Sunday, January 26, 2025

PARYAYA: ಗಣರಾಜ್ಯೋತ್ಸವ ಸಂಭ್ರಮ-೨೦೨೫

ಗಣರಾಜ್ಯೋತ್ಸವ ಸಂಭ್ರಮ-೨೦೨೫

ಭಾರತದಾದ್ಯಂತ ಜನವರಿ ೨೬ರ ಈದಿನ ೭೬ನೇ ಗಣರಾಜ್ಯೋತ್ಸವವನ್ನು ಸಂಭ್ರಮಾಚರಣೆಯೊಂದಿಗೆ ಆಚರಿಸಲಾಯಿತು.

ಬೆಂಗಳೂರಿನ ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲೂ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.

ಕವಿ, ಬರಹಗಾರ, ಸಮಾಜ ಸೇವಕ ಸ್ಟೀಫನ್‌ ಜೋಸೆಫ್‌ ಅವರು ಧ್ವಜಾರೋಹಣ ನೆರವೇರಿಸಿ ದೇಶದ ಬಗ್ಗೆ ತಾವೇ ರಚಿಸಿದ ಕವನವನ್ನು ವಾಚಿಸಿದರು. ಪುಟ್ಟ ಮಕ್ಕಳು ದೇಶಭಕ್ತಿ ಗೀತೆಯನ್ನು ಹಾಡಿದರು.

ಸಂಘದ ಅಧ್ಯಕ್ಷ ರಾಜೇಶ ಕಮಲಾಕರ ಹೆಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ನೆತ್ರಕೆರೆ ಉದಯಶಂಕರ ಭಟ್‌ ಕಾರ್ಯಕ್ರಮ ನಿರ್ವಹಿಸಿದರು.

ಈ ಸಂದರ್ಭದ ಕೆಲವು ಚಿತ್ರಗಳು ಇಲ್ಲಿವೆ.  ಸಮೀಪ ನೋಟಕ್ಕೆ ಚಿತ್ರಗಳನ್ನು ಕ್ಲಿಕ್‌ ಮಾಡಿರಿ.




ನೆತ್ರಕೆರೆ ಉದಯಶಂಕರ ಭಟ್‌
 ಕಾರ್ಯಕ್ರಮ ನಿರ್ವಹಣೆ.


ಸ್ಟೀಫನ್‌ ಜೋಸೆಫ್‌ ಮುಖ್ಯ ಅತಿಥಿ.
                                                                                                    ರಾಜೇಶ ಕಮಲಾಕರ ಹೆಗಡೆ ಅಧ್ಯಕ್ಷ ಭಾಷಣ.

ಹಾಗೆಯೇ ರಾಷ್ಟ್ರಮಟ್ಟದಲ್ಲಿ ನಡೆದ ಗಣರಾಜ್ಯೋತ್ಸವದ ಸಂಭ್ರಮವನ್ನು ವೀಕ್ಷಿಸಲು ಕೆಳಗಿನ ಚಿತ್ರವನ್ನು ಕ್ಲಿಕ್‌ ಮಾಡಿರಿ. 


PARYAYA: ಗಣರಾಜ್ಯೋತ್ಸವ ಸಂಭ್ರಮ-೨೦೨೫: ಗಣರಾಜ್ಯೋತ್ಸವ ಸಂಭ್ರಮ-೨೦೨೫ ಭಾ ರತದಾದ್ಯಂತ ಜನವರಿ ೨೬ರ ಈದಿನ ೭೬ನೇ ಗಣರಾಜ್ಯೋತ್ಸವವನ್ನು ಸಂಭ್ರಮಾಚರಣೆಯೊಂದಿಗೆ ಆಚರಿಸಲಾಯಿತು. ಬೆಂಗಳೂರಿನ ರಾಮಕೃಷ್ಣ ಹೆಗಡೆ ನಗರದ ಶ್...

Tuesday, January 14, 2025

PARYAYA: ನಾಗರ ʼಹೊಳೆʼಯಲ್ಲಿ ಹಿಮ-ಚಳಿ ಮೇಳ!

 ನಾಗರ ʼಹೊಳೆʼಯಲ್ಲಿ ಹಿಮ-ಚಳಿ ಮೇಳ!

ಇದು ಸುವರ್ಣ ನೋಟ!

ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ತ್ರಿವೇಣಿ ಸಂಗಮ ಸ್ಥಳವಾದ ಪ್ರಯಾಗರಾಜ್‌ ಮಹಾ ಕುಂಭಮೇಳದ ಭಕ್ತರಿಂದ ಮೈ ನಡುಗುವ ಚಳಿಯಲ್ಲೂ ಗಿಜಿಗಿಡುತ್ತಿದೆ. ಯಾವ ಚಳಿಯನ್ನೂ ಲೆಕ್ಕಿಸದೆ ಭಕ್ತರು ತ್ರಿವೇಣಿ ಸಂಗಮದಲ್ಲಿ ಮಿಂದು ಪುನೀತರಾಗುತ್ತಿದ್ದಾರೆ.

ಈ ಭವ್ಯ ಮೇಳದ ಸಂಭ್ರಮದ ಚಿತ್ರಗಳು, ವಿಡಿಯೋಗಳು ಯೂ ಟ್ಯೂಬ್‌, ಪತ್ರಿಕೆ, ಟಿವಿ ಚಾನೆಲ್‌ ಗಳಲ್ಲಿ ರಾರಾಜಿಸುತ್ತಿವೆ    ಮೇಳದ ಭವ್ಯತೆಯ ಕ್ಷಣಗಳ ಚಿತ್ರವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಎಕ್ಸ್‌ (ಹಿಂದಿನ ಟ್ವಿಟ್ಟರ್)‌ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಚಳಿಯಲ್ಲಿ ಗಢಗಢ ನಡುಗುವ ಈ ಹೊತ್ತಿನಲ್ಲಿ ʼಹೊಳೆ – ನದಿʼಗಳಲ್ಲಿ ಮುಳುಗೇಳುವ ಭಕ್ತರ ಸಂಭ್ರಮದ ಹೊತ್ತಿನಲ್ಲಿ, ʼನಾಗರ ಹೊಳೆʼ ಹೇಗಿರುತ್ತದೋ ಏನೋ ಎಂದು ನೋಡುವ ಇಚ್ಛೆಯಾಯಿತು ಹಿರಿಯ ಛಾಯಾಗ್ರಾಹಕ ವಿಶ್ವನಾಥ ಸುವರ್ಣ ಅವರಿಗೆ.

ಯೋಚನೆ ಬಂದ ಬಳಿಕ ಸುಮ್ಮನೇ ಕೂರುವ ಜಾಯಮಾನ ಅವರದಲ್ಲ. ಹೆಗಲಿಗೆ ಕ್ಯಾಮರಾ ಏರಿಸಿ ಹೊರಟೇ ಬಿಟ್ಟರು ಸುವರ್ಣ ʼನಾಗರಹೊಳೆʼಗೆ. ನಾಗರ ಹೊಳೆಯ ಈ ಪಯಣ ʼಮಂಜು ಮುಸುಕಿದ ಹಾದಿʼಯಾಗಿತ್ತು.



ʼನಾಗರ ಹೊಳೆʼಯಲ್ಲಿ ಚಳಿಗಾಲದ ಸಂಭ್ರಮ ಹೇಗಿತ್ತು ಎಂಬುದು ಸುವರ್ಣ ಅವರ ಕ್ಯಾಮರಾದಲ್ಲಿ ಸೆರೆಯಾಯಿತು. ಅದನ್ನು ನೋಡುವ ಅವಕಾಶ ಇಲ್ಲಿದೆ. ಚಿತ್ರಗಳ ಸಮೀಪ ನೋಟಕ್ಕೆ ಚಿತ್ರಗಳನ್ನು ಕ್ಲಿಕ್‌ ಮಾಡಿ.

ಬಿಂಬ-ಪ್ರತಿಬಿಂಬ!
ಹಿಮಾಲಯವಲ್ಲ, ಹಿಮದ ನಾಗರ ಹೊಳೆ!
ಮುಸುಕಿದೀ ಮಬ್ಬಿನಲಿ...
    ಹೊಟ್ಟೆ ತಾಳ ಹಾಕದಿರುತ್ತದೆಯೇ..?

-ನೆತ್ರಕೆರೆ ಉದಯಶಂಕರ

ಕೆಳಗಿನವುಗಳನ್ನೂ ಓದಿರಿ: 

ಪಕ್ಷಿ ಕಂಡರೆ ಸಾಕು… ʼಶೂಟ್‌ʼ…! ಇದು ʼಸುವರ್ಣ ನೋಟʼ

೨೦೨೪ರ ಕೊನೆಯ ಸೂರ್ಯಾಸ್ತಮಾನ... ʼಸುವರ್ಣʼ ನೋಟ..!

ಹಿಂಗಾರು ಮಳೆಗೆ ತೊಯ್ದ ವಿಧಾನಸೌಧ.. ಸುವರ್ಣ ನೋಟ

ಈ ಹಕ್ಕಿ ಕೊಕ್ಕಿನ ಬಣ್ಣ ಬದಲಾಯಿಸುತ್ತದೆ..!

ಎಲ್ಲಿ ಮಾರಾಯರೇ ಈ ಆಟ? ಇದು ಸುವರ್ಣ ನೋಟ

ಗಗನಗಾಮಿ ಕೃಷ್ಣಮೃಗ..! (ಇದು ಸುವರ್ಣ ನೋಟ)

ಬೆಂಗಳೂರಿನ ಭೂ ಮಾಫಿಯಾ- ಭ್ರಷ್ಟಾಚಾರದ ಚಕ್ರವ್ಯೂಹ

(ಮೇಲಿನ ಚಿತ್ರ ಕ್ಲಿಕ್‌ ಮಾಡಿ ನೋಡಿ. ಕೇವಲ ರೂ. 350/- ಪಾವತಿಸಿ ಈ👆 ಡಿಜಿಟಲ್‌ ಪುಸ್ತಕ ಪಡೆಯಿರಿ. ಸಂಪರ್ಕಿಸಿ: 9480215706/ 9845049970)

PARYAYA: ನಾಗರ ʼಹೊಳೆʼಯಲ್ಲಿ ಹಿಮ-ಚಳಿ ಮೇಳ!:   ನಾಗರ ʼ ಹೊಳೆ ʼ ಯಲ್ಲಿ ಹಿಮ-ಚಳಿ ಮೇಳ! ಇದು ಸುವರ್ಣ ನೋಟ! ಗಂ ಗಾ, ಯಮುನಾ ಮತ್ತು ಸರಸ್ವತಿ ನದಿಗಳ ತ್ರಿವೇಣಿ ಸಂಗಮ ಸ್ಥಳವಾದ ಪ್ರಯಾಗರಾಜ್‌ ಮಹಾ ಕುಂಭಮೇಳದ ಭಕ್ತರಿಂ...

Monday, January 13, 2025

PARYAYA: 10ನೇ ಸತ್ಯನಾರಾಯಣ ಪೂಜೆ

 10ನೇ  ಸತ್ಯನಾರಾಯಣ ಪೂಜೆ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ
ಶ್ರೀ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ
೨೦೨೫ ಜನವರಿ೧೩ರ ಸೋಮವಾರ ೧೦ನೇ
ಶ್ರೀ ಸತ್ಯನಾರಾಯಣ ಪೂಜೆಯನ್ನು ಶ್ರದ್ಧಾ ಭಕ್ತಿಗಳೊಂದಿಗೆ
ನೆರವೇರಿಸಲಾಯಿತು.

ಈ ಸಂದರ್ಭದ ಕೆಲವು ಚಿತ್ರಗಳು, ವಿಡಿಯೋ ಇಲ್ಲಿದೆ.

ಸಮೀಪ ನೋಟಕ್ಕೆ ಚಿತ್ರಗಳನ್ನು ಕ್ಲಿಕ್‌ ಮಾಡಿರಿ.






ವಿಡಿಯೋ ನೋಡಲು ಕೆಳಗಿನ ಚಿತ್ರ ಕ್ಲಿಕ್‌ ಮಾಡಿ.
PARYAYA: 10ನೇ ಸತ್ಯನಾರಾಯಣ ಪೂಜೆ:  10 ನೇ  ಸತ್ಯನಾರಾಯಣ ಪೂಜೆ ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ೨...

Sunday, January 12, 2025

PARYAYA: ಲಾಸ್‌ ಏಂಜೆಲಿಸ್‌: ಬೆಂಕಿ ಬಿರುಗಾಳಿ

 ಲಾಸ್‌ ಏಂಜೆಲಿಸ್‌: ಬೆಂಕಿ-ಬಿರುಗಾಳಿ

ಮೆರಿಕದ ಕ್ಯಾಲಿಫೋರ್ನಿಯಾ ಪ್ರಾಂತ್ಯದ ಲಾಸ್‌ ಏಂಜೆಲಿಸ್‌ನಲ್ಲಿ ೨೦೨೫ರ ಆರಂಭದ ವಾರದಲ್ಲೇ ಭಾರೀ ದಾವಾನಲ ಧಗ ಧಗಿಸುತ್ತಿದ್ದು ಅದಕ್ಕೆ ಗಾಳಿಯೂ ಇಂಬು ನೀಡಿದೆ. 

ಸುಮಾರು ೨೬,೦೦೦ ಕಿ.ಮೀ.ಗೂ ಹೆಚ್ಚು ಪ್ರದೇಶದಲ್ಲಿ ಬೆಂಕಿ ವ್ಯಾಪಿಸಿದ್ದು, ೮೦ ಕಿಮೀ ವೇಗದಲ್ಲಿ ಬೀಸುತ್ತಿರುವ ಗಾಳಿ ಇಡೀ ಪ್ರದೇಶದಲ್ಲಿ ʼಬೆಂಕಿ-ಬಿರುಗಾಳಿʼಯನ್ನು ಸೃಷ್ಟಿಸಿದೆ. 

ಸುಮಾರು ಆರು ದಿನಗಳಿಂದ ಹರಡುತ್ತಿರುವ ಬೆಂಕಿ-ಬಿರುಗಾಳಿಯನ್ನು ಶಮನಗೊಳಿಸಲು ಸಮುದ್ರದಿಂದ ಹೆಲಿಕಾಪ್ಟರುಗಳಲ್ಲಿ ನೀರು ತಂದು ಸುರಿಯಲಾಗುತ್ತಿದೆ. ಆದರೂ ಬೆಂಕಿ ನಿಯಂತ್ರಣಕ್ಕೆ ಬರುತ್ತಿಲ್ಲ.


ಸುಮಾರು ೨೬,೦೦೦ ಕಟ್ಟಡಗಳನ್ನು ಅಗ್ನಿ ಆಹುತಿ ಪಡೆದಿದ್ದು, ೨೪ ಮಂದಿ ಸುಟ್ಟು ಕರಕಲಾಗಿರುವುದು ದೃಢ ಪಟ್ಟಿದೆ.

ಸುಮಾರು ೧೫೦ ಬಿಲಿಯನ್‌ ಡಾಲರ್‌ ನಷ್ಟು ನಷ್ಟ ಸಂಭವಿಸಿದೆ. ಸಹಸ್ರಾರು ಮಂದಿ ನಿರಾಶ್ರಿತರಾಗಿದ್ದಾರೆ. 

ಅಮೆರಿಕದ ಇತಿಹಾಸದಲ್ಲೇ ಇದು ಅತಿ ಭೀಕರ ಕಾಳ್ಗಿಚ್ಚು ದುರಂತ ಎಂದು ಕ್ಯಾಲಿಫೋರ್ನಿಯಾ ಗವರ್ನರ್‌  ಗವಿನ್‌ ನ್ಯೂಸಮ್‌ ಹೇಳಿದ್ದಾರೆ.
ದುರಂತದ ಅಗಾಧತೆ,  ಶಮನ ಕಾರ್ಯಾಚರಣೆಯನ್ನು ಮೇಲಿನ ವಿಡಿಯೋದಲ್ಲಿ ನೋಡಿ.

ಬೆಂಗಳೂರಿನ ಭೂ ಮಾಫಿಯಾ- ಭ್ರಷ್ಟಾಚಾರದ ಚಕ್ರವ್ಯೂಹ

(ಮೇಲಿನ ಚಿತ್ರ ಕ್ಲಿಕ್‌ ಮಾಡಿ ನೋಡಿ. ಕೇವಲ ರೂ. 350/- ಪಾವತಿಸಿ ಈ👆 ಡಿಜಿಟಲ್‌ ಪುಸ್ತಕ ಪಡೆಯಿರಿ. ಸಂಪರ್ಕಿಸಿ: 9480215706/ 9845049970)

PARYAYA: ಲಾಸ್‌ ಏಂಜೆಲಿಸ್‌: ಬೆಂಕಿ ಬಿರುಗಾಳಿ:   ಲಾಸ್‌ ಏಂಜೆಲಿಸ್‌: ಬೆಂಕಿ-ಬಿರುಗಾಳಿ ಅ ಮೆರಿಕದ ಕ್ಯಾಲಿಫೋರ್ನಿಯಾ ಪ್ರಾಂತ್ಯದ ಲಾಸ್‌ ಏಂಜೆಲಿಸ್‌ನಲ್ಲಿ ೨೦೨೫ರ ಆರಂಭದ ವಾರದಲ್ಲೇ ಭಾರೀ ದಾವಾನಲ ಧಗ ಧಗಿಸುತ್ತಿದ್ದು ಅ...

Friday, January 10, 2025

PARYAYA: ವೈಕುಂಠ ಏಕಾದಶಿ ಮಹೋತ್ಸವ

 ವೈಕುಂಠ ಏಕಾದಶಿ ಮಹೋತ್ಸವ



ದೇಶಾದ್ಯಂತ ೨೦೨೫ ಜನವರಿ ೧೦ರ ಶುಕ್ರವಾರದ ಈದಿನ ಸಡಗರೋತ್ಸಾದೊಂದಿಗೆ ವೈಕುಂಠ ಏಕಾದಶಿ ಮಹೋತ್ಸವವನ್ನು ಭಕ್ತರು ಆಚರಿಸಿದರು. ಈ ಸಂದರ್ಭದಲ್ಲಿ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನಡೆದರು.

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಮಹಾಗಣಪತಿಶ್ರೀ ವೆಂಕಟೇಶ್ವರಶ್ರೀ ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಮಹೋತ್ಸವವನ್ನು ಶ್ರದ್ಧಾ ಭಕ್ತಿಗಳೊಂದಿಗೆ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಎಲ್ಲ ದೇವತಾ ವಿಗ್ರಹದೇವಸ್ಥಾನಕ್ಕೆ ವಿಶೇಷ ಅಲಂಕಾರ ಮಾಡಲಾಗಿತ್ತು. ಭಕ್ತರು ಉತ್ಸಾಹದಿಂದ ಪಾಲ್ಗೊಂಡಿದ್ದರು.

ಬಡಾವಣೆಯ ನಿರ್ಮಾಪಕ
ಶ್ರೀ ಬಾಲಾಜಿ ಮಹಾಗಣಪತಿ ದೇವಸ್ಥಾನ ಸಮಿತಿಯ ಗೌರವಾಧ್ಯಕ್ಷ ಶ್ರೀ ಎಸ್.ಎನ್.‌ ಕೃಷ್ಣಯ್ಯ ಶೆಟ್ಟಿ ಅವರು ವಿಶೇಷ ಲಾಡು ಪ್ರಸಾದದ ವ್ಯವಸ್ಥೆ ಮಾಡಿದ್ದರು.

ಈ ಸಂದರ್ಭದ ಕೆಲವು ಚಿತ್ರಗಳು ಮತ್ತು ವಿಡಿಯೋ ಇಲ್ಲಿದೆ.



ಚಿತ್ರಗಳ ಸಮೀಪ ನೋಟಕ್ಕೆ ಅವುಗಳನ್ನು ಕ್ಲಿಕ್‌ ಮಾಡಿರಿ.










ವಿಡಿಯೋ ನೋಡಲು ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ.


PARYAYA: ವೈಕುಂಠ ಏಕಾದಶಿ ಮಹೋತ್ಸವ:   ವೈಕುಂಠ ಏಕಾದಶಿ ಮಹೋತ್ಸವ ದೇಶಾದ್ಯಂತ ೨೦೨೫ ಜನವರಿ ೧೦ರ ಶುಕ್ರವಾರ ದ ಈದಿನ ಸಡಗರೋತ್ಸಾದೊಂದಿಗೆ ವೈಕುಂಠ ಏಕಾದಶಿ ಮಹೋತ್ಸವವನ್ನು ಭಕ್ತರು ಆಚರಿಸಿದರು. ಈ ಸಂದರ್ಭದಲ್...

Saturday, January 4, 2025

PARYAYA: ಪಕ್ಷಿ ಕಂಡರೆ ಸಾಕು… ʼಶೂಟ್‌ʼ…! ಇದು ʼಸುವರ್ಣ ನೋಟʼ

 ಪಕ್ಷಿ ಕಂಡರೆ ಸಾಕು… ʼಶೂಟ್‌ʼ…!

ಇದು ʼಸುವರ್ಣ ನೋಟʼ

ಕ್ಷಿ ಕಂಡರೆ ಸಾಕು ʼಶೂಟ್‌ʼ ಮಾಡುವ ಅಭ್ಯಾಸ ಹಲವರಿಗೆ. ಅವರು ಹಕ್ಕಿಗಳನ್ನು ʼಶೂಟ್‌ʼ ಮಾಡುವುದು ಅವುಗಳನ್ನು ತಿನ್ನುವುದಕ್ಕಾಗಿ.

ಹೀಗೆ ಹಕ್ಕಿಗಳನ್ನು, ಪ್ರಾಣಿಗಳನ್ನು ಮನಸೋ ಇಚ್ಛೆ ʼಶೂಟ್‌ʼ ಮಾಡುತ್ತಾ ಹೋದರೆ ಮುಂದೊಂದು ದಿನ ಈ ಜಗತ್ತಿನಲ್ಲಿ ಮನುಷ್ಯನನ್ನು ಬಿಟ್ಟು ಬೇರಾವ ಪ್ರಾಣಿ- ಪಕ್ಷಿಗಳನ್ನೂ ಉಳಿಯಲಾರವು. ಈಗಾಗಲೇ ಹಲವಾರು ಪ್ರಾಣಿ ಪಕ್ಷಿಗಳು ಮಾನವ ಹಿಂಸೆಯೂ ಸೇರಿದಂತೆ ಹಲವಾರು ಕಾರಣಗಳಿಂದಾಗಿ ಅಳಿವಿನ ಅಂಚಿಗೆ ಬಂದಿವೆ.

ಇಂತಹ ಪ್ರಾಣಿ ಪಕ್ಷಿಗಳ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿಯೇ ʼರಾಷ್ಟ್ರೀಯ ಪಕ್ಷಿ ದಿನʼವನ್ನು ಆಚರಿಸಲಾಗುತ್ತದೆ.

ಪಕ್ಷಿಗಳ ಸಹಸ್ರಾರು ಛಾಯಾಚಿತ್ರಗಳನ್ನು ತೆಗೆದು ʼಕನ್ನಡನಾಡಿನ ಬಣ್ಣದ ಬಾನಾಡಿಗಳುʼ ಎಂಬ ಪುಸ್ತಕವನ್ನೇ  ಪ್ರಕಟಿಸಿರುವ ಹಿರಿಯ ಪತ್ರಿಕಾ ಛಾಯಾಗ್ರಾಹಕ ವಿಶ್ವನಾಥ ಸುವರ್ಣ ಅವರು ತಾವು ʼಶೂಟ್‌ʼ ಮಾಡಿದ ಪಕ್ಷಿಗಳ ಚಿತ್ರವನ್ನು ಇಲ್ಲಿ ಬಿಚ್ಚಿಟ್ಟಿದ್ದಾರೆ.

ಗಾಬರಿ ಆಗಬೇಡಿ. ಪಕ್ಷಿಗಳನ್ನು ʼಶೂಟ್‌ʼ ಮಾಡುವಾಗ ಸುವರ್ಣ ಬಳಸಿದ್ದು ತಮ್ಮ ʼಕ್ಯಾಮರಾʼವನ್ನು. ಹೀಗಾಗಿ ಈ ಪಕ್ಷಿಗಳು ಅವರು ʼಶೂಟ್‌ʼ ಮಾಡಿದ ನಂತರವೂ ತಮ್ಮ ಸಂಭ್ರಮದ ಕ್ಷಣಗಳನ್ನು ಅನುಭವಿಸಿವೆ. ಈ ಸಂಭ್ರಮದ

ಕ್ಷಣಗಳ ಸಮೀಪ ನೋಟಕ್ಕೆ ಚಿತ್ರಗಳನ್ನು ಕ್ಲಿಕ್‌ ಮಾಡಿ. ಪಕ್ಷಿಗಳ ಸಂಭ್ರಮದಲ್ಲಿ ನೀವೂ ಭಾಗಿಗಳಾಗಿ.

-ನೆತ್ರಕೆರೆ ಉದಯಶಂಕರ





ಕೆಳಗಿನವುಗಳನ್ನೂ ಓದಿರಿ: 

೨೦೨೪ರ ಕೊನೆಯ ಸೂರ್ಯಾಸ್ತಮಾನ... ʼಸುವರ್ಣʼ ನೋಟ..!
ಹಿಂಗಾರು ಮಳೆಗೆ ತೊಯ್ದ ವಿಧಾನಸೌಧ.. ಸುವರ್ಣ ನೋಟ
ಈ ಹಕ್ಕಿ ಕೊಕ್ಕಿನ ಬಣ್ಣ ಬದಲಾಯಿಸುತ್ತದೆ..!
ಎಲ್ಲಿ ಮಾರಾಯರೇ ಈ ಆಟ? ಇದು ಸುವರ್ಣ ನೋಟ
ಗಗನಗಾಮಿ ಕೃಷ್ಣಮೃಗ..! (ಇದು ಸುವರ್ಣ ನೋಟ)
ಶಕ್ತಿ ಸೌಧದ ಬಳಿ ʼಸುವರ್ಣ ಸೂರ್ಯ..!” ಇದು ಸುವರ್ಣ ನೋಟ
ಬದುಕಿನ ಹೋರಾಟ….!
ಬದ್ಧ ವೈರಿಗಳ ಅಪರೂಪದ ಮೈತ್ರಿ.!
ಡಾ. ರಾಜಕುಮಾರ್ ಆರೋಗ್ಯ ಸೂತ್ರ…!
ಕಥೆ ಹೇಳುವೆ… ನನ್ನ ಕಥೆ ಹೇಳುವೆ..!
‘ಸ್ನೇಕ್ ಬರ್ಡ್’ ಭೋಜನ ಚಮತ್ಕಾರ..!

ಬೆಂಗಳೂರಿನ ಭೂ ಮಾಫಿಯಾ- ಭ್ರಷ್ಟಾಚಾರದ ಚಕ್ರವ್ಯೂಹ

(ಮೇಲಿನ ಚಿತ್ರ ಕ್ಲಿಕ್‌ ಮಾಡಿ ನೋಡಿ. ಕೇವಲ ರೂ. 350/- ಪಾವತಿಸಿ ಈ👆 ಡಿಜಿಟಲ್‌ ಪುಸ್ತಕ ಪಡೆಯಿರಿ. ಸಂಪರ್ಕಿಸಿ: 9480215706/ 9845049970)

PARYAYA: ಪಕ್ಷಿ ಕಂಡರೆ ಸಾಕು… ʼಶೂಟ್‌ʼ…! ಇದು ʼಸುವರ್ಣ ನೋಟʼ:   ಪಕ್ಷಿ ಕಂಡರೆ ಸಾಕು… ʼ ಶೂಟ್‌ ʼ…! ಇದು ʼ ಸುವರ್ಣ ನೋಟ ʼ ಪ ಕ್ಷಿ ಕಂಡರೆ ಸಾಕು ʼ ಶೂಟ್‌ ʼ ಮಾಡುವ ಅಭ್ಯಾಸ ಹಲವರಿಗೆ. ಅವರು ಹಕ್ಕಿಗಳನ್ನು ʼ ಶೂಟ್‌ ʼ ಮಾಡುವುದು ಅ...

Wednesday, January 1, 2025

PARYAYA: ೨೦೨೫ಕ್ಕೆ ಸ್ವಾಗತ, ವಿಶೇಷ ಪೂಜೆ Welcome to 2025

 ೨೦೨೫ಕ್ಕೆ ಸ್ವಾಗತವಿಶೇಷ ಪೂಜೆ Welcome to 2025


ಬೆಂಗಳೂರು: ೨೦೨೫ನೇ ವರ್ಷದ ಸ್ವಾಗತಕ್ಕಾಗಿ ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಮಹಾಗಣಪತಿಶ್ರೀ ವೆಂಕಟೇಶ್ವರ ಮತ್ತು ಶ್ರೀ ಅಭಯ ಆಂಜನೇಯಸ್ವಾಮಿ ದೇವಾಲಯದಲ್ಲಿ ವಿಶೇಷ ಅಲಂಕಾರವಿಶೇಷ ಪೂಜೆ ನೆರವೇರಿಸಲಾಯಿತು.

 

ವರ್ಷಾರಂಭದ ಪ್ರಯುಕ್ತ ವಿಶೇಷ ಅಲಂಕಾರಬೆಳಗ್ಗೆ ಸಂಜೆ ಪ್ರಸಾದ ವ್ಯವಸ್ಥೆಯನ್ನು ಬಡಾವಣೆಯ ಹಿರಿಯ ಸದಸ್ಯ ಶ್ರೀ ಕೃಷ್ಣೋಜಿ ರಾವ್‌ ಮತ್ತು ಅವರ ಕುಟುಂಬ ಸದಸ್ಯರು ಮಾಡಿದರು.

ಚಿತ್ರಗಳ ಸಮೀಪ ನೋಟಕ್ಕೆ ಅವುಗಳನ್ನು ಕ್ಲಿಕ್‌ ಮಾಡಿ.




ವಿಡಿಯೋ ನೋಡಲು ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ:




PARYAYA: ೨೦೨೫ಕ್ಕೆ ಸ್ವಾಗತ, ವಿಶೇಷ ಪೂಜೆ Welcome to 2025:   ೨೦೨೫ಕ್ಕೆ ಸ್ವಾಗತ , ವಿಶೇಷ ಪೂಜೆ Welcome to 2025 ಬೆಂ ಗಳೂರು: ೨೦೨೫ನೇ ವರ್ಷದ ಸ್ವಾಗತಕ್ಕಾಗಿ ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ...