಈದಿನ ಸಡಗರೋತ್ಸಾದೊಂದಿಗೆ ವೈಕುಂಠ ಏಕಾದಶಿ ಮಹೋತ್ಸವವನ್ನು ಭಕ್ತರು ಆಚರಿಸಿದರು. ಈ ಸಂದರ್ಭದಲ್...

Thursday, November 28, 2024

PARYAYA: ಬಡಾವಣೆ ಮಲಿನಕಾರಿಗಳ ವಿರುದ್ಧ ಮಿಂಚಿನ ಕಾರ್ಯಾಚರಣೆ

 ಬಡಾವಣೆ ಮಲಿನಕಾರಿಗಳ ವಿರುದ್ಧ ಮಿಂಚಿನ ಕಾರ್ಯಾಚರಣೆ

ಬೆಂಗಳೂರು: ನಸುಕಿನಲ್ಲಿ ಬಂದು ಮುಖ್ಯ ರಸ್ತೆಯಲ್ಲಿ ಕಸ ಬಿಸಾಡಿ ಬಡಾವಣೆಯನ್ನು ಮಲಿನಗೊಳಿಸುತ್ತಿದ್ದ ವ್ಯಕ್ತಿಗಳ ವಿರುದ್ಧ ಈದಿನ (೨೮.೧೧.೨೦೨೪ ಗುರುವಾರ) ಮಿಂಚಿನ ಕಾರ್ಯಾಚರಣೆ ನಡೆಸಿದ ಬಡಾವಣೆ ನಿವಾಸಿಗಳು ಹಲವರನ್ನು ಪತ್ತೆ ಹಚ್ಚಿ ಝಾಡಿಸಿದ ಘಟನೆ ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ನಡೆದಿದೆ.

ಪ್ರತಿನಿತ್ಯ ಬಡಾವಣೆಯಲ್ಲಿ ಸಂಚರಿಸುವ ಬಿಬಿಎಂಪಿ ಕಸದ ಗಾಡಿಗೆ ಕಸವನ್ನು ಕೊಡದೇ ಬೆಳ್ಳಂ ಬೆಳಗಿನ ಹೊತ್ತಿನಲ್ಲಿ ಇಲ್ಲವೇ ನಡುರಾತ್ರಿಯ ರಾತ್ರಿಯ ವೇಳೆಯಲ್ಲಿ ಬಡಾವಣೆಯ ಮುಖ್ಯ ರಸ್ತೆಯಲ್ಲೇ ಕಸ ಎಸೆಯುತ್ತಿದ್ದ ಇಂತಹ ವ್ಯಕ್ತಿಗಳಿಗೆ ಬಿಬಿಎಂಪಿ ಮಾರ್ಷಲ್‌ ಗಳೂ ಝಾಡಿಸಿ ದಂಡ ವಸೂಲು ಮಾಡಿದ್ದಾರೆ.

ಕೆಲವು ವ್ಯಕ್ತಿಗಳು ಸ್ಕೂಟರಿನಲ್ಲಿ, ರಿಕ್ಷಾದಲ್ಲಿ ಅಕ್ಕ ಪಕ್ಕದ ಬಡಾವಣೆಗಳಿಂದ ಬಂದು ಕಸ ಎಸೆಯುತ್ತಿದ್ದ್ದುದೂ ಪತ್ತೆಯಾಗಿದ್ದು ಅವರನ್ನು ಕೂಡಾ ಬಡಾವಣೆಯ ನಿವಾಸಿಗಳು ಹಿಡಿದು ಝಾಡಿಸಿದರು.

ದಿನದ ಹಿಂದೆ ಕಸ ಎಸೆಯುತ್ತಿದ್ದ ಇಬ್ಬರು ವ್ಯಕ್ತಿಗಳು ತಮ್ಮನ್ನು ಪ್ರಶ್ನಿಸಿದ ಬಡಾವಣೆಯ ಪ್ರಜ್ಞಾವಂತ ನಿವಾಸಿಯೊಬ್ಬರ ಮೇಲೆ ಹಲ್ಲೆ ನಡೆಸಲು ಯತ್ನಿಸಿದ ಘಟನೆ ಬಳಿಕ ಬಡಾವಣೆಯ ನಿವಾಸಿಗಳು, ಬಡಾವಣೆಯ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳ ಜೊತೆಗೂಡಿ ಮಿಂಚಿನ ಕಾರ್ಯಾಚರಣೆ ನಡೆಸಿದರು.

ತನ್ನನ್ನು ಪ್ರಶ್ನಿಸಿದ ಪ್ರಜ್ಞಾವಂತ ನಿವಾಸಿಯ ಕೈಯಿಂದ ಮೊಬೈಲ್‌ ಕಿತ್ತುಕೊಳ್ಳಲು ಯತ್ನಿಸಿದ ವ್ಯಕ್ತಿಯನ್ನು ಕೂಡಾ ಗುರುತು ಹಿಡಿದ ಮಾರ್ಷಲ್‌ ಗಳು ಆತನಿಗೂ ದಂಡ ವಿಧಿಸುವಲ್ಲಿ ಯಶಸ್ವಿಯಾಗಿದ್ದಾರೆ.  

ವಿಡಿಯೊ ನೋಡಲು ಮೊದಲ ಚಿತ್ರ ಕ್ಲಿಕ್‌ ಮಾಡಿರಿ.

PARYAYA: ಬಡಾವಣೆ ಮಲಿನಕಾರಿಗಳ ವಿರುದ್ಧ ಮಿಂಚಿನ ಕಾರ್ಯಾಚರಣೆ:   ಬಡಾವಣೆ ಮಲಿನಕಾರಿಗಳ ವಿರುದ್ಧ ಮಿಂಚಿನ ಕಾರ್ಯಾಚರಣೆ ಬೆಂ ಗಳೂರು: ನಸುಕಿನಲ್ಲಿ ಬಂದು ಮುಖ್ಯ ರಸ್ತೆಯಲ್ಲಿ ಕಸ ಬಿಸಾಡಿ ಬಡಾವಣೆಯನ್ನು ಮಲಿನಗೊಳಿಸುತ್ತಿದ್ದ ವ್ಯಕ್ತಿಗ...

Thursday, November 21, 2024

PARYAYA: ಜನ್ಮದಿನವನ್ನು ಹೀಗೂ ಆಚರಿಸಬಹುದು

ಜನ್ಮದಿನವನ್ನು ಹೀಗೂ ಆಚರಿಸಬಹುದು


ಬೆಂ
ಗಳೂರು: ಮಕ್ಕಳ ಜನ್ಮದಿನವನ್ನು ಹೀಗೂ 
ಆಚರಿಸಬಹುದು. 
ಬೆಂಗಳೂರಿನ ರಾಮಕೃಷ್ಣ ಹೆಗಡೆ ನಗರದ
ಶ್ರೀ ಬಾಲಾಜಿ ಕೃಪಾಬಡಾವಣೆಯ
ಶ್ರೀ ಬಾಲಾಜಿ ಮಹಾಗಣಪತಿ ದೇವಸ್ಥಾನದಲ್ಲಿ
 
ಬಾಲಕ ಮೌಲ್ವಿತ್‌
ಜನ್ಮದಿನಾಚರಣೆಯನ್ನು ಆಚರಿಸಿದ ಬಗೆ ಇದು.

ವಿಡಿಯೋ ನೋಡಲು ಈ ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ:

PARYAYA: ಜನ್ಮದಿನವನ್ನು ಹೀಗೂ ಆಚರಿಸಬಹುದು: ಜನ್ಮದಿನವನ್ನು   ಹೀಗೂ   ಆಚರಿಸಬಹುದು ಬೆಂ ಗಳೂರು:   ಮಕ್ಕಳ   ಜನ್ಮದಿನವನ್ನು   ಹೀಗೂ   ಆಚರಿಸಬಹುದು.   ಬೆಂಗಳೂರಿನ   ರಾಮಕೃಷ್ಣ   ಹೆಗಡೆ   ನಗರದ ಶ್ರೀ   ಬಾಲಾಜ...

Friday, November 1, 2024

PARYAYA: ಕನ್ನಡ ರಾಜ್ಯೋತ್ಸವ (Kannada Rajyotsava)

ಕನ್ನಡ ರಾಜ್ಯೋತ್ಸವ

ಬೆಂಗಳೂರು: ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ೨೦೨೪ ನವೆಂಬರ್‌ ೦೧ರ ಶುಕ್ರವಾರ ಸರಳವಾಗಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.
ಶ್ರೀ ಬಾಲಾಜಿ ಕೃಪಾ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ನಡೆದ ಸಮಾರಂಭದಲ್ಲಿ ಲೋಕೋಪಯೋಗಿ ಇಲಾಖೆಯ ನಿವೃತ್ತ ಅಧೀಕ್ಷಕ ಶ್ರೀ ದೇವೇಗೌಡ ಅವರು ಧ್ವಜಾರೋಹಣ ನೆರವೇರಿಸಿದರು. ಸಂಘದ ಹಿರಿಯ ಸದಸ್ಯ ಶ್ರೀ ಎಚ್.ವಿ. ಉದಯಶಂಕರ್‌ ತಾಯಿ ಭುವನೇಶ್ವರಿಗೆ ಪೂಜೆ ಸಲ್ಲಿಸಿದರು.
ಸಂಘದ ಖಜಾಂಚಿ ಶ್ರೀ ಶ್ರೀನಿವಾಸುಲು ನಾಯ್ಡು ಅವರು ಮುಖ್ಯ ಅತಿಥಿ ದೇವೇಗೌಡ ಅವರನ್ನು ಸನ್ಮಾನಿಸಿದರು. ಸಂಘದ ಕಾರ್ಯದರ್ಶಿ ಶ್ರೀ ನೆತ್ರಕೆರೆ ಉದಯಶಂಕರ ನಾರಾಯಣ ಭಟ್‌ ಅಧ್ಯಕ್ಷತೆ ವಹಿಸಿದ್ದರು.
ಬಡಾವಣೆಯ ಹಿರಿಯ ಸದಸ್ಯ ಶ್ರೀ ಮುನಿರಾಜು ಅವರು ಸಿಹಿ ವಿತರಣೆಯ ವ್ಯವಸ್ಥೆ ಮಾಡಿದರು. ಸಹ ಕಾರ್ಯದರ್ಶಿ ಶ್ರೀ ರಾಘವೇಂದ್ರ ಕಾಮತ್‌, ಸಂಘದ ಹಿರಿಯ ಸದಸ್ಯ ಶಿವಪ್ಪ ಶಾಂತಪ್ಪನವರ್‌, ಶ್ರೀ ಸುಗುಣನ್‌, ಹಂಪಣ್ಣ ಮತ್ತಿತರರು ಸಮಾರಂಭ ಸಂಘಟಿಸುವಲ್ಲಿ ಸಹಕರಿಸಿದರು.
ಸಂಘದ ಸಂಘಟನಾ ಕಾರ್ಯದರ್ಶಿ  ಶ್ರೀಮತಿ ಬಿ.ಎಲ್.‌ ಪ್ರಭಾವತಿ ಕಾರ್ಯಕ್ರಮ ನಿರ್ವಹಿಸಿದರು. 

ಕಾರ್ಯಕ್ರಮದ ಪುಟ್ಟ ವಿಡಿಯೋ ಇಲ್ಲಿದೆ👇:

ಕಾರ್ಯಕ್ರಮದ ಕೆಲವು ದೃಶ್ಯಗಳು. paryaya5-YouTube ನಲ್ಲಿ ನೋಡಲು ಇಲ್ಲಿ ಕ್ಲಿಕ್‌ ಮಾಡಿರಿ: https://www.youtube.com/watch?v=h-M9K7A4Xb4


 ತಾಯಿ ಭುವನೇಶ್ವರಿಗೆ ಪೂಜೆ


                                                              ಮುಖ್ಯ ಅತಿಥಿ ದೇವೇಗೌಡರಿಗೆ ಸನ್ಮಾನ




PARYAYA: ಕನ್ನಡ ರಾಜ್ಯೋತ್ಸವ (Kannada Rajyotsava): ಕನ್ನಡ ರಾಜ್ಯೋತ್ಸವ ಬೆಂ ಗಳೂರು: ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ೨೦೨೪ ನವೆಂಬರ್‌ ೦೧ರ ಶುಕ್ರವಾರ ಸರಳವಾಗಿ ಕನ್ನಡ ರಾಜ್ಯೋತ್ಸವವನ್...

Wednesday, September 18, 2024

PARYAYA: ಗಣೇಶೋತ್ಸವ ೨೦೨೪: ಭರತನಾಟ್ಯ

 ಗಣೇಶೋತ್ಸವ ೨೦೨೪: ಭರತನಾಟ್ಯ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ ದೇವಸ್ಥಾನದ ಆವರಣದಲ್ಲಿ ೨೦೨೪ ಸೆಪ್ಟೆಂಬರ್‌ ೧೩೧೪ ಮತ್ತು ೧೫ರಂದು ಗಣೇಶೋತ್ಸವ ಕಾರ್ಯಕ್ರಮ ಸಡಗರದೊಂದಿಗೆ ನಡೆಯಿತು.  ಸಂದರ್ಭದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವುಮೈಸೂರಿನ ವಿದುಷಿ ಶ್ರೀಮತಿ ಮಧುರಾ ಕಾರಂತ್‌ ಅವರು ತಮ್ಮ ಭರತನಾಟ್ಯದ ಮೂಲಕ ಪ್ರೇಕ್ಷಕರ ಮನ ಗೆದ್ದರು. ಮಧುರಾ ಅವರ ಭರತನಾಟ್ಯದ ಒಂದು ದೃಶ್ಯ ಇಲ್ಲಿದೆ:
Click here to view Video- ವಿಡಿಯೋ ನೋಡಲು ಕೆಳಗೆ ಕ್ಲಿಕ್‌ ಮಾಡಿರಿ:


PARYAYA: ಗಣೇಶೋತ್ಸವ ೨೦೨೪: ಭರತನಾಟ್ಯ:   ಗಣೇಶೋತ್ಸವ ೨೦೨೪: ಭರತನಾಟ್ಯ ಬೆಂ ಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ ದೇವಸ್ಥಾನದ ಆವರಣದಲ್ಲಿ ೨೦೨೪...